Author: admin
ಸೂರಿ ಮಾರ್ನಾಡ್ ಎಂದೇ ಖ್ಯಾತರಾಗಿರುವ ಪಡು ಮಾರ್ನಾಡಿನ ಸುರೇಂದ್ರ ಶೆಟ್ಟಿ ಮಾರ್ನಾಡುರವರು ‘ಕರ್ನಾಟಕ ಸಂಘ ಅಂಧೇರಿ’ ಇವರು ನೀಡುವ ‘ಶ್ರೇಷ್ಠ ಹೊರನಾಡ ಕನ್ನಡಿಗ’ ಪ್ರಶಸ್ತಿಗೆ ಆಯ್ಕೆಯಾಗಿ ಪ್ರಶಸ್ತಿ ಪಡೆದಿದ್ದಾರೆ. ಅಮನೊಟ್ಟು ಮಹಾವೀರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಜೈನ್ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣ ಪಡೆದ ಬಳಿಕ ಮುಂಬಯಿಯತ್ತ ತೆರಳಿದ ಅವರು ಉಳಿದ ವಿದ್ಯಾಭ್ಯಾಸವನ್ನು ಮುಂಬಯಿಯಲ್ಲಿ ಪೂರೈಸಿದರು. ಕಲಾವಿದರಾಗಿ, ನಿರ್ದೇಶಕರಾಗಿ, ಕಲಾ ಪೋಷಕರಾಗಿ ಸಾಕಷ್ಟು ಕಲಾ ಕಾರ್ಯಕ್ರಮಗಳನ್ನು ಸಂಘಟಿಸಿರುವ ಸೂರಿ ಮಾರ್ನಾಡು ಅವರ ಕಲಾ ಸೇವೆಯನ್ನು ಗುರುತಿಸಿ ಅಂಧೇರಿಯ ಕರ್ನಾಟಕ ಸಂಘವು ಈ ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಈ ಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ಪಡು ಮಾರ್ನಾಡು ಮೂಡುಬಿದಿರೆಗೆ ಕೀರ್ತಿ ತಂದಿರುವ ಸೂರಿ ಮಾರ್ನಾಡು ಅವರಿಗೆ ಅವರ ಸನ್ಮಿತ್ರ ರಮೇಶ್ ಶೆಟ್ಟಿ ಪಡು ಮಾರ್ನಾಡು ಅವರು ಅಭಿನಂದನೆ ಸಲ್ಲಿಸಿದ್ದಾರೆ.
ದೇರಳಕಟ್ಟೆ ಸಮೀಪ ಪೆಲತ್ತಡಿಯಲ್ಲಿರುವ ಅನಾಥ ಹೆಂಗಳೆಯರ ಸೇವಾಶ್ರಮದಲ್ಲಿ ಅಲ್ಲಿಯ ನಿವಾಸಿಗಳಿಗೆ ಮನರಂಜನೆ ನೀಡುವ ಸಲುವಾಗಿ ಜೂನ್ 28 ರಂದು ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ಜರಗಿತು. ಪ್ರವೀಣ್ ರೈ ಎಲಿಯಾರ್ ಪದವು ಮತ್ತು ಬಳಗದವರು ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಕಳೆದ 14 ವರ್ಷಗಳಿಂದ ಸಮಾಜ ಸೇವಕರಾದ ಜಿ.ಆರ್ ಶೆಟ್ಟಿ ಮತ್ತು ಗೀತಾ ಆರ್ ಶೆಟ್ಟಿ ದಂಪತಿಗಳು ಬೆಳ್ಮ ಪಂಚಾಯತಿಗೆ ಸೇರಿದ ಪೆಲತ್ತಡಿಯಲ್ಲಿ ನಡೆಸುತ್ತಿರುವ ಮಾತೆಯರ ಸೇವಾಶ್ರಮದಲ್ಲಿ ಸುಮಾರು 70 ರಷ್ಟು ಅನಾಥ ಮಹಿಳೆಯರಿದ್ದಾರೆ. ಅವರಿಗಾಗಿ ವಿವಿಧ ಸೇವಾ ಸಂಸ್ಥೆಗಳು ಆಯ್ದ ಕೆಲವು ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಆಶ್ರಮವಾಸಿಗಳಿಗೆ ಮನಶ್ಯಾಂತಿ ನೀಡುತ್ತಿರುವುದು ವಾಡಿಕೆಯಾಗಿದೆ. ಅದರಂತೆ ಪ್ರಬುದ್ಧ ಕಲಾವಿದರನ್ನು ಕಲೆ ಹಾಕಿ ಮಹಾಭಾರತದೊಳಗಣ ‘ಕರ್ಣಾರ್ಜುನ’ ಪ್ರಸಂಗದ ತಾಳಮದ್ದಳೆಯನ್ನು ಏರ್ಪಡಿಸಲಾಗಿತ್ತು. ಯಕ್ಷಗಾನ ರಂಗದ ಪ್ರಬುದ್ಧ ಕಲಾವಿದರಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ (ಕರ್ಣ), ಗಣೇಶ ಕಾವ ಅಂಡಾಲಬೀಡು (ಅರ್ಜುನ), ವಿದ್ಯಾಧರ ಶೆಟ್ಟಿ ಪೊಸಕುರಲ್ (ಶಲ್ಯ), ಪ್ರವೀಣ್ ರೈ ಎಲಿಯಾರ್ (ಶ್ರೀ ಕೃಷ್ಣ), ಹರಿಶ್ಚಂದ್ರ ಮಾಡೂರು (ಅಶ್ವಸೇನ) ಮತ್ತು…
ಆಳ್ವಾಸ್ ಕಾಲೇಜು (ಸ್ವಾಯತ್ತ) ಹಾಗೂ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ರಂಗಭೂಮಿ, ಸಿನಿಮಾ, ಧಾರಾವಾಹಿ ಮತ್ತು ಕಿರುಚಿತ್ರಗಳಲ್ಲಿ ಅಭಿನಯಿಸಲು ಆಸಕ್ತಿ ಹೊಂದಿರುವವರಿಗಾಗಿ ಆಯೋಜಿಸಲಾದ ಎರಡು ದಿನಗಳ ಅಭಿನಯ ಸೂಕ್ಷ್ಮತೆಗಳ ತರಬೇತಿ ಕಾರ್ಯಾಗಾರಕ್ಕೆ ಆಳ್ವಾಸ್ ರಂಗ ಅಧ್ಯಯನ ಕೇಂದ್ರದಲ್ಲಿ ಚಾಲನೆ ದೊರೆಯಿತು. ಕೇಂದ್ರದ ನಿರ್ದೇಶಕ ಡಾ| ಜೀವನ್ರಾಮ್ ಸುಳ್ಯರವರ ಮಾರ್ಗದರ್ಶನದಲ್ಲಿ ಜುಲೈ 6 ಮತ್ತು 7ರಂದು ನಡೆಯಲಿರುವ ಈ ಕಾರ್ಯಾಗಾರದಲ್ಲಿ ಅಭಿನಯದ ವಿವಿಧ ಆಯಾಮಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಅಭಿನಯವು ಕೇವಲ ರಂಗಭೂಮಿ ಅಥವಾ ಸಿನಿಮಾಕ್ಕೆ ಸೀಮಿತವಾಗಿಲ್ಲ. ಶಿಕ್ಷಕರು, ವೃತ್ತಿಪರರು, ಆಡಳಿತಗಾರರು ಸೇರಿದಂತೆ ಪ್ರತಿಯೊಬ್ಬರ ಬದುಕಿನಲ್ಲೂ ಪರಿಣಾಮಕಾರಿ ಅಭಿವ್ಯಕ್ತಿಗೆ ಅಭಿನಯದ ಕೌಶಲ್ಯ ಅತ್ಯಗತ್ಯ. ಇಂದಿನ ಯುವ ಜನರಲ್ಲಿ ದೇಹದ ಚಲನವಲನವು ಸಹಜತೆಯನ್ನು ಕಳೆದುಕೊಂಡು ಬಿಗಿತ ಹೆಚ್ಚಾಗಿದೆ. ಅದನ್ನು ನಿವಾರಿಸಿ ದೇಹಭಾಷೆ, ಆತ್ಮವಿಶ್ವಾಸ ಹಾಗೂ ಅಭಿವ್ಯಕ್ತಿ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಲು ಇಂತಹ ಕಾರ್ಯಾಗಾರಗಳು ಸಹಕಾರಿಯಾಗುತ್ತವೆ. ಯಾವುದೇ ಕ್ಷೇತ್ರದಲ್ಲಿ ಯಶಸ್ಸು…
ಸಂಸಾರದ ಸೌಖ್ಯ ಬಯಸುವುದರೊಂದಿಗೆ ಪಾರಂಪರಿಕ ಮೌಲ್ಯ, ಆಧುನಿಕತೆಯ ಚಿಂತನೆಗಳನ್ನೊಳಗೊಂಡ ವಿಜಯಲಕ್ಷ್ಮಿ ಪಿ ರೈ ಅವರ ಕವನ ಸಂಕಲನವು ಸಮಾಜದಲ್ಲಿ ಕೌಟುಂಬಿಕ ಜವಬ್ಧಾರಿ ಮತ್ತು ಈ ಕುರಿತು ಅರಿವನ್ನು ವಿಸ್ತರಿಸುವ ಮಹತ್ವದ ಕೃತಿಯಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ ಮೋಹನ ಆಳ್ವ ಅವರು ಹೇಳಿದರು. ಅವರು ವಿಜಯಲಕ್ಷ್ಮೀ ಪ್ರಸಾದ್ ರೈ ಕಳ್ಳಿಮಾರ್ ಅವರು ರಚಿಸಿದ ‘ಭಾವಬಿಂಬ’ ಕವನ ಸಂಕಲನವನ್ನು ಅಡ್ಯಾರ್ ಗಾರ್ಡನ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಸಂಸಾರದಲ್ಲಿ ಹೆಣ್ಣೇ ಕೇಂದ್ರ ಬಿಂದು. ಕುಟುಂಬವನ್ನು ಮುನ್ನಡೆಸುವ ಯಜಮಾನಿಯಾಗಿ ಜೊತೆಗೆ ಸಂಸಾರದ ವಿವಿಧ ಪಾತ್ರಗಳೊಂದಿಗೆ ಕುಟುಂಬವನ್ನು ಸಮಭಾವದಲ್ಲಿ ಸರಿದೂಗಿಸಿ ಮುನ್ನಡೆಸುವಲ್ಲಿ ಆಕೆಯದ್ದು ಪ್ರಥಮ ಮತ್ತು ಪ್ರದಾನ ಪಾತ್ರ. ಕುಟುಂಬ ಸುಖದ ಸಂಪತ್ತಿಗೆಯ ಜೊತೆಗೆ ಅಲ್ಲಿ ನೋವು, ದುಃಖ, ಅವಮಾನಗಳೂ ಸಹಜ ಎಂಬಂತೆ ಆಗುತ್ತಿರುತ್ತದೆ. ಆದರೆ ಕುಟುಂಬ ಆಕ್ರೋಶಗೊಂಡು ಕುಟುಂಬದ ವಿಘಟನೆಗೆ ದಾರಿ ಮಾಡಕೊಡಬಾರದೆಂಬ ಎಚ್ಚರಿಕೆಯ ಸಂದೇಶಗಳು ಈ ಕವನ ಸಂಕಲನದಲ್ಲಿದೆ. ಒಟ್ಟಿನಲ್ಲಿ ವ್ಯಕ್ತಿ, ವ್ಯಕ್ತಿಯಿಂದ ಕುಟುಂಬ, ಕುಟುಂಬದಿಂದ ಸಮಾಜದ…
ಆಲಂಕಾರು ಲಯನ್ಸ್ ಕ್ಲಬ್ ದುರ್ಗಾಂಬಾದ 2026 -27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು. ನೂತನ ಅಧ್ಯಕ್ಷರಾಗಿ ಲಯನ್ ನಿತ್ಯಾನಂದ ಶೆಟ್ಟಿ ಮನವಳಿಕೆ, ಕಾರ್ಯದರ್ಶಿಯಾಗಿ ಲಯನ್ ಸುಂದರ ಗೌಡ ಹಾಗೂ ಕೋಶಾಧಿಕಾರಿಯಾಗಿ ಲಯನ್ ಗಣೇಶ್ ರೈ ಮನವಳಿಕೆ ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಸಾಂಸ್ಕೃತಿಕ ಸಮಿತಿ ಸoಯೋಜಕರಾದ ಶ್ರೀಮತಿ ಸ್ವರೂಪ ಶೆಟ್ಟಿ ಬೆಳ್ಳಿಪ್ಪಾಡಿ ಅನುಸ್ಥಾಪನಾ ಅಧಿಕಾರಿಯಾಗಿ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಪ್ರಮಾಣವಚನ ಬೋಧಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಲಯನ್ಸ್ ಕ್ಲಬ್ ದುರ್ಗಾಂಬಾ ಗ್ರಾಮೀಣ ಭಾಗದಲ್ಲಿ ನಿರಂತರ ಸಮಾಜಮುಖಿ ಸೇವೆ ಸಲ್ಲಿಸುತ್ತಿದ್ದು, ಜಿಲ್ಲೆಯ ಇತರ ಕ್ಲಬ್ಗಳಿಗೆ ಮಾದರಿಯಾಗಿದೆ ಎಂದು ಹೇಳಿದರು. ಲಯನ್ಸ್ ಕ್ಲಬ್ ಕಾವು ಇದರ ಸ್ಥಾಪಕ ಅಧ್ಯಕ್ಷ ಹಾಗೂ ಮಾಜಿ ಪ್ರಾಂತೀಯ ಅಧ್ಯಕ್ಷ, ಜಿಲ್ಲಾ ಸಂಪುಟ ರಾಯಭಾರಿ ಲಯನ್ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಲಯನ್ಸ್ ಕ್ಲಬ್ ಸೇವೆ, ಸಾಂಗತ್ಯ ಮತ್ತು ನಾಯಕತ್ವ ಬೆಳೆಸುವ ಉತ್ತಮ ವೇದಿಕೆಯಾಗಿದ್ದು, ನೂತನ…
ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ : ರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ವಿಭಾಗದ ಉಪ ರಾಷ್ಟ್ರೀಯ ಆಯುಕ್ತರಾಗಿ ವಿವೇಕ್ ಆಳ್ವ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ವಿವೇಕ್ ಆಳ್ವರವರನ್ನು ನವದೆಹಲಿ ಕೇಂದ್ರ ಕಚೇರಿಯ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆಯ ಸಾಂಸ್ಕೃತಿಕ ವಿನಿಮಯ ವಿಭಾಗದ ಉಪ ರಾಷ್ಟ್ರೀಯ ಆಯುಕ್ತರಾಗಿ ನೇಮಕ ಮಾಡಲಾಗಿದೆ. ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಕರ್ನಾಟಕ ರಾಜ್ಯ ಮುಖ್ಯ ಆಯುಕ್ತರಾದ ಡಾ| ಪಿ.ಜಿ.ಆರ್ ಸಿಂಧಿಯಾರವರ ಶಿಫಾರಸಿನ ಮೇರೆಗೆ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನ ಮುಖ್ಯ ರಾಷ್ಟ್ರೀಯ ಆಯುಕ್ತರು ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಡಾ| ಕೆ.ಕೆ ಖಂಡೇಲ್ವಾಲ್ ಇವರನ್ನು ಸಾಂಸ್ಕೃತಿಕ ವಿನಿಮಯ ವಿಭಾಗದ ಉಪ ರಾಷ್ಟ್ರೀಯ ಆಯುಕ್ತರನ್ನಾಗಿ ನೇಮಕಗೊಳಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಈ ನೇಮಕಾತಿಯು ಕರ್ನಾಟಕಕ್ಕೆ ಹಾಗೂ ಕರಾವಳಿ ಭಾಗಕ್ಕೆ ಹೆಮ್ಮೆಯ ವಿಷಯವಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಯುವ ಜನರಲ್ಲಿ ಸಾಂಸ್ಕೃತಿಕ ಸಾಮರಸ್ಯ, ರಾಷ್ಟ್ರೀಯ ಏಕತೆ ಹಾಗೂ ಅಂತರರಾಷ್ಟ್ರೀಯ ಸ್ನೇಹ ಸಂಬಂಧಗಳನ್ನು ಬಲಪಡಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ. ಉಪ ರಾಷ್ಟ್ರೀಯ ಆಯುಕ್ತ (ಸಾಂಸ್ಕೃತಿಕ ವಿನಿಮಯ) ಹುದ್ದೆಯಲ್ಲಿ ವಿವೇಕ್ ಆಳ್ವರು ದೇಶದ ವಿವಿಧ ರಾಜ್ಯಗಳ ನಡುವೆ ಸಾಂಸ್ಕೃತಿಕ ವಿನಿಮಯ…
ಎಲ್ಲರ ಪ್ರೀತಿಗೆ ಪಾತ್ರರಾಗಿ ಸಮಾಜದ ಸಂಘಟನೆಗೆ ಎಲ್ಲರೂ ಒಗ್ಗಟ್ಟಾಗಿ ಹೋಗುವ ನಾಯಕತ್ವವಿರುವ ಇಲ್ಲಿನ ಬಂಟರ ಸಂಘವು ಎಲ್ಲಾ ಬಂಟರ ಸಂಘಕ್ಕೆ ಮಾದರಿ ಎಂದು ಬೆಂಗಳೂರಿನ ಎಂ.ಆರ್.ಜಿ ಗ್ರೂಪ್ ನ ಸಿಎಂಡಿ ಡಾ| ಕೆ. ಪ್ರಕಾಶ್ ಶೆಟ್ಟಿ ಹೇಳಿದರು. ಅವರು ಬಜಪೆಯ ತಾರಿಕಂಬಳದ ಮುಂಡಾರಿನಲ್ಲಿ ಬಂಟರ ಸಂಘ ಬಜಪೆ ವಲಯದ 10 ಕೋಟಿ ರೂಪಾಯಿ ವೆಚ್ಚದ ನೂತನ ಬಂಟರ ಭವನದ ಶಿಲಾನ್ಯಾಸ ಮತ್ತು ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿ.ಕೆ ಗ್ರೂಪ್ ಆಫ್ ಕಂಪನೀಸ್ ನ ಸಿಎಂಡಿ ಕರುಣಾಕರ ಶೆಟ್ಟಿ ಮಧ್ಯಗುತ್ತು ಅವರು ಕಟ್ಟಡದ ನೀಲನಕ್ಷೆ ಅನಾವರಣಗೊಳಿಸಿದರು. ಪುಣೆ ಬಂಟರ ಸಂಘದ ಅಧ್ಯಕ್ಷ ಅಜಿತ್ ಹೆಗ್ಡೆ ಕೆಂಜಾರು ಗುತ್ತು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಗೈದರು. ಯುನಿವರ್ಸಲ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ನ ಛೇರ್ಮನ್ ಉಪೇಂದ್ರ ಶೆಟ್ಟಿ ವಿದ್ಯಾರ್ಥಿ…
ಇವತ್ತಿನ ದಿನ ನನ್ನ ಜೀವನದ ಸೌಭಾಗ್ಯ ದಿನವಾಗಿದೆ. ನನ್ನ ಹಸ್ತಗಳಿಂದ ಪಾವಿತ್ರ್ಯತೆಯ ದೇವಸ್ಥಾನಕ್ಕೆ ಶಿಲಾನ್ಯಾಸ ನಡೆಸಿದ್ದು ನನ್ನ ಪುಣ್ಯ ಎಂದೆಣಿಸಿದ್ದೇನೆ. ಸನಾತನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೈಗೊಪ್ಪಿಸಲು ಇಂತಹ ಪಾವನ ಕ್ಷೇತ್ರಗಳ ಜೀರ್ಣೊದ್ಧಾರದ ಕಾರ್ಯಗಳು ಅಗತ್ಯವಾಗಿವೆ. ನನಗೆ ಇಲ್ಲಿ ಭಗವಂತನೂ, ಭ್ರಮರಾಂಭಿಕೆಯೇ ಕರೆದು ತಂದಂತಿದೆ. ಕಾರಣ ಶ್ರೀ ಕ್ಷೇತ್ರ ಕಟೀಲು ಭೇಟಿ ನೀಡಿ ದರ್ಶನ ಪಡೆದಿದ್ದೇನೆ. ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ. ಧರ್ಮವನ್ನು ಉಳಿಸಲು ಮಠ ಮಂದಿರಗಳಿಂದ ಮಾತ್ರ ಸಾಧ್ಯ. ಆದ್ದರಿಂದ ಈ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂದರ್ಭ ನನ್ನ ತಂದೆಯೂ ಮಹಾರಾಷ್ಟ್ರ ಸರ್ಕಾರದ ಮಾಜಿ ಮುಖ್ಯಮಂತ್ರಿ (ಹಾಲಿ ಉಪಮುಖ್ಯಮಂತ್ರಿ) ಏಕನಾಥ್ ಶಿಂಧೆ ಅವರನ್ನು ಕರೆ ತರುವ ಪ್ರಯತ್ನ ಮಾಡುತ್ತೇನೆ ಎಂದು ಮಹಾರಾಷ್ಟ್ರ ರಾಜ್ಯದ ಕಲ್ಯಾಣ್ ಲೋಕಸಭಾ ಸಂಸದ ಡಾ. ಶ್ರೀಕಾಂತ್ ಏಕನಾಥ ಶಿಂಧೆ ನುಡಿದರು. ಕಳೆದ ಗುರುವಾರ (ಜು.೦೨) ಮಂಗಳೂರು ಮೂಡುಶೆಡ್ಡೆ ಅಲ್ಲಿನ ಶೆಡ್ಡೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ನೂತನ ಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿದ್ದು, ಸಂಸದ…
ತುಳುನಾಡಿನ ಕಾಲಜ್ಞಾನವು ಕೇವಲ ತಿಂಗಳುಗಳ ಲೆಕ್ಕಾಚಾರವಲ್ಲ. ಅದು ಪ್ರಕೃತಿ, ಕೃಷಿ, ಆಹಾರ, ಆರೋಗ್ಯ ಮತ್ತು ಮಾನವ ಜೀವನಶೈಲಿಯನ್ನು ಒಂದೇ ವ್ಯವಸ್ಥೆಯಾಗಿ ನೋಡುವ ಜೀವನದರ್ಶನವಾಗಿದೆ. ಈ ವ್ಯವಸ್ಥೆಯಲ್ಲಿ ಆಟಿ ಮತ್ತು ಸೋಣ ಎರಡು ಪ್ರಮುಖ ಅಧ್ಯಾಯಗಳಾಗಿವೆ. ಒಂದು ದೇಹವನ್ನು ಪ್ರಕೃತಿಯೊಂದಿಗೆ ಹೊಂದಿಸಿಕೊಳ್ಳುವ ಕಾಲವಾದರೆ, ಇನ್ನೊಂದು ದೇಹಕ್ಕೆ ಹೊಸ ಶಕ್ತಿ ಮತ್ತು ಸಮೃದ್ಧಿಯನ್ನು ತುಂಬುವ ಕಾಲವಾಗಿದೆ. ಮಲಯಾಳದಲ್ಲಿ ಇದೇ ತಿಂಗಳನ್ನು ಕರ್ಕಟಕಂ ಮತ್ತು ಚಿಂಗಂ ಎಂದು ಕರೆಯುತ್ತಾರೆ. ತುಳುನಾಡಿನ ಆಟಿ ಮತ್ತು ಕೇರಳದ ಕರ್ಕಟಕಂ ಒಂದೇ ಸೌರ ಮಾಸವಾಗಿದ್ದು, ಎರಡೂ ಪ್ರದೇಶಗಳಲ್ಲಿ ಇದನ್ನು ಋತುಬದಲಾವಣೆಗೆ ಹೊಂದಿಕೊಳ್ಳುವ ಅವಧಿಯಾಗಿ ಪರಿಗಣಿಸಲಾಗಿದೆ. ತುಳುನಾಡಿನಲ್ಲಿ ಆಟಿ ಗಂಜಿ, ಆಟಿ ಕಷಾಯ ಮತ್ತು ಋತುಸಹಜ ಸೊಪ್ಪುಗಳಿಗೆ ಮಹತ್ವವಿದ್ದರೆ, ಕೇರಳದಲ್ಲಿ ಕರ್ಕಟಕ ಗಂಜಿ ಮತ್ತು ಆಯುರ್ವೇದದ ಋತುಚರ್ಯೆ ಬೆಳವಣಿಗೆಯಾಯಿತು. ದಕ್ಷಿಣ ಪಶ್ಚಿಮ ಮಾರುತ ಮಳೆಯ ಸಮಯದಲ್ಲಿ ಪ್ರಕೃತಿಯಲ್ಲಿ ಮಹತ್ತರ ಬದಲಾವಣೆಗಳು ನಡೆಯುತ್ತವೆ. ಇದೇ ಅವಧಿಯಲ್ಲಿ ಖಗೋಳಶಾಸ್ತ್ರದ ಪ್ರಕಾರ ಭೂಮಿಯು ತನ್ನ ಕಕ್ಷೆಯಲ್ಲಿ ಸೂರ್ಯನಿಂದ ಅತ್ಯಂತ ದೂರದ ಸ್ಥಾನವಾದ ಅಪ್ಹೀಲಿಯನ್ (Aphelion) ಸಮೀಪದಲ್ಲಿರುತ್ತದೆ.…
ಮೇ 2026ರಲ್ಲಿ ನಡೆದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಾಣಿಜ್ಯ ವಿಭಾಗದ ಸಿಎ ಫೌಂಡೇಶನ್ ಪರೀಕ್ಷೆಯಲ್ಲಿ ಸುಧೀಕ್ಷಾ ಎಸ್ ಶೆಟ್ಟಿ (290) ಉತ್ತೀರ್ಣರಾಗಿದ್ದಾರೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಸಿಎ ಫೌಂಡೇಶನ್ ನಿಂದ ಸಿಎ ಇಂಟರ್ಮೀಡಿಯೇಟ್ ಹಾಗೂ ಸಿಎ ಫೈನಲ್ವರೆಗೆ ನಿರಂತರ ಮತ್ತು ಸಮಗ್ರ ತರಬೇತಿ ವ್ಯವಸ್ಥೆ ರೂಪಿಸಲಾಗಿದೆ. ದೇಶದ ವಿವಿಧ ಭಾಗಗಳ ಅನುಭವಿ ಹಾಗೂ ಪರಿಣತ ಚಾರ್ಟರ್ಡ್ ಅಕೌಂಟೆಂಟ್ಗಳು ಮತ್ತು ವಿಷಯ ತಜ್ಞರಿಂದ ಗುಣಮಟ್ಟದ ಬೋಧನೆ, ನಿಯಮಿತ ಮೌಲ್ಯಮಾಪನ, ವೈಯಕ್ತಿಕ ಮಾರ್ಗದರ್ಶನ ಹಾಗೂ ಪರಿಕಲ್ಪನಾ ಆಧಾರಿತ ಕಲಿಕೆಗೆ ಆದ್ಯತೆ ನೀಡಲಾಗುತ್ತಿದೆ. ಈ ಶೈಕ್ಷಣಿಕ ಮಾದರಿಯೇ ವಿದ್ಯಾರ್ಥಿಗಳ ನಿರಂತರ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ ಎಂದು ಡಾ. ಎಂ ಮೋಹನ ಆಳ್ವ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪದವಿ ಹಾಗೂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ವಾಣಿಜ್ಯ ವಿಭಾಗದ ಡೀನ್ ಅಭಿನಂದಿಸಿದ್ದಾರೆ.















