Author: admin
ತಲಪಾಡಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ ಪ್ರಯುಕ್ತ ಧರ್ಮ ಶಿಕ್ಷಣ ಜ್ಞಾನಯಜ್ಞ ಸಲುವಾಗಿ ಶ್ರೀದೇವಿ ಸನ್ನಿಧಿಯಲ್ಲಿ ಪೂರ್ಣ ಹಗಲಿನ ಯಕ್ಷಗಾನ ತಾಳಮದ್ದಳೆ ಇತ್ತೀಚೆಗೆ ಜರಗಿತು. ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 7ರವರೆಗೆ ಸತತ 10 ಗಂಟೆ ನಡೆದ ತಾಳಮದ್ದಳೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಸಿದ್ಧ ಹವ್ಯಾಸಿ ಕಲಾವಿದರು ಭಾಗವಹಿಸಿದರು. ಯಕ್ಷಧ್ರುವ ಹವ್ಯಾಸಿ ಘಟಕವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಬೆಳಿಗ್ಗೆ ಉದ್ಘಾಟನಾ ಸಮಾರಂಭದಲ್ಲಿ ದೇವಳದ ಆಡಳಿತ ಸಮಿತಿ ಹಿರಿಯ ಸದಸ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಜೆಯ ಸಮಾರೋಪ ಸಮಾರಂಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಭಾಗವತ ಸತೀಶ್ ಶೆಟ್ಟಿ ಪಟ್ಲ ಅವರನ್ನು ಗೌರವಿಸಲಾಯಿತು. ಹವ್ಯಾಸಿ ಘಟಕದ ಅಧ್ಯಕ್ಷ ರಾಜಾರಾಮ ಹೊಳ್ಳ ಕೈರಂಗಳ ಸ್ವಾಗತಿಸಿದರು. ಸಂಚಾಲಕ ಸದಾಶಿವ ಆಳ್ವ ತಲಪಾಡಿ ಕಾರ್ಯಕ್ರಮ ನಿರೂಪಿಸಿ, ಗಣೇಶ ಕುಂಜತ್ತೂರು ವಂದಿಸಿದರು. ದಿನವಿಡೀ ನಡೆದ ತಾಳಮದ್ದಳೆ ಜ್ಞಾನಯಜ್ಞದಲ್ಲಿ ಜನಪ್ರಿಯ ನಾಲ್ಕು ಪೌರಾಣಿಕ ಪ್ರಸಂಗಗಳನ್ನು ಆಯ್ದುಕೊಳ್ಳಲಾಗಿತ್ತು. ವಿಭೀಷಣನೀತಿ, ಅಂಗದ ಸಂಧಾನ, ಶಲ್ಯ ಸಾರಥ್ಯ ಮತ್ತು ಕರ್ಣ…
ತುಳುನಾಡ ಸೇವಾ ಸಮಾಜ ಮೀರಾ ಭಯಂದರ್ ಇದರ ಸ್ಥಾಪಕ ದಿನಾಚರಣೆ, ಮಹಿಳಾ ದಿನಾಚರಣೆ ಹಾಗೂ ಹಳದಿ ಕುಂಕುಮ ಕಾರ್ಯಕ್ರಮದ ನಿಮಿತ್ತ ಮಾರ್ಚ್ 15 ರಂದು ನಡೆದ ಕಾರ್ಯಕ್ರಮದಲ್ಲಿ ಶ್ರೀ ಶಕ್ತಿ ಫೌಂಡೇಶನ್ ನ ಸ್ಥಾಪಕಾಧ್ಯಕ್ಷೆ ಶ್ರೀಮತಿ ಸಚ್ಚೇರಿಗುತ್ತು ಶಾಲಿನಿ ಎಸ್ ಶೆಟ್ಟಿಯವರಿಗೆ ‘ಸಂಘಟನಾ ಐಸಿರಿ’ ಎಂಬ ಬಿರುದನ್ನು ಪ್ರದಾನಿಸಿ ಸನ್ಮಾನಿಸಿದರು. ಈ ಸಂಧರ್ಭ ಸುರೇಂದ್ರ ಹೆಗ್ಗಡೆ, ಯೋಗೀಶ್ ಗಾಣಿಗ, ಸಂಪತ್ ಶೆಟ್ಟಿ ಪಂಜದಗುತ್ತು, ರವೀಂದ್ರ ಶೆಟ್ಟಿ ಕೊಟ್ರಪಾಡಿ, ನರೇಶ್ ಕೆ ಪೂಜಾರಿ, ಡಾ| ಕೆ.ಟಿ ಶಂಕರ್ ಶೆಟ್ಟಿ, ಶಂಭು ಕೆ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಯಾವುದೇ ರೀತಿಯ ಸಂಕಷ್ಟ ಎದುರಾದರೂ ಕನ್ನಡಿಗರು ಜಾತಿ, ಧರ್ಮವನ್ನು ಬದಿಗಿಟ್ಟು ನಾವು ಒಂದಾಗಿ ಎದುರಿಸೋಣ. ಅದಕ್ಕೆ ಬೇಕಾದ ಎಲ್ಲಾ ರೀತಿಯ, ಸಹಾಯ, ಸಹಕಾರ ನೀಡಗಳಾಗುವುದೆಂದು ಖ್ಯಾತ ಆನಿವಾಸಿ ಉದ್ಯಮಿ ಡಾ| ರೋನಾಲ್ಡ್ ಕೊಲಾಸೊ ಹೇಳಿದ್ದಾರೆ. ದುಬೈಯಲ್ಲಿರುವ ಅವರ ನಿವಾಸದಲ್ಲಿ ಕನ್ನಡಿಗಾಸ್ ಹೆಲ್ಪ್ ಲೈನ್ ಗಾಗಿ ಕೂಟದಲ್ಲಿ ಆಯೋಜಿಸಲಾಗಿದ್ದ ‘ಸೌಹಾರ್ದ ಇಫ್ತಾರ್’ ಕೂಟದಲ್ಲಿ ಅವರು ಮಾತನಾಡುತ್ತಿದ್ದರು. ನಾವು ಸಂಕಷ್ಟದ ವೇಳೆ ಮಾತ್ರವಲ್ಲ, ಬದಲಾಗಿ ಎಲ್ಲಾ ಸಂದರ್ಭಗಳಲ್ಲೂ ಒಟ್ಟಾಗಿ ಸೌಹಾರ್ದತೆ, ಒಗ್ಗಟ್ಟಿನಿಂದ ಇಲ್ಲಿ ಜೀವಿಸೋಣ ಎಂದು ಡಾ| ಕೊಲಾಸೊ ಕರೆ ನೀಡಿದರು. ಸಂಕಷ್ಟದಲ್ಲಿದ್ದ ಪ್ರವಾಸಿ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿಸಲು ನೀವೆಲ್ಲರೂ ಸಂಯೋಜಕರಾಗಿ ಕೆಲಸ ಮಾಡುವ ಮೂಲಕ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದೀರಿ. ‘ಕನ್ನಡಿಗಾಸ್ ಹೆಲ್ಪ್ ಲೈನ್’ನ ಈ ಯಶಸ್ಸು ನಿಮಗೆ ಸಲ್ಲಬೇಕಾದದ್ದು. ಇಲ್ಲಿರುವ ಪ್ರತಿಯೊಬ್ಬರಿಗೂ ಸಲ್ಲಬೇಕಾಗಿರುವಂತದ್ದು ಎಂದ ಕೊಲಾಸೊ, ಈ ಹಿಂದೆ ಇಲ್ಲಿ ಪ್ರವಾಹ ಬಂದಾಗ, ಕರೋನ ಸಂಕಷ್ಟ ಎದುರಾದಾಗ ಮಾಡಿದ ರೀತಿಯಲ್ಲಿಯೇ ಈ ಬಾರಿಯೂ ‘ಕನ್ನಡಿಗಾಸ್ ಹೆಲ್ಪ್ ಲೈನ್’ ಕಾರ್ಯವೆಸಗಿದ್ದು ಇದು ನಮ್ಮನ್ನು…
ಪುತ್ತೂರು ತಾಲೂಕು ಬಂಟರ ಸಂಘದ ನೂತನ ನಿರ್ದೇಶಕರಾಗಿ ದಯಾನಂದ ರೈ ಕೋರ್ಮಂಡರವರು ಆಯ್ಕೆಯಾಗಿದ್ದಾರೆ. ಸಂಘದ ಹಾಲಿ ನಿರ್ದೇಶಕರಾಗಿದ್ದ ಉದ್ಯಮಿ ಸತೀಶ್ ರೈ ಕಟ್ಟಾವು ಅವರ ರಾಜೀನಾಮೆಯಿಂದ ತೆರವಾಗಿದ್ದ ನಿರ್ದೇಶಕ ಸ್ಥಾನಕ್ಕೆ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.
ನಮ್ಮ ಮಹಿಳಾ ವಿಭಾಗದ ವತಿಯಿಂದ ನಡೆದ ಶನಿ ಪೂಜೆಯಿಂದ ದೇವರ ಅನುಗ್ರಹ ಎಲ್ಲರಿಗೂ ಲಭಿಸಲಿ ಎಂದು ಬಯಸುತ್ತೇನೆ. ಕಂಕಣ ಭಾಗ್ಯ ಈ ಯೋಜನೆಯ ಹೆಸರೇ ಸೂಚಿಸುವಂತೆ ನಮ್ಮ ಮುಖ್ಯ ಉದ್ದೇಶ ಅರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬದ ಹೆಣ್ಣು ಮಕ್ಕಳ ಮದುವೆಯ ಸಮಯದಲ್ಲಿ ಸಹಕಾರ ನೀಡಿ ಮದುವೆ ಎಂಬ ಪುಣ್ಯ ಕಾರ್ಯ ಯಾವುದೇ ತೊಂದರೆ ಇಲ್ಲದೇ ಸಾಂಗವಾಗಿ ನಡೆಯಬೇಕು ಎಂಬುದೇ ನಮ್ಮ ದ್ಯೆಯವಾಗಿದೆ. ನಮ್ಮ ಮಹಿಳಾ ವಿಭಾಗದ ಸದಸ್ಯರ ಮನಸ್ಸಿನ ಹಾರೈಕೆ ಕೂಡಾ ಇದೇ ಆಗಿದೆ. ನಮ್ಮ ಈ ಯೋಜನೆ ರೂಪುಗೊಂಡು ಸಮಾಜದ ಗಣ್ಯರಲ್ಲಿ ತಿಳಿಸಿದಾಗ ಬಹಳ ಉತ್ಸಾಹದಿಂದ ಬಾರಿ ಒಳ್ಳೆಯ ಕಾರ್ಯ ಮಾಡುತ್ತಿದ್ದೀರಿ. ನಮ್ಮ ಸಹಕಾರ ಸದಾ ಇದೇ ಎಂದು ಉತ್ತಮ ಧನಸಹಾಯ ನೀಡಿ ಸಹಕರಿಸಿದ್ದಾರೆ. ನಮ್ಮ ಸಂಘದ ಗೌರವಾಧ್ಯಕ್ಷರಾದ ಸಂತೋಷ್ ಶೆಟ್ಟಿಯವರು, ಅಧ್ಯಕ್ಷರಾದ ಅಜಿತ್ ಹೆಗ್ಡೆಯವರು ಉತ್ತಮ ಮಾರ್ಗದರ್ಶನ ಮತ್ತು ಯೋಜನೆಗೆ ಪ್ರೋತ್ಸಾಹ ನೀಡಿದ್ದಾರೆ. ಯೋಜನೆಗೆ ಮೊದಲಾಗಿ ಮಾಜಿ ಅಧ್ಯಕ್ಷರಾದ ಸದಾನಂದ ಕೆ ಶೆಟ್ಟಿಯವರು ತನ್ನ ಧರ್ಮಪತ್ನಿ ಇಂದಿರಾ ಎಸ್ ಶೆಟ್ಟಿಯವರ…
ಮುಂಬಯಿಯಲ್ಲಿ ಚಿಣ್ಣರಬಿಂಬದಂತಹ ಸಂಸ್ಥೆ ಇರುವುದು ನಮ್ಮ ಮಕ್ಕಳ ಅದೃಷ್ಟ. ಎಲ್ಲಾ ಮಕ್ಕಳೂ ಚಿಣ್ಣರಬಿಂಬದ ಕನ್ನಡ ಕಲಿಕೆಯಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಬೇಕು. ಅದೇ ರೀತಿ ಬೇರೆ ಬೇರೆ ಸ್ಪರ್ಧೆ, ಕಾರ್ಯಕ್ರಮಗಳಲ್ಲಿಯೂ ಧೈರ್ಯದಿಂದ ಭಾಗವಹಿಸಬೇಕು. ಮಕ್ಕಳ ಸುಂದರ ವ್ಯಕ್ತಿತ್ವಕ್ಕೆ ಕನ್ನಡಿಯಂತೆ ಚಿಣ್ಣರಬಿಂಬ ಸಂಸ್ಥೆ ಪ್ರಕಾಶ್ ಭಂಡಾರಿ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಅದರ ಹಿಂದೆ ನಿಮ್ಮ ಶ್ರಮವೂ ಇರಬೇಕು. ಪ್ರತಿ ದಿನ ಅಭ್ಯಾಸ ಮಾಡಿದರೆ ಕಲಿಕೆ ಕಷ್ಟ ವಾಗುವುದಿಲ್ಲ. ನಮ್ಮಲ್ಲಿ ಎಳವೆಯಲ್ಲಿಯೇ ಒಳ್ಳೆಯ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಪಾಲಕರು ಮಕ್ಕಳಿಗೆ ಕಷ್ಟದ ಅರಿವೂ ಆಗದಂತೆ ಸಾಕಬೇಕು ಎನ್ನುವುದು ಸರಿಯಲ್ಲ. ಅವರಿಗೆ ಅಗತ್ಯವಾಗಿ ಬೇಕಾದುದನ್ನೆಲ್ಲ ನೀಡಬೇಕೇ ಹೊರತು ಕೇಳಿದ್ದನ್ನೆಲ್ಲಾ ತಕ್ಷಣ ಸಿಗುವಂತೆ ಮಾಡಬಾರದು. ಅವರಿಗೆ ಜೀವನದಲ್ಲಿ ಕಷ್ಟ ಬಂದಾಗ ಅದನ್ನು ಎದುರಿಸುವ ರೀತಿಯನ್ನು ತಿಳಿಸುವುದು ಪಾಲಕರ ಕರ್ತವ್ಯ ಎಂದು ಮಕ್ಕಳಿಗೂ, ಪಾಲಕರಿಗೂ ಶಿಕ್ಷಣದ ಮೌಲ್ಯದೊಂದಿಗೆ ಜೀವನಪಾಠದ ಅಗತ್ಯದ ಕುರಿತು ಸರಳವಾಗಿ ತಿಳಿಸಿದರು. ಅವರು ಮಾತನ್ನು ಮುಂದುವರೆಸುತ್ತಾ, ನಮ್ಮ ಸಂಸ್ಕೃತಿ ಎಂದರೆ ಬೇರೇನೂ ಅಲ್ಲ. ನಮ್ಮ ಒಳ್ಳೆಯ ನಡೆ, ನುಡಿ, ಆಚಾರ…
‘ಭತ್ತದ ತಳಿಯ ಕಾವಲುಗಾರ’ ಈ ಪುಸ್ತಕ ಮರೆತು ಹೋಗುತ್ತಿರುವ ಅನ್ನ ದಾರಿಯ ಹಾದಿಯನ್ನು ಮತ್ತೆ ನಮ್ಮ ಕೈಗೆ ಒಪ್ಪಿಸುವ ಪ್ರಯತ್ನ. ಅನ್ನವನ್ನು ಕೇವಲ ಆಹಾರವಾಗಿ ಅಲ್ಲ, ಒಂದು ಜೀವ ಸಂಸ್ಕೃತಿಯಾಗಿ ನೋಡುವ ದೃಷ್ಟಿಯನ್ನು ಪುನರುಜ್ಜೀವನಗೊಳಿಸುವ ಪ್ರಯತ್ನ. ಭತ್ತ ಎನ್ನುವುದು ಕೇವಲ ಒಂದು ಬೆಳೆ ಅಲ್ಲ, ಅದು ನೆಲದ ಉಸಿರು. ಮಣ್ಣಿನ ನೆನಪು. ಮಳೆ, ಬೆವರು, ಹಸಿವು,ಸೂರ್ಯ, ತಾಳ್ಮೆ, ನಿರೀಕ್ಷೆ, ಪೂರ್ವ ಪರಂಪರೆ ಇವೆಲ್ಲವೂ ಸೇರಿ ರೂಪುಗೊಳ್ಳುವ ಒಂದು ಸಂಸ್ಕೃತಿಯ ಸಂಕೇತ. ಸಾವಿರಾರು ವರ್ಷಗಳ ಕಾಲ ರೈತರು ತಮ್ಮ ಅನುಭವದಿಂದ ಕಾಪಾಡಿಕೊಂಡು ಬಂದ ತಳಿ ವೈವಿಧ್ಯ ಇಂದು ನಿಧಾನವಾಗಿ ನಮ್ಮ ಕೈಗಳಿಂದ ಜಾರಿ ಹೋಗುತ್ತಿದೆ. ಸುಲಭದ ದಾರಿಯ ಹುಡುಕಾಟದಲ್ಲಿ, ಅಧಿಕ ಇಳುವರಿಯ ಮರುಳು ಜಾಲದಲ್ಲಿ, ನಾವು ನಮ್ಮದೇ ಮೂಲಬಲವನ್ನು ಮರೆತಿದ್ದೇವೆ. ಈ ಮರೆವಿನ ಮಧ್ಯೆ, ಒಂದು ಪುಟ್ಟ ಗುಡ್ಡೆಯ ತಟ್ಟಿನ ಮೇಲಿಂದ, ಹತ್ತಿಪ್ಪತ್ತು ಸೆಂಟ್ಸ್ ಜಾಗದಿಂದ, ಒಂದು ಮನುಷ್ಯ ಇಡೀ ದೇಶಕ್ಕೆ ಒಂದು ಜಾಣ್ಮೆಯ ಗಂಟೆ ಹೊಡೆಯುತ್ತಾನೆ. ಅವರೇ ಸತ್ಯನಾರಾಯಣ ಬೆಳೇರಿ. ಈ…
ಬಂಟ್ವಾಳ ತಾಲೂಕಿನ ಮೂಡನಡುಗೋಡು ಗ್ರಾಮದ ನಡ್ಯೋಡಿಗುತ್ತು ಕೀರ್ತಿಶೇಷ ನೋಣಯ್ಯ ಶೆಟ್ಟಿಯವರ ಜನ್ಮ ಶತಾಭ್ಧಿ ವರ್ಷಾಚರಣೆಯ ಸುಸಂಧರ್ಭದಲ್ಲಿ ಕುಟುಂಬಿಕರು ಆರಾಧನೆ ಮಾಡಿಕೊಂಡು ಬಂದ ಕೊಡಮಣಿತ್ತಾಯ, ಪಿಲಿಚಾಮುಂಡಿ, ಅಣ್ಣಪ್ಪ ಪಂಜುರ್ಲಿ, ರಕ್ತೇಶ್ವರಿ, ಮೈಸಂದಾಯ ಹಾಗೂ ಪರಿವಾರ ಧೈವಗಳಿಗೆ ಧರ್ಮನೇಮವು ನಡ್ಯೋಡಿಗುತ್ತು ಧರ್ಮಚಾವಡಿಯಲ್ಲಿ ಕುಟುಂಬದ ಹಿರಿಯರ ನೇತೃತ್ವದಲ್ಲಿ ಮಾರ್ಚ್ 8 ರಂದು ವಿಜೃಂಭಣೆಯಿಂದ ನಡೆಯಿತು. ಫೆಬ್ರವರಿ 26 ರಂದು ಚಪ್ಪರ ಮುಹೂರ್ತ ನಡೆದು, ಮಾರ್ಚ್ 7 ರಂದು ನಾಗಬನದಲ್ಲಿ ತಂಬಿಲ, ರಕ್ತೇಶ್ವರಿಗೆ ಪರ್ವ, ಮನೆಯಲ್ಲಿ ಗಣಹೋಮ, ಚಾವಡಿಯಲ್ಲಿ ದೈವಗಳಿಗೆ ನವಕಲಶ, ಪ್ರಧಾನ ಹೋಮ, ಕಲಶಾಭಿಷೇಕ, ಪರ್ವಪೂಜೆ, ಪರಿವಾರ ದೈವಗಳಿಗೆ ಪರ್ವ ಪೂಜೆ ನಡೆಯಿತು. ಮಾರ್ಚ್ 8 ರಂದು ಶಾರಿ ಹಾಕಿ ಗೊನೆ ಕಡಿದು ತೋರಣ ಮುಹೂರ್ತ ನಡೆಯಿತು. ಬೆಳಿಗ್ಗೆ 10 ಗಂಟೆಗೆ ಕೊಡಮಣಿತ್ತಾಯ ಮತ್ತು ಪಂಜುರ್ಲಿ ದೈವಗಳಿಗೆ ದರ್ಶನ ಸೇವೆ ನಡೆದು ನಂತರ ಕೊಡಮಣಿತ್ತಾಯ, ಪಿಲಿಚಾಮುಂಡಿ ದೈವಗಳ ನೇಮ ನಡೆದು ಮದ್ಯಾಹ್ನ ಅನ್ನ ಸಂತರ್ಪಣೆ ನಡೆಯಿತು. ಸಂಜೆ 4:00ಗೆ ಅಣ್ಣಪ್ಪ ಪಂಜುರ್ಲಿ ದೈವದ ನೇಮ, ಮೈ…
ಅದ್ಯಪಾಡಿ ಶ್ರೀ ನೀಲಕಂಠ ಉಮಾಮಹೇಶ್ವರ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಭಾಗವಹಿಸಿ ದೇವರ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಕ್ಷೇತ್ರದ ಅರ್ಚಕರು ಐಕಳ ಹರೀಶ್ ಶೆಟ್ಟಿಯವರನ್ನು ದೇವರ ಪ್ರಸಾದ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಜೊತೆ ಕಾರ್ಯದರ್ಶಿ ಚಂದ್ರಹಾಸ್ ಡಿ. ಶೆಟ್ಟಿ ರಂಗೋಲಿ, ಕ್ಷೇತ್ರದ ಆಡಳಿತ ಮೊಕ್ತೇಸರರಾದ ಮಂಜುನಾಥ್ ಭಂಡಾರಿ ಶೆಡ್ಡೆ, ಸಂತೋಷ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ ಮತ್ತು ಇನ್ನಿತರರು ಉಪಸ್ಥಿತರಿದ್ದರು.
ನಮ್ಮ ಬೇರುಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಮನುಷ್ಯನ ಜೀವನ ನಾಣ್ಯದಂತೆ; ಒಂದು ಮುಖ ಲೌಕಿಕವಾದರೆ ಇನ್ನೊಂದು ಆಧ್ಯಾತ್ಮ. ಅಭಂಗ ಎಂದರೆ ವಚನ; ವಚನ ಎಂದರೆ ಅಭಂಗ. ಬಸವಣ್ಣನವರ ಕಾಲದ 60-70 ವರ್ಷಗಳ ನಂತರ ಏಕತಾರಿಯೊಂದಿಗೆ ಅಭಂಗ ಬಂದಿತು. ಕೈಯಲ್ಲಿ ತಂಬೂರಿ, ಕಾಲಿಗೆ ಗೆಜ್ಜೆ ಕಟ್ಟಿ ದಾಸರು ಕೀರ್ತನೆಗಳಿಗೆ ಸಂಗೀತದ ರೂಪ ಕೊಟ್ಟರು. ವಚನ, ಅಭಂಗ, ಕೀರ್ತನೆಗಳಿಗೆ ಒಂದು ಮೂಲ ಸ್ರೋತ ಭಕ್ತಿ. ಇವೆಲ್ಲವೂ ಒಂದೇ ಉದ್ದೇಶಕ್ಕಾಗಿ ಬಂದವುಗಳು. ಆದುದರಿಂದ ಎಲ್ಲವೂ ಶ್ರೇಷ್ಠ ಎಂದು ಹಿರಿಯ ವಿದ್ವಾಂಸರು, ಖ್ಯಾತ ಸಂಶೋಧಕರೂ ಆದ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಹೇಳಿದರು. ಅವರು ಮಾರ್ಚ್ 15ರ ರವಿವಾರದಂದು ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ ಮತ್ತು ಮೈಸೂರು ಅಸೋಸಿಯೇಷನ್ ಮುಂಬಯಿ ಇವರ ಸಂಯುಕ್ತ ಆಶ್ರಯದಲ್ಲಿ ಮಾಟುಂಗಾದ ಮೈಸೂರು ಅಸೋಸಿಯೇಷನ್ನ ಸಭಾಂಗಣದಲ್ಲಿ ನಡೆದ “ಮೈಸೂರು ಅಸೋಸಿಯೇಷನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ ಮಾಲಿಕೆ -2026” ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಪಾಲ್ಗೊಂಡು, ‘ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಒಂದು…















