Author: admin
“ಸೋಲೆಂಬ ರೋಗವನ್ನು ಕೊಲ್ಲಲು ಆತ್ಮವಿಶ್ವಾಸ ಮತ್ತು ಶ್ರಮವೇ ಮದ್ದು” ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ರವರ ಮಾತಿದು. ತೀರ ಕಿರಿಯ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿರುವ ಶ್ರೀಯುತ ಹಾಲಾಡಿ ಆದರ್ಶ್ ಶೆಟ್ಟಿಯವರ ಬದುಕಿನಲ್ಲಿ ಈ ಮಾತು ನೂರಕ್ಕೆ ನೂರು ಸತ್ಯ. “ತಾಳ್ಮೆ ಕಹಿ ಎನ್ನುವುದು ನಿಜ ಆದರೆ ಅದರ ಫಲ ಸಿಹಿಯಾಗುತ್ತದೆ” ಶ್ರೀಯುತ ಹಾಲಾಡಿ ಆದರ್ಶ್ ಶೆಟ್ಟಿ ನಂಬಿದ ಜೀವನ ಮೌಲ್ಯವಿದು. ಹೋಟೆಲು ಉದ್ಯಮದಲ್ಲಿ 18 ವರ್ಷದ ಸುದೀರ್ಘ ಅನುಭವವಿರುವ ಶ್ರೀಯುತ ಹಾಲಾಡಿ ಆದರ್ಶ್ ಶೆಟ್ಟಿಯವರು ಈ ಎತ್ತರಕ್ಕೆ ಬೆಳೆದು ನಿಲ್ಲಲು ಕಾರಣವಾದದ್ದು ವೃತ್ತಿಯುದ್ಧ ಅವರು ನಡೆಸಿಕೊಂಡು ಬಂದ ಆತ್ಮಾವಲೋಕನ ಮತ್ತು ತಾಳ್ಮೆ. ಸ್ನೇಹ ಜೀವಿಯಾಗಿ, ಸಂಘಟನಾ ಶಕ್ತಿಯಾಗಿ ಈ ಉದ್ಯಮದಲ್ಲಿ ಅವರು ಬೆಳೆದು ನಿಂತ ಕಥೆ ಇತರರಿಗೆ ಮಾದರಿಯಾಗುವಂತಹದ್ದು. ಸ್ವಭಾವತಃ ಆದರ್ಶ್ ಶೆಟ್ಟಿ ಆಹಾರ ಪ್ರಿಯ, ಭೋಜನ ಪ್ರಿಯರು. ಯಾವುದೇ ಆಹಾರವಿರಲಿ ಅದರ ಸ್ವಾದದಲ್ಲಿರುವ ವಿಶೇಷತೆಯನ್ನು ಗುರುತಿಸಿ ಅದು ಬಹುಜನಪ್ರಿಯವಾಗುವಂತೆ ರೂಪಿಸುವಲ್ಲಿ ಇವರು ನಿಸ್ಸೀಮರು. ತನ್ನಲ್ಲಿರುವ ಈ ವಿಶೇಷತೆಯನ್ನು ವೃತ್ತಿಯಾಗಿಸಿಕೊಂಡು…
69ನೇ ಹಿರಿಯ ಮಹಿಳೆಯರ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಕರ್ನಾಟಕ ಚಾಂಪಿಯನ್, ಆಳ್ವಾಸ್ 8 ಆಟಗಾರ್ತಿಯರು
ವಿದ್ಯಾಗಿರಿ: ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಡೆದ 69ನೇ ಮಹಿಳೆಯರ ಹಿರಿಯ ರಾಷ್ಟ್ರೀಯ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕ ತಂಡವು ಜಯಭೇರಿಯಾಗಿದ್ದು, ರಾಜ್ಯ ತಂಡವನ್ನು ಪ್ರತಿನಿಧಿಸಿದ 10 ಆಟಗಾರರ ಪೈಕಿ 8 ಮಂದಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳು. ರಾಜ್ಯ ತಂಡವನ್ನು ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿವ್ಯಾ ಎಂ. ಮುನ್ನಡೆಸಿದ್ದು, ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರ್ತಿಯರಿಗೆ ನೀಡುವ ‘ಸ್ಟಾರ್ ಆಫ್ ಇಂಡಿಯಾ’ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜಿನ ಪಲ್ಲವಿ ಬಿ.ಎಸ್. ಹಾಗೂ ಸಹನಾ ಎಚ್.ವೈ. ಮುಡಿಗೇರಿಸಿಕೊಂಡಿದ್ದಾರೆ. ಕರ್ನಾಟಕ ತಂಡವು ಫೈನಲ್ನಲ್ಲಿ ತಮಿಳುನಾಡು ತಂಡವನ್ನು 35-29, 35-26 ಅಂಕಗಳ ನೇರ ಸೆಟ್ಗಳಿಂದ ಮಣಿಸಿ, ಪ್ರಶಸ್ತಿಗೆ ಮುತ್ತಿಕ್ಕಿತ್ತು. ಇದಕ್ಕೂ ಮೊದಲು ನಡೆದ ಸೆಮಿಫೈನಲ್ನಲ್ಲಿ 35-11, 35-16 ಅಂಕಗಳಿಂದ ಕೇರಳ ತಂಡಕ್ಕೆ ಸೋಲುಣಿಸಿತು. ವಿಜೇತ ಕರ್ನಾಟಕ ತಂಡ ಹಾಗೂ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದ ಆಳ್ವಾಸ್ ಕಾಲೇಜಿನ ಆಟಗಾರ್ತಿಯರನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.
ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯಿಂದ ಮುಂಬಯಿ ಬಂಟರ ಸಂಘದ ನೂತನ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅವರಿಗೆ ಅಭಿನಂದನೆ
ಬಂಟರ ಸಂಘ ಮುಂಬಯಿ ಸಂಚಾಲಿತ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ನ ಗೌರವ ಕಾರ್ಯದರ್ಶಿಯಗಿ ಕಾರ್ಯನಿರ್ವಹಿಸಿಕೊಂಡಿರುವ ಪ್ರವೀಣ್ ಭೋಜ ಶೆಟ್ಟಿ ಅವರು ಮುಂಬಯಿ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು ಅವರನ್ನು ನವಂಬರ್ 27ರಂದು ಕುರ್ಲಾ ಪೂರ್ವದ ಬಂಟರ ಭವನದ ಅನೆಕ್ಸ್ ಸಂಕೀರ್ಣದಲ್ಲಿರುವ ಮಾತೃಭೂಮಿಯ ಕಚೇರಿಯಲ್ಲಿ ನಡೆದ ಆಡಳಿತ ಸಭೆಯಲ್ಲಿ ಸೊಸೈಟಿಯ ಕಾರ್ಯಾಧ್ಯಕ್ಷರಾದ ಉಳ್ತೂರು ಮೋಹನದಾಸ್ ಶೆಟ್ಟಿಯವರು ಮತ್ತು ಆಡಳಿತ ಪದಾಧಿಕಾರಿಗಳು ಗೌರವಿಸಿದರು. ಗೌರವವನ್ನು ಸ್ವೀಕರಿಸಿದ ಪ್ರವೀಣ್ ಭೋಜ ಶೆಟ್ಟಿ ಕೃತಜ್ಞತೆ ಸಲ್ಲಿಸುತ್ತಾ ಅಧ್ಯಕ್ಷನಾಗಿ ಪ್ರಥಮ ಗೌರವ ಇದಾಗಿದೆ. ಈ ಗೌರವ ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಗೆ ಸಲ್ಲುತ್ತದೆ. ನನ್ನ ಮುಂದಿನ ಸೇವಾ ಕಾರ್ಯಗಳಿಗೆ ತಾವೆಲ್ಲರೂ ಸಹಕರಿಸಬೇಕು ಎಂದು ನುಡಿದರು. ಸೊಸೈಟಿಯ ಕಾರ್ಯಾಧ್ಯಕ್ಷರಾದ ಉಳ್ತೂರು ಮೋಹನದಾಸ್ ಶೆಟ್ಟಿಯವರು ಪ್ರವೀಣ್ ಭೋಜ ಶೆಟ್ಟಿ ಅವರು ಮಾತೃಭೂಮಿಗೆ ನೀಡಿದ ಸೇವಾ ಕಾರ್ಯಗಳನ್ನು ನೆನಪಿಸಿಕೊಂಡು ಬಂಟರ ಸಂಘದ ಮೂಲಕ ಸಮಾಜದ ಉತ್ತಮ ಸೇವಾ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು. ಈ…
ಈ ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಸ್ಟಾರ್ ಹೀರೋ ಹಾಗೂ ಹೀರೋಯಿನ್ ಆಗಬೇಕು ಅನ್ನೋ ಕನಸಿಟ್ಟುಕೊಂಡು ನೂರಾರು ಜನರು ಚಿತ್ರರಂಗಕ್ಕೆ ಬರುತ್ತಾರೆ. ಇದರಲ್ಲಿ ಕೆಲವರು ಯಶಸ್ಸು ಕಂಡು ಸಿನಿ ಕ್ಷೇತ್ರದಲ್ಲೇ ತಮ್ಮ ಭವಿಷ್ಯ ರೂಪಿಸಿಕೊಳ್ಳುತ್ತಾರೆ. ಕೆಲವರು ನಟನೆ ಕಲಿತುಕೊಂಡು ಸಿನಿಮಾಗೆ ಎಂಟ್ರಿ ಕೊಟ್ಟರೆ, ಮತ್ತೆ ಕೆಲವರು ಮಾಡಲಿಂಗ್ ಕ್ಷೇತ್ರದಿಂದ ಬಂದು ಸಿನಿಮಾ ಜಗತ್ತಿನಲ್ಲಿ ಯಶಸ್ಸು ಕಾಣ್ತಾರೆ. ಇದೀಗ ಬಂಟ ಸಮಾಜದ ಪ್ರತಿಭೆ ಸಮೃದ್ದಿ ವಿ ಶೆಟ್ಟಿ ಅವರು ‘ಮಿಸ್ ಕ್ವೀನ್ ಆಫ್ ಇಂಡಿಯಾ 2023’ ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಆಗೋದಕ್ಕೆ ಸಜ್ಜಾಗಿದ್ದಾರೆ. ಮಿಸ್ ಕ್ವೀನ್ ಆಫ್ ಇಂಡಿಯಾ 2023 : ಕೇರಳದ ಕೊಚ್ಚಿಯಲ್ಲಿ ನಡೆದ ಸ್ಪರ್ಧೆಯಲ್ಲಿ ದೇಶದ 30 ರಾಜ್ಯಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಮಣಪ್ಪುರಂ ಫೈನಾನ್ಸ್ ಆಯೋಜಿಸಿದ್ದ ಮಿಸ್ ಕ್ವೀನ್ ಆಫ್ ಇಂಡಿಯಾ ಸ್ಪರ್ಧೆಯಲ್ಲಿ ಅಂತಿಮವಾಗಿ ಉಡುಪಿ ಮೂಲದ ಸಮೃದ್ದಿ ವಿ ಶೆಟ್ಟಿ ‘ಮಿಸ್ ಕ್ವೀನ್ ಆಫ್ ಇಂಡಿಯಾ 2023’ ಕಿರೀಟ ಮುಡಿಗೇರಿಸಿಕೊಂಡಿದ್ದು, ಕರ್ನಾಟಕದ ಹಾಗೂ ಬಂಟ…
ಅರ್ಥಪೂರ್ಣ ಹದಿನಾಲ್ಕು ವರ್ಷಗಳನ್ನು ಪೂರೈಸಿದ ನವಚೇತನ ಹಣಕಾಸು ಸಂಸ್ಥೆಯ ಯಶಸ್ಸಿನ ಗಾಥೆ ಮತ್ತದರ ಪ್ರಗತಿ ಶಿಲ್ಪಿ ಲೋಕೇಶ್ ಶೆಟ್ಟರ ಕಿರು ಪರಿಚಯ ಕುರಿತಂತೆ ಪ್ರಸ್ತುತ ಲೇಖನವನ್ನು ಸಮಸ್ತ ಬಂಟ ಸಮಾಜದ ಮುಂದೆ ಇಡಲು ಇಷ್ಟಪಡುತ್ತಿದ್ದೇವೆ. ನವಚೇತನ ಚಿಟ್ಸ್ ಕಂ ಫ್ರೈ.ಲಿ. ಸಂಸ್ಥೆಯು ಜೂನ್ 17, 2009 ರಲ್ಲಿ ತನ್ನ ವ್ಯವಹಾರವನ್ನು ಪ್ರಾರಂಭಿಸಿದ್ದು, ಮಂಗಳೂರಿನಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿರುತ್ತದೆಯಲ್ಲದೆ ಕ್ರಮೇಣ ವರ್ಷಾಂತರಗಳಲ್ಲಿ ಮಂಗಳೂರು, ಉಡುಪಿ, ಪುತ್ತೂರು, ಹುಬ್ಬಳ್ಳಿ, ಬೆಳಗಾಂ, ಬಳ್ಳಾರಿ ಮೊದಲಾದ ಕಡೆಗೆ ತನ್ನ ಶಾಖೆಗಳನ್ನು ವಿಸ್ತರಿಸಿಕೊಂಡು ಯಶಸ್ಸಿನ ಪಥದಲ್ಲಿ ಮುನ್ನಡೆಯುತ್ತಿದೆ. ತನ್ನ ನೋಂದಣಿತ ಕಛೇರಿಯು ಮಂಗಳೂರಿನ ಬಲ್ಮಠ ರಸ್ತೆಯಲ್ಲಿರುವ ಬ್ಯೂಟಿ ಪ್ಲಾಜಾ ಕಟ್ಟಡದ ತಳಮಹಡಿಯಲ್ಲಿ ಗುರುತಿಸಲ್ಪಟ್ಟು ಆಡಳಿತ ಕಛೇರಿಯಾಗಿಯೂ ಕಾರ್ಯ ನಿರ್ವಹಿಸಿಕೊಂಡು ತನ್ನ ವ್ಯವಹಾರಗಳನ್ನು ನಿಯಂತ್ರಿಸುತ್ತಿದೆ. ಲೋಕೇಶ್ ಶೆಟ್ಟಿ ಅವರು ಬಂಟ್ವಾಳ ವಲಯದ ಬಂಟರ ಸಂಘದ ಕೋಶಾಧಿಕಾರಿ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕರಾಗಿದ್ದುಕೊಂಡು ಬಿಡುವಿಲ್ಲದ ದುಡಿಮೆಯ ನಡುವೆಯೂ ಸಮಯ ಹೊಂದಿಸಿಕೊಂಡು ಸ್ವಜಾತಿ ಬಾಂಧವರ ಅಭ್ಯುದಯಕ್ಕಾಗಿ ಕಾರ್ಯಪ್ರವೃತ್ತರಾಗಿ ಸಮುದಾಯ…
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ 40 ನೇ ನೂತನ ಉಡುಪಿ ಘಟಕದ ಅಧ್ಯಕ್ಷರಾಗಿ ಜಯಕರ ಶೆಟ್ಟಿ ಇಂದ್ರಾಳಿ ಆಯ್ಕೆಯಾಗಿದ್ದಾರೆ. ಉಡುಪಿಯ ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಉಡುಪಿಯ ಪುರುಷೋತ್ತಮ ಶೆಟ್ಟಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಪ್ರೊ. ಎಂ.ಎಲ್. ಸಾಮಗ, ಟಿ.ಶಂಭು ಶೆಟ್ಟಿ, ಸುಧಾಕರ ಆಚಾರ್ಯರ ನೇತೃತ್ವದಲ್ಲಿ ನಡೆದ ಸಮಾಲೋಚನ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಉಜ್ವಲ್ ಡೆವಲಪರ್ಸ್ ನ ಪುರುಷೋತ್ತಮ ಶೆಟ್ಟಿ, ಶ್ರೀ ಶಿರ್ಡಿ ಸಾಯಿಬಾಬಾ ಮಂದಿರದ ಧರ್ಮದರ್ಶಿ ಕೆ.ದಿವಾಕರ್ ಶೆಟ್ಟಿ ತೋಟದ ಮನೆ ಅವರನ್ನು ಆರಿಸಲಾಯಿತು.
ಜಾಗತಿಕ ಬಂಟರ ಸಂಘಗಳ ಒಕ್ಕೂಟ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರಿಂದ ಮಹೋನ್ನತ ಸಮಾಜ ಕಲ್ಯಾಣ ಕಾರ್ಯಕ್ರಮ : ಎಂ ಅರ್ ಜಿ ಗ್ರೂಪ್ ಅಧ್ಯಕ್ಷ ಕೆ. ಪ್ರಕಾಶ್ ಶೆಟ್ಟಿ
ಜಾಗತಿಕ ಬಂಟರ ಸಂಘಗಳ ಒಕ್ಕೂಟವು ಶ್ರೀ ಐಕಳ ಹರಿಶ್ ಶೆಟ್ಟಿಯವರ ಸಮರ್ಥ ಅಧ್ಯಕ್ಷತೆಯಲ್ಲಿ ಸಮಾಜಮುಖಿ ಕೆಲಸಗಳನ್ನು ಶ್ರದ್ಧಾ ಭಕ್ತಿಯಿಂದ ಇದ್ದವರಿಂದ ಪಡೆದು ಇಲ್ಲದವರಿಗೆ ಹಂಚಿ ಬಡವರ ಕಣ್ಣೊರೆಸುವ ಶ್ಲಾಘನೀಯ ಕೆಲಸ ಮಾಡುತ್ತಿದೆ ಸಮಾಜದ ಅರ್ಥರ ಧ್ವನಿಯಾಗಿ ನೋಂದವರ ಪಾಲಿಗೆ ಸದಾ ಸೃಜನ ಶೀಲ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಸಮಾಜದ ಪ್ರತಿಯೊಬ್ಬರಿಗೂ ಕೂಡ ಭರವಸೆಯ ಬೆಳಕನ್ನು ಮೂಡಿಸಿದೆ ಒಕ್ಕೂಟದ ಕೆಲಸ ಶ್ಲಾಘನೀಯ ನಾನು ನಿಮ್ಮ ಎಲ್ಲಾ ಕೆಲಸಗಳಿಗೆ ಬೆನ್ನೆಲುಬಾಗಿ ನಿಂತು ಸಂಪೂರ್ಣ ಸಹಕಾರ ನೀಡುತ್ತೇನೆ. ನೀವು ಇತಿಹಾಸ ನಿರ್ಮಾಣ ಮಾಡಿದ್ದೀರಿ ನಿಮ್ಮ ಕೆಲಸವು ಇನ್ನು ಮುಂದುವರಿಯಬೇಕಾದರೆ ನಾವೆಲ್ಲ ನಿಮ್ಮ ಜೊತೆ ಇರಬೇಕು, ಖಂಡಿತವಾಗಿಯೂ ನಿಮ್ಮ ಅಮೂಲ್ಯ ಚಟುವಟಿಕೆಗಳಿಗೆ ನಾವೆಲ್ಲರೂ ಜೊತೆಯಾಗಿದ್ದು ನಾನು ಸಂಪೂರ್ಣ ಹೃದಯಪೂರ್ವಕ ಬೆಂಬಲವನ್ನು ನೀಡುತ್ತೇನೆ ಎಂಬ ಭರವಸೆಯನ್ನು ಎಂ ಆರ್ ಜಿ ಗ್ರೂಪ್ ಆಫ್ ಕಂಪನೀಸ್ ಅಧ್ಯಕ್ಷ ಶ್ರೀ ಪ್ರಕಾಶ್ ಶೆಟ್ಟಿ ಕೆ ನುಡಿದರು. ಮುಂಬೈಯಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶ್ವ ಬಂಟರ ಸಮ್ಮೇಳನ ಹಾಗೂ ಮಹಾಧಿವೇಶನದ ಆಮಂತ್ರಣ ಪತ್ರಿಕೆಯನ್ನು…
ಸುಮಾರು ಎರಡು ತಾಸಿಗೂ ಮಿಕ್ಕಿ ಮುಂಬಯಿ ಮಹಾನಗರದ ಕಲಾವಿದರ ಅದ್ಭುತ ನಟನೆಯನ್ನು ಈ ವೇದಿಕೆಯಲ್ಲಿ ನೋಡಿದ್ದೇನೆ. ಸ್ಥಾನೀಯ ಕಲಾವಿದರಿಗೆ, ನಾಟಕ ತಂಡಗಳಿಗೆ ಅವಕಾಶಗಳನ್ನು ನೀಡಿದಾಗ ಉತ್ತಮ ನಾಟಕಗಳು ಪ್ರದರ್ಶನಗೊಳ್ಳಬಹುದು. ಮಹಾನಗರದ ಕಲಾ ಪ್ರೇಮಿಗಳು ಇಂದು ಉತ್ತಮ ಸಂದೇಶ ಭರಿತ ನಾಟಕವನ್ನು ನೋಡಿ ಆನಂದಿಸಿದ್ದಾರೆ. ಸದಾ ಗಂಭೀರ ಪಾತ್ರಗಳನ್ನು ಮಾಡುವ ಸುರೇಂದ್ರ ಕುಮಾರ್ ಹೆಗ್ಡೆಯರಂತಹ ಶ್ರೇಷ್ಠ ಕಲಾವಿದ ಇಂದು ಹಾಸ್ಯ ಪಾತ್ರವನ್ನು ಬಹು ಅಚ್ಚುಕಟ್ಟಾಗಿ ನಿಭಾಯಿಸಿ ಕಲಾ ರಸಿಕರನ್ನು ರಂಜಿಸಿದ್ದಾರೆ. ಪನ್ವಿ ಕ್ರಿಯೇಶನ್ಸ್ ನ ಸ್ಥಾಪಕ ಹರೀಶ್ ಶೆಟ್ಟಿ ಓರ್ವ ಉತ್ತಮ ಗಾಯಕ ಹಾಗೂ ರಂಗನಟ. ಈ ತಂಡಕ್ಕೆ ಕಲಾ ಮಾತೆಯ ಅನುಗ್ರಹ ಸದಾ ಲಭಿಸಲಿ. ಇದೇ ರಿತೀಯ ಉತ್ತಮ ಹಾಸ್ಯಮಯ ನಾಟಕ ಮತ್ತಷ್ಟು ಮೂಡಿ ಬರಲಿ ಎಂದು ಖ್ಯಾತ ಜೋತಿಷಿ ಅಶೋಕ್ ಪುರೋಹಿತ್ ನುಡಿದರು. ಅವರು ಜ.8ರ ಸೋಮವಾರದಂದು ಸಂಜೆ ಮಾಟುಂಗಾದ ಮೈಸೂರ್ ಅಸೋಸಿಯೇಷನ್ ನ ಸಭಾಗೃಹದಲ್ಲಿ ಪನ್ವಿ ಕ್ರಿಯೇಶನ್ಸ್ ಮುಂಬಯಿ ಇದರ ಯೋಜನೆಯಲ್ಲಿ ಕೆ. ವಿ. ಎಸ್ ಎಂಟರ್ಟೈನ್ಮೆಂಟ್ ನ…
ಬ್ರಹ್ಮಾವರ: ನ, 26:- ಭಾರತ ದೇಶ ಕಂಡ ಅತ್ಯಂತ ಉತ್ಕೃಷ್ಟವಾದ ದಿನ. ಯಾಕೆಂದರೆ ಅಂದು ದೇಶದ ಸಂವಿಧಾನ ರಚನಾ ಸಮಿತಿಯು ದೇಶಕ್ಕೆ ಅತಿದೊಡ್ಡ ಸಂವಿಧಾನವನ್ನು ನೀಡಲ್ಪಟ್ಟ ದಿನ. ಆದರೆ ದೇಶಕ್ಕೆ ಅರ್ಪಣೆಯಾದದ್ದು ಜನವರಿ 26, 1950 ರಂದು ರಚನಾ ದಿನವನ್ನು ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಸಾಂಪ್ರದಾಯಿಕವಾಗಿ ಆಚರಿಸಲಾಯಿತು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಪ್ರಾಸ್ತಾವಿಕ ಮಾತುಗಳೊಂದಿಗೆ, ಸಂವಿಧಾನದ ಪೀಠಿಕೆಯನ್ನು ವಾಚಿಸಿದರು. ಸಮಾಜ ವಿಜ್ಞಾನ ಶಿಕ್ಷಕರಾದ ಶ್ರೀ ಪ್ರಸನ್ನ ಶೆಟ್ಟಿಯವರು ಸಂವಿಧಾನದ ಪ್ರಾಮುಖ್ಯತೆಯನ್ನು ಅತ್ಯಂತ ಗೌರವದಿಂದ ವಿದ್ಯಾರ್ಥಿಗಳಿಗೆ ತಿಳಿಸಿದರು. ವಿಭಾಗೀಯ ಮುಖ್ಯಸ್ಥರಾದ ಸೆಬಾಸ್ಟಿಯನ್ ಪಿ ಎಮ್ರವರು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಪುಣೆ ಇದರ ವತಿಯಿಂದ ಗುರು ಪೂರ್ಣಿಮೆಯ ಆಚರಣೆಯು, ಒಡಿಯೂರು ಸಂಸ್ಥಾನದ ಪರಮ ಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮಿಜಿಯವರ ಶುಭಾಶಿರ್ವಾದದೊಂದಿಗೆ ಜುಲೈ 3 ರಂದು ಪುಣೆ ಶ್ರೀ ಗುರುದೇವ ಸೇವಾ ಬಳಗದ ಗೌರವ ಕಾರ್ಯದರ್ಶಿ ನಗ್ರಿಗುತ್ತು ರೋಹಿತ್ ಶೆಟ್ಟಿ ದಂಪತಿಗಳ ಅಯೋಜಕತ್ವದಲ್ಲಿ ಪುಣೆಯ ಬಾಣೇರ್ ನಲ್ಲಿಯ ಫಿಲಿವಿಲದಲ್ಲಿ ವಿವಿದ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ. ಜರಗಿತು. ಗುರು ಪೂರ್ಣಿಮೆಯ ಅಂಗವಾಗಿ ಪುಣೆಯ ಖ್ಯಾತ ಪುರೋಹಿತರಾದ ಕಾತ್ರಜ್ ಹರೀಶ್ ಭಟ್ ಮತ್ತು ತಂಡದವರ ನೇತೃತ್ವದಲ್ಲಿ ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಹಾಗೂ ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರದ ಸದಸ್ಯೆಯರು ಹಾಗೂ ಬಳಗದ ಸದಸ್ಯರಿಂದ ಭಜನಾ ಮಂಡಳಿಯ ಗುರುಗಳಾದ ಶ್ರೀ ದಾಮೋದರ ಬಂಗೇರರವರ ಮುಂದಾಳತ್ವದಲ್ಲಿ ಭಜನೆ ನಡೆಯಿತು. ಶ್ರೀ ರೋಹಿತ್ ಶೆಟ್ಟಿ ಶ್ರೀಮತಿ ಸ್ನೇಹಲತಾ ಅರ್.ಶೆಟ್ಟಿ ದಂಪತಿಗಳು ಗಣಹೋಮ, ಸತ್ಯನಾರಾಯಣ ಪೂಜೆಗೆ ಕುಳಿತು ಪೂಜಾ ವಿಧಿ ವಿಧಾನ ನೆರವೆರಿಸಿದರು. ನಂತರ…















