Author: admin

ಒಂದು ಸತ್ಯನಾರಾಯಣ ಪೂಜೆಗೆ ತಗಲುವ ಖರ್ಚೆಷ್ಟು? ಒಂದು ಸಾವಿರ? ಐದು ಸಾವಿರ? ಇಪ್ಪತ್ತು ಸಾವಿರ? ಐವತ್ತು ಸಾವಿರ? ಇದು ಖರ್ಚು ಮಾಡುವವರ ಸಾಮರ್ಥ್ಯವನ್ನು ಹೊಂದಿಕೊಂಡಿದೆ. (ಕದ್ರಿ ದೇವಸ್ಥಾನದಲ್ಲಿ 125 ರೂಪಾಯಿಯಲ್ಲಿಯೂ ಸತ್ಯನಾರಾಯಣ ಪೂಜಾ ಆಗುತ್ತದೆ). ಇಪ್ಪತ್ತೈದು, ಐವತ್ತು ಸಾವಿರ ಖರ್ಚಿನ ಸತ್ಯನಾರಾಯಣ ಪೂಜೆಗಳು ಮುಂಬಾಯಿಯಲ್ಲಿ ಸಾಮಾನ್ಯ. ಬಡಾಯಿ ಕೊಚ್ಚಿಕೊಳ್ಳುವ ಬಂಟರಿಗೆ ತಾವು ಸತ್ಯನಾರಾಯಣ ಪೂಜೆಗೆ ಇಷ್ಟು ಸಾವಿರ ಖರ್ಚು ಮಾಡಿದ್ದೇವೆ ಅಂತ ಹೇಳಿಕೊಳ್ಳುವುದು ಪ್ರತಿಷ್ಠೆಯ ವಿಷಯವಾಗಿದೆ. ಹೋಟೆಲ್ ಉದ್ಘಾಟನೆಗೆ ಸಾವಿರಾರು ರೂಪಾಯಿಯ ಸತ್ಯನಾರಾಯಣ ಪೂಜೆ ಮಾಡಿಸಿದ ಸೇಟುಗಳು ಉದ್ಧಾರವಾಗಿದ್ದಾರೋ ಇಲ್ಲವೋ ಗೊತ್ತಿಲ್ಲ, ಪುರೋಹಿತರು ಉದ್ಧಾರವಾದದ್ದಂತೂ ಸತ್ಯ. ಅದೇ ಮರಾಠಿ ಭಟ್ಟರನ್ನು ಕರೆದು ಪೂಜೆ ಮಾಡಿಸಿದರೆ ಬರೇ ಎರಡು ಸಾವಿರದಲ್ಲೂ ಪೂಜೆ ಮುಗಿಸುತ್ತಾರೆ. ಆದರೆ ಅವರನ್ನು ಕರೆಯಲು ನಮಗೆ ಹಮ್ಮು ಬಿಡುವುದಿಲ್ಲ. ಇಂದು ಮುಂಬಯಿಯ ಪುರೋಹಿತರಿಗೆ ಸತ್ಯನಾರಾಯಣ ಪೂಜೆ ಹಣ ಗಳಿಸುವ ಸುಲಭ ಮಾರ್ಗವಾಗಿದೆ. ಪೂಜೆ ಮುಗಿದ ನಂತರ ಹರಿವಾಣಕ್ಕೆ ದುಡ್ಡು ಹಾಕುವುದರಲ್ಲಿಯೂ ಪೈಪೋಟಿ ಇದೆ. ಇಂದು ಪೌರೋಹಿತ್ಯವೇ ಒಂದು ಬೃಹತ್ ಉದ್ಯಮವಾಗಿದೆ.…

Read More

ಪೊದು ಪಂಡ ಕನ್ನಡದ ವಧು (bride)ಕು ಸಂವಾದಿ ಅತ್ತ್, ವೈವಾಹಿಕ ಸಂಬಂಧ ಪಂದ್ ಅರ್ತ. ನಮ ಕನತಿನ (ಮದಿಮೆ ಮಲ್ತ್‌ದ್) ಪೊನ್ನನ ಇಲ್ಲದಗುಲು, ಅಗಲೆನ ಸಂತಾನದಗುಲು ನಮ್ಮ ಪೊದ್ದೆರ್. ಅಂಚೆನೇ ನಮ, ನಮನ ಸಂತಾನದಗುಲು ಅಗಲೆಗ್, ಅಗಲೆನ ಸಂತಾನದಗಲೆಗ್ ಪೊದ್ದೆರ್. ಆಂಡ ಬುಡೆದಿನ ಇಲ್ಲ್ ಮಾತ್ರ ಕಂಡ್ಯಾನಗ್ ಪೊದ್ದೆರೆ ಇಲ್ಲ್. ಇಲ್ಲಡ್ ಕೋಲ ಆಂಡ, ಸುರುತ ಮರ್ಯಾದಿ ಪರವೂರು (ಪರಮಾಗನೆ)ದಗಲೆಗ್, ಬೊಕ್ಕ ಪೊದ್ದೆರೆಗ್. ಒಂಜಿ ಐವ ಅಜಿಪ ವರ್ಸ ದುಂಬುಡು ಪೊನ್ನು ತೂವರೆ ಪೋಪಿನಗುಲು ಇರ್ವೆರ್ ಅತ್ತ್‌ಡ ನಾಲ್ವೆರ್ ಅಂಜೋವು ಪೊನ್ನ ಇಲ್ಲಗ್ ಪೋವೊಂದು ಇತ್ತೆರ್. ನಾಯಿಲು ಗುರೆಪುನ ಕೇಂದ್ ನಾಯಿಲೆನ್ ದಡ್ಯೊಂದು, ಏರ್ ದಾದ ಪಂದ್ ಕೇನೊಂದು ಇಲ್ಲದಗುಲು ಜಾಲ್‌ಗ್ ಜತ್ತೆರ್‌ಡ, ಪೊನ್ನು ತೂವರೆ ಬಯಿದಿನಗುಲು ಸೀದಾ ಕಿದೆತ ಕಿದನೆಗ್ ಪೊಗ್ಗುವೆರ್. “ನಿಗಲೆ ಇಲ್ಲಡ್ ಎರು ಕೊರ್ಪಿನ (ಮಾರುನ) ಉಂಡು ಪಂದ್ ಸುದ್ದಿ ತಿಕ್ಂಡ್. ಅಂಚ ತೂದು ಪೋಕ ಪಂದ್ ಬತ್ತಿನಿ” ಇಂಚ ಪನುವೆರ್. ಅಪಗ ಆ ಇಲ್ಲದ ಗುರ್ಕಾರಗಾ,…

Read More

ಫೆಬ್ರವರಿ 11 ರಂದು ಜನತಾದಳ (ಜಾತ್ಯಾತೀತ) ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ನೇಮಕಗೊಂಡಿರುವ ಸುಧಾಕರ್ ಎಸ್ ಶೆಟ್ಟಿಯವರಿಗೆ ಮೈಸೂರು ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ವ್ಯಾಪಾರ, ಉದ್ಯಮ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸುಧಾಕರ್ ಶೆಟ್ಟಿ ಅವರು ಸಲ್ಲಿಸಿರುವ ಅನನ್ಯ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಯಿತು. ಮೈಸೂರು ಚೇಂಬರ್ ಆಫ್ ಕಾಮರ್ಸ್‌ನ ಹಿರಿಮೆ ಹಾಗೂ ಗರಿಮೆಯನ್ನು ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವಲ್ಲಿ ಸುಧಾಕರ್ ಶೆಟ್ಟಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರು 2003 ಮತ್ತು 2008 ರಲ್ಲಿ ಉಪಾಧ್ಯಕ್ಷರಾಗಿ, ನಂತರ 2012 ರಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಚೇಂಬರ್ ಆಫ್ ಕಾಮರ್ಸ್‌ನ ಘನತೆಯನ್ನು ರಾಜ್ಯವ್ಯಾಪಿಯಾಗಿ ಹರಡಿದರು. ಅಲ್ಲದೇ 2018 ರಲ್ಲಿ ಎಫ್‌ಕೆಸಿಸಿಐ (FKCCI) ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಉದ್ಯಮ ವಲಯದಲ್ಲಿ ತಮ್ಮ ಶಕ್ತಿಶಾಲಿ ನಾಯಕತ್ವವನ್ನು ಸಾಬೀತುಪಡಿಸಿದ್ದಾರೆ. ಇಂತಹ ಸಮೃದ್ಧ ಅನುಭವ ಹೊಂದಿದವರು ಇಂದು ಜೆಡಿಎಸ್ ಪಕ್ಷದ ರಾಷ್ಟ್ರಮಟ್ಟದ ನಾಯಕನಾಗಿ ಗುರುತಿಸಿಕೊಂಡಿರುವುದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಸುಧಾಕರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಅನೇಕ…

Read More

ರಿಲಯನ್ಸ್ ಇನ್ಸೂರೆನ್ಸ್ ಕಂಪನಿಯವರ 2024 -25 ರ ಸಾಲಿನಲ್ಲಿ ಅತೀ ಹೆಚ್ಚು ವ್ಯವಹಾರವನ್ನು ಪೂರೈಸಿರುವ ಉದ್ಯಮಿ ಸತೀಶ್ ರೈ ಕಟ್ಟಾವು ಅವರನ್ನು ವಿಯೇಟ್ನಮ್ ನಲ್ಲಿ ನಡೆದ ಅಂತಾರಾಷ್ಟ್ರೀಯ ನಮ್ಮೇಳನ ದಲ್ಲಿ ಟಾಪ್ ಸ್ಟಾರ್ ಅವಾರ್ಡ್ ನೀಡಿ ಗೌರವಿಸಲಾಯಿತು. ಇವರು ಉದ್ಯಮಿಯಾಗಿದ್ದು ಸಮಾಜಸೇವೆ, ಧಾರ್ಮಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು, ‘ಕಟ್ಟಾವು ವಾಹನ ಇನ್ಸೂರೆನ್ಸ್ ಸೆಂಟರ್’ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಚಿತ್ರ, ವರದಿ : ಉಮಾಪ್ರಸಾದ್ ರೈ ನಡುಬೈಲು

Read More

ಗಣಿತನಗರ : ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಶಾಲೆ ಹಾಗ್ತೂ ಪ್ರೌಢಶಾಲೆಯಲ್ಲಿ ೭ನೇ ತರಗತಿಯ ಮಕ್ಕಳಿಂದ ‘ಎಕೋಸ್ ಆಫ್ ಇಂಗ್ಲಿಷ್’- ಮಾದರಿ ಪ್ರದರ್ಶನ ನಡೆಯಿತು. ಉಪಪ್ರಾಂಶುಪಾಲೆ ಶ್ರೀಮತಿ ವಾಣಿ ಕೆ ಇವರ ನಿರ್ದೇಶನದಲ್ಲಿ, ವಿದ್ಯಾರ್ಥಿಗಳು, ತರಗತಿ ಆಂಗ್ಲಭಾಷಾ ಶಿಕ್ಷಕಿ ಕು.ದರ್ಶಿನಿಯವರ ಮಾರ್ಗದರ್ಶನದಲ್ಲಿ ವಿವಿಧ ಆಂಗ್ಲಭಾಷಾ ಲೇಖಕರ ಪರಿಚಯ, ಪುಸ್ತಕ ಪರಿಚಯ, ವ್ಯಾಕರಣದ ಮಾದರಿಗಳ ಪ್ರದರ್ಶನ, ವಿದ್ಯಾರ್ಥಿಗಳೇ ತಯಾರಿಸಿದ ವಿವಿಧ ಬುಕ್ ಮಾರ್ಕ್ಸ್, ವ್ಯಾಕರಣ ಕ್ರಾಫ್ಟ್ಗಳ ಪ್ರದರ್ಶನದ ಜೊತೆಗೆ ಭಾಷಾಕಲಿಕೆಯನ್ನು ಮನೋರಂಜನಾ ಆಟಗಳ ಮುಖಾಂತರ ಪ್ರಸ್ತುತಪಡಿಸಿದರು. ಈ ಸಂದರ್ಭದಲ್ಲಿ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ನಿರ್ವಹಣಾಧಿಕಾರಿ ಶ್ರೀ ದಿನೇಶ್ ಎಂ ಕೊಡವೂರ್ ಹಾಗೂ ಸಂಸ್ಥೆಯ ಬೋಧಕರು-ಬೋಧಕೇತರ ಸಿಬ್ಬಂಧಿ ವರ್ಗದವರು ವಿದ್ಯಾರ್ಥಿಗಳ ಕಾರ್ಯವನ್ನು ಪ್ರಶಂಸಿಸಿದರು.

Read More

ಹಳೆ ತಲೆಮಾರಿನ ಅರ್ಥಧಾರಿ, ಶಿಕ್ಷಕ ಮತ್ತು ಶಂಭೂರು ಗ್ರಾಮದ ಪಟೇಲ ದಿವಂಗತ ಬೊಂಡಾಲ ಜನಾರ್ಧನ ಶೆಟ್ಟಿ ಮತ್ತು ಅವರ ಪುತ್ರ ಹವ್ಯಾಸಿ ಯಕ್ಷಗಾನ ಕಲಾವಿದ, ನಿವೃತ್ತ ಭೂಮಾಪನ ಅಧಿಕಾರಿ ದಿವಂಗತ ಬೊಂಡಾಲ ರಾಮಣ್ಣ ಶೆಟ್ಟರ ಹೆಸರಿನಲ್ಲಿ ನೀಡಲಾಗುವ ಬೊಂಡಾಲ ಪ್ರಶಸ್ತಿಗೆ ಕಟೀಲು ಮೇಳದ ಹಿರಿಯ ವೇಷಧಾರಿ ಲಕ್ಷ್ಮಣ ಶೆಟ್ಟಿ ತಾರೆಮಾರ್ ಆಯ್ಕೆಯಾಗಿದ್ದಾರೆ. ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸಿದ ಕಲಾವಿದರಿಗಾಗಿಯೇ ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು ನೀಡುತ್ತಿರುವ ವಾರ್ಷಿಕ ಪ್ರಶಸ್ತಿಗೆ ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಂಚಾಲಕರಾಗಿರುವ ಆಯ್ಕೆ ಸಮಿತಿ 2025-26 ನೇ ಸಾಲಿಗೆ ಲಕ್ಷ್ಮಣ ಶೆಟ್ಟರ ಹೆಸರನ್ನು ಶಿಫಾರಸು ಮಾಡಿದೆ. ಪ್ರಶಸ್ತಿಯು ರೂ.10,000/- ನಗದು, ಶಾಲು, ಸ್ಮರಣಿಕೆ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ತೆಂಕುತಿಟ್ಟು ಯಕ್ಷಗಾನ ರಂಗದ ಪ್ರತಿಭಾನ್ವಿತ ಕಲಾವಿದರಾದ ಲಕ್ಷ್ಮಣ ಶೆಟ್ಟಿ ಅವರು ಬೆಳ್ತಂಗಡಿ ತಾಲೂಕಿನ ತಾರೆಮಾರಿನಲ್ಲಿ ಕೋಚಪ್ಪ ಶೆಟ್ಟಿ…

Read More

ಪ್ರಸ್ತುತ ಹಲವಾರು ದಶಕಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ಯಶಸ್ವಿ ಉದ್ಯಮಿಯಾಗಿರುವ ಕಟಪಾಡಿ ಎಸ್.ವಿ.ಎಸ್ ನ ಹಳೆ ವಿದ್ಯಾರ್ಥಿ ನರೇಂದ್ರ ಶೆಟ್ಟಿ, ಉದ್ಯಮಿ, ಕವಿ, ಸಾಹಿತಿ ಹಾಗೂ ಐಲೇಸಾ ಪ್ರವರ್ತಕ ಶಾಂತಾರಾಮ್ ಶೆಟ್ಟಿ, ಜೂನಿಯರ್ ವಿಷ್ಣುವರ್ಧನ್ ಎಂದೇ ಖ್ಯಾತಿ ಪಡೆದ ಯಕ್ಷ ಕಲಾವಿದ ಉದ್ಯಮಿ ಅರುಣ್ ಐರೋಡಿ ಉಡುಪಿ ಇವರೆಲ್ಲರ ಸಹಕಾರದೊಂದಿಗೆ ಅಧ್ಯಾಯ ಟ್ರಸ್ಟ್ ಶಿರಸಿ ಇದರ ನಿರ್ದೇಶಕರಾದ ಕಿರಣ್ ಉಪಾಧ್ಯಾಯ ಇವರು ಫೆಬ್ರವರಿ 3 ರಂದು ಎಸ್‌.ವಿ.ಎಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಮಾಧ್ಯಮ ಅನುದಾನಿತ ಪ್ರೌಢಶಾಲಾ ವಿಭಾಗದ ಮೂರು ತರಗತಿಗಳ ವಿದ್ಯಾರ್ಥಿಗಳಿಗಾಗಿ ಆಶುಭಾಷಣ ಸ್ಪರ್ಧೆ ಏರ್ಪಡಿಸಿ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿದರು. ಇದೇ ಸಂದರ್ಭದಲ್ಲಿ ಸ್ಥಳೀಯ ಏಣಗುಡ್ಡೆ ಸಾರ್ವಜನಿಕ ಗ್ರಂಥಾಲಯ ಹಾಗೂ ಎಸ್‌.ವಿ.ಎಸ್ ಪದವಿ ಪೂರ್ವ ಕಾಲೇಜಿನ ಗ್ರಂಥಾಲಯಗಳಿಗೂ ಕೂಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಅನೇಕ ಕನ್ನಡ ಸಾಹಿತ್ಯದ ಪುಸ್ತಕಗಳನ್ನು ಟ್ರಸ್ಟಿನ ವತಿಯಿಂದ ವಿತರಿಸಿದರು. ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆಯನ್ನು ಯಶಸ್ವಿ ಉದ್ಯಮಿ, ಎಸ್‌.ವಿ.ಎಸ್…

Read More

ಇತಿಹಾಸ ಪ್ರಸಿದ್ಧ ಸುರತ್ಕಲ್ ಪಡ್ರೆ ಶ್ರೀ ಧೂಮಾವತಿ ದೇವಸ್ಥಾನದ ವಾರ್ಷಿಕ ಜಾತ್ರೆಯ ಆಮಂತ್ರಣ ಪತ್ರಿಕೆಯನ್ನು ದೈವಸ್ಥಾನದ ವಠಾರದಲ್ಲಿ ದೈವಸ್ಥಾನದ ಗಡಿ ಪ್ರಧಾನರಾದ ಬಾಬು ಭಂಡ್ರಿಯಲ್ ಬಿಡುಗಡೆಗೊಳಿಸಿದರು. ದೈವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಲೋಕಯ್ಯ ಶೆಟ್ಟಿ ಮುಂಚೂರು, ಸತೀಶ್ ಮುಂಚೂರು, ಪ್ರಧಾನ ಕಾರ್ಯದರ್ಶಿ ಲತೀಶ್ ಶೆಟ್ಟಿ ಪಡ್ರೆ, ಸಹ ಕಾರ್ಯದರ್ಶಿ ಮುಕೇಶ್ ಶೆಟ್ಟಿ ಪಡ್ರೆ, ಯತೀಶ್ ಪಡ್ರೆ, ದಿವಾಕರ್ ಶೆಟ್ಟಿ ಪಡ್ರೆ, ಭಂಟ ಪೂಜಾರಿ ಮುಕ್ಕ ಉಪಸ್ಥಿತರಿದ್ದರು. ಮಾರ್ಚ್ 2 ರಂದು ಪಡ್ರೆ ಶ್ರೀ ಧೂಮಾವತಿ ಭಂಟ ದೈವಗಳ ಭಂಡಾರ ಮುಕ್ಕ ಭಂಡಾರ ಮನೆಯಿಂದ ಹೊರಟು ಪಡ್ರೆ ಶ್ರೀ ಧೂಮಾವತಿ ದೈವಸ್ಥಾನದಳ್ಳಿ “ಧ್ವಜಾರೋಹಣ” ಮತ್ತು “ದೀಪಾರಾಧನೆ ಬಲಿ” ನಡೆಯಲಿದೆ. ಮಾರ್ಚ್ 3 ರಂದು ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆಯು ಶ್ರೀಧರ್ ಕೆ ಅಮೀನ್ ಮಂಗಳೂರು ಇವರ ಸ್ಮರಣಾರ್ಥ ನಡೆಯಲಿದೆ. ಅದೇ ದಿನ ರಾತ್ರಿ ಹೂವಿನ ಪೂಜೆ ಹಾಗೂ ಕಾಲಾವಧಿ ಜಾತ್ರೆ ನಡೆಯಲಿದೆ. ಮಾರ್ಚ್ 4 ರಂದು ಸಂಜೆ ಬಾಕಿಮಾರು ಚೆಂಡು, ದೀಪಾರಾಧನೆ ಬಲಿ,…

Read More

ಭಾರತೀಯ ಸಂಸ್ಕೃತಿಯಲ್ಲಿ ಪ್ರಕೃತಿ ಮತ್ತು ಪರಮಾತ್ಮನಿಗೆ ಅವಿನಾಭಾವ ಸಂಬಂಧವಿದೆ. ನಾವು ಕಲ್ಲು, ಮಣ್ಣು, ನದಿ ಮತ್ತು ಮರಗಳಲ್ಲಿ ದೇವರನ್ನು ಕಾಣುವ ಅದ್ಭುತ ಪರಂಪರೆಯನ್ನು ಹೊಂದಿದ್ದೇವೆ. ಇದಕ್ಕೆ ಜ್ವಲಂತ ಸಾಕ್ಷಿಯಾಗಿ ನಿಂತಿರುವುದು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಐತಿಹಾಸಿಕ ಪಟ್ಟಣ ಬಸ್ರೂರಿನಲ್ಲಿರುವ ಶ್ರೀ ತುಳುವೇಶ್ವರ ದೇವಸ್ಥಾನ. ಇಲ್ಲಿನ ವಿಶೇಷತೆಯೆಂದರೆ ಜಗನ್ನಿಯಾಮಕನಾದ ಪರಶಿವನು ಯಾವುದೇ ಭವ್ಯವಾದ ಕಲ್ಲಿನ ಗುಡಿಯೊಳಗೆ ಕುಳಿತಿಲ್ಲ. ಬದಲಾಗಿ ಒಂದು ಬೃಹತ್ ವೃಕ್ಷವನ್ನೇ ತನ್ನ ಆಲಯವನ್ನಾಗಿ ಮಾಡಿಕೊಂಡು ಭಕ್ತರನ್ನು ಹರಸುತ್ತಿದ್ದಾನೆ. ಮರವೇ ಆಲಯ. ಪೊಟರೆಯೇ ಗರ್ಭಗುಡಿ. ​ಬಸ್ರೂರಿನ ಶ್ರೀ ತುಳುವೇಶ್ವರ ದೇವಸ್ಥಾನಕ್ಕೆ ಕಾಲಿಡುತ್ತಿದ್ದಂತೆಯೇ ನಮಗೆ ಎದುರಾಗುವುದು ನಿಸರ್ಗದ ವಿಸ್ಮಯ. ಇಲ್ಲಿ ದೇವಸ್ಥಾನದ ಗರ್ಭಗುಡಿ ಎಂದರೆ ಅದು ಕಲ್ಲಿನ ಕಟ್ಟಡವಲ್ಲ. ಬದಲಾಗಿ ಮರದ ಪೊಟರೆ ಶತಮಾನಗಳಿಂದ ಬೆಳೆದು ನಿಂತಿರುವ ಈ ಬೃಹತ್ ಮರದ ಒಳಗಿನ ಪೊಟರೆಯಲ್ಲಿ ಶಿವನು ಲಿಂಗರೂಪಿಯಾಗಿ ನೆಲೆಯಾಗಿದ್ದಾನೆ. ಮರವನ್ನೇ ಆಲಯವನ್ನಾಗಿಸಿ, ಮರದ ಪೊಟರೆಯೊಳಗೆ ದರ್ಶನ ನೀಡುವ ಈ ದೃಶ್ಯ ಭಕ್ತರ ಕಣ್ಮನ ಸೆಳೆಯುತ್ತದೆ. ತುಳುನಾಡಿನ ರಕ್ಷಕನಾಗಿ, ತುಳುನಾಡಿಗರ ಆರಾಧ್ಯ ದೈವವಾಗಿರುವ…

Read More

ತೆಂಕಿನ ಚಂದ್ರಗಿರಿ ನದಿಯಿಂದ ಬಡಗಿನ ಬಾರ್ಕೂರುವರೆಗೆ ಹಾಗೂ ಪೂರ್ವದ ಘಟ್ಟದ ಬದಿಯಿಂದ ಪಡುವಣ ಕಡಲಿನವರೆಗೆ ವ್ಯಾಪಿಸಿರುವ ಸುಂದರ ಭೂಪ್ರದೇಶವೇ ನಮ್ಮ ತುಳುನಾಡು. ನಾಗನಡೆಯ ಪಂಚವರ್ಣದ ಮಣ್ಣಿನ ಪುಣ್ಯಭೂಮಿ ನಮ್ಮ ತುಳುನಾಡು. ನಾವು ರಾಜಕೀಯವಾಗಿ ಕರ್ನಾಟಕ ಹಾಗೂ ಕೇರಳ ರಾಜ್ಯದ ಭಾಗವಾದರೂ ನಮ್ಮ ಭಾಷೆ, ಆಹಾರ ಪದ್ಧತಿ, ಧಾರ್ಮಿಕ ಆಚರಣೆ, ಉಡುಗೆ ತೊಡುಗೆಯಲ್ಲಿ ಕರ್ನಾಟಕದ ಬೇರೆ ಭಾಗಕ್ಕಿಂತ ತೀರಾ ಭಿನ್ನ. ತುಳುನಾಡಿನ ಜನ ಸಾಹಸಿಗಳು, ರಸಿಕರು, ದೈವ ಭಕ್ತರು, ವಿನಯಶೀಲರು. ಭಾರತದ ಐದು ಬಹು ದೊಡ್ಡ ಬ್ಯಾಂಕ್ ಗಳು ಹುಟ್ಟಿದ್ದು ನಮ್ಮ ತುಳುನಾಡಿನಲ್ಲಿ. ಯಕ್ಷಗಾನ, ನಾಗಾರಾಧನೆ ಹಾಗೂ ಭೂತಾರಾಧನೆ ನಮ್ಮ ನಾಡಿನ ವಿಷೇಷತೆಗಳು. ಭಾರತದ ಬೇರೆ ಭಾಗಗಳಲ್ಲಿ ನಾಗರಪಂಚಮಿಯಂದು ನಾಗನನ್ನು ಪೂಜಿಸಿ ಬೇರೆ ದಿನಗಳಲ್ಲಿ ಕೊಲ್ಲುವ ಕ್ರಮವಿದ್ದರೆ, ನಮ್ಮಲ್ಲಿ ಸತ್ತ ನಾಗ ಕಂಡುಬಂದರೂ ಅದಕ್ಕೆ ಸಂಸ್ಕಾರ ಮಾಡುವವರು ನಾವು. ತನು, ಆಶ್ಲೇಶ ಬಲಿ, ಬ್ರಹ್ಮಮಂಡಲ, ನಾಗಮಂಡಲ ಇವು ನಾಗನನ್ನು ತೃಪ್ತಿಪಡಿಸುವ ಪೂಜಾ ವಿಧಾನಗಳು. ಬಹುಷಃ ತುಳುನಾಡಿನಲ್ಲಿ ನಡೆಯುವಷ್ಟು ನಾಗಮಂಡಲ, ಬ್ರಹ್ಮಕಲಶ, ನೇಮ ಬಲಿ…

Read More