Author: admin

ಅಭಯ ಸೇವಾ ಫೌಂಡೇಶನ್ ವತಿಯಿಂದ ಡಿಸೆಂಬರ್ 19, 20 ಮತ್ತು 21 ರಂದು ನಡೆಯಲಿರುವ ಸೇವಾ ಸಂಕಲ್ಪ ಕಾರ್ಯಕ್ರಮದ ಪೋಸ್ಟರ್ ಅನಾವರಣ ಕಾರ್ಯಕ್ರಮ ನವೆಂಬರ್ 08 ರಂದು ನಡೆಯಿತು. ಉದ್ಯಮಿ ಇರ್ಮಾಡಿ ಜಯಪ್ರಸಾದ್ ಶೆಟ್ಟಿ, ಅಭಯ ಸೇವಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಎಂ. ಬಿ. ಉಮೇಶ್ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಡಿ. ಚಂದ್ರಹಾಸ್ ರೈ ನಿಕಟಪೂರ್ವ ಬೆಂಗಳೂರು ಮಹಾನಗರ ಪಾಲಿಕೆ ಸದಸ್ಯ ಕೆ. ಉಮೇಶ್ ಶೆಟ್ಟಿ, ಬಿಜೆಪಿ ಮುಖಂಡರಾದ ಬೇಳೂರು ರಾಘವೇಂದ್ರ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಉಪಾಧ್ಯಕ್ಷರಾದ ಸಂತೋಷ್ ಶೆಟ್ಟಿ, ಬಿಜೆಪಿ ಮಹಿಳಾ ಮುಖಂಡರಾದ ಕಾಂತಿ ಶೆಟ್ಟಿ, ಕನ್ನಡಪರ ಹೋರಾಟಗಾರ ಶಿವಾನಂದ ಶೆಟ್ಟಿ, ಆರ್.ಎಸ್.ಎಸ್ ಮುಖಂಡರಾದ ಸುರೇಶ್ ರವರು ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಭಯ ಸೇವಾ ಫೌಂಡೇಶನ್ ಬಡವರ, ನೊಂದವರ ಸೇವೆ ಮಾಡಲು ಮತ್ತು ಸಂಸ್ಕೃತಿಯನ್ನು ಉಳಿಸಲು ಕಂಕಣಬದ್ಧವಾಗಿದ್ದು, ಕಳೆದ ವರ್ಷ ಸೇವಾ ಸಂಕಲ್ಪ ಕಾರ್ಯಕ್ರಮವನ್ನು ಹಮ್ಮಿಕೊಂಡು…

Read More

2026 ನೇ ಸಾಲಿನ ಜೇಸಿಐ ಕಾರ್ಕಳದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಜೇಸಿ ಅವಿನಾಶ್ ಜಿ ಶೆಟ್ಟಿ, ಕಾರ್ಯದರ್ಶಿಯಾಗಿ ಸುಶಾಂತ್ ಶೆಟ್ಟಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಸುಶ್ಮಿತಾ ರಾವ್, ರಕ್ಷಿತಾ ರಾವ್, ಶಿವಕುಮಾರ್, ಶಾಹಿನ್ ರಿಜ್ವಾನ್ ಖಾನ್, ರೇವತಿ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ರಿಜ್ವಾನ್ ಖಾನ್, ಕೋಶಾಧಿಕಾರಿಯಾಗಿ ಮಂಜುನಾಥ್ ಡಿ, ಚುನಾವಣಾ ಕಮಿಟಿಯ ಛೇರ್ಮನ್ ಪ್ರಚಿತ್ ಕುಮಾರ್ ಹಾಗೂ ಸದಸ್ಯರಾದ ವಿಜ್ಞೇಶ್ ಪ್ರಸಾದ್, ಡಾ. ಮುರಳೀಧರ ಭಟ್ ಇವರ ಚುನಾವಣಾ ಪ್ರಕ್ರಿಯೆ ನಡೆಸಿ, ಜೆಸಿಐ ಕಾರ್ಕಳದ ಅಧ್ಯಕ್ಷೆ ಜೇಸಿ ಶ್ವೇತಾ ಜೈನ್ ಇವರು ಎಲ್ಲಾ ಪೂರ್ವಾಧ್ಯಕ್ಷರ ಸಮ್ಮುಖದಲ್ಲಿ ಅಧಿಕೃತವಾಗಿ ಘೋಷಣೆ ಮಾಡಿದರು. ಅಧ್ಯಕ್ಷರಾಗಿ ಆಯ್ಕೆಯಾದ ಉದ್ಯಮಿ ಅವಿನಾಶ್ ಜಿ. ಶೆಟ್ಟಿಯವರು ಅಮ್ಮನ ನೆರವು ಎಂಬ ಚಾರಿಟೇಬಲ್ ಟ್ರಸ್ಟ್ ನ್ನು ಸ್ಥಾಪಿಸಿ, ಹಲವಾರು ವಿದ್ಯಾರ್ಥಿಗಳಿಗೆ ಹಾಗೂ ಬಡ ಕುಟುಂಬಗಳಿಗೆ ನೆರವಾಗುತ್ತಿರುವ ಸಮಾಜ ಸೇವಕ, 2025 ನೇ ಸಾಲಿನ ಸಾಧನಶ್ರೀ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಕಾರ್ಯದರ್ಶಿಯಾಗಿ ಆಯ್ಕೆಯಾದ ಸುಶಾಂತ್ ಶೆಟ್ಟಿಯವರು ಯುವ ಉದ್ಯಮಿಯಾಗಿದ್ದು ರಾಷ್ಟ್ರೀಯ…

Read More

ಉಡುಪಿ ಜಿಲ್ಲಾ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ತಾಲೂಕು ಪಂಚಾಯತ್ ಸದಸ್ಯ, ಗ್ರಾಮ ಪಂಚಾಯತ್ ಅಧ್ಯಕ್ಷ, ಉಪ್ಪೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಶ್ರೀ ಎನ್ ರಮೇಶ್ ಶೆಟ್ಟಿ ಹಾವಂಜೆಯವರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ (ನಿ) ಬೆಂಗಳೂರು ಇವರ ವತಿಯಿಂದ ಸಹಕಾರ ಕ್ಷೇತ್ರದಲ್ಲಿ ಸಾಧನೆಗಾಗಿ 2025 ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Read More

ಬ್ರಹ್ಮಾವರ ನ. 14: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‍ನಲ್ಲಿ ಮಕ್ಕಳ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಫೆÇ್ರ. ಡಾ. ಈಶ್ವರೀ ಕೆ. ಆಗಮಿಸಿದ್ದರು. ಅವರು ಚಿಣ್ಣರ ಹಬ್ಬವನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡಿ ಪೆÇೀಷಕರಿಗೆ ದೇವರು ಕೊಟ್ಟ ಅತ್ಯಮೂಲ್ಯವಾದ ಕೊಡುಗೆ ಎಂದರೆ ಮಕ್ಕಳು. ನಿಮ್ಮೆಲ್ಲರ ನಗುವನ್ನು ನೋಡುವಾಗ ಎಲ್ಲಾ ಚಿಂತೆಗಳು ಮರೆತುಹೋಗುತ್ತದೆ. ನೀವೆಲ್ಲರೂ ಆರೋಗ್ಯ ಮತ್ತು ಜ್ಞಾನದ ಸಂಪಾದನೆಗೆ ಪ್ರಾಮುಖ್ಯತೆಯನ್ನು ಕೊಡಬೇಕು. ಯಾವುದೇ ಉನ್ನತ ಹುದ್ದೆಯನ್ನು ಪಡೆದರೂ ಇತರರ ಬಗ್ಗೆ ಕರುಣೆ ನಿಮ್ಮಲ್ಲಿರಬೇಕು. ಸಾಮಾಜಿಕ ಮಾಧ್ಯಮಗಳನ್ನು ಜವಾಬ್ದಾರಿಯಿಂದ ಸಕಾರಾತ್ಮಕವಾಗಿ ಬಳಕೆ ಮಾಡಬೇಕೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿಯವರು ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆಯ ಶುಭಾಶಯ ತಿಳಿಸಿ ವಿದ್ಯಾರ್ಥಿಗಳಿಗೆ ಪೆÇೀಷಕರು, ಹಿರಿಯರು ಮತ್ತು ಶಿಕ್ಷಕರು ನೀಡುವ ಒಳ್ಳೆಯ ಸಲಹೆಗಳನ್ನು ಆಲಿಸಿರಿ ಮತ್ತು ಪಾಲಿಸಿರಿ ಎಂದು ತಿಳಿಸಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ನೀವೆಲ್ಲರೂ ಇಂದು ಹೊಸ ಚೈತನ್ಯದೊಂದಿಗೆ…

Read More

ತೆನ್ಕಾಯಿದಗುಲು “ಎಂಕು ಪನಂಬೂರುಗು ಪೋಯಿಲೆಕ್ಕ” ಪಂಡೆರ್ ಡ, ಬಡಕಾಯಿದಗುಲು “ಕುಟ್ಟಿ ಕುಂದಾಪುರೊಗು ಪೋಯಿಲೆಕ್ಕ” ಪನ್ಪೆರ್. ಎಂಕುಲು ಅಂಚಿಲಾತ್ತ್, ಇಂಚಿಲಾತ್ತ್, ಮದ್ಯದಗುಲು. ಅಂಚಾದ್ ಅಂಚಿ ಎಂಕುನುಲಾ ಇಂಚಿ ಕುಟ್ಟಿನ್ ಲಾ ಪತೊಂದ. ಅಂಡ ಇ ಮದ್ಯೊಡು ಬೊಗ್ರೆ ಒಲ್ತು ಬತ್ತೆ? ನಿಗಲೆಗ್ ಎಚ್ಚಿನಗಲೆಗ್ ಎಂಕುನ ಕತೆ ಗೊತ್ತಿಪ್ಪು. ಒಂಜಿ ದಿನ ರಾತ್ರೆಡ್ ಉನಸ್ ಆದ್ ಜೆಪ್ಪರೆ ಪಜೆ ಬುಡ್ಪಾನಗ ಇಲ್ಲ ಗುರ್ಕಾರಗ್ ಪನಂಬೂರುಡು ದಾದನ ಜಂಬರದ ನಿನೆಪು ಆಂಡ್. ಬುಡೆದಿಡ ಪಂಡೆಗೆ “ಅಂದದೆ, ಎಲ್ಲೆ ಎಂಕುನು ಪನಂಬೂರುಗು ಕಡಪುಡೊಡು”. ಉಂದೆನ್ ಬೇಲೆದ ಎಂಕು ಓಂಗೆರ್ಯೆ (ಕೇಂಡೆ). ಮನದಾನಿ ಎಂಕು ನೆಲಪುಲ್ಯೊಕ್ಕೆಲ್ ಗ್ ಲಕ್ ದ್, ಕೂಲಿ ಮೋನೆ ದೆಕ್ ದ್, ತುತ್ತೈತ ಪಾಡೊಂದು ಪನಂಬೂರುಗು ಪಿದಾಡಿಯೆ. ಗುರ್ಕಾರೆ ಕಾಂಡೆ ಲಕ್ ದ್ ತೂನಗ, ಪಜೆಟ್ ಎಂಕು ಇಜ್ಜೆ. ಪೊರ್ತು ಪಡ್ಡಾಯಿ ದಂಗ್ ನಗ (ಮದ್ಯಾನ್ನ ಕಡತ್ ದ್) ಡಿಂಗ್ ಡಿಂಗ್ಂದ್ ಬತ್ತೆ ಇಲ್ಲಗ್ ಎಂಕು. “ಅಂದಂಬೆ ಎಂಕೊ, ದೂರ ಪೋದ್ ಬತ್ತಿನ್ಯುಂಬೆ?” ಕೇಂಡೆ…

Read More

ಇದು ಯಾವುದೇ ಆರಾಧನಾ ಪದ್ಧತಿಯನ್ನು ವೈಭವಿಕರಿಸುವ ಅಥವಾ ಕನಿಷ್ಠ ಅಂತ ಹೇಳುವ ಉದ್ದೇಶದಿಂದ ಬರೆದದ್ದು ಅಲ್ಲ. ವೈದಿಕರು ಮಾಡುವ ದೇವರ ಆರಾಧನೆ ಹಾಗೂ ಅವೈದಿಕ, ತೌಳವರು ಮಾಡುವ ದೈವಗಳ (ಭೂತಗಳ ಅಥವಾ ಸತ್ಯಗಳ) ಆರಾಧನೆ ಎರಡು ಸಂಪೂರ್ಣ ಬೇರೆ ಬೇರೆ. ವೈದಿಕರು ಮಾಡುವ ದೇವರ ಆರಾಧನೆ ಆಗಮ ಶಾಸ್ತ್ರದ ಪ್ರಕಾರ ಆದರೆ, ತೌಳವರು ಮಾಡುವ ದೈವಗಳ ಆರಾಧನೆ ಯಾವುದೇ ಗ್ರಂಥಗಳ ಪ್ರಕಾರ ನಡೆಯುವಂತದ್ದಲ್ಲ. ಇಲ್ಲೊಂದು ಆಲಿಖಿತ ತಲೆತಲಾಂತರದಿಂದ ಬಂದಿರುವ ನಿಯಮವಿದೆ. ವೈದಿಕರು ತುಳುನಾಡಿಗೆ ಬರುವ ಮೊದಲೇ ಈ ಮಣ್ಣಿನಲ್ಲಿ ದೈವಗಳ ಆರಾಧನೆ ನಡೆಯುತ್ತಿತ್ತು. ನಮ್ಮ ಆರಾಧನಾ ಪದ್ಧತಿ ಬಹಳ ಸರಳ. “ಗುಡ್ಡದ ಪೂ, ತೋಡುದ ನೀರ್” ಇಷ್ಟರಿಂದಲೇ ಸಂತೃಪ್ತರಾಗುತ್ತಿದ್ದವು ನಮ್ಮ ದೈವಗಳು. ಇದರಲ್ಲಿ ಭಾಗವಹಿಸುವರು, ಗಡಿಕಾರರು, ಬಿಲ್ಲವರು, ಮಡಿವಾಳರು ಮತ್ತು ಕೆಲೆಸಿಗಳು. ದೈವಗಳನ್ನು ಶುದ್ಧೀಕರಿಸುವುದಕ್ಕೂ ಪುಣ್ಯಾರ್ಚನೆ ಇತ್ಯಾದಿಗಳ ಅಗತ್ಯ ಇಲ್ಲ. ಬಿಲ್ಲವರು ಮತ್ತು ಮಡಿವಾಳರೆ ಮಾಡುತ್ತಿದ್ದರು. ನಿಜಕ್ಕಾದರೆ ದೈವಗಳನ್ನು ಶುದ್ಧೀಕರಿಸುವ ಅಗತ್ಯವೇ ಇಲ್ಲ, ಅವುಗಳು ಶುದ್ಧವಾಗಿಯೆ ಇರುತ್ತದೆ. ಶುದ್ಧೀಕರಿಸಬೇಕಾದದ್ದು ನಮ್ಮನ್ನು ನಾವು.…

Read More

ಶಿಕ್ಷಣ, ಕ್ರೀಡೆ, ಸಂಸ್ಕೃತಿ ಸಂಗಮವಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಬುಧವಾರ ಬೆಳಕಿನ ಹಬ್ಬವಾದ ‘ಆಳ್ವಾಸ್ ದೀಪಾವಳಿ-2025’ರ ಸೊಬಗು. ಅದು ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರ ಪರಿಕಲ್ಪನೆಯ ಬೌದ್ಧಿಕ, ಭೌತಿಕ ಹಾಗೂ ಬಾಂಧವ್ಯ ಬೆಳೆಸುವ ಬೆಳಕು. ಸರ್ವ ಧರ್ಮಗಳ ಸಮಭಾವ, ಭಾರತೀಯತೆಯ ಭ್ರಾತೃತ್ವ, ಸೌಹಾರ್ದತೆಯ ಸಮಗ್ರತೆ ಎಂಬಂತೆ ಸರ್ವ ಧರ್ಮೀಯರ ಹಾಗೂ ದೇಶದ ಐಕ್ಯತೆಯ ಹಬ್ಬಗಳನ್ನು ಆಚರಿಸಿಕೊಂಡು ಬಂದಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಬುಧವಾರ ಸಂಜೆ ಇಲ್ಲಿನ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲುರಂಗ ಮಂದಿರದಲ್ಲಿ ‘ಆಳ್ವಾಸ್ ದೀಪಾವಳಿ-2025’ ಸಂಭ್ರಮಿಸಿತು. ನೇಸರ ಇಳಿಜಾರುವ ಮುಸ್ಸಂಜೆಯಲ್ಲಿ ಆಳ್ವಾಸ್ ಅಂಗಣದಲ್ಲಿ ಸೇರಿದ್ದ ವಿದ್ಯಾರ್ಥಿ ಸಾಗರವು ಮಿನುಗುವ ಭವಿಷ್ಯದ ತಾರೆಗಳಂತೆ ಕಣ್ಮನ ಸೆಳೆಯಿತು. 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿದಂತೆ ಪೋಷಕರು, ಸ್ಥಳೀಯರು ಸೇರಿ 25 ಸಾವಿರಕ್ಕೂ ಅಧಿಕ ಜನರ ಸಮ್ಮುಖದಲ್ಲಿ ದೀಪಾವಳಿಯು ತನು ಮನ ಬೆಳಗಿತು. ಕೊಂಬು, ಕಹಳೆ, 30 ಶ್ವೇತ ಛತ್ರಿ ಚಾಮರದ ಜೊತೆ,…

Read More

ಬಂಟರ ಸಂಘ ಬೆಂಗಳೂರು ಇದರ ಆಶ್ರಯದಲ್ಲಿ ದೀಪಾವಳಿ ಸಂಭ್ರಮಾಚರಣೆಯ ಪ್ರಯುಕ್ತ ನಡೆದ ಅಂತರ್ ಬಂಟರ ಸಂಘಗಳ ಸಾಂಸ್ಕೃತಿಕ ನಾಟ್ಯ ಕಥಾ ರೂಪಕ ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘ 1,50,000 ನಗದಿನೊಂದಿಗೆ ಶಾಶ್ವತ ಫಲಕದೊಂದಿಗೆ ಪ್ರಥಮ ಸ್ಥಾನವನ್ನು ಗಳಿಸಿದೆ. ಪ್ರಶಸ್ತಿಯನ್ನು ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸಿಎ ಅಶೋಕ್ ಶೆಟ್ಟಿ ಎಂ, ಸಾಂಸ್ಕೃತಿಕ ಸಮಿತಿಯ ಚೇರ್ ಪರ್ಸನ್ ರಮೇಶ್ ಶೆಟ್ಟಿ, ಸಂಘದ ಗೌರವ ಕಾರ್ಯದರ್ಶಿ ವಿಜಯ ಜೆ ಶೆಟ್ಟಿ ಹಾಲಾಡಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಸಂತೋಷ್ ಶೆಟ್ಟಿ ತಲೇಕಳ ಅವರು ಪ್ರಶಸ್ತಿಯನ್ನು ವಿತರಿಸಿದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಮಾಜಿ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ, ಸಂಘದ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ, ಕೋಶಾಧಿಕಾರಿ ರತ್ನಾಕರ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ದೇವೇಂದ್ರ ಶೆಟ್ಟಿ, ಮಹಿಳಾ ವೇದಿಕೆಯ ಸಾಂಸ್ಕೃತಿಕ ಕಾರ್ಯದರ್ಶಿ ಆಶಾಕಿರಣ್ ಪ್ರಸಾದ್ ರೈ, ಮಹಿಳಾ ವೇದಿಕೆಯ ಅಧ್ಯಕ್ಷೆ ಸರೋಜ ಟಿ ಶೆಟ್ಟಿ…

Read More

ಬಂಟರ ಸಂಘ ಬೆಂಗಳೂರು ಇದರ ಆಶ್ರಯದಲ್ಲಿ ದೀಪಾವಳಿ ಸಂಭ್ರಮಾಚರಣೆಯ ಪ್ರಯುಕ್ತ ನಡೆದ ಅಂತರ್ ಬಂಟರ ಸಂಘಗಳ ಸಾಂಸ್ಕೃತಿಕ ನಾಟ್ಯ ಕಥಾ ರೂಪಕ ಸ್ಪರ್ಧೆಯಲ್ಲಿ ಕಾರ್ಕಳ ಬಂಟರ ಸಂಘ 75,000 ನಗದಿನೊಂದಿಗೆ ಶಾಶ್ವತ ಫಲಕದೊಂದಿಗೆ ದ್ವಿತೀಯ ಸ್ಥಾನವನ್ನು ಗಳಿಸಿದೆ. ಪ್ರಶಸ್ತಿಯನ್ನು ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸಿಎ ಅಶೋಕ್ ಶೆಟ್ಟಿ ಎಂ, ಸಾಂಸ್ಕೃತಿಕ ಸಮಿತಿಯ ಚೇರ್ ಪರ್ಸನ್ ರಮೇಶ್ ಶೆಟ್ಟಿ, ಸಂಘದ ಗೌರವ ಕಾರ್ಯದರ್ಶಿ ವಿಜಯ ಜೆ ಶೆಟ್ಟಿ ಹಾಲಾಡಿ, ಉಪಾಧ್ಯಕ್ಷೆ ಕಾಂತಿ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಸಂತೋಷ್ ಶೆಟ್ಟಿ ತಲೇಕಳ ಅವರು ಪ್ರಶಸ್ತಿಯನ್ನು ವಿತರಿಸಿದರು. ಕಾರ್ಕಳ ಬಂಟರ ಸಂಘದ ಅಧ್ಯಕ್ಷ ವಿಜಯ್ ಶೆಟ್ಟಿ, ಮಹಿಳಾ ಅಧ್ಯಕ್ಷೆ ಪೂರ್ಣಿಮಾ ಹೆಗ್ಡೆ, ವಂದನಾ ರೈ ಕಾರ್ಕಳ, ಸುಹಾಸ್ ಶೆಟ್ಟಿ ಮತ್ತಿತರರು ಪ್ರಶಸ್ತಿ ಸ್ವೀಕರಿಸಿದರು.

Read More

ಬಹುನಿರೀಕ್ಷಿತ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ “45” ಸಿನಿಮಾದ ಆಫ್ರೋ ಟಪಂಗ್ ಹಾಡಿನ ಪ್ರಮೋಷನ್ ಗಾಗಿ ಆಗಮಿಸಿದ್ದ ಚಿತ್ರತಂಡ ಫೋರಂ ಫಿಜಾ ಮಾಲ್ ನಲ್ಲಿ ನೆರೆದಿದ್ದ ಸಿನಿಮಾ ಪ್ರೇಮಿಗಳು ಮತ್ತು ಅಭಿಮಾನಿಗಳನ್ನು ಮೋಡಿ ಮಾಡಿತು. ನಿರ್ದೇಶಕ ಅರ್ಜುನ್ ಜನ್ಯ, ರಾಜ್ ಬಿ ಶೆಟ್ಟಿ, ಗಾಯಕರಾದ ನಿಶಾನ್ ರೈ, ಎಂ.ಸಿ.ಬಿಜು ಅವರಿಗೆ ಅನುಶ್ರೀ ಸಾಥ್ ನೀಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ಹಾಡಿನ ನೃತ್ಯ ಪ್ರದರ್ಶನ ನೆರೆದಿದ್ದವರ ಮನಸೂರೆಗೊಂಡಿತು. ಹಾಡಿಗೆ ರಾಜ್ ಬಿ ಶೆಟ್ಟಿ ಟಪಾಂಗುಚ್ಚಿ ಕುಣಿಯುವ ಮೂಲಕ ಆಕರ್ಷಣೆ ಹೆಚ್ಚಿಸಿದ್ದು ವಿಶೇಷವಾಗಿತ್ತು. ಬಳಿಕ ಮಾಧ್ಯಮಗಳ ಜೊತೆಗೆ ಮಾತಾಡಿದ ಅರ್ಜುನ್ ಜನ್ಯ ಅವರು, ಮಂಗಳೂರಿನ ಜನ ಬಹಳ ಒಳ್ಳೆಯವರು. ಇಲ್ಲಿಗೆ ಪ್ರತೀ ಬಾರಿ ಬಂದಾಗಲೂ ಒಳ್ಳೆಯ ಫೀಲ್ ಉಂಟಾಗುತ್ತೆ. ಹಾಗಾಗಿ ಸಿನಿಮಾದಲ್ಲಿ ನಿಶಾನ್ ರೈ ಬರೆದಿರುವ ತುಳು ಸಾಹಿತ್ಯವಿರುವ ಹಾಡನ್ನು ಅಳವಡಿಸಲಾಗಿದೆ. ಈಗಾಗಲೇ ಹಾಡು 25 ಮಿಲಿಯನ್ ವೀಕ್ಷಣೆ ಪಡೆಯುವ ಸನಿಹದಲ್ಲಿಯುವುದು ಖುಷಿ ಎನಿಸುತ್ತಿದೆ. ಚಿತ್ರವು ಡಿಸೆಂಬರ್ 25ರಂದು ಬಿಡುಗಡಯಾಗುತ್ತಿದೆ…

Read More