Author: admin

ಪುಣೆ; ಪುಣೆಯಲ್ಲಿ ತುಳುವರಿಗಾಗಿ ಸ್ಥಾಪನೆಯಾದ ಸಂಸ್ಥೆ ತುಳುಕೂಟ ಪುಣೆ ,ನಮ್ಮ ತುಳು ಬಾಷೆ ,ಕಲೆ ,ಸಂಸ್ಕ್ರತಿ , ಅಚಾರ . ವಿಚಾರಗಳಿಗೆ ಒತ್ತು ನೀಡುತ್ತಾ ಅದರ ಬೆಳವಣಿಗೆ ಮತ್ತು ನಮ್ಮ ತುಳುವರ ಕಷ್ಟ ಸುಖಗಳಲಿ ಬಾಗಿಯಾಗುತ್ತಾ ತುಳುವರ ಮತ್ತು ತುಳು ಬಾಷೆಯ ಅಭಿವೃದ್ದಿಗೆ ಶ್ರಮಿಸುವ ಮೂಲಕ ಸೇವಾ ಕಾರ್ಯ ಮಾಡುತಿದೆ . ಈ ಹಿಂದೆ ಹಲವಾರು ಕಾರ್ಯ ಯೋಜನೆಗಳ ಮೂಲಕ ಪುಣೆಯಲ್ಲಿ ತುಳುವರ ಸಂಘಟನೆಗೆ ಉತ್ತಮ ಜನ ಸ್ಪಂದನೆ ಸಿಕ್ಕಿದೆ , .ಈ ವರ್ಷ ರಜತ ಮಹೋತ್ಸವ ವರ್ಷವನ್ನಾಗಿ ನಾವು ಆಚರಿಸುತಿದ್ದು ಈ ಸಂದರ್ಭದಲ್ಲಿ ಪುಣೆ ತುಳುವರಿಗೆ ಪ್ರಯೋಜನವಾಗುವಂತಹ ಯೋಜನೆ ಆಗಬೇಕು ಎಂಬುದೇ ನಮ್ಮ ಉದ್ದೇಶ .ಈ ದೃಷ್ಟಿ ಕೋನ ಇಟ್ಟುಕೊಂಡು ನೂತನ ಸಮಿತಿ ರಚನೆ ಮಾಡಿ ಕಾರ್ಯೋನ್ಮುಖರಾಗಿ ತುಳುವರ ಅಭಿವ್ರದ್ದಿಗೆ ಕೆಲಸ ಮಾಡುವುದೇ ನಮ್ಮ ದ್ಯೆಯವಾಗಿದೆ ಎಂದು ತುಳುಕೂಟದ ನೂತನ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು ನುಡಿದರು . ನ 5ರಂದು ಪುಣೆಯ ಕರ್ವೆ ರೋಡ್ ನಲ್ಲಿಯ ರತ್ನ ಹೋಟೆಲ್…

Read More

ನಮ್ಮ ಸುತ್ತಮುತ್ತ ಸಂಭವಿಸುವ ವಿದ್ಯಮಾನಗಳೇ ಹಾಗೆ. ಕೆಲವೊಂದು ವಿದ್ಯಮಾನಗಳ ಪರಿಣಾಮಗಳು ನಮ್ಮನ್ನು “ಚಿಂತಿ’ಸುವಂತೆ ಮಾಡುತ್ತವೆ. ಹಾಗೆಯೇ, ಏಕಕಾಲಕ್ಕೆ ನಮ್ಮನ್ನು “ಚಿಂತೆ’ ಮತ್ತು “ಚಿಂತನೆ’ಗೀಡು ಮಾಡುವ ವಿದ್ಯಮಾನಗಳೂ ಸಾಕಷ್ಟಿವೆ. ನಾವು ಚಿಂತನೆಗೊಳಪಟ್ಟರೆ ಜಿಜ್ಞಾಸುಗಳಾಗುತ್ತೇವೆ. ಚಿಂತೆ ನಮ್ಮನ್ನು ಮುಪ್ಪಿನತ್ತ ತಳ್ಳುತ್ತದೆ. ಇವೆರಡರಲ್ಲಿ ಆಯ್ಕೆ ನಮಗೆ ಸೇರಿದ್ದು. ಜಿಜ್ಞಾಸುಗಳಾದರೆ ನಮ್ಮ ಜ್ಞಾನ, ವಿವೇಕ ಜಾಗೃತಗೊಳ್ಳುತ್ತದೆ. ಇನ್ನು ಶಿಕ್ಷಕರಂತೂ ಮೂಲತಃ ‘ಜಿಜ್ಞಾಸು’ಗಳು. ಜ್ಞಾನದ ತೃಷೆ ಅವರನ್ನು ಸದಾಕಾಲ ಬಾಧಿಸುತ್ತಿರಬೇಕು. ಇತ್ತೀಚೆಗೆ ಆಕ್ಸ್‌ಫ‌ರ್ಡ್‌ನ ಮಾರ್ಟಿನ್‌ ಸ್ಕೂಲ್‌ ಕೈಗೊಂಡ ಸಂಶೋಧನೆ ಮತ್ತು ಅದು ಪ್ರಕಟಿಸಿದ ವರದಿ ಚಿಂತೆ ಮತ್ತು ಚಿಂತನೆಗೆ ಸಾಕಷ್ಟು ಎಡೆಮಾಡಿ ಕೊಟ್ಟಿದೆ. ವರದಿಯಲ್ಲಿ ಉಲ್ಲೇಖೀಸಿದಂತೆ, 2030ರ ಸುಮಾರಿಗೆ ಜಗತ್ತಿನಲ್ಲಿರುವ 30 ಪ್ರತಿಶತ ಉದ್ಯೋಗ ಗಳು ಪ್ರಸ್ತುತ ಚಾಲ್ತಿಯಲ್ಲಿರುವ ಉದ್ಯೋಗಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿರುವುದು ಮಾತ್ರವಲ್ಲದೆ, ಈಗ ಇರುವ 30 ಪ್ರತಿಶತ ಉದ್ಯೋಗಗಳ ಆವಶ್ಯಕತೆ 2030ರಲ್ಲಿ ಕಾಣಸಿಗುವುದು ಅಸಾಧ್ಯ. ಈ ದಿಢೀರ್‌ ಬೆಳವಣಿಗೆಗೆ ಮುಖ್ಯ ಕಾರಣ ‘ಕೃತಕ ಬುದ್ಧಿಮತ್ತೆ’ (Artificial Inteligence)ಯ ವ್ಯಾಪಕ ಬಳಕೆ ಮತ್ತು ಅದು ತಂದೊಡ್ಡಬಹುದಾದ ಅಡ್ಡ…

Read More

ಸಮಗ್ರ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಕಾಪು ಕ್ಷೇತ್ರದ ಶಿರ್ವ ಗ್ರಾಮ ಸಮಿತಿ ರಚನಾ ಸಭೆಯು ಶಿರ್ವದ ಹೊಟೇಲ್‌ ಶಾಮ್ಸ್‌ ಸ್ಕ್ಡೇರ್‌ ಸಭಾಂಗಣದಲ್ಲಿ ನಡೆಯಿತು. ಗ್ರಾಮದ 9 ಜನ ಮಹಿಳೆಯರು ಶ್ರೀ ದೇವಿಗೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮಾತನಾಡಿ, ಲಕ್ಷಾಂತರ ಭಕ್ತರ ಭಕ್ತಿಯ ತಾಣ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರ ನಡೆಸುವ ಕಾರ್ಯ ಚರಿತ್ರೆಗೆ ಸೇರುವಂತಾಗಿದ್ದು, ವಿಶ್ವದ 18 ದೇಶಗಳಲ್ಲಿ ಸಮಿತಿ ರಚಿಸಲಾಗಿದೆ. ಕ್ಷೇತ್ರಕ್ಕೆ ಸಂಬಂಧಪಟ್ಟ ಪ್ರತಿಯೊಂದು ಮನೆಯಲ್ಲಿಯೂ ಒಬ್ಬ ಸದಸ್ಯರಿರುವಂತೆ ಪ್ರಧಾನ ಸಮಿತಿಯ ಸಂಕಲ್ಪವಾಗಿದ್ದು, ಬೇರೆ ಬೇರೆ ಗ್ರಾಮಗಳ ಸಮಿತಿ ರಚಿಸಲಾಗಿದೆ. ಅದರಂತೆ ಶಿರ್ವ ಗ್ರಾಮ ಸಮಿತಿಯ ರಚನೆ ಮಾಡಲಾಗಿದ್ದು, ಭಕ್ತರು ಅಮ್ಮನ ಜೀರ್ಣೋದ್ಧಾರ ಕಾರ್ಯದಲ್ಲಿ ಭಾಗವಹಿಸುವಂತೆ ವಿನಂತಿಸಿದರು. ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಅಭಿವೃದ್ಧಿ ಸಮಿತಿಯ ವಿಜ್ಞಾಪನಾ ಪತ್ರವನ್ನು ಸಾಂಕೇತಿಕವಾಗಿ ಶಿರ್ವ ಗ್ರಾ.ಪಂ. ಅಧ್ಯಕ್ಷ ರತನ್‌…

Read More

‘ಸಂತೋಷವಾಗಿರುವುದು ತುಂಬಾ ಸರಳ ಆದರೆ ಸರಳವಾಗಿರುವುದು ಮಾತ್ರ ತುಂಬಾ ಕಷ್ಟ.’ ಹೀಗೆಂದವರು ಗುರುದೇವ ರವೀಂದ್ರನಾಥ ಠಾಗೋರ್. ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಪ್ರತಿಷ್ಠಿತ ಮನೆತನ ಕುಳಾಲು. ಇಲ್ಲಿ ಕೆ ವಿಶ್ವನಾಥ ರೈ ಹಾಗೂ ಚಂದ್ರಾವತಿ ರೈ ದಂಪತಿಗಳ ಮೂರನೇ ಮಗುವಾಗಿ ಸುರೇಶ್ ರೈ ಅವರು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ಕುಳಾಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದರು. ಪ್ರೌಢ ಶಿಕ್ಷಣವನ್ನು ಸರಕಾರಿ ಪ್ರೌಢ ಶಾಲೆ ಕನ್ಯಾನದಲ್ಲೂ, ಪದವಿ ಪೂರ್ವ ಶಿಕ್ಷಣವನ್ನು ಪದವಿ ಪೂರ್ವ ಕಾಲೇಜು ವಿಟ್ಲದಲ್ಲಿ ಪೂರೈಸಿದರು. ಬಿ ಎ ಪದವಿಯನ್ನು ಸಂತ ಅಲೋಶಿಯಸ್ ಕಾಲೇಜ್ ಮಂಗಳೂರು, ಸ್ನಾತಕೋತ್ತರ  ಪದವಿಯನ್ನು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಇತಿಹಾಸದಲ್ಲಿ ದ್ವಿತೀಯ ಶ್ರೇಣಿಯೊಂದಿಗೆ ಮುಗಿಸಿದರು. ನಂತರ ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಮೂಲಕ “ಜ್ಯುಡಿಶಿಯಲ್ ಸಿಸ್ಟಮ್ ಇನ್ ದ ಸೋಶಿಯಲ್ ಟ್ರೆಡಿಷನ್ ಇನ್ ತುಳುನಾಡು” ವಿಷಯದ ಬಗ್ಗೆ ಪಿ. ಎಚ್. ಡಿ ಪದವಿಯನ್ನು ಪಡೆದರು. ಸುರೇಶ್ ರೈ ಅವರು ತಮ್ಮ ವೃತ್ತಿ ಜೀವನವನ್ನು ಭಂಡಾರ್ ರ್ಕರ್ ಕಾಲೇಜ್ ಕುಂದಾಪುರ ಇಲ್ಲಿ…

Read More

ಹೊಸನಗರ ಬಟ್ಟೆಮಲ್ಲಪ್ಪ ವಲಯ ಬಂಟರ ಸಂಘದ ಸದಸ್ಯರಾದ ಲಕ್ಷ್ಮಣ್ ಶೆಟ್ಟಿಯವರು ಮಗಳಾದ ಪಲ್ಲವಿ ಶೆಟ್ಟಿಯವರ ಮದುವೆಗೆ ಸಹಾಯ ಕೋರಿ ಜಾಗತಿಕ ಬಂಟರ ಸಂಘಕ್ಕೆ ಸಹಾಯ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪರಿಶೀಲಿಸಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ನೀಡಿದ ಸಹಾಯಧನದ ಚೆಕ್ಕನ್ನು ಸಂಘದ ಅಧ್ಯಕ್ಷ ನಾಗರಾಜ್ ಶೆಟ್ಟಿಯವರು ಫಲಾನುಭವಿಯ ತಾಯಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರಾದ ನಾಗರಾಜ್ ಶೆಟ್ಟಿ, ಸಹ ಕಾರ್ಯದರ್ಶಿಯಾದ ಪ್ರವೀಣ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ನವೀನ್ ಕುಮಾರ್ ಶೆಟ್ಟಿ, ನಿರ್ದೇಶಕರಾದ ಜಯರಾಮ್ ಶೆಟ್ಟಿ ಉಪಸ್ಥಿತರಿದ್ದರು.

Read More

ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಶ್ರೀ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ಎಪ್ರಿಲ್ 5 ರಂದು ಸಂಜೆ 5 ಗಂಟೆಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ “ಶ್ರೀ ಪ್ರವೀಣ್ ಭೋಜ ಶೆಟ್ಟಿ” ಆಡಳಿತ ಕಚೇರಿಯ ಉದ್ಘಾಟನೆ ನಡೆಯಲಿದೆ. ಸಮಾರಂಭದಲ್ಲಿ ಒಡಿಯೂರು ಶ್ರೀ ಕ್ಷೇತ್ರದ ಗುರು ದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ವಹಿಸಲಿದ್ದಾರೆ. ಸಮಾರಂಭದಲ್ಲಿ ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ, ಒಕ್ಕೂಟದ ಮಹಾ ನಿರ್ದೇಶಕರಾದ ತೋನ್ಸೆ ಆನಂದ ಶೆಟ್ಟಿ, ಶಶಿಧರ ಶೆಟ್ಟಿ ಬರೋಡಾ, ರಾಜೇಶ್ ಶೆಟ್ಟಿ ರಾಕ್ಷಿ ಬಿಲ್ಡಸ್೯ ಮೊದಲಾದವರು ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಜಯಕರ ಶೆಟ್ಟಿ ಇಂದ್ರಾಳಿ ಮತ್ತು ಒಕ್ಕೂಟದ ಮಹಾ ನಿರ್ದೇಶಕ ಪ್ರವೀಣ್ ಭೋಜ ಶೆಟ್ಟಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಗುವುದು. ಸಮಾರಂಭದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಬಂಟ ಪ್ರತಿಷ್ಠಾನದ ಅಧ್ಯಕ್ಷ ಎ.ಜೆ. ಶೆಟ್ಟಿ,…

Read More

ಮೀರಾರೋಡ್ ಸೆಕ್ಟರ್ 4 ರ ಸಿ 19, ನಂ. 002 ನ ಪ್ರೇಮ್ ಜೋತ್ ಸೊಸೈಟಿ ಮೀರಾರೋಡ್ ಇಲ್ಲಿನ ಶ್ರೀ ಚಾಮುಂಡೇಶ್ವರೀ ಪ್ರಸನ್ನ ಇದರ 18ನೇ ವಾರ್ಷಿಕ ಉತ್ಸವ ಹಾಗೂ ಮಹಾಪೂಜೆಯು ಇತ್ತೀಚೆಗೆ ಬಹು ವಿಜೃಂಭಣೆಯಿಂದ ನೆರವೇರಿತು. ಮಹಾಪೂಜೆಯು ಬೆಳಿಗ್ಗೆ 8 ರಿಂದ ಅಲಕಾರ ಸೇವೆ, ಪಂಚಾಮೃತ ಅಭಿಷೇಕ, ಪ್ರಸನ್ನ ಪೂಜೆ, ವಿಜಯ್ ಶೆಟ್ಟಿ ಮೂಡುಬೆಳ್ಳೆ ತಂಡದವರಿಂದ ಭಜನಾಮೃತ ಮುಂತಾದ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ನೆರೆದ ಭಕ್ತರನ್ನು ತನ್ಮಯಗೊಳಿಸಿದವು. ತದನಂತರ ದರ್ಶನ ಸೇವೆ, ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ಮತ್ತು ಅನ್ನ ಪ್ರಸಾದ ಸಂತರ್ಪಣೆ ನಡೆಯಿತು. ಸ್ಥಳೀಯ ಹಲವಾರು ಭಜನಾ ಮಂಡಳಿ, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ವಾರ್ಷಿಕೋತ್ಸವದಲ್ಲಿ ಉಪಸ್ಥಿತರಿದ್ದರು. ಭಕ್ತಾಧಿಗಳಿಗೆ ಅರ್ಚಕ ಲಕ್ಷ್ಮಣ ಜೆ. ಶೆಟ್ಟಿಯವರು ಪ್ರಾರ್ಥನಾ ಪ್ರಸಾದವನ್ನು ನೀಡಿದರು. ಕಾರ್ಯಕ್ರಮದ ಯಶಸ್ವಿಯಲ್ಲಿ ವಿರಾರ್ ಶಂಕರ್ ಶೆಟ್ಟಿ, ಆನಂದ ಶೆಟ್ಟಿ ಕುಕ್ಕುಂದೂರು, ಆನಂದ ಶೆಟ್ಟಿ ಹೊಟೇಲ್ ಮಿಲಿ, ಮಧುಕರ್ ಶೆಟ್ಟಿ, ಉಮೇಶ್ ಶೆಟ್ಟಿ, ವೈ.ಟಿ. ಶೆಟ್ಟಿ ಹೆಜಮಾಡಿ, ವಿಶ್ವನಾಥ್ ಉಚ್ಚಿಲ್,…

Read More

ಕುಂದಾಪುರ ಮೂಲದ ಮುವಾಯ್ ಥಾಯ್ ಫೈಟರ್​ಗೆ ಮತ್ತೊಂದು ಅಂತಾರಾಷ್ಟ್ರೀಯ ಜಯ ಸಿಕ್ಕಿದೆ. ಕುಂದಾಪುರ ಮೂಲದ ಅನೀಶ್ ಶೆಟ್ಟಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮುವಾಯ್ ಥಾಯ್ ಫೈಟರ್ ಆಗಿದ್ದು, ಥಾಯ್ಲೆಂಡ್​ನ ಪುಕೆಟನ್​ ರವಾಯ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮುವಾಯ್ ಥಾಯ್ ಕಿಕ್ ಬಾಕ್ಸಿಂಗ್ ಪಂದ್ಯದಲ್ಲಿ ಜಯಭೇರಿ ಬಾರಿಸಿದ್ದಾರೆ. 68 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ್ದ ಅನೀಶ್ ಶೆಟ್ಟಿ ಮುವಾಯ್ ಥಾಯ್ ಫೈಟ್​ನಲ್ಲಿ ಸಾಕಷ್ಟು ಅನುಭವವಿರುವ ಎದುರಾಳಿಯನ್ನು ಮಣಿಸಿ ಜಯಗಳಿಸಿದ್ದಾರೆ. ಪ್ರಥಮ ಸುತ್ತಿನಲ್ಲೇ ಫ್ಲೈಯಿಂಗ್ ಕಿಕ್ ಮೂಲಕ ಎದುರಾಳಿಯನ್ನು ನಾಕೌಟ್​ ಮಾಡುವ ಮೂಲಕ ಅನೀಶ್ ಭರ್ಜರಿ ಜಯಗಳಿಸಿದ್ದಾರೆ.

Read More

ಕುಂದಾಪುರ ತಾಲೂಕಿನ ಯಡಮೋಗೆ ಗ್ರಾಮದ ಕೊಳಾಲಿ ಗೋವಿಂದ ಶೆಟ್ಟಿ ಮತ್ತು ಶ್ರೀಮತಿ ಸದಿಯಮ್ಮ ಶೆಟ್ಟಿ ಇವರ ಕಿರಿಯ ಪುತ್ರನಾಗಿ ಕೃಷ್ಣ ಶೆಟ್ಟಿ ದಿನಾಂಕ 09-08-1967 ರಂದು ಜನಿಸಿದರು. ಇವರು ತಂದೆಯಂತೆ ಸಭ್ಯತೆ, ವಿನಯತೆ, ಶಿಸ್ತನ್ನು ಪಾಲಿಸಿಕೊಂಡು ಬಂದವರು. ಶೀಲಾವತಿ ಎಂಬವರೊಡನೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಇವರು ಪವಿತ್ರ ಮತ್ತು ಪ್ರಸಾದ್ ಎಂಬ ಇಬ್ಬರು ಮಕ್ಕಳನ್ನು ಪಡೆದು ಸುಖ ಜೀವನವನ್ನು ನಡೆಸುತ್ತಿದ್ದಾರೆ. ಇವರಿಗೆ ಸಿದ್ದಾಪುರ, ಕುಂದಾಪುರ, ಉಡುಪಿ, ಮಂಗಳೂರು, ಬೆಂಗಳೂರು, ಇನ್ನು ಕೆಲವು ಕಡೆ ಇವರ ಸೇವೆಗೆ ಸನ್ಮಾನ ಸಮಾರಂಭಗಳು ಇವರ ಮುಡಿಯೇರಿದೆ. ಹೊರ ರಾಜ್ಯದ ಮುಂಬೈ, ಹೈದ್ರಾಬಾದ್ನಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ಜನ ಮನ್ನಣೆಗೆ ಪಾತ್ರರಾದರು. ಇವರು ಹುಟ್ಟೂರಿನಲ್ಲಿಯೇ 5ನೇ ತರಗತಿ ಪೂರೈಸಿ ಮನೆಯ ಕಷ್ಟವನ್ನು ನೋಡಲಾರದೆ ಮನೆಯ ಜವಾಬ್ದಾರಿಯನ್ನು ಹೊರಲು ಮುಂದಾಗುತ್ತಾರೆ. ಒಂದು ಕಡೆ ಮೂಲಭೂತ ಅವಶ್ಯಕತೆಗಳ ಕೊರತೆ ಇನ್ನೊಂದೆಡೆ ಮನೆಯ ಜವಾಬ್ದಾರಿ ಇವರನ್ನು ಯಾವುದಾದರು ಒಂದು ಕೆಲಸಕ್ಕೆ ಪ್ರೇರೆಪಿಸಿತು. 5ನೇ ತರಗತಿಯಲ್ಲಿಯೇ ಮನೆಯ ಆರ್ಥಿಕತೆಯ ತೊಂದರೆಗೆ ಸಿಲುಕಿ ಯಕ್ಷಗಾನಕ್ಕೆ…

Read More

‘ ಸಮಾಜಸೇವೆ ಒಂದು ದುಬಾರಿ ವ್ಯಸನ ‘ ಎಂದು ಹೇಳುವ ಹಲವರನ್ನು ನೋಡಿದ್ದೇನೆ! ನನಗೂ ಈ ಕ್ಷೇತ್ರದಲ್ಲಿ ಹಲವು ಕಹಿ ಅನುಭವಗಳು ಆಗಿವೆ. ಆದರೆ ನನ್ನೂರು ಕಾರ್ಕಳದ ಈ ಮೂವತ್ತೆರಡು ವರ್ಷದ ಯುವಕ ಅವಿನಾಶ್ ಶೆಟ್ಟಿಯವರು ಸಮಾಜಸೇವೆಯನ್ನು ಉಸಿರು ಮಾಡಿಕೊಂಡು ಓಡಾಟ ಮಾಡುವುದನ್ನು ನೋಡುವಾಗ ಯಾರಿಗಾದರೂ ಪ್ರೀತಿ, ಅಭಿಮಾನ ಮೂಡುತ್ತದೆ. ಅವಿನಾಶ್ ತುಂಬಾ ಶ್ರೀಮಂತ ಕುಟುಂಬದಿಂದ ಬಂದವರು ಅಲ್ಲ. ಅವರು ಕಳೆದ ಕೆಲವು ವರ್ಷಗಳಿಂದ ಕಾರ್ಕಳದಲ್ಲಿ ‘ಅಮ್ಮಾ ಕನ್ಸಟ್ರಕ್ಷನ್ ‘ ಎಂಬ ಕಟ್ಟಡ ನಿರ್ಮಾಣದ ಉದ್ಯಮ ಮುನ್ನಡೆಸುತ್ತಿದ್ದಾರೆ. ಆರಂಭದಿಂದಲೂ ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಬಹಳಷ್ಟು ಅನ್ನೋದು ಅವಿನಾಶ್ ಮನಸ್ಥಿತಿ! ಅಶಕ್ತರ ಸೇವೆಯಲ್ಲಿ ಸದಾ ಮುಂದು. ————————————– ಅಶಕ್ತರಿಗೆ, ದುರ್ಬಲರಿಗೆ, ಬಡ ವಿದ್ಯಾರ್ಥಿಗಳಿಗೆ ಅವರದ್ದು ಪ್ರಚಾರ ಇಲ್ಲದ ಸೇವೆ. ತನ್ನ ಸಂಪಾದನೆಯ ಬಹು ದೊಡ್ಡ ಭಾಗ ಮತ್ತು ತನ್ನ ಮೇಲೆ ನಂಬಿಕೆ ಇರುವ ದಾನಿಗಳ ನೆರವು ಪಡೆದು ಅವರು ತನ್ನ ಬಳಿ ಸಹಾಯ ಕೇಳಿ ಬಂದವರಿಗೆ ನೆರವು ನೀಡುತ್ತ ಬಂದಿದ್ದಾರೆ. ದುರ್ಬಲ ರೋಗಿಗಳನ್ನು…

Read More