Author: admin
ಮಹಾರಾಷ್ಟ್ರದಲ್ಲಿ ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಸಹಿತ 29 ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆಯಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳಾಗಿ ಕಣಕ್ಕಿಳಿದ ಬಂಟ ಅಭ್ಯರ್ಥಿಗಳು ಉತ್ತಮ ಹೋರಾಟ ಮಾಡಿ ಗೆಲುವು ಸಾಧಿಸಿದ್ದಾರೆ. ಕಲ್ಯಾಣ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾದ ಮಲ್ಲೇಶ್ ಶೆಟ್ಟಿ ಹಾಗೂ ಅವರ ಸುಪುತ್ರ ಹರ್ಮೇಶ್ ಮಲ್ಲೇಶ್ ಶೆಟ್ಟಿಯವರು ಶಿಂದೆ ಬಣದ ಶಿವಸೇನೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ಭರ್ಜರಿ ಜಯ ಗಳಿಸಿದ್ದಾರೆ. ಪನ್ವೇಲ್ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಂತೋಷ್ ಜಿ ಶೆಟ್ಟಿ ಸತತ ಐದನೇ ಬಾರಿ ಗೆಲುವು ಸಾಧಿಸುವ ಮೂಲಕ ವಿಕ್ರಮ ಸಾಧಿಸಿದ್ದಾರೆ. ಬಿಎಂಸಿ ಚುನಾವಣೆಯಲ್ಲಿ ಮುಂಬೈಯ ಪ್ರಸಿದ್ಧ ಸಿದ್ಧಿವಿನಾಯಕ ಮಂದಿರದ ಟ್ರಸ್ಟಿಯಾಗಿ ಸಮಾಜ ಸೇವೆಯ ಮೂಲಕ ಜನಾನುರಾಗಿಯಾಗಿರುವ ಇನ್ನಾ ಭಾಸ್ಕರ್ ಶೆಟ್ಟಿ ಅವರು ಶಿವಸೇನೆ ಅಭ್ಯರ್ಥಿಯಾಗಿ ಧಾರಾವಿ ವಾರ್ಡಿನಲ್ಲಿ ಜಯಭೇರಿ ಬಾರಿಸಿದ್ದಾರೆ. ಬಿಎಂಸಿ ವಾರ್ಡ್ ನಂಬರ್ 9ರಲ್ಲಿ ಗೊರಾಯಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಿವಾನಂದ ಶೆಟ್ಟಿ ಚುನಾಯಿತರಾದರೆ, ನವಿ ಮುಂಬೈ ಮಹಾನಗರ ಪಾಲಿಕೆ…
ರೆಡ್ಕ್ರಾಸ್ನಿಂದ ರಾಷ್ಟ್ರೀಯ ಯುವ ದಿನಾಚರಣೆ : ಮಾನವೀಯ ಸೇವೆಗೆ ವಿವೇಕಾನಂದರ ಸಂದೇಶ ಸ್ಫೂರ್ತಿ – ಸಿಎ ಶಾಂತಾರಾಮ ಶೆಟ್ಟಿ
ವಿದ್ಯಾರ್ಥಿಗಳು ಮೋಜಿನ ಆಕರ್ಷಣೆಗಳಿಂದ ವಿಚಲಿತರಾಗದೆ ಭವಿಷ್ಯದಲ್ಲಿ ಜವಾಬ್ದಾರಿಯುತ ಪ್ರಜೆಗಳಾಗಿ ರೂಪುಗೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲೇ ಸೇವೆಗೆ ಸಿಗುವ ಅವಕಾಶಗಳನ್ನು ಬಳಸಿಕೊಳ್ಳಬೇಕು. ಯುವಜನತೆ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸ್ವಾಮಿ ವಿವೇಕಾನಂದರ ಸಂದೇಶ ಸ್ಫೂರ್ತಿಯಾಗಿದೆ ಎಂದು ರೆಡ್ಕ್ರಾಸ್ ದ.ಕ ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು. ಭಾರತೀಯ ರೆಡ್ಕ್ರಾಸ್ ಸೊಸೈಟಿ ಮತ್ತು ಯೂತ್ ರೆಡ್ಕ್ರಾಸ್ ಸೊಸೈಟಿ ದ.ಕ ಜಿಲ್ಲಾ ಘಟಕದ ವತಿಯಿಂದ ಸ್ವಾಮಿ ವಿವೇಕಾನಂದರ 164ನೇ ಜಯಂತಿ ಅಂಗವಾಗಿ ರೆಡ್ಕ್ರಾಸ್ ಶತಮಾನೋತ್ಸವ ಕಟ್ಟಡದ ಪ್ರೇರಣಾ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಯುವ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಂಗಳಾ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುಬ್ರಹ್ಮಣ್ಯ ನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ಯುವ ಸಾಧಕರಾದ ವಿಶ್ವಕಪ್ ವಿಜೇತ ಭಾರತೀಯ ಮಹಿಳಾ ಕಬಡ್ಡಿ ತಂಡದ ಆಟಗಾರ್ತಿ ಧನಲಕ್ಷ್ಮಿಪೂಜಾರಿ, ಭರತನಾಟ್ಯದಲ್ಲಿ ಗೋಲ್ಡನ್ ಬುಕ್ ವಿಶ್ವದಾಖಲೆಯ ವಿದುಷಿ ದೀಕ್ಷಾ ಎಸ್. ಮತ್ತು ರಾಷ್ಟ್ರಪತಿ ರೋವರ್ಸ್ ಅವಾರ್ಡ್ ವಿಜೇತ ಪ್ರೀತೇಶ್ ಇವರುಗಳನ್ನು ಸನ್ಮಾನಿಸಲಾಯಿತು. ಮಂಗಳೂರು ವಿ.ವಿ, ಯೇನೆಪೊಯಾ ಪರಿಗಣಿತ…
ಜೇಸಿಐ ವಲಯದ ಅತ್ಯಂತ ಪ್ರತಿಷ್ಠಿತ ಘಟಕಗಳಲ್ಲಿ ಒಂದಾದ ಜೇಸಿಐ ಗಣೇಶಪುರದ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಪ್ರಧಾನ ಸಮಾರಂಭ ಬೈಕಂಪಾಡಿಯ ಕೈಗಾರಿಕಾ ಭವನದಲ್ಲಿ ಜನವರಿ 11ರಂದು ನಡೆಯಿತು. ಘಟಕದ 11 ನೇಯ ಅಧ್ಯಕ್ಷರಾಗಿ ಚೇಳ್ಯಾರು ಗುತ್ತು ಮನೆತನದ ಖ್ಯಾತ ವಾಗ್ಮಿ, ಸಾಹಿತಿ, ಪ್ರತಿಷ್ಠಿತ ಎಂ.ಆರ್.ಪಿ.ಎಲ್ ಸಂಸ್ಥೆಯ ನಿವೃತ್ತ ಮಹಾ ಪ್ರಬಂಧಕರಾದ ಶ್ರೀಮತಿ ವೀಣಾ ಟಿ ಶೆಟ್ಟಿ ಮತ್ತು ಉದ್ಯಮಿ ತಾರನಾಥ ಶೆಟ್ಟಿ ದಂಪತಿಗಳ ಸುಪುತ್ರ ಜೇ.ಎಫ್.ಎಂ ದೇವಿಚರಣ್ ಟಿ ಶೆಟ್ಟಿ ಅವರು ಅಧಿಕಾರ ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷರಾದ ಜೆ.ಎಫ್.ಎಂ ಅಶ್ವಿನ್ ಶೇಖರವರು ನೂತನ ಅಧ್ಯಕ್ಷ ರಿಗೆ ಪ್ರಮಾಣ ವಚನ ಬೋಧಿಸಿದರು. ಕಾರ್ಯದರ್ಶಿಯಾಗಿ ಜೇಸಿ ಅಶ್ವತ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಜೇಸಿ ರಜತ್ ಶೆಟ್ಟಿ, ಖಜಾಂಚಿಯಾಗಿ ಜೇಸಿ ರಿತೇಶ್, ಮಹಿಳಾ ಜೇಸಿ ಸಂಯೋಜಕರಾಗಿ ಜೇಸಿ ಶುಭ ಶರತ್, ಯುವ ಜೇಸಿ ಸಂಯೋಜಕರಾಗಿ ಜೇಜೇಸಿ ವಿನೀತ್ ಅಧಿಕಾರ ವಹಿಸಿಕೊಂಡರು. ಇದೇ ಸಂದರ್ಭದಲ್ಲಿ ಮೂವರು ಹೊಸ ಜೇಸಿ ಸದಸ್ಯರನ್ನು ವಲಯ ಅಧ್ಯಕ್ಷ ಸಂತೋಷ್ ಶೆಟ್ಟಿಯವರು ಪ್ರಮಾಣವಚನ…
ಜಾಗತಿಕ ಸವಾಲುಗಳಿಗೆ ಉತ್ತರ ನೀಡಲು ಖಾಸಗೀ ಶಿಕ್ಷಣ ಸಂಸ್ಥೆಗಳಿಂದ ಸಾದ್ಯವಾಗಿದೆ. ವಿದ್ಯಾರ್ಥಿಗಳ ಸಾಧನೆಗೆ ಮತ್ತು ಅವರ ಫಲಿತಾಂಶಗಳ ಸುಧಾರಣೆಗೆ ಖಾಸಗೀ ಸಂಸ್ಥೆಗಳ ಪಾತ್ರ ದೊಡ್ಡದು. ಶಿಕ್ಷಣ ಸಂಸ್ಥೆಯೊಳಗೆ ವ್ಯಾಪಾರ ಮನೋಧರ್ಮದ ಬದಲಾಗಿ ಸೇವಾ ಮನೋಭಾವವೇ ಮೂಲವಾಗಬೇಕು. ಅನಗತ್ಯ ಟೀಕೆ ಟಿಪ್ಪಣಿಗಳಿಗೆ ಚಿಂತಿಸದೆ ಫಲಿತಾಂಶದ ಕಡೆಗೆ ದುಡಿಯುವ ಮನಸ್ಸು ನಮ್ಮದಾಗಬೇಕು. ಪ್ರತೀ ಜಿಲ್ಲೆಗಳಲ್ಲೂ ಕುಪ್ಮಾ ಸಂಘಟನೆ ಬಲವಾಗಬೇಕು ಎಂದು ಕುಪ್ಮಾ ರಾಜ್ಯ ಸಮಿತಿಯ ಅಧ್ಯಕ್ಷರಾದ ಮೋಹನ್ ಆಳ್ವ ಉದ್ಘಾಟಿಸಿ, ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮಾರುತಿ ಮಾತನಾಡಿ, ಇಲಾಖೆ ಮತ್ತು ಕುಪ್ಮಾ ಸಂಘಟನೆ ಜೊತೆಗೂಡಿ ಕೆಲಸ ನಿರ್ವಹಿಸಬೇಕು. ಪ್ರತೀ ಮಗುವಿಗೂ ಶಿಕ್ಷಣ ಸಿಗಲು ಖಾಸಗೀ ಸಂಸ್ಥೆಗಳ ಪಾಲು ದೊಡ್ಡದು ಎಂದು ಶುಭ ಹಾರೈಸಿದರು. ಕುಪ್ಮಾ ರಾಜ್ಯ ಸಮಿತಿಯ ಗೌರವಾಧ್ಯಕ್ಷರಾದ ರಾಧಾಕೃಷ್ಣ ಶೆಣೈ ಮಾತನಾಡಿ, ಎಲ್ಲಾ ಖಾಸಗೀ ಸಂಸ್ಥೆಗಳಲ್ಲಿ ಆರೋಗ್ಯಕರವಾದ ಸ್ಪರ್ಧೆಗಳು ಇರಲಿ ಎಂದರು. ಕಾರ್ಯಕ್ರಮದ ಆದ್ಯಕ್ಷತೆಯನ್ನ ವಹಿಸಿದ್ದ ಡಾ. ಪ್ರಶಾಂತ್ ಶೆಟ್ಟಿ ಮಾತನಾಡಿ, ಖಾಸಗೀ…
ಬಂಟ್ವಾಳ ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಬಂಟರ ಭವನದ ಕ್ರೀಡಾಂಗಣದಲ್ಲಿ ಜರುಗಿದ ವಾರ್ಷಿಕ ಕ್ರೀಡಾಕೂಟದಲ್ಲಿ ಮಾಣಿ ವಲಯ ಬಂಟರ ಸಂಘವು ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ಪುರುಷರ ಲಗೋರಿಯಲ್ಲಿ ಪ್ರಥಮ, ಮಹಿಳೆಯರ ಲಗೋರಿಯಲ್ಲಿ ಪ್ರಥಮ, ಪುರುಷರ ವಾಲಿಬಾಲ್ ನಲ್ಲಿ ದ್ವಿತೀಯ, ಪುರುಷದ ಹಗ್ಗ ಜಗ್ಗಾಟದಲ್ಲಿ ದ್ವಿತೀಯ ಸ್ಥಾನ ಹಾಗೂ ವೈಯುಕ್ತಿಕ ವಿಭಾಗದಲ್ಲಿ ಹಲವು ಬಹುಮಾನಗಳನ್ನು ಗಳಿಸುವ ಮೂಲಕ ಸಮಗ್ರ ಪ್ರಶಸ್ತಿಯನ್ನು ಗಳಿಸಿದೆ. ಕಲ್ಲಡ್ಕ ವಲಯ ಬಂಟರ ಸಂಘವು ದ್ವಿತೀಯ ಸ್ಥಾನವನ್ನು ಗಳಿಸಿದೆ. ಮಾಜಿ ಸಚಿವ ಬಿ ರಮಾನಾಥ ರೈ, ಶಾಸಕ ರಾಜೇಶ್ ನಾಯ್ಕ್, ಉದ್ಯಮಿ ಸದಾನಂದ ಭಂಡಾರಿ, ಬಂಟ್ವಾಳ ಬಂಟರ ಸಂಘದ ಯುವ ವಿಭಾಗದ ಸ್ಥಾಪಕ ಅಧ್ಯಕ್ಷ ಹರೀಶ್ ಶೆಟ್ಟಿ ಬಂಟ್ವಾಳ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಣಿ ಸಾಗು ಉಮೇಶ್ ಮಹಾಬಲ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಿದ್ದರು. ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಮಾಜಿ ಅಧ್ಯಕ್ಷರುಗಳಾದ ಕಿರಣ್ ಹೆಗ್ಡೆ ಅನಂತಾಡಿ, ಲೋಕನಾಥ ಶೆಟ್ಟಿ ಬಿಸಿ ರೋಡು, ಚಂದ್ರಹಾಸ…
ಆಳ್ವಾಸ್ ಕಾಲೇಜಿನ ಇಂಗ್ಲೀಷ್ ಮತ್ತು ವಿದೇಶಿ ಭಾಷೆಗಳ ವಿಭಾಗದ ಸಾಹಿತ್ಯಿಕ ಸಂಘ ‘ಮೆಟಾಫೋರಿಯಾ’ದ ಉದ್ಘಾಟನೆ ಹಾಗೂ ವಿಭಾಗದ ಹೊಸ ಪಠ್ಯಪುಸ್ತಕಗಳ ಬಿಡುಗಡೆ ಸಮಾರಂಭ ಕಾಲೇಜಿನ ಆಡಿಯೋ–ವಿಜುವಲ್ ಹಾಲ್ನಲ್ಲಿ ಶುಕ್ರವಾರ ನಡೆಯಿತು. ಸಾಹಿತ್ಯ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಆಳ್ವ ಫಾರ್ಮಸಿಯ ಆಡಳಿತಾಧಿಕಾರಿ ಡಾ. ಗ್ರೀಷ್ಮಾ ಆಳ್ವ, ಇಂತಹ ವೇದಿಕೆ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಒಲವನ್ನು ಉದ್ದೀಪನಗೊಳಿಸಬಲ್ಲದು. ಸಾರ್ವಜನಿಕ ಭಾಷಣ ಕೌಶಲ್ಯದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಆತ್ಮವಿಶ್ವಾಸವು ಹುಟ್ಟಿನಿಂದ ಬರಲು ಸಾಧ್ಯವಿಲ್ಲ. ಅದು ಅಭ್ಯಾಸದಿಂದ ಬೆಳೆಸಿಕೊಳ್ಳಬಹುದಾದ ಗುಣ. ಭಾಷಣದ ವೇಳೆ ಭಯಕ್ಕೆ ಒಳಗಾಗದೆ, ಸರಳ ಹಾಗೂ ಸ್ಪಷ್ಟ ಸಂವಹನಕ್ಕೆ ಒತ್ತು ನೀಡಬೇಕು ಎಂದು ಹೇಳಿದರು. ಭಾಷಣದ ಸಂಧರ್ಭದಲ್ಲಿ ಬಾಡಿ ಲಾಂಗ್ವೇಜ್, ಪೋಶ್ಚರ್, ಉಚ್ಚಾರಣೆ, ಶಬ್ದ ಸ್ಪಷ್ಟತೆ, ಧ್ವನಿಯ ಮೇಲೆ ಹಿಡಿತ ಮತ್ತು ಶ್ರೋತೃಗಳೊಂದಿಗೆ ನೇರ ಸಂವಾದದ ಮಹತ್ವವನ್ನು ವಿವರಿಸಿದರು. ನೀವು ಮಾತನಾಡುವ ವೇಳೆಯಲ್ಲಿ ಜನರು ನಿಮ್ಮ ಮಾತಿಗೆ ಹೇಗೆ ಸ್ಫಂದಿಸುತ್ತಾರೆ ಎಂಬುದು ಮುಖ್ಯ ಎಂದರು. ನಿಧಾನಗತಿಯಲ್ಲಿ ಮಾತನಾಡುವ ಮೂಲಕ ಸಭಿಕರನ್ನು ತಲುಪಲು ಸಾಧ್ಯ…
ಹೇಗೋ ಉಡುಪಿಗೆ ಬಂದೆಯಲ್ಲ ಮಠಕ್ಕೆ ಹೋಗಿ ಬರುವ ಎಂದು ಕಾರನ್ನು ಮಠಕ್ಕೆ ಹೋಗುವ ರಸ್ತೆಗೆ ತಿರುಗಿಸಿದ ಸಂತೋಷ ವುಡ್ ಲ್ಯಾಂಡ್ ಹೊಟೇಲಿನ ಎದುರುಗಡೆ ಬಲಬದಿಯಲ್ಲಿ ಕಾರು ಪಾರ್ಕ್ ಮಾಡಿ ಮುಂದೆ ರಥಬೀದಿಯಲ್ಲಿ ನಡೆಯುತ್ತಾ ಕೃಷ್ಣಮಠದತ್ತ ಹೋದ. ಹೋಗುವ ರಸ್ತೆಯಲ್ಲಿ ಅಕ್ಕ ಪಕ್ಕ ಸಂತೆಯ ಹಾಗೆ ಹೂವು, ಹಣ್ಣು, ತರಕಾರಿ, ಆಟದ ಸಾಮಾನುಗಳು, ಬಳೆ, ಭಜನೆ, ಶ್ಲೋಕದ ಪುಸ್ತಕಗಳು, ದೇವರ ಪೂಜೆಯ ಸಾಮಾನುಗಳು ಇತ್ಯಾದಿ ವಸ್ತುಗಳನ್ನು ಮಾರುವ ಮಾರಾಟಗಾರರು. ದಾರಿಯಲ್ಲಿ ಕುಳಿತು ಬೇಡುವ ಭಿಕ್ಷಕರಿಗೂ ಕಡಿಮೆ ಇರಲಿಲ್ಲ. ಅಮ್ಮ, ಅಣ್ಣ, ಅಕ್ಕ ಎಂದು ಏರು ಸ್ವರದಲ್ಲಿ ಬೇಡುತ್ತಿರುವಾಗ ಯಾರಾದರೂ ದಾನ ಕೊಟ್ಟೆ ಕೊಡಬೇಕು, ಕೊಡುತ್ತಾರೆ ಕೂಡ. ಸಂತೋಷ ಕೂಡ ತನ್ನ ಪ್ಯಾಂಟ್ ಶರ್ಟ್ ಕಿಸೆ ಹುಡುಕಾಡಿದ ಏನಾದರೂ ಚಿಲ್ಲರೆ ಹಣ ಸಿಗುತ್ತದೆಯೋ ಎಂದು. ಬಿಕ್ಷುಕರ ಸಾಲಲ್ಲಿ ಪಕ್ಕನೆ ಕಂಡುಕೊಂಡ ಒಬ್ಬ ವ್ಯಕ್ತಿ. ಆ ಬೋಳು ತಲೆಯ ಆಳವಾದ ದಣಿದ ಕಣ್ಣುಗಳ, ಸುಕ್ಕು ಕಟ್ಟಿದ ಕೋಲು ಮುಖದ, ಅಸ್ತವ್ಯಸ್ತವಾದ ಹರಿದ ಚಿಂದಿ ಧರಿಸಿದ ಸಪೂರ…
ಶ್ರೀ ಕ್ಷೇತ್ರ ಕಾತ್ರಾಜ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶ್ರೀ ಅಯ್ಯಪ್ಪ ಸ್ವಾಮಿ, ಶಿವ ದೇವರ ಹಾಗೂ ಪರಿವಾರ ದೇವರುಗಳ ವಾರ್ಷಿಕ ಉತ್ಸವ, ಮಹಾಪೂಜೆಯು ಸ್ವಸ್ತಿ ಶ್ರೀ ವಿಶ್ವಾವಸುನಾಮ ಸಂವತ್ಸರ ಧನುರ್ಮಾಸ 28, ಜನವರಿ 12 ಸೋಮವಾರದಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ, ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ರಾಘವೇಂದ್ರ ಭಟ್ ರವರ ಸಹಕಾರದೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ವಾರ್ಷಿಕೋತ್ಸವದ ಅಂಗವಾಗಿ ಜನವರಿ 11ರಂದು ರವಿವಾರದಂದು ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಪ್ರಸಾದ ಶುದ್ಧಿ ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಕಲಶಪೂಜೆ, ವಾಸ್ತು ಬಲಿ, ದುರ್ಗಾ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಜನವರಿ 12 ಸೋಮವಾರದಂದು ಬೆಳಿಗ್ಗೆ ಮತ್ತು ಮದ್ಯಾಹ್ನದವರೆಗೆ ಮಹಾಗಣಪತಿ ಹೋಮ, ಕಲಶ ಪೂಜೆ, ನವಗ್ರಹ ಪೂಜೆ, ಅಶ್ಲೇಷಾ ಬಲಿ, ನಾಗದೇವರಿಗೆ ಅಭಿಷೇಕ, ತಂಬಿಲ, ಶ್ರೀ ದುರ್ಗಾ ದೇವಿಗೆ ಕಲಶ ಪೂಜೆ, ದುರ್ಗಾ ಪೂಜೆ, ಶಿವ ರುದ್ರಾಭಿಷೇಕ, ಶಿವಪೂಜೆ ನಡೆಯಿತು.…
ಈ ಸೀಸನ್ ನಲ್ಲಿ ಸ್ಪರ್ಧಿಗಳಿಂದ ಅತೀ ಹೆಚ್ಚು ಅನ್ಯಾಯ ಮತ್ತು ನೋವು ಅನುಭವಿಸಿರುವ ಸ್ಪರ್ದಿ ಎಂದರೆ ಅದು ಪಾಪದ ಹುಡುಗಿ ರಕ್ಷಿತಾ ಶೆಟ್ಟಿ. ಗಿಲ್ಲಿ ಗೆದ್ದರೆ ಅಶ್ವಿನಿ ಅಭಿಮಾನಿಗಳಿಗೆ ನಿರಾಸೆ, ಅಶ್ವಿನಿ ಗೆದ್ದರೆ ಗಿಲ್ಲಿ ಅಭಿಮಾನಿಗಳ ಆಕ್ರೋಶ. ಇದ್ಯಾವುದು ಬೇಡ ವಯಸ್ಸು ಚಿಕ್ಕದಾದರೂ, ಬೌದ್ಧಿಕವಾಗಿ ಮನೆಯಲ್ಲಿ ಎಲ್ಲರಿಗಿಂತ ದೊಡ್ಡವಳೆಂದು, ಚಿಕ್ಕ ವಯಸ್ಸಿನಲ್ಲೇ ಅಲ್ಪ ಆದಾಯದಲ್ಲೇ ಸಮಾಜಸೇವೆ ಮಾಡುತ್ತಿರುವ ಪ್ರಭುದ್ದೆ ರಕ್ಷಿತಾಳನ್ನು ಗೆಲ್ಲಿಸಿದರೆ ಇದು ಬಿಗ್ ಬಾಸ್ ತೆಗೆದುಕೊಳ್ಳಬಹುದಾದ ದಿ ಬೆಸ್ಟ್ ಡಿಸಿಷನ್ ಎಂಬುದು ಬಿಗ್ ಬಾಸ್ ಅನ್ನು ಸೂಕ್ಷ್ಮವಾಗಿ ಗಮನಿಸುವವರ ಅಭಿಪ್ರಾಯ. ಗಿಲ್ಲಿ ಬೇರೆ ಈಗಾಗಲೇ ರಕ್ಷಿತಾಳನ್ನು ಅವರ ವಂಶದ ಕುಡಿ ಎಂದು ಹೇಳಿಕೊಂಡಿದ್ದಾರೆ. ಅಶ್ವಿನಿ ರಕ್ಷಿತಾಳನ್ನು ಟಾರ್ಗೆಟ್ ಮಾಡಿ ಮಾಡಿ ಆ ಹುಡುಗಿಗೆ ಅನ್ನಬಾರದ್ದೆಲ್ಲಾ ಹೇಳಿ ಕ್ಷಮಿಸು ಎಂದು ಮೂರ್ನಾಲ್ಕು ಬಾರಿ ಕೇಳಿದ್ದು ಆಗಿದೆ. ಈಗಿದ್ದಾಗ ಮತ್ತು ಸದ್ಯದ ಅಂಕಿ ಅಂಶಗಳು ಅಂದಾಜಿನ ಪ್ರಕಾರ ರಕ್ಷಿತಾ ವೋಟಿಂಗ್ ನಲ್ಲಿ 2 ನೇ ಸ್ಥಾನದಲ್ಲಿ ಇದ್ದಾರೆ ಮತ್ತು ರಕ್ಷಿತಾಗೆ GEN Z…
ಫೆಬ್ರವರಿ ೭ ಮತ್ತು ೮ ರಂದು ನಡೆಯಲಿರುವ ಸವಣೂರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜಾತ್ರೋತ್ಸವದ ಆಮಂತ್ರಣ ಪತ್ರ ಬಿಡುಗಡೆ ಜನವರಿ ೧೩ರಂದು ನಡೆಯಿತು. ದೇವಾಲಯದ ಪ್ರಧಾನ ಅರ್ಚಕ ಗೋಪಾಲಕೃಷ್ಣ ಬಡೆಕಿಲ್ಲಾಯರು ಪೂಜಾ ವಿಧಿ ವಿಧಾನವನ್ನು ನೆರವೇರಿಸಿದರು. ಅರ್ಚಕ ನಾರಾಯಣ ಬಡೆಕಿಲ್ಲಾಯರವರು ಉಪಸ್ಥಿತರಿದ್ದರು. ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ವೆಂಕಪ್ಪ ಶೆಟ್ಟಿ ಸವಣೂರುಗುತ್ತು ಅಧ್ಯಕ್ಷತೆ ವಹಿಸಿದ್ದರು. ಜಾತ್ರೋತ್ಸವ ಸಮಿತಿ ಅಧ್ಯಕ್ಷ ಸವಣೂರು ಸೀತಾರಾಮ ರೈಯವರು ಮಾತನಾಡಿ, ಜಾತ್ರೋತ್ಸವವನ್ನು ಅದ್ದೂರಿಯಾಗಿ ನಡೆಸಬೇಕು. ಊರ ಭಕ್ತಾಭಿಮಾನಿಗಳು ಎಲ್ಲರೂ ಒಗ್ಗೂಡಿ ಕೆಲಸವನ್ನು ಮಾಡಬೇಕು. ಜಾತ್ರೋತ್ಸವಕ್ಕೆ ಹೆಚ್ಚು ಪ್ರಚಾರವನ್ನು ಮಾಡಬೇಕು. ಪ್ರತೀ ಮನೆ ಮನೆಗೆ ಜಾತ್ರೋತ್ಸವದ ಆಮಂತ್ರಣ ತಲುಪಿಸಬೇಕು. ಕುದ್ಮಾರು, ಸವಣೂರು, ಪಾಲ್ತಾಡಿ, ಪುಣ್ಚಪ್ಪಾಡಿ ವ್ಯಾಪ್ತಿಯ ಜನರು ಹೆಚ್ಚು ಭಾಗವಹಿಸಬೇಕು. ಅಲ್ಲಲ್ಲಿ ಜಾತ್ರೋತ್ಸವಕ್ಕೆ ಬ್ಯಾನರ್ ಹಾಕಬೇಕು. ಇದಕ್ಕೆ ಪೂರ್ಣ ಸಹಕಾರವನ್ನು ಕೊಡುತ್ತೇನೆ ಎಂದು ಹೇಳಿ, ಸವಣೂರು ಜಾತ್ರೋತ್ಸವ ಊರಿನ ಹಬ್ಬವಾಗಬೇಕು ಎಂದು ಹೇಳಿದರು. ಸಮಾರಂಭದಲ್ಲಿ ಸಂಧ್ಯಾ ವಿ ಶೆಟ್ಟಿ ಸವಣೂರುಗುತ್ತು, ಬೆಳಿಯಪ್ಪ ಗೌಡ ಚೌಕಿಮಠ, ಶ್ರೀಧರ್ ಸುಣ್ಣಾಜೆ, ಗಂಗಾಧರ್…















