Author: admin

ಯುಎಇ ಯಲ್ಲಿ ಕಳೆದ 23 ವರ್ಷಗಳಿಂದ ಕನ್ನಡಪರ ಸೇವೆಗಳನ್ನು ಮಾಡುತ್ತಾ ವಿಶೇಷ ಮತ್ತು ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಅನಿವಾಸಿ ಕನ್ನಡಿಗರಿಗೆ ಆಯೋಜನೆ ಮಾಡುವ ಹೆಮ್ಮಯ ಸಂಸ್ಥೆ ಕರ್ನಾಟಕ ಸಂಘ ಶಾರ್ಜಾ. ಈ ಸಂಸ್ಥೆಯ 2026-28 ರ ನೂತನ ಕಾರ್ಯಕಾರಿ ಸಮಿತಿ ರಚನೆಯಾಗಿದ್ದು, ಸಮಿತಿಯ ನೂತನ ಅಧ್ಯಕ್ಷರಾಗಿ ಯುಎಇ ಯಲ್ಲಿ ಹಲವಾರು ರಂಗಭೂಮಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಯಶಸ್ವಿಗೊಳಿಸಿದ ರಂಗಸಾರಥಿ ವಿಶ್ವನಾಥ್ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಂತೇಯೆ ಸಂಘದ ಸಲಹಾ ಸಮಿತಿಯ ನಿರ್ದೇಶಕರಾಗಿ ವಕ್ವಾಡಿ ಪ್ರವೀಣ್ ಶೆಟ್ಟಿ, ಹರೀಶ್ ಶೇರಿಗಾರ್, ಜೋಸೆಫ್ ಮಥಾಯಿಸ್, ರಾಮಚಂದ್ರ ಹೆಗ್ಡೆಯವರು ಮುಂದುವರಿಯಲಿದ್ದಾರೆ. ಸಂಘದ ಸಲಹೆಗಾರರಾಗಿ ಎಂ.ಇ ಮೂಳುರು, ಗಣೇಶ್ ರೈ, ಸತೀಶ್ ಪೂಜಾರಿ ಮತ್ತು ನೋಯೆಲ್ ಡಿ ಅಲ್ಮೆಡಾ ಮುಂದುವರಿಯಲಿದ್ದಾರೆ.

Read More

ಹೊರನಾಡ ಕನ್ನಡಿಗರ ಸಾಂಸ್ಕೃತಿಕ ರಾಯಭಾರಿ ಮುಂಬಯಿ ನಗರಿಯ ಪ್ರತಿಷ್ಠಿತ ಕಲಾ ಸಂಸ್ಥೆ ಕಲಾ ಸೌರಭ ತನ್ನ 33ನೇ ವಾರ್ಷಿಕ ಸಂಗೀತ ನೃತ್ಯ ಸಂಭ್ರಮದ ಸಾಂಸ್ಕೃತಿಕ ಕಲೋತ್ಸವ ‘ಸಂಸ್ಕಾರ-2026’ ಸರಣಿಯ ನಾಲ್ಕನೇ ಕಾರ್ಯಕ್ರಮವನ್ನು ಮಾರ್ಚ್ 27ರಂದು ಶಿರ್ಡಿ ಶ್ರೀ ಸಾಯಿಬಾಬಾ ಸಾನಿಧ್ಯದಲ್ಲಿ ಏರ್ಪಡಿಸಿತ್ತು. ಶಿರ್ಡಿ ಶ್ರೀ ಸಾಯಿಬಾಬಾ ಸಂಸ್ಥಾನಮ್ ಆಶ್ರಯದಲ್ಲಿ ರಾಮನವಮಿ ಜಾತ್ರಾ ನಿಮಿತ್ತ ಕನ್ನಡ ತುಳು ಸೇರಿದಂತೆ ಬಹು ಭಾಷಾ ವೈವಿಧ್ಯಮಯ ಸಂಗೀತ ನೃತ್ಯ ಸಂಯೋಜನೆಯ ‘ಶ್ರೀ ಸಾಯಿ ರಾಮ ಸ್ತುತಿ ಗೀತ ಗಾನಾಮೃತ’ ಶೀರ್ಷಿಕೆಯಡಿಯಲ್ಲಿ ಕಾರ್ಯಕ್ರಮ ಜರಗಿತು. ಕಲಾ ಸೌರಭದ ನೂತನ ಪರಿಕಲ್ಪನೆಯ ಸಾಂಸ್ಕೃತಿಕ ವೈವಿಧ್ಯತೆಗಳ ಸರಣಿ ಕಾರ್ಯಕ್ರಮ ಸಂಸ್ಥೆಯ ಸಂಯೋಜಕ ಸಂಗೀತ ನಿರ್ದೇಶಕ ಪದ್ಮನಾಭ ಸಸಿಹಿತ್ಲು ಅವರ ನಿರ್ದೇಶನದಲ್ಲಿ ವರ್ಷದ ಪ್ರಾರಂಭದಲ್ಲಿ ಚಾಲನೆ ಪಡೆದು ಮುಂಬಯಿ ಸೇರಿದಂತೆ ಕರ್ನಾಟಕದ ವಿವಿಧ ಭಾಗಗಳಲ್ಲಿ‌ ಆಮಂತ್ರಿತ ಕಲಾವಿದರುಗಳಿಂದ ಬಹು ಭಾಷೀಯ ಭಕ್ತಿ ಭಾವ ಜಾನಪದ ಗೀತಾ ಸಂಗೀತ ನೃತ್ಯ ಕಲಾ ಪ್ರಕಾರಗಳು ಬಹಳ ಯಶಸ್ವಿಯಾಗಿ ನಡೆದು ಇದೀಗ ಬೇಡಿಕೆ ಮೇರೆಗೆ ಶಿರ್ಡಿ…

Read More

ರಾಜಕೀಯ, ಧರ್ಮ ಮತ್ತು ಮೋಸ – ವಂಚನೆ ಎಂಬ ವಿಷಯವು ಸಮಾಜದ ಆಳವಾದ ಸತ್ಯಗಳನ್ನು ತೆರೆದಿಡುತ್ತದೆ. ಮೂಲತಃ ರಾಜಕೀಯವು ಜನರ ಸೇವೆಗೆ, ನ್ಯಾಯ ಮತ್ತು ಸಮಾನತೆಯನ್ನು ಸಾಧಿಸಲು ಇರುವ ವ್ಯವಸ್ಥೆ. ಧರ್ಮವು ಮನುಷ್ಯನ ಒಳಗಿನ ನೈತಿಕತೆಯನ್ನು ಬೆಳೆಸುವ ಮಾರ್ಗ. ಆದರೆ ಇವುಗಳ ಮಧ್ಯೆ ಮೋಸ ಮತ್ತು ವಂಚನೆ ಪ್ರವೇಶಿಸಿದಾಗ ಸಮಾಜದ ದಿಕ್ಕೇ ಬದಲಾಗುತ್ತದೆ. ಕೆಲವರು ರಾಜಕೀಯದಲ್ಲಿ ಅಧಿಕಾರಕ್ಕಾಗಿ ಧರ್ಮವನ್ನು ಉಪಯೋಗಿಸುತ್ತಾರೆ. ಜನರ ಭಾವನೆಗಳನ್ನು ಕೆದಕುವ ಮೂಲಕ ಮತಗಳನ್ನು ಗಳಿಸಲು ಪ್ರಯತ್ನಿಸುತ್ತಾರೆ. ಧರ್ಮದ ಹೆಸರಿನಲ್ಲಿ ಭಯ, ದ್ವೇಷ ಮತ್ತು ವಿಭಜನೆ ಸೃಷ್ಟಿಸುವುದು ನಿಜವಾದ ಧರ್ಮದ ಮೌಲ್ಯಗಳಿಗೆ ವಿರುದ್ಧ. ಇದೇ ವೇಳೆ ಧರ್ಮದ ಮುಖವಾಡದ ಹಿಂದೆ ಕೆಲವರು ತಮ್ಮ ಸ್ವಾರ್ಥವನ್ನು ಸಾಧಿಸಲು ಮೋಸ ಮತ್ತು ವಂಚನೆಗೆ ಕೈ ಹಾಕುತ್ತಾರೆ. ಮನುಷ್ಯರು ಜಾಗೃತರಾಗಬೇಕು. ರಾಜಕೀಯ ಮತ್ತು ಧರ್ಮ ಎರಡನ್ನೂ ಅರ್ಥಪೂರ್ಣವಾಗಿ ಅರಿತುಕೊಳ್ಳಬೇಕು. ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಿಜವಾದ ಧರ್ಮ ಮಾನವೀಯತೆಯನ್ನು ಕಲಿಸುತ್ತದೆ. ನಿಜವಾದ ರಾಜಕೀಯ ಜನಸೇವೆಯನ್ನು ಗುರಿಯಾಗಿರುತ್ತದೆ. ಮೋಸ ಮತ್ತು ವಂಚನೆಗೆ ಅವಕಾಶ ಕೊಡದ ಸಮಾಜವೇ…

Read More

ಒರಿ ಅಮ್ಮೆ ತನ್ನ ಮಗಕ್ ಪಟ್ಟೆ ಪಚ್ಚಡ (ರೇಷ್ಮೆ ಶಾಲು) ಉಡ್‌ಗಿರ ಮಲ್ತೆ. ಮಗೆ ತನ್ನ ಸಂಪಾದೆನದ ದೊಡ್ಡುಡು ಒಂಜಿ ಜೋಡು ಜೋಡು ಕಟ್ಟಾಯೆ. ಸಾಲ್ ಪುಗ್ಗೆಲ್‌ಗ್, ಮುಟ್ಟು ಕಾರ್‌ಗ್ ಪಾಡೊಂದು, ಒಂಜಿ ಸುತ್ತು ಪೋದು ಬತ್ತಿನ ಮಗೆ, ಮುಟ್ಟುದ ದೂಲುನು ಸಾಲ್‌ಡ್ ಗಟ್ಟಿಯೆಗೆ. ಪಚ್ಚಡೊಗು ಅಮ್ಮೆ ನೂದು ಕೊರ್ತೆಡ, ಜೋಡುಗು ಮಗೆ ಪತ್ತ್ ಕೊರ್ದಿಪ್ಪೆ. ಅತ್ತಾವಂದೆ ಮೆಯಿಕ್ ಪಾಡುನ ಸಾಲ್‌ಡ್, ಕುರ್ತೆಲ್ ದೊಕೊಂದು ಬಯಿದಿನ ಕಾರ್ದ ಜೋಡುನು ಒಚ್ಚಿಯೆ. ನರಮಾನಿಗ್ ತಾನ್ ಬೆಂದಿನ ದೊಡ್ಡುದ ಬಿಲೆ ಮಲ್ಲೆ (ಎಚ್ಚ), ನನೊರಿಯನ ದೊಡ್ಡುಗು ಬಿಲೆನೇ ಇಜ್ಜಿ. ಅಂಚ ಬೊಕ್ಕೊರಿ ಅಮ್ಮೆ ಮಗಕ್ ಬುದ್ದಿದ ಪಾತೆರ ಪಂಡೆಡ ಮಗೆ ಉಡಾಫೆ ಪಾತೆರೊಂದು ಇತ್ತೆಗೆ. ‘ಗುರು ಹೆರಿಯೆರ್ ತಗ್ಗ್‌ದ್ ಬಗ್ಗ್‌ದ್ ನಡಪೊಡು’ ಪಂದ್ ಅಮ್ಮೆ ಪಂಡೆಡ ‘ನಡತ್‌ಜಿಡ ದಾದ ಆಪುಂಡು?’ ಪನ್ವೆ. ‘ನಾಲ್ ಜನೊಕು ಬೋಡಾದ್ ಇಪ್ಪೊಡು, ಜನೊಕುಲೆನ ಮುರಿಯೊಗು ಬೂರಿಯೆರೆ ಬಲ್ಲಿ’ ಪಂಡಿನಯಿಕ್ ‘ದಾದ ಆಪುಂಡು?’ ಪಂದ್ ಪೆದಂಬು ಪಾತೆರುವೆ. ‘ಪಯ್ಯೆರು (ಕುದುರೆ)ತ…

Read More

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕಾರ್ಯವ್ಯಾಪ್ತಿಯಲ್ಲಿ ೨೯ ಶಾಖೆಗಳು ಹಾಗೂ ೨ ವಿಸ್ತರಣಾ ಕೌಂಟರ್‌ಗಳೊAದಿಗೆ, ವಿಸ್ತöÈತ ಸೇವಾ ಜಾಲವನ್ನು ಹೊಂದಿ ಕಳೆದ ೩೨ ವರ್ಷಗಳಿಂದ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಕರ್ನಾಟಕ ರಾಜ್ಯದ ಅಗ್ರಗಣ್ಯ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಗಳಲ್ಲಿ ಒಂದಾದ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. ೨೦೨೫- ೨೬ನೇ ಸಾಲಿನಲ್ಲಿ ಒಟ್ಟು ವ್ಯವಹಾರದಲ್ಲಿ ಸಾರ್ವಕಾಲಿಕ ದಾಖಲೆಯ ವೃದ್ಧಿಯನ್ನು ಹೊಂದಿ ೩೧.೦೩.೨೦೨೬ಕ್ಕೆ ಠೇವಣಾತಿ ರೂ.೬೯೫ ಕೋಟಿ ಹಾಗೂ ಸಾಲ ರೂ.೬೧೦ ಕೋಟಿಯೊಂದಿಗೆ ಒಟ್ಟು ವ್ಯವಹಾರ ರೂ.೧೩೦೫ ಕೋಟಿಯನ್ನು ತಲುಪಿ, ರೂ.೫೯೦೧ ಕೋಟಿ ಒಟ್ಟು ವಹಿವಾಟು ದಾಖಲಿಸಿ ತನ್ನ ಎಲ್ಲಾ ಕಾರ್ಯವಿಭಾಗಗಳಲ್ಲಿ ನಿಗದಿತ ಗುರಿಯನ್ನು ಮೀರಿ ಅಮೋಘ ಸಾಧನೆಯನ್ನು ಮಾಡಿದೆ. ಹಿಂದಿನ ಸಾಲಿಗೆ ಹೋಲಿಸಿದಾಗ ಪ್ರಸ್ತುತ ಸಾಲಿನಲ್ಲಿ ಠೇವಣಾತಿಯಲ್ಲಿ ರೂ.೧೦೬ ಕೋಟಿ ಹೆಚ್ಚಳ ಶೇ.೧೮ ವೃದ್ಧಿ ಹಾಗೂ ಸಾಲದಲ್ಲಿ ರೂ.೧೦೫ ಕೋಟಿ ಹೆಚ್ಚಳ, ಶೇ.೨೧ ವೃದ್ಧಿ, ಒಟ್ಟು ವ್ಯವಹಾರದಲ್ಲಿ ರೂ.೨೧೧ ಕೋಟಿಯಾಗಿ ಸಾರ್ವಕಾಲಿಕ ದಾಖಲೆಯ ಹೆಚ್ಚಳದೊಂದಿಗೆ ಶೇ.೧೯ ವಾರ್ಷಿಕ ವೃದ್ಧಿಯೊಂದಿಗೆ ಒಟ್ಟು ವ್ಯವಹಾರವು…

Read More

ಡಿ.ಡಿ ಪ್ರೊಡಕ್ಷನ್ ಲಾಂಛನದಲ್ಲಿ ರಂಜಿತ್ ಸಿ ಬಜಾಲ್ ನಿರ್ದೇಶನದಲ್ಲಿ ಡೋಲ್ಪಿ ಡಿ’ಸೋಜ ನಿರ್ಮಾಣದಲ್ಲಿ ತಯಾರಾದ ’90 ಎಂಎಲ್’ ತುಳು ಚಲನಚಿತ್ರ ಶುಕ್ರವಾರ ಭಾರತ್ ಸಿನಿಮಾಸ್ ನಲ್ಲಿ ತೆರೆ ಕಂಡಿತು. ದೀಪ ಬೆಳಗಿಸುವ ಮೂಲಕ ಸಿನಿಮಾ ಉದ್ಘಾಟನೆ ನೆರವೇರಿಸಿ ಮಾತಾಡಿದ ಬೆಂಜನಪದವು ಕೊರಗಜ್ಜ ಕ್ಷೇತ್ರದ ವಿಜಯ ಅವರು ‘ತುಳುವಿನಲ್ಲಿ ಸದಭಿರುಚಿಯ ಸಿನಿಮಾಗಳು ಬಿಡುಗಡೆಯಾಗುತ್ತಿರುವುದು ಖುಷಿಯ ವಿಚಾರ. ಇಂದು ಬಿಡುಗಡೆಯಾಗುತ್ತಿರುವ 90 ಎಂಎಲ್ ಸಿನಿಮಾ ತುಳು ಪ್ರೇಕ್ಷಕರ ಮನೆ ಮನ ಮುಟ್ಟುವ ಕೆಲಸ ಮಾಡಲಿ. ಇಡೀ ಚಿತ್ರತಂಡಕ್ಕೆ ಶುಭವಾಗಲಿ’ ಎಂದರು. ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಮಾತಾಡಿ, ‘ಸಿನಿಮಾದ ಟ್ರೈಲರ್ ನೋಡಿದೆ. ಮಲಯಾಳಂ ಚಿತ್ರದಂತೆ ಇದೆ. ಟೈಟಲ್ ಕೂಡ ಸಖತ್ತಾಗಿದೆ ಎಲ್ಲರಿಗೂ ಶುಭವಾಗಲಿ’ ಎಂದರು. ಲಾಂಚುಲಾಲ್ ಕೆ.ಎಸ್. ಮಾತನಾಡಿ, ’90 ಎಂಎಲ್ ಸಿನಿಮಾ ಟೈಟಲ್ ಡಿಫರೆಂಟ್ ಆಗಿದೆ. ತುಳುವರು ಸಿನಿಮಾ ನೋಡಿದರೆ ಖಂಡಿತ ಸಿನಿಮಾ ಗೆಲ್ಲಲಿದೆ. ಸಿನಿಮಾಕ್ಕೆ ಶುಭ ಹಾರೈಕೆಗಳು’ ಎಂದರು. ನಟ ಅರ್ಜುನ್ ದೇವ್ ಮಾತನಾಡಿ, ’90 ಎಂಎಲ್ ನಿಜ ಜೀವನದಿಂದ ದೂರವಿರಲಿ,…

Read More

ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ಏಪ್ರಿಲ್ 12 ರಂದು ಭಾನುವಾರ ಬೆಳಿಗ್ಗೆ 9 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಬಹಿರಂಗ ಅಧಿವೇಶನ ನಡೆಯಲಿದ್ದು, ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಮಾಲಾಡಿ ಅಜಿತ್ ಕುಮಾರ್ ರೈ ಕೊಡಿಯಾಲ್ ಗುತ್ತು ಅವರು ತಿಳಿಸಿದರು. ನಗರದ ಬಂಟ್ಸ್ ಹಾಸ್ಟೇಲ್ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಐಕ್ಯತೆ ಮತ್ತು ಸಾಧಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಬೃಹತ್ ಕಾರ್ಯಕ್ರಮವನ್ನು ಸಂಘಟಿಸಲಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಉಚ್ಚ ನ್ಯಾಯಾಲಯದ ಮಾನ್ಯ ನ್ಯಾಯಮೂರ್ತಿಗಳಾದ ವಿಶ್ವಜಿತ್ ಶೆಟ್ಟಿ ಸವಣೂರು ಹಾಗೂ ರಾಜೇಶ್ ರೈ ಕಲ್ಲಂಗಳ ಅವರು ಭಾಗವಹಿಸಲಿದ್ದಾರೆ. ಕೊಡ್ಮಣ್ ಮೋಹನದೇವ್ ಆಳ್ವ ಮತ್ತು ಡಾ. ಎಮ್.ಕೆ ಶೈಲಜಾ ಆಳ್ವ ಅವರ ಗೌರವ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಜರುಗಲಿದೆ ಎಂದು ವಿವರಿಸಿದರು. ಡಾ. ಕೊಡ್ಮಣ್ ನಾಗಪ್ಪ ಆಳ್ವ ಮತ್ತು ಶ್ರೀಮತಿ ಕಲ್ಯಾಣಿ ಆಳ್ವ…

Read More

ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಿಂದ ಬೃಹತ್ ಹೊರೆ ಕಾಣಿಕೆ ನೀಡುವ ಸಂಕಲ್ಪ ಮಾಡಿದ್ದೇವೆ. ಅಮ್ಮನ ಸನ್ನಿಧಾನದಿಂದ 99 ವಾಹನಗಳ ಮೂಲಕ ಹೊರೆಕಾಣಿಕೆಯನ್ನು ಪಡುಬಿದ್ರಿ ಉಳ್ಳಾಯನ ಸನ್ನಿಧಾನಕ್ಕೆ ಸಮರ್ಪಿಸಬೇಕೆನ್ನುವುದು ನಮ್ಮೆಲ್ಲರ ಆಶಯ. ಈ ಹಿಂದೆ ಅಮ್ಮನ ಸನ್ನಿದಾನದಲ್ಲಿ ನಡೆದ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಧ್ಯಕ್ಷರಾಗಿ ಡಾ| ಕೆ ಪ್ರಕಾಶ್ ಶೆಟ್ಟಿ ಮತ್ತು ಹೊರೆ ಕಾಣಿಕೆ ಸಮರ್ಪಣಾ ಸಮಿತಿಯ ಅಧ್ಯಕ್ಷರಾಗಿ ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು ಸೇವೆ ಸಲ್ಲಿಸಿದ್ದು, ಇದೀಗ ಪಡುಬಿದ್ರಿಯಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಹಾಗಾಗಿ ನಾವೆಲ್ಲಾ ಅವರ ಜೊತೆಗೂಡಬೇಕಿದೆ ಎಂದು ದೇವಳದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜರ್ಷಿ ಕೆ. ವಾಸುದೇವ ಶೆಟ್ಟಿ ಹೇಳಿದರು. ಈ ಸಂದರ್ಭ ಮಾತನಾಡಿದ ಕಾಪು ಕ್ಷೇತ್ರದ ಶಾಸಕ ಮತ್ತು ದೇವಳದ ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ, ನಾನು ಶಾಸಕನಾಗಿರುವುದು ನನ್ನ ಭಾಗ್ಯ. ಕಾಪು ಹೊಸ ಮಾರಿಗುಡಿ ದೇವಸ್ಥಾನ, ನನ್ನೂರಿನ ಕಳತ್ತೂರು ಬ್ರಹ್ಮಬೈದರ್ಕಳ ಗರಡಿ, ಪಡುಬಿದ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ…

Read More

ದಕ್ಷಿಣ ಕನ್ನಡ ಫಿಸಿಯೋಥೆರಪಿ ಟೀಚರ್ಸ್ ಅಸೋಸಿಯೇಷನ್ ಆಯೋಜಿಸಿದ ಫಿಸಿಯೋ ವೀಕ್ ನ ಉದ್ಘಾಟನೆ ಹಾಗೂ ರಕ್ತದಾನ ಶಿಬಿರ ನೀರುಮಾರ್ಗದ ಮಂಗಳಾ ಕಾಲೇಜ್ ಆಫ್ ಫಿಸಿಯೋಥೆರಪಿ ಸಭಾಭವನದಲ್ಲಿ ನಡೆಯಿತು. ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಕಾರ್ಯಕ್ರಮ ಉದ್ಘಾಟಿಸಿದರು. ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಛೇರ್ಮನ್ ಸಿಎ ಶಾಂತರಾಮ್ ಶೆಟ್ಟಿ, ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ಅಧ್ಯಕ್ಷ ಡಾ| ಯು.ಟಿ ಇಫ್ತಿಕಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಂಗಳಾ ಸಮೂಹ ವಿದ್ಯಾ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಡಾ| ಗಣಪತಿ ಪಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಅನಿತಾ ಉಪಸ್ಥಿತರಿದ್ದರು. ಒಂದು ವಾರ ನಡೆಯಲಿರುವ ಫಿಸಿಯೋ ವೀಕ್ ನ ವಿವಿಧ ಕಾರ್ಯಕ್ರಮಗಳ ಅಂಗವಾಗಿ ಮೊದಲ ದಿನ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

Read More

ರೋಟರಿ ಕ್ಲಬ್ ಕಾರ್ಕಳ ಇಲ್ಲಿಗೆ ರೋಟರಿ ಜಿಲ್ಲೆ, 3182 ರ ಜಿಲ್ಲಾ ಗವರ್ನರ್ Mphf ಕೆ. ಪಾಲಾಕ್ಷರವರು ಅಧಿಕೃತ ಭೇಟಿ ನೀಡಿದರು. ಕಾಬೆಟ್ಟು ಅಂಬೇಡ್ಕರ್ ಭವನದಲ್ಲಿ ನಡೆದ ಈ ಸಮಾರಂಭದಲ್ಲಿ ರೋಟರಿ ಕ್ಲಬ್ಬಿನ ಅಧ್ಯಕ್ಷ ರೋ. Phf ಕೆ.ನವೀನ್ ಚಂದ್ರ ಶೆಟ್ಟಿಯವರು ಪ್ರಾಸ್ತಾವಿಕ ಮಾತುಗಳನ್ನಾಡಿ ಎಲ್ಲಾ ಅತಿಥಿಗಳನ್ನು ಸ್ವಾಗತಿಸಿದರು. ಸಮಾರಂಭದ ಮುಖ್ಯ ಅತಿಥಿ ಜಿಲ್ಲಾ ಗವರ್ನರ್ ರೋ. Mphf ಕೆ.ಪಾಲಾಕ್ಷ ರವರು ಮಾತನಾಡುತ್ತಾ, ಕಾರ್ಕಳ ರೋಟರಿ ಕ್ಲಬ್ಬಿನ ಸಮುದಾಯ ಸೇವಾ ಕಾರ್ಯಕ್ರಮಗಳು, ಶಿಕ್ಷಣಕ್ಕೆ ನೀಡುತ್ತಿರುವ ಸೇವೆಗಳು, ಪರಿಸರ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಇದೇ ಸಂದರ್ಭದಲ್ಲಿ ಖ್ಯಾತ ಗುತ್ತಿಗೆದಾರ ಸುಜಯ್ ಕುಮಾರ್ ಶೆಟ್ಟಿ ಮತ್ತು ಚಲನಚಿತ್ರ ನಟ, ನಿರ್ದೇಶಕ ಮತ್ತು ಪ್ರಸಿದ್ಧ ಪ್ರಶಂಸ ನಾಟಕ ತಂಡದ ಕಲಾವಿದ ಪ್ರಸನ್ನ ಶೆಟ್ಟಿ ಬೈಲೂರು ಇವರನ್ನು ಸನ್ಮಾನಿಸಲಾಯಿತು. ರೋಟರಿ ಗೃಹ ಪತ್ರಿಕೆ “ಸರ್ವಿಸ್”ಅನ್ನು ಗವರ್ನರ್ ಬಿಡುಗಡೆಗೊಳಿಸಿದರು. ಸಹಾಯಕ ಗವರ್ನರ್ ರೋ. Phf ವಿಘ್ನೇಶ್ ಶೆಣೈ, ವಲಯ ಸೇನಾನಿ ರೋ.…

Read More