Author: admin
ಪ್ರಗತಿಪರ ಚಿಂತನೆಯೊಂದಿಗೆ ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಸಂಸ್ಥೆಯನ್ನು ಸ್ಥಾಪಿಸಿ ಇಷ್ಟರವರೆಗೆ ನಡೆಸಿಕೊಂಡು ಬಂದವರೆಲ್ಲರೂ ಸದಾ ಪ್ರಾತಃ ಸ್ಮರಣೀಯರು. ಇತ್ತೀಚೆಗೆ ನಡೆದ ಸಂಸ್ಥೆಯ ಸಭೆಯಲ್ಲಿ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿದ ಎಲ್ಲರಿಗೂ ಕೃತಜ್ಞತೆಗಳು. ಈ ಜ್ಞಾನ ಶೃಂಗ ಸಮ್ಮೇಳನವು ಸಮುದಾಯದ ಪ್ರಗತಿಪರ ಚಿಂತನೆ, ಮೌಲ್ಯಾಧಾರಿತ ಕಾರ್ಯಗಳೊಂದಿಗೆ ಏಕತಾ ಮನೋಭಾವವನ್ನು ಪ್ರತಿಬಿಂಬಿಸುವ ಮಹತ್ವದ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸುವೆನು. ಇತ್ತೀಚಿನ ವರ್ಷಗಳಲ್ಲಿ ಐಬಿಸಿಸಿಐ ಅನೇಕ ಜ್ಞಾನ ಸಮ್ಮೇಳನಗಳನ್ನು ಆಯೋಜಿಸಿದ್ದರೂ, ಅವುಗಳ ಮೂಲ ವಿಷಯ ಉದ್ಯಮಶೀಲತೆ ಕುರಿತಾಗಿಯೇ ಇತ್ತು. ಆದರೆ ಈ ಬಾರಿ ಸಮ್ಮೇಳನವು ವಿಭಿನ್ನತೆಯನ್ನು ಹೊಂದಿದ್ದು, ಉದ್ಯಮ ನಿರ್ವಹಣೆಯಲ್ಲಿ ಆಧ್ಯಾತ್ಮದ ಸ್ಪರ್ಶ ಕೂಡ ಇದೆ. ಬಂಟ ಸಮುದಾಯವು ಹೆಮ್ಮೆಯ ಪರಂಪರೆ, ಉದ್ಯಮಶೀಲತೆ, ನಾಯಕತ್ವ ಮತ್ತು ಸಾಮಾಜಿಕ ಹೊಣೆಗಾರಿಕೆಯಲ್ಲಿ ಸಮೃದ್ಧ ಪರಂಪರೆಯನ್ನು ಹೊಂದಿದೆ. ಸಾಮಾನ್ಯ ಆರಂಭದಿಂದ ಹಿಡಿದು ವಿವಿಧ ಕೈಗಾರಿಕಾ ಕ್ಷೇತ್ರಗಳಲ್ಲಿ ಯಶಸ್ವಿ ಉದ್ಯಮಗಳನ್ನು ಸ್ಥಾಪಿಸುವ ತನಕದ ಅವರ ಪಯಣವು ಧೈರ್ಯ, ಪ್ರಾಮಾಣಿಕತೆ ಮತ್ತು ದೂರದೃಷ್ಟಿಯಿಂದ ಚಾಲಿತವಾಗಿದೆ. ಜ್ಞಾನ ಸಮ್ಮೇಳನವು ಅನುಭವ…
ಆಯುರ್ವೇದದಲ್ಲಿ ನಡೆಯುತ್ತಿರುವ ಸಂಶೋಧನೆಗಳು ಕೇವಲ ಪುಸ್ತಕಗಳಿಗೆ ಸೀಮಿತವಾಗದೆ, ಸಮಾಜಕ್ಕೆ ಉಪಯೋಗವಾಗುವ ಹಾಗೂ ಆರ್ಥಿಕ ಬೆಳವಣಿಗೆಗೆ ದಾರಿ ಮಾಡಿಕೊಡಬಲ್ಲ ಸಂಶೋಧನೆಯಾಗಬೇಕು ಎಂದು ಮೈಸೂರಿನ ಸರಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ. ಲಕ್ಷ್ಮೀ ನಾರಾಯಣ ಶೆಣೈ ಹೇಳಿದರು. ಅವರು ಆಳ್ವಾಸ್ ಆಯುರ್ವೇದ ಕಾಲೇಜಿನ ಆತ್ಮ ಸಂಶೋಧನಾ ಕೇಂದ್ರ, ಮೈಸೂರಿನ ಸರಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಅಲೋಕ 2026 ನ್ನು ಉದ್ಘಾಟಿಸಿ ಮಾತನಾಡಿದರು. ಆಯುರ್ವೇದದಲ್ಲಿ ನಡೆಯುತ್ತಿರುವ ಸಂಶೋಧನೆಗಳು ಹೆಚ್ಚು ಉಪಯುಕ್ತವಾಗುವಂತೆ ಮಾಡಬೇಕು. ಕೇವಲ ಸಿದ್ಧಾಂತದ ಹಂತದಲ್ಲಿ ಉಳಿಯದೆ, ಅವು ಜನರ ಆರೋಗ್ಯಕ್ಕೆ ನೇರವಾಗಿ ಪ್ರಯೋಜನವಾಗಬೇಕು. ಸಂಶೋಧನೆಯಿಂದ ಹೊಸ ಔಷಧಿಗಳು, ಆರೋಗ್ಯ ಉತ್ಪನ್ನಗಳು ಮತ್ತು ಚಿಕಿತ್ಸಾ ವಿಧಾನಗಳು ಅಭಿವೃದ್ಧಿಯಾಗಬೇಕು. ಇವುಗಳು ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನ ಪಡೆಯುವಂತಾದರೆ ಆಯುರ್ವೇದ ಕ್ಷೇತ್ರಕ್ಕೆ ಆರ್ಥಿಕ ಲಾಭವೂ ಹೆಚ್ಚುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಎಂ. ಮೋಹನ ಆಳ್ವ, ಹಿಂದೆ ಆಯುರ್ವೇದದಲ್ಲಿ ಸಂಶೋಧನೆಗಳಿಗೆ ಹೆಚ್ಚಿನ ಮಹತ್ವವಿರಲಿಲ್ಲ.…
ಆಳ್ವಾಸ್ ಹೆಲ್ತ್ ಸೆಂಟರ್ ವತಿಯಿಂದ ಮಾರ್ಚ್ 08 ರಂದು ಬೆಳಿಗ್ಗೆ 10ರಿಂದ 1 ಘಂಟೆಯವರೆಗೆ ಮೂಡುಬಿದಿರೆಯ ಆಳ್ವಾಸ್ ಹೆಲ್ತ್ ಸೆಂಟರ್ನಲ್ಲಿ ಉಚಿತ ಶಸ್ತ್ರಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಹೈಡ್ರೋಸಿಲ್, ಮೂಲವ್ಯಾಧಿ, ಹರ್ನಿಯ, ಥೈರಾಯ್ಡ್ ಸಮಸ್ಯೆ, ಮಧುಮೇಹ ಪಾದದ ಚಿಕಿತ್ಸೆ, ಅಬ್ಸೆಸ್ ಡ್ರೆನೇಜ್, ಪಿತ್ತ ಕೋಶದ ಕಲ್ಲುಗಳ ಚಿಕಿತ್ಸೆ, ಸ್ತನದ ಗಡ್ಡೆ/ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಸೇರಿದಂತೆ ಮುಂತಾದ ರೋಗಗಳಿಗೆ ಉಚಿತ ಶಸ್ತ್ರಚಿಕಿತ್ಸೆ ಹಾಗೂ ತಜ್ಞರ ಸಲಹೆ ಲಭಿಸಲಿದೆ. ಹೊಟ್ಟೆ ನೋವು ವಿಶೇಷವಾಗಿ ಬಲಭಾಗದಲ್ಲಿ ತೀವ್ರ ನೋವು, ಹೊಟ್ಟೆಯಲ್ಲಿ ಅಥವಾ ದೇಹದ ಬೇರೆ ಭಾಗದಲ್ಲಿ ಗಡ್ಡೆ, ಹರ್ನಿಯದ ಲಕ್ಷಣಗಳು, ಮಲಬದ್ಧತೆ ಜೊತೆಗೆ ರಕ್ತ ಸ್ರಾವ, ಮಲದ್ವಾರದಲ್ಲಿ ನೋವು/ಉಬ್ಬರಗಳ ಸಂಧರ್ಭದಲ್ಲಿ ಸಾಮಾನ್ಯ ಶಸ್ತ್ರಚಿಕಿತ್ಸೆಯ ಅಗತ್ಯವಿರುವುದರಿಂದ ಈ ಶಿಬಿರದ ಮೂಲಕ ಉಚಿತ ಶಸ್ತ್ರಚಿಕಿತ್ಸೆಯ ಪ್ರಯೋಜನವನ್ನು ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿ ಹಾಗೂ ನೋಂದಣಿಗಾಗಿ 9945722671 ಸಂಖ್ಯೆಯನ್ನು ಸಂಪರ್ಕಿಸಲು ಕೋರಲಾಗಿದೆ.
ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮತ್ತು ಡಾ| ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ : ವಿಕಾಸ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರದಾನ ಕಾರ್ಯಕ್ರಮ
ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮತ್ತು ಡಾ| ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳುವ ಭಾಗ್ಯ ನನ್ನದಾಗಿದೆ. ಇಲ್ಲಿನ ಹಲವು ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸಿದ್ದೇನೆ. ಇಲ್ಲಿನ ಶಿಸ್ತು, ಸಮಯ ಪಾಲನೆ ಕಾರ್ಯಕ್ರಮದ ಅಚ್ಚುಕಟ್ಟುತನಕ್ಕೆ ಬೆರಗಾಗಿದ್ದೇನೆ. ನನಗೆ ಗೊತ್ತಿಲ್ಲದ ಎಷ್ಟೋ ವಿಚಾರಗಳನ್ನು ಇಲ್ಲಿ ಬಂದು ತಿಳಿದುಕೊಂಡಿದ್ದೇನೆ. ವಿಶ್ವನಾಥ ಕಾರ್ನಾಡ್ ಅವರ ಹಾಗೆ ನಾನು ಕೂಡಾ ಮದರ್ ಇಂಡಿಯಾ ಶಾಲೆಯ ಹಳೆಯ ವಿದ್ಯಾರ್ಥಿ. ಅವರೊಂದಿಗೆ ನನಗೆ ತುಂಬಾ ಆತ್ಮೀಯ ಒಡನಾಟವಿದೆ. ಅವರ ಸಾಹಿತ್ಯ ಸಾಧನೆ ನೋಡಿ ನಾನು ಸಂತೋಷ ಪಡುತ್ತೇನೆ. ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಸ್ಯುತ್ಯರ್ಹ. ಇಂದು ಪ್ರಶಸ್ತಿ, ಬಹುಮಾನ ಪಡೆದ ಎಲ್ಲರಿಗೂ ಅಭಿನಂದನೆಗಳು ಎಂದು ಉದ್ಯಮಿ, ಸಮಾಜಸೇವಕ ಸುರೇಂದ್ರ ಪೂಜಾರಿ ಅವರು ಶುಭ ಹಾರೈಸಿದರು. ಅವರು ಫೆಬ್ರವರಿ ೨೧ರ ಶನಿವಾರ ಮರಾಠಿ ವಿಭಾಗ, ವಿದ್ಯಾನಗರಿ, ಇಲ್ಲಿ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಹಾಗೂ ಡಾ| ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಜಂಟಿಯಾಗಿ…
ಶ್ರೀ ನಡಿಯೇಲು ದೈಯ್ಯಂಗುಲು, ಶ್ರೀ ಉಳ್ಳಾಲ್ತಿ, ಶ್ರೀ ನಾಲ್ಕೈತ್ತಾಯ ಹಾಗೂ ಪರಿವಾರ ದೈವಗಳ ಪಾವನ ಕ್ಷೇತ್ರ ಮಿತ್ತಮಜಲು, ಸಜೀಪ ಮಾಗಣೆಯಲ್ಲಿ ಮಾರ್ಚ್ 18, 19 ಮತ್ತು 20 ರಂದು ಮೂರು ದಿನಗಳ ಕಾಲ ನಡೆಯಲಿರುವ ಶ್ರೀ ನಡಿಯೇಲು ದೈಯ್ಯಂಗುಲುಗಳ ನೂತನ ಸ್ವರ್ಣಬಿಂಬಗಳ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ಪೂರ್ವಭಾವಿ ಸಿದ್ಧತಾ ಸಭೆ ಶ್ರೀ ಶಾರದಾ ಫ್ರೆಂಡ್ಸ್ ಸರ್ಕಲ್ ವಿದ್ಯಾನಗರ, ಸಜಿಪ ಮುನ್ನೂರಿನಲ್ಲಿ ನಡೆಯಿತು. ಸಭೆಯನ್ನು ರತ್ನಾಕರ ಪೂಜಾರಿ ನಾಡಾರು ಇವರು ನಿರ್ವಹಿಸಿದರು. ಮಾಗಣೆಯ ತಂತ್ರಿಗಳಾದ ಎಂ. ಸುಬ್ರಹ್ಮಣ್ಯ ಭಟ್ ಅವರು ಕ್ಷೇತ್ರದ ಮಹತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಹೊರಕಾಣಿಕೆ ಸಮರ್ಪಣ ಸಮಿತಿಯ ಮುಖ್ಯ ಸಂಚಾಲಕರಾದ ಜಯಶಂಕರ್ ಬಾಸ್ರಿತ್ತಾಯ ಅವರು ಹೊರೆಕಾಣಿಕೆ ಸಮರ್ಪಣೆ ಕುರಿತು ಮಾಹಿತಿ ನೀಡಿದರು. ಸಮಿತಿಯ ಗೌರವಾಧ್ಯಕ್ಷರಾದ ನಗ್ರಿಗುತ್ತು ವಿವೇಕ್ ಶೆಟ್ಟಿ ಅವರು ಶ್ರೀ ನಡಿಯೇಲು ದೈಯ್ಯಂಗುಲುಗಳ ನೂತನ ಸ್ವರ್ಣಬಿಂಬಗಳ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಸಂಪೂರ್ಣ ವಿವರವನ್ನು ಸಭೆಗೆ ತಿಳಿಸಿದರು. ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು…
ಮುಂಬಯಿಯ ಪ್ರತಿಷ್ಠಿತ ಸಂಘಟನೆಗಳಲ್ಲಿ ಒಂದಾದ ಗೋರೆಗಾಂವ್ ಕರ್ನಾಟಕ ಸಂಘ 1958 ಅಕ್ಟೋಬರ್ 22 ರಲ್ಲಿ ನಿಸ್ವಾರ್ಥ ಮನೋಭಾವನೆಯ, ಸಮಾನ ಮನಸ್ಕರ ಮತ್ತು ಕನ್ನಡ ಅಭಿಮಾನಿಗಳ ಪ್ರಯತ್ನದಿಂದ ಪ್ರಾರಂಭವಾಯಿತು. ಮೊತ್ತ ಮೊದಲ ಸ್ಥಾಪಕ ಅಧ್ಯಕ್ಷರಾಗಿ ದಿ. ಮೂರೂರು ಸಂಜೀವ ಶೆಟ್ಟಿಯವರು ನೇಮಕಗೊಂಡಿದ್ದರು. ಈಗ ಅದರ 67 ನೇ ನಾಡಹಬ್ಬ ಹಾಗೂ ವಿಚಾರಗೋಷ್ಠಿಯನ್ನು ಮಲಾಡ್ ಪಶ್ಚಿಮದ ಸುಂದರ ನಗರದ ಡಿ. ಕೇತನ್ ಅಂತರಾಷ್ಟ್ರೀಯ ಸಭಾಗೃಹದಲ್ಲಿ ಬೆಳಗ್ಗೆಯಿಂದ ಸಾಯಂಕಾಲದ ತನಕ ಮಾರ್ಚ್ 1 ರಂದು ಸಂಭ್ರಮದಿಂದ ನಡೆಯಿತು. ಸಂಘದ ಅಧ್ಯಕ್ಷರಾದ ವಿಶ್ವನಾಥ ಎನ್ ಶೆಟ್ಟಿ ಅವರ ಮಾರ್ಗದರ್ಶನ ಹಾಗೂ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಲಂಕರಿಸಿದ ಎಸ್ ನಿತ್ಯಾನಂದ ಹೆಗ್ಡೆ, ಮುಖ್ಯ ಅತಿಥಿಯಾಗಿ ನ್ಯಾಯವಾದಿ ಡಿ.ಕೆ ಶೆಟ್ಟಿ ಮತ್ತು ಇನ್ನಿತರ ಹಲವಾರು ಗಣ್ಯರು ಅತಿಥಿಗಳಾಗಿ ಭಾಗವಹಿಸಿದರು. ಆರಂಭಿಕವಾಗಿ ಸ್ವಾಗತ ಭಾಷಣದಿಂದ ಪ್ರಾರಂಭಗೊಂಡು, ಪ್ರಥಮವಾಗಿ ನ್ಯಾಯವಾದಿ ಡಿ.ಕೆ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ತನ್ನ ಭಾಷಣವನ್ನು ಕನ್ನಡದ ಕವಿ ಮಹಾಲಿಂಗರಂಗ ಈ ಭಟ್ಟರ ‘ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ…
ಮುಂಬಯಿ ಮಹಾನಗರದ ತುಳು ಕನ್ನಡಿಗರ ಮುಂದಾಳತ್ವದ ಸೇವಾ ಸಂಸ್ಥೆ ಶಿವಾಯ ಫೌಂಡೇಶನ್ ವತಿಯಿಂದ ಸಮಾಜದ ಪ್ರೇರಕ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಕೊಡ ಮಾಡುವ 2026 ರ ಸಾಲಿನ ಪ್ರೇರಣಾ ಪ್ರಶಸ್ತಿಗೆ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಸ್ಥಾನದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಸಾಮಾಜಿಕ ಧಾರ್ಮಿಕ ಕ್ಷೇತ್ರದಲ್ಲಿ ಸನಾತನ ಧರ್ಮವನ್ನು ಉಳಿಸಿ ಬೆಳೆಸುವಲ್ಲಿ ಅಣ್ಣಿ ಶೆಟ್ಟಿಯವರು ನೀಡುತ್ತಿರುವ ನಿರಂತರ ಸೇವೆಗಾಗಿ ಶಿವಾಯ ಸಂಸ್ಥೆಯು ಮಾರ್ಚ್ 15 ರಂದು ನಡೆಯಲಿರುವ ಶಿವಾಯ ಫೌಂಡೇಶನ್ ನ ಎಂಟನೇ ವಾರ್ಷಿಕೋತ್ಸವದ ಶಾರದಾ ಶ್ಯಾಮ್ ಶೆಟ್ಟಿ ದಂಪತಿಯ ಘನ ಸಿರಿ ವೇದಿಕೆಯಲ್ಲಿ ಅತಿಥಿ ಗಣ್ಯರ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಮಧ್ಯಾಹ್ನ 1:30 ರಿಂದ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಕುಣಿತ ಭಜನಾ ಸ್ಪರ್ಧೆ, ಸಮೂಹ ಗಾಯನ ಸ್ಪರ್ಧೆ ಮತ್ತು ಟೀಮ್ ಐಲೇಸಾ ಸದಸ್ಯರಿಂದ ಊರಿನ ನುರಿತ ಹಾಡುಗಾರರಿಂದ ತುಳು ಕನ್ನಡ ರಸಮಂಜರಿ, ನೃತ್ಯ ಪ್ರದರ್ಶನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಜರಗಲಿದೆ. ಮುಂಬಯಿ ನಗರ…
ಬನ್ನಾಡಿ ಲಯನ್ಸ್ ಕ್ಲಬ್ ಗೆ ಲಯನ್ಸ್ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಭೇಟಿ ಕಾರ್ಯಕ್ರಮ ಫೆಬ್ರವರಿ 23ರಂದು ಸುಬ್ಬಣ್ಣ ಸಿಂಧೂ ಸಭಾಂಗಣದಲ್ಲಿ ನೆರವೇರಿತು. ಸಪ್ನಾ ಸುರೇಶ್ ಮಾತನಾಡಿ, ಗ್ರಾಮೀಣ ಭಾಗದ ಕ್ಲಬ್ ಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಬನ್ನಾಡಿ ಕ್ಲಬ್ ಕೂಡ ಉತ್ತಮ ಸೇವೆ ನೀಡಿದೆ ಎಂದರು. ಅತ್ಯುತ್ತಮ ಬಿ.ಎಲ್.ಒ ಪ್ರಶಸ್ತಿ ಪುರಸ್ಕೃತೆ ವಿಜಯಲಕ್ಷ್ಮೀ ಬನ್ನಾಡಿ, ಮಾನವೀಯ ಮೌಲ್ಯ ಪಾಲನೆ ನಿಟ್ಟಿನಲ್ಲಿ ಪ್ರವೀಣ್ ಹೆಗ್ಡೆ ಅವರನ್ನು ಗೌರವಿಸಲಾಯಿತು. ಲಯನ್ಸ್ ಮಾಜಿ ಗವರ್ನರ್ ಕೆ. ಸುರೇಶ್ ಪ್ರಭು, ವಿ.ಡಿ.ಜಿ ರಾಜೀವ ಕೋಟ್ಯಾನ್, ಪ್ರಾದೇಶಿಕ ಅಧ್ಯಕ್ಷ ರಜತ್ ಕುಮಾರ್ ಹೆಗ್ಡೆ, ಪ್ರಾದೇಶಿಕ ಕಾರ್ಯದರ್ಶಿ ಏಕನಾಥ ಬೋಳಾರ್, ಪ್ರಮುಖರಾದ ಸಂತೋಷ ಕುಮಾರ್ ಶೆಟ್ಟಿ, ದಿನಕರ ಶೆಟ್ಟಿ ಎಂ, ಕ್ಲಬ್ ಅಧ್ಯಕ್ಷ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಚಂದ್ರ ಶೆಟ್ಟಿ ಯಾಳಕ್ಕು, ಖಜಾಂಚಿ ನಿತೀಶ್ ಆಚಾರ್ಯ ಉಪಸ್ಥಿತರಿದ್ದರು. ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಚಂದ್ರಶೇಖರ ಶೆಟ್ಟಿ ಕಲ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಬನ್ನಾಡಿ ಸೋಮನಾಥ ಹೆಗ್ಡೆ ಸಹಕರಿಸಿದರು. ಖಜಾಂಚಿ…
ಭ್ರಷ್ಟಾಚಾರ ಎನ್ನುವುದು ನೀಗದ ದಾಹವಿದ್ದಂತೆ. ಒಮ್ಮೆ ಭ್ರಷ್ಟಾಚಾರಕ್ಕೆ ಇಳಿದ ವ್ಯಕ್ತಿ ಎಷ್ಟೇ ಹಣ ಮಾಡಿದರೂ ಇನ್ನಷ್ಟು, ಮತ್ತಷ್ಟು ಹಣ ಮಾಡಬೇಕು ಎನ್ನುವ ದಾಹಕ್ಕಿಳಿಯುತ್ತಾನೆ. ನಮ್ಮ ಮಕ್ಕಳಿಗೆ ನೈತಿಕ ಪಾಠ ಕಲಿಸದಿದ್ದರೆ ಭ್ರಷ್ಟಾಚಾರವನ್ನು ನಿಯಂತ್ರಿಸಲು ಅಸಾಧ್ಯ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಜಸ್ಟೀಸ್ ಸಂತೋಷ್ ಹೆಗ್ಡೆ ತಿಳಿಸಿದರು. ಅವರು ಬನ್ನಾಡಿಯಲ್ಲಿ ಜರಗಿದ ಬನ್ನಾಡಿ ದಿ. ಪದ್ದು ಆಚಾರ್ ಸಂಸ್ಕರಣೆ, ಸಹಾಯಧನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧಿಕಾರ ಇದ್ದಾಗ ಅದನ್ನು ಪ್ರಾಮಾಣಿಕವಾಗಿ ಉಪಯೋಗಿಸಬೇಕು. ಬಡವರಿಗೆ ದುರ್ಬಲರಿಗೆ ಜನರ ನಡವಳಿಕೆ ಬದಲಾಗದೆ ದೇಶದಲ್ಲಿ ಬದಲಾವಣೆ ಬಯಸಲು ಅಸಾಧ್ಯ. ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವಾಗ ಎಚ್ಚರಿಕೆ ಅಗತ್ಯ. ಅಸಮರ್ಥರನ್ನು ಆಯ್ಕೆ ಮಾಡಿ ದೇಶ ಬದಲಾಗಬೇಕೆಂದು ಕನಸು ಕಾಣುವುದು ಕೂಡಾ ದುರಂತ ಎಂದರು. ಈ ಸಂದರ್ಭ ಉತ್ತಮ ಬಿ.ಎಲ್.ಒ ರಾಜ್ಯ ಪ್ರಶಸ್ತಿ ಪುರಸ್ಕೃತ ವಿಜಯಲಕ್ಷ್ಮೀ ಶೆಟ್ಟಿ ಅವರನ್ನು ಗೌರವಿಸಲಾಯಿತು. ಅಶಕ್ತರಿಗೆ ಸಹಾಯಧನ ವಿತರಣೆ, ಪ್ರತಿಭಾ ಪುರಸ್ಕಾರ ನಡೆಯಿತು. ರೋಟರಿ ಸಹಾಯಕ ಗವರ್ನರ್ ಶ್ಯಾಮ್ ಸುಂದರ್ ನಾಯರಿ, ರೋಟರಿ ಕೋಟ…
ಆಂಧ್ರ ವಿಶ್ವವಿದ್ಯಾಲಯದ ಆಶ್ರಯದಲ್ಲಿ ಜರುಗಿದ ಅಖಿಲ ಭಾರತ ಅಂತರ್ ವಿ.ವಿ ದೇಹದಾರ್ಢ್ಯ ಚಾಂಪಿಯನ್ ಶಿಪ್ನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ ಆಳ್ವಾಸ್ ಕಾಲೇಜಿನ ಕಿಶನ್ ಶೆಟ್ಟಿ 90 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಹಾಗೂ ಪ್ರಥಮ್ 65 ಕೆಜಿ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಸಾಧನೆ ಮೆರೆದಿದ್ದಾರೆ. ಈ ಗಮನಾರ್ಹ ಸಾಧನೆಯಿಂದ ಮಂಗಳೂರು ವಿ.ವಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಕಿಶನ್ ಶೆಟ್ಟಿ ಅಂತರ್ ಕಾಲೇಜು ದೇಹದಾರ್ಢ್ಯ ಚಾಂಪಿಯನ್ ಶಿಪ್ನಲ್ಲಿ ಮಿಸ್ಟರ್ ಮಂಗಳೂರು ವಿ.ವಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು ಅಭಿನಂದಿಸಿದ್ದಾರೆ.















