Author: admin

ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುಣೆ ಇದರ ವತಿಯಿಂದ ಗುರು ಪೂರ್ಣಿಮೆಯ ಆಚರಣೆಯು, ಒಡಿಯೂರು ಸಂಸ್ಥಾನದ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಜಿಯವರ ಶುಭಾಶಿರ್ವಾದದೊಂದಿಗೆ ಜುಲೈ 3 ರಂದು ಪುಣೆ ಶ್ರೀ ಗುರುದೇವ ಸೇವಾ ಬಳಗದ ಗೌರವ ಕಾರ್ಯದರ್ಶಿ ನಗ್ರಿಗುತ್ತು ರೋಹಿತ್ ಶೆಟ್ಟಿ ದಂಪತಿಗಳ ಅಯೋಜಕತ್ವದಲ್ಲಿ ಪುಣೆಯ ಬಾಣೇರ್ ನಲ್ಲಿಯ ಫಿಲಿವಿಲದಲ್ಲಿ ವಿವಿದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ. ಜರಗಿತು. ಗುರು ಪೂರ್ಣಿಮೆಯ ಅಂಗವಾಗಿ ಪುಣೆಯ ಖ್ಯಾತ ಪುರೋಹಿತರಾದ ಕಾತ್ರಜ್ ಹರೀಶ್ ಭಟ್ ಮತ್ತು ತಂಡದವರ ನೇತೃತ್ವದಲ್ಲಿ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಹಾಗೂ ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಸದಸ್ಯೆಯರು ಹಾಗೂ ಬಳಗದ ಸದಸ್ಯರಿಂದ ಭಜನಾ ಮಂಡಳಿಯ ಗುರುಗಳಾದ ಶ್ರೀ ದಾಮೋದರ ಬಂಗೇರರವರ ಮುಂದಾಳತ್ವದಲ್ಲಿ ಭಜನೆ ನಡೆಯಿತು. ಶ್ರೀ ರೋಹಿತ್ ಶೆಟ್ಟಿ ಶ್ರೀಮತಿ ಸ್ನೇಹಲತಾ ಅರ್.ಶೆಟ್ಟಿ ದಂಪತಿಗಳು ಗಣಹೋಮ, ಸತ್ಯನಾರಾಯಣ ಪೂಜೆಗೆ ಕುಳಿತು ಪೂಜಾ ವಿಧಿ ವಿಧಾನ ನೆರವೆರಿಸಿದರು. ನಂತರ…

Read More

ರಂಗಭೂಮಿಯಲ್ಲಿ ಶ್ರೀ ಲಲಿತೆ ಕಲಾವಿದರ ತಂಡ ವಿಭಿನ್ನ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಪ್ರೇಕ್ಷಕರಿಗೆ ಹೊಸತನವನ್ನು ನೀಡಿದೆ. ಅದರಲ್ಲೂ ಶ್ರೀಲಲಿತೆ ಕಲಾವಿದರು ತಂಡದಿಂದ ಪ್ರದರ್ಶನಗೊಂಡ ಗರುಡ ಪಂಚಮಿ ನಾಟಕದಲ್ಲಿ ವಿಶಿಷ್ಠವಾದ ರಂಗ ವಿನ್ಯಾಸವನ್ನು ಬಳಸಲಾಗಿದೆ. ಕಿಶೋರ್ ಡಿ ಶೆಟ್ಟಿ ಅವರು ರಂಗಭೂಮಿಗೆ ಬಹಳಷ್ಟು ಉತ್ತಮ ಮೌಲ್ಯಯುತ ನಾಟಕಗಳನ್ನು ನೀಡಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶವೂ ಇದೆ ಎಂದು ಯಕ್ಚಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು. ಮಂಗಳೂರು ಪುರಭವನದಲ್ಲಿ ಶ್ರೀಲಲಿತೆ ಕಲಾವಿದರು (ರಿ) ಅರ್ಪಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ನಡೆದ ಗರುಡ ಪಂಚಮಿ ನಾಟಕದ 50 ನೇ ಪ್ರದರ್ಶನದ ಸಂಭ್ರಮಾಚರಣೆ ಮತ್ತು ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಅವರಿಗೆ ನೀಡಲಾದ ರಂಗಕಲಾ ಬಂಧು ಬಿರುದು ಪ್ರದಾನ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಮೇಯರ್ ಸುಧೀರ್ ಶೆಟ್ಟ ಕಣ್ಣೂರು ಅಧ್ಯಕ್ಷತೆ ವಹಿಸಿದ್ದರು. ಕಿಶೋರ್ ಡಿ ಶೆಟ್ಟಿ ಅವರು ಅನೇಕ ವರ್ಷಗಳಿಂದ ನಾಟಕ ತಂಡಗಳನ್ನು ಕಟ್ಟಿ ಕಲಾವಿದರಿಗೆ…

Read More

ಮೂಡುಬಿದಿರೆ: ‘ವೈಯಕ್ತಿಕ ಮಾಹಿತಿಯ ರಕ್ಷಣೆಯೇ ಇಂದಿನ ಸವಾಲು’ ಎಂದು ರಾಜ್ಯ ಸರ್ಕಾರದ ಸೈಬರ್‍ಸೆಕ್ ಕೇಂದ್ರದ ಮುಖ್ಯಸ್ಥ ಕಾರ್ತಿಕ್ ಬಪ್ಪನಾಡ್ ಹೇಳಿದರು. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಸೋಮವಾರ 2023-24 ಶೈಕ್ಷಣಿಕ ವರ್ಷದ ‘ಸೈಬರ್ ಸೆಕ್ಯುರಿಟಿ ಕ್ಲಬ್’ನ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ‘ಇತ್ತೀಚಿನ ದಿನಗಳಲ್ಲಿ ವೈಯುಕ್ತಿಕ ಮಾಹಿತಿಯ ದುರ್ಬಳಕೆ ಹೆಚ್ಚಾಗುತ್ತಿದ್ದು, ಈ ಮಾಹಿತಿಯ ಭದ್ರತೆ ಹಾಗೂ ಸುರಕ್ಷತೆಯು ನಿಮ್ಮ ಆದ್ಯತೆಯಾಗಬೇಕು’ ಎಂದರು. ‘ತಂತ್ರಜ್ಞಾನಗಳ ಈ ಕಾಲದಲ್ಲಿ ನಮ್ಮ ವ್ಯವಹಾರ ಮತ್ತು ವೈಯಕ್ತಿಕ ವಿವರಗಳ (ಪ್ರೊಫೈಲ್)ಆಧಾರದ ಮೇಲೆ ಸೈಬರ್‍ಕ್ರೈಂ ಗಳು ನಡೆಯುತ್ತವೆ. ನಮ್ಮ ಭವಿಷ್ಯದ ಒಳಿತಿಗಾಗಿ ಬಹುವಿಧದ ಭದ್ರತೆ ನೀಡಲು, ನಮಗೆ ತಂತ್ರಜ್ಞಾನದ ಹಿಡಿತ ಇರಬೇಕು’ ಎಂದರು. ಲಭ್ಯತೆ, ಸಮಗ್ರತೆ, ಗೌಪ್ಯತೆ ಎಂಬ ಮೂರು ಅಂಶಗಳನ್ನು ನಮ್ಮಲ್ಲಿ ನಾವು ಅಳವಡಿಸಿಕೊಂಡಾಗ ನಮ್ಮ ಮಾಹಿತಿ ಮತ್ತು ಡೇಟಾಗಳನ್ನ ಭದ್ರಪಡಿಸಿಕೊಳ್ಳಲು ಸಾಧ್ಯ ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ‘ ವಿದ್ಯಾರ್ಥಿಗಳು ರೂಪಿಸುವ ಪ್ರಾಜೆಕ್ಟ್‍ಗಳು ಕೇವಲ ಚಿತ್ರ ಹಾಗೂ ಅಂಕಿ…

Read More

“ಈ ಪ್ರಪಂಚವನ್ನು ತಾನು ಕಂಡದ್ದಕ್ಕಿಂತ ಹೆಚ್ಚು ಸಂತೋಷದಾಯಕವಾಗಿ ಮತ್ತು ಸುಂದರವಾಗಿ ಮಾಡುವವನು ಸುಸಂಸ್ಕೃತ ” ಎಂದು ಖ್ಯಾತ ಪಾಶ್ಚಾತ್ಯ ಚಿಂತಕ ಅಡ್ವಿನ್ ಅರ್ನಾಲ್ಡ್ ಹೇಳುತ್ತಾರೆ. ಕಳೆದ ಮೂರು ದಶಕಗಳಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ರಾಜ್‍ಕಿರಣ್ ರೈ, ಕೃಷಿ ಅಭಿವೃದ್ಧಿ ಅಧಿಕಾರಿಯಾಗಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದರು. ಇಲ್ಲಿ 1986 ರಿಂದ 2015ರ ವರೆಗೆ ಬ್ಯಾಂಕಿಂಗ್ ಕ್ಷೇತ್ರದ ಅಭಿವೃದ್ಧಿಯನ್ನು ವಿವಿಧ ಕ್ಷೇತ್ರಗಳಲ್ಲಿ ಕೈಯಾಡಿಸಿ ಪರಿಣಿತರಾದ ಶ್ರೀಯುತರು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ದೇಶದ ವಿವಿಧ ರಾಜ್ಯಗಳ ಶಾಖೆಗಳಲ್ಲಿ ಸೇವೆ ಸಲ್ಲಿಸಿ ತಮ್ಮ ಅನುಭವವನ್ನು ವಿಸ್ತರಿಸಿಕೊಂಡರು. ಮುಂಬಾಯಿಯಲ್ಲಿದ್ದುಕೊಂಡು ಅವರು ಬ್ಯಾಂಕಿಂಗ್ ಕ್ಷೇತ್ರದ ಅಭಿವೃದ್ಧಿಯಲ್ಲಿ ನೀಡಿದ ಸೇವೆ ಅವರಿಗೆ ಕೀರ್ತಿಯನ್ನು ತಂದಿತು. ಈ ಬ್ಯಾಂಕಿನ ಅತ್ಯುನ್ನತ ಹುದ್ದೆಯಾದ ಜನರಲ್ ಮ್ಯಾನೆಜರ್ ಆಗಿಯೂ ಬಡ್ತಿ ಹೊಂದಿ ಇವರ ಸೇವೆಯನ್ನು ಗಮನಿಸಿ ಸರಕಾರವು ಇವರನ್ನು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್‍ನ ಅಧ್ಯಕ್ಷರಾಗಿ ನಾಮ ನಿರ್ದೇಶನ ಮಾಡಿತು. ಇಲ್ಲಿ 1 1/2 ವರ್ಷ…

Read More

ಮೂಡುಬಿದಿರೆ: 2023ರ ನವೆಂಬರ್‍ನಲ್ಲಿ ನಡೆದ ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 14 ಹಿರಿಯ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಈ ಪೈಕಿ 9 ವಿದ್ಯಾರ್ಥಿಗಳು ಪ್ರತಿಷ್ಠಾನದ ಶೈಕ್ಷಣಿಕ ದತ್ತು ಶಿಕ್ಷಣ ಯೋಜನೆಯಡಿ ಪದವಿ ಹಾಗೂ ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹಿರಿಯ ವಿದ್ಯಾರ್ಥಿಗಳಾದ ನೌಫಲ್, ವಾಣಿಶ್ರೀ, ಧಾಮಿನಿ, ಮೇಘಾ ಆರ್. ಶೆಟ್ಟಿ, ತೇಜಸ್ ಆಚಾರ್ಯ, ಕ್ಲಾರಿಸನ್, ಪ್ರಸಾದ ಭಂಡೇಕರ್, ದರ್ಶನ್ ಜಿ.ಎಚ್, ರಾಷ್ಟ್ರಿತ್ ಜಿ.ಸಿ, ಅವಿನಾಶ್, ಅಂಕಿತಾ ಕಲ್ಲಪ್ಪ, ಸೂಕ್ಷ್ಮ ಎಸ್ ಆಚಾರ್ಯ, ವಿನಾಯಕ್, ಅಭಿಷೇಕ್ ಚೋಟಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಸಿ.ಎ. ಇಂಟರ್ ಮೀಡಿಯಟ್ ಪರೀಕ್ಷೆ 2023: 2023 ನವೆಂಬರ್‍ನಲ್ಲಿ ನಡೆದ ಸಿ.ಎ. ಇಂಟರ್ ಮೀಡಿಯಟ್ ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶೇಕಡಾ 9.73 ಶೇಕಡಾ ಫಲಿತಾಂಶ ಬಂದಿದ್ದರೆ, ಆಳ್ವಾಸ್ ಪದವಿ ಕಾಲೇಜು ವಿದ್ಯಾರ್ಥಿಗಳು ಗ್ರೂಪ್ -01 ಮತ್ತು ಗ್ರೂಪ್-02ನಲ್ಲಿ ಶೇಕಡಾ 21.43 ಫಲಿತಾಂಶ ದಾಖಲಿಸಿದ್ದಾರೆ. ಗ್ರೂಪ್ 01 ವಿಭಾಗದಲ್ಲಿ ರಾಷ್ಟ್ರೀಯ ಫಲಿತಾಂಶ ಶೇಕಡಾ 16.78 ದಾಖಲಾಗಿದ್ದರೆ, ಆಳ್ವಾಸ್…

Read More

ವಿದ್ಯಾಗಿರಿ: ನಿಟ್ಟೆ ಮಹಾಲಿಂಗ ತಾಂತ್ರಿಕ ಮಹಾವಿದ್ಯಾಲಯ (ಪರಿಗಣಿತ) ಆಶ್ರಯದಲ್ಲಿ ನಡೆದ ಆಹ್ವಾನಿತ ತಂಡಗಳ ಅಂತರ ಕಾಲೇಜು ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆ ‘ಯಕ್ಷಗವಿಷ್ಟ-23’ರಲ್ಲಿ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಭೀಷ್ಮ ಪ್ರತಿಜ್ಞೆ’ ಪ್ರಸಂಗವು ಸಮಗ್ರ ತಂಡ ಪ್ರಥಮ ಬಹುಮಾನ ಪಡೆಯಿತು. ವೈಯಕ್ತಿಕ ವಿಭಾಗದ ದೇವದ್ರತ ಪಾತ್ರಧಾರಿ ಆಳ್ವಾಸ್ ಕಾಲೇಜಿನ ಶಬರೀಷ ಆಚಾರ್ಯ ಮುನಿಯಾಲು, ಶಂತನು ಪಾತ್ರಧಾರಿ ಶ್ರೀವತ್ಸ ಗಂಗಾಧರ ಹೆಗ್ಡೆ, ದಾಶರಾಜ ಪಾತ್ರಧಾರಿ ಪ್ರಹ್ಲಾದ್ ಭಟ್ ಕಡಂದಲೆ ಪ್ರಥಮ ಸ್ಥಾನಗಳನ್ನು ಪಡೆದಿದ್ದಾರೆ. ಮಂತ್ರಿ ಸುನೀತ ಪಾತ್ರಧಾರಿ ಸಂಶ್ರಿತ್ ಜೈನ್, ರಕ್ಕಸ ಬಲ ಪಾತ್ರಧಾರಿ ಕೃತಿಕ್ ಶೆಟ್ಟಿ ದ್ವಿತೀಯ ಸ್ಥಾನಗಳನ್ನು ಪಡೆದಿರುತ್ತಾರೆ. ಪ್ರಥಮ ಸ್ಥಾನ ಪಡೆದತಂಡ ಹಾಗೂ ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅಭಿನಂದಿಸಿದ್ದಾರೆ.

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ನೇತೃತ್ವದಲ್ಲಿ ವಿಶ್ವ ಬಂಟರ ಸಮ್ಮೇಳನದ ಪ್ರಯುಕ್ತ ಅಕ್ಟೋಬರ್ 28ರಂದು ಉಡುಪಿ ಅಜ್ಜರಕಾಡು ಮೈದಾನದಲ್ಲಿ ಶ್ರೀಮತಿ ನಳಿನ ಭೋಜ ಶೆಟ್ಟಿ ವೇದಿಕೆಯಲ್ಲಿ ಜರಗಲಿರುವ “ವಿಶ್ವ ಬಂಟರ ಕ್ರೀಡಾಕೂಟ” ಹಾಗೂ ಅಕ್ಟೋಬರ್ 29 ರಂದು ಉಡುಪಿಯ ಶ್ರೀಮತಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದ ವಠಾರದಲ್ಲಿ ಶ್ರೀ ಕನ್ಯಾನ ಸದಾಶಿವ ಶೆಟ್ಟಿ ವೇದಿಕೆಯಲ್ಲಿ ನಡೆಯಲಿರುವ “ವಿಶ್ವ ಬಂಟರ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯು ಅಕ್ಟೋಬರ್ 11ರಂದು ಸಂಜೆ 4 ಗಂಟೆಗೆ “ಸಿಲ್ವರ್ ಬಿಲ್ಸ್ ಹಾಲ್ ಗೋಲ್ಡ್ ಪಿಂಚ್ ಹೋಟೆಲ್, ಬಂಟ್ಸ್ ಹಾಸ್ಟೆಲ್ ಇಲ್ಲಿ ಜರಗಲಿರುವುದು. ಸಮಾರಂಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಜಾಗತಿಕ ಬಂಟ ಪ್ರತಿಷ್ಠಾನದ ಅಧ್ಯಕ್ಷ ಡಾ. ಎ. ಜೆ. ಶೆಟ್ಟಿ, ಇಂಟರ್ ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ ಡಾ. ಎ. ಸದಾನಂದ ಶೆಟ್ಟಿ, ಸಂಸದ ನಳಿನ್ ಕುಮಾರ್…

Read More

ವಿದ್ಯಾಗಿರಿ: ‘ಪ್ರತಿ ವಿದ್ಯಾರ್ಥಿಯನ್ನೂ ಅವರ ಕಾಲ ಹಾಗೂ ತಲೆಮಾರಿಗೆ ಅನುಗುಣವಾಗಿ ಅರ್ಥೈಸಿಕೊಳ್ಳಬೇಕು’ ಎಂದು ಬೆಂಗಳೂರಿನ ಮನಃಶಾಸ್ತ್ರ ಸಮಾಲೋಚಕಿ ಡಾ ಶೈಲಜಾ ಶಾಸ್ತ್ರಿ ಹೇಳಿದರು. ಇಲ್ಲಿನ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಬುಧವಾರ ಆಳ್ವಾಸ್ ಪದವಿ ಪೂರ್ವ ಕಾಲೇಜು ಹಮ್ಮಿಕೊಂಡ ‘ವಿದ್ಯಾರ್ಥಿ ಮತ್ತು ಪೋಷಕಕರೊಂದಿಗೆ ಆರೋಗ್ಯಕರ ಸಂಬಂಧ ನಿರ್ಮಿಸುವ ಕಲೆ’ ಕುರಿತು ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗೆ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ‘ಆ ವಿದ್ಯಾರ್ಥಿ ಜೊತೆ ಸ್ಪಂದಿಸಲು ಶಿಕ್ಷಕರು ಹಾಗೂ ಪೋಷಕರು ತಮ್ಮೊಳಗೆ ಅಗತ್ಯ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯ ಹಾಗೂ ಅವಶ್ಯ’ ಎಂದರು. ‘ಮಕ್ಕಳಲ್ಲಿ ಮಕ್ಕಳಾಟ ಸಹಜ. ಅವುಗಳನ್ನು ನಿರ್ಲಕ್ಷಿಸಿ. ಮಕ್ಕಳಾಟವು ಅಪಾಯಕಾರಿಯಾಗಿದ್ದರೆ, ಅವರನ್ನು ತಿದ್ದಲು ಯತ್ನಿಸಿ’ ಎಂದರು. ವಿದ್ಯಾರ್ಥಿಗಳ ವರ್ತನೆಯ ಮಾದರಿಯನ್ನರಿತು ಶಿಕ್ಷಕರು ವ್ಯವಹರಿಸಿದರೆ, ಸಮಸ್ಯೆಗಳು ಕಡಿಮೆ. ಶಿಕ್ಷಕರಾದವರು ವಿದ್ಯಾರ್ಥಿಗಳ ಮಟ್ಟಕ್ಕಿಳಿದು ಸಮಸ್ಯೆಯನ್ನು ಗ್ರಹಿಸಿದರೆ, ತೊಂದರೆಗಳನ್ನು ಸುಲಭವಾಗಿ ನಿವಾರಿಸಬಹುದು. ಇಲ್ಲದೆ ಹೋದಲ್ಲಿ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತ ಸಾಗುತ್ತದೆ ಎಂದರು. ಇದಕ್ಕೂ ಮೊದಲು ಅವರು ವಿದ್ಯಾರ್ಥಿ ಮತ್ತು ಪೋಷಕರ ನಡುವೆ ಮುಜುಗರ…

Read More

ಶ್ರೀ ಕ್ಷೇತ್ರ ಮುದ್ದುಮನೆಯಲ್ಲಿ ಡಿಸೆಂಬರ್ 2 ರಂದು ಶನಿವಾರ ಬೈಲುಮನೆ ಕುಟುಂಬಿಕರು ಅನಾದಿ ಕಾಲದಿಂದಲೂ ಪ್ರತಿ ವರ್ಷ ನಡೆಸಿಕೊಂಡು ‌ಬರುವ ಸಾಂಪ್ರದಾಯಿಕ, ಧಾರ್ಮಿಕ ಕಂಬಳ ಮಹೋತ್ಸವ ನಡೆಯಲಿದೆ. ಕಂಬಳಕ್ಕೆ ಡಿಸೆಂಬರ್ 30 ರಂದು ಉಕ್ಕಿ ಹೂಡುವ ಕ್ರಮದೊಂದಿಗೆ ಗದ್ದೆಯನ್ನು ಹದಗೊಳಿಸಿ‌ ಕಂಬಳಕ್ಕೆ ನಾಂದಿ ಹಾಡಲಿದ್ದಾರೆ. ಭಕ್ತಿ ಹಾಗೂ ಸಮೃದ್ಧಿಯ ಪ್ರತೀಕವಾದ ಕಂಬಳಗದ್ದೆಯ ಅಂಚು ಸೇಡಿ, ಜಾಜಿ ಹಾಕಿ ಶೃಂಗರಿಸಿ ಕಂಬಳಕ್ಕೆ ಗದ್ದೆ ಅಣಿಗೊಳಿಸಲಾಗಿದೆ. ಮುದ್ದುಸ್ವಾಮಿ ಕಂಬಳ ‌ನಡೆಸುವ ಬೈಲುಮನೆಯವರು ಭಯ, ಭಕ್ತಿಯಿಂದ ಈ ಆಚರಣೆಯಲ್ಲಿ ತೊಡಗಿಕೊಂಡಿದ್ದು ಈ ವರ್ಷ ಡಿಸೆಂಬರ್ 2 ರಂದು ನಡೆಯುವ ‌ಕಂಬಳ ಅಕ್ಕಯ್ಯ‌‌ ಆನಂದ ಶೆಟ್ಟಿಯವರ ಪಾಲಿನ ಸೇವೆಯಾಗಿದ್ದು ಆನಂದ ಶೆಟ್ಟಿ, ಭಾಗ್ಯಪ್ರಸಾದ್ ಶೆಟ್ಟಿ, ಲತಾ ಸಂತೋಷ್ ಶೆಟ್ಟಿ, ಮಂಜುಳ ರೈ ಅವರು ವ್ಯವಸ್ಥಾಪಕರಾಗಿ ಕುಟುಂಬಿಕರ ‌ಮಾರ್ಗದರ್ಶನದಲ್ಲಿ ‌ಗ್ರಾಮಸ್ಥರ ಸಹಕಾರದಿಂದ ಕಂಬಳ ನೆರವೇರಿಸಲಿದ್ದಾರೆ. ಡಿಸೆಂಬರ್ 2 ರಂದು ಕಂಬಳದ ದಿನ ಮುರ್ಹೂತದ ಕೋಣಗಳನ್ನು ಬೆಳಿಗ್ಗೆ 10.30 ರಿಂದ 12 ಗಂಟೆಯ ಒಳಗೆ ಕಂಬಳ ಗದ್ದೆಗೆ ಕೊಂಡೊಯ್ಯುವ ಕ್ರಮ…

Read More

ಬಂಟೆರೆಂಕುಲು…ಬಂಟೆರ್.. ಉಡಲ್ ಡ್ ಪರಪುಂಡ್ ಕ್ಷತ್ರಿಯ ನೆತ್ತೆರ್… ಗುತ್ತು, ಗರಡಿ, ಬಾವ, ಬೂಡ್, ಬರ್ಕೆದ ಗುರ್ಕ್ರಾರ್ಲೆಂಕುಲ್.. ಬಗ್ಗ್ ದ್ ಜ ಏರೆಗ್ಲಾ.. ಬಗ್ಗಯ ದುಂಬಗೊಲಾ ತಂಕೊಗ್ ನನೊಂಜಿ ಪುದರ್ಬಂಟೆರೆಂಕುಲು… ಬಂಟೆರ್.. ಪಿರಾಕ್ ದ ಕಾಲೋಡಿಂಚಿ ಗತ್ತ್ ಡ್ ಮೆರೆಯಿನವು ನಮ್ಮ ಬಂಟ ಸಮುದಾಯ. ಸಾಮಾಜೊಡ್ ನಾಲ್ ಜನತ್ತ ಎದುರ್ ದೆರ್ತ್ ತೋಜುನಾಯೆ ಬಂಟೆ. ಪೊಕ್ಕಡೆಗ್ ನಮನ್ ಬಂಟೆರ್ ಪಂದ್ ಪನ್ಪುಜೆರ್. ನಮನ ಆಚಾರ ವಿಚಾರೊಲೆನ್ ತೂನಗನೇ ಗೊತ್ತಾವು ನಮ್ಮ ಛಾತಿ ದಾದ ಪಂಡ್ದ್. ಬಂಟೆರೆನ್ ಕ್ಷತ್ರಿಯೆ ಪಂದ್ ಪನ್ಪೆರ್. ಬಂಟಡ ಕ್ಷಾತ್ರ ತೇಜ ಮಾತ್ರ ಅತ್ತ್ ಗುಣಲಾ ಉಂಡು. ಒರಿ ಕ್ಷತ್ರಿಯೆ ಏಪೊಗುಲಾ ಏರೆಗ್ಲಾ ಪೋಡ್ಯುಜೆ ಅಂಚನೆ ತನ್ನ ಕೈತಲ್ ಸಹಾಯ ನಟ್ಟೊಂದು ಬತ್ತಿನಕ್ಲೆನ್ ಬರಿಕೈಟ್ ಕಡಪುಡುಜೆ. ಗುರು ಹಿರಿಯೆರೆಗ್, ದೈವ ದೇವೆರೆಗ್ ತರೆ ತಗ್ಗಾದ್ ನಡಪುನಾಯೆನೆ ಕ್ಷತ್ರಿಯೆ. ಈ ಗುಣಕುಲ್ ಬಂಟಡ ಇತ್ತಿನವೆಡಾತ್ರನೆ ಆಯನ್ ಕ್ಷತ್ರಿಯೆ ಪನ್ಪಿನಿ. ಗುತ್ತು-ಬರಿಕೆ, ಬಾವ-ಬೂಡುಲೆಡ್ ಗುರ್ಕಾರ್ಮೆ ಮಲ್ತೋಂದು ಸಮಾಜೋದ ಮಾತ ಸಮುದಾಯೊಲೆನ್ ಸಮಾನವಾದ್ ತೂದ್…

Read More