Author: admin

ಅನಿವಾಸಿ ಭಾರತೀಯ ದಂಪತಿ ಸತೀಶ್ ದಾಬ ಶೆಟ್ಟಿ ಮತ್ತು ಅನಿತಾ ಸತೀಶ್ ಶೆಟ್ಟಿ ಅವರ ಸುಪುತ್ರ, ಯುಎಇ ದುಬಾಯಿಯ ಅಲ್ ವಾರ್ಖಾ ಅವರ್ ಓವ್ನ್ ಇಂಗ್ಲಿಷ್ ಹೈಸ್ಕೂಲ್ ನ ಪ್ರತಿಭಾವಂತ ವಿದ್ಯಾರ್ಥಿ, 2022 ರಲ್ಲಿ ರಾಣಿ ಎಲಿಜಬೆತ್ ಪ್ಲಾಟಿನಂ ಜುಬಿಲಿ ಸ್ಕಾಲರ್ ಶಿಪ್ ಪಡೆದ ಆರುಷ್ ಸತೀಶ್ ಶೆಟ್ಟಿಯವರು 12 ನೇ ತರಗತಿಯಲ್ಲಿ (ಸಿ.ಬಿ.ಎಸ್.ಸಿ ವಿಜ್ಞಾನ ವಿಭಾಗ) 98.4 ಶೇಕಡಾದೊಂದಿಗೆ ತೇರ್ಗಡೆಗೊಂಡು ಎರಡನೇ ರ‌್ಯಾಂಕ್ ಪಡೆದಿದ್ದಾರೆ. ಕಾಪು ಉಳಿಯಾರಗೋಳಿ ನಂದೋಡಿ ಗುತ್ತು ಮನೆತನದ ಸತೀಶ್ ದಾಬ ಶೆಟ್ಟಿ ದಂಪತಿಯ ಹಿರಿಯ ಪುತ್ರಿ ಆಕೃತಿ ಸತೀಶ್ ಶೆಟ್ಟಿ ಯು.ಎ.ಇ ಯ ಟಾಪರ್ ಹಾಗೂ ಮಧ್ಯ ಪ್ರಾಚ್ಯ ದೇಶಗಳಲ್ಲೇ 2020 ರ ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಸತೀಶ್ ಶೆಟ್ಟಿ ದಂಪತಿಯರ ಪ್ರತಿಭಾವಂತ ಮಕ್ಕಳಿಗೆ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ವತಿಯಿಂದ ಹಾರ್ದಿಕ ಅಭಿನಂದನೆಗಳು.

Read More

ಮುಂಬಯಿಯ ಹಿರಿಯ ಹೋಟೇಲು ಉದ್ಯಮಿ ಹಾಗೂ ಕೃಷ್ಣ ಪ್ಯಾಲೇಸ್ ಹೋಟೇಲ್ ನ ಸಿಎಂಡಿ ಕೃಷ್ಣ ವೈ ಶೆಟ್ಟಿಯವರನ್ನು ಬಾಂಬೆ ಬಂಟ್ಸ್ ಅಸೋಸಿಯೇಶನ್ ಇದರ ವಿಶ್ವಸ್ಥರಾಗಿ ಅಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿಯವರ ಸೂಚನೆಯ ಮೇರೆಗೆ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಅವಿರೋಧವಾಗಿ ಅನುಮೋದಿಸಿ ನೇಮಕ ಮಾಡಿದರು. ಮೃದು ಭಾಷಿ, ಪರೋಪಕಾರಿ, ವಿಶಾಲ ಮನೋಭಾವಿ, ಸಮಾಜಸೇವಕ, ಕೊಡುಗೈದಾನಿ, ಉದಾರ ಮನಸ್ಸುಳ್ಳ ಕೃಷ್ಣ ಶೆಟ್ಟಿಯವರನ್ನು ವಿಶ್ವಸ್ಥರಾಗಿ ನೇಮಿಸಿದ್ದರಿಂದ ಸಂಸ್ಧೆಗೆ ನಿರಂತರ ಸಹಾಯಹಸ್ತ ದೊರಕಿ, ಸಂಸ್ದೆ ಇನ್ನಷ್ಷು ಹೆಚ್ಚಿನ ಉನ್ನತಿ ಪಡೆಯುತ್ತದೆ ಎಂದು ಅಧ್ಯಕ್ಷರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅಸೋಸಿಯೇಶನ್ ಅಧ್ಯಕ್ಷ ನ್ಯಾ. ಡಿ.ಕೆ ಶೆಟ್ಟಿ, ಉಪಾಧ್ಯಕ್ಷ ಐಕಳ ಕಿಶೋರ್ ಕೆ ಶೆಟ್ಟಿ, ಗೌ.ಪ್ರ ಕಾರ್ಯದರ್ಶಿ ನ್ಯಾ. ಶೇಖರ ಆರ್ ಶೆಟ್ಟಿ, ಗೌ. ಕೋಶಾಧಿಕಾರಿ ಸಿ.ಎ ವಿಶ್ವನಾಥ ಶೆಟ್ಟಿ ಎಲ್ಲರೂ ಸೇರಿ ಅವರಿಗೆ ಹೂಗುಚ್ಛವನ್ನು ನೀಡಿ ಗೌರವಿಸಿ, ಶುಭ ಕಾಮನೆಯನ್ನಿತ್ತು ಅವರನ್ನು ಸಂಸ್ಥೆಯ ವಿಶ್ವಸ್ಥರನ್ನಾಗಿ ಸ್ವಾಗತಿಸಿದರು. ಕೃಷ್ಣ ವೈ ಶೆಟ್ಟಿಯವರು ನಂತರ ಮಾತನಾಡಿ, ನನ್ನಿಂದ ಸಂಸ್ಥೆಯ ಒಳಿತಿಗಾಗಿ…

Read More

ಕರಾವಳಿಯ ಬಂಟ ಸಮುದಾಯದ ಕ್ರೀಡಾ ಪಟುಗಳಿಗಾಗಿ ಇದೀಗ ಒಂದು ಅದ್ಭುತ ಕ್ರೀಡಾ ವೇದಿಕೆ ಸಜ್ಜಾಗಿದೆ. ಬಂಟರ ಸಂಘ ಪಳ್ಳಿ ನಿಂಜೂರು ವಲಯದ ಆಶ್ರಯದಲ್ಲಿ ಕಾರ್ಕಳ, ಕಾಪು ಮತ್ತು ಹೆಬ್ರಿ ತಾಲೂಕುಗಳ ಸಹಯೋಗದೊಂದಿಗೆ ಮೇ 16 ರಂದು ಬೃಹತ್ ‘ಬಂಟರ ಕ್ರೀಡೋತ್ಸವ -2026’ ಆಯೋಜಿಸಲಾಗಿದೆ. ಪಳ್ಳಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಈ ಹೊನಲು ಬೆಳಕಿನ ಕ್ರೀಡಾಕೂಟವು ಸಮುದಾಯದ ಒಗ್ಗಟ್ಟು ಮತ್ತು ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ. ಎಲ್‌ಕೆಜಿ ಮಕ್ಕಳಿಂದ ಹಿಡಿದು 50 ವರ್ಷ ಮೇಲ್ಪಟ್ಟ ಹಿರಿಯರವರೆಗೆ ವಿವಿಧ ವಯೋಮಾನದವರಿಗೆ ಪ್ರತ್ಯೇಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ವಿಜೇತರಿಗೆ ಆಕರ್ಷಕ ನಗದು ಬಹುಮಾನ ಹಾಗೂ ಟ್ರೋಫಿಗಳನ್ನು ನೀಡಲಾಗುವುದು. ಈ ಕ್ರೀಡಾ ಉತ್ಸವದಲ್ಲಿ ಬಾಲ್ ಪಾಸಿಂಗ್, ಸಂಗೀತ ಕುರ್ಚಿ, ಓಟದ ಸ್ಪರ್ಧೆ, ಉದ್ದ ಜಿಗಿತ, ಗುಂಡು ಎಸೆತ ಹಾಗೂ ಲಕ್ಕಿ ಸರ್ಕಲ್‌ನಂತಹ ವೈಯಕ್ತಿಕ ಕ್ರೀಡೆಗಳಿವೆ. ತಂಡದ ಆಟಗಳಾದ ವಾಲಿಬಾಲ್ (ಪುರುಷರಿಗೆ), ತ್ರೋಬಾಲ್ (ಮಹಿಳೆಯರಿಗೆ) ಮತ್ತು ಹಗ್ಗಜಗ್ಗಾಟ (ಪುರುಷ ಮತ್ತು ಮಹಿಳಾ ತಂಡಗಳಿಗೆ) ವಿಶೇಷ ಆಕರ್ಷಣೆಯಾಗಿದೆ. ವಾಲಿಬಾಲ್…

Read More

ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಕಾಸರಗೋಡು ತಾಲೂಕಿನಲ್ಲಿ ನಾಮಪತ್ರ ಹಿಂದೆಗೆಯುವ ಅವಧಿ ಮುಗಿದ ಬಳಿಕವೂ ಎರಡು ನಾಮಪತ್ರ ಹೆಚ್ಚು ಇದ್ದುದರಿಂದ ಅನಿವಾರ್ಯವಾಗಿ ಚುನಾವಣೆ ನಡೆಯಿತು. ಅಧ್ಯಕ್ಷರು ಸೇರಿ 84 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಚುನಾವಣಾ ಆಯೋಗ ಅಧಕೃತವಾಗಿ ಘೋಷಣೆ ಮಾಡಿದೆ. ಅಧ್ಯಕ್ಷರಾಗಿ ಕೆ ಅಜಿತ್ ಕುಮಾರ್ ರೈ ಮಾಲಾಡಿ ಮೊದಲಾಗಿ ಅವಿರೋಧ ಆಯ್ಕೆಯಾಗಿದ್ದರು. ಕಾರ್ಯಕಾರಿ ಸಮಿತಿ ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ನಡೆದ ಉಪಾಧ್ಯಕ್ಷ ಸ್ಥಾನಕ್ಕೆ ಕಾವು ಹೇಮನಾಥ ಶೆಟ್ಟಿಯವರು ನಾಮಪತ್ರ ಸಲ್ಲಿಸಿ, ಅವಿರೋಧವಾಗಿ ಆಯ್ಕೆಯಾದರು. ಇವರು ಮಾತೃ ಸಂಘದ ಜೊತೆ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಮತ್ತು ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕರಾಗಿ ದಶಕಗಳಿಗಿಂತಲೂ ಹೆಚ್ಚಿನ ಸಮಯದಿಂದ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಪ್ರಸ್ತುತ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾಗಿ ಸುಮಾರು 3.5 ಎಕ್ರೆ ಸರಕಾರಿ ಜಮೀನು ಸಂಘಕ್ಕೆ ಮಂಜೂರು ಮಾಡಿಸಿದ್ದು, ಇನ್ನೂ 2.5 ಎಕ್ರೆ ಜಮೀನು ಮಂಜೂರಾತಿ ಹಂತದಲ್ಲಿದೆ. ಈ ಜಮೀನಿನಲ್ಲಿ ಸಮುದಾಯ…

Read More

ಮುಂಬಯಿ ವಿದ್ಯಾವಿಹಾರ್ ಪಶ್ಚಿಮದ ಗಾಮ್ದೇವಿ ಅಂಬಿಕಾ ದೇವಿ, ಶ್ರೀ ಆದಿನಾಥೇಶ್ವರ, ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವವು ಮೇ 16 ರಂದು ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಕ್ಷೇತ್ರದ ಪ್ರಧಾನ ಅರ್ಚಕರಾದ ಪೆರ್ಣಂಕಿಲ ಹರಿದಾಸ್ ಭಟ್ ಅವರ ಪೌರೋಹಿತ್ಯದಲ್ಲಿ ಬೆಳಿಗ್ಗೆ 8 ಗಂಟೆಗೆ ಪ್ರಾರ್ಥನೆ, ಆ ಬಳಿಕ ದ್ವಾದಶ ನಾರಿಕೇಳ ಮಹಾಗಣಯಾಗ, ಶ್ರೀ ಮಹಾಗಣಪತಿ ದೇವರಿಗೆ ನವಕ ಪ್ರಧಾನ, ಶ್ರೀ ದುರ್ಗಾ ಪಂಚಮಂತ್ರ ಹೋಮ, ಬೆಳಿಗ್ಗೆ 11 ರಿಂದ ಕಳಶಾಭಿಷೇಕ, ಮಧ್ಯಾಹ್ನ 12 ರಿಂದ ಅಂಬಿಕಾ ಪ್ರಸನ್ನ ಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಾಯಂಕಾಲ 6:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ದುರ್ಗಾ ನಮಸ್ಕಾರ ಪೂಜೆ, ರಂಗ ಪೂಜೆ, ಪಲ್ಲಕ್ಕಿ ಉತ್ಸವ, ರಾತ್ರಿ ಪೂಜೆ ಆ ಬಳಿಕ ಪ್ರಸಾದ ವಿತರಣೆ ಜರಗಲಿದೆ. ಈ ವಾರ್ಷಿಕ ಉತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಅಂಬಿಕಾ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಪ್ರಧಾನ ಅರ್ಚಕರಾದ ವೇದಮೂರ್ತಿ ಪೆರ್ಣಂಕಿಲ ಹರಿದಾಸ್ ಭಟ್, ಅಧ್ಯಕ್ಷರಾದ…

Read More

ಬಂಟರ ಸಂಘ ಬೆಂಗಳೂರು ಪ್ರಾರ್ಥನಾ ಮಂದಿರ ಸಮಿತಿಯ ವತಿಯಿಂದ ಏಪ್ರಿಲ್ 05 ರಂದು ಉಚಿತ ಕುಣಿತ ಭಜನಾ ತರಬೇತಿ ತರಗತಿಯನ್ನು ಗೌರವ ಪ್ರಧಾನ ಕಾರ್ಯದರ್ಶಿ ವಿಜಯ್ ಜೆ ಶೆಟ್ಟಿ ಹಾಲಾಡಿ ಅವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ಪ್ರಾರ್ಥನಾ ಮಂದಿರ ಸಮಿತಿಯ ಕಾರ್ಯಾಧ್ಯಕ್ಷೆ ಶ್ರೀಮತಿ ಶೋಭಾ ಶೇಖ ಅವರು ಆಗಮಿಸಿದವರಿಗೆ ಸ್ವಾಗತವನ್ನು ಕೋರಿದರು. ಸಂಘದ ಹಿರಿಯ ಸದಸ್ಯರಾದ ಕೊರ್ಗಿ ಆನಂದ ಶೆಟ್ಟಿ ಅವರು ಮಕ್ಕಳಿಗೆ ಕುಣಿತ ಭಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಪ್ರಾರ್ಥನಾ ಮಂದಿರ ಸಮಿತಿ ಸದಸ್ಯರು, ಕುಣಿತ ಭಜನಾ ತರಬೇತುದಾರರಾದ ಶರಣ್ ಶೆಟ್ಟಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟ ಮಕ್ಕಳಿಗೂ ಪೋಷಕರಿಗೂ ಧನ್ಯವಾದಗಳು ಸಮರ್ಪಿಸಿದರು. ನಂತರ ಸಂಘದ ಶ್ರೀ ವರಸಿದ್ದಿ ವಿನಾಯಕ ಪ್ರಾರ್ಥನಾ ಮಂದಿರದಲ್ಲಿ ತರಬೇತುದಾರರು ಮಕ್ಕಳಿಂದ ಭಜನೆ ಆಡಿಸಿ ಕುಣಿತ ಭಜನೆ ತರಬೇತಿ ತರಗತಿಗೆ ಚಾಲನೆ ನೀಡಿದರು. ಪ್ರಾರ್ಥನಾ ಮಂದಿರ ಸಮಿತಿ ಸದಸ್ಯರಾದ ಚಂದ್ರಶೇಖರ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.…

Read More

ಮಂಗಳೂರು ನಗರದಲ್ಲಿ ಈಗ ಹೊಸದೊಂದು ಅಪಾಯ ತಲೆ ಎತ್ತಿದೆ. Instagram Follow ಮಾಡಿ, “ಪ್ರಾಂಕ್ ಮಾಡ್ತೀವಿ”, “ಜುಜುಬಿ ಗಿಫ್ಟ್ ಕೊಡ್ತೀವಿ” ಎಂಬ ಹೆಸರಿನಲ್ಲಿ ಯುವತಿಯರನ್ನು ಗುರಿಯಾಗಿಸಿಕೊಂಡು ಕೆಲ ಯುವಕರ ತಂಡಗಳು ಬೀದಿಗಿಳಿದಿವೆ. ಇದು ಕೇವಲ ಮೋಜಲ್ಲ, ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಡುವ ಟ್ರ್ಯಾಪ್. ರೈಲ್ವೆ ಸ್ಟೇಷನ್, ಶಾಪಿಂಗ್ ಮಾಲ್, ಕಾಲೇಜು ರಸ್ತೆ, ಮಾರ್ಕೆಟ್ ಇವೇ ಇವರ ಅಡ್ಡಾಗಳು. ಕೈಯಲ್ಲಿ ಹಣದ ಕಂತೆ, ಇನ್ನೊಂದು ಕೈಯಲ್ಲಿ ಗಿಫ್ಟ್ ಬ್ಯಾಗ್ ಹಿಡಿದುಕೊಂಡು ಯುವತಿಯರ ಗುಂಪನ್ನು ಅಡ್ಡಗಟ್ಟುತ್ತಾರೆ. “ಒಂದು Question ಕೇಳ್ತೀವಿ”, “Follow ಮಾಡಿದ್ರೆ ಗಿಫ್ಟ್” ಅಂತ ಮಾತು ಶುರು ಮಾಡುತ್ತಾರೆ. ನಂಬರ್ ಕೇಳುತ್ತಾರೆ, ಸ್ನೇಹ ಬೆಳೆಸಲು ಯತ್ನಿಸುತ್ತಾರೆ.ಕೆಲವು ಯೂಟ್ಯೂಬರ್‌ಗಳು “ವೈರಲ್” ಆಗುವ ಹುಚ್ಚಿಗೆ ಬಿದ್ದು ಇದನ್ನೇ ಕಂಟೆಂಟ್ ಮಾಡಿಕೊಂಡಿದ್ದಾರೆ. ಹೆಣ್ಣುಮಕ್ಕಳ ಅನುಮತಿ ಇಲ್ಲದೇ ವಿಡಿಯೋ ಮಾಡಿ, ಅವರ ಮುಜುಗರದ ಕ್ಷಣಗಳನ್ನು ಲಕ್ಷ ಲೈಕ್ಸ್‌ಗಾಗಿ ಬಳಸಿಕೊಳ್ಳುತ್ತಿದ್ದಾರೆ. ಕಾಸರಗೋಡು, ಉಪ್ಪಳ ಭಾಗದಿಂದಲೂ ಬಂದು ಈ ಕೆಲಸ ಮಾಡುತ್ತಿರುವ ಬಗ್ಗೆ ಸ್ಥಳೀಯರ ದೂರುಗಳಿವೆ. ಟ್ರ್ಯಾಪ್‌ನ ಮೊದಲ…

Read More

ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಕನಕದಾಸರ ಎಲ್ಲಾ ಕೃತಿಗಳನ್ನು ದೇಶದ 14 ಭಾಷೆಗಳಲ್ಲಿ ಅನುವಾದ ಮಾಡುವ ಕಾರ್ಯ ಕೈಗೊಂಡು ಅದೀಗ ತಲಾ ಮೂರು ಸಂಪುಟಗಳಲ್ಲಿ ಅಚ್ಚಾಗಿ ಬಿಡುಗಡೆಗೆ ಸಿದ್ಧವಾಗಿವೆ. ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು 14 ಭಾಷೆಗಳಲ್ಲಿ ಅನುವಾದವಾಗಿ ಸಿದ್ಧವಾದ ಸಂಪುಟಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತಿತರ ಗಣ್ಯರು ಭಾಗವಹಿಸುವರು. ಸಂಸ್ಕೃತಿ ಚಿಂತಕರಾದ ಬಂಜಗೆರೆ ಜಯಪ್ರಕಾಶ್ ಕೃತಿಗಳ ಕುರಿತು ಮಾತನಾಡುವರು. ಕರಾವಳಿ ಕರ್ನಾಟಕದ ಪ್ರಮುಖ ಆಡುಭಾಷೆಯಾಗಿರುವ ತುಳುವಿನಲ್ಲಿ ಕನಕದಾಸರ ಸಮಗ್ರ ಕೃತಿಗಳು ಅನುವಾದವಾಗಿದ್ದು, ಹಿರಿಯ ಸಂಶೋಧಕ ವಿದ್ವಾಂಸರಾದ ಪ್ರೊ| ಎ.ವಿ. ನಾವಡ ತುಳು ಆವೃತ್ತಿಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಮಂದಿ ಹಿರಿಯ ಲೇಖಕರು ಆ ಕೃತಿಗಳನ್ನು ತುಳು ಭಾಷೆಗೆ ಅನುವಾದಿಸಿದ್ದಾರೆ. ದಿ. ಡಾ|ವಾಮನ ನಂದಾವರ, ಡಾ| ವಸಂತ ಕುಮಾರ್ ಪೆರ್ಲ (ಮೋಹನ ತರಂಗಿಣಿ), ಡಾ| ವಸಂತ ಭಾರದ್ವಾಜ, ಪ್ರೊ.ಟಿ ಎ ಎನ್…

Read More

ರೋಟರಿ ಕ್ಲಬ್ ಕಾರ್ಕಳದ ‘ಕುಟುಂಬ ಸಮ್ಮಿಲನ’ ಕಾರ್ಯಕ್ರಮದಲ್ಲಿ ಆಳ್ವಾಸ್ ನ ರಂಗ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ| ಜೀವನ್ ರಾಮ್ ಸುಳ್ಯ ಇವರನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅಪೂರ್ವ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಡಾ| ಜೀವನ್ ರಾಮ್ ಸುಳ್ಯ ಅವರು, ರಂಗಭೂಮಿ ಮತ್ತು ಬದುಕು ಎಂಬ ವಿಷಯದ ಕುರಿತು ಮನಮುಟ್ಟುವಂತೆ ಹಾಗೂ ಚಿಂತನೆಗೆ ದಾರಿ ಮಾಡುವ ರೀತಿಯಲ್ಲಿ ಉಪನ್ಯಾಸ ನೀಡಿದರು. ರಂಗಭೂಮಿಯು ವ್ಯಕ್ತಿತ್ವ ವಿಕಾಸಕ್ಕೆ ನೀಡುವ ಕೊಡುಗೆ. ಕಲೆಯ ಮೂಲಕ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಅಗತ್ಯತೆ ಮತ್ತು ಜೀವನದಲ್ಲಿ ಶಿಸ್ತು, ಸಂಸ್ಕಾರ ಹಾಗೂ ಸೃಜನಶೀಲತೆಯ ಮಹತ್ವವನ್ನು ಅವರು ವಿವರಿಸಿದರು. ಅವರ ಮಾತುಗಳು ಸಭಿಕರಲ್ಲಿ ವಿಶೇಷ ಸ್ಪಂದನೆ ಮೂಡಿಸಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷರಾದ ರೋ. ಕೆ. ನವೀನ್ ಚಂದ್ರ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರೋ. PDG ಡಾ. ಭರತೇಶ ಆದಿರಾಜ್, ರೋ. ಉದಯಕುಮಾರ್…

Read More

ಉಡುಪಿ ಜಿಲ್ಲೆಯ ಕಾಪುವಿನ ಇತಿಹಾಸ ಪ್ರಸಿದ್ಧ ಶ್ರೀ ಬ್ರಹ್ಮ ಮುಗ್ಗೇರ್ಕಳ ಪಿಲಿ ಚಾಮುಂಡಿ ದೈವಸ್ಥಾನದಲ್ಲಿ ಅತ್ಯಂತ ಅಪರೂಪದ ಹಾಗೂ ಸಾಂಪ್ರದಾಯಿಕ ಆಚರಣೆಯಾದ ‘ಕಾಪು ಪಿಲಿ ಕೋಲ’ವು ಇದೇ ಬರುವ ಮೇ 16, 2026ರ ಶನಿವಾರದಂದು ಅತ್ಯಂತ ವೈಭವದಿಂದ ಜರುಗಲಿದೆ. ತುಳುನಾಡಿನ ಭೂತಾರಾಧನೆಯ ಪರಂಪರೆಯಲ್ಲಿ ತನ್ನದೇ ಆದ ವಿಶೇಷ ಸ್ಥಾನ ಹೊಂದಿರುವ ಈ ದ್ವೈವಾರ್ಷಿಕ ಉತ್ಸವವು ಪ್ರಕೃತಿ ಆರಾಧನೆಯ ಸಂಕೇತವಾಗಿದ್ದು, ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಿಸಲಿದೆ. ಈ ವಿಶೇಷ ಆಚರಣೆಯ ಅಂಗವಾಗಿ ಪಿಲಿ ಚಾಮುಂಡಿ ದೈವದ ನೇಮೋತ್ಸವಕ್ಕೂ ಮುನ್ನ ಪರಿವಾರ ದೈವಗಳಾದ ಬಬ್ಬರ್ಯ, ಕೊಡಮಣಿತ್ತಾಯ ಹಾಗೂ ನಂದಿಕೇಶ್ವರ ದೈವಗಳ ನೇಮೋತ್ಸವವು ಶಾಸ್ತ್ರೋಕ್ತವಾಗಿ ನೆರವೇರಲಿದೆ. ಪಿಲಿ ಕೋಲದ ಪ್ರಮುಖ ಆಕರ್ಷಣೆಯೆಂದರೆ ದೈವ ನರ್ತಕ ದೇವಸ್ಥಾನದಿಂದ ಪ್ರಸಾದ ಸ್ವೀಕರಿಸಿದ ನಂತರ ದೈವವು ಆವೇಶಭರಿತವಾಗಿ ಪಂಜರವನ್ನು ಮುರಿದು ಹೊರಬರುವ ದೃಶ್ಯವು ರೋಮಾಂಚನಕಾರಿಯಾಗಿರುತ್ತದೆ. ತದನಂತರ ಸುತ್ತಮುತ್ತಲಿನ ಪರಿಸರದಲ್ಲಿ ದೈವವು ನಡೆಸುವ ‘ಬೇಟೆ’ಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕರಾವಳಿಯ ನಾನಾ ಭಾಗಗಳಿಂದ ಹಾಗೂ ಮುಂಬೈನಂತಹ ನಗರಗಳಿಂದ ಸಾವಿರಾರು ತುಳುವರು ಕಾಪುವಿಗೆ ಆಗಮಿಸಲಿದ್ದಾರೆ.…

Read More