Author: admin

ಇತ್ತೀಚೆಗೆ ನವಿ ಮುಂಬಯಿಯ ಬಂಟ್ಸ್ ಸೆಂಟರ್ ನ ಸಭಾಗೃಹದಲ್ಲಿ ನಡೆದ ಶಿವಾಯ ಫೌಂಡೇಶನ್ ನ ಎಂಟನೇ ವಾರ್ಷಿಕೋತ್ಸವದಲ್ಲಿ ಗೌರವ ಅತಿಥಿಯಾಗಿ ಆಗಮಿಸಿದ ಮುಂಬಯಿಯ ಯಶಸ್ವೀ ಉದ್ಯಮಿ, ಸಮಾಜಸೇವಕ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ರಮೇಶ ಶೆಟ್ಟಿ ಸಿದ್ದಕಟ್ಟೆ ಅವರನ್ನು ಸಂಸ್ಥೆಯ ಪರವಾಗಿ ಗೌರವಿಸಲಾಯಿತು. ಈ ಸಂಧರ್ಭ ಶಿವಾಯ ಫೌಂಡೇಶನ್ ಅಧ್ಯಕ್ಷರಾದ ಪ್ರಶಾಂತ್ ಶೆಟ್ಟಿ ಪಲಿಮಾರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Read More

ಇತ್ತೀಚೆಗೆ ನಿಧನರಾದ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಕೋಶಾಧಿಕಾರಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ನಿವೃತ್ತ ಅಧಿಕಾರಿ, ಸಮಾಜಸೇವಕ ಮುಂಡ್ಕೂರು ದೊಡ್ಡಮನೆ ರವೀಂದ್ರನಾಥ ಎಸ್ ಶೆಟ್ಟಿಯವರಿಗೆ ಶ್ರದ್ದಾಂಜಲಿ ಸಭೆ ಎಪ್ರಿಲ್ 4 ರಂದು ಶನಿವಾರ ಸಂಜೆ 5 ಗಂಟೆಗೆ ಬಂಟ್ಸ್ ಹಾಸ್ಟೇಲ್ ನಲ್ಲಿರುವ ಶ್ರೀಮತಿ ಗೀತಾ ಎಸ್.ಎಂ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಕಟಣೆ ತಿಳಿಸಿದೆ.

Read More

ಬೆಂಗಳೂರಿನಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ )2024ನೇ ಸಾಲಿನ ವಾರ್ಷಿಕ ಪ್ರಶಸ್ತಿಗಳನ್ನು ಘೋಷಿಸಿದ್ದು, ಶೋಷಿತ ಸಮುದಾಯದ ಕುರಿತ ಅತ್ಯುತ್ತಮ ವರದಿಗೆ ನೀಡಲಾಗುವ ಬಿ.ಜಿ ತಿಮ್ಮಪ್ಪಯ್ಯ ಪ್ರಶಸ್ತಿಗೆ ವಿಜಯವಾಣಿ ದಿನಪತ್ರಿಕೆಯ ಮಂಗಳೂರು ಬ್ಯೂರೋ ಮುಖ್ಯ ಉಪ ಸಂಪಾದಕ ರಾಜೇಶ್ ಶೆಟ್ಟಿ ದೋಟ ಭಾಜನರಾಗಿದ್ದಾರೆ. ಬೀದರ್‌ನಲ್ಲಿ ಏಪ್ರಿಲ್ 11 ಮತ್ತು 12ರಂದು ನಡೆಯಲಿರುವ 40ನೇ ರಾಜ್ಯಮಟ್ಟದ ಪತ್ರಕರ್ತರ ಸಮಾವೇಶದಲ್ಲಿ ಪ್ರಶಸ್ತಿ ಪ್ರದಾನಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ. ಬಂಟ್ವಾಳ ತಾಲೂಕಿನ ವಾಮದಪದವು ನಿವಾಸಿಯಾಗಿರುವ ರಾಜೇಶ್ ಶೆಟ್ಟಿ ದೋಟ ಅವರು ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ 2024ನೇ ಸಾಲಿನ ಪ್ರತಿಷ್ಠಿತ ಪ.ಗೋ (ಪದ್ಯಾಣ ಗೋಪಾಲಕೃಷ್ಣ) ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ‘ಮುಗದಾರಗೆ’ ಎಂಬ ಕವನ ಸಂಕಲನಕ್ಕೆ 2022ನೇ ಸಾಲಿನ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿ ಅವರಿಗೆ ಸಂದಿದೆ.

Read More

ಅಂಬಲಪಾಡಿ ಕಪ್ಪೆಟ್ಟು ಶ್ರೀ ಬ್ರಹ್ಮಬೈದರ್ಕಳ ಗರೋಡಿಯ ವಾರ್ಷಿಕ ನೇಮ ಏಪ್ರಿಲ್ 4ರಂದು ನಡೆಯಲಿದೆ. ಏಪ್ರಿಲ್ 3ರಂದು ರಾತ್ರಿ 8 ಗಂಟೆಗೆ ಅನ್ನ ನೈವೇದ್ಯ ಸೇವೆ, ಏಪ್ರಿಲ್ 4 ರಂದು ಮಧ್ಯಾಹ್ನ 12:30 ಕ್ಕೆ ಅನ್ನಸಂತರ್ಪಣೆ, ರಾತ್ರಿ 7:00 ಗಂಟೆಗೆ ಭಂಡಾರ ಇಳಿಯುವುದು, ಅನಂತರ ಶ್ರೀ ಬ್ರಹ್ಮಬೈದರ್ಕಳ ನೇಮ ಜರಗಲಿದೆ. ಏಪ್ರಿಲ್ 7 ರಂದು ರಾತ್ರಿ 10 ಗಂಟೆಗೆ ಪಡು ಗಡುವಾಡಿನಲ್ಲಿ, ಏಪ್ರಿಲ್ 16ರಂದು ರಾತ್ರಿ 10 ಗಂಟೆಗೆ ಮೂಡು ಗಡುವಾಡಿನಲ್ಲಿ (ಸರಕಾರಿ ಆಸ್ಪತ್ರೆ ಬಳಿ) ಶ್ರೀ ವ್ಯಾಘ್ರ ಚಾಮುಂಡಿ ದೈವದ ಕೋಲ ನಡೆಯಲಿದೆ ಎಂದು ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು ತಿಳಿಸಿದ್ದಾರೆ.

Read More

ಮಾನವೀಯ ಸೇವೆಯೇ ರೆಡ್ ಕ್ರಾಸ್ ಸಂಸ್ಥೆಯ ಧ್ಯೇಯವಾಗಿದ್ದು ರಕ್ತನಿಧಿ ಸೇವೆ, ಅಗತ್ಯ ಇರುವ ವಿಕಲ ಚೇತನರಿಗೆ ಗಾಲಿಕುರ್ಚಿ ವಿತರಣೆ, ಉಚಿತ ವೈದ್ಯಕೀಯ ಶಿಬಿರ ಮುಂತಾದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಅಶಕ್ತರ ಸೇವೆಗೆ ದಕ್ಷಿಣ ಕನ್ನಡ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಸದಾ ಭದ್ದವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ರೆಡ್ ಕ್ರಾಸ್ ಸಮಿತಿಯ ಚೇರ್ಮನ್ ಸಿಎ ಶಾಂತರಾಮ ಶೆಟ್ಟಿ ಹೇಳಿದರು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಪದವಿನಂಗಡಿಯ ಮಹಿಳೆಗೆ ರೆಡ್ ಕ್ರಾಸ್ ಸಮಿತಿ ವತಿಯಿಂದ ವಿಶೇಷ ಆರಾಮದಾಯಕ ಮಂಚ ವಿತರಿಸಿ ಮಾತನಾಡಿದರು. ಮಾಜಿ ಮೇಯರ್ ಜಯಾನಂದ ಅಂಚನ್, ರೆಡ್ ಕ್ರಾಸ್ ಜಿಲ್ಲಾ ಸಮಿತಿ ನಿರ್ದೇಶಕ ಪಿ.ಬಿ ಹರೀಶ್ ರೈ, ಕಾರ್ಯದರ್ಶಿ ಕಿಶೋರ್ ಚಂದ್ರ ಹೆಗ್ಡೆ, ಪ್ರಮುಖರಾದ ಪ್ರಜ್ವಲ್ ಶೆಟ್ಟಿ, ಹರಿಪ್ರಸಾದ್, ಉಮೇಶ್ ಶೆಟ್ಟಿ, ರವೀಂದ್ರ ಅಮೀನ್, ಸಂಜೀತ್ ಶೆಟ್ಟಿ, ಸರೋಜಿನಿ, ದಿವ್ಯಾ, ಜಯ ಮೇರಿಹಿಲ್, ಮಾಧವ, ಫಲಾನುಭವಿಯ ತಾಯಿ ಮೀನಾಕ್ಷಿ, ರೆಡ್ ಕ್ರಾಸ್ ಸಿಬ್ಬಂದಿ ಗಿರೀಶ್ ಕುಮಾರ್, ಅನಿತಾ ಮೊದಲಾದವರು ಉಪಸ್ಥಿತರಿದ್ದರು.

Read More

ಈಗಿನ ಯುವ ಪೀಳಿಗೆಯ ಕೆಲವು ಹುಡುಗಿಯರಿಗೆ ಅತಿಯಾದ ಸ್ವೇಚ್ಛಾಚಾರ ಜಾಸ್ತಿಯಾಗಿ ಕೆಲವು ಹುಡುಗರ ಜೀವನ ಹಾಳಾಗ್ತಾ ಇದೆ. ಮುಖ್ಯವಾಗಿ ಈಗ ಇರುವುದೇ ತಂದೆ ತಾಯಿಗಳಿಗೆ ಒಬ್ಬಳೇ ಮಗಳು ಅಥವಾ ಒಬ್ಬನೇ ಮಗ. ಆದ್ದರಿಂದ ಅವರನ್ನು ಚಿಕ್ಕಂದಿನಿಂದಲೇ ಅತಿಯಾದ ಮುದ್ದು ಮಾಡಿ ಸಾಕಿರ್ತಾರೆ. ಅವುಗಳಿಗೆ ತಮ್ಮ ಹೆತ್ತವರು ತಮ್ಮನ್ನು ಸಾಕಿ ಸಲಹಲು, ಒಳ್ಳೆ ವಿದ್ಯಾಭ್ಯಾಸ ಕೊಡಿಸಲು ಎಷ್ಟು ಕಷ್ಟ ಪಟ್ಟಿದ್ದಾರೆ ಅನ್ನುವ ಅರಿವು ಇರುವುದಿಲ್ಲ. ಹೆತ್ತವರೂ ಹಾಗೆ ತಾವು ಪಡುವ ಕಷ್ಟ ಮಕ್ಕಳಿಗೆ ಗೊತ್ತಾಗಬಾರದೆಂದು ಅದನ್ನು ಮುಚ್ಚಿಡುತ್ತಾರೆ. ಇದರಿಂದ ಮಕ್ಕಳಿಗೂ ಹೆತ್ತವರ ಕಷ್ಟ ಗೊತ್ತಿರುವುದಿಲ್ಲ. ಅವರಿಗೆ ತಾವು ಕೇಳಿದ್ದನ್ನೆಲ್ಲಾ ಹೆತ್ತವರು ತೆಗೆದು ಕೊಡುತ್ತಾರೆ. ಎಲ್ಲಾ ಸುಲಭದಲ್ಲಿ ಸಿಕ್ಕಿದ ಕೂಡಲೇ ಅವುಗಳಿಗೆ ಸ್ವೇಚ್ಛಾಚಾರ ಬೆಳೆಯುತ್ತದೆ. ತಾನು ಏನು ಮಾಡಿದರೂ ಮನೆಯವರು ನಮ್ಮನ್ನು ಪ್ರಶ್ನೆ ಮಾಡುವುದಿಲ್ಲವೆಂಬ ಹುಂಬ ಧೈರ್ಯದಿಂದ ನಿಧಾನವಾಗಿ ದಾರಿ ತಪ್ಪಲು ಶುರು ಮಾಡುತ್ತಾರೆ. ಇದರಲ್ಲಿ ಹೆತ್ತವರ ತಪ್ಪು ತುಂಬಾ ಇದೆ. ಯಾರೇ ಆಗಲಿ ಮಕ್ಕಳಿಗೆ ಚಿಕ್ಕಂದಿನಿಂದಲೇ ಕಷ್ಟದ ಅರಿವು ಮೂಡಿಸಬೇಕು. ಮಕ್ಕಳಿಗೆ ಬರೀ…

Read More

ಬಂಟರ ಸಂಘ ಮುಂಬಯಿ ಪ್ರತಿ ವರ್ಷ ಏಪ್ರಿಲ್ 14 ರಂದು ಬಿಸು ಪರ್ಬ ಆಚರಣೆಯ ದಿನದಂದು ವಿಶ್ವ ಬಂಟರ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರುತ್ತಿದೆ. ಪ್ರತೀ ವರ್ಷ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಿಕೊಂಡು ಬರುತ್ತಿದೆ. ಈ ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿದ ಅತ್ಯುತ್ತಮ ಸೇವೆಗೆ ರೈ ಸುಮತಿ ಎಜುಕೇಶನ್ ಟ್ರಸ್ಟ್ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ| ಅರುಣೋದಯ ಎಸ್ ರೈ ಹಾಗೂ 2025 ರ ಸಾಲಿನ ಮಿಸೆಸ್ ಇಂಡಿಯಾ ಕಿರೀಟ ಹೊತ್ತ ಡಾ. ರಷ್ಮಾ ಮೋಹಿತ್ ಶೆಟ್ಟಿಯವರು 2026 ರ ಸಾಲಿನ ಬೆಸ್ಟ್ ಬಂಟ್ ಅಚೀವರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಾರ್ಯಕ್ರಮವು ಏಪ್ರಿಲ್ 14 ರಂದು ಕುರ್ಲಾ ಬಂಟರ ಭವನದಲ್ಲಿ ನಡೆಯಲಿದೆ.

Read More

ಒಬ್ಬಾಕೆ ಮಹಿಳೆ ತನ್ನ ಸಂಸಾರ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಜೊತೆ ಜೊತೆಗೆ ಉದ್ಯಮ ವ್ಯವಹಾರಗಳಲ್ಲಿ ತನ್ನ ಕಾರ್ಯಕೌಶಲತೆಯನ್ನು ಮೆರೆಯ ಬಲ್ಲಳು ಎನ್ನುವುದಕ್ಕೆ ಉತ್ತಮ ನಿದರ್ಶನ ಆಗಬಲ್ಲವರು ಶ್ರೀಮತಿ ಕಾಂತಿ ಶೆಟ್ಟಿ. ಮೂಲತಃ ಶಿರ್ವ ನಡಿಬೆಟ್ಟಿನವರಾದ ಕಾಂತಿ ಶೆಟ್ಟಿ ಅವರು ತನ್ನ ಹುಟ್ಟೂರಿನಲ್ಲಿ ಶಿಕ್ಷಣ ಮುಗಿಸಿದ ಬಳಿಕ ಬೆಂಗಳೂರು ಸೇರಿ ತನ್ನ ಉದ್ಯಮ ವಿಚಕ್ಷಣೆಯಿಂದ ಯಶಸ್ವಿ ಮಹಿಳಾ ಉದ್ಯಮಿ ಎನಿಸಿಕೊಂಡ ನಂತರದ ದಿನಗಳಲ್ಲಿ ತನ್ನ ಚಿಂತನಶೀಲ ಸ್ವಭಾವ, ಸಮಕಾಲೀನ ಸಮಸ್ಯೆಗಳು, ರಾಜಕೀಯ ವಿದ್ಯಮಾನಗಳು ಕುರಿತಂತೆ ಆಳವಾದ ಚಿಂತನ ಮಂಥನದ ಬಳಿಕ ಸಾಮಾಜಿಕ, ರಾಜಕೀಯ ಹಾಗೂ ಸಂಘಟನಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡರು. ಇವರ ಸಂಕಲ್ಪ ಶಕ್ತಿ ಅದ್ಭುತವಾದುದು. ಜೊತೆಗೆ ಕನ್ನಡ ಭಾಷೆಯ ಮೇಲೆ ಇವರ ಹಿಡಿತ, ವಾಕ್ಪಟುತ್ವ, ತಾರ್ಕಿಕ ಚಿಂತನೆ ಮೊದಲಾದ ವಿಶೇಷ ಗುಣಗಳಿಂದ ದೇಶದ ಆಡಳಿತ ಪಕ್ಷ ಮೋದೀಜಿ ನೇತೃತ್ವದ ಭಾರತೀಯ ಜನತಾ ಪಕ್ಷದ ನಿಸ್ವಾರ್ಥ ಭಾವದ ಕಾರ್ಯಕರ್ತೆಯಾಗಿ ತನ್ನ ಜನಪ್ರಿಯತೆಯನ್ನು ಬೆಳೆಸಿಕೊಳ್ಳುವ ಮೂಲಕ ಅತ್ಯುತ್ತಮ ಸಂಘಟಕಿಯಾಗಿ ರೂಪುಗೊಂಡ ಬಳಿಕ ತನ್ನ ಸ್ವಸಮುದಾಯದ ಸಂಘಟನೆಯಾದ…

Read More

ಆತ್ಮನಿರ್ಭರ ಭಾರತವು ಕೇವಲ ಘೋಷಣೆ ಅಲ್ಲ, ಜನರ ಚಳವಳಿಯಾಗಿದೆ. ಪ್ರತಿಯೊಬ್ಬ ನಾಗರಿಕನು ಸ್ಥಳೀಯವಾಗಿ ಉತ್ಪಾದಿಸಿದ ಉತ್ಪನ್ನಗಳನ್ನು ಬಳಸುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆಯಾಗಬೇಕಾಗಿದೆ. ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ದೇಶದೊಳಗೆ ಉತ್ಪಾದಿಸಿದ ಸರಕುಗಳನ್ನು ಹಾಗೂ ಆಹಾರ ಪದಾರ್ಥಗಳನ್ನು ಬಳಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್ ಚಂದ್ರ ಜೆ ಶೆಟ್ಟಿ ಹೇಳಿದರು. ಅವರು ಪಡುಬಿದ್ರಿ ರೋಟರಿ ಕ್ಲಬ್ ಓಂಕಾರ್ ಕಾಸ್ಟೂಮ್ಸ್ ಮತ್ತು ಕಲಾಸಂಗಮ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ), ಬೆನಕ ಈವೆಂಟ್ಸ್ ಸಹಭಾಗಿತ್ವದಲ್ಲಿ ಮಾರ್ಚ್ 27ರಿಂದ ಮಾರ್ಚ್ 29 ರವರೆಗೆ ಪಡುಬಿದ್ರಿ ಬಂಟರ ಸಂಘದಲ್ಲಿ 3 ದಿನಗಳ ಕಾಲ ನಡೆಯುವ ಬೃಹತ್ ಆಹಾರ ಮತ್ತು ಸ್ವದೇಶಿ ಉತ್ಪನ್ನಗಳ ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಸುನಿಲ್ ಕುಮಾರ್ ವಹಿಸಿದ್ದರು. ಇಂದಿನ ಯುವ ಜನತೆ ಆಧುನಿಕ ಬದುಕಿಗೆ ಒಳಗೊಂಡು ಆಹಾರ ಪದ್ಧತಿಯನ್ನು ಬದಲಾಯಿಸಿ ಕೊಳ್ಳುವ ಮೂಲಕ ವಿದೇಶಿಯರ ಸರಕು…

Read More

62 ವರ್ಷಗಳ ಇತಿಹಾಸವಿರುವ ಸುಮಾರು 130 ಸದಸ್ಯರಿರುವ ಕಾರ್ಕಳ ರೋಟರಿ ಕ್ಲಬ್ ಹಿಂದಿನ ಹಲವಾರು ವರ್ಷಗಳಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಶಿಕ್ಷಣ ಕ್ಷೇತ್ರ ಇರಬಹುದು, ಆರೋಗ್ಯ ಕ್ಷೇತ್ರ ಇರಬಹುದು, ಪರಿಸರ ಸಂರಕ್ಷಣೆ, ರೋಡ್ ಸೇಫ್ಟಿ ಅಂತಹ ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡುತ್ತಾ ಬಂದಿದೆ. ಅಶಕ್ತರಿಗೆ ಶಕ್ತಿಯನ್ನು ನೀಡುವಂತಹ ಯಾವುದೇ ಕಾರ್ಯಕ್ರಮ ಇರಬಹುದು ಅದರಲ್ಲಿ ಕಾರ್ಕಳ ರೋಟರಿ ಕ್ಲಬ್ ಮುಂಚೂಣಿಯಲ್ಲಿದೆ. ಕಾರ್ಕಳದಲ್ಲಿರುವ ರೋಟರಿ ಹಾಸ್ಪಿಟಲ್ ಒಂದು ಉತ್ತಮ ಗುಣಮಟ್ಟದ ಆಸ್ಪತ್ರೆ ಎನ್ನುವುದರಲ್ಲಿ ಸಂಶಯವಿಲ್ಲ. ಗ್ಲೋಬಲ್ ಗ್ರಾಂಟ್ ಮುಖಾಂತರ ಸುಮಾರು 90 ಲಕ್ಷ ವೆಚ್ಚದಲ್ಲಿ ಬ್ಲಡ್ ಬ್ಯಾಂಕ್ ನ್ನು ಓಪನ್ ಮಾಡುವ ಎಲ್ಲಾ ಕೆಲಸಗಳು ಮುಗಿದಿದೆ. ಸರಕಾರದಿಂದ ಅನುಮತಿ ಸಿಗುವ ಕೆಲಸ ಮಾತ್ರ ಬಾಕಿ ಇದೆ. ಸದ್ಯದಲ್ಲಿ ಅದು ಕೂಡಾ ಇನ್ನು ಒಂದೆರಡು ತಿಂಗಳಲ್ಲಿ ಸಿಗುವ ನಿರೀಕ್ಷೆಯಲ್ಲಿದೆ. ರೋಟರಿ ಕ್ಲಬ್ ವತಿಯಿಂದ ಹಲವಾರು ಮನೆಗಳನ್ನು ಕೂಡಾ ನಿರ್ಮಿಸಿ ಕೊಟ್ಟಿದೆ. ಹಲವಾರು ಮನೆಗಳಿಗೆ ಸೋಲಾರ್ ವಿದ್ಯುತ್ತನ್ನು ಅಳವಡಿಸಿ ಕೊಟ್ಟಿದೆ. ಹಲವಾರು ಕ್ಯಾನ್ಸರ್ ರೋಗಿಗಳಿಗೆ…

Read More