Author: admin

ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್ (ರಿ) ಮೊಳಹಳ್ಳಿ ಇವರ ಆಶ್ರಯದಲ್ಲಿ ರಾಜ್ಯಮಟ್ಟದಲ್ಲಿ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಸಾಧನೆಗೈದ ಕ್ರೀಡಾಪಟುಗಳಿಗೆ ಗೌರವ ಸನ್ಮಾನ, ಮೊಳಹಳ್ಳಿ ಗ್ರಾಮದ ವಿಶಿಷ್ಟ ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮವು ಬಿದ್ಕಲ್ ಕಟ್ಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ (ಪ್ರೌಢಶಾಲಾ ವಿಭಾಗ)ದಲ್ಲಿ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್‌ನ ಸಂಸ್ಥಾಪಕರಾದ ಮೊಳಹಳ್ಳಿ ದಿನೇಶ್ ಹೆಗ್ಡೆ ವಹಿಸಿದ್ದರು. ಉದ್ಘಾಟಕರಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಂಶುಪಾಲರಾದ ಎಂ. ಬಾಲಕೃಷ್ಣ ಶೆಟ್ಟಿ ಮಾತನಾಡಿ, ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಹಾಗೂ ವಿದ್ಯಾರ್ಥಿವೇತನ ನೀಡುವ ಮೂಲಕ ಟ್ರಸ್ಟ್ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಸಾಧನೆಗೈದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕೆಂಬ ಸಂದೇಶವನ್ನು ಟ್ರಸ್ಟ್ ನೀಡುತ್ತಿದೆ ಎಂದು ಹೇಳಿದರು. ಟ್ರಸ್ಟಿ ಸಂತೋಷ ಕಾಂಚನ್…

Read More

ಸನಾತನ ಹಿಂದೂ ಧರ್ಮದಲ್ಲಿ ದೇವಸ್ಥಾನಗಳಿಗಾಗಲಿ ಅಥವಾ ಮನೆಯಲ್ಲಾಗಲಿ ಪೂಜೆ ಮುಗಿದ ನಂತರ ದೇವರಿಗೆ ಮಹಾ ಮಂಗಳಾರತಿ ಮಾಡುವುದು ಕಡ್ಡಾಯ. ಆದರೆ, ಆರತಿ ತಟ್ಟೆಯನ್ನು ಭಕ್ತರ ಮುಂದೆ ತಂದಾಗ ಅದಕ್ಕೆ ಕಡ್ಡಾಯವಾಗಿ ಹಣ ಅಥವಾ ನಾಣ್ಯಗಳನ್ನು ಹಾಕುವ ಸಂಪ್ರದಾಯ ಇಂದಿಗೂ ನಡೆದುಕೊಂಡು ಬಂದಿದೆ. ಇದು ಕೇವಲ ಮೂಢನಂಬಿಕೆಯಲ್ಲ ಅಥವಾ ಬಲವಂತದ ಆಚರಣೆಯಲ್ಲ. ಇದರ ಹಿಂದೆ ಆಳವಾದ ಧಾರ್ಮಿಕ, ಐತಿಹಾಸಿಕ ಮತ್ತು ವೈಜ್ಞಾನಿಕ ಕಾರಣಗಳಿವೆ ಎಂದು ಶಾಸ್ತ್ರ ಹೇಳಿದೆ. ಶಾಸ್ತ್ರಗಳ ಪ್ರಕಾರ, ಭಗವಂತನು ನಮಗೆ ನೀಡಿರುವ ಐಶ್ವರ್ಯ, ಆರೋಗ್ಯ ಮತ್ತು ಪ್ರಕೃತಿಯ ಕೊಡುಗೆಗಳಿಗೆ ಪ್ರತಿಯಾಗಿ ನಾವು ಕೃತಜ್ಞತೆ ಸಲ್ಲಿಸಬೇಕು. ಆರತಿ ತಟ್ಟೆಗೆ ನಾಣ್ಯವನ್ನು ಹಾಕುವುದು ಎಂದರೆ ನಮ್ಮಲ್ಲಿರುವ ‘ಮಮಕಾರ’ ಮತ್ತು ‘ಅಹಂಕಾರ’ವನ್ನು ದೇವರ ಪಾದಕ್ಕೆ ಅರ್ಪಿಸುವುದು ಎಂದರ್ಥ. ದೇವಸ್ಥಾನಕ್ಕೆ ಹೋದಾಗ ಬರಿಗೈಯಲ್ಲಿ ಹೋಗಬಾರದು ಮತ್ತು ಬರಿಗೈಯಲ್ಲಿ ವಾಪಸು ಬರಬಾರದು ಎಂಬ ನಿಯಮವಿದೆ. ಭಕ್ತಿಪೂರ್ವಕವಾಗಿ ನೀಡುವ ಈ ಕಾಣಿಕೆ ಮನುಷ್ಯನಲ್ಲಿ ಕಂಜೂಸು ಗುಣವನ್ನು ದೂರ ಮಾಡಿ, ತ್ಯಾಗ ಮನೋಭಾವನೆಯನ್ನು ಬೆಳೆಸುತ್ತದೆ. ಪ್ರಾಚೀನ ಇತಿಹಾಸವನ್ನು ಗಮನಿಸಿದರೆ, ದೇವಸ್ಥಾನಗಳು…

Read More

ಬಂಟರ ಸಂಘ (ರಿ) ಸುರತ್ಕಲ್ ಇದರ ವಾರ್ಷಿಕ ಮಹಾಸಭೆ ಮತ್ತು ಅಭಿನಂದನೆ, ಸಹಾಯ ಹಸ್ತ, ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ಜೂನ್ 14 ರಂದು ಭಾನುವಾರ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ವಿಶೇಷ ಮಹಾಸಭೆ, 11 ಗಂಟೆಗೆ ವಾರ್ಷಿಕ ಮಹಾಸಭೆ ನಡೆಯಲಿದೆ. ಮಧ್ಯಾಹ್ನ 1 ಗಂಟೆಗೆ ಗ್ರಾಮವಾರು ಸಾಂಸ್ಕೃತಿಕ ಸ್ಪರ್ಧೆ ನಡೆಯಲಿದೆ. ಸಂಜೆ 4.30 ಕ್ಕೆ ಸಭಾ ಕಾರ್ಯಕ್ರಮ, ಅಭಿನಂದನೆ, ಸಹಾಯಹಸ್ತ ಮತ್ತು ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಬಾಳ‌ ಜಗನ್ನಾಥ ಶೆಟ್ಟಿ ವಹಿಸಲಿದ್ದಾರೆ. ಸಮಾರಂಭವನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಂಬಯಿ ವಿ.ಕೆ ಸಮೂಹ ಸಂಸ್ಥೆಯ ಆಡಳಿತ ನಿರ್ದೇಶಕರಾದ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು, ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ಡಾ. ಪಿ.ವಿ ಶೆಟ್ಟಿ ಮುಂಬಯಿ, ಮುಂಬಯಿ ಬಂಟರ…

Read More

ಬೇಸಿಗೆ ಶಿಬಿರ, ಕೆಲವಷ್ಟು ಕಾರ್ಯಾಗಾರ, ಟ್ರಿಪ್, ಅಪ್ಪ ಅಮ್ಮನ ಜೊತೆ, ಪ್ರೆಂಡ್ಸ್ ಜೊತೆ ತಿರುಗಾಟ, ಆಟ, ಕೂಟ, ಮೋಜು ಮಸ್ತಿ ಎಲ್ಲವೂ ಮುಗಿಸಿ ಮಕ್ಕಳು ಶಾಲೆಗೆ ತಯಾರಾದರು. ಸ್ವಲ್ಪ ದಿವಸ ರಿಲೇಕ್ಸ್ ಆಗಿದ್ದ ಅಪ್ಪ ಅಮ್ಮನೂ ಮತ್ತೆ ಬೆಳಿಗ್ಗೆ ಬೇಗ ಎದ್ದು ಮಕ್ಕಳಿಗೆ ಬೇಕಾದ್ದೆಲ್ಲಾ ತಯಾರು ಮಾಡುವ ಬೆಳಿಗ್ಗಿನ ಗಡಿಬಿಡಿ ಮತ್ತೆ ಪ್ರಾರಂಭವಾಯಿತು. ಮೊದಲಾಗಿ ದಾಖಲಾಗಿ ಶಾಲೆಗೆ ಹೊರಟ ಪುಟಾಣಿಗಳಿಗೆ ಏನೇನೆಲ್ಲಾ ಶೃಂಗಾರ ಮಾಡಿ ಅವರ ಜೊತೆ ಫೋಟೋ, ಸೆಲ್ಫಿ ತೆಗೆದು ಬೀಳ್ಕೊಡುವ ಸುಸಮಯ ಮತ್ತೆ ಬಂತು. ಎಲ್ಲಾ ಮುದ್ದು ಪುಟಾಣಿಗಳಿಗೂ ಶಿಕ್ಷಣದ ಹೊಸ ವರ್ಷದ ಶುಭಾಶಯಗಳು. ಯುನಿಫಾರ್ಮ್ ಶೂ ಧರಿಸಿ, ಕೈಯಲ್ಲಿ ಒಂದು ನೀರಿನ ಬಾಟಲ್, ಬೆನ್ನಿಗೆ ಪುಸ್ತಕದ ಮಣ ಭಾರದ ಚೀಲ ಹೊತ್ತು ಧೋ ಎಂದು ಸುರಿವ ಮಳೆಗೆ ಕೊಡೆಯೋ ರೈನ್ ಕೋಟೋ ಧರಿಸಿ ನಡೆದು ಹೋಗುತ್ತಿದ್ದ ಆ ಕಾಲ ಕಳೆಯಿತು. ಈಗ ಎಲ್ಲವೂ ಬದಲಾಗಿದೆ. ಇದೆಲ್ಲವೂ ತಂದೆಯೋ ತಾಯೋ ಹೊತ್ತು ಮಗುವಿನ ಕೈ ಹಿಡಿದು ಮನೆಯೆದುರು ಬರುವ…

Read More

ಮೂಡುಶೆಡ್ಡೆ ಹೊಸಲಕ್ಕೆ ದಿವಂಗತ ದೇವಕಿ ಸಂಜೀವ ಶೆಟ್ಟಿ ಅವರ ನಾಲ್ಕನೇ ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಅವರ ಪುತ್ರರು ಕೊರಗ ಸಮುದಾಯಕ್ಕೆ ಸೇರಿದ ಗಿರಿಜ ಎಂಬವರಿಗೆ ನೂತನವಾಗಿ ನಿರ್ಮಿಸಿದ ಮನೆಯ ಹಸ್ತಾಂತರ ಕಾರ್ಯಕ್ರಮ ನಡೆಯಿತು. ಅತಿಥಿಗಳು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮನೆಯ ಕೀಲಿ ಕೈ ಹಸ್ತಾಂತರಿಸಿದರು. ಬಳಿಕ ಮಾತನಾಡಿದ ವಕೀಲ ಹೊಸಲಕ್ಕೆ ಉಮೇಶ್ ಶೆಟ್ಟಿ ಅವರು, ಅಮ್ಮ ದಿವಂಗತ ದೇವಕಿ ಶೆಟ್ಟಿಯವರು ನೊಂದವರು, ಕಷ್ಟದಲ್ಲಿರುವವರಿಗೆ ನೆರವಾಗುತ್ತಿದ್ದ ಜೀವ. ಅವರ ಮಾರ್ಗದರ್ಶನದಲ್ಲೇ ಬೆಳೆದ ನಾವು ಅವರ ನಾಲ್ಕನೇ ವರ್ಷದ ಪುಣ್ಯಸ್ಮರಣೆಗಾಗಿ ಸಮಾಜಕ್ಕೆ ನಮ್ಮಿಂದಾದ ಸೇವೆ ಸಲ್ಲಿಸಬೇಕು ಎಂಬ ದೃಷ್ಟಿಯಿಂದ ಮೂಡುಶೆಡ್ಡೆ ಪಂಚಾಯತ್ ಅನ್ನು ಸಂಪರ್ಕಿಸಿದ್ದೆವು. ಅಲ್ಲಿನ ಪಿಡಿಒ ಅವರು ಮನೆ ಸಂಪೂರ್ಣವಾಗಿ ಕುಸಿದು ಬಿದ್ದು ಸಮಸ್ಯೆಯನ್ನು ಎದುರಿಸುತ್ತಿದ್ದ ಕೊರಗ ಸಮುದಾಯದ ಗಿರಿಜ ಅವರ ಕುಟುಂಬವನ್ನು ನಮಗೆ ತೋರಿಸಿದ್ದು, ಅವರಿಗೆ 10 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತ ಹಂಚಿನ ಮನೆ ನಿರ್ಮಿಸಿ ಕೊಟ್ಟಿದ್ದೇವೆ. ನಮಗೆ ಜನರ ಆಶೀರ್ವಾದ ಇದ್ದರೆ ಸಾಕು.…

Read More

ಸುತ್ತಲೂ ನೀರು. ಮಧ್ಯದಲ್ಲೊಂದು ಸಂಭ್ರಮ ಲೋಕ. 5 ದಿನ ಕಳೆದದ್ದೇ ಗೊತ್ತಾಗಿಲ್ಲ.ಅಯ್ಯೋ ಮುಗಿದು ಹೋಯಿತಲ್ಲಾ ಇಂಥದ್ದೊಂದು ಮಧುರ ಕ್ಷಣ ಎಂದು ಆ ಸಂಭ್ರಮ ಲೋಕವನ್ನು ಬಿಟ್ಟು ಬರಲು ಮನಸ್ಸಾಗದೆ ಬೇಸರಿಸಿಕೊಂಡವರೇ ಹೆಚ್ಚು. ಏನು ಹೇಳುತ್ತೇವೆಂದು ಗೊತ್ತಾಗಿಲ್ಲ ತಾನೇ? ಇದು ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್ (ರಿ) ಮಂಗಳೂರು ಮತ್ತು ತ್ರಿರಂಗ ಸಂಗಮ ಮುಂಬಯಿ ವತಿಯಿಂದ ಕಲಾವಿದರು ಹಾಗೂ ಅವರ ಕುಟುಂಬ ಸದಸ್ಯರಿಗೆ ಏರ್ಪಡಿಸಿದ ‘ಸಮುದ್ರಯಾನ’ ಎಂಬ ಪ್ರವಾಸದ ಬಗ್ಗೆ ಪ್ರವಾಸಿಗರ ಅನುಭವ. ಮಂಗಳೂರಿನಿಂದ ಸುಮಾರು 300 ಮಂದಿ ಹಾಗೂ ಮುಂಬಯಿಯಿಂದ ಸುಮಾರು 340 ಮಂದಿ ಸೇರಿ ಸುಮಾರು 640 ಮಂದಿಗೆ 5 ದಿನಗಳ ಕಾಲ ಲಕ್ಷದ್ವೀಪ ಪ್ರವಾಸವನ್ನು ಕೋರ್ಡೆಯಿಲಾ ಎಂಬ ವಿಲಾಸಿ ಹಡಗಿನಲ್ಲಿ ಆಯೋಜಿಸಲಾಗಿತ್ತು. ಈ 5 ದಿನಗಳ ಕಾಲ ಎಲ್ಲರೂ ಮೊಬೈಲ್‌ ಬದಿಗಿಟ್ಟು ಜೋಷ್‌ ಮಾಡಿದ್ದೇ ಮಾಡಿದ್ದು. ಹೆಚ್ಚಿನ ಕಾಲವನ್ನು ಕಳೆದದ್ದು ಹಡಗಿನಲ್ಲಿಯೇ. ಅಂಥ ಹಡಗಿನಲ್ಲಿ ಬಹುತೇಕರಿಗೆ ಇದು ಮೊದಲ ಪ್ರವಾಸದ ಅನುಭವ. ಹೆಚ್ಚಿನವರು ಕುಟುಂಬದ ಜತೆಯಲ್ಲೇ ಇದ್ದ ಕಾರಣ…

Read More

ಸಾಮಾಜಿಕ ಜಾಲತಾಣಗಳ ಪ್ರಭಾವ, ಶೈಕ್ಷಣಿಕ ಒತ್ತಡ, ಬದಲಾಗುತ್ತಿರುವ ಜೀವನ ಶೈಲಿ ಸಹಿತ ಹಲವಾರು ಕಾರಣಗಳಿಂದ ಹದಿಹರೆಯದವರು ಖಿನ್ನತೆಗೆ ಒಳಗಾಗುತ್ತಿದ್ದಾರೆ. ಹದಿಹರೆಯದವರ ಮಾನಸಿಕ ಆರೋಗ್ಯ ದೈಹಿಕ ಆರೋಗ್ಯದಷ್ಟೇ ಮುಖ್ಯ. ಆತ್ಮಸ್ಥೈರ್ಯ ಹಾಗೂ ಸಕರಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳುವ ಮೂಲಕ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಚೇರ್ಮನ್ ಸಿಎ ಶಾಂತರಾಮ ಶೆಟ್ಟಿ ಹೇಳಿದರು. ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಲ್ಮಠ ವತಿಯಿಂದ ರೆಡ್ ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸಹಭಾಗಿತ್ವದಲ್ಲಿ ಸಮಾಲೋಚನೆ ಮತ್ತು ಹದಿಹರೆಯದ ಮಾನಸಿಕ ಆರೋಗ್ಯ ಸರ್ಟಿಫಿಕೇಟ್ ಕೋರ್ಸ್ ಪೂರೈಸಿದ ದ್ವಿತೀಯ ಬ್ಯಾಚ್ ವಿದ್ಯಾರ್ಥಿಗಳಿಗೆ ರೆಡ್ ಕ್ರಾಸ್ ಸೊಸೈಟಿಯ ಪ್ರೇರಣಾ ಸಭಾಂಗಣದಲ್ಲಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ವಿದ್ಯಾರ್ಥಿನಿಯರಾದ ಸುಕನ್ಯಾ ಮತ್ತು ಶೋಭಾರಾಣಿ ಅನಿಸಿಕೆ ವ್ಯಕ್ತಪಡಿಸಿದರು. ರೆಡ್ ಕ್ರಾಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಖಾಜಾಂಚಿ ಗುರುದತ್ ನಾಯಕ್, ನಿರ್ದೇಶಕರಾದ ಡಾ. ಸತೀಶ್ ರಾವ್, ಪಿ.ಬಿ. ಹರೀಶ್ ರೈ…

Read More

ಹುಬ್ಬಳ್ಳಿ ಧಾರವಾಡ ಬಂಟರ ಸಂಘದ 2026-28 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ನೆರವೇರಿದ್ದು, ಸಂಘದ ನೂತನ ಅಧ್ಯಕ್ಷರಾಗಿ ರಾಜೇಂದ್ರ ವಿ. ಶೆಟ್ಟಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಮೇ 28 ರಂದು ಸಂಘದ ಸಭಾಂಗಣದಲ್ಲಿ ಹಾಲಿ ಅಧ್ಯಕ್ಷ ವಿಜಯಾನಂದ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಥಮ ಕಾರ್ಯಕಾರಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಭೆಯಲ್ಲಿ ಉಪಾಧ್ಯಕ್ಷರಾಗಿ ಸುಧೀರ್ ಜೆ. ಶೆಟ್ಟಿ ಹಾಗೂ ಶ್ರೀನಿವಾಸ ಶೆಟ್ಟಿ (ಧಾರವಾಡ), ಕಾರ್ಯದರ್ಶಿಯಾಗಿ ರತ್ನಾಕರ್ ಎಂ. ಶೆಟ್ಟಿ (ಕರಾವಳಿ ಕ್ಯಾಟರ್ಸ್), ಖಜಾಂಚಿಯಾಗಿ ದಿನೇಶ್ ಕೆ. ಶೆಟ್ಟಿ (ಗ್ಲೋಬಲ್ ಮೀಡಿಯಾ) ಹಾಗೂ ಜೊತೆ ಕಾರ್ಯದರ್ಶಿಯಾಗಿ ಜ್ಯೋತಿ ಆರ್.ಟಿ ಶೆಟ್ಟಿ ಅವರನ್ನು ಸರ್ವಸಮ್ಮತಿಯಿಂದ ಆಯ್ಕೆ ಮಾಡಲಾಯಿತು. ಉಳಿದ ಪದಾಧಿಕಾರಿಗಳ ನೇಮಕಾತಿಯ ಜವಾಬ್ದಾರಿಯನ್ನು ನೂತನ ಅಧ್ಯಕ್ಷ ರಾಜೇಂದ್ರ ವಿ. ಶೆಟ್ಟಿ ಅವರಿಗೆ ವಹಿಸಲಾಗಿದೆ ಎಂದು ನಿಕಟ ಪೂರ್ವ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಒಂಜಾನೊಂಜಿ ನಕರೆ. ಆ ನಕರೆಡ್ ಒರಿ ಕಂಡು ಕಲುವೆ. ಒವ್ವಾ ಜಲ್ಮದ ಕರ್ಮ ಅರ್ದೆರೆ ಬೈದೆ. ಆ ನಕರೊಗು ಪರವೂರು, ಪರದೇಸೊಡ್ಡ್ ನಾಲ್ ಜನ ಬೇರದಗುಲು ಬತ್ತೆರ್. ಊರ್ದ ಉಲಾಯಿದ ಮಾರುನ ವಸ್ತುಲೆನ್ ಕಮ್ಮಿ ಬಿಲೆಕ್ ಗೆತೊಂದು, ದಾಸ್ತಾನ್ ಮಲ್ತ್‌ದ್, ಬಿಲೆ ಏರಿಗಿನ ಅತ್ತ್‌ಡ ಏರಾದ್ ಮಾರುನು. ಆಂತೂ ಅಗಲೆನ ಬೇರದ ಚಾತುರ್ಪಾಯೊಡು ಲಾಯಿಕ್ ಸಂಪಾದನೆ ಮಲ್ತೊಂದು ಇತ್ತೆರ್. ಉಂದೆನ್ ಆ ಕಲ್ವೆ ತೂಯೆ. ಎಂಚಂಡಲಾ ಮಲ್ತ್‌ದ್ ಆಗಲೆಗ್ ನಂಬೊಲಿಕೆ ಪುಟ್ಟಾದ್, ಅಗಲೆನ ಒಟ್ಟುಗೇ ಇತ್‌ದ್ ಅಗಲೆನ ಗಂಟ್ ಪಿಸ್ಕಾವೊಡು ಪಂದ್ ಕುಂದುಕುಸೆಲ್ ಮಲ್ತೆ. ಅಗಲೆಡ ಬಗ್ಗು ಕೋಮಟಿಗೆ ಪಾತೆರೊಂದು, ಬುಟ್ಟಿಚಾಕರಿ ಮಲ್ತೊಂದು ಅಗಲೆನ ಒಟ್ಟುಗೇ ಕುದ್ದು ಲಕ್ಕರೆ ಸುರು ಮಲ್ತೆ. ಹಾದರಗಿತ್ತಿಗ್ ನಾಸಿಗೆ ಜಾಸ್ತಿಗೆ, ಕಡಲ್ದ ಉಪ್ಪು ನೀರ್ ತಂಪುಗೆ, ಕವುಡು ಮಂಗಲೆರ್ ಬುದ್ಯಂತೆರ್‌ಗೆ, ಅಂಚೆನೆ ದುಷ್ಟೆರ್ ಮೋನೆದಕ್ಕ ತೀಪೆ ತೀಪೆ ಪಾತೆರ ಪಾತೆರುವೆರ್ಗೆ. ಇಂಚೆನೆ ಆ ಕಲ್ವೆ ಅಗಲೆನ ಚಾಕರಿ ಮಲ್ತೊಂದು, ದೊಡ್ಡು ಬಂಗಾರ್ ಲಕ್ಕಾವರೆ ಸರಿಸಮತ ಪೊರ್ತು…

Read More

ಇಂದು ಗಡಿನಾಡ ಕನ್ನಡದ ಅಪ್ರತಿಮ ಕವಿ, ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಚಿಂತಕ ಹಾಗೂ ಕನ್ನಡದ ಅಸ್ಮಿತೆಯ ಪ್ರಬಲ ಧ್ವನಿಯಾಗಿದ್ದ ಕಯ್ಯಾರ ಕಿಞ್ಞಣ್ಣ ರೈ ಅವರ 111ನೇ ಜನ್ಮದಿನ. ತಮ್ಮ ಕಾವ್ಯ, ಚಿಂತನೆ ಮತ್ತು ಹೋರಾಟದ ಮೂಲಕ ಕಾಸರಗೋಡು ಕನ್ನಡಿಗರಲ್ಲಿ ಆತ್ಮವಿಶ್ವಾಸ ಮತ್ತು ಕನ್ನಡಾಭಿಮಾನವನ್ನು ಮೂಡಿಸಿದ ಕಯ್ಯಾರರು ಕೇವಲ ಒಬ್ಬ ಸಾಹಿತಿಯಲ್ಲ, ಒಂದು ಚಳುವಳಿಯ ಶಕ್ತಿಯಾಗಿದ್ದರು. “ಬೆಂಕಿ ಬಿದ್ದಿದೆ ಮನೆಗೆ, ಓ ಬೇಗ ಬನ್ನಿ…” ಎಂಬ ಅವರ ಕರೆಯು ಇಂದಿಗೂ ಕನ್ನಡಿಗರನ್ನು ಎಚ್ಚರಿಸುವ ಧ್ವನಿಯಾಗಿ ಕೇಳಿಸುತ್ತದೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಗಡಿನಾಡಿನ ಅಸ್ತಿತ್ವಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಆ ಮಹನೀಯರನ್ನು ಈ ದಿನ ಗೌರವಪೂರ್ವಕವಾಗಿ ಸ್ಮರಿಸೋಣ. ಅವರ ಆದರ್ಶಗಳು, ಚಿಂತನೆಗಳು ಮತ್ತು ಕನ್ನಡ ಪ್ರೇಮ ಮುಂದಿನ ಪೀಳಿಗೆಗೂ ಪ್ರೇರಣೆಯಾಗಲಿ.

Read More