Author: admin
ವನಸುಮದೋಲ್ ಎನ್ನ ಜೀವನವು ವಿಕಸಿಸುವಂತೆ ಮನವನನು ಗೊಳಿಸು ಗುರುವೆ’ ಎಂಬ ಸದಾಶಯ ವಾಕ್ಯಕ್ಕೆ ಒಪ್ಪುವ ಜೀವನ ಶೈಲಿಯನ್ನು ಅನುಸರಿಸಿಕೊಂಡು ಕಾನನದ ಸುಮವೊಂದು ಮೌನದಿಂ ಬಿರಿದು ನಿಜ ಸೌರಭವ ಸೂಸಿ ತಾನೆಲೆಯ ಪಿಂತಿರ್ದು ದೀನತೆಯ ತೋರಿ ಅಭಿಮಾನವನು ತೊರೆದು ಕೃತಕೃತ್ಯೆಯನು ಪಡೆವಂತೆ ಬಾಳನ್ನು ರೂಪಿಸಿಕೊಂಡ ಸಜ್ಜನ ಸಂಘಟಕ ಬಲು ಪ್ರತಿಷ್ಠಿತ ಚೇಳ್ಯಾರು ಗುತ್ತು ಮೂಲದ ದಿವಾಕರ ಸಾಮಾನಿ. ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಜನರ ಜೀವನಕ್ಕೆ ಹತ್ತಿರವಾಗುವ ಸಮಾಜಬಂಧು ಸಾಮಾನಿ ಯಾವುದೇ ಪ್ರತಿಫಲಾಪೇಕ್ಷೆ ಅಥವಾ ಕೀರ್ತಿಕಾಂಕ್ಷೆಯನ್ನು ಹೊಂದಿದವರಲ್ಲ. ಬಂಟ ಸಮುದಾಯದ ಮೂಲ ಸಂಘಟನೆಯಾದ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಮೂಲ ಘಟಕದ ಜೊತೆಗೆ ತನ್ನನ್ನು ತೊಡಗಿಸಿಕೊಂಡು ಹಲವು ಮಜಲುಗಳ ಮುಂದಾಳು ಎನಿಸಿ ಸಮುದಾಯಪರ ಚಟುವಟಿಕೆಗಳಿಂದ ಜನಪ್ರಿಯತೆ ಪಡೆದ ಸಾಮಾನಿ ಯಾವುದೆ ಅಧಿಕಾರ ಲಾಲಸೆಯಿಂದ ಕಾರ್ಯ ಎಸಗಿಕೊಂಡು ಬಂದಿಲ್ಲವಾದರೂ ಅವರ ಯೋಗ್ಯತೆಗೆ ಅರ್ಹವಾದ ಉತ್ತಮ ಜವಾಬ್ದಾರಿಯುತ ಸ್ಥಾನಮಾನಗಳು ಲಭ್ಯವಾಗಿವೆ. ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕು ಕಾರ್ಯಕಾರಿ ಸಮಿತಿ ಸಂಚಾಲಕರಾಗಿ ಮಹತ್ವದ…
ಬಂಟ ಸಮಾಜವನ್ನು ಕೇಂದ್ರ ಸರಕಾರವು ಮೀಸಲಾತಿ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಲ್ಲ. ರಾಜ್ಯದ ಮೀಸಲಾತಿ ಪಟ್ಟಿಯಲ್ಲಿ ಬಂಟ ಸಮಾಜವನ್ನು ಪ್ರವರ್ಗ 2 (ಎ) ಯಲ್ಲಿ ಸೇರಲು ಅರ್ಹವಾಗಿದ್ದರೂ ಬಂಟ ಸಮುದಾಯವನ್ನು ಪ್ರವರ್ಗ 3 (ಬಿ) ಯಲ್ಲಿ ಸೇರಿಸಿರುವ ಕಾರಣ ಬಂಟರು ಶಿಕ್ಷಣ, ಉದ್ಯೋಗ, ಸಾಮಾಜಿಕ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಸಿಗುವ ಸೌಲಭ್ಯಗಳಿಂದ ವಂಚಿತವಾಗಿ ಬಂಟ ಸಮುದಾಯಕ್ಕೆ ತುಂಬಾ ಹಿನ್ನಡೆಯಾಗಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೆ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು. ಬಂಟ್ಸ್ ಹಾಸ್ಟೇಲ್ ಬಳಿ ಇರುವ ಶ್ರೀಮತಿ ಎಸ್.ಎಮ್ ಶೆಟ್ಟಿ ಸಭಾಂಗಣದಲ್ಲಿ ನಡೆದ ಬಂಟರ ಯಾನೆ ನಾಡವರ ಮಾತೃ ಸಂಘ (ರಿ) ಇದರ 105 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 2024-25 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಉದ್ಘಾಟಿಸಿದ ಅಜಿತ್ ಕುಮಾರ್ ರೈ ಮಾಲಾಡಿ, ಬಂಟ ಸಮಾಜವನ್ನು ಕೇಂದ್ರ ಸರಕಾರದ ಮೀಸಲಾತಿ ಪಟ್ಟಿಯಲ್ಲಿ ಸೇರಿಸಲು ಹಾಗೂ ರಾಜ್ಯದ ಮೀಸಲಾತಿ…
ಬೆಂಗಳೂರು ಮಾಗಡಿ ಮುಖ್ಯರಸ್ತೆಯ ಹೇರೋಹಳ್ಳಿ ಲೇಕ್ ಎದುರು ಕಳೆದ ಹತ್ತು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಕಿಂಗ್ಸ್ ಕಿಚನ್ ಎಕ್ವಿಪ್ಮೆಂಟ್ಸ್ ಸಂಸ್ಥೆ, ಕಮರ್ಷಿಯಲ್ ಕಿಚನ್ ಉಪಕರಣಗಳ ತಯಾರಿಕೆಯಲ್ಲಿ ತನ್ನದೇ ಆದ ಮುದ್ರೆ ಮೂಡಿಸಿದೆ. ಉಡುಪಿ ಜಿಲ್ಲೆಯ ಬಾರ್ಕೂರು ಮೂಲದ ಉದ್ಯಮಿ ಜಯಪ್ರಕಾಶ್ ಶೆಟ್ಟಿ ಎಲ್ಲರಿಗೂ ಆತ್ಮೀಯವಾಗಿ ‘ಜೇಪಿ ಅಣ್ಣ’ ಎಂದು ಪರಿಚಿತರಾಗಿರುವವರು. ತಮ್ಮ ದೂರದೃಷ್ಟಿ ಮತ್ತು ದುಡಿಮೆಯಿಂದ ಈ ಸಂಸ್ಥೆಯನ್ನು ಇಂದು ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಈ ಸಂಸ್ಥೆ ಹೋಟೆಲ್ ಉದ್ಯಮಕ್ಕೆ ಅಗತ್ಯವಿರುವ ಸಂಪೂರ್ಣ ಅಡುಗೆ ಮನೆಯ ಪರಿಹಾರಗಳನ್ನು ಒದಗಿಸುವ ಸಮಗ್ರ ಕೈಗಾರಿಕಾ ಘಟಕವಾಗಿದೆ. ಸ್ಟೈನ್ ಲೆಸ್ ಸ್ಟೀಲ್ ಕಿಚನ್ ವ್ಯವಸ್ಥೆಗಳು, ಕಮರ್ಷಿಯಲ್ ಸ್ಟೌವ್ಗಳು, ಸ್ಟೋರೇಜ್ ಯೂನಿಟ್ಗಳು ಹಾಗೂ ಗ್ರಾಹಕರ ಅವಶ್ಯಕತೆಗಳಿಗೆ ತಕ್ಕಂತೆ ಕಸ್ಟಮ್ ವಿನ್ಯಾಸದ ಉಪಕರಣಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ನಿಪುಣ ಕಾರ್ಮಿಕರ ತಂಡದ ಸಹಕಾರದಿಂದ ಗುಣಮಟ್ಟ, ದೀರ್ಘಕಾಲಿಕತೆ ಮತ್ತು ಕಾರ್ಯಕ್ಷಮತೆ ಎಂಬ ಮೂರು ಅಂಶಗಳನ್ನು ಕೇಂದ್ರವಾಗಿಟ್ಟುಕೊಂಡು ಉತ್ಪಾದನೆ ನಡೆಯುತ್ತಿದೆ. ಕಿಂಗ್ಸ್ ಕಿಚನ್ ಎಕ್ವಿಪ್ಮೆಂಟ್ಸ್ ಸಂಸ್ಥೆಯ ಸೇವಾ…
ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ ಶೆಟ್ಟಿಯವರು ಮೇ 23 ರಂದು ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರನ್ನು ಬೆಂಗಳೂರಿನ ಅಧಿಕೃತ ನಿವಾಸದಲ್ಲಿ ಭೇಟಿಯಾಗಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಚಟುವಟಿಕೆಗಳು ಮತ್ತು ಸಮಿತಿಯ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಿದರು. ಡಿ.ಕೆ ಶಿವಕುಮಾರ್ ಅವರು ಸಮಿತಿಯ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಸಿದರು.
ಮಂಗಳೂರಲ್ಲೊಂದು ಹೊಸ ಶುದ್ಧ ಸಸ್ಯಹಾರಿ ಊಟ, ತಿಂಡಿ, ತಿನಸುಗಳ ವಿನೂತನ ಪರಿಕಲ್ಪನೆಯ ಪಾರ್ಕ್ಸ್ ಸಮೂಹ ಸಂಸ್ಥೆಯ ‘ಕಾವೇಶ್ವರ ಕೆಫೆ’ ಕದ್ರಿ ಪಾರ್ಕ್ ಬಳಿ ಶುಭಾರಂಭಗೊಂಡಿತು. ಈ ಸಂಧರ್ಭ ಹೈಕೋರ್ಟ್ ವಕೀಲ ಅರುಣ್ ಶ್ಯಾಮ್, ಉದ್ಯಮಿ ರಘು ಎಲ್ ಶೆಟ್ಟಿ, ಸಮಾಜಸೇವಕ ಡಾ| ಅಗರಿ ನವೀನ್ ಭಂಡಾರಿ, ಮಾಜಿ ಮೇಯರ್ ಎಂ ಶಶಿಧರ್ ಹೆಗ್ಡೆ, ಉದ್ಯಮಿ ರೋಹನ್ ಮೊಂತೆರೋ, ಶಕೀಲಾ ಕಾವ, ಸಹಜ್ ರೈ ಬಳಜ್ಜ, ಮಾಜಿ ಮೇಯರ್ ಭಾಸ್ಕರ್ ಉದ್ಘಾಟನಾ ಸಂಧರ್ಭದಲ್ಲಿ ಉಪಸ್ಥಿತರಿದ್ದರು. ರುಚಿಯಾದ, ಶುಚಿಯಾದ, ಬಿಸಿಯಾದ, ಸಿಹಿಯಾದ, ತಂಪಾದ, ಹಿತವಾದ ಆಹಾರ ವಿಹಾರಕ್ಕಾಗಿ ಸೇರುವ ವಿಶಾಲವಾದ ಅಚ್ಚುಕಟ್ಟಾದ ಪರಿಸರ ಇದಾಗಿದ್ದು, ಜನಮಾಸದ ಹಸಿವು ನೀಗುವ ಕಾವೇಶ್ವರದಲಿ ಅನ್ನಪೂರ್ಣೆ ಕೃಪೆಯಾಗಲಿ ಸದಾಪೂರ್ಣೆಯಾಗಿ ನೆಲೆಯಾಗಲಿ ಎಂದು ನಾವೆಲ್ಲರೂ ಶುಭ ಹಾರೈಸೋಣ.
ಕದ್ರಿ ನೃತ್ಯ ವಿದ್ಯಾನಿಲಯ ಚಾರಿಟೇಬಲ್ ಟ್ರಸ್ಟ್ ಇಲ್ಲಿನ ಗುರುಗಳಾದ ಯು.ಕೆ ಪ್ರವೀಣ್ ಅವರ ಶಿಷ್ಯೆ ರಾಶಿ ಆರ್ ಹೆಗ್ಡೆ ಅವರ ಭರತನಾಟ್ಯ ರಂಗ ಪ್ರವೇಶವು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನೆರವೇರಿತು. ಶರವು ಶ್ರೀ ಶರಭೇಶ್ವರ ಮಹಾಗಣಪತಿ ದೇವಸ್ಥಾನದ ಆಡಳಿತ ಮುಖ್ಯಸ್ಥ ಶರವು ರಾಘವೇಂದ್ರ ಶಾಸ್ತ್ರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೂಡುಬಿದರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ ಮೋಹನ ಅಧ್ಯಕ್ಷತೆ ವಹಿಸಿದ್ದರು. ಎ.ಬಿ ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಇದರ ಪ್ರಾಂಶುಪಾಲೆ ಪ್ರೊ. ಡಾ. ಮಿತ್ರ ಹೆಗ್ಡೆ, ಉಡುಪಿ ಜೀವವಿಮಾ ನಿಗಮದ ಹಿರಿಯ ವಿಭಾಗೀಯ ವ್ಯವಸ್ಥಾಪಕ ಗಣಪತಿ ಎನ್ ಭಟ್ ಉಪಸ್ಥಿತರಿದ್ದರು. ಭರತನಾಟ್ಯ ಮಾರ್ಗ ಪದ್ಧತಿಯ ನೃತ್ಯಗಳಾದ ಪುಷ್ಪಾಂಜಲಿ, ಜತಿಸ್ವರ, ವರ್ಣಂ, ದೇವಿ ಸ್ತುತಿ, ಪದಂ ಹಾಗೂ ತಿಲ್ಲಾನಗಳನ್ನು ಸುಮಾರು ಎರಡೂವರೆ ಗಂಟೆಗಳ ಕಾಲ ಪ್ರದರ್ಶಿಸಿದರು. ಪರಾಶಕ್ತಿಯ ವಿವಿಧ ರೂಪಗಳಾದ ಚಂಡಿ, ಚಾಮುಂಡಿ, ಮಹಿಷಮರ್ದಿನಿ, ಭಗಲ, ಚಿನಮಸ್ಥ, ಕಾಳಿ, ಕಮಲ, ಧೂಮಾವತಿ, ಬೈರವಿ ಮುಂತಾದ ದೇವಿಯರ ಹುಟ್ಟು,…
ಬಂಟರ ಯಾನೆ ನಾಡವರ ಮಾತೃ ಸಂಘ(ರಿ) ಇದರ 105 ನೇ ವಾರ್ಷಿಕ ಸರ್ವ ಸದಸ್ಯರ ಸಭೆ ದಿನಾಂಕ ಮೇ 28 ರಂದು ಗುರುವಾರ ಬೆಳಿಗ್ಗೆ 10.30 ಕ್ಕೆ ಬಂಟ್ಸ್ ಹಾಸ್ಟೇಲ್ ಬಳಿ ಇರುವ ಶ್ರೀಮತಿ ಎಸ್.ಎಮ್ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ. 2026 -29 ರ ಸಾಲಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮವೂ ನಡೆಯಲಿದ್ದು, 2024-25 ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕೆ ಅಜಿತ್ ಕುಮಾರ್ ರೈ ಮಾಲಾಡಿ ವಹಿಸಲಿದ್ದಾರೆ.
ಎರು ಆರ್ಯೆ ಆಂಡ ಕೊಟ್ಟೆ ಗುದ್ದುನ ಕರ್ಚಿ ಇಜ್ಜಿ. ಈ ಎರ್ಲು ಪರು ಸರ್ಕೆಗ್ ಬತ್ತಿನದಗ ಕೊಟ್ಟೆಗ್ ಕಲ್ಲ್ ಪಾಡೊಡು, ಇಜ್ಜಿಡ ಐಕ್ಲೆನ ಅಬತಾರ ತಡೆವರೆ ತೀರುಜಿ. ಬೊಕ್ಕ ಐಕ್ಲೆನ ನರನಾಡಿ ಬಂದ್ ಆಪುಂಡುಗೆ, ಕಾರ್ ಮರಕಟ್ಟುಂಡುಗೆ. ಪರು ಸರ್ಕೆ ಪನ್ನಗ ಎಡ್ಮ ಪರು (ಕೂಲಿ) ಕದೆಪುನು (ಅಡಿ ದೀಪಿನಿ, ಬರ್ಪಿನಿ). ನಾಲ್ ವರ್ಸ ಪೂರಾ ಆವೊಡು. ಎರು, ಬೋರಿನ್ ನಾಲ್ ಕಾರ್ಗ್ ಬಲ್ಲ್ ಅರ್ಕಲ್ ಪಾಡ್ದ್ ಮುಟ್ಟ ಒಯಿಪುನಗ, ನಾಲ್ ಕಾರ್ ಒಟ್ಟು ಆನಗ ಕೈಕಂಜಿ ಮಗುರುವ. ಸರೀ ತಪ್ಪು ಅಡಿಕ್ ಪಾಡ್ದ್ ಇಪ್ಪೊಡು ಕಿದೆಟ್. ಬೊಕ್ಕ ಅಡಿಟ್ ಮನೆ ದೀದ್, ಮಿತ್ತ್ಡ್ದ ಕೊಟ್ಟೆ ದೀದ್, ಉದ್ದ ಉರುಂಟುದ ಕಲ್ಲ್ಡ್ ಞಂಕ್ಕ ಞಂಕ್ಕ ಗುದ್ದಿಯೆರ್ ಪೊಸಲ್ಲ್ ದೇವು ಪೂಜಾರ್ಲು, ಎರ್ಲೆನ ಕೊಟ್ಟೆನ್. ಬಾರಿ ಜಾಗ್ರತೆ ಬೋಡು, ಪೆಟ್ಟ್ ತತ್ತ್ದ್ ತಾವುದ ಕೋಡಿಗ್ ಬೂರ್ಂಡ, ಕೈಟೆ ಜೀವ ಬುಡುವ ಎರು ಬೋರಿಲು. ಐತ ಮುದೆಲ್ದ ನರಂಬುನು ಗುದ್ದುದ್ದು ನೀರ್ ಮಲ್ಪುನು. ಗುದ್ದುನಗ…
ಬಡತನವನ್ನು ಅನುಭವಿಸಿದ ತಾನು ಬಡವರ ಸಂಕಷ್ಟಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಅವರ ಮುಖದಲ್ಲಿ ನಗು ಕಾಣುವ ಕುರಿತು ಚಿಂತಿಸುತ್ತಾ ಒಂದಿಲ್ಲೊಂದು ವಿಧದಲ್ಲಿ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ತಾನು ಮಾಡಿದ ದಾನ ಧರ್ಮಗಳ ಬಗ್ಗೆ ಎಲ್ಲಿಯೂ ಹೇಳಿಕೊಳ್ಳದೆ ಆತ್ಮಸಂತೋಷ ಪಟ್ಟುಕೊಳ್ಳುವ ಜಾಯಮಾನ ಡಾ| ದೀಪಕ್ ಶೆಟ್ಟಿ ಬಾರ್ಕೂರು ಹಾಗೂ ಹೆಗ್ಗುಂಜೆ ಅಮರನಾಥ ಶೆಟ್ಟಿಯವರದ್ದು. ಜೀವನದಲ್ಲಿ ಸ್ಪಷ್ಟ ಉದ್ದೇಶ ಮತ್ತು ಅಬೇಧ್ಯ ಲಕ್ಷ್ಯ ಇದ್ದರೆ ಏನನ್ನಾದರೂ ಸಾಧಿಸಬಹುದೆನ್ನುವುದಕ್ಕೆ ಉದಾಹರಣೆಯಾಗಬಲ್ಲ ಮಹಾದಾನಿಗಳು, ಕಲೆ ಸಂಸ್ಕೃತಿ ಪೋಷಕರು, ಸ್ವಜನರ ಯೋಗ ಕ್ಷೇಮಕ್ಕೆ ಬೇಕಾಗಿ ಹಗಲಿರುಳು ಜೀವ ತೇವ ಅಪರೂಪದ ವ್ಯಕ್ತಿತ್ವವಿರುವ ವಿದ್ಯಾವಂತ ಯುವ ಉದ್ಯಮಿಗಳಾದ ದೀಪಕ್ ಶೆಟ್ಟಿ ಹಾಗೂ ಅಮರನಾಥ್ ಶೆಟ್ಟಿಯವರು ಬೆಂಗಳೂರು ಬಂಟರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಗೌರವ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸಜ್ಜಾಗುತ್ತಿದ್ದಾರೆ. ಇಬ್ಬರಿಗೂ ಬೆಂಗಳೂರು ಬಂಟರ ಸಂಘದ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವವಿದೆ. ಓರ್ವ ಜನಪರ ಕಾಳಜಿಯ ಸಮಾಜ ಸೇವಕರಾಗಿ, ಅಪ್ರತಿಮ ಸಂಘಟಕರೂ ಆಗಿ ಜನಾನುರಾಗಿಯಾದ ಅತ್ಯಂತ ಸರಳ ಸ್ವಭಾವದ ವಿನಮ್ರ…
ಬಂಟರ ಯಾನೆ ನಾಡವರ ಮಾತೃ ಸಂಘದ ಮಂಗಳೂರು ತಾಲೂಕಿನ ಮುಂದಿನ ಸಂಚಾಲಕರಾಗಿ ಉದ್ಯಮಿ, ಧಾರ್ಮಿಕ ಮುಖಂಡರಾದ ದಿವಾಕರ ಸಾಮಾನಿ ಚೇಳ್ಯಾರು ಗುತ್ತು ಹಾಗೂ ಸಹ ಸಂಚಾಲಕರಾಗಿ ಯುವ ಉದ್ಯಮಿ ಅಶ್ವತ್ಥಾಮ ಹೆಗ್ಡೆಯವರು ಅವಿರೋಧವಾಗಿ ಆಯ್ಕೆಯಾದರು. ಈ ಸಂಧರ್ಭ ವಸಂತ ಶೆಟ್ಟಿ ಜೆಪ್ಪು, ಸಿಎ ರಾಮಮೋಹನ ರೈ, ಉಲ್ಲಾಸ್ ಶೆಟ್ಟಿ ಪೆರ್ಮುದೆ, ರತ್ನಾಕರ ಶೆಟ್ಟಿ ಎಕ್ಕಾರ್, ಉಮೇಶ್ ರೈ ಮೇಗಿನ ಮನೆ, ಎಂ ಸುಂದರ ಶೆಟ್ಟಿ, ಕೇಶವ ಮಾರ್ಲ, ಅಶೋಕ್ ಶೆಟ್ಟಿ ಮೂಲ್ಕಿ, ಜಗದೀಶ್ ಶೆಟ್ಟಿ ಬಿಜೈ, ಕೃಷ್ಣಪ್ರಸಾದ್ ರೈ, ಮನೀಶ್ ರೈ, ಶೋಭಾ ಹೆಗ್ಡೆ ಮೂಡಬಿದ್ರೆ ಹಾಗೂ ಸಬಿತಾ ಶೆಟ್ಟಿ ಉಪಸ್ಥಿತರಿದ್ದರು.















