Author: admin

ಪರಿಸರವನ್ನು ಸಂರಕ್ಷಣೆ ಮಾಡಿ ಸ್ವಚ್ಛ ಸುಂದರ ಪರಿಸರ ನಿರ್ಮಾಣದ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಬೇಕು ಎಂದು ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಜಯರಾಮ ಪ್ರಭು ಎಂದರು. ವಿಶ್ವಕರ್ಮ ಸಹಕಾರ ಬ್ಯಾಂಕ್ ಕಾರ್ಕಳ ಇದರ ವತಿಯಿಂದ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಹಮ್ಮಿಕೊಂಡ ಸ್ವಚ್ಛತಾ ಹೀ ಸೇವಾ ಧ್ಯೇಯದೊಂದಿಗೆ ನಡೆದ ಸ್ವಚ್ಛ ಭಾರತ್ ಶ್ರಮಾಧಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮಾತನಾಡುತ್ತಾ, ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯನ್ನು ಜಾಗೃತಗೊಳಿಸುವಲ್ಲಿ ವಿಶ್ವಕರ್ಮ ಸಹಕಾರಿ ಬ್ಯಾಂಕ್ ಹಮ್ಮಿಕೊಂಡ ಈ ಕಾರ್ಯಕ್ರಮವು ಪ್ರಶಂಸನೀಯ ಎಂದರು. ವಿಶ್ವಕರ್ಮ ಬ್ಯಾಂಕಿನ ಉಪಾಧ್ಯಕ್ಷರಾದ ಜಗದೀಶ್ ಆಚಾರ್ಯ ಪಡುಪಣಂಬೂರು, ನಿರ್ದೇಶಕರಾದ ಭರತ್ ನಿಡ್ಪಳ್ಳಿ ಮತ್ತು ಬಿಜು ಜಯ ,ಲಯನ್ಸ್ ಕ್ಲಬ್ ಕಾರ್ಕಳ ಸಿಟಿ ಅಧ್ಯಕ್ಷ ಗೋಪಾಲ್ ಅಂಚನ್, ಸ್ಥಾಪಕ ಅಧ್ಯಕ್ಷೆ ಜ್ಯೋತಿ ರಮೇಶ್ ಹಾಗೂ ಸದಸ್ಯರು, ರೋಟರಿ ಕ್ಲಬ್ಬಿನ ಕಾರ್ಯದರ್ಶಿ ರೊ.ಚೇತನ್ ನಾಯಕ್, ರೊ.ಶೇಖರ್ ಎಚ್, ರೊ. ಅಂತೋನಿ…

Read More

ಗಣಿತನಗರ: ಇದ್ದ ಬದುಕನ್ನು ಬಿದ್ದು ಹೋಗದಂತೆ, ಸಮಸ್ಯೆಯನ್ನು ಒದ್ದು, ಎಲ್ಲವನ್ನೂ ಗೆದ್ದು ಬರಬೇಕು. ಅದೇ ಜೀವನ, ಅದೇ ಸಂಜೀವನ. ವ್ಯಕ್ತಿ ದೃಷ್ಟಿಕೋನದದಲ್ಲಿ ಬದಲಾವಣೆ ತಂದುಕೊಂಡು ಅವಮಾನವನ್ನು ಸವಾಲಾಗಿ ಸ್ವೀಕರಿಸಿ ಸಕರಾತ್ಮಕ ಯೋಚನೆಯ ಹಠ ನಮ್ಮದಾದಾಗ ಗೆಲುವು ಚಟವಾಗಲು ಸಾಧ್ಯ. ಎಂದು ರಾಜ್ಯ ಶಿಕ್ಷಕ ಪ್ರಶಸ್ತಿ ವಿಜೇತ ಶ್ರೀ ಕೋಟ ನರೇಂದ್ರ ಕುಮಾರ್ ರವರು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‍ನ ಸಹಯೋಗದಲ್ಲಿ ನಡೆಯುತ್ತಿರುವ ಮೌಲ್ಯಸುಧಾ ಮಾಲಿಕೆ-42ರಲ್ಲಿ ‘ದೀಪ ಹಚ್ಚುವ ಮೊದಲು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು. ನಾವೆಷ್ಟೂ ಎಷ್ಟು ಬಾಗುತ್ತೇವೋ ಅಷ್ಟು ಜಾಣರಾಗುತ್ತೇವೆ. ಹಿರಿಯರನ್ನು, ಗುರುಗಳನ್ನು ಗೌರವಿಸುವ ಗುಣ ನಮ್ಮದಾಗಲಿ. ಉತ್ತಮ ಕೇಳುಗರಾದರೆ ಅತ್ಯುತ್ತಮ ಮಾತುಗಾರರಾಗುತ್ತೇವೆ. ನಾವು ಸಂಬಂಧಗಳನ್ನು ಬೆಸೆಯುವ ಸೂಜಿಗಳಾಗ ಬೇಕು ಎಂದರು. ಕಾರ್ಯಕ್ರಮದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಶ್ರೀ ಅನಿಲ್ ಕುಮಾರ್ ಜೈನ್, ಸಿ.ಇ.ಒ ಹಾಗೂ ಪ್ರಾಂಶುಪಾಲರಾದ…

Read More

ಧರ್ಮ ಶ್ರದ್ದೆಯೊಂದಿಗೆ ಮಕ್ಕಳಲ್ಲಿ ಧರ್ಮ ಜಾಗೃತಿ ಮೂಡಿಸುವ ಕೆಲಸ ಅಗಬೇಕಿದೆ. ಧರ್ಮ ಎಂಬುದು ಚಲನಶೀಲವಾದುದು. ಜಗತ್ತಿನಲ್ಲಿ ಧರ್ಮ ಜಾಗೃತಿ ಇನ್ನೂ ದೊಡ್ಡ ಮಟ್ಟದಲ್ಲಿ ಮಾಡುವ ಅಗತ್ಯತೆ ಇದೆ. ರಾಮಾಯಣ ಮತ್ತು ಮಹಾಭಾರತ ಎರಡು ಮಹಾ ಕಾವ್ಯಗಳಲ್ಲಿ ಸೇವೆ ಮತ್ತು ಧರ್ಮ ಎಂಬುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತದೆ. ಧರ್ಮ ಜಾಗೃತಿ ಆದರೆ ಪ್ರಜ್ಞಾವಂತ ಸಮಾಜದ ನಿರ್ಮಾಣ ಮತ್ತು ದೇಶ ಸದೃಡವಾಗಬಹುದು. ನಮ್ಮನ್ನು ನಾವು ತಿಳಿದುಕೊಂಡು ಸಮಾಜದಲ್ಲಿ ಉತ್ತಮ ಕಾರ್ಯ ಸಿದ್ದಿಯೊಂದಿಗೆ ಸೇವಾ ಮನೋಭಾವದಿಂದ ನಡೆದರೆ ಶ್ರೇಷ್ಠನಾಗಬಹುದು. ಸಮಾಜಕ್ಕೆ ಆದರ್ಶವಾಗಬಹುದು. ನಾವು ಬಂದ ದಾರಿ ಮತ್ತು ಮುಂದೆ ಹೋಗುವ ದಾರಿ ಎರಡನ್ನೂ ತಿಳಿದುಕೊಂಡು ಸಿಂಹವಾಲೋಕನ ಮಾಡಿ ನಡೆದರೆ ನಮ್ಮ ಬದುಕು ಅಥವಾ ನಾವು ಕಟ್ಟಿದ ಸಂಘಟನೆ ಸರಿ ದಾರಿಯಲ್ಲಿ ನಡೆಯಲು ಸಾದ್ಯ. ಜ್ಞಾನ ನಮ್ಮ ಬೌದ್ಧಿಕ ತಿಳುವಳಿಕೆ ಮತ್ತು ಕಲಿಕೆಯ ಮೇಲೆ ಅವಲಂಬಿತವಾಗಿದೆ. ಸಾಂಪ್ರದಾಯಿಕ ಜ್ಞಾನ ಸಂಪಾದನೆಯಿಂದ ನಮ್ಮ ಪ್ರಾಪಂಚಿಕ ಸ್ಥಾನಮಾನವನ್ನು ಸಂಪಾದಿಸಲು ಸಾದ್ಯವಾಗುತ್ತದೆ. ಸಂಸ್ಕಾರವಿಲ್ಲದ ಶಿಕ್ಷಣ ಅಸಂಪೂರ್ಣ. ಮಕ್ಕಳು ಚಾರಿತ್ರ್ಯವಂತರಾಗಲು, ಗುಣವಂತರಾಗಲು, ಸಂಸ್ಕಾರವಂತರಾಗಲು…

Read More

ಪುತ್ತೂರು ಕೋ-ಆಪರೇಟಿವ್ ಟೌನ್ ಬ್ಯಾಂಕ್ ವತಿಯಿಂದ ಬ್ಯಾಂಕಿನ ನೂತನ ವೆಬ್‌ಸೈಟ್ ಮತ್ತು ಸ್ಟೇಷನರಿ ಹಾಗೂ ರೆಕಾರ್ಡ್ ರೂಮನ್ನು ಅಧಿಕೃತವಾಗಿ ಉದ್ಘಾಟಿಸಲಾಯಿತು. ಬ್ಯಾಂಕಿನ ಅಧ್ಯಕ್ಷ ಎನ್. ಕಿಶೋರ್ ಕೊಳತ್ತಾಯ ಅವರು ಬ್ಯಾಂಕಿನ ನೂತನ ವೆಬ್‌ಸೈಟನ್ನು ಅಂತರ್ಜಾಲದಲ್ಲಿ ಅನಾವರಣಗೊಳಿಸಿ ಗ್ರಾಹಕರು ಮತ್ತು ಸದಸ್ಯರಿಗೆ ಇದು ಬಹು ಉಪಯುಕ್ತವಾಗಲಿದೆ ಎಂದು ತಿಳಿಸಿದರು. ಸಂಪೂರ್ಣ ಮಾಹಿತಿಯನ್ನು ಒಳಗೊಂಡಿರುವ ಈ ವೆಬ್‌ಸೈಟ್ ಮುಖಾಂತರ ಬ್ಯಾಂಕಿನ ವಿವಿಧ ಸೇವೆಗಳು, ಯೋಜನೆಗಳು ಮತ್ತು ಮಾಹಿತಿ ಸಾರ್ವಜನಿಕರಿಗೆ ಸುಲಭವಾಗಿ ಲಭ್ಯವಾಗಲಿದೆ. ಅವರು ಬ್ಯಾಂಕಿನ ನೂತನ ಸುಸಜ್ಜಿತ ಸ್ಟೇಷನರಿ ಮತ್ತು ರೆಕಾರ್ಡ್ ರೂಮ್ ಕೂಡ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಬ್ಯಾಂಕಿನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಶೇಖರ ಶೆಟ್ಟಿ ಅವರು ನಿರ್ವಹಿಸಿ ಮಾತನಾಡಿ, ನೂತನ ವೆಬ್‌ಸೈಟ್ ಗೆ ಭೇಟಿ ನೀಡುವ ಮೂಲಕ ಬ್ಯಾಂಕಿನ ಸೌಲಭ್ಯಗಳು ಮತ್ತು ಪ್ರಯೋಜನಗಳ ಬಗ್ಗೆ ಜನಸಾಮಾನ್ಯರು ಸಂಪೂರ್ಣ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು. ಬ್ಯಾಂಕಿನ ಉಪಾಧ್ಯಕ್ಷ ಶ್ರೀಧರ ಗೌಡ, ನಿರ್ದೇಶಕರಾದ ಬಪ್ಪಳಿಗೆ ಚಂದ್ರಶೇಖರ ರಾವ್, ಕಿರಣ್ ಕುಮಾರ್ ರೈ, ರಾಜು ಶೆಟ್ಟಿ, ರಾಮಚಂದ್ರ…

Read More

ನಮ ಮಾತೆರ್ಲ ಒಂಜಿ ನೆಂಪು ದೀವೊಡಾಯಿ ವಿಷಯ ಪಂಡ, ಈ ಭೂಮಿದ ಮಿತ್ತ್ ದ ದೇವೆರೆ ಸೃಷ್ಟಿದ 84 ಲಕ್ಷ ಜೀವರಾಶಿಲೆಡ್ ಶ್ರೇಷ್ಠವಾಯಿನ ಜಂತು ಪಂಡ ನಮ ನರಮಾನಿಲು. ನಮಲಾ ಜಂತುವಾದೇ ಪುಟ್ಟಿಯಡಲಾ, ನಂಕ್ ದೇವೆರ್ ಬಾರ್ಯಾತ್ ಮಂಡೆ ಖರ್ಚಿ ಮಲ್ಪು ಬೊಂಡು ಕೊರಿಯೆರ್. ನಮಲಾ ತೀರ್ನ್ಯಾತ್ ಮಟ್ಟ್ ಗ್ ಅವೆನ್ ಗಳಸೊಂದ್ ಉಲ್ಲಲಾ. ಆಂಡ ಇನಿಕೋಡೆಡ್ ನಮ್ಮ ಬುದ್ದಿವಂತಿಗೆ ಹೆಚ್ಚಾದ್ ಬದ್ಕ್ ಡ್ ಕುಸಿ ಕುಸೆಲ್ ಕಮ್ಮಿ ಆವೊಂದುಂಡು. ನಮ ತೆಲಿಪೆರೆಗಾದೇ ನಾಟಕ, ಪಿಚ್ಚರ್ ಗ್ ಪೋವೊಡಾತ್ತ್ಂಡ್. ದಾಯೆ ಪಂಡ ಒಂಜಿ ಇಲ್ಲಡ್ ನಮ ಅಪ್ಪೆ ಜೋಕುಲು, ಬಿನ್ನೆರ್ ಬಿಚ್ಚೆರ್ ಕುಲ್ದ್ ಕುಸಲರ್ತಿ ಪಾತೆರು ದಿನೊಕುಲು ಮದತೇ ಪೋತುಂಡು!. ಅವೆನ್ ನಮ್ಮ ಟಿವಿ, ಮೊಬೈಲ್ಲು ತಿಂದೇ ಬುಡ್ತ!. ಅಂಚ ಮನಸ್ಸ್ ಬುರ್ದು ಒರಿಯಕ್ಕೊರಿ ಪಾತೆರಂದೆ ವರ್ಸೊಲೇ ಕರಿದಿ ಅವ್ವೆತೋ ಇಲ್ಲುಲು ಉಲ್ಲ. ಇನಿಕಾನಗ ಅಪ್ಪೆ ಅಮ್ಮಗ್ ಕಾಲಿ ಜೋಕುಲೆನ್ ಮಲ ಮಲ್ಲ ಸಾಲೆಗ್ ಕಡಪುರ್ದು ಮಲ್ಲ ಜನ ಮಲ್ಪುನ ಮರ್ಲ್!.…

Read More

ಕಂಡ ದತ್ತಿ ಬೊಕ್ಕ ಗೆಟ್ಟಿ ಪೊಡಿ ಮಲ್ಪರೆ (ಪೊಡಿ ಕಂಡ ಆಂಡ), ಅತ್ತ್ ಡ ಗೆಟ್ಟಿ ನೀರ್ ಮಲ್ಪರೆ (ನೀರ ಕಂಡ ಆಂಡ) ಗೋರಿ ಅತ್ತ್ ಡ ಪಲಾಯಿ ‘ಮುಟ್ಟುವ’. ಮುಲ್ಪ ‘ಮುಟ್ಟು’ನು ಪಂಡ ದತ್ತಿನ ಕಂಡೊನು, ಎರ್ಲೆನ (ಅತ್ತ್ ಡ ಬೊರ್ಲೆನ) ನುಗೊಕು ಪಲಾಯಿದ “ಮುನೆ”ನ್ ಕಟ್ ದ್, ಪಲಾಯಿದ ಮಿತ್ತ್ ನರಮಾನಿ ಉಂತುದು, ಎರ್ಲೆಡ ಒಯಿಪಾವುನು. ಅದಗ ಕಂಡದ ಮನ್ನ್ ಸರಿಕೆ ಆವೊಂದು ಪೋಪುಂಡು. ಅವ್ವೇ, ದತ್ತಿನ ಕಂಡದ ಮನ್ನ್ ಸರಿಕೆ (ಸಮಮಟ್ಟ, level) ಮಲ್ಪರೆ ಗಲಸುನ ಆ ಪಲಾಯಿಗ್ ಗೋರಿಪಲಾಯಿ ಪಂದ್ ಪನ್ಪೆರ್. ಆಂಡ ಎಚ್ಚಾದ್ ಬಜೀ ಗೋರಿ ಅತ್ತ್ ಡ ಬಜೀ ಪಲಾಯಿ ಪನ್ಪ. ಆ ಪಲಾಯಿಗ್ ಗೋರಿ ದಾಯೆಗ್ ಪನ್ಪೆರ್? ಕಂಡೊನು ಸರಿಕೆ (ಸಮತಟ್ಟ್) ಮಲ್ಪುನೈಕ್ ಕಂಡ ‘ಗೋರು’ನು ಪನ್ಪೆರ್. ಅಂಚಾದ್, ಗೋರಿಯರೆ ಇತಿನ ಪಲಾಯಿ ಗೋರಿಪಲಾಯಿ. ಕೊಲಕೆದ ಕಂಡ ಗೋರುನು ಬೊಕ್ಕ ಪುಂಡಿ ಬಿತ್ತ್ ಪಾಡುನು. ಪಂಡ ಕೊಳಕೆದ ಕಂಡೊನು ನೀರ್ ಗ್…

Read More

ಉಡುಪಿ ಜಿಲ್ಲಾಮಟ್ಟದ ಬಾಲಕ ಬಾಲಕಿಯರ 14ರ ವಯೋಮಾನದ ವಿಭಾಗದ ಥ್ರೋಬಾಲ್ ಸ್ಪರ್ಧೆಯಲ್ಲಿ ಯಡಾಡಿ ಮತ್ಯಾಡಿಯಲ್ಲಿರುವ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಮೂವರು ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಗಳಿಸಿ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪ ನಿರ್ದೇಶಕರ ಕಚೇರಿ ಮತ್ತು ಬೈಂದೂರು ತಾಲೂಕು ಆಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆಲೂರು ಇವರ ಸಂಯುಕ್ತ ಆಶ್ರಯದಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಎಂಟನೇ ತರಗತಿಯ ತನಿಷ್ಕಾ, ಸಾನಿಕಾ ಮತ್ತು ಪ್ರೇಕ್ಷಾ ಮೈಸೂರು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿನಿಯರು. ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಫಲಕ ಪದಕ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು. ಸುಜ್ಞಾನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ| ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಪ್ರಾಂಶುಪಾಲ ಪ್ರದೀಪ್ ಕೆ ವಿಜೇತ ವಿದ್ಯಾರ್ಥಿನಿಯರನ್ನು ಅಭಿನಂದಿಸಿದ್ದಾರೆ. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಸೂರ್ಯ ಕ್ರೀಡಾಪಟುಗಳಿಗೆ ತರಬೇತಿಯನ್ನು ನೀಡಿದ್ದರು. ಸುಜ್ಞಾನ ಪದವಿ ಪೂರ್ವ…

Read More

‘ಪ್ರತಿ ವರ್ಷ ನವೆಂಬರ್ ತಿಂಗಳಲ್ಲಿ ವಾರವಿಡೀ ಯಕ್ಷಗಾನ ತಾಳಮದ್ದಳೆಗಳನ್ನು ನಡೆಸುವ ಮೂಲಕ ಯಕ್ಷಾಂಗಣ ಸಂಸ್ಥೆ ನಿಜಾರ್ಥದಲ್ಲಿ ಕನ್ನಡದ ನುಡಿ ಹಬ್ಬವನ್ನು ಆಚರಿಸುತ್ತಿದೆ. ಸುಲಲಿತವಾದ ಕನ್ನಡ ಭಾಷೆಯನ್ನು ಯಕ್ಷಗಾನದಂತೆ ಸಶಕ್ತವಾಗಿ ಬಳಸಿಕೊಳ್ಳುವ ಕಲಾ ಮಾಧ್ಯಮ ಬೇರೊಂದಿಲ್ಲ’ ಎಂದು ಅಹ್ಮದ್ ನಗರದ ಉದ್ಯಮಿ ಹಾಗೂ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೆ ಶೆಟ್ಟಿ ಅಹ್ಮದ್ ನಗರ ಹೇಳಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯ ಡಾ. ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದಲ್ಲಿ ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು 2025 ನವೆಂಬರ್ 23ರಿಂದ 29ರ ವರೆಗೆ ನಗರದ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಆಯೋಜಿರುವ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2025’ ಹದಿಮೂರನೇ ವರ್ಷದ ನುಡಿ ಹಬ್ಬ, ತ್ರಯೋದಶ ಸರಣಿಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ‘ಜಿಲ್ಲೆಯ ವಿವಿಧ ಯಕ್ಷಗಾನ…

Read More

ಸಂಶೋಧಕಿ ಡಾ| ಇಂದಿರಾ ಹೆಗ್ಡೆ ಅವರು ತನ್ನ ಜಾನಪದೀಯ ಸಂಶೋಧನೆಯ ಕ್ಷೇತ್ರ ಕಾರ್ಯದ ಅನುಭವಗಳನ್ನು ದಾಖಲಿಸಿರುವ ಮೂಲಕ ಸಂಶೋಧನಾ ಕ್ಷೇತ್ರಕ್ಕೆ ಬರುವವರಿಗೆ ಬಹುದೊಡ್ಡ ಮಾರ್ಗದರ್ಶಿ ಕೊಡುಗೆಯನ್ನು ನೀಡಿದ್ದಾರೆ. ತುಳುವಿನಲ್ಲಿ ಇದೊಂದು ಮಹತ್ವದ ಕೃತಿಯಾಗಲಿದೆ ಎಂದು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ| ಆಶಾಲತಾ ಸುವರ್ಣ ಅವರು ಹೇಳಿದರು. ಅವರು ತುಳು ಭವನದಲ್ಲಿ ಆಯೋಜಿಸಲಾಗಿದ್ದ ಡಾ| ಇಂದಿರಾ ಹೆಗ್ಡೆ ಅವರ ಬಾರಗೆರೆ ಬರಂಬು ತುಳುವೆರೆ ಪುಂಚ ನಾಡೊಂದು ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಜಾನಪದೀಯ ಅಧ್ಯಯನ ಕ್ಷೇತ್ರ ಕಾರ್ಯಗಳ ಸಂದರ್ಭದಲ್ಲಿ ಮಹಿಳೆಯರು ಸಾಕಷ್ಟು ಎಡರು ತೊಡಕುಗಳನ್ನು ಎದುರಿಸುವ ಸಂದರ್ಭ ಉಂಟಾಗುತ್ತಿತ್ತು. ಈ ಎಲ್ಲಾ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಮುನ್ನಡೆದು ಡಾ| ಇಂದಿರಾ ಹೆಗ್ಡೆ ಅವರು ಹಲವು ಮಹತ್ವದ ಕೃತಿಗಳನ್ನು ನೀಡಿರುವುದು ಪ್ರಶಾಂಸನೀಯ ಎಂದು ಡಾ| ಆಶಾಲತಾ ಸುವರ್ಣ ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಡಾ| ಸಮೀರ್ ಮಾಡ, ಹಿರಿಯ ಲೇಖಕಿ ಪ್ರೇಮಾ ಅಜ್ರಿ ಕಾರ್ಕಳ, ಚೇಳ್ಯಾರು ಸರಕಾರಿ ಪದವಿ ಪೂರ್ವ ಕಾಲೇಜಿನ…

Read More

ಸುಜ್ಞಾನ ಎಜುಕೇಶನಲ್‌ ಟ್ರಸ್ಟ್‌ ನವೆಂಬರ್‌ 14ರಂದು ವಿದ್ಯಾರಣ್ಯದ ಅಂಗಳದಲ್ಲಿ ಸುಜ್ಞಾನ ಪಿ.ಯು. ಕಾಲೇಜು ಹಾಗೂ ವಿದ್ಯಾರಣ್ಯದ ವಿದ್ಯಾರ್ಥಿಗಳಿಗಾಗಿ ಅದ್ದೂರಿ ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುಜ್ಞಾನ ಎಜುಕೇಶನಲ್‌ ಟ್ರಸ್ಟ್‌ನ ಅಧ್ಯಕ್ಷ ಡಾ| ರಮೇಶ್ ಶೆಟ್ಟಿ, ಪಿ.ಯು.ಸಿ. ಎನ್ನುವುದು ವಿದ್ಯಾರ್ಥಿಗಳ ಜೀವನದ ಅತ್ಯಂತ ಪ್ರಮುಖ ಘಟ್ಟ. ಹಾಗಾಗಿ ಕಲಿಕೆಯನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬಾರದು ಎಂದು ಕಿವಿ ಮಾತು ಹೇಳಿದರು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಒಂದು ಸುಂದರವಾದ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ವಿದ್ಯಾರ್ಥಿಗಳಲ್ಲಿ ಸಂಕಲ್ಪ ಶಕ್ತಿ ಇರಬೇಕು. ಆಗ ಮಾತ್ರ ಅವರು ಜೀವನದಲ್ಲಿ ಅಭಿವೃದ್ಧಿಯ ಕಡೆಗೆ ಸಾಗಲು ಸಾಧ್ಯ. ಈಗ ಉದ್ಯೋಗದಿಂದ ಹಿಡಿದು ಎಲ್ಲದಕ್ಕೂ ಸ್ಪರ್ಧೆಗಳು ಇವೆ. ಹಾಗಾಗಿ ವಿದ್ಯಾರ್ಥಿಗಳು ತುಂಬಾ ಶ್ರಮ ವಹಿಸಬೇಕು ಮತ್ತು ವಿದ್ಯೆಯ ಕುರಿತು ಆಲಸ್ಯ ಮಾಡಬಾರದು ಎಂದು ಅವರು ನುಡಿದರು. ಬದುಕಿನಲ್ಲಿ ಅವಕಾಶ ಮತ್ತೆ ಸಿಗದು -ಭರತ್ ಶೆಟ್ಟಿ ಸಂಸ್ಥೆಯ ಖಜಾಂಚಿ ಭರತ್‌…

Read More