Author: admin
ವಿದ್ಯಾವಿಹಾರ್ ಗಾಮ್ದೇವಿ ಅಂಬಿಕಾ, ಶ್ರೀ ಆದಿನಾಥೇಶ್ವರ, ಶ್ರೀ ಮಹಾಗಣಪತಿ ದೇವಸ್ಥಾನ : ಮೇ 16 ರಂದು ವಾರ್ಷಿಕ ಮಹೋತ್ಸವ
ಮುಂಬಯಿ ವಿದ್ಯಾವಿಹಾರ್ ಪಶ್ಚಿಮದ ಗಾಮ್ದೇವಿ ಅಂಬಿಕಾ ದೇವಿ, ಶ್ರೀ ಆದಿನಾಥೇಶ್ವರ, ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವವು ಮೇ 16 ರಂದು ಶನಿವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಕ್ಷೇತ್ರದ ಪ್ರಧಾನ ಅರ್ಚಕರಾದ ಪೆರ್ಣಂಕಿಲ ಹರಿದಾಸ್ ಭಟ್ ಅವರ ಪೌರೋಹಿತ್ಯದಲ್ಲಿ ಬೆಳಿಗ್ಗೆ 8 ಗಂಟೆಗೆ ಪ್ರಾರ್ಥನೆ, ಆ ಬಳಿಕ ದ್ವಾದಶ ನಾರಿಕೇಳ ಮಹಾಗಣಯಾಗ, ಶ್ರೀ ಮಹಾಗಣಪತಿ ದೇವರಿಗೆ ನವಕ ಪ್ರಧಾನ, ಶ್ರೀ ದುರ್ಗಾ ಪಂಚಮಂತ್ರ ಹೋಮ, ಬೆಳಿಗ್ಗೆ 11 ರಿಂದ ಕಳಶಾಭಿಷೇಕ, ಮಧ್ಯಾಹ್ನ 12 ರಿಂದ ಅಂಬಿಕಾ ಪ್ರಸನ್ನ ಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ. ಸಾಯಂಕಾಲ 6:30 ರಿಂದ ಸಾಂಸ್ಕೃತಿಕ ಕಾರ್ಯಕ್ರಮ, ದುರ್ಗಾ ನಮಸ್ಕಾರ ಪೂಜೆ, ರಂಗ ಪೂಜೆ, ಪಲ್ಲಕ್ಕಿ ಉತ್ಸವ, ರಾತ್ರಿ ಪೂಜೆ ಆ ಬಳಿಕ ಪ್ರಸಾದ ವಿತರಣೆ ಜರಗಲಿದೆ. ಈ ವಾರ್ಷಿಕ ಉತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಅಂಬಿಕಾ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಪ್ರಧಾನ ಅರ್ಚಕರಾದ ವೇದಮೂರ್ತಿ ಪೆರ್ಣಂಕಿಲ ಹರಿದಾಸ್ ಭಟ್, ಅಧ್ಯಕ್ಷರಾದ…
ಬಂಟರ ಸಂಘ ಬೆಂಗಳೂರು ಪ್ರಾರ್ಥನಾ ಮಂದಿರ ಸಮಿತಿಯ ವತಿಯಿಂದ ಏಪ್ರಿಲ್ 05 ರಂದು ಉಚಿತ ಕುಣಿತ ಭಜನಾ ತರಬೇತಿ ತರಗತಿಯನ್ನು ಗೌರವ ಪ್ರಧಾನ ಕಾರ್ಯದರ್ಶಿ ವಿಜಯ್ ಜೆ ಶೆಟ್ಟಿ ಹಾಲಾಡಿ ಅವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು. ಪ್ರಾರ್ಥನಾ ಮಂದಿರ ಸಮಿತಿಯ ಕಾರ್ಯಾಧ್ಯಕ್ಷೆ ಶ್ರೀಮತಿ ಶೋಭಾ ಶೇಖ ಅವರು ಆಗಮಿಸಿದವರಿಗೆ ಸ್ವಾಗತವನ್ನು ಕೋರಿದರು. ಸಂಘದ ಹಿರಿಯ ಸದಸ್ಯರಾದ ಕೊರ್ಗಿ ಆನಂದ ಶೆಟ್ಟಿ ಅವರು ಮಕ್ಕಳಿಗೆ ಕುಣಿತ ಭಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಪ್ರಾರ್ಥನಾ ಮಂದಿರ ಸಮಿತಿ ಸದಸ್ಯರು, ಕುಣಿತ ಭಜನಾ ತರಬೇತುದಾರರಾದ ಶರಣ್ ಶೆಟ್ಟಿ ಅವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಚಂದಗಾಣಿಸಿಕೊಟ್ಟ ಮಕ್ಕಳಿಗೂ ಪೋಷಕರಿಗೂ ಧನ್ಯವಾದಗಳು ಸಮರ್ಪಿಸಿದರು. ನಂತರ ಸಂಘದ ಶ್ರೀ ವರಸಿದ್ದಿ ವಿನಾಯಕ ಪ್ರಾರ್ಥನಾ ಮಂದಿರದಲ್ಲಿ ತರಬೇತುದಾರರು ಮಕ್ಕಳಿಂದ ಭಜನೆ ಆಡಿಸಿ ಕುಣಿತ ಭಜನೆ ತರಬೇತಿ ತರಗತಿಗೆ ಚಾಲನೆ ನೀಡಿದರು. ಪ್ರಾರ್ಥನಾ ಮಂದಿರ ಸಮಿತಿ ಸದಸ್ಯರಾದ ಚಂದ್ರಶೇಖರ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.…
ಮಂಗಳೂರು ನಗರದಲ್ಲಿ ಈಗ ಹೊಸದೊಂದು ಅಪಾಯ ತಲೆ ಎತ್ತಿದೆ. Instagram Follow ಮಾಡಿ, “ಪ್ರಾಂಕ್ ಮಾಡ್ತೀವಿ”, “ಜುಜುಬಿ ಗಿಫ್ಟ್ ಕೊಡ್ತೀವಿ” ಎಂಬ ಹೆಸರಿನಲ್ಲಿ ಯುವತಿಯರನ್ನು ಗುರಿಯಾಗಿಸಿಕೊಂಡು ಕೆಲ ಯುವಕರ ತಂಡಗಳು ಬೀದಿಗಿಳಿದಿವೆ. ಇದು ಕೇವಲ ಮೋಜಲ್ಲ, ಮುಂದಿನ ದಿನಗಳಲ್ಲಿ ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಡುವ ಟ್ರ್ಯಾಪ್. ರೈಲ್ವೆ ಸ್ಟೇಷನ್, ಶಾಪಿಂಗ್ ಮಾಲ್, ಕಾಲೇಜು ರಸ್ತೆ, ಮಾರ್ಕೆಟ್ ಇವೇ ಇವರ ಅಡ್ಡಾಗಳು. ಕೈಯಲ್ಲಿ ಹಣದ ಕಂತೆ, ಇನ್ನೊಂದು ಕೈಯಲ್ಲಿ ಗಿಫ್ಟ್ ಬ್ಯಾಗ್ ಹಿಡಿದುಕೊಂಡು ಯುವತಿಯರ ಗುಂಪನ್ನು ಅಡ್ಡಗಟ್ಟುತ್ತಾರೆ. “ಒಂದು Question ಕೇಳ್ತೀವಿ”, “Follow ಮಾಡಿದ್ರೆ ಗಿಫ್ಟ್” ಅಂತ ಮಾತು ಶುರು ಮಾಡುತ್ತಾರೆ. ನಂಬರ್ ಕೇಳುತ್ತಾರೆ, ಸ್ನೇಹ ಬೆಳೆಸಲು ಯತ್ನಿಸುತ್ತಾರೆ.ಕೆಲವು ಯೂಟ್ಯೂಬರ್ಗಳು “ವೈರಲ್” ಆಗುವ ಹುಚ್ಚಿಗೆ ಬಿದ್ದು ಇದನ್ನೇ ಕಂಟೆಂಟ್ ಮಾಡಿಕೊಂಡಿದ್ದಾರೆ. ಹೆಣ್ಣುಮಕ್ಕಳ ಅನುಮತಿ ಇಲ್ಲದೇ ವಿಡಿಯೋ ಮಾಡಿ, ಅವರ ಮುಜುಗರದ ಕ್ಷಣಗಳನ್ನು ಲಕ್ಷ ಲೈಕ್ಸ್ಗಾಗಿ ಬಳಸಿಕೊಳ್ಳುತ್ತಿದ್ದಾರೆ. ಕಾಸರಗೋಡು, ಉಪ್ಪಳ ಭಾಗದಿಂದಲೂ ಬಂದು ಈ ಕೆಲಸ ಮಾಡುತ್ತಿರುವ ಬಗ್ಗೆ ಸ್ಥಳೀಯರ ದೂರುಗಳಿವೆ. ಟ್ರ್ಯಾಪ್ನ ಮೊದಲ…
ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಬೆಂಗಳೂರಿನ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಕನಕದಾಸರ ಎಲ್ಲಾ ಕೃತಿಗಳನ್ನು ದೇಶದ 14 ಭಾಷೆಗಳಲ್ಲಿ ಅನುವಾದ ಮಾಡುವ ಕಾರ್ಯ ಕೈಗೊಂಡು ಅದೀಗ ತಲಾ ಮೂರು ಸಂಪುಟಗಳಲ್ಲಿ ಅಚ್ಚಾಗಿ ಬಿಡುಗಡೆಗೆ ಸಿದ್ಧವಾಗಿವೆ. ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು 14 ಭಾಷೆಗಳಲ್ಲಿ ಅನುವಾದವಾಗಿ ಸಿದ್ಧವಾದ ಸಂಪುಟಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತಿತರ ಗಣ್ಯರು ಭಾಗವಹಿಸುವರು. ಸಂಸ್ಕೃತಿ ಚಿಂತಕರಾದ ಬಂಜಗೆರೆ ಜಯಪ್ರಕಾಶ್ ಕೃತಿಗಳ ಕುರಿತು ಮಾತನಾಡುವರು. ಕರಾವಳಿ ಕರ್ನಾಟಕದ ಪ್ರಮುಖ ಆಡುಭಾಷೆಯಾಗಿರುವ ತುಳುವಿನಲ್ಲಿ ಕನಕದಾಸರ ಸಮಗ್ರ ಕೃತಿಗಳು ಅನುವಾದವಾಗಿದ್ದು, ಹಿರಿಯ ಸಂಶೋಧಕ ವಿದ್ವಾಂಸರಾದ ಪ್ರೊ| ಎ.ವಿ. ನಾವಡ ತುಳು ಆವೃತ್ತಿಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಮಂದಿ ಹಿರಿಯ ಲೇಖಕರು ಆ ಕೃತಿಗಳನ್ನು ತುಳು ಭಾಷೆಗೆ ಅನುವಾದಿಸಿದ್ದಾರೆ. ದಿ. ಡಾ|ವಾಮನ ನಂದಾವರ, ಡಾ| ವಸಂತ ಕುಮಾರ್ ಪೆರ್ಲ (ಮೋಹನ ತರಂಗಿಣಿ), ಡಾ| ವಸಂತ ಭಾರದ್ವಾಜ, ಪ್ರೊ.ಟಿ ಎ ಎನ್…
ರೋಟರಿ ಕ್ಲಬ್ ಕಾರ್ಕಳದ ‘ಕುಟುಂಬ ಸಮ್ಮಿಲನ’ ಕಾರ್ಯಕ್ರಮದಲ್ಲಿ ಆಳ್ವಾಸ್ ನ ರಂಗ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ| ಜೀವನ್ ರಾಮ್ ಸುಳ್ಯ ಇವರನ್ನು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಲ್ಲಿಸಿದ ಅಪೂರ್ವ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ರೋಟರಿ ಕ್ಲಬ್ ಕಾರ್ಕಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಡಾ| ಜೀವನ್ ರಾಮ್ ಸುಳ್ಯ ಅವರು, ರಂಗಭೂಮಿ ಮತ್ತು ಬದುಕು ಎಂಬ ವಿಷಯದ ಕುರಿತು ಮನಮುಟ್ಟುವಂತೆ ಹಾಗೂ ಚಿಂತನೆಗೆ ದಾರಿ ಮಾಡುವ ರೀತಿಯಲ್ಲಿ ಉಪನ್ಯಾಸ ನೀಡಿದರು. ರಂಗಭೂಮಿಯು ವ್ಯಕ್ತಿತ್ವ ವಿಕಾಸಕ್ಕೆ ನೀಡುವ ಕೊಡುಗೆ. ಕಲೆಯ ಮೂಲಕ ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಅಗತ್ಯತೆ ಮತ್ತು ಜೀವನದಲ್ಲಿ ಶಿಸ್ತು, ಸಂಸ್ಕಾರ ಹಾಗೂ ಸೃಜನಶೀಲತೆಯ ಮಹತ್ವವನ್ನು ಅವರು ವಿವರಿಸಿದರು. ಅವರ ಮಾತುಗಳು ಸಭಿಕರಲ್ಲಿ ವಿಶೇಷ ಸ್ಪಂದನೆ ಮೂಡಿಸಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷರಾದ ರೋ. ಕೆ. ನವೀನ್ ಚಂದ್ರ ಶೆಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರೋ. PDG ಡಾ. ಭರತೇಶ ಆದಿರಾಜ್, ರೋ. ಉದಯಕುಮಾರ್…
ಉಡುಪಿ ಜಿಲ್ಲೆಯ ಕಾಪುವಿನ ಇತಿಹಾಸ ಪ್ರಸಿದ್ಧ ಶ್ರೀ ಬ್ರಹ್ಮ ಮುಗ್ಗೇರ್ಕಳ ಪಿಲಿ ಚಾಮುಂಡಿ ದೈವಸ್ಥಾನದಲ್ಲಿ ಅತ್ಯಂತ ಅಪರೂಪದ ಹಾಗೂ ಸಾಂಪ್ರದಾಯಿಕ ಆಚರಣೆಯಾದ ‘ಕಾಪು ಪಿಲಿ ಕೋಲ’ವು ಇದೇ ಬರುವ ಮೇ 16, 2026ರ ಶನಿವಾರದಂದು ಅತ್ಯಂತ ವೈಭವದಿಂದ ಜರುಗಲಿದೆ. ತುಳುನಾಡಿನ ಭೂತಾರಾಧನೆಯ ಪರಂಪರೆಯಲ್ಲಿ ತನ್ನದೇ ಆದ ವಿಶೇಷ ಸ್ಥಾನ ಹೊಂದಿರುವ ಈ ದ್ವೈವಾರ್ಷಿಕ ಉತ್ಸವವು ಪ್ರಕೃತಿ ಆರಾಧನೆಯ ಸಂಕೇತವಾಗಿದ್ದು, ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಿಸಲಿದೆ. ಈ ವಿಶೇಷ ಆಚರಣೆಯ ಅಂಗವಾಗಿ ಪಿಲಿ ಚಾಮುಂಡಿ ದೈವದ ನೇಮೋತ್ಸವಕ್ಕೂ ಮುನ್ನ ಪರಿವಾರ ದೈವಗಳಾದ ಬಬ್ಬರ್ಯ, ಕೊಡಮಣಿತ್ತಾಯ ಹಾಗೂ ನಂದಿಕೇಶ್ವರ ದೈವಗಳ ನೇಮೋತ್ಸವವು ಶಾಸ್ತ್ರೋಕ್ತವಾಗಿ ನೆರವೇರಲಿದೆ. ಪಿಲಿ ಕೋಲದ ಪ್ರಮುಖ ಆಕರ್ಷಣೆಯೆಂದರೆ ದೈವ ನರ್ತಕ ದೇವಸ್ಥಾನದಿಂದ ಪ್ರಸಾದ ಸ್ವೀಕರಿಸಿದ ನಂತರ ದೈವವು ಆವೇಶಭರಿತವಾಗಿ ಪಂಜರವನ್ನು ಮುರಿದು ಹೊರಬರುವ ದೃಶ್ಯವು ರೋಮಾಂಚನಕಾರಿಯಾಗಿರುತ್ತದೆ. ತದನಂತರ ಸುತ್ತಮುತ್ತಲಿನ ಪರಿಸರದಲ್ಲಿ ದೈವವು ನಡೆಸುವ ‘ಬೇಟೆ’ಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕರಾವಳಿಯ ನಾನಾ ಭಾಗಗಳಿಂದ ಹಾಗೂ ಮುಂಬೈನಂತಹ ನಗರಗಳಿಂದ ಸಾವಿರಾರು ತುಳುವರು ಕಾಪುವಿಗೆ ಆಗಮಿಸಲಿದ್ದಾರೆ.…
ಬ್ರಹ್ಮಾವರ ತಾಲೂಕು ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷರಾಗಿ ಉದ್ಯಮಿ, ದಾನಿ, ಸಾಮಾಜಿಕ ಧಾರ್ಮಿಕ ಮುಂದಾಳು ಪ್ರಸಾದ್ ಹೆಗ್ಡೆ ಮಾರಾಳಿಯವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಈ ವೇದಿಕೆಯು ಸಾವಿರಾರು ಸ್ವಯಂಸೇವಕರ ಮೂಲಕ ಸ್ವಸ್ಥ ಮತ್ತು ಸುಸಂಸ್ಕೃತ ಸಮಾಜ ನಿರ್ಮಾಣಕ್ಕಾಗಿ ಕೆಲಸ ಮಾಡುತ್ತಿದೆ.
ರೋಗಿಗಳ ಆರೈಕೆ ಮತ್ತು ಆರೋಗ್ಯ ಸೇವೆಯಲ್ಲಿ ನರ್ಸ್ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ – ರೋ. ಕೆ ನವೀನ್ ಚಂದ್ರ ಶೆಟ್ಟಿ
ಸಿಸ್ಟರ್ಸ್ ಡೇ ಪ್ರಯುಕ್ತ ವೈದ್ಯಕೀಯ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ನರ್ಸ್ಗಳ ಸೇವೆಯನ್ನು ಗೌರವಿಸುವ ಉದ್ದೇಶದಿಂದ ರೋಟರಿ ಕ್ಲಬ್ ಕಾರ್ಕಳ ವತಿಯಿಂದ ರೋಟರಿ ಹಾಸ್ಪಿಟಲ್ ಹಾಗೂ ಸಿಟಿ ಹಾಸ್ಪಿಟಲ್ ಗೆ ಭೇಟಿ ನೀಡಿ ಸುಮಾರು 45 ಮಂದಿ ಸಿಸ್ಟರ್ಸ್ರಿಗೆ ಹೂವು ಹಾಗೂ ಸಿಹಿ ನೀಡಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷರಾದ ರೋ. ಕೆ. ನವೀನ್ ಚಂದ್ರ ಶೆಟ್ಟಿಯವರು ಮಾತನಾಡಿ, ರೋಗಿಗಳ ಆರೈಕೆ ಮತ್ತು ಆರೋಗ್ಯ ಸೇವೆಯಲ್ಲಿ ನರ್ಸ್ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರ ಪ್ರಾಮಾಣಿಕತೆ, ಸಹನೆ ಹಾಗೂ ಮಾನವೀಯ ಸೇವೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಅಭಿನಂದನಾ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞೆ ರೋ. ಡಾ. ಆಶಾ ಹೆಗ್ಡೆ, ಮಾಜಿ ಅಧ್ಯಕ್ಷ ರೋ. ಇಕ್ಬಾಲ್ ಅಹಮದ್, ರೋ. ಸುಬ್ರಮಣ್ಯ ದೇವಾಡಿಗ, ರೋ. ಚೇತನ್ ಕುಮಾರ್, ಕಾರ್ಯದರ್ಶಿ ರೋ. ಚೇತನ್ ನಾಯಕ್ ಹಾಗೂ ರೋಟರಿ ಹಾಸ್ಪಿಟಲ್ ನ ಅಶ್ಲೋನ್ ಅಲ್ಮಡಿಯಾ ಉಪಸ್ಥಿತರಿದ್ದರು.
ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಉದ್ಯಮಿ ವಿ ಪ್ರಸಾದ್ ಶೆಟ್ಟಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಸುಮಾರು 2 ಲಕ್ಷ ಸದಸ್ಯರನ್ನು ಹೊಂದಿದ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಸಂಸ್ಥೆಯು 1941 ರಲ್ಲಿ ಪ್ರಾರಂಭಗೊಂಡಿದ್ದು, ದೇಶಾದ್ಯಂತ 264 ಶಾಖೆಯನ್ನು ಹೊಂದಿದೆ. ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪ್ರಸಾದ್ ಶೆಟ್ಟಿ, ಕಾರ್ಯದರ್ಶಿಯಾಗಿ ಕೆ ವರುಣ್ ಶೆಟ್ಟಿ, ಕೋಶಾಧಿಕಾರಿಯಾಗಿ ಅಲೆವೂರು ದಿನೇಶ್ ಕಿಣಿ, ಜೊತೆ ಕಾರ್ಯದರ್ಶಿಗಳಾಗಿ ಏಕಾನಾಥ್ ಬೋಳಾರ್ ಮತ್ತು ಅಶ್ವಿನ್ ಕುಂದರ್, ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಸಿದ್ಧರಾಜು, ಜನರಲ್ ಕೌನ್ಸಿಲ್ ಸದಸ್ಯರಾಗಿ ಎನ್.ಎಮ್ ಹೆಗ್ಡೆ, ಉಪಾಧ್ಯಕ್ಷರಾಗಿ ಕೆ ಪ್ರಕಾಶ್ ಬೆಟ್ಟಿನ್ ಹಾಗೂ ರಾಜಗೋಪಾಲ್ ಎಸ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅರುಣ್ ಕುಮಾರ್ ಹೆಗ್ಡೆ, ಹರಿಪ್ರಸಾದ್ ರೈ, ರಂಜನ್ ಕೆ ಮತ್ತು ಎಸ್ ಉಮರ್ ಆಯ್ಕೆಯಾಗಿದ್ದಾರೆ.
ಬಂಟರ ಯಾನೆ ನಾಡವರ ಮಾತೃ ಸಂಘದ 2026 -29 ಸಾಲಿನ ಅಧ್ಯಕ್ಷರಾಗಿ ಕೆ ಅಜಿತ್ ಕುಮಾರ್ ರೈ ಮಾಲಾಡಿ, ಉಪಾಧ್ಯಕ್ಷರಾಗಿ ಕಾವು ಹೇಮನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಕರುಣಾಕರ ಶೆಟ್ಟಿ, ಕೋಶಾಧಿಕಾರಿಯಾಗಿ ಸಿಎ ರಾಮ್ ಮೋಹನ್ ರೈ ಹಾಗೂ ಜೊತೆ ಕಾರ್ಯದರ್ಶಿಯಾಗಿ ಪುಂಚಮೆ ಪದ್ಮನಾಭ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರು ಸೇರಿ 84 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಚುನಾವಣಾ ಆಯೋಗ ಅಧಿಕೃತವಾಗಿ ಘೋಷಿಸಿದೆ. ಮುಖ್ಯ ಚುನಾವಣಾಧಿಕಾರಿಯಾಗಿದ್ದ ವಕೀಲ ಉಮೇಶ್ ಶೆಟ್ಟಿ ಶೆಡ್ಡೆ ಹೊಸಲಕ್ಕೆ ಅವರು ಅಧ್ಯಕ್ಷ ಹಾಗೂ ಇತರ ಪದಾಧಿಕಾರಿಗಳ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಉಪ ಚುನಾವಣಾಧಿಕಾರಿ ವಕೀಲ ನವೀನ್ ಶೆಟ್ಟಿ ಹಾಗೂ ಚುನಾವಣಾಧಿಕಾರಿ ಸದಾಶಿವ ಶೆಟ್ಟಿಯವರು ಉಪಸ್ಥಿತರಿದ್ದರು.















