Author: admin

ಇತ್ತೀಚಿನ ಕೆಲವು ಬೆಳವಣಿಗೆಗಳಿಂದ ಮನನೊಂದು ಮುಂಬಯಿಯ ಖ್ಯಾತ ಉದ್ಯಮಿ ಹಾಗೂ ದಾನಿ ಡಾ| ಕನ್ಯಾನ ಸದಾಶಿವ ಶೆಟ್ಟಿ ಅವರು ಸಂಘ ಸಂಸ್ಥೆಗಳ ಸಮಾಜ ಸೇವಾ ಕಾರ್ಯಗಳಿಗೆ ವಿದಾಯ ಘೋಷಿಸಿದ್ದಾರೆ. ಇನ್ಮುಂದೆ ಯಾವುದೇ ಸಂಘ ಸಂಸ್ಥೆಗಳಿಗೆ ದೇಣಿಗೆ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಲೆಕ್ಕಪತ್ರ ವಿಚಾರದಲ್ಲಿ ಉಂಟಾದ ವಿವಾದ ಮತ್ತು ತಮ್ಮ ವಿರುದ್ಧ ನಡೆಯುತ್ತಿರುವ ತೇಜೋವಧೆಯಿಂದ ಬೇಸತ್ತು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ​​ತಮ್ಮ ನೋವನ್ನು ತೋಡಿಕೊಂಡಿರುವ ಡಾ| ಕನ್ಯಾನ, ನಾನು ಬಡತನದ ಹಿನ್ನೆಲೆಯಿಂದ ಬಂದವನು. ಊರು ಬಿಟ್ಟು ಪರ ಊರಿಗೆ ಹೋಗಿ, ಕಷ್ಟಪಟ್ಟು ಉದ್ಯೋಗ ಮಾಡಿ ಉದ್ಯಮ ಕಟ್ಟಿದೆ. ಕಳೆದ ಆರು ವರ್ಷಗಳಿಂದ ಆತ್ಮತೃಪ್ತಿಗಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೆ. ಆದರೆ ಲೆಕ್ಕಪತ್ರ ಕೇಳಿದ್ದನ್ನೇ ದೊಡ್ಡ ತಪ್ಪು ಎಂದು ಬಿಂಬಿಸಿ ನನ್ನ ತೇಜೋವಧೆ ಮಾಡಲಾಗುತ್ತಿದೆ. ಇದು ಕೋಲು ಕೊಟ್ಟು ಪೆಟ್ಟು ತಿನ್ನುವ ಪರಿಸ್ಥಿತಿಯಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ​ಫೆಬ್ರವರಿ 16 ರಂದು ಮುಂಬಯಿಯಲ್ಲಿ ದಾನಿಗಳು…

Read More

ಕಳೆದ ಕೆಲವು ದಿನಗಳಿಂದ ಕೆಲವು ಮಾಧ್ಯಮ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿಗಳನ್ನು ನೀವೆಲ್ಲರೂ ಗಮನಿಸಿರುತ್ತೀರಿ. ಕಾಸರಗೋಡು ಜಿಲ್ಲೆಯ ಕೂಳೂರು ಗ್ರಾಮದ ಪ್ರತಿಷ್ಠಿತ ಉದ್ಯಮಿಗಳು ಹಾಗೂ ಕೊಡುಗೈ ದಾನಿಗಳಾದ ಡಾ| ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರ ಮೇಲೆ ನಡೆಯುತ್ತಿರುವ ಅಪಪ್ರಚಾರ ಹಾಗೂ ಇಲ್ಲಸಲ್ಲದ ಮಾನಹಾನಿ ಹಾಗೂ ಆರೋಪಗಳು ಸಾರ್ವಜನಿಕವಾಗಿ ಚರ್ಚೆಯಾಗಿರುವುದು ತುಂಬಾ ಬೇಸರದ ಸಂಗತಿ ಎಂದು ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಬಿ. ಸುಬ್ಬಯ ರೈ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ರಾಜರಾಜೇಶ್ವರಿ ದೇವಸ್ಥಾನ ದಬಾರ್ ಕಟ್ಟೆ ಇದರ ಆಡಳಿತ ಮೊಕೇಸರರಾದ ಕೆ.ಕೆ. ಶೆಟ್ಟಿ ಕುತ್ತಿಕ್ಕಾರು ಮಾತನಾಡಿ, ಕೆಲವು ದಿನಗಳಿಂದ ನಡೆಯುತ್ತಿರುವ ಘಟನೆಗಳಿಂದ ಮನನೊಂದು ಕುಳೂರು ಕನ್ಯಾನ ಡಾ| ಸದಾಶಿವ ಶೆಟ್ಟಿಯವರು ಪತ್ರಿಕಾ ಪ್ರಕಟಣೆಯೊಂದನ್ನು ನೀಡಿರುವುದು ಸಮಸ್ತ ಕಾಸರಗೋಡು ಜಿಲ್ಲೆಯ ಬಂಟ ಬಾಂಧವರಿಗೆ ಆಘಾತ ಉಂಟು ಮಾಡಿರುತ್ತದೆ. ಕಾಸರಗೋಡಿನ ಬಂಟರು ಎಲ್ಲರೂ ಒಗ್ಗಟ್ಟಿನಿಂದ ಕನ್ಯಾನ ಸದಾಶಿವ ಶೆಟ್ಟಿಯವರಿಗೆ ಆಗಿರುವ ನೋವಿನಲ್ಲಿ ನಾವು ಪೂರ್ಣ ಪ್ರಮಾಣದಲ್ಲಿ ಭಾಗಿಯಾಗಿರುತ್ತೇವೆ ಎಂದರು. ಮುಂದಿನ ದಿನಗಳಲ್ಲಿ ಡಾ| ಕನ್ಯಾನ…

Read More

ಪಡುಬಿದ್ರಿಯ ಅಗ್ರಜ ಮಂಜುಶ್ರೀ ಕಟ್ಟಡದಲ್ಲಿ ಪ್ರಾರಂಭಿಸಲಾದ ಶಮಿತ್ ಶೆಟ್ಟಿ ನೇತೃತ್ವದ ಮಂಗಳೂರು ಗ್ರೂಪ್ ನ 25ನೇ ಶಾಖೆ ‘ಸೆವೆನ್ತ್ ಹೆವನ್ ಕೇಕ್ ಶಾಪ್’ ಅನ್ನು ಫೆಬ್ರವರಿ 15ರಂದು ಕಾಪು ಕ್ಷೇತ್ರದ ಜನಪ್ರಿಯ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿ, ತುಳುನಾಡಿನ ಯುವಕ ಶಮಿತ್ ಶೆಟ್ಟಿ ಅವರು ಸೆವೆನ್ತ್ ಹೆವನ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಅವರಿಗೆ ಶುಭವಾಗಲಿ ಎಂದು ಹಾರೈಸಿದರು. ಅಲೆವೂರು ದೇವಿ ಪ್ರಸನ್ನ ಉಪಾಧ್ಯಾಯ ಶುಭಾಶಯಗೈದರು. ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ವಂದನಾ ರೈ ಮಾತನಾಡಿ, ರುಚಿಗೆ ಸೆವೆನ್ತ್ ಹೆವನ್ ಮನೆ ಮಾತಾಗಲಿ ಎಂದರು. ಯೂಟ್ಯೂಬರ್ ಹೆಗ್ಗದ್ದೆ ಸಂದೀಪ್ ಶೆಟ್ಟಿ ಅವರು ಮಾತನಾಡಿದರು. ನೆರೆದ ಗಣ್ಯರನ್ನು ಗೌರವಿಸಲಾಯಿತು. ಕಿರಣ್, ಸುಧಾಕರ ಶೆಟ್ಟಿ, ದೇವಕಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕೃತಿಶ್ರೀ ಶೆಟ್ಟಿ ಪ್ರಾಸ್ತಾವಿಸಿ, ಮುಂಬಯಿ ಮೂಲದ ಸಸ್ಯಾಹಾರಿ ಕೇಕ್ ಶಾಪ್ ಇದಾಗಿದ್ದು, ಇಲ್ಲಿ ಏಳು ನಿಮಿಷದಲ್ಲಿ ಕೇಕ್ ತಯಾರಿಸಿ ಕೊಡಲಾಗುವುದು. ಮುಂದೆ ಬ್ರಹ್ಮಾವರ, ರಾಣೆಬೆನ್ನೂರು ಮುಂತಾಡೆದೆಗಳಲ್ಲಿ ಶಾಖೆಗಳು ತೆರೆಯಲಿವೆ ಎಂದರು.…

Read More

ಕಾರ್ಕಳ : ರಾಷ್ಟಮಟ್ಟದಲ್ಲಿ ಇಂಜಿನಿಯರಿ0ಗ್ ಪ್ರವೇಶಕ್ಕಾಗಿ ಎನ್.ಟಿ..ಎ ನಡೆಸಿದ ಜೆಇಇ ಮೈನ್(ಬಿ.ಟೆಕ್)-೨೦೨೬ರ ಪ್ರಥಮ ಹಂತದ ಫಲಿತಾ0ಶದಲ್ಲಿ ಜ್ಞಾನಸುಧಾ ಪಿ.ಯು ಕಾಲೇಜಿನ ೮ ವಿದ್ಯಾರ್ಥಿಗಳು ೯೯ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿ ಉತ್ತಮ ಸಾಧನೆ ಮಾಡಿರುತ್ತಾರೆ. ಟಾಪರ್ ಆಗಿ ೯೯.೯೦೫೫೧೯೯ ಪರ್ಸಂಟೈಲ್‌ನೊAದಿಗೆ ಕನಿಷ್ಕ್ ಅಮೀನ್ ಹೊರಹೊಮ್ಮಿದ್ದಾರೆ. ೨೨ ವಿದ್ಯಾರ್ಥಿಗಳು ೯೮ ಪರ್ಸಂಟೈಲ್‌ಗಿ0ತ ಅಧಿಕ, ೪೮ ವಿದ್ಯಾರ್ಥಿಗಳು ೯೭ ಪರ್ಸಂಟೈಲ್‌ಗಿAತ ಅಧಿಕ, ೭೪ ವಿದ್ಯಾರ್ಥಿಗಳು ೯೬ ಪರ್ಸಂಟೈಲ್‌ಗಿ0ತ ಅಧಿಕ, ೯೪ ವಿದ್ಯಾರ್ಥಿಗಳು ೯೫ ಪರ್ಸಂಟೈಲ್‌ಗಿ0ತ ಅಧಿಕ ಹಾಗೂ ೨೨೦ ವಿದ್ಯಾರ್ಥಿಗಳು ೯೦ ಪರ್ಸಂಟೈಲ್‌ಗಿ0ತ ಅಧಿಕ ಫಲಿತಾಂಶ ತಮ್ಮದಾಗಿಸಿಕೊ0ಡಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ೩.೪೨ಲಕ್ಷ ರೂಪಾಯಿ ಟ್ರಸ್ಟಿನಿಂದ ಘೋಷಣೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿಯವರು ೯೭ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ೩.೪೨ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನವನ್ನು ಘೋಷಿಸಿದ್ದಾರೆ. ಜೆ.ಇ.ಇ ಮೈನ್ ಪ್ರಥಮ ಹಂತದ ಫಲಿತಾಂಶದಲ್ಲಿ ೯೯.೯೦೫೫೧೯೯ ಪರ್ಸಂಟೈಲ್ ಪಡೆದ ಕನಿಷ್ಕ್ ಅಮೀನ್‌ರವರಿಗೆ ೧ ಲಕ್ಷ ರೂಪಾಯಿಯನ್ನು, ೯೯.೮೨೫೪೪೯೯ ಪರ್ಸಂಟೈಲ್ ಪಡೆದ…

Read More

ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯವರು ನಡೆಸುವ ಅತಿ ಕ್ಲಿಷ್ಟಕರವೆನಿಸಿದ ಪರೀಕ್ಷೆಗಳಲ್ಲೊಂದಾದ ಜೆಇಇ ಮೈನ್ಸ್ (ಸೆಷನ್-1) 2026 ನೇ ಸಾಲಿನ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ 102 ಮಂದಿ ವಿದ್ಯಾರ್ಥಿಗಳು 90 ಪರ್ಸೆಂಟೈಲ್ ಗಿಂತ ಅಧಿಕ ಅಂಕವನ್ನು ಪಡೆದು ವಿಶಿಷ್ಟ ಸಾಧನೆ ಗೈದು ಮುಂದಿನ ಹಂತದ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ತೇರ್ಗಡೆಯನ್ನು ಹೊಂದಿದ್ದಾರೆ. ವಿದ್ಯಾರ್ಥಿಗಳಾದ ನಮಿತ್ ಕೃಷ್ಣಮೂರ್ತಿ ಹೆಗಡೆ – 99.4981217 ಪರ್ಸೆಂಟೈಲ್, ನಾಗದೇವ್ ಎಂ.ಜಿ. – 99.3310617 ಪರ್ಸೆಂಟೈಲ್, ಪ್ರಥಮ್ ತಮ್ಮಣ್ಣ ಗೌಡರ್ – 99.1416986 ಪರ್ಸೆಂಟೈಲ್ ಪಡೆದುಕೊಳ್ಳುವ ಮೂಲಕ ವಿಶಿಷ್ಟ ಶ್ರೇಣಿಗಳಿಸಿದ್ದಾರೆ. ತೇಜಸ್ ಆರ್. ಬಿ.- 98.9615457 ನಿನಾದ್ ರಾಜೇಶ್ ನಾಯ್ಕ್- 98.9463580 ಧನುಷ್ ಹೆಚ್. ಎ.- 98.5706065 ಸಂವಿತ್‌ ಅಮಿತ್ ಗೋಕರ್ಣ- 98.5706065 ದೃಶ್ಯ್‌- 98.4130581 ಸುಕ್ಷಿತ್ ಗಿರೀಶ್ ಗೌಡ- 98.3503880 ತೇಜಸ್ ಎನ್. ಇ. – 98.3227894 ತೇಜಸ್ ಹೆಗಡೆ ಎಚ್. ಡಿ.-…

Read More

ಬ್ರಹ್ಮಾವರದ ಸಮೀಪದ ಸಾಲಿಕೇರಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅಗತ್ಯತೆಗಳನ್ನು ಮನಗಂಡು ಸಂಪತ್ ಕುಮಾರ್ ಶೆಟ್ಟಿ ಇವರ ಮಾಲಿಕತ್ವದ ಶ್ರೀ ಕ್ರಷ್ಣಪ್ರಸಾದ್ ಕ್ಯಾಶ್ಯೂ ಸಂಸ್ಥೆಯ ವತಿಯಿಂದ ನೂತನ ತಂಗುದಾಣವನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಲಾಯಿತು. ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಮಾಲಿಕರಾದ ಸಂಪತ್ ಕುಮಾರ್ ಶೆಟ್ಟಿ, ನಮ್ಮ ಉದ್ಯಮ ಕ್ಷೇತ್ರದಲ್ಲಿ 15 ವರ್ಷಗಳಲ್ಲಿ ಸಾಧಿಸಿದ್ದನ್ನು, ಸಾಲಿಕೇರಿಯ ದೈವ ದೇವರ ಅನುಗ್ರಹದಿಂದ ಕೇವಲ ಒಂದು ವರ್ಷದ ಅವಧಿಯಲ್ಲಿ ಸಾಧಿಸಲು ಸಾಧ್ಯವಾಯಿತು. ಈ ಊರು ನಮಗೆ ಬಹಳಷ್ಟು ಕೊಟ್ಟಿದ್ದು, ಆದ್ದರಿಂದ ಊರಿನ ಅಭಿವೃದ್ಧಿ ವಿಚಾರದಲ್ಲಿ ಸದಾ ಜನರೊಂದಿಗೆ ನಿಂತು ಕೆಲಸ ಮಾಡುವ ಬದ್ಧತೆ ನಮ್ಮದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಮಾತನಾಡಿ, ಕೃಷ್ಣ ಪ್ರಸಾದ್ ಕ್ಯಾಶ್ಯೂ ಸಂಸ್ಥೆಯು ಸಾವಿರಾರು ಬಡ ವರ್ಗದ ಜನರಿಗೆ ಉದ್ಯೋಗ ಕಲ್ಪಿಸುವ ಮೂಲಕ ಅವರ ಜೀವನೋಪಾಯಕ್ಕೆ ಭದ್ರತೆ ಒದಗಿಸುತ್ತಿದೆ. ಬಡವರ ಹೊಟ್ಟೆ ತುಂಬಿಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿರುವ ಈ ಸಂಸ್ಥೆಗೆ ವಾರಂಬಳ್ಳಿ ಗ್ರಾಮ ಪಂಚಾಯತ್ ಸದಾ…

Read More

ವಕ್ವಾಡಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸತ್ಯರಂಜನ್ ಹೆಗ್ಡೆ ಮೇಲ್ಮನೆ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಪ್ರಶಾಂತ ಶೆಟ್ಟಿ ಸಣಗಲ್ಲು ಮನೆ ಹಾಗೂ ಅರ್ಚಕ ಪ್ರತಿನಿಧಿಗಳಾದ ಕೃಷ್ಣ ಐತಾಳ್ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪ್ರದೀಪ್ ಪೂಜಾರಿ ನಿಂಗಿಮನೆ, ದೇವೇಂದ್ರ ಆಚಾರ್ ವಿಶ್ವಬ್ರಾಹ್ಮಣಪುರ, ದಿನೇಶ್ ಕುಮಾರ್ ಕಳ್ಳಿಗುಡ್ಡೆ ಹೂವಿನಕೆರೆ ಕ್ರಾಸ್, ರಾಜೀವ ದೇವಾಡಿಗ ದೇವಾಡಿಗರಬೆಟ್ಟು, ಮಮತಾ ಶೆಟ್ಟಿ ತೆಂಕಬೆಟ್ಟು, ಜಯಂತಿ ಕುಲಾಲ್ ಗೋಳಿಹಾಡಿ ಇವರು ಆಯ್ಕೆಯಾಗಿದ್ದಾರೆ.

Read More

ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಐತಿಹಾಸಿಕ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆಯ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ, ಉದ್ಯಮಿ ಉದಯ ಕುಮಾರ್ ಶೆಟ್ಟಿ ಮುನಿಯಾಲು ಇವರು ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವಿಯ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಸಾಗರದ ಶ್ರೀ ಮಾರಿಕಾಂಭಾ ದೇವಳದಲ್ಲಿ ಪ್ರತೀ ಮೂರು ವರ್ಷಕ್ಕೊಮ್ಮೆ 9 ದಿನಗಳ ಪರ್ಯಂತ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ನಡೆಯುವ ಸಂಪ್ರದಾಯವಿದ್ದು, ಇದು ಕರ್ನಾಟಕದ ಬಹುದೊಡ್ಡ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಲಕ್ಷಾಂತರ ಭಕ್ತರು 9 ದಿನಗಳ ಪರ್ಯಂತ ದೇವಿಯ ದರ್ಶನವನ್ನು ಪಡೆಯುತ್ತಾರೆ. ಈ ಪವಿತ್ರವಾದ ಜಾತ್ರಾ ಮಹೋತ್ಸವದ 8 ನೇ ದಿನದಂದು ಶ್ರೀ ಮಾರಿಕಾಂಬಾ ತಾಯಿಯ ದರ್ಶನವನ್ನು ಪಡೆದರು. ಈ ಸಂದರ್ಭದಲ್ಲಿ ಸಾಗರ ಬಂಟರ ಸಂಘದ ಅಧ್ಯಕ್ಷರಾದ ಸುಧೀರ್ ಶೆಟ್ಟಿ ಹಕ್ಲಾಡಿ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್, ಪ್ರಸನ್ನ ಶೆಟ್ಟಿ, ಮಂಜುನಾಥ ಸಾಗರ ಮತ್ತಿತರರು ಉಪಸ್ಥಿತರಿದ್ದರು.

Read More

ಮನೆ ಮನದಲ್ಲಿ ದೇವರಿದ್ದಾಗ ಜನ ಸೇವೆಗೆ ಮನಸ್ಸಾಗುವುದು. ಪಡುಪರ್ಕಳದ ಹರೀಶ ಶೆಟ್ಟಿಯವರ ಮನೆ ಮನದಲ್ಲಿ ದೇವರು ಇದ್ದಾರೆ ಎಂಬುದಕ್ಕೆ ಅವರ ಮನೆ ಮತ್ತು ಜನಸೇವೆಯ ಮನಸಾಕ್ಷಿಯೇ ಪ್ರಮುಖ ಕಾರಣ ಎಂದು ಕಾಣಿಯೂರು ಮಠಾದೀಶ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದರು. ಅವರು ಇತ್ತೀಚೆಗೆ ಪಡುಕುಡೂರು ಪಡುಪರ್ಕಳದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಮುಂಬಯಿಯ ಉದ್ಯಮಿ ಹರೀಶ ಶೆಟ್ಟಿ ಪಡುಕುಡೂರುರವರ ತಂದೆ ಕುರ್ಪಾಡಿ ಸಂಜೀವ ಶೆಟ್ಟಿಯವರ ಸ್ಮರಣಾರ್ಥ ಗೋವು ಕಲ್ಲು ಮತ್ತು ಪ್ರಾಣಿ ಪಕ್ಷಿಗಳ ಬಾಯಾರಿಕೆ ನಿವಾರಣಾ ಕೇಂದ್ರ ಉದ್ಘಾಟಿಸಿ ಆಶೀರ್ವಚನ ನೀಡಿದರು. ಪಡುಪರ್ಕಳದ ಹರೀಶ ಶೆಟ್ಟಿ ಮತ್ತವರ ತಾಯಿ ಸುನಂದ ಶೆಟ್ಟಿ ಹಾಗೂ ಪಡುಪರ್ಕಳ ಕುಟುಂಬಸ್ಥರು ಸ್ವಾಮೀಜಿಯವರ ಪಾದಪೂಜೆ ನೆರವೇರಿಸಿದರು. ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ, ಪಡುಪರ್ಕಳ ಶಂಕರ ಶೆಟ್ಟಿ, ಮುನಿಯಾಲು ಗೋಪಿನಾಥ ಭಟ್‌, ಜಗದೀಶ ಹೆಗ್ಡೆ ಪಡುಕುಡೂರು, ಅಶೋಕ ಎಂ. ಶೆಟ್ಟಿ, ಪ್ರಸನ್ನ…

Read More

ಒಮ್ಮೆ ಹನುಮಂತ ನದಿ ತೀರದ ಬಂಡೆ ಮೇಲೆ ಕುಳಿತು ದೊಡ್ಡ ಮಾವಿನ ಹಣ್ಣನ್ನು ಸಂತೋಷದಿಂದ ತಿನ್ನುತ್ತಿದ್ದನು. ಆಗ ಹನುಮಂತನ ಬೆನ್ನ ಹಿಂದೆ ಶನಿದೇವ ನಿಂತಿದ್ದು, ಏ ಹನುಮಾ ನಿನ್ನ ಈ ಸಂತೋಷದ ದಿನಗಳೆಲ್ಲಾ ಇಂದಿಗೆ ಮುಗಿಯಿತು. ಏಕೆಂದರೆ ಇನ್ನು ಸ್ವಲ್ಪ ಸಮಯದಲ್ಲೇ ನಾನು ನಿನ್ನೊಳಗೆ ಪ್ರವೇಶಿಸುವೆ. ಆಗ ಇದೇ ನೋಡು ನಿನಗೆ ಎಂದು ಅಹಂಕಾರದಿಂದ ಹೇಳಿದ. ಹನುಮಂತ ಸ್ವಲ್ಪವೂ ಅಳುಕದೆ, ಏ ಶನಿದೇವ ಕೇಳು ಇದು ನಿನ್ನ ಭ್ರಮೆ ನನ್ನ ದೇಹದಲ್ಲಿ ಪ್ರವೇಶಿಸಲು ನಿನಗೆ ಎಲ್ಲಿಯೂ ಜಾಗವಿಲ್ಲ ಏಕೆಂದರೆ ನನ್ನ ರೋಮ ರೋಮದಲ್ಲೂ ನನ್ನ ಪ್ರಭು ಶ್ರೀರಾಮ ಇದ್ದಾರೆ. ನಿನ್ನಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದನು. ಶನಿದೇವ ತಾನೇನು ಕಡಿಮೆಯೇ ಎಂಬಂತೆ ಮತ್ತಷ್ಟು ಜಂಬದಿಂದ, ಹನುಮ ನಿನಗಿನ್ನೂ ಗೊತ್ತಿಲ್ಲ ನಾನು ಸಾಡೇಸಾತಿ (ಏಳೂವರೆ ವರ್ಷ) ಯಾಗಿ ಹಿಡಿದರೆ ಎರಡೂವರೆ ವರ್ಷ ಪಾದಗಳಲ್ಲಿ ನೆಲೆಸಿ ಅವನನ್ನು ಭ್ರಷ್ಟನನ್ನಾಗಿ ಮಾಡುತ್ತೇನೆ. ಇನ್ನು ಎರಡುವರೆ ವರ್ಷ ತಲೆಯ ಮೇಲೆ ಕೂತು ಅವನ ಬುದ್ಧಿಯನ್ನು ಕೆಡಿಸಿ ಮಂಕು…

Read More