Author: admin
ಮಾಜಿ ಶಾಸಕ ರಾಜಕೀಯ, ಧಾರ್ಮಿಕ, ಸಹಕಾರ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಹಿರಿಯ ನಾಯಕ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾದ ಬಸ್ರೂರು ಅಪ್ಪಣ್ಣ ಹೆಗ್ಡೆಯವರು ನಿಧನರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ವಯೋ ಸಹಜ ಕಾಯಿಲೆಯಿಂದ ಅವರು ಕೊನೆಯುಸಿರೆಳೆದರು. 1983- 85 ರ ಅವಧಿಯಲ್ಲಿ ಜನತಾ ಪಕ್ಷದಿಂದ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ ಶಾಸಕರಾಗಿದ್ದ ಅಪ್ಪಣ್ಣ ಹೆಗ್ಡೆ ಅವರು ರಾಜಕೀಯ ಜೀವನದಲ್ಲಿ ಜನಸಾಮಾನ್ಯರ ಸಮಸ್ಯೆಗಳಿಗೆ ಧ್ವನಿಯಾಗಿದ್ದು, ಜನಪ್ರತಿನಿಧಿಯಾಗಿ ಪ್ರಾಮಾಣಿಕ ಸೇವೆ ಸಲ್ಲಿಕೆಗೆ ಹೆಸರುವಾಸಿಯಾಗಿದ್ದರು. ಶಾಸಕರಾಗಿ ಕಾರ್ಯ ನಿರ್ವಹಿಸಿದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದರು. ಧಾರ್ಮಿಕ ಕ್ಷೇತ್ರದಲ್ಲಿಯೂ ಅವರ ಸೇವೆ ಗಣನೀಯವಾಗಿದ್ದು, ಅನೇಕ ದೇವಾಲಯಗಳ ಅಭಿವೃದ್ಧಿ, ಧಾರ್ಮಿಕ ಕಾರ್ಯಕ್ರಮಗಳ ಆಯೋಜನೆ ಹಾಗೂ ಸಂರಕ್ಷಣೆಗೆ ಅವರು ಮುನ್ನಡೆ ನೀಡಿದ್ದರು. ರಾಜಕೀಯ ಹಾಗೂ ನಿಜ ಜೀವನದಲ್ಲಿ ಅಜಾತ ಶತ್ರು ಎನಿಸಿಕೊಂಡಿದ್ದರು. ಸಾಮಾಜಿಕ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದ ಅವರು ತಾಲೂಕು ಕೋ ಅಪರೇಟಿವ್ ಮಾರಾಟ ಸೊಸೈಟಿ ಹಾಗೂ ಭೂ ಅಭಿವೃದ್ಧಿ…
ಬಂಟರ ಯಾನೆ ನಾಡವರ ಮಾತೃ ಸಂಘದ ನಿಕಟಪೂರ್ವ ಗೌರವ ಪ್ರಧಾನ ಕಾರ್ಯದರ್ಶಿ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಕೆನರಾ ಪದವಿ ಪೂರ್ವ ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಅವರ ಕಛೇರಿಯಲ್ಲಿ ಸನ್ಮಾನಿಸಲಾಯಿತು. ಜಿಲ್ಲಾಧ್ಯಕ್ಷರಾದ ಹರೀಶ್ ಸುಲಾಯ ಒಡ್ಡಂಬೆಟ್ಟು, ಮಂಗಳೂರು ತಾಲೂಕು ಅಧ್ಯಕ್ಷರಾದ ಗೋಪಾಲಕೃಷ್ಣ ಶಾಸ್ತ್ರಿ ಮತ್ತು ಕೆನರಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ರಘ ಇಡ್ಕಿದು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.
ಬೆಳ್ತಂಗಡಿ ತಾಲೂಕು ಬಂಟರ ಸಂಘದ ಗೌರವ ಮಾರ್ಗದರ್ಶಕರಾದ ಹೆಸರಾಂತ ಉದ್ಯಮಿ, ಸಮಾಜಸೇವಕ ಬರೋಡ ಶಶಿಧರ ಶೆಟ್ಟಿ ಇವರ ಮಾತೃಶ್ರಿಯವರಾದ ಶ್ರೀಮತಿ ಕಾಶಿ ಶೆಟ್ಟಿಯವರ ಸ್ಮರಣಾರ್ಥ ‘ಕಾಶಿ ಸದನ’ ವಸತಿ ಯೋಜನೆಯ ಸಹಾಯ ಹಸ್ತವನ್ನು ಬೆಳ್ತಂಗಡಿ ತಾಲೂಕು ಬಂಟರ ಸಂಘದ ನೇತೃತ್ವದಲ್ಲಿ ತಾಲೂಕಿನ 9 ಬಂಟರ ವಲಯಗಳ ತಲಾ ಒಂದೊಂದು ಅಶಕ್ತ ಕುಟುಂಬಗಳಿಗೆ ನೀಡುವುದೆಂದು ನಿರ್ಣಯ ಮಾಡಲಾಗಿತ್ತು. ಆ ಪ್ರಯುಕ್ತ ಜನವರಿ 31 ಶನಿವಾರದಂದು ಪೂರ್ವಾಹ್ನ 9.30 ಕ್ಕೆ ನಾರಾವಿ ವಲಯ ಕೊಕ್ರಾಡಿ ಗ್ರಾಮದ ಶ್ರೀಮತಿ ಗಿರಿಜಾ ಶೆಟ್ಟಿ ಇವರ ನಿವೇಶನದ ಭೂಮಿ ಪೂಜೆ ನಡೆಯಿತು. ಇದರ ಶಿಲಾನ್ಯಾಸವನ್ನು ಬರೋಡ ಶಶಿಧರ ಶೆಟ್ಟಿ ಇವರು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಜಯಂತ ಶೆಟ್ಟಿ ಭಂಡಾರಿಗುಡ್ಡೆ, ಉದ್ಯಮಿ ಸುರೇಶ್ ಶೆಟ್ಟಿ ಸೂರ್ಯಶ್ರೀ, ವಿಜಯ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷರಾದ ಜಯಂತ ಶೆಟ್ಟಿ ಕುಂಟಿನಿ, ಎಂ. ಜಯರಾಮ ಭಂಡಾರಿ, ರಘುರಾಮ ಶೆಟ್ಟಿ ಉಜಿರೆ, ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಕೋಶಾಧಿಕಾರಿ…
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ವಿಶ್ವಕರ್ಮ ಸಹಕಾರಿ ಬ್ಯಾಂಕ್ ಉಡುಪಿ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆ ವಿಷ್ಣುಮೂರ್ತಿ ಫ್ರೆಂಡ್ಸ್ (ರಿ) ದೊಡ್ಡಣಗುಡ್ಡೆ ಉಡುಪಿ, ವಿಷ್ಣುಮೂರ್ತಿ ಮಹಿಳಾ ಘಟಕ ದೊಡ್ಡಣಗುಡ್ಡೆ ಇವರ ಮುಂದಾಳತ್ವದಲ್ಲಿ ಸಿದ್ಧ ಕಣ್ಣಿನ ಹನಿ ಕಾರ್ಯಕ್ರಮ ಫೆಬ್ರವರಿ 08 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ನಡೆಯಲಿರುವುದು. ಮಾನವನ ನಿಜವಾದ ಜ್ಞಾನದ ಬಾಗಿಲು ಎಂದರೆ ಅದು ಕಣ್ಣು. ಅದರ ಸಂರಕ್ಷಣೆ ಅತಿ ಮುಖ್ಯ. ಇಂದಿನ ಆಧುನಿಕ ದಿನಮಾನದಲ್ಲಿ ಸಾಮಾಜಿಕ ಜಾಲತಾಣಗಳು, ಹಾಗೆ ಅತಿಯಾದ ಮೊಬೈಲ್ ವೀಕ್ಷಣೆಯಿಂದ ಕಣ್ಣಿಗೆ ಅಪಾರವಾದ ತೊಂದರೆ ಉಂಟಾಗಿದೆ. ಇಂತಹ ಹಲವಾರು ಕಣ್ಣಿನ ದೋಷಗಳ ನಿವಾರಣೆಗೆ ಈ ಪುರಾತನ ಆಯುರ್ವೇದ ಸಿದ್ಧ ಕಣ್ಣಿನ ಹನಿಯ ಕಾರ್ಯಕ್ರಮವು ಅತ್ಯಂತ ಪರಿಣಾಮಕಾರಿ. ಕಣ್ಣಿಗೆ ಹನಿ ಹಾಕುವುದರಿಂದ ಪ್ರಯೋಜನಗಳು : ಕಣ್ಣಿನಲ್ಲಿ ನೀರು ಬರುವುದು ಕಡಿಮೆಯಾಗುತ್ತದೆ. ಕಣ್ಣು ಕೆಂಪಗಾಗುವುದು, ಕಣ್ಣು ಉರಿಯುವುದು ಕಡಿಮೆಯಾಗುತ್ತದೆ. ಕಣ್ಣಿನ ಪೊರೆ ಬರುವ ಹಂತದವರಿಗೆ ಕಡಿಮೆಯಾಗುತ್ತದೆ. ದೃಷ್ಟಿ…
ಬಂಟರ ಯಾನೆ ನಾಡವರ ಮಾತೃ ಸಂಘದ ಮಾರ್ಗದರ್ಶನದಲ್ಲಿ ಬಂಟರ ಸಂಘ ಪುತ್ತೂರು ತಾಲೂಕು ಸಮಿತಿಯ ನೇತೃತ್ವದಲ್ಲಿ ‘ಬಂಟ್ಸ್ ಲೆಜೆಂಡ್ ಕಪ್’ ಫೆಬ್ರವರಿ 7 ಮತ್ತು 8ಕ್ಕೆ ಕೊಂಬೆಟ್ಟಿನಲ್ಲಿರುವ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ಯುವ ಬಂಟರ ವಿಭಾಗದ ಸಾರಥ್ಯದಲ್ಲಿ ‘ಬಂಟ್ಸ್ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾಟವು ಮಹಿಳಾ ಬಂಟರ ವಿಭಾಗ, ವಿದ್ಯಾರ್ಥಿ ಬಂಟರ ವಿಭಾಗದ ಸಹಕಾರದೊಂದಿಗೆ ನಡೆಯಲಿದೆ ಎಂದು ಬಂಟರ ಸಂಘ ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಬೆಳಿಗ್ಗೆ 7.30 ಕ್ಕೆ ನಡೆಯುವ ಪಂದ್ಯಾಟ ಉದ್ಘಾಟನಾ ಸಮಾರಂಭವನ್ನು ಬಂಟರ ಸಂಘದ ನಿರ್ದೇಶಕ ‘ಸಹಕಾರಿ ರತ್ನ’ ದಂಬೆಕ್ಕಾನ ಸದಾಶಿವ ರೈ ಅವರು ಧ್ವಜಾರೋಹಣ ಮಾಡುವ ಮೂಲಕ ನೆರವೇರಿಸಲಿದ್ಧಾರೆ. ಬಂಟ್ವಾಳ ತಾಲೂಕಿನ ವಿಶ್ರಾಂತ ಶಿಕ್ಷಣ ಸಂಯೋಜಕ ಪದ್ಮನಾಭ ಆಳ್ವ ಗುತ್ತಿಮಾರು ಉದ್ಘಾಟಿಸಲಿದ್ದಾರೆ. ಸಂಘದ ನಿರ್ದೇಶಕ ಸುಧೀರ್ ಶೆಟ್ಟಿ ತೆಂಕಿಲ, ಮಾಜಿ ಉಪಾಧ್ಯಕ್ಷ ಜಗಜೀವನ್ದಾಸ್ ರೈ ಚಿಲ್ಮೆತ್ತಾರು, ಎಂ.ಆರ್ ಜಯಕುಮಾರ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ ಗಂಟೆ 1೦.3೦ಕ್ಕೆ…
ಮಂಗಳೂರಿನ ಖ್ಯಾತ ಹೋಮಿಯೋಪಥಿ ವೈದ್ಯ ಹಾಗೂ ಸಮಾಜಮುಖಿ ಆರೋಗ್ಯ ಕಾರ್ಯಕರ್ತರಾದ ಡಾ. ಪ್ರವೀಣ್ ಕುಮಾರ್ ರೈ ಅವರಿಗೆ ಆಯುಷ್ ಹಬ್ಬ – 2026 ರ ಅಂಗವಾಗಿ ಪ್ರತಿಷ್ಠಿತ ‘ಆಯುಷ್ ಯುವಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಈ ಗೌರವ ಸಮಾರಂಭವು ಫೆಬ್ರವರಿ 1 ರಂದು ಮಂಗಳೂರಿನ ಟಿಎಂಎ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಿತು. ಪ್ರಗತಿಪರ ಕೃಷಿಕ ಹಾಗೂ ಸಮಾಜಮುಖಿ ಮುಂದಾಳುವಾಗಿದ್ದ ಕೊಳ್ತಿಗೆ ಗ್ರಾಮದ ದಿವಂಗತ ಪಾಂಬಾರು ಸುಬ್ಬಣ್ಣ ರೈ ಹಾಗೂ ಹೇಮಾವತಿ ಎಸ್. ರೈ ದಂಪತಿಗಳ ಪುತ್ರರಾದ ಡಾ. ಪ್ರವೀಣ್ ಕುಮಾರ್ ರೈ, ‘ಆರೋಗ್ಯಕರ ಜಗತ್ತಿಗಾಗಿ ಹೋಮಿಯೋಪಥಿ’ ಎಂಬ ಧ್ಯೇಯದೊಂದಿಗೆ ಹೋಮಿಯೋಪಥಿ ಚಿಕಿತ್ಸೆಯನ್ನು ಕಟ್ಟ ಕಡೆಯ ಸ್ತರದ ಜನರಿಗೂ ತಲುಪಿಸುವ ಉದ್ದೇಶದಿಂದ ಕಳೆದ ಹದಿನಾರು ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರಿನ ಬೆಂದೂರವೆಲ್ ನ ಡಾ. ರೈ’ಸ್ ಹೋಮಿಯೋಪಥಿ ಸೆಂಟರ್ ನಲ್ಲಿ ಮುಖ್ಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಇವರು, ದೂರದ ಕಾರವಾರದಲ್ಲಿ ಕೂಡ ಶಾಖೆಯನ್ನು ಹೊಂದಿದ್ದು ಹಾಗೂ ತಮ್ಮ ಹುಟ್ಟೂರಲ್ಲಿ ಪುತ್ತೂರಿ…
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಇತಿಹಾಸ ಪ್ರಸಿದ್ಧ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ವರ್ಷಾವಧಿ ಮಹೋತ್ಸವವು ಫೆಬ್ರವರಿ 13 ರಂದು ಧ್ವಜಾರೋಹಣಗೊಂಡು, ಫೆಬ್ರವರಿ 18 ರಂದು ಬ್ರಹ್ಮರಥೋತ್ಸವವು ಊರ ಪರ ಊರ ಭಕ್ತರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಜರಗಲಿದೆ. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಫೆಬ್ರವರಿ 5 ಗುರುವಾರ ಉತ್ಸವ ಬಲಿ ಆರಂಭಗೊಂಡು ಫೆಬ್ರವರಿ 10 ಮಂಗಳವಾರ ಶ್ರೀ ಮಹಾಗಣಪತಿ ಪ್ರತಿಷ್ಠ ವರ್ಧಂತಿ, ಅಥರ್ವ ಶಿರ್ಷಗಣಯಾಗ, ನವಕ ಪ್ರಧಾನ, ಕಳಶಾಭಿಷೇಕ ಜರಗಲಿದೆ. ಫೆಬ್ರವರಿ 11 ಬುಧವಾರ ಬ್ರಹ್ಮಕಲಶ ವರ್ಧಂತಿ, ಮಹಾಚಂಡಿಕಾಯಾಗ, ಪಂಚ ವಿoಶತಿ ಕಲಶಾಭಿಷೇಕ, ರಾತ್ರಿ ಉತ್ಸವ ಬಲಿ ನಡೆಯಲಿದೆ. ಫೆಬ್ರವರಿ 13 ಶುಕ್ರವಾರ ಬೆಳಿಗ್ಗೆ ಅಂಕುರಾರ್ಪಣ ಪೂರ್ವಾಹ್ನ ಗಂಟೆ 11ಕ್ಕೆ ಧ್ವಜಾರೋಹಣಗೊಂಡು ಮಹಾಪೂಜೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ಜರಗುವುದಲ್ಲದೇ ರಾತ್ರಿ ಉತ್ಸವ ದರ್ಶನ ಬಲಿ ಜರಗುವುದು. ಫೆಬ್ರವರಿ 14 ಶನಿವಾರ ಬೆಳಗಿನ ಜಾವ ದೀಪಾರಾಧನಾ ಬಲಿ, ಬೆಳಿಗ್ಗೆ ನವಕ ಪ್ರಧಾನ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ರಾತ್ರಿ ರಜತ ಪಾಲಕಿ ಉತ್ಸವ…
ನಾಗಮಂಡಲ ಎಂಬ ಪೂಜಾ ವಿಧಾನದ ಬಗ್ಗೆ ನನಗೆ ಇನ್ನೂ ಪೂರ್ಣ ವಿಶ್ವಾಸ ಬಂದಿಲ್ಲ. ಯಾಕೋ ಏನೋ ನಾಗ ಪಾತ್ರಿ ಹಾಗೂ ವೈದ್ಯರು (ನಾಗ ಕನ್ನಿಕೆಯಂತೆ) ಪರಸ್ಪರರನ್ನು ಸಾರ್ವಜಿನಿಕವಾಗಿ ಅಪ್ಪಿ ಹಿಡಿಯುವುದೂ ಆರಾಧನೆಯ ಒಂದು ಭಾಗ ಅಂತ ನಂಬಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಅಲ್ಲಿ ವೈದ್ಯರು ಹೇಳುವುದು ಯಾವುದೇ ನಾಗನ ಕುರಿತಾದ ಮಂತ್ರಗಳಲ್ಲ. ಪುರಂದರ ದಾಸರ ಭಜನೆಗಳು. ನಾಗಮಂಡಲಗಳು ಬಹಳ ಹಳೆಯ ಅರಾಧನಾ ಪದ್ದತಿ ಅಲ್ಲ ಅನ್ನುವುದಕ್ಕೆ ಇದೂ ಒಂದು ಸಾಕ್ಷಿ. ನಿಜ ನಾಗರ ಹಾವುಗಳು ಪರಸ್ಪರ ಮೈಥುನ ಸ್ಥಿತಿಯಲ್ಲಿರುವ ದೃಶ್ಯ ಹಳ್ಳಿಗಳಲ್ಲಿ ಕಾಣ ಸಿಗುವುದು ಅಪರೂಪವೇನಲ್ಲ. ಆದರೆ ಅವುಗಳನ್ನು ನೋಡುವುದು ಪಾಪ ಎಂಬುದು ನಮ್ಮ ತುಳುನಾಡಿನ ಜನರ ಬಲವಾದ ನಂಬಿಕೆ. ತಕ್ಷಣ ಅಲ್ಲಿಂದ ದೂರ ಹೋಗುವುದು ನಮ್ಮ ಕ್ರಮ. ಹಾಗಿರುವಾಗ ನಾಗಪಾತ್ರಿಗಳು ಹಾಗೂ ವೈದ್ಯರು ಸಾರ್ವಜನಿಕವಾಗಿ ಪರಸ್ಪರ ಅಪ್ಪಿಕೊಳ್ಳಬಹುದೇ ಎಂಬುದಕ್ಕೆ ಬಲ್ಲವರಿಂದ ಉತ್ತರ ಬಯಸುತ್ತೇನೆ. ಈ ಇಡೀ ಆರಾಧನಾ ಪದ್ದತಿಯನ್ನು ಕುಟುಂಬ ಸಮೇತರಾಗಿ ನೋಡಲು ಅಸಹ್ಯವಾಗುತ್ತದೆ. ಇದು ನಾಗನ ಮೇಲಿನ ಜನಸಾಮಾನ್ಯರ…
ಬ್ರಹ್ಮಾವರ : ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ ಬ್ರಹ್ಮಾವರ. ಇವರ ಸಹಯೋಗದೊಂದಿಗೆ ದ್ವಿತೀಯ ಸೋಪಾನ ಪರೀಕ್ಷಾ ಪಟಲಾಂ ನಾಯಕರ ತರಬೇತಿ ಶಿಬಿರ ಹಾಗೂ ವಿತೇಶ್ ಕಾಂಚನ್ ನಾಯಕತ್ವದ ಪ್ರಾಯೋಜಕತ್ವದಲ್ಲಿ ಉಚಿತ ಯುನಿಟ್ ಕಿಟ್ ವಿತರಣಾ ಕಾರ್ಯಕ್ರಮ ದಿನಾಂಕ ಜನವರಿ ೩೧ ಹಾಗೂ ಫೆಬ್ರವರಿ ೧ ರಂದು ನಡೆಯಿತು. ಭಾರತ್ ಸ್ಕೌಟ್ಸ್ ಮತ್ತು÷ಗೈಡ್ಸ್ನ ಜಿಲ್ಲಾ ಮುಖ್ಯ ಆಯುಕ್ತರಾದ ಇಂದ್ರಾಳಿ ಜಯಕರ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿ ದೀಪ ಬೆಳಗಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಇಂತಹ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ಪಡೆದುಕೊಂಡ ಅನುಭವಗಳನ್ನು ಜೀವನದಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ ಶಿಸ್ತು, ಸಹಬಾಳ್ವೆ, ಪರೋಪಕಾರ ಮುಂತಾದ ಸದ್ಗುಣಗಳನ್ನು ಇಂತಹ ತರಬೇತಿಯಿಂದ ಕಲಿತು ಉತ್ತಮ ಪ್ರಜೆಗಳಾಗಬೇಕು ಎಂದರು. ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಕೆ. ಅಶೋಕ ಭಟ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿತೇಶ್ ಕಾಂಚನ್ರವರು…
ಕೊಡಾಜೆ ಕುಟುಂಬದ ಅತ್ಯಂತ ಕ್ರಿಯಶಾಲಿ ಯುವ ಸದಸ್ಯ, ಹಸನ್ಮುಖಿ, ಹೆಸರಾಂತ ಕ್ಯಾಟರಿಂಗ್ ಸಂಸ್ಥೆ ‘ವೇದ್ ಕಿಚನ್’ ಇದರ ಮಾಲಕ, ಯುವ ಉದ್ಯಮಿ ದೇವಿಪ್ರಸಾದ್ ಶೆಟ್ಟಿಯವರು ಬಜಪೆ ಬಂಟರ ಸಂಘದ ಯುವ ವಿಭಾಗದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದೇವಿಪ್ರಸಾದ್ ಶೆಟ್ಟಿಯವರ ಅವಧಿಯಲ್ಲಿ ಬಜಪೆ ಬಂಟರ ಸಂಘ ಸರ್ವತೋಮುಖ ಬೆಳವಣಿಗೆಯಾಗಲಿ ಎಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.















