Author: admin
ಎಂ.ಆರ್.ಜಿ. ಗ್ರೂಪ್ ನ ಆಶಾ ಪ್ರಕಾಶ್ ಶೆಟ್ಟಿ ಸಹಾಯ ಪ್ರದಾನ ಸಮಾರಂಭ ‘ನೆರವು-2025’ ಡಿಸೆಂಬರ್ 25 ರಂದು ಮಂಗಳೂರಿನಲ್ಲಿ ನಡೆಯಲಿದೆ. ಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ಸುಮಾರು 4000 ಕುಟುಂಬಗಳು ಹಾಗೂ 100 ಕ್ಕೂ ಅಧಿಕ ಸಂಘ ಸಂಸ್ಥೆಗಳಿಗೆ ಒಟ್ಟು ರೂಪಾಯಿ 9 ಕೋಟಿಗೂ ಅಧಿಕ ಮೊತ್ತದ ನೆರವು ವಿತರಣೆಯಾಗಲಿದೆ ಎಂದು ಯೋಜನೆಯ ಪ್ರವರ್ತಕರಾದ ಎಂ.ಆರ್.ಜಿ ಗ್ರೂಪಿನ ಛೇರ್ಮನ್ ಡಾ| ಪ್ರಕಾಶ್ ಶೆಟ್ಟಿ ಮಂಗಳೂರಿನಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ವರ್ಷ ಯೋಜನೆ ಏಳನೇ ವರ್ಷವನ್ನು ಪೂರೈಸುತ್ತಿದೆ. ಇನ್ನು ಮೂರು ವರ್ಷಗಳ ಕಾಲ ಯೋಜನೆ ಮುಂದುವರಿಯುತ್ತದೆ. ದಶಮಾನೋತ್ಸವ ಬಳಿಕ ‘ನೆರವು’ ಯೋಜನೆಯ ಫಲಾನುಭವಿಗಳನ್ನು ಸೇರಿಸಿಕೊಂಡು ಅದಕ್ಕೊಂದು ಸಾಮೂಹಿಕ ರೂಪ ಕೊಡುವ ಚಿಂತನೆ ಇದೆ. ಈ ವಿಸ್ತರಣೆಯಿಂದ ಪ್ರತೀ ವರ್ಷ ಕನಿಷ್ಠ ಹದಿನಾಲ್ಕು ಸಾವಿರ ಕುಟುಂಬಗಳಿಗೆ ನೆರವು ಕೊಡಲು ಸಾಧ್ಯವಾಗಲಿದೆ ಎಂದವರು ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡರು. ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ವೈದ್ಯಕೀಯ ಚಿಕಿತ್ಸೆ ಸುಲಭವಾಗಿದೆ. ಆದರೆ ಆ ಸವಲತ್ತುಗಳಿಗೆ ಎಲ್ಲರಿಗೂ…
‘ಮೂಲ್ಕಿ ಸೀಮೆ ಅರಸು ಕಂಬುಲ’ ಶೀರ್ಷಿಕೆಯ ಪುಸ್ತಕವು ಅಕ್ಟೋಬರ್ 24 ರಂದು ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಲೋಕಾರ್ಪಣೆಗೊಂಡಿದ್ದು, ಅದರ ಮರು ಅನಾವರಣ ಮುಂಬಯಿಯ ಪ್ರತಿಷ್ಠಿತ ಬಾಂಬೆ ಬಂಟ್ಸ್ ಅಸೋಸಿಯೇಷನ್ ಇದರ ವತಿಯಿಂದ ಡಿಸೆಂಬರ್ 20 ರಂದು ಸ್ವಾಮಿ ನಿತ್ಯಾನಂದ ಸಭಾಗೃಹದಲ್ಲಿ ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ನ್ಯಾಯವಾದಿ ಡಿ.ಕೆ ಶೆಟ್ಟಿಯವರ ದಿವ್ಯ ಹಸ್ತದಿಂದ ಮಾಜಿ ಅಧ್ಯಕ್ಷರುಗಳು, ವಿಶ್ವಸ್ಥರು, ಪ್ರಧಾನ ಕಾರ್ಯಕಾರಿ ಸಮಿತಿ ಮತ್ತು ಸಮಿತಿ ಸದಸ್ಯರ ಸಮಕ್ಷತೆಯಲ್ಲಿ ನಡೆಯಿತು. ಅಧ್ಯಕ್ಷರು ಪುಸ್ತಕದ ಪರಿಚಯ ಮಾಡಿದರೆ ನಂತರದಲ್ಲಿ ಆ ಪುಸ್ತಕದ ಪ್ರತಿಗಳನ್ನು ನಾಮಮಾತ್ರ ಬೆಲೆಗೆ ಎಲ್ಲಾ ಸೇರಿದ ಸಭಿಕರಿಗೆ ಹಂಚಲಾಯಿತು. ಬಂಟ ಸಮಾಜದ ಐತಿಹಾಸಿಕ ವೀರಪುರುಷ ಅಗೋಳಿ ಮಂಜಣ್ಣನಿಂದ ಪ್ರಾರಂಭವಾಗಿ ಆನಂತರದಲ್ಲಿ 1973 ರಿಂದ ಅರಸು ಕಂಬಳ ಸಮಿತಿಯಿಂದ ನಡೆದುಕೊಂಡು ಬಂದಿದೆ ಎಂದು ಐತಿಹಾಸಿಕ ಹಿನ್ನಲೆಯಿರುವ ಮುಲ್ಕಿ ಸೀಮೆಯ ಅರಸು ಕಂಬಳದ ಬಗೆಗೆ ಸರಿಸುಮಾರು ಐವತ್ತು ವರ್ಷಗಳ ವಿಸ್ತೃತ ಅನುಭವವನ್ನು ತೆರೆದಿಟ್ಟಿರುವ ಈ ಪುಸ್ತಕಕ್ಕೆ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಹಾಗೂ ಮುಲ್ಕಿ…
ಈಗ ಎಲ್ಲವೂ ಫಾಸ್ಟ್ ಫಾಸ್ಟ್. ಹೊಟ್ಟೆಯಿಂದ ಹೊರ ಬರುವಾಗಲೇ ತಿಂಗಳಾದರೂ ಆಗಿಲ್ಲದಿದ್ದರೂ ಕಾಯುವ ಪ್ರಮೇಯವೇ ಇಲ್ಲ. ಮುಂಚಿನ ದಿವಸದವರೆಗೆ ಎಲ್ಲವೂ ನಾರ್ಮಲ್ ಎಂದ ಡಾಕ್ಟರ್ ಗಳು ಮರು ದಿವಸ ಹೇಳ್ತಾರೆ ಮಗು ತಿರುಗಿದೆ, ಕುತ್ತಿಗೆಗೆ ಕರುಳು ಸಿಕ್ಕಿ ಹಾಕಿಕೊಂಡಿದೆ, ಉಸಿರಾಟ ನಿಧಾನವಾಗಿದೆ ಹಾಗಾಗಿ ಸಿಜೇರಿಯನ್ ಮಾಡಿದರೆ ಉತ್ತಮ. ಮತ್ತೆ ನೀವು ರಿಸ್ಕ್ ತೊಗೋಳ್ತೀರಾದರೆ ಓಕೆ ಎಂದು. ನಾವು ಹೆದರಿ ನೀವೇ ದೇವರು! ಏನು ಹೇಳ್ತೀರೋ ಹಾಗೇ ಡಾಕ್ಟರ್ ಸಿಜೇರಿಯನ್ ಮಾಡಿಸಲು ಒಪ್ಪುತ್ತೇವೆ. ಹೀಗೆ ಗಡಿಬಿಡಿಯಲ್ಲೇ ಬಂದ ಮಕ್ಕಳು ಗಡಿಬಿಡಿಯಲ್ಲೇ ಫಾಸ್ಟ್ ಜಂಕ್ ಫುಡ್ ತಿಂದು ಬೆಳೆದು ಶಾಲೆಯಲ್ಲಿ ಕೆಜಿ ಕ್ವಿಂಟಾಳ್ ತೂಗಿ ಎಸ್.ಎಸ್.ಎಲ್.ಸಿ ಮುಗಿಸಿಕೊಂಡು ಕಾಲೇಜು ಮೆಟ್ಟಲು ಹತ್ತುವಾಗ ಏನು ಕಲಿ ಪ್ರಭಾವವೋ, ಒಳ್ಳೆಯದಕ್ಕಿಂತ ಹೆಚ್ಚು ಕೆಟ್ಟ ಬುದ್ದಿಯನ್ನೇ ಕಲಿಯುತ್ತಿದ್ದಾರೆ !. ಇದಕ್ಕೆ ಕಾರಣ ಈಗಿನ ನಮ್ಮ ಜೀವನ ಶೈಲಿ. ಹೆಚ್ಚಿನ ತಂದೆ ತಾಯಿಗೆ ಮಕ್ಕಳ ಬಗ್ಗೆ ಗಮನ ಕೊಡಲು ಪುರುಸೊತ್ತೇ ಇಲ್ಲ, ಮತ್ತೆ ಆಸಕ್ತಿಯೂ ಕಡಿಮೆಯಾಗಿದೆ. ಕಾರಣ ವ್ಯವಹಾರದ ಇಲ್ಲವೇ…
ಸಜೀಪ ದಸರಾ -2026 : 100ನೇ ವರ್ಷದ ಶ್ರೀ ಶಾರದಾ ಪೂಜಾ ಸಮಿತಿಯ ನೂತನ ಅಧ್ಯಕ್ಷರಾಗಿ ದೇವಿಪ್ರಸಾದ್ ಪೂಂಜ ಆಯ್ಕೆ
ಸಜೀಪ ದಸರಾ – 2026 ಶತಮಾನೋತ್ಸವಕ್ಕೆ ಈಗಿನಿಂದಲೇ ಸಿದ್ಧತೆಗಳು ನಡೆಯುತ್ತಿದೆ. 100ನೇ ವರ್ಷದ ಈ ಸುಂದರ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನಡೆಸಲು ಸಮಾಲೋಚನ ಸಭೆಗಳನ್ನು ನಡೆಸಲಾಗುತ್ತಿದೆ. ಶತಮಾನೋತ್ಸವ ಸಮಿತಿ, ಶಾರದಾ ಪೂಜಾ ಸಮಿತಿ ಹಾಗೂ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಯೋಚನೆಯನ್ನೂ ಮಾಡಲಾಗುತ್ತಿದೆ. ಇನ್ನು 5 ದಿನ ಶತಮಾನೋತ್ಸವನ್ನು ಆಚರಿಸುವ ಯೋಚನೆಗೆ ಬಂದಿದ್ದು ಈಗಾಗಲೇ ಸಮಿತಿಯನ್ನು ರಚಿಸಿ ಎಲ್ಲರಿಗೂ ಜವಾಬ್ದಾರಿಯನ್ನು ನೀಡಲಾಗಿದೆ ಹಾಗೂ ಸಮಾಜಸೇವೆಯ ಮುಖೇನ ಮತ್ತು ವಿಭಿನ್ನ ಕಾರ್ಯಕ್ರಮಗಳನ್ನು ನಡೆಸುತ್ತಾ, 100ನೇ ವರ್ಷದ ಸಜೀಪ ದಸರಾ ಕಾರ್ಯಕ್ರಮವನ್ನು ಇನ್ನಷ್ಟು ಚಂದಗಾಣಿಸುವ ಕೆಲಸ ಕಾರ್ಯಗಳು ನಡೆಯುತ್ತಿದೆ. ಇನ್ನು ಶತಮಾನೋತ್ಸವದ ಈ 100ನೇ ವರ್ಷದ ಶಾರದಾ ಪೂಜಾ ಸಮಿತಿಯ ನೂತನ ಅಧ್ಯಕ್ಷರಾಗಿ ಸಜೀಪ ಮೂಡ ಗ್ರಾ.ಪಂ ನ ಮಾಜಿ ಅಧ್ಯಕ್ಷರಾದ, ಪ್ರತೀ ಬಾರಿಯೂ ಕಾರ್ಯಕ್ರಮದ ಯಶಸ್ಸಿಗಾಗಿ ಜೊತೆಯಾಗಿ ನಿಲ್ಲುವ ದೇವಿಪ್ರಸಾದ್ ಪೂಂಜ ಆಯ್ಕೆಯಾಗಿದ್ದಾರೆ ಹಾಗೂ ಮಹಿಳಾ ಸಮಿತಿಯ ಅಧ್ಯಕ್ಷರಾಗಿ ಪುಷ್ಪಾವತಿ ರಮೇಶ್ ಸುವರ್ಣ, ಉಪಾಧ್ಯಕ್ಷರಾಗಿ ಗಿರೀಶ್ ಕುಮಾರ್ ಪೆರ್ವ, ಅಶ್ವಿತ್ ಬೇಂಕ್ಯ ಮತ್ತು ಗಂಗಾಧರ ಕೊಲ್ಯ…
ಶಿಬರೂರು ಕ್ಷೇತ್ರದ ತೀರ್ಥ ಬಹಳ ಪ್ರಸಿದ್ಧಿ ಪಡೆದಿದೆ. ಹಿಂದಿನ ಕಾಲದಲ್ಲಿ ಸೂರಿಂಜೆ ಗುತ್ತು ತ್ಯಾಂಪ ಶೆಟ್ಟಿ ತನ್ನ ಗಿಣಿಚಿರಾವಿಯಲ್ಲಿದ್ದ ವಿಷ ಹೀರುವ ಕಲ್ಲನ್ನು ದೈವಗಳನ್ನು ನೆನೆಸಿ ’ಇನ್ನು ಮುಂದೆ ಈ ಬಾವಿಯ ನೀರು ಮತ್ತು ದೈವ ಗಂಧವೇ ವಿಷಕ್ಕೆ ಮದ್ದಾಗಲಿ’ ಎಂದು ಹೇಳಿ ತಿಬಾರಗುತ್ತಿನ ಬಾವಿಗೆ ಹಾಕುತ್ತಾರೆ. ಇದರಿಂದ ಕೊಡಮಣಿತ್ತಾಯ ದೈವಕ್ಕೆ ‘ವೈದ್ಯನಾಥ’ ನೆಂಬ ಅಭಿದಾನ ಪ್ರಾಪ್ತವಾಯಿತು. ಕಾರಣಿಕ ಸ್ಥಳ ಶಿಬರೂರಿನ ತೀರ್ಥದ ಬಾವಿಯಲ್ಲಿ ಸಿಗುವ ತೀರ್ಥವನ್ನು, ದೈವದ ಗಂಧ ಪ್ರಸಾದವನ್ನು ಭಕ್ತಿಯಿಂದ ಸ್ವೀಕರಿಸಿದರೆ ವಿಷನಾಶವಾಗುತ್ತದೆ ಎಂಬ ನಂಬಿಕೆ. ಅಷ್ಟು ಮಾತ್ರವಲ್ಲದೇ ಬಾವಿಯ ತೀರ್ಥ ಮತ್ತು ದೈವದ ಗಂಧ ಪ್ರಸಾದ ಸ್ವೀಕರಿಸುವವರಿಗೆ ನಾಗದೋಷ ನಿವಾರಕ, ಚರ್ಮವ್ಯಾನಾಶಕ, ಉಬ್ಬಸ ರೋಗ ದೂರಿಕರಿಸುವ ಶಕ್ತಿಯಲ್ಲದೇ, ಸಂತಾನ ಪ್ರತಿಬಂಧಕ ದೋಷವೂ ಪರಿಹಾರವಾಗುವುದು. ವಿಷಜಂತು ಕಚ್ಚಿದ ಅನೇಕ ಜನರನ್ನು ರಕ್ಷಿಸಿದ ಜ್ವಲಂತ ಉದಾಹರಣೆಗಳು ಪರಿಸರದಲ್ಲಿ ಕಾಣುತ್ತಿವೆ. ಈ ಬಾವಿಯ ನೀರನ್ನು ಏತದಿಂದಲೇ ಮೇಲಕ್ಕೆತ್ತುತ್ತಾರೆ. ಪ್ರತೀ ವರ್ಷ ನೇಮದ ಸಂದರ್ಭ ಕ್ಷೇತ್ರಕ್ಕೆ ಭೇಟಿ ನೀಡುವ ಐವತ್ತು ಸಾವಿರಕ್ಕೂ ಹೆಚ್ಚು…
ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಡಿಸೆಂಬರ್ 20 ಮತ್ತು 21 ರಂದು ನಡೆದ ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3182 ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾಕೂಟದಲ್ಲಿ, ರೋಟರಿ ಕ್ಲಬ್ ಕಾರ್ಕಳದ ಸದಸ್ಯರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. 12 ಚಿನ್ನದ ಪದಕ, 10 ಬೆಳ್ಳಿ ಪದಕ ಹಾಗೂ 13 ಕಂಚಿನ ಪದಕದೊಂದಿಗೆ ಒಟ್ಟು 35 ಪದಕಗಳನ್ನು ಪಡೆಯುವ ಮೂಲಕ ಕಾರ್ಕಳ ರೋಟರಿ ಸಂಸ್ಥೆಯು ರೋಟರಿ ಅಂತರಾಷ್ಟ್ರೀಯ ಜಿಲ್ಲೆ ವಲಯ 5 ಹಿರಿಮೆಯನ್ನು ಎತ್ತಿ ಹಿಡಿದಿದೆ. ಕ್ಲಬ್ ಅಧ್ಯಕ್ಷರಾದ ಕೆ ನವೀನ್ ಚಂದ್ರ ಶೆಟ್ಟಿ ಅವರು ಮಾತನಾಡಿ, ಈ ಜಯ ರೋಟರಿ ಸ್ಫೂರ್ತಿ, ಒಗ್ಗಟ್ಟು, ಶಿಸ್ತಿನ ಪ್ರತಿರೂಪ. ಸದಸ್ಯರ ತಯಾರಿ, ಕ್ರೀಡಾಸ್ಫೂರ್ತಿ ಹಾಗೂ ತಂಡಾತ್ಮಕತೆ ನಮ್ಮ ಕ್ಲಬ್ಗೆ ಈ ಗೌರವ ತಂದುಕೊಟ್ಟಿವೆ ಎಂದು ತಿಳಿಸಿದ್ದಾರೆ. ಕ್ರೀಡಾಕೂಟದಲ್ಲಿ ಕಾರ್ಕಳ ರೋಟರಿ ಕ್ಲಬ್ ನ ಸ್ಪೋರ್ಟ್ಸ್ ಛೇರ್ಮನ್ ಜೋಸ್ಸಿ ಕಿರಣ್ ಪಿಂಟೋ, ಜಿಲ್ಲಾ ಮಟ್ಟದ ಅಧಿಕಾರಿಗಳು, ಕ್ಲಬ್ ಸದಸ್ಯರು ಹಾಗೂ ಕ್ರೀಡಾಪಟುಗಳು ಹಾಜರಿದ್ದರು. ಕ್ಲಬ್ ಕಾರ್ಯದರ್ಶಿ…
ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ಸುರತ್ಕಲ್ ಬಂಟರ ಭವನದ ಆವರಣದಲ್ಲಿ ನಡೆದ “ಪರ್ವ -2025” ಸಮಾರಂಭದಲ್ಲಿ ಆಹಾರ ಮೇಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜರಗಿತು. ಕಾರ್ಯಕ್ರಮವನ್ನು ಮಧು ಕನ್ಸ್ಟ್ರಕ್ಷನ್ ಮತ್ತು ಅಟೊಮ್ ಫಿಟ್ನೆಸ್ ಕ್ಲಬ್ ಸಂಸ್ಥೆಯ ಮಾಲಕಿ ವಿಜಯಲಕ್ಷ್ಮಿ ಮಲ್ಲಿ ಅವರು ವೇದಿಕೆಯಲ್ಲಿ ದೋಸೆ ಮಾಡುವ ಮೂಲಕ ಉದ್ಘಾಟಿಸಿದರು. ನಮ್ಮ ಜೀವನದಲ್ಲಿ ಆಹಾರಕ್ಕಿಂತ ದೊಡ್ಡ ಶಕ್ತಿ ಯಾವುದೂ ಇಲ್ಲ. ಆಹಾರವೇ ದೇಹಕ್ಕೆ ಶಕ್ತಿ. ನಮ್ಮ ಪೂರ್ವಜರು ಹೇಳಿದಂತೆ ಊಟ ಔಷಧಿ ಆಗಬೇಕೇ ಹೊರತು ಔಷಧಿ ಊಟ ಆಗಬಾರದು. ಆಹಾರ ಮೇಳವು ಕೇವಲ ಆಹಾರದ ಪ್ರದರ್ಶನವಲ್ಲ, ಅಡುಗೆಗೆ ಕೂಡಾ ವೇದಿಕೆಯಾಗಿದೆ ಎಂದು ವಿಜಯಲಕ್ಷ್ಮೀ ಮಲ್ಲಿ ತಿಳಿಸಿದರು. ಆಹಾರ ಮೇಳಗಳಂತಹ ಕಾರ್ಯಕ್ರಮಗಳು ವಿವಿಧ ಸಂಸ್ಕೃತಿಗಳ ಆಹಾರಗಳನ್ನು ಪರಿಚಯಿಸುತ್ತದೆ. ರುಚಿಯ ಜೊತೆಗೆ ಆರೋಗ್ಯದ ಅರಿವನ್ನು ಕೂಡಾ ಮೂಡಿಸುತ್ತದೆ ಹಾಗೂ ಜನರನ್ನು ಒಟ್ಟಿಗೆ ಸೇರಿಸುವ ಸೇತುವೆ ಕೂಡಾ ಆಗಿದೆ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಮೂಡಬಿದ್ರೆ ಬಂಟರ ಸಂಘದ ಮಹಿಳಾ…
ಕರಾವಳಿಯ ಶ್ರೀಮಂತ ಜಾನಪದ ಸಂಸ್ಕೃತಿಗೆ ವೈಚಾರಿಕ ಆಯಾಮ ನೀಡುವ ಮಹತ್ವದ ಸಂಶೋಧನಾ ಕೃತಿಯಾದ “ಭೂತಾರಾಧನೆ ಮಾಯದ ನಡೆ ಜೋಗದ ನುಡಿ” ಕೃತಿಯ ಬಿಡುಗಡೆ ಸಮಾರಂಭವು ಕ್ರಿಯೇಟಿವ್ ಪುಸ್ತಕ ಮನೆ ಕಾರ್ಕಳ ಮತ್ತು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಹಯೋಗದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಎಲ್.ಎಫ್. ರಸ್ಕಿನ್ಹ ಸಭಾಂಗಣದಲ್ಲಿ ನಡೆಯಿತು. ಕೃತಿಯನ್ನು ಖ್ಯಾತ ಸಾಹಿತಿ, ಜಾನಪದ ವಿದ್ವಾಂಸ ಹಾಗೂ ವಿಶ್ರಾಂತ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಅವರು ಅನಾವರಣಗೊಳಿಸಿ ಮಾತನಾಡಿ, ಭೂತಾರಾಧನೆ ಕೇವಲ ಆಚರಣೆಯಲ್ಲ. ಅದು ಸಮುದಾಯದ ಸ್ಮೃತಿ, ನಂಬಿಕೆ ಮತ್ತು ಬದುಕಿನ ದರ್ಶನ ಎಂದು ಅಭಿಪ್ರಾಯಪಟ್ಟರು. ಡಾ. ಕೆ. ಚಿನ್ನಪ್ಪ ಗೌಡರ ಈ ಕೃತಿ ಜಾನಪದ ಅಧ್ಯಯನ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲಾಗಲಿದೆ ಎಂದರು. ಕೃತಿ ಅವಲೋಕನವನ್ನು ಡಾ. ರಾಜಶೇಖರ್ ಹಳೆಮನೆ ಅವರು ನಡೆಸಿ, ಭೂತಾರಾಧನೆಯ ಆಚರಣೆ, ನುಡಿ, ನಡೆ ಮತ್ತು ಸಮಾಜದ ಒಳಹೊಮ್ಮುಗಳನ್ನು ವೈಜ್ಞಾನಿಕ ದೃಷ್ಟಿಯಿಂದ ದಾಖಲಿಸುವ ಗಂಭೀರ ಸಂಶೋಧನಾ ಕೃತಿಯಿದು ಎಂದು ಪ್ರಶಂಸಿಸಿದರು.…
ದೇವಸ್ಥಾನ, ದೈವಸ್ಥಾನಗಳಿಗೆ ಸಂಬಂಧಿಸಿ ಆಯಾ ಸ್ಥಳಕ್ಕೆ ಅನುಗುಣವಾಗಿ ನಿಯಮ, ಕ್ರಮಗಳು, ನಂಬಿಕೆಗಳು ಬದಲಾಗುತ್ತವೆ. ಧಾರ್ಮಿಕ ನಂಬಿಕೆಗಳನ್ನು ಪ್ರಶ್ನೆ ಮಾಡದೆ ಜನರ ವಿವೇಚನೆಗೆ ಬಿಡಬೇಕು ಎಂದು ಶ್ರೀ ಕಟೀಲು ಕ್ಷೇತ್ರದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು. ಗುರುಪುರ ದೋಣಿಂಜೆ ಗುತ್ತು ಗಡಿ ಪ್ರಧಾನರಾದ ಪ್ರಮೋದ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ವಿಶ್ವ ಹಿಂದು ಪರಿಷತ್ತು, ಹಿಂದು ಯುವಸೇನೆ, ತುಳುನಾಡ ರಕ್ಷಣಾ ವೇದಿಕೆ ಸಹಯೋಗದಲ್ಲಿ ಮಂಗಳೂರಿನ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆದ ‘ಧರ್ಮಾವಲೋಕನ ಸಭೆ, ಧರ್ಮಾಚರಣೆ – ಒಂದು ಅವಲೋಕನ’ ಮೊದಲ ಗೋಷ್ಠಿಯಲ್ಲಿ ‘ದೇವಸ್ಥಾನಗಳು ಮತ್ತು ಧರ್ಮಾಚರಣೆ’ ವಿಷಯದ ಬಗ್ಗೆ ಅವರು ಮಾತನಾಡಿದರು. ದೇವಸ್ಥಾನಕ್ಕೆ ಆಗಮಿಸದವರು ಧರ್ಮಾ ಚರಣೆ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ದೈವಸ್ಥಾನ, ನೇಮಗಳಿಗೆ ಬರದವರು ದೈವಾರಾಧನೆಯನ್ನು ವಿಮರ್ಶಿಸುತ್ತಾರೆ. ಒಂದು ಸ್ಥಳ, ಒಬ್ಬ ವ್ಯಕ್ತಿಯ ನಂಬಿಕೆ, ನಿಯಮಗಳನ್ನು ಪ್ರಶ್ನೆ ಮಾಡಿದರೆ ಪರಸ್ಪರ ದೂಷಣೆಗೆ ಕಾರಣವಾಗಿ ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹಿಂದು ಧರ್ಮ ಸರಿ ಇಲ್ಲ ಎಂಬಲ್ಲಿಗೆ…
ಒಬ್ಬ ದೈವಭಕ್ತನು ರಾತ್ರಿ ವೇಳೆ ತನ್ನ ನಿತ್ಯ ಪ್ರಾರ್ಥನೆಗೆ ಸಿದ್ಧನಾಗಿ ಪೂಜಾಗೃಹದಲ್ಲಿ ಕುಳಿತುಕೊಂಡ. ಆದರೆ ಆ ರಾತ್ರಿ ಯಾವುದೋ ಒಂದು ಕಾಡುಗಪ್ಪೆಯೊಂದು ಗಟ್ಟಿಯಾಗಿ ವಟಗುಟ್ಟತೊಡಗಿತು. ಅದರಿಂದ ಆ ದೈವಭಕ್ತನ ಪ್ರಾರ್ಥನೆಗೆ ಭಂಗವುಂಟಾಯಿತು. ಮನಸ್ಸನ್ನು ಕೇಂದ್ರೀಕರಿಸಿ ತನ್ನ ಪೂಜಾ ಕಾರ್ಯಕ್ರಮವನ್ನು ಮುಂದುವರೆಸಲು ಆತನು ಎಷ್ಟು ಪ್ರಯತ್ನಿಸಿದರೂ ಆ ಕಪ್ಪೆಯ ಶಬ್ದದಿಂದಾಗಿ ಪ್ರಾರ್ಥನೆ ಮಾಡುವುದು ಅವನಿಗೆ ಅಸಾಧ್ಯವೆನಿಸಿತು. ಅವನು ಸಹನೆಯನ್ನು ಕಳೆದುಕೊಂಡು ಕಿಟಿಕಿಯ ಹೊರಗೆ ತಲೆಯಿಟ್ಟು ಗಟ್ಟಿಯಾಗಿ ಕಿರುಚಿದನು, “ಸಾಕು ಮಾಡು ನಿನ್ನ ಗೋಳು! ನಾನು ಪ್ರಾರ್ಥನೆ ಮಾಡುತ್ತಿದ್ದೇನೆ ಎನ್ನುವುದು ನಿನಗೆ ಅರಿವಾಗದೇ?” ನಮ್ಮ ದೈವಭಕ್ತನು ಶಕ್ತಿಸಮನ್ವಿತನಾಗಿದ್ದ, ವಾಕ್ಸಿದ್ಧಿಯನ್ನು ಗಳಿಸಿದ್ದ. ಹಾಗಾಗಿ ಆ ಮಾತುಗಳನ್ನು ಆ ಕಪ್ಪೆ ಶಿರಸಾವಹಿಸಿ ಪಾಲಿಸಿತು. ಅದು ವಟಗುಟ್ಟುವುದನ್ನು ಸಂಪೂರ್ಣವಾಗಿ ನಿಲ್ಲಿಸಿತು. ಆತನ ಪ್ರಾರ್ಥನೆಗೆ ಭಂಗವುಂಟು ಮಾಡಬಾರದೆಂದು ಉಳಿದ ಜೀವರಾಶಿಯೂ ಸಹ ತಾವು ಸಾಧಾರಣವಾಗಿ ಮಾಡುತ್ತಿದ್ದ ಶಬ್ದಗಳನ್ನು ನಿಲ್ಲಿಸಿ ನಿಶ್ಶಬ್ದವಾದವು. ಆದರೆ ಆ ಭಕ್ತನ ಹೃದಯಾಂತರಾಳದಿಂದ ಸಣ್ಣ ದನಿಯೊಂದು ಕೇಳಿಸಿತು. “ನಿನ್ನ ಪ್ರಾರ್ಥನೆ, ಜಪತಪಗಳು, ಶ್ಲೋಕಗಳನ್ನು ಪಠಿಸುವುದರ ಮೂಲಕ ಭಗವಂತನು…















