Author: admin
ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ಮತ್ತು ಮಣಿಪಾಲ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾ ನಗರದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪೂರ್ವ ವಿದ್ಯಾರ್ಥಿನಿ, ಮಾಹೆಯ ಯೋಗ ಕೇಂದ್ರದ ಅಸಿಸ್ಟೆಂಟ್ ಪ್ರೊಫೆಸರ್ ಡಾ.ಆತ್ಮಿಕ ಶೆಟ್ಟಿಯವರು ಯೋಗದ ಉಪಯೋಗಗಳನ್ನು ತಿಳಿಸುತ್ತಾ ಮಾನಸಿಕ ಹಾಗೂ ಶಾರೀರಿಕ ಸದೃಢತೆಯನ್ನು ಕಾಪಾಡಲು ಯೋಗವು ಅತೀ ಅವಶ್ಯ, ವಿದ್ಯಾರ್ಥಿಗಳು ಯೋಗಾಭ್ಯಾಸದೊಂದಿಗೆ ಆರೋಗ್ಯಕರ ಆಹಾರ ಬಳಸುವುದರ ಕಡೆಯೂ ಗಮನ ಹರಿಸಬೇಕು ಎಂದರು. ನಂತರ ವಿದ್ಯಾರ್ಥಿಗಳಿಗೆ ಯೋಗ ಪ್ರಾತ್ಯಕ್ಷಿಕೆಯನ್ನು ನಡೆಸಿದರು. ಈ ಸಂದರ್ಭದಲ್ಲಿ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗಣೇಶ್ ಶೆಟ್ಟಿ , ಜೆ.ಇ.ಇ/ನೀಟ್ ಫೌಂಡೇಶನ್ ಸ್ಟ್ಯೂಡೆಂಟ್ ಕೋರ್ಡಿನೇಟರ್ ಶ್ರೀಮತಿ ಶಮಿತ ಮತ್ತು ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀ ಅರುಣ್ ಕುಮಾರ್ ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ದೀಪ್ತಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಬ್ರಹ್ಮಾವರ, ಜೂನ್ ೨೫: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಶಾಲಾ ವಿದ್ಯಾರ್ಥಿ ಸಂಸತ್ ನಾಯಕರ ಪದಗ್ರಹಣ ಕಾರ್ಯಕ್ರಮ ನೆರವೇರಿತು. ಉಡುಪಿ ಕುಂಜಿಬೆಟ್ಟಿನ ಶಾರದಾ ರೆಸಿಡೆನ್ಶಿಯಲ್ ಸ್ಕೂಲ್ನ ಪ್ರಾಂಶುಪಾಲರಾದ ವಿನ್ಸೆಂಟ್ ಡಿಕೋಸ್ಟಾ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಜ್ಯೋತಿ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಎಲ್ಲಾ ಮಕ್ಕಳು ನಮ್ಮ ದೇಶದ ಭವಿಷ್ಯವನ್ನು ರೂಪಿಸುವವರು. ಉತ್ತಮ ನಾಯಕರು ಸಮಗ್ರತೆ, ಆತ್ಮಸ್ಥೆöÊರ್ಯವನ್ನು ಕಾಯ್ದುಕೊಂಡು ನಮ್ಮ ವ್ಯವಸ್ಥೆಯಲ್ಲಿ ಹೊಸತನ್ನು ಅನ್ವೇಷಿಸುತ್ತಾರೆ. ಈ ಮಣ್ಣಿನಿಂದ ಅನ್ನವನ್ನು ತಿಂದು ಉಸಿರಾಡುತ್ತಿರುವ ನಾವು ಈ ಭೂಮಿಗೆ ಕೊಡುಗೆಯನ್ನು ನೀಡಬೇಕೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಎಲ್ಲಾ ನಾಯಕರಿಗೆ ಶುಭಹಾರೈಸಿ ಮಾತನಾಡಿ ಅಧಿಕಾರ ವಹಿಸಿಕೊಂಡ ಎಲ್ಲಾ ನಾಯಕರು ಜವಾಬ್ದಾರಿಯಿಂದ ತಮ್ಮ ಕೆಲಸವನ್ನು ನಿರ್ವಹಿಸಿ ಇತರರಿಗೆ ಸ್ಫೂರ್ತಿಯನ್ನು ತುಂಬಬೇಕು. ಜಿ ಎಮ್ ನಿರಂತರ ಪಠ್ಯ ಪಠ್ಯೇತರ ಚಟುವಟಿಕೆಗಳನ್ನು ನಡೆಸುವುದರ ಮೂಲಕ ವಿದ್ಯಾರ್ಥಿಗಳಿಗೆ ಆತ್ಮಸ್ಥೆöÊರ್ಯದ ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸುತ್ತಿದೆ. ಅದೇ ರೀತಿ ಇಲ್ಲಿ ಕಲಿಯುವ ಮೌಲ್ಯ ಕೌಶಲ್ಯಗಳು ಮಕ್ಕಳ…
ಕಲ್ಕೂರ ಪ್ರತಿಷ್ಠಾನ ಮಂಗಳೂರು ಇವರು ಸಾವಯವ ಕೃಷಿಕ ಬಳಗದ ಸಹಯೋಗದಲ್ಲಿ ಜೂನ್ 20, 21 ರಂದು ಕದ್ರಿ ಕಂಬಳ ಮಲ್ಲಿಕಾ ಬಡಾವಣೆಯ ಮಂಜು ಪ್ರಸಾದದಲ್ಲಿ ಏರ್ಪಡಿಸಿದ್ದ ಎರಡು ದಿನಗಳ ‘ಹಲಸು ಮಾವು ಮೇಳ’ದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಶ್ರೀ ವಿಶ್ವೇಶತೀರ್ಥ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲನೇ ದಿನ ಸಂತ ಕವಿ ಕನಕದಾಸರ ‘ರಾಮಧಾನ್ಯ ಚರಿತ್ರೆ’ ಕಾವ್ಯ ಆಧಾರಿತ ತುಳು ಪುರಾಣ ಪ್ರವಚನ ಕಾರ್ಯಕ್ರಮವನ್ನು ಯಕ್ಷಗಾನ ಅರ್ಥಧಾರಿ ಮತ್ತು ಪ್ರವಚನಕಾರ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಹಾಗೂ ಹರಿದಾಸ ಗಾಯಕ ತೋನ್ಸೆ ಪುಷ್ಕಳ ಕುಮಾರ್ ನಡೆಸಿಕೊಟ್ಟರು. ಕರ್ನಾಟಕ ಸರಕಾರದ ಸಂತ ಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಕನಕದಾಸರ ಸಮಗ್ರ ಸಾಹಿತ್ಯ ಅನುವಾದ ಯೋಜನೆಯಂತೆ ದೇಶದ 14 ಭಾಷೆಗಳಲ್ಲಿ ಅನುವಾದಗೊಂಡು ಈಚೆಗೆ ಬಿಡುಗಡೆಯಾಗಿದ್ದ ‘ರಾಮಧಾನ್ಯ ಚರಿತ್ರೆ’ಯ ತುಳು ಆವೃತ್ತಿಯನ್ನು ಪ್ರಥಮ ಬಾರಿಗೆ ಹಲಸು ಮಾವು ಮೇಳದಲ್ಲಿ ವಾಚನ ವ್ಯಾಖ್ಯಾನಕ್ಕೆ ಅಳವಡಿಸಿಕೊಂಡಿರುವುದು ಕಾರ್ಯಕ್ರಮದ ವಿಶೇಷತೆಯಾಗಿತ್ತು. ಪ್ರೊ| ಎ.ವಿ.ನಾವಡರ ಪ್ರಧಾನ ಸಂಪಾದಕತ್ವದಲ್ಲಿ…
ರೋಟರಿ ಆನ್ಸ್ ಕ್ಲಬ್ ಕಾರ್ಕಳ ವತಿಯಿಂದ ‘ಆನ್ಸ್ ಡೇ ಸಂಭ್ರಮಾಚಾರಣೆ’ ಕಾರ್ಯಕ್ರಮವು ಹೋಟೆಲ್ ಪ್ರಕಾಶ್ನ ಸಂಭ್ರಮ ಹಾಲ್ ನಲ್ಲಿ ನೆರವೇರಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷರಾದ ರೋ. ನವೀನ್ ಚಂದ್ರ ಶೆಟ್ಟಿ ವಹಿಸಿದ್ದರು. ಆನ್ಸ್ ಕ್ಲಬ್ ಅಧ್ಯಕ್ಷೆ ಜಯಂತಿ ನಾಯಕ್ ಅವರು ಅತಿಥಿಗಳನ್ನು ಹಾಗೂ ಸದಸ್ಯರನ್ನು ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸೀಮಾ ಕಾಮತ್ ಅವರು ಭಾಗವಹಿಸಿ ಶುಭಾಶಯಗಳನ್ನು ವ್ಯಕ್ತಪಡಿಸಿದರು. ಕ್ಲಬ್ನ ಸಭಾಪತಿಗಳಾದ ರೋ. ವೃಂದಾ ಹರಿಪ್ರಕಾಶ್ ಶೆಟ್ಟಿ ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಸೃಷ್ಟಿ ನಾಯಕ್ ನೆರವೇರಿಸಿದರು. ಮುಖ್ಯ ಅತಿಥಿಗಳ ಪರಿಚಯವನ್ನು ರೋ. ಗೀತಾ ಕಾಮತ್ ಮಾಡಿಕೊಟ್ಟರು. ಕಾರ್ಯಕ್ರಮ ನಿರೂಪಣೆಯನ್ನು ರೋ. ರೇಖಾ ಉಪಾಧ್ಯಾಯ ನಿರ್ವಹಿಸಿದರು. ಕ್ಲಬ್ ಕಾರ್ಯದರ್ಶಿ ಆಶಾ ಡಿಮೆಲ್ಲೊ ವಂದನಾರ್ಪಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿ ಸೀಮಾ ಕಾಮತ್ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ ಜ್ಯೋತಿ ಪ್ರಭು ಹಾಗೂ ಸಹನಾ ಶ್ರೀಶ ಭಟ್ ಅವರನ್ನು ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು. ಬಳಿಕ ವಿವಿಧ ಸಾಂಸ್ಕೃತಿಕ…
ಇಂದು ನಾವು ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಇಲ್ಲಿ ಒಂದಾಗಿರುವುದು ಅತ್ಯಂತ ಸಂತಸದ ವಿಷಯವಾಗಿದೆ. ಯೋಗವು ಕೇವಲ ವ್ಯಾಯಾಮವಲ್ಲ; ಅದು ನಮ್ಮ ದೇಹ, ಮನಸ್ಸು ಮತ್ತು ಆತ್ಮವನ್ನು ಒಂದೇ ಸೂತ್ರದಲ್ಲಿ ಬಂಧಿಸುವ ಜೀವನ ವಿಧಾನವಾಗಿದೆ. ಭಾರತದ ಮಹಾನ್ ಋಷಿ ಮುನಿಗಳ ಕೊಡುಗೆಯಾದ ಯೋಗವನ್ನು ಇಂದು ವಿಶ್ವದ 190ಕ್ಕೂ ಹೆಚ್ಚು ರಾಷ್ಟ್ರಗಳು ಸ್ವೀಕರಿಸಿ ಆಚರಿಸುತ್ತಿವೆ. ಇದು ನಮ್ಮ ದೇಶದ ಸಂಸ್ಕೃತಿ, ಪರಂಪರೆ ಮತ್ತು ಜೀವನ ಮೌಲ್ಯಗಳ ಜಾಗತಿಕ ಮಾನ್ಯತೆಯ ಸಂಕೇತವಾಗಿದೆ. ಇಂದಿನ ವೇಗದ ಯುಗದಲ್ಲಿ ಒತ್ತಡ, ಆತಂಕ ಮತ್ತು ಅನಾರೋಗ್ಯಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಯೋಗವು ಆರೋಗ್ಯಕರ ಹಾಗೂ ಸಮತೋಲನಯುತ ಜೀವನಕ್ಕೆ ದಾರಿದೀಪವಾಗಿದೆ. ದಿನಕ್ಕೆ ಕೆಲವೇ ನಿಮಿಷಗಳ ಯೋಗಾಭ್ಯಾಸವು ದೇಹಕ್ಕೆ ಶಕ್ತಿ, ಮನಸ್ಸಿಗೆ ನೆಮ್ಮದಿ ಹಾಗೂ ಜೀವನಕ್ಕೆ ಹೊಸ ಚೈತನ್ಯವನ್ನು ನೀಡುತ್ತದೆ. ‘ಯೋಗಃ ಕರ್ಮಸು ಕೌಶಲಮ್’ ಎಂದು ಭಗವದ್ಗೀತೆಯಲ್ಲಿ ಹೇಳಲಾಗಿದೆ. ಅಂದರೆ ಯೋಗವು ನಮ್ಮ ಪ್ರತಿಯೊಂದು ಕಾರ್ಯವನ್ನೂ ಉತ್ತಮವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಬೆಳೆಸುತ್ತದೆ. ಪ್ರತೀ ವರ್ಷ ನಮ್ಮ ಸಂಘದ ಗೌರವಾಧ್ಯಕ್ಷರಾದ ಸಂತೋಷ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ…
ಮೂರು ವರ್ಷದ ಹಿಂದೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕಾರ್ಯಕ್ರಮ ಉಡುಪಿಯಲ್ಲಿ ನಡೆದಾಗ ಸರಿಯಾಗಿ ಇವರನ್ನು ನೋಡಿದ್ದೆ. ಹೊಳೆಯುವ ಕಂಗಳು, ಎದೆಯುಬ್ಬಿಸಿ ನಡೆಯುವ ಪರಿ, ಕುತ್ತಿಗೆಯಲ್ಲಿ ನೇತಾಡುವ ಮಣಬಾರದ ಚೈನು, ಇವರಲ್ಲಿರುವ ಲೆಕ್ಕಕ್ಕಿಂತ ಹೆಚ್ಚಿನ ಬಿಗುಮಾನವನ್ನು ನೋಡಿ ಮನೆಯಲ್ಲಿ ಬೇಕಾದಷ್ಟು ಮಾಡಿ ಇಟ್ಟಿದ್ದಾರೇನೋ ಜಾಪು ಮಾಡಿಕೊಂಡು ತಿರುಗಲು ಒಳ್ಳೆಯದಾಯಿತು ಅಂತ ಅಂದುಕೊಂಡಿದ್ದೆ. ಆದರೆ ಈ ವ್ಯಕ್ತಿಯ ವಜನ್ನೇ ಬೇರೆ. ‘ಅಮ್ಮನ ನೆರವು’ ಎನ್ನುವ ಚಾರಿಟೇಬಲ್ ಟ್ರಸ್ಟ್ ಆರಂಭಿಸಿಕೊಂಡು ತನ್ನ ಹೆತ್ತಬ್ಬೆಯ ನೆನಪಿನಲ್ಲಿ ಈ ಹುಡುಗ ಮಾಡುವ ಕೆಲಸ ಇದೆ ಅಲ್ವಾ ಅದಕ್ಕೆ ಶ್ಲಾಘನೀಯ ಎಂಬ ಪದ ಚಿಕ್ಕದಾಗಬಹುದು. ಎರಡು ವರ್ಷದ ಹಿಂದೆ ಕಾರ್ಕಳ ತಾಲೂಕಿನ ಎಲ್ಲಾ ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಬ್ಯಾಗ್ ಮತ್ತು ಕೊಡೆಯನ್ನು ವಿತರಿಸುವ ಕಾರ್ಯಕ್ರಮವನ್ನು ಇವರು ಹಮ್ಮಿಕೊಂಡು ನಮ್ಮ ಶಾಲೆಗೆ ಬಂದಾಗ ಈ ವ್ಯಕ್ತಿಯ ಮಾನವೀಯ ಕೆಲಸದ ಬಗ್ಗೆ ನನಗೆ ಸಂಪೂರ್ಣವಾಗಿ ಅರಿವಾದದ್ದು. ದೀಪಾವಳಿ ಹಬ್ಬವನ್ನು ಮನೆಯವರ ಜೊತೆ ಸಂಭ್ರಮಿಸುವುದರ ಬದಲು ಕಾರ್ಕಳದಲ್ಲಿ ಪಟಾಕಿ…
ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಆಯೋಜನೆಯಲ್ಲಿ ಮಹಿಳಾ ವಿಭಾಗದ ವತಿಯಿಂದ ಜೂನ್ 21 ರಂದು ಆದಿತ್ಯವಾರ ಸಂಜೆ 4 ಗಂಟೆಗೆ ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ಅಡ್ವೋಕೇಟ್ ಡಿ.ಕೆ ಶೆಟ್ಚಿಯವರ ಅಧ್ಯಕ್ಷತೆಯಲ್ಲಿ ಬಂಟ್ಸ್ ಸೆಂಟರ್ ಮೊದಲನೇ ಮಹಡಿ ಜೂಯಿನಗರ ನವಿ ಮುಂಬಯಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಅಧ್ಯಕ್ಷರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಹಾಗೂ ಅತಿಥಿಗಳಿಂದ ದೀಪ ಪ್ರಜ್ವಲನೆಗೊಂಡು ಶಾಲಿನಿ ಶೆಟ್ಟಿಯವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಯೋಗತಜ್ಞೆಯರಾದ ಸ್ವಾತಿ ಶೆಟ್ಟಿ, ಸವಿತಾ ರತ್ನಾಕರ ಶೆಟ್ಟಿ ಮತ್ತು ಸಮಾಜ ಸೇವಕಿ ರತಿ ಶೆಟ್ಟಿಯವರು ಭಾಗವಹಿಸಿದ್ದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ನಾರಾಯಣ ಶೆಟ್ಟಿಯವರು ಎಲ್ಲಾ ಅತಿಥಿಗಳನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿ, ಮಹಿಳಾ ವಿಭಾಗದ ಪದಾಧಿಕಾರಿಗಳೊಂದಿಗೆ ಅಧ್ಯಕ್ಷ ಅಡ್ವೋಕೇಟ್ ಡಿ.ಕೆ ಶೆಟ್ಟಿ ಮತ್ತು ಅತಿಥಿಗಳನ್ನು ಶಾಲು ಹೊದಿಸಿ, ಹೂಗುಚ್ಛಗಳನ್ನಿತ್ತು ಸನ್ಮಾನಿಸಿದರು. ಅಲ್ಲದೇ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳನ್ನು ಮತ್ತು ಇತರ ಅತಿಥಿ ಗಣ್ಯರನ್ನು ಹೂಗುಚ್ಛಗಳನ್ನಿತ್ತು ಸನ್ಮಾನಿಸಿದರು. ಮುಖ್ಯ ಅತಿಥಿಗಳಾದ ಯೋಗತಜ್ಞೆ ಸವಿತಾ ರತ್ನಾಕರ…
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ವತಿಯಿಂದ ನಡೆಸಲಾಗುವ ಯಕ್ಷಧ್ರುವ ಯಕ್ಷಶಿಕ್ಷಣ 2026 -27ನೇ ಸಾಲಿನ ತರಬೇತಿಯನ್ನು ಇತ್ತೀಚೆಗೆ ಬಿಇಎಂ ಪ್ರೌಢ ಶಾಲೆ ಮಂಗಳೂರು ವಿದ್ಯಾಸಂಸ್ಥೆಯಲ್ಲಿ ಪಟ್ಲ ಫೌಂಡೇಶನ್ ಕೇಂದ್ರ ಘಟಕದ ಸಂಘಟನಾ ಕಾರ್ಯದರ್ಶಿ ಪ್ರದೀಪ್ ಆಳ್ವ ಕದ್ರಿಯವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಯಕ್ಷಗಾನ ಕಲಿಕೆಯಿಂದ ಪುರಾಣ ಜ್ಞಾನ, ವೃದ್ಧಿಸುವುದರ ಜೊತೆಗೆ, ಸಂಭಾಷಣ ಚತುರತೆ, ಶಾರೀರಿಕ ವ್ಯಾಯಾಮ ದೊರೆತು ಒಳ್ಳೆಯ ಜ್ಞಾನ ಲಭಿಸುತ್ತದೆ. ಯಕ್ಷಗಾನ ಕಲಿಕಾ ವಿದ್ಯಾರ್ಥಿಗಳು ಶಾಲಾ ಕಲಿಕೆಯಲ್ಲೂ ಮುಂದಿರುವುದು ಕಂಡು ಬರುತ್ತಿದೆ ಎಂದು ಅಭಿಪ್ರಾಯ ಪಟ್ಟರು. ಬಿಇಎಂ ವಿದ್ಯಾಸಂಸ್ಥೆಯ ಸಂಚಾಲಕರಾದ ರೆ| ಮನೋಜ್ ಅವರು ಅಧ್ಯಕ್ಷತೆ ವಹಿಸಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಘಟಕದ ಅಧ್ಯಕ್ಷ ಲ| ತಾರಾನಾಥ ಶೆಟ್ಟಿ ಬೋಳಾರ, ಪ್ರಧಾನ ಕಾರ್ಯದರ್ಶಿ ಕೃಷ್ಣ ಶೆಟ್ಟಿ ತಾರೆಮಾರ್, ಕೋಶಾಧಿಕಾರಿ ಗೋಪಿನಾಥ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಯಕ್ಷಗಾನ ನಾಟ್ಯಗುರುಗಳಾದ ಅಶ್ವಥ್ ಮಂಜನಾಡಿ ಉಪಸ್ಥಿತರಿದ್ದು, ತರಗತಿಯ ಬಗ್ಗೆ ಮಾಹಿತಿ ನೀಡಿದರು. ಬಿಇಯಂ ಪ್ರೌಢಶಾಲಾ ಮುಖ್ಯ ಶಿಕ್ಷಕ…
ನಮ್ಮ ತುಳುನಾಡ್ದ ಜನೊಕ್ಕುಲೆನ ಸಂಪ್ರದಾಯೊಡು, ಕ್ರಿಷಿ, ದೈವ ದೇವತಾರಾಧನೆ, ಆಟ ಕೂಟ, ಕಂಬುಳ, ಕೋರ್ದಟ್ಟ ಇಂಚಿನ ಮಾತ ಒಂಜೊಂಜಿ ಜನ ಮೆಚ್ಚಿಗೆದ ಕ್ಷೇತ್ರೊಲಾದುಂಡು. ಒಂಜಿ ಕಾಲೊಡು ನಮ್ಮಕುಲು ಬೆನ್ನಿ ಬೆಂದ್ ದ್ ವರ್ಷೊಗು ೧೦೦/೨೦೦ ಮುಡಿ ಗೇಣಿ ಕೊರೊಂದಿತ್ತಿನ ಇಲ್ಲುಲ್ಲಾ ಇತ್ತ್ಂಡ್. ೧೯೭೦ ದ ಸಮಯೊಡು ಭೂ ಮಸೂದೆ ಬತ್ತಿನೆಡ್ದಾವರ, ಸಾಗೋಲಿ ಮಲ್ತ್ ದ್ ದಿನದೆಪ್ಪೆರೆ ಬಂಙಂದ್ ತೆರೀದ್ ಜೋಕುಲೆನ್ ಬೊಂಬಾಯಿಗ್ ದೇರಿಯೆರ್. ನಮ್ಮ ಜೋಕುಲು ಜುವ್ವ ಗಟ್ಟಿತ್ತ್ ದ್ ಚುರುಕಾದಿತ್ತಿನೆಟ್ಟಾತ್ರ ಒಲ್ಪಾ ಪೋಂಡಲಾ ನೀಂದೊಂದಿತ್ತೆರ್. ಊರುಡು ಅಂಚಿನ ವಾತಾವರಣೊಡು, ಮಸ್ತ್ ಜನೊಕ್ಕುಲ್ಡಪ್ಪ ಮಲ್ಲ್ಯಾತಿನೆಟ್ಟಾತ್ರ ಸಮಾಜೊಡು ಬದುಕುನೆಂಚಾಂದ್ ತೆರಿಯೊಂದೆರ್. ಎಚ್ಚಿನಕುಲು ಕೋಟೆಡೆ ಕೆಲಸ ಬೊಕ್ಕ ಅಲ್ಪಲ್ಪನೆ ಉಂತೆರೆಲಾ ಇತ್ತಿನೆಟ್ಟಾತ್ರ, ಬಯ್ಯದ ೫/೬ ಗಂಟೆಡ್ದ್ ಬೊಕ್ಕ ದಾಲ ಕೆಲಸ ಇಜ್ಜಿ, ಇಲ್ಲಡೆ ಪೊಯೆರೆ ಇಜ್ಜಿ, ಅಲ್ಪನೆ ಮುಟ್ಟೊಡೇ ನಮ್ಮ ಹಿರಿಯೆರ್ ಅಕಲ್ನ ದೂರ ದೃಷ್ಟಿಡ್ ಮಲ್ದಿನ, ಕನ್ನಡ ಮಾಧ್ಯಮದ ರಾತ್ರೆ ಶಾಲೆ ಏರ್ಪಾಡ್ ಮಲ್ತಿತ್ತಿನೆಟ್ಟಾತ್ರ, ಕೆಲವೆರ್ ರಾತ್ರೆ ಶಾಲೆಗ್ ಪೋಯೆರ್, ಕೆಲವೆರ್ ಚೆಂಡ್ ಗೊಬ್ಬೆರೆ ಅಲ್ಪದ…
ರಾಜ ಮಹಾರಾಜರ ಕಾಲದಿಂದಲೂ ಭಾರತದಲ್ಲಿ ಯೋಗವನ್ನು ಅಭ್ಯಸಿಸಲಾಗುತ್ತಿತ್ತು. ಇದೇ ಪ್ರತೀಕವನ್ನು ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುವಂತಹ ಈ ಯೋಗಾಭ್ಯಾಸವನ್ನು ಎಲ್ಲರೂ ಮಾಡುತ್ತಿರಬೇಕು ಎಂದು ಬಂಟರ ಸಂಘ ಮುಂಬಯಿ ಇದರ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಗುತ್ತಿನಾರ್ ರವೀಂದ್ರ ಡಿ ಶೆಟ್ಟಿ ಬಳ್ಕುಂಜೆ ಗುತ್ತುರವರು ಅಭಿಪ್ರಾಯಪಟ್ಟರು. ಅವರು ಜೂನ್ 21 ರಂದು ಮೀರಾ ಭಯಂದರ್ ರೋಡಿನ ಪಯ್ಯಡೆ ರೆಸಿಡೆನ್ಸಿ ಹೊಟೇಲ್ ನ ಸಭಾಂಗಣದಲ್ಲಿ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಯೋಗ ದಿನಾಚರಣೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ವಿಶ್ವಯೋಗ ದಿನಾಚರಣೆಯು ನಮ್ಮ ದೇಶದ ಪ್ರಧಾನ ಮಂತ್ರಿಯವರಾದ ನರೇಂದ್ರ ಮೋದಿಯವರ ಅಪೇಕ್ಷೆಯಂತೆ ವರ್ಷಂಪ್ರತಿ ನಡೆಯುವ ಯೋಗ ದಿನಾಚರಣೆ ವಿಶ್ವದಲ್ಲೆಲ್ಲಾ ಪಸರಿಸಬೇಕೆಂಬ ಹಂಬಲದಿಂದ ಇದೀಗ ಪ್ರತಿ ವರ್ಷವೂ ಯೋಗ ದಿನಾಚರಣೆಯನ್ನು ಭಾರತದಲ್ಲಿ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ. ಯೋಗಾಭ್ಯಾಸವನ್ನು ಪ್ರತಿಯೊಬ್ಬರೂ ದಿನಚರಿಯಂತೆ ಮಾಡುತ್ತಿರಬೇಕು. ನಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಯೋಗಾಭ್ಯಾಸವನ್ನು ಮಾಡುತ್ತಿರುವುದರಿಂದ ನಮ್ಮ ಶರೀರವು ಮಾತ್ರವಲ್ಲದೇ ಮನಸ್ಸಿನ…















