Author: admin
ಬಂಟರ ಸಮಾಜದ ಉದ್ಯಮಿಗಳ ಒಗ್ಗಟ್ಟಿಗಾಗಿ ಸ್ಥಾಪಿಸಿದಂತಹ ಮುಂಬೈಯ ಪ್ರತಿಷ್ಠಿತ ಸಂಸ್ಥೆ ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಮುಂಬೈಯ ಉದ್ಯಮಿ, ಕೆನರಾ ಟೂರ್ಸ್ ನ ಆಡಳಿತ ನಿರ್ದೇಶಕ ಸುರೇಶ್ ಬಿ ಶೆಟ್ಟಿಯವರ ಆಡಳಿತ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಫೆಬ್ರವರಿ 1ರಂದು ಸಾಕಿನಾಕದ ಪೆನನ್ಸುಲಾ ಗ್ರಾಂಡ್ ನಲ್ಲಿ ಜರಗಿತು. ಅಧ್ಯಕ್ಷ ಎಸ್. ಬಿ ಶೆಟ್ಟಿಯವರು ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ಉಪಾಧ್ಯಕ್ಷರಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ವಸುಧಾ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಶ್ರೀನಾಥ್ ಶೆಟ್ಟಿ, ಗೌರವ ಕಾರ್ಯದರ್ಶಿಯಾಗಿ ಸಿಎ ಸದಾಶಿವ ಶೆಟ್ಟಿ, ಕೋಶಾಧಿಕಾರಿಯಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಸಿಎ ಶ್ರೀನಿವಾಸ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ನಿಶಿತ್ ಶೆಟ್ಟಿ, ಜತೆ ಕೋಶಾಧಿಕಾರಿಯಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಏಳಿಂಜೆ ಅನಿಲ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ತ್ರಿಶಿಕಾ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.…
ಫೆಬ್ರವರಿ 21 ನ್ “ವಿಶ್ವ ಮಾತೃ ಭಾಷೆ”ದ ದಿನ ಆದ್ ಜಗತ್ತೊರ್ಮೆ ಆಚರಿತೊಂದುಲ್ಲೆರ್. ನಮ್ಮ ದೇಶದ ಸುಮಾರ್ ಭಾಷೆ ಬೊಕ್ಕ ಆ ಭಾಷೆಲೆ ಒಟ್ಟಿಗೆ ಉಪ್ಪುನ ಬೇತೆ ಬೇತೆ ಸಂಸ್ಕೃತಿನ್ ಒರಿಪೊಡ್ ಬೊಕ್ಕ ಐಕ್ ಉಮೇದ್ ತಿಕ್ಕೊಡು ಪನ್ಪಿ ದೃಷ್ಠಿಡ್ 1999 ಡು ಸುರುಕಾದ್ ‘ಯುನೆಸ್ಕೊ ಸಂಸ್ಥೆ’ ಈ ದಿನೊನು ಘೋಷಣೆ ಮಲ್ತ್ ನ್ಡ್. ಇಂದೆತ ಮುಂದುವರಿನ ಭಾಗವಾದ್ ವಿಶ್ವಸಂಸ್ಥೆ 2008 ನು ವಿಶ್ವ ಭಾಷೆಲೆನ ವರ್ಷ ಪಂದ್ ಲಾ ಆಚರಿಪೆರೆ ಸುರು ಮಲ್ತ್ ನ್ಡ್. ಅಂಚ 2000 ಇಸವಿರ್ದ್ ಇನಿವರೆಗ್ಲಾ ಪ್ರತೀ ವರ್ಷ ಈ ದಿನೊನು ಪಂಡ ಫೆಬ್ರವರಿ 21 ನ್ “ವಿಶ್ವ ಮಾತೃ ಭಾಷೆ”ದ ದಿನ ಆದ್ ಆಚರಿತೊಂದು ಉಲ್ಲೆರ್. ಇಂದೆತ್ತ ಪಿನ್ನೆಲೆ ತೆರಿವೊಂದು ಪೊಂಡ ಇಂದೆಟ್ಟ್ ಲಾ ಪಾಕಿಸ್ಥಾನದ ವಿಷಯೋಲು ಉಲ್ಲ!. 1952 ಟ್ಟ್ ಆನಿದ ಪಾಕಿಸ್ತಾನದ ಭಾಗ ಆದಿತ್ತಿ ಬಾಂಗ್ಲಾ ದೇಶದ ಕಾಲೇಜ್ ಕಲ್ಪು ಕಲ್ಪಾರ್ತಿಲು ಬಾಂಗ್ಲಾ ಭಾಷೆನ್ ಅಧಿಕೃತ ಭಾಷೆ ಮಲ್ಪೊಡು ಪಂದ್ ಪಾಕಿಸ್ತಾನ…
ಮೊನ್ನೆ ಒಂದು ಹೊಸ ಟ್ರೆಂಡ್ ಬಗ್ಗೆ ಕೇಳಿದೆ. ನಿಜಕ್ಕೂ ಒಂದು ಕ್ಷಣ ಶಾಕ್ ಆದೆ. ಈಗೀಗ ಬಂಟರಲ್ಲಿ ಮದುವೆಗೆ ಹುಡುಗಿ ಸಿಗುತ್ತಿಲ್ಲ. ಒಂದು ಕಾಲದಲ್ಲಿ ವರದಕ್ಷಿಣೆ ಎಂದು ಅತಿಯಾಗಿ ಅಹಂಕಾರದಿಂದ ಬೀಗುತ್ತಿದ್ದ ಸಮುದಾಯದ ಗಂಡುಗಳು ಇಂದು ವಧು-ದಕ್ಷಿಣೆ ಕೊಟ್ಟರೂ ಹೆಣ್ಣು ಸಿಗದೆ ಮದುವೆ ಆಗದೆ ಹಾಗೆ ಉಳಿದುಕೊಂಡಿದ್ದಾರೆ. ಸಾಕಷ್ಟು ಹೆಸರು ಮಾಡಿದ ಒಳ್ಳೊಳ್ಳೆ ಮನೆತನವಿದ್ದರೂ ಕೈಯಲ್ಲಿ ಸಂಪಾದಿಸುವ ಉದ್ಯೋಗವಿದ್ದರೂ ಎತ್ತರ ತೂಕ ಸರಿಯಾಗಿದ್ದರೂ ಜಾತಕ ಕೂಡಿದ್ದರೂ ಇತ್ತೀಚೆಗೆ ಹುಡುಗಿಯರ ಬೇರೆ ಬೇರೆ ಡಿಮ್ಯಾಂಡು ಪೂರೈಸಲಾಗದ ನಮ್ಮ ಈ ಸಮಾಜದ ಅದೆಷ್ಟೋ ಗಂಡುಗಳು ಮದುವೆಯಾಗದೆ ಸೂಕ್ತ ಹುಡುಗಿಗಾಗಿ ವರ್ಷ 40 ದಾಟಿದರೂ ಇನ್ನೂ ಕಾಯುತ್ತಲೇ ಇದ್ದಾರೆ. ಸರಕಾರಿ ಉದ್ಯೋಗ ಬೇಡ, ಡ್ರಿಂಕ್ಸ್ ಬೇಡ, ಸ್ಮೋಕ್ ಬೇಡ, ಊರಲ್ಲಿರುವವ ಬೇಡ, ಬೆಂಗಳೂರೇ ಬೇಕು. ಫಾರಿನ್ ಬೇಡ, ದಪ್ಪ ಬೇಡ, ಕುಳ್ಳ ಬೇಡ, ಕುಡಿಯದೇ ಇರುವವ ಕೂಡಾ ಬೇಡ ಎಂದು ಕಾರಣ ಕೊಡುವ ಹೆಣ್ಣುಗಳು, ಇತ್ತೀಚೆಗೆ ಮನೆಯಲ್ಲಿ ಹಳೆಯ ಗುಜರಿ ಬೇಡ (ಅತ್ತೆ ಮಾವ ಇಲ್ಲದ…
ಫೆಬ್ರವರಿ 18 ರಂದು ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ರಾಷ್ಟ್ರೀಯ ವಕ್ತಾರರಾದ ಸುಧಾಕರ್ ಎಸ್ ಶೆಟ್ಟಿಯವರು ಕಾಫಿ ಬೆಳೆಗಾರರ ಸಮಸ್ಯೆಗಳ ಕುರಿತು ಮಹತ್ವದ ವಿಚಾರಗಳನ್ನು ಮಂಡಿಸಿದರು. ಸರ್ಫೇಸಿ ಕಾಯ್ದೆ ಅಡಿಯಲ್ಲಿ ಕಾಫಿ ತೋಟಗಳನ್ನು ಆನ್ಲೈನ್ ಮೂಲಕ ಹರಾಜು ಹಾಕುತ್ತಿದ್ದರಿಂದ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದರು. ಈ ಸಮಸ್ಯೆಯನ್ನು ಮನಗಂಡು ಮಾಜಿ ಪ್ರಧಾನಿಗಳಾದ ಸನ್ಮಾನ್ಯ ಎಚ್ ಡಿ ದೇವೇಗೌಡರವರು ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯರಾದ ಕೋಟಾ ಶ್ರೀನಿವಾಸ ಪೂಜಾರಿಯವರು ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಪರಿಣಾಮವಾಗಿ ಆನ್ಲೈನ್ ಹರಾಜು ಪ್ರಕ್ರಿಯೆಗೆ ತಾತ್ಕಾಲಿಕ ತಡೆ ದೊರೆತಿದೆ ಎಂದು ಹೇಳಿದರು. ಕೇಂದ್ರ ವಿತ್ತ ಸಚಿವೆ ಆರ್ಬಿಐ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಹರಾಜು ಪ್ರಕ್ರಿಯೆ ತಡೆಯಲು ಸೂಚನೆ ನೀಡಿರುವುದಾಗಿ ತಿಳಿಸಿದ ಅವರು, ಈ ನಿರ್ಧಾರ ಕಾನೂನು ರೂಪದಲ್ಲಿ ಬರುವಂತೆ ಮಾಡಲು ಮತ್ತೊಮ್ಮೆ ಒತ್ತಾಯಿಸಲಾಗುತ್ತದೆ ಎಂದರು. ಇದರಿಂದ ಹಾಸನ, ಕೊಡಗು, ಚಿಕ್ಕಮಗಳೂರು ಭಾಗದ ಕಾಫಿ ಬೆಳೆಗಾರರಿಗೆ…
ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಐದನೇ ಬಾರಿಗೆ ಎಸ್ ತೋಯಜಾಕ್ಷ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಎರಡನೇ ಬಾರಿಗೆ ತನಿಯಪ್ಪ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ಸಂದರ್ಭ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದು, ಈ ಹಿನ್ನಲೆಯಲ್ಲಿ ಚುನಾವಣೆ ನಡೆಯದೆ ಅವಿರೋಧ ಆಯ್ಕೆ ನಡೆಯಿತು. ರಿಟರ್ನಿಂಗ್ ಅಧಿಕಾರಿ ಬಿ. ನಾಗೇಂದ್ರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಪುಷ್ಪಾ ಡಿ ಸಹಕರಿಸಿದರು.
ವಿದ್ಯಾರ್ಥಿ ಜೀವನದಲ್ಲಿ ಶಿಸ್ತುಬದ್ಧವಾದ ನಡೆ-ನಡವಳಿಕೆ ಇಟ್ಟುಕೊಂಡವನು ಶೈಕ್ಷಣಿಕ ಕ್ಷೇತ್ರದಲಿ ಸಾಧಕನಾಗಿ ಹೊರಹೊಮ್ಮಲು ಸಾಧ್ಯ. ಇದಕ್ಕೆ ಪೂರಕವಾದ ವಾತವರಣವು ಜ್ಞಾನಸುಧಾದಲ್ಲಿದೆ. ಡಾ.ಸುಧಾಕರ್ ಶೆಟ್ಟಿಯವರ ಮಾರ್ಗದರ್ಶನ ಹಾಗೂ ಜ್ಞಾನಸುಧಾ ಒಟ್ಟು ಕುಟುಂಬವಾಗಿ ದುಡಿಯುತ್ತಿರುವುದರ ಪ್ರತಿಫಲವೇ ಇಂತಹ ಅತ್ಯುತ್ತಮ ಫಲಿತಾಂಶಗಳಾಗಿವೆ ಎಂದು ಕಾರ್ಕಳ ಜ್ಞಾನಸುಧಾದ ಪೂರ್ವ ವಿದ್ಯಾರ್ಥಿ ಕಾಲೇಜಿನ ಪೂರ್ವ ವಿದ್ಯಾರ್ಥಿ, ಶ್ರೀ ಮನ್ವಿತ್ ಪ್ರಭು ನುಡಿದರು. ಅವರು ಕಾರ್ಕಳ ಜ್ಞಾನಸುಧಾದ ಪ್ರಾಂಗಣದಲ್ಲಿ ಜೆಇಇ ಮೈನ್ (ಬಿ.ಟೆಕ್) – 2026ರ ಮೊದಲ ಹಂತದ ಫಲಿತಾಂಶದಲ್ಲಿ ಕಾಲೇಜಿನ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನ ನೆರವೇರಿಸಿ ಮಾತನಾಡಿದರು. ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಮಾತನಾಡುತ್ತಾ, ಪ್ರಾಮಾಣಿಕ ಪರಿಶ್ರಮದಿಂದ ಪಡೆದ ಫಲಿತಾಂಶಕ್ಕೆ ನ್ಯಾಯವನ್ನು ಕೊಡುವ ಜವಾಬ್ದಾರಿ ನಾವು ಮಾಡಿದ್ದೇವೆ ಎಂಬ ತೃಪ್ತಿ ನಮಗಿದೆ. ಎಷ್ಟೇ ಅತ್ಯುತ್ತಮ ಅಂಕ ಗಳಿಸಿಕೊಂಡರು ತಂದೆ ತಾಯಿ ಗುರುಹಿರಿಯರನ್ನು ಗೌರವಿಸಿಕೊಂಡು ಬಾಳಿದರೇ ನಿಜವಾದ ಸಾಧಕನ ವ್ಯಕ್ತಿತ್ವಕ್ಕೆ ಗೌರವ ಬರಲು ಸಾಧ್ಯ ಎಂದರು, ಸಾಧರಿಗೆ ಸನ್ಮಾನ : ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ…
ಮೀರಾ ಭಯಂದರ್ನ ಸಮಾಜ ಸೇವಕ ಹಾಗೂ ಶಿಕ್ಷಣ ಪ್ರೇಮಿ ಡಾ. ಅರುಣೋದಯ ರೈ ಅವರು ಸ್ಥಾಪಿಸಿರುವ ‘ಅರುಣೋದಯ ಎಜುಕೇಶನ್ ಟ್ರಸ್ಟ್’ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಕೈಕಂಬದ ಸ್ಟಾರ್ ಕಿಡ್ಸ್ ಶಾಲೆಯ ವಾರ್ಷಿಕೋತ್ಸವವು ಫೆಬ್ರವರಿ 4 ರಂದು ಬಹಳ ವಿಜೃಂಭಣೆಯಿಂದ ನಡೆಯಿತು. ವಿದ್ಯಾರ್ಥಿಗಳ ಪ್ರತಿಭೆ, ಶಿಸ್ತು ಮತ್ತು ಸೃಜನಶೀಲತೆಯನ್ನು ಅನಾವರಣಗೊಳಿಸಿದ ಈ ಕಾರ್ಯಕ್ರಮವು ಪೋಷಕರು ಹಾಗೂ ಅತಿಥಿಗಳ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದ ಅವರು, ಮಕ್ಕಳಿಗೆ ಬಾಲ್ಯದಲ್ಲಿಯೇ ನೈತಿಕ ಮೌಲ್ಯಗಳು ಹಾಗೂ ಸಂಸ್ಕಾರಗಳನ್ನು ಕಲಿಸುವುದು ಪಾಲಕರ ಜವಾಬ್ದಾರಿಯಾಗಿದೆ. ಪೋಷಕರ ಸರಿಯಾದ ಮಾರ್ಗದರ್ಶನ ಮತ್ತು ಪ್ರೇರಣೆಯಿಂದ ಮಾತ್ರ ವಿದ್ಯಾರ್ಥಿಗಳು ಮುಂದೆ ದೇಶದ ಉತ್ತಮ ಹಾಗೂ ಸಂಸ್ಕಾರವಂತ ಪ್ರಜೆಗಳಾಗಲು ಸಾಧ್ಯ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಸೂರ್ಯನಾರಾಯಣ ದೇವಸ್ಥಾನದ ಟ್ರಸ್ಟಿ ರವೀಂದ್ರನಾಥ ಆಳ್ವ ಹಾಗೂ ಮಾಜಿ ಸೈನಿಕರಾದ…
ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಇನ್ನಿತರ ಸಮಾಜಪರ ಕಾರ್ಯಗಳಲ್ಲಿ ತೊಡಗಿ ಅವನ್ನು ತಮ್ಮ ಆದ್ಯ ಕರ್ತವ್ಯ ಎಂದುಕೊಂಡು ವರ್ಷಂಪ್ರತಿ ಹಲವು ಯಕ್ಷಗಾನ ತಾಳಮದ್ದಲೆ, ಯಕ್ಷಗಾನ ಬಯಲಾಟ ಹಾಗೂ ಇನ್ನಿತರ ಸಾಂಸ್ಕೃತಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಮುಂದುವರಿಯುತ್ತಿರುವ ಬಾಂಬೆ ಬಂಟ್ಸ್ ಅಸೋಸಿಯೇಷನ್ ಇದರ ಅಧ್ಯಕ್ಷರಾದ ನ್ಯಾಯವಾದಿ ಡಿ.ಕೆ ಶೆಟ್ಟಿಯವರ ಮುಂದಾಳತ್ವದಲ್ಲಿ ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬೈ ಇವರಿಂದ ಶ್ರೀಮದ್ ರಾಮಾಯಾಣದೊಳಗಣ ತಾಳಮದ್ದಳೆ ಸಪ್ತಾಹದ ಪ್ರಯುಕ್ತ ‘ಶ್ರೀರಾಮ ನಿರ್ಯಾಣ’ ಎಂಬ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವು ಫೆಬ್ರವರಿ 14 ರಂದು ಸಾಯಂಕಾಲ ಗಂಟೆ 3.30 ಕ್ಕೆ ಸರಿಯಾಗಿ ಬಂಟ್ಸ್ ಸೆಂಟರ್ ಸೆಕ್ಟರ್ 24, ಜೂಯಿನಗರ ನವಿ ಮುಂಬಯಿ ಇಲ್ಲಿ ಬಹಳ ಸಂಭ್ರಮದಿಂದ ನಡೆಯಿತು. ತವರೂರ ಭಾಗವತರಾದ ವಾಸುದೇವ ಭಟ್ ಎರ್ಮಾಳ್ ಇವರ ಇಂಪಾದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಬಾಂಬೆ ಅಸೋಸಿಯೇಷನ್ ಅಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿ ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಮಾಜಿ ಅಧ್ಯಕ್ಷರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಆನಂತರ ಪ್ರಾಸ್ತಾವಿಕವಾಗಿ ಮಾತನಾಡಿದ…
ಶಾಸಕ ಎಂದರೆ ಕೇವಲ ಚುನಾವಣೆಯಲ್ಲಿ ಗೆದ್ದು ಕುರ್ಚಿಯಲ್ಲಿ ಕುಳಿತುಕೊಳ್ಳುವ ವ್ಯಕ್ತಿ ಅಲ್ಲ. ಜನರ ಬದುಕಿಗೆ ದಿಕ್ಕು ನೀಡುವ ನಾಯಕ. ಮತದಾನ ದಿನದಲ್ಲಿ ಜನರು ಬಟನ್ ಒತ್ತುವುದು ವಿಶ್ವಾಸಕ್ಕೆ. ಆ ವಿಶ್ವಾಸವನ್ನು ಕಾಪಾಡುವುದು ಶಾಸಕನ ಕರ್ತವ್ಯ. ಆದ್ದರಿಂದ ಒಬ್ಬ ಉತ್ತಮ ಶಾಸಕನಿಗೆ ಕೆಲವು ಮುಖ್ಯ ಗುಣಗಳು ಅನಿವಾರ್ಯ. ಮೊದಲನೆಯದು ಜನಸೇವೆ ಮನೋಭಾವ. ಅಧಿಕಾರ ಸಿಕ್ಕ ನಂತರ ಜನರನ್ನು ಮರೆಯುವವನು ನಾಯಕನಾಗಲಾರ. ರಸ್ತೆ ಕುಸಿದಾಗ, ಆಸ್ಪತ್ರೆಯಲ್ಲಿ ಔಷಧಿ ಇಲ್ಲದಾಗ, ನೆರೆ ಬಂದಾಗ ಜನರ ಜೊತೆ ನಿಂತು ಸಮಸ್ಯೆ ಪರಿಹರಿಸುವವನೇ ಜನಪ್ರತಿನಿಧಿ. ಕಚೇರಿಯಲ್ಲಿ ಕುಳಿತು ಫೋಟೋ ಹಾಕುವುದರಿಂದ ಸೇವೆ ಆಗುವುದಿಲ್ಲ. ಎರಡನೆಯದು ತಮ್ಮ ಕ್ಷೇತ್ರದ ಅರಿವು. ಯಾವ ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ, ಯಾವ ಶಾಲೆಗೆ ಶಿಕ್ಷಕರು ಇಲ್ಲ, ಯಾವ ರೈತರಿಗೆ ಕಾಲುವೆ ಬೇಕು ಇವು ಗೊತ್ತಿಲ್ಲದಿದ್ದರೆ ಶಾಸಕನಾಗಿರುವುದಕ್ಕೆ ಅರ್ಥವೇ ಇಲ್ಲ. ಕ್ಷೇತ್ರದ ನಕ್ಷೆ ಮನಸ್ಸಿನಲ್ಲಿ ಇರಬೇಕು. ಮೂರನೆಯದು ಕಾನೂನು ಮತ್ತು ಆಡಳಿತ ಜ್ಞಾನ. ವಿಧಾನಸಭೆ ಕೂಗಾಟ ಮಾಡುವ ಸ್ಥಳವಲ್ಲ; ಜನರ ಹಕ್ಕುಗಳಿಗಾಗಿ ಮಾತಾಡುವ ವೇದಿಕೆ.…
ಉಳ್ಳಾಲದ ಧೀರ ರಾಣಿ ಅಬ್ಬಕ್ಕ ಚೌಟ ಕರಾವಳಿ ಅರಸರಿಂದ ಕಪ್ಪ ಸಂಗ್ರಹಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಶೂರ ನಾಯಕಿಯಾಗಿ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅವರ ಆದರ್ಶಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಲಿ ಎಂದು ರಾಣಿ ಅಬ್ಬಕ್ಕ ವಂಶಸ್ಥೆ ಅನಿತಾ ಸುರೇಂದ್ರ ಕುಮಾರ್ ಹೇಳಿದರು. ತೊಕ್ಕೊಟ್ಟು ಒಳಪೇಟೆಯ ಅಂಬೇಡ್ಕರ್ ರಂಗಮಂದಿರದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ ಉದ್ಘಾಟಿಸಿ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಮಾತನಾಡಿದರು. ಹಾವೇರಿ ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಅಭಿನಂದನಾ ಭಾಷಣ ಮಾಡಿದರು. ಆಶಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭೆ ಪೌರಾಯುಕ್ತ ಸಂತೋಷ್, ರೈತ ಮುಖಂಡ ಕೃಷ್ಣಪ್ಪ ಸಾಲಿಯಾನ್, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಕೋಟೆಕಾರ್ ಪಪಂ ಅಧ್ಯಕ್ಷೆ ದಿವ್ಯಾ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್,…















