Author: admin
ರಾಜ್ ಬಿ ಶೆಟ್ಟಿ ನಟನೆಯ ʻಲ್ಯಾಂಡ್ಲಾರ್ಡ್ʼ ಸಿನಿಮಾವು ಜನವರಿ 23 ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ‘ರೂಲರ್’ ಎಂಬ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಲ್ಯಾಂಡ್ಲಾರ್ಡ್’ ನಿರ್ದೇಶಕ ಜಡೇಶ್ ಕೆ ಹಂಪಿ ಅವರೊಂದಿಗೆ ಕೆಲಸ ಮಾಡಿದ್ದಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ ರಾಜ್. ದುನಿಯಾ ವಿಜಯ್ ನಟನೆಯ ‘ಲ್ಯಾಂಡ್ಲಾರ್ಡ್’ ಬಹಳ ನಿರೀಕ್ಷೆ ಹುಟ್ಟುಹಾಕಿದೆ. ಈ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಕೂಡ ನಟಿಸುತ್ತಿರುವುದು ಈಗ ನಿರೀಕ್ಷೆ ಡಬಲ್ ಆಗಲು ಕಾರಣವಾಗಿದೆ. ಹೌದು, ‘ಲ್ಯಾಂಡ್ಲಾರ್ಡ್’ ಸಿನಿಮಾದಲ್ಲಿ ರೂಲರ್ ಆಗಿ ರಾಜ್ ಬಿ ಶೆಟ್ಟಿ ವಿಲನ್ ಪಾತ್ರದಲ್ಲಿ ಮಿಂಚಲಿದ್ದಾರೆ. ಈಚೆಗೆ ರಾಜ್ ಬಿ ಶೆಟ್ಟಿ ಅವರ ಪಾತ್ರದ ಟೀಸರ್ ರಿಲೀಸ್ ಆಗಿದೆ. ಈ ಬಾರಿ ವಿಗ್ ಧರಿಸಿ, ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ ರಾಜ್ ಬಿ ಶೆಟ್ಟಿ. ರಾಜ್ ಬಿ ಶೆಟ್ಟಿ ಹೇಳಿದ್ದೇನು? “ನಾನು ಈ ಚಿತ್ರ ಒಪ್ಪಿಕೊಳ್ಳಲು ಮೊದಲ ಕಾರಣ ನಿರ್ದೇಶಕ ಜಡೇಶ್. ಒಬ್ಬ ನಿರ್ದೇಶಕ ಗೆಲ್ಲಲ್ಲೇಬೇಕು ಎಂದು ಬಯಸುವವನು ನಾನು. ಈ…
ಹುಟ್ಟು ನಿಶ್ಚಿತ ಸಾವು ಖಚಿತ ಆದರೆ ಅದಕ್ಕೊಂದು ಕರುಣೆ ಇಲ್ಲ. ವಯಸ್ಸಿನ ಲೆಕ್ಕಾಚಾರವನ್ನು ಹಾಕಲ್ಲ. ಬೈಕಾಡಿ ಜೀವನ್ ಶೆಟ್ರು ಉಡುಪಿ ಜಿಲ್ಲೆಯ ಪ್ರಸಿದ್ಧ ಪಿಡಬ್ಲ್ಯೂಡಿ ಗುತ್ತಿಗೆದಾರರು. ಅದೆಷ್ಟೋ ಜನರು ತಮ್ಮೂರಿಗೊಂದು ರಸ್ತೆ ಸ್ಯಾಂಕ್ಷನ್ ಆದಾಗ ಅದರ ಗುತ್ತಿಗೆ ಬೈಕಾಡಿ ಜೀವನಣ್ಣನಿಗೆ ಸಿಗಲಿ ಅಂತ ಪ್ರಾರ್ಥಿಸಿದವರಿದ್ದಾರೆ. ಎಲ್ಲೇ ರಸ್ತೆ ನಿರ್ಮಾಣ ಕಾಮಗಾರಿ ಆದರೂ ಕೂಡ ಎಲ್ಲಾ ಗುತ್ತಿಗೆದಾರರಿಗಿಂತ ಹೆಚ್ಚು ಹಣವನ್ನು ರಸ್ತೆಗೆ ಹಾಕಿ ಗುಣಮಟ್ಟದ ಕಾಮಗಾರಿಯನ್ನು ಮಾಡಿ ಎಲ್ಲಾ ಸ್ಥರದ ಜನರಿಂದಲೂ ಸೈ ಅನಿಸಿಕೊಂಡವರು. ನೀಳಕಾಯದ ನಗುಮೊಗದ ಶುಭ್ರ ವಸ್ತ್ರಧಾರಿಯಾಗಿರುತ್ತಿದ್ದ ಜೀವನಣ್ಣನನ್ನು ನೋಡುವಾಗಲೇ ಎಂಥವರಲ್ಲೂ ಗೌರವ ಹೊರ ಹೊಮ್ಮುತ್ತಿತ್ತು. ಎಳ್ಳಂಪಳ್ಳಿ ರಸ್ತೆ ಕಾಮಗಾರಿಯಾಗುವಾಗ ಮುಂಜಾನೆ ಬಂದು ಅರ್ಧ ತೋಳಿನ ಬಿಳಿಯಂಗಿಯನ್ನು ತೊಟ್ಟು ಕೆಲಸಗಾರರಿಗೆ ಸೂಚನೆಯನ್ನು ಕೊಡುತ್ತಿದ್ದ ಅವರಿಗೊಂದು ನಮಸ್ಕಾರ ಮಾಡಿ ನಾನು ಶಾಲಾ ಕರ್ತವ್ಯಕ್ಕೆ ಮುಂದುವರಿಯುತ್ತಿದ್ದೆ. ಅವರಿಗೆ ನಮಸ್ಕರಿಸುವುದೇ ನಮ್ಮಂಥವರಿಗೆ ಹೆಮ್ಮೆಯ ವಿಷಯವಾಗಿತ್ತು ಮುರಳಿ ಕೃಷ್ಣ ನಾಮಾಂಕಿತದೊಂದಿಗೆ ಕರಾವಳಿಯಲ್ಲಿ ಮಿಂಚಿದ ಪ್ರಸಿದ್ಧ ಕನ್ಸ್ಟ್ರಕ್ಷನ್ ಕಂಪೆನಿ ಇವರದ್ದು. ತಮ್ಮ ಸಂಸ್ಥೆಯ ಮುಖಾಂತರವಾಗಿ ಅದೆಷ್ಟೋ ಜನರಿಗೆ…
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಹಾರಾಡಿ ಗ್ರಾಮದ ಹೊನ್ನಾಳ ನಿವಾಸಿ ಹರೀಶ್ ಶೆಟ್ಟಿ ಬಂಡ್ಸಾಲೆ ಇವರು ಇಂಗ್ಲೆಂಡ್ನ ಪ್ರತಿಷ್ಠಿತ ಬಾತ್ ಯೂನಿವರ್ಸಿಟಿಯಿಂದ ಪಿಹೆಚ್ಡಿ ಪದವಿ ಪಡೆದಿದ್ದಾರೆ. ಹರೀಶ್ ಶೆಟ್ಟಿ ಬಂಡ್ಸಾಲೆ ಹಾರಾಡಿ ಗ್ರಾಮದ ಕೆಳಬಣಸಾಲೆ ಮನೆ ರತ್ನಾವತಿ ಶೆಟ್ಟಿ ಹಾಗೂ ಹಳುವಳ್ಳಿ- ಕೋಂಟಿಬೈಲು ಲಕ್ಷಣ ಶೆಟ್ಟಿ ಅವರ ಮಗನಾಗಿದ್ದು, ಪ್ರಾಥಮಿಕ ಶಿಕ್ಷಣವನ್ನು ಹೊನ್ನಾಳ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ವಿದ್ಯಾಮಂದಿರ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿಯಲ್ಲಿ ಪಡೆದು ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಬ್ರಹ್ಮಾವರದ ಎಸ್ಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಪಡೆದಿದ್ದರು. ಹಾರಾಡಿಯ ಡಾ.ಎ.ವಿ ಬಾಳಿಗಾ ಕಾಲೇಜಿನಲ್ಲಿ ಬಿಎಸ್ಡಬ್ಲ್ಯೂ ಮುಗಿಸಿ ಮಂಗಳೂರಿನ ಡಾ. ಎಂ.ವಿ ಶೆಟ್ಟಿ ಕಾಲೇಜಿನಲ್ಲಿ ಎಂ.ಎಸ್.ಡಬ್ಲ್ಯೂ ಪದವಿ ಪಡೆದಿದ್ದರು. ಅಹಮ್ಮದಾಬಾದ್ನ ಐಐಎಂನಲ್ಲಿ ಪಿಎಚ್ಡಿಯನ್ನು ಪ್ರಾರಂಬಿಸಿ ಅಲ್ಲಿಂದ ಇಂಗ್ಲೆಂಡ್ನ ಪ್ರತಿಷ್ಠಿತ ಯೂನಿವರ್ಸಿಟಿ ಆಫ್ ಬಾತ್ನಿಂದ ಸ್ಕಾಲರ್ಶಿಪ್ ಪಡೆದು ಕಟ್ಟಡ ಕಾರ್ಮಿಕರ ಬಗ್ಗೆ ಆಳವಾದ ಅಧ್ಯಯನ ಮಾಡಿ ತಮ್ಮ ಪ್ರಬಂಧವನ್ನು ಮಂಡಿಸಿ, ಯಾವುದೇ ತಿದ್ದುಪಡಿ ಇಲ್ಲದೆ ಮೊದಲ ಹಂತದಲ್ಲೇ ಉತ್ತೀರ್ಣರಾಗಿ…
ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿಗಳನ್ನೊಳಗೊಂಡ ಪ್ರಜಾವಾಣಿ ದಿನಪತ್ರಿಕೆಯನ್ನು ಸರಕಾರಿ ಪ್ರೌಢಶಾಲೆ ಕಾಬೆಟ್ಟು ಕಾರ್ಕಳ ಇಲ್ಲಿನ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಅಂತಿಮ ಪರೀಕ್ಷೆಯವರೆಗೆ ಪ್ರತಿದಿನ ಪ್ರತಿ ವಿದ್ಯಾರ್ಥಿಗಳಿಗೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳಿಗೆ ದಿನಪತ್ರಿಕೆಗಳನ್ನು ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮಾತನಾಡುತ್ತಾ, ರೋಟರಿಯ ಸಾಮಾಜಿಕ ಮತ್ತು ಶೈಕ್ಷಣಿಕ ಸೇವೆಯ ಭಾಗವಾಗಿ ಈ ಸವಲತ್ತುಗಳನ್ನು ನೀಡುತ್ತಿದ್ದೇವೆ. ಒಳ್ಳೆಯ ಶಿಕ್ಷಣ ಪಡೆದು ಮುಂದೆ ಉತ್ತಮ ಸಮಾಜ ಸೇವೆ ಮಾಡುವ ಅವಕಾಶ ನಿಮಗೆ ಸಿಗಲಿ ಎಂದು ಹಾರೈಸಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಉಪನ್ಯಾಸಕರು, ಪ್ರಜಾವಾಣಿ ಪತ್ರಿಕೆಯ ವರದಿಗಾರರಾದ ಸಿದ್ದಾಪುರ ವಾಸುದೇವ ಭಟ್ ಮಾತನಾಡುತ್ತಾ, ವಿದ್ಯಾರ್ಥಿಗಳು ಮಾತನಾಡಬೇಕು, ಬರೆಯಬೇಕು, ಓದಬೇಕು ಈ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದರು. ರೋಟರಿ ಕ್ಲಬ್ಬಿನ ಕಾರ್ಯದರ್ಶಿ ಚೇತನ್ ನಾಯಕ್, ಇಂಟರ್ಯಾಕ್ಟ್ ಕ್ಲಬ್ಬಿನ ಅಧ್ಯಕ್ಷೆ ಸಾಕ್ಷಿ, ಸಮುದಾಯ ಸೇವೆಗಳ ಚೇರ್ಮನ್ ವಸಂತ್ ಎಂ,…
ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಗುಂಡು ಶೆಟ್ಟಿ ಕಂಬಳ ಮನೆ ಕಪ್ಪೆಟ್ಟು ನಿಧನ
ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿರುವ ಗುಂಡು ಶೆಟ್ಟಿ ಕಂಬಳ ಮನೆ ಕಪ್ಪೆಟ್ಟು (88 ) ಅವರು ಡಿ.4ರಂದು ಸ್ವಗೃಹದಲ್ಲಿ ನಿಧನರಾದರು. ಕಳೆದ ಐದು ದಶಕಗಳಿಂದ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಪ್ಪೆಟ್ಟು ಇದರ ಶೆಟ್ಟಿ ಬಾಲೆ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದ ಗುಂಡು ಶೆಟ್ಟಿ ಕಪ್ಪೆಟ್ಟು ಅವರು, ತನ್ನ ನೇರ ನಡೆ- ನುಡಿಗಳಿಂದ ಜನಾನುರಾಗಿಯಾಗಿದ್ದು, ದೈವಾರಾಧನೆ ಸಹಿತ ದೈವಸ್ಥಾನಗಳ ಧಾರ್ಮಿಕ ಆಚರಣೆಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದರು. ಮೃತರು ಪತ್ನಿ, ಓರ್ವ ಪುತ್ರಿ, ಇಬ್ಬರು ಪುತ್ರರ ಸಹಿತ ಬಂಧು ವರ್ಗ ಮತ್ತು ಅಪಾರ ಹಿತೈಷಿಗಳನ್ನು ಅಗಲಿದ್ದಾರೆ.
ಆಳ್ವಾಸ್ ಕಾಲೇಜಿನ ನಿರ್ವಹಣಾ ವಿಭಾಗವು (ಬಿಬಿಎ) ಕಾಲೇಜಿನ ಐಕ್ಯೂಎಸಿ ಅಡಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮವುವನ್ನು ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡಿತ್ತು. ವಿಭಾಗದ ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿ ವರುಣ್ರಾಜು ಮಾತನಾಡಿ, ಎಲ್ಲಾ ವಿದ್ಯಾರ್ಥಿಗಳು ಶೂನ್ಯ ಅನುಭವದಿಂದ ಆರಂಭಿಸುವುದು ಸಹಜ. ಆದರೆ ಶೂನ್ಯದಿಂದ ಆರಂಭಿಸುವುದು ಮುಖ್ಯವಲ್ಲ, ಮೌಲ್ಯಯುತ ಅನುಭವಗಳಿಂದ ಜೀವನ ರೂಪಿಸಿಕೊಳ್ಳುವುದು ಅಗತ್ಯ. 2015ರಲ್ಲಿ ನಾನು ಈ ಸಂಸ್ಥೆಗೆ ಸೇರಿದಾಗ ಸಂವಹನ ಕೌಶಲ್ಯವೂ ಸೇರಿದಂತೆ ಅನೇಕ ವಿಷಯಗಳಲ್ಲಿ ಆತ್ಮವಿಶ್ವಾಸದ ಕೊರತೆ ಇತ್ತು. ಆದರೆ ಅವಕಾಶಗಳನ್ನು ಸ್ವೀಕರಿಸಿ, ತೊಡಗಿಸಿಕೊಳ್ಳುವುದರ ಮೂಲಕ ಜೀವನಕ್ಕೆ ದೊಡ್ಡ ತಿರುವು ಲಭಿಸಿತು. ಅವಕಾಶಗಳನ್ನು ಕೈಬಿಟ್ಟರೆ, ನಾವು ಅದೇ ಸ್ಥಾನದಲ್ಲೇ ಉಳಿಯುತ್ತೇವೆ. ಆದರೆ ಅವಕಾಶಗಳನ್ನು ಸ್ವೀಕರಿಸಿ ತೊಡಗಿಸಿಕೊಂಡಾಗ, ಜೀವನಕ್ಕೆ ಹೊಸ ಅರ್ಥ ದೊರೆಯುತ್ತದೆ. ಅಲ್ಲಿ ಸವಾಲುಗಳಿರುತ್ತವೆ, ವೈಫಲ್ಯಗಳಿರುತ್ತವೆ, ಆದರೆ ಆ ವೈಫಲ್ಯಗಳೇ ಜೀವನಕ್ಕೆಅನುಭವ, ಅನುಭವವೇ ಜ್ಞಾನ, ಮತ್ತು ಜ್ಞಾನವೇ ಯಶಸ್ಸಿನ ಮಾರ್ಗ ತೋರಿಸುತ್ತದೆ ಎಂದರು. ಜರ್ಮನಿಯಲ್ಲಿ ಉದ್ಯೋಗದಲ್ಲಿರುವ ಇನ್ನೊರ್ವ ಹಿರಿಯ ವಿದ್ಯಾರ್ಥಿನಿ ವಂದನಾ ಮಾತನಾಡಿ, ಕಾರ್ಪೊರೇಟ್ ಜೀವನಕ್ಕೂ ವಿದ್ಯಾರ್ಥಿ ಜೀವನಕ್ಕೂ ಬಹಳಷ್ಟು…
ಯಕ್ಷಗಾನ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಸಂರಕ್ಷಣೆ, ಸಂವರ್ಧನೆ ಮತ್ತು ವಿಸ್ತರಣೆ ಮಾಡಿ ಮುಂದಿನ ಜನಾಂಗಕ್ಕೆ ನೀಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಯಕ್ಷಗಾನದ ಗುಣಮಟ್ಟ ಮತ್ತು ಸೌಂದರ್ಯವನ್ನು ವರ್ಧಿಸುವ ಕೆಲಸವನ್ನು ತಿರುಗಾಟಕ್ಕೆ ಹೊರಟ ಸೂಡ ಮೇಳ ನಡೆಸುತ್ತಿದ್ದು, ಕಲಾವಿದರಿಗೆ ಉತ್ತಮ ವೇದಿಕೆ ಒದಗಿಸಿ, ಜನರಿಗೆ ಕಲಾ ಸಂಸ್ಕಾರ ನೀಡುವ ಪ್ರಯತ್ನ ಮಾಡಿದೆ ಎಂದು ಪ್ರಸಿದ್ಧ ಯಕ್ಷಗಾನ ಅರ್ಥಧಾರಿ ಮತ್ತು ಬಹುಶ್ರುತ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಹೇಳಿದರು. ಸೂಡ ಮಯೂರ ವಾಹನ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ದಶಮ ಸಂಭ್ರಮ, ಸಪ್ತಾಹ ಮತ್ತು 10ನೇ ವರ್ಷದ ತಿರುಗಾಟ ಶುಭಾರಂಭ ಸಂದರ್ಭ ಸೂಡ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಬೆಳ್ಳಿಹಬ್ಬದ ಪ್ರಯುಕ್ತ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸೂಡ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶಿರ್ವ ಕೋಡು ಜಯಶೀಲ ಹೆಗ್ಡೆ ಮೇಳದ ಸಂಚಾಲಕ ಮತ್ತು ಭಾಗವತ ಸೂಡ ಹರೀಶ್…
ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಾರ್ಷಿಕೋತ್ಸವ ಆವಿರ್ಭವವು “ಸಿಂದೂರ ಸಂಭ್ರಮ” ಪರಿಕಲ್ಪನೆಯಲ್ಲಿ ಡಿಸೆಂಬರ್ 4, 5, 6 ರಂದು ಅದ್ದೂರಿಯಾಗಿ ಜರುಗಿತು. 4 ಡಿಸೆಂಬರ್ 2025 ರಂದು ಕ್ರಿಯೇಟಿವ್ ಯಕ್ಷಾರಾಧನಮ್ ಹವ್ಯಾಸಿ ಕಲಾವಿದರಿಂದ ‘ಶ್ರೀರಾಮಾನುಗ್ರಹ ಸಿಂದೂರ ವಿಜಯ’ ಯಕ್ಷಗಾನ ಪ್ರದರ್ಶನ ನಡೆಯಿತು. 5 ಡಿಸೆಂಬರ್ 2025 ರಂದು ದಿ. ಎಚ್.ಎಸ್ ವೆಂಕಟೇಶಮೂರ್ತಿಯವರ ಸವಿ ನೆನಪಿನ ಕುರಿತ ‘ಭಾವ ನಮನ’ ಭಾವಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಖ್ಯಾತ ನಿರೂಪಕ ಅವಿನಾಶ್ ಕಾಮತ್ ರವರು ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ವಿವಿಧ ಸ್ಪರ್ಧಾವಳಿಗಳ ಬಹುಮಾನ ವಿತರಣಾ ಕಾರ್ಯಕ್ರಮ ಜರುಗಿತು. ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ರವರು ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಉದ್ಘಾಟಕರಾಗಿ ಆಗಮಿಸಿದ ಡಾ| ಜಿ. ರಾಮಕೃಷ್ಣ ಆಚಾರ್, ಸ್ಥಾಪಕರು ಎಸ್.ಕೆ.ಎಫ್ ಎಲಿಕ್ಸರ್ ಇಂಡಿಯಾ ಮತ್ತು ಸಂಜೀವಿನಿ ಗೋಧಾಮ ಮುನಿಯಾಲು ಇವರು ಮಾತನಾಡಿ, ಕಾಲೇಜುಗಳು ಬರಿಯ ಪಠ್ಯದ ಅಭ್ಯಾಸ ನೀಡುವ ಸ್ಥಳವಲ್ಲ. ವಿದ್ಯಾರ್ಥಿಗಳ ಸಾಮರ್ಥ್ಯವನ್ನೆತ್ತಿ ಹಿಡಿಯುವ ವೇದಿಕೆಗಳಾಗಬೇಕು. ಅಂತಹ ವೇದಿಕೆಗಳನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿ ಕೊಡುತ್ತಿರುವ…
ಬಹರೈನ್ ಬಂಟರ ಸಂಘ ಹಾಗೂ ಕನ್ನಡ ಸಂಘದ ಸಹಯೋಗದಲ್ಲಿ ಹಿರಿಯ ಸದಸ್ಯ ದಿವಂಗತ ದಿನಕರ್ ಶೆಟ್ಟಿಯವರಿಗೆ ಶ್ರದ್ಧಾಂಜಲಿ ಸಭೆ
ಕನ್ನಡ ಸಂಘ ಬಹರೈನ್ ನ ಹಿರಿಯ ಸದಸ್ಯ ದಿವಂಗತ ದಿನಕರ್ ಶೆಟ್ಟಿ ಯು.ಎಂ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಭೆ ನಡೆಯಿತು. ಅವರು ಕಳೆದ ನವೆಂಬರ್ 30 ರಂದು ಅಲ್ಪಕಾಲದ ಅಸೌಖ್ಯದಿಂದ ವಿಧಿವಶರಾದರು. ಈ ಸಂದರ್ಭ ಕನ್ನಡ ಸಂಘ ಮತ್ತು ಬಂಟರ ಸಂಘ ಅವರ ಸಹಯೋಗದಲ್ಲಿ ಕನ್ನಡ ಭವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಳೆದ ಶನಿವಾರ ಡಿಸೆಂಬರ್ 6, 2025 ರಂದು ಕನ್ನಡ ಭವನ ಕ್ರೀಡಾ ಕೇಂದ್ರದಲ್ಲಿ ದಿವಂಗತ ದಿನಕರ್ ಶೆಟ್ಟಿಗೆ ಗೌರವ ಸಲ್ಲಿಸಲಾಯಿತು. ಸಂಘದ ಸದಸ್ಯರು, ಆತ್ಮೀಯರು ಮತ್ತು ಸಮುದಾಯದ ಪ್ರಮುಖರು ಹಾಜರಾಗಿ ತಮ್ಮ ಶೋಕವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ, ಬಂಟ್ಸ್ ಬಹರೈನ್ ಅಧ್ಯಕ್ಷ ಡಾ. ಮಿಥುನ್ ಭಂಡಾರಿ, ಕನ್ನಡ ಸಂಘದ ಮಾಜಿ ಅಧ್ಯಕ್ಷರುಗಳಾದ ಅಮರನಾಥ್ ರೈ, ಪ್ರದೀಪ್ ಕುಮಾರ್ ಶೆಟ್ಟಿ, ರಾಜೇಶ್ ಶೆಟ್ಟಿ, ಸದಸ್ಯರಾದ ನಾಗೇಶ್ ಶೆಟ್ಟಿ, ಕಮಲಾಕ್ಷ ಅಮೀನ್, ಪ್ರದೀಪ್ ಆರ್. ಶೆಟ್ಟಿ ಮತ್ತು ಉಪಾಧ್ಯಕ್ಷ ನಿತಿನ್ ಶೆಟ್ಟಿ ನುಡಿನಮನ ಸಲ್ಲಿಸಿದರು. ಹಿರಿಯ ಹಾಗೂ…
ಹೊಸ ಬಾಟಲಿಯಲ್ಲಿ ಹಳೆಯ ಮದಿರೆ (Old wine in a new bottle) ಅಂದರೆ ಹಳೆಯ, ಸಾಂಪ್ರದಾಯಿಕ ಅಥವಾ ಬದಲಾಗದ ಏನನ್ನಾದರೂ ತಾಜ, ಹೊಸ ರೀತಿಯಲ್ಲಿ ಪ್ರಸ್ತುತಪಡಿಸುವುದು. ಉದಾಹರಣೆಗೆ, ಪ್ರಸಿದ್ಧ ಐವತ್ತು ವರ್ಷಕ್ಕೂ ಮಿಕ್ಕಿದ ಸ್ನಾನದ ಸಾಬೂನಿನ ಹೊದಿಕೆ (wrapper) ಆಗಾಗ್ಗೆ ಮಾರ್ಕೆಟಿಂಗ್ ಅಥವಾ ಆಕರ್ಷಣೆಗಾಗಿ ಬದಲಿಸುತ್ತಾ ಬಂದಿದ್ದಾರೆ. ಆದರೆ ಮೂಲ ವಸ್ತು ಸಾಬೂನು ಮೊದಲಿನದ್ದೇ ಆಗಿರುತ್ತದೆ. ಈ ಮಾತಿಗೆ ವ್ಯತಿರಿಕ್ತವಾಗಿ, ಚಿತ್ರದಲ್ಲಿ ತೋರಿಸಿರುವುದು, ಹೊಸ ಮದಿರೆ, ಹೊಸ ಬಾಟಲಿಯಲ್ಲಿ. ಅದರೊಂದಿಗೆ ಕಸ್ತಾನ್ಯೆ (Castagne ಅಂದರೆ chestnut). ಹೊಸ ಮದಿರೆಯನ್ನು ನೋವೆಲ್ಲೋ (Novello, New) ಅನ್ನುತ್ತಾರೆ ಇಟಾಲಿಯನ್ ನಲ್ಲಿ. ಶರದ್ ಋತುವಿನ (autumn) ಮಧ್ಯಭಾಗದಲ್ಲಿ ಹೊಸ ಮದಿರೆಗಳು ಮಾರುಕಟ್ಟೆಗೆ ಬರುತ್ತವೆ. ಕೆಲವೇ ಕೆಲವು ಬಾಟಲಿಗಳಷ್ಟೇ, ಯಾಕೆಂದರೆ ಮದಿರೆ ವಿಶೇಷವಾಗಿ ಕೆಂಪು ಮದಿರೆ ಹಳೆಯದಾದಂತೆ ಅದರ ರುಚಿ ಚೆನ್ನಾಗಿರುತ್ತದೆ, ಬೆಲೆಯೂ ಏರುತ್ತದೆ. ಇದೇ ಕಾಲಕ್ಕೆ ಅಂದರೆ ಚಳಿಗಾಲಕ್ಕೆ ಮುನ್ನ ಈ ಕಸ್ತಾನ್ಯೆ ಇಲ್ಲಿನ ಹಾಡಿಗಳಲ್ಲಿ ಹೇರಳವಾಗಿ ಸಿಗುತ್ತವೆ. ಇದನ್ನು ನಾವು ಗೆಣಸು ಯಾ…















