Author: admin

ಕತಾರ್ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಸಮಾಜಸೇವಕ, ಸಂಘಟಕ ಸುಖರಾಮ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿಮ್ಮ ನೇತೃತ್ವದಲ್ಲಿ ಸಂಘವು ಇನ್ನಷ್ಟು ಬೆಳೆಯಲಿ, ಸಮಾಜ ಸೇವೆಯಲ್ಲಿ ಹೊಸ ಮೈಲುಗಲ್ಲುಗಳನ್ನು ಸಾಧಿಸಲಿ ಎಂಬುದು ನಮ್ಮ ಆಶಯ. ನಿಮ್ಮ ಮುಂದಿನ ಕಾರ್ಯಯಾತ್ರೆಗೆ ಹಾರ್ದಿಕ ಶುಭಾಶಯಗಳು.

Read More

ಹಳೆ ತಲೆಮಾರಿನ ಯಕ್ಷಗಾನ ಅರ್ಥಧಾರಿ, ಶಿಕ್ಷಕ ಮತ್ತು ಶಂಭೂರು ಗ್ರಾಮದ ಪಟೇಲ ದಿ. ಬೊಂಡಾಲ ಜನಾರ್ಧನ ಶೆಟ್ಟಿ ಮತ್ತು ಅವರ ಪುತ್ರ ಹವ್ಯಾಸಿ ಯಕ್ಷಗಾನ ಕಲಾವಿದ, ನಿವೃತ್ತ ಭೂಮಾಪನ ಅಧಿಕಾರಿ ದಿ. ಬೊಂಡಾಲ ರಾಮಣ್ಣ ಶೆಟ್ಟರ ಹೆಸರಿನಲ್ಲಿ ಕೊಡಮಾಡುವ ‘ಬೊಂಡಾಲ ಪ್ರಶಸ್ತಿ’ಯನ್ನು ಕಟೀಲು ಮೇಳದ ಹಿರಿಯ ವೇಷಧಾರಿ ಲಕ್ಷ್ಮಣ ಶೆಟ್ಟಿ ತಾರೆಮಾರ್ ಅವರಿಗೆ ನೀಡಿ ಗೌರವಿಸಲಾಯಿತು. ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು ಬೊಂಡಾಲದಲ್ಲಿ ಏರ್ಪಡಿಸಿದ್ದ ಕಟೀಲು ಮೇಳದ ಯಕ್ಷಗಾನ ಬಯಲಾಟದ ರಂಗಸ್ಥಳದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಾಜಿ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆ ವಹಿಸಿದ್ದರು. ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ವೇ.ಮೂ. ಲಕ್ಷ್ಮೀನಾರಾಯಣ ಆಸ್ರಣ್ಣ ಮಾತನಾಡಿ ‘ಧಾರ್ಮಿಕ ಪ್ರಜ್ಞೆ ಯಕ್ಷಗಾನದಿಂದ ಸಿಗುತ್ತದೆ, ಜನರೆಲ್ಲಾ ಸತ್ಕರ್ಮಾಚರಣೆಯಿಂದ ಸತ್ಯಮಾರ್ಗದಲ್ಲಿ ನಡೆದರೆ ಬದುಕು ಸುಗಮ’ ಎಂದರು. ವೇ.ಮೂ. ಅನಂತಪದ್ಮನಾಭ ಆಸ್ರಣ್ಣ ಮಾತನಾಡಿ ‘ಬೊಂಡಾಲ ಮನೆಯವರು ಹಿರಿಯರು ಹಾಕಿದ ಮಾರ್ಗವನ್ನು ಮುಂದುವರೆಸುತ್ತಿದ್ದಾರೆ. ಹರಕೆಯ ಬಯಲಾಟದ ಜೊತೆಗೆ ಕಲಾವಿದರನ್ನು ಗೌರವಿಸುವುದು…

Read More

ಇನಿ ಲೋಕೊದ ಅಪ್ಪೆ ಬಾಸೆದ ದಿನಗೆ. ಎನ್ನಪ್ಪೆ ಬಾಸೆ ತುಲು. ಆಂಡಲಾ ಒಂಜಿ ಎಕ್ಕಂದೆಲ್ (dilemma), ಎನ್ನಪ್ಪೆ ದಿನಾ ಪಾತೆರೊಂದು ಇತ್ತಿನ ತುಲು ಬಾಸೆನ್ ನೆಟೆ ಬರೆವೊಡಾ, ಅತ್ತ್ ತುಲುವ ಬಾಸೆದ ಪೆರ್ಮೆ ಗರ್ಮೆ(ಪೇರ್ತೆ)ದ ಬಗೆಟ್ ಬರೆವೊಡಾ? ಎನ್ನಪ್ಪೆನ ನಿಚ್ಚದ ಬಾಸೆದ ಕೆಲವು ಸ್ಯಾಂಪಲ್ ನಿಗಲೆಗ್ ಕೊರೊಂದು ಉಲ್ಲೆ. ಕಾಂಡೆ ಜೋಕುಲೆಗ್ ಇಂಚ ಸುಪ್ರಭಾತ ಪಂಡ್‌ದ್ ಲಕ್ಕಾವೊಂದು (ಮೆನ್ಪಾವೊಂದು) ಇತ್ತೆರ್, ಹಾಂ, ನನ ಲಕ್ಕೊಲಿ ಹದೊಟು, ಪೀಂಕನ್‌ಗ್ ದೆಂಬು ದರ್ತೊಂದು ಉಂಡು. ನನ ದಾನೆ ಕರ್ಂಟೊಡಾ? ಬೆನ್ನಿದಪಗದ ಸುಲೇಕ ಒಂತೆ ಬೇತೆ, ಲೋಕೊಡು ನಿಗುಲೇ ಒಂಜಿ ಜೋಕುಲಾ? ಓಲಾ ಆಯನ್ ತೂಲೆ. ಪೊರ್ತು ಮೂಡ್ಡೊಡ್ಡ ದಪ್ಪು ಕಟ್ಟುವೆ. ನಿಗಲೆಗ್ ಪೀಂಕನ್‌ಗ್ ದೆಂಬು ದರ್ಪಂದೆ ಎಚ್ಚರ ಆಪುಜಿ. ಓದರೆ ಕಾಂಡೆ ಬೇಗ ಲಕ್ಕಾದ್‌ಜೆರ್ ಪಂದ್ ಜೋಕುಲು ಕಂಪ್ಲೇಂಟ್ ಮಲ್ತೆರ್‌ಡ ಲಕ್ಕಾವುನ, ನನ ಎಂಚ? ಮುಕ್ಕೊಲು ಮುಕ್ಕೊಲು ಪಿರೆತೆ. ನನ ಬಡಿಗೆ ಪಾಡ್ದ್ ಲಕ್ಕಾವೊಡು ನಿನನ್. ಕಾಂಡೆನೆ ಜೋಕುಲು ಒರಿಯಗೊರಿ ದಾಲ ನೆರೊಂದು, ಪನೊಂದು…

Read More

ನಾರದನು ನಾರಾಯಣ ಮಂತ್ರವನ್ನು ಜಪಿಸುತ್ತಾ ವೈಕುಂಠವನ್ನು ಸೇರಿಕೊಂಡನು. ಅಲ್ಲಿ ಶೇಷತಲ್ಪದ ಮೇಲೆ ವಿರಾಜಮಾನರಾಗಿದ್ದ ವಿಷ್ಣುಮೂರ್ತಿಯನ್ನು ಕಂಡ ತಕ್ಷಣ ನಾರದನ ಮನಸ್ಸಿನಲ್ಲಿ ಒಂದು ಆಲೋಚನೆ ಮೂಡಿತು. “ವಿಷ್ಣುಮೂರ್ತಿಗೆ ನನಗಿಂತ ದೊಡ್ಡ ಭಕ್ತ ಇನ್ನಾರು ಇರಬಹುದು?” ಎಂದುಕೊಂಡನು. ಅದೇ ವಿಷಯವನ್ನು ಸ್ವತಃ ವಿಷ್ಣುಮೂರ್ತಿಯ ಬಾಯಿಂದಲೇ ಕೇಳಬೇಕು ಎಂದು ನಾರದನು ಬಯಸಿದನು. “ಓ ದೇವದೇವಾ! ಈ ಮೂರು ಲೋಕಗಳಲ್ಲಿ ನಿನ್ನನ್ನು ಅತ್ಯಂತ ಭಕ್ತಿಯಿಂದ ಆರಾಧಿಸುವವರು ಯಾರು?” ಎಂದು ಕೇಳಿದನು. ವಿಷ್ಣುಮೂರ್ತಿ ಹೇಳಿದರು, “ಅಯ್ಯೋ! ಅದು ಅಷ್ಟೊಂದು ಕಷ್ಟವಾದ ಪ್ರಶ್ನೆಯೇ ಅಲ್ಲ. ಅಲ್ಲಿ ಕಾಣುತ್ತಿರುವ ಆ ಹಳ್ಳಿಯಲ್ಲಿರುವ ಒಂದು ಚಿಕ್ಕ ಗುಡಿಸಲು ನೋಡುತ್ತಿದ್ದೀಯಲ್ಲಾ! ಅದರಲ್ಲಿ ಒಬ್ಬ ರೈತನು ವಾಸಿಸುತ್ತಿದ್ದಾನೆ. ನನ್ನನ್ನು ಕೇಳಿದರೆ ಈ ಲೋಕದಲ್ಲಿ ನನ್ನನ್ನು ಅತ್ಯಂತ ತೀವ್ರವಾಗಿ ಧ್ಯಾನಿಸುವವನು ಅವನೇ!” ಎಂದರು. ಪ್ರತಿದಿನ ಹರಿನಾಮ ಸ್ಮರಣೆ ಮಾಡುವ ತನಗಿಂತ ಆ ಚಿಕ್ಕ ರೈತ ಹೇಗೆ ದೊಡ್ಡ ಭಕ್ತನಾಗಿರಬಹುದು? ಎಂದುಕೊಂಡು ತನ್ನ ದಿವ್ಯದೃಷ್ಟಿಯಿಂದ ಆ ರೈತನ ಜೀವನವನ್ನು ಗಮನಿಸಿದನು. ಆ ರೈತನು ಬಹಳ ಬಡವನು. ಅವನಿಗೆ ಒಂದು…

Read More

ಹಾಲಾಡಿ ಶ್ರೀನಿವಾಸ ಶೆಟ್ಟರು ಅಂದರೆ ಇವರು ಮಾಜಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟರಲ್ಲ. ಇವರು ಇಂಡಸ್ಟ್ರಿಯಲಿಸ್ಟ್ ಹಾಲಾಡಿ ಶ್ರೀನಿವಾಸ ಶೆಟ್ಟಿ. ಶಾರ್ಟ್ ಮತ್ತು ಸ್ವೀಟ್ ಆಗಿ ಎಚ್.ಎಸ್ ಶೆಟ್ಟಿ ಎಂದು ಉದ್ಯಮದಲ್ಲಿ ಹೆಸರು ಮಾಡಿದ್ದಾರೆ. ಅಮಾಸೆಬೈಲು ಕೊರಗರ ಕಾಲೋನಿಯಲ್ಲಿ ಹದಿನಾಲ್ಕು ಸುಂದರ ಮನೆಗಳ ನಿರ್ಮಾಣಕ್ಕೆ ಮುನ್ನುಡಿ ಬರೆಯುವ ಮೂಲಕ ಮತ್ತೊಮ್ಮೆ ತಮ್ಮ ‘ಜನಪರ’ ಕಾಳಜಿಯನ್ನು ಸಾಬೀತುಪಡಿಸಿದ್ದಾರೆ. ಇದು ಕೇವಲ ಇಟ್ಟಿಗೆ, ಸಿಮೆಂಟ್‌ನ ಕಟ್ಟಡವಲ್ಲ, ದಶಕಗಳಿಂದ ಸೂರು ಇಲ್ಲದೆ ಅಲೆದಾಡುತ್ತಿದ್ದ ಒಂದು ಶೋಷಿತ ಸಮುದಾಯದ ಆತ್ಮಗೌರವದ ಸಂಕೇತ. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ) ಬೆಂಗಳೂರು ಇದರ ಆಶ್ರಯದಲ್ಲಿ ಸುಮಾರು ಎರಡೂವರೆ ಕೋಟಿ ರೂಪಾಯಿ ಬೃಹತ್ ವೆಚ್ಚದಲ್ಲಿ ಈ ಯೋಜನೆ ಸಾಕಾರಗೊಳ್ಳುತ್ತಿದೆ. ಅಮಾಸೆಬೈಲನ್ನು ಈ ಹಿಂದೆಯೇ ಡಿಜಿಟಲ್ ಗ್ರಾಮವನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಚ್.ಎಸ್ ಶೆಟ್ಟರು, ಈಗ ಅಲ್ಲಿನ ಕೊರಗ ಸಮುದಾಯದ ಬದುಕಿಗೆ ಭದ್ರ ಬುನಾದಿ ಹಾಕುತ್ತಿದ್ದಾರೆ. ಫೆಬ್ರವರಿ 25 ರಂದು ಪೇಜಾವರ ಶ್ರೀಗಳ ಅಮೃತ ಹಸ್ತದಿಂದ ನೆರವೇರಲಿರುವ ಈ…

Read More

ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಸಂಬಂಧಪಟ್ಟ ಪಂಚದೈವಗಳಿಗೆ ಪಡುಬಿದ್ರಿ ಗಣಪತಿ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘದ ಸಹಭಾಗಿತ್ವದಲ್ಲಿ ದೇಗುಲದ ಪುಷ್ಕರಣಿ ತಟದಲ್ಲಿ ನಿರ್ಮಿಸಲ್ಪಡುವ ಅಂದಾಜು 15 ರಿಂದ 20 ಲಕ್ಷ ರೂ ವೆಚ್ಚದ ನೂತನ ಗುಡಿಗಳ ಕಾಮಗಾರಿಯ ಶಿಲಾನ್ಯಾಸವು ಫೆಬ್ರವರಿ 18 ರಂದು ಜರಗಿತು. ಈ ಕುರಿತಾದ ಧಾರ್ಮಿಕ ವಿಧಿ ವಿಧಾನಗಳನ್ನು ದೇವಸ್ಥಾನದ ಅರ್ಚಕರಾದ ಗುರುರಾಜ ಭಟ್ ಎರ್ಮಾಳು ನೆರವೇರಿಸಿದರು. ಶಿಲಾನ್ಯಾಸವನ್ನು ಸಂಘದ ಹಿರಿಯ ಸದಸ್ಯ ಸದಾಶಿವ ಆಚಾರ್ ನೆರವೇರಿಸಿದರು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ ರಾಜಗೋಪಾಲ ಉಪಾಧ್ಯಾಯ, ಅನುವಂಶಿಕ ಮೊಕ್ತೇಸರ ಭವಾನಿಶಂಕರ ಹೆಗ್ಡೆ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ರವೀಂದ್ರನಾಥ ಜಿ ಹೆಗ್ಡೆ, ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ, ಮುರಳಿನಾಥ್ ಶೆಟ್ಟಿ, ಅನಿಲ್ ಶೆಟ್ಟಿ ಪೇಟೆ ಮನೆ, ನವೀನ್ ಎನ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವೀನ್ ಚಂದ್ರ ಜೆ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮಾಕಾಂತ್ ರಾವ್, ಕೋಶಾಧಿಕಾರಿ ಕಸ್ತೂರಿ ರಾಮಚಂದ್ರ, ಸರ್ವಜ್ಞ ಆಚಾರ್, ಪ್ರಕಾಶ್ ಶೆಟ್ಟಿ ಪೇಟೆ ಮನೆ, ಮಾಧವ ಸಿ…

Read More

ಪದವು ಫ್ರೆಂಡ್ಸ್ ಕ್ಲಬ್ ಕಾನಡ್ಕ ಶಕ್ತಿನಗರ ಇದರ 50ನೇ ವಾರ್ಷಿಕೋತ್ಸವ ‘ಸ್ವರ್ಣ ಸಂಭ್ರಮ’ ಸಮಾರಂಭವು ಫೆಬ್ರವರಿ 13 ರಿಂದ 17ರ ವರೆಗೆ ಜರಗಿತು. ನಾಲ್ಕನೇ ದಿನದ ಕಾರ್ಯಕ್ರಮವನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿ, ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ, ‘ಸಂಘ ಸಂಸ್ಥೆಗಳು ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ಸಮಾಜೋಪಯೋಗಿ ಕೆಲಸಗಳಲ್ಲಿಯೂ ತೊಡಗಿಕೊಂಡಾಗ ಅದು ಜನಮಾನಸಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತದೆ. ಪದವು ಫ್ರೆಂಡ್ಸ್ ಕ್ಲಬ್ ಕಳೆದ ಐದು ದಶಕಗಳ ಸಾರ್ಥಕ ಸೇವಾ ಕಾರ್ಯಗಳಿಂದಾಗಿ ತನ್ನ ಪರಿಸರದ ಜನರ ಅಭಿಮಾನ ಗಳಿಸಿಕೊಂಡಿರುವುದು ಸ್ಪಷ್ಟ. ಆ ಕಾರಣದಿಂದಾಗಿ ಅದರ ಸುವರ್ಣ ಸಂಭ್ರಮ ಪ್ರಸ್ತುತ ನಾಡಹಬ್ಬದ ಸ್ವರೂಪ ಪಡೆದಿರುವುದು ಕಂಡು ಬರುತ್ತಿದೆ’ ಎಂದರು. ಸಮಾರಂಭದಲ್ಲಿ ತುಳು ರಂಗಭೂಮಿಯ ಖ್ಯಾತ ನಾಟಕಕಾರರು ಮತ್ತು ಚಲನಚಿತ್ರ ನಿರ್ದೇಶಕರಾದ ಡಾ| ದೇವದಾಸ ಕಾಪಿಕಾಡ್ ಅವರಿಗೆ ‘ತೆಲಿಕೆದ…

Read More

ಕುತ್ತೆತ್ತೂರು ಸೂರಿಂಜೆ ಶಿಬರೂರು ಪಂಜ ಬೊಳ್ಳಾರಗುತ್ತಿನಲ್ಲಿ ನಡೆಯುವ ಬೊಳ್ಳಾರಗೋಳಿ ಪಂಚ ದೈವಗಳ ನೇಮೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಸೂರಿಂಜೆ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿತು. ದೇವಸ್ಥಾನದ ತಂತ್ರಿ ವಿಜಯದಾಸ ತಂತ್ರಿ, ಹಯವದನ ಭಟ್ ಕೈಯೂರು, ಸುರತ್ಕಲ್ ಠಾಣೆಯ ಠಾಣಾಧಿಕಾರಿ ಪ್ರಮೋದ್ ಕುಮಾರ್, ನೇಮೋತ್ಸವ ಸಮಿತಿ ಗೌರವಾಧ್ಯಕ್ಷರಾದ ಅಶೋಕ ಪೈವ ಹೆಗಡೆ ಮಿತ್ತೋಡಿ ಅರಸುಮನೆ, ಧನಂಜಯ ಶೆಟ್ಟಿ ಬೊಳ್ಳಾರುಗುತ್ತು, ವಿನಯ ಕುಮಾರ್ ಸೂರಿಂಜೆ, ಪ್ರದ್ಯುಮ್ನರಾವ್ ಕೈಯೂರ್, ಅನಿಲ್ ಶೆಟ್ಟಿ ತೇವು ಸೂರಿಂಜೆ, ಉಮೇಶ್ ಶೆಟ್ಟಿ ಗುತ್ತಿನಾರ್ ಶಿಬರೂರು, ಸಮಿತಿ ಅಧ್ಯಕ್ಷರಾದ ರಾಜೇಂದ್ರ ಶೆಟ್ಟಿ ಕುಡ್ತಿಮಾರುಗುತ್ತು ಕಿಲೆಂಜೂರು, ಕಾರ್ಯಾಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಸೂರಿಂಜೆ, ಕೋಶಾಧಿಕಾರಿ ಸುಜೀರ್ ಸೂರಿಂಜೆ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ನಿತಿನ್ ಶೆಟ್ಟಿ ನಾಯರ್ ಕೊಡಿ, ಜಗನ್ನಾಥ ಶೆಟ್ಟಿ ತೇವು, ಡಿ.ಕೆ ಶೆಟ್ಟಿ ಮುಂಬಯಿ, ಗಣೇಶ್ ಶೆಟ್ಟಿ ಕುಲ್ಲಂಗಾಲು ಹೊಸಮನೆ, ಹರೀಶ್ ಮುಡಾಯಿಕೊಡಿ, ಪ್ರತಾಪ್ ಶೆಟ್ಟಿ ಕಲ್ಲಂಜ ಬಾಳಿಕೆ, ಜಯಶೀಲ…

Read More

ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಕಾರ್ಯನಿರ್ವಹಿಸುವ ಬೆಳ್ತಂಗಡಿ ಪ್ರೆಸ್ ಕ್ಲಬ್ ಟ್ರಸ್ಟ್ ಇದರ ನೂತನ ಅಧ್ಯಕ್ಷರಾಗಿ ಪುಷ್ಪರಾಜ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶಿಬಿ ಧರ್ಮಸ್ಥಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಳ್ತಂಗಡಿ ಪತ್ರಕರ್ತರ ಸಂಘದಲ್ಲಿ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ 2026 – 28 ನೇ ಸಾಲಿನ ನೂತನ ಪದಾಧಿಕಾರಿಗಳ‌ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ಪುಷ್ಪರಾಜ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ವಾರ್ತಾಭಾರತಿ ಪತ್ರಿಕೆಯ ವರದಿಗಾರ ಶಿಬಿ ಧರ್ಮಸ್ಥಳ, ಕೋಶಾಧಿಕಾರಿಯಾಗಿ ಪ್ರಜಾವಾಣಿ ಪತ್ರಿಕೆಯ ವರದಿಗಾರ ಗಣೇಶ್ ಬಿ ಶಿರ್ಲಾಲು ಹಾಗೂ ಉಪಾಧ್ಯಕ್ಷರಾಗಿ ಸುದ್ದಿ ಉದಯ ಪತ್ರಿಕೆಯ ವರದಿಗಾರ ಸಂತೋಷ್ ಕೋಟ್ಯಾನ್, ಕಾರ್ಯದರ್ಶಿಯಾಗಿ ಪ್ರತಿನಿಧಿ ಪತ್ರಿಕೆಯ ವರದಿಗಾರ ಭುವನೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ತುಕಾರಾಮ ಬಿ, ಪ್ರಧಾನ ಕಾರ್ಯದರ್ಶಿ ಮನೋಹರ ಬಳಂಜ, ಕಾರ್ಯದರ್ಶಿ ಅರವಿಂದ ಹೆಬ್ಬಾರ್, ಕಾರ್ಯಕಾರಿ ಸಮಿತಿ…

Read More

ಬಂಟರ ಸಮಾಜದ ಉದ್ಯಮಿಗಳ ಒಗ್ಗಟ್ಟಿಗಾಗಿ ಸ್ಥಾಪಿಸಿದಂತಹ ಮುಂಬೈಯ ಪ್ರತಿಷ್ಠಿತ ಸಂಸ್ಥೆ ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಮುಂಬೈಯ ಉದ್ಯಮಿ, ಕೆನರಾ ಟೂರ್ಸ್ ನ ಆಡಳಿತ ನಿರ್ದೇಶಕ ಸುರೇಶ್ ಬಿ ಶೆಟ್ಟಿಯವರ ಆಡಳಿತ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಫೆಬ್ರವರಿ 1ರಂದು ಸಾಕಿನಾಕದ ಪೆನನ್ಸುಲಾ ಗ್ರಾಂಡ್ ನಲ್ಲಿ ಜರಗಿತು. ಅಧ್ಯಕ್ಷ ಎಸ್. ಬಿ ಶೆಟ್ಟಿಯವರು ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ಉಪಾಧ್ಯಕ್ಷರಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ವಸುಧಾ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಶ್ರೀನಾಥ್ ಶೆಟ್ಟಿ, ಗೌರವ ಕಾರ್ಯದರ್ಶಿಯಾಗಿ ಸಿಎ ಸದಾಶಿವ ಶೆಟ್ಟಿ, ಕೋಶಾಧಿಕಾರಿಯಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಸಿಎ ಶ್ರೀನಿವಾಸ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ನಿಶಿತ್ ಶೆಟ್ಟಿ, ಜತೆ ಕೋಶಾಧಿಕಾರಿಯಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಏಳಿಂಜೆ ಅನಿಲ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ತ್ರಿಶಿಕಾ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.…

Read More