Author: admin

ಕಾರ್ಕಳದ ಸಾಣೂರು ಗ್ರಾಮದ ಪ್ರಕೃತಿ ರಮಣೀಯ ಪರಿಸರದಲ್ಲಿ, ಹಸಿರು ವನರಾಶಿಯ ಮಡಿಲಲ್ಲಿ ತಲೆಯೆತ್ತಿರುವ ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಮತ್ತು ಪಿಯು ಕಾಲೇಜು ಕೇವಲ ಶಿಕ್ಷಣ ಸಂಸ್ಥೆಯಲ್ಲ, ಅದೊಂದು ಸಂಸ್ಕಾರದ ದೀಪಸ್ತಂಭ. ಪಟೇಲ್ ಮುದ್ದಣ್ಣ ಶೆಟ್ಟಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿಗಳಿಗೆ ಪುಸ್ತಕದ ಜ್ಞಾನದೊಂದಿಗೆ ಬದುಕಿನ ಮೌಲ್ಯಗಳನ್ನು ಧಾರೆ ಎರೆಯಲಾಗುತ್ತಿದೆ. ಒಂದನೇ ತರಗತಿಯಿಂದ ಪಿಯುಸಿವರೆಗೆ ಇಲ್ಲಿ ದೊರೆಯುವ ಶಿಕ್ಷಣವು ಮಕ್ಕಳ ಸುಪ್ತ ಕೌಶಲ್ಯಗಳನ್ನು ಜಾಗೃತಗೊಳಿಸಿ, ಅವರನ್ನು ನಾಳೆಯ ಸಮಾಜಮುಖಿ ನಾಯಕರನ್ನಾಗಿ ರೂಪಿಸುವ ಪವಿತ್ರ ಕಾಯಕದಲ್ಲಿ ತೊಡಗಿಸಿಕೊಂಡಿದೆ. ​ರಾಜ್ಯ ಮತ್ತು ಸಿಬಿಎಸ್‌ಇ ಪಠ್ಯಕ್ರಮಗಳ ಸಮನ್ವಯದೊಂದಿಗೆ ಇಲ್ಲಿನ ಬೋಧನಾ ಕ್ರಮವು ಅತ್ಯಂತ ವಿಶಿಷ್ಟವಾಗಿದೆ. ಅನುಭವಿ ಶಿಕ್ಷಕ ವೃಂದವು ಇಂಟರಾಕ್ಟಿವ್ ಕ್ಲಾಸ್‌ ರೂಮ್‌ಗಳು ಮತ್ತು ಆಧುನಿಕ ಡಿಜಿಟಲ್ ತಂತ್ರಜ್ಞಾನದ ಮೂಲಕ ಕಲಿಕೆಯನ್ನು ಆಕರ್ಷಕವಾಗಿಸಿದೆ. ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿ, ಪಿಸಿಎಂಸಿ ಹಾಗೂ ವಾಣಿಜ್ಯ ವಿಭಾಗಗಳಿದ್ದು, ಇದರೊಂದಿಗೆ ನೀಟ್, ಜೆಇಇ, ಕೆಸಿಇಟಿ, ಸಿಎ ಮತ್ತು ಯು.ಪಿ.ಎಸ್.ಸಿ ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ಫೌಂಡೇಶನ್ ತರಬೇತಿ ನೀಡಲಾಗುತ್ತದೆ. ಇದು ವಿದ್ಯಾರ್ಥಿಗಳಲ್ಲಿ ಕೇವಲ ಪರೀಕ್ಷಾ ಸಿದ್ಧತೆಯನ್ನಷ್ಟೇ…

Read More

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ದ.ಕ ಜಿಲ್ಲಾ ಶಾಖೆಯ ಮುಂದಿನ 3 ವರ್ಷಗಳ ಅವಧಿಗೆ ಆಡಳಿತ ಮಂಡಳಿ ಸದಸ್ಯರ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಆರ್ಥಿಕ ಪ್ರಕೋಷ್ಠದ ಸಂಚಾಲಕ ಸಿ.ಎ ಶಾಂತರಾಮ್ ಶೆಟ್ಟಿ ನೇತೃತ್ವದ ತಂಡ ಎಲ್ಲಾ 10 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ದಾಖಲಿಸಿದೆ. ಚುನಾವಣಾಧಿಕಾರಿಯಾಗಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಮಹೇಶ್ ಕುಮಾರ್ ಯು ಮತ್ತು ಸಹಾಯಕ ಚುನಾವಣಾಧಿಕಾರಿಯಾಗಿ ನಿವೃತ್ತ ಚುನಾವಣಾ ಉಪ ತಹಶೀಲ್ದಾರ್ ರಾಮಚಂದ್ರ ಬಿ ಕಾರ್ಯನಿರ್ವಹಿಸಿದ್ದರು.

Read More

ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳ ಸಮಿತಿ ಉಡುಪಿ ವತಿಯಿಂದ ಉಡುಪಿ ಕಂಬಳ ನಡೆಯಲ್ಲಿದ್ದು, ಇದರ ಪೂರ್ವಭಾವಿ ಸಭೆ ಕಾಪು ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿಯವರ ನೇತೃತ್ವದಲ್ಲಿ ಫೆಬ್ರವರಿ 23 ರಂದು ಉಡುಪಿಯ ಶಾಂಭವಿ ಹೋಟೆಲ್ ನಲ್ಲಿ ನಡೆಯಿತು. ಉಡುಪಿ ಕಂಬಳದ ಶಂಕುಸ್ಥಾಪನೆ ಹಾಗೂ ಪೋಸ್ಟರ್ ಅನಾವರಣ ಸಮಾರಂಭ ಇದೇ ತಿಂಗಳ 28 ರಂದು ಪೂರ್ವಾಹ್ನ 11 ಗಂಟೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಕಂಬಳ ಕೋಣದ ಯಜಮಾನರಾದ ನಂದಳಿಕೆ ಶ್ರೀಕಾಂತ್ ಭಟ್, ಕೊಳಚೂರು ಕೊಂಡೆಟ್ಟು ಸುಕುಮಾರ್ ಶೆಟ್ಟಿ, 80 ಬಡಗುಬೆಟ್ಟು ಬ್ರಹ್ಮಬೈದರ್ಕಳ ಗರೋಡಿ ಮೊಕ್ತೇಸರರಾದ ಅರುಣಾಚಲ ಹೆಗ್ಡೆ, ಶ್ರೀ ವೈಷ್ಣವಿ ದುರ್ಗಾ ದೇವಸ್ಥಾನ ಮೊಕ್ತೇಸರರಾದ ಜಯರಾಜ್ ಹೆಗ್ಡೆ, ಉದ್ಯಮಿಗಳಾದ ಶಿವಪ್ರಸಾದ್ ಹೆಗ್ಡೆ, ರಾಜ್ಯ ಕಂಬಳ ಸಮಿತಿಯ ಸದಸ್ಯರಾದ ವಿಜಯ್ ಕುಮಾರ್ ಕಂಗಿನಮನೆ ಹಾಗೂ ಕೋಟಿ ಚೆನ್ನಯ್ಯ ಜೋಡುಕೆರೆ ಕಂಬಳ ಸಮಿತಿ ಉಡುಪಿಯ ಪದಾಧಿಕಾರಿಗಳು ಮತ್ತು ಕಂಬಳ ಅಭಿಮಾನಿಗಳು ಉಪಸ್ಥಿತರಿದ್ದರು.

Read More

ಉಡುಪಿ ಕೆ.ಎಸ್.ಆರ್.ಟಿ.ಸಿ ಹಳೆ ಬಸ್ಸು ನಿಲ್ದಾಣದ ಬಳಿಯ ಶಾಂಭವಿ ಹೋಟೆಲ್ ನಲ್ಲಿ ಗಿರಿಜಾ ಹೆಲ್ತ್ ಕೇರ್ ಆಂಡ್ ಸರ್ಜಿಕಲ್ಸ್ ನ ಆಡಳಿತ ನಿರ್ದೇಶಕ ರವೀಂದ್ರ ಶೆಟ್ಟಿ ಕಡೆಕಾರು ಮತ್ತು ನಿರೂಪ್ ಕುಮಾರ್ ಇವರ ನೂತನ “ಮನ್ ಪಸಂದ್” ಬಾರ್ ಆಂಡ್ ಫ್ಯಾಮಿಲಿ ರೆಸ್ಟೋರೆಂಟ್ ಇದರ ಉದ್ಘಾಟನೆಯನ್ನು ಉಜ್ವಲ್ ಗ್ರೂಪ್ ನ ಸಿಎಂಡಿ ಪುರುಷೋತ್ತಮ್ ಶೆಟ್ಟಿಯವರು ನೆರವೇರಿಸಿದರು. ವಿಭಿನ್ಯವಾದ ಈ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ವಿಶಾಲವಾದ ಪಾರ್ಟಿ ಹಾಲ್ ಸಹಿತ ಉತ್ತಮ ಪಾರಂಪರಿಕ ರುಚಿ ಶುಚಿಯ ಖಾದ್ಯಗಳ ಮಹಾಪೂರವೇ ಇಲ್ಲಿದೆ. ಎಲ್ಲಾ ವಿಧದ ಮೀನು ಖಾದ್ಯಗಳಿಗೆ ವಿಶೇಷ ಅಧ್ಯತೆ ನೀಡಲಾಗಿದೆ. ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಸಹಕಾರಿ ಧುರೀಣ ಜಯಕರ ಶೆಟ್ಟಿ ಇಂದ್ರಾಳಿ, ಹೋಟೆಲು ಉದ್ಯಮಿ ತಲ್ಲೂರು ಶಿವರಾಮ ಶೆಟ್ಟಿ, ಬಿಜೆಪಿ ಮುಖಂಡ ಉದಯ ಕುಮಾರ್ ಶೆಟ್ಟಿ, ಅಂಡಾರು ದೇವಿಪ್ರಸಾದ್ ಶೆಟ್ಟಿ, ವಾಲ್ಟರ್ ನಂದಳಿಕೆ, ಅರವಿಂದ ಬೋಳಾರ್ ಮತ್ತು ಅನೇಕ ಗಣ್ಯರು ಈ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Read More

ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಫೆಬ್ರವರಿ 14 ಮತ್ತು 15ರಂದು ನಡೆದ ಕರ್ನಾಟಕ ರಾಜ್ಯ ಮಾಸ್ಟರ್ಸ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಮಿಶ್ರ ಡಬಲ್ಸ್ ನಲ್ಲಿ ಗೌತಮ್ ಶೆಟ್ಟಿ ಹಾಗೂ ಶಾಲಿನಿ ರಾಜೇಶ್ ಶೆಟ್ಟಿ ಜೋಡಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇವರು ಮಾರ್ಚ್ ತಿಂಗಳಲ್ಲಿ ಗೋವಾದಲ್ಲಿ ನಡೆಯಲಿರುವ ರಾಷ್ಟ್ರೀಯ ಮಾಸ್ಟರ್ಸ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆ ಅರ್ಹತೆ ಪಡೆದಿದ್ದಾರೆ.

Read More

ಶಾರದಾ ಮಾಸದ ಕೂಟ ಸುರತ್ಕಲ್ ಇದರ ಆಶ್ರಯದಲ್ಲಿ ಫೆಬ್ರವರಿ 14ರಂದು ಹೊಸಬೆಟ್ಟು ಶಾರದಾ ಮಂದಿರದಲ್ಲಿ ಇಡೀ ರಾತ್ರಿಯ ಯಕ್ಷಗಾನ ತಾಳಮದ್ದಳೆ ಜರಗಿತು. ಮಹಾ ಶಿವರಾತ್ರಿ ಅಂಗವಾಗಿ ಜರಗಿದ ‘ಗಿರಿಜಾ ಕಲ್ಯಾಣ – ಇಂದ್ರಜಿತು ಕಾಳಗ’ ಅಹೋರಾತ್ರಿ ತಾಳಮದ್ದಳೆಯನ್ನು ಸಾಂಪ್ರದಾಯಿಕ ಗಣಪತಿ ಸ್ತುತಿಯ ಮೂಲಕ ಯಕ್ಷಗಾನ ಶೈಲಿಯಲ್ಲಿ ಉದ್ಘಾಟಿಸಲಾಯಿತು. ವಿಶೇಷ ಅತಿಥಿಗಳಾಗಿ ವಿಶ್ವೇಶ್ವರ ಬಧವಿದೆ, ರಮಾ ವೆಂಕಟರಾವ್, ವೈ. ರಾಘವೇಂದ್ರ ರಾವ್, ಡಾ. ಸತೀಶ್ ಪುಣಿಂಚಿತ್ತಾಯ ಮತ್ತು ಮಧುಕರ ಭಾಗವತರು ಹಿಮ್ಮೇಳದಲ್ಲಿ ಭಾಗವಹಿಸಿದರು. ಸಂಘಟಕರಾದ ವಿನಯ ಆಚಾರ್ಯ ಹೊಸಬೆಟ್ಟು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರು ಅಹೋರಾತ್ರಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಮೊದಲ ಪ್ರಸಂಗ ‘ಗಿರಿಜಾ ಕಲ್ಯಾಣ’ದಲ್ಲಿ ಭಾಗವತರಾಗಿ ಸತೀಶ್ ಪುಣಿಂಚಿತ್ತಾಯ, ರಾಜಾರಾಮ ಹೊಳ್ಳ ಕೈರಂಗಳ, ಡಾ. ಪ್ರಖ್ಯಾತ್ ಶೆಟ್ಟಿ ಅಳಿಕೆ, ಚೆಂಡೆ ಮದ್ದಲೆಯಲ್ಲಿ ಸಂಪತ್ ಬಾಬು, ಹರಿಶ್ಚಂದ್ರ ನಾಯಗ ಮಾಡೂರು, ಲಕ್ಷ್ಮೀಶ ಉಪಾಧ್ಯಾಯ, ಹರೀಶ್ ಹೆಬ್ಬಾರ್, ಚಂದ್ರಶೇಖರ ಕಾರಂತ್ ಭಾಗವಹಿಸಿದ್ದರು. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ (ದೇವೇಂದ್ರ), ಪಶುಪತಿ ಶಾಸ್ತ್ರಿ…

Read More

ಮುಂಬಯಿ:- ಇಂದು ಮುಂಬೈ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಮತ್ತು ಡಾ.ವಿಶ್ವನಾಥ ಕಾರ್ನಾಡ್ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳುವ ಭಾಗ್ಯ ನನ್ನದಾಗಿದೆ. ಇಲ್ಲಿನ ಹಲವು ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದೇನೆ. ಇಲ್ಲಿನ ಶಿಸ್ತು, ಸಮಯ ಪಾಲನೆ ಕಾರ್ಯಕ್ರಮದ ಅಚ್ಚುಕಟ್ಟುತನಕ್ಕೆ ಬೆರಗಾಗಿದ್ದೇನೆ. ನನಗೆ ಗೊತ್ತಿಲ್ಲದ ಎಷ್ಟೋ ವಿಚಾರಗಳನ್ನು ಇಲ್ಲಿ ಬಂದು ತಿಳಿದುಕೊಂಡಿದ್ದೇನೆ. ವಿಶ್ವನಾಥ ಕಾರ್ನಾಡ್ ಅವರ ಹಾಗೆ ನಾನು ಕೂಡಾ ಮದರ್ ಇಂಡಿಯಾ ಶಾಲೆಯ ಹಳೆಯ ವಿದ್ಯಾರ್ಥಿಗಳು. ಅವರೊಂದಿಗೆ ನನಗೆ ತುಂಬಾ ಆತ್ಮೀಯ ಒಡನಾಟವಿದೆ. ಅವರ ಸಾಹಿತ್ಯ ಸಾಧನೆ ನೋಡಿ ನಾನು ಸಂತೋಷ ಪಡುತ್ತೇನೆ. ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಸ್ಯುತ್ಯರ್ಹ. ಇಂದು ಪ್ರಶಸ್ತಿ, ಬಹುಮಾನ ಪಡೆದ ಎಲ್ಲರಿಗೂ ಅಭಿನಂದನೆಗಳು ಎಂದು ಉದ್ಯಮಿ, ಸಮಾಜಸೇವಕ ಸುರೇಂದ್ರ ಪೂಜಾರಿ ಅವರು ಶುಭ ಹಾರೈಸಿದರು. ಅವರು ಫೆಬ್ರವರಿ ೨೧ರ ಶನಿವಾರ ಮರಾಠಿ ವಿಭಾಗ, ವಿದ್ಯಾನಗರಿ, ಇಲ್ಲಿ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಹಾಗೂ ಡಾ.ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಿದ್ದ…

Read More

ಸಿಂಧೂರಂ ಸೌಂದರ್ಯಾ ಸಾಧನಂ ಎಂಬ ಮಾತಿದೆ. ಅದರಂತೆ ಕುಂಕುಮ ಧರಿಸುವ ನಾರಿಯನ್ನು ನೋಡಿದರೆ ಸಾಕ್ಷಾತ್ ಮಂಗಳ ಗೌರಿಯಂತೆ ಎನ್ನುವುದುಂಟು. ಭಾರತೀಯ ಸಂಸ್ಕೃತಿಯಲ್ಲಿ ಕುಂಕುಮಕ್ಕೆ ಪವಿತ್ರ ಸ್ಥಾನವಿದೆ. ಮಹಿಳೆಯರು ಅದರಲ್ಲೂ ವಿವಾಹಿತ ಮಹಿಳೆಯರು ಹಣೆಯ ಮೇಲೆ ಕುಂಕುಮ ಇಡುವುದು ಮುತ್ತೈದೆತನದ ಸಂಕೇತವಾಗಿದೆ. ಹುಬ್ಬುಗಳ ನಡುವೆ ಕುಂಕುಮವಿರಿಸುವುದು ಮದುವೆಯಾದ ಸ್ತ್ರೀಯರು ಮಾತ್ರವಲ್ಲ, ಹೆಣ್ಣು ಮಕ್ಕಳು ಕುಂಕುಮ ಇಡುವುದು ಸಂಪ್ರದಾಯವಾಗಿದೆ. ಭ್ರೂಮಧ್ಯ ಕುಂಕುಮ ಧರಿಸಿದರೆ ಅದರಿಂದ ದೇಹದ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ವೈಜ್ಞಾನಿಕವಾಗಿಯೂ ಒಪ್ಪಲಾಗಿದೆ. ಭ್ರೂಮಧ್ಯೆ ಕುಂಕುಮವಿರಿಸುವ ಭಾಗದಲ್ಲಿ ನಿರ್ನಾಳ ಗ್ರಂಥೀಗಳಲ್ಲಿಯೇ ಮುಖ್ಯವಾಗಿರುವ ಪಿಟ್ಯುಟರಿ ಗ್ರಂಥಿಯಿದೆ. ಕೆಂಪು ಬಣ್ಣ ಉತ್ತೇಜಕ ಗುಣವನ್ನು ಹೊಂದಿದೆ. ಅದರ ಹಾರ್ಮೋನ್ ನಿಯಮಿತವಾಗಿ ಸ್ರವಿಸುವಂತೆ. ಇನ್ನು ಕುಂಕುಮ ಹಚ್ಚುವುದರಿಂದ ಋಣಾತ್ಮಕ ಶಕ್ತಿ ದೂರವಾಗುತ್ತದೆ. “ಕಾಸಿನಗಲದ ಕುಂಕುಮ ಧರಿಸಿದ ಪತಿವ್ರತೆಗೆ ಕೆಟ್ಟ ದೃಷ್ಟಿ ತಗಲುವುದಿಲ್ಲ. ಮನೆಗೆ ಅತಿಥಿಗಳು ಬಂದಾಗ, ಶುಭ ಸಮಾರಂಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಅರಶಿನ ಕುಂಕುಮ ನೀಡಿ ಮುತ್ತೈದೆಯರನ್ನು ಗೌರವಿಸುವುದು ಪ್ರಾಚೀನ ಸಂಪ್ರದಾಯ. ಅದು ಮಂಗಲಪ್ರದವೆಂದು ನಂಬಿಕೆ.…

Read More

ನಾಡಿನ ದೊರೆ ಸಿದ್ದರಾಮಯ್ಯನವರು ಶಾಲಾ ಕಾಲೇಜುಗಳಲ್ಲಿ ಮೊಬೈಲ್ ನಿಷೇಧಿಸುವ ಸೂಚನೆ ಕೊಟ್ಟಿದ್ದಾರೆ. ಇದು ಕೇವಲ ಆಡಳಿತಾತ್ಮಕ ಆದೇಶವಲ್ಲ. ಇದು ಸಮಾಜದ ಮನಸ್ಸಿನ ದುರಸ್ತಿಗೆ ಪ್ರಭುತ್ವ ಇಟ್ಟ ಗಟ್ಟಿ ಹೆಜ್ಜೆ. ರಸ್ತೆ, ಸೇತುವೆ, ನೀರು, ವಿದ್ಯುತ್, ಉದ್ಯೋಗ ಇವೆಲ್ಲಾ ಅಭಿವೃದ್ಧಿಯ ಅಳತೆಗೋಲುಗಳು. ಆದರೆ ಮಕ್ಕಳ ಮನಸ್ಸನ್ನು ಕಟ್ಟುವುದು, ಅವರ ಒಳಗಿನ ಮನುಷ್ಯನನ್ನು ಉಳಿಸುವುದು ಇದು ಇನ್ನೂ ದೊಡ್ಡ ಅಭಿವೃದ್ಧಿ. ಎರಡೂ ಸಮಾನ ತೂಕದ ಕೆಲಸಗಳು. ಒಂದನ್ನು ಬಿಟ್ಟು ಮತ್ತೊಂದು ನಡೆಯದು. ಇವತ್ತಿನ ಬಹು ಪಾಲು ಶಾಲಾ ಕಾಲೇಜುಗಳ ತರಗತಿಗಳು ಮೌನವಾಗಿವೆ. ಹಾಗಂತ ಅದು ನೆಮ್ಮದಿಯ ಶಾಂತಿ ಅಲ್ಲ. ನಿರಾಸಕ್ತಿ. ಕಣ್ಣುಗಳು ತೆರೆದಿವೆ, ಆದರೆ ಮನಸ್ಸು ಮುಚ್ಚಿಕೊಂಡಿದೆ. ಕೈಯಲ್ಲಿ ಮೊಬೈಲ್ ಇದ್ದರೆ ಸಾಕು ಜಗತ್ತು ಅಲ್ಲಿಯೇ ಸಿಕ್ಕಿಬಿಡುತ್ತದೆ. ಆದರೆ ಆ ಜಗತ್ತಿನಲ್ಲಿ ಮನುಷ್ಯತ್ವ ಇಲ್ಲ. ಅಲ್ಲಿರುವುದು ವೇಗ, ಸ್ಪರ್ಧೆ, ಪ್ರದರ್ಶನ, ಬಯಕೆ. ಪ್ರೀತಿ, ತಾಳ್ಮೆ, ಸಹನೆ, ಸಂವೇದನೆ ಇವೆಲ್ಲಾ ಮೌನವಾಗಿ ಮಣ್ಣಾಗುತ್ತಿವೆ. ಮೊಬೈಲ್ ಮಕ್ಕಳ ಕೈಯಲ್ಲಿ ಒಂದು ಸಾಧನವಾಗದೆ, ಅವರ ಮನಸ್ಸನ್ನು ಆಳುವ ಸ್ವಾಮಿಯಾಗಿಬಿಟ್ಟಿದೆ.…

Read More

ತೋಕೂರು ಶ್ರೀ ಕ್ಷೇತ್ರ ಕನಿಲ ಪಿಲಿಚಾಮುಂಡಿ, ಧೂಮಾವತಿ ಹಾಗೂ ಜಾರಂದಾಯ ದೈವಸ್ಥಾನದಲ್ಲಿ ವರ್ಷಾವಧಿ ಬಂಡಿ ನೇಮೋತ್ಸವ ‘ಕನಿಲದಾಯನ’ ಮಾರ್ಚ್ 1 ರಿಂದ 4 ರವರೆಗೆ ಜರುಗಲಿದೆ. ಫೆಬ್ರವರಿ 25 ರಂದು ನೂತನ ಬಂಡಿಗಳ ಸಮರ್ಪಣೆ ನಡೆಯಲಿದ್ದು, ಆ ಪ್ರಯುಕ್ತ ಸಂಜೆ 4 ಗಂಟೆಗೆ ಬಂಡಿಯ ಮೆರವಣಿಗೆ ಸುರತ್ಕಲ್ ಜಂಕ್ಷನ್ ನಿಂದ ಹೊರಟು ತೋಕೂರು ಕನಿಲ ದೈವಸ್ಥಾನಕ್ಕೆ ಆಗಮಿಸಿ ಬಂಡಿ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ. ಮಾರ್ಚ್ 1 ರಂದು ಬೆಳಿಗ್ಗೆ 9 ಗಂಟೆಗೆ ನವಕ ಪ್ರಧಾನ ಮತ್ತು ರಾತ್ರಿ 9 ಗಂಟೆಗೆ ಕುಡುಂಬೂರು ಗುತ್ತಿನಿಂದ ದೈವಸ್ಥಾನದವರೆಗೆ ‘ಭಂಡಾರ’ ಮೆರವಣಿಗೆ ಮೂಲಕ ಹೊರಡಲಿದೆ. ಮಾರ್ಚ್ 2 ರಂದು ರಾತ್ರಿ 9 ಗಂಟೆಗೆ ಮೈಸಂದಾಯ, ಕಾಂತೇರಿ ಧೂಮಾವತಿ ಬಂಟ ಮತ್ತು ಬೊಬ್ಬರ್ಯ ದೈವಗಳಿಗೆ ನೇಮೋತ್ಸವ ಹಾಗೂ ಬಂಡಿ ಉತ್ಸವ ಜರುಗಲಿದೆ. ಮಾರ್ಚ್ 3 ರಂದು ರಾತ್ರಿ 9 ಗಂಟೆಗೆ ಜಾರಂದಾಯ ಬಂಟ, ಸರಳ ಧೂಮಾವತಿ ಬಂಟ ನೇಮೋತ್ಸವ ಮತ್ತು ಬಂಡಿ ಉತ್ಸವ ನೆರವೇರಲಿದೆ. ಮಾರ್ಚ್ 4…

Read More