Author: admin
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಆವರಣದ ಟೆಕ್ನಾಲಜಿ ಸೆಂಟರ್ನಲ್ಲಿ ಮೆಟಾಸಾಫ್ಟ್ ಐಟಿ ಸೊಲ್ಯೂಷನ್ಸ್ ಹಾಗೂ ಕಾಕುಂಜೆ ಸಾಫ್ಟ್ವೇರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳ ಹೊಸ ಕಚೇರಿ ಹಾಗೂ ಸಂಶೋಧನೆ – ನವೀನತೆ ಕೇಂದ್ರವನ್ನು ಉದ್ಘಾಟಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಹೊಸ ಕಚೇರಿ ಉದ್ಘಾಟಿಸಿ ಮಾತನಾಡಿ, ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು ತಂತ್ರಜ್ಞಾನ, ಸಂಶೋಧನೆ ಹಾಗೂ ಉದ್ಯೋಗಾವಕಾಶಗಳ ಸಮಗ್ರ ಪರಿಸರವನ್ನು ಒದಗಿಸುವ ವಿಶಿಷ್ಟ ಕ್ಯಾಂಪಸ್ ಆಗಿ ಹೊರಹೊಮ್ಮಿದೆ. ಇಲ್ಲಿ ಸ್ಥಾಪಿಸಿರುವ ವಿವಿಧ ಐಟಿ ಕಂಪನಿಗಳು ಮತ್ತು ಸ್ಟಾರ್ಟ್ಅಪ್ಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಈ ಕೇಂದ್ರವು ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್, ಪ್ರಾಜೆಕ್ಟ್, ಉದ್ಯೋಗಾವಕಾಶಗಳು ಹಾಗೂ ಸಂಶೋಧನೆ -ನವೀನತೆ ಕ್ಷೇತ್ರಗಳಲ್ಲಿ ಪೂರಕ ವೇದಿಕೆಯಾಗಿ ಕಾರ್ಯ ನಿರ್ವಹಿಸಲಿದೆ ಎಂದರು. ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್ನಲ್ಲಿ ಸಂಪೂರ್ಣ ಬ್ಲಾಕ್ವೊಂದನ್ನು ಟೆಕ್ ಸೆಂಟರ್ಗಳ ಸ್ಥಾಪನೆಗಾಗಿ ಮೀಸಲಿಟ್ಟಿದೆ. ಈ ವಿಶೇಷ ಬ್ಲಾಕ್ನಲ್ಲಿ ಕಚೇರಿ ಸ್ಥಳ, ಮೂಲಭೂತ ಸೌಲಭ್ಯಗಳು, ವಿದ್ಯುತ್,…
ಅತೀ ಗ್ರಾಮಿಣ ಭಾಗವಾದ ಉಡುಪಿ ಜಿಲ್ಲೆಯ ಬೆಳಪು ಗ್ರಾಮದ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆದು ಇಡೀ ಬೆಳಪು ಗ್ರಾಮಕ್ಕೆ ಹೆಮ್ಮೆಯನ್ನು ತಂದಿದ್ದಾರೆ ಎಂದು ಬೆಳಪು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಡಾ| ದೇವಿಪ್ರಸಾದ್ ಶೆಟ್ಟಿಯವರು ತಿಳಿಸಿದ್ದಾರೆ. ಬೆಳಪು ಗ್ರಾಮವನ್ನು ಬೆಳಪು ಕಾಡು ಎಂದು ಕರೆಯುತ್ತಿದ್ದ ಸಂಧರ್ಭದಲ್ಲಿ ಬೆಳಪು ಗ್ರಾಮವನ್ನು ನಗರ ಪ್ರದೇಶದ ರೀತಿ ರೂಪಿಸಬೇಕು, ಅದರಲ್ಲಿಯೂ ಶೈಕ್ಷಣಿಕ ನಗರವನ್ನಾಗಿ ಕೆಜಿಯಿಂದ ಪಿಜಿಯ ತನಕ ಹಾಗೂ ಆಸುಪಾಸಿನ ಈ ಜಿಲ್ಲೆಯ ಬಡ ವಿದ್ಯಾರ್ಥಿಗಳಿಗೆ ಮೌಲ್ಯಧಾರಿತ ಶಿಕ್ಷಣವನ್ನು ಒದಗಿಸಿ ಕೊಡಬೇಕು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಹಾಗೂ ನಿರ್ಗತಿಕ ವಿದ್ಯಾರ್ಥಿಗಳಿಗೆ, ಸಂಪೂರ್ಣ ಉಚಿತ ಶಿಕ್ಷಣದ ವ್ಯವಸ್ಥೆಯನ್ನು ಕಲ್ಪಿಸಬೇಕು, ಅವರಿಗೆ ಉನ್ನತ ಶಿಕ್ಷಣ ಮಾಡುವುದಕ್ಕಾಗಲಿ, ಪಿಎಚ್ಡಿ ಮಾಡುವುದಕ್ಕಾಗಲಿ, ಅಥವಾ ಎಂ.ಕಾಂ, ಟೀಚರ್ ಟ್ರೈನಿಂಗ್ ಎಲ್ಲವೂ ನಮ್ಮೂರಿನ ಶಿಕ್ಷಣ ಕೇಂದ್ರಗಳಲ್ಲಿ ಮಾಡಬೇಕು ಎನ್ನುವ ಉದ್ದೇಶದಿಂದ ಈಗಾಗಲೇ ಮಂಗಳೂರು ವಿಶ್ವವಿದ್ಯಾನಿಲಯದ ಮೂಲಕ ಅತ್ಯಾಧುನಿಕ ವಿಜ್ಞಾನ ಸಂಶೋಧನಾ ಕೇಂದ್ರದ ಅಂತಿಮ ಹಂತದ ಕಾಮಗಾರಿ ಈಗಾಗಲೇ…
ಸುಜ್ಞಾನ ಎಜುಕೇಶನಲ್ ಟ್ರಸ್ಟ್ : ರಾಜ್ಯಮಟ್ಟದಲ್ಲಿ 5ನೇ ರ್ಯಾಂಕ್ ಗಳಿಸಿದ ವಿದ್ಯಾರ್ಥಿನಿಗೆ ರೂ. 50,000 ನಗದು ಬಹುಮಾನ
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಪ್ರಕಟಿಸಿದ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶದಲ್ಲಿ ಯಡಾಡಿ ಮತ್ಯಾಡಿಯ ಸುಜ್ಞಾನ ಎಜುಕೇಶನಲ್ ಟ್ರಸ್ಟ್ನ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಮೀಕ್ಷಾ ರಾಜ್ಯಮಟ್ಟದಲ್ಲಿ 5ನೇ ರ್ಯಾಂಕ್ ಪಡೆಯುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾಳೆ. ಒಟ್ಟು 625 ಅಂಕಗಳಿಗೆ 621 ಅಂಕಗಳನ್ನು ಗಳಿಸಿರುವ ಸಮೀಕ್ಷಾ, ಶಾಲೆಯ ಹಾಗೂ ಕುಂದಾಪುರ ತಾಲೂಕಿನ ಕೀರ್ತಿಯನ್ನು ರಾಜ್ಯಮಟ್ಟದಲ್ಲಿ ಬೆಳಗಿದ್ದಾಳೆ. ಈ ಮಹತ್ತರ ಸಾಧನೆಯನ್ನು ಗುರುತಿಸಿರುವ ಶಾಲಾ ಆಡಳಿತ ಮಂಡಳಿಯು ವಿದ್ಯಾರ್ಥಿನಿಗೆ 50,000 ರೂ. ನಗದು ಬಹುಮಾನ ಘೋಷಿಸಿ ಗೌರವಿಸಿದೆ. ತನ್ನ ಸಾಧನೆಯ ಕುರಿತು ಸಂತಸ ಹಂಚಿಕೊಂಡಿರುವ ಸಮೀಕ್ಷಾ, ‘ನಾನು 7ನೇ ತರಗತಿಯಿಂದ ವಿದ್ಯಾರಣ್ಯ ಶಾಲೆಯಲ್ಲಿ ಕಲಿಯುತ್ತಿದ್ದೇನೆ. ಶಾಲೆಯ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರು ನೀಡಿದ ನಿರಂತರ ಪ್ರೋತ್ಸಾಹ ಮತ್ತು ಮಾರ್ಗದರ್ಶನವೇ ನನ್ನ ಈ ಯಶಸ್ಸಿಗೆ ಮುಖ್ಯ ಕಾರಣ. ನಮ್ಮ ಶಾಲೆಯಲ್ಲಿ 6ನೇ ತರಗತಿಯಿಂದಲೇ ನೀಡಲಾಗುವ ಐಐಟಿ -ನೀಟ್ (IIT-NEET) ಫೌಂಡೇಶನ್ ಕೋರ್ಸ್ ನನಗೆ ಗಣಿತ ಮತ್ತು…
ಕಾರ್ನಿಕದ ಕ್ಷೇತ್ರ ಎಂದೇ ಪ್ರಸಿದ್ಧಿ ಪಡೆದ ಕರ್ನಿರೆ ಗ್ರಾಮದ ಶ್ರೀ ಧರ್ಮ ಜಾರಂದಾಯ ದೈವಸ್ಥಾನದ ಕಾಲಾವಧಿ ನೇಮೋತ್ಸವವು ಏಪ್ರಿಲ್ 09 ರಿಂದ 11 ರವರೆಗೆ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಏಪ್ರಿಲ್ 09 ರಂದು ರಾತ್ರಿ ಅಗರಗುತ್ತು ಕುಟುಂಬಿಕರ ಸೇವಾರ್ಥವಾಗಿ ದೀಪಾರಾಧನೆ ಬಲಿ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ವಿಷ್ಣುಮೂರ್ತಿ ಕ್ರಿಕೆಟ್ ಕ್ಲಬ್ (ರಿ.) ಕರ್ನಿರೆ ಇವರ ಆಶ್ರಯದಲ್ಲಿ ‘ವೈರಲ್ ವೈಶಾಲಿ’ ಎಂಬ ತುಳು ಹಾಸ್ಯಮಯ ನಾಟಕ ಪ್ರದರ್ಶನಗೊಂಡು ಜನಮನ ಸೆಳೆಯಿತು. ಏಪ್ರಿಲ್ 10 ರಂದು ಮಧ್ಯಾಹ್ನ ಧ್ವಜಾರೋಹಣ ನೆರವೇರಿತು. ಬಳಿಕ ಮುಂಬೈ ಉದ್ಯಮಿ ಗಂಗಾಧರ ಎನ್. ಅಮೀನ್ (ಗುಲಾಬಿ ಭವನ, ಕರ್ನಿರೆ) ಇವರ ವತಿಯಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ ದೀಪಾರಾಧನೆ ಬಲಿ ಹಾಗೂ ಭಂಡಾರ ಇಳಿಯುವ ಕಾರ್ಯಕ್ರಮ ಜರುಗಿತು. ಏಪ್ರಿಲ್ 11 ರಂದು ಮಧ್ಯಾಹ್ನ ಕರ್ನಿರೆ ಪಟ್ಟೆಗುತ್ತು ದಿವಂಗತ ಐತಪ್ಪ ಪೂಜಾರಿಯವರ ಮೊಮ್ಮಗಳು ಹಾಗೂ ಕೃಷ್ಣ ಪೂಜಾರಿಯವರ ಪುತ್ರಿ ಚೇತನಾ ಕೃಷ್ಣ ಪೂಜಾರಿ ಇವರ ವತಿಯಿಂದ ಅನ್ನಸಂತರ್ಪಣೆ ನಡೆಯಿತು.…
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಿದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ ಕಾರ್ಕಳದ ಸಂಸ್ಥೆಯು ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ರಂಗದಲ್ಲಿ ಅನೇಕ ಕಾರ್ಯ ಚಟುವಟಿಕೆಯ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿರುವ ಸಂಸ್ಥೆಯು ಇದೀಗ ಸಹಕಾರ ಕ್ಷೇತ್ರದಲ್ಲೂ ತನ್ನನ್ನು ತೊಡಗಿಸಿಕೊಂಡು ಹೊಸ ಮೈಲುಗಲ್ಲೊಂದನ್ನು ನಿರ್ಮಿಸಿದೆ. ಸಪ್ತ ಸಂಸ್ಥಾಪಕರ ಕನಸಿನ ಕೂಸಾದ ಕ್ರಿಯೇಟಿವ್ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ನಿ. ಕಾರ್ಕಳದ ಕುಕ್ಕುದಕಟ್ಟೆ ಸರ್ಕಲ್ ನಲ್ಲಿರುವ ಪಿಂಟೋ ಟವರ್ಸ್ ನ ಮೊದಲ ಮಹಡಿಯಲ್ಲಿ ವಿದ್ಯುಕ್ತವಾಗಿ ಲೋಕಾರ್ಪಣೆಗೊಂಡಿತು. ಕ್ರಿಯೇಟಿವ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಇದರ ಲೋಕಾರ್ಪಣೆ ನಿಮಿತ್ತ ಸಭಾ ಕಾರ್ಯಕ್ರಮ ಕ್ರಿಯೇಟಿವ್ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿ ಜರುಗಿತು. ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮಾಜಿ ಸಚಿವರಾದ ವಿ. ಸುನಿಲ್ ಕುಮಾರ್ ರವರು ಸೊಸೈಟಿಯನ್ನು ಉದ್ಘಾಟಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ, ಕ್ರಿಯೇಟಿವ್ ಸಂಸ್ಥೆಯು ಕೇವಲ ಕ್ಯಾಂಪಸ್ ನ ಒಳಗಡೆ ತನ್ನ ಕಾರ್ಯ ಚಟುವಟಿಕೆಗಳನ್ನು ಸೀಮಿತಗೊಳಿಸದೆ ಕ್ಯಾಂಪಸ್ ನ ಹೊರಗಡೆ ಅಂದರೆ ಹತ್ತಾರು ಮಂದಿಗೆ…
ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ ಮಾಸಿಕ ಸಭೆಯು ಇತ್ತೀಚಿಗೆ ಹೋಟೆಲ್ ಚಂದ್ರಭಾಗ ಸಭಾಂಗಣದಲ್ಲಿ ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಧಾಕರ್ ಸಿ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂಧರ್ಭ ಕತ್ರಾಜ್ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಅಯ್ಕೆಯದ ಜಗದೀಶ್ ಬಿ ಶೆಟ್ಟಿಯವರನ್ನು ದಕ್ಷಿಣ ಪ್ರಾದೇಶಿಕ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ನಂತರ ಸುಧಾಕರ ಸಿ ಶೆಟ್ಟಿಯವರು ಮಾತನಾಡಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಇದೀಗ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಜಗದೀಶ್ ಶೆಟ್ಟಿಯವರಿಗೆ ಪುಣೆ ಬಂಟರ ಸಂಘದ ದಕ್ಷಿಣ ಪ್ರಾದೇಶಿಕ ಸಮಿತಿಯ ಎಲ್ಲಾ ಸದಸ್ಯರು ಸಂಪೂರ್ಣ ಸಹಕಾರ ನೀಡಲಿದ್ದು, ಅವರ ಆಡಳಿತ ಅವಧಿಯಲ್ಲಿ ದೇವಸ್ಥಾನ ಅಭಿವೃದ್ಧಿ ಹೊಂದಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸಮಿತಿಯ ಎಲ್ಲಾ ಪದಾಧಿಕಾರಿಗಳು ಮತ್ತು ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ವಿನೋದ ಎಸ್ ಶೆಟ್ಟಿ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಪ್ರತಿಷ್ಠಿತ ಬಂಟರ ಸಂಘ ಬೆಂಗಳೂರು ವರ್ಷಂಪ್ರತಿ ಬಿಸು (ಯುಗಾದಿ) ಹಬ್ಬ ಆಚರಿಸಿಕೊಂಡು ಬರುತ್ತಿದ್ದು, ಈ ವರ್ಷವೂ ಏಪ್ರಿಲ್ 14 ರಂದು ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾದ ಸಿಎ ಅಶೋಕ್ ಶೆಟ್ಟಿಯವರ ಸಾರಥ್ಯದಲ್ಲಿ ರಾಧಾಭಾಯಿ ತಿಮ್ಮಪ್ಪ ಭಂಡಾರಿ ಸಭಾಭವನದಲ್ಲಿ ವಿಜೃಂಭಣೆಯಿಂದ ಆಚರಿಸಲ್ಪಟ್ಟಿತು. ಮುಖ್ಯ ಅತಿಥಿಯಾಗಿ ಚಾರ್ಟೆಡ್ ಗ್ರೂಪ್ ನ ಸಿಎಂಡಿ ಏರ್ಯ ಬಾಲಕೃಷ್ಣ ಹೆಗ್ಡೆ ಹಾಗೂ ಗೌರವ ಅತಿಥಿಯಾಗಿ ಕರ್ನಾಟಕ ಮಹಿಳಾ ದಕ್ಷತಾ ಸಮಿತಿ ಅಧ್ಯಕ್ಷೆ ಶ್ರೀಮತಿ ಶರಣ್ಯ ಎಸ್ ಹೆಗ್ಡೆ ಆಗಮಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ ಕ್ರೀಡೆ ಹಾಗೂ ಸೌಂದರ್ಯ ಸ್ಪರ್ಧೆಯಲ್ಲಿ ಗಣನೀಯ ಸಾಧನೆ ಮಾಡಿದ್ದಲ್ಲದೇ, 2026 ರ ಸಾಲಿನ ಮಿಸ್ ಯೂನಿವರ್ಸ್ ಕರ್ನಾಟಕ ವಿಜೇತೆ ಕುಮಾರಿ ಲೇಖನ ಮಲ್ಲಿಕಾರ್ಜುನ ಹೆಗ್ಡೆಯವರನ್ನು ಗೌರವಿಸಿ ಸನ್ಮಾನಿಸಿದರು. ಈ ಸಂಧರ್ಭ ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸಿಎ ಅಶೋಕ್ ಶೆಟ್ಟಿ ಎಂ, ಮಹಿಳಾ ಉಪಾಧ್ಯಕ್ಷೆ ಶ್ರೀಮತಿ ಕಾಂತಿ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಹಾಲಾಡಿ ವಿಜಯ್ ಜೆ ಶೆಟ್ಟಿ, ಕೋಶಾಧಿಕಾರಿ ಅಶೋಕ್ ಶೆಟ್ಟಿ ಹಾಗೂ ಕಾರ್ಯಕಾರಿ…
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ತುಳು ಕನ್ನಡಿಗರು ಹುಟ್ಟಿನಿಂದಲೇ ಆಸ್ತಿಕರು, ದೈವಭಕ್ತರು, ಶಕ್ತಿಯ ಆರಾಧಕರು. ಈ ಮಾತಿಗೆ ನಮ್ಮ ಅಣ್ಣಿ ಶೆಟ್ಟಿಯವರು ಹೊರತಾಗಿಲ್ಲ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಗುಂಡ್ಯಡ್ಕ ದೇವಕಿ ಶೆಟ್ಟಿ ಮತ್ತು ಸಾಂತೂರು ಬೈಲುಮನೆ ಚಿನ್ಮಯ್ಯ ಶೆಟ್ಟಿ ಅವರ ಸುಪುತ್ರರಾಗಿ ಜನಿಸಿರುವ ಅಣ್ಣಿ ಶೆಟ್ಟರು ಜೀವನ ನಿರ್ವಹಣೆಗೆ ಜ್ಞಾನ ನೀಡುವಷ್ಟು ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿ ಮುಂಬಯಿ ಸೇರಿದವರು ಅನೇಕ ಕಡೆ ಕಷ್ಟಪಟ್ಟು ದುಡಿದು ನಂತರ ತನ್ನದೇ ಆದ ಕ್ಯಾಂಟೀನ್ ಉದ್ಯಮ ಆರಂಭಿಸಿ ಅದರಲ್ಲಿ ಯಶಸ್ಸು ಕಂಡವರು ಮತ್ತೆ ಹಿಂದಿರುಗಿ ನೋಡಲಿಲ್ಲ. ಕಲ್ಯಾಣ್ ಮತ್ತು ನವಿ ಮುಂಬಯಿ ಪರಿಸರದಲ್ಲಿ ಹೊಟೇಲ್ ಮತ್ತು ಕ್ಯಾಂಟೀನ್ ಉದ್ಯಮದಲ್ಲಿ ಯಶಸ್ಸು ಕಾಣುವುದಕ್ಕೆ ಕಾರಣ ಮಾತೆ ದುರ್ಗಾಂಬೆ ಎಂದು ಬಲವಾಗಿ ನಂಬುವ ಅಣ್ಣಿ ಶೆಟ್ಟಿಯವರು ಶ್ರೀ ದೇವಿಯನ್ನು ಅನವರತವೂ ಆರಾಧಿಸಿಕೊಂಡು ಬಂದಿರುವ ದೇವಿ ಉಪಾಸಕರು. ಘನ್ಸೋಲಿ ಮೂಕಾಂಬಿಕಾ ಸನ್ನಿಧಿ ಎಂದರೆ ಹಬ್ಬ ಹರಿದಿನಗಳಲ್ಲಿ ಸಂಭ್ರಮ ಸಡಗರ ಸಾಂಸ್ಕೃತಿಕ ಸುಗ್ಗಿ. ಇದರ ಹಿಂದಿನ ರೂವಾರಿ…
ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ : ಏಪ್ರಿಲ್ 26 ರಂದು ಮಹಾದ್ವಾರ ಹಾಗೂ ಶ್ರೀಮತಿ ಆಶಾಲತಾ ನಾರಾಯಣ ಶೆಟ್ಟಿ ಸಭಾಭವನ ಲೋಕಾರ್ಪಣೆ
ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಇಲ್ಲಿ ಅತ್ತೂರು ಭಂಡಾರ ಮನೆ ರಾಜೇಶ್ ಶೆಟ್ಟಿಯವರಿಂದ ಸೇವಾ ರೂಪವಾಗಿ ಪಕ್ಷಿಕೆರೆ ಪೇಟೆಯಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಹಾದ್ವಾರ ಹಾಗೂ ದೇವಸ್ಥಾನದ ನವೀಕೃತಗೊಂಡ ಹವಾನಿಯಂತ್ರಿತ ಆಶಾಲತಾ ನಾರಾಯಣ ಶೆಟ್ಟಿ ಸಭಾಭವನದ ಉದ್ಘಾಟನಾ ಸಮಾರಂಭವು ಏಪ್ರಿಲ್ 26ರ ರವಿವಾರದಂದು ಸಾಯಂಕಾಲ 4 ಗಂಟೆಗೆ ಪೇಜಾವರ ಮಠಾಧೀಶರಾದ ವಿಶ್ವ ಪ್ರಸನ್ನ ತೀರ್ಥರ ಉಪಸ್ಥಿತಿಯಲ್ಲಿ ನಡೆಯಲಿರುವುದು. ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ ಜರಗಲಿದ್ದು, ಪರಮಪೂಜ್ಯ ಉಡುಪಿ ಪೇಜಾವರ ಅಧೋಕ್ಷಜ ಮಠ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಕ್ಷೇತ್ರ ಸುರಗಿರಿ ಆಡಳಿತ ಮೊಕ್ತೇಸರ ರಾಜೇಶ್ ಶೆಟ್ಟಿ ಅತ್ತೂರು ಭಂಡಾರ ಮನೆ ವಹಿಸಿಕೊಳ್ಳಲಿದ್ದಾರೆ. ಶ್ರೀ ಕ್ಷೇತ್ರ ಕಟೀಲು ಅನುವಂಶಿಕ ಅರ್ಚಕ ವೇದಮೂರ್ತಿ ಅನಂತ ಪದ್ಮನಾಭ ಆಸ್ರಣ್ಣ ಶುಭಾಶಂಸನೆಗೈಯಲಿದ್ದಾರೆ. ಶಿಬರೂರು ಕ್ಷೇತ್ರದ ತಂತ್ರಿ ವೇದಮೂರ್ತಿ ವೇದವ್ಯಾಸ ತಂತ್ರಿ ಆಶೀರ್ವಚನ ನೀಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಎಂ.ಆರ್.ಜಿ ಗ್ರೂಪ್ ಮುಖ್ಯಸ್ಥ ಡಾ| ಪ್ರಕಾಶ್ ಶೆಟ್ಟಿ ಆಗಮಿಸಲಿದ್ದಾರೆ. ಜಾಗತಿಕ…
ಕತಾರ್ನಲ್ಲಿರುವ ಬಂಟ್ಸ್ ಕತಾರ್ (Bunts Qatar) ಸಂಘಟನೆಯು ಸಮಾಜ ಸೇವಾ ಚಟುವಟಿಕೆಗಳ ಭಾಗವಾಗಿ ರಕ್ತದಾನ ಹಾಗೂ ವೈದ್ಯಕೀಯ ಅರೋಗ್ಯ ತಪಾಸಣಾ ಶಿಬಿರವನ್ನು ಏಪ್ರಿಲ್ 17, 2026 ರಂದು ‘Donate Blood, Save Lives’ (ರಕ್ತದಾನ ಮಾಡಿ, ಜೀವ ಉಳಿಸಿ) ಎಂಬ ಅಭಿಯಾನದಡಿ ರೇಯಧಾ ವೈದ್ಯಕೀಯ ಕೇಂದ್ರದಲ್ಲಿ ದೋಹಾದ ಹಮದ್ ಮೆಡಿಕಲ್ ಕಾರ್ಪೊರೇಶನ್ (HMC) ನ ಕತಾರ್ ರಾಷ್ಟ್ರೀಯ ರಕ್ತದಾನ ಕೇಂದ್ರದ ಸಹಯೋಗದೊಂದಿಗೆ ಅಧ್ಯಕ್ಷ ಸುಖರಾಮ್ ಶೆಟ್ಟಿಯವರ ಸಾರಥ್ಯದಲ್ಲಿ ಆಯೋಜಿಸಲಾಗಿತ್ತು. ಸಂಘಟನೆಯು ಹಿಂದೆ ಕೂಡ ಯಶಸ್ವಿ ರಕ್ತದಾನ ಶಿಬಿರಗಳನ್ನು ಆಯೋಜಿಸಿದ್ದು, 215ಕ್ಕೂ ಹೆಚ್ಚು ನೋಂದಾಯಿತ ಸ್ವಯಂಸೇವಕರಲ್ಲಿ 111 ಮಂದಿ ರಕ್ತದಾನ ಮಾಡಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾರತದ ರಾಯಭಾರ ಕಚೇರಿಯ ಚಾನ್ಸೆರಿ ಮತ್ತು ಕಾನ್ಸುಲರ್ ಮುಖ್ಯಸ್ಥರಾದ ಡಾ. ವೈಭವ್ ತಂಡಲೆ, ಗೌರವ ಅತಿಥಿಗಳಾಗಿ ಮನ್ಸೂರ್ ಅಬ್ದುಲ್ಲ ಕೆ.ಎ ಅಲ್ ಕಾಬಿ ಹಾಗೂ ಜಮ್ಮಿರ್ ಹಂಝ ಆಗಮಿಸಿದ್ದರು. ಡಾ. ಅರ್ಜುನ್ ಶೆಟ್ಟಿಯವರು ಮುಖ್ಯ ಅತಿಥಿ ಭಾಷಣಕಾರರಾಗಿ ಆಗಮಿಸಿ ಪ್ರಮುಖ ಆರೋಗ್ಯ ಒಳನೋಟಗಳನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ…















