Author: admin

ಸಾಮಾನ್ಯವಾಗಿ ಉನ್ನತ ಹುದ್ದೆಗಳು, ಅಧಿಕಾರದ ಸ್ಥಾನಮಾನಗಳು ವ್ಯಕ್ತಿಯನ್ನು ಸಮಾಜದ ಸಂಪರ್ಕದಿಂದ ವಿಮುಖಗೊಳಿಸುತ್ತವೆ. ಆದರೆ ಅದಕ್ಕೆ ಅಪವಾದವಾಗಿ ಮನೆತನದ ಹಿರಿತನಕ್ಕೆ, ಗೆಳೆತನದ ಬಾಂಧವ್ಯಕ್ಕೆ, ಸಮುದಾಯದ ಉತ್ಕರ್ಷಕ್ಕೆ ಬದ್ಧರಾಗಿ ತಮ್ಮ ಉನ್ನತ ಸ್ಥಾನವನ್ನು ಸಾರ್ಥಕ್ಯದತ್ತ ಕೊಂಡೊಯ್ದವರು ಮೂಲ್ಕಿ ಸುಂದರ ರಾಮ ಶೆಟ್ಟಿ. ರಾಷ್ಟ್ರೀಕೃತ ವಿಜಯ ಬ್ಯಾಂಕಿನಲ್ಲಿ ಕರಾವಳಿಗರಿಗೆ ಉದ್ಯೋಗ ನೀಡಿ, ಆ ಕಾಲದ ತಲೆಮಾರಿನ ಕಡು ಕಷ್ಟದ ಬದುಕಿನಲ್ಲಿ ಓಯಸಿಸ್ ಆದವರು. ವ್ಯಕ್ತಿಗೆ ಉದ್ಯೋಗ ಭದ್ರತೆ ಇದ್ದರೆ ಕುಟುಂಬ ಅಭಿವೃದ್ಧಿಯಾಗುತ್ತದೆ, ಸಮಾಜದ ಪ್ರಗತಿಯಾಗುತ್ತದೆ ಎಂಬ ಸಿದ್ಧಾಂತವನ್ನು ನಂಬಿದ್ದ ಅವರು ಒಂದು ತಲೆಮಾರಿಗೆ ಸ್ವಾಭಿಮಾನದ ಬದುಕನ್ನು ಕೊಟ್ಟರು. ಆ ನೆನಪಿನಲ್ಲಿ ಅವರ ಜನ್ಮಭೂಮಿ ಮೂಲ್ಕಿಯಲ್ಲಿ ನಿರ್ಮಾಣವಾಗಿರುವ ‘ಮೂಲ್ಕಿ ಸುಂದರ ರಾಮ ಶೆಟ್ಟಿ ಸಭಾಭವನ’ ಸೇವಾ ಪರಂಪರೆಯ ಮುಂದುವರೆದ ಭಾಗ. ಅವರು ನಮಗೆ ಹಾಕಿಕೊಟ್ಟ ಹಾದಿಯಲ್ಲಿ ಸಾಗಿ, ನಾವು ಆರಂಭ ಮಾಡಿದ ಈ ಪ್ರಯತ್ನ ಜಾತಿ, ಧರ್ಮಗಳ ಗಡಿಯನ್ನು ಮೀರಿ ಈ ಬಾರಿ 300 ಕುಟುಂಬಗಳಿಗೆ ಬೆಂಬಲ ನೀಡುವುದಕ್ಕೆ ಶಕ್ತವಾಗಿದೆ. ಒಟ್ಟು 50 ಲಕ್ಷ ರೂಪಾಯಿಗಳ ಬೆಂಬಲವನ್ನು…

Read More

ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ರಸ್ತೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಲು ಸಂಸದ ಕ್ಯಾಪ್ಟನ್ ಬ್ರಜೇಶ್ ಚೌಟ ಅವರು ಕೇಂದ್ರ ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದರು. ಈ ವೇಳೆ, ರಾಷ್ಟ್ರೀಯ ಹೆದ್ದಾರಿಯಲ್ಲಿ ಕೈಗಾರಿಕಾ ಮತ್ತು ಬಂದರಿಗೆ ಬರುವ ವಾಹನಗಳ ದಟ್ಟಣೆಯನ್ನು ಕಡಿಮೆ ಮಾಡಲು ಕೆ.ಐ.ಒ.ಸಿ.ಎಲ್ ನಿಂದ ಬೈಕಂಪಾಡಿಯವರೆಗೆ ಮೇಲ್ಸೇತುವೆ (Elevated Road) ನಿರ್ಮಿಸುವಂತೆ ಪ್ರಮುಖವಾಗಿ ಆಗ್ರಹಿಸಲಾಯಿತು. ಇದರಿಂದ ಸಾಮಾನ್ಯ ಸಂಚಾರ ಸುಗಮವಾಗಲಿದ್ದು, ಈ ಭಾಗದ ವಾಹನ ದಟ್ಟಣೆಗೆ ಶಾಶ್ವತ ಪರಿಹಾರ ಸಿಗಲಿದೆ. ಜೊತೆಗೆ, ಕರಾವಳಿ ಕರ್ನಾಟಕವನ್ನು ಮಡಿಕೇರಿ, ಮೈಸೂರು ಮತ್ತು ಬೆಂಗಳೂರು ಭಾಗಗಳೊಂದಿಗೆ ಸಂಪರ್ಕಿಸುವ ಪ್ರಮುಖ ಕೊಂಡಿಯಾದ ಮಾಣಿ ಸಂಪಾಜೆ ರಸ್ತೆಯ ಅಭಿವೃದ್ಧಿ ಹಾಗೂ ಮೇಲ್ದರ್ಜೆಗೇರಿಸುವ ಬಗ್ಗೆಯೂ ಸಚಿವರ ಗಮನ ಸೆಳೆಯಲಾಯಿತು.

Read More

ಆಯುರ್ವೇದ ಕ್ಷೇತ್ರದಲ್ಲಿ ಇಂದು ಅನೇಕ ಅವಕಾಶಗಳು ಲಭ್ಯವಿದ್ದು, ಅವುಗಳನ್ನು ಸಮರ್ಥವಾಗಿ ಬಳಸಿಕೊಂಡರೆ ಸಾಧನೆ ಸಾಧ್ಯ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು. ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ 2022 -23ನೇ ಸಾಲಿನ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ‘ಸಂಪನ್ನಮ್ -2026’ ಉದ್ದೇಶಿಸಿ ಅವರು ಮಾತನಾಡಿದರು. ಆಯುರ್ವೇದವು ವಿಶ್ವಮಟ್ಟದಲ್ಲಿ ಹೊಸ ಅವಕಾಶಗಳನ್ನು ತೆರೆದಿಟ್ಟಿರುವ ಕ್ಷೇತ್ರವಾಗಿದ್ದು, ವಿದ್ಯಾರ್ಥಿಗಳು ಆಶಾವಾದಿಗಳಾಗಿ ಗುರಿಯೆಡೆಗೆ ಸಾಗಬೇಕು. ವಿದ್ಯಾಭ್ಯಾಸದ ಜೊತೆಗೆ ನಿರಂತರ ಅಭ್ಯಾಸ ಮತ್ತು ಪರಿಶ್ರಮ ಇದ್ದರೆ ಯಾವುದೇ ಕ್ಷೇತ್ರದಲ್ಲೂ ಯಶಸ್ಸು ಸಾಧಿಸಲು ಸಾಧ್ಯ. ಆಯುರ್ವೇದ, ಯೋಗ, ಪ್ರಕೃತಿ ಚಿಕಿತ್ಸೆ ಸೇರಿದಂತೆ ಹಲವು ವಿಭಾಗಗಳಲ್ಲಿ ಉತ್ತಮ ಬೇಡಿಕೆ ಇದ್ದು, ವಿದ್ಯಾರ್ಥಿಗಳು ಸಂಶೋಧನೆಯ ನೆಲೆಯಲ್ಲಿ ಔಷಧಿ ತಯಾರಿಕೆಯ ಮೂಲಕವೂ ಮುಂದುವರಿಬಹುದು. ಸ್ವದೇಶಿ ಉತ್ಪನ್ನಗಳಿಗೆ ಕೇಂದ್ರ ಸರ್ಕಾರವೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದು, ಆಯುರ್ವೇದ ಔಷಧಿ ಸಂಬಂಧಿತ ಗಿಡಗಳನ್ನು ಬೆಳೆಸಲು ದೊಡ್ಡ ಮಟ್ಟದ ಅನುದಾನ ನೀಡಲಾಗುತ್ತಿದೆ ಎಂದು ತಿಳಿಸಿದರು. ಅವಕಾಶಗಳನ್ನು ಬಳಸಿಕೊಳ್ಳುವ ಮನೋಭಾವನೆ ಬೆಳೆಸಿಕೊಳ್ಳಬೇಕು.…

Read More

ದೇಶದ ಆರ್ಥಿಕತೆಗೂ ಆರೋಗ್ಯಕ್ಕೂ ಸಂಬಂಧವಿದೆ. ಆರ್ಥಿಕವಾಗಿ ಮುಂದುವರಿದ ದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಕಡಿಮೆಯಾಗುತ್ತವೆ. ಆದರೆ ಜೀವನ ಶೈಲಿಯಿಂದ ಬರುವ ಕಾಯಿಲೆಗಳು ಹೆಚ್ಚಾಗುತ್ತವೆ. ಆದ್ದರಿಂದ ಜೀವನ ಶೈಲಿಯನ್ನು ಬದಲಾಯಿಸುವುದರ ಮೂಲಕ ಕಾಯಿಲೆಯನ್ನು ದೂರ ಇಡಬಹುದು ಎಂದು ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಉದ್ಯಾವರ ಇದರ ಅಧೀಕ್ಷಕರಾದ ಡಾ. ಜಯಕೃಷ್ಣ ನಾಯಕ್ ಹೇಳಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕಾರ್ಕಳ, ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಕುತ್ಪಾಡಿ ಉದ್ಯಾವರ, ರೋಟರಿ ಕ್ಲಬ್ ಕಾರ್ಕಳ, ಗ್ರಾಮೀಣ ರೋಟರಿ ಸಮುದಾಯ ದಳ ಕಲ್ಲಂಬಾಡಿ ಪದವು, ಶಾಲಾ ಅಭಿವೃದ್ಧಿ ಸಮಿತಿ ಹಳೆ ವಿದ್ಯಾರ್ಥಿ ಸಂಘ ಕಲಂಬಾಡಿ ಪದವು ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಂಬಾಡಿ ಪದವು ಇಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆಯನ್ನು ವಹಿಸಿದ ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷ ಕೆ. ನವೀನ್ ಚಂದ್ರ ಶೆಟ್ಟಿ ಅವರು ಮಾತನಾಡುತ್ತಾ,…

Read More

ಮನುಷ್ಯ ಒಂದೇ ಕಡೆ ನಿಲ್ಲದೆ ಪ್ರವಾಸ ಮಾಡಿದುದರಿಂದಲೇ ಇತಿಹಾಸದ ಅರಿವು ಆಗಲು ಸಹಕಾರಿಯಾಯಿತು. ಪ್ರವಾಸ ಮಾಡುವುದರಿಂದ ನೈಜ ಅನುಭವವನ್ನು ಪಡೆಯಬಹುದು ಎಂದು ಜೆ.ಸಿ.ಐನ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಟಿ.ವಿ.ಎನ್ ಮೂರ್ತಿಯವರು ಹೇಳಿದರು. ಅವರು ಕಾರ್ಕಳ ಅನಂತಶಯದ ರೋಟರಿ ಬಾಲ ಭವನದಲ್ಲಿ ನಡೆದ ರೋಟರಿ ಕ್ಲಬ್ ಕಾರ್ಕಳ ಮತ್ತು ರೋಟರಿ ಕ್ಲಬ್ ಮೂಡಬಿದ್ರಿ ಇದರ ಅಂತರ್ ಜಿಲ್ಲಾ ಜಂಟಿ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ರೋ.ಗಣೇಶ್ ಸಾಲಿಯಾನ್ ಸಂಪಾದಕತ್ವದ ಕ್ಲಬ್ಬಿನ ಗೃಹಪತ್ರಿಕೆ ಸರ್ವಿಸನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಸಮಾರಂಭದ ಅಧ್ಯಕ್ಷ ಹಾಗೂ ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷ ಕೆ. ನವೀನ್ ಚಂದ್ರ ಶೆಟ್ಟಿಯವರು ಜಂಟಿ ಸಭೆಗಳ ಮಹತ್ವದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಮೂಡಬಿದ್ರೆ ರೋಟರಿ ಕ್ಲಬ್ಬಿನ ಅಧ್ಯಕ್ಷ ನಾಗರಾಜ್ ಹೆಗ್ಡೆ ಕಾರ್ಕಳ ಕ್ಲಬ್ಬಿನ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದರು. ಮೂಡಬಿದ್ರಿ ರೋಟರಿ ಕ್ಲಬ್ಬಿನ ಸದಸ್ಯ ಹಾಗೂ ರೋಟರಿ ವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ ನಾರಾಯಣ ಪಿಎಂ ತನ್ನ ಕ್ಲಬ್ಬಿನ ಪರಿಚಯವನ್ನು ಮಾಡಿದರು.…

Read More

ಮೆಯಿಕ್ ಪಾಡಿ ಕುಂಟುಲಾ, ಬೇಲಿಗ್ ಪಾಡಿ ಮುಲ್ಲುಲಾ ಒಂಜೇ ಪಂದ್ ಒಂಜಿ ಗಾದೆ ಉಂಡು. ಮುಲ್ಪ ಕುಂಟು ಪಂಡ ತುತ್ತೈತ, ಕನ್ನಡದ ಉಡುಪು (Dress). ಅವು ಸೀರೆ, ಮುಂಡು, ಅಂಗಿ, ಚಲ್ಲನ ಒವುಲಾ ಆದಿಪ್ಪು. ಈ ಕುಂಟುಗುಲಾ, ಬೇಲಿಗ್ ಪಾಡುನ ಮುಲ್ಲುಗುಲಾ ದಾದೆ ಸಾಜ (ಸಾಮ್ಯ) ಉಂಡು? ನಮ ಮೆಯಿಕ್ ಪಾಡರೆ ಸುರು ಮಲ್ತಿನ ಕುಂಟು, ದರಿದರಿ (gradually) ತರೆವುಂಡು, ಬೊಕ್ಕ ಪರಿವುಂಡು. ಅಂಚಾದ್ ಪರತ್ ಕುಂಟುನು ಬದಲ್ ಮಲ್ಪೊಡು. ನಮ ಬೆನ್‌ತಿನ ಕಂಡೊಲೆಗ್ ಕಯಿಕಂಜಿ, ಪಂಜಿ ಬರಂದಿಲೆಕ್ಕ ಸುತ್ತ ಬೇಲಿ ಪಾಡುವ. ಬೇಲಿಡ್ ಎಲ್ಯ ಮಲ್ಲ ಇಡೆ ತೂದು ಕಯಿಕಂಜಿ ಬೇಲಿ ನುರ್ತುದು ಕಡಿ ಮಲ್ಪುವ. ಆ ಕಡಿನ್ ಮುಚ್ಚರೆ ಕರ್ಂಡೆದ, ಚೂರಿ ಮುಲ್ಲುದ ಅತ್ತ್‌ಡ ಸೀಗೆದ ಮುಲ್ಲು ಕಡ್ತ್‌ದ್, ಕಬೆಕೋಲುಡು ಕಂತ್ ಪಾಡುವ. ಎಚ್ಚಾದ್ ಕಾರ್ತೆಲ್ (ಏನೆಲ್)ದ ಬೆನ್ನಿ ಮುಗ್ಗಿದಾಕಿನ, ಬೊಟ್ಟು ಕಂಡೊಲೆನ ಬೇಲಿಲೆನ ಪೂ‌ರ ಒರ ಕಡಿಕ್‌ಲೆನ್ ನಾಡ್ ತೂದು, ಐಕ್ ಪೊಸತಾದ್ ಮುಲ್ಲು ಪತ್ತಾವೆರ್. ಅಂಚ…

Read More

ಸುಳ್ಯ ಬಂಟರ ಸಂಘ ತನ್ನ ಸಮುದಾಯಪರ ಕಾಳಜಿಗೆ ಹೆಸರು ಪಡೆದಿದ್ದು, ಇದೀಗ ಹೆಸರಾಂತ ಕ್ರೀಡಾಪಟು, ನಿವೃತ್ತ ಕ್ರೀಡಾ ಶಿಕ್ಷಕ ಹಾಗೂ ಜನಪ್ರಿಯ ಸಂಘಟಕ ಶ್ರೀ ಬಿ ಸುಭಾಶ್ಚಂದ್ರ ರೈಯವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಸುಳ್ಯ ಪರಿಸರದ ಬಂಟ ಬಾಂಧವರಿಗೆ ಇವರಿಂದ ವಿಶೇಷ ಕಾರ್ಯ ಸಾಧನೆಗಳ ನಿರೀಕ್ಷೆ ಸಹಜವಾಗಿಯೇ ಇದೆ. ಪ್ರತಿಷ್ಠಿತ ಪರಂಪರೆಯಿಂದ ಕೂಡಿದ ಬಂಟ ಕುಟುಂಬವಾದ ಅಳೇರಿತೋಟ ದಿವಂಗತ ಜತ್ತಪ್ಪ ರೈ ಹಾಗೂ ದಿವಂಗತ ಲಕ್ಷ್ಮೀ ಜೆ ರೈ ದಂಪತಿಗೆ ಸುಪುತ್ರನಾಗಿ ಜನಿಸಿದ ಸುಭಾಶ್ಚಂದ್ರ ರೈ ಅವರು ಬಾಳಿಲದ ವಿದ್ಯಾ ಬೋಧಿನಿ ಶಿಕ್ಷಣ ಸಂಸ್ಥೆಯ ಮೂಲಕ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿದ ಬಳಿಕ ಬೆಳ್ಳಾರೆ ಪಿಯು ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪೂರೈಸಿದರು. ನಂತರದ ವರ್ಷಗಳಲ್ಲಿ ತನ್ನ ಆಸಕ್ತಿಯ ವಿಭಾಗದಲ್ಲಿ ತರಬೇತಿ ಪಡೆಯಲು ಬೆಂಗಳೂರಿಗೆ ತೆರಳಿ ಅಲ್ಲಿನ ವೈ.ಎಂ.ಸಿ.ಎ ತರಬೇತಿ ಕೇಂದ್ರದಲ್ಲಿ ದೈಹಿಕ ಶಿಕ್ಷಣ ಕುರಿತ ವಿಶೇಷ ತರಬೇತಿ ಪಡೆದು, ತನ್ನ ಆರಂಭಿಕ ವೃತ್ತಿ ಜೀವನವೆಂಬಂತೆ ಏಳು ವರ್ಷಗಳ ಪರ್ಯಂತ ನೆಟ್ಟಣಿಗೆ…

Read More

ಒಡಿಶಾದ ಭುವನೇಶ್ವರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಯೂತ್ ವಾಲಿಬಾಲ್ ಚಾಂಪಿಯನ್ ಶಿಪ್ ಪಂದ್ಯಾಟವು ಮಾರ್ಚ್ ತಿಂಗಳಿನಲ್ಲಿ ನಡೆಯಲಿದ್ದು, 26 ರ ವಿಭಾಗದ ಯೂತ್ ನ್ಯಾಷನಲ್ ಕರ್ನಾಟಕ ರಾಜ್ಯ ತಂಡದಲ್ಲಿ ಪಂಜದ ಚಿನ್ಮಯ ಎಸ್ ಆಳ್ವ ನಾಯಕನಾಗಿ ಆಯ್ಕೆಯಾಗಿರುತ್ತಾರೆ. ಈತ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ರಸಾದ್ ಆಳ್ವ ಮತ್ತು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲರಾದ ಶಶಿಕಲಾ ಎಸ್ ಆಳ್ವ ದಂಪತಿಗಳ ಪುತ್ರ. ಚಿನ್ನಯ್ ರವರು ಪ್ರಸ್ತುತ ಎಸ್.ಆರ್.ಎಂ ಯೂನಿವರ್ಸಿಟಿಯಲ್ಲಿ ಪ್ರಥಮ ಬಿ.ಎಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಚಿತ್ರ, ವರದಿ : ಉಮಾಪ್ರಸಾದ್ ರೈ ನಡುಬೈಲು

Read More

ಹೌದು, ಬೇಸಿಗೆ ಕಾಲ ಬಂತೆಂದರೆ ಸಾಕು ನೆತ್ತಿಯ ಮೇಲೆ ಸುಡುಬಿಸಿಲಿನ ಅನುಭವ. ಮಧ್ಯಾಹ್ನದ ಹೊತ್ತಿಗಂತೂ ಜನಸಾಮಾನ್ಯರಿಗೆ ಮನೆಯಿಂದ ಹೊರಬರಲಾರದ ಸಂಕಷ್ಟದ ಸ್ಥಿತಿ. ವರ್ಷಗಳು ಉರುಳಿದಂತೆ ಭೂಮಿಯ ಮೇಲಿನ ತಾಪ ಹೆಚ್ಚುತ್ತಿದ್ದು, ಮಳೆಯ ಪ್ರಮಾಣ ಕಡಿಮೆಯಾಗತೊಡಗುತ್ತಿರುವುದಲ್ಲದೆ ಹವಾಮಾನದಲ್ಲಿನ ಏರುಪೇರು, ಪ್ರಾಕೃತಿಕ ಅಸಮತೋಲನ ಕೂಡಾ ಇಂತಹ ಪ್ರಕ್ರಿಯೆಗಳಿಗೆ ಒಂದು ಕಾರಣವೆನ್ನಬಹುದು. ಈಗ ಮದುವೆ, ಜಾತ್ರೆ, ಹಬ್ಬ ಹರಿದಿನಗಳ ಭರಾಟೆಯೂ ತುಸು ಜೋರಾಗಿಯೇ ಇದೆ. ಹವಾಮಾನದ ವೈಪರೀತ್ಯ, ಮಳೆಯ ಕುಂಠಿತದ ಕಾರಣಕ್ಕಾಗಿ ಬಯಲು ಸೀಮೆ, ಉತ್ತರ ಕರ್ನಾಟಕ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ನೀರಿಗಾಗಿ ಆಹಾಕಾರ ಉಂಟಾಗುವುದನ್ನು ಕಾಣುತ್ತೇವೆ. ಪ್ರತಿ ಬಾರಿಯಂತೆ ಇನ್ನೊಂದು ತಿಂಗಳು ಕಳೆದರೆ ರಾಜ್ಯದ ಪ್ರಮುಖ ಹಳ್ಳ, ನದಿ, ಕೆರೆ, ಡ್ಯಾಮ್, ತೊರೆಗಳು ಬತ್ತಿ ಹೋಗಲಿವೆ. ನೀರಿನ ಪ್ರಮಾಣ ಕುಂಠಿತಗೊಂಡಾಗ ಮಾನವನ ದೈನಂದಿನ ಚಟುವಟಿಕೆಗಳು, ಪ್ರಾಣಿ ಸಂಕುಲ, ವನ್ಯ ಜೀವಿಗಳ ಮೇಲೂ ಕೂಡಾ ವ್ಯತಿರಿಕ್ತ ಪರಿಣಾಮ ಬೀರತೊಡಗುತ್ತದೆ. ಪ್ರಸ್ತುತ ಯಾವುದೇ ಸಭೆ ಸಮಾರಂಭಗಳಲ್ಲಿ ಭಾಗವಹಿಸಿದರೂ ಅಥವಾ ಮನೆಯಿಂದ ಹೊರ…

Read More

ಜನವರಿಯಲ್ಲಿ ನಡೆದ ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ಒಟ್ಟು 14 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಸಾಧನೆ ಮೆರೆದಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಈ ವಿಭಾಗದಲ್ಲಿ ಶೇಕಡಾ 19.23 ಫಲಿತಾಂಶ ದಾಖಲಾಗಿದ್ದರೆ, ಆಳ್ವಾಸ್ ಕಾಲೇಜು ಶೇಕಡಾ 31 ಫಲಿತಾಂಶ ಪಡೆದಿದೆ. ಕಾಲೇಜಿನ ಬಿ.ಕಾಂ ವಿದ್ಯಾರ್ಥಿಗಳಾದ ಶ್ರೇಯಾ ಬಂಗೇರ, ಪ್ರೀಶಾ ಎಸ್, ಜೊವಿಟಾ, ಸೀಮಾ, ಸಚನ್, ಪವಿತ್ರಾ, ಸಿಂಚನಾ ಕೆ., ಅನನ್ಯಾ, ಕುಶಲ್, ಶಿಬಾನಿ, ದೇಕಿ, ಪಲ್ಲವಿ ಮುಧೋಲೆ ಮತ್ತು ಆದಿತ್ಯ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ. ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ ಆಳ್ವ, ಪ್ರಾಂಶುಪಾಲ ಡಾ| ಕುರಿಯನ್ ಅಭಿನಂದಿಸಿದ್ದಾರೆ.

Read More