Author: admin

ಇದೊಂದು ಅತ್ಯಂತ ಸಾಮಾನ್ಯವಾದ ತೊಂದರೆ. ಕಡಿಮೆಯೆಂದರೂ ಶೇಕಡ 80 ಮಹಿಳೆಯರು ಹದಿಹರೆಯದಲ್ಲಿ ಮುಟ್ಟು ಪ್ರಾರಂಭವಾಗುವ ಕೆಲವು ವರ್ಷಗಳಾದರೂ ಈ ನೋವನ್ನು ಅನುಭವಿಸಿರಬಹುದು. ಇದರ ತೀವ್ರತೆಯಲ್ಲಿ ವ್ಯತ್ಯಾಸ ಇರಬಹುದಷ್ಟೆ. ಹದಿಹರೆಯದಲ್ಲಿ ಮುಟ್ಟಿನ ನೋವು ತಾಯಿಗೆ ಅತೀವ ಮಾನಸಿಕ ಒತ್ತಡ ಉಂಟು ಮಾಡಿದರೆ ಮಧ್ಯ ವಯಸ್ಸಿನ ಮುಟ್ಟಿನ ನೋವು ಆ ಮಹಿಳೆಗೆ ಬಹಳ ಮಾನಸಿಕ ಒತ್ತಡ ಮತ್ತು ದೈಹಿಕ ಒತ್ತಡ ಉಂಟು ಮಾಡುತ್ತದೆ. ಮುಟ್ಟಿನ ತೊಂದರೆಗಳಲ್ಲಿ ಎರಡು ವಿಧಗಳಿವೆ. 1) ಹದಿಹರೆಯದ ಮುಟ್ಟಿನ ನೋವು : ಹುಡುಗಿ ಪ್ರಬುದ್ಧಾವಸ್ಥೆಗೆ ಬಂದ ಮೇಲೆ ಮುಟ್ಟಿನ ಜೊತೆಗೆ ಬರುವ ನೋವು ಹಲವು ರೀತಿಯ ಸಮಸ್ಯೆಗಳನ್ನು ತಂದೊಡುತ್ತವೆ. ಕಲಿಕೆಗೂ ತೊಂದರೆ ಉಂಟು ಮಾಡುವುದಲ್ಲದೇ ಆಹಾರ ಸೇವಿಸುವಲ್ಲಿಯೂ ವ್ಯತ್ಯಯವಾಗುತ್ತದೆ. ಕೆಳ ಹೊಟ್ಟೆನೋವು, ಸೊಂಟನೋವು, ತೊಡೆಗಳಲ್ಲಿ ನೋವು ಕಂಡು ಬರಬಹುದು. ಇದರ ಜೊತೆಗೆ ವಾಂತಿಭೇದಿಯೂ ಕಂಡು ಬರಬಹುದು. ಕೆಲವರಲ್ಲಿ ಯಾವುದೇ ಕಾರಣವಿಲ್ಲದೇ ಅತೀವ ಬಳಲಿಕೆಯೂ ಇರಬಹುದು. ಆದರೆ ಸಮಾಧಾನದ ವಿಷಯವೆಂದರೆ ಈ ಹರೆಯದಲ್ಲಿ ಬರುವ ಮುಟ್ಟಿನ ನೋವು ಬೇರೆ ಯಾವುದೇ ತೊಂದರೆ…

Read More

ತುಳುನಾಡಿನ ಭಾಷೆ, ಸಂಸ್ಕೃತಿ ಮತ್ತು ಸಮುದಾಯ ಸಂಘಟನೆಯಲ್ಲಿ ಸಲ್ಲಿಸಿದ ಮಹತ್ವದ ಸೇವೆಯನ್ನು ಗುರುತಿಸಿ ಅಲಯನ್ಸ್ ಯೂನಿವರ್ಸಿಟಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ತುಳು ವಿಚಾರ ಸಂಕಿರಣದಲ್ಲಿ ಮೂಲ್ಕಿ ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ಸಂಚಾಲಕಿ ಕಕ್ವಗುತ್ತು ಶ್ರೀಮತಿ ಭಾನುಮತಿ ಪ್ರಶಾಂತ್ ಶೆಟ್ಟಿಯವರಿಗೆ ಶ್ರೀ ಸರ್ವೋತ್ತಮ ಶೆಟ್ಟಿ ಹಾಗೂ ಡಾ| ರಾಜೇಶ್ ಆಳ್ವ ಅವರು ‘ತುಳುವರ್ಲ್ಡ್ ಸಮ್ಮಾನ್’ ಪ್ರಶಸ್ತಿ ನೀಡಿ ಗೌರವಿಸಿದರು. ಮೂಲ್ಕಿ ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ಸಂಚಾಲಕಿಯಾಗಿ ಭಾನುಮತಿ ಶೆಟ್ಟಿಯವರು ತೋರಿದ ನಾಯಕತ್ವ, ಸಂಘಟನಾ ಸಾಮರ್ಥ್ಯ ಮತ್ತು ಸೇವಾ ಮನೋಭಾವವು ತುಳುನಾಡಿನ ಮಹಿಳಾ ಶಕ್ತಿಗೆ ಹೊಸ ದಿಕ್ಕು ನೀಡಿದೆ. ಮೂಲಭೂತ ಮಟ್ಟದಿಂದ ಸಂಘಟನೆಯನ್ನು ಬಲಪಡಿಸುವ ಇವರ ಶೈಲಿ, ಮಹಿಳೆಯರನ್ನು ಮುನ್ನಡೆಗೆ ತರುವ ದೃಷ್ಟಿ ಮತ್ತು ಸಂಸ್ಕೃತಿಯ ಮೇಲಿನ ನಿಷ್ಠೆ ಇವುಗಳೆಲ್ಲವೂ ಈ ಗೌರವಕ್ಕೆ ಸಂಪೂರ್ಣ ಅರ್ಹತೆಯನ್ನು ತಂದುಕೊಟ್ಟಿವೆ. ಈ ಸಮ್ಮಾನ್ ಭಾನುಮತಿ ಶೆಟ್ಟಿಯವರ ಮುಂದಿನ ಸೇವಾ ಪಯಣದಲ್ಲಿ ಇನ್ನಷ್ಟು ಶಕ್ತಿ, ಉತ್ಸಾಹ ಮತ್ತು ಪ್ರೇರಣೆಯನ್ನು ನೀಡಲಿ. ತುಳುನಾಡಿನ ಮಣ್ಣು, ಮಾತು ಮತ್ತು ಮಾನವೀಯತೆಯ ಸೇವೆಯಲ್ಲಿ…

Read More

ತನ್ನ ಆದಾಯದಲ್ಲಿ ತನ್ನವರನ್ನು ಪೋಷಿಸುವ ಕೆಲಸವನ್ನು ಪಶು ಪಕ್ಷಿಗಳು ಕೂಡ ಮಾಡುತ್ತವೆ. ಆದರೆ, ತಾನು ಗಳಿಸಿದ ಆದಾಯದ ಒಂದು ಪಾಲನ್ನು ಸಮಾಜಮುಖಿ ಕೆಲಸಕ್ಕೆ ವಿನಿಯೋಗಿಸಿಕೊಳ್ಳಲು ಬಲು ದೊಡ್ಡ ಮನಸ್ಸು ಬೇಕಾಗುತ್ತದೆ. ಈ ನಿಟ್ಟಿನಲ್ಲಿ ದಯಾನಂದ ಹೆಗ್ಡೆ ಮತ್ತು ಸುಗಂಧಿ ಹೆಗ್ಡೆ ದಂಪತಿಗಳ ಸಮಾಜ ಸೇವೆ ಶ್ಲಾಘನೀಯ ಎಂದು ನವೋದಯ ಕನ್ನಡ ಸೇವಾ ಸಂಘದ ಅಧ್ಯಕ್ಷರಾದ ಎಳತ್ತೂರುಗುತ್ತು ದಯಾನಂದ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ತರುಣ ಭಾರತ ಚಾರಿಟೇಬಲ್ ಟ್ರಸ್ಟ್ (ರಿ) ಹೆರ್ಮುಂಡೆ ಇದರ ಮುಂಬೈ ಶಾಖೆಯ ಪ್ರಥಮ ವಾರ್ಷಿಕೋತ್ಸವ ಮತ್ತು ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು. ಸಮಾಜದ ಒಳಿತಿಗಾಗಿ ತನ್ನಿಂದ ಏನಾದರೂ ಆಗಬೇಕೆಂದು ದೃಢ ಸಂಕಲ್ಪ ಹೊಂದಿರುವ ದಯಾನಂದ ಹೆಗ್ಡೆಯವರ ಆಶಯಕ್ಕೆ ಭಗವಂತನ ಸಂಪೂರ್ಣ ಅನುಗ್ರಹವಿರಲಿ. ಮುಂಬರುವ ದಿನಗಳಲ್ಲಿ ಇನ್ನೂ ಸುಸಜ್ಜಿತ ಕಚೇರಿಯಲ್ಲಿ ತಮ್ಮ ಈ ನಿಸ್ವಾರ್ಥ ಸೇವೆ ದೊಡ್ಡ ಮಟ್ಟದಲ್ಲಿ ನಡೆಯಲಿ ಎಂದು ಅವರು ಹಾರೈಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಇನ್ನೋರ್ವ ಅತಿಥಿ ಬಿಲ್ಲವರ ಅಸೋಸಿಯೇಶನ್…

Read More

ಯಕ್ಷಧ್ರುವ ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ಅಧ್ಯಕ್ಷರಾಗಿ ಲೀಲಾಧರ ಶೆಟ್ಟಿ ಕಟ್ಲ ಆಯ್ಕೆಯಾಗಿದ್ದಾರೆ. ಸುರತ್ಕಲ್ ಬಂಟರ ಭವನದಲ್ಲಿ ನಡೆದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಗೌರವಾಧ್ಯಕ್ಷರಾಗಿ ಸುಧಾಕರ ಎಸ್ ಪೂಂಜ, ಅಧ್ಯಕ್ಷರಾಗಿ ಲೀಲಾಧರ ಶೆಟ್ಟಿ ಕಟ್ಲ, ಸಂಚಾಲಕರಾಗಿ ನಾಗರಾಜ್ ಕಡಂಬೋಡಿ, ಸಹ ಸಂಚಾಲಕರಾಗಿ ಡಾ| ಸುಧಾ ಚಂದ್ರಶೇಖರ್ ಶೆಟ್ಟಿ, ಉಪಾಧ್ಯಕ್ಷರುಗಳಾಗಿ ರಮೇಶ್ ಭಟ್ ಎಸ್.ಜಿ, ಸಹನಾ ರಾಜೇಶ್ ರೈ, ಪ್ರಧಾನ ಕಾರ್ಯದರ್ಶಿಯಾಗಿ ಬಾಳ ಗಂಗಾಧರ ಪೂಜಾರಿ ಚೇಳ್ಯಾರು, ಕೋಶಾಧಿಕಾರಿಯಾಗಿ ರಾಕೇಶ್ ಹೊಸಬೆಟ್ಟು, ಜೊತೆ ಕಾರ್ಯದರ್ಶಿಗಳಾಗಿ ಗುಣಶೇಖರ್ ಶೆಟ್ಟಿ, ಸತೀಶ್ ಶೆಟ್ಟಿ ಬಾಳಿಕೆ, ಪಾರ್ವತಿ ಎಸ್ ಅಮೀನ್, ಉಮೇಶ್ ಶೆಟ್ಟಿ, ಸವಿತಾ ಭವಾನಿಶಂಕರ್ ಶೆಟ್ಟಿ, ಪ್ರಭಾಕರ್ ಶೆಟ್ಟಿ ಬಾಳ, ನಿರ್ಮಲಾ ಅರಿಗ, ಸಂಘಟನಾ ಕಾರ್ಯದರ್ಶಿಗಳಾಗಿ ದೇವೇಂದ್ರ ಶೆಟ್ಟಿ, ರಮೇಶ್ ಟಿ.ಎನ್, ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಪ್ರವೀಣ್ ಪಿ ಶೆಟ್ಟಿ, ರಮೇಶ್ ಶೆಟ್ಟಿ ಸುಭಾಷಿತನಗರ , ಸುಜೀರ್ ಶೆಟ್ಟಿ, ನಾರಾಯಣ ಶೆಟ್ಟಿ ಕಟ್ಲ, ಅನಂತ್‌ರಾಜ್ ಶೆಟ್ಟಿಗಾರ್ ಆಯ್ಕೆಯಾದರು.

Read More

ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಹಾಗೂ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ಬಂಟರ ಕ್ರೀಡೋತ್ಸವ ಸುರತ್ಕಲ್ ಗೋವಿಂದ ದಾಸ್ ಕಾಲೇಜ್ ಮೈದಾನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಮುಂಬೈ ಬಂಟರ ಸಂಘದ ಮಾಜಿ ಅಧ್ಯಕ್ಷ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಡಾ. ಪಿ.ವಿ ಶೆಟ್ಟಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಅವರು, ಸುರತ್ಕಲ್ ಬಂಟರ ಸಂಘ ನನ್ನ ಮನೆಯಿದ್ದಂತೆ. ಸಂಘದ ಕಾರ್ಯ ಚಟುವಟಿಕೆಗಳನ್ನು ಗಮನಿಸುತ್ತಾ ಬಂದಿದ್ದೇನೆ. ಇದು ಇತರ ಸಂಘಟನೆಗಳಿಗೆ ಮಾದರಿಯಾಗಿದೆ. ಕ್ರೀಡೆಯಷ್ಟೇ ಶಿಕ್ಷಣವೂ ಮುಖ್ಯ. ಮಕ್ಕಳು ಕ್ರೀಡೆಗೆ ಮಾತ್ರ ಮಹತ್ವ ಕೊಟ್ಟರೆ ಸಾಲದು. ಕ್ರೀಡಾ ಕ್ಷೇತ್ರದಲ್ಲಿ ಏನಾದರೂ ಸಾಧನೆ ಮಾಡಲು ಅನಾನುಕೂಲಗಳಿದ್ದರೆ ನನ್ನನ್ನು ಸಂಪರ್ಕಿಸಿ. ನಿಮ್ಮ ಜೊತೆಗೆ ನಾನಿದ್ದೇನೆ ಎಂದರು. ಬಳಿಕ ಮಾತಾಡಿದ…

Read More

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಹೆಗ್ಗೂಡು ಗ್ರಾಮದಲ್ಲಿ ಜನಾನುರಾಗಿ ವೈದ್ಯರಾಗಿ ಸುಮಾರು 45 ವರ್ಷಗಳ ಕಾಲ ನಿಸ್ವಾರ್ಥವಾಗಿ ಸೇವೆ ಸಲ್ಲಿಸಿದ ದಿವಂಗತ ಡಾಕ್ಟರ್ ಸುರೇಶ್ ಹೆಗ್ಡೆಯವರ 10 ನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಜನವರಿ 8 ರಂದು ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಹೆಗ್ಗೂಡಿನ ಡಾ. ಸುರೇಶ್ ಹೆಗ್ಡೆ ಸ್ವಗೃಹ ಸರಸ್ವತಿ ನಿಲಯದಲ್ಲಿ ಅವರ ಕುಟುಂಬ ವರ್ಗದವರು ಮತ್ತು ಡಾಕ್ಟರ್ ಸುರೇಶ್ ಹೆಗ್ಡೆ ಅಭಿಮಾನಿ ಬಳಗದ ವತಿಯಿಂದ ಅತ್ಯಂತ ಯಶಸ್ವಿಯಾಗಿ ರಕ್ತದಾನ ಶಿಬಿರ ಜರುಗಿತು. ಈ ಸಂದರ್ಭದಲ್ಲಿ ಆಗಮಿಸಿದ್ದ ಅತಿಥಿಗಳು ದಿವಂಗತರು ಖಾಸಗಿ ವೈದ್ಯರಾಗಿ 45 ವರ್ಷಗಳ ಕಾಲ ಯಾವುದೇ ಫಲಾಪೇಕ್ಷೆ ಬಯಸದೇ ಜನಸೇವೆಯೇ ಜನಾರ್ಧನ ಸೇವೆ ಎನ್ನುವ ಧ್ಯೇಯ ವಾಕ್ಯದಂತೆ ಹೆಗ್ಗೋಡು ಗ್ರಾಮ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಜನರಿಗೆ ಹಗಲು ರಾತ್ರಿ ಅವಿಶ್ರಾಂತವಾಗಿ ನೀಡಿದ ವೈದ್ಯಕೀಯ ಹಾಗೂ ಸಾಮಾಜಿಕ ಸೇವೆಯನ್ನು ಹೃದಯಾಂತರಾಳದಿಂದ ಸ್ಮರಿಸಿದರು. ರಕ್ತದಾನ ಶಿಬಿರದಲ್ಲಿ ಸಾಗರ ರೋಟರಿ ಮತ್ತು ರೆಡ್ ಕ್ರಾಸ್ ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ…

Read More

“ಆದಿ ಪರ್ಮಲೆ ಅಂತ್ಯ ಪುತ್ಯೆ” ಪನ್ಪಿ ದೈವೊ ನುಡಿತ ಪೆರ್ಮೆದಂಚನೇ ಪರ್ಮಲೆ ಪನ್ನಗನೇ ಅವ್ವೊಂಜಿ ಪೊಸ ಬಗೆತ ಪರಿಮಳ.. ಪರ್ಮಲೆ ಮಣ್ಣ ಪೆರ್ಮೆನೇ ಅಂಚಿನವು. ಮೂಡಾಯಿ ಮಲೆ, ಪಡ್ಡಾಯಿ ಕಡಲ ನಡುತ ತುಳುವ ನಾಡ್‌ಡ್ ಪಡ್ಡೆಯಿಡ್ ಪೆರಿಯ ಮಲೆ ದಿಂಜಿ ಪಚ್ಚೆ ಪಜಿರ ನಿಲೆ ಈ ಪರ್ಮಲೆದ ಪೊರ್ಲು ತಿರ್ಲ್ ಪಿಂದ್‌ದ್ ಮುಗಿಯಂದ್, ಪಂಡ್‌ದ್ ತೀರಂದ್, ತೂಯಿನಾತ್ ಬೊಡಿಯಂದ್. ಅಮರ್ ದೈವೊಲೆ ನಿಲೆ, ಅಮರ್ ದೇಬೆರೆ ಕಲೆ, ಅಮರ್ ಬೊಲ್ಲಿಲೆ ತಿಬಿಲೆ ಬೆಳಗಿನ ಮಣ್ಣ್, ಸತ್ಯೊ ದರ್ಮೊಲು ಮೆರೆಯಿ ಕಣ್ಣ್ ಉಂದು. ಪುದರ್‌ಗ್ ಸರಿಯಾದ್ ಪರ್ಮಲೆ ಮಲೆತ್ತ ನಾಡ್. ಮರೆತ್ತ ಬೂಡು! ಓಲು ಮರೆ (ಬರ್ಸ) ಎಚ್ಚನೋ ಅಲ್ಪ ಮಲೆ ಪೆರ್ಚು, ಓಲು ಮಲೆ ಎಚ್ಚನೋ ಅಲ್ಪ ಮರೆ ಪೆರ್ಚು. ಬರ್ಸೊಡ್ದು ಬುಲೆ, ಬುಲೆತ್ತ ನಿಲೆ ಪಚ್ಚೆ ಪಜಿರ ಸೆಲೆ, ಪಚ್ಚೆದೈಸಿರೊಡು ಪುಡೆಮಿದಪ್ಪೆನ ಸೇಲೆ. ಅಂಚಾದ್ ಪರ್ಮಲೆಡ್ ಬುಲೆ ಸೆಳೆ ಒರಿಪುಗಾದ್, ಪಿದಯಿ ರಾಜ್ಯೊದ ದಂಡ್ ಬರಂದಿಲೆಕೊ ಕಾಪುಗಾದ್ ದಟ್ಟಿದುಂತಿ ಮಲೆ,…

Read More

ಗಣಿತನಗರ: ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ ಮೌಲ್ಯಸುಧಾ ಮಾಲಿಕೆ-೪೪, ಜನವರಿ ೧೩ರ ಮಂಗಳವಾರದ0ದು ಸ0ಜೆ ೦೬.೧೫ಕ್ಕೆ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ೯೨.೭ ಬಿಗ್ ಎಫ್‌ಎಂನ ರೆಡಿಯೋ ಜಾಕಿ ಆರ್.ಜೆ. ನಯನರವರು ‘ಯುವಮನಸ್ಸುಗಳಿಗೆ ಒಂದಿಷ್ಟು ಮಾತು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಲಿದ್ದಾರೆ. ಆಸಕ್ತರು ಭಾಗವಹಿಸಬಹುದೆಂದು ಸAಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

Read More

ಭಾರತವು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಈಗಾಗಲೆ ಮುಂಚೂಣಿಯಲ್ಲಿದೆ. ಜ್ಞಾನಸುಧಾದಂತಹ ಸAಸ್ಥೆಗಳು ಈ ರೀತಿಯ ಉತ್ತಮ ಸಾಧನೆಯನ್ನು ಮಾಡುತ್ತಿರುವುದರಿಂದ ಎಲ್ಲಾ ಕ್ಷೇತ್ರಗಳಲ್ಲಿ ಮುಂದಿನ ದಿನಗಳಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸುವುದರಲ್ಲಿ ಸಂಶಯವಿಲ್ಲ. ನಾವು ಮಾಡುವ ಕೆಲಸದ ಅರಿವಿರಲಿ ಮತ್ತು ಅದನ್ನು ಸಂತೋಷದಿAದ ಮಾಡಬೇಕು ಆಗ ಎಲ್ಲ ಸಾಧನೆಯು ಸುಲಭ ಸಾಧ್ಯವಾಗುವುದು ಎಂದು ಶ್ರೀ ಟಿ ಸುಧಾಕರ ಪೈಯವರು ಹೇಳಿದರು. ಇವರು ಮಣಿಪಾಲದ ವಿದ್ಯಾನಗರ ಗ್ರೀನ್ಸ್ ನಲ್ಲಿ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಆಯೋಜಿಸಿರುವ ಜ್ಞಾನಸುಧಾ ಸಂಸ್ಥಾಪಕರ ದಿನಾಚರಣೆಯ ಎರಡನೇ ಹಂತದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಮಾತನಾಡಿ ಸಮರ್ಥ, ಶಕ್ತಿಶಾಲಿ ದೇಶ ನಿರ್ಮಾಣವಾಗುತ್ತಿರುವುದು ಭಾರತೀಯರಾದ ನಮಗೆ ಅಭಿಮಾನದ ವಿಷಯ. ಅಂದು ದೇಶದ ಸಾಲಕ್ಕಾಗಿ ಚಿನ್ನವನ್ನು ಅಡವಿಟ್ಟ ಭಾರತ ಇಂದು ಜಗತ್ತಿನ ೭೦ ರಾಷ್ಟçಗಳಿಗೆ ಸಾಲ ನೀಡುವ ದೇಶವಾಗಿ ಬೆಳೆದು ನಿಂತಿದೆ.ಅದರಂತೆ ಒಂದೇ ವರ್ಷದಲ್ಲಿ ದೇಶಕ್ಕೆ…

Read More

ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ನಿಟ್ಟೆ ವಿನಯ ಹೆಗ್ಡೆ ಅವರ ಜೀವನ ಶೈಲಿ ಎಲ್ಲರಿಗೂ ಆದರ್ಶ, ಅವರ ಕೊಡುಗೆ ಸಮಾಜಕ್ಕೆ ದೊಡ್ಡದು, ಅವರ ನೆನಪು ಶಾಶ್ವತ. ಸರಳ ಸಜ್ಜನಿಕೆಯ ವ್ಯಕ್ತಿತ್ವದ ವಿನಯ ಹೆಗ್ಡೆ ಅವರು ನಮ್ಮೆಲ್ಲರ ಮನಸ್ಸಿನಲ್ಲಿ ಚಿರಕಾಲ ಉಳಿಯುತ್ತದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೆ ಅಜಿತ್ ಕುಮಾರ್ ರೈ ಮಾಲಾಡಿ ತಿಳಿಸಿದರು. ಬಂಟ್ಸ್ ಹಾಸ್ಟೇಲ್ ಶ್ರೀ‌ ರಾಮಕೃಷ್ಣ ಕಾಲೇಜ್ ಬಳಿ ಇರುವ ಶ್ರೀಮತಿ ಗೀತಾ ಎಸ್ ಎಂ ಶೆಟ್ಟಿ ಸಭಾಂಗಣದಲ್ಲಿ ಇತ್ತೀಚೆಗೆ ಅಗಲಿದ ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿನಯ ಹೆಗ್ಡೆಯವರಿಗೆ ಸಲ್ಲಿಸಿದ ಶ್ರದ್ದಾಂಜಲಿ ನುಡಿ ನಮನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ವಿನಯ ಹೆಗ್ಡೆಯವರ ಜೀವನ ಶೈಲಿ ನಮಗೆಲ್ಲರಿಗೂ ಮಾದರಿ. ಅವರಂತೆ ಇನ್ನೋರ್ವ ಬಂಟ ಇಲ್ಲ. ವಿನಯ ಹೆಗ್ಡೆಯವರ ನೆನಪು ನಮ್ಮ ಮನಸ್ಸಿನಲ್ಲಿ ಚಿರಕಾಲ ಉಳಿಯುತ್ತದೆ. ಅವರು ನಡೆದ ಹಾದಿಯಲ್ಲಿ ನಾವು ಮುನ್ನಡೆಯೋಣ ಎಂದರು. ಕರ್ನಲ್ ಶರಶ್ಚಂದ್ರ ಭಂಡಾರಿ…

Read More