Author: admin

ಒಬ್ಬ ವ್ಯಕ್ತಿ ಸುಮ್ಮನೆ ನಾಯಕನಾಗಿ ಗುರುತಿಸಲ್ಪಡುವುದಿಲ್ಲ. ನಾಯಕನಾಗಿ ಕಾಣಿಸಿಕೊಳ್ಳಬೇಕಾದರೆ ಮೂಲತಃ ಆತನಲ್ಲಿ ನಾಯಕತ್ವದ ಗುಣಗಳಿರಬೇಕು. ಅದನ್ನು ಪೋಷಿಸಿ ಬೆಳಕಿಗೆ ತರುವ ವಾತಾವರಣ ಇರಬೇಕು. ಜೊತೆಗೆ ಸದಾ ಪ್ರಯತ್ನಶೀಲತೆ, ದೃಢ ಸಂಕಲ್ಪ, ಛಲ, ಸವಾಲುಗಳನ್ನು ಎದುರಿಸಿ ಅದನ್ನು ಮೀರಿ ನಿಲ್ಲುವ ತಾಕತ್ತು, ಆಕರ್ಷಕ ವ್ಯಕ್ತಿತ್ವ, ನಿಷ್ಕಲ್ಮಶ ಭಾವಶುದ್ಧಿ, ನೇರ ನಡೆ ನುಡಿ, ಯೋಜನೆ ಯೋಚನೆಯ ಬಗ್ಗೆ ಖಚಿತತೆ ಇವೆಲ್ಲವೂ ಮೇಳೈಸಿದಾಗ ಒಬ್ಬ ಸಾಮಾನ್ಯ ಅಸಾಮಾನ್ಯನಾಗುತ್ತಾನೆ. ನಾಯಕನಾಗುತ್ತಾನೆ. ಮಹಾ ನಾಯಕನಾಗುತ್ತಾನೆ. ಇಂತಹ ಒಬ್ಬ ಮಹಾನಾಯಕ ನಮ್ಮೊಂದಿಗಿದ್ದಾರೆ. ಅವರೇ ಜಾಗತಿಕ ಬಂಟರ ಸಂಘಗಳ ಒಕ್ಕೂಟವೆಂಬ ಹೊನ್ನಿನ ತೇರನ್ನೇರಿ ಅದನ್ನು ಯಶಸ್ಸಿನ ಶಿಖರಾಗ್ರಕ್ಕೆ ಸಾಗಿಸುತ್ತಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ‘ಐಕಳದ ಮುತ್ತು ಬಂಟರ ಗತ್ತು ಹರೀಶ್ ಶೆಟ್ಟಿ ಎನ್ನುವ ಸೊತ್ತು’. ವಿಶ್ವದಾದ್ಯಂತ ವಿವಿದೆಡೆ ಸ್ಥಾಪಿಸಲ್ಪಟ್ಟ ಸುಮಾರು 150ಕ್ಕೂ ಹೆಚ್ಚು ಬಂಟರ ಸಂಘಗಳು ಒಂದಾಗಿ ಸೇರಿ ನಿರ್ಮಾಣಗೊಂಡ ತುಳುವ ನಾಡಿನ ಹೆಮ್ಮೆಯ ಬಂಟ ಸಮುದಾಯದ ಏಕೈಕ ಕೇಂದ್ರೀಯ ಪ್ರಧಾನ ಸಂಸ್ಥೆ ಅದು ಜಾಗತಿಕ ಬಂಟರ ಸಂಘಗಳ…

Read More

ಹಲವಾರು ಅನಿವಾಸಿ ಕನ್ನಡಿಗರ ಸಂಘಟನೆಗಳು ಡಾ| ರೊನಾಲ್ಡ್ ಕೊಲಾಸೊ ಅವರ ನೇತೃತ್ವದಲ್ಲಿ ತಮ್ಮ ವಿವಿಧ ಬೇಡಿಕೆಗಳ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. 2023 ರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ ಎರಡು ಪ್ರಮುಖ ಚುನಾವಣಾ ಭರವಸೆಗಳಾಗಿದ್ದ ಅನಿವಾಸಿ ಕನ್ನಡಿಗರ ವ್ಯವಹಾರಗಳಿಗೆ ಪ್ರತ್ಯೇಕ ಸಚಿವಾಲಯ ಮತ್ತು ಇಲಾಖೆಯ ರಚನೆ ಹಾಗೂ ಕರ್ನಾಟಕದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಅಥವಾ ರಾಜ್ಯಕ್ಕೆ ಶಾಶ್ವತವಾಗಿ ಸ್ಥಳಾಂತರಗೊಳ್ಳಲು ಬಯಸುವ ಅನಿವಾಸಿ ಕನ್ನಡಿಗರನ್ನು ಬೆಂಬಲಿಸಲು 1,000 ಕೋ. ರೂ. ಮೊತ್ತದ ನಿಧಿ ಸ್ಥಾಪನೆ ಬಗ್ಗೆ ಸರಕಾರ ಇನ್ನೂ ಕ್ರಮ ಕೈಗೊಂಡಿಲ್ಲ. ಸರಕಾರ ರಚನೆಯಾಗಿ 2.5 ವರ್ಷ ಕಳೆದಿದ್ದರೂ ಈ ಭರವನೆಗಳನ್ನು ಈಡೇರಿಸದೆ ಇರುವುದು ನಮಗೆಲ್ಲ ತುಂಬಾ ಬೇಸರ ಉಂಟು ಮಾಡಿದೆ. ಈ ಭರವಸೆಗಳು ಈಡೇರಿದ್ದರೆ ರಾಜ್ಯಕ್ಕೆ ಹಾಗೂ ಅನಿವಾಸಿ ಕನ್ನಡಿಗರಿಗೂ ತುಂಬಾ ಅನುಕೂಲ ಆಗುತ್ತಿತ್ತು. ಆದ್ದರಿಂದ ಈ ಎರಡು ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇವೆರಡು ಕಾರ್ಯರೂಪಕ್ಕೆ ಬಂದರೆ ಹೂಡಿಕೆ,…

Read More

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕುಕ್ಕುಂದೂರು, ರೋಟರಿ ಕ್ಲಬ್ ಕಾರ್ಕಳ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಪ್ರಸಾದ್ ನೇತ್ರಾಲಯ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಹಾಗೂ ಪೊರೆ ಶಸ್ತ್ರಚಿಕಿತ್ಸಾ ಶಿಬಿರವು ಪ್ರಾಥಮಿಕ ಆರೋಗ್ಯ ಕೇಂದ್ರ ಕುಕ್ಕುಂದೂರು ಕಾರ್ಕಳ ಇಲ್ಲಿ ನಡೆಯಿತು. ಕುಕ್ಕುಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಯು ಅವರ ಅಧ್ಯಕ್ಷತೆಯಲ್ಲಿ ನಡೆದ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದ ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮಾತನಾಡುತ್ತಾ, ಕಣ್ಣು ದೇಹದ ಅಮೂಲ್ಯವಾದ ಅಂಗ. ಇದರ ಬಗ್ಗೆ ಗ್ರಾಮೀಣ ಜನರಿಗೆ ಮಾಹಿತಿ ಹಾಗೂ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಇದರಲ್ಲಿ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದರು. ಕಾರ್ಕಳ ತಾಲೂಕು ಆರೋಗ್ಯ ಅಧಿಕಾರಿ ಸಂದೀಪ್ ಕುಡ್ವ ಮಾತನಾಡುತ್ತಾ, ಈಗಿನ ಜೀವನ ಶೈಲಿ, ಕೆಲಸದ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇಂಥ ಕಾರ್ಯಕ್ರಮಗಳಿಗೆ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಅತಿ ಅಗತ್ಯ ಎಂದರು. ಗ್ರಾಮ ಪಂಚಾಯತ್…

Read More

ಗುರುಪುರ ದೋಣಿಂಜೆ ಗುತ್ತು ಗಡಿ ಪ್ರಧಾನರಾದ ಪ್ರಮೋದ್ ಕುಮಾರ್ ರೈಯವರ ಅಧ್ಯಕ್ಷತೆಯಲ್ಲಿ, ಯತಿವರ್ಯ ಹಾಗೂ ತಂತ್ರಿವರ್ಯರ ಅನುಗ್ರಹ ಮಾರ್ಗದರ್ಶನ ಮತ್ತು ಪವಿತ್ರ ಸಾನ್ನಿಧ್ಯದಲ್ಲಿ ಡಿಸೆಂಬರ್ 21ರಂದು ನಗರದ ಉರ್ವಾ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನಡೆಯಲಿರುವ ‘ಧರ್ಮಾವಲೋಕನ ಸಭೆ’ಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶುಕ್ರವಾರ ಜರಗಿತು. ಈ ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್‌, ಹಿಂದೂ ಯುವಸೇನೆ ಮತ್ತು ತುಳುನಾಡ ರಕ್ಷಣಾ ವೇದಿಕೆಯ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಆಮಂತ್ರಣ ಪತ್ರಿಕೆ ಬಿಡುಗಡೆ ನಂತರ ಮಾತನಾಡಿದ ಗಡಿ ಪ್ರಧಾನ ಪ್ರಮೋದ್ ಕುಮಾರ್ ರೈ ಅವರು, ‘ಹಿಂದೂ ಧರ್ಮದ ಸಂರಕ್ಷಣೆ, ಧರ್ಮದ ಮೂಲ ಸಿದ್ಧಾಂತಗಳ ಅರಿವು ಮತ್ತು ಯುವ ಪೀಳಿಗೆಯಲ್ಲಿ ಧಾರ್ಮಿಕ ಜಾಗೃತಿ ಮೂಡಿಸಲು ಸಮಾಜದ ಎಲ್ಲ ವರ್ಗದ ಜನರನ್ನು ಒಂದೇ ವೇದಿಕೆಗೆ ತರಲು ಈ ಧರ್ಮಾವಲೋಕನ ಸಭೆಯನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಧರ್ಮದ ಒಳಿತು ಕೆಡುಕುಗಳ ಅಧ್ಯಯನ ಮತ್ತು ಚಿಂತನೆಗೆ ಇದು ಮಹತ್ತ್ವದ ವೇದಿಕೆ ಆಗಲಿದೆ’ ಎಂದು ಹೇಳಿದರು.…

Read More

ಕಾರ್ಕಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಕಾಂತಾವರ ಗ್ರಾಮದ ಬಾರಾಡಿ ಕ್ರಾಸ್ ಬಳಿ ಪೊಲೀಸ್ ಇಲಾಖೆಯ ಉಪಯೋಗಕ್ಕಾಗಿ ನಿರ್ಮಿಸಲಾದ ತನಿಖಾ ಠಾಣೆ ಚೆಕ್ ಪೋಸ್ಟ್)ಯನ್ನು ಕಾರ್ಕಳ ಉಪ ವಿಭಾಗದ ಸಹಾಯಕ ಪೋಲೀಸ್ ಅಧೀಕ್ಷಕರಾದ ಡಾ| ಹರ್ಷ ಪ್ರಿಯಂವದಾ ಉದ್ಘಾಟಿಸಿದರು. ದಾನಿಗಳು, ರೋಟರಿ ಕ್ಲಬ್, ಗ್ರಾಮ ಪಂಚಾಯತ್ ಹಾಗೂ ಊರವರ ಸಹಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು. ಸಂಪೂರ್ಣ ಮೂಲ ಸೌಲಭ್ಯದೊಂದಿಗೆ ಸುಸಜ್ಜಿತ ತನಿಖಾ ಠಾಣೆಯನ್ನು ನಿರ್ಮಿಸಿಕೊಟ್ಟ ರಶ್ಮಿ ಕನ್ಸ್ಟ್ರಕ್ಷನ್ ಮಾಲಕ ವಿನೀಶ್, ನೆಲಹಾಸಿಗೆ ಟೈಲ್ಸ್ ಅಳವಡಿಸಿದ ರೋಟರಿ ಕ್ಲಬ್ಬಿನ ಪರವಾಗಿ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಹಾಗೂ ಕಾಂತಾವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಕೋಟ್ಯಾನ್ ರವರನ್ನು ಇಲಾಖಾ ವತಿಯಿಂದ ಸಹಾಯಕ ಪೊಲೀಸ್ ಅಧೀಕ್ಷಕರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಾರ್ಕಳ ವ್ರತ್ತ ನಿರೀಕ್ಷಕ ಮಂಜಪ್ಪ ಡಿ.ಆರ್ ಗ್ರಾಮಾಂತರ ಠಾಣೆಯ ಉಪ ನಿರೀಕ್ಷಕರಾದ ಪ್ರಸನ್ನ ಎಸ್.ಎನ್, ನಗರ ಠಾಣೆಯ ಮುರಳೀಧರ್ ನಾಯಕ್, ರೋಟರಿ ಕ್ಲಬ್ಬಿನ ಕಾರ್ಯದರ್ಶಿ ಚೇತನ್ ನಾಯಕ್, ಸಮದ್ ಖಾನ್, ವಸಂತ್ ಎಂ, ಬಾಲಕೃಷ್ಣ…

Read More

ಮೊಗ್ಗುಂದು ಚಿಗುರಿತ್ತು ಕಾನನದೊಳು ಅರಳುತ್ತಾ ಅರಳುತ್ತಾ ತನ್ನೊಳಗೆ ಖುಷಿಪಟ್ಟಿತ್ತು || ತನ್ನ ಅಂದ ಚಂದಕ್ಕೆ ತನ್ನ ಮಾಧುರ್ಯಕ್ಕೆ ತಾನೊಂದು ದಿನ ದೇವರಮುಡಿ ಸೇರುವೆಂಬ ನಂಬಿಕೆ ಅದಕ್ಕಿತ್ತು || ಎಲ್ಲರಂತೆ ಅರಳುತ್ತಾ ಖುಷಿಪಟ್ಟಿತ್ತು ನಾನು ಕೂಡ ಅರಳಿದೆ ಇನ್ನೀಗ ದೇವರ ಮುಡಿ ಸೇರಲಿರುವೆನೆಂದು ನಲಿದಾಡಿತ್ತು ಸಂಭ್ರಮಿಸಿತ್ತು || ಮಾಲಿಯಿಂದು ಬಂದ ಹೂವ ಕೊಯ್ದ ಎಲ್ಲಾ ಹೂಗಳೊಡನೆ ಅದನ್ನು ಒಯ್ದ ಪೇಟೆಯೊಳಗಣ ಮಾರಾಟಕ್ಕಿಟ್ಟ || ಯಾರೋ ಬಂದರೂ ಬಿಡಿ ಹೂಗಳಲ್ಲಿ ಅದನ್ನೋಯಿದರು || ದೇವರ ಮುಡಿ ಸೇರುವೆನೆಂದು ನಂಬಿದ್ದ ಆ ಪುಟ್ಟ ಹೂವು ಮರಣದ ಮನೆ ಸೇರಿತು ಹೆಣದ ಕೊರಳೇರಿತು ಮಸಣದ ಕಡೆ ಹೊರಟಿತು ಬೆಂಕಿಯ ಅಟ್ಟಕೇರಿತು || ತಾನೂ ಹೆಣವಾಯಿತು ತನ್ನ ಕನಸಿನೊಂದಿಗೆ ಸುಟ್ಟು ಕರಕಲಾಯಿತು || ತಾನೊಂದು ನೆನೆದರೆ ದೈವ ಇನ್ನೇನೋ ಬರೆದಿತ್ತು ಕನಸು ಕನಸಾಗಿಯೇ ಉಳಿಯಿತು. ಲೇಖಕಿ : ಸಮೀಪ ಶೆಟ್ಟಿ

Read More

ಕ್ಯಾಂಪ್ಕೊ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ಎಸ್.ಆರ್ ಸತೀಶ್ಚಂದ್ರರವರಿಗೆ ಪುತ್ತೂರು ಕೋ ಆಪರೇಟಿವ್ ಟೌನ್ ಬ್ಯಾಂಕ್ ವತಿಯಿಂದ ಅಭಿನಂದನಾ ಸಮಾರಂಭವನ್ನು ಬ್ಯಾಂಕಿನ ಸಭಾಂಗಣದಲ್ಲಿ ಗೌರವಪೂರ್ವಕವಾಗಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಎನ್. ಕಿಶೋರ್ ಕೊಳತ್ತಾಯ ಅವರು ಅಧ್ಯಕ್ಷತೆ ವಹಿಸಿ, ವಿಶೇಷ ಅಭಿನಂದನಾ ಭಾಷಣದ ಮೂಲಕ ಪುತ್ತೂರು ಟೌನ್ ಬ್ಯಾಂಕ್ ಮತ್ತು ಸತೀಶ್ಚಂದ್ರರವರ ನಡುವಿನ ಅವಿನಾಭಾವ ಬಾಂಧವ್ಯವನ್ನು ಸ್ಮರಿಸಿದರು. ಬ್ಯಾಂಕಿನ ಅಭಿವೃದ್ಧಿ ಹಾಗೂ ಪ್ರಗತಿಪರ ಚಟುವಟಿಕೆಗಳಲ್ಲಿ ಅವರು ನೀಡಿರುವ ಮಾರ್ಗದರ್ಶನವನ್ನು ವಿಶೇಷವಾಗಿ ಉಲ್ಲೇಖಿಸಿ, ಬ್ಯಾಂಕಿನ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಅರ್ಪಿಸಿದರು. ಮುಂದುವರೆದು ಮಾತನಾಡಿದ ಅವರು, ನೂತನ ಕ್ಯಾಲೆಂಡರ್ ವರ್ಷದಲ್ಲಿ ಬ್ಯಾಂಕ್ ಹಲವು ವಿನೂತನ ಕಾರ್ಯಕ್ರಮಗಳನ್ನು ಜಾರಿಗೆ ತರುವ ಉದ್ದೇಶವಿದ್ದು, ಬ್ಯಾಂಕಿನ ಡಿಜಿಟಲೀಕರಣಕ್ಕೆ ವಿಶೇಷ ಪ್ರಾಧಾನ್ಯತೆ ನೀಡಲಾಗುತ್ತಿದೆ ಎಂದರು. ಈ ವರ್ಷಾಂತ್ಯದೊಳಗೆ ಬ್ಯಾಂಕಿನ ಸಂಪೂರ್ಣ ಡಿಜಿಟಲೀಕರಣ ಕಾರ್ಯ ಪೂರ್ಣಗೊಳ್ಳುವ ವಿಶ್ವಾಸವನ್ನೂ ವ್ಯಕ್ತಪಡಿಸಿದರು. ಅಭಿನಂದನೆ ಸ್ವೀಕರಿಸಿದ ಎಸ್.ಆರ್. ಸತೀಶ್ಚಂದ್ರರು, ತಮ್ಮ ಬಾಲ್ಯದಿಂದಲೂ ಪುತ್ತೂರು ಟೌನ್ ಬ್ಯಾಂಕಿನೊಂದಿಗೆ ಹೊಂದಿರುವ ಭಾವನಾತ್ಮಕ ಹಾಗೂ ನಿಕಟವಾದ ಸಂಬಂಧವನ್ನು ನೆನೆದು ಸಂತಸ ವ್ಯಕ್ತಪಡಿಸಿದರು.…

Read More

ಆಳ್ವಾಸ್ ಸ್ವಾಯತ್ತ ಕಾಲೇಜಿನ ಮಾನವ ಹಕ್ಕುಗಳ ಕೋಶ ಹಾಗೂ ಸಮಾಜ ಕಾರ್ಯ ವಿಭಾಗ, ಮಾನವಿಕ ವಿಭಾಗ, ಮಾನವ ಸಂಪನ್ಮೂಲ ಅಭಿವೃದ್ಧಿ ವಿಭಾಗ, ಎನ್‌ಸಿಸಿ ಹಾಗೂ ಎನ್‌ಎಸ್‌ಎಸ್ ಘಟಕಗಳ ಜಂಟಿ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಾನವ ಹಕ್ಕುಗಳ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಖ್ಯಾತ ಚಿಂತಕ ಹಾಗೂ ಬರಹಗಾರ ಅರವಿಂದ ಚೊಕ್ಕಾಡಿ ಮಾತನಾಡಿ, ಮಾನವ ಹಕ್ಕುಗಳ ದಿನಾಚರಣೆ ಎಲ್ಲೆಡೆ ನಡೆಯುತ್ತಿದ್ದರೂ ಅದರ ಗಂಭೀರತೆಯನ್ನು ಮನಸ್ಸಿನಲ್ಲಿ ಇಟ್ಟು ಕಾರ್ಯಕ್ರಮ ಕೈಗೊಳ್ಳುವುದು ಕಡಿಮೆ. ಜಾತಿ, ಧರ್ಮ, ವರ್ಣ, ವರ್ಗ, ಲಿಂಗ ಭೇದಗಳು ಸಮಾಜದಲ್ಲಿ ಇನ್ನೂ ಮುಂದುವರಿದಿವೆ ಎಂದು ಸೂಚಿಸಿದ ಅವರು, ತಾರತಮ್ಯ ಇದೆ ಎಂದು ಹೇಳುವುದಕ್ಕಿಂತಲೂ ಅದು ಎಲ್ಲಿ, ಹೇಗೆ ಇದೆ ಎನ್ನುವುದನ್ನು ಪತ್ತೆ ಹಚ್ಚಿದಾಗ ಮಾತ್ರ ಮಾನವ ಹಕ್ಕುಗಳ ಚರ್ಚೆ ಫಲಪ್ರದವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸುನ್ನತ್, ಹೆಣ್ಣು ಶಿಶು ಹತ್ಯೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಗಳಂತಹ ಗಂಭೀರ ಸಾಮಾಜಿಕ ಸಮಸ್ಯೆಗಳನ್ನು ಉದಾಹರಿಸಿ ಮಾನವ ಹಕ್ಕುಗಳು ಜಾರಿಗೊಂಡ ಸನ್ನಿವೇಶವನ್ನು ತಿಳಿಸಿದರು. ಕಾನೂನಿನ ಮುಂದೆ ಸಮಾನತೆ ಎನ್ನುವುದೇ ಮಾನವ…

Read More

ಚಾರ್ಕೋಪ್ ಕನ್ನಡ ಬಳಗದ ಮಹಿಳಾ ವಿಭಾಗದ ವತಿಯಿಂದ ಮಹಾರಾಷ್ಟ್ರದಲ್ಲಿರುವ “ಅಷ್ಟವಿನಾಯಕ” ದೇಗುಲಗಳ ಯಾತ್ರೆಯನ್ನು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪದ್ಮಾವತಿ ಶೆಟ್ಟಿಯವರ ನೇತೃತ್ವದಲ್ಲಿ ಯಶಸ್ವಿಯಾಗಿ ಹಮ್ಮಿಕೊಳ್ಳಲಾಯಿತು. ​ಸುಮಾರು ಮೂವತ್ತಾರು ಮಂದಿ ಮಹಿಳೆಯರನ್ನು ಒಳಗೊಂಡ ಈ ಧಾರ್ಮಿಕ ಪಯಣವು ಬೆಳಗಿನ ಶುಭ ಮುಹೂರ್ತದಲ್ಲಿ ಪ್ರಾರಂಭವಾಯಿತು. ಅಷ್ಟವಿನಾಯಕ ದೇಗುಲಗಳಲ್ಲಿ ಮೊದಲನೆಯದಾದ, ಖಾಪೋಲಿಯ ಮಹಾಡ್‌ನಲ್ಲಿರುವ “ವರದವಿನಾಯಕ” ದೇವರ ಸನ್ನಿಧಿಯಲ್ಲಿ ತೆಂಗಿನಕಾಯಿ ಒಡೆದು, ಆರತಿ ಬೆಳಗಿಸುವ ಮೂಲಕ ಯಾತ್ರೆಗೆ ಶುಭಾರಂಭ ಮಾಡಲಾಯಿತು. ಅಲ್ಲಿಂದ, ಪಾಲಿಯಲ್ಲಿರುವ ನಂದಿ ಆಕಾರದ ಬೆಟ್ಟದ ಅಡಿಯಲ್ಲಿನ “ಬಲ್ಲಾಳೇಶ್ವರ” ದೇವಾಲಯ ಮತ್ತು ಥೇವೂರಿನ “ಚಿಂತಾಮಣಿ” ಗಣಪತಿಯ ದರ್ಶನ ಪಡೆದು, ಆ ರಾತ್ರಿ ಅಲ್ಲೇ ತಂಗಲಾಯಿತು. ​ಮರುದಿನ ಬ್ರಾಹ್ಮೀ ಮುಹೂರ್ತದಲ್ಲಿ “ಪ್ರತಿ ಬಾಲಾಜಿ” ಎಂದೇ ಪ್ರಸಿದ್ಧವಾಗಿರುವ ಪುಣೆಯ ಸಮೀಪದ ಬಾಲಾಜಿ ಮಂದಿರದ ದರ್ಶನ ಮತ್ತು ಬೆಳಗಿನ ಆರತಿಯು ಎಲ್ಲರ ಮನಸ್ಸನ್ನು ಪ್ರಸನ್ನಗೊಳಿಸಿತು. ಬಳಿಕ, ಜೇಜೂರಿನಲ್ಲಿರುವ “ಖಂಡೋಬಾ” ದೇವಾಲಯಕ್ಕೆ ಸುಮಾರು 250ಕ್ಕೂ ಅಧಿಕ ಮೆಟ್ಟಿಲುಗಳನ್ನು ಏರಿ ಖಂಡೋಬಾ (ಮಲ್ಹಾರಿ ಮಾರ್ತಾಂಡ) ದೇವರ ದರ್ಶನ ಪಡೆಯಲಾಯಿತು. ಹಳದಿ ಹುಡಿಯಿಂದ ದೇವರಿಗೆ…

Read More

ವಸತಿ ಹಾಗೂ ವಸತಿಯೇತರ ಉದ್ದೇಶಗಳಿಗೆ ಜಮೀನಿನ ಭೂಪರಿವರ್ತನೆಗಾಗಿ ಭೂ ಮಾಲೀಕರು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ ನಂತರ, ಅದು ತಾಂತ್ರಿಕ ಅನುಮೋದನೆಗಾಗಿ ನಗರ ಮತ್ತು ಗ್ರಾಮಾಂತರ ಯೋಜನಾ ಕಚೇರಿಗೆ ಕಳುಹಿಸಲಾಗುತ್ತಿತ್ತು. ಆ ಹಂತಕ್ಕೆ ಮುನ್ನ ಲೋಕೋಪಯೋಗಿ, ಕರಾವಳಿ ನಿಯಂತ್ರಣ, ಅರಣ್ಯ ಸೇರಿದಂತೆ ವಿವಿಧ ಇಲಾಖೆಗಳ ನಿರಾಪೇಕ್ಷಣ ಪತ್ರಗಳನ್ನು ಪಡೆಯಬೇಕಾಗಿ ಬರುವುದು ವಿಳಂಬಕ್ಕೆ ಕಾರಣವಾಗುತ್ತಿತ್ತು. ವಿಶೇಷವಾಗಿ, ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿರುವ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳು ಸಿಟಿ ಮುನ್ಸಿಪಲ್ ಕೌನ್ಸಿಲ್, ಟೌನ್ ಮುನ್ಸಿಪಲ್ ಕೌನ್ಸಿಲ್, ಟೌನ್ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ಹಾದು ಹೋಗುವುದರಿಂದ ‘ರಸ್ತೆ ಭೂ ಗಡಿ’ ಮತ್ತು ‘ಕಟ್ಟಡ ರೇಖೆ’ಗಳ ಮಧ್ಯೆಯ ಅಂತರವನ್ನು ನಿಖರವಾಗಿ ನಿಗದಿಪಡಿಸುವಲ್ಲಿ ಗೊಂದಲಗಳು ಉಂಟಾಗುತ್ತಿದ್ದು, ಅರ್ಜಿಗಳ ಅನುಮೋದನೆ ವಿಳಂಬವಾಗುತ್ತಿತ್ತು. ಈ ಸಮಸ್ಯೆಯನ್ನು ಮನಗಂಡ ಕುಂದಾಪುರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವಿನೋದ್ ಕ್ರಾಸ್ಟೋ ಹಾಗೂ ಆನಗಳ್ಳಿ ಗ್ರಾಮದ ಮಾಜಿ ಪಂಚಾಯತ್ ಅಧ್ಯಕ್ಷ ಸುರೇಶ್ ನಾಯ್ಕ್‌ ಅವರು ಮಾಜಿ ಸಂಸದ ಜೆ.ಪಿ ಹೆಗ್ಡೆಯವರ ಗಮನಕ್ಕೆ…

Read More