Author: admin
ತಾಲೂಕು ಬಂಟರ ಸಂಘದ ಆಶ್ರಯದಲ್ಲಿ ಆಗಸ್ಟ್ 10 ರಂದು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿರುವ ಆಟಿಡೊಂಜಿ ಬಂಟೆರೆ ಸೇರಿಗೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ನಡೆಯಲಿದ್ದು, ಸನ್ಮಾನಿತರ ನಿವಾಸಕ್ಕೆ ಜುಲೈ 25 ರಂದು ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ನೇತೃತ್ವದಲ್ಲಿ ಪದಾಧಿಕಾರಿಗಳು ಭೇಟಿ ನೀಡಿ, ಗೌರವಪೂರ್ವಕವಾಗಿ ಸಮಾರಂಭದ ಆಮಂತ್ರಣ ನೀಡಿ, ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಆಟಿಡೊಂಜಿ ಬಂಟೆರೆ ಸೇರಿಗೆ ಕಾರ್ಯಕ್ರಮದ ಮುಖ್ಯ ಅತಿಥಿ ‘ಸಹಕಾರ ರತ್ನ’ ಸವಣೂರು ಕೆ ಸೀತಾರಾಮ ರೈ, ಸಿರಿ ಕಡಮಜಲು ಕೃಷಿ ಪ್ರಶಸ್ತಿ ಪುರಸ್ಕೃತ ಅರಿಯಡ್ಕ ಕೃಷ್ಣ ರೈ, ರೈಸ್ ಬೌಲ್ ಪುಣ್ಚಪ್ಪಾಡಿ, ಹಿರಿಯ ಉದ್ಯಮಿ ಅರಿಯಡ್ಕ ಚಿಕ್ಕಪ್ಪ ನಾಕ್, ಪುತ್ತೂರು ಬಂಟಸಿರಿ ಪ್ರಶಸ್ತಿ ಪುರಸ್ಕೃತರಾದ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಸಾಧಕ ಸಹಕಾರಿ ರಶ್ಮಿ ಪ್ರಶಸ್ತಿ ಪುರಸ್ಕೃತ ಎನ್.ಜಗನ್ನಾಥ ರೈ ಮಾದೋಡಿ, ಬೂಡಿಯಾರ್ ವೈದ್ಯಕೀಯ ಪ್ರತಿಷ್ಠಿತ ಪ್ರಶಸ್ತಿ ಪುರಸ್ಕೃತ ಸಂತೋಷ್ ಕುಮಾರ್ ರೈ ನಳೀಲು, ದೇಶ ಸೇವಾ ಅಗರಿ ಪ್ರಶಸ್ತಿ…
ಬಂಟರ ಸಂಘ ಜೆಪ್ಪು ಇವರ ಆಶ್ರಯದಲ್ಲಿ ಜುಲೈ 28 ರಂದು ಭಾನುವಾರ ಸಂಜೆ ಘಂಟೆ 3.30 ರಿಂದ ಎಮ್ಮಕೆರೆ ರಮಾಲಕ್ಷ್ಮೀ ನಾರಾಯಣ ಕನ್ವೆನ್ಷನ್ ಹಾಲ್ ನಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಆಹ್ವಾನಿತ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಆಟಿಡೊಂಜಿ ದಿನ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ ಹಾಗೂ ಗೌರವ ಅಭಿನಂದನಾ ಕಾರ್ಯಕ್ರಮ ವಸಂತ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿಯವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಆಷಾಢ ಮಹತ್ವದ ಕುರಿತಂತೆ ಸುರತ್ಕಲ್ ಗೋವಿಂದದಾಸ ಕಾಲೇಜಿನ ಉಪನ್ಯಾಸಕಿ ಶ್ರೀಮತಿ ಅಕ್ಷತಾ ನವೀನ್ ಶೆಟ್ಟಿ ಸಾಂದರ್ಭಿಕ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ರಾಮಕೃಷ್ಣ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷ ಜೈರಾಜ್ ಬಿ ರೈ, ಪುಣೆ ಅಹ್ಮದ್ ನಗರದ ಉದ್ಯಮಿ, 2024 ರ ಸಾಲಿನ ಆರ್ಯಭಟ…
ಈ ಸಾರಿಯ ಮಳೆಗಾಲವಂತೂ ಅಪಾಯ ಮತ್ತು ಆತಂಕ ಎಂಬ ಮಹಾ ಮುನ್ಸೂಚನೆ ಕೊಟ್ಟಿದೆ. ದಿನ ನಿತ್ಯವೂ ನಾನಾ ಕಾರಣಗಳಿಂದ ಸಾವು ನೋವು ಅವಘಡಗಳು ಘಟಿಸುತ್ತಲೇ ಇದೆ. ಮುಖ್ಯವಾಗಿ ಅನಿಸುವುದು ನಗರ ಪ್ರದೇಶದ ಕೆಲ ಅವಾಂತರಗಳನ್ನು ಕಂಡಾಗ. ಈ ಮೊದಲು “ಊರ ಮೇಲೆ ಊರು ಬಿದ್ರೂ ಶ್ಯಾನುಭೋಗರ _ ಹೋಯ್ತು” ಎಂದು ರಸ್ತೆ, ಸೇತುವೆ, ತೋಡು ಬದಿ ಕಟ್ಟುವುದು, ತಡೆಗೋಡೆ ಎಂಬ ಕಾಮಗಾರಿಗಳಲ್ಲಿ “ಯಾರ್ದೋ ದುಡ್ಡು ಎಲ್ಲಮ್ಮನ ಜಾತ್ರೆ” ಎಂದು ನಡೆದದ್ದೇ ನಡೆದದ್ದು. ಅದರ ಪರಿಣಾಮ ಈಗ ಸಾರ್ವಜನಿಕರು ಎದುರಿಸುವಂತಾಗಿದೆ. ಅಲ್ಲ ಈ ಸಲದ ಮಳೆಗೆ ಎಷ್ಟೊಂದು ಅವಾಂತರಗಳು ನಡೆದದ್ದು ಮಾರಾಯ್ರೆ!?. ಛೆ ಛೆ ಕೆಲವೊಂದು ಮಳೆಯಿಂದಾಗಿ ಆದರೆ ಇನ್ನು ಕೆಲವು ಮಳೆಯೊಳಗೆ ಎನ್ನಬಹುದು. ಮುಖ್ಯವಾಗಿ ಎಲ್ಲರ ಗಮನ ಸೆಳೆದ ಅವಘಡ ಎಂದರೆ ಅಂಬಲಪಾಡಿಯ ಶ್ರೀಮತಿ ಅಶ್ವಿನಿ ಮತ್ತು ಶ್ರೀಯುತ ರಮಾನಂದ ಶೆಟ್ಟಿ ದಂಪತಿಗಳ ಮನೆಯಲ್ಲಿ ನಡೆದ ಬೆಂಕಿ ಅವಘಢ. ಇದು ಊರಿನಲ್ಲಿ ಮಾತ್ರವಲ್ಲದೇ ಪರವೂರು, ಪರ ದೇಶದಲ್ಲೇ ಸುದ್ದಿ ಮಾಡಿದ್ದು. ಮಾತ್ರವಲ್ಲದೇ…
ಯುದ್ಧದಲ್ಲಿ ಆರ್ಜುನನ ಬಾಣದ ಶಕ್ತಿಯಿಂದ ಕರ್ಣನ ರಥವು ಬಹಳ ದೂರ ಹಿಂದಕ್ಕೆ ಹೋಗುತ್ತಿತ್ತು. ಆದರೆ ಕರ್ಣನ ಬಾಣ ತಾಗಿದಾಗ ಅರ್ಜುನನ ರಥವು ಕೇವಲ ಏಳು ಅಡಿ ಮಾತ್ರ ಹಿಂದಕ್ಕೆ ಹೋಗುತ್ತಿತ್ತು. ಪ್ರತೀ ಬಾರಿ ಕರ್ಣನ ಬಾಣ ತಾಗಿ ಅರ್ಜುನನ ರಥವು ಏಳು ಅಡಿ ಹಿಂದಕ್ಕೆ ಹೋಗುವಾಗಲೂ ಸಾರಥಿಯಾದ ಶ್ರೀಕೃಷ್ಣನು ಹೇಳುತ್ತಿದ್ದ ಎಷ್ಟು ವೀರ ಶಾಲಿಯಾಗಿದ್ದಾನೆ ಕರ್ಣ. ಅರ್ಜುನನ ಬಾಣ ತಾಗಿ ಕರ್ಣನ ರಥವು ಬಹಳ ದೂರ ಹಿಂದಕ್ಕೆ ಹೋಗುತ್ತಿದ್ದರೂ ಶ್ರೀಕೃಷ್ಣನು ಏನೂ ಹೇಳದೆ ಸುಮ್ಮನೆ ಇರುತ್ತಿದ್ದ, ಹಲವು ಬಾರಿ ಇದು ಪುನರಾವರ್ತನೆಯಾದಾಗ ಅರ್ಜುನ ಅಸ್ವಸ್ಥನಾಗಿ ಕೃಷ್ಣನಿಗೆ ಹೇಳುತ್ತಾನೆ. ಓ ವಾಸುದೇವಾ ತಾವು ಎಂತಹಾ ಪಕ್ಷಬೇಧ ಮಾಡುತ್ತಿದ್ದೀರಾ? ನಮ್ಮ ರಥವು ಕೇವಲ ಏಳು ಅಡಿ ಮಾತ್ರ ಹಿಂದಕ್ಕೆ ಹೋಗುತ್ತಿರುವುದು. ಆದರೆ ನನ್ನ ಬಾಣದ ಶಕ್ತಿಯಿಂದ ಕರ್ಣನ ರಥವು ಬಹಳ ದೂರ ಹಿಂದಕ್ಕೆ ಹೋಗುತ್ತಿದೆ. ಅದನ್ನು ನೋಡಿಯೂ ಕೂಡ ತಾವು ಮಹಾವೀರ ಕರ್ಣ ಎಂದು ಹೊಗುಳುತ್ತಿರುವುದೇಕೆ? ಮಂದಹಾಸವನ್ನು ಬೀರುತ್ತಾ ಕೃಷ್ಣ ಅರ್ಜುನನಿಗೆ ಹೇಳುತ್ತಾನೆ. ಏ…
ಸವಾಲುಗಳು ಜೀವನದ ಅವಿಭಾಜ್ಯ ಅಂಗ. ಸವಾಲುಗಳನ್ನು ಸ್ವೀಕರಿಸುವ ಕಲೆಯನ್ನು ಕಲಿಯುವುದು ಕಷ್ಟ. ಆದರೆ ಅವುಗಳನ್ನು ಸ್ವೀಕರಿಸುತ್ತ ಹಲವು ಸಲ ನಾವು ಯಶಸ್ಸನ್ನು ಕಾಣುವೆವು ಎಂಬ ಭರವಸೆಯಲ್ಲಿ ಮತ್ತು ಕೆಲವು ಸಲ ನಿರೀಕ್ಷಿತ ಯಶಸ್ಸು ದೊರಕದಿದ್ದರೂ ಜೀವನವನ್ನು ಧನಾತ್ಮಕ ಚಿಂತನೆಯಲ್ಲಿ ಸಾಗಿಸಿದರೆ ನಾವು ಉತ್ತಮ ಮಾನವರಾಗುವ ಜೊತೆಗೆ ಜೀವನದಲ್ಲಿ ಯಶಸ್ಸನ್ನು ಕಾಣುವುದರಲ್ಲಿ ಸಂದೇಹವಿಲ್ಲ. ಸವಾಲುಗಳನ್ನು ಎದುರಿಸುವಾಗ ಜೀವನದಲ್ಲಿ ಹಲವಾರು, ಕಷ್ಟ- ನಷ್ಟಗಳು, ಆತಂಕಗಳು ಅನಿರೀಕ್ಷಿತವಾಗಿ ಕಾಣಿಸಿದರೂ ಅವುಗಳು ಸಹಜ. ಆದರೆ ಎಲ್ಲೋ ಓದಿದಂತೆ ‘ಹೊಸ ಸಾಗರಗಳನ್ನು ಅನ್ವೇಷಣೆ ಮಾಡಬೇಕಾದರೆ ದೃಷ್ಟಿಯಲ್ಲಿ ತೀರವನ್ನು, ಕಾಣದೆ ದೂರಕ್ಕೆ ಹೋಗಬೇಕಾದ ಧೈರ್ಯ ನಮ್ಮಲಿರಬೇಕು’ ಇಂಥ ಧೈರ್ಯದಿಂದಲೇ ಮಹಾತ್ಮಾ ಗಾಂಧಿ, ನೆಲ್ಸನ್ ಮಂಡೇಲಾ, ಮಾರ್ಟಿನ್ ಲೂಥರ್ ಕಿಂಗ್ ಇವರ ಜೀವನ ದಂತಕಥೆಗಳಾದವು. ಕ್ರಿಕೆಟಿನ ದಂತಕಥೆ ಸುನಿಲ್ ಗವಾಸ್ಕರ್ ರವರ ಸಾಧನೆಯನ್ನು ಮೆಲುಕು ಹಾಕುವಾಗ ಹಿಂದಿನ ಪ್ರಸಿದ್ಧ ವಾಕ್ಯದ ನೆನಪಾಗುತ್ತದೆ. ‘ಎಲ್ಲಾ ಅಮೋಘ ಸಾಧನೆಗಳು ಒಂದೊಮ್ಮೆ ಅಸಾಧ್ಯವೆಂದು ಪರಿಗಣಿಸಲ್ಪಡುತ್ತಿತ್ತು’ ಡಾನ್ ಬ್ರಾಡ್ಮನ್ ನ ವಿಶ್ವದಾಖಲೆಯನ್ನು ಒಂದು ದಿನ ಯಾರಾದರೂ ಮುಂದುಯುವರೆಂದು…
ಹಿರಿಯರ ಪ್ರಕಾರ ಕಾಲವನ್ನು ವ್ಯರ್ಥವಾಗಿ ಕಳೆಯುವುದು ನಮಗೆ ನಾವು ಮೋಸ ಮಾಡಿಕೊಳ್ಳುವುದೇ ಆಗಿದೆ. ಸಮಯದ ಮಹತ್ವದ ಬಗ್ಗೆ ಬಹಳಷ್ಟು ಕತೆ, ದೃಷ್ಟಾಂತಗಳನ್ನು ನಾವು ಕೇಳಿರುತ್ತೇವೆ. ನಮ್ಮ ಹಿರಿಯರಂತೂ “ಸುಮ್ಮನೆ ಕಾಲ ಕಳೆಯಬೇಡಿ’ ಎಂದು ಹೇಳುತ್ತಲೇ ಇರುತ್ತಾರೆ. ಇದೇ ಸಾಲಿನಲ್ಲಿ ಶಿಕ್ಷಕರು, ಆಫೀಸ್ನ ಬಾಸ್ಗಳೂ ಇರುತ್ತಾರೆ. ಆದರೆ ಸಮಯದ ಪರಿವೆಯಿಲ್ಲದೆ ಕಾಲ ಕಳೆಯುವವರಿಗೆ ಇದೊಂದು ಯಾತನಾಮಯ ಸಲಹೆ ಅನಿಸುತ್ತಿರುತ್ತದೆ. ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸ್ಆ್ಯಪ್ ಇಂದು ಅನುತ್ಪಾದಕತೆಯ ತಲೆಮಾರನ್ನೇ ಸೃಷ್ಟಿಸುತ್ತಿವೆ ಎಂದರೆ ತಪ್ಪಾಗಲಾರದು. ಉತ್ಪಾದಕತೆಗೆ ಬಳಕೆಯಾಗಬೇಕಾದ ತಂತ್ರಜ್ಞಾನವಿಂದು ಚಿಕ್ಕವರು, ದೊಡ್ಡವರು ಎನ್ನದೇ ದೊಡ್ಡ ಪ್ರಮಾಣದ ಜನರನ್ನು ಸೋಮಾರಿಗಳನ್ನಾಗಿ, ಒಂದು ಬಗೆಯ ವ್ಯಸನಗ್ರಸ್ಥರನ್ನಾಗಿ ಮಾಡಿದೆ. ಪರಿಣಾಮ, ಸಮಯವನ್ನು ವ್ಯರ್ಥವಾಗಿ ಕಳೆಯುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಸಮಯದ ಮಹತ್ವವನ್ನು ನಾವೆಲ್ಲ ಅರ್ಥ ಮಾಡಿಕೊಳ್ಳದ ಹೊರತು ಒಳಿತಿನ ಭವಿಷ್ಯ ನಮಗೆ ಸಿಗಲಾರದು. ಏನೇ ಕೆಲಸ, ಉತ್ಪನ್ನ ಮಾಡಬೇಕೆಂದರೂ ನಾವು ಎಲ್ಲದರ ಬಗ್ಗೆ ಯೋಚಿಸುತ್ತೇವೆ. ಆದರೆ ಅದನ್ನು ಕಾರ್ಯರೂಪಕ್ಕೆ ತರಲು ಎಷ್ಟು ಸಮಯ ಬೇಕು ಎಂದು ಯೋಚಿಸುವುದೇ ಅಪರೂಪ.…
ಕರ್ನಾಟಕ ಸಂಘ ಕತಾರ್ನ ನೇತೃತ್ವದಲ್ಲಿ 10ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ದೋಹಾದ ಹ್ಯಾಮಿಲ್ಟನ್ ಶಾಲಾ ಆವರಣದಲ್ಲಿ ಜೂ.22ರಂದು ಆಚರಿಸಲಾಯಿತು. ಸಂಘದ ಖಜಾಂಚಿಗಳಾದ ಪ್ರದೀಪ ಅವರು ಪ್ರಾರಂಭಿಕ ನುಡಿಗಳೊಂದಿಗೆ ಪ್ರಧಾನ ಕಾರ್ಯದರ್ಶಿಗಳಾದ ಕುಮಾರಸ್ವಾಮಿಯವರನ್ನು ಕಾರ್ಯಕ್ರಮ ನಿರ್ವಹಿಸಲು ಆಹ್ವಾನಿಸಿದರು. ಅಧ್ಯಕ್ಷರಾದ ರವಿ ಶೆಟ್ಟಿಯವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಸ್ವಾಮಿ ವಿವೇಕಾನಂದರ ಮಾತಿನಂತೆ ನಿರಂತರ ಅಭ್ಯಾಸದಿಂದ ಯೋಗ ಪ್ರಾಪ್ತಿ ಹಾಗೂ ಸಾಮಾಜಿಕ ಸಾಮರಸ್ಯ, ಸುಖಮಯ ಜೀವನಕ್ಕೆ ಆಗುವ ಪ್ರಯೋಜನಗಳ ಹಾಗೂ ಯೋಗದ ಮಹತ್ವನ್ನು ತಿಳಿಸಿದರು. ಅಧ್ಯಕ್ಷರು, ಸಲಹಾ ಸಮಿತಿ ಸದಸ್ಯರು, ಹಿರಿಯರು, ಕರ್ನಾಟಕ ಮೂಲದ ಸೋದರ ಸಂಘಗಳ ಅಧ್ಯಕ್ಷರೆಲ್ಲ ಜ್ಯೋತಿ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಘದ ಮಾಜಿ ಆಡಳಿತ ಮಂಡಳಿ ಸದಸ್ಯರು ಹಾಗೂ ಯೋಗ ತರಬೇತುದಾರರಾದ ಕಿಶೋರ್ ವಿ. ಅವರ ಮುಂದಾಳತ್ವದಲ್ಲಿ ಸುಮಾರು 100ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದ ಸಂಘದ ಸದಸ್ಯರು ಹಾಗೂ ಅವರುಗಳ ಜತೆ ಆಗಮಿಸಿದ ಅನಿವಾಸಿ ಕನ್ನಡಿಗರು ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡರು. ಯೋಗಾಭ್ಯಾಸದ ಬಳಿಕ ಶ್ವೇತ ದರೋಕರ್ ಮತ್ತು ತಂಡದವರು ಆಧುನಿಕ ಯೋಗ…
ಆಳ್ವಾಸ್ನ ಐವರು ಹಿರಿಯ ವಿದ್ಯಾರ್ಥಿಗಳು ಪ್ಯಾರಿಸ್ ಅಂಗಳದಲ್ಲಿ ಭಾರತದ ಒಲಿಪಿಂಕ್ಸ್ ತಂಡವನ್ನು ಪ್ರತಿನಿಧಿಸಲಿರುವ ಕ್ರೀಡಾಪಟುಗಳು’
ಮೂಡುಬಿದಿರೆ: ಫ್ರಾನ್ಸ್ ರಾಜಧಾನಿ ಪ್ಯಾರಿಸ್ನಲ್ಲಿ ಜುಲೈ ೨೬ರಿಂದ ಆರಂಭವಾಗಲಿರುವ ಒಲಿಂಪಿಕ್ಸ್ ಗೇಮ್ಸ್ಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ದತ್ತು ಶಿಕ್ಷಣ ಯೋಜನೆಯಲ್ಲಿ ಶಿಕ್ಷಣ ಮುಗಿಸಿರುವ ಐವರು ಹಿರಿಯ ವಿದ್ಯಾರ್ಥಿಗಳು ನಮ್ಮ ದೇಶವನ್ನೂ ಪ್ರತಿನಿಧಿಸಲಿದ್ದಾರೆ. ಇದರೊಂದಿಗೆ ಈ ವರೆಗೆ ಒಟ್ಟು ೧೧ ಕ್ರೀಡಾಪಟುಗಳು ವಿವಿಧ ಒಲಿಂಪಿಕ್ಸ್ ಗೇಮ್ಸ್ನಲ್ಲಿ ಭಾಗವಹಿಸಿದ ಕೀರ್ತಿ ಆಳ್ವಾಸ್ ಸಂಸ್ಥೆಗೆ ಸಲ್ಲುತ್ತದೆ. ಇದು ಕರ್ನಾಟಕ ರಾಜ್ಯದಿಂದ ಒಂದು ಸಂಸ್ಥೆಯಿಂದ ಅತೀ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ ಹಿರಿಮೆಗೆ ಆಳ್ವಾಸ್ ಪಾತ್ರವಾಗುತ್ತಿದೆ. ಈ ಬಾರಿಯ ಒಲಿಂಪಿಕ್ಸ್ ಗೇಮ್ನಲ್ಲಿ ೪*೪೦೦ ರಿಲೇಯ ಭಾರತ ತಂಡದಲ್ಲಿ ಪೂವಮ್ಮ ರಾಜು, ಸಂತೋಷ್ ಕುಮಾರ್ ತಮಿಳರಸನ್, ಸುಭಾ ವೆಂಕಟೇಶನ್, ಮತ್ತು ಮಿಜೋ ಚಾಕೋ ಕುರಿಯನ್ ಭಾಗವಹಿಸಿದರೆ, ಪ್ರವೀಣ್ಸಿ ಟ್ರಿಪಲ್ ಜಂಪ್ನಲ್ಲಿ ಪಾಲ್ಗೊಳ್ಳಲಿದ್ದಾರೆ. ಏಕಲವ್ಯ ಸ್ಪೋರ್ಟ್ಸ್ ಕ್ಲಬ್ನ ಮೂಲಕ ಕ್ರೀಡೆಗೆ ಪ್ರೋತ್ಸಾಹ ೧೯೮೪ರಲ್ಲಿ ‘ಏಕಲವ್ಯ ಸ್ಪೋರ್ಟ್ಸ ಕ್ಲಬ್’ಸ್ಥಾಪಿಸಿದ ಡಾ ಮೋಹನ್ ಆಳ್ವರು, ಕ್ರೀಡಾ ಪ್ರತಿಭೆಗಳಿಗೆ ಉಚಿತ ಶಿಕ್ಷಣದ ಅವಕಾಶವನ್ನು ಹಲವು ದಶಕಗಳ ಹಿಂದೆ ಪ್ರಾರಂಭಿಸಿದ್ದರು. ನಂತರ ದಿನಗಳಲ್ಲಿ ಅಸಂಖ್ಯಾತ ಕ್ರೀಡಾ ಪ್ರತಿಭೆಗಳು…
ಬೈಂದೂರು ಬಂಟರ ಯಾನೆ ನಾಡವರ ಸಂಘದ ಸಭಾ ಭವನದಲ್ಲಿ ನೂತನ ಪದಾಧಿಕಾರಿಗಳ ಪದ ಪ್ರದಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ವಿತರಣೆ, ನಿವೃತ್ತ ಶಿಕ್ಷಕರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ ಉದ್ಘಾಟಿಸಿದರು. ಬಳಿಕ ಮಾತನಾಡಿ, ಬಂಟ ಸಮಾಜ ಇವತ್ತು ಜಾಗತಿಕ ಮಟ್ಟದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದೆ. ಶೈಕ್ಷಣಿಕವಾಗಿ ಸಮಾಜ ಜಾಗೃತವಾದಾಗ ಮಾತ್ರ ಬೆಳವಣಿಗೆ ಮತ್ತು ಬದಲಾವಣೆ ಸಾಧ್ಯವಿದೆ. ಹಾಗೆ ಸಮುದಾಯವನ್ನು ಒಟ್ಟುಗೂಡಿಸುವ ದೃಷ್ಟಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿರುವುದು ಅತ್ಯಂತ ಔಚಿತ್ಯ ಪೂರ್ಣವಾಗಿದೆ ಎಂದರು. ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಜೀವನ, ದಾರಿ, ಕನಸುಗಳನ್ನು ನನಸು ಮಾಡಿಕೊಳ್ಳಲು ಸರಿಯಾದ ಮಾರ್ಗದರ್ಶನದ ಅಗತ್ಯತೆ ಇದೆ. ವಿದ್ಯಾರ್ಥಿ ವೇತನಕ್ಕಿಂತ ಮಾಹಿತಿ ತರಬೇತಿ ಶಿಬಿರಗಳಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಲಾಭ ದೊರೆಯುತ್ತದೆ. ಜ್ಞಾನವನ್ನು ವಿಸ್ತರಿಸಿಕೊಂಡು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳಲು ಅವಶ್ಯವಿರುವ ಮಾಹಿತಿ ಹಾಗೂ ತರಬೇತಿಗಳನ್ನು ಪಡೆದುಕೊಳ್ಳಬೇಕು. ಉತ್ತಮ ಜನರ ಸಹವಾಸ ಗೆಳೆತನ ಬೆಳೆಸಿಕೊಂಡರೆ ಮಾತ್ರ ನಮ್ಮ ಜೀವನ…
ಬಂಟರ ಸಂಘ (ರಿ) ಸುರತ್ಕಲ್ ಮತ್ತು ಮಹಿಳಾ ವೇದಿಕೆ ಇದರ ಸಹಯೋಗದಲ್ಲಿ ಜುಲೈ 28 ರಂದು ಭಾನುವಾರ ಬೆಳಿಗ್ಗೆ 9.30 ಕ್ಕೆ ಸುರತ್ಕಲ್ ಬಂಟರ ಭವನದಲ್ಲಿ “ಆಟಿದ ಪೊರ್ಲು ಮತ್ತು ಅಭಿನಂದನಾ ಸಮಾರಂಭ” ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಸುರತ್ಕಲ್ ಬಂಟರ ಸಂಘದ ಕಟ್ಟಡ ಸಮಿತಿಯ ಛೇರ್ಮನ್ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ಉದ್ಘಾಟಿಸಲಿದ್ದಾರೆ. ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಮಾಜಿ ಅಧ್ಯಕ್ಷ ಎಮ್ ದೇವಾನಂದ ಶೆಟ್ಟಿ, ಅಭಿಮತ ಟಿವಿಯ ಆಡಳಿತ ನಿರ್ದೇಶಕಿ ಡಾ| ಮಮತಾ ಪಿ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಸಚ್ಚಿದಾನಂದ ರೈ, ಉದ್ಯಮಿ ಪ್ರಸಾದ್ ಕುಮಾರ್ ಶೆಟ್ಟಿ ಭಾಗವಹಿಸಲಿದ್ದಾರೆ. ಮಹಿಳಾ ವೇದಿಕೆಯ ಅಧ್ಯಕ್ಷೆ ಭವ್ಯ ಎ ಶೆಟ್ಟಿ ಉಪಸ್ಥಿತರಿರುವರು. ಸಮಾರಂಭದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ…