Author: admin

ಮುಂಬಯಿಯ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ ಗೋರೆಗಾಂವ್ ಕರ್ನಾಟಕ ಸಂಘ 1958 ಅಕ್ಟೋಬರ್ 22 ರಲ್ಲಿ ನಿಸ್ವಾರ್ಥ ಮನೋಭಾವನೆಯ, ಸಮಾನ ಮನಸ್ಕರ ಮತ್ತು ಕನ್ನಡ ಅಭಿಮಾನಿಗಳ ಪ್ರಯತ್ನದಿಂದ ಪ್ರಾರಂಭವಾಯಿತು. ಮೊತ್ತ ಮೊದಲ ಸ್ಥಾಪಕ ಅಧ್ಯಕ್ಷರಾಗಿ ದಿ. ಮೂರೂರು ಸಂಜೀವ ಶೆಟ್ಟಿಯವರು ನೇಮಕಗೊಂಡಿದ್ದರು. ಈಗ ಅದರ 67 ನೇ ನಾಡಹಬ್ಬ ಹಾಗೂ ವಿಚಾರಗೋಷ್ಠಿಯನ್ನು ಮಲಾಡ್ ಪಶ್ಚಿಮದ ಸುಂದರ ನಗರದ ಡಿ. ಕೇತನ್ ಅಂತರಾಷ್ಟ್ರೀಯ ಸಭಾಗೃಹದಲ್ಲಿ ಬೆಳಗ್ಗೆಯಿಂದ ಸಾಯಂಕಾಲದ ತನಕ ಮಾರ್ಚ್ 1 ರಂದು ಸಂಭ್ರಮದಿಂದ ನಡೆಯಿತು. ಸಂಘದ ಅಧ್ಯಕ್ಷರಾದ ವಿಶ್ವನಾಥ ಎನ್ ಶೆಟ್ಟಿ ಅವರ ಮಾರ್ಗದರ್ಶನ ಹಾಗೂ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲಂಕರಿಸಿದ ಎಸ್ ನಿತ್ಯಾನಂದ ಹೆಗ್ಡೆ, ಮುಖ್ಯ ಅತಿಥಿಯಾಗಿ ನ್ಯಾಯವಾದಿ ಡಿ.ಕೆ ಶೆಟ್ಟಿ ಮತ್ತು ಇನ್ನಿತರ ಹಲವಾರು ಗಣ್ಯರು ಅತಿಥಿಗಳಾಗಿ ಭಾಗವಹಿಸಿದರು. ಆರಂಭಿಕವಾಗಿ ಸ್ವಾಗತ ಭಾಷಣದಿಂದ ಪ್ರಾರಂಭಗೊಂಡು, ಪ್ರಥಮವಾಗಿ ನ್ಯಾಯವಾದಿ ಡಿ.ಕೆ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ತನ್ನ ಭಾಷಣವನ್ನು ಕನ್ನಡದ ಕವಿ ಮಹಾಲಿಂಗರಂಗ ಈ ಭಟ್ಟರ ‘ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ…

Read More

ಮುಂಬಯಿ ಮಹಾನಗರದ ತುಳು ಕನ್ನಡಿಗರ ಮುಂದಾಳತ್ವದ ಸೇವಾ ಸಂಸ್ಥೆ ಶಿವಾಯ ಫೌಂಡೇಶನ್ ವತಿಯಿಂದ ಸಮಾಜದ ಪ್ರೇರಕ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಕೊಡ ಮಾಡುವ 2026 ರ ಸಾಲಿನ ಪ್ರೇರಣಾ ಪ್ರಶಸ್ತಿಗೆ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಸಾಮಾಜಿಕ ಧಾರ್ಮಿಕ ಕ್ಷೇತ್ರದಲ್ಲಿ ಸನಾತನ ಧರ್ಮವನ್ನು ಉಳಿಸಿ ಬೆಳೆಸುವಲ್ಲಿ ಅಣ್ಣಿ ಶೆಟ್ಟಿಯವರು ನೀಡುತ್ತಿರುವ ನಿರಂತರ ಸೇವೆಗಾಗಿ ಶಿವಾಯ ಸಂಸ್ಥೆಯು ಮಾರ್ಚ್ 15 ರಂದು ನಡೆಯಲಿರುವ ಶಿವಾಯ ಫೌಂಡೇಶನ್ ನ ಎಂಟನೇ ವಾರ್ಷಿಕೋತ್ಸವದ ಶಾರದಾ ಶ್ಯಾಮ್ ಶೆಟ್ಟಿ ದಂಪತಿಯ ಘನ ಸಿರಿ ವೇದಿಕೆಯಲ್ಲಿ ಅತಿಥಿ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಮಧ್ಯಾಹ್ನ 1:30 ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಕುಣಿತ ಭಜನಾ ಸ್ಪರ್ಧೆ, ಸಮೂಹ ಗಾಯನ ಸ್ಪರ್ಧೆ ಮತ್ತು ಟೀಮ್ ಐಲೇಸಾ ಸದಸ್ಯರಿಂದ ಊರಿನ ನುರಿತ ಹಾಡುಗಾರರಿಂದ ತುಳು ಕನ್ನಡ ರಸಮಂಜರಿ, ನೃತ್ಯ ಪ್ರದರ್ಶನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಜರಗಲಿದೆ. ಮುಂಬಯಿ ನಗರ…

Read More

ಬನ್ನಾಡಿ ಲಯನ್ಸ್ ಕ್ಲಬ್ ಗೆ ಲಯನ್ಸ್ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಭೇಟಿ ಕಾರ್ಯಕ್ರಮ ಫೆಬ್ರವರಿ 23ರಂದು ಸುಬ್ಬಣ್ಣ ಸಿಂಧೂ ಸಭಾಂಗಣದಲ್ಲಿ ನೆರವೇರಿತು. ಸಪ್ನಾ ಸುರೇಶ್ ಮಾತನಾಡಿ, ಗ್ರಾಮೀಣ ಭಾಗದ ಕ್ಲಬ್ ಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಬನ್ನಾಡಿ ಕ್ಲಬ್ ಕೂಡ ಉತ್ತಮ ಸೇವೆ ನೀಡಿದೆ ಎಂದರು. ಅತ್ಯುತ್ತಮ ಬಿ.ಎಲ್.ಒ ಪ್ರಶಸ್ತಿ ಪುರಸ್ಕೃತೆ ವಿಜಯಲಕ್ಷ್ಮೀ ಬನ್ನಾಡಿ, ಮಾನವೀಯ ಮೌಲ್ಯ ಪಾಲನೆ ನಿಟ್ಟಿನಲ್ಲಿ ಪ್ರವೀಣ್ ಹೆಗ್ಡೆ ಅವರನ್ನು ಗೌರವಿಸಲಾಯಿತು. ಲಯನ್ಸ್ ಮಾಜಿ ಗವರ್ನರ್ ಕೆ. ಸುರೇಶ್ ಪ್ರಭು, ವಿ.ಡಿ.ಜಿ ರಾಜೀವ ಕೋಟ್ಯಾನ್, ಪ್ರಾದೇಶಿಕ ಅಧ್ಯಕ್ಷ ರಜತ್ ಕುಮಾರ್ ಹೆಗ್ಡೆ, ಪ್ರಾದೇಶಿಕ ಕಾರ್ಯದರ್ಶಿ ಏಕನಾಥ ಬೋಳಾರ್, ಪ್ರಮುಖರಾದ ಸಂತೋಷ ಕುಮಾರ್ ಶೆಟ್ಟಿ, ದಿನಕರ ಶೆಟ್ಟಿ ಎಂ, ಕ್ಲಬ್ ಅಧ್ಯಕ್ಷ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಚಂದ್ರ ಶೆಟ್ಟಿ ಯಾಳಕ್ಕು, ಖಜಾಂಚಿ ನಿತೀಶ್ ಆಚಾರ್ಯ ಉಪಸ್ಥಿತರಿದ್ದರು. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಚಂದ್ರಶೇಖರ ಶೆಟ್ಟಿ ಕಲ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಬನ್ನಾಡಿ ಸೋಮನಾಥ ಹೆಗ್ಡೆ ಸಹಕರಿಸಿದರು. ಖಜಾಂಚಿ…

Read More

ಭ್ರಷ್ಟಾಚಾರ ಎನ್ನುವುದು ನೀಗದ ದಾಹವಿದ್ದಂತೆ. ಒಮ್ಮೆ ಭ್ರಷ್ಟಾಚಾರಕ್ಕೆ ಇಳಿದ ವ್ಯಕ್ತಿ ಎಷ್ಟೇ ಹಣ ಮಾಡಿದರೂ ಇನ್ನಷ್ಟು, ಮತ್ತಷ್ಟು ಹಣ ಮಾಡಬೇಕು ಎನ್ನುವ ದಾಹಕ್ಕಿಳಿಯುತ್ತಾನೆ. ನಮ್ಮ ಮಕ್ಕಳಿಗೆ ನೈತಿಕ ಪಾಠ ಕಲಿಸದಿದ್ದರೆ ಭ್ರಷ್ಟಾಚಾರವನ್ನು ನಿಯಂತ್ರಿಸಲು ಅಸಾಧ್ಯ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಜಸ್ಟೀಸ್ ಸಂತೋಷ್ ಹೆಗ್ಡೆ ತಿಳಿಸಿದರು. ಅವರು ಬನ್ನಾಡಿಯಲ್ಲಿ ಜರಗಿದ ಬನ್ನಾಡಿ ದಿ. ಪದ್ದು ಆಚಾರ್ ಸಂಸ್ಕರಣೆ, ಸಹಾಯಧನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧಿಕಾರ ಇದ್ದಾಗ ಅದನ್ನು ಪ್ರಾಮಾಣಿಕವಾಗಿ ಉಪಯೋಗಿಸಬೇಕು. ಬಡವರಿಗೆ ದುರ್ಬಲರಿಗೆ ಜನರ ನಡವಳಿಕೆ ಬದಲಾಗದೆ ದೇಶದಲ್ಲಿ ಬದಲಾವಣೆ ಬಯಸಲು ಅಸಾಧ್ಯ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಎಚ್ಚರಿಕೆ ಅಗತ್ಯ. ಅಸಮರ್ಥರನ್ನು ಆಯ್ಕೆ ಮಾಡಿ ದೇಶ ಬದಲಾಗಬೇಕೆಂದು ಕನಸು ಕಾಣುವುದು ಕೂಡಾ ದುರಂತ ಎಂದರು. ಈ ಸಂದರ್ಭ ಉತ್ತಮ ಬಿ.ಎಲ್.ಒ ರಾಜ್ಯ ಪ್ರಶಸ್ತಿ ಪುರಸ್ಕೃತ ವಿಜಯಲಕ್ಷ್ಮೀ ಶೆಟ್ಟಿ ಅವರನ್ನು ಗೌರವಿಸಲಾಯಿತು. ಅಶಕ್ತರಿಗೆ ಸಹಾಯಧನ ವಿತರಣೆ, ಪ್ರತಿಭಾ ಪುರಸ್ಕಾರ ನಡೆಯಿತು. ರೋಟರಿ ಸಹಾಯಕ ಗವರ್ನರ್ ಶ್ಯಾಮ್ ಸುಂದರ್ ನಾಯರಿ, ರೋಟರಿ ಕೋಟ…

Read More

ಆಂಧ್ರ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಜರುಗಿದ ಅಖಿಲ ಭಾರತ ಅಂತರ್ ವಿ.ವಿ ದೇಹದಾರ್ಢ್ಯ ಚಾಂಪಿಯನ್‌ ಶಿಪ್‌ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ಕಿಶನ್ ಶೆಟ್ಟಿ 90 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಹಾಗೂ ಪ್ರಥಮ್ 65 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಸಾಧನೆ ಮೆರೆದಿದ್ದಾರೆ. ಈ ಗಮನಾರ್ಹ ಸಾಧನೆಯಿಂದ ಮಂಗಳೂರು ವಿ.ವಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಕಿಶನ್ ಶೆಟ್ಟಿ ಅಂತರ್ ಕಾಲೇಜು ದೇಹದಾರ್ಢ್ಯ ಚಾಂಪಿಯನ್‌ ಶಿಪ್‌ನಲ್ಲಿ ಮಿಸ್ಟರ್ ಮಂಗಳೂರು ವಿ.ವಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು ಅಭಿನಂದಿಸಿದ್ದಾರೆ.

Read More

ತಾನೋರ್ವ ಉದ್ಯಮಿಯಾಗಬೇಕು, ತನ್ನ ಬಾಳಿಗೊಂದು ಭದ್ರ ತಳಪಾಯ ನಿರ್ಮಾಣ ಮಾಡಿಕೊಳ್ಳುವ ಮೂಲಕ ಬಡತನದಿಂದ ಮೇಲೆದ್ದು ತನ್ನ ಆದಾಯವನ್ನು ತಾನೇ ಸೃಷ್ಟಿಸಿಕೊಂಡು ಸಮಾಜದಲ್ಲಿ ಸಾಧಕರ ಸಾಲಿನಲ್ಲಿ ಗುರುತಿಸಿಕೊಳ್ಳಬೇಕೆಂಬ ಕನಸು ಕಂಡು ಕುಂದಾಪುದಿಂದ ಬೆಂಗಳೂರಿಗೆ ಬಂದು ಹಗಲು ರಾತ್ರಿ ಸಂಘರ್ಷದಿಂದ ಕೈಗಾರಿಕೋದ್ಯಮದಲ್ಲಿ ಯಶಸ್ಸು ಕಂಡ ಯುವಕನ ಜೀವನ ಗಾಥೆ ಇದು. ಮಂದಾರ್ತಿ ಶೀರೂರು ಶೇಖರ್ ಶೆಟ್ಟಿ ಹಾಗೂ ಹಳ್ನಾಡು ನಯನಾ ಶೆಟ್ಟಿ ದಂಪತಿಯ ಪುತ್ರ ಸಂಪತ್ ಶೆಟ್ಟಿಯವರು ಆರಂಭದಲ್ಲಿ ಉದ್ಯೋಗವನ್ನರಸಿಕೊಂಡು ಬೆಂಗಳೂರಿಗೆ ಬಂದಿದ್ದರೂ ತನಗೆ ಸೂಕ್ತ ಎನಿಸುವ, ತೃಪ್ತಿ ನೀಡುವ ಉದ್ಯೋಗ ಲಭಿಸದ ಕಾರಣ ಏನಾದರೂ ಸಣ್ಣ ಬಂಡವಾಳದಿಂದ ವ್ಯಾಪಾರ ಅಥವಾ ಉದ್ದಿಮೆ ಆರಂಭಿಸಬೇಕೆಂದು ಯೋಚಿಸಿದ ಸಂಪತ್ ತನಗೆ ಅನುಭವ ಇದ್ದ ಗೇರು ಬೀಜ ಸಂಸ್ಕರಣ ಉದ್ಯಮ ಆರಂಭಿಸಬೇಕೆನ್ನುವ ಮನೋ ಇಂಗಿತದೊಂದಿಗೆ ಜನಪ್ರಿಯ ಸಮಾಜ ಸೇವಕ, ಜನಪ್ರತಿನಿಧಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರಿಂದ ಆರಂಭಿಕ ಸಹಕಾರ ಕೋರಿದಾಗ ಹಾಲಾಡಿ ಶೆಟ್ಟರು ಸಂಪತ್ ಅವರಿಗೆ ಸಹಾಯ ಹಸ್ತ ನೀಡಿದರು. ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ವೈಯಕ್ತಿಕ…

Read More

ಬಹಳ ಹಿಂದಿನ ಕಾಲದಿಂದಲೂ ಕೇಳಿ ಬಂದ ಗಾದೆ ಮಾತು “ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ” ಎಂಬ ಮಾತೊಂದಿದೆ. ಇಂದಿನ ಜನಾಂಗಕ್ಕೆ ಅದು ಸರಿಯಾಗಿ ಒಪ್ಪುತ್ತದೆ. ‘ಹೆಣ್ಣು ಅಬಲೆಯಲ್ಲ ಸಬಲೆ’ ಎಂದು ಇಂದಿನ ನಾರಿ ಶಕ್ತಿ ಸಮಾಜಕ್ಕೆ ತೋರಿಸಿಕೊಟ್ಟಿದೆ. ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಿಯಾಳು ಎಂದು ಇತಿಹಾಸ ಹೇಳುತ್ತದೆ. ಕೇವಲ ಅಡುಗೆ ಮಾಡುತ್ತಾ ನಾಲ್ಕು ಗೋಡೆಗಳ ಮಧ್ಯೆ ಇದ್ದು ತನ್ನ ಜೀವನವೇ ಇಷ್ಟು ಎಂದು ಪರಿತಪಿಸುವ ಕಾಲ ಈಗ ಬದಲಾಗಿ ಹೆಣ್ಣು ಕೂಡಾ ಹೊರಗೆ ಹೋಗಿ ದುಡಿಯಬಲ್ಲಳು. ಏನು ಬೇಕಾದರೂ ಸಾಧಿಸಬಲ್ಲಳು ಎಂದು ಸಾಬೀತಾಗಿದೆ. ಒಂದು ಹೆಣ್ಣು, ತಂದೆ ತಾಯಿಯ ಮಮತೆಯ ಮಗುವಾಗಿ, ಗುರುವಿಗೆ ನೆಚ್ಚಿನ ವಿದ್ಯಾರ್ಥಿನಿಯಾಗಿ, ಗೆಳೆಯರಿಗೆ ಅತ್ಯುತ್ತಮ ಸಹಪಾಠಿಯಾಗಿ, ತನ್ನ ಕಾರ್ಯಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸಗಾರ್ತಿಯಾಗಿ, ಕೈ ಹಿಡಿದ ಗಂಡನ ಆದರ್ಶ ಮಡದಿಯಾಗಿ, ತನ್ನ ಮಕ್ಕಳ ಮುದ್ದಿನ ತಾಯಿಯಾಗಿ, ಅಳಿಯ ಸೊಸೆಯರ ಅಕ್ಕರೆಯ ಅತ್ತೆಯಾಗಿ, ಮೊಮ್ಮಕ್ಕಳ ಪ್ರೀತಿಯ ಅಜ್ಜಿಯಾಗಿ, ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಹೀಗೆ ಎಲ್ಲಾ…

Read More

ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ ಮಾರ್ಚ್ 4 ರಿಂದ 8ರವರೆಗೆ ನಡೆಯುವ ಬ್ರಹ್ಮಕಲಶೋತ್ಸವದಲ್ಲಿ ವಿವಿಧ ಬಗೆಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಈ ಸಂದರ್ಭ ಮಾರ್ಚ್ 7ರಂದು ಶನಿವಾರ ಅಪರಾಹ್ನ ಗಂ. 3 ರಿಂದ ಕಲಾ ಸೌರಭ ಮುಂಬಯಿ ಆಶ್ರಯದಲ್ಲಿ ‘ಶ್ರೀ ಭಗವತಿ ಅಮ್ಮ ಸ್ವರ ಸಂಗೀತಾಭಿಷೇಕ’ ಎಂಬ ಭಕ್ತಿ ಭಾವ, ಜಾನಪದ, ಯಕ್ಷಗಾಯನ ಹಾಗೂ ನೃತ್ಯ ರಂಜನೆಯ ವಿಶಿಷ್ಟ ಜುಗಲ್ಬಂದಿ ಕಾರ್ಯಕ್ರಮವನ್ನು ಸಂಯೋಜಿಸಲಾಗಿದೆ. ಮುಂಬಯಿ ಕಲಾ ಸೌರಭದ ರೂವಾರಿ, ಹೆಸರಾಂತ ಸಂಗೀತ ನಿರ್ದೇಶಕ ಮತ್ತು ಗಾಯಕ ಪದ್ಮನಾಭ ಸಸಿಹಿತ್ಲು ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಕಾರ್ಯಕ್ರಮ ಮೂಡಿಬರಲಿದೆ. ಹಿರಿಯ ಕವಿ, ಲೇಖಕ ಮತ್ತು ಯಕ್ಷಗಾನ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಸಮಗ್ರ ನಿರೂಪಣೆಯಿದ್ದು, ಪ್ರಸಿದ್ಧ ಕೀಬೋರ್ಡ್ ವಾದಕ ಸತೀಶ್ ಸುರತ್ಕಲ್ ಮತ್ತು ಸಂಗಡಿಗರು ಹಿನ್ನೆಲೆ ಸಂಗೀತ ಒದಗಿಸುವರು. ‘ಸ್ವರ ಸಂಗೀತಾಭಿಷೇಕ’ವನ್ನು ಭಕ್ತಿ ಭಾವ ಗಾನಸುಧೆ, ಜಾನಪದ ಹಾಡು, ತೆಂಕು ಬಡಗು ಯಕ್ಷ ಸಂಗೀತ…

Read More

ಸಂಚಾರ ಸುರಕ್ಷತೆ ಎಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ರಸ್ತೆಯು ನಮ್ಮ ಹಕ್ಕಲ್ಲ ಅದು ಸರಕಾರ ನೀಡಿದ ಸವಲತ್ತು, ಮನೆಯಿಂದ ಹೊರಟವರು ಸುರಕ್ಷಿತವಾಗಿ ಹಿಂತಿರುಗಿ, ನಿಮ್ಮನ್ನು ನಂಬಿಕೊಂಡ ನಿಮ್ಮ ಕುಟುಂಬವಿದೆ. ಆದುದರಿಂದ ಸಂಚಾರ ನಿಯಮಗಳನ್ನು ಪಾಲಿಸಿ, ನೀವು ಸುರಕ್ಷಿತವಾಗಿರುವುದರ ಜೊತೆಗೆ ಇತರರು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಿ ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಉಡುಪಿ ಇಲ್ಲಿನ ವಾಹನ ನಿರೀಕ್ಷಕ ಶ್ರೇಯಸ್ ಕುಮಾರ್ ಕೆ ಹೇಳಿದರು. ಅವರು ರೋಟರಿ ಕ್ಲಬ್ ಕಾರ್ಕಳ, ಪ್ರಾದೇಶಿಕ ಸಾರಿಗೆ ಇಲಾಖೆ ಉಡುಪಿ ಜಿಲ್ಲೆ ಹಾಗೂ ಪೋಲೀಸ್ ಇಲಾಖೆ ಕಾರ್ಕಳ ಇವರ ಸಹಯೋಗದೊಂದಿಗೆ ಕಾರ್ಕಳ ಬಸ್ ನಿಲ್ದಾಣದಲ್ಲಿ ನಡೆದ ರಸ್ತೆ ಸಂಚಾರ ಸುರಕ್ಷತಾ ಅಭಿಯಾನ ಕಾರ್ಯಕ್ರಮದಲ್ಲಿ ಚಾಲಕರು ಹಾಗೂ ಜನತೆಗೆ ರಸ್ತೆ ಸುರಕ್ಷತೆ ಬಗ್ಗೆ ಅಮೂಲ್ಯ ಮಾಹಿತಿಯನ್ನು ನೀಡಿ ಮಾತನಾಡುತ್ತಿದ್ದರು. ಕಾರ್ಕಳ ನಗರ ಆರಕ್ಷಕ ಠಾಣೆಯ ಉಪನಿರೀಕ್ಷಕ ಮುರಳಿಧರ್ ನಾಯಕ್ ಮಾತನಾಡುತ್ತಾ, ವಾಹನ ಚಲಾವಣೆಯಲ್ಲಿ ತಾರತಮ್ಯ ಬೇಡ, ಸಣ್ಣ ವಾಹನ ದೊಡ್ಡ ವಾಹನ ಎಲ್ಲವೂ ಸಮಾನ, ಎಲ್ಲರ ಜೀವವು ಅತ್ಯಂತ ಅಮೂಲ್ಯ, ಚಾಲಕರು…

Read More

ಮೊನ್ನೆಯ ಪತ್ರಿಕೆಯಲ್ಲಿನ ಒಂದು ಸುದ್ದಿ ಹೀಗಿತ್ತು. ಲಕ್ನೋದಲ್ಲಿ ನೀಟ್ ಪರೀಕ್ಷೆಗೆ ಓದು ಎಂದ ತಂದೆಯನ್ನೇ ಮಗ ಗುಂಡಿಕ್ಕಿ ಕೊಂದ. ಒಮ್ಮೆ ಆಶ್ಚರ್ಯವೆನಿಸಬಹುದು. ಆದರೆ ಹೀಗೆ ಕೊಂದು ಪ್ರಾಣ ತೆಗೆದ ಪ್ರಕರಣಗಳು ಕೆಲವೇ ಇದ್ದರೆ, ತಂದೆ ತಾಯಿಯ ಮಾತು ಕೇಳದ ಇಂತಹ ಇಚ್ಚಾನುಸಾರಿ, ಬೇಜವಾಬ್ದಾರಿ ಮಕ್ಕಳ ವಿಪರೀತ ಬುದ್ದಿಗೆ ಬದುಕಿಯೂ ಸತ್ತ ಮಂದಿಗಳಿರುವ ಮನೆಗಳ ಕತೆ ಬಹಳಷ್ಟಿದೆ. ಬಡತನ, ಹೀಯಾಳಿಕೆ, ಕಷ್ಟ ನಷ್ಟಗಳಿಂದ ಬಳಲಿ ಕೊರಗಿ ಕೊನೆಗೆ ಪ್ರಯತ್ನ ಮತ್ತು ಹಠದಿಂದ ನೆಲದಿಂದ ಮೇಲಕ್ಕೆದ್ದು ಹಾಗೋ ಹೀಗೋ ತಮ್ಮ ಮಕ್ಕಳನ್ನು ರಾಜನ ತರಹ ಬೆಳೆಸಿದ ತಂದೆ ತಾಯಿಯಂದಿರು ತಾವು ಪಟ್ಟ ಪಡಿಪಾಟೀಲು ತಮ್ಮ ಮಕ್ಕಳು ಅನುಭವಿಸಬಾರದು ಎಂದು ಹೈಫೈ ಇಂಗ್ಲೀಷ್ ಮಾಧ್ಯಮ ಶಾಲೆ ಕಾಲೇಜ್ ಗಳಲ್ಲಿ ಓದಿಸುತ್ತಾರೆ. ಉದ್ದೇಶ ಇಷ್ಟೇ ತಾನು ಅನುಭವಿಸಿದ ಯಾತನೆ ನಮ್ಮ ಮಕ್ಕಳು ಅನುಭವಿಸಬಾರದು. ಸಮಾಜದಲ್ಲಿ ಯೋಗ್ಯತೆಯ ಉನ್ನತ ಸ್ಥಾನಮಾನ ಪಡೆದುಕೊಂಡು ತಮ್ಮ ಮಕ್ಕಳು ಗುರುತಿಸಿಕೊಳ್ಳಬೇಕು ಮತ್ತು ಆ ಮಕ್ಕಳ ತಂದೆ ತಾಯಿ ಎಂದು ನಮ್ಮನ್ನು ನಾಲ್ಕು ಜನ…

Read More