Author: admin

ತೃತೀಯ ವರ್ಷದ ಮೂಳೂರು ಅಡ್ಡೂರು ಜೋಡುಕರೆ ಗುರುಪುರ ಕಂಬಳಕ್ಕೆ ಶುಭ ಮುಹೂರ್ತ ನಿಗದಿಯಾಗಿದ್ದು ಕೆಸರಿನ ಗಮ್ಮತ್ತಿಗೆ ದಿನಗಣನೆ ಆರಂಭವಾಗಿದೆ. ಏಪ್ರಿಲ್ 4 ರಂದು ಕಂಬಳೋತ್ಸವ ಭರ್ಜರಿಯಾಗಿ ನಡೆಯಲಿದ್ದು, ಅದರ ಆಹ್ವಾನ ಪತ್ರಿಕೆಯನ್ನು ಮಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಬಿಡುಗಡೆ ಮಾಡಿದೆ. ಈ ಸಂದರ್ಭದಲ್ಲಿ ಗುರುಪುರ ಕಂಬಳದ ರೂವಾರಿ ಇನಾಯತ್ ಆಲಿ, ಕಂಬಳ ಸಮಿತಿಯ ಗೌರವಾಧ್ಯಕ್ಷ ಪದ್ಮನಾಭ ಕೋಟ್ಯಾನ್, ಸ್ಥಾಪಕಾಧ್ಯಕ್ಷ ರಾಜ್ ಕುಮಾರ್ ಶೆಟ್ಟಿ, ಕಾರ್ಯಾಧ್ಯಕ್ಷ ಜಗದೀಶ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಯಶವಂತ್ ಕುಮಾರ್ ಶೆಟ್ಟಿ, ವಿನಯ್ ಕುಮಾರ್ ಶೆಟ್ಟಿ, ಗಿರೀಶ್ ಆಳ್ವ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Read More

ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರಿಯ ಪತ್ರಕರ್ತ, ಸಾಹಿತಿ ಚಿದಂಬರ ಬೈಕಂಪಾಡಿ ಅವರನ್ನು ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪಿ.ಬಿ ಹರೀಶ್ ರೈಯವರ ಅಧ್ಯಕ್ಷತೆಯಲ್ಲಿ ಗೌರವಿಸಿದರು. ಹಿರಿಯ ಪತ್ರಕರ್ತ ಕೆ ಆನಂದ ಶೆಟ್ಟಿ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಅನ್ನು ಮಂಗಳೂರು, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಬಿ.ಎನ್., ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ್ ನಾಯಕ್ ಇಂದಾಜೆ, ಪ್ರೆಸ್ ಕ್ಲಬ್ ಕಾರ್ಯಕಾರಿ ಸಮಿತಿ ಸದಸ್ಯ ಹರೀಶ್ ಮೋಟುಕಾನ, ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ಉಪಾಧ್ಯಕ್ಷ ಮಹಮ್ಮದ್ ಆರಿಫ್ ಪಡುಬಿದ್ರಿಯವರು ಉಪಸ್ಥಿತರಿದ್ದರು.

Read More

ಮಹಿಳೆ ಕೇವಲ ವ್ಯಕ್ತಿತ್ವದ ಬಗ್ಗೆ ಗುರುತಿಸುವುದಕ್ಕಿಂತಲ್ಲಲೂ ಮಹಿಳೆ ಎಂಬುವುದು ಒಂದು ಜೀವನದ ಶಕ್ತಿ, ಮಹಿಳೆಯೆಂದರೆ ಮನೆ, ಪರಿಸರ, ದೇಶದ ಸಂಸ್ಕೃತಿ, ಸಂಸ್ಕಾರವನ್ನು ಉಳಿವಿನಡೆ ಕೊಂಡೊಯ್ಯುವ ಸಾಧನೆಗೆ ಪೂರಕವಾಗಿ ಬೆಳೆದು ನಿಂತ ದಿವ್ಯತೇಜ ಸ್ವರೂಪಿಣಿ. ಮಹಿಳೆಯರು ಇಂದು ತನ್ನ ದೈನಂದಿನ ಚಟುವಟಿಕೆಗಳೊಂದಿಗೆ ಸಮಾಜದಲ್ಲಿ ಬೆರೆತು ಪ್ರತೀ ವಿಷಯದಲ್ಲೂ ಪ್ರಖರತೆಯ ಬೆಳಕಿನಂತೆ ಮೂಡಿ ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ಮೀರಾ ಭಯಂದರ್ ಜಿಲ್ಲೆಯ ಸಮಾಜ ಸೇವಕ ಹಾಗೂ ಬಿಜೆಪಿ ನೇತಾರ ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ ಗುತ್ತುರವರು ಅಭಿಪ್ರಾಯಪಟ್ಟರು. ಅವರು ಮಾರ್ಚ್ 22 ರಂದು ಸಂಜೆ ಮೀರಾರೋಡ್ ಪೂರ್ವದ ಭಾರತಿ ಪಾರ್ಕ್ ನ ಬಾಲಾಜಿ ಇಂಟರ್ ನ್ಯಾಶನಲ್ ಹೊಟೇಲ್ ಸಭಾಂಗಣದಲ್ಲಿ ತುಳು ಕನ್ನಡ ಅಸೋಸಿಯೇಷನ್ ಮೀರಾ ಭಯಂದರ್ ಸಂಸ್ಥೆಯ ಸಾಹಿತ್ಯ ಮತ್ತು ಕಲೆ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಮಹಿಳಾ ದಿನಾಚರಣೆ, ಹಳದಿ ಕುಂಕುಮ ಮತ್ತು ದಿ. ರವಿ ರಾ. ಅಂಚನ್ ದತ್ತಿ ನಿಧಿ ಸಂಸ್ಮರಣಾ ಪ್ರಶಸ್ತಿ ಪ್ರಧಾನ ಹಾಗೂ ಸನ್ಮಾನಗಳ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು…

Read More

ಸಾಲೆಗ್ ಪೋಪಿನಿ ಪಂಡ ಮುಡು ಮೂಜಿ ಬಾಲೆಗ್. ಅಕ್ಕ ಅಣ್ಣನಗೊಲ್ನೊಟ್ಟುಗು ಯಾನ್ ಲ ಸಾಲೆಗ್ ಪೋಪೆ ಪಂದ್ ಬೆರಿಯನೇ ಪೋವೊಂತಿನ ಆನ್. ಆಯನ ರಂದಾಟಿಕೆ ತೂದು ಅಪ್ಪೆಲ, ಅಜ್ಜಿಲ ಪೋವಡ್. ಸಾಲೆಗತಾ ಪಂದ್ ಕಡಪುಡೊಂದಿತ್ತೆರ್. ಐನ್ ವರ್ಸೊದಾಯೆ ಒಂಜಿನೇ ಕ್ಲಾಸ್‌ಡ್ ಕುಲ್ಲೊಂದಿತ್ತೆ. ತೋರ ಇತುಜೆಡಲ ಒಂತೆ ಉದ್ದನೇ ಇತ್ತೆ. ಒಂಜಿನೇ ಕ್ಲಾಸ್‌ದ ‘ಪಟ್ಟಿ’ಡ್ ಪಾಡ್ರೆ ಟೀಚರೆಗ್ ದಾಲ ತೊಂದ್ರೆ ತೋಜುಜಿ. ಅವ್ವೇ ಸಾಲೆಡ್ ಕಲ್ತುದು ದುಂಬು ಪೋತಿನ ಆಯನ ರಡ್ ಪಲಯಲ್ಲು ಒರ್ತಿ ಪಲಿ – ಕಲ್ಪುನೆಟ್ ಬಾರಿ ಉಸಾರ್‌ದ ಜೋಕುಲು ಪಂದ್ ಮಾತಾ ಮಾಸ್ಟ್ರುನಗಲೆಗ್ಲ ಮೋಕೆ. ಇಂಬೆ ಕಲ್ಪುನೆಟ್ ಬಡ್ಡ್ ಅತ್ತುಡ್ಲ ಒಂತೆ ಪೋಕಿರಿ ದೂಮಣ್ಣೆ.‌ ಐತ ಮಿತ್ತ್ ಟೀಚರ್‌ನಗುಲು ಆಯನ ಒಪ್ಪಪುಟಿನಗಲ್ನೊಟ್ಟುಗು ತಾರ್ಕನೆ ಮಲ್ಪರೆ ಪತಿಯೆರ್. ತುಲಾ ನಿನ್ನ ಪಲಯೆ ಆತ್ ಬಿರ್ಸೆ, ಪಲ್ದಿ ಈತ್ ಮಾರ್ಕ್ ಕನೊಂತುಲು. ಈ ದಾನಿ ಪಿರ? ಪಂದ್ ಕುಡ, ಈ ಅಗಲೆನ ಮರ್ಯಾದಿ ಕಲೆಪನಾ ಪಂದ್ ಪಾತೆರೊಡೇ ಕುಯಿಂಪರೆ ಸುರು ಮಲ್ತೆರ್.…

Read More

ಸವಣೂರು ಮುಗೇರು ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಾರ್ಚ್ 25 ಮತ್ತು 26ರಂದು 12ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಜಾತ್ರೋತ್ಸವ ಹಾಗೂ ಭಜನಾ ಸಂಭ್ರಮ (ಅರ್ಧ ಏಕಾಹ ಹಾಗೂ ಕುಣಿತ ಭಜನೆ) ನಡೆಯಲಿದೆ. ಮಾರ್ಚ್ 25ರಂದು ಬೆಳಿಗ್ಗೆ 6:30 ಕ್ಕೆ ಅರ್ಧ ಏಕಾಹ ಭಜನೆ ಪ್ರಾರಂಭ, ಬೆಳಿಗ್ಗೆ 10ಕ್ಕೆ ಊರ ಭಕ್ತಾದಿಗಳಿಂದ ಹೊರೆ ಕಾಣಿಕೆ ಸಮರ್ಪಣೆ, ಸಂಜೆ ತಂತ್ರಿಗಳ ಆಗಮನ, ವೈದಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 6:30 ಕ್ಕೆ ಅರ್ಧ ಏಕಾಹ ಭಜನೆ ಸಮಾರೋಪ, ಬಳಿಕ ಕುಣಿತ ಭಜನೆ ನಡೆಯಲಿದೆ. ರಾತ್ರಿ ಎಂಟರಿಂದ ಅನ್ನಸಂತರ್ಪಣೆ, ಮಾರ್ಚ್ 26ರಂದು ಬೆಳಿಗ್ಗೆ 6ರಿಂದ ಮಹಾಗಣಪತಿ ಹೋಮ, ನಾಗತಂಬಿಲ, ಕಲಶಾಭಿಷೇಕ ಸಹಿತ ವೈದಿಕ ಕಾರ್ಯಕ್ರಮ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ ಎಂಟರಿಂದ ಶ್ರೀ ದೇವರ ಬಲಿ ಹೊರಟು ಉತ್ಸವ, ಶ್ರೀ ಭೂತ ಬಲಿ, ವಸಂತ ಕಟ್ಟೆ ಪೂಜೆ, ಸುಡುಮದ್ದು ಪ್ರದರ್ಶನ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಅನ್ನ ಸಂತರ್ಪಣೆ ನಡೆಯಲಿದೆ ಎಂದು ದೇವಾಲಯದ…

Read More

ಬಂಟರ ಸಂಘ ಬೆಳ್ಳೂರು ವಲಯದ ಮಾಜಿ ಅಧ್ಯಕ್ಷ ಕಿಶೋರ್ ಭಂಡಾರಿಯವರ ನಿಧನದ ಸುದ್ದಿ ನಿಜಕ್ಕೂ ಅತ್ಯಂತ ದುಃಖದಾಯಕ. ಬಂಟರ ಸಂಘ ಬೆಳ್ಳೂರು ವಲಯದ ಮಾಜಿ ಅಧ್ಯಕ್ಷರಾಗಿ ಅವರು ಸಲ್ಲಿಸಿದ ಸೇವೆ ಮತ್ತು ಅವರ ನಾಯಕತ್ವ ಸ್ಮರಣೀಯವಾದುದು. ಸಮಾಜದ ಏಳಿಗೆಗಾಗಿ ಶ್ರಮಿಸಿದ ಅವರ ಅಗಲಿಕೆ ಬೆಳ್ಳೂರು ವಲಯಕ್ಕೆ ಮಾತ್ರವಲ್ಲದೇ ಇಡೀ ಸಮುದಾಯಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ ಮತ್ತು ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸೋಣ. ಇವರ ನಿಧನಕ್ಕೆ ಬಂಟ್ವಾಳ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ, ಮಾಜಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ, ಬಂಟರ ಸಂಘ ಬಿಸಿ ರೋಡ್ ವಲಯದ ಅಧ್ಯಕ್ಷ ಶಂಕರ ಶೆಟ್ಟಿಯವರು ಸಂತಾಪ ಸೂಚಿಸಿದ್ದಾರೆ.

Read More

ಕುಂದಾಪುರ ತಾಲೂಕಿನ ಶಂಕರನಾರಾಯಣ ಬೈಲೂರು ನಿವಾಸಿ, ನಿವೃತ್ತ ಶಿಕ್ಷಕ ಹಳ್ನಾಡು ವಿಶ್ವನಾಥ ಶೆಟ್ಟಿ ಅವರು ಮಾರ್ಚ್ 8ರಂದು ಹೃದಯಾಘಾತದಿಂದ ನಿಧನರಾದರು. ಮೃತರು ಪುತ್ರರಾದ ಯುವ ಮೆರೇಡಿಯನ್ ಗ್ರೂಪ್ ಆಫ್ ಕಂಪನಿಯ ಪಾಲುದಾರರಾದ ಬೈಲೂರು ಉದಯ ಕುಮಾರ್ ಶೆಟ್ಟಿ ಹಾಗೂ ಬೈಲೂರು ವಿನಯ ಕುಮಾರ್ ಶೆಟ್ಟಿ ಅವರನ್ನು ಅಗಲಿದ್ದಾರೆ

Read More

ಜೀವನದಲ್ಲಿ ಸ್ಪಷ್ಟ ಉದ್ದೇಶ ಮತ್ತು ಅಬೇಧ್ಯ ಲಕ್ಷ್ಯ ಇದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಉದಾಹರಣೆಯಾಗಬಲ್ಲವರು ಮಹಾದಾನಿ, ಕಲೆ ಸಂಸ್ಕೃತಿ ಪೋಷಕ, ಕಾಯಕ ರತ್ನ ಶಶಿಧರ್ ಶೆಟ್ಟಿ ಬರೋಡ ಅವರು. ಅಪಾರ ದೈವಭಕ್ತರಾದ ಶಶಿಧರ ಶೆಟ್ಟಿ ಅವರು ತಾನು ನಂಬಿಕೊಂಡು ಬಂದ ದೈವದೇವರ ಪ್ರೇರಣೆಯೋ ಎಂಬಂತೆ ತನಗೆ ಪೂರ್ತಿ ಅಪರಿಚಿತ ಗುಜರಾತ್ ಪ್ರಾಂತ್ಯದಲ್ಲಿ ಆರಂಭಿಸಿದ ‘ಶಶಿ ಕ್ಯಾಟರರ್ಸ್’ ಎಂಬ ಆರಂಭಿಕ ಉದ್ಯಮ ಕ್ರಮೇಣ ಲಾಭದಾಯಕವಾಗಿ ಪ್ರಗತಿ ಹೊಂದಿದ ಕಾರಣ ಶೆಟ್ಟರಲ್ಲಿ ಉದ್ಯಮ ಮೂಲಕ ಜೀವನದಲ್ಲಿ ತನ್ನ ಲಕ್ಷ್ಯ ಸಾಧಿಸಬಲ್ಲೆ ಎಂಬ ಆತ್ಮವಿಶ್ವಾಸ ಮೂಡಿ ನಂತರದ ದಿನಗಳಲ್ಲಿ ಕ್ಯಾಂಟೀನ್, ಹೊಟೇಲ್ ಉದ್ಯಮಗಳನ್ನು ಇತರ ಪ್ರಾಂತ್ಯಗಳಿಗೂ ವಿಸ್ತರಿಸಿ ಇಂದು ಶ್ರೀಯುತರು ಓರ್ವ ಶ್ರೀಮಂತ ಉದ್ಯಮಿಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ. ಶಶಿಧರ ಶೆಟ್ಟಿ ಬರೋಡ ಎಂಬ ಹೆಸರು ಇಂದು ಬಹುಶ್ರುತ ಜನಜನಿತ. ‘ಜನನಿ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂಬ ಆರ್ಯೋಕ್ತಿಯಂತೆ ತಾನು ಹುಟ್ಟಿ ಬೆಳೆದ ನೆಲ ಅಲ್ಲಿನ ಜನರ ಕುರಿತು ಅಪಾರವಾಗಿ ಚಿಂತಿಸುವ ಶಶಿ ಅಣ್ಣನವರು ತನ್ನ…

Read More

ಬಂಟರ ಯಾನೆ ನಾಡವರ ಮಾತೃ ಸಂಘ ಪುತ್ತೂರು ತಾಲೂಕು ಸಮಿತಿ, ಬಂಟರ ಸಂಘ ಪುತ್ತೂರು ತಾಲೂಕು ಇವರ ಮಾರ್ಗದರ್ಶನದೊಂದಿಗೆ ಪುತ್ತೂರು ತಾಲೂಕು ಬಂಟರ ಮಹಿಳಾ ವಿಭಾಗದ ಸಾರಥ್ಯದಲ್ಲಿ ಯುವ ಬಂಟರ ವಿಭಾಗ, ವಿದ್ಯಾರ್ಥಿ ಬಂಟರ ವಿಭಾಗ, ಬಂಟರ ಸಂಘ ಪುತ್ತೂರು ತಾಲೂಕು ಇವರ ಸಹಕಾರದೊಂದಿಗೆ ಮಹಿಳಾ ದಿನಾಚರಣೆ ‘ಐಸಿರಿ -2026’, ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಮಾರ್ಚ್ 22ರಂದು ಪುತ್ತೂರು ಕೊಂಬೆಟ್ಟು ಎಂ ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಿತು. ಪೂರ್ವಾಹ್ನ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ವಿಧಾನ ಪರಿಷತ್ ಶಾಸಕಿ ಭಾರತಿ ಶೆಟ್ಟಿಯವರು ಮಾತನಾಡಿ, ಸಮಾಜದ ಪ್ರತಿಯೋರ್ವ ಮಹಿಳೆಗೂ ಗೌರವ ಇದೆ. ಸಮಾಜದಲ್ಲಿ ಬಂಟ ಮಹಿಳೆಯರಿಗೆ ಯೋಗ್ಯವಾದ ಸ್ಥಾನ ಇದೆ ಎಂದು ಹೇಳಿದ ಅವರು, ನಮ್ಮ ಸಮಾಜದಿಂದ ದೊರೆತ ಸನ್ಮಾನ ನನಗೆ ಅತ್ಯಂತ ಖುಷಿ ತಂದಿದೆ. ಪುತ್ತೂರು ಬಂಟರ ಸಂಘದ ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ಮತ್ತು ತಂಡ ಉತ್ತಮ ಕಾರ್ಯಕ್ರಮ ಹಮ್ಮಿಕೊಂಡಿದೆ…

Read More

ಮನೋಜ್ ಶೆಟ್ಟಿ ಮಾಲಕತ್ವದ ಕಾರ್ಸ್ ಅಡ್ಡ ಫೈನಾನ್ಸ್ ಹೌಸ್ ಇದರ ಅಂಗ ಸಂಸ್ಥೆಯಾದ ‘ಕಾರ್ಸ್ ಅಡ್ಡ ಸೇವಾ ಟ್ರಸ್ಟ್’ ಮಂಗಳೂರು ವತಿಯಿಂದ ಸಾಮಾಜಿಕ ಸೇವಾ ಯೋಜನೆಯ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳ ಶಿಕ್ಷಣದ ಉತ್ತೇಜನಕ್ಕಾಗಿ ವಿದ್ಯಾರ್ಥಿಗಳಿಗೆ (1ನೇ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ) ಶೈಕ್ಷಣಿಕ ಪೂರಕ ವಸ್ತುಗಳನ್ನು ಉಚಿತವಾಗಿ ನೀಡಲು ಮುಂದಾಗಿದ್ದು, ಅರ್ಹ ವಿದ್ಯಾರ್ಥಿಗಳು ಈ ಸೌಲಭ್ಯ ಪಡೆಯಬಹುದಾಗಿದೆ. ಏಪ್ರಿಲ್ 10 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಲು ಬೇಕಾದ ವಿವರಗಳು: * ವಿದ್ಯಾರ್ಥಿಯ ಹೆಸರು: * ತರಗತಿ * ಶೈಕ್ಷಣಿಕ ದಾಖಲೆಗಳು: * ಆಧಾರ್ ಪ್ರತಿ * ಹೆತ್ತವರ / ಪೋಷಕರ ಆಧಾರ್ ಪ್ರತಿ:ಖುದ್ದಾಗಿ ಅರ್ಜಿ ಸಲ್ಲಿಸುವ ವಿಳಾಸ : ನಿರ್ದೇಶಕರು ಕಾರ್ಸ್ ಅಡ್ಡ ಫೈನಾನ್ಸ್ ಹೌಸ್ ಪ್ರಧಾನ ಕಚೇರಿ, ಫಸ್ಟ್ ನ್ಯೂರೋ ಆಸ್ಪತ್ರೆಯ ಎದುರು, ಪಡೀಲ್, ಮಂಗಳೂರು

Read More