Author: admin

ಬ್ರಹ್ಮಾವರದ ಸಮೀಪದ ಸಾಲಿಕೇರಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅಗತ್ಯತೆಗಳನ್ನು ಮನಗಂಡು ಸಂಪತ್ ಕುಮಾರ್ ಶೆಟ್ಟಿ ಇವರ ಮಾಲಿಕತ್ವದ ಶ್ರೀ ಕ್ರಷ್ಣಪ್ರಸಾದ್ ಕ್ಯಾಶ್ಯೂ ಸಂಸ್ಥೆಯ ವತಿಯಿಂದ ನೂತನ ತಂಗುದಾಣವನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಲಾಯಿತು. ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಮಾಲಿಕರಾದ ಸಂಪತ್ ಕುಮಾರ್ ಶೆಟ್ಟಿ, ನಮ್ಮ ಉದ್ಯಮ ಕ್ಷೇತ್ರದಲ್ಲಿ 15 ವರ್ಷಗಳಲ್ಲಿ ಸಾಧಿಸಿದ್ದನ್ನು, ಸಾಲಿಕೇರಿಯ ದೈವ ದೇವರ ಅನುಗ್ರಹದಿಂದ ಕೇವಲ ಒಂದು ವರ್ಷದ ಅವಧಿಯಲ್ಲಿ ಸಾಧಿಸಲು ಸಾಧ್ಯವಾಯಿತು. ಈ ಊರು ನಮಗೆ ಬಹಳಷ್ಟು ಕೊಟ್ಟಿದ್ದು, ಆದ್ದರಿಂದ ಊರಿನ ಅಭಿವೃದ್ಧಿ ವಿಚಾರದಲ್ಲಿ ಸದಾ ಜನರೊಂದಿಗೆ ನಿಂತು ಕೆಲಸ ಮಾಡುವ ಬದ್ಧತೆ ನಮ್ಮದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಮಾತನಾಡಿ, ಕೃಷ್ಣ ಪ್ರಸಾದ್ ಕ್ಯಾಶ್ಯೂ ಸಂಸ್ಥೆಯು ಸಾವಿರಾರು ಬಡ ವರ್ಗದ ಜನರಿಗೆ ಉದ್ಯೋಗ ಕಲ್ಪಿಸುವ ಮೂಲಕ ಅವರ ಜೀವನೋಪಾಯಕ್ಕೆ ಭದ್ರತೆ ಒದಗಿಸುತ್ತಿದೆ. ಬಡವರ ಹೊಟ್ಟೆ ತುಂಬಿಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿರುವ ಈ ಸಂಸ್ಥೆಗೆ ವಾರಂಬಳ್ಳಿ ಗ್ರಾಮ ಪಂಚಾಯತ್ ಸದಾ…

Read More

ವಕ್ವಾಡಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸತ್ಯರಂಜನ್ ಹೆಗ್ಡೆ ಮೇಲ್ಮನೆ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಪ್ರಶಾಂತ ಶೆಟ್ಟಿ ಸಣಗಲ್ಲು ಮನೆ ಹಾಗೂ ಅರ್ಚಕ ಪ್ರತಿನಿಧಿಗಳಾದ ಕೃಷ್ಣ ಐತಾಳ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರದೀಪ್ ಪೂಜಾರಿ ನಿಂಗಿಮನೆ, ದೇವೇಂದ್ರ ಆಚಾರ್ ವಿಶ್ವಬ್ರಾಹ್ಮಣಪುರ, ದಿನೇಶ್ ಕುಮಾರ್ ಕಳ್ಳಿಗುಡ್ಡೆ ಹೂವಿನಕೆರೆ ಕ್ರಾಸ್, ರಾಜೀವ ದೇವಾಡಿಗ ದೇವಾಡಿಗರಬೆಟ್ಟು, ಮಮತಾ ಶೆಟ್ಟಿ ತೆಂಕಬೆಟ್ಟು, ಜಯಂತಿ ಕುಲಾಲ್ ಗೋಳಿಹಾಡಿ ಇವರು ಆಯ್ಕೆಯಾಗಿದ್ದಾರೆ.

Read More

ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಐತಿಹಾಸಿಕ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ, ಉದ್ಯಮಿ ಉದಯ ಕುಮಾರ್ ಶೆಟ್ಟಿ ಮುನಿಯಾಲು ಇವರು ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಸಾಗರದ ಶ್ರೀ ಮಾರಿಕಾಂಭಾ ದೇವಳದಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ 9 ದಿನಗಳ ಪರ್ಯಂತ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ನಡೆಯುವ ಸಂಪ್ರದಾಯವಿದ್ದು, ಇದು ಕರ್ನಾಟಕದ ಬಹುದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಲಕ್ಷಾಂತರ ಭಕ್ತರು 9 ದಿನಗಳ ಪರ್ಯಂತ ದೇವಿಯ ದರ್ಶನವನ್ನು ಪಡೆಯುತ್ತಾರೆ. ಈ ಪವಿತ್ರವಾದ ಜಾತ್ರಾ ಮಹೋತ್ಸವದ 8 ನೇ ದಿನದಂದು ಶ್ರೀ ಮಾರಿಕಾಂಬಾ ತಾಯಿಯ ದರ್ಶನವನ್ನು ಪಡೆದರು. ಈ ಸಂದರ್ಭದಲ್ಲಿ ಸಾಗರ ಬಂಟರ ಸಂಘದ ಅಧ್ಯಕ್ಷರಾದ ಸುಧೀರ್ ಶೆಟ್ಟಿ ಹಕ್ಲಾಡಿ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್, ಪ್ರಸನ್ನ ಶೆಟ್ಟಿ, ಮಂಜುನಾಥ ಸಾಗರ ಮತ್ತಿತರರು ಉಪಸ್ಥಿತರಿದ್ದರು.

Read More

ಮನೆ ಮನದಲ್ಲಿ ದೇವರಿದ್ದಾಗ ಜನ ಸೇವೆಗೆ ಮನಸ್ಸಾಗುವುದು. ಪಡುಪರ್ಕಳದ ಹರೀಶ ಶೆಟ್ಟಿಯವರ ಮನೆ ಮನದಲ್ಲಿ ದೇವರು ಇದ್ದಾರೆ ಎಂಬುದಕ್ಕೆ ಅವರ ಮನೆ ಮತ್ತು ಜನಸೇವೆಯ ಮನಸಾಕ್ಷಿಯೇ ಪ್ರಮುಖ ಕಾರಣ ಎಂದು ಕಾಣಿಯೂರು ಮಠಾದೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದರು. ಅವರು ಇತ್ತೀಚೆಗೆ ಪಡುಕುಡೂರು ಪಡುಪರ್ಕಳದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಮುಂಬಯಿಯ ಉದ್ಯಮಿ ಹರೀಶ ಶೆಟ್ಟಿ ಪಡುಕುಡೂರುರವರ ತಂದೆ ಕುರ್ಪಾಡಿ ಸಂಜೀವ ಶೆಟ್ಟಿಯವರ ಸ್ಮರಣಾರ್ಥ ಗೋವು ಕಲ್ಲು ಮತ್ತು ಪ್ರಾಣಿ ಪಕ್ಷಿಗಳ ಬಾಯಾರಿಕೆ ನಿವಾರಣಾ ಕೇಂದ್ರ ಉದ್ಘಾಟಿಸಿ ಆಶೀರ್ವಚನ ನೀಡಿದರು. ಪಡುಪರ್ಕಳದ ಹರೀಶ ಶೆಟ್ಟಿ ಮತ್ತವರ ತಾಯಿ ಸುನಂದ ಶೆಟ್ಟಿ ಹಾಗೂ ಪಡುಪರ್ಕಳ ಕುಟುಂಬಸ್ಥರು ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿದರು. ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ, ಪಡುಪರ್ಕಳ ಶಂಕರ ಶೆಟ್ಟಿ, ಮುನಿಯಾಲು ಗೋಪಿನಾಥ ಭಟ್‌, ಜಗದೀಶ ಹೆಗ್ಡೆ ಪಡುಕುಡೂರು, ಅಶೋಕ ಎಂ. ಶೆಟ್ಟಿ, ಪ್ರಸನ್ನ…

Read More

ಒಮ್ಮೆ ಹನುಮಂತ ನದಿ ತೀರದ ಬಂಡೆ ಮೇಲೆ ಕುಳಿತು ದೊಡ್ಡ ಮಾವಿನ ಹಣ್ಣನ್ನು ಸಂತೋಷದಿಂದ ತಿನ್ನುತ್ತಿದ್ದನು. ಆಗ ಹನುಮಂತನ ಬೆನ್ನ ಹಿಂದೆ ಶನಿದೇವ ನಿಂತಿದ್ದು, ಏ ಹನುಮಾ ನಿನ್ನ ಈ ಸಂತೋಷದ ದಿನಗಳೆಲ್ಲಾ ಇಂದಿಗೆ ಮುಗಿಯಿತು. ಏಕೆಂದರೆ ಇನ್ನು ಸ್ವಲ್ಪ ಸಮಯದಲ್ಲೇ ನಾನು ನಿನ್ನೊಳಗೆ ಪ್ರವೇಶಿಸುವೆ. ಆಗ ಇದೇ ನೋಡು ನಿನಗೆ ಎಂದು ಅಹಂಕಾರದಿಂದ ಹೇಳಿದ. ಹನುಮಂತ ಸ್ವಲ್ಪವೂ ಅಳುಕದೆ, ಏ ಶನಿದೇವ ಕೇಳು ಇದು ನಿನ್ನ ಭ್ರಮೆ ನನ್ನ ದೇಹದಲ್ಲಿ ಪ್ರವೇಶಿಸಲು ನಿನಗೆ ಎಲ್ಲಿಯೂ ಜಾಗವಿಲ್ಲ ಏಕೆಂದರೆ ನನ್ನ ರೋಮ ರೋಮದಲ್ಲೂ ನನ್ನ ಪ್ರಭು ಶ್ರೀರಾಮ ಇದ್ದಾರೆ. ನಿನ್ನಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದನು. ಶನಿದೇವ ತಾನೇನು ಕಡಿಮೆಯೇ ಎಂಬಂತೆ ಮತ್ತಷ್ಟು ಜಂಬದಿಂದ, ಹನುಮ ನಿನಗಿನ್ನೂ ಗೊತ್ತಿಲ್ಲ ನಾನು ಸಾಡೇಸಾತಿ (ಏಳೂವರೆ ವರ್ಷ) ಯಾಗಿ ಹಿಡಿದರೆ ಎರಡೂವರೆ ವರ್ಷ ಪಾದಗಳಲ್ಲಿ ನೆಲೆಸಿ ಅವನನ್ನು ಭ್ರಷ್ಟನನ್ನಾಗಿ ಮಾಡುತ್ತೇನೆ. ಇನ್ನು ಎರಡುವರೆ ವರ್ಷ ತಲೆಯ ಮೇಲೆ ಕೂತು ಅವನ ಬುದ್ಧಿಯನ್ನು ಕೆಡಿಸಿ ಮಂಕು…

Read More

ಮೇ 31 ರಿಂದ ಜೂನ್ 6 ರ ತನಕ ಆಯೋಜಿಸಲಾಗಿರುವ ಲಕ್ಷದ್ವೀಪ ಪ್ರಯಾಣದ ‘ಯಕ್ಷಧ್ರುವ ಸಮುದ್ರಯಾನ’ ಉದ್ಘಾಟನೆ ಬಲ್ಲಾಲ್ ಭಾಗ್ ಬಳಿ ಇರುವ ಪತ್ತುಮುಡಿ ಸೌಧದಲ್ಲಿ ನಡೆಯಿತು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಮಹಾದಾನಿಗಳು ಬರೋಡ ಶಶಿಧರ ಶೆಟ್ಟಿ ಅವರು ಯಕ್ಷಧ್ರುವ ಸಮುದ್ರಯಾನದ ಬ್ಯಾನರನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟನೆಯನ್ನು ನೆರವೇರಿಸಿದರು. ಭವಾನಿ ಶಿಪ್ಪಿಂಗ್ ಸರ್ವಿಸಸ್ ಮುಂಬಯಿ ಇವರ ಸಂಪೂರ್ಣ ಸಹಕಾರದೊಂದಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಹಾಗೂ ತ್ರಿರಂಗ ಸಂಗಮ ಮುಂಬಯಿ ಇವರ ಸಂಯೋಜನೆಯಲ್ಲಿ, ಫೌಂಡೇಶನ್ ನ ಸದಸ್ಯರು, ಊರಿನ, ಮುಂಬಯಿಯ ಹಾಗೂ ವಿದೇಶಗಳ ಹಿತೈಷಿಗಳನ್ನು ಹಡಗಿನಲ್ಲಿ ಒಂದೆಡೆ ಸೇರಿಸಿ ಯಕ್ಷಗಾನ, ತಾಳಮದ್ದಲೆ ಸಹಿತ ಬೇರೆ ಬೇರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬರೋಡ ಶಶಿಧರ ಶೆಟ್ಟಿ ತಿಳಿಸಿದರು. ಮೇ 31 ರಂದು ಮಂಗಳೂರಿನಿಂದ ಮುಂಬಯಿಗೆ ತೆರಳಿ ಜೂನ್ 1 ರಂದು ಹಡಗಿನಲ್ಲಿ ಲಕ್ಷದ್ವೀಪಕ್ಕೆ ತೆರಳಿ ಜೂನ್ 6 ಕ್ಕೆ ಮಂಗಳೂರಿಗೆ ವಾಪಾಸು ಬರಲಾಗುವುದು. ಪ್ರಯಾಣದ ದರವನ್ನು ನಿಗದಿಗೊಳಿಸಲಾಗಿದ್ದು, ಆಸಕ್ತರು ಇದರ…

Read More

ಯೂನಿವರ್ಸಲ್ ಕೋಚಿಂಗ್ ಸೆಂಟರ್ ಸಂಸ್ಥೆ 25ನೇ ವರ್ಷದ ಬೆಳ್ಳಿಹಬ್ಬವನ್ನು ಆಚರಿಸುತ್ತಿದ್ದು, ಕರ್ನಾಟಕ ಸೇರಿ ಭಾರತದಾದ್ಯಂತ 8036 ಕ್ಕೂ ಹೆಚ್ಚು IAS/IPS/KAS/PDO/ESI/PSI ಮತ್ತು ಇತರೇ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಳ್ಳಿಹಬ್ಬ ಮಹೋತ್ಸವದ ಪ್ರಯುಕ್ತ ಕರ್ನಾಟಕದ 100 ಅಭ್ಯರ್ಥಿಗಳಿಗೆ ಉಚಿತ IAS/KAS ಪರೀಕ್ಷಾ ಪೂರ್ವ ತರಬೇತಿ ನೀಡಲು ನಿರ್ಧರಿಸಿದ್ದು, ತರಬೇತಿ ಸಂಪೂರ್ಣ ಉಚಿತವಾಗಿದೆ. ಅಧಿಕಾರಿಗಳಾಗಲು ಬಯಸುತ್ತಿರುವ ಸ್ಪರ್ಧಾರ್ಥಿಗಳಿಗೆ ಉಚಿತ ತರಬೇತಿ ಪಡೆದುಕೊಳ್ಳಲು ಅವಕಾಶ ಇದೆ. ಹೆಚ್ಚಿನ ಮಾಹಿತಿಗಾಗಿ ಯೂನಿವರ್ಸಲ್ ಕೋಚಿಂಗ್ ಸೆಂಟರ್, ಅತ್ತಿಗುಪ್ಪೆ ವಿಜಯನಗರ, ಬೆಂಗಳೂರು : 9686664983, 080- 23396403/409 ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಯೂನಿವರ್ಸಲ್ ಕೋಚಿಂಗ್ ಸೆಂಟರ್ ಸಂಸ್ಥೆಯ ಆಡಳಿತ ನಿರ್ದೇಶಕರಾದ ಆರ್ ಉಪೇಂದ್ರ ಶೆಟ್ಟಿ ತಿಳಿಸಿದ್ದಾರೆ.

Read More

ಮುಂಬಯಿಯ ಖ್ಯಾತ ಹೋಟೆಲ್ ಉದ್ಯಮಿ, ಸಮಾಜಸೇವಕ ನಂದಳಿಕೆ ಕಾಪಿಕೆರೆ ಕೃಷ್ಣ ವೈ ಶೆಟ್ಟಿ ಹಾಗೂ ಉಮಾ ಕೆ ಶೆಟ್ಟಿಯವರ ವೈವಾಹಿಕ ದಾಂಪತ್ಯದ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಅವರ ಮನೆಯಲ್ಲಿ ನಡೆದ ಪೂಜಾ ಕಾರ್ಯಕ್ರಮದ ಸಂದರ್ಭದಲ್ಲಿ ಸಾಣೂರು ರಾಜೇಶ್ವರಿ ನ್ಯಾಷನಲ್ ಸ್ಕೂಲ್ ನ ವತಿಯಿಂದ ಸನ್ಮಾನ ನಡೆಯಿತು. ಈ ಸಂದರ್ಭ ಮಾತನಾಡಿದ ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕೃಷ್ಣ ವೈ ಶೆಟ್ಟಿ ಹಾಗೂ ಉಮಾ ಕೆ ಶೆಟ್ಟಿ ದಂಪತಿಯವರ ಬದುಕು ಆದರ್ಶನೀಯ. ಉದ್ಯಮಿಯಾಗಿ, ಕೃಷಿಕರಾಗಿ ಅವರು ಸಮಾಜಕ್ಕೆ ನೀಡಿದ ಕೊಡುಗೆ ಶ್ಲಾಘನೀಯ ಎಂದರು. ಈ ಸಂಧರ್ಭ ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಸಿಬ್ಬಂದಿಗಳು, ನಂದಳಿಕೆಯ ಪ್ರಮುಖ ಹಾಗೂ ಕೃಷ್ಣ ವೈ ಶೆಟ್ಟಿ ಕುಟುಂಬಸ್ಥರು ಉಪಸ್ಥಿತರಿದ್ದರು.

Read More

ಸಾಮಾನ್ಯವಾಗಿ ರಾಜಕೀಯ ಅಂದ್ರೆ ಕೇವಲ ಆರೋಪ ಪ್ರತ್ಯಾರೋಪ, ಕಾಲೆಳೆಯುವ ತಂತ್ರಗಳು ಅಂತಲೇ ನಾವು ನೋಡಿರುತ್ತೇವೆ. ಆಡಳಿತ ಪಕ್ಷ ಏನೇ ಮಾಡಿದರೂ ಅದನ್ನು ವಿರೋಧಿಸುವುದೇ ಪ್ರತಿಪಕ್ಷಗಳ ಧರ್ಮ ಎಂಬಂತಾಗಿರುವ ಈ ಕಾಲಘಟ್ಟದಲ್ಲಿ, ಅದು ಸರ್ವೇ ಸಾಮನ್ಯ ಆಗಿಬಿಟ್ಟಿದೆ. ಬೈಂದೂರಿನಲ್ಲಿ ನಡೆದ ಒಂದು ಘಟನೆ ರಾಜಕೀಯದ ಸೀಮೋಲ್ಲಂಘನ ಮಾಡಿ ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ನಿಸ್ವಾರ್ಥ ಸೇವೆಯ ದೇಗುಲ ಶ್ರೀ ರಾಘವೇಂದ್ರ ಮಠದ ಸಮೀಪದ ಹೇನಬೇರುವಿನಲ್ಲಿ ತಲೆ ಎತ್ತಿರುವ ಕಟ್ಟಡವೊಂದು ಕೇವಲ ಇಟ್ಟಿಗೆ ಸಿಮೆಂಟ್‌ನ ನಿರ್ಮಾಣವಲ್ಲ. ಅದು ನೊಂದ ಜೀವಗಳಿಗೆ ಆಸರೆಯಾಗುವ ಭರವಸೆಯ ಗೂಡು. ಹೌದು, ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆಯವರ ಮುತುವರ್ಜಿಯಲ್ಲಿ ನಿರ್ಮಾಣವಾಗಿರುವ “ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರ” ಇಂದು ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ವಿಧಿಯಾಟಕ್ಕೆ ಸಿಲುಕಿ, ಬೆನ್ನುಹುರಿ ಸಮಸ್ಯೆಯಿಂದ ಹಾಸಿಗೆ ಹಿಡಿದು ಬದುಕು ಮುಗಿಯಿತೇನೋ ಎಂದು ಕೊರಗುವವರಿಗೆ ಈ ಕೇಂದ್ರ ಮರುಜನ್ಮ ನೀಡುವ ಸಂಜೀವಿನಿಯಾಗಿದೆ. ಶಾಸಕರಾಗಿ ಜವಾಬ್ದಾರಿಯನ್ನು ವಹಿಸಿಕೊಂಡ ನಂತರ ಕ್ಷೇತ್ರದುದ್ದಕ್ಕೂ ಬೆನ್ನುಹುರಿ ಆಘಾತಕ್ಕೊಳಗದವರ ಮನೆಬಾಗಿಲಿಗೆ…

Read More

ಡಾ. ಆಶಾಜ್ಯೋತಿ ರೈಯವರು ಆಸರೆ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷೆ ಮತ್ತು ಧಾರ್ಮಿಕ, ವೈದ್ಯಕೀಯ ರಂಗದಲ್ಲಿ ಸಕ್ರಿಯರಾಗಿರುವ ಸಾಧಕಿ. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ. ಅಜಿತ್ ಕುಮಾರ್ ರೈ ಮಾಲಾಡಿ ಅವರ ಧರ್ಮಪತ್ನಿಯಾದ ಇವರು, ಜನಪರ ಕಾರ್ಯಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಡಾ. ಆಶಾಜ್ಯೋತಿ ರೈಯವರು ಆಸರೆ ಚಾರಿಟೇಬಲ್ ಟ್ರಸ್ಟ್ ಮೂಲಕ ನೊಂದವರಿಗೆ, ರೋಗಿಗಳಿಗೆ ಮತ್ತು ಕಷ್ಟದಲ್ಲಿರುವವರಿಗೆ ಸಹಾಯ ಹಸ್ತ ಚಾಚುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಾಮಾಜಿಕ, ಧಾರ್ಮಿಕ ಮತ್ತು ವೈದ್ಯಕೀಯ ರಂಗದಲ್ಲಿ ಸಕ್ರಿಯರಾಗಿದ್ದು, ಜನಜಾಗೃತಿ ಮತ್ತು ಮಾನವೀಯ ಮೌಲ್ಯಗಳ ಬಗ್ಗೆ ಸಮಾಜಕ್ಕೆ ಸಂದೇಶ ನೀಡುತ್ತಿದ್ದಾರೆ. ಇವರು ವಿವಿಧ ಸಾಂಸ್ಕೃತಿಕ ಮತ್ತು ಆಯುರ್ವೇದ ಸಂಬಂಧಿತ ಸಮಾರಂಭಗಳಲ್ಲಿ ಭಾಗವಹಿಸಿ, ಆಯುರ್ವೇದವನ್ನು ಮೊದಲ ಚಿಕಿತ್ಸಾ ಆಯ್ಕೆಯಾಗಿ ಬಳಸಬೇಕೆಂದು ಉತ್ತೇಜಿಸುತ್ತಾ ಬಂದಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿನ ಸಾಧನೆಗಾಗಿ ಪ್ರತಿಷ್ಠಿತ ವೀರ ರಾಣಿ ಅಬ್ಬಕ್ಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ABRSM- KRMSS, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ಮಂಗಳೂರು ವಿಭಾಗ) ಆಯೋಜಿರುವ ಅಬ್ಬಕ್ಕ 500 ಪ್ರೇರಣಾದಾಯಿ…

Read More