Author: admin
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ಮೂಡುಬಿದಿರೆ ಇದರ ನಾಟಕ ವಿಭಾಗ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ತಂಡಕ್ಕೆ ಕಲಾವಿದರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. ಪ್ರತೀ ವರ್ಷವೂ ಹಲವು ಶ್ರೇಷ್ಠ ನಾಟಕಗಳನ್ನು ಕನ್ನಡ ರಂಗಭೂಮಿಗೆ ನೀಡಿದ ಕೀರ್ತಿ ಆಳ್ವಾಸ್ ರಂಗ ತಂಡದ್ದು. ರಂಗಾಭಿನಯ, ಮಾತುಗಾರಿಕೆ ಹಾಗೂ ತಾಂತ್ರಿಕವಾಗಿಯೂ ತರಬೇತಿ ಪಡೆದು ಸಂಪೂರ್ಣ ವೃತ್ತಿಪರ ತಂಡದಂತೆ ತಿರುಗಾಟ ಮಾಡಲು ಆಸಕ್ತಿ ಇರುವ ರಂಗ ಕಲಾವಿದರು ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ ಒಂದು ವರ್ಷದ ರಂಗ ಶಿಕ್ಷಣ ಪದವಿ ಅಥವಾ ಕನಿಷ್ಠ ನಾಲ್ಕೈದು ನಾಟಕಗಳಲ್ಲಿ ಅಭಿನಯಿಸಿದ ಅನುಭವ ಹೊಂದಿರಬೇಕು. ವಯೋಮಿತಿ 20 ರಿಂದ 35 ವರ್ಷದೊಳಗಿನವರು ಜೂನ್ 17 ರೊಳಗೆ ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ಮೂಡುಬಿದಿರೆ ದ.ಕ ಈ ವಿಳಾಸಕ್ಕೆ ಅರ್ಜಿಯನ್ನು ಕಳುಹಿಸಲು ಕೋರಲಾಗಿದೆ. ಸಂದರ್ಶನದಲ್ಲಿ ಆಯ್ಕೆ ಆದವರಿಗೆ ಉಚಿತ ಊಟ, ವಸತಿ ಹಾಗೂ ಪ್ರತಿಭೆಗೆ ಅನುಸಾರ ತಿಂಗಳ ವೇತನ ನೀಡಲಾಗುವುದು. ಮಾಹಿತಿಗಾಗಿ ಡಾ| ಜೀವನ್ ರಾಂ ಸುಳ್ಯ, ನಿರ್ದೇಶಕರು, ಆಳ್ವಾಸ್ ರಂಗ ಅಧ್ಯಯನ ಕೇಂದ್ರ…
ಅವಿಭಕ್ತ ದಕ್ಷಿಣ ಕನ್ನಡ ಜಿಲ್ಲೆಯ ಬಂಟರು ಉದ್ಯಮಶೀಲರು, ಸಾಹಸಿಗಳು ಮತ್ತು ಪರಿಶ್ರಮಿಗಳು. ತಾವು ತಮ್ಮ ಲಕ್ಷ್ಯವನ್ನು ಹಿಂಬಾಲಿಸುವಲ್ಲಿ ಎದುರಾಗುವ ಕಷ್ಟನಷ್ಟಗಳನ್ನು ಸವಾಲು ಎಂಬಂತೆ ಸ್ವೀಕರಿಸುತ್ತಾ ಕೊನೆಗೊಂದು ದಿನ ಯಶಸ್ಸಿನ ತುತ್ತ ತುದಿಯಲ್ಲಿದ್ದು ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಕರುಣಾಕರ ಎಂ ಶೆಟ್ಟಿ ಅವರ ಹೆಸರು ದೇಶದಾದ್ಯಂತ ಪರಿಚಿತ. 1975 ರ ಸುಮಾರಿಗೆ ವಿ.ಕೆ ಇಂಜಿನಿಯರ್ಸ್ ಎಂಬ ಹೆಸರಿನೊಂದಿಗೆ ಉದ್ಯಮ ರಂಗ ಪ್ರವೇಶಿಸಿದ ಕೆ.ಎಂ ಶೆಟ್ಟರು ಟೂಲ್ ರೂಂ ವರ್ಕ್ ಶಾಪ್ ಯಂತ್ರೋಪಕರಣಗಳ ಮೂಲಕ ತಮ್ಮ ಕಾರ್ಯಾಗಾರವನ್ನು ಪ್ರಾರಂಭಿಸಿದರು. ಉದ್ಯಮ ಕ್ಷೇತ್ರದಲ್ಲಿ ಅತ್ಯುತ್ತಮ ಗುಣಮಟ್ಟದ ಇಂಜೆಕ್ಷನ್ ಮೌಲ್ಡಿಂಗ್ ಉಪಕರಣಗಳನ್ನು ಉತ್ಪಾದಿಸುವ ಮೂಲಕ ಅತ್ಯಂತ ಕಡಿಮೆ ಅವಧಿಯಲ್ಲಿ ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡರು. ತನ್ನ ಉದ್ಯಮ ಅಪೂರ್ವ ಯಶಸ್ಸು ಕಂಡ ಬಳಿಕ ದೇಶದ ಅನ್ಯಭಾಗಗಳಲ್ಲಿ ಗ್ರಾಹಕರ ಬೇಡಿಕೆಗಳನ್ನು ಅನುಸರಿಸಿ ಶಾಖೆಗಳನ್ನು ತೆರೆದು ಉದ್ಯಮ ವ್ಯಾಪ್ತಿಯನ್ನು ವಿಸ್ತರಿಸಿಕೊಂಡರು. ಕೆ.ಎಂ ಶೆಟ್ಟರು ಇದರ ಕಾರ್ಯಾಧ್ಯಕ್ಷರಾಗಿ, ಆಡಳಿತ ನಿರ್ದೇಶಕರಾಗಿ ಕಾರ್ಯ ನಿರ್ವಹಿಸತೊಡಗಿದರು. ಪ್ರಸ್ತುತ ಈ ಕಂಪನಿಯಲ್ಲಿ ಗೃಹೋಪಯೋಗಿ ಉತ್ಪನ್ನಗಳನ್ನು ತಯಾರಿಸುತ್ತಾರೆ. ಮುಖ್ಯವಾಗಿ ಇಂದಿನ…
28 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ದಾರಿ ತೋರಿ, ಪ್ರಸ್ತುತ ಅಲೈಯನ್ಸ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಜನರಲ್ ಆಗಿ ಸಂಸ್ಥೆಯನ್ನು ಜಾಗತಿಕ ಮಾನ್ಯತೆಗೆ ಒಯ್ಯುತ್ತಿರುವ ರಾಣಿ ಅಬ್ಬಕ್ಕ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಸುರೇಖಾ ಶೆಟ್ಟಿಯವರು ಬೆಂಗಳೂರು ಬಂಟರ ಸಂಘದ ಚುನಾವಣೆಯಲ್ಲಿ 2026-29 ರ ಸಾಲಿಗೆ ಜೊತೆ ಕಾರ್ಯದರ್ಶಿ ಹುದ್ದೆಗೆ ಡಾ| ದೀಪಕ್ ಶೆಟ್ಟಿ ಬಣದಲ್ಲಿ ಸ್ಪರ್ಧಿಸುತ್ತಿದ್ದಾರೆ. ಕಾರ್ಪೊರೇಟ್ ಸಂಬಂಧಗಳು, ಪ್ರವೇಶ, ವಿದ್ಯಾರ್ಥಿ ಸೇವೆ, CSR, ಮಹಿಳಾ ಸಬಲೀಕರಣದಲ್ಲಿ 28 ವರ್ಷಗಳ ನಾಯಕತ್ವದ ಅನುಭವ, ವಿದ್ಯಾ ಸ್ಪಂದನ – ಕೌಶಲ್ಯ ಸ್ಪಂದನದ ಮೂಲಕ ಬಡ ಮಕ್ಕಳು ಮತ್ತು ಮಹಿಳೆಯರಿಗೆ ಉಚಿತ ಶಿಕ್ಷಣ, ಹೊಲಿಗೆ, ಇಂಗ್ಲಿಷ್ ಕಂಪ್ಯೂಟರ್ ತರಬೇತಿ ಮೂಲಕ ಸೇವೆ ಸಲ್ಲಿಸಿದ ಅನುಭವವಿರುವ ಇವರು ಬೆಂಗಳೂರು ಬಂಟರ ಸಂಘದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. CII, NHRD, RNS ವಿದ್ಯಾನಿಕೇತನದಲ್ಲಿಯೂ ಸಕ್ರಿಯ ಕೊಡುಗೆಯನ್ನು ನೀಡಿ, ಉದ್ಯಮ ಶಿಕ್ಷಣದ ನಡುವೆ ಸೇತುವೆಯಾಗಿ ಮಕ್ಕಳಿಗೆ ಉದ್ಯೋಗದ ಬಾಗಿಲು ತೆರೆದ ಸುರೇಖಾ…
ಆಳ್ವಾಸ್ ಕಾನೂನು ಕಾಲೇಜಿನ ವತಿಯಿಂದ ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾದ ಜಗದೀಶ್ ಶೇಣವ ಹಾಗೂ ಮೂಡುಬಿದಿರೆ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಯ್ಕೆಯಾದ ಶರತ್ ಶೆಟ್ಟಿಯವರಿಗೆ ಸನ್ಮಾನ ಕಾರ್ಯಕ್ರಮ ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ನಡೆಯಿತು. ಇಲ್ಲಿ ಬಾಹ್ಯಕಾಶವೇ ಮಿತಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ಜಗದೀಶ್ ಶೇಣವ, ವಕೀಲ ವೃತ್ತಿಯಲ್ಲಿ ದೊರೆಯುವ ಹೆಸರು, ಗೌರವ ಮತ್ತು ಆರ್ಥಿಕ ಯಶಸ್ಸು ಬೇರೆ ಯಾವ ಕ್ಷೇತ್ರಗಳಲ್ಲೂ ಸಿಗಲಾರದು. ಇಲ್ಲಿ ಆಕಾಶವಲ್ಲ, ಬಾಹ್ಯಾಕಾಶವೇ ನಮ್ಮ ಮಿತಿ ಎಂದರು. ವಿದ್ಯಾರ್ಥಿ ಜೀವನದಲ್ಲಿ ಕಾಲೇಜು ನಾಯಕತ್ವ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಬಳಿಕ ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಚುನಾವಣೆಯನ್ನು ಎದುರಿಸಿದ್ದೆ. ಇದೀಗ ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಮೂಲಕ ಮೂರನೇ ಪ್ರಮುಖ ಚುನಾವಣೆಯಲ್ಲಿ ಯಶಸ್ಸು ಕಂಡಿದ್ದೇನೆ. ತಾನು ಮೂಲತಃ ವೈದ್ಯನಾಗುವ ಕನಸು ಕಂಡಿದ್ದೆ. ಆದರೆ ಪಿಸಿಎಂಬಿ ವಿಭಾಗದಲ್ಲಿ ಅನುತ್ತೀರ್ಣನಾದ ಬಳಿಕ ಕಲಾ ವಿಭಾಗಕ್ಕೆ ಸೇರ್ಪಡೆಗೊಂಡೆ. ಜೀವನದ ಸೋಲುಗಳೇ ನನ್ನ ಯಶಸ್ಸಿನ ದಾರಿಯನ್ನು…
ರಾಮಾಭಿವಂದ್ಯ ಯಕ್ಷ ಸೇವಾ ಬಳಗ, ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಜಂಟಿ ಆಯೋಜನೆಯಲ್ಲಿ ಪ್ರಭು ಶ್ರೀರಾಮಚಂದ್ರ ದೇವರ ಅವತಾರದ ಆರಂಭದಿಂದ ನಿರ್ಯಾಣದವರೆಗಿನ ಸಂಪೂರ್ಣ ಶ್ರೀರಾಮ ಚರಿತ್ರೆ, ಶ್ರೀರಾಮಕಥಾ ಹೃದಯಂ ಪುಣ್ಯಪ್ರದ ಇಪ್ಪತ್ನಾಲ್ಕು ಕಂತುಗಳ ಸರಣಿ ತಾಳಮದ್ದಳೆ ಕಾರ್ಯಕ್ರಮದ 9ನೇ ಪ್ರಸ್ತುತಿ ವಾಲಿ ಮೋಕ್ಷ ಮತ್ತು ಸನ್ಮಾನ ಕಾರ್ಯಕ್ರಮವು ಜೂನ್ 14 ರಂದು ಅಪರಾಹ್ನ 2.15ರಿಂದ ವಿದ್ಯಾವಿಹಾರ್ ಪಶ್ಚಿಮದ ಗಾವ್ದೇವಿಯ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ. ವೇದಮೂರ್ತಿ ಹರಿದಾಸ ಭಟ್ ಪೆರ್ಣಂಕಿಲ ಅವರ ಶುಭಾಶೀರ್ವಾದದೊಂದಿಗೆ ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಹರಿದಾಸ ಗೋಪಾಲ ಶೆಟ್ಟಿಯವರ ಸಂಪೂರ್ಣ ಸಹಕಾರದೊಂದಿಗೆ ನಡೆಯಲಿರುವ ಈ ಸಮಾರಂಭದಲ್ಲಿ ಕಳೆದ 5 ದಶಕಗಳಿಂದ ಮುಂಬಯಿ ಮಹಾನಗರದಲ್ಲಿ ಕಲಾ ಸೇವೆಗೈಯ್ಯುತ್ತಿರುವ ಆನಂದ ಶೆಟ್ಟಿ ಇನ್ನಾ ಅವರನ್ನು ಗೌರವಿಸಲಾಗುವುದು. ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವೇದಮೂರ್ತಿ ಹರಿದಾಸ ಭಟ್ ಪೆರ್ಣಂಕಿಲ ಅವರು ವಹಿಸಲಿದ್ದು, ಶ್ರೀ ಅಂಬಿಕಾ ಆದಿನಾಥೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಹರಿದಾಸ ಗೋಪಾಲ ಶೆಟ್ಟಿಯವರ ಗೌರವ ಉಪಸ್ಥಿತಿಯಿರಲಿದೆ. ಮುಖ್ಯ…
ಹೆತ್ತವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ತಮ್ಮನ್ನು ಸಮರ್ಪಿಸಿಕೊಂಡಿರುವ ಸೇವಾ ದುರೀಣ ಆನಂದ ಎಂ ಶೆಟ್ಟಿ ಅವರು ಇಂದು ಆರ್ಗಾನಿಕ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಮೂಲಕ ಜಾಗತಿಕ ಮಟ್ಟದಲ್ಲಿ ಜನಪ್ರಿಯರಾಗಿದ್ದಾರೆ. ದಿವಂಗತ ಮೋನಪ್ಪ ಶೆಟ್ಟಿ ಹಾಗೂ ದಿವಂಗತ ಲಕ್ಷ್ಮಿ ಶೆಟ್ಟಿ ದಂಪತಿಗಳ ಸುಪುತ್ರರಾಗಿ ತೋನ್ಸೆಯ ಪ್ರತಿಷ್ಠಿತ ಬಂಟ ಕುಟುಂಬದಲ್ಲಿ ಜನಿಸಿದ ಆನಂದ ಶೆಟ್ಟಿಯವರು ಯಶಸ್ವೀ ಉದ್ಯಮಿಯಾಗಿ ವ್ಯವಹಾರದಲ್ಲಿ ಬಂದ ಲಾಭದಲ್ಲಿ ಸಮಾಜಕ್ಕೆ ಏನಾದರೂ ಮರಳಿ ನೀಡಬೇಕು ಎಂಬ ಉದ್ದೇಶದೊಂದಿಗೆ ಮುನ್ನಡೆಯುತ್ತಿರುವ ಅವರ ಚಿಂತನೆ ಅನೇಕರಿಗೆ ಮಾದರಿಯಾಗಿದೆ. ಆರ್ಗಾನಿಕ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಾ, ಸಾವಿರಾರು ಕುಟುಂಬಗಳಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿರುವ ಆನಂದ ಎಂ ಶೆಟ್ಟಿ ಅವರು ಶಿಕ್ಷಣ, ಆರೋಗ್ಯ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ಬಡ ಕುಟುಂಬಗಳ ಸಂಕಷ್ಟಗಳಿಗೆ ಸ್ಪಂದನೆ, ಸಾಮಾಜಿಕ ಸಂಘಟನೆಗಳಿಗೆ ಪ್ರೋತ್ಸಾಹ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ಸಹಕಾರ ನೀಡುವ ಮೂಲಕ ಜನಸಾಮಾನ್ಯರ…
ಖ್ಯಾತ ಕವಿ ಡಾ| ಕಯ್ಯಾರ ಕಿಂಞಣ್ಣ ರೈ ಅವರ ಜನ್ಮದಿನಾಚರಣೆ ಸಂದರ್ಭದಲ್ಲಿ ನೀಡಲ್ಪಡುವ ಕಯ್ಯಾರ ಪ್ರಶಸ್ತಿಗೆ ಉದ್ಯಮಿ, ಸಮಾಜ ಸೇವಕ, ಎಟಿಎಸ್ ಸಂಸ್ಥೆಯ ಆಡಳಿತ ನಿರ್ದೇಶಕ ಡಾ| ರವಿ ಶೆಟ್ಟಿ ದೋಣಿಂಜೆ ಗುತ್ತು ಅವರು ಆಯ್ಕೆಯಾಗಿದ್ದಾರೆ. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು, ಕಲ್ಕೂರ ಪ್ರತಿಷ್ಠಾನ ಮಂಗಳೂರು ಇವರ ಸಹಯೋಗದಲ್ಲಿ ಜೂನ್ 21ರಂದು ಬೆಳಗ್ಗೆ 9ರಿಂದ ಕಯ್ಯಾರು ಕಾಮಿಲ್ ಕೊಕ್ಕೆಚಾಲು ಶಾಲಾ ವಠಾರದಲ್ಲಿ ನಡೆಯುವ ನಾಡೋಜ ಡಾ| ಕಯ್ಯಾರ ಕಿಂಞಣ್ಣ ರೈ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಹಿರಿಯ ಸಾಹಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ.ಎಸ್.ಜಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಮಾಜಿ ಶಾಸಕ ಸೋಮಣ್ಣ ಬೇವಿನಮರದ ಅಧ್ಯಕ್ಷತೆ ವಹಿಸುವರು. ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಪ್ರಶಸ್ತಿ ಪ್ರದಾನ ಮಾಡುವರು. ಇದೇ ವೇಳೆ ಕೃತಿ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಕರಾವಳಿಯ ನಗುಮೊಗದ ಹೀರೋ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅವರು ಬಿಗ್ಬಾಸ್ ವಿನ್ನರ್ ಆದ ಬಳಿಕ ಬಹುಬೇಡಿಕೆಯ ನಟ, ನಿರೂಪಕರಾಗಿ ಗುರುತಿಸಿಕೊಂಡಿದ್ದು, ತಾನು ಕೈಯಾಡಿಸಿದ ಪ್ರತಿಯೊಂದರಲ್ಲೂ ಸಕ್ಸಸ್ ಆಗುತ್ತಿರುವುದು ಅವರ ಪ್ರತಿಭೆಗೆ ಸಾಕ್ಷಿ. ಐಪಿಎಲ್ ಸಂದರ್ಭದಲ್ಲೂ ಟೀವಿ ಚಾನೆಲ್ನಲ್ಲಿ ಕಾಮೆಂಟರರ್ ಆಗಿ ಬ್ಯುಸಿಯಾಗಿದ್ದ ರೂಪೇಶ್ ಶೆಟ್ಟಿ ಈಗ ಸುಲಭದಲ್ಲಿ ಯಾರ ಕೈಗೂ ಸಿಗದಷ್ಟು ಕೆಲಸ ಕಾರ್ಯಗಳಲ್ಲಿ ವ್ಯಸ್ತರಾಗಿದ್ದಾರೆ. ಅವರ ನಟನೆಯ ‘ಜೈ’ ಸಿನಿಮಾವಂತೂ ಸೂಪರ್ ಹಿಟ್ ಆಗಿ, ನೂರು ದಿನಗಳನ್ನು ಪೂರೈಸಿ ನಿರ್ಮಾಪಕರಿಗೆ ಖುಷಿ ಕೊಟ್ಟಿದೆ. ಒಂದು ಹೊಸ ರೂಪದ ಸಿನೆಮಾ ಎಂದು ಜನಮನ್ನಣೆಯನ್ನೂ ಗಳಿಸಿದೆ. ಜೊತೆಗೆ ಹೊಸ ತುಳು ಸಿನಿಮಾ ‘ಬ್ರೋ’ ಘೋಷಣೆಯಾಗಿದೆ. ಈಗ ರೂಪೇಶ್ ನಟಿಸಿರುವ ಮೊದಲ ತಮಿಳು ಸಿನೆಮಾ ಸನ್ನಿಧಾನಂ ಪಿ.ಒ. ತಮಿಳುನಾಡಿನಾದ್ಯಂತ ಬಿಡುಗಡೆಯಾಗಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇವರ ನಟನೆಗೆ ತಮಿಳರು ಕೂಡಾ ಫಿದಾ ಆಗಿದ್ದು, ರೂಪೇಶ್ ಶೆಟ್ಟಿಗೆ ಅಲ್ಲೂ ಭಾರೀ ಬೇಡಿಕೆ ವ್ಯಕ್ತವಾಗುವ ಸಾಧ್ಯತೆ ಇದೆ. ಈ ನಡುವೆ ಇವರು ಮತ್ತೊಂದು ಕನ್ನಡ ಸಿನೆಮಾದಲ್ಲೂ…
ಎಚ್ಚಿನಗುಲು ಪಿನಯೆರ್, ಬೊಂದೆ ಪಂಡ ದಾದ ಪಂದ್. ಬೂತಾಯಿದ ನನಾತ್ ಸಸಾರದ ಪುದರೇ ಬೊಂದೆ. ಜೋರ್ದ ಪೊನ್ನುಲೆಗ್ ‘ನಿನನ್ ಆಲ್ ಒಂಜಿ ಬೊಂದೆಗ್ ಅಡವು ದೀವೊಲು’ ಇಂಚ ಪನುವೆರ್ ಪೊಂಜೋವುಲು ತನ್ಕ್ಲೆನ (ಪಾಪದ) ಆನ್ ಜೋಕುಲೆಗ್. ಒವುಲ ಒಂಜಿ ಪಿರಿಯದ ವಸ್ತುನು ಸರಿಟ್ ತೂವಂದೆ ಪತ್ತಂದೆ ಕನತಡ, ಆ ವಸ್ತ್ ಬಿಲೆಕ್ ತಕ್ಕಂತಿನ ಅತ್ತ್ಡ, ‘ಪೋಯೆರ್, ಬೂತಾಯಿ ಕಂತಿಲಕ್ಕ ಕನತೆರ್’ ಪಂದ್ ಇಲ್ಲದ ಬಾಕಿದಗುಲು (ಎಚ್ಚಾದ್ ಬುಡೆದಿ) ಅಂಗ್ಸಾವೆರ್. ಪಂಡ ಬೊಂದೆಗ್ ದಾಲ ಬಿಲೆನೇ ಇಜ್ಜಿ. ದುಂಬು ನಮ್ಮೂರ್ದ ಕಡಲ್ಡ್ ಬಾರಿ ಬೂತಾಯಿದ ಚೊಪ್ಪ. ಸಂತೆಡ್ ಪಲ್ಲಾಯಿಡ್ ಗೋರುದು ಮಾರುನು ಬೂತಾಯಿ, ಚಕ್ರೊಗು (25 ನಯಾ ಪೈಸೆ) ಒಂಜಿ ಪಲ್ಲಾಯಿ ನಿಲ್ಕೆ. ಲೆಕ್ಕ ಮಲ್ತ್ ಏರ್ ಕುಲ್ಲುನು, ರಡ್ಡ್ ರಡ್ಡ್ ನಾಲ್, ನಾಲ್ ನಾಲ್ ಆಜಿ, ಆಜಿ ಆಜಿ.. ಪನೊಂದು. ಒರೊರಾ ರಂಪೊನಿಗ್ ಮಸ್ತ್ ಬೂತಾಯಿ ಬೂರ್ದು, ಮಾರ್ದ್ ಪೋವಂದೆ, ಮರಿಯೊಲೊಡು ನುಂಗಾವರೆಲಾ ಆವಂದೆ, ಕಡೆಕ್ ಕುಟ್ಟೆ ಮಲ್ಪುನು. ಪಂಡ ಲಾರಿಗಟ್ಟಲೆ…
ಗ್ರಾಮೀಣ ಪ್ರದೇಶದ ಮಕ್ಕಳು ಉತ್ತಮ ಶಿಕ್ಷಣ ಪಡೆದು ತಮ್ಮ ಭವಿಷ್ಯವನ್ನು ರೂಪಿಸಬೇಕು. ಈ ಮೂಲಕ ಗ್ರಾಮದ ಅಭಿವೃದ್ದಿ ಆಗಬೇಕು ಎಂದು ಉದ್ಯಮಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಹೇಳಿದರು. ಅವರು ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾರ್ಥಮಿಕ ಶಾಲೆ ಕರ್ನಿರೆ ಇಲ್ಲಿನ ವಿದ್ಯಾರ್ಥಿಗಳಿಗೆ ತಮ್ಮ ಪ್ರಾಯೋಜಕತ್ವದಲ್ಲಿ ಉಚಿತ ಪುಸ್ತಕ ವಿತರಿಸಿ ಮಾತನಾಡಿ, ಕಳೆದ 30 ವರ್ಷಗಳಿಂದ ಇಲ್ಲಿನ ಮಕ್ಕಳಿಗೆ ಪುಸ್ತಕ ಕೊಡುತ್ತಿದ್ದೇನೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ಕೊರತೆ ಆಗಬಾರದು ಎಂಬುದೇ ನನ್ನ ಮೂಲ ಉದ್ದೇಶವಾಗಿದೆ ಎಂದರು. ಕನ್ನಡ ಉಳಿಸಿ ಬೆಳೆಸಿ ಸಂಘಟನೆಯ ದ.ಕ, ಉಡುಪಿ ಜಿಲ್ಲಾಧ್ಯಕ್ಷ ವಾಸುದೇವ ರಾವ್ ಮಾತನಾಡಿ, ಕರ್ನಿರೆ ವಿಶ್ವನಾಥ ಶೆಟ್ಟಿಯವರ ಸಮಾಜಮುಖಿ ಚಿಂತನೆಗಳು ಅಭಿನಂದನೀಯವಾದುದು. ಕಳೆದ ಕೆಲ ವರ್ಷಗಳಿಂದ ಅವರ ಸಾಮಾಜಿಕ ಚಟುವಟಿಕೆಗಳನ್ನು ಕಂಡಿದ್ದೇನೆ. ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದವರಾಗಿದ್ದಾರೆ. ಗ್ರಾಮೀಣ ಪ್ರದೇಶದ ಶಾಲೆ ಉಳಿಸಿ ಬೆಳೆಸಲು ಅವರ ಕೊಡುಗೆ ಅಭಿನಂದನೀಯ ಎಂದರು. ಈ ಸಂದರ್ಭ ಶಾಲಾ ವಿದ್ಯಾರ್ಥಿಗಳಿಗೆ ನೋಟ್ ಬುಕ್…















