Author: admin

ನಾವು ಎಲ್ಲೇ ಇದ್ದರೂ, ಎಷ್ಟೇ ವಿದ್ಯಾವಂತರಾದರೂ ನಮ್ಮ ನಾಡಿನ ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿಯನ್ನು ಮರೆಯದೇ ಮಕ್ಕಳಿಗೆ ತಿಳಿಸಬೇಕು. ಮಕ್ಕಳು ಉದ್ಯೋಗ ನಿಮಿತ್ತ ಹೊರದೇಶಕ್ಕೆ ಹೋದರೂ ತಂದೆ ತಾಯಿಯ ಸೇವೆ ಮಾಡುತ್ತಿರಬೇಕು. ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ನಮ್ಮ ಹೃದಯ ಮನಸ್ಸನ್ನು ತೊಡಗಿಸಿಕೊಳ್ಳಬೇಕು. ಇಷ್ಟೊಂದು ಸಂಖ್ಯೆಯಲ್ಲಿ ಸಮಾಜ ಬಾಂಧವರು ಒಗ್ಗಟ್ಟಿನಿಂದ ಸೇರಿ ಸಂಘಟನೆ ಬಲವರ್ಧನೆಗೆ ಶ್ರಮಿಸುತ್ತಿರುವುದು ಸ್ತುತ್ಯಾರ್ಹ. ಮನುಷ್ಯ ಮನುಷ್ಯನ ನಡುವಿನ ಈ ಅನ್ಯೋನ್ಯ ಪ್ರೀತಿಯೇ ಮಾನವೀಯ ಸಂಬಂಧ. ನಾನು ನಿಮ್ಮವನು ನೀವೆಲ್ಲಾ ನಮ್ಮವರು ಎಂಬ ಭಾವನೆ ನಮ್ಮ ಬಳಿ ಇರಬೇಕು. ಈ ಪ್ರೀತಿಯೇ ಸೌಹಾರ್ದತೆಯ ಮೂಲ ಮಂತ್ರ ಎಂದು ಬೋಂಬೆ ಬಂಟ್ಸ್ ಅಸೋಸಿಯೇಷನ್ ನ ನಿಕಟಪೂರ್ವ ಅಧ್ಯಕ್ಷ ಸಿ.ಎ ಸುರೇಂದ್ರ ಕೆ ಶೆಟ್ಟಿ ಹೇಳಿದರು. ನಾಸಿಕ್ ನ ಹೋಟೆಲ್ ಮಸಾಲ ಜೋನ್ ಸಭಾಭವನದಲ್ಲಿ ನಡೆದ ನಾಸಿಕ್ ಬಂಟರ ಸಂಘದ 20ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನಾಸಿಕ್ ಬಂಟರ ಸಂಘದ…

Read More

ಬೆಂಗಳೂರು ಬಂಟರ ಸಂಘದ ಉಪಾಧ್ಯಕ್ಷೆ, ಉದ್ಯಮಿ ಹಾಗೂ ಸಮಾಜಸೇವಕಿ, ಬಿಜೆಪಿ ವಕ್ತಾರೆ ಶ್ರೀಮತಿ ಕಾಂತಿ ಶೆಟ್ಟಿಯವರಿಗೆ ‘ಉದ್ಯೋಗ ಯೋಗದಾನ ಪುರಸ್ಕಾರ – 2026’ ಪ್ರಶಸ್ತಿ ಲಭಿಸಿದೆ. ಶ್ರೀಮತಿ ಕಾಂತಿ ಶೆಟ್ಟಿಯವರು Aircom Solutions Private Limited ಹಾಗೂ ‘ನಮ್ಮ ಕುಟೀರ’ ಸಂಸ್ಥೆಗಳ ಮೂಲಕ ಉದ್ಯಮ ಮತ್ತು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. Case No. 18/9 ಎಂಬ ಯಶಸ್ವೀ ಕನ್ನಡ ಚಿತ್ರವನ್ನು ಸಹ ನಿರ್ಮಾಪಕಿಯಾಗಿ, ಚೆಲುವಿ ಕನ್ನಡ ಧಾರವಾಹಿಯನ್ನು ನಿರ್ಮಿಸಿರುವ ಶ್ರೀಮತಿ ಕಾಂತಿ ಶೆಟ್ಟಿಯವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜಸೇವೆಗಾಗಿ ಇವರಿಗೆ ಈ ಗೌರವ ಪ್ರದಾನಿಸಲಾಯಿತು. ಪ್ರಶಸ್ತಿಯನ್ನು ಚಿತ್ರನಟಿ ಶಿಲ್ಪಾ ಶೆಟ್ಟಿ ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಿದರು.

Read More

ಹೆಬ್ರಿ ಬಂಟರ ಸಂಘ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಮಣಿಪಾಲ ಕೆಎಂಸಿ ಆಸ್ಪತ್ರೆ, ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ 50 ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹೆಬ್ರಿಯ ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ಹೆಬ್ರಿ ಬಂಟರ ಭವನದಲ್ಲಿ ಬೃಹತ್ ಉಚಿತ ಆರೋಗ್ಯ ಮೇಳ ನಡೆಯಿತು. ಈ ಸಂಧರ್ಭ ಹೆಬ್ರಿ ಬಂಟರ ಸಂಘದ ಅಧ್ಯಕ್ಷ ಹರ್ಷ ಶೆಟ್ಟಿ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮುನಿಯಾಲು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸಾರ್ವಜನಿಕರು, ಸಮಾಜ ಬಾಂಧವರು ಈ ಉಚಿತ ಆರೋಗ್ಯ ಮೇಳದ ಸದುಪಯೋಗವನ್ನು ಪಡೆದುಕೊಂಡರು.

Read More

ನನ್ನ ಮನೆಯಲ್ಲಿರುವ ಇಷ್ಟೊಂದು ಪುಸ್ತಕಗಳನ್ನು ಮುಂದೆ ನಾನೇನು ಮಾಡಲಿ? ಆ ಹಿರಿಯರ ಇದೊಂದು ಪ್ರಶ್ನೆ ಮೊನ್ನೆಯಿಂದ ನನ್ನನ್ನು ಕಾಡುತ್ತಲೇ ಇದೆ. ಅದು ಬರೀ ಅವರೊಬ್ಬರ ಏಕಾಂಗಿ ಕಳವಳವಲ್ಲ. ಆ ಆತಂಕ ಅವರ ಬಾಯಿಂದ ಬಂದದ್ದಾದರೂ, ಅದರ ಕರಿನೆರಳು ಹಲವರ ಮನೆಯಲ್ಲೂ ಹಬ್ಬಿಕೊಂಡಿದೆ. ಕಳೆದ ಒಂದು ವರ್ಷದಲ್ಲಿ ಆರೇಳು ಮಂದಿ ಹಿರಿಯ ಬರಹಗಾರರು, ಓದುಗರು, ವಿಮರ್ಶಕರು, ಪತ್ರಕರ್ತರು, ಸಾಹಿತಿಗಳು, ಪ್ರಾಧ್ಯಾಪಕರು ಬೇರೆ ಬೇರೆ ಸಂದರ್ಭಗಳಲ್ಲಿ, ಬೇರೆ ಬೇರೆ ಶಬ್ದಗಳಲ್ಲಿ ಇದೇ ಅರ್ಥದ ಪ್ರಶ್ನೆಯನ್ನು ಮುಂದೆ ಇಟ್ಟಿದ್ದಾರೆ. ಹೌದು, ಕೆಲವರ ಮನೆಗಳಲ್ಲಿ ಪುಸ್ತಕಗಳು ರಾಶಿ ರಾಶಿಯಾಗಿ ಬಿದ್ದಿವೆ. ಓದಿ ಮುಗಿಸಿದ ಕೃತಿಗಳು, ಮನೆಯ ಬಹು ಜಾಗ ಹಿಡಿದಿರುವ ಡೈಜೆಸ್ಟ್‌ಗಳು, ಯಾವುದೋ ಕಾಲದಿಂದ ಅವರಿಗೆ ಬಂದ ಗೌರವ ಪ್ರತಿಗಳು, ಕಾಲದ ವಾಸನೆ ಹೊತ್ತ ನಿಯತಕಾಲಿಕಗಳು, ಮಡಚಿ ಇಟ್ಟ ದಿನಪತ್ರಿಕೆಗಳು, ಮಣಬಾರದ ಗಂಭೀರ ಸಂಶೋಧನಾ ಗ್ರಂಥಗಳು, ಅಟ್ಟದಲ್ಲಿ, ಕಿಟಕಿಯ ಅಂಚಿನಲ್ಲಿ, ಊಟದ ಟೇಬಲ್ ನಲ್ಲಿ, ಎಲ್ಲೆಲ್ಲಿ ಜಾಗ ಉಂಟು ಅಲ್ಲೆಲ್ಲಾ ಹರಡಿಕೊಂಡ ಇವೆಲ್ಲವೂ ಒಟ್ಟಿಗೆ ಮನೆ ತುಂಬಾ…

Read More

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ದ.ಕ ಜಿಲ್ಲಾ ಘಟಕದ ಅಧ್ಯಕ್ಷೆಯಾಗಿ ಸಾಹಿತಿ ವೀಣಾ ಟಿ ಶೆಟ್ಟಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಲತೇಶ ಬಾಕ್ರಬೈಲ್, ಜತೆ ಕಾರ್ಯದರ್ಶಿಗಳಾಗಿ ಗೀತಾ ಲಕ್ಷ್ಮೀಶ, ಶ್ರೀಲಕ್ಷ್ಮೀ ಮಠದಮೂಲೆ, ಕೋಶಾಧಿಕಾರಿಯಾಗಿ ರತ್ನಾವತಿ ಬೈಕಾಡಿ, ಮಾಧ್ಯಮ ಪ್ರಮುಖರಾಗಿ ಚಂದ್ರಶೇಖರ ಕುಳವರ್ಮ, ಮಹಿಳಾ ಪ್ರಕಾರ ಪ್ರಮುಖರಾಗಿ ಸುಮಂಗಲ ರತ್ನಾಕರ, ಮಕ್ಕಳ ಪ್ರಕಾರ ಪ್ರಮುಖರಾಗಿ ರಮೇಶ ಮಯ್ಯ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪಿ.ಬಿ ಹರೀಶ್ ರೈ, ಡಾ. ಸುರೇಶ ನೆಗಳಗುಳಿ, ಪ್ರಕಾಶ ನಾರಾಯಣ ಚಾರ್ಮಾಡಿ, ರವೀಂದ್ರ ಶೆಟ್ಟಿ ಆಯ್ಕೆಯಾಗಿದ್ದಾರೆ.

Read More

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿ ಸಮ್ಮುಖದಲ್ಲಿ ಸಮಗ್ರ ಭಾರತದ ಸಾಂಸ್ಕೃತಿಕ ಚಿತ್ರಣವು ಜೀವ ಪಡೆದಂತೆ ಕಂಗೊಳಿಸಿದರೆ, ಅಷ್ಟೇ ವಿನೀತರಾದ ಶಿವರಾಜ್ ಕುಮಾರ್ ದಂಪತಿ ವಿನಮ್ರತೆ ತೋರಿದರು. ಇದು ವಿದ್ಯಾಗಿರಿಯ ಕೃಷಿ ಸಿರಿ ಆವರಣದ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘ಆಳ್ವಾಸ್ ಸಂಪ್ರದಾಯ ದಿನ -2026’ ರ ಝೋಷ್ಇದರಿಂದ ಪುಳಕಿತರಾದ ಶಿವರಾಜ್ ಕುಮಾರ್ ತಾಳ ಹಿಡಿದು, ‘ಕೋಲು ಮಂಡೆ ಜಂಗಮ ದೇವರು…..’ ಹಾಡಿ ಹೆಜ್ಜೆ ಹಾಕಿದರು. ತಮ್ಮ ಆರಂಭಿಕ ‘ಆನಂದ್’ ಸಿನಿಮಾದ ‘ಟುವ್ವಿ ಟುವ್ವಿ’ ಹಾಡಿನಿಂದ ಹಿಡಿದು ಪುನೀತ್ ರಾಜ್ ಕುಮಾರ್ ಅವರ ‘ಬೊಂಬೆ ಹೇಳುತೈತೆ… ನೀನೆ ರಾಜಕುಮಾರ…’ ವರೆಗಿನ ಹಾಡುಗಳನ್ನು ಹಾಡಿದರು. ಕಿಕ್ಕಿರಿದ ವಿದ್ಯಾರ್ಥಿ ಸಾಗರವು ಪುನೀತವಾಯಿತು. ಸಾಕ್ಷಾತ್ಕರಿಸಿದ ಡಾ. ಎಂ ಮೋಹನ ಆಳ್ವ ಖುಷಿ ಪಟ್ಟು ನಸುನಕ್ಕರು. ಇದಕ್ಕೂ ಮೊದಲು ದೀಪ ಬೆಳಗಿ, ಚೆಂಡೆ ಪರಿಕರ ಬಡಿದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಿವರಾಜ್ ಕುಮಾರ್ ಅವರು, ‘ಏನನ್ನೇ…

Read More

ಜಗತ್ತಿನಲ್ಲಿ ಭಾರತೀಯ ಕುಟುಂಬ ವ್ಯವಸ್ಥೆ ಹಾಗೂ ಸಂಸ್ಕ್ರತಿಗೆ ವಿಶೇಷ ಸ್ಥಾನಮಾನಗಳಿವೆ. ಭಾರತದ ತಳಹದಿಯೇ ಕುಟುಂಬ ವ್ಯವಸ್ಥೆ. ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಭಾವನಾತ್ಮಕ ಸಂಬಂಧ, ಸಂಸ್ಕಾರದ ಹಾದಿ, ವಿಶೇಷವಾಗಿ ಮಾನವೀಯ ಗುಣಗಳು ಅಡಕವಾಗಿವೆ. ಬಹುಮುಖ್ಯವಾಗಿ ಸ್ತ್ರೀಯರನ್ನು, ಮಾತೆಯರನ್ನು ಪೂಜನೀಯ ಭಾವದಲ್ಲಿ ಕಂಡ ದೇಶ ಭಾರತ. ಜಗತ್ತಿನಲ್ಲಿ ಭಾರತೀಯ ಸಂಸ್ಕೃತಿಗೆ ಮಾರುಹೋಗದ ದೇಶಗಳೇ ಕಾಣಸಿಗುವುದು ಅಪರೂಪ. ಇಂತಹದ್ದೊಂದು ನಡೆಗೆ ಹಾದಿ ತೋರಿಸಿಕೊಟ್ಟವರು ನಮ್ಮ ಹಿರಿಯರು, ಪೂರ್ವಜರು, ಗತಿಸಿ ಹೋದ ಹಲವಾರು ತಲೆಮಾರುಗಳೆಂದರೂ ತಪ್ಪಾಗಲಾರದು. ಆ ಕಾರಣಕ್ಕಾಗಿ ಭಾರತೀಯ ಕೌಟುಂಬಿಕ ಪದ್ದತಿ, ಸಂಬಂಧಗಳು, ಆಚಾರ ವಿಚಾರ, ಸಂಪ್ರದಾಯಗಳು ಇಂದಿಗೂ ಜೀವಂತವಾಗಿ ಉಳಿದಿದೆಯೆಂದರೆ ಅತಿಶಯೋಕ್ತಿಯಾಗಲಾರದು. ವರ್ಷಗಳು ಉರುಳಿದಂತೆ ನಮ್ಮ ಹಿರಿಯರು ಹಾಕಿ ಕೊಟ್ಟ ಸಂಪ್ರದಾಯ, ಮಾನವೀಯ ಸಂಬಂಧ ಹಾಗೂ ಸಂಬಂಧಗಳ ಭದ್ರ ಬುನಾದಿ ಎಂಬುವುದೊಂದಿದೆಯಲ್ಲ ಅದು ತದ್ವಿರುದ್ಧ ಹಾದಿಯಲ್ಲಿ ಸಾಗುತ್ತಿರುವುದು ಭವಿಷ್ಯದ ಸಂಬಂಧ, ಕೌಟುಂಬಿಕ ಜೀವನ, ಬದುಕುವ ಪದ್ಧತಿ ಎಲ್ಲವೂ ಪಾಶ್ಚಾತ್ಯ ಶೈಲಿ. ವ್ಯಾಪಾರ, ವ್ಯವಹಾರಿಕ ದಿಕ್ಕಿನಲ್ಲಿ ಸಾಗಿ ಮನುಷ್ಯ ಸಂಬಂಧಗಳೆಂಬುವುದು ನಗಣ್ಯ ಹಾಗೂ ಅರ್ಥ ಕಳೆದುಕೊಳ್ಳುವತ್ತ…

Read More

ಎಲ್ಲರ ಬಾಯಲ್ಲೂ ಒಂದೇ ಸುದ್ದಿ ‘ಗ್ಯಾಸ್ ಬತ್ತ್ಂಡ ಗ್ಯಾಸ್ ಎತ್ತ್ಂಡ’. ಅಯ್ಯೋ ದೇವರೆ… ಎಲ್ಲವೂ ಇಷ್ಟೇ ನಾವು ಹೆಚ್ಚು ಹೆಚ್ಚು ಹೊಸತನ, ಹೊಸ ಟೆಕ್ನಾಲಜಿಯನ್ನು ನಮ್ಮ ನಿತ್ಯ ಜೀವನದ ಚಟುವಟಿಕೆಗಳಲ್ಲಿ ಅಳವಡಿಸಿ ಅದರ ಮೇಲೆ ಅವಲಂಭಿಸಿದಷ್ಟು ಇಂತಹ ಪಚೀತಿ ಎದುರಾಗುತ್ತಲೇ ಇರುತ್ತದೆ. ಮನೆಯೇ ಆಗಲಿ ಹೋಟೇಲೇ ಆಗಲಿ ಸೌದೆ ಒಲೆಯಲ್ಲಿ ಅಡುಗೆ ತಯಾರಾಗುತ್ತಿದ್ದ ಆ ಕಾಲದಲ್ಲಿ ಪಾತ್ರೆ ಪಗಡಿ ಮಸಿಯಾಗುವ ಸಮಸ್ಯೆ ಅಲ್ಲದೇ ಬೇರೆ ಅಂತದ್ದೇನು ಸಮಸ್ಯೆ ಇರಲಿಲ್ಲ. ಹೆಚ್ಚಿನ ಎಲ್ಲರ ಮನೆಯ ಅಟ್ಟದ ಮೇಲೆ ಕನಿಷ್ಟ ಪಕ್ಷ ಎರಡು ಮೂರು ತಿಂಗಳಿಗಾಗುವಷ್ಟು ಸೌದೆ ಇರುತ್ತಿತ್ತು. ಹಾಗಾಗಿ ಈ ಅಡುಗೆ ತಯಾರಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವೇ ಇರಲಿಲ್ಲ. ಅರ್ಥಾತ್ ಅದೊಂದು ದೊಡ್ಡ ಸಮಸ್ಯೆ ಎಂದೇ ಎಣಿಸಿರಲಿಲ್ಲ. ಆಗ ತಿಂದದ್ದು ಹೆಚ್ಚಾದರೆ ‘ಹೊಟ್ಟೆಯ ಗ್ಯಾಸ್ ಟ್ರಬಲ್’ ಸಮಸ್ಯೆ ಬಿಟ್ಟರೆ ಈ ಅಡುಗೆ ಗ್ಯಾಸ್ ನ ತಾಪತ್ರೆ ಇರಲಿಲ್ಲ!. ಆದರೆ ಬರಬರುತ್ತಾ ಎಲ್ಲವೂ ಬದಲಾಗಿ ಈ ಗ್ಯಾಸ್ ನ ಕಾರ್ಬಾರ್ ನಿಂದ ಕೇವಲ…

Read More

ಮನೆಯ ಕಡೆಗೆ ಗಮನ ಕೊಟ್ಟು ಸಂಸಾರವನ್ನು ಪ್ರೀತಿಸುವವಳು ಹೆಣ್ಣು. ಆಧುನಿಕ ಯುಗದಲ್ಲಿ ಅವಳು ಸಮಾನತೆಯ ಹಕ್ಕುಗಳನ್ನು ಅನುಭವಿಸುವಾಗ ತನ್ನ ಕರ್ತವ್ಯದ ಕಡೆಗೂ ಗಮನ ಹರಿಸಬೇಕು ಎಂದು ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿಯವರು ಹೇಳಿದರು. ಮಾರ್ಚ್ 21ರಂದು ಕುರ್ಲಾ ಪೂರ್ವದ ಬಂಟರ ಭವನದ ಎನೆಕ್ಸ್ ಕಟ್ಟಡದ ಸಭಾಗೃಹದಲ್ಲಿ ಕನ್ನಡ ವೆಲ್ಫೇರ್ ಸೊಸೈಟಿ ಘಾಟ್ಕೋಪರ್ ಇದರ ಮಹಿಳಾ ವಿಭಾಗದ ಆಶ್ರಯದಲ್ಲಿ ಆಚರಿಸಲಾದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಂಡು ಹೆಣ್ಣು ಒಬ್ಬರನ್ನೊಬ್ಬರು ಅರಿತು ಬದುಕಿದಾಗ ಮಾತ್ರ ಜೀವನ ಹಾಗೂ ಸಂಸಾರ ಉತ್ತಮ ರೀತಿಯಲ್ಲಿ ನಡೆಯಲು ಸಾಧ್ಯ. ಹೆಣ್ಣು ಎಲ್ಲಾ ಕ್ಷೇತ್ರಗಳಲ್ಲೂ ತನ್ನ ಪ್ರಾತಿನಿಧ್ಯವನ್ನು ಪಡೆದುಕೊಂಡಿದ್ದಾಳೆ ಆದರೆ ಅವಳದೇ ಆದ ಮಹತ್ವದ ಕರ್ತವ್ಯಗಳನ್ನು ಅವಳು ಎಂದಿಗೂ ಮರೆಯಬಾರದು ಕನ್ನಡ ವೆಲ್ಫೇರ್ ಸೊಸೈಟಿಯ ಸಮಾಜಪರ ಕಾರ್ಯಕ್ರಮಗಳನ್ನು ಕಂಡಾಗ ಸಂತೋಷವಾಗುತ್ತಿದೆ. ನಾಡು ನುಡಿಯ ಬಲವರ್ಧನೆಗೆ ಸಂಸ್ಥೆ ಮಾಡುತ್ತಿರುವ ಸೇವೆ ಅನುಕರಣೀಯವಾಗಿದೆ ಎಂದರು. ಸಂಸ್ಥೆಯ ಅಧ್ಯಕ್ಷ ನವೀನ್ ಶೆಟ್ಟಿ ಇನ್ನಬಾಳಿಕೆ ಅವರ ಅಧ್ಯಕ್ಷತೆಯಲ್ಲಿ ನಡೆದ…

Read More

ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದ.ಕ ಜಿಲ್ಲಾ ಘಟಕದ 2026-29 ನೇ ಸಾಲಿನ ಛೇರ್ಮನ್ ಆಗಿ ಸಿ.ಎ ಶಾಂತಾರಾಮ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ. ವೈಸ್ ಛೇರ್ಮನ್ ಆಗಿ ಡಾ. ಬಿ. ಸಚ್ಚಿದಾನಂದ ರೈ, ಖಜಾಂಚಿಯಾಗಿ ಗುರುದತ್ ನಾಯಕ್ ಆಯ್ಕೆಯಾಗಿದ್ದಾರೆ. ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೆಡ್ ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರು ಆಡಳಿತ ಮಂಡಳಿ ಸದಸ್ಯರಿಗೆ ಪ್ರಮಾಣವಚನ ಬೋಧಿಸಿ ಶುಭ ಹಾರೈಸಿದರು. ನೂತನವಾಗಿ ಚುನಾಯಿತರಾದ ಸಿ.ಎ ಶಾಂತಾರಾಮ ಶೆಟ್ಟಿ, ಡಾ. ಬಿ. ಸಚ್ಚಿದಾನಂದ ರೈ, ಗುರುದತ್ ನಾಯಕ್, ಡಾ. ಸತೀಶ್ ರಾವ್, ಯತೀಶ್ ಬೈಕಂಪಾಡಿ, ಪುಷ್ಪರಾಜ್ ಜೈನ್, ಡಾ. ಸುಮನ ಬಿ., ಪಿ.ಬಿ ಹರೀಶ್ ರೈ, ಸಚೇತ್ ಸುವರ್ಣ ಮತ್ತು ರಾಘವೇಂದ್ರ ರಾವ್ ಪ್ರಮಾಣ ವಚನ ಸ್ವೀಕರಿಸಿದರು. ಬಳಿಕ ಛೇರ್ಮನ್ ಹಾಗೂ ವಿವಿಧ ಉಪ ಸಮಿತಿಗಳಿಗೆ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು. ಸಿ.ಎ ಶಾಂತಾರಾಮ ಶೆಟ್ಟಿಯವರು ಸತತ 4 ನೇ ಅವಧಿಗೆ ದ.ಕ. ಜಿಲ್ಲಾ ಘಟಕದ ಛೇರ್ಮನ್ ಆಗಿ…

Read More