Author: admin
ಮಹತೋಭಾರ ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದ ವಾರ್ಷಿಕ ಶ್ರೀಮನ್ಮಹಾರಥೋತ್ಸವವು ಬುಧವಾರ ಸಂಪನ್ನಗೊಂಡಿತು. ಬೆಳಗ್ಗೆ ರಥಾರೋಹಣ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು. ಐದು ಸಾವಿರಕ್ಕೂ ಅಧಿಕ ಮಂದಿ ಅನ್ನಪ್ರಸಾದ ಸ್ವೀಕರಿಸಿದರು. ಸಂಜೆ ಸ್ಯಾಕ್ಸಫೋನ್ ಕಛೇರಿ, ರಾತ್ರಿ ಶ್ರೀಮನ್ಮಹಾರಥೋತ್ಸವ, ಉತ್ಸವ ಬಲಿ, ಮಹಾರಂಗಪೂಜೆ, ಶ್ರೀ ಭೂತ ಬಲಿ, ಶಯನೋತ್ಸವ ನಡೆಯಿತು. ಪರ್ಯಾಯ ತಂತ್ರಿ ವೇ| ಮೂ| ಪಾದೂರು ಲಕ್ಷ್ಮೀನಾರಾಯಣ ತಂತ್ರಿಗಳ ಮಾರ್ಗದರ್ಶನದಲ್ಲಿ ಸರದಿ ಅರ್ಚಕರಾದ ವೇ| ಮೂ| ಶ್ರೀನಿವಾಸ ಭಟ್, ವೇ| ಮೂ| ವೆಂಕಟೇಶ ಭಟ್, ವೇ| ಮೂ| ಗುರುರಾಜ ಭಟ್ ಅರ್ಚಕತ್ವದಲ್ಲಿ, ಪವಿತ್ರಪಾಣಿ ಕೆ.ಎಲ್. ಕುಂಡಂತಾಯ ಅವರ ಉಪಸ್ಥಿತಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಅರುಣಾಕರ ಶೆಟ್ಟಿ ಕಳತ್ತೂರು, ವ್ಯವಸ್ಥಾಪನ ಸಮಿತಿ ಸದಸ್ಯರಾದ ವೆಂಕಟೇಶ್ ಭಟ್, ಜೆನ್ನಿ ನರಸಿಂಹ ಭಟ್, ಕುತ್ಯಾರು ಪ್ರಸಾದ್ ಶೆಟ್ಟಿ, ಕೆ. ಕೊರಗ, ಸುಜಾತಾ ಆರ್. ಶೆಟ್ಟಿ, ಕುಶಲ ದೇವಾಡಿಗ, ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷರಾದ ಪ್ರಫುಲ್ಲ ಶೆಟ್ಟಿ ಎಲ್ಲೂರುಗುತ್ತು, ಜಗದೀಶ ಅರಸ ಕುತ್ಯಾರು, ಕಳತ್ತೂರು…
“ಜಗತ್ತಿನ ಭಾಗ್ಯವಂತ ವ್ಯಕ್ತಿ ಯಾರೆಂದರೆ ಅವನ ಹತ್ತಿರ ಆಹಾರದ ಜೊತೆ ಹಸಿವು ಇರಬೇಕು, ಹಾಸಿಗೆ ಜೊತೆ ನಿದ್ರೆ ಇರಬೇಕು ಹಣದ ಜೊತೆ ಧರ್ಮ ಇರಬೇಕು ” ಎಂಬ ಮಾತಿದೆ. ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಾಹಾಪೋಷಕರಗಿರುವ ಜಯಪ್ರಕಾಶ್ ರೈಯವರು 1964 ನೇ ಇಸವಿಯ ಜುಲೈ 2 ನೇ ತಾರೀಕಿನಂದು ಶ್ರೀ ಮೋನಪ್ಪ ರೈ ಮತ್ತು ಶ್ರೀಮತಿ ಮೋಹಿನಿ ರೈ ದಂಪತಿಗಳ ಸುಪುತ್ರರಾಗಿ ಜನ್ಮ ತಾಳಿದರು. ಕೊಡಗು ಜಿಲ್ಲೆ ಮಡಿಕೇರಿ ಈ ದೇಶಕ್ಕೆ ಹಲವು ವೀರ ಯೋಧರನ್ನು ಕೊಟ್ಟ ನಾಡು. ಇಲ್ಲಿಯೇ ಜನಿಸಿದ ಶ್ರೀ ಜಯರಾಮ ರೈ ಇಲ್ಲಿ 10 ನೇ ತರಗತಿಯವರೆಗೆ ಶಿಕ್ಷಣ ಪೂರೈಸಿದರು. ತಮ್ಮ 17 ನೇ ವಯಸ್ಸಿಗೆ ಭಾರತೀಯ ಭೂ ಸೇನೆಯಾದ ಮರಾಠ ಇನ್ಫೆoಟ್ರಿಗೆ 1980 ನೇ ಇಸವಿಯಲ್ಲಿ ಸೇರ್ಪಡೆಯಾದರು. ಇಲ್ಲಿ ತರಭೇತಿ ಮುಗಿಸಿ 1981 ರಲ್ಲಿ ಚೀನಾ ಗಡಿಯಾದ ಅರುಣಾಚಲ ಪ್ರದೇಶಲ್ಲಿ ತಮ್ಮ ಕರ್ತವ್ಯ ನಿಭಾಯಿಸಲು ಶುರು ಮಾಡಿದರು. ರಾಜಸ್ತಾನ ಗಡಿ ಪ್ರದೇಶ, ಜಮ್ಮು ಕಾಶ್ಮೀರ ಗಡಿ…
ದಟ್ಟ ಹಸಿರಿನ ಗಿರಿಕಂದಕಗಳ ನಡುವೆ ನಿಸರ್ಗ ದೇವತೆ ಧರೆಗಿಳಿದಂತೆ ಕಂಗಳಿಸುವ ನೈಸರ್ಗಿಕ ತಾಣ ಕರ್ನಾಟಕದ ಸುಂದರ ತಾಣ ಕೊಡಗು. ನಿತ್ಯ ಹರಿದ್ವರ್ಣದ ದಟ್ಟ ಕಾಡುಗಳ ಹಸಿರಿನ ಮಡಿಲು, ಬೆಟ್ಟಗುಡ್ಡಗಳ ಸೊಬಗು, ತುಂಬಿ ತುಳುಕುವ ಸಸ್ಯ ಸಂಪತ್ತು ವನರಾಶಿಗಳು, ಕಾಫಿತೋಟದ ಕಂಪು, ಕಿತ್ತಳೆ, ಏಲಕಿ ತೋಟಗಳ ನಡುವೆ ಹರಿವ ಹಳ್ಳ ಕೊಳ್ಳ, ಧುಮ್ಮಕಿ ಹರಿವ ಜಲಪಾತಗಳು, ಝಳುಝಳು ಹರಿವ ನದಿ ತೊರೆಗಳು , ಪಚ್ಚೆ, ಪೈರಿನಿಂದ ಆವೃತ್ತವಾದ ಕೊಡಗಿನ ಮೂಲೆ ಮೂಲೆಯಲ್ಲೂ ನೈಸರ್ಗಿಕ ಸೊಬಗಿದೆ. ಪ್ರಕೃತಿಯ ಲಾಲಿತ್ಯ ದ ಅಚ್ಚರಿಯ ತಾಣವಿದ್ದು. ಭಕ್ತಿ ಸಿಂಚನ ಗೈವ ದೇಗುಲಗಳಿವೆ ಅದರಲ್ಲಿ ಮುಖ್ಯವಾಗಿ ಓಂಕಾರೇಶ್ವರ ದೇವಳವು ಒಂದು. ಮಡಿಕೇರಿ ಪೇಟೆ ಕೇಂದ್ರಭಾಗದಲ್ಲಿಯ ಬಹುಪುರಾತನ ಐತಿಹಾಸಿಕ ಪುಣ್ಯ ಕ್ಷೇತ್ರ ಓಂಕಾರೇಶ್ವರ ದೇವಳ. ಕೊಡಗಿಗೆ ಹೋದವರು ಅಗತ್ಯ ವಾಗಿ ಬೇಟಿ ನೀಡ ಬೇಕಾದ ಸ್ಥಳ ವಿದು .ಸುತ್ತಲೂ ಆವರಣ ಹೊಂದಿದ ವಿಶಿಷ್ಟ ಆಧ್ಯಾತ್ಮಿಕ ತಾಣ. ಗೋಧಿಕ್ ಮತ್ತು ಇಸ್ಲಾಮಿಕ್ ಶೈಲಿಗಳ ಮಿಶ್ರಣದಿಂದ ನಿರ್ಮಿಸಲಾಗಿದೆ. ಸುಮಾರು 200 ವಷಗಳ ಹಿಂದೆ…
ಗುರುಪುರ ಗೋಳಿದಡಿ ಗುತ್ತು ಮನೆಯಲ್ಲಿ ಜ.17-19ರವರೆಗೆ ‘ಶ್ರೀ ವರ್ಧಮಾನ’ ಗಡಿಪಟ್ಟ ಸ್ವೀಕಾರದ 12ನೇ ಸಂಭ್ರಮಾಚರಣೆ
ಮುಂಬಯಿ (ಆರ್ ಬಿ ಐ), ಜ.08: ಮಾತಾಪಿತರು, ಪ್ರಾಜ್ಞರು ಮತ್ತು ಗುರುಹಿರಿಯರು ಹಿರಿಯರು ಹಾಕಿ ಕೊಟ್ಟಿರುವ ಪರಂಪರೆ ಅಕ್ಷರಶಃ ಪಾಲಿಸುತ್ತ, ದೇವರು ಮತ್ತು ದೈವಗಳ ಚಿತ್ತದಂತೆ ಮುಂದಡಿ ಇಟ್ಟು, ಕಳೆದ 12 ವರ್ಷಗಳಲ್ಲಿ ತುಳುನಾಡ ಸಂಸ್ಕøತಿಯ ಪಡಿಯಚ್ಚಿನಲ್ಲಿ ಗುತ್ತು-ಮನೆತನಗಳ ಹಿರಿತನ ಎತ್ತಿಹಿಡಿದ ಗತ್ತಿನ ಗುತ್ತೇ ಗುರುಪುರ ಗೋಳಿದಡಿ ಗುತ್ತು. ಗುರುಪುರ ಫಲ್ಗುಣಿ ನದಿ ತಟದಲ್ಲಿರುವ ಸಂಸ್ಕøತಿಯ ನೆಲೆವೀಡಾಗಿರುವ ಗೋಳಿದಡಿ ಗುತ್ತು 2009ರಲ್ಲಿ ಪುನರ್ನಿರ್ಮಾಣಗೊಂಡಿತ್ತು. 2010ರಲ್ಲಿ ಗುತ್ತಿನಮನೆಯ ದುರ್ಗಾಪ್ರಸಾದ ಶೆಟ್ಟಿ ಅವರು `ಶ್ರೀ ವರ್ಧಮಾನ’ ಎಂಬ ಅಭಿದಾನದೊಂದಿಗೆ ಗುತ್ತಿನ ಮನೆಯ ಗಡಿಪಟ್ಟ ಸ್ವೀಕರಿಸಿದ್ದರು. ಚಿಕ್ಕಮಗಳೂರುನ ವೇದವಿಜ್ಞಾನ ಮಂದಿರದ ಬ್ರಹ್ಮಋಷಿ ಶ್ರೀ ಕೆ.ಎಸ್ ನಿತ್ಯಾನಂದ ಅವರು ಇಲ್ಲಿನ ಈವರೆಗಿನ ಎಲ್ಲ ಶಿಷ್ಟ ಹಾಗೂ ವಿಶಿಷ್ಟ ಪರಂಪರೆಯ ಹಿಂದಿನ ಶಕ್ತಿ, ಮಾರ್ಗದರ್ಶಕರಾಗಿದ್ದಾರೆ. ಗೋಳಿದಡಿ ಗುತ್ತಿನ ಮನೆಯಲ್ಲಿ ಶ್ರೀ ವೈದ್ಯನಾಥ (ಶ್ರೀ ಮುಂಡಿತ್ತಾಯ), ಪಂಚದೇವತೆಗಳು ಮೇಲ್ಪಂಕ್ತಿಯಲ್ಲಿ ದ್ದು, ಕಷ್ಟ ಭಿನ್ನವಿಸಿಕೊಂಡು ಬರುವವರಿಗೆ ಇಷ್ಟಾರ್ಥ ಸಿದ್ಧಿ ಸಾನಿಧ್ಯವಾಗಿದೆ. ತಮ್ಮೆಲ್ಲ ಸತ್ಕಾರ್ಯಕ್ಕೆ ದೈವ ಪ್ರೇರಣೆಯೇ ದಿಕ್ಸೂಚಿ ಎನ್ನುವ ಶ್ರೀ ದುರ್ಗಾಪ್ರಸಾದ…
ಡಾ. ಆರ್. ಎನ್. ಶೆಟ್ಟಿ ಅವರ ಪುತ್ರ ಸುನೀಲ್ ಶೆಟ್ಟಿ ಅವರ ಕುಟುಂಬದವರು ಈ ಕಂಚಿನ ಪ್ರತಿಮೆಯನ್ನು ದೇವಸ್ಥಾನದ ಪ್ರಮುಖರು, ಊರಿನ ಪ್ರಮುಖರು ಹಾಗೂ ಸಾರ್ವಜನಿಕರ ಉಪಸ್ಥಿತಿಯಲ್ಲಿ ಅನಾವರಣಗೊಳಿಸಿದ್ದಾರೆ. ಈ ಪ್ರತಿಮೆ ಸುಮಾರು 1,560 ಕೆ. ಜಿ. ತೂಕದ ಕಂಚಿನಲ್ಲಿ ನಿರ್ಮಾಣಗೊಂಡ ಪ್ರತಿಮೆಯಾಗಿದ್ದು, 15 ಅಡಿ ಎತ್ತರವಿದೆ. ವಿಶೇಷವೆಂದರೆ, ಕಂದುಕ ಗಿರಿಯಲ್ಲಿರುವ ಮುಡೇಶ್ವರದ ಬೃಹತ್ ಶಿವನ ಮೂರ್ತಿಯನ್ನ ತಯಾರಿಸಿದ್ದ ಕಾಶೀನಾಥ ಅವರ ಪುತ್ರರಾದ ಶ್ರೀಧರ್ ಅವರೇ ಡಾ. ಆರ್. ಎನ್. ಶೆಟ್ಟಿಯವರ ಪ್ರತಿಮೆಯನ್ನ ನಿರ್ಮಾಣ ಮಾಡಿದ್ದಾರೆ. ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಪುಣ್ಯ ಕ್ಷೇತ್ರವೂ ಆಗಿರುವ ಮುರುಡೇಶ್ವರ ಅಂದಾಕ್ಷಣ ನೆನಪಿಗೆ ಬರುವುದು ಉದ್ಯಮಿ ಡಾ. ಆರ್. ಎನ್. ಶೆಟ್ಟಿ. ನವ ಮುರುಡೇಶ್ವರದ ನಿರ್ಮಾತೃ ಅಂತಲೇ ಕರೆಯಿಸಿಕೊಳ್ಳುತ್ತಿದ್ದ ಡಾ. ಆರ್. ಎನ್. ಶೆಟ್ಟಿ ಅವರು ಎಲ್ಲರನ್ನ ಅಗಲಿ ಒಂದೂವರೆ ವರ್ಷ ಕಳೆಯುತ್ತಾ ಬಂದಿದೆ. ಇದೀಗ ಅವರ ನೆನಪನ್ನ ಚಿರ ಸ್ಥಾಯಿಯಾಗಿಸಲು ಮುರುಡೇಶ್ವರದ ಬೃಹತ್ ಶಿವನ ಪ್ರತಿಮೆಯ ಎದುರು ಡಾ. ಆರ್. ಎನ್.…
ಬಜಪೆ ವಲಯ ಬಂಟರ ಸಂಘದ ಅಧ್ಯಕ್ಷರು, ಕೊಡುಗೈದಾನಿ, ಉದ್ಯಮಿಗಳು, ನಮ್ಮ ಟಿವಿ ಬಲೇ ತೆಲಿಪಾಲೆಯ ರೂವಾರಿ ವಿಜಯನಾಥ ವಿಠ್ಠಲ್ ಶೆಟ್ಟಿ
ಬಜಪೆ ವಲಯ ಬಂಟರ ಸಂಘದ ಅಧ್ಯಕ್ಷರು, ಕೊಡುಗೈದಾನಿ, ಉದ್ಯಮಿಗಳು, ಶಾಸ್ತಾವು ಶ್ರೀ ಭೂತನಾಥೆಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರು, ಭೂತನಾಥೆಶ್ವರ ಕ್ರೀಡಾ ಕೂಟದ ಮತ್ತು ನಮ್ಮ ಟಿವಿ ಬಲೇ ತೆಲಿಪಾಲೆಯ ರೂವಾರಿ ವಿಜಯನಾಥ ವಿಠ್ಠಲ್ ಶೆಟ್ಟಿಯವರಿಗೆ ಸಮಸ್ತ ಬಂಟ ಸಮಾಜದ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದೇವೆ. ಬಂಟ ಸಮಾಜದ ಎಲ್ಲಾ ನ್ಯೂಸ್ ಅಪ್ಡೇಟ್ ಗಳಿಗೆ ಈ ಕೆಳಗಿನ ಬಂಟ್ಸ್ ನೌ ಪೇಜ್ ಲಿಂಕ್ ಓಪನ್ ಮಾಡಿ ಲೈಕ್ ಮಾಡಿ. https://www.facebook.com/buntsnow/
ಸ್ವಯಂ ಅರಿವು, ಸ್ವಯಂ ನಿಯಂತ್ರಣ ಮತ್ತು ಸ್ವಯಂ ಪ್ರತಿಭೆಗಳಿಂದ ಕೂಡಿದ ನಡವಳಿಕೆಗಳು ಸಮಾನಾಂತರವಾಗಿ ಕ್ರೀಯಾಶೀಲವಾಗಿ ಮುನ್ನಡೆದರೆ ಯಾವುದೇ ಗುಂಪು, ಸಂಘ ಅಥವಾ ಸಂಘಟನೆಗಳು ಬಲಗೊಳ್ಳುತ್ತವೆ. ನಮ್ಮ ನಡವಳಿಕೆಗಳು ದನಾತ್ಮಕ ಚಿಂತನೆಯೊಂದಿಗೆ ಸಮಾಜ ಮುಖಿಯಾಗಿರಬೇಕು. ಪ್ರತಿಫಲವನ್ನು ಬಯಸದೆ ಮಾಡುವ ಕೆಲಸ ಕಾರ್ಯಗಳೇ ಸಮಾಜ ಸೇವೆ ಎಂದೆನಿಸಿಕೊಳ್ಳುತ್ತದೆ. ಪ್ರತಿಯೊಬ್ಬರಲ್ಲೂ ತಮ್ಮ ಯೋಗ್ಯತಾನುಸಾರ ಯಾವುದೇ ವಿಧದಲ್ಲಿಯಾದರೂ ಸೇವೆ ಮಾಡುವ ಮನೋಭಾವ ಹೊಂದಿದ್ದರೆ ಸಂಘಟನೆ ಮೂಲಕ ಯಾವುದೇ ಘನ ಕಾರ್ಯ ಮಾಡಬಹುದು. ಇದೇ ಧ್ಯೇಯ ಉದ್ದೇಶ ಸಂಘಟನೆಯ ಪ್ರತಿಯೊಬ್ಬರಲ್ಲೂ ಇದ್ದರೆ ಸಮಾಜಕ್ಕೆ ನಮ್ಮಿಂದ ಏನಾದರೂ ಅರ್ಪಣೆ ಮಾಡಲು ಸಾದ್ಯ. ಮಾನವ ಒಗ್ಗಟ್ಟೇ ಸಂಘಟನೆಯ ಬಲ. ಇದು ಮತ್ತಷ್ಟು ಬೆಳೆಯಬೇಕು. ನಮ್ಮ ತುಳುಕೂಟದ ಉದ್ದೇಶವೇ ಇದೇ ಆಗಿದೆ. ಜನ ಬಲವರ್ಧನೆ ಮಾಡುವ ಮೂಲಕ ಸಂಘಟನೆಯನ್ನು ಬಲಿಷ್ಠಗೊಳಿಸಬೇಕು. ಇಂದು ನಮ್ಮ ವಿಹಾರ ಕೂಟದಲ್ಲಿ ದೊಡ್ಡ ಮಟ್ಟದಲ್ಲಿ ಸೇರಿದ ತಮ್ಮೆಲ್ಲರ ಸಹಕಾರ ಪ್ರೋತ್ಸಾಹ ಇದೇ ರೀತಿ ಮುಂದುವರಿಯಲಿ. ಈ ವಿಹಾರ ಕೂಟ ಇಷ್ಟು ದೊಡ್ಡ ಮಟ್ಟದ ತುಳುವರ ಕೂಡುವಿಕೆಯಲ್ಲಿ ಅತ್ಯಂತ ಯಶಸ್ವಿಯಾಗಲು…
ಬ್ರಹ್ಮಾವರ ನ. 09: ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಹಾಗೂ ಸಾಫ್ಟ್ ಸ್ಕಿಲ್ ವಿಷಯಗಳ ಕುರಿತು ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ತಾನ್ಯ ಶೆಟ್ಟಿ ಮತ್ತು ಹರ್ಷ ಪೂಜಾರಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಅವರು ಹೈಸ್ಕೂಲ್ ಶಿಕ್ಷಣದ ನಂತರ ಮುಂದೇನು? ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆ? ವಿವಿಧ ವೃತ್ತಿಗಳು, ಇವೆಲ್ಲವನ್ನು ಸಮರ್ಥವಾಗಿ ನಿಭಾಯಿಸಲು ಬೇಕಾಗುವ ಸಾಫ್ಟ್ ಸ್ಕಿಲ್ ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಸಾಧನೆಗೆ ಕೌಶಲಗಳು ತುಂಬಾ ಮುಖ್ಯ. ಜಿ ಎಮ್ ಕಲಿಕೆಯ ಜೊತೆಗೆ ಕೌಶಲಾಭಿವೃದ್ಧಿಗೆ ಪ್ರಾಮುಖ್ಯತೆಯನ್ನು ಕೊಟ್ಟಿದೆ. ನೀವೆಲ್ಲರೂ ಜೀವನದಲ್ಲಿ ಸಾಧನೆಯನ್ನು ಮಾಡುತ್ತೀರಿ. ಇದಕ್ಕೆ ಇಂದಿನಸಂಪನ್ಮೂಲ ವ್ಯಕ್ತಿಗಳೇ ಸಾಕ್ಷಿ ಎಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಇಂದು ಜಿ ಎಮ್ ನಲ್ಲಿ ಕಲಿತ ಮಕ್ಕಳೆಲ್ಲರೂ ಬೇರೆ-ಬೇರೆ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ್ದಾರೆ. ಅವರೆಲ್ಲರೂ ಸಂಸ್ಥೆಯ ಮೇಲಿನ…
ಸೋತರೂ ಸಲಹುವ ಮಹಿಳೆ: ಡಾ.ಪದ್ಮಜಾ ಶೆಟ್ಟಿ ವಿದ್ಯಾಗಿರಿ: ಮಹಿಳೆ ಸೋತರೂ ಸಲಹುತ್ತಾಳೆ. ಶಕ್ತಿಯಾಗಿ ನಿಲ್ಲುತ್ತಾಳೆ ಎಂದು ಧವಲಾ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಪದ್ಮಜಾ ಶೆಟ್ಟಿ ಹೇಳಿದರು. ಆಳ್ವಾಸ್ ಕಾಲೇಜಿನ ಪದವಿ ಇಂಗ್ಲಿಷ್ ವಿಭಾಗವು ಶುಕ್ರವಾರ ಹಮ್ಮಿಕೊಂಡ ‘ಎ ಡಾಲ್ಸ್ ಹೌಸ್’ ಪುಸ್ತಕ ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೆನ್ರಿಕ್ ಹಿಪ್ಸನ್ ಬರೆದ ‘ಎ ಡಾಲ್ಸ್ ಹೌಸ್’ ಎಂಬ ಪುಸ್ತಕವು ಮಹಿಳೆಯ ಶಕ್ತಿ ಮತ್ತು ಸಾಮಥ್ರ್ಯವನ್ನು ತಿಳಿಸುತ್ತದೆ. ಮಹಿಳೆಯರು ಬದುಕಿನುದ್ದಕ್ಕೂ ಹೋರಾಡುತ್ತಾರೆ. ಯಾರಿಲ್ಲದಿದ್ದರೂ ಮತ್ತು ಎಲ್ಲರೂ ಇದ್ದರೂ ಧೈರ್ಯದಿಂದ ಮುನ್ನುಗ್ಗಬೇಕು ಎಂಬ ಆಶಯವನ್ನು ಕತೆ ಬಿಂಬಿಸುತ್ತದೆ ಎಂದರು. ಮಹಿಳೆಯರಿಗೆ ಜೀವನದ ಹಾದಿಯಲ್ಲಿ ಆತ್ಮವಿಶ್ವಾಸ ಮುಖ್ಯ. ಅದುವೇ ಅವರನ್ನು ಗೆಲ್ಲಿಸುತ್ತದೆ ಎಂದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ‘ಬೇರೆ ಬೇರೆ ವಿಷಯಗಳನ್ನು ಕಲಿಯುವ ಮನಸ್ಸಿರಬೇಕು. ಅಂತಹ ಆಲೋಚನೆ ಪ್ರತಿಯೊಬ್ಬರಲ್ಲೂ ಬರಬೇಕು. ಸಾಹಿತ್ಯವು ವಿಶ್ಲೇಷಣೆ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ನೀಡುತ್ತದೆ. ಏಕದೃಷ್ಟಿಯ ಅಭಿವೃದ್ಧಿಯಿಂದ ಮಾತ್ರ ಬೆಳವಣಿಗೆ ಸಾಧ್ಯವಿಲ್ಲ. ವೈವಿಧ್ಯಮಯ ದೃಷ್ಟಿಕೋನ…
ಬಿ ಸಿ ರೋಡು ವಲಯ ಬಂಟರ ಸಂಘದ ಆಯೋಜನೆಯಲ್ಲಿ “ಕೆಸರ್ದ ಕಂಡೊಡು ಬಂಟರೆ ಕೂಟ” ಕಾರ್ಯಕ್ರಮ ಸ್ಪರ್ಶ ಕಲಾ ಮಂದಿರದ ಹಿಂದಿನ ಗದ್ದೆಯಲ್ಲಿ ತಾ 1-10-2023 ರಂದು ನಡೆಯಿತು. ಬಂಟ್ವಾಳ ತಾಲೂಕು ಮಟ್ಟದ ಬಂಟರ ಹಗ್ಗಜಗ್ಗಾಟ ಮತ್ತು ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತು. ಹಿರಿಯ ಕೃಷಿಕ ಮಾಡ್ಯಾರುಗುತ್ತು ವಿಶ್ವನಾಥ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಸಕರಾದ ರಾಜೇಶ್ ನಾಯ್ಕ್, ಮಾಜಿ ಸಚಿವ ರಮಾನಾಥ ರೈ, ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ತಾ. ಬಂಟರ ಸಂಘದ ಕಾರ್ಯದರ್ಶಿ ಜಗನ್ನಾಥ ಚೌಟ, ತಾ. ಬಂಟರ ಸಂಘದ ಕೋಶಾಧಿಕಾರಿ ಲೋಕೇಶ್ ಶೆಟ್ಟಿ, ತಾ. ಬಂಟರ ಮಹಿಳಾ ವಿಭಾಗ ಅಧ್ಯಕ್ಷೆ ರಮಾ ಭಂಡಾರಿ, ತಾಲೂಕು ಯುವ ವಿಭಾಗ ಅಧ್ಯಕ್ಷ ನಿಶಾನ್ ಆಳ್ವ, ಖ್ಯಾತ ವಕೀಲ ಅಶ್ವನಿ ಕುಮಾರ್ ರೈ, ಮಾಜಿ ಬಂಟ್ವಾಳ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಪ್ರತಿಷ್ಠಿತ ಉದ್ಯಮಿಗಳಾದ ಐತಪ್ಪ ಆಳ್ವ, ಹರೀಶ್ ಶೆಟ್ಟಿ ತುಂಬೆ ಮತ್ತು ಜಯಂತ್ ಶೆಟ್ಟಿ ಸಭೆಯಲ್ಲಿ…