Author: admin
ಉಡುಪಿ ಜಿಲ್ಲೆಯ ಹೆಜಮಾಡಿ ಗ್ರಾಮದ ಕಣ್ಣಂಗಾರು ಕಮಲಾ ನಿವಾಸದ ಯೋಗೀಶ್ ಟಿ ಶೆಟ್ಟಿಯವರು ಮೂಲತಃ ಹೆಜಮಾಡಿ ಪಡುಮನೆ ತಬುರ ಶೆಟ್ಟಿ ಹಾಗೂ ಕರ್ನಿರೆ ಹೊಸಮನೆ ಕಮಲಾ ಶೆಟ್ಟಿ ದಂಪತಿಯವರ ಮೂರು ಜನ ಗಂಡು ಮಕ್ಕಳಲ್ಲಿ ಕೊನೆಯ ಸುಪುತ್ರರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಹೆಜಮಾಡಿ ಪ್ರೈಮರಿ ಸ್ಕೂಲ್, ಹೈಸ್ಕೂಲ್ ವಿದ್ಯಾಭ್ಯಾಸವನ್ನು ಹೆಜಮಾಡಿ ಹೈಯರ್ ಸೆಕೆಂಡರಿ ಸ್ಕೂಲಿನಲ್ಲಿ ಗೈದರು. ವಾಣಿಜ್ಯ ಪದವಿಯನ್ನು ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಶಾಲಾ ಕಾಲೇಜಿನಲ್ಲಿ ಇರುವಾಗಲೇ ಎಲ್ಲಾ ಆಟೋಟಗಳಲ್ಲಿ ಭಾಗವಹಿಸಿ ಒರ್ವ ಉತ್ತಮ ಕ್ರೀಡಾಪಟುವಾಗಿದ್ದರು. ಬಾಲ್ಯದಿಂದಲೇ ಯಕ್ಷಗಾನ, ನಾಟಕಗಳಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸಿ ಅನೇಕ ಬಹುಮಾನಗಳನ್ನು ಪಡೆದವರಾಗಿದ್ದಾರೆ. ವಿಚಾರ ಸಂಕೀರಣ, ಭಾಷಣ, ಕವಿಗೋಷ್ಠಿ, ಪ್ರಬಂಧ ಸ್ಪರ್ಧೆ ಇಂತಹ ಅನೇಕ ಚಟುವಟಿಕೆಗಳಲ್ಲಿ ಸ್ಪರ್ಧಾತ್ಮಕವಾಗಿ ಸ್ಪರ್ಧಿಸಿ ಹಲವಾರು ಬಹುಮಾನಗಳ ಸರಮಾಲೆಯನ್ನು ಗಳಿಸಿದ್ದಾರೆ. ಹೈಸ್ಕೂಲ್ ನಲ್ಲಿ ಕಲಿಯುತ್ತಿದ್ದಾಗ ಹೈಸ್ಕೂಲಿನ ವಿದ್ಯಾರ್ಥಿ ಸಂಘದ ನಾಯಕನಾಗಿ ಸ್ಪರ್ಧಿಸುವ ಅವಕಾಶ ಸಿಕ್ಕಿದಾಗ ಯೋಗೀಶ್ ರವರ ಹೆಸರು ವೈ.ಟಿ ಶೆಟ್ಟಿ ಎಂಬ ನಾಮಾಂಕಿತದೊಂದಿಗೆ ಇಂದಿನವರೆಗೂ ವೈ.ಟಿ ಎಂಬ ಹೆಸರಿನಲ್ಲಿ ಪ್ರಚಲಿತರಾದರು.…
ವಿಶ್ವ ಪ್ರಸಿದ್ಧ ಬಂಟರ ಸಂಘ ಮುಂಬಯಿ ಆಳಿದ ನಾಲ್ವರು ಅಧ್ಯಕ್ಷರು ವಿಜಯ ಕಾಲೇಜು ಮೂಲ್ಕಿ ಇದರ ಹಳೆ ವಿದ್ಯಾರ್ಥಿಗಳು ಎನ್ನುವುದು ಅಭಿಮಾನವೆನಿಸುತ್ತಿದೆ. ಈ ಕಾಲೇಜ್ನ ವಿದ್ಯಾರ್ಥಿಗಳು ಸಭ್ಯ ಮತ್ತು ಶಿಸ್ತುಬದ್ಧರು ಎಂದು ಹೇಳುವುದೇ ಅಭಿಮಾನದ ಸಂಗತಿ. ಆವಾಗಿನ ಮಕ್ಕಳೇ ಇಂದು ಒಳ್ಳೆಯವರೆಣಿಸಿ ಸಾಧಕರಾಗಿರುವುದು ಪ್ರಶಂಸನೀಯ. ನನ್ನ ಹುಟ್ಟು ಮೂಲ್ಕಿಯಲ್ಲಿ ಆದರೂ ಬಾಲ್ಯಾವಸ್ಥೆ ಮುಂಬಯಿಯಲ್ಲಿ ಕಳೆದ ಕಾರಣ ನಾನು ವಿಜಯ ಕಾಲೇಜ್ನಲ್ಲಿ ಕಲಿಯಲು ಅಸಾಧ್ಯವಾಯಿತು. ವಿಜಯ ಕಾಲೇಜ್ನ ಶೈಕ್ಷಣಿಕ ಕೊಡುಗೆ ಗಣನೀಯವಾದುದು ಎಂದು ಪಯ್ಯಡೆ ಹೊಟೇಲ್ಸ್ ಪ್ರೈವೇಟ್ ಲಿಮಿಟೆಡ್ ಇದರ ನಿರ್ದೇಶಕ, ಮುಂಬಯಿ ಕ್ರಿಕೆಟ್ ಅಸೋಶಿಯೇಶನ್ನ ಮಾಜಿ ಜೊತೆ ಕಾರ್ಯದರ್ಶಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ. ಪದ್ಮನಾಭ ವಿ. ಶೆಟ್ಟಿ ತಿಳಿಸಿದರು. ವಿಜಯ ಕಾಲೇಜು ಮೂಲ್ಕಿ ಗ್ಲೋಬಲ್ ಅಲ್ಯೂಮ್ನಿ ಅಸೋಸಿಯೇಶನ್ ಮಾರ್ಚ್ 7 ರಂದು ಅಂಧೇರಿ ಪೂರ್ವದ ಸಾಕಿನಾಕ ಇಲ್ಲಿನ ಪೆನಿನ್ಸುಲಾ ಗ್ರ್ಯಾಂಡ್ ಹೋಟೆಲ್ ಸಭಾಗೃಹದಲ್ಲಿ ಆಯೋಜಿಸಿದ್ದ ವಿಶೇಷ ಮಹಾಸಭೆ, ವಾರ್ಷಿಕ ಸಂಭ್ರಮ, ಗುರುವಂದನೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ…
ರಾಜ್ಯ ಅರಣ್ಯ ಸೇವೆಗೆ ಸೇರಿದ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸೂಚಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಸರಕಾರ ಆದೇಶಿಸಿದ್ದು, ಹಾಸನ ಅರಣ್ಯ ಸಂಚಾರಿ ಸ್ಥಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕುಂಬ್ರದ ಹಸ್ತ ಶೆಟ್ಟಿಯವರನ್ನು ನಿಯುಕ್ತಿಗೊಳಿಸಿದೆ. ಒಳಮೊಗ್ರು ಗ್ರಾಮದ ಮುಡಾಲ ಪುರಂದರ ಶೆಟ್ಟಿ ಮತ್ತು ವಾರಿಜಾ ಶೆಟ್ಟಿಯವರ ಪುತ್ರಿಯಾಗಿರುವ ಹಸ್ತ ಶೆಟ್ಟಿಯವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಪುತ್ತೂರು ಲಿಟ್ಟಲ್ ಫ್ಲವರ್ ಸ್ಕೂಲ್, ಹೈಸ್ಕೂಲ್ ಶಿಕ್ಷಣವನ್ನು ಪುತ್ತೂರು ಬೆಥನಿಯಲ್ಲಿ, ಉಜಿರೆ ಎಸ್.ಡಿ.ಎಂ ನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆದು ಮಡಿಕೇರಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದಾರೆ. ತನ್ನ ಪದವಿ ಶಿಕ್ಷಣ ಮುಗಿಸಿ 2019ರಲ್ಲಿ ಉಪವಲಯ ಅರಣ್ಯ ಅಧಿಕಾರಿಯಾಗಿ ನೇಮಕಗೊಂಡು ಎರಡು ವರ್ಷ ಕುಂದಾಪುರ ವಿಭಾಗದಲ್ಲಿ ಸೇವೆ ಸಲ್ಲಿಸಿ ಬಳಿಕ 2022ರಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಆಯ್ಕೆಯಾಗಿ ಎರಡು ವರ್ಷ ಕೊಯಂಬತ್ತೂರಿನಲ್ಲಿ ತರಬೇತಿ ಪಡೆದಿದ್ದರು. ಬಳಿಕ ಒಂದು ವರ್ಷ…
ಬ್ರಿಟಿಷರ ಆಡಳಿತದ ಕಾಲದಲ್ಲೇ ಗ್ರಾಮಗಳ ಸುತ್ತಮುತ್ತ ಗೋವುಗಳು ಮೇಯಲು ಗೋಮಾಳ ಭೂಮಿಗಳನ್ನು ಮೀಸಲಿಟ್ಟಿದ್ದರು. ಅದರ ಉದ್ದೇಶ ಸ್ಪಷ್ಟವಾಗಿತ್ತು. ಕೃಷಿ, ಹಾಲು ಉತ್ಪಾದನೆ ಮತ್ತು ಗೋ ಸಂತತಿಯನ್ನು ಉಳಿಸುವುದು. ಕೃಷಿ ಭೂಮಿ ಮತ್ತು ಗೋಮಾಳ ಇದ್ದಾಗ ಮಾತ್ರ ಪಶುಸಂಪತ್ತು ಸಹಜವಾಗಿ ಬೆಳೆಯುತ್ತದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ‘ಗೋಮಾತೆ’ ಎಂಬ ಭಾವನೆಯನ್ನು ಹೇಳುವವರೇ ಕೆಲವೊಮ್ಮೆ ಗೋಮಾಳ ಭೂಮಿಗಳನ್ನು ಕಬಳಿಸುವ ಸ್ಥಿತಿ ಕಾಣಿಸುತ್ತದೆ. ಗೋ ಆಶ್ರಮಗಳ ಹೆಸರಿನಲ್ಲಿ ಕಟ್ಟಡಗಳು ನಿರ್ಮಾಣವಾಗುತ್ತವೆ. ಅದರಲ್ಲೂ ಲಾಭ ಮತ್ತು ರಾಜಕೀಯ ಲೆಕ್ಕಾಚಾರ ಕಾಣಿಸಿಕೊಳ್ಳುತ್ತದೆ. ನಿಜವಾಗಿ ಗೋ ರಕ್ಷಣೆ ಎಂದರೆ ಕೇವಲ ಗೋ ಪೂಜೆ ಅಲ್ಲ; ಗೋವುಗಳಿಗೆ ಮೇಯುವ ಭೂಮಿ, ನೀರು ಮತ್ತು ಕೃಷಿಯೊಂದಿಗೆ ಇರುವ ಸಹಜ ಸಂಬಂಧವನ್ನು ಉಳಿಸುವುದೇ ಮುಖ್ಯ. ಕೃಷಿ ಭೂಮಿ ಇಲ್ಲದೆ ಮತ್ತು ಗೋಮಾಳಗಳು ನಾಶವಾದರೆ ಗೋ ಸಂತತಿ ಉಳಿಯುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದರೂ ಈ ಮೂಲ ವಿಚಾರವನ್ನು ಅನೇಕ ‘ಗೋ ರಕ್ಷಕರು’ ಗಮನಿಸುವುದಿಲ್ಲ ಎಂಬ ಟೀಕೆ ಕೇಳಿ ಬರುತ್ತಿದೆ. ಕೆಲ ಸಂದರ್ಭಗಳಲ್ಲಿ ಸರ್ಕಾರಗಳು…
ಮಂಗಳೂರು ವಿಶ್ವವಿದ್ಯಾಲಯವು 2025ನೇ ಸಾಲಿನಲ್ಲಿ ನಡೆಸಿದ್ದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳ ರ್ಯಾಂಕ್ ಪಟ್ಟಿ ಪ್ರಕಟಗೊಳಿಸಿದ್ದು, ಆಳ್ವಾಸ್ನ ವಿದ್ಯಾರ್ಥಿಗಳು ಒಟ್ಟು 15 ರ್ಯಾಂಕ್ ಗಳಿಸಿ ಶ್ರೇಷ್ಠ ಸಾಧನೆ ಮೆರೆದಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ರ್ಯಾಂಕ್ ಪಟ್ಟಿಯಲ್ಲಿ 2009ರಿಂದಲೂ ಮುಂಚೂಣಿಯಲ್ಲಿರುವ ಆಳ್ವಾಸ್ ಕಾಲೇಜು, ಇಲ್ಲಿಯವರೆಗೆ ಒಟ್ಟು 447 ರ್ಯಾಂಕ್ಗಳನ್ನು ಪಡೆದುಕೊಂಡಿದೆ. ಸ್ನಾತಕೋತ್ತರ ರ್ಯಾಂಕ್ : ಎಂಎ ಇಂಗ್ಲೀಷ್ ವಿಭಾಗದ ಪವಿತ್ರ ತೇಜ್, ಎಂಕಾಂ ಎಚ್ಆರ್ಡಿ ವಿಭಾಗದ ಹರ್ಷಿತಾ, ಆಹಾರ ವಿಜ್ಞಾನ ಹಾಗೂ ಪೋಷಣೆ ವಿಭಾಗದ ವಿಭಾಶ್ರೀ ಜಿಆರ್, ಸಾವಯವ ರಸಾಯನಶಾಸ್ತ್ರ ವಿಭಾಗದ ಪ್ರತೀಕ್ಷಾ, ರಸಾಯನಶಾಸ್ತ್ರ ವಿಭಾಗದ ಮೆಲಿಸಾ ವಿಡಿ ಹಾಗೂ ಮನಶಾಸ್ತ್ರ ವಿಭಾಗದ ಸಾಮ್ನ ಜಾರ್ಜ ಪ್ರಥಮ ರ್ಯಾಂಕ್ನೊಂದಿಗೆ ಆರು ಪ್ರಥಮ ರ್ಯಾಂಕ್ಗಳು ಆಳ್ವಾಸ್ ಸ್ನಾತಕೋತ್ತರ ವಿದ್ಯಾರ್ಥಿಗಳು ಗಳಿಸಿದ್ದಾರೆ. ಪದವಿ ರ್ಯಾಂಕ್ಗಳು : ಬಿಎ ವಿಭಾಗದ ನಂದಿನಿ ಶೆಣೈ ನಾಲ್ಕನೇ ರ್ಯಾಂಕ್ ಗಳಿಸಿದರೆ, ಬಿಕಾಂ ವಿಭಾಗದಲ್ಲಿ ಪ್ರಜ್ಞಾ ನಾಲ್ಕನೇ ರ್ಯಾಂಕ್ ಹಾಗೂ ಸುರಕ್ಷಾ ಜೈನ್ ಆರನೇ ರ್ಯಾಂಕ್ ಹಾಗೂ ಶ್ರದ್ಧಾ ಮೀರಾ 8ನೇ…
ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗವು ಮಾರ್ಚ್ 7 ರಂದು ಶನಿವಾರ ಅಪರಾಹ್ನ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾರ್ಗದರ್ಶನ, ಮಹಿಳಾ ವಿಭಾಗದ ಅಧ್ಯಕ್ಷೆ ಚಿತ್ರಾ ಆರ್ ಶೆಟ್ಟಿ ಮುಂದಾಳತ್ವದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ವಾರ್ಷಿಕ ವಿಶ್ವ ಮಹಿಳಾ ದಿನಾಚರಣೆ ಅದ್ದೂರಿಯಾಗಿ ಸಂಭ್ರಮಿಸಿತು. ಅಧ್ಯಕ್ಷ ಪ್ರವೀಣ್ ಬಿ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲಾದ ಸಮಾರಂಭದಲ್ಲಿ ಭಾರತ್ ಕಾಲೇಜ್ ಆಫ್ ಇಂಜಿನಿಯರಿಂಗ್ (ಬದ್ಲಾಪುರ) ಇದರ ಸ್ಥಾಪಕ ಟ್ರಸ್ಟಿ ಪ್ರೊ| ಶುಭಲಕ್ಷ್ಮೀ ಸುದರ್ಶನ್ ಹೆಗ್ಡೆ, ಪಾನ್ಬಾಯ್ ಇಂಟರ್ನ್ಯಾಶನಲ್ ಸ್ಕೂಲ್ (ಸಾಂತಾಕ್ರೂಜ್) ಇದರ ಆಡಳಿತ ಟ್ರಸ್ಟಿ ಮೋಹಿನಿ ಪಿ ಶೆಟ್ಟಿ ಅತಿಥಿ ಅಭ್ಯಾಗತರುಗಳಾಗಿದ್ದರು. ೨೦೨೬ನೇ ಸಾಲಿನ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸ್ಮಾರಕ ಪ್ರಶಸ್ತಿಯನ್ನು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್ ಶೆಟ್ಟಿ ಅವರಿಗೆ (ಪತಿ ಸುಧಾಕರ್ ಶೆಟ್ಟಿ ಅವರನ್ನೊಳಗೊಂಡು) ಪ್ರದಾನಿಸಿ ಅಭಿನಂದಿಸಲಾಯಿತು. ಬಂಟರ…
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಕ್ಷಮ ಮಹಿಳಾ ಸಂಘದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಳ್ವಾಸ್ನ ಮಹಿಳಾ ಸಿಬ್ಬಂದಿಗಳಿಗಾಗಿ ‘ಖೇಲ್ ಕೂದ್ ಮಹೋತ್ಸವ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಳೆದ ಒಂದು ವರ್ಷದ ಅವಧಿಯಲ್ಲಿ ಪ್ರತೀ ಶನಿವಾರ ಮಧ್ಯಾಹ್ನ ಶಿಕ್ಷಕ ಹಾಗೂ ಶಿಕ್ಷಕೇತರ ಮಹಿಳಾ ಸಿಬ್ಬಂದಿಗಳಿಗಾಗಿ ಕ್ರೀಡಾ ಚಟುವಟಿಕೆಗಳನ್ನು ನಿಯಮಿತವಾಗಿ ನಡೆಸಲಾಗುತ್ತಿದ್ದು, ಅದರ ಸಮಾರೋಪವಾಗಿ ಈ ಖೇಲ್ ಕೂದ್ ಮಹೋತ್ಸವವನ್ನು ಆಚರಿಸಲಾಯಿತು. ನೋವೊ ಟ್ರೀ ಮೈಂಡ್ಸ್ ಸಂಸ್ಥೆಯ ಸಹನಾ ನಾಗರಾಜ್ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ, ಮಹಿಳೆಯರು ಪರಸ್ಪರ ಒಬ್ಬರನ್ನೊಬ್ಬರು ಬೆಂಬಲಿಸಿ ಕಾರ್ಯ ನಿರ್ವಹಿಸಿದರೆ ನಿಜವಾದ ಸಬಲೀಕರಣ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮವನ್ನು ಕಬಡ್ಡಿ ವಿಶ್ವಕಪ್ನ ಚಿನ್ನದ ಪದಕ ವಿಜೇತೆ ಹಾಗೂ ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ ಧನಲಕ್ಷ್ಮಿ ಉದ್ಘಾಟಿಸಿದರು. ಸಕ್ಷಮಾ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಸಕ್ಷಮಾ ಸಂಚಾಲಕಿ ಡಾ. ಗ್ರೀಷ್ಮಾ ಆಳ್ವ ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಶ್ರಮಿಸಿದ ತಂಡದ ಪರಿಶ್ರಮವನ್ನು ಪ್ರಶಂಸಿಸಿ, ಮುಂದಿನ ದಿನಗಳಲ್ಲಿ ಮಹಿಳೆಯರಿಗಾಗಿ ಇನ್ನಷ್ಟು ಅರ್ಥಪೂರ್ಣ ಹಾಗೂ ಪರಿಣಾಮಕಾರಿ ಕಾರ್ಯಕ್ರಮಗಳನ್ನು…
ಗೆಳೆಯರೊಬ್ಬರು ತನ್ನ ಹೊಸ ಮನೆಯ ಗೋಡೆಗೇರಿಸಲು ಎ.ಐ ಗೆ ತನ್ನ ಮಡದಿಯ ಬಣ್ಣದ ಫೋಟೋ ಒಂದನ್ನು ಕೊಟ್ಟು ಅದನ್ನೇ ಹಳೆಯ ಕಪ್ಪು ಬಿಳುಪು ಕಲಾತ್ಮಕ ಚಿತ್ರವನ್ನಾಗಿ ಬದಲಾಯಿಸಲು ಸೂಚನೆ ಕೊಟ್ಟರು. ಕ್ಷಣಾರ್ಧದಲ್ಲಿ ಕೃತಕ ಬುದ್ಧಿಮತ್ತೆ ಅದ್ಭುತ ಚಿತ್ರವೊಂದನ್ನು ರೂಪಿಸಿತು. ಚಿತ್ರ ನೋಡಿದ ಯಾರೇ ಆಗಲಿ ಬೆರಗಾಗುವುದು ಸಹಜ. ಬೆಳಕು, ನೆರಳು, ಮುಖಭಾವ ಎಲ್ಲವೂ ನಿಖರ. ಆದರೆ ಸೂಕ್ಷ್ಮವಾಗಿ ನೋಡಿದಾಗ ಒಂದು ವಿಚಿತ್ರ ಬದಲಾವಣೆ ಇತ್ತು. ಅವರ ಕುತ್ತಿಗೆಯಲ್ಲಿದ್ದ ಎರಡು ಸರಗಳ ಪೈಕಿ ಕರಿಮಣಿಯೊಂದನ್ನು ಕಳಚಿ ಆ ಜಾಗದಲ್ಲಿ ಮತ್ತೊಂದು ಹೊಸ ವಜ್ರದ ನೆಕ್ಲೆಸ್ ಸೇರಿಕೊಂಡಿತ್ತು. ಯಾರೂ ಕೇಳದೇ, ಯಾರೂ ಹೇಳದೇ ಕೃ.ಬು ತನ್ನ ಕಲ್ಪನೆಯಿಂದ ಸೇರಿಸಿದ ಆಭರಣವದು. ಆ ಹೊಸ ಸರ ಯಾವುದು? ಎಲ್ಲಿಂದ ಬಂತು? ಚಲನಚಿತ್ರ ಪ್ರಿಯೆ ಅವರ ಮಡದಿ ಗಮನವಿಟ್ಟು ನೋಡಿದಾಗ ಗೊತ್ತಾದ ಸತ್ಯ, ಅದು ಈ ದೇಶದ ಪ್ರಮುಖ ಹಿಂದಿ ನಟಿಯೊಬ್ಬಳ ಕುತ್ತಿಗೆಯಲ್ಲಿದ್ದ ವಜ್ರದ ಸರ. ಎ.ಐ ತನ್ನ ಡೇಟಾ ಸಂಗ್ರಹದೊಳಗೆ ಇದ್ದ ಲಕ್ಷಾಂತರ ಚಿತ್ರಗಳೊಳಗಿಂದ ಗೆಳೆಯನ…
ಕಳೆದ 33 ವರ್ಷಗಳಿಂದ ಮುಂಬಯಿಯಲ್ಲಿ ವೈವಿಧ್ಯಮಯ ಕಲಾ ಕಾರ್ಯಕ್ರಮಗಳ ಮೂಲಕ ಹೆಸರಾಗಿರುವ ಕಲಾ ಸೌರಭ ಸಂಸ್ಥೆ ಹಿರಿಯ ಸಂಗೀತ ನಿರ್ದೇಶಕ ಮತ್ತು ಗಾಯಕ ಪದ್ಮನಾಭ ಸಸಿಹಿತ್ಲು ಅವರ ಸಾರಥ್ಯದಲ್ಲಿ ಪ್ರಸಕ್ತ ವರ್ಷ ‘ಸಂಸ್ಕಾರ -26’ ಸರಣಿಯನ್ನು ನಡೆಸುತ್ತಿದೆ. ಶಿರಡಿ ಸಾಯಿಬಾಬಾ ಸನ್ನಿಧಿಯಲ್ಲಿ ಆರಂಭಗೊಂಡ ಸರಣಿಯ ಮೂರನೇ ಕಾರ್ಯಕ್ರಮವಾಗಿ ಸಸಿಹಿತ್ಲು ಭಗವತಿಗೆ ವಿಶಿಷ್ಟ ಸ್ವರ ಸಂಗೀತಾಭಿಷೇಕದ ಮೂಲಕ ಕಲಾ ಸಂಸ್ಕಾರಕ್ಕೆ ಧಾರ್ಮಿಕ ಸ್ಪರ್ಶ ನೀಡಿದೆ ಎಂದು ಕರ್ನಾಟಕ ಯಕ್ಷಗಾನ, ಜಾನಪದ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ, ಸಾಹಿತಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದರು. ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಕಲಾ ಸೌರಭ ಮುಂಬಯಿ ಆಶ್ರಯದಲ್ಲಿ ಜರಗಿದ ‘ಶ್ರೀ ಭಗವತೀ ಅಮ್ಮ ಸ್ವರ ಸಂಗೀತಾಭಿಷೇಕ’ ಎಂಬ ಭಕ್ತಿ, ಭಾವ ಜಾನಪದ, ಯಕ್ಷಗಾಯನ ಹಾಗೂ ನೃತ್ಯ ರಂಜನೆಯ ಜುಗಲ್ಬಂದಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅವರು ಆಶಯ ಭಾಷಣ ಮಾಡಿದರು. ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಅಧ್ಯಕ್ಷ ಹಾಗೂ…
ಬೆಂಗಳೂರಿನ ಚಿತ್ರಸಂತೆ ಸಂಸ್ಥೆಯು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ನೀಡುವ “ವೀರವನಿತೆ – 2026” ವರ್ಷದ ಮಹಿಳೆ ಪ್ರಶಸ್ತಿಗೆ ಉಡುಪಿಯ ಸಮಾಜ ಸೇವಕಿ ವೀಣಾ ಎಸ್ ಶೆಟ್ಟಿ ಆಯ್ಕೆಯಾಗಿದ್ದು, ಮಾರ್ಚ್ 6 ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಖ್ಯಾತ ಚಲನಚಿತ್ರ ನಟಿ ತಾರ ಅನುರಾದ ಪ್ರಶಸ್ತಿ ಪ್ರದಾನ ಮಾಡಿದರು. ವೀಣಾ ಶೆಟ್ಟಿ ಅವರು ಸುಮಾರು ಮೂವತ್ತು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಹೀಗೆ ವಿವಿಧ ಸ್ಥರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸಮಾರಂಭದಲ್ಲಿ ಚಿತ್ರಸಂತೆ ಸಂಸ್ಥೆಯ ಪ್ರಮುಖರಾದ ಅರುಣ್ ಕುಮಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.















