Author: admin

ಹಳೆ ತಲೆಮಾರಿನ ಅರ್ಥಧಾರಿ, ಶಿಕ್ಷಕ ಮತ್ತು ಶಂಭೂರು ಗ್ರಾಮದ ಪಟೇಲ ದಿವಂಗತ ಬೊಂಡಾಲ ಜನಾರ್ಧನ ಶೆಟ್ಟಿ ಮತ್ತು ಅವರ ಪುತ್ರ ಹವ್ಯಾಸಿ ಯಕ್ಷಗಾನ ಕಲಾವಿದ, ನಿವೃತ್ತ ಭೂಮಾಪನ ಅಧಿಕಾರಿ ದಿವಂಗತ ಬೊಂಡಾಲ ರಾಮಣ್ಣ ಶೆಟ್ಟರ ಹೆಸರಿನಲ್ಲಿ ನೀಡಲಾಗುವ ಬೊಂಡಾಲ ಪ್ರಶಸ್ತಿಗೆ ಕಟೀಲು ಮೇಳದ ಹಿರಿಯ ವೇಷಧಾರಿ ಲಕ್ಷ್ಮಣ ಶೆಟ್ಟಿ ತಾರೆಮಾರ್ ಆಯ್ಕೆಯಾಗಿದ್ದಾರೆ. ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸಿದ ಕಲಾವಿದರಿಗಾಗಿಯೇ ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು ನೀಡುತ್ತಿರುವ ವಾರ್ಷಿಕ ಪ್ರಶಸ್ತಿಗೆ ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಂಚಾಲಕರಾಗಿರುವ ಆಯ್ಕೆ ಸಮಿತಿ 2025-26 ನೇ ಸಾಲಿಗೆ ಲಕ್ಷ್ಮಣ ಶೆಟ್ಟರ ಹೆಸರನ್ನು ಶಿಫಾರಸು ಮಾಡಿದೆ. ಪ್ರಶಸ್ತಿಯು ರೂ.10,000/- ನಗದು, ಶಾಲು, ಸ್ಮರಣಿಕೆ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ತೆಂಕುತಿಟ್ಟು ಯಕ್ಷಗಾನ ರಂಗದ ಪ್ರತಿಭಾನ್ವಿತ ಕಲಾವಿದರಾದ ಲಕ್ಷ್ಮಣ ಶೆಟ್ಟಿ ಅವರು ಬೆಳ್ತಂಗಡಿ ತಾಲೂಕಿನ ತಾರೆಮಾರಿನಲ್ಲಿ ಕೋಚಪ್ಪ ಶೆಟ್ಟಿ…

Read More

ಪ್ರಸ್ತುತ ಹಲವಾರು ದಶಕಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ಯಶಸ್ವಿ ಉದ್ಯಮಿಯಾಗಿರುವ ಕಟಪಾಡಿ ಎಸ್.ವಿ.ಎಸ್ ನ ಹಳೆ ವಿದ್ಯಾರ್ಥಿ ನರೇಂದ್ರ ಶೆಟ್ಟಿ, ಉದ್ಯಮಿ, ಕವಿ, ಸಾಹಿತಿ ಹಾಗೂ ಐಲೇಸಾ ಪ್ರವರ್ತಕ ಶಾಂತಾರಾಮ್ ಶೆಟ್ಟಿ, ಜೂನಿಯರ್ ವಿಷ್ಣುವರ್ಧನ್ ಎಂದೇ ಖ್ಯಾತಿ ಪಡೆದ ಯಕ್ಷ ಕಲಾವಿದ ಉದ್ಯಮಿ ಅರುಣ್ ಐರೋಡಿ ಉಡುಪಿ ಇವರೆಲ್ಲರ ಸಹಕಾರದೊಂದಿಗೆ ಅಧ್ಯಾಯ ಟ್ರಸ್ಟ್ ಶಿರಸಿ ಇದರ ನಿರ್ದೇಶಕರಾದ ಕಿರಣ್ ಉಪಾಧ್ಯಾಯ ಇವರು ಫೆಬ್ರವರಿ 3 ರಂದು ಎಸ್‌.ವಿ.ಎಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಮಾಧ್ಯಮ ಅನುದಾನಿತ ಪ್ರೌಢಶಾಲಾ ವಿಭಾಗದ ಮೂರು ತರಗತಿಗಳ ವಿದ್ಯಾರ್ಥಿಗಳಿಗಾಗಿ ಆಶುಭಾಷಣ ಸ್ಪರ್ಧೆ ಏರ್ಪಡಿಸಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ಏಣಗುಡ್ಡೆ ಸಾರ್ವಜನಿಕ ಗ್ರಂಥಾಲಯ ಹಾಗೂ ಎಸ್‌.ವಿ.ಎಸ್ ಪದವಿ ಪೂರ್ವ ಕಾಲೇಜಿನ ಗ್ರಂಥಾಲಯಗಳಿಗೂ ಕೂಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಅನೇಕ ಕನ್ನಡ ಸಾಹಿತ್ಯದ ಪುಸ್ತಕಗಳನ್ನು ಟ್ರಸ್ಟಿನ ವತಿಯಿಂದ ವಿತರಿಸಿದರು. ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಯಶಸ್ವಿ ಉದ್ಯಮಿ, ಎಸ್‌.ವಿ.ಎಸ್…

Read More

ಇತಿಹಾಸ ಪ್ರಸಿದ್ಧ ಸುರತ್ಕಲ್ ಪಡ್ರೆ ಶ್ರೀ ಧೂಮಾವತಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಆಮಂತ್ರಣ ಪತ್ರಿಕೆಯನ್ನು ದೈವಸ್ಥಾನದ ವಠಾರದಲ್ಲಿ ದೈವಸ್ಥಾನದ ಗಡಿ ಪ್ರಧಾನರಾದ ಬಾಬು ಭಂಡ್ರಿಯಲ್ ಬಿಡುಗಡೆಗೊಳಿಸಿದರು. ದೈವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಲೋಕಯ್ಯ ಶೆಟ್ಟಿ ಮುಂಚೂರು, ಸತೀಶ್ ಮುಂಚೂರು, ಪ್ರಧಾನ ಕಾರ್ಯದರ್ಶಿ ಲತೀಶ್ ಶೆಟ್ಟಿ ಪಡ್ರೆ, ಸಹ ಕಾರ್ಯದರ್ಶಿ ಮುಕೇಶ್ ಶೆಟ್ಟಿ ಪಡ್ರೆ, ಯತೀಶ್ ಪಡ್ರೆ, ದಿವಾಕರ್ ಶೆಟ್ಟಿ ಪಡ್ರೆ, ಭಂಟ ಪೂಜಾರಿ ಮುಕ್ಕ ಉಪಸ್ಥಿತರಿದ್ದರು. ಮಾರ್ಚ್ 2 ರಂದು ಪಡ್ರೆ ಶ್ರೀ ಧೂಮಾವತಿ ಭಂಟ ದೈವಗಳ ಭಂಡಾರ ಮುಕ್ಕ ಭಂಡಾರ ಮನೆಯಿಂದ ಹೊರಟು ಪಡ್ರೆ ಶ್ರೀ ಧೂಮಾವತಿ ದೈವಸ್ಥಾನದಳ್ಳಿ “ಧ್ವಜಾರೋಹಣ” ಮತ್ತು “ದೀಪಾರಾಧನೆ ಬಲಿ” ನಡೆಯಲಿದೆ. ಮಾರ್ಚ್ 3 ರಂದು ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆಯು ಶ್ರೀಧರ್ ಕೆ ಅಮೀನ್ ಮಂಗಳೂರು ಇವರ ಸ್ಮರಣಾರ್ಥ ನಡೆಯಲಿದೆ. ಅದೇ ದಿನ ರಾತ್ರಿ ಹೂವಿನ ಪೂಜೆ ಹಾಗೂ ಕಾಲಾವಧಿ ಜಾತ್ರೆ ನಡೆಯಲಿದೆ. ಮಾರ್ಚ್ 4 ರಂದು ಸಂಜೆ ಬಾಕಿಮಾರು ಚೆಂಡು, ದೀಪಾರಾಧನೆ ಬಲಿ,…

Read More

ಭಾರತೀಯ ಸಂಸ್ಕೃತಿಯಲ್ಲಿ ಪ್ರಕೃತಿ ಮತ್ತು ಪರಮಾತ್ಮನಿಗೆ ಅವಿನಾಭಾವ ಸಂಬಂಧವಿದೆ. ನಾವು ಕಲ್ಲು, ಮಣ್ಣು, ನದಿ ಮತ್ತು ಮರಗಳಲ್ಲಿ ದೇವರನ್ನು ಕಾಣುವ ಅದ್ಭುತ ಪರಂಪರೆಯನ್ನು ಹೊಂದಿದ್ದೇವೆ. ಇದಕ್ಕೆ ಜ್ವಲಂತ ಸಾಕ್ಷಿಯಾಗಿ ನಿಂತಿರುವುದು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಐತಿಹಾಸಿಕ ಪಟ್ಟಣ ಬಸ್ರೂರಿನಲ್ಲಿರುವ ಶ್ರೀ ತುಳುವೇಶ್ವರ ದೇವಸ್ಥಾನ. ಇಲ್ಲಿನ ವಿಶೇಷತೆಯೆಂದರೆ ಜಗನ್ನಿಯಾಮಕನಾದ ಪರಶಿವನು ಯಾವುದೇ ಭವ್ಯವಾದ ಕಲ್ಲಿನ ಗುಡಿಯೊಳಗೆ ಕುಳಿತಿಲ್ಲ. ಬದಲಾಗಿ ಒಂದು ಬೃಹತ್ ವೃಕ್ಷವನ್ನೇ ತನ್ನ ಆಲಯವನ್ನಾಗಿ ಮಾಡಿಕೊಂಡು ಭಕ್ತರನ್ನು ಹರಸುತ್ತಿದ್ದಾನೆ. ಮರವೇ ಆಲಯ. ಪೊಟರೆಯೇ ಗರ್ಭಗುಡಿ. ​ಬಸ್ರೂರಿನ ಶ್ರೀ ತುಳುವೇಶ್ವರ ದೇವಸ್ಥಾನಕ್ಕೆ ಕಾಲಿಡುತ್ತಿದ್ದಂತೆಯೇ ನಮಗೆ ಎದುರಾಗುವುದು ನಿಸರ್ಗದ ವಿಸ್ಮಯ. ಇಲ್ಲಿ ದೇವಸ್ಥಾನದ ಗರ್ಭಗುಡಿ ಎಂದರೆ ಅದು ಕಲ್ಲಿನ ಕಟ್ಟಡವಲ್ಲ. ಬದಲಾಗಿ ಮರದ ಪೊಟರೆ ಶತಮಾನಗಳಿಂದ ಬೆಳೆದು ನಿಂತಿರುವ ಈ ಬೃಹತ್ ಮರದ ಒಳಗಿನ ಪೊಟರೆಯಲ್ಲಿ ಶಿವನು ಲಿಂಗರೂಪಿಯಾಗಿ ನೆಲೆಯಾಗಿದ್ದಾನೆ. ಮರವನ್ನೇ ಆಲಯವನ್ನಾಗಿಸಿ, ಮರದ ಪೊಟರೆಯೊಳಗೆ ದರ್ಶನ ನೀಡುವ ಈ ದೃಶ್ಯ ಭಕ್ತರ ಕಣ್ಮನ ಸೆಳೆಯುತ್ತದೆ. ತುಳುನಾಡಿನ ರಕ್ಷಕನಾಗಿ, ತುಳುನಾಡಿಗರ ಆರಾಧ್ಯ ದೈವವಾಗಿರುವ…

Read More

ತೆಂಕಿನ ಚಂದ್ರಗಿರಿ ನದಿಯಿಂದ ಬಡಗಿನ ಬಾರ್ಕೂರುವರೆಗೆ ಹಾಗೂ ಪೂರ್ವದ ಘಟ್ಟದ ಬದಿಯಿಂದ ಪಡುವಣ ಕಡಲಿನವರೆಗೆ ವ್ಯಾಪಿಸಿರುವ ಸುಂದರ ಭೂಪ್ರದೇಶವೇ ನಮ್ಮ ತುಳುನಾಡು. ನಾಗನಡೆಯ ಪಂಚವರ್ಣದ ಮಣ್ಣಿನ ಪುಣ್ಯಭೂಮಿ ನಮ್ಮ ತುಳುನಾಡು. ನಾವು ರಾಜಕೀಯವಾಗಿ ಕರ್ನಾಟಕ ಹಾಗೂ ಕೇರಳ ರಾಜ್ಯದ ಭಾಗವಾದರೂ ನಮ್ಮ ಭಾಷೆ, ಆಹಾರ ಪದ್ಧತಿ, ಧಾರ್ಮಿಕ ಆಚರಣೆ, ಉಡುಗೆ ತೊಡುಗೆಯಲ್ಲಿ ಕರ್ನಾಟಕದ ಬೇರೆ ಭಾಗಕ್ಕಿಂತ ತೀರಾ ಭಿನ್ನ. ತುಳುನಾಡಿನ ಜನ ಸಾಹಸಿಗಳು, ರಸಿಕರು, ದೈವ ಭಕ್ತರು, ವಿನಯಶೀಲರು. ಭಾರತದ ಐದು ಬಹು ದೊಡ್ಡ ಬ್ಯಾಂಕ್ ಗಳು ಹುಟ್ಟಿದ್ದು ನಮ್ಮ ತುಳುನಾಡಿನಲ್ಲಿ. ಯಕ್ಷಗಾನ, ನಾಗಾರಾಧನೆ ಹಾಗೂ ಭೂತಾರಾಧನೆ ನಮ್ಮ ನಾಡಿನ ವಿಷೇಷತೆಗಳು. ಭಾರತದ ಬೇರೆ ಭಾಗಗಳಲ್ಲಿ ನಾಗರಪಂಚಮಿಯಂದು ನಾಗನನ್ನು ಪೂಜಿಸಿ ಬೇರೆ ದಿನಗಳಲ್ಲಿ ಕೊಲ್ಲುವ ಕ್ರಮವಿದ್ದರೆ, ನಮ್ಮಲ್ಲಿ ಸತ್ತ ನಾಗ ಕಂಡುಬಂದರೂ ಅದಕ್ಕೆ ಸಂಸ್ಕಾರ ಮಾಡುವವರು ನಾವು. ತನು, ಆಶ್ಲೇಶ ಬಲಿ, ಬ್ರಹ್ಮಮಂಡಲ, ನಾಗಮಂಡಲ ಇವು ನಾಗನನ್ನು ತೃಪ್ತಿಪಡಿಸುವ ಪೂಜಾ ವಿಧಾನಗಳು. ಬಹುಷಃ ತುಳುನಾಡಿನಲ್ಲಿ ನಡೆಯುವಷ್ಟು ನಾಗಮಂಡಲ, ಬ್ರಹ್ಮಕಲಶ, ನೇಮ ಬಲಿ…

Read More

ರಾಮ ಮಾಮನ ಮಗಲ್ ಸೀತಕ್ಕೆನ್ ತೂವರೆ ಆನ ಕಡೆತಗುಲು ಬತ್ತ್ ಇತ್ತೆರ್. ಇಲ್ಲಡ್ ರಾಮ ಮಾಮ ಒರಿಯೇ ಅಂಜೋವು. ಅರುವದೆ ಎಲ್ಯಾಯೆ. ರಾಮ ಮಾಮನ ಬುಡೆದಿ ತೀರ್ದ್ ಇತ್ತೆರ್. ಅಗಲೆಗ್ ಮೂಜಿ ಪೊನ್ನುಲೆ. ರಾಮ ಮಾಮನ ತಂಗಡಿಗ್‌ಲಾ ಕಡೀರ್‌ದ ಪೊನ್ನು. ಅಂಚ ಎನನ್ ಒಂಜಿ ಗಲಿಗೆ ಬರಿಯೆರೆ ಪಂದ್ ಇತ್ತೆರ್. ಆನ ಕಡೆತಗುಲು (ಆನನ ಬಾವೆ ಬೊಕ್ಕ ಒರಿ ಅಗಲೆನ ಸಂಬಂದದಾರ್) ಬತ್ತೆರ್. ಪೊನ್ನು ತೂಯೆರ್. ಪಿರಯ ಏತ್ ಆಂಡ್ ಕೇಂಡೆರ್. ಆ ಕಾಲೊಡು ಪೊನ್ನಗ್ ಇರ್ವ ವರ್ಸ ಕರಿಂಡ ಪೊನ್ನು ಬುಲೆದ್ ಪನೊಂದು ಇತ್ತೆರ್. ಬುಲೆದ್ ಪಂಡ ಪೊನ್ನಗ್ ಪಿರಯ ಆತ್ಂಡ್ ಪಂದ್ ಅರ್ತ. ಆನಗ್ ಏತ್ ಪಿರಯ ಪಂದ್ ಕೇನೊಂದು ಇತ್ತುಜೆರ್. ಪೊನ್ನು ಮಾತ್ರ ಲತ್ತ್ ಲತ್ತ್ ಆವೊಡು. ಅಂಚ ಯಾನ್ ಸೀತಕ್ಕೆನ ಪಿರಯ ಐನ್ ವರ್ಸ ಕಡಿಮೆ ಮಲ್ತ್ ಪಂಡೆ. ಈ ರಾಮ ಮಾಮ ಮನಿಪಂದೆ ಕುಲ್ಲುವೆರಾ? ಆಲೆನ ಜಾತಕ ಉಂಡು ಪಂಡಿನಾರ್, ಪಟ್ಯೊಡು ದೀತಿ ಪೆಟ್ಟಿಗೆ…

Read More

ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಅವರು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಹರೀಶ್ ಶೆಟ್ಟಿ ಅವರು ತಿಳಿಸಿದ್ದಾರೆ. ದಕ್ಷ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು.

Read More

ಬಂಟ ಸಮಾಜಕ್ಕೆ ಎಲ್ಲಾ ರೀತಿಯಲ್ಲಿಯೂ ಸಕಲ ವಿದ್ಯೆ, ಬುದ್ದಿ, ಸಂಸ್ಕಾರ, ಧನ ಸಂಪತ್ತು ಸಿಕ್ಕಿದೆ. ಸಮಾಜ ಸೇವೆ ಮಾಡುವಂತಹ ಶಕ್ತಿ ಕೂಡಾ ದೇವರು ಕರುಣಿಸಿದ್ದಾರೆ. ಸಮಾಜದಲ್ಲಿ ಬೆಳೆದು ನೆಲೆ ನಿಂತು ಗಣ್ಯ ವ್ಯಕ್ತಿಯಾಗಿ ರೂಪಿಸುವಲ್ಲಿ ಸಹಾಯ ಮಾಡಿದ ವ್ಯಕ್ತಿ, ಸಂಘ ಅಥವಾ ಸಮಾಜದ ಋಣವನ್ನು ಸಂದಾಯ ಮಾಡುವ ಧರ್ಮಪಾಲನೆ ನಮ್ಮದು ಎಂದು ಅರಿಯಬೇಕು. ನಾವು ಮಾಡುವ ಸಮಾಜ ಸೇವೆಯಿಂದ ಸಮಾಜದಲ್ಲಿ ಸುಖ ಕಾಣುವ ಕುಟುಂಬಗಳ ಖುಷಿಯೇ ನಮಗೆ ಸಂತೃಪ್ತಿ ಎಂದರಿಯಬೇಕು. ನಾವು ಬಂಟರು ಎಲ್ಲರೂ ಕೂಡಾ ಒಬ್ಬರಿಗೊಬ್ಬರು ಸಂಬಂಧಿಕರು. ಒಂದಲ್ಲ ಒಂದು ರೀತಿಯಲ್ಲಿ ಕುಟುಂಬದ ಸಂಬಂಧಗಳನ್ನು ಹೊಂದಿರುವ ಅಥವಾ ಸೇವಾ ಕಾರ್ಯಗಳಲ್ಲಿ ಸಂಬಂಧ ಹೊಂದಿರುವ ನಾವು ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಆಗಿರಬಹುದು. ಸಂತೋಷ್ ಶೆಟ್ಟಿಯಾವರಂತಹ ಸಂಘಟಕ, ನಾಯಕತ್ವ, ದೂರಾಲೋಚನೆಯ ದೃಷ್ಟಿ ಇಟ್ಟುಕೊಂಡು ಸಮಾಜ ಸೇವೆ ಮಾಡುವ ನಮ್ಮ ಬಂಟ ಸಮಾಜದ ಬಂಧುಗಳು ಇದ್ದರೆ ಸಾಕು, ಆಗ ನಾವು ಮಾಡಿದ ಸಾಧನೆಗಿಂತ ಇನ್ನಷ್ಟು ಎತ್ತರಕ್ಕೆ ನಮ್ಮ ಸಮಾಜ ಏರುತ್ತದೆ. ದೇವರು ನಮಗೆ…

Read More

ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರಿಗೆ ದೆಹಲಿ ಕರ್ನಾಟಕ ಸಂಘದ ವತಿಯಿಂದ ಡಾ| ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ| ಹಂಪ ನಾಗರಾಜಯ್ಯ ವಹಿಸಿದ್ದರು. ವೇದಿಕೆಯಲ್ಲಿ ಸಾಹಿತಿಗಳಾದ ಪ್ರಧಾನ ಗುರುದತ್ತ, ಬಿ.ಆರ್ ಲಕ್ಷ್ಮಣರಾವ್, ಡಾ| ಲತಾ ರಾಜಶೇಖರ್, ಚಲನಚಿತ್ರ ನಿರ್ದೇಶಕ ಡಾ| ಟಿ.ಎಸ್ ನಾಗಾಭರಣ, ಚಲನಚಿತ್ರ ನಟ ಚರಣ್ ರಾಜ್, ಸಂಪಾದಕ ವಿಶ್ವೇಶರ ಭಟ್, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಯಂ ನಾಗರಾಜ್, ಉಪಾಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಉಪಾಧ್ಯಕ್ಷೆ ಪೂಜಾ ರಾವ್, ಕಾರ್ಯದರ್ಶಿ ರಾಧಾಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Read More

ಅರಬ್ ಸಂಯುಕ್ತ ಸಂಸ್ಥಾನದ ವಾಣಿಜ್ಯ ನಗರಿ ದುಬಾಯಿಯಲ್ಲಿ ಯು.ಎ.ಇ ಬಂಟ್ಸ್ ಮತ್ತು ಯು.ಎ.ಇ ಯಲ್ಲಿರುವ ಕರ್ನಾಟಕ ಪರ ಸಂಘಟನೆಗಳ ಆಶ್ರಯದಲ್ಲಿ ಫೆಬ್ರವರಿ 8 ರಂದು ತುಳುನಾಡ ಸಂಸ್ಕೃತಿಯ ಅನಾವರಣ ಉಪನ್ಯಾಸ ಕಾರ್ಯಕ್ರಮ ಫಾರ್ಚೂನ್ ಪ್ಲಾಝಾ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಶ್ರೀ ಬಾರ್ಕೂರು ಮಹಾ ಸಂಸ್ಥಾನ (ಭಾರ್ಗವಬೀಡು ಬಾರ್ಕೂರು) ಪೀಠಾಧಿಪತಿ ಶ್ರೀ ಶ್ರೀ ಶ್ರೀ ಡಾ. ವಿದ್ಯಾವಾಚಾಸ್ಪತಿ ವಿಶ್ವಸಂತೋಷ ಭಾರತಿ ಶ್ರೀಪಾದರು ಪ್ರವಚನ ಹಾಗೂ ತುಳುನಾಡಿನ ಆಚಾರ ವಿಚಾರ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಸುಮಂಗಲೆಯರ ಪೂರ್ಣ ಕುಂಭ ಹಾಗೂ ಚೆಂಡೆ ವಾದನದೊಂದಿಗೆ ಪರಮ ಪೂಜ್ಯ ಸ್ವಾಮಿಜಿಯವರನ್ನು ಬರಮಾಡಿಕೊಂಡು ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಬುಧಾಭಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಸ್ವಾಗತ ಮತ್ತು ಪರಿಚಯ, ಯು.ಎ.ಇ ಬಂಟ್ಸ್ ನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿಯವರಿಂದ ಪ್ರಾಸ್ಥಾವಿಕ ಭಾಷಣದಲ್ಲಿ ಬಾರ್ಕೂರು ಮಹಾ ಸಂಸ್ಥಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಶ್ರೀ ಶ್ರೀ ಶ್ರೀ ಡಾ. ವಿದ್ಯಾವಾಚಾಸ್ಪತಿ ವಿಶ್ವಸಂತೋಷ…

Read More