Author: admin

ನವರಾತ್ರಿಯು ನವದೇವಿಯರನ್ನು ಆರಾಧಿಸುವ ಹಬ್ಬವಾಗಿದೆ. ನವರಾತ್ರಿಯ ನಿಮಿತ್ತ ವರ್ಷಂಪ್ರತಿ ಪರಿಸರದ ಕನ್ನಡಿಗರನ್ನು ಒಗ್ಗಟ್ಟು ಮಾಡಿ ಮಹಿಳಾ ವಿಭಾಗದ ಸದಸ್ಯೆಯರು ಶಾರದಾ ಪೂಜೆಯನ್ನು ಹಮ್ಮಿಕೊಳ್ಳುತ್ತಾ, ಈ ವರ್ಷ ಉಷಾ ಶ್ರೀಧರ್ ಶೆಟ್ಟಿಯವರ ನೇತೃತ್ವದಲ್ಲಿ ಇದನ್ನು ವಿಭಿನ್ನವಾಗಿ ಆಯೋಜಿಸಿ ಬಾರೀ ಸಂಖ್ಯೆಯಲ್ಲಿ ಮಹಿಳೆಯರನ್ನು ಒಂದುಗೂಡಿಸಿದ್ದಾರೆ. ಅದರೊಂದಿಗೆ ಮಹಿಳೆಯರ ಭಜನೆ, ಮಕ್ಕಳ ಕುಣಿತ ಭಜನೆ, ವಿಜಯ ಶೆಟ್ಟಿ ಮೂಡುಬೆಳ್ಳೆಯವರ ಭಕ್ತಿ ರಸಮಂಜರಿಯೊಂದಿಗೆ ಸಂಪನ್ನಗೊಂಡ ಈ ವಿಶಿಷ್ಟ ಕಾರ್ಯಕ್ರಮ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರತೀಕವಾಗಿದೆ ಎಂದು ವಸಾಯಿ ಕರ್ನಾಟಕ ಸಂಘ ಅಧ್ಯಕ್ಷರಾದ ದೇವೇಂದ್ರ ಬಿ ಬುನ್ನನ್ ನುಡಿದರು. ಅವರು ಸೆಪ್ಟೆಂಬರ್ 28ರ ರವಿವಾರದಂದು ವಸಾಯಿ ಪಶ್ಚಿಮದ ಪಾರ್ವತಿ ಸಿನೆಮಾ ಹತ್ತಿರ, ಸ್ವಾಮಿ ನಾರಾಯಣ ಮಂದಿರ ಸಭಾಗೃಹದ ಮೊದಲನೇ ಮಹಾಡಿಯಲ್ಲಿ ನಡೆದ ವಸಾಯಿ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ನವರಾತ್ರಿ ಉತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಉಪಾಧ್ಯಕ್ಷ ಕರ್ನೂರು ಶಂಕರ್ ಆಳ್ವ ಮಾತನಾಡುತ್ತಾ, ನವರಾತ್ರಿಯ ದಿನಗಳು ನವದುರ್ಗೆಯರು ಧರ್ಮದ ರಕ್ಷಣೆಯ ಶಕ್ತಿಯ…

Read More

ಜಾಗತಿಕ ಭೂಪಟದಲ್ಲಿ ಭಾರತವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಮಹಾರಾಷ್ಟ್ರದ ಹೊಸ ಯುಗದ ಆರಂಭ ಎನ್ನುವಂತೆ ಅಕ್ಟೋಬರ್ 8 ರಂದು ನವಿ ಮುಂಬೈಯಲ್ಲಿ “ಡಿ. ಪಾಟೀಲ್” ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಭವ್ಯ ಉದ್ಘಾಟನೆಯನ್ನು ದೇಶದ ಉನ್ನತ ನಾಯಕ ಭಾರತದ ಪ್ರಧಾನಿ ಗೌರವಾನ್ವಿತ ನರೇಂದ್ರ ಮೋದಿಜಿಯವರು ನೆರವೇರಿಸಿದರು. ಈ ಐತಿಹಾಸಿಕ ಕ್ಷಣದಲ್ಲಿ ಪಾಲ್ಗೊಂಡಿದ್ದ ನವಿ ಮುಂಬೈಯ ನ್ಯೂ ಪನ್ವೇಲ್ ನ ಮಾಜಿ ಕಾರ್ಪೊರೇಟರ್, ಹೋಟೆಲ್ ಉದ್ಯಮಿ ಸಂತೋಷ್ ಜಿ ಶೆಟ್ಟಿ ಪಾಲ್ಗೊಂಡು ಪ್ರಧಾನಿಯವರಿಗೆ ಗೌರವ ನಮನ ಸಲ್ಲಿಸಿದರು. ಪ್ರಧಾನಿಯವರ ವಿಮಾನ ನಿಲ್ದಾನದ ಉದ್ಘಾಟನೆಯ ಪೂರ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂತೋಷ್ ಜಿ ಶೆಟ್ಟಿ ಅವರು ಇದು ನನಗೆ ಹೆಮ್ಮೆ ಮತ್ತು ಹೃದಯ ಸ್ಪರ್ಶಿಸುವ ಘಟನೆಯಾಗಿದೆ. ಆ ಸ್ಥಳಕ್ಕೆ ಹಾಜರಾಗುವುದು ನವ ಭಾರತದ ಪ್ರಗತಿಯ ಪ್ರತಿಜ್ಞೆಯನ್ನು ಅನುಭವಿಸಿದ ಕ್ಷಣವಾಗಿದೆ ಎಂದು ತಿಳಿಸಿದ್ದಾರೆ. ಕಾರ್ಯಕ್ರಮದ ಸಮಯದಲ್ಲಿ ಮೋದಿಜಿಯವರನ್ನು ವೈಯಕ್ತಿಕವಾಗಿ ಭೇಟಿಯಾಗುವ ಅವಕಾಶ ಸಿಕ್ಕಿತು. ಅದನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಕಷ್ಟ. ಅವರ ಉಪಸ್ಥಿತಿಯಲ್ಲಿನ ಹೊಳಪು, ಅವರ ಕಣ್ಣುಗಳಲ್ಲಿ ವಿಶ್ವಾಸ ಮತ್ತು…

Read More

LG ಇಲೆಕ್ಟ್ರಾನಿಕ್ಸ್ ಐಪಿಓ ಬಗ್ಗೆ ನಿಮಗೆ ಈಗಾಗಲೇ ತಿಳಿದಿರಬೇಕು. 11,000+ ಕೋಟಿ ರೂಪಾಯಿಗಳನ್ನು ಐಪಿಓ ಮೂಲಕ ಸಂಗ್ರಹಿಸಲಿದ್ದಾರೆ. ಅಷ್ಟೂ ಹಣ ದಕ್ಷಿಣ ಕೋರಿಯಾದಲ್ಲಿರುವ ಅದರ ಮಾತೃ ಸಂಸ್ಥೆಯಾದ LG ಕೋರ್ಪ್‌ಗೆ ಸಂದಾಯವಾಗಲಿದೆ!!! ಲಿಸ್ಟಿಂಗ್ ಆದ ನಂತರವೂ ಅದು ಭಾರತದಲ್ಲಿ 85% ಪಾಲನ್ನು ತನ್ನಲ್ಲೇ ಇಟ್ಟುಕೊಳ್ಳಲಿದೆ. ಸೆಬಿಯ ನಿಯಮದ ಪ್ರಕಾರ ಕೆಲವು ಸಮಯದ ನಂತರ ಅದು 75% ಕ್ಕೆ ಇಳಿಯಬೇಕು. ಆಗ ಮತ್ತೆ ಅವರು ಇನ್ನಷ್ಟು ಹಣವನ್ನು ಸಂಗ್ರಹಿಸಲಿದ್ದಾರೆ. ಅದೂ ಬಹುಶಃ ದಕ್ಷಿಣ ಕೋರಿಯಾಕ್ಕೆ ಹೋಗಲಿದೆ. ಭಾರತದಲ್ಲಿ ಎಷ್ಟು ವ್ಯಾಪಾರ ಮಾಡುತ್ತಾರೋ ಅದರ 3% ಅವರು ದಕ್ಷಿಣ ಕೋರಿಯಾದ ಮಾತೃ ಸಂಸ್ಥೆಗೆ ಕೊಡಬೇಕು. ಕಳೆದ ವರ್ಷ 350 ಕೋಟಿ ರೂಪಾಯಿಗಳನ್ನು ರಾಯಲಿಟಿ ರೂಪದಲ್ಲಿ ನೀಡಿದ್ದಾರೆ. ಇಷ್ಟೇ ಅಲ್ಲ ತಾನು ಮಾಡಿದ ಲಾಭದಲ್ಲಿ ಡಿವಿಡೆಂಡ್ ಕೂಡ ತನ್ನ ಮಾತೃ ಸಂಸ್ಥೆಗೆ ನೀಡಬೇಕು. ಪ್ರತಿ ವರ್ಷವೂ ಸುಮಾರು 2,000 ಕೋಟಿ ರೂಪಾಯಿಗಳು ಡೆವಿಡೆಂಡ್ ಹೆಸರಲ್ಲಿ ಭಾರತದಿಂದ ದಕ್ಷಿಣ ಕೋರಿಯಾಕ್ಕೆ ಹೋಗುತ್ತದೆ. ಮತ್ತೊಂದು ಮುಖ್ಯವಾದ ವಿಷಯವೆಂದರೆ, ಎಲ್‌ಜಿ…

Read More

ರಾಜ್ಯದ ಪ್ರತಿಷ್ಠಿತ ಕ್ರೆಡಿಟ್ ಸಹಕಾರ ಸಂಸ್ಥೆಗಳಲ್ಲೊಂದಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಸಹಕಾರ ಮಾಣಿಕ್ಯ ಪ್ರಶಸ್ತಿ ವಿಜೇತ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯು 2025-26ನೇ ಸಾಲಿನ ವಿತ್ತೀಯ ವರ್ಷದ ಅರ್ಧ ವಾರ್ಷಿಕ ಅವಧಿ ದಿನಾಂಕ 30.09.2025ಕ್ಕೆ ರೂ.638 ಕೋಟಿ ಠೇವಣಿ, ರೂ.548 ಕೋಟಿ ಸಾಲ, ರೂ.1186 ಕೋಟಿ (ಠೇವಣಿ ಮತ್ತು ಸಾಲ) ವ್ಯವಹಾರವನ್ನು ಹೊಂದಿದೆ. 2024ನೇ ಸಪ್ಟೆಂಬರ್ 30ಕ್ಕೆ ಹೋಲಿಸುವಾಗ ಠೇವಣಾತಿಯಲ್ಲಿ ರೂ.90 ಕೋಟಿ, ಹೊರಬಾಕಿ ಸಾಲದಲ್ಲಿ ರೂ.66ಕೋಟಿ ಹೆಚ್ಚಳದೊಂದಿಗೆ, ಒಟ್ಟು ವ್ಯವಹಾರದಲ್ಲಿ ರೂ.156 ಕೋಟಿ ವೃದ್ಧಿಯನ್ನು ದಾಖಲಿಸಿದೆ. 30.09.2025ಕ್ಕೆ ನಿವ್ವಳ ಲಾಭವು ರೂ.5.76 ಕೋಟಿ ದಾಖಲಿಸಿದ್ದು, ಇದು ಕಳೆದ ವರ್ಷಕ್ಕಿಂತ ರೂ.88 ಲಕ್ಷ ಹೆಚ್ಚಳವಾಗಿ 18% ವೃದ್ಧಿಯಾಗಿರುತ್ತದೆ. ಸ್ಥಾಪನೆಯಾದನಿಂದ ನಿರಂತರ ಡಿವಿಡೆಂಡನ್ನು ನೀಡುತ್ತಾ ಬಂದ ಸೊಸೈಟಿ, 2024-25ನೇ ಸಾಲಿಗೆ ಶೇ.25 ಡಿವಿಡೆಂಡನ್ನು ನೀಡಿದ್ದು, ಕಳೆದ ಏಳು ವರ್ಷಗಳಿಂದ ಗರಿಷ್ಟ 25% ಡಿವಿಡೆಂಡನ್ನು ನೀಡುತ್ತಿದೆ. ಸಂಘದ ನಿವ್ವಳ ಅನುತ್ಪಾದಕ ಆಸ್ತಿಯು ಕಳೆದ 18 ವರ್ಷಗಳಿಂದ ಶೂನ್ಯ…

Read More

ಗಣಿತನಗರ : ದೇಶದ ರಕ್ಷಣಾ ಕ್ಷೇತ್ರದಲ್ಲಿ ಜಲಸೇನೆಯ ಕೊಡುಗೆ ಗಣನೀಯವಾದದ್ದು. ಸೇನೆಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಶಿಸ್ತು, ಸಂಯಮವನ್ನು ಬೆಳೆಸಿ ನಾಯಕತ್ವದ ಗುಣವನ್ನು ಉದ್ದೀಪನಗೊಳಿಸುವ ಎನ್.ಸಿ.ಸಿಯ ಕಾರ್ಯ ಮಹತ್ತರವಾದದ್ದು ಎಂದು ಉಡುಪಿಯ ಎನ್.ಸಿ.ಸಿ ನೇವಲ್ ವಿಭಾಗದ ಕಮಾಂಡರ್ ಅಶ್ವಿನ್ ಎಂ ರಾವ್ ಹೇಳಿದರು. ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನಲ್ಲಿ ನೂತನವಾಗಿ ಪ್ರಾರಂಭಗೊಂಡ ಎನ್.ಸಿ.ಸಿ ನೇವಲ್ ಘಟಕವನ್ನು ಸಂಸ್ಥೆಯ ಪ್ರಾಂಶುಪಾಲ ಹಾಗೂ ಎನ್.ಸಿ.ಸಿ ಕ್ಷೇಮಪಾಲನಾಧಿಕಾರಿಗೆ ಎನ್.ಸಿ.ಸಿ. ಧ್ವಜವನ್ನು ಹಸ್ತಾಂತರಿಸಿ ಮಾತನಾಡಿದರು. ಇದೇ ಸಂದರ್ಭ ಎನ್.ಸಿ.ಸಿಯ ಧ್ವಜದ ಮಹತ್ವವನ್ನು, ಧ್ಯೇಯೋದ್ದೇಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಮಾತನಾಡಿ ಸಂಸ್ಥೆಯಲ್ಲಿ ಓದಿದ ಎನ್.ಸಿ.ಸಿ. ಘಟಕದ ವಿದ್ಯಾರ್ಥಿಯು ಎನ್.ಸಿ.ಸಿ. ಕೋಟದಡಿಯಲ್ಲಿ ತನ್ನ ಮೊದಲ ಪ್ರಯತ್ನದಲ್ಲಿಯೇ ಎಂ.ಬಿ.ಬಿ.ಎಸ್ ಪ್ರವೇಶಾತಿ ಪಡೆದಲ್ಲಿ ಸಂಸ್ಥೆಯ ವತಿಯಿಂದ ಭಾರತೀಯ ಸೇನೆಗೆ ರೂ.10ಸಾವಿರವನ್ನು ಕೊಡುಗೆಯಾಗಿ ನೀಡಲಾಗುವುದು ಎಂದು ಘೋಷಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲರಾದ ಶ್ರೀ ದಿನೇಶ್ ಎಂ ಕೊಡವೂರ್…

Read More

ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಯುನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ನ ವಿದ್ಯಾರ್ಥಿಗಳು ಅತ್ಯುತ್ತಮ ರ‍್ಯಾಂಕ್ ಮತ್ತು ನಗದು ಬಹುಮಾನಗಳನ್ನು ಪಡೆದರು. ಬಿಎ ವಿಭಾಗದಲ್ಲಿ ಕೆ ಎಸ್ ವಿಷ್ಣುಕುಮಾರ್ ಜಾನ್ ಎಫ್ ಕೆನಡಿ ಸ್ಮಾರಕ ಚಿನ್ನದ ಪದಕ, ಎನ್ ಅನಂತಾಚಾರ್ ಸ್ಮಾರಕ ಚಿನ್ನದ ಪದಕ, ಎಂಇಎಸ್ ಕಾಲೇಜು ರಜತ ಮಹೋತ್ಸವ ಬಹುಮಾನ ಪಡೆದರು. ಪಲ್ನಾಟಿ ಕಾವ್ಯ ಅವರು ಎಂ ಶ್ರೀನಿವಾಸ ಅಯ್ಯಂಗಾರ್ ಮತ್ತು ದೊರೆಸಾಲಮ್ಮ ಸ್ಮಾರಕ ಚಿನ್ನದ ಪದಕ, ಕೆನರಾ ಬ್ಯಾಂಕ್ ವಜ್ರ ಮಹೋತ್ಸವ ಸ್ಮಾರಕ ಬಹುಮಾನ, ಟಿ ಶಿವಣ್ಣ ಅಭಿನಂದನಾ ಸಮಿತಿ ಚಿನ್ನದ ಪದಕ ಪಡೆದರು. ಧನ್ಯರೆಡ್ಡಿ ಎಸ್ ಅವರು ಮಿಸಸ್ ಮೇರಿ ಕೋದಂಡ ರಾವ್ ಬಹುಮಾನ ಸ್ವೀಕರಿಸಿದರೆ, ಸಾರ್ವೀನ ಪಿ ಅವರು ಕೆನರಾ ಬ್ಯಾಂಕ್ ವಜ್ರ ಮಹೋತ್ಸವ ಬಹುಮಾನ ಗಳಿಸಿದರು ಎಂದು ಯುನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ಕಾಲೇಜಿನ ಚೇರ್ಮನ್ ಆರ್ ಉಪೇಂದ್ರ ಶೆಟ್ಟಿ ತಿಳಿಸಿದರು.

Read More

2025-26ನೇ ಸಾಲಿನ ಕರ್ನಾಟಕ ರಣಜಿ ತಂಡದ ಪ್ರಕಟಣೆಯೊಂದಿಗೆ ಕುಂದಾಪುರವು ಇತಿಹಾಸವನ್ನು ನಿರ್ಮಿಸಿದೆ. ಅಭಿಲಾಶ್ ಶೆಟ್ಟಿಯವರ ಜೊತೆಗೆ ಕುಂದಾಪುರದ ಪ್ರತಿಭಾವಂತ ಕ್ರಿಕೆಟಿಗ ಶಿಖರ್ ಶೆಟ್ಟಿ ಈ ಬಾರಿಯ ರಣಜಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮೊದಲ ಬಾರಿಗೆ ರಣಜಿ ತಂಡಕ್ಕೆ ಆಯ್ಕೆಯಾಗಿರುವ ಶಿಖರ್ ಶೆಟ್ಟಿ, ರಾಜ್ಯ ಕ್ರಿಕೆಟ್ ವಲಯದಲ್ಲಿ ತನ್ನ ನಿರಂತರ ಸಾಧನೆಯಿಂದಲೇ ಆಯ್ಕೆದಾರರ ಗಮನ ಸೆಳೆದಿದ್ದಾರೆ. ಕಳೆದ ಕೆಲವು ಸೀಸನ್‌ಗಳಲ್ಲಿ ಅವರ ಪ್ರದರ್ಶನ ವಿಶಿಷ್ಟವಾಗಿತ್ತು. ಶಿಖರ್ ಶೆಟ್ಟಿ ಅವರು ಕುಂದಾಪುರದ ರಾಜೇಶ್ ಶೆಟ್ಟಿ ಹಾಗೂ ವಚನಾ ಶೆಟ್ಟಿ ಅವರ ಪುತ್ರರು. ಅವರ ತಂದೆ ರಾಜೇಶ್ ಶೆಟ್ಟಿ ಜನ್ನಾಡಿ ಕರಾವಳಿ ಕುಂದಾಪುರ ತಂಡದ ಪರವಾಗಿ ಅತ್ಯುತ್ತಮ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದರು. ಬೆಂಗಳೂರಿನಲ್ಲಿ “HOY ಕ್ರಿಕೆಟರ್ಸ್” ತಂಡವನ್ನು ಸ್ಥಾಪಿಸಿ ಅನೇಕ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಿದ್ದರು. ಶಿಖರ್ ಶೆಟ್ಟಿ ಪ್ರಸ್ತುತ ಬೆಂಗಳೂರು ಆಧಾರಿತ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದು, ರಾಜ್ಯದ ವಿವಿಧ ವಯೋಮಾನದ ಪಂದ್ಯಗಳಲ್ಲಿ ತಮ್ಮ ಎಡಗೈ ಸ್ಪಿನ್ ಬೌಲಿಂಗ್ ಕೌಶಲ್ಯದಿಂದ ಹೆಸರು ಮಾಡುತ್ತಿದ್ದಾರೆ. ನಿಖರ ಲೈನ್…

Read More

ಓಲೆಡ್ ಇತ್ತಿನ ಇಸಯೊನು ಇಂದ್ರೆ ಕೇಂದ್ ಪಿಂದೊಂಡೆ. ಅರ್ಜುನೆ ಓಲೆಡ್ ಬರೆತಿನ ನಮೂನಿ (ರೀತಿ)ನ್ ಕೇಂದ್, ಇಂದ್ರಗ್ ಕಾಲರುದ್ರಡ್ದ್ ಲಾ ಎಚ್ಚಿನ ಗರ್ವ ಬತ್ತ್ಂಡ್. ಆಯೆ “ಅರ್ಜುನೆ ಮಿತ್ತ್ ಗ್ ದಾದ ಆವು ಪಂದ್ ತೆರಿಯೊನಂದೆ, ಬಜಿ ಪೊಕ್ಕಡೆ ಅಂಮ್ಸನಿ ಕೊಚ್ಚೊಂದೆ, ದಂಡ್ ಸಾದನೆಡ್ ದೇವತೆಲೆಗ್ ನರಮಾನಿಲು ಸರಿ ಸಮನಾ?” ಪಂಡೆ. ಓಲೆಡ್ ಇತ್ತಿನ ಗಡ್ಸ್ ದ ಬೇಡಿಕೆನ್ ಕೇಂದ್, ಒರ ಇಂದ್ರೆ “ದಾದ ಉಂದು, ಕಾಲದ ಮಯಿಮೆನ, ಇಸರಂಡ ದೇವೆರೆ ಇಚ್ಛೆನ, ದೇವತೆಲೆಗ್ ಸೋಲ್ ಆಪಿನ ಸೂಚನೆನಾ ದಾದ ಪಂದ್ ತೆರಿವುಜಿ, ನರಮಾನಿಲು ದೇವಲೋಕೊಗು ಓಲೆ ಬರೆದ್, ಸೊರ್ಗಲೋಕದ ಅಪ್ಸರೆಯರ್ ಬೊಕ್ಕ ಬಾಕಿದ ವಸ್ತ್ ಲೆನ್ ಕಡಪುಡ್ದು ಕೊರು ಪಂದ್ ಕೇನುನು, ಉಂದೆನ್ ಇಸರಂಡ ದೇವೆರೆ ಪಿಂಬೆರ್” ಪಂದ್ ದೇವೇಂದ್ರೆ ಪಂಡೆ. ಪಾರ್ತೆ ಕಡಪುಡ್ದಿನ ಓಲೆ ಓದುದು ಗರ್ವ ಬತ್ತಿನ ಇಂದ್ರೆ, ಜೋರುಡೆ ಗುರೆತೆ, “ಲೆಪ್ಪುಲೆ ಬರ್ಸ ಒಡ್ಡಾವುನ ದಾರಗೆಲೆನ್, ಅಗುಲು ಅರ್ಜುನ ಪಟ್ನ ಹಸ್ತಿನಾಪುರೊಟು ಜೋರಾದ್ ಏಲ್ ರಾತ್ರೆ,…

Read More

ತುಳು ರಂಗಭೂಮಿ ಬದಲಾಗುತ್ತಿದೆ. ಸಾಮಾಜಿಕ ಮತ್ತು ಹಾಸ್ಯ ನಾಟಕಗಳಿಗೆ ಸೀಮಿತವಾಗಿದ್ದ ರಂಗಭೂಮಿ ಹೊಸ ಪ್ರಯೋಗಗಳನ್ನು ಪ್ರಾರಂಭಿಸುತ್ತಿದೆ. ತುಳು ರಂಗಭೂಮಿ ಭಕ್ತಿ ಪೌರಾಣಿಕದಿಂದ ಐತಿಹಾಸಿಕ, ಐತಿಹಾಸಿಕ ಮತ್ತು ನೈತಿಕ ನಾಟಕಕ್ಕೆ ಬದಲಾಗಿದೆ. ಕೃಷ್ಣ ಜಿ ಮಂಜೇಶ್ವರ ಇವರ ಶಾರದಾ ಕಲಾ ಕೂಟದ ಐಸಿರಿ ಕಲಾವಿದರು ಆಂಜನೇಯನ ಕಥೆಯೊಂದಿಗೆ ಧರ್ಮ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಯುವಕರ ತ್ಯಾಗವನ್ನು ತೋರಿಸಿದ್ದಾರೆ. “ಸು ಫ್ರಮ್ ಸೋ” ಚಿತ್ರದ ಬಾವ ಬಂದರೂ ಖ್ಯಾತಿಯ ಪ್ರಬುದ್ಧ ರಂಗಭೂಮಿ ಕಲಾವಿದ ಪುಷ್ಪರಾಜ್ ಬೊಳ್ಳಾರ್, ಚಂದ್ರಶೇಖರ್ ಸಾಯ ಬೇಡ್ರಗುಡ್ಡೆ, “ತುಳುನಾಡ್ ರಂಗ ಬೊಳ್ಳಿ” ರವಿ ರಾಮಕುಂಜ, “ಗಡಿನಾಡ ಅಭಿನಯ ರತ್ನ” ಅನಿಲ್ ರಾಜ್ ಉಪ್ಪಳ, ಅಶೋಕ್ ಬೇಕೂರ್ ಹಾಗೂ ಪ್ರಬುದ್ಧ ಕಲಾವಿದರುಗಳು ಅಭಿನಯಿಸಿರುವ ಈ ನಾಟಕವನ್ನು ವಿಕ್ರಮ್ ದೇವಾಡಿಗ ಚಿತ್ರಾಪುರ ನಿರ್ದೇಶಿಸಿದ್ದಾರೆ. ಈ ನಾಟಕದ ಸುಂದರ ಸಾಹಿತ್ಯವನ್ನು ರಾಜೇಶ್ ಮುಗುಳಿ ಬರೆದಿದ್ದಾರೆ. ಹಿನ್ನೆಲೆ ಸಂಗೀತ ಪ್ರವೀಣ್ ಕಾಣಿಯೂರು, ಧ್ವನಿ ಮತ್ತು ಬೆಳಕು ಅಕ್ಷತ್ ಕೊಂಡಾಣ, ಸಂಪತ್ ಸುವರ್ಣ ಬೆಳ್ತಂಗಡಿ ಅವರ ಸಹಕಾರದೊಂದಿಗೆ,…

Read More

05 ಅಕ್ಟೋಬರ್ 2025 ರಂದು ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರು ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯ ಸಂದೇಶವನ್ನು ಸಾರುವ ಉದ್ದೇಶದಿಂದ ಕಾರ್ಕಳದ ಆಸುಪಾಸಿನಲ್ಲಿರುವ ಅನೇಕ ಪ್ರೇಕ್ಷಣೀಯ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿದರು. ಪ್ಲಾಸ್ಟಿಕ್ ಕಸದ ಸಂಗ್ರಹ, ಕಸ ವಿಂಗಡಣೆ ಹಾಗೂ ಪರಿಸರ ಶುದ್ಧೀಕರಣದ ಜೊತೆಗೆ ಸ್ಥಳೀಯ ಜನರಿಗೆ ಸ್ವಚ್ಛತೆಯ ಮಹತ್ವವನ್ನು ಬೋಧಿಸುವ ಜಾಗೃತಿ ಅಭಿಯಾನವೂ ನಡೆಯಿತು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಸ್ವಚ್ಛ ಕಾರ್ಕಳ ನಗರದ ಸ್ವಚ್ಛತಾ ರಾಯಭಾರಿಯಾಗಿರುವ ಫೆಲಿಕ್ಸ್ ಜೋಸೆಫ್ ವಾಜ್ ರವರು ಶುಭ ಹಾರೈಸಿದರು. ಕಾರ್ಕಳ ಪುರಸಭಾ ಅಧ್ಯಕ್ಷರಾದ ಯೋಗೀಶ್ ದೇವಾಡಿಗ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ' ಸ್ವಚ್ಛತೆ ಎನ್ನುವುದು ಕೇವಲ ದೈಹಿಕ ಶುದ್ಧತೆಗೆ ಸೀಮಿತವಲ್ಲ.

Read More