Author: admin

ಈ ಅಪರೂಪದ ಕಾಂಬಿನೇಶನ್ ಒಂದಾದರೆ ಸೋಲೂ ಸೋಲುತ್ತದೆನ್ನುವುದು ತೀರಾ ಗುಟ್ಟಿನ ವಿಚಾರವೇನಲ್ಲ. ಯಾಕೆ ಕೇಳಿ ಅಮರಣ್ಣ ಇರುವುದಕ್ಕೂ, ತೋರುವುದಕ್ಕೂ ಅಜಗಜಗಳ ಅಂತರ. ಪರಿಚಯದ ಯಾರೇ ಕಂಡರೂ ಅತ್ಯಂತ ಆಪ್ತತೆಯಿಂದ ಕಂಡವರೇ ಹೊರತು ಅಂತಸ್ಥಿನಿಂದಲ್ಲ. ಅಲ್ಲೆಲ್ಲೊ ವಿದ್ಯಾರ್ಥಿವೇತನಕ್ಕಾಗಿ, ಕಾರ್ಯಕ್ರಮ ಸಂಘಟನೆಗಾಗಿ, ದೇವತಾ ಕಾರ್ಯಗಳಿಗೆ ಕರೆ ಬಂದರೆ ಇಲ್ಲ ಅಂದವರಲ್ಲ. ಒಂದೆಜ್ಜೆ ಮುಂದಕ್ಕೆ ಹೋದರೆ ಸಮುದಾಯದ ತೀರಾ ಅಗತ್ಯ ಕಂಡ ಹುಡುಗಿಯರ ವಿವಾಹಕ್ಕಾಗಿ ಕರಿಮಣಿಗಳನ್ನು ಸಂಘದಿಂದ ಖುದ್ದು ಒದಗಿಸಿದ್ದನ್ನು ಎಲ್ಲೂ ಹೇಳಿಕೊಂಡವರಲ್ಲ. ಬಂಟ ಸಮುದಾಯವಲ್ಲದ ಹಲವು ನಮ್ಮವರು ಅಮರಣ್ಣನ ಪ್ರಸ್ತಾಪ ಬಂದಾಗ ಅವರಿಗರಿವಿಲ್ಲದೇ ಅಂತಃಕರಣದಿಂದ ಬಾಗಿ ಬಿಡುತ್ತಾರೆ. ಮಾನವೀಯ ಮೌಲ್ಯವೆಂದರೆ ಇದಲ್ಲದೆ ಮತ್ತೇನು? ಇನ್ನು ದೀಪಣ್ಣನಿಗೂ ಮೇಲಿನದ್ದೇ ಯಥಾವತ್ ಬರೆದರೆ ತುಲಾಭಾರ ಮಾಡಿದಂತಾಗಬಹುದು. ಸಮರ್ಥ ಸಂಘಟಕ ಇವರೊಳಗೆ ಅಭಿಜಾತವಾಗಿಯೇ ಹೊಕ್ಕಿ ಬಿಟ್ಟಿದ್ದಾರೆ. ಕಾರ್ಯಕ್ರಮ ವಿಭಾಗದಲ್ಲಿ ದೀಪಣ್ಣ ಮುಟ್ಟಿದೆಲ್ಲವೂ ಅಪ್ಪಟ ಬಂಗಾರ. ಆಭರಣದ ಅಂಗಡಿಯೆದುರು ರಾರಾಜಿಸುವ ಚಿನ್ನವನ್ನಷ್ಚೇ ನಾವು ನೀವು ಕಂಡಿದ್ದು. ಅಲ್ಲಿಗೆ ಬರುವುದಕ್ಕೆ ಮೊದಲು ತಿಂದ ಸುತ್ತಿಗೆಯ ಪೆಟ್ಟುಗಳನ್ನಲ್ಲ! ಸಾಕಷ್ಟು ತಯಾರಿ, ಸಮಚಿತ್ತ, ಹಿತ-ಮಿತ…

Read More

ಮುಂಬಯಿಯ ಖ್ಯಾತ ಹೋಟೆಲು ಉದ್ಯಮಿ ಮಿಜಾರು ಸುರೇಶ್ ಶೆಟ್ಟಿ ಅವರು ಮುಂಬಯಿಯಲ್ಲಿ ಉದ್ಯಮಿಯಾಗಿದ್ದರೂ ತನ್ನ ಹುಟ್ಟೂರ ಜನರಿಗೆ ಏನಾದರೊಂದು ಸಹಾಯ ಮಾಡಬೇಕೆನ್ನುವ ತುಡಿತ ಉಳ್ಳವರು. ತುಳುನಾಡ ಸೇನಾ ಎನ್ನುವ ಸಂಘಟನೆಯನ್ನು ಕಟ್ಟಿಕೊಂಡು ಈ ಹಿಂದೆ ಮೂಡುಬಿದಿರೆಯಲ್ಲಿ ಸಾಮೂಹಿಕ ವಿವಾಹದಂತಹ ಕಾರ್ಯಕ್ರಮ ಮಾಡಿ, ಬಳಿಕ ಮೂಡುಬಿದಿರೆಯಲ್ಲಿ ಕಂಬಳ ಮಾಡಿ ಪ್ರೋತ್ಸಾಹಿಸಿ ಗಮನ ಸೆಳೆದವರು. ಯಾರೂ ಎಷ್ಟಿದ್ದರೂ ಸೇವೆಗೈಯ್ಯುವ ಮನಸ್ಸು ಮಾಡುವುದಿಲ್ಲ. ಆದರೆ ಮಿಜಾರು ಸುರೇಶ್ ಶೆಟ್ಟಿ ಅವರಿಗೆ ತನ್ನೂರಿನ ಮೇಲೆ ಅಭಿಮಾನ ಹಾಗೂ ಬಾಲ್ಯ ಜೀವನದ ಕಷ್ಟದ ದಿನಗಳ ಬಡತನದ ನೆನಪು ಇದೆಲ್ಲವನ್ನೂ ಅರಿತ ಅವರು ತನ್ನ ಸಂಪಾದನೆಯ ಒಂದಿಷ್ಟು ತನ್ನೂರಿನ ಬಡ ವಿದ್ಯಾರ್ಥಿಗಳಿಗಿರಲಿ ಎನ್ನುವ ಸೇವಾ ಮನೋಭಾವದಿಂದ ಒಂದು ಕಾರ್ಯಕ್ರಮ ಹಮ್ಮಿಕೊಂಡು ತನ್ನ ಪ್ರಿಯ ಮಗಳು ಝಾನ್ಸಿಯ ಹುಟ್ಟಿದ ದಿನದಂದು ಸ್ಥಳೀಯ ಶಾಸಕರ ಸಹಿತ ತನ್ನಿಷ್ಟದ ಅತಿಥಿಗಳನ್ನು ಕರೆದು, ತನ್ನ ತಂದೆ ಹರಿಯಪ್ಪ ಶೆಟ್ಟಿ, ತಾಯಿ ಮೀನಾಕ್ಷಿ ಅವರ ಸಮ್ಮುಖದಲ್ಲಿ ಮಿಜಾರು ತೋಡಾರು ಗ್ರಾಮಗಳ ಆರು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸುಮಾರು…

Read More

ಬಾರ್ಕೂರು ಸುಜ್ಞಾನ ನ್ಯಾಷನಲ್ ಪಿಯು ಕಾಲೇಜು, ನ್ಯಾಷನಲ್ ಹೈಸ್ಕೂಲು ಬಾರ್ಕೂರು ಹಾಗೂ ರೋಟರಿ ಕ್ಲಬ್ ಬಾರ್ಕೂರು (RI ಜಿಲ್ಲೆ 3182) ಇವುಗಳ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಲಾಯಿತು. ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಜೀವನ ಶೈಲಿಯ ಕುರಿತು ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಕಾರ್ಯಕ್ರಮದ ಮುಖ್ಯ ಆಯೋಜಕರಾದ ರೊಟೇರಿಯನ್ P.H.F. ಎ ರತ್ನಾಕರ ಶೆಟ್ಟಿ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಪರಿಸರ ಸ್ನೇಹಿ ಪದ್ಧತಿಗಳನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ತುರ್ತು ಅಗತ್ಯವಾಗಿದೆ ಎಂದು ಒತ್ತಿ ಹೇಳಿದರು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೇತಾಲ್ಕರ್ ಅವರು ಮಾತನಾಡಿ, ಪ್ರಕೃತಿಯನ್ನು ಉಳಿಸುವಲ್ಲಿ ಮತ್ತು ಮುಂದಿನ ಪೀಳಿಗೆಗೆ ಪರಿಸರವನ್ನು ರಕ್ಷಿಸಿಡುವಲ್ಲಿ ವಿದ್ಯಾರ್ಥಿಗಳು ವಹಿಸಬಹುದಾದ ಮಹತ್ತರ ಪಾತ್ರದ ಕುರಿತು ಅಮೂಲ್ಯವಾದ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು. ಬಾರ್ಕೂರು ರೋಟರಿ ಕ್ಲಬ್…

Read More

ಜೂನ್ 6 ರಂದು ಹುಬ್ಬಳ್ಳಿ ಧಾರವಾಡ ಬಂಟರ ಸಂಘದಲ್ಲಿ ಜರುಗಿದ ಪದಾಧಿಕಾರಿಗಳ ಹಾಗೂ ಸಲಹಾ ಸಮಿತಿ ಸಭೆಯಲ್ಲಿ ನೂತನ ಅಧ್ಯಕ್ಷರಾದ ರಾಜೇಂದ್ರ ವಿ ಶೆಟ್ಟಿಯವರನ್ನು ಸಲಹಾ ಸಮಿತಿಯ ವತಿಯಿಂದ ಸನ್ಮಾನಿಸಿ, ಗೌರವಿಸಿ ಮುಂದಿನ ಅವಧಿಯ ಕಾರ್ಯಚಟುವಟಿಕೆಗಳಿಗೆ ಶುಭಾಶಯಗಳನ್ನು ಕೋರಲಾಯಿತು. ರಾಜೇಂದ್ರ ಶೆಟ್ಟಿಯವರ ನಾಯಕತ್ವದಲ್ಲಿ ಸಂಘವು ಇನ್ನಷ್ಟು ಅಭಿವೃದ್ಧಿ ಹೊಂದಿ ಸಮಾಜ ಸೇವೆಯಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸಲಿ ಎಂದು ಹಾರೈಸಿದರು. ಈ ಸಂಧರ್ಭ ಮಾಜಿ ಅಧ್ಯಕ್ಷರುಗಳಾದ ಸುಭಾಷ್ಚಂದ್ರ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ವಿಜಯಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Read More

ಕರಾವಳಿ ಭಾಗದಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೊಂದು ಗುಡ್‌ನ್ಯೂಸ್‌ ಇಲ್ಲಿದೆ. ನೆಲಮಂಗಲದಿಂದ ಹಾಸನಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಚೆನ್ನರಾಯಪಟ್ಟಣದಲ್ಲಿ ರವಿತೇಜ್‌ ಶೆಟ್ಟಿ ಮಾರಣಕಟ್ಟೆ ಯವರ ಮಾಲೀಕತ್ವದ ‘ಅನ್ನ ಪ್ರಸಾದಂ’ ಮಲ್ಟಿ ಕ್ಯುಸಿನ್ ಫ್ಯಾಮಿಲಿ ವೆಜ್ ರೆಸ್ಟೋರೆಂಟ್ ಶುಭಾರಂಭಗೊಂಡಿದ್ದು, ರುಚಿಯಿಂದಲೇ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಚನ್ನರಾಯಪಟ್ಟಣದ ಬರ್ಗೂರು ಹ್ಯಾಂಡ್ ಪೋಸ್ಟ್ ಬಳಿಯಲ್ಲಿರುವ ಅನ್ನ ಪ್ರಸಾದಂ ಹೋಟೆಲ್ ಕೇವಲ ಹಸಿವು ನೀಗಿಸುವ ಜಾಗವಷ್ಟೇ ಅಲ್ಲ, ಅದೊಂದು ಶುದ್ಧ ಸಸ್ಯಾಹಾರಿ ರುಚಿಯ ಸ್ವರ್ಗವಾಗಿತ್ತು. ಹೋಟೆಲ್ ಪ್ರವೇಶಿಸುತ್ತಿದ್ದಂತೆ ‘ನಂದಿನಿ ತುಪ್ಪದ ಸ್ವಾದ, ಗುಣಮಟ್ಟದ ಆಹಾರ’ ಎಂಬ ಬೋರ್ಡ್ ಗ್ರಾಹಕರನ್ನು ಕೈಬೀಸಿ ಕರೆಯುತ್ತದೆ. ‘ಅಮ್ಮನ ಕೈ ರುಚಿಗೆ ಹೊಸ ವಿಳಾಸ’ ಎಂಬ ಮಾತಿಗೆ ತಕ್ಕಂತೆ, ಅಲ್ಲಿನ ಪ್ರತಿಯೊಂದು ತಿನಿಸುಗಳೂ ಮನೆಯೂಟದ ನೆನಪು ತರಿಸುವಂತಿವೆ. 2026ರ ಜೂನ್‌ 5 ರಂದು ಹೋಟೆಲ್‌ನ ಭವ್ಯ ಉದ್ಘಾಟನಾ ಸಮಾರಂಭ ನೆರವೇರಿತ್ತು. ಆರ್‌ಸಿಬಿ (RCB) ಗೆಲುವಿನ ಸಂಭ್ರಮದ ಅಂಗವಾಗಿ ಜೂನ್‌ 8 ಮತ್ತು 9 ರಂದು ಎರಡು ದಿನ ಗ್ರಾಹಕರಿಗೆ ಬರೋಬ್ಬರಿ 50% ರಿಯಾಯಿತಿ…

Read More

ಕನ್ನಡ ಹಾಗೂ ತುಳು ಭಾಷೆ, ಸಾಹಿತ್ಯ, ಜಾನಪದ, ಸಂಶೋಧನಾ ಕ್ಷೇತ್ರಗಳಲ್ಲಿ ವಿದ್ವಾಂಸರಲ್ಲೊಬ್ಬರಾದ ಡಾ| ಶಿವರಾಮ ಶೆಟ್ಟಿಯವರು 2026 ನೇ ಸಾಲಿನ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್ ಹೆಗ್ಡೆ ಇವರ ಜಂಟಿ ಹೆಸರಲ್ಲಿ ನೀಡಲಾಗುವ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್ ಹೆಗ್ಡೆ ಇವರಿಬ್ಬರ ನೆನಪಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ಈ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜೂನ್ 20 ರಂದು ನಡೆಯಲಿರುವುದು. ಪ್ರಶಸ್ತಿಯು ರೂ.20,000/- ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ| ಬಿ. ಜಗದೀಶ್ ಶೆಟ್ಟಿ ತಿಳಿಸಿರುತ್ತಾರೆ. ಡಾ| ಶಿವರಾಮ ಶೆಟ್ಟಿಯವರು 1957ರ ಅಕ್ಟೋಬರ್ 3ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಬೋಳಾರದಲ್ಲಿ ಜನಿಸಿದರು. ತಂದೆ ದಿವಂಗತ ಬೋಳಾರ ಚಂದಪ್ಪ ಶೆಟ್ಟಿ ಹಾಗೂ ತಾಯಿ ದಿವಂಗತ ಸೇಸಮ್ಮ. ಇವರು ಮೈಸೂರು ವಿಶ್ವವಿದ್ಯಾನಿಲಯದಿಂದ ಮಂಗಳಗಂಗೋತ್ರಿಯ ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ…

Read More

ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾ ನಗರದಲ್ಲಿ ರೋಟರಿ ಕ್ಲಬ್‌ ಮಣಿಪಾಲದ ಜಂಟಿ ಆಶ್ರಯದೊಂದಿಗೆ ಜೂನ್‌ ೫ ರಂದು ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಣಿಪಾಲ ಇನ್ಸ್ಟಿಟ್ಯೂಟ್‌ ಆಫ್‌ ಟೆಕ್ನೊಲೊಜಿ ಮಾಹೆಯ ಸಹಾಯಕ ಪ್ರಾಧ್ಯಾಪಕ ನೌಷ ಶೆಟ್ಟಿಯವರು ಪ್ಲಾಸ್ಟಿಕ್‌ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಕ್ಲಬ್‌ ಮಣಿಪಾಲದ ಅಧ್ಯಕ್ಷೆ ಶ್ರೀಮತಿ ಶಶಿಕಲಾ ರಾಜವರ್ಮ ಪರಿಸರ ಸಂರಕ್ಷಣೆಯ ನಮ್ಮೆಲ್ಲರ ಹಕ್ಕು ಎಂದು ಮಾರ್ಗದರ್ಶನ ನೀಡಿದರು. ರೋಟರಿ ಕ್ಲಬ್‌ ಮಣಿಪಾಲದ ಕಾರ್ಯದರ್ಶಿ ವಾಣಿಶ್ರೀ ಹಾಗೂ ರೊಟೆರಿಯನ್ ರಾಜವರ್ಮ ಅರಿಗ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಗಿಡ ನೆಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗಣೇಶ್‌ ಶೆಟ್ಟಿ, ಜೆ.ಇ.ಇ/ನೀಟ್‌ ಫೌಂಡೇಷನ್‌ ಸ್ಟ್ಯೂಡೆಂಟ್‌ ಕೋರ್ಡಿನೇಟರ್‌ ಶ್ರೀಮತಿ ಶಮಿತ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪೃಕೃತಿ ಕಾರ್ಯಕ್ರಮ ನಿರ್ವಹಿಸಿ, ಗಣಿತ ಶಿಕ್ಷಕ ಕಿಶನ್‌ ನಾಯಕ್‌ ವಂದಿಸಿದರು.

Read More

ರೋಟರಿ ಕ್ಲಬ್ ಕಾರ್ಕಳ ವತಿಯಿಂದ ವಿದ್ಯಾರ್ಥಿಗೆ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾರಾಡಿ ಇಲ್ಲಿ ನಡೆಯಿತು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಅವರು ಮಾತನಾಡಿ, ರೋಟರಿಯ ಧ್ಯೇಯ ವಾಕ್ಯ ಸ್ವಹಿತ ಮೀರಿದ ಸೇವೆ. ಸಮುದಾಯ ಸೇವೆಯಲ್ಲಿ ಸದಾ ತೊಡಗಿಸಿಕೊಂಡಿರುವ ರೋಟರಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ. ಚೆನ್ನಾಗಿ ಕಲಿತು ಮುಂದೊಂದು ದಿನ ನೀವು ಇನ್ನೊಬ್ಬರಿಗೆ ಸಹಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳಿ ಎಂದರು. ಕಾರ್ಯಕ್ರಮದ ಪ್ರಾಯೋಜಕರಾದ ಸಮದ್ ಖಾನ್ ಮಾತನಾಡುತ್ತಾ, ಬಡತನ ಕಷ್ಟಗಳು ಅನೇಕ ಪಾಠಗಳನ್ನು ಕಲಿಸಿಕೊಡುತ್ತದೆ. ಅದೇ ಇಂದು ಇತರರಿಗೆ ಸಹಾಯ ಮಾಡಲು ನನಗೆ ಪ್ರೇರಣೆಯಾಗಿದೆ ಎಂದರು. ಕ್ಲಬ್ಬಿನ ಸಮುದಾಯ ಸೇವಾ ಚೇರ್ಮನ್ ವಸಂತ್ ಎಂ ಮಾತನಾಡಿ, ಇಂದು ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸಹಾಯ ಮಾಡುವ ದಾನಿಗಳು ಸಾಕಷ್ಟು ಇದ್ದಾರೆ. ಇದೆಲ್ಲವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಕಲಿತು ದೇಶದ ಸತ್ಪ್ರಜೆಗಳಾಗಿ ಎಂದರು. ವೇದಿಕೆಯಲ್ಲಿ…

Read More

ಬೆಂಗಳೂರು ಬಂಟರ ಸಂಘವು ಸಮಾಜದ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಂಸ್ಥೆಯಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸಮಾಜದ ಏಳಿಗೆಗಾಗಿ ಹಲವಾರು ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಿರುವ ಬೆಂಗಳೂರು ಬಂಟರ ಸಂಘದ ಪ್ರಸ್ತುತ ಪದಾಧಿಕಾರಿಗಳ ಆಡಳಿತಾವಧಿ ಮುಗಿಯುತ್ತಿದ್ದು, 2026-28 ರ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಚುನಾವಣೆ ನಡೆಯಲಿದೆ. ಈ ಸಲ ಅಧ್ಯಕ್ಷ ಸ್ಥಾನಕ್ಕಾಗಿ ತೆರೆಯ ಹಿಂದೆ ಹಲವಾರು ಘಟಾನುಘಟಿಗಳು ಪ್ರಯತ್ನಿಸುತ್ತಿದ್ದು, ಡಾ| ದೀಪಕ್ ಶೆಟ್ಟಿ ಹೀಗಾಗಲೇ ಬಹಿರಂಗವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ದೀಪಕ್ ಶೆಟ್ಟರಿಗೆ ಪ್ರತಿಸ್ಪರ್ಧಿಯಾಗಿ ಮಹಿಳಾ ಉದ್ಯಮಿ ಶ್ರೀಮತಿ ಕಾಂತಿ ಶೆಟ್ಟಿಯವರು ಕೂಡಾ ಸಜ್ಜಾಗಿದ್ದಾರೆ ಎಂಬ ಮಾಹಿತಿ ದೊರೆತಿದೆ. ಕಾಂತಿ ಶೆಟ್ಟಿಯವರು ಈ ಹಿಂದಿನ ಚುನಾವಣೆಗಳಲ್ಲಿ ಗೆದ್ದು ಕಾರ್ಯಕಾರಿ ಸಮಿತಿ ಸದಸ್ಯೆಯಾಗಿ, ಜೊತೆ ಕಾರ್ಯದರ್ಶಿಯಾಗಿ, ಮಹಿಳಾ ಉಪಾಧ್ಯಕ್ಷೆಯಾಗಿ ತಮ್ಮ ಜವಾಬ್ದಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ ಮತ್ತು ನಿಷ್ಠೆಯಿಂದ ನಿರ್ವಹಿಸಿದ್ದಾರೆ. ಸಮಾಜ ಸೇವೆಯಲ್ಲಿಯೂ ಸೈ ಎನಿಸಿಕೊಂಡಿರುವ ಕಾಂತಿ ಶೆಟ್ಟಿಯವರು ಸಂಘದ ಅಭಿವೃದ್ಧಿ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ನೇರ, ನಿಷ್ಪಕ್ಷಪಾತ ಮತ್ತು ಕರ್ತವ್ಯನಿಷ್ಠೆಗೆ…

Read More

ಜೂನ್ 14 ರಂದು ನಡೆಯಲಿರುವ ತುಳುವೇಶ್ವರಿ (ಮುಳಲ) ಸಾನಿಧ್ಯದ ಅಷ್ಟಮಂಗಲ ಪ್ರಶ್ನೆ ಚಿಂತನೆಯ ಹಿನ್ನೆಲೆಯಲ್ಲಿ, ಬಸ್ರೂರಿನ ತುಳುವೇಶ್ವರಿ ಸಾನಿಧ್ಯದಲ್ಲಿ ಸ್ಥಳ ಪರಿಶೀಲನೆ ಹಾಗೂ ವಿಶೇಷ ಪ್ರಾರ್ಥನಾ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ತುಳುವೇಶ್ವರಿ ಸಾನಿಧ್ಯದ ಪ್ರಸ್ತುತ ವಾರಿಸುದಾರರಾದ ಪ್ರಶಾಂತ್ ಪ್ರಭು ಹಾಗೂ ಸುಭಾಷ್ ಚಂದ್ರ ಶೆಟ್ಟಿ ಅವರು ಉಪಸ್ಥಿತರಿದ್ದು, ತುಳುನಾಡಿನ ಈ ಪ್ರಾಚೀನ ಶಕ್ತಿ ಸಾನಿಧ್ಯದ ಪುನರುಜ್ಜೀವನ ಮತ್ತು ಅಭಿವೃದ್ಧಿಗಾಗಿ ಸುಮಾರು 22 ಸೆಂಟ್ ಭೂಮಿಯನ್ನು ದಾನ ರೂಪದಲ್ಲಿ ನೀಡಲು ಸಿದ್ಧರಾಗಿರುವುದಾಗಿ ಭರವಸೆ ನೀಡಿದರು. ಇದೇ ವೇಳೆ ಇವರನ್ನು ದೇವಸ್ಥಾನದ ಟ್ರಸ್ಟ್ ಮತ್ತು ಆಡಳಿತ ಸಮಿತಿಯಲ್ಲಿ ಟ್ರಸ್ಟಿಗಳಾಗಿ ಸೇರಿಸಿಕೊಳ್ಳುವುದಾಗಿ ಸಮಿತಿಯಿಂದ ಭರವಸೆ ನೀಡಲಾಯಿತು. ಅಷ್ಟಮಂಗಲ ಪ್ರಶ್ನೆ ಚಿಂತನೆಯಲ್ಲಿ ದೈವಜ್ಞ ಜ್ಯೋತಿಷ್ಯ ತಿಲಕಂ ಶಶಿಧರ ಮಾಂಗಡ್ ಅವರ ಸಮ್ಮುಖದಲ್ಲಿ ದೊರೆತ ದೈವ ಸಂದೇಶದಂತೆ, ಶ್ರೀಚಕ್ರ ಸಾನಿಧ್ಯ ಹೊಂದಿರುವ ತುಳುವೇಶ್ವರಿ (ಮುಳಲ) ಸಾನಿಧ್ಯದ ಜೀರ್ಣೋದ್ಧಾರ ಮತ್ತು ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಬೇಕಾಗಿದೆ. ತುಳುವೇಶ್ವರ ಮತ್ತು ತುಳುವೇಶ್ವರಿ ಸಾನಿಧ್ಯಗಳು ಒಂದೇ ಆಧ್ಯಾತ್ಮಿಕ ಪರಂಪರೆಯ ಎರಡು ಕೇಂದ್ರಗಳಾಗಿದ್ದು,…

Read More