Author: admin
ಭಾರತಪ್ಪೆನ ಸಿರಿ ಮಟ್ಟೆಲ ಪುರು ತುಳುವಪ್ಪೆನ ಪಿರಿ ಪೆರ್ಮೆಡ್ ಪೊನ್ನಾಲ್ಮೆದ ಪರತಿರಿ ಪರಪೋಕು ಅಳಿದಾಂತೆ ಮೆರೆಪುನವು. ಬಿರ್ಮೆರೆ ಉಟಾರ್ನೆದ, ಗೆಲ್ಮೆದ ಉದಿಪುದ ಸಾಂಸ್ಕೃತಿಕ ಗದ್ದಿಗೆ ಒಂಜಿ ಪುಡೆಮಿ ಮೇಲ್ಡಿತ್ತ್ಂಡವು ತುಳುನಾಡೆನ್ಪಿ ಪುರಪುದ ಪಚ್ಚೆ ತುತ್ತಿ ಮೂಡಾಯಿ ಗಟ್ಟದ ಬರಿಡ್ದ್ ದುಡಿ ಕೊರ್ಪಿ ಪಡ್ಡಾಯಿ ಕಡಲ ಕರೆತ ಪುಣ್ಯ ಮಣ್ಣ್ ಪನ್ಪಿನೆಕ್ ಒವ್ವೆ ಪೊಸ ಗುರ್ತಾರ್ತ ಬೋಡುಂದಿಜ್ಜಿ. ದೈವೊ-ದೇಬೆರ್, ನಾಗೆ-ಬಿರ್ಮೆರ್, ಸಿರಿ-ಕುಮಾರೆರ್, ಬೀರಪುರ್ಸೆರ್ ಕಾತೊಂದು ಬರ್ಪಿ ಪೆರ್ಮೆದ ಬೂಡು. ಆಲೈಪು, ಆಚರಿಪು, ಆರಾದಿಪು, ಆನೊಯ್ಪುದ ನಿಲೆ, ಅಪ್ಪೆ ಕಟ್ಟ್, ತಮ್ಮಲೆನೊಟ್ಟು ಬದ್ಕ್ ಕಟ್ಟುನ ಪೊಲಿ ಪೊಲ್ಸುದ, ಪಲಿ ತಂಗಡಿಗ್ ದಲ್ಯೊ ಹಾಸ್ದ್ ಆದರಿಪುನ, ಕಲೆ-ಕಾರ್ನಿಕೊ ದಿಂಜಿದ್ ಉರ್ಕರುನ ಪೇರ ಪರಿಪುದ, ಸುದೆ-ಕಡಲ್, ಕಂಡೊ-ಕಾಂತರೊ, ಮಲೆ-ಬೈಲ್ಲ್ ಪೆರ್ಚಿದುಂತಿ ನಾಗನಡೆ, ಸರ್ಪಜಿಡೆ, ಪಂಚ ವರ್ನೊದ, ಪುಂಚೊದ ಸತ್ವೊ ದಿಂಜಿ ಮಣ್ಣ, ಬೀಜು ಗಾಲಿಗ್ ತರೆ ತೂಂಕುನ ಕಮ್ಮೆನ ದಿಂಜಿ ಬಾರರಿತ ಕುರಲ್ದ ಪೊರ್ಲ ನಾಡ್ ಸಿರಿಬಾರಿ ಲೋಕೆನ್ಪಿ ಪುಗರ್ತೆದ ತುಳುನಾಡ್. ತುಳುವ ಪರತಿರಿ ಪರಪೋಕುದಂಚಿ ಕಣ್ಣ್…
ಮುಂಬಯಿ ಮಹಾನಗರದ ಪ್ರತಿಷ್ಟಿತ ಸಂಸ್ಥೆಗಳಲ್ಲಿ ಅಗ್ರ ಪಂಕ್ತಿಯಲ್ಲಿರುವ ಹಿರಿಯ ಸಂಸ್ಥೆ ಬಂಟರ ಸಂಘ ಮುಂಬಯಿ. ಸುಮಾರು 96 ವರ್ಷಗಳ ಹೆಜ್ಜೆಯ ಪರಾಕ್ರಮದಲ್ಲಿ ದಾಪು ಕಾಲಲ್ಲಿ ಮುನ್ನಡೆಯುತ್ತಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕ್ರತಿಕ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ರಾರಾಜಿಸುತ್ತಿರುವ ಹೆಮ್ಮೆಯ ಮುಂಬಯಿ ಬಂಟರ ಸಂಘ ಮುಂಬಯಿ ತನ್ನ ಕೀರ್ತಿ ಪತಾಕೆಯನ್ನು ಆಕಾಶದೆತ್ತರಕ್ಕೆ ಹಾರಿಸಿದೆ. ಮುಂಬಯಿ ಬಂಟರ ಸಂಘದ ಇತಿಹಾಸದಲ್ಲಿ ಪ್ರಪ್ರಥಮವಾಗಿ ಅಧ್ಯಕ್ಷರಾಗಿ ಸೇವೆಗೈದ ದಿ.ಡಾ. ವೆಂಕಟ್ ರಾವ್ ಶೆಟ್ಟಿಯವರಿಂದ ಹಿಡಿದು ಪ್ರಸಕ್ತ ಅಧ್ಯಕ್ಷರಾದ ಚಂದ್ರಹಾಸ ಕೆ. ಶೆಟ್ಟಿಯವರವರೆಗೆ ಸುಮಾರು 30 ಅಧ್ಯಕ್ಷರುಗಳನ್ನೊಳಗೊಂಡ ಬಂಟರ ಸಂಘವು ಬಂಟ ಭಾಂದವರ ಆಶೋತ್ತರಗಳಿಗೆ ಸ್ಪಂದಿಸುತ್ತಾ ಸೇವೆಗೈಯ್ಯುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ. ಶಿಕ್ಷಣ ಕ್ಷೇತ್ರದಲ್ಲಂತೂ ಬಂಟರ ಸಂಘವು ಮಹಾನಗರದಲ್ಲಿ ಕ್ರಾಂತಿಯನ್ನೇ ಮಾಡಿದೆ. ಆರಂಭದಲ್ಲಿ ಎರಡು ರಾತ್ರಿ ಶಾಲೆಗಳು ಆ ಬಳಿಕ ಪೊವಾಯಿಯಲ್ಲಿ ಎಸ್. ಎಮ್. ಶೆಟ್ಟಿ ಸಮೂಹ ಶಿಕ್ಷಣ ಸಂಸ್ಥೆ , ಕುರ್ಲಾ ಪೂರ್ವದ ಬಂಟರ ಭವನದ ಸಮೀಪ ಉನ್ನತ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಬಂಟ…
ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ ಪುಣೆ ಇದರ ವತಿಯಿಂದ ಹನುಮ ಜಯಂತಿ ಆಚರಣೆಯು ಎಪ್ರಿಲ್ 6 ರಂದು ಪುಣೆಯ ಸ್ವಾರ್ ಗೇಟ್ ನ ಮಹಾರಾಷ್ಟ್ರ ಚೇಂಬರ್ ಆಫ್ ಕಾಮರ್ಸ್ ಲಕಾಕಿ ಹಾಲ್ ನಲ್ಲಿ ವಿವಿದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು . ದೀಪ ಕಾರ್ಯಕ್ರಮದ ಮೊದಲಿಗೆ ಪ್ರಾರ್ಥನೆ ಗೈದು ಪುಣೆ ಬಳಗದ ಗೌರವಾಧ್ಯಕ್ಷರಾದ ಸದಾನಂದ ಕೆ .ಶೆಟ್ಟಿ ,ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಮತ್ತು ವಿಬಾಗದ ಅಧ್ಯಕ್ಷೆ ಜಯಲಕ್ಷ್ಮಿ ಪಿ .ಶೆಟ್ಟಿ ಯವರು ಹನುಮ ದೇವರಿಗೆ ದೀಪ ಬೆಳಗಿಸಿ ಪೂಜೆ ಸಲ್ಲಿಸಿದರು ,ನಂತರ ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಸದೆಸ್ಯೆಯರು ಹಾಗು ಬಳಗದ ಸದಸ್ಯರಿಂದ ,ದಾಮೋದರ ಬಂಗೆರರವರ ಮಾರ್ಗದರ್ಶನದಲ್ಲಿ ಬಳಗದ ಭಜನಾ ಮಂಡಳಿಯ ಭಜನೆ ನಡೆಯಿತು .ಸೇರಿದ ಭಕ್ತರೆಲ್ಲರೂ ಸಾಮೂಹಿಕವಾಗಿ ಹನುಮಾನ್ ಚಾಲಿಸವನ್ನು ಪಠಿಸಿದರು ,ನಂತರ ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಿತು. ಶ್ರೀ ಸದಾನಂದ ಕೆ .ಶೆಟ್ಟಿ ,ಅಧ್ಯಕ್ಷ ಪ್ರಭಾಕರ್ ಶೆಟ್ಟಿ ,ವೀಣಾ ಪಿ .ಶೆಟ್ಟಿ…
ಗುರ್ಮೆ ಸುರೇಶ್ ಶೆಟ್ಟರ ಬಗ್ಗೆ ಎಷ್ಟು ಬರೆದರೂ, ಮಾತಾಡಿದರೂ ಕಡಿಮೆ. ಸರ್ವರನ್ನೂ ಪ್ರೀತಿಯಿಂದ, ಆಪ್ತತೆಯಿಂದ ಮಾತಾಡಿಸುವ ಸುರೇಶಣ್ಣ ಒಂದು ರೀತಿಯಲ್ಲಿ ಹಸುವಿನಂತವರು ಅಥವಾ ಹಸುಗೂಸಿನಂತವರು. ಕೊಟ್ಟ ಕೊಡುಗೆಯ ನೆನಪಿಡದ ದಾನಿ ಸುರೇಶಣ್ಣ. ವಿಧಾನಸೌಧದ ವಿಧಾನ ಮಂಡಲದಲ್ಲಿ ಸುರೇಶಣ್ಣನಂತಹ ಜ್ಞಾನಿಗಳು, ವಾಕ್ಪಟುಗಳು, ಸಜ್ಜನರು ಇದ್ದಾಗಲೇ ಅದಕ್ಕೊಂದು ಗೌರವ. ನಿನ್ನೆ ಯಾರೋ ಕಾಪುವಿನಲ್ಲಿ ಜಾತಿ ಲೆಕ್ಕಾಚಾರದ ಬಗ್ಗೆ ಮಾತಾಡುತ್ತಿದ್ದರು. ನಾನು ಹೇಳಿದೆ ಸುರೇಶಣ್ಣನ ಜಾತಿಯೇ ಬೇರೆ, ಅವರದ್ದು ಮಾನವೀಯತೆಯ ಮೌಲ್ಯವನ್ನು ಒಪ್ಪಿ ಅಪ್ಪಿಕೊಂಡ ಜಾತಿ. ಅದು ಪಕ್ಷಾತೀತ ನೆಲೆಯಲ್ಲಿಯೂ ಚಾಚಿಕೊಂಡಿದೆ. ಕಾಪು ಸುರೇಶಣ್ಣನ ಹುಟ್ಟೂರು. ಕಾಪುವಿನ ಜನರಿಗೆ ಅದೊಂದು ಅಸ್ಮೀತೆ. ವಿನಯ್ ಕುಮಾರ್ ಸೊರಕೆ ಎಷ್ಟೇ ಆದರೂ ಪುತ್ತೂರಿನವರು. ಪುತ್ತೂರಿನ ಸೊರಕೆಯವರಿಗಿಂತ ಹುಟ್ಟೂರಿನ ಸುರೇಶಣ್ಣನನ್ನೇ ಕಾಪು ಕ್ಷೇತ್ರದ ಜನ ನೆಚ್ಚಿಕೊಳ್ಳುತ್ತಾರೆ. ಅಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರು ಸುರೇಶಣ್ಣನನ್ನ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಹೆಗಲಿಗೇರಿಸಿಕೊಂಡಿದ್ದಾರೆ. ಇಡೀ ಬಿಜೆಪಿ ಒಂದು ಕುಟುಂಬವಾಗಿ ಹಗಲಿರುಳು ಶ್ರಮಿಸುತ್ತಿದೆ. ಇನ್ನು ಜಾತಿ ಲೆಕ್ಕಕ್ಕೆ ಬರುವುದಾದರೆ ಅಲ್ಲಿ ಬಿಲ್ಲವ ಮತಗಳೇ ಮುಖ್ಯ. ಬಿಜೆಪಿ…
ಹೊಸದುರ್ಗ-ರಂಗ ಸುಹಾಸ ಟ್ರಸ್ಟ್ (ರಿ)ಸಾಣೇಹಳ್ಳಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ತರಬೇತಿ 1995-96 ನೆ ಸಾಲಿನ ವಿದ್ಯಾರ್ಥಿಗಳ ಗುರುವಂದನೆ ಹಾಗೂ ಅಭಿನಂದನಾ ಪುರಸ್ಕಾರ ಕಾರ್ಯಕ್ರಮ ಹಿರೇಮಗಳೂರಿನ ಎಲ್.ಜೆ.ಎಂ ಸಭಾಂಗಣದಲ್ಲಿ ಜರುಗಿತು. 1995-96 ನೇ ಸಾಲಿನ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಶಿಕ್ಷಕರ ತರಬೇತಿ ಪಡೆದು ಪ್ರತಿಷ್ಠಿತ ಎಂ.ಆರ್.ಪಿ.ಎಲ್ ಶಾಲೆಯ ಕ್ರೀಡಾ ತರಬೇತುದಾರರಾಗಿ ಸುಮಾರು 20 ವರ್ಷಗಳ ಸೇವೆ ಸಲ್ಲಿಸಿ,1987 ರಲ್ಲಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಸ್ಥಾಪಿಸಿ ಹಲವಾರು ಕ್ರೀಡಾಕೂಟಗಳನ್ನು ಸಂಘಟಿಸಿ,ಅನೇಕ ಕ್ರೀಡಾಪಟುಗಳ ಬದುಕನ್ನು ರೂಪಿಸಿ,ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುತ್ತಿರುವ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಛೇರ್ಮನ್ ಮತ್ತು ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಕುಂದಾಪುರ ಇವರಿಗೆ “ಸಾರ್ಥಕ ಹೆಜ್ಜೆ ಗುರುತು ಅಭಿನಂದನಾ ಪುರಸ್ಕಾರ” ನೀಡಿ ಗೌರವಿಸಲಾಯಿತು. ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದ ಗೌತಮ್ ಶೆಟ್ಟಿ “ಕ್ರೀಡೆ ಜೀವನದ ಅಮೂಲ್ಯ ಆಸ್ತಿ. ಕ್ರೀಡೆಯಿಂದ ಜೀವನ ಕೌಶಲ್ಯವನ್ನು ಕಲಿಯುತ್ತೇವೆ.ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳುತ್ತೇವೆ ಎಂದರು…
ಮುಂಬಯಿಯ ಉದ್ಯಮಿ ಹೇರಂಭ ಇಂಡಸ್ಟ್ರೀಸ್ ಇದರ ಆಡಳಿತ ನಿರ್ದೇಶಕರಾದ ಕೂಳೂರು ಕನ್ಯಾನ ರಘುರಾಮ ಶೆಟ್ಟಿಯವರು ಪುಣೆ ಬಂಟರ ಸಂಘದ ಕಲ್ಪವೃಕ್ಷ ಸಮಾಜ ಕಲ್ಯಾಣ ಯೋಜನೆಯ ನೂತನ ವಿಶ್ವಸ್ಥರಾಗಿ ನೇಮಕಗೊಂಡಿದ್ದಾರೆ. ಮುಂಬಯಿಯ ಖ್ಯಾತ ಉದ್ಯಮಿ, ಸಮಾಜ ಸೇವಕ ಪುಣೆ ಬಂಟರ ಸಂಘದ ಕಲ್ಪವೃಕ್ಪ ಸಮಾಜಕಲ್ಯಾಣ ಯೋಜನೆಯ ವಿಶ್ವಸ್ಥರಾದ ಕನ್ಯಾನ ಸದಾಶಿವ ಶೆಟ್ಟಿಯವರ ಸಹೋದರನಾದ ರಘುರಾಮ ಶೆಟ್ಟಿಯವರು ಇತ್ತೀಚಿಗೆ ಪುಣೆ ಬಂಟರ ಭವನಕ್ಕೆ ಭೇಟಿ ನೀಡಿದ್ದು ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಇವರ ಅಪೇಕ್ಷೆಯ ಮೇರೆಗೆ ಸಂಘದ ಅಧ್ಯಕ್ಷರ ದೂರದೃಷ್ಟಿ ಹಾಗೂ ಸಮಾಜ ಪರ ಚಿಂತನೆಗಳು ಹಾಗೂ ಸಂಘದ ಮುಖಾಂತರ ನಡೆಯುತ್ತಿರುವ ಸಮಾಜಮುಖಿ ಯೋಜನೆಗಳನ್ನು ಮೆಚ್ಚಿ ಈ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಸಂಘದ ಭವಿಷ್ಯದ ಯೋಜನೆಗಳಿಗೆ ಸಹಕಾರ ನೀಡುವುದಾಗಿ ಅವರು ಈ ಸಂದರ್ಭ ತಿಳಿಸಿದ್ದಾರೆ. ಅವರನ್ನು ಸಂತೋಷ್ ಶೆಟ್ಟಿಯವರು ನೆನಪಿನ ಕಾಣಿಕೆ ನೀಡಿ ಸಮ್ಮಾನಿಸಿದರು. ಈ ಸಂದರ್ಭ ಪುಣೆಯ ಹೋಟೆಲ್ ಉದ್ಯಮಿ ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಹೆಜಮಾಡಿ…
ಅಭಿನಯ ಕಲೆಯಾದ ನಾಟಕವು ಸಾಮಾಜಿಕ ಶೋಷಣೆ, ದೌರ್ಜನ್ಯ, ಮೂಢ ನಂಬಿಕೆಗಳ ವಿರುದ್ಧ ಮೌನ ಕ್ರಾಂತಿ ಮಾಡುತ್ತಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಹೇಳಿದರು. ರಂಗಭೂಮಿ ಉಡುಪಿ ವತಿಯಿಂದ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ಹಮ್ಮಿಕೊಂಡಿರುವ ರಂಗಭೂಮಿ ರಂಗೋತ್ಸವ ಉದ್ಘಾಟನೆ ಸಮಾರಂಭದಲ್ಲಿ ಬುಧವಾರ ವಾರ್ಷಿಕ ಸ್ಮರಣ ಸಂಚಿಕೆ “ಕಲಾಂಜಲಿ’ ಬಿಡುಗಡೆ ಮಾಡಿ ಅವರು ಮಾತನಾಡಿದರು. ಅಭಿನಯ ಕಲೆ ಜೀವನದಲ್ಲಿ ಅತ್ಯಗತ್ಯ. ಇದು ಕರಗತವಾದಲ್ಲಿ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಮಾನವನ ಬಾಲ್ಯ, ಪ್ರೌಢಾವಸ್ಥೆ, ದಾಂಪತ್ಯ, ವೃತ್ತಿ ಜೀವನ, ವೃದ್ಧಾಪ್ಯ ಹೀಗೆ ಎಲ್ಲ ಕಾಲಘಟ್ಟದಲ್ಲೂ ಅಭಿನಯ ಕಲೆಯ ಪ್ರಭಾವ ಹೆಚ್ಚಿದೆ. ನಾಟಕ ಸಾಮಾಜಿಕ ಜಾಗೃತಿ ಉಂಟು ಮಾಡುತ್ತಿದೆ. ಇದನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಸಭಾಧ್ಯಕ್ಷತೆ ವಹಿಸಿ, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಹೆ ವಿ.ವಿ. ಸಹ ಕುಲಾಧಿಪತಿ ಡಾ| ಎಚ್. ಎಸ್.ಬಲ್ಲಾಳ್, ಸಿನೆಮಾ ಕಲಾವಿದರಿ ಗಿಂತ ರಂಗಭೂಮಿ ಕಲಾವಿದರದಲ್ಲಿ ಹೆಚ್ಚಿನ ಪ್ರತಿಭೆ ಇರುತ್ತದೆ. ಯುವ ಜನತೆಯಲ್ಲಿ ರಂಗಭೂಮಿಯ ಬಗ್ಗೆ…
” ಮನುಷ್ಯನ ಮೆದುಳಿನ ಬ್ರೈನ್ ಸ್ಟೋಕ್ ಮತ್ತು ತಡೆಗಟ್ಟುವಂತಹ ವಿಧಾನ ಹಾಗೂ ಸಂರಕ್ಷಣೆಯ ಪಾತ್ರ…!” ” ಮನುಷ್ಯನ ಕೇಂದ್ರಬಿಂದು ಮೆದುಳು ಪರಿಚಲನೆ ಮತ್ತು ಬ್ರೈನ್ ಸ್ಟ್ರೋಕ್ ಸಾಧಕ ಬಾಧಕಗಳ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮ…!” -ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ ,ಉಡುಪಿ ಜಿಲ್ಲೆ (ಪತ್ರಕರ್ತರು ಮಾಧ್ಯಮ ವಿಶ್ಲೇಷಕರು)’ m:9632581508 ಮನುಷ್ಯನ ಪ್ರತಿಯೊಂದು ಅಂಗಗಳು ತಮ್ಮದೇ ಆದಂತಹ ಕಾರ್ಯಗಳು ನಿರ್ವಹಿಸುತ್ತದೆ. ಅದೇ ರೀತಿಯಾಗಿ ನಮ್ಮ ಮೆದುಳಿನ ಕ್ರಿಯೆಗಳು ದೇಹದಲ್ಲಿನ ವಾತಾವರಣವನ್ನ ಸೃಷ್ಟಿಸುವುದರಿಂದ ದೇಹದಲ್ಲಿನ ಪ್ರಾಕೃತಿಕ ಲಕ್ಷಣಗಳನ್ನು ಹೊಂದಿದ್ದು, ಅವು ತನ್ನ ದಿನದ ಕಾರ್ಯವನ್ನು 24 ಗಂಟೆಯೂ ನಿರ್ವಹಿಸುತ್ತದೆ. ಅದಲ್ಲದೆ ನಮ್ಮ ಮೆದುಳಿನ ಭಾಗ ದೇಹದ ಕೇಂದ್ರ ಬಿಂದು ಆದ್ದರಿಂದ ಮೆದುಳಿನ ಸಂರಕ್ಷಣೆ ನಾವು ಯಾವ ರೀತಿ ಕೈಗೊಳ್ಳಬೇಕು ಮತ್ತು ಮೆದುಳಿನ ಸಂರಕ್ಷಣೆಯಿಂದ ಮನುಷ್ಯನ ಯಾವ್ಯಾವ ಭಾಗಗಳಿಗೆ ಒಳಿತನ್ನ ನೀಡುತ್ತದೆ ಅದಲ್ಲದೆ ನಿಷ್ಕಲ್ಮಶಕ್ತಿಯನ್ನು ಹೊಂದಿರುವಂತಹ ಮೆದುಳು, ಯಾವ ರೀತಿ ದೇಹ ರಚನೆಯನ್ನ ನಿರ್ಮಾಣ ಮಾಡುತ್ತದೆ. ಎನ್ನುವುದು ತಿಳಿಯುವುದು ಅತ್ಯಗತ್ಯ ಅದರಲ್ಲಿ ಮನುಷ್ಯನ ವಿವಿಧ…
ಸುರತ್ಕಲ್: ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಯಕ್ಷಸಿರಿ ಬಂಟರ ಸಂಘ ಸುರತ್ಕಲ್ ಯಕ್ಷಗಾನ ತರಬೇತಿ ಕೇಂದ್ರ ಉದ್ಘಾಟನಾ ಸಮಾರಂಭವು ಎಪ್ರಿಲ್ 14 ರಂದು ಗುರುವಾರ ಸಂಜೆ 4 ಗಂಟೆಗೆ ಬಂಟರ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಪಂಚ ಯಕ್ಷಗಾನ ಮೇಳಗಳ ಸಂಚಾಲಕರಾದ ಪಳ್ಳಿ ಕಿಶನ್ ಹೆಗ್ಡೆ ಉದ್ಘಾಟಿಸಲಿದ್ದಾರೆ. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್. ಪೂಂಜ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯ ಕದ್ರಿ ನವನೀತ ಶೆಟ್ಟಿ, ಮಾಧವ ಭಂಡಾರಿ ಕುಳಾಯಿ, ಸುರತ್ಕಲ್ ಅಗರಿ ಸಂಸ್ಥರಣಾ ವೇದಿಕೆಯ ಅಧ್ಯಕ್ಷ ಅಗರಿ ರಾಘವೆಂದ್ರ ರಾವ್, ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ನ ಸುರತ್ಕಲ್ ಘಟಕದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಪಟ್ಲ ಫೌಂಡೇಶನ್ ಟ್ರಸ್ಟ್ನ ಕೇಂದ್ರಿಯ ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ, ಯಕ್ಷಗುರು ರಾಕೇಶ್ ರೈ ಅಡ್ಕ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಸಂಚಾಲಕರು ತಿಳಿಸಿದ್ದಾರೆ.
ನಮ್ಮ ತುಳುನಾಡಿನ ಮಣ್ಣಿನಲ್ಲಿ ಹುಟ್ಟಿ ಮಹಾನಗರ ಮುಂಬಯಿಯಲ್ಲಿ ಹತ್ತಾರು ಕ್ಷೇತ್ರಗಳಲ್ಲಿ ಹೆಸರು ಮಾಡಿದ ವ್ಯಕ್ತಿ ವಿಶೇಷರ ಸಾಲಿನಲ್ಲಿ ಗುರುತಿಸಲ್ಪಡುವ ಹೆಸರು ನವೀನ್ ಶೆಟ್ಟಿ ಇನ್ನ ಬಾಳಿಕೆ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಇನ್ನ ಬಾಳಿಕೆ ಎಂಬ ಪ್ರತಿಷ್ಠಿತ ಬಂಟ ಕುಟುಂಬದ ವಿಠಲ ಶೆಟ್ಟಿ ಮತ್ತು ಅಡ್ವೆ ಕೆಳಗಿನ ಮನೆ ಶ್ರೀಮತಿ ಸುಲೋಚನಾ ವಿ.ಶೆಟ್ಟಿ ದಂಪತಿಯರ ಮೂವರು ಮಕ್ಕಳಲ್ಲಿ ದ್ವಿತೀಯರಾಗಿ ಜನಿಸಿದ ನವೀನ್ ಅವರು ಅಡ್ವೆ ಪ್ರಾಥಮಿಕ ಶಾಲೆಯಲ್ಲಿ ಆರಂಭಿಕ ಶಿಕ್ಷಣವನ್ನು ಮುಗಿಸಿ ನಂತರ ಇನ್ನದ ಎಂ.ವಿ.ಶಾಸ್ತ್ರಿ ಹೈಸ್ಕೂಲ್ ನಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿ ಮುಂದಿನ ಭವಿಷ್ಯವನ್ನು ಉತ್ತಮ ರೀತಿಯಲ್ಲಿ ಪೂರೈಸುವ ಉದ್ದೇಶದಿಂದ 1987 ರಲ್ಲಿ ತನ್ನ ಸೋದರತ್ತೆಯ ಜೊತೆ ಮುಂಬಯಿಗೆ ಆಗಮಿಸಿ, ತನ್ನ ಸಂಬಂಧಿಯೋರ್ವರ ಹೋಟೆಲಿನಲ್ಲಿ ದುಡಿಯುತ್ತಾ ಹೋಟೆಲ್ ಉದ್ಯಮ ಕುರಿತ ಮಹತ್ತರ ಅನುಭವ ಸಂಪಾದಿಸಿದರು. ಶಿವ್ಡಿಯ ಲಕ್ಷ್ಮಿ ಹೋಟೆಲ್ ಮಾಲಕರು ಇವರ ಸಂಬಂಧಿಕರಾದ ಕಾರಣ ಕೆಲಕಾಲ ನಿಷ್ಠೆ, ಪ್ರಾಮಾಣಿಕತೆಯಿಂದ ದುಡಿದು ಪ್ರೀತಿ ವಿಶ್ವಾಸ ಗಳಿಸಿಕೊಂಡರು. ಇದು ಅವರಿಗೆ ತನ್ನ ಮುಂದಿನ…