Author: admin
ಸುಂದರ ರಾಮ ಶೆಟ್ಟಿಯವರಿಂದ ಇಂದಿಗೂ ಸಮಾಜದ ಅದೆಷ್ಟೋ ಮನೆಗಳಲ್ಲಿ ದೀಪ ಬೆಳಗುತ್ತಿದೆ -ಡಾ| ಕೆ. ಪ್ರಕಾಶ್ ಶೆಟ್ಟಿ
ಮುಲ್ಕಿ ಸುಂದರ ರಾಮ ಶೆಟ್ಟಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಸಹಾಯ ಹಸ್ತ ಪ್ರದಾನ ಸಮಾರಂಭ ಶನಿವಾರ ಮುಲ್ಕಿ ಸುಂದರ ರಾಮ ಶೆಟ್ಟಿ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಮುಲ್ಕಿ ಸುಂದರ ರಾಮ ಶೆಟ್ಟಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಡಾ| ಕೆ.ಪ್ರಕಾಶ್ ಶೆಟ್ಟಿ ಅವರು, ನಮ್ಮ ಸಮಾಜದ ಓರ್ವ ಕಣ್ಮಣಿ, ಮುಲ್ಕಿ ಕಂಡಂತಹ ಧೀಮಂತ ವ್ಯಕ್ತಿ ಮುಲ್ಕಿ ಸುಂದರ ರಾಮ ಶೆಟ್ಟಿ ಅವರ ಹೆಸರಿನಲ್ಲಿ ಟ್ರಸ್ಟ್ ಅಧ್ಯಕ್ಷನಾಗಿ ಇಂತಹ ಕಾರ್ಯಕ್ರಮ ಆಯೋಜಿಸುತ್ತಿರುವುದು ನನ್ನ ಸೌಭಾಗ್ಯ. ಸುಂದರ ರಾಮ ಶೆಟ್ಟಿಯವರ ಸ್ಮರಣಾರ್ಥ ಭವನವನ್ನು ನಿರ್ಮಿಸಲು ನನ್ನನ್ನು ಸಂಚಾಲಕನನ್ನಾಗಿ ಆಯ್ಕೆ ಮಾಡಿದ್ರು. ಆಗ ಅದನ್ನು ಅತ್ಯಂತ ಪ್ರೀತಿಯಿಂದ ಕೈಗೆತ್ತಿಕೊಂಡವನು ನಾನು. ನಂತರ ನಾಲ್ಕು ವರ್ಷಗಳ ಹಿಂದೆ ಮುಲ್ಕಿಯಲ್ಲಿ 34 ಕೋಟಿ ರೂ. ವೆಚ್ಚದಲ್ಲಿ ಭವ್ಯವಾದ ಭವನವನ್ನು ನಿರ್ಮಾಣ ಮಾಡಲಾಯಿತು. ಸುಂದರ ರಾಮ ಶೆಟ್ಟಿಯವರಿಂದ ಇಂದಿಗೂ ಸಮಾಜದ ಅದೆಷ್ಟೋ ಮನೆಗಳಲ್ಲಿ ದೀಪ ಬೆಳಗುತ್ತಿದೆ.…
ಕಳೆದ 8 ವರ್ಷಗಳ ಹಿಂದೆ 11 ಮಂದಿ ಸಮಾನ ಮನಸ್ಕ ಯುವಕ ಯುವತಿಯರು ಸೇರಿಕೊಂಡು ತಾವು ದುಡಿದ ಒಂದಂಶವನ್ನು ಈ ಸಮಾಜದ ನೆರವಿಗಾಗಿ ಅರ್ಪಿಸಬೇಕೆನ್ನುವ ಉದ್ದೇಶದಿಂದ ತನ್ನ ದಿಟ್ಟ ಸಂದೇಶಗಳಿಂದ ಜನಮನವನ್ನು ತಟ್ಟಿದ ಸ್ವಾಮಿ ವಿವೇಕಾನಂದರ ಜನ್ಮ ಜಯಂತಿಯಂದು ದೇಶ ವಿದೇಶದ ಕ್ಯಾನ್ಸರ್ ರೋಗಿಗಳಿಗೆ ಆಶ್ರಯವನ್ನು ನೀಡುತ್ತಿರುವ ಮುಂಬಯಿ ಮಹಾನಗರದ ದಾದರ್ ನಲ್ಲಿರುವ ಸಂತ ಘಾಡ್ಗೆ ಮಹಾರಾಜ್ ಧರ್ಮಶಾಲೆಯಲ್ಲಿ ಶಿವಾಯ ಫೌಂಡೇಶನ್ ಸಂಸ್ಥೆಯ ಉದ್ದೀಪನವಾಯಿತು. ನಂತರ ಈ ಸಂಸ್ಥೆಯ ಕೆಲಸ, ಕಾರ್ಯ ಚಟುವಟಿಕೆಗಳು ಆಶಕ್ತರ ಸೇವೆಗೆ ಮುಡಿಪಾಗಿಟ್ಟ ಪರಿ ನಿಜವಾಗಿಯೂ ಜನಮನ ತಟ್ಟುವಂತಹುದು. ವೈದ್ಯಕೀಯ ನೆರವಿನೊಂದಿಗೆ ಆರಂಭವಾದ ಶಿವಾಯ ಸಂಸ್ಥೆಯ ಕಾರ್ಯ ಚಟುವಟಿಕೆಗಳು ಮತ್ತಷ್ಟು ವಿಸ್ತಾರಗೊಳ್ಳುತ್ತಾ ಹೋಯಿತು. ಮುಂದೆ ಸಂಸ್ಥೆಯು ಪ್ರತಿ ತಿಂಗಳು ವೈದ್ಯಕೀಯ ನೆರವು, ಶೈಕ್ಷಣಿಕ ಸಹಾಯ, ಪ್ರತಿಭಾವಂತ ಸರಕಾರಿ ಶಾಲಾ, ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೆ.ಇ.ಎಮ್ ಮುನ್ಸಿಪಲ್ ಆಸ್ಪತ್ರೆ ಮುಂಬಯಿಯ ಟಾಟಾ ಕ್ಯಾನ್ಸರ್ ಆಸ್ಪತ್ರೆಯ ರೋಗಿಗಳು ಮತ್ತು ರೋಗಿಗಳ ಸಂಬಂಧಿಕರಿಗೆ, ಬೀದಿಬದಿ ನಿರಾಶ್ರಿತರಿಗೆ ಪ್ರತಿ ರವಿವಾರ…
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮಂಗಳೂರು ವಿಶ್ವವಿದ್ಯಾಲಯ, ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ಕರ್ನಾಟಕ ಕಾನೂನು ವಿವಿ, ಕೆಳದಿ ಶಿವಪ್ಪ ನಾಯಕ ಕೃಷಿ ವಿವಿ ಹಾಗೂ ಆಳ್ವಾಸ್ ಸ್ವಾಯತ್ತ ಕಾಲೇಜುಗಳ ವಾರ್ಷಿಕ ಕ್ರೀಡಾಕೂಟ -2026 ಸ್ವರಾಜ್ಯ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಮಂಗಳೂರು ಕಸ್ಟಮ್ಸ್ ಇಲಾಖೆಯ ನಿವೃತ್ತ ಅಧೀಕ್ಷಕ ದಿನೇಶ್ ಕುಂದರ್, ಆಳ್ವಾಸ್ ಸಂಸ್ಥೆ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಅವಕಾಶಗಳನ್ನು ಒದಗಿಸುತ್ತಿರುವುದು ಪ್ರಶಂಸನೀಯ. ಡಾ. ಎಂ. ಮೋಹನ್ ಆಳ್ವರು ಕರ್ನಾಟಕದ ಶಿಕ್ಷಣ ಕ್ಷೇತ್ರದ ಅನರ್ಘ್ಯ ರತ್ನ. ಆಳ್ವಾಸ್ ಕ್ರೀಡಾ ದತ್ತು ಸ್ವೀಕಾರ ಯೋಜನೆಯಡಿ ದೇಶದ ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಯಲ್ಲಿ ತರಬೇತಿ ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮೆರೆಯುತ್ತಿರುವುದು ಸಂಸ್ಥೆಯು ಕ್ರೀಡೆಗೆ ನೀಡುತ್ತಿರುವ ಬದ್ಧತೆಯನ್ನು ತೋರಿಸುತ್ತದೆ ಎಂದರು. ಪ್ರತಿದಿನ ಕನಿಷ್ಠ ಒಂದು ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಗಮನ, ಏಕಾಗ್ರತೆ ಹಾಗೂ ಶಾರೀರಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ.…
‘ಚಿಗುರಿನ ನಗುವಿನಲ್ಲಿ ಫಲದ ಸಿಹಿ ಅಡಗಿದೆ’ ಎನ್ನುವುದು ಬಲ್ಲವರ ಕಾವ್ಯಾತ್ಮಕ ನುಡಿ. ದೇಶ ವಿದೇಶಗಳಲ್ಲಿ ಶಾಸ್ತ್ರೀಯ, ಭಾವಪೂರಿತ, ಜಾನಪದ, ಭಕ್ತಿಪೂರ್ವಕ ಗಾಯನ ತಂಡ “ಸ್ವರಸಮರ್ಪಣೆ” ಇಂದು ಕಿರಿಯ, ಯುವ, ಹರೆಯದ ಮನಗಳಿಗೆ ಇಂಪಿನ ತಂಪು ಕೊಡುತ್ತಿದೆ. ದಿವ್ಯನಿಧಿಯವರ ಒಟ್ಟು ಐದಾರು ಜನರಿರುವ ಸ್ವಚ್ಛ ತಂಡ ಪ್ರೇಕ್ಷಕರ ಅಭಿರುಚಿಗೆ ಅನುಗುಣವಾಗಿ ಸಂಗೀತದ ಸಿಂಚನ ನೀಡುತ್ತಿರುವುದು ನಿಜವಾಗಲೂ ಅಭಿನಂದನಾರ್ಹ. ತನ್ನ ಎಳವೆಯಲ್ಲೇ ಬಹರೈನ್, ದುಬೈ, ಆಫ್ರಿಕಾ, ಕೀನ್ಯಾ, ಕತಾರ್ ಹೀಗೆ ಸಪ್ತಸಾಗರ ದಾಟಿ ಸ್ವರ ಕೊಟ್ಟ ಪ್ರಶಂಸಾರ್ಹ ಬಳಗವಿದು. ಭಜನೆಯ ಮೂಲದಿಂದ ಇಂದು ನುರಿತ ಕಲಾವಿದರ ನಡುವೆಯೂ ಪ್ರೋತ್ಸಾಹ ಗಿಟ್ಟಿಸಿದ ಅದ್ಭುತ ಗಾಯಕಿ. ವಿದ್ಯಾಸಂಸ್ಥೆಗಳು, ಸಾಂಸ್ಕೃತಿಕ ರಂಗವೇದಿಕೆಯ ಕಾರ್ಯಕ್ರಮಗಳು, ಮನೆಯ ಕಾರ್ಯಕ್ರಮಗಳಲ್ಲಿ ಸಮರ್ಪಣೆಯ ಮನೋಭಾವವುಳ್ಳ ಈಕೆಯ ಶ್ರಮಕ್ಕೆ ನಾವೆಲ್ಲಾ ಸಲ್ಯೂಟ್ ಹೇಳಲೇಬೇಕು. ನುಗುಮೊಗದ ಸ್ವರ, ಸ್ಪಷ್ಟ ಸಾಹಿತ್ಯ, ಶುದ್ಧ ಹಿಮ್ಮೇಳಗಳು ಇಂದು ಅಪರಿಮಿತ ಕೇಳುಗರ ಮನ ತಟ್ಟಿದೆ ಎಂಬ ಹೆಮ್ಮೆ ಈಕೆಗಿದೆ. ಗ್ರಾಮೀಣ ಪ್ರದೇಶದಲ್ಲಿ ಬೆಳೆದ ಈ ಸ್ವಚ್ಛ ಮನಕ್ಕೆ ಇನ್ನಷ್ಟು ಸ್ವರ ಸಂಗೀತದ…
ಅಖಿಲ ಭಾರತ ಪೊಲೀಸ್ ಅಥ್ಲೆಟಿಕ್ಸ್ ಕ್ಲಸ್ಟರ್ ಪುರುಷರ ಡೆಕಾಥ್ಲಾನ್ ಸ್ಪರ್ಧೆ : ಅಭಿಷೇಕ್ ಶೆಟ್ಟಿಯವರಿಗೆ ಚಿನ್ನದ ಪದಕ
ಪಂಜಾಬ್ ನ ಜಲಂಧರ್ ನಲ್ಲಿ ಮಾರ್ಚ್ 7ರಿಂದ 12ರವರೆಗೆ ನಡೆದ 74ನೇ ಅಖಿಲ ಭಾರತ ಪೊಲೀಸ್ ಅಥ್ಲೆಟಿಕ್ಸ್ ಕ್ಲಸ್ಟರ್ ಪುರುಷರ ಡೆಕಾಥ್ಲಾನ್ ಸ್ಪರ್ಧೆಯಲ್ಲಿ ಕರ್ನಾಟಕದ ಇನ್ಸ್ ಪೆಕ್ಟರ್ ಅಭಿಷೇಕ್ ಶೆಟ್ಟಿ ಮೊದಲ ಸ್ಥಾನದೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಅಥ್ಲೀಟ್ ಎಂಬ ಹಿರಿಮೆಗೆ ಅಭಿಷೇಕ್ ಶೆಟ್ಟಿ ಭಾಜನರಾಗಿದ್ದಾರೆ. 10 ಕ್ರೀಡೆಗಳನ್ನು ಒಳಗೊಂಡ ಈ ಸ್ಪರ್ಧೆಯಲ್ಲಿ ಒಟ್ಟಾರೆ 6,709 ಅಂಕಗಳನ್ನು ಕಲೆ ಹಾಕಿ ಮೊದಲ ಸ್ಥಾನ ಗಳಿಸಿದ ಅಭಿಷೇಕ್ ಅವರು ಕಡಬ ಕಡಬ ತಾಲೂಕಿನ ಸವಣೂರು ನಡುಬೈಲು ಜಗನ್ನಾಥ ಶೆಟ್ಟಿ ಹಾಗೂ ತುಳಸಿನಿ ಶೆಟ್ಟಿ ಮನವಳಿಕೆಗುತ್ತು ದಂಪತಿಗಳ ಸುಪುತ್ರ.
ಅಯೋಧ್ಯೆಯಲ್ಲಿ ಪೂಜ್ಯ ಶ್ರೀ ಬಾಲಯೋಗಿ ಸದಾನಂದ ಸ್ವಾಮಿ ತುಂಗಾರೇಶ್ವರ ನೇತೃತ್ವದಲ್ಲಿ ದೀಪೋತ್ಸವ : ತೋನ್ಸೆ ನವೀನ್ ಶೆಟ್ಟಿಯವರಿಗೆ ಗೌರವ
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪವಿತ್ರ ಅಂಗಳದಲ್ಲಿ ಇತ್ತೀಚೆಗೆ ಭಕ್ತಿ ಮತ್ತು ಆಧ್ಯಾತ್ಮದ ಅಲೆ ಎದ್ದಿತು. ಗಣೇಶಪುರಿಯ ಪರಮ ಪೂಜ್ಯ ಶ್ರೀ ಬಾಲಯೋಗಿ ಸದಾನಂದ ಸ್ವಾಮಿ ತುಂಗಾರೇಶ್ವರ ಅವರ ದಿವ್ಯ ನೇತೃತ್ವದಲ್ಲಿ ನಡೆದ ಪಾರಾಯಣ ಮತ್ತು ದೀಪೋತ್ಸವ ಕಾರ್ಯಕ್ರಮವು ನೆರೆದಿದ್ದ ಸಾವಿರಾರು ಭಕ್ತರ ಕಣ್ಮನ ಸೆಳೆಯಿತು. ಮಂದಿರದ ಪ್ರಾಂಗಣವು ಮಂತ್ರಘೋಷಗಳಿಂದ ಮೊಳಗುತ್ತಿದ್ದರೆ, ಸಾಲು ಸಾಲಾಗಿ ಬೆಳಗಿದ ಹಣತೆಗಳು ಅಯೋಧ್ಯೆಯ ಧರ್ಮದೀಪ್ತಿಯನ್ನು ಜಗತ್ತಿಗೆ ಸಾರುವಂತಿದ್ದವು. ಈ ಶುಭ ಸಂದರ್ಭದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮುಲುಂಡ್ ನಿವಾಸಿ, ಖ್ಯಾತ ಉದ್ಯಮಿ ನವೀನ್ ಶೆಟ್ಟಿ ತೋನ್ಸೆ ಅವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ಶ್ರೀ ಬಾಲಯೋಗಿ ಸದಾನಂದ ಸ್ವಾಮೀಜಿಯವರು ನವೀನ್ ಶೆಟ್ಟಿ ಅವರನ್ನು ಸನ್ಮಾನಿಸಿ ಆಶೀರ್ವದಿಸಿದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಿ ರಾಮ ಮಂದಿರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿಗಳಾದ ಚಂಪತ್ ರಾಯ್ ಜಿ ಅವರು ಉಪಸ್ಥಿತರಿದ್ದು, ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದರು. ಭಕ್ತರ ಸಮ್ಮುಖದಲ್ಲಿ ನಡೆದ ಈ…
ನಾಳೆ ಮಗಳ ಹತ್ತನೇ ವರ್ಷದ ಹುಟ್ಟುಹಬ್ಬದ ಸಂಭ್ರಮಕ್ಕೆ ಸಿದ್ಧತೆ ನಡೆಯಬೇಕಿದ್ದ ಮನೆಯಲ್ಲಿ, ಇಂದು ತಂದೆಯ ಶವದ ಮುಂದೆ ಆಕ್ರಂದನ ಮುಗಿಲು ಮುಟ್ಟಿದೆ. ಬಂಟ್ವಾಳದ ಪ್ರತಿಭಾವಂತ ಛಾಯಾಗ್ರಾಹಕ ರಕ್ಷಿತ್ ಶೆಟ್ಟಿ (43) ಇನ್ನಿಲ್ಲ. ರಾತ್ರಿ ಸಂಭವಿಸಿದ ಆ ಒಂದು ಭೀಕರ ಅಪಘಾತ, ಒಂದು ಸುಂದರ ಸಂಸಾರವನ್ನು ಅನಾಥವಾಗಿಸಿದೆ. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಕ್ಷಿತ್ ಇಂದು (ಮಾರ್ಚ್ 14) ಕೊನೆಯುಸಿರೆಳೆದಿದ್ದಾರೆ. ಸಂಭ್ರಮದ ಹೊಸ್ತಿಲಲ್ಲಿ ಸೂತಕ ನಾಳೆ ಮಾರ್ಚ್ 15. ಮಗಳ ಸಂಭ್ರಮದ ದಿನಕ್ಕಾಗಿ ತಂದೆ ಎಷ್ಟೋ ಕನಸು ಕಂಡಿದ್ದರು. ಆದರೆ ಆ ಸಂಭ್ರಮದ ಕ್ಷಣಗಳು ಹತ್ತಿರ ಬರುವ ಮೊದಲೇ ಸಾವು ಇವರನ್ನು ಹಿಂಬಾಲಿಸಿ ಬಂದಿದೆ. ಮಗಳ ಬದುಕಿನಲ್ಲಿ ಬೆಳಕು ತುಂಬಬೇಕಿದ್ದ ತಂದೆ ಇಂದು ಕತ್ತಲಲ್ಲಿ ತಳ್ಳಿ ಮರೆಯಾಗಿದ್ದಾರೆ. ರಕ್ಷಿತ್ ಅವರ ಕುಟುಂಬಕ್ಕೆ ಹಣೆಬರಹದ ಹೊಡೆತ ಇದೇ ಮೊದಲಲ್ಲ. ಈಗಾಗಲೇ ಇವರ ಸಹೋದರ ರಂಜಿತ್ ಅವರು ಅಪಘಾತಕ್ಕೀಡಾಗಿ ಹಾಸಿಗೆ ಹಿಡಿದಿದ್ದಾರೆ. ಈಗ ಇಡೀ ಮನೆಯ ಆಧಾರಸ್ತಂಭವಾಗಿದ್ದ ರಕ್ಷಿತ್ ಅವರೇ ಇಹಲೋಕ ತ್ಯಜಿಸಿರುವುದು ಆ…
ಗ್ರಾಮೀಣ ಪ್ರದೇಶದ ಬಂಟ ಸಮಾಜ ಬಂಧುಗಳ ಆಶೋತ್ತರಗಳಿಗೆ ಸ್ಪಂದಿಸುವ ಮಹತ್ವದ ಯೋಜನೆಯ ಮೂಲಕ ವಿರಾರ್ ಪರಿಸರದ ಪ್ರಸಿದ್ಧ ಸಮಾಜ ಸೇವಕ ಉದ್ಯಮಿ ಡಾ| ವಿರಾರ್ ಶಂಕರ್ ಬಿ ಶೆಟ್ಟಿ ಅವರ ನೇತೃತ್ವದಲ್ಲಿ ಸ್ಥಾಪನೆಗೊಂಡಿರುವ ಮೀರಾ- ಡಹಾಣು ಬಂಟರ ಸಂಘದ 17ನೇ ವರ್ಷದ ವಾರ್ಷಿಕೋತ್ಸವವು ಮಾರ್ಚ್ 14ರಂದು ಸಂಜೆ 3.30ಕ್ಕೆ ಮೂರನೇ ಮಹಡಿ ಆರ್ಣಾ ಸ್ವರ್ಣ ಬ್ಯಾಂಕ್ವೆಟ್ ಹಾಲ್, ದತ್ತಾನಿ ಮಾಲ್, ವಸಾಯಿ ಪಶ್ಚಿಮ ಇಲ್ಲಿ ಗಣ್ಯಾತಿ ಗಣ್ಯರ ಕೂಡುವಿಕೆಯಲ್ಲಿ ಬೇರೆಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ, ಮಹಿಳಾ ವಿಭಾಗದಿಂದ ಹಳದಿ ಕುಂಕುಮ ಕಾರ್ಯಕ್ರಮ, ಮಕ್ಕಳಿಂದ ಮತ್ತು ಮಹಿಳೆಯರಿಂದ ನೃತ್ಯ ವೈಭವ ನಡೆಯಲಿದೆ. ಜಗದೀಶ್ ಶೆಟ್ಟಿ ಕೆಂಚನಕೆರೆ ಅವರು ಬರೆದು ನಿರ್ದೇಶಿಸಿದ ತುಳು ಸಾಮಾಜಿಕ ನಾಟಕ ‘ಇಲ್ಲ್ – ಒಕ್ಕೆಲ್’ ಪ್ರದರ್ಶನಗೊಳ್ಳಲಿದೆ. ಬಂಟರ ಸಮುದಾಯವು ಭಾರತದ ಪ್ರಮುಖ ಮತ್ತು ಗೌರವನೀಯ ಸಮುದಾಯಗಳಲ್ಲಿ ಒಂದಾಗಿದೆ. ಈ ಸಮುದಾಯವು ಬಹುಕಾಲದಿಂದ ಸಮಾಜದ ಅಭಿವೃದ್ಧಿಗೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದೆ. ಶ್ರಮ, ಪ್ರಾಮಾಣಿಕತೆ…
ಸಾಮಾನ್ಯವಾಗಿ ಉನ್ನತ ಹುದ್ದೆಗಳು, ಅಧಿಕಾರದ ಸ್ಥಾನಮಾನಗಳು ವ್ಯಕ್ತಿಯನ್ನು ಸಮಾಜದ ಸಂಪರ್ಕದಿಂದ ವಿಮುಖಗೊಳಿಸುತ್ತವೆ. ಆದರೆ ಅದಕ್ಕೆ ಅಪವಾದವಾಗಿ ಮನೆತನದ ಹಿರಿತನಕ್ಕೆ, ಗೆಳೆತನದ ಬಾಂಧವ್ಯಕ್ಕೆ, ಸಮುದಾಯದ ಉತ್ಕರ್ಷಕ್ಕೆ ಬದ್ಧರಾಗಿ ತಮ್ಮ ಉನ್ನತ ಸ್ಥಾನವನ್ನು ಸಾರ್ಥಕ್ಯದತ್ತ ಕೊಂಡೊಯ್ದವರು ಮೂಲ್ಕಿ ಸುಂದರ ರಾಮ ಶೆಟ್ಟಿ. ರಾಷ್ಟ್ರೀಕೃತ ವಿಜಯ ಬ್ಯಾಂಕಿನಲ್ಲಿ ಕರಾವಳಿಗರಿಗೆ ಉದ್ಯೋಗ ನೀಡಿ, ಆ ಕಾಲದ ತಲೆಮಾರಿನ ಕಡು ಕಷ್ಟದ ಬದುಕಿನಲ್ಲಿ ಓಯಸಿಸ್ ಆದವರು. ವ್ಯಕ್ತಿಗೆ ಉದ್ಯೋಗ ಭದ್ರತೆ ಇದ್ದರೆ ಕುಟುಂಬ ಅಭಿವೃದ್ಧಿಯಾಗುತ್ತದೆ, ಸಮಾಜದ ಪ್ರಗತಿಯಾಗುತ್ತದೆ ಎಂಬ ಸಿದ್ಧಾಂತವನ್ನು ನಂಬಿದ್ದ ಅವರು ಒಂದು ತಲೆಮಾರಿಗೆ ಸ್ವಾಭಿಮಾನದ ಬದುಕನ್ನು ಕೊಟ್ಟರು. ಆ ನೆನಪಿನಲ್ಲಿ ಅವರ ಜನ್ಮಭೂಮಿ ಮೂಲ್ಕಿಯಲ್ಲಿ ನಿರ್ಮಾಣವಾಗಿರುವ ‘ಮೂಲ್ಕಿ ಸುಂದರ ರಾಮ ಶೆಟ್ಟಿ ಸಭಾಭವನ’ ಸೇವಾ ಪರಂಪರೆಯ ಮುಂದುವರೆದ ಭಾಗ. ಅವರು ನಮಗೆ ಹಾಕಿಕೊಟ್ಟ ಹಾದಿಯಲ್ಲಿ ಸಾಗಿ, ನಾವು ಆರಂಭ ಮಾಡಿದ ಈ ಪ್ರಯತ್ನ ಜಾತಿ, ಧರ್ಮಗಳ ಗಡಿಯನ್ನು ಮೀರಿ ಈ ಬಾರಿ 300 ಕುಟುಂಬಗಳಿಗೆ ಬೆಂಬಲ ನೀಡುವುದಕ್ಕೆ ಶಕ್ತವಾಗಿದೆ. ಒಟ್ಟು 50 ಲಕ್ಷ ರೂಪಾಯಿಗಳ ಬೆಂಬಲವನ್ನು…
ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಲು ಸಂಸದ ಕ್ಯಾಪ್ಟನ್ ಬ್ರಜೇಶ್ ಚೌಟ ಅವರು ಕೇಂದ್ರ ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದರು. ಈ ವೇಳೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಕೈಗಾರಿಕಾ ಮತ್ತು ಬಂದರಿಗೆ ಬರುವ ವಾಹನಗಳ ದಟ್ಟಣೆಯನ್ನು ಕಡಿಮೆ ಮಾಡಲು ಕೆ.ಐ.ಒ.ಸಿ.ಎಲ್ ನಿಂದ ಬೈಕಂಪಾಡಿಯವರೆಗೆ ಮೇಲ್ಸೇತುವೆ (Elevated Road) ನಿರ್ಮಿಸುವಂತೆ ಪ್ರಮುಖವಾಗಿ ಆಗ್ರಹಿಸಲಾಯಿತು. ಇದರಿಂದ ಸಾಮಾನ್ಯ ಸಂಚಾರ ಸುಗಮವಾಗಲಿದ್ದು, ಈ ಭಾಗದ ವಾಹನ ದಟ್ಟಣೆಗೆ ಶಾಶ್ವತ ಪರಿಹಾರ ಸಿಗಲಿದೆ. ಜೊತೆಗೆ, ಕರಾವಳಿ ಕರ್ನಾಟಕವನ್ನು ಮಡಿಕೇರಿ, ಮೈಸೂರು ಮತ್ತು ಬೆಂಗಳೂರು ಭಾಗಗಳೊಂದಿಗೆ ಸಂಪರ್ಕಿಸುವ ಪ್ರಮುಖ ಕೊಂಡಿಯಾದ ಮಾಣಿ ಸಂಪಾಜೆ ರಸ್ತೆಯ ಅಭಿವೃದ್ಧಿ ಹಾಗೂ ಮೇಲ್ದರ್ಜೆಗೇರಿಸುವ ಬಗ್ಗೆಯೂ ಸಚಿವರ ಗಮನ ಸೆಳೆಯಲಾಯಿತು.















