Author: admin
ಒಂಜಾನೊಂಜಿ ನಕರೆ. ಆ ನಕರೆಡ್ ಒರಿ ಕಂಡು ಕಲುವೆ. ಒವ್ವಾ ಜಲ್ಮದ ಕರ್ಮ ಅರ್ದೆರೆ ಬೈದೆ. ಆ ನಕರೊಗು ಪರವೂರು, ಪರದೇಸೊಡ್ಡ್ ನಾಲ್ ಜನ ಬೇರದಗುಲು ಬತ್ತೆರ್. ಊರ್ದ ಉಲಾಯಿದ ಮಾರುನ ವಸ್ತುಲೆನ್ ಕಮ್ಮಿ ಬಿಲೆಕ್ ಗೆತೊಂದು, ದಾಸ್ತಾನ್ ಮಲ್ತ್ದ್, ಬಿಲೆ ಏರಿಗಿನ ಅತ್ತ್ಡ ಏರಾದ್ ಮಾರುನು. ಆಂತೂ ಅಗಲೆನ ಬೇರದ ಚಾತುರ್ಪಾಯೊಡು ಲಾಯಿಕ್ ಸಂಪಾದನೆ ಮಲ್ತೊಂದು ಇತ್ತೆರ್. ಉಂದೆನ್ ಆ ಕಲ್ವೆ ತೂಯೆ. ಎಂಚಂಡಲಾ ಮಲ್ತ್ದ್ ಆಗಲೆಗ್ ನಂಬೊಲಿಕೆ ಪುಟ್ಟಾದ್, ಅಗಲೆನ ಒಟ್ಟುಗೇ ಇತ್ದ್ ಅಗಲೆನ ಗಂಟ್ ಪಿಸ್ಕಾವೊಡು ಪಂದ್ ಕುಂದುಕುಸೆಲ್ ಮಲ್ತೆ. ಅಗಲೆಡ ಬಗ್ಗು ಕೋಮಟಿಗೆ ಪಾತೆರೊಂದು, ಬುಟ್ಟಿಚಾಕರಿ ಮಲ್ತೊಂದು ಅಗಲೆನ ಒಟ್ಟುಗೇ ಕುದ್ದು ಲಕ್ಕರೆ ಸುರು ಮಲ್ತೆ. ಹಾದರಗಿತ್ತಿಗ್ ನಾಸಿಗೆ ಜಾಸ್ತಿಗೆ, ಕಡಲ್ದ ಉಪ್ಪು ನೀರ್ ತಂಪುಗೆ, ಕವುಡು ಮಂಗಲೆರ್ ಬುದ್ಯಂತೆರ್ಗೆ, ಅಂಚೆನೆ ದುಷ್ಟೆರ್ ಮೋನೆದಕ್ಕ ತೀಪೆ ತೀಪೆ ಪಾತೆರ ಪಾತೆರುವೆರ್ಗೆ. ಇಂಚೆನೆ ಆ ಕಲ್ವೆ ಅಗಲೆನ ಚಾಕರಿ ಮಲ್ತೊಂದು, ದೊಡ್ಡು ಬಂಗಾರ್ ಲಕ್ಕಾವರೆ ಸರಿಸಮತ ಪೊರ್ತು…
ಇಂದು ಗಡಿನಾಡ ಕನ್ನಡದ ಅಪ್ರತಿಮ ಕವಿ, ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಚಿಂತಕ ಹಾಗೂ ಕನ್ನಡದ ಅಸ್ಮಿತೆಯ ಪ್ರಬಲ ಧ್ವನಿಯಾಗಿದ್ದ ಕಯ್ಯಾರ ಕಿಞ್ಞಣ್ಣ ರೈ ಅವರ 111ನೇ ಜನ್ಮದಿನ. ತಮ್ಮ ಕಾವ್ಯ, ಚಿಂತನೆ ಮತ್ತು ಹೋರಾಟದ ಮೂಲಕ ಕಾಸರಗೋಡು ಕನ್ನಡಿಗರಲ್ಲಿ ಆತ್ಮವಿಶ್ವಾಸ ಮತ್ತು ಕನ್ನಡಾಭಿಮಾನವನ್ನು ಮೂಡಿಸಿದ ಕಯ್ಯಾರರು ಕೇವಲ ಒಬ್ಬ ಸಾಹಿತಿಯಲ್ಲ, ಒಂದು ಚಳುವಳಿಯ ಶಕ್ತಿಯಾಗಿದ್ದರು. “ಬೆಂಕಿ ಬಿದ್ದಿದೆ ಮನೆಗೆ, ಓ ಬೇಗ ಬನ್ನಿ…” ಎಂಬ ಅವರ ಕರೆಯು ಇಂದಿಗೂ ಕನ್ನಡಿಗರನ್ನು ಎಚ್ಚರಿಸುವ ಧ್ವನಿಯಾಗಿ ಕೇಳಿಸುತ್ತದೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಗಡಿನಾಡಿನ ಅಸ್ತಿತ್ವಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಆ ಮಹನೀಯರನ್ನು ಈ ದಿನ ಗೌರವಪೂರ್ವಕವಾಗಿ ಸ್ಮರಿಸೋಣ. ಅವರ ಆದರ್ಶಗಳು, ಚಿಂತನೆಗಳು ಮತ್ತು ಕನ್ನಡ ಪ್ರೇಮ ಮುಂದಿನ ಪೀಳಿಗೆಗೂ ಪ್ರೇರಣೆಯಾಗಲಿ.
ಈ ಅಪರೂಪದ ಕಾಂಬಿನೇಶನ್ ಒಂದಾದರೆ ಸೋಲೂ ಸೋಲುತ್ತದೆನ್ನುವುದು ತೀರಾ ಗುಟ್ಟಿನ ವಿಚಾರವೇನಲ್ಲ. ಯಾಕೆ ಕೇಳಿ ಅಮರಣ್ಣ ಇರುವುದಕ್ಕೂ, ತೋರುವುದಕ್ಕೂ ಅಜಗಜಗಳ ಅಂತರ. ಪರಿಚಯದ ಯಾರೇ ಕಂಡರೂ ಅತ್ಯಂತ ಆಪ್ತತೆಯಿಂದ ಕಂಡವರೇ ಹೊರತು ಅಂತಸ್ಥಿನಿಂದಲ್ಲ. ಅಲ್ಲೆಲ್ಲೊ ವಿದ್ಯಾರ್ಥಿವೇತನಕ್ಕಾಗಿ, ಕಾರ್ಯಕ್ರಮ ಸಂಘಟನೆಗಾಗಿ, ದೇವತಾ ಕಾರ್ಯಗಳಿಗೆ ಕರೆ ಬಂದರೆ ಇಲ್ಲ ಅಂದವರಲ್ಲ. ಒಂದೆಜ್ಜೆ ಮುಂದಕ್ಕೆ ಹೋದರೆ ಸಮುದಾಯದ ತೀರಾ ಅಗತ್ಯ ಕಂಡ ಹುಡುಗಿಯರ ವಿವಾಹಕ್ಕಾಗಿ ಕರಿಮಣಿಗಳನ್ನು ಸಂಘದಿಂದ ಖುದ್ದು ಒದಗಿಸಿದ್ದನ್ನು ಎಲ್ಲೂ ಹೇಳಿಕೊಂಡವರಲ್ಲ. ಬಂಟ ಸಮುದಾಯವಲ್ಲದ ಹಲವು ನಮ್ಮವರು ಅಮರಣ್ಣನ ಪ್ರಸ್ತಾಪ ಬಂದಾಗ ಅವರಿಗರಿವಿಲ್ಲದೇ ಅಂತಃಕರಣದಿಂದ ಬಾಗಿ ಬಿಡುತ್ತಾರೆ. ಮಾನವೀಯ ಮೌಲ್ಯವೆಂದರೆ ಇದಲ್ಲದೆ ಮತ್ತೇನು? ಇನ್ನು ದೀಪಣ್ಣನಿಗೂ ಮೇಲಿನದ್ದೇ ಯಥಾವತ್ ಬರೆದರೆ ತುಲಾಭಾರ ಮಾಡಿದಂತಾಗಬಹುದು. ಸಮರ್ಥ ಸಂಘಟಕ ಇವರೊಳಗೆ ಅಭಿಜಾತವಾಗಿಯೇ ಹೊಕ್ಕಿ ಬಿಟ್ಟಿದ್ದಾರೆ. ಕಾರ್ಯಕ್ರಮ ವಿಭಾಗದಲ್ಲಿ ದೀಪಣ್ಣ ಮುಟ್ಟಿದೆಲ್ಲವೂ ಅಪ್ಪಟ ಬಂಗಾರ. ಆಭರಣದ ಅಂಗಡಿಯೆದುರು ರಾರಾಜಿಸುವ ಚಿನ್ನವನ್ನಷ್ಚೇ ನಾವು ನೀವು ಕಂಡಿದ್ದು. ಅಲ್ಲಿಗೆ ಬರುವುದಕ್ಕೆ ಮೊದಲು ತಿಂದ ಸುತ್ತಿಗೆಯ ಪೆಟ್ಟುಗಳನ್ನಲ್ಲ! ಸಾಕಷ್ಟು ತಯಾರಿ, ಸಮಚಿತ್ತ, ಹಿತ-ಮಿತ…
ಮುಂಬಯಿಯ ಖ್ಯಾತ ಹೋಟೆಲು ಉದ್ಯಮಿ ಮಿಜಾರು ಸುರೇಶ್ ಶೆಟ್ಟಿ ಅವರು ಮುಂಬಯಿಯಲ್ಲಿ ಉದ್ಯಮಿಯಾಗಿದ್ದರೂ ತನ್ನ ಹುಟ್ಟೂರ ಜನರಿಗೆ ಏನಾದರೊಂದು ಸಹಾಯ ಮಾಡಬೇಕೆನ್ನುವ ತುಡಿತ ಉಳ್ಳವರು. ತುಳುನಾಡ ಸೇನಾ ಎನ್ನುವ ಸಂಘಟನೆಯನ್ನು ಕಟ್ಟಿಕೊಂಡು ಈ ಹಿಂದೆ ಮೂಡುಬಿದಿರೆಯಲ್ಲಿ ಸಾಮೂಹಿಕ ವಿವಾಹದಂತಹ ಕಾರ್ಯಕ್ರಮ ಮಾಡಿ, ಬಳಿಕ ಮೂಡುಬಿದಿರೆಯಲ್ಲಿ ಕಂಬಳ ಮಾಡಿ ಪ್ರೋತ್ಸಾಹಿಸಿ ಗಮನ ಸೆಳೆದವರು. ಯಾರೂ ಎಷ್ಟಿದ್ದರೂ ಸೇವೆಗೈಯ್ಯುವ ಮನಸ್ಸು ಮಾಡುವುದಿಲ್ಲ. ಆದರೆ ಮಿಜಾರು ಸುರೇಶ್ ಶೆಟ್ಟಿ ಅವರಿಗೆ ತನ್ನೂರಿನ ಮೇಲೆ ಅಭಿಮಾನ ಹಾಗೂ ಬಾಲ್ಯ ಜೀವನದ ಕಷ್ಟದ ದಿನಗಳ ಬಡತನದ ನೆನಪು ಇದೆಲ್ಲವನ್ನೂ ಅರಿತ ಅವರು ತನ್ನ ಸಂಪಾದನೆಯ ಒಂದಿಷ್ಟು ತನ್ನೂರಿನ ಬಡ ವಿದ್ಯಾರ್ಥಿಗಳಿಗಿರಲಿ ಎನ್ನುವ ಸೇವಾ ಮನೋಭಾವದಿಂದ ಒಂದು ಕಾರ್ಯಕ್ರಮ ಹಮ್ಮಿಕೊಂಡು ತನ್ನ ಪ್ರಿಯ ಮಗಳು ಝಾನ್ಸಿಯ ಹುಟ್ಟಿದ ದಿನದಂದು ಸ್ಥಳೀಯ ಶಾಸಕರ ಸಹಿತ ತನ್ನಿಷ್ಟದ ಅತಿಥಿಗಳನ್ನು ಕರೆದು, ತನ್ನ ತಂದೆ ಹರಿಯಪ್ಪ ಶೆಟ್ಟಿ, ತಾಯಿ ಮೀನಾಕ್ಷಿ ಅವರ ಸಮ್ಮುಖದಲ್ಲಿ ಮಿಜಾರು ತೋಡಾರು ಗ್ರಾಮಗಳ ಆರು ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸುಮಾರು…
ಬಾರ್ಕೂರು ಸುಜ್ಞಾನ ನ್ಯಾಷನಲ್ ಪಿಯು ಕಾಲೇಜು, ನ್ಯಾಷನಲ್ ಹೈಸ್ಕೂಲು ಬಾರ್ಕೂರು ಹಾಗೂ ರೋಟರಿ ಕ್ಲಬ್ ಬಾರ್ಕೂರು (RI ಜಿಲ್ಲೆ 3182) ಇವುಗಳ ಜಂಟಿ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸಲಾಯಿತು. ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಜೀವನ ಶೈಲಿಯ ಕುರಿತು ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು. ಕಾರ್ಯಕ್ರಮದ ಮುಖ್ಯ ಆಯೋಜಕರಾದ ರೊಟೇರಿಯನ್ P.H.F. ಎ ರತ್ನಾಕರ ಶೆಟ್ಟಿ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಪರಿಸರ ಸ್ನೇಹಿ ಪದ್ಧತಿಗಳನ್ನು ಪ್ರತಿಯೊಬ್ಬರೂ ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತ್ಯಂತ ತುರ್ತು ಅಗತ್ಯವಾಗಿದೆ ಎಂದು ಒತ್ತಿ ಹೇಳಿದರು. ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೇತಾಲ್ಕರ್ ಅವರು ಮಾತನಾಡಿ, ಪ್ರಕೃತಿಯನ್ನು ಉಳಿಸುವಲ್ಲಿ ಮತ್ತು ಮುಂದಿನ ಪೀಳಿಗೆಗೆ ಪರಿಸರವನ್ನು ರಕ್ಷಿಸಿಡುವಲ್ಲಿ ವಿದ್ಯಾರ್ಥಿಗಳು ವಹಿಸಬಹುದಾದ ಮಹತ್ತರ ಪಾತ್ರದ ಕುರಿತು ಅಮೂಲ್ಯವಾದ ಮಾಹಿತಿ ಹಾಗೂ ಮಾರ್ಗದರ್ಶನ ನೀಡಿದರು. ಬಾರ್ಕೂರು ರೋಟರಿ ಕ್ಲಬ್…
ಜೂನ್ 6 ರಂದು ಹುಬ್ಬಳ್ಳಿ ಧಾರವಾಡ ಬಂಟರ ಸಂಘದಲ್ಲಿ ಜರುಗಿದ ಪದಾಧಿಕಾರಿಗಳ ಹಾಗೂ ಸಲಹಾ ಸಮಿತಿ ಸಭೆಯಲ್ಲಿ ನೂತನ ಅಧ್ಯಕ್ಷರಾದ ರಾಜೇಂದ್ರ ವಿ ಶೆಟ್ಟಿಯವರನ್ನು ಸಲಹಾ ಸಮಿತಿಯ ವತಿಯಿಂದ ಸನ್ಮಾನಿಸಿ, ಗೌರವಿಸಿ ಮುಂದಿನ ಅವಧಿಯ ಕಾರ್ಯಚಟುವಟಿಕೆಗಳಿಗೆ ಶುಭಾಶಯಗಳನ್ನು ಕೋರಲಾಯಿತು. ರಾಜೇಂದ್ರ ಶೆಟ್ಟಿಯವರ ನಾಯಕತ್ವದಲ್ಲಿ ಸಂಘವು ಇನ್ನಷ್ಟು ಅಭಿವೃದ್ಧಿ ಹೊಂದಿ ಸಮಾಜ ಸೇವೆಯಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸಲಿ ಎಂದು ಹಾರೈಸಿದರು. ಈ ಸಂಧರ್ಭ ಮಾಜಿ ಅಧ್ಯಕ್ಷರುಗಳಾದ ಸುಭಾಷ್ಚಂದ್ರ ಶೆಟ್ಟಿ, ಸುಗ್ಗಿ ಸುಧಾಕರ ಶೆಟ್ಟಿ, ವಿಜಯಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಕರಾವಳಿ ಭಾಗದಿಂದ ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೊಂದು ಗುಡ್ನ್ಯೂಸ್ ಇಲ್ಲಿದೆ. ನೆಲಮಂಗಲದಿಂದ ಹಾಸನಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ ಚೆನ್ನರಾಯಪಟ್ಟಣದಲ್ಲಿ ರವಿತೇಜ್ ಶೆಟ್ಟಿ ಮಾರಣಕಟ್ಟೆ ಯವರ ಮಾಲೀಕತ್ವದ ‘ಅನ್ನ ಪ್ರಸಾದಂ’ ಮಲ್ಟಿ ಕ್ಯುಸಿನ್ ಫ್ಯಾಮಿಲಿ ವೆಜ್ ರೆಸ್ಟೋರೆಂಟ್ ಶುಭಾರಂಭಗೊಂಡಿದ್ದು, ರುಚಿಯಿಂದಲೇ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಚನ್ನರಾಯಪಟ್ಟಣದ ಬರ್ಗೂರು ಹ್ಯಾಂಡ್ ಪೋಸ್ಟ್ ಬಳಿಯಲ್ಲಿರುವ ಅನ್ನ ಪ್ರಸಾದಂ ಹೋಟೆಲ್ ಕೇವಲ ಹಸಿವು ನೀಗಿಸುವ ಜಾಗವಷ್ಟೇ ಅಲ್ಲ, ಅದೊಂದು ಶುದ್ಧ ಸಸ್ಯಾಹಾರಿ ರುಚಿಯ ಸ್ವರ್ಗವಾಗಿತ್ತು. ಹೋಟೆಲ್ ಪ್ರವೇಶಿಸುತ್ತಿದ್ದಂತೆ ‘ನಂದಿನಿ ತುಪ್ಪದ ಸ್ವಾದ, ಗುಣಮಟ್ಟದ ಆಹಾರ’ ಎಂಬ ಬೋರ್ಡ್ ಗ್ರಾಹಕರನ್ನು ಕೈಬೀಸಿ ಕರೆಯುತ್ತದೆ. ‘ಅಮ್ಮನ ಕೈ ರುಚಿಗೆ ಹೊಸ ವಿಳಾಸ’ ಎಂಬ ಮಾತಿಗೆ ತಕ್ಕಂತೆ, ಅಲ್ಲಿನ ಪ್ರತಿಯೊಂದು ತಿನಿಸುಗಳೂ ಮನೆಯೂಟದ ನೆನಪು ತರಿಸುವಂತಿವೆ. 2026ರ ಜೂನ್ 5 ರಂದು ಹೋಟೆಲ್ನ ಭವ್ಯ ಉದ್ಘಾಟನಾ ಸಮಾರಂಭ ನೆರವೇರಿತ್ತು. ಆರ್ಸಿಬಿ (RCB) ಗೆಲುವಿನ ಸಂಭ್ರಮದ ಅಂಗವಾಗಿ ಜೂನ್ 8 ಮತ್ತು 9 ರಂದು ಎರಡು ದಿನ ಗ್ರಾಹಕರಿಗೆ ಬರೋಬ್ಬರಿ 50% ರಿಯಾಯಿತಿ…
ಕನ್ನಡ ಹಾಗೂ ತುಳು ಭಾಷೆ, ಸಾಹಿತ್ಯ, ಜಾನಪದ, ಸಂಶೋಧನಾ ಕ್ಷೇತ್ರಗಳಲ್ಲಿ ವಿದ್ವಾಂಸರಲ್ಲೊಬ್ಬರಾದ ಡಾ| ಶಿವರಾಮ ಶೆಟ್ಟಿಯವರು 2026 ನೇ ಸಾಲಿನ ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್ ಹೆಗ್ಡೆ ಇವರ ಜಂಟಿ ಹೆಸರಲ್ಲಿ ನೀಡಲಾಗುವ ಪ್ರಶಸ್ತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಪೊಳಲಿ ಶೀನಪ್ಪ ಹೆಗ್ಗಡೆ ಮತ್ತು ಎಸ್.ಆರ್ ಹೆಗ್ಡೆ ಇವರಿಬ್ಬರ ನೆನಪಿನಲ್ಲಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಮೂಲಕ ಈ ಪ್ರಶಸ್ತಿಯನ್ನು ನೀಡಲಾಗುವುದು. ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಜೂನ್ 20 ರಂದು ನಡೆಯಲಿರುವುದು. ಪ್ರಶಸ್ತಿಯು ರೂ.20,000/- ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ| ಬಿ. ಜಗದೀಶ್ ಶೆಟ್ಟಿ ತಿಳಿಸಿರುತ್ತಾರೆ. ಡಾ| ಶಿವರಾಮ ಶೆಟ್ಟಿಯವರು 1957ರ ಅಕ್ಟೋಬರ್ 3ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಬೋಳಾರದಲ್ಲಿ ಜನಿಸಿದರು. ತಂದೆ ದಿವಂಗತ ಬೋಳಾರ ಚಂದಪ್ಪ ಶೆಟ್ಟಿ ಹಾಗೂ ತಾಯಿ ದಿವಂಗತ ಸೇಸಮ್ಮ. ಇವರು ಮೈಸೂರು ವಿಶ್ವವಿದ್ಯಾನಿಲಯದಿಂದ ಮಂಗಳಗಂಗೋತ್ರಿಯ ಕನ್ನಡ ಸ್ನಾತಕೋತ್ತರ ಮತ್ತು ಸಂಶೋಧನಾ ಕೇಂದ್ರದ…
ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾ ನಗರದಲ್ಲಿ ರೋಟರಿ ಕ್ಲಬ್ ಮಣಿಪಾಲದ ಜಂಟಿ ಆಶ್ರಯದೊಂದಿಗೆ ಜೂನ್ ೫ ರಂದು ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನೊಲೊಜಿ ಮಾಹೆಯ ಸಹಾಯಕ ಪ್ರಾಧ್ಯಾಪಕ ನೌಷ ಶೆಟ್ಟಿಯವರು ಪ್ಲಾಸ್ಟಿಕ್ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಕ್ಲಬ್ ಮಣಿಪಾಲದ ಅಧ್ಯಕ್ಷೆ ಶ್ರೀಮತಿ ಶಶಿಕಲಾ ರಾಜವರ್ಮ ಪರಿಸರ ಸಂರಕ್ಷಣೆಯ ನಮ್ಮೆಲ್ಲರ ಹಕ್ಕು ಎಂದು ಮಾರ್ಗದರ್ಶನ ನೀಡಿದರು. ರೋಟರಿ ಕ್ಲಬ್ ಮಣಿಪಾಲದ ಕಾರ್ಯದರ್ಶಿ ವಾಣಿಶ್ರೀ ಹಾಗೂ ರೊಟೆರಿಯನ್ ರಾಜವರ್ಮ ಅರಿಗ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ನಂತರ ಗಿಡ ನೆಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಗಣೇಶ್ ಶೆಟ್ಟಿ, ಜೆ.ಇ.ಇ/ನೀಟ್ ಫೌಂಡೇಷನ್ ಸ್ಟ್ಯೂಡೆಂಟ್ ಕೋರ್ಡಿನೇಟರ್ ಶ್ರೀಮತಿ ಶಮಿತ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಪೃಕೃತಿ ಕಾರ್ಯಕ್ರಮ ನಿರ್ವಹಿಸಿ, ಗಣಿತ ಶಿಕ್ಷಕ ಕಿಶನ್ ನಾಯಕ್ ವಂದಿಸಿದರು.
ರೋಟರಿ ಕ್ಲಬ್ ಕಾರ್ಕಳ ವತಿಯಿಂದ ವಿದ್ಯಾರ್ಥಿಗೆ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಾರಾಡಿ ಇಲ್ಲಿ ನಡೆಯಿತು.ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಅವರು ಮಾತನಾಡಿ, ರೋಟರಿಯ ಧ್ಯೇಯ ವಾಕ್ಯ ಸ್ವಹಿತ ಮೀರಿದ ಸೇವೆ. ಸಮುದಾಯ ಸೇವೆಯಲ್ಲಿ ಸದಾ ತೊಡಗಿಸಿಕೊಂಡಿರುವ ರೋಟರಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ. ಚೆನ್ನಾಗಿ ಕಲಿತು ಮುಂದೊಂದು ದಿನ ನೀವು ಇನ್ನೊಬ್ಬರಿಗೆ ಸಹಾಯ ಮಾಡುವ ಗುಣವನ್ನು ಬೆಳೆಸಿಕೊಳ್ಳಿ ಎಂದರು. ಕಾರ್ಯಕ್ರಮದ ಪ್ರಾಯೋಜಕರಾದ ಸಮದ್ ಖಾನ್ ಮಾತನಾಡುತ್ತಾ, ಬಡತನ ಕಷ್ಟಗಳು ಅನೇಕ ಪಾಠಗಳನ್ನು ಕಲಿಸಿಕೊಡುತ್ತದೆ. ಅದೇ ಇಂದು ಇತರರಿಗೆ ಸಹಾಯ ಮಾಡಲು ನನಗೆ ಪ್ರೇರಣೆಯಾಗಿದೆ ಎಂದರು. ಕ್ಲಬ್ಬಿನ ಸಮುದಾಯ ಸೇವಾ ಚೇರ್ಮನ್ ವಸಂತ್ ಎಂ ಮಾತನಾಡಿ, ಇಂದು ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸಹಾಯ ಮಾಡುವ ದಾನಿಗಳು ಸಾಕಷ್ಟು ಇದ್ದಾರೆ. ಇದೆಲ್ಲವನ್ನು ಬಳಸಿಕೊಂಡು ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಕಲಿತು ದೇಶದ ಸತ್ಪ್ರಜೆಗಳಾಗಿ ಎಂದರು. ವೇದಿಕೆಯಲ್ಲಿ…















