Author: admin

ಬಂಟ ಸಮುದಾಯದ ಸಹೋದರರು ಎಲ್ಲಾ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ ಎನ್ನುವ ಮಾತಿಗೆ ಸಾಕ್ಷಿ ಆಗಬಲ್ಲ ಸಮರ್ಥ ಸಾಧಕ ಶ್ರೀ ಹರೀಶ್ಚಂದ್ರ ಶೆಟ್ಟಿ ಅವರ ಜೀವನ ಪಯಣ ಇಂದಿನ ನವ ಯುವ ಜನಾಂಗಕ್ಕೆ ಮಾದರಿ ಆಗಬಲ್ಲುದು. ಅಗ್ನಿ ಶಾಮಕ ದಳದಲ್ಲಿ ಸಾಮಾನ್ಯ ಉದ್ಯೋಗಿಯಾಗಿ ಸೇರಿಕೊಂಡ ಹರೀಶ್ಚಂದ್ರ ಶೆಟ್ಟಿ ಅವರು ಇತರರಿಗಿಂತ ಭಿನ್ನ ರೀತಿಯಲ್ಲಿ ಗುರುತಿಸಿಕೊಂಡು ಅಗ್ನಿ ಶಾಮಕ ದಳದಂತಹ ತುರ್ತು ಸೇವಾ ವಿಭಾಗದ ಘನತೆಯನ್ನು ಹೆಚ್ಚಿಸಿದ್ದಾರೆ ಎಂದರೆ ಅತಿಶಯದ ಮಾತಲ್ಲ. ಈ ವಿಭಾಗದಲ್ಲಿ ತನ್ನ ಸೇವಾ ತತ್ಪರತೆಯಿಂದ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿ ಹಂತ ಹಂತವಾಗಿ ಪದೋನ್ನತಿ ಹೊಂದುತ್ತಾ, ಗೌರವದ ಹುದ್ದೆಯನ್ನು ಹೊಂದಿದ ಸಾಧಕ ಹರಿಶ್ಚಂದ್ರ ಶೆಟ್ಟಿಯವರು ಬಂಟ ಸಮಾಜಕ್ಕೆ ನಿಜಾರ್ಥದ ಘನತೆ ತಂದ ಸಮಾಜ ಬಾಂಧವ. 1993 ರಿಂದ ಇವರ ಸೇವಾ ಅವಧಿಯಲ್ಲಿ ಅನೇಕ ಜವಾಬ್ದಾರಿ ಸ್ಥಾನವನ್ನು ನಿರ್ವಹಿಸುತ್ತಲೇ ಉನ್ನತ ಹಾಗೂ ಉಚ್ಛ ಸ್ಥಾನವನ್ನು ಅಲಂಕರಿಸಿದ ಕೀರ್ತಿ ಶೆಟ್ಟರದ್ದು. ಡೆಪ್ಯೂಟಿ ಚೀಫ್ ಆಫೀಸರ್ ಸ್ಥಾನವನ್ನು ಅಲಂಕರಿಸಿದ ಅಪರೂಪದ ಏಕಮೇವ ಬಂಟ ಬಾಂಧವ. ಅಗ್ನಿ ಶಾಮಕ…

Read More

ಒಳನಾಡು ಹಾಗು ಹೊರನಾಡಿನಲ್ಲಿ ತಮ್ಮ ಬರವಣಿಗೆಯ ಮೂಲಕ ಛಾಪು ಮೂಡಿಸಿದ ಖ್ಯಾತ ಅಂಕಣಕಾರರು, ಕಾದಂಬರಿಗಾರ್ತಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಅವರ ಯಶಸ್ವಿ ಪಯಣ ಪ್ರವಾಸ ಕಥನ (284 ಪುಟಗಳ) ಮಾಮರ ಪ್ರಕಾಶನದಿಂದ ಪ್ರಕಾಶಿತ ಕೃತಿಯನ್ನು ನವೆಂಬರ್ 29 ರಂದು ಮುಂಬಯಿಯ ಮೈಸೂರು ಅಸೋಸಿಯೇಷನ್ ನ ಸಭಾಗೃಹದಲ್ಲಿ ಸಂಜೆ 5.30ಕ್ಕೆ ಜರುಗಿದ ಕೃತಿಗಳ ಸಮೀಕ್ಷೆಯ ಸಭಾ ಕಾರ್ಯಕ್ರಮದಲ್ಲಿ ‘ಯಶಸ್ವಿ ಪಯಣ’ ಪ್ರವಾಸ ಕಥನವನ್ನು ಹಿರಿಯ ಸಾಹಿತಿ ಶ್ಯಾಮಲ ಮಾಧವ ಮತ್ತು ಸೃಜನಾ ಬಳಗದ ಸಂಚಾಲಕಿ ಪದ್ಮಜಾ ಮಣ್ಣೂರ ಹಾಗೂ ಬಳಗದ ಪದಾಧಿಕಾರಿಗಳಿಗೆ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಅವರು ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗಕ್ಕೆ ಹಸ್ತಾಂತರಿಸಿದರು. ಬೇರೆ ಬೇರೆ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟು ಸಂತೋಷಗೊಂಡ ದೃಶ್ಯ ವಿಶೇಷತೆಗಳನ್ನು, ಸ್ಥಳ ಪರಿಚಯವನ್ನು, ಅಲ್ಲಿ ಆಗಬೇಕಾದ ಬದಲಾವಣೆ, ಕಂಡು ಬಂದ ಲೋಪದೋಷಗಳನ್ನು ಬರೆದಿದ್ದು, ಈ ಹೊತ್ತಿಗೆಯ ಶೀರ್ಷಿಕೆಯೇ ಹೇಳುವಂತೆ ಯಶಸ್ವಿ ಪಯಣದ ವಿವಿಧ ಮಗ್ಗುಲುಗಳನ್ನು ಈ ಕೃತಿಯೊಳಗೆ ‌ಮೂಡಿಸಿ ಸಾಹಿತ್ಯ ಕ್ಷೇತ್ರದ…

Read More

ಕರ್ನಾಟಕ ಸರಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಂಗವಾಗಿ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಕೇಂದ್ರ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ವಿಭಾಗ, ಉಡುಪಿ. ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ, ಸರಕಾರಿ ಸಾರ್ವಜನಿಕ ಆಸ್ಪತ್ರೆ, ರೋಟರಿ ಕ್ಲಬ್, ಇಂಡಿಯನ್ ರೆಡ್ ಕ್ರಾಸ್ ಸೊಸೖಟಿ ಕಾರ್ಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳದ ಐಕ್ಯೂಎಸಿ ಹಾಗೂ ಕಾಲೇಜಿನ ಎನ್.ಸಿ.ಸಿ, ಎನ್.ಎಸ್.ಎಸ್ ರೆಡ್ ಕ್ರಾಸ್, ರೋವರ್ಸ್ ರೇಂಜರ್ಸ್ ನ ಸಹಯೋಗದೊಂದಿಗೆ ವಿಶ್ವ ಏಡ್ಸ್ ದಿನಾಚರಣೆ -2025 ಇದರ ಮಾಹಿತಿ ಕಾರ್ಯಕ್ರಮವು ನೆರವೇರಿತು. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕಾರ್ಕಳ ಶಾಖೆ ಇದರ ಅಧ್ಯಕ್ಷರಾದ ಕೆ.ಆರ್ ಜೋಶಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಏಡ್ಸ್ ಹರಡುವಿಕೆಯ ಕುರಿತಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಕಳ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಸಂದೀಪ್ ಕುಡ್ವ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಏಡ್ಸ್ ಕಾಯಿಲೆಯು ಆರಂಭದಲ್ಲಿ ಮಂಗನ ಹಿನ್ನೆಲೆಯಲ್ಲಿ ಮನುಷ್ಯನಿಗೆ ಈ ವೖರಸ್ ಬಂದಿರುವಂಥದ್ದು. ತಂತ್ರಜ್ಞಾನ ಎಷ್ಟೇ ಮುಂದುವರಿದರೂ…

Read More

ರಾಜಸ್ಥಾನದಲ್ಲಿ ನವೆಂಬರ್ 24 ರಿಂದ ಡಿಸೆಂಬರ್ 05 ರವರೆಗೆ ನಡೆದ ಖೇಲೋ ಇಂಡಿಯಾ ಅಂತರ್ ವಿಶ್ವ ವಿದ್ಯಾಲಯ ಗೇಮ್ಸ್ ನಲ್ಲಿ ಮಂಗಳೂರು ವಿವಿಯನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ಪುರುಷರ ತಂಡ ಮೂರನೇ ಬಾರಿಗೆ ಸಮಗ್ರ ಚಾಂಪಿಯನ್ಸ್ ಪಟ್ಟ ಅಲಂಕರಿಸಿತು. ಈ ರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟದ ಪುರುಷರ ವಿಭಾಗದಲ್ಲಿ ಆಳ್ವಾಸ್ ವಿದ್ಯಾರ್ಥಿಗಳು ಮೂರು ಚಿನ್ನ, ಒಂದು ಕಂಚಿನ ಪದಕ ಪಡೆದು ಈ ಸಾಧನೆ ಮೆರೆದರು. ಆಳ್ವಾಸ್‌ನ ನಾಗೇಂದ್ರ ಡಿಸ್ಕಸ್ ಥ್ರೋನಲ್ಲಿ ಚಿನ್ನ, ಅಮನ್ ಪೋಲ್ ವಾಲ್ಟ್ ನಲ್ಲಿ ಚಿನ್ನ, ಚಮನ್ ದೇಕಾಥಲೋನ್‌ನಲ್ಲಿ ಚಿನ್ನ, ಟ್ರಿಪ್ಪ್ಲೆ ಜಂಪ್‌ನಲ್ಲಿ ಪ್ರದೀಪ್ ಕುಮಾರ್ ಕಂಚಿನ ಪದಕ ಪಡೆಯುವುದರೊಂದಿಗೆ ಸಮಗ್ರ ಚಾಂಪಿಯನ್‌ಶಿಪ್ ಪಟ್ಟ ಅಲಂಕರಿಸಿತು. ಇದೇ ಪಂದ್ಯಾಟದ ಮಹಿಳಾ ವಿಭಾಗದಲ್ಲಿ ಒಂದು ಚಿನ್ನ, ಎರಡು ಬೆಳ್ಳಿಯ ಪದಕದೊಂದಿಗೆ ಆಳ್ವಾಸ್ ನಾಲ್ಕನೇ ಸ್ಥಾನ ಪಡೆಯಿತು. ಪುರುಷರ ಹಾಗೂ ಮಹಿಳೆಯರ ಎರಡು ವಿಭಾಗದಲ್ಲಿ ಒಟ್ಟು 4 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕದೊಂದಿಗೆ ಮಂಗಳೂರು ವಿವಿ 7…

Read More

ರೋಟರಿ ಹಾಗೂ ರೋಟರಿ ಆನ್ಸ್ ಕ್ಲಬ್ ಕಾರ್ಕಳವು ಅರುಣೋದಯ ಸ್ಪೆಷಲ್ ಸ್ಕೂಲ್ ಕಾರ್ಕಳದಲ್ಲಿ “ದೇವರ ಮಕ್ಕಳೊಂದಿಗೆ ನಮ್ಮ ಸಮಯ” ಎಂಬ ವಿಶೇಷ ಸೇವಾ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಂಡಿತ್ತು. ಪ್ರಿಸಿಲ್ಲಾ ಪೆರೇರಾ ಅವರು ಸ್ನೇಹಭಾವದ ಸ್ವಾಗತ ಭಾಷಣದೊಂದಿಗೆ ಆರಂಭಿಸಿದರು. ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕಿ ಶ್ರೀಮತಿ ಕಾಂತಮ್ಮ ಅವರು ಮನೋಹರವಾಗಿ ನಿರೂಪಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರೋಟೇರಿಯನ್ ರೇಖಾ ಉಪಾಧ್ಯಾಯ ಅವರು ಆಗಮಿಸಿ ಮಕ್ಕಳಿಗೆ ಪ್ರೋತ್ಸಾಹದ ಸಂದೇಶ ನೀಡಿ, ಸಮಾಜದಲ್ಲಿ ವಿಶೇಷ ಮಕ್ಕಳ ಅಭಿವೃದ್ದಿಗೆ ಅಗತ್ಯವಿರುವ ಸಂವೇದನೆ ಮತ್ತು ಸಹಕಾರದ ಮಹತ್ವವನ್ನು ವಿವರಿಸಿದರು. ಮುಖ್ಯ ಅತಿಥಿಗಳ ಪರಿಚಯವನ್ನು ಆನ್. ಜ್ಯೋತಿ ಚೇತನ್ ಅವರು ಮನೋಜ್ಞವಾಗಿ ಮಂಡಿಸಿದರು. ಆನ್ಸ್ ಅಧ್ಯಕ್ಷೆ ಜಯಂತಿ ಆನಂದ್ ನಾಯಕ್ ರವರು ಮಕ್ಕಳ ಬಗ್ಗೆ ಪ್ರೋತ್ಸಾಹದ ಮಾತುಗಳನ್ನಾಡಿ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷರಾದ ಕೆ. ನವೀನ್ ಚಂದ್ರ ಶೆಟ್ಟಿ ಅವರು ಮಕ್ಕಳೊಂದಿಗೆ ಸಂವಾದಿಸಿ, ಅವರ ಪ್ರತಿಭೆಯನ್ನು ಶ್ಲಾಘಿಸಿ, ಪ್ರೋತ್ಸಾಹದ ಮಾತು ಹೇಳಿದರು. ಸಮಾರಂಭದಲ್ಲಿ ಅಗತ್ಯ ವಸ್ತುಗಳನ್ನು ಮಕ್ಕಳಿಗೆ…

Read More

ಮುಂಬೈ: ಮುಂಬೈ ಒಂದು ಬಹುಭಾಷಿಕ ನಗರ. ಇದು ಸ್ವಾತಂತ್ರ್ಯದ ಅನುಭವ ನೀಡುವ ನಗರವೂ ಹೌದು. ಬಲ್ಲಾಳರ ಕತೆ, ಕಾದಂಬರಿಗಳ ಮೂಲಕ ಮುಂಬೈಗೆ ಕಾಲಿಡುವ ಮುನ್ನವೇ ಪ್ರವೇಶಿಸಿದ್ದೇನೆ. ಎಪ್ಪತ್ತರ ದಶಕದಲ್ಲಿ ಹದಿನೆಂಟು ಕನ್ನಡ ಮಾಧ್ಯಮ ರಾತ್ರಿಶಾಲೆಗಳಿದ್ದವು. ಇಲ್ಲಿ ಕಲೆಕ್ಟಿವ್ ಪೇರೆಂಟಿಂಗಿನ ( ಸಾಮೂಹಿಕ ಪಾಲನೆಯ) ಅನುಭವವಾಗುತ್ತದೆ. ಇಲ್ಲಿ ಹುಟ್ಟಿದವರಿಗೆ ಗೊತ್ತಿರದ ಅನುಭವ ಹೊರಗಿನಿಂದ ವಲಸೆ ಬಂದವರಿಗೆ ಗೊತ್ತಿರುತ್ತದೆ. ಮುಂಬೈ ಕನ್ನಡ ಕುಟುಂಬ ಸಾಮಾಜಿಕ ಋಣದ ಕುಟುಂಬ. ಹಿರಿಯರ ಋಣದಲ್ಲಿ ನಾವು ಬೆಳೆದಿದ್ದೇವೆ.‌ ಇಂದು ನಾವು ಅನೇಕ ಬರಹಗಾರರ ಶತಮಾನೋತ್ಸವವನ್ನು ಆಚರಿಸುತ್ತಿದ್ದೇವೆ.  ದಿನಕರ ದೇಸಾಯಿ, ವಿ.ಜಿ. ಭಟ್ಟ ಅವರು ಮೊದಲ ಬಂಡಾಯ ಕವಿಗಳು. ಬಲ್ಲಾಳ, ಚಿತ್ತಾಲ, ಕಟ್ಟೀಮನಿ, ನಿರಂಜನ ಮೊದಲಾದವರದು ಸಮಾಜಶೀಲ ಬರೆವಣಿಗೆ. ಮಿತ್ರಾ ವೆಂಕಟ್ರಾಜ್ ಅವರಿಗೆ ಬಲ್ಲಾಳ ಪ್ರಶಸ್ತಿ ಸಂದಿರುವುದು ಮತ್ತು ಅವರ ಉಪಸ್ಥಿತಿ ಇರುವುದು ಸಂತಸದ ಸಂಗತಿ ಎಂದು ಹಿರಿಯ ಕವಿ, ಲೇಖಕ ಜಯಂತ ಕಾಯ್ಕಿಣಿ ನುಡಿದರು. ಅವರು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮತ್ತು ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ ಮುಂಬೈ…

Read More

ಬಂಟ್ಸ್ ಅಸೋಸಿಯೇಷನ್ ಪುಣೆಯ 13ನೇ ವಾರ್ಷಿಕ ಕ್ರೀಡೋತ್ಸವವು ಡಿಸೆಂಬರ್ 7ರಂದು ಪುಣೆಯ ಸಾಳುಂಕೆ ವಿಹಾರ್ ರೋಡ್‍ನ ಬ್ಯಾಂಕ್ ಆಫ್ ಮಹಾರಾಷ್ಟ್ರಲೇನ್, ವಾನ್ವೋರಿಯರೇಸ್ ಸ್ಪೋಟ್ಸ್ ಕ್ರೀಡಾ ಸಂಕುಲದಲ್ಲಿ ವೈವಿಧ್ಯಮಯ ಕ್ರೀಡಾ ಸ್ಪರ್ಧೆಗಳೊಂದಿಗೆ ಜರಗಲಿದೆ. ಪುಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಹಡಪ್ಸರ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಹಾದೇವ ಅಣ್ಣಾ ಬಾಬರ್, ಗೌರವ ಅತಿಥಿಯಾಗಿ ಪುಣೆ ಬಂಟರ ಸಂಘದ ಮ್ಯಾರೇಜ್ ಬ್ಯುರೋ ಸಮಿತಿಯ ಕಾರ್ಯಾಧ್ಯಕ್ಷ, ಪುಣೆ ತುಳುಕೂಟದ ಉಪಾಧ್ಯಕ್ಷ, ಸಮಾಜಸೇವಕ ಮಾಧವ ಆರ್. ಶೆಟ್ಟಿ ಭಾಗವಹಿಸಲಿದ್ದಾರೆ. ಅಸೋಸಿಯೇಷನ್ ನ ಕ್ರೀಡಾ ಕಾರ್ಯಾಧ್ಯಕ್ಷ ರಕ್ಷಿತ್ ಶೆಟ್ಟಿಯವರ ನೇತೃತ್ವದಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಅಸೋಸಿಯೇಷನ್ ನ ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಸರ್ವ ಸಮಿತಿ ಪದಾಧಿಕಾರಿಗಳ ಸಹಕಾರದೊಂದಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಸಂದರ್ಭ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್‍ನಲ್ಲಿ ಚಿನ್ನದ ಪದಕ…

Read More

ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ಡಿಸೆಂಬರ್ 19, 20 ಮತ್ತು 21 ರಂದು ಸುರತ್ಕಲ್ ಬಂಟರ ಭವನದ ಆವರಣದಲ್ಲಿ “ಪರ್ವ -2025” ಸೀರೆ ಮೇಳ, ಲೈಫ್ ಸ್ಟೈಲ್ ಮತ್ತು ಫುಢ್ ಫೆಸ್ಟಿವೆಲ್ ನಡೆಯಲಿದೆ. ಡಿಸೆಂಬರ್ 20 ರಂದು ಶನಿವಾರ ಸಂಜೆ 7 ಕ್ಕೆ ಚಂದ್ರಕಲಾ ಸದಾನಂದ ರೈ ಸಾರಥ್ಯದ ಪೆರ್ಮೆದ ಕಲಾವಿದೆರ್ ಚೇಳಾರ್ ತಂಡದಿಂದ ರಾಮಚಂದ್ರ ಶೆಟ್ಟಿ ತಡಂಬೈಲ್ ರವರ ಕಥೆ, ಸುಕೇಶ್ ಶೆಟ್ಟಿ ಖಂಡಿಗೆ ನಿರ್ದೇಶನದ “ಎನ್ನಿಲೆಕ್ಕ ಇಜ್ಜೆರ್” ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಡಿಸೆಂಬರ್ 21 ರಂದು ಸಂಜೆ 6 ಗಂಟೆಗೆ ವಿಶ್ವಾಸ್ ಮ್ಯೂಸಿಕಲ್ ಮಂಗಳೂರು ತಂಡದಿಂದ “ಸಂಗೀತ ರಸ ಮಂಜರಿ”, ಬಳಿಕ 7 ಗಂಟೆಗೆ ಉಮೇಶ್ ಮಿಜಾರ್ ಸಾರಥ್ಯದ ನಮ್ಮ ಕಲಾವಿದೆರ್ ಬೆದ್ರ ತಂಡದಿಂದ ಈ ವರ್ಷದ ಸೂಪರ್ ಹಿಟ್ ಹಾಸ್ಯ ನಾಟಕ “ವೈರಲ್ ವೈಶಾಲಿ” ಪ್ರದರ್ಶನಗೊಳ್ಳಲಿದೆ. ಡಿ. 20 ಮತ್ತು 21 ರಂದು ಸಂಜೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತರ ತನಕ…

Read More

ವಾಮದಪದವು ವಲಯ ಬಂಟರ ಸಂಘದ ಯುವ ಬಂಟರ ಸಂಘದ ವತಿಯಿಂದ ಡಿಸೆಂಬರ್ 20 ರಂದು ನಡೆಯುವ ಯುವ ಬಂಟ ವೈಭವ- 2025 ರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಸಂಘದ ಆಲದ ಪದವಿನ ನಿವೇಶನದಲ್ಲಿ ನಡೆಯಿತು. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಬಂಟ್ವಾಳ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಗೋಕುಲ್ ಭಂಡಾರಿ, ವಾಮದಪದವು ವಲಯದ ಅಧ್ಯಕ್ಷ ವಸಂತ್ ಶೆಟ್ಟಿ ಕೇದಗೆ, ಸಿದ್ದಕಟ್ಟೆ ವಲಯ ಬಂಟರ ಸಂಘದ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ಮತ್ತು ಕಿಶೋರ್ ಕುಮಾರ್ ಭಂಡಾರಿ ಬೆಳ್ಳೂರು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಯಶ್ವಿನ್ ಡಿ ಶೆಟ್ಟಿ ಕಡ್ತಲಬೆಟ್ಟು ಗುತ್ತು, ಭಾಸ್ಕರ್ ಶೆಟ್ಟಿ ಗಂಟಾರಬೆಟ್ಟು,ಕೊಡಂಗೆ ಕಂಬಳ ಸಮಿತಿಯ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಕಲ್ಲಾಪು, ಸಂಪತ್ ಶೆಟ್ಟಿ ಪಣಕಜೆ ಭಾಗವಹಿಸಿದ್ದರು. ವಲಯ ಸಮಿತಿ ಉಪಾಧ್ಯಕ್ಷರಾದ ಯಶೋಧರ ಶೆಟ್ಟಿ ದಂಡೆ, ರಮೇಶ್ ಶೆಟ್ಟಿ ವಾಮದಪದವು ಪ್ರದಾನ ಕಾರ್ಯದರ್ಶಿ ಗಂಗಾಧರ ಶೆಟ್ಟಿ,ಕೋಡ್ಯೇಲು ಬಾಳಿಕೆ, ಕೋಶಾಧಿಕಾರಿ ವಸಂತ್ ಶೆಟ್ಟಿ ಪಿಂಗಾರ ಫಾರ್ಮ್, ವಾಮದಪದವು ವಲಯದ ಮಹಿಳಾ…

Read More

ಮನುಷ್ಯನ ಜೀವನ ಪಯಣವನ್ನು ಸುಲಭ ಸೂಕ್ಷ್ಮವಾಗಿ ತಿಳಿಸುವ ತತ್ವ ಸತ್ವದ ವಿ ಮನೋಹರ್ ಸಾಹಿತ್ಯವನ್ನು ಅವರೇ ಸಂಗೀತಕ್ಕೆ ಅಳವಡಿಸಿದ ಹಾಡನ್ನು ಐಲೇಸಾ ಇದೇ ಭಾನುವಾರ ಸಂಜೆ 7:30 ಗಂಟೆಗೆ ಜೂಮ್ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ಹಾಡನ್ನು ಐಲೆಸಾದ ಯುವ ಗಾಯಕ ಆತ್ಮರಾಮ್ ಆಳ್ವ ಮಧುರವಾಗಿ ಹಾಡಿದ್ದಾರೆ. ತುಳುವನಾಡಿನ ಸಾಹಸಿ ಮೊಗವೀರರ ಜೀವನ ಶೈಲಿಯ ಪರಿಭಾಷೆಯಲ್ಲಿ ಜೀವನ ದೃಷ್ಟಿಯನ್ನು ಹೇಳುತ್ತಾ ಸಾಗುವ ಹಾಡು ನಿರಾಯಾಸದ ಸೀದಾ ಸಾದಾ ಜೀವನ ನಡೆಸಬೇಕು ಮತ್ತು ಭೇದವಿಲ್ಲದೆ ನಮ್ಮನ್ನು ಸಲಹುವ ಪ್ರಕೃತಿಯನ್ನು, ನದಿಗಳನ್ನು ತಾಯಿಯಂತೆ ಪ್ರೀತಿಸಬೇಕು ಎನ್ನುವ ಸಂದೇಶದೊಂದಿಗೆ ಕೊನೆಗೊಳ್ಳುತ್ತದೆ. ಸದಾ ಐಲೇಸಾದ ಕೆಲಸಗಳನ್ನು ಪ್ರೀತಿಯಿಂದ ಮತ್ತು ಅಭಿಮಾನದಿಂದ ಪ್ರೋತ್ಸಾಹಿಸುತ್ತಾ ಬಂದಿರುವ ಸೌದಿಯ ನರೇಂದ್ರ ಶೆಟ್ಟಿ ಮತ್ತು ಸುಮನಾ ನರೇಂದ್ರ ಶೆಟ್ಟಿ ದಂಪತಿಗಳು ಹಾಡನ್ನು ಪ್ರಾಯೋಜಿಸಿದ್ದು, ಬಹರೈನ್ ಮೊಗವೀರ ಸಂಘದ ಅಧ್ಯಕ್ಷೆ ಶಿಲ್ಪಾ ಶಮೀತ್ ಕುಂದರ್ ಬಿಡುಗಡೆಗೊಳಿಸಿ ಮುಖ್ಯ ಅತಿಥಿಯಾಗಿ ಮಾತಾಡಲಿದ್ದಾರೆ. ಹಾಡಿನ ಕರೋಕೆಯನ್ನು ಮತ್ತೊಬ್ಬ ಅತಿಥಿ ಬಹರೈನ್ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ ಬಿಡುಗಡೆ ಮಾಡುತ್ತಾರೆ.…

Read More