Author: admin
“ಮಮ್ಮಾಯಿದೂತೆ, ಊರುಗುದಾತೆ, ನಂಬಿನಾಯಗ್ ವೈದ್ಯನಾತೆ’ ಎನ್ನುವ ಕೀರ್ತಿಯೊಂದಿಗೆ ತುಳುನಾಡಿನಾದ್ಯಂತ ಪ್ರಸಿದ್ಧವಾದ, ಸತ್ಯದ ದೈವವಾಗಿ ನಂಬಿ ಬರುವ ಭಕ್ತರಿಗೆ ಭವರೋಗ ವೈದ್ಯನಾಗಿ, ಅಭಯ-ರಕ್ಷಣೆ ನೀಡುವ ಮಣಿಪಾಲದ ಶ್ರೀ ಬಬ್ಬುಸ್ವಾಮಿಗೆ ಸರಳ-ಸುಂದರ-ಶಾಸ್ತ್ರೀಯ ಆಯ ಪ್ರಮಾಣದ ದೈವಸ್ಥಾನ ನಿರ್ಮಿಸಿದ್ದು, ಪ್ರಸ್ತುತ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಸಮುಚ್ಚಯವು ಭವ್ಯ ದೈವಸ್ಥಾನವಾಗಿ ವಿಜೃಂಭಿಸುತ್ತ ಭಕ್ತರ ಆಕರ್ಷಣೆಯ ಕೇಂದ್ರವಾಗಿದೆ. ಪ್ರಕೃತಿಯ ಆರಾಧನೆಯೊಂದಿಗೆ ಗೋಳಿಮರದ ಅಡಿಯಲ್ಲಿರುವ ದೈವಸ್ಥಾನದಲ್ಲಿ ಎಲ್ಲ ಪರಿವಾರ ದೈವಗಳ ಆರಾಧನೆ ಸಂಪನ್ನಗೊಳ್ಳುತ್ತಿದೆ. ಆಕರ್ಷಕ ಸ್ವಾಗತ ಗೋಪುರ, ಹೂ, ಗಿಡಗಳ ಅಲಂಕಾರ ದೈವಸ್ಥಾನಕ್ಕೆ ಭೇಟಿ ನೀಡುವ ಭಕ್ತರಿಗೆ ಆಹ್ಲಾದ ನೀಡುತ್ತಿದೆ. ಪ್ರತೀ ವರ್ಷ ಮಾರ್ಚ್ನಲ್ಲಿ ನಡೆಯುವ ಸಿರಿಸಿಂಗಾರದ ನೇಮದಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಮಾ. 10ರ ಸಂಜೆ ಹೊರೆಕಾಣಿಕೆಯಿಂದ ಚಾಲನೆಗೊಳ್ಳುವ ಈ ವರ್ಷದ ನೇಮೋತ್ಸವ ಮಾ. 12ರ ವರೆಗೆ ಜರಗಲಿದೆ. ಇಲ್ಲಿ ಜರಗುವ ಅನ್ನಸಂತರ್ಪಣೆಯಲ್ಲಿ ವರ್ಷಂಪ್ರತಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಿದ್ದು, ಈ ವರ್ಷ ಮಾ. 11ರಂದು ನಡೆಯುವ ಮಹಾ ಅನ್ನಸಂತರ್ಪಣೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ದೈವಸ್ಥಾನದ…
ಸಾಧಿಸಬೇಕೆಂಬ ಛಲ ಇದ್ದರೆ ಯಾವ ರೂಪದಲ್ಲಾದರೂ ತನ್ನ ಕನಸುಗಳನ್ನು ನನಸು ಗೊಳಿಸಬಹುದೆಂಬುವುದಕ್ಕೆ ಸರಿಯಾದ ನಿದರ್ಶನವೆಂದರೆ ಹಲವಾರು ಪ್ರಶಸ್ತಿಗಳ ಸರದಾರರೆನಿಸಿಕೊಂಡ ಸುರೇಶ್ ರೈ ಸೂಡಿಮುಳ್ಳು ಅವರು. 1-07-1971 ರಂದು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸೂಡಿಮುಳ್ಳಿನಲ್ಲಿ ನಾರಾಯಣ ರೈ ಮತ್ತು ರಾಮಕ್ಕ ದಂಪತಿಗಳ ದ್ವಿತೀಯ ಪುತ್ರನಾಗಿ ಜನಿಸಿದ ಸುರೇಶ್ ರೈ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಣ್ಚಪ್ಪಾಡಿ ಹಾಗೂ ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಸರಕಾರಿ ಪ್ರೌಢಶಾಲೆ ಸವಣೂರಿನಲ್ಲಿ ಒಂಭತ್ತನೇ ತರಗತಿಯವರೆಗೆ ವ್ಯಾಸಂಗ ಮಾಡಿದರು. ಶಾಲಾ ದಿನಗಳಲ್ಲಿ ತುಳು ನಾಟಕದಲ್ಲಿ ಆಸಕ್ತಿ ವಹಿಸಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದರು. ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗಕ್ಕೆ ಸೇರಿ ನಂತರ ಜೀಪು ಚಾಲಕನಾಗಿ ಸವಣೂರಿನಲ್ಲಿ ವೃತ್ತಿ ಜೀವನ ಆರಂಭಿಸಿ ನಂತರದ ದಿನಗಳಲ್ಲಿ ಡೊಳ್ಳು ಕುಣಿತ, ಯಕ್ಷಗಾನ ಕಲೆಯ ಕಡೆ ಗಮನ ಸೆಳೆದು ಯುವಕ ಮಂಡಲ ಸವಣೂರಿನ ಸಕ್ರಿಯ ಸದಸ್ಯನಾಗಿ ಪಾಲ್ಗೊಂಡು ಅಭ್ಯಸಿಸತೊಡಗಿದರು. ಯುವಕ ಮಂಡಲದ ಜೊತೆಯಾಗಿ ಊರು ಪರವೂರಿನಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಪ್ರಶಂಸೆಗೆ…
ಬೆಂಗಳೂರಲ್ಲಿ ಹೆಚ್ಚಿದ ಬೀದಿ ನಾಯಿ ಹಾವಳಿ – ಬಿಬಿಎಂಪಿಯಿಂದ ನಾಯಿ ಹಿಡಿಯಲು ವರ್ಷಕ್ಕೆ ಕೋಟಿ, ಕೋಟಿ ರೂ. ಖರ್ಚು…!
ಮಹಾನಗರದಲ್ಲಿ ಬೀದಿ ನಾಯಿಗಳ ಅಟ್ಟಹಾಸ ; ಮಕ್ಕಳ ಸಾವಿಗೆ ಬೀದಿ ನಾಯಿಗಳೇ ಕಾರಣ ; ನಾಯಿ ಹಿಡಿಯುವ ನೆಪದಲ್ಲಿ ಕೋಟಿ ಕೋಟಿ ಬೊಕ್ಕಸಕ್ಕೆ ಪಂಗನಾಮ ಇಟ್ಟ ಬಿಬಿಎಂಪಿ….! ಸಾರ್ವಜನಿಕರ ಹಣ ದುಂದು ವೆಚ್ಚ ….!? – ಕೆ. ಸಂತೋಷ ಶೆಟ್ಟಿ ಮೊಳಹಳ್ಳಿ ಕುಂದಾಪುರ, ಉಡುಪಿ ಜಿಲ್ಲೆ. (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು) ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ನಾಯಿ ಹಿಡಿಯುವ ನೆಪದಲ್ಲಿ ಕೋಟಿ ಕೋಟಿ ಬಂಡವಾಳ ಹಾಕಿದ್ದೇವೆ ಎಂದು ಲೆಕ್ಕಪತ್ರವನ್ನ ಸರ್ಕಾರಕ್ಕೆ ರವಾನಿಸಿದ್ದಾರೆ. ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಅದಲ್ಲದೆ ಮಾಂಸಹಾರ ಇರುವ ಅಂಗಡಿ ಪ್ರದೇಶಗಳಲ್ಲಿ ಬೀದಿ ನಾಯಿಗಳು ರವಾನೆ ಆಗಿರುತ್ತದೆ ಅದಲ್ಲದೆ ಬೀದಿನಾಯಿಗಳ ಉಪಟಳವನ್ನು ತಡೆಯಲು ಬಿಬಿಎಂಪಿ ಹರಸಾಹಸ ಪಡುತ್ತಿದೆ ಎಂದು ಸರ್ಕಾರಕ್ಕೆ ಲೆಕ್ಕ ಪತ್ರ ವಿಚಾರವನ್ನು ತಿಳಿಸಿದೆ, ಆದರೆ ಬಿಬಿಎಂಪಿ ಲೆಕ್ಕ ಪ್ರಕಾರ ಕೋಟಿ ಕೋಟಿ ದುಂದು ವೆಚ್ಚ ಮಾಡುತ್ತಿರುವುದು ಸಾರ್ವಜನಿಕರ ಕಣ್ಣು ಕೆಂಪಗಾಗಿಸಿದೆ ಅದಲ್ಲದೆ ಸರ್ಕಾರ ಇದರ ಬಗ್ಗೆ ಮುತುವರ್ಜಿಯನ್ನು ವಹಿಸದೆ ಬಿಬಿಎಂಪಿಯ ಅಧಿಕಾರಕ್ಕೆ ಕೊಟ್ಟು…
ದೇಹವನ್ನು ತಂಪಾಗಿರಿಸಲು ಪ್ರತಿನಿತ್ಯ ಬಳಸಿ -“ರಾಗಿ ಅಂಬಲಿ…..! ಕೊಬ್ಬಿನ ಅಂಶವನ್ನು ನೀಗಿಸಿ , ಕಬ್ಬಿಣದ ಅಂಶವನ್ನು ದೊರೆಸುವ ಏಕ ಮಾತ್ರ ಆಹಾರ – ರಾಗಿ ಅಂಬಲಿ….
ದೇಹದಲ್ಲಿನ ನಿಶಕ್ತಿ ,ಕೊಬ್ಬಿನಂಶವನ್ನು ತ್ಯಜಿಸುವ , ಅಗಾಧ ಕ್ಯಾಲ್ಸಿಯಂ ಮತ್ತು ವಿಟಮಿನ್ ಪೂರೈಸುವ ರಾಗಿ ಉತ್ತಮ ಆರೋಗ್ಯಕ್ಕೆ ರಹದಾರಿ…..! ರಾಗಿಯಲ್ಲಿ ದೇಹಕ್ಕೆ ಬೇಕಾಗಿರುವಂತಹ ಹಲವು ಪೌಷ್ಟಿಕಾಂಶಗಳು ಇವೆ. ರಾಗಿ ರೊಟ್ಟಿ ರಾಗಿ ಮುದ್ದೆ ರಾಗಿ ಅಂಬಲಿ ಸೇವಿಸುವುದರಿಂದ ಉತ್ತಮವಾದ ಆರೋಗ್ಯವನ್ನು ಪಡೆಯಬಹುದು. ಅಷ್ಟೇ ಅಲ್ಲದೆ ಈ ಗ್ಯಾಸ್ಟಿಕ್ ಸಮಸ್ಯೆ ಅನ್ನುವುದು ಕೂಡ ಇರುವುದಿಲ್ಲ. ದೇಹಕ್ಕೆ ತಂಪು ನೀಡುವಂತಹ ರಾಗಿ ಅಂಬಲಿಯನ್ನು ಸೇವಿಸುವುದರಿಂದ ಯಾವೆಲ್ಲ ಲಾಭವಿದೆ ಅನ್ನುವುದನ್ನು ತಿಳಿಸಿಕೊಡುತ್ತೇವೆ. ರಾಗಿ ಅಂಬಲಿ ಯಲ್ಲಿ ಪ್ರೋಟಿನ್ ಹಾಗೂ ಕ್ಯಾಲ್ಸಿಯಂ ಅಂಶ ಇರುವುದರಿಂದ ಇದರ ಸೇವನೆಯಿಂದ ದೇಹಕ್ಕೆ ಉತ್ತಮ ಎನರ್ಜಿ ಹಾಗೂ ಶಕ್ತಿ ಸಿಗುತ್ತದೆ. ಅಷ್ಟೇ ಅಲ್ಲದೆ ದೇಹದಲ್ಲಿನ ಮೂಳೆಗಳು ಬಲಿಷ್ಠವಾಗಿ ಬೆಳೆಯಲು ಸಹಾಯವಾಗುತ್ತದೆ. ಮತ್ತು ಆಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿರುವಂತಹ ಈ ರಾಗಿಯಲ್ಲಿಉತ್ತಮ ಆರೋಗ್ಯ ಸಿಗುವುದರ ಜೊತೆಗೆ ಸೌಂದರ್ಯ ಕೂಡ ವೃದ್ಧಿಯಾಗುತ್ತದೆ. ರಾಗಿ ಅಂಬಲಿಯನ್ನು ಸೇವಿಸುವುದರಿಂದ ತಲೆ ಕೂದಲ ಆರೋಗ್ಯ ಹಾಗೂ ವಿಟಮಿನ್ ಡಿ ಸಮಸ್ಯೆ ನಿವಾರಣೆಯಾಗುವುದು. ಅಷ್ಟೇ ಅಲ್ಲದೆ ರಾತ್ರಿ ವೇಳೆ ರಾಗಿಯಿಂದ ತಯಾರಿಸಿದ…
ಬ್ರಹ್ಮಾವರ ನ. 09: ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಮಕ್ಕಳ ಸುರಕ್ಷತೆಯ ಕುರಿತು ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೆಲ್ತ್ ಆಂಡ್ ಎಮೋಶನ್ ಗ್ರೂಪ್ನ ಸ್ಥಾಪಕರಾದ ಡಾ. ರಾಜಲಕ್ಷ್ಮೀ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಅವರು ಮಕ್ಕಳು ಇಂದು ಎದುರಿಸುತ್ತಿರುವ ಸಮಸ್ಯೆಗಳು, ಮೊಬೈಲ್ ಬಳಕೆಯ ದುಷ್ಪರಿಣಾಮಗಳು, ಮಕ್ಕಳ ಸುರಕ್ಷತೆಯ ಕುರಿತು ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರು. ನಂತರ ಮಕ್ಕಳು ವೈದ್ಯೆಯೊಂದಿಗೆ ಮುಕ್ತವಾಗಿ ಚರ್ಚಿಸಿ ತಮ್ಮ ಗೊಂದಲಗಳಿಗೆ ಪರಿಹಾರ ಕಂಡುಕೊಂಡರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ನಮಗೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ, ಆರ್ಥಿಕ, ಬೌದ್ಧಿಕ, ಸಾಮಾಜಿಕ ಸ್ವಾಸ್ಥ್ಯದ ಅರಿವಿರಬೇಕೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಅತಿವೇಗವಾಗಿ ಬೆಳೆಯುತ್ತಿರುವ ಇಂದಿನ ವಿದ್ಯಮಾನಗಳಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸಬಹುದು. ಆದ್ದರಿಂದ ವಿದ್ಯಾರ್ಥಿಗಳಿಗೆ ತಮ್ಮ ನಿರ್ದಿಷ್ಟ ಗುರಿಯನ್ನು ತಲುಪಲು ಸರಿಯಾದ ಮಾರ್ಗದರ್ಶನ, ಮಾಹಿತಿಗಳ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಜಿ ಎಮ್ ಇಂತಹ ಹಲವಾರು ಕಾರ್ಯಕ್ರಮಗಳನ್ನು…
ಬಾಂಬೆ ಬಂಟ್ಸ್ ಅಸೋಸಿಯೇಶನ್ನ ಜೂಯಿ ನಗರ ಬಂಟ್ಸ್ ಸೆಂಟರ್ನ ಶಶಿಕಲಾ ಮನ್ಮೋಹನ್ ಶೆಟ್ಟಿ ಕಾಂಪ್ಲೆಕ್ಸ್ನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದಲ್ಲಿ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆ, ರಕ್ತದಾನ ಶಿಬಿರವು ಅಸೋಸಿಯೇಷನ್ ನ ಅಧ್ಯಕ್ಷರಾದ ಸಿಎ ಸುರೇಂದ್ರ ಕೆ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಉಪಾಧ್ಯಕ್ಷ ನ್ಯಾಯವಾದಿ ಡಿ. ಕೆ. ಶೆಟ್ಟಿ, ಗೌರವ ಪ್ರಧಾನ ಕಾರದರ್ಶಿ ಐಕಳ ಕಿಶೋರ್ ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ವಿಶ್ವನಾಥ ಎಸ್.ಶೆಟ್ಟಿ, ಉನ್ನತ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಶ್ರೀಧರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ತೇಜಾಕ್ಷೀ ಎಸ್. ಶೆಟ್ಟಿ, ಉಪ ಕಾರ್ಯಧ್ಯಕ್ಷೆ ಶಾಂತ ನಾರಾಯಣ ಶೆಟ್ಟಿ, ಸದಾನಂದ ಡಿ ಶೆಟ್ಟಿ, ಮಹಿಳಾ ವಿಭಾಗದ ನಾಗವೇಣಿ ಶೆಟ್ಟಿ, ಸುನಿತಾ ಸದಾನಂದ ಶೆಟ್ಟಿ, ರೇವತಿ ಶೆಟ್ಟಿ, ಶ್ರೀಮತಿ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲೆ ಡಾಕ್ಟರ್ ರಶ್ಮಿ ಚಿತ್ತಲಾಂಗೆ, ರಾತ್ರಿ ಕಾಲೇಜಿನ ಪ್ರಾಂಶುಪಾಲ ಡಾ. ಎಸ್ ಎಸ್ ಭಂಡಾರಿ ಹಾಗೂ ಇತರ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗ, ವಿವಿಧ ಉಪಸಮಿತಿಗಳ…
ನಮ್ಮ ಸಮಾಜದ ಕಡು ಬಡತನದಲ್ಲಿರುವ 50 ಮಂದಿ ವಿದ್ಯಾರ್ಥಿಗಳಿಗೆ 5 ಲಕ್ಷ ರೂಪಾಯಿಗಳ ವಿದ್ಯಾರ್ಥಿವೇತನವನ್ನು ಲೈಫ್ ಲೈನ್ ಫೀಡ್ಸ್ ನ ಸಿಎಂಡಿ ಕಿಶೋರ್ ಕುಮಾರ್ ಹೆಗ್ಡೆ, ಇಮೇಜ್ ಲೇಬಲ್ಸ್ ನ ಸಿಎಂಡಿ ಸುಜನ್ ಶೆಟ್ಟಿ ನೈಲಾಡಿ ಹಾಗೂ ಟೈಮ್ ಆಂಡ್ ಸ್ಪೇಸ್ ನ ಸಿಎಂಡಿ ರವಿ ಶೆಟ್ಟಿಯವರ ಸಹಕಾರದೊಂದಿಗೆ ಸಂಸ್ಥೆಯ ಕಚೇರಿಯಲ್ಲಿ ಜುಲೈ 30 ರಂದು ಸರಳವಾಗಿ ವಿತರಿಸಲಾಯಿತು. ಬಂಟ್ಸ್ ನೌ ಮಾಧ್ಯಮ ಸಂಸ್ಥೆಯು ಯಶಸ್ವೀ 15 ವರ್ಷಗಳನ್ನು ಪೂರೈಸಿದ್ದು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿವೆ. ಸುಮಾರು 500 ಕ್ಕೂ ಮಿಕ್ಕಿ ಅರ್ಹ ಅಭ್ಯರ್ಥಿಗಳಿಗೆ ಉದ್ಯೋಗವನ್ನು ದೊರಕಿಸಿಕೊಟ್ಟಿದೆ. 8 ಮಂದಿ ಸಹೋದರಿಯರಿಗೆ ಕರಿಮಣಿಯನ್ನು ಕೊಟ್ಟಿದೆ. 15 ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ಹೊತ್ತುಕೊಂಡು ದತ್ತು ತೆಗೆದುಕೊಂಡಿದೆ.
ಗುರಿ ಎನ್ನುವುದು ಒಂದು ಯೋಚನೆಯಲ್ಲ, ಅದು ಒಂದು ಪ್ರಯತ್ನ. ಸುಮ್ಮನೆ ಯೋಚಿಸಿಕೊಂಡು ಕೂರುವ ಬದಲು ಸತತ ಪ್ರಯತ್ನ ಪಡಬೇಕು ಆಗ ಗುರಿ ತಲುಪಲು ಸಾಧ್ಯವಾಗುತ್ತದೆ. ಶಿವ ಛತ್ರಪತಿ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಉದಯ ಶೆಟ್ಟಿ ಅವರು ಅಂತರಾಷ್ಟ್ರೀಯ ಮಟ್ಟದ ಅಪ್ರತಿಮ ಪ್ರತಿಭಾವಂತ ಕ್ರೀಡಾಪಟು. ಜುಲೈ ಒಂದರಂದು 60ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ಇವರು ಮೂಲತಃ ಉಡುಪಿ ಜಿಲ್ಲೆಯ ಕಟಪಾಡಿಯ ಸಮೀಪದ ಮಣಿಪುರ ಗ್ರಾಮದವರು. ಬೆಳಿಯೂರು ಬಂಟಕಲ್ಲು ಕೋಡಿಬೆಟ್ಟು ಸದಾಶಿವ ಶೆಟ್ಟಿ ಮತ್ತು ಗಿರಿಜಾ ಶೆಟ್ಟಿ ದಂಪತಿಗಳ ಪುತ್ರರಾದ ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಣಿಪುರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದರು. ಹೈಸ್ಕೂಲ್ ವಿದ್ಯಾಭ್ಯಾಸವನ್ನು ಅಲೆವೂರು ನೆಹರೂ ಹೈಸ್ಕೂಲಿನಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರಿನ ಕೆ.ಎಲ್. ಇ. ನಲ್ಲಿ ಪೂರೈಸಿದರು. ಮುಂಬೈಯ ಕೆ.ಪಿ.ಬಿ. ಹಿಂದುಜಾ ಕಾಲೇಜಿನಲ್ಲಿ 1983ರಲ್ಲಿ ತಮ್ಮ ಬಿಕಾಂ ಪದವಿಯನ್ನು ಪಡೆದರು. ಬಾಲ್ಯದಿಂದಲೂ ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಶ್ರೀ ಉದಯ ಶೆಟ್ಟಿಯವರು ತಮ್ಮ ಶಾಲಾ ಶಿಕ್ಷಣದಲ್ಲಿ ಕ್ರಿಕೆಟ್, ವಾಲಿಬಾಲ್, ಅಥ್ಲೆಟಿಕ್ಸ್…
ರಾಜಕಾರಣದ ವರ್ತಮಾನದ ಬೆಳವಣಿಗೆ ವಿಕ್ಷಿಪ್ತ ಮಜಲಿಗೆ ಹೊರಳಿದೆ. ಕಂಡು ಕೇಳರಿಯದ ಉಚಿತ ಕೊಡುಗೆಗಳನ್ನು ಹಂಚುವ ವಿಪರ್ಯಾಸದ ಸನ್ನಿವೇಶಕ್ಕೆ ಸಾಕ್ಷಿಯಾಗಿದೆ. ಹೀಗೂ ಉಂಟೆ? ಎಂದು ಬೆರಗುಗಣ್ಣಿನಿಂದ ಪರಮ ಅಚ್ಚರಿಯಲ್ಲಿ ಉದ್ಗರಿಸುವ ಸರದಿ ನಮ್ಮ ಜನಮನದ್ದು. ಬೆವರು ಸುರಿಸದೆ ಕೂತು ಉಣ್ಣುವ ಕಾಲವೊಂದು ಬರಬಹುದು ಎನ್ನುವ ಊಹನಾತೀತ ಕಲ್ಪನೆ ಸಾಕಾರಗೊಂಡಿದೆ. ರಾಮರಾಜ್ಯದ ಆದರ್ಶದ ಪರಿಕಲ್ಪನೆ ಯಲ್ಲಿ ರಾಷ್ಟ್ರಕಟ್ಟುವ ಸ್ವಾತಂತ್ರೊತ್ತರ ಆಶಯಗಳು ಹರಿದು ಹಂಚಾಗಿ ಹೋದಂತೆ ಭಾಸವಾಗುತ್ತಿದೆ. ಸ್ವರಾಜ್ಯಕ್ಕಾಗಿ ನಡೆದ ಹೋರಾಟದ ಆತ್ಯಂತಿಕ ಕ್ಷಣಗಳಲ್ಲಿ ಕಣ್ಣ ಮುಂದೆ ತೇಲುತ್ತಿದ್ದದ್ದು ಉದಾತ್ತ ಆಡಳಿತ ಸೂತ್ರದ ಪ್ರಜೆಗಳ ಪ್ರಭುತ್ವ. ಬರಬರುತ್ತಾ ಅದೇ ಪ್ರಭುತ್ವ ತಮ್ಮ ಆಳ್ವಿಕೆ ಪುನರಾವರ್ತನೆ ಯಾಗಬೇಕೆಂಬ ಉತ್ಕಟತೆಯಿಂದ ಜನಪ್ರಿಯ ಪ್ರಣಾಳಿಕೆಗೆ ಜೋತು ಬಿದ್ದದ್ದು ಕಣ್ಣೆದುರಿನ ಸತ್ಯ. ಹೆಚ್ಚಿನ ರಾಜಕೀಯ ಪಕ್ಷಗಳು ಬೇಕಾಬಿಟ್ಟಿ ಯಾಗಿ ವರ್ತಿಸಿ ಬಿಟ್ಟಿ ಭಾಗ್ಯಗಳ ಮೆರವಣಿಗೆ ನಡೆಸಿದವು. ಸೈದ್ಧಾಂತಿಕ ವಾಗಿ, ನೈತಿಕವಾಗಿ, ಸಾಮಾಜಿಕವಾಗಿ ಹೊಸ ಪೀಳಿಗೆಗೆ ಉತ್ತರ ದಾಯಿತ್ವ ಹೊಂದಿರಬೇಕಾದ ರಾಜಕೀಯ ಪಕ್ಷಗಳ ದೊಂಬರಾಟ ಮುಂದಿನ ಜನಾಂಗಕ್ಕೆ ಕೇವಲ ಪ್ರಶ್ನೆಯನ್ನು ಮಾತ್ರ ಉಳಿಸಿಬಿಟ್ಟವು.…
ದೈವಾರಾಧನೆಯು ತುಳುನಾಡಿನ ಪ್ರಮುಖ ನಂಬಿಕೆಯಾಗಿದ್ದು ಅತೀ ಶ್ರದ್ಧಾ ಭಾವ ಭಕ್ತಿಯಿಂದ ಅನಾದಿ ಕಾಲದಿಂದಲೂ ನಂಬಿಕೊಂಡು ಬಂದಿರುತ್ತೇವೆ. ದೈವಾರಾಧನೆಯನ್ನು ಮಾಡಿಕೊಂಡು ಬರುವುದು ಎಲ್ಲರಿಗೂ ಸಾಧ್ಯವಾಗದ ಕೆಲಸ. ಅಂತಹ ಪುಣ್ಯ ಕೆಲಸವನ್ನು ಮಾಡಲು ಅವಕಾಶ ದೊರಕಿದರೆ ಅದುವೇ ಅದೃಷ್ಟ. ಅನಾದಿ ಕಾಲದಿಂದಲೂ ಗುತ್ತು, ಬರಿಕೆಗಳೇ ಪ್ರಧಾನ. ಕೋರ್ಟ್ ಪೋಲಿಸ್ ಸ್ಟೇಷನ್ ಗಳಿಗೆ ಮಾನ್ಯತೆಯಿದ್ದರೂ ಗುತ್ತಿನ ಯಜಮಾನ ನೀಡುವ ತೀರ್ಮಾನಕ್ಕೆ ಆದ್ಯತೆಯಿತ್ತು. ಗುತ್ತು ಬರಿಕೆಗಳಲ್ಲಿ ದೈವ ದೇವರುಗಳ ಆರಾಧನೆ ಇದ್ದೇ ಇರುತ್ತದೆ. ಬೇರೆ ಕಡೆಗಳಲ್ಲೂ ದೈವಾರಾಧನೆಯ ಸಂದರ್ಭದಲ್ಲಿ ಗುತ್ತು ಮನೆತನದವರಿಗೆ ಮೊದಲಿಗೆ ಪ್ರಸಾದ ನೀಡುವ ವಿಧಾನ ಈಗಲೂ ಇದೆ. ಪ್ರತಿಷ್ಠಿತ ಗುತ್ತು ಮನೆತನಗಳಲ್ಲಿ ಒಂದಾದ ಮಾಣಿಗುತ್ತು ಮನೆತನದಲ್ಲಿ ಜನಿಸಿ ಅತೀ ಎಳೆಯ ಪ್ರಾಯದಲ್ಲೇ ನಮ್ಮ ಸಂಸ್ಕೃತಿ, ಆಚರಣೆ, ಆರಾಧನೆಗಳ ಬಗೆಗಿನ ವಿಚಾರಧಾರೆಗಳನ್ನು ತಿಳಿದುಕೊಂಡು ಗುತ್ತಿನ ಮನೆಯ ದೈವಾರಾಧನೆಯನ್ನು ಮಾಡಿಕೊಂಡು ಬರಬೇಕೆಂಬ ಸದುದ್ದೇಶದಿಂದ ಗುರು ಹಿರಿಯರ ಮಾರ್ಗದರ್ಶನವನ್ನು ಪಡೆದುಕೊಂಡು ಮುಂಚೂಣಿಯಲ್ಲಿ ನಿಂತು ದೈವಾರಾಧನೆಯನ್ನು ಮುನ್ನಡೆಸಿಕೊಂಡು ಬರುತ್ತಿರುವವರು ಸಚಿನ್ ರೈ ಮಾಣಿಗುತ್ತು. 7- 4 -1982 ರಲ್ಲಿ ದಿ|…