Author: admin

ನಮ್ಮ ತುಳುನಾಡ್ದ ಜನೊಕ್ಕುಲೆನ ಸಂಪ್ರದಾಯೊಡು, ಕ್ರಿಷಿ, ದೈವ ದೇವತಾರಾಧನೆ, ಆಟ ಕೂಟ, ಕಂಬುಳ, ಕೋರ್ದಟ್ಟ ಇಂಚಿನ ಮಾತ ಒಂಜೊಂಜಿ ಜನ ಮೆಚ್ಚಿಗೆದ ಕ್ಷೇತ್ರೊಲಾದುಂಡು. ಒಂಜಿ ಕಾಲೊಡು ನಮ್ಮಕುಲು ಬೆನ್ನಿ ಬೆಂದ್ ದ್ ವರ್ಷೊಗು ೧೦೦/೨೦೦ ಮುಡಿ ಗೇಣಿ ಕೊರೊಂದಿತ್ತಿನ ಇಲ್ಲುಲ್ಲಾ ಇತ್ತ್ಂಡ್. ೧೯೭೦ ದ ಸಮಯೊಡು ಭೂ ಮಸೂದೆ ಬತ್ತಿನೆಡ್ದಾವರ, ಸಾಗೋಲಿ ಮಲ್ತ್ ದ್ ದಿನದೆಪ್ಪೆರೆ ಬಂಙಂದ್ ತೆರೀದ್ ಜೋಕುಲೆನ್ ಬೊಂಬಾಯಿಗ್ ದೇರಿಯೆರ್. ನಮ್ಮ ಜೋಕುಲು ಜುವ್ವ ಗಟ್ಟಿತ್ತ್ ದ್ ಚುರುಕಾದಿತ್ತಿನೆಟ್ಟಾತ್ರ ಒಲ್ಪಾ ಪೋಂಡಲಾ ನೀಂದೊಂದಿತ್ತೆರ್. ಊರುಡು ಅಂಚಿನ ವಾತಾವರಣೊಡು, ಮಸ್ತ್ ಜನೊಕ್ಕುಲ್ಡಪ್ಪ ಮಲ್ಲ್ಯಾತಿನೆಟ್ಟಾತ್ರ ಸಮಾಜೊಡು ಬದುಕುನೆಂಚಾಂದ್ ತೆರಿಯೊಂದೆರ್. ಎಚ್ಚಿನಕುಲು ಕೋಟೆಡೆ ಕೆಲಸ ಬೊಕ್ಕ ಅಲ್ಪಲ್ಪನೆ ಉಂತೆರೆಲಾ ಇತ್ತಿನೆಟ್ಟಾತ್ರ, ಬಯ್ಯದ ೫/೬ ಗಂಟೆಡ್ದ್ ಬೊಕ್ಕ ದಾಲ ಕೆಲಸ ಇಜ್ಜಿ, ಇಲ್ಲಡೆ ಪೊಯೆರೆ ಇಜ್ಜಿ, ಅಲ್ಪನೆ ಮುಟ್ಟೊಡೇ ನಮ್ಮ ಹಿರಿಯೆರ್ ಅಕಲ್ನ ದೂರ ದೃಷ್ಟಿಡ್ ಮಲ್ದಿನ, ಕನ್ನಡ ಮಾಧ್ಯಮದ ರಾತ್ರೆ ಶಾಲೆ ಏರ್ಪಾಡ್ ಮಲ್ತಿತ್ತಿನೆಟ್ಟಾತ್ರ, ಕೆಲವೆರ್ ರಾತ್ರೆ ಶಾಲೆಗ್ ಪೋಯೆರ್, ಕೆಲವೆರ್ ಚೆಂಡ್ ಗೊಬ್ಬೆರೆ ಅಲ್ಪದ…

Read More

ರಾಜ ಮಹಾರಾಜರ ಕಾಲದಿಂದಲೂ ಭಾರತದಲ್ಲಿ ಯೋಗವನ್ನು ಅಭ್ಯಸಿಸಲಾಗುತ್ತಿತ್ತು. ಇದೇ ಪ್ರತೀಕವನ್ನು ಜೀವನದಲ್ಲಿ ಅಳವಡಿಸಿಕೊಂಡು ಆರೋಗ್ಯಕ್ಕೆ ಹೆಚ್ಚು ಒತ್ತು ನೀಡುವಂತಹ ಈ ಯೋಗಾಭ್ಯಾಸವನ್ನು ಎಲ್ಲರೂ ಮಾಡುತ್ತಿರಬೇಕು ಎಂದು ಬಂಟರ ಸಂಘ ಮುಂಬಯಿ ಇದರ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಗುತ್ತಿನಾರ್ ರವೀಂದ್ರ ಡಿ ಶೆಟ್ಟಿ ಬಳ್ಕುಂಜೆ ಗುತ್ತುರವರು ಅಭಿಪ್ರಾಯಪಟ್ಟರು. ಅವರು ಜೂನ್ 21 ರಂದು ಮೀರಾ ಭಯಂದರ್ ರೋಡಿನ ಪಯ್ಯಡೆ ರೆಸಿಡೆನ್ಸಿ ಹೊಟೇಲ್ ನ ಸಭಾಂಗಣದಲ್ಲಿ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಯೋಗ ದಿನಾಚರಣೆ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು. ವಿಶ್ವಯೋಗ ದಿನಾಚರಣೆಯು ನಮ್ಮ ದೇಶದ ಪ್ರಧಾನ ಮಂತ್ರಿಯವರಾದ ನರೇಂದ್ರ ಮೋದಿಯವರ ಅಪೇಕ್ಷೆಯಂತೆ ವರ್ಷಂಪ್ರತಿ ನಡೆಯುವ ಯೋಗ ದಿನಾಚರಣೆ ವಿಶ್ವದಲ್ಲೆಲ್ಲಾ ಪಸರಿಸಬೇಕೆಂಬ ಹಂಬಲದಿಂದ ಇದೀಗ ಪ್ರತಿ ವರ್ಷವೂ ಯೋಗ ದಿನಾಚರಣೆಯನ್ನು ಭಾರತದಲ್ಲಿ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಆಚರಿಸಲಾಗುತ್ತಿದೆ. ಯೋಗಾಭ್ಯಾಸವನ್ನು ಪ್ರತಿಯೊಬ್ಬರೂ ದಿನಚರಿಯಂತೆ ಮಾಡುತ್ತಿರಬೇಕು. ನಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಯೋಗಾಭ್ಯಾಸವನ್ನು ಮಾಡುತ್ತಿರುವುದರಿಂದ ನಮ್ಮ ಶರೀರವು ಮಾತ್ರವಲ್ಲದೇ ಮನಸ್ಸಿನ…

Read More

ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಅವಧಿಯಲ್ಲಿ ಉದ್ಯಮಶೀಲ ನಾಯಕತ್ವದ ಗುಣಗಳನ್ನು ಮೈಗೂಡಿಸಿಕೊಳ್ಳಬೇಕೇ ಹೊರತು, ಕೇವಲ ಉದ್ಯೋಗಿಯ ಮನೋಧರ್ಮವನ್ನಲ್ಲ. ಹೆತ್ತವರ ಗಳಿಕೆಯ ಮೇಲೆ ಅವಲಂಬಿತರಾಗದೆ ಸೋಮಾರಿತನಕ್ಕೆ ಒಗ್ಗಿಕೊಳ್ಳದೆ ಸದಾ ಉತ್ಸಾಹದ ಚಿಲುಮೆಯಾದಾಗ ಯಶಸ್ಸು ಸಾಧ್ಯ ಎಂದು ಜೇಸಿಸ್ ಅಂತರಾಷ್ಟ್ರೀಯ ಸಂಸ್ಥೆಯ ತರಬೇತುದಾರ ದೀಪಕ್ ರಾಜ್ ಹೇಳಿದರು. ಬಿಸೆಂಟ್ ರಾಷ್ಟ್ರೀಯ ಪದವಿ ಪೂರ್ವ ಕಾಲೇಜಿನ 2026 -27ನೇ ಸಾಲಿನ ಪ್ರಥಮ ಪಿಯುಸಿ ವಿದ್ಯಾರ್ಥಿ ಪೋಷಕರಿಗಾಗಿ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಂಡ ಅಭಿಶಿಕ್ಷಣ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಸಂಪನ್ಮೂಲ ವ್ಯಕ್ತಿ ರಾಜೇಶ್ವರಿ ಡಿ ಶೆಟ್ಟಿ ಮಾತನಾಡಿ, ಉತ್ತಮ ಹವ್ಯಾಸ, ನಿರಂತರ ಪ್ರಯತ್ನಗಳಿಂದ ಬದಲಾವಣೆ ಸಾಧ್ಯ ಎಂದರು. ಕಾಲೇಜಿನ ಸಂಚಾಲಕ ಸತೀಶ್ ಕುಮಾರ್ ಭಟ್ ಕಾಲೇಜಿನಲ್ಲಿ ಲಭ್ಯವಿರುವ ವೃತ್ತಿಪರ ಕೋರ್ಸ್, ಸ್ಪರ್ಧಾತ್ಮಕ ಪರೀಕ್ಷೆ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು. ಕಾಲೇಜಿನ ನೂತನ ಪ್ರಾಂಶುಪಾಲೆ ಗಾಯತ್ರಿ ಶೆಟ್ಟಿ ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಪ್ರೀತಾ ಕೆ.ಪಿ ಮತ್ತು ಶ್ರೀಲತಾ ಎ ಪರಿಚಯಿಸಿದರು. ಇದೇ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ಸಾಲಿನ…

Read More

ಕಾರ್ಕಳದ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ (ರಿ), ಜೆಸಿಐ ಕಾರ್ಕಳ ಮತ್ತು ಇತರ ದಾನಿಗಳ ನೆರವಿನಿಂದ ಕಾರ್ಕಳ ತಾಲೂಕಿನ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ 90% ಅಂಕಗಳನ್ನು ಪಡೆದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಈ ವರ್ಷ 25 ಲಕ್ಷ ರೂಪಾಯಿ ವಿದ್ಯಾರ್ಥಿವೇತನ ವಿತರಿಸುವ ಯೋಜನೆ ಇದ್ದು, ಅದರ ಉದ್ಘಾಟನಾ ಕಾರ್ಯಕ್ರಮವು ಬೈಲೂರು ಸರಕಾರಿ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜರಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಅವರು, ಶಿಕ್ಷಣವು ಮಾನವನ ಮೂಲಭೂತ ಆವಶ್ಯಕತೆ ಆಗಿದೆ. ಇಂದಿನ ದಿನಗಳಲ್ಲಿ ಶಿಕ್ಷಣರಂಗವು ಸ್ಪರ್ಧಾತ್ಮಕವಾಗಿ ಬೆಳೆಯುತ್ತಿದೆ. ಸಿಇಟಿ ಮೊದಲಾದ ಪರೀಕ್ಷೆಗಳಲ್ಲಿ ಇಂದು ಗ್ರಾಮೀಣ ವಿದ್ಯಾರ್ಥಿಗಳು ಉತ್ತಮ ಫಲಿತಾಂಶವನ್ನು ಪಡೆಯುತ್ತಿದ್ದು, ಅವರಿಗೆ ಸಮಾಜದ ನೆರವು ಅಗತ್ಯ ಇದೆ. ಅಮ್ಮನ ನೆರವು ಸಂಸ್ಥೆಯ ಮೂಲಕ ಅವಿನಾಶ್ ಜಿ ಶೆಟ್ಟಿ ಅವರು ಈ ಸಮಾಜಕ್ಕೆ ಉತ್ತಮ ಮೇಲ್ಪಂಕ್ತಿಯನ್ನು ಹಾಕಿಕೊಡುತ್ತಿದ್ದಾರೆ. ಅವರಿಗೆ ಮತ್ತು ಅವರ ನೆರವಿಗೆ ನಿಂತ ಎಲ್ಲಾ ದಾನಿಗಳನ್ನೂ ನಾನು ಅಭಿನಂದಿಸುತ್ತೇನೆ…

Read More

ಜೂನ್ 21ರಂದು ಜಾಗತಿಕವಾಗಿ ಆಚರಿಸಲಾದ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶ್ರೀ ಶಕ್ತಿ ಫೌಂಡೇಶನ್ (ರಿ) ವತಿಯಿಂದ ಕೆ.ಎಸ್ ಮೆಹ್ತಾ ಶಾಲೆಯ ಆವರಣದಲ್ಲಿ ಅತ್ಯಂತ ಸಂಭ್ರಮ ಹಾಗೂ ಸಡಗರದೊಂದಿಗೆ ಯೋಗ ದಿನಾಚರಣೆ ಆಚರಿಸಲಾಯಿತು. ಶ್ರೀ ಶಕ್ತಿ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷೆ ಶಾಲಿನಿ ಎಸ್ ಶೆಟ್ಟಿ ಸಚ್ಚೇರಿಗುತ್ತು ಅವರ ಸಮರ್ಥ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಮೂಡಿ ಬಂದಿತು. ಶ್ರೀ ಶಕ್ತಿ ಫೌಂಡೇಶನ್‌ನ ಈ ಆರೋಗ್ಯ ಮತ್ತು ಸಾಂಸ್ಕೃತಿಕ ಹಬ್ಬಕ್ಕೆ ಗಣ್ಯರು ಜಂಟಿಯಾಗಿ ಚಾಲನೆ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಶ್ರೀಮತಿ ಅನಿತಾ ಮಿಶ್ರಾ ಅವರು ಭಕ್ತಿಪೂರ್ವಕವಾಗಿ ಪ್ರಾರ್ಥನೆ ನೆರವೇರಿಸಿದರು. ತದನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬಂಟರ ಸಂಘ ಮುಂಬಯಿಯ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಜಂಟಿ ಕಾರ್ಯದರ್ಶಿ ರಮೇಶ್ ಶೆಟ್ಟಿ ಸಿದ್ದಕಟ್ಟೆ, ಶ್ರೀ ಶಕ್ತಿ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷೆ ಶ್ರೀಮತಿ ಶಾಲಿನಿ ಎಸ್ ಶೆಟ್ಟಿ ಸಚ್ಚೇರಿಗುತ್ತು ಹಾಗೂ ಉಪಸ್ಥಿತರಿದ್ದ ಇತರ ಗಣ್ಯರು ಒಟ್ಟಾಗಿ ಸಾಂಪ್ರದಾಯಿಕ ಶೈಲಿಯಲ್ಲಿ ದೀಪ ಬೆಳಗಿಸುವ ಮೂಲಕ…

Read More

ಬ್ರಹ್ಮಾವರ ಜೂ. ೨೨: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಡುಪಿಯ ಯೋಗ ಶಿಕ್ಷಕರಾದ ಬಿ ಕೆ ಪೂರ್ಣೇಶ್ ಶರ್ಮಾರವರು ಆಗಮಿಸಿದ್ದು. ಅವರು ಮಾತನಾಡಿ ವರ್ಷದಲ್ಲಿ ಜೂನ್ ೨೧ ಹಗಲು ಹೆಚ್ಚು ಇರುವ ದಿನವಾಗಿದ್ದು, ಈ ದಿನವನ್ನು ನಾವು “ಅಂತರರಾಷ್ಟ್ರೀಯ ಯೋಗ ದಿನ” ವನ್ನಾಗಿ ಆಚರಿಸುತ್ತೇವೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಇವು ಅಷ್ಟಾಂಗ ಯೋಗಗಳು. ಡಯಾಬಿಟಿಸ್‌ನಂತಹ ಖಾಯಿಲೆಯ ನಿರ್ಮೂಲನೆಗೆ ದಿನನಿತ್ಯ ಪ್ರಾಣಾಯಾಮ ಮಾಡಬೇಕು. ಯೋಗದಿಂದ ದೊಡ್ಡ ದೊಡ್ಡ ಖಾಯಿಲೆಗಳು ಗುಣಮುಖವಾಗುತ್ತದೆ. ನಮ್ಮ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ನಾವು ಭೂಮಿಯ ಮೇಲೆ ನೆಮ್ಮದಿಯಿಂದ ಬದುಕಬಹುದೆಂದು ತಿಳಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ನಮ್ಮ ದಿನನಿತ್ಯ ಜೀವನಕ್ಕೆ ಯೋಗ ಅತ್ಯಗತ್ಯ, ಸಹಪಠ್ಯ ಚಟುವಟಿಕೆಗಳಲ್ಲಿ ಯೋಗ ಅತ್ಯಂತ ಪ್ರಮುಖವಾದ ವಿಷಯವಾಗಿದೆಯೆಂದು ತಿಳಿಸಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ವಿದ್ಯಾರ್ಥಿಗಳಿಂದ ಯೋಗಾಭ್ಯಾಸದ ಪ್ರತಿಜ್ಞೆಯನ್ನು ಸ್ವೀಕರಿಸಿ…

Read More

ನಿತ್ಯ ಜೀವನದಲ್ಲಿ ಯೋಗ ಮಾಡುವುದರಿಂದ ಸದಾ ಆರೋಗ್ಯವಂತರಾಗಿ ಇರಲು ಸಾಧ್ಯ ಎಂದು ಜ್ಞಾನಸುಧಾದ ಪೂರ್ವ ವಿದ್ಯಾರ್ಥಿನಿ, ಮಾಹೆಯ ಯೋಗಕೇಂದ್ರದ ಅಸಿಸ್ಟೆಂಟ್ ಪ್ರೊಫೆಸರ್ ಆಗಿರುವ ಡಾ. ಆತ್ಮಿಕ ಶೆಟ್ಟಿ ಹೇಳಿದರು. ಅವರು ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ವಿಶ್ವಯೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಯೋಗದ ಮಹತ್ವವನ್ನು ಪ್ರಾತ್ಯಾಕ್ಷಿಕೆಯ ಮೂಲಕ ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲರಾದ ಶ್ರೀ ದಿನೇಶ್ ಎಂ ಕೊಡವೂರ್, ಉಪ್ರಪ್ರಾಂಶುಪಾಲರುಗಳಾದ ಶ್ರೀ ಸಾಹಿತ್ಯ ಹಾಗೂ ಶ್ರೀಮತಿ ಉಷಾ ರಾವ್ ಯು ಮತ್ತು ದೈ.ಶಿ.ನಿರ್ದೇಶಕಿ ಶ್ರೀಮತಿ ಸೌಜನ್ಯ ಹೆಗ್ಡೆ ಉಪಸ್ಥಿತಿರಿದ್ದರು. ಆಗ್ಲಭಾಷಾ ಉಪನ್ಯಾಸಕಿ ಕು.ದಿವ್ಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Read More

ಪ್ರಸ್ತುತ ಉದ್ಯೋಗದ ನೇಮಕಾತಿ ಪ್ರಕ್ರಿಯೆಯಲ್ಲಾದ ಬದಲಾವಣೆಗೆ ಒಗ್ಗಿಕೊಂಡು ಪದವಿ, ಅಂಕ, ಪ್ರಮಾಣಪತ್ರಗಳ ಜೊತೆ ತಮ್ಮಲ್ಲಿರುವ ಕೌಶಲ್ಯಗಳನ್ನು ಮನದಟ್ಟು ಮಾಡಿಸುವ ಸಾಮರ್ಥ್ಯ ಅವಶ್ಯಕ. ಅದರೊಂದಿಗೆ ನಡೆದು ಬಂದ ದಾರಿಯ ಸ್ಮರಣೆ, ಗುರು ಹಿರಿಯರ ಆಶೀರ್ವಾದವು ನಿಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯಲಿದೆ ಎಂದು ನಿಟ್ಟೆ ತಂತ್ರಜ್ಞಾನ ಸಂಸ್ಥೆಯ ಸಮಲೋಚನೆ, ಕಲ್ಯಾಣ, ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ಭರತ್ ಜಿ ಕುಮಾರ್ ಹೇಳಿದರು. ಅವರು ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಣಿಪುರ ಕುಂತಲ ನಗರದ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಷನ್ ಸೆಂಟರ್ ನ ಕೌಶಲ ಅಭಿವೃದ್ಧಿ ಕೇಂದ್ರದಲ್ಲಿ ಉಚಿತ ಡಿಜಿಟಲ್ ಸಾಕ್ಷರತೆ ಕಂಪ್ಯೂಟರ್ ತರಬೇತಿ ಪೂರೈಸಿದ 21ನೇ ಬ್ಯಾಚ್ ನ ಅಭ್ಯರ್ಥಿಗಳಿಗೆ ಮೈನ್ಸ್ ಕಂಪ್ಯೂಟರ್ ಸಂಸ್ಥೆಯ ಪ್ರಮಾಣ ಪತ್ರ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮಾತನಾಡಿ, 420 ಯುವಕರು, ಮಹಿಳೆಯರಿಗೆ ಉಚಿತ ಕಂಪ್ಯೂಟರ್…

Read More

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ) ಬೆಂಗಳೂರು ಇವರಿಂದ ಜಿಲ್ಲಾ ಅನುದಾನಿತ ಶಾಲಾ ಸಂಘಗಳು ಉಡುಪಿ ಇವರ ಸಹಯೋಗದೊಂದಿಗೆ ಜೂನ್ 21 ರಂದು ಯಕ್ಷಗಾನ ಕಲಾರಂಗ ಉಡುಪಿ ಇಲ್ಲಿ ಆಯೋಜಿಸಲಾದ ಉಡುಪಿ ಜಿಲ್ಲೆಯ 200 ಅನುದಾನಿತ ಶಾಲೆಗಳ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ 20,000 ಜೊತೆ ಉಚಿತ ಶಾಲಾ ಸಮವಸ್ತ್ರಗಳ ವಿತರಣೆ ಹಾಗೂ ಹೆಗ್ಗುಂಜೆ ರಾಜೀವ ಶೆಟ್ಟಿ ವಿದ್ಯಾ ಪೋಷಕ ಪ್ರಶಸ್ತಿ ಮತ್ತು ವೆಬ್ ಸೈಟ್ ಅನಾವರಣ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷ ಡಾ| ಎಚ್ ಎಸ್ ಶೆಟ್ಟಿ, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ಪಾಲ್ ಸುವರ್ಣ, ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ರವೀಂದ್ರನಾಥ ಶಾನುಭಾಗ್, ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರು, ಜಿಲ್ಲಾ ಅನುದಾನಿತ ಪ್ರೌಢಶಾಲೆಗಳ ನೌಕರರ ಸಂಘದ ಅಧ್ಯಕ್ಷರಾದ ಡಾ. ಜಯಶೀಲ ಶೆಟ್ಟಿ ಕಂದಾವರ,…

Read More

ಯುವ ಬಂಟರ ಸಂಘ ಮೂಡುಬಿದಿರೆಯ ಪ್ರಥಮ ಪದಾಧಿಕಾರಿಗಳ ಸಭೆಯು ನೂತನ ಅಧ್ಯಕ್ಷ ಬೆಳುವಾಯಿ ಸಂದೀಪ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜೂನ್ 21 ರಂದು ಮೂಡುಬಿದಿರೆ ಕನ್ನಡ ಭವನದಲ್ಲಿ ನಡೆಯಿತು. ಶರತ್ ಶೆಟ್ಟಿಯವರು ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಪದಾಧಿಕಾರಿಗಳನ್ನು ಸ್ವಾಗತಿಸಿದರು. ಯುವ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಜಯಕುಮಾರ್ ಶೆಟ್ಟಿಯವರು ಪ್ರಾಸ್ತವಿಕವಾಗಿ ಮಾತನಾಡಿ, ಅವರ ಅಧ್ಯಕ್ಷ ಅವಧಿಯಲ್ಲಿ ಮಾಡಿದ ಕೆಲಸ ಕಾರ್ಯಗಳನ್ನು ವಿವರಿಸಿದರು ಹಾಗೂ ತನಗೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದವನ್ನು ತಿಳಿಸಿದರು. ಗೌರವಾಧ್ಯಕ್ಷರಾದ ವಿವೇಕ್ ಆಳ್ವರವರು ಮಾತನಾಡಿ, ಅನೇಕ ಸಲಹೆ ಸೂಚನೆಯನ್ನು ನೀಡಿದರು ಅದರಲ್ಲಿ ಮುಖ್ಯವಾಗಿ ಗ್ರಾಮ ಸಮಿತಿ ರಚಿಸಬೇಕೆಂದು ತಿಳಿಸಿದರು. ಪ್ರತೀ ಗ್ರಾಮದ ಯುವಕ ಯುವತಿಯರನ್ನು ಯುವ ಬಂಟರ ಸಂಘಕ್ಕೆ ಸದಸ್ಯರನ್ನಾಗಿ ಮಾಡಬೇಕೆಂದು ಹೇಳಿದರು. ಗೂಗಲ್ ಫಾರಂನ ಮುಖಾಂತರ ಎಲ್ಲಾ ಮಾಹಿತಿಯನ್ನು ನೀಡಿ ಸದಸ್ಯರಾಗಬೇಕೆಂದು ತಿಳಿಸಿದರು. ಗೌರವ ಸಲಹೆಗಾರರಾದ ಮಿಥುನ್ ಶೆಟ್ಟಿ, ಮನೋಜ್ ಶೆಟ್ಟಿ, ಅರುಣ್ ಶೆಟ್ಟಿ ವಾಲ್ಪಾಡಿ, ಉಪಾಧ್ಯಕ್ಷ ಸಂದೀಪ್ ಶೆಟ್ಟಿ ತೋಡಾರು, ಖಜಾಂಜಿ ಭರತ್ ಶೆಟ್ಟಿ, ಕಾನೂನು ಸಲಹೆಗಾರರಾದ…

Read More