Author: admin
ಪ್ರೀತಿಯ ಸಮಾಜ ಬಾಂಧವರೆ, ನಮ್ಮ ಸಮಾಜದ ಬಗ್ಗೆ ನಮಗೆಲ್ಲರಿಗೂ ಅಭಿಮಾನ ಹೆಮ್ಮೆ ಇದೆ. ಇದು ನಿಜವಾಗಲೂ ಇರಬೇಕು. ಯಾಕೆಂದರೆ ನಮ್ಮ ಸಮಾಜದಲ್ಲಿ ಹುಟ್ಟಿ ಬೆಳೆದವರು ನಾವು ದುಡಿದು ತಿನ್ನಬೇಕು. ಬೇರೆಯವರಿಗೂ ನೀಡಬೇಕು ಅನ್ನುವ ಮನೋಭಾವನೆ ಇರಬೇಕು ಮತ್ತು ಯಾರಿಗೂ ಕಡಿಮೆ ಇಲ್ಲದಂತೆ ಬದುಕಬೇಕು. ಯಾರೊಂದಿಗೂ ಬೇಡಬಾರದು. ಎಲ್ಲರಿಗೂ ತನ್ನಿಂದಾದ ಸಹಾಯ ಮಾಡಬೇಕು. ಇದು ನಮ್ಮ ಬಂಟ ಸಮಾಜದ ಹೆಗ್ಗುರುತು. ಇಂದು ಜಗತ್ತಿನಾದ್ಯಂತ ನಮ್ಮ ಸಮಾಜಕ್ಕೆ ಕೊಡುವ ಗೌರವ, ಪ್ರತಿಷ್ಠೆ, ಮುಂದಾಳತ್ವ ನೋಡಿದರೆ ತುಂಬಾ ಹೆಮ್ಮೆ ಅನಿಸುತ್ತದೆ. ಒಂದು ಸಮಾಜ ಕಟ್ಟುವುದು, ಬೆಳೆಸುವುದು ಆ ಸಮಾಜದ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನ ನಮ್ಮನ್ನು ಈ ಮಟ್ಟಕ್ಕೆ ಏರಿಸಿದೆ ಅಂದರೆ ಖಂಡಿತಾ ತಪ್ಪಾಗಲಾರದು. ಹಿಂದೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾವು ಕಡಿಮೆ ಸಂಖ್ಯೆಯಲ್ಲಿ ಇದ್ದೆವು. ಹೆಚ್ಚಿನ ಬಂಟರು ಜಮೀನ್ದಾರರಾಗಿದ್ದರು. ಆದರೆ ಭೂ ಮಸೂದೆ ಕಾನೂನಿನಲ್ಲಿ ಉಳುವವನೆ ಹೊಲದೊಡೆಯ ಅನ್ನುವ ಕಾನೂನು ನಮ್ಮಲ್ಲಿ ಕೆಲವರನ್ನು ನಿರ್ಗತಿಕರನ್ನಾಗಿ ಮಾಡಿತು. ಆದರೆ ನಮ್ಮ ಬಂಟ ಸಮುದಾಯ ಇದನ್ನು ಸವಾಲಾಗಿ…
ಉಡುಪಿ ಹಳೆ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಇರುವ ಉಡುಪಿಯ ಪ್ರಖ್ಯಾತ ಶಾಂಭವಿ ಹೋಟೆಲ್ಸ್ ನ ಅಂಗಸಂಸ್ಥೆಯಾದ ಸಂಪೂರ್ಣ ನವೀಕೃತಗೊಂಡ “ಮನ್ ಪಸಂದ್ ಫ್ಯಾಮಿಲಿ ರೆಸ್ಟೋರೆಂಟ್” ಭಾನುವಾರ ಉದ್ಘಾಟನೆಗೊಂಡಿತು. ಉಜ್ವಲ್ ಡೆವಲರ್ಪ್ ಪ್ರವರ್ತಕ ಪುರುಷೋತ್ತಮ ಶೆಟ್ಟಿ ಹಾಗೂ ಉದ್ಯಮಿ ತಲ್ಲೂರು ಶಿವರಾಮ ಶೆಟ್ಟಿ ನವೀಕೃತ ಹೋಟೆಲ್ ಅನ್ನು ಉದ್ಘಾಟಿಸಿ ಶುಭಹಾರೈಸಿದರು. ಚಿತ್ರನಟ ಅರವಿಂದ ಬೋಳಾರ್ ಮಾತನಾಡಿ, ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರ ಜೊತೆಗೆ ನೌಕರರ ಹಿತ ಕಾಪಾಡಿದಾಗ ಒಂದು ಸಂಸ್ಥೆ ಅಭಿವೃದ್ಧಿ ಹೊಂದಲು ಸಾಧ್ಯ. ಮನ್ ಪಸಂದ್ ರೆಸ್ಟೋರೆಂಟ್ ಗ್ರಾಹಕರ ಮನಸ್ಸು ಗೆಲ್ಲಬೇಕು. ಆಗ ಹೋಟೆಲ್ ಉತ್ತರೋತ್ತರ ಅಭಿವೃದ್ಧಿಯಾಗುತ್ತದೆ. ರವೀಂದ್ರ ಶೆಟ್ಟಿ ಒಡೆತನದ ಈ ಹೋಟೆಲ್ ಗ್ರಾಹಕರ ಮನಸ್ಸು ಗೆದ್ದು ಯಶಸ್ಸುಗಳಿಸಲಿ ಎಂದು ಹಾರೈಸಿದರು. ಡೈಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ಡಿಸೋಜಾ ನಂದಳಿಕೆ ಶುಭಹಾರೈಸಿದರು. ವಿವಿಧ ಗಣ್ಯರು ಭಾಗವಹಿಸಿದ್ದರು. ಹೋಟೆಲ್ ನ ವಿಶೇಷತೆ: ಸೌತ್ ಇಂಡಿಯನ್ ಹಾಗೂ ನೌರ್ತ್ ಇಂಡಿಯನ್ ಶೈಲಿಯ ರುಚಿಕರ ಖಾದ್ಯಗಳು…
ಪುಣೆಯಲ್ಲಿನ ದೊಡ್ಡ ಸ್ಮಶಾನ. ಸಂಜೆ 3:00 ಗಂಟೆ. ರೋಹನ್ ಅಮೆರಿಕದ ಪ್ರಮುಖ ಸಾಫ್ಟ್ವೇರ್ ಕಂಪನಿಯ ಉಪಾಧ್ಯಕ್ಷ ತನ್ನ ವಿಮಾನದಿಂದ ಇಳಿದು ನೇರವಾಗಿ ಸ್ಮಶಾನಕ್ಕೆ ಬಂದಿದ್ದ. ಅವರ ತಂದೆ ಸದಾಶಿವ ಹಿಂದಿನ ದಿನ ರಾತ್ರಿ ಕೊನೆಯುಸಿರೆಳೆದಿದ್ದರು. ರೋಹನ್ ದುಬಾರಿ ಲ್ಯಾಪ್ಟಾಪ್ ಬ್ಯಾಗ್ ಹಿಡಿದುಕೊಂಡು ರೇ-ಬ್ಯಾನ್ ಸನ್ಗ್ಲಾಸ್ ಧರಿಸಿದ್ದ. ಅವನು ಬೆವರುತ್ತಿದ್ದ ಮತ್ತು ನಿರಂತರವಾಗಿ ತನ್ನ ಗಡಿಯಾರವನ್ನು ಪರಿಶೀಲಿಸುತ್ತಿದ್ದ. “ಮೋಕ್ಷ ಈವೆಂಟ್ ಮ್ಯಾನೇಜ್ಮೆಂಟ್” (ಅಂತ್ಯಕ್ರಿಯೆ ಸೇವಾ ಸಂಸ್ಥೆ) ನ ಸುಮಿತ್ ಅಲ್ಲಿ ನಿಂತಿದ್ದ. ಸುಮಿತ್ ಎಲ್ಲವನ್ನೂ ವ್ಯವಸ್ಥೆ ಮಾಡಿದ್ದ. ಉರುವಲುಗಳನ್ನು ಜೋಡಿಸಲಾಗಿತ್ತು, ಪುರೋಹಿತರನ್ನು ಕರೆಯಲಾಗಿತ್ತು ಮತ್ತು ಸದಾಶಿವ ಅವರ ದೇಹವನ್ನು ಸ್ನಾನ ಮಾಡಿಸಿ ಸಿದ್ಧಪಡಿಸಲಾಗಿತ್ತು. ರೋಹನ್ ತನ್ನ ತಂದೆಯ ಮುಖವನ್ನು ನೋಡಿದ. ಒಂದು ಹನಿ ಕಣ್ಣೀರು ಅಥವಾ ಎರಡು ಅವನ ಕಣ್ಣುಗಳಿಂದ ಉರುಳಿತು. ಅವನು ಸುಮಿತ್ಗೆ ಕೇಳಿದ “ಮಿಸ್ಟರ್ ಸುಮಿತ್, ಎಲ್ಲವೂ ಸಿದ್ಧವಾಗಿದೆ, ಸರಿ? ನನಗೆ ಸಂಜೆ 6 ಗಂಟೆಗೆ ಹಿಂದಿರುಗುವ ವಿಮಾನವಿದೆ. ನಾಳೆ ನನಗೆ ಪ್ರಮುಖ ಸಭೆ ಇದೆ. ಇದನ್ನು ಬೇಗ ಮುಗಿಸಿ”.…
ಮೊಳಹಳ್ಳಿ ದಿನೇಶ್ ಹೆಗ್ಡೆ ಅವರ ಜನ್ಮ ದಿನದ ಶುಭ ಸಂದರ್ಭದಲ್ಲಿ, ಬಿದ್ಕಲ್ಕಟ್ಟೆಯ ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ನ ಸಭಾಂಗಣದಲ್ಲಿ ‘ಬೃಹತ್ ರಕ್ತದಾನ ಶಿಬಿರ’ಕ್ಕೆ ಚಾಲನೆ ನೀಡಲಾಯಿತು. ಮೊಳಹಳ್ಳಿ ದಿನೇಶ್ ಹೆಗ್ಡೆ ಜಯರತ್ನ ಟ್ರಸ್ಟ್ (ರಿ.) ಮತ್ತು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ಇವರ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದಲ್ಲಿ ಹಿರಿಯ ಸ್ಥಳೀಯ ಮುಖಂಡರು ಹಾಗೂ ಅಭಿಮಾನಿಗಳು ಭಾಗವಹಿಸಿ, ರಕ್ತದಾನ ಮಾಡುವ ಮೂಲಕ ದಿನೇಶ್ ಹೆಗ್ಡೆಯವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು. ಕಾರ್ಯಕ್ರಮದ ಕೊನೆಗೆ ರಕ್ತದಾನ ಮಾಡಿ ಜೀವ ಉಳಿಸುವ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡ ಎಲ್ಲಾ ರಕ್ತದಾನಿಗಳಿಗೆ ಮತ್ತು ಹಿತೈಷಿಗಳಿಗೆ ದಿನೇಶ್ ಹೆಗ್ಡೆಯವರು ಧನ್ಯವಾದಗಳನ್ನು ಅರ್ಪಿಸಿದರು.
ಸಾವಿರ ಜನರ ಪರಿಚಯವಿರಬಹುದು. ಆದರೆ ಒಂಟಿತನ ಕಾಡಿದಾಗ ನೆನಪಾಗುವ ಆ ಒಬ್ಬನೇ ನಮ್ಮವ. ಯಾರು ಜೀವನದ ಬೆಳಕಿನಲ್ಲಿ ಜೊತೆ ನಡೆಯುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಕತ್ತಲಿನಲ್ಲಿ ಜೊತೆಯಾಗಿ ಹೆಜ್ಜೆ ಹಾಕುವವರೇ ನಮ್ಮವರು. ಮುಖ ನೋಡಿ ನಗುವವರಲ್ಲ, ಮನಸ್ಸಿನ ನೋವು ನೋಡಿ ಮಿಡಿಯುವವರೇ ನಿಜವಾದ ನಮ್ಮವರು. ರಕ್ತದ ಸಂಬಂಧಕ್ಕಿಂತ ಹೆಚ್ಚಾಗಿ, ಕಷ್ಟದ ಸಮಯದಲ್ಲಿ ನೆರಳಾಗಿ ನಿಲ್ಲುವ ಸಂಬಂಧವೇ ಶ್ರೇಷ್ಠ. ನಮ್ಮ ಮೌನಕ್ಕೆ ಸಾವಿರ ಅರ್ಥ ಕಲ್ಪಿಸುವವರ ನಡುವೆ, ಆ ಮೌನದ ಹಿಂದಿರುವ ನೋವನ್ನು ಗುರುತಿಸುವವನೇ ನಮ್ಮವ. ತಪ್ಪು ಮಾಡಿದಾಗ ತಿದ್ದಿ ಬುದ್ದಿ ಹೇಳುವ ಅಧಿಕಾರ ಮತ್ತು ಅತ್ತಾಗ ಮಡಿಲಾಗುವ ಪ್ರೀತಿ ಇರೋರೇ ನಮ್ಮವರು. ನಮ್ಮವರು ಎಂದರೆ ಸದಾ ಜೊತೆಗಿರುವವರಲ್ಲ, ಎಷ್ಟೇ ದೂರವಿದ್ದರೂ ನಮ್ಮ ಹಿತ ಬಯಸುವವರು. ತಪ್ಪು ಮಾಡಿದಾಗ ಸಮಾಜದ ಮುಂದೆ ಹೀಯಾಳಿಸದೆ, ಏಕಾಂತದಲ್ಲಿ ತಿದ್ದಿ ಬುದ್ದಿ ಹೇಳಿ ಸರಿ ಹಾದಿಗೆ ತರುವವರು. ಎಲ್ಲವೂ ಸುಗಮವಾಗಿ ಸಾಗುವಾಗ ನೂರಾರು ಮಂದಿ ಜೊತೆಗಿರುತ್ತಾರೆ. ಆದರೆ, ನಾವು ಸೋತಾಗ, ಮಾನಸಿಕವಾಗಿ ಕುಗ್ಗಿದಾಗ ಯಾರು ದೂರ ಸರಿಯದೆ…
ಕಲಕ್ಳದ ಕ್ರರಯೇಟಿವ್ ಕಲಲೆೇಜಿನ ನಲಗಲದೆೇವ್ ಎಿಂ.ಜಿ. ಬಿ ಪ್ಲಾನಿಂಗ್ ನಲಿಾ ಜನರಲ್ ವಿಭಲಗದಲಿಾ ದೆೇಶಕೆೆ ಪ್ರಥಮ ಸ್ಲಾನ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್. ಟಿ. ಎ.) ವತಿಯಿಂದ ನಡೆಸಲಯದ ಜೆಇಇ ಬಿ.ಆರ್ಕ್ ಮತ್ತು ಬಿ.ಪ್ಯಾನ್ಸಿಂಗ್ ನ ಜನವರಿ ಆವೃತಿುಯ ಫಲಿತಯಿಂಶ ಪ್ರಕಟಗೆತಿಂಡಿದತು ಕ್ರರಯೇಟಿವ್ ಸಿಂಸ್ೆೆ ಅತ್ತಾತ್ುಮ ಫಲಿತಯಿಂಶವನತು ಪ್ಡೆದತ ಮತೆತುಮ್ಮೆ ರಯಷರಮಟಟದಲಿಾ ತ್ನುನತು ಗತರತತಿಸ್ಕೆತಿಂಡಿದೆ. ನ್ಯಗದೆೇವ್ ಎಿಂ.ಜಿ. ಬಿ.ಪ್ಯಾನ್ಸಿಂಗ್ ನಲಿಾ ಜನರಲ್ ವಿಭಯಗದಲಿಾ ದೆೇಶಕೆೆ ಪ್ರಥಮ ಸ್ಯೆನವನತು ಪ್ಡೆದತಕೆತಿಂಡಿದಯುರೆ. ಬಿ. ಪ್ಲಾನಿಂಗ್ ಫಲಿತಲಿಂಶ ಪ್ಟಿಿ: ನ್ಯಗದೆೇವ್ ಎಿಂ.ಜಿ.- 99.9762662 ಸತಕ್ಷಿತ್ ಗಿರಿೇಶ್ ಗೌಡ- 99.7769023 ಅಭಿರಯಮ್ ಭಟ್ ಜಿ.ಪಿ.- 98.3718612 ದಿಶಯಿಂತ್ ಎಿಂ. – 98.2152 181 ನ್ಸಶಯಿಂತ್ ಹೆತನ್ಯುವರ- 98.1107894 ಸಿಂವಿತ್ ಅಮಿತ್ ಗೆತೇಕರ್್- 98.1107894 ನ್ಸನ್ಯದ್ ರಯಜೆೇಶ್ ನ್ಯಯ್ಕೆ- 98.0490815 ಪ್ಸ್ೆ್ಿಂಟೆೈಲನತು ಪ್ಡೆದತಕೆತಿಂಡಿದಯುರೆ. ಮಯತ್ರವಲಾದೆ 95ಪ್ಸ್ೆ್ಿಂಟೆೈಲ್ ಗಿಿಂತ್ 16 ಮಿಂದಿ ವಿದಯಾರ್ಥ್ಗಳು, 90 ಪ್ಸ್ೆ್ಿಂಟೆೈಲ್ ಗಿಿಂತ್ 24 ಮಿಂದಿ ವಿದಯಾರ್ಥ್ಗಳು ಫಲಿತಯಿಂಶವನತು ಪ್ಡೆದತಕೆತಿಂಡಿದಯುರೆ. ಬಿ. ಆರ್ಕ್ ಫಲಿತಲಿಂಶ ಪ್ಟಿಿ:…
ಎನ್.ಟಿ.ಎ ರಾಷ್ಟ್ರಮಟ್ಟದಲ್ಲಿ ನಡೆಸುವ ಜೆಇಇ ಮೈನ್ ಬಿ.ಆರ್ಕ್ ಮತ್ತು ಬಿ.ಪ್ಲಾನಿಂಗ್À- 2026ರ ವಿಭಾಗದ ಮೊದಲ ಹಂತದ ಫಲಿತಾಂಶದಲ್ಲಿ ಜ್ಞಾನಸುಧಾದ 8 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿರುತ್ತಾರೆ. 1. ನಿಶಾನ್ ಎನ್. ಸಾಲ್ಯಾನ್ 99.8525917 ಪರ್ಸಂಟೈಲ್ (ಬಿ.ಆರ್ಕ್), 2. ಅನಿರುದ್ಧ್ ಆರ್ ಉಡುಪ 99.7009541 ಪರ್ಸಂಟೈಲ್ (ಬಿ.ಪ್ಲಾನ್) ಹಾಗೂ 99.1045499 ಪರ್ಸಂಟೈಲ್ (ಬಿ.ಆರ್ಕ್), 3. ಇಶಾಂತ್ ಪಾಟೀಲ್ ಜಿ.ಎಂ 99.6629800 ಪರ್ಸಂಟೈಲ್ (ಬಿ.ಪ್ಲಾನ್), 4. ಕನಿಷ್ಕ್ ಎಸ್ ಅಮಿನ್ 99.6501804 ಪರ್ಸಂಟೈಲ್ (ಬಿ.ಆರ್ಕ್) ಮತ್ತು 99.0553947 ಪರ್ಸಂಟೈಲ್ (ಬಿ.ಪ್ಲಾನ್), 5. ಪ್ರಣವ್ ಪಿ ಶೆಟ್ಟಿ 99.3164665 ಪರ್ಸಂಟೈಲ್ (ಬಿ.ಪ್ಲಾನ್), 6. ವಿದ್ವತ್ ವಿ ಕಾಮತ್ 99.2642521 ಪರ್ಸಂಟೈಲ್ (ಬಿ.ಪ್ಲಾನ್), 7. ಅಶ್ವಿನ್ ವಿ ಶೆಟ್ಟಿ 99.2215313 (ಬಿ.ಪ್ಲಾನ್) ಹಾಗೂ 8. ಶೋಧನ್ ಆರ್ ಹೆಗ್ಡೆ 99.1218493 ಪರ್ಸಂಟೈಲ್ (ಬಿ.ಪ್ಲಾನ್) ಪಡೆದಿದ್ದಾರೆ. ಬಿ.ಪ್ಲಾನಿಂಗ್ನಲ್ಲಿ 7 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲನ್ನು, ಬಿ.ಆರ್ಕ್ನಲ್ಲಿ 3 ವಿದ್ಯಾರ್ಥಿಗಳು 99ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ್ದಾರೆ. ಈಗಾಗಲೇ ಜೆ.ಇ.ಇ…
ಕಾರ್ಕಳದ ಸಾಣೂರು ಗ್ರಾಮದ ಪ್ರಕೃತಿ ರಮಣೀಯ ಪರಿಸರದಲ್ಲಿ, ಹಸಿರು ವನರಾಶಿಯ ಮಡಿಲಲ್ಲಿ ತಲೆಯೆತ್ತಿರುವ ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಮತ್ತು ಪಿಯು ಕಾಲೇಜು ಕೇವಲ ಶಿಕ್ಷಣ ಸಂಸ್ಥೆಯಲ್ಲ, ಅದೊಂದು ಸಂಸ್ಕಾರದ ದೀಪಸ್ತಂಭ. ಪಟೇಲ್ ಮುದ್ದಣ್ಣ ಶೆಟ್ಟಿ ಕ್ಯಾಂಪಸ್ನಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕದ ಜ್ಞಾನದೊಂದಿಗೆ ಬದುಕಿನ ಮೌಲ್ಯಗಳನ್ನು ಧಾರೆ ಎರೆಯಲಾಗುತ್ತಿದೆ. ಒಂದನೇ ತರಗತಿಯಿಂದ ಪಿಯುಸಿವರೆಗೆ ಇಲ್ಲಿ ದೊರೆಯುವ ಶಿಕ್ಷಣವು ಮಕ್ಕಳ ಸುಪ್ತ ಕೌಶಲ್ಯಗಳನ್ನು ಜಾಗೃತಗೊಳಿಸಿ, ಅವರನ್ನು ನಾಳೆಯ ಸಮಾಜಮುಖಿ ನಾಯಕರನ್ನಾಗಿ ರೂಪಿಸುವ ಪವಿತ್ರ ಕಾಯಕದಲ್ಲಿ ತೊಡಗಿಸಿಕೊಂಡಿದೆ. ರಾಜ್ಯ ಮತ್ತು ಸಿಬಿಎಸ್ಇ ಪಠ್ಯಕ್ರಮಗಳ ಸಮನ್ವಯದೊಂದಿಗೆ ಇಲ್ಲಿನ ಬೋಧನಾ ಕ್ರಮವು ಅತ್ಯಂತ ವಿಶಿಷ್ಟವಾಗಿದೆ. ಅನುಭವಿ ಶಿಕ್ಷಕ ವೃಂದವು ಇಂಟರಾಕ್ಟಿವ್ ಕ್ಲಾಸ್ ರೂಮ್ಗಳು ಮತ್ತು ಆಧುನಿಕ ಡಿಜಿಟಲ್ ತಂತ್ರಜ್ಞಾನದ ಮೂಲಕ ಕಲಿಕೆಯನ್ನು ಆಕರ್ಷಕವಾಗಿಸಿದೆ. ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ, ಪಿಸಿಎಂಸಿ ಹಾಗೂ ವಾಣಿಜ್ಯ ವಿಭಾಗಗಳಿದ್ದು, ಇದರೊಂದಿಗೆ ನೀಟ್, ಜೆಇಇ, ಕೆಸಿಇಟಿ, ಸಿಎ ಮತ್ತು ಯು.ಪಿ.ಎಸ್.ಸಿ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ಫೌಂಡೇಶನ್ ತರಬೇತಿ ನೀಡಲಾಗುತ್ತದೆ. ಇದು ವಿದ್ಯಾರ್ಥಿಗಳಲ್ಲಿ ಕೇವಲ ಪರೀಕ್ಷಾ ಸಿದ್ಧತೆಯನ್ನಷ್ಟೇ…
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದ.ಕ ಜಿಲ್ಲಾ ಶಾಖೆಯ ಮುಂದಿನ 3 ವರ್ಷಗಳ ಅವಧಿಗೆ ಆಡಳಿತ ಮಂಡಳಿ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಆರ್ಥಿಕ ಪ್ರಕೋಷ್ಠದ ಸಂಚಾಲಕ ಸಿ.ಎ ಶಾಂತರಾಮ್ ಶೆಟ್ಟಿ ನೇತೃತ್ವದ ತಂಡ ಎಲ್ಲಾ 10 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ದಾಖಲಿಸಿದೆ. ಚುನಾವಣಾಧಿಕಾರಿಯಾಗಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಮಹೇಶ್ ಕುಮಾರ್ ಯು ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ನಿವೃತ್ತ ಚುನಾವಣಾ ಉಪ ತಹಶೀಲ್ದಾರ್ ರಾಮಚಂದ್ರ ಬಿ ಕಾರ್ಯನಿರ್ವಹಿಸಿದ್ದರು.
ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳ ಸಮಿತಿ ಉಡುಪಿ ವತಿಯಿಂದ ಉಡುಪಿ ಕಂಬಳ ನಡೆಯಲ್ಲಿದ್ದು, ಇದರ ಪೂರ್ವಭಾವಿ ಸಭೆ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ನೇತೃತ್ವದಲ್ಲಿ ಫೆಬ್ರವರಿ 23 ರಂದು ಉಡುಪಿಯ ಶಾಂಭವಿ ಹೋಟೆಲ್ ನಲ್ಲಿ ನಡೆಯಿತು. ಉಡುಪಿ ಕಂಬಳದ ಶಂಕುಸ್ಥಾಪನೆ ಹಾಗೂ ಪೋಸ್ಟರ್ ಅನಾವರಣ ಸಮಾರಂಭ ಇದೇ ತಿಂಗಳ 28 ರಂದು ಪೂರ್ವಾಹ್ನ 11 ಗಂಟೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಕಂಬಳ ಕೋಣದ ಯಜಮಾನರಾದ ನಂದಳಿಕೆ ಶ್ರೀಕಾಂತ್ ಭಟ್, ಕೊಳಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ, 80 ಬಡಗುಬೆಟ್ಟು ಬ್ರಹ್ಮಬೈದರ್ಕಳ ಗರೋಡಿ ಮೊಕ್ತೇಸರರಾದ ಅರುಣಾಚಲ ಹೆಗ್ಡೆ, ಶ್ರೀ ವೈಷ್ಣವಿ ದುರ್ಗಾ ದೇವಸ್ಥಾನ ಮೊಕ್ತೇಸರರಾದ ಜಯರಾಜ್ ಹೆಗ್ಡೆ, ಉದ್ಯಮಿಗಳಾದ ಶಿವಪ್ರಸಾದ್ ಹೆಗ್ಡೆ, ರಾಜ್ಯ ಕಂಬಳ ಸಮಿತಿಯ ಸದಸ್ಯರಾದ ವಿಜಯ್ ಕುಮಾರ್ ಕಂಗಿನಮನೆ ಹಾಗೂ ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳ ಸಮಿತಿ ಉಡುಪಿಯ ಪದಾಧಿಕಾರಿಗಳು ಮತ್ತು ಕಂಬಳ ಅಭಿಮಾನಿಗಳು ಉಪಸ್ಥಿತರಿದ್ದರು.















