Author: admin

ಬೆಳ್ತಂಗಡಿ ತಾಲೂಕು ಬಂಟರ ಸಂಘದ ಗೌರವ ಮಾರ್ಗದರ್ಶಕರಾದ ಹೆಸರಾಂತ ಉದ್ಯಮಿ, ಸಮಾಜಸೇವಕ ಬರೋಡ ಶಶಿಧರ ಶೆಟ್ಟಿ ಇವರ ಮಾತೃಶ್ರಿಯವರಾದ ಶ್ರೀಮತಿ ಕಾಶಿ ಶೆಟ್ಟಿಯವರ ಸ್ಮರಣಾರ್ಥ ‘ಕಾಶಿ ಸದನ’ ವಸತಿ ಯೋಜನೆಯ ಸಹಾಯ ಹಸ್ತವನ್ನು ಬೆಳ್ತಂಗಡಿ ತಾಲೂಕು ಬಂಟರ ಸಂಘದ ನೇತೃತ್ವದಲ್ಲಿ ತಾಲೂಕಿನ 9 ಬಂಟರ ವಲಯಗಳ ತಲಾ ಒಂದೊಂದು ಅಶಕ್ತ ಕುಟುಂಬಗಳಿಗೆ ನೀಡುವುದೆಂದು ನಿರ್ಣಯ ಮಾಡಲಾಗಿತ್ತು. ಆ ಪ್ರಯುಕ್ತ ಜನವರಿ 31 ಶನಿವಾರದಂದು ಪೂರ್ವಾಹ್ನ 9.30 ಕ್ಕೆ ನಾರಾವಿ ವಲಯ ಕೊಕ್ರಾಡಿ ಗ್ರಾಮದ ಶ್ರೀಮತಿ ಗಿರಿಜಾ ಶೆಟ್ಟಿ ಇವರ ನಿವೇಶನದ ಭೂಮಿ ಪೂಜೆ ನಡೆಯಿತು. ಇದರ ಶಿಲಾನ್ಯಾಸವನ್ನು ಬರೋಡ ಶಶಿಧರ ಶೆಟ್ಟಿ ಇವರು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಜಯಂತ ಶೆಟ್ಟಿ ಭಂಡಾರಿಗುಡ್ಡೆ, ಉದ್ಯಮಿ ಸುರೇಶ್ ಶೆಟ್ಟಿ ಸೂರ್ಯಶ್ರೀ, ವಿಜಯ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಯ ಉಪಾಧ್ಯಕ್ಷರಾದ ಜಯಂತ ಶೆಟ್ಟಿ ಕುಂಟಿನಿ, ಎಂ. ಜಯರಾಮ ಭಂಡಾರಿ, ರಘುರಾಮ ಶೆಟ್ಟಿ ಉಜಿರೆ, ಕಾರ್ಯದರ್ಶಿ ಸುರೇಶ್ ಶೆಟ್ಟಿ ಲಾಯಿಲ, ಕೋಶಾಧಿಕಾರಿ…

Read More

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ವಿಶ್ವಕರ್ಮ ಸಹಕಾರಿ ಬ್ಯಾಂಕ್ ಉಡುಪಿ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆ ವಿಷ್ಣುಮೂರ್ತಿ ಫ್ರೆಂಡ್ಸ್ (ರಿ) ದೊಡ್ಡಣಗುಡ್ಡೆ ಉಡುಪಿ, ವಿಷ್ಣುಮೂರ್ತಿ ಮಹಿಳಾ ಘಟಕ ದೊಡ್ಡಣಗುಡ್ಡೆ ಇವರ ಮುಂದಾಳತ್ವದಲ್ಲಿ ಸಿದ್ಧ ಕಣ್ಣಿನ ಹನಿ ಕಾರ್ಯಕ್ರಮ ಫೆಬ್ರವರಿ 08 ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 12.30 ರವರೆಗೆ ನಡೆಯಲಿರುವುದು. ಮಾನವನ ನಿಜವಾದ ಜ್ಞಾನದ ಬಾಗಿಲು ಎಂದರೆ ಅದು ಕಣ್ಣು. ಅದರ ಸಂರಕ್ಷಣೆ ಅತಿ ಮುಖ್ಯ. ಇಂದಿನ ಆಧುನಿಕ ದಿನಮಾನದಲ್ಲಿ ಸಾಮಾಜಿಕ ಜಾಲತಾಣಗಳು, ಹಾಗೆ ಅತಿಯಾದ ಮೊಬೈಲ್ ವೀಕ್ಷಣೆಯಿಂದ ಕಣ್ಣಿಗೆ ಅಪಾರವಾದ ತೊಂದರೆ ಉಂಟಾಗಿದೆ. ಇಂತಹ ಹಲವಾರು ಕಣ್ಣಿನ ದೋಷಗಳ ನಿವಾರಣೆಗೆ ಈ ಪುರಾತನ ಆಯುರ್ವೇದ ಸಿದ್ಧ ಕಣ್ಣಿನ ಹನಿಯ ಕಾರ್ಯಕ್ರಮವು ಅತ್ಯಂತ ಪರಿಣಾಮಕಾರಿ. ಕಣ್ಣಿಗೆ ಹನಿ ಹಾಕುವುದರಿಂದ ಪ್ರಯೋಜನಗಳು : ಕಣ್ಣಿನಲ್ಲಿ ನೀರು ಬರುವುದು ಕಡಿಮೆಯಾಗುತ್ತದೆ. ⁠ಕಣ್ಣು ಕೆಂಪಗಾಗುವುದು, ಕಣ್ಣು ಉರಿಯುವುದು ಕಡಿಮೆಯಾಗುತ್ತದೆ. ⁠ಕಣ್ಣಿನ ಪೊರೆ ಬರುವ ಹಂತದವರಿಗೆ ಕಡಿಮೆಯಾಗುತ್ತದೆ. ⁠ದೃಷ್ಟಿ…

Read More

ಬಂಟರ ಯಾನೆ ನಾಡವರ ಮಾತೃ ಸಂಘದ ಮಾರ್ಗದರ್ಶನದಲ್ಲಿ ಬಂಟರ ಸಂಘ ಪುತ್ತೂರು ತಾಲೂಕು ಸಮಿತಿಯ ನೇತೃತ್ವದಲ್ಲಿ ‘ಬಂಟ್ಸ್ ಲೆಜೆಂಡ್ ಕಪ್’ ಫೆಬ್ರವರಿ 7 ಮತ್ತು 8ಕ್ಕೆ ಕೊಂಬೆಟ್ಟಿನಲ್ಲಿರುವ ಪುತ್ತೂರು ತಾಲೂಕು ಕ್ರೀಡಾಂಗಣದಲ್ಲಿ ಯುವ ಬಂಟರ ವಿಭಾಗದ ಸಾರಥ್ಯದಲ್ಲಿ ‘ಬಂಟ್ಸ್ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾಟವು ಮಹಿಳಾ ಬಂಟರ ವಿಭಾಗ, ವಿದ್ಯಾರ್ಥಿ ಬಂಟರ ವಿಭಾಗದ ಸಹಕಾರದೊಂದಿಗೆ ನಡೆಯಲಿದೆ ಎಂದು ಬಂಟರ ಸಂಘ ಪುತ್ತೂರು ತಾಲೂಕು ಸಮಿತಿಯ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಬೆಳಿಗ್ಗೆ 7.30 ಕ್ಕೆ ನಡೆಯುವ ಪಂದ್ಯಾಟ ಉದ್ಘಾಟನಾ ಸಮಾರಂಭವನ್ನು ಬಂಟರ ಸಂಘದ ನಿರ್ದೇಶಕ ‘ಸಹಕಾರಿ ರತ್ನ’ ದಂಬೆಕ್ಕಾನ ಸದಾಶಿವ ರೈ ಅವರು ಧ್ವಜಾರೋಹಣ ಮಾಡುವ ಮೂಲಕ ನೆರವೇರಿಸಲಿದ್ಧಾರೆ. ಬಂಟ್ವಾಳ ತಾಲೂಕಿನ ವಿಶ್ರಾಂತ ಶಿಕ್ಷಣ ಸಂಯೋಜಕ ಪದ್ಮನಾಭ ಆಳ್ವ ಗುತ್ತಿಮಾರು ಉದ್ಘಾಟಿಸಲಿದ್ದಾರೆ. ಸಂಘದ ನಿರ್ದೇಶಕ ಸುಧೀರ್ ಶೆಟ್ಟಿ ತೆಂಕಿಲ, ಮಾಜಿ ಉಪಾಧ್ಯಕ್ಷ ಜಗಜೀವನ್‌ದಾಸ್ ರೈ ಚಿಲ್ಮೆತ್ತಾರು, ಎಂ.ಆರ್ ಜಯಕುಮಾರ್ ರೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಳಿಗ್ಗೆ ಗಂಟೆ 1೦.3೦ಕ್ಕೆ…

Read More

ಮಂಗಳೂರಿನ ಖ್ಯಾತ ಹೋಮಿಯೋಪಥಿ ವೈದ್ಯ ಹಾಗೂ ಸಮಾಜಮುಖಿ ಆರೋಗ್ಯ ಕಾರ್ಯಕರ್ತರಾದ ಡಾ. ಪ್ರವೀಣ್ ಕುಮಾರ್ ರೈ ಅವರಿಗೆ ಆಯುಷ್ ಹಬ್ಬ – 2026 ರ ಅಂಗವಾಗಿ ಪ್ರತಿಷ್ಠಿತ ‘ಆಯುಷ್ ಯುವಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಈ ಗೌರವ ಸಮಾರಂಭವು ಫೆಬ್ರವರಿ 1 ರಂದು ಮಂಗಳೂರಿನ ಟಿಎಂಎ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಿತು. ಪ್ರಗತಿಪರ ಕೃಷಿಕ ಹಾಗೂ ಸಮಾಜಮುಖಿ ಮುಂದಾಳುವಾಗಿದ್ದ ಕೊಳ್ತಿಗೆ ಗ್ರಾಮದ ದಿವಂಗತ ಪಾಂಬಾರು ಸುಬ್ಬಣ್ಣ ರೈ ಹಾಗೂ ಹೇಮಾವತಿ ಎಸ್. ರೈ ದಂಪತಿಗಳ ಪುತ್ರರಾದ ಡಾ. ಪ್ರವೀಣ್ ಕುಮಾರ್ ರೈ, ‘ಆರೋಗ್ಯಕರ ಜಗತ್ತಿಗಾಗಿ ಹೋಮಿಯೋಪಥಿ’ ಎಂಬ ಧ್ಯೇಯದೊಂದಿಗೆ ಹೋಮಿಯೋಪಥಿ ಚಿಕಿತ್ಸೆಯನ್ನು ಕಟ್ಟ ಕಡೆಯ ಸ್ತರದ ಜನರಿಗೂ ತಲುಪಿಸುವ ಉದ್ದೇಶದಿಂದ ಕಳೆದ ಹದಿನಾರು ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ಮಂಗಳೂರಿನ ಬೆಂದೂರವೆಲ್ ನ ಡಾ. ರೈ’ಸ್ ಹೋಮಿಯೋಪಥಿ ಸೆಂಟರ್ ನಲ್ಲಿ ಮುಖ್ಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಇವರು, ದೂರದ ಕಾರವಾರದಲ್ಲಿ ಕೂಡ ಶಾಖೆಯನ್ನು ಹೊಂದಿದ್ದು ಹಾಗೂ ತಮ್ಮ ಹುಟ್ಟೂರಲ್ಲಿ ಪುತ್ತೂರಿ…

Read More

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಇತಿಹಾಸ ಪ್ರಸಿದ್ಧ ಮುಂಡ್ಕೂರು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ವರ್ಷಾವಧಿ ಮಹೋತ್ಸವವು ಫೆಬ್ರವರಿ 13 ರಂದು ಧ್ವಜಾರೋಹಣಗೊಂಡು, ಫೆಬ್ರವರಿ 18 ರಂದು ಬ್ರಹ್ಮರಥೋತ್ಸವವು ಊರ ಪರ ಊರ ಭಕ್ತರ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಜರಗಲಿದೆ. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಫೆಬ್ರವರಿ 5 ಗುರುವಾರ ಉತ್ಸವ ಬಲಿ ಆರಂಭಗೊಂಡು ಫೆಬ್ರವರಿ 10 ಮಂಗಳವಾರ ಶ್ರೀ ಮಹಾಗಣಪತಿ ಪ್ರತಿಷ್ಠ ವರ್ಧಂತಿ, ಅಥರ್ವ ಶಿರ್ಷಗಣಯಾಗ, ನವಕ ಪ್ರಧಾನ, ಕಳಶಾಭಿಷೇಕ ಜರಗಲಿದೆ. ಫೆಬ್ರವರಿ 11 ಬುಧವಾರ ಬ್ರಹ್ಮಕಲಶ ವರ್ಧಂತಿ, ಮಹಾಚಂಡಿಕಾಯಾಗ, ಪಂಚ ವಿoಶತಿ ಕಲಶಾಭಿಷೇಕ, ರಾತ್ರಿ ಉತ್ಸವ ಬಲಿ ನಡೆಯಲಿದೆ. ಫೆಬ್ರವರಿ 13 ಶುಕ್ರವಾರ ಬೆಳಿಗ್ಗೆ ಅಂಕುರಾರ್ಪಣ ಪೂರ್ವಾಹ್ನ ಗಂಟೆ 11ಕ್ಕೆ ಧ್ವಜಾರೋಹಣಗೊಂಡು ಮಹಾಪೂಜೆಯಾಗಿ ಸಾರ್ವಜನಿಕ ಅನ್ನ ಸಂತರ್ಪಣೆ ಜರಗುವುದಲ್ಲದೇ ರಾತ್ರಿ ಉತ್ಸವ ದರ್ಶನ ಬಲಿ ಜರಗುವುದು. ಫೆಬ್ರವರಿ 14 ಶನಿವಾರ ಬೆಳಗಿನ ಜಾವ ದೀಪಾರಾಧನಾ ಬಲಿ, ಬೆಳಿಗ್ಗೆ ನವಕ ಪ್ರಧಾನ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ರಾತ್ರಿ ರಜತ ಪಾಲಕಿ ಉತ್ಸವ…

Read More

ನಾಗಮಂಡಲ ಎಂಬ ಪೂಜಾ ವಿಧಾನದ ಬಗ್ಗೆ ನನಗೆ ಇನ್ನೂ ಪೂರ್ಣ ವಿಶ್ವಾಸ ಬಂದಿಲ್ಲ. ಯಾಕೋ ಏನೋ ನಾಗ ಪಾತ್ರಿ ಹಾಗೂ ವೈದ್ಯರು (ನಾಗ ಕನ್ನಿಕೆಯಂತೆ) ಪರಸ್ಪರರನ್ನು ಸಾರ್ವಜಿನಿಕವಾಗಿ ಅಪ್ಪಿ ಹಿಡಿಯುವುದೂ ಆರಾಧನೆಯ ಒಂದು ಭಾಗ ಅಂತ ನಂಬಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಅಲ್ಲಿ ವೈದ್ಯರು ಹೇಳುವುದು ಯಾವುದೇ ನಾಗನ ಕುರಿತಾದ ಮಂತ್ರಗಳಲ್ಲ. ಪುರಂದರ ದಾಸರ ಭಜನೆಗಳು‌. ನಾಗಮಂಡಲಗಳು ಬಹಳ ಹಳೆಯ ಅರಾಧನಾ ಪದ್ದತಿ ಅಲ್ಲ ಅನ್ನುವುದಕ್ಕೆ ಇದೂ ಒಂದು ಸಾಕ್ಷಿ. ನಿಜ ನಾಗರ ಹಾವುಗಳು ಪರಸ್ಪರ ಮೈಥುನ ಸ್ಥಿತಿಯಲ್ಲಿರುವ ದೃಶ್ಯ ಹಳ್ಳಿಗಳಲ್ಲಿ ಕಾಣ ಸಿಗುವುದು ಅಪರೂಪವೇನಲ್ಲ. ಆದರೆ ಅವುಗಳನ್ನು ನೋಡುವುದು ಪಾಪ ಎಂಬುದು ನಮ್ಮ ತುಳುನಾಡಿನ ಜನರ ಬಲವಾದ ನಂಬಿಕೆ. ತಕ್ಷಣ ಅಲ್ಲಿಂದ ದೂರ ಹೋಗುವುದು ನಮ್ಮ ಕ್ರಮ. ಹಾಗಿರುವಾಗ ನಾಗಪಾತ್ರಿಗಳು ಹಾಗೂ ವೈದ್ಯರು ಸಾರ್ವಜನಿಕವಾಗಿ ಪರಸ್ಪರ ಅಪ್ಪಿಕೊಳ್ಳಬಹುದೇ ಎಂಬುದಕ್ಕೆ ಬಲ್ಲವರಿಂದ ಉತ್ತರ ಬಯಸುತ್ತೇನೆ. ಈ ಇಡೀ ಆರಾಧನಾ ಪದ್ದತಿಯನ್ನು ಕುಟುಂಬ ಸಮೇತರಾಗಿ ನೋಡಲು ಅಸಹ್ಯವಾಗುತ್ತದೆ. ಇದು ನಾಗನ ಮೇಲಿನ ಜನಸಾಮಾನ್ಯರ…

Read More

ಬ್ರಹ್ಮಾವರ : ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಸ್ಥಳೀಯ ಸಂಸ್ಥೆ ಬ್ರಹ್ಮಾವರ. ಇವರ ಸಹಯೋಗದೊಂದಿಗೆ ದ್ವಿತೀಯ ಸೋಪಾನ ಪರೀಕ್ಷಾ ಪಟಲಾಂ ನಾಯಕರ ತರಬೇತಿ ಶಿಬಿರ ಹಾಗೂ ವಿತೇಶ್ ಕಾಂಚನ್ ನಾಯಕತ್ವದ ಪ್ರಾಯೋಜಕತ್ವದಲ್ಲಿ ಉಚಿತ ಯುನಿಟ್ ಕಿಟ್ ವಿತರಣಾ ಕಾರ್ಯಕ್ರಮ ದಿನಾಂಕ ಜನವರಿ ೩೧ ಹಾಗೂ ಫೆಬ್ರವರಿ ೧ ರಂದು ನಡೆಯಿತು. ಭಾರತ್ ಸ್ಕೌಟ್ಸ್ ಮತ್ತು÷ಗೈಡ್ಸ್ನ ಜಿಲ್ಲಾ ಮುಖ್ಯ ಆಯುಕ್ತರಾದ ಇಂದ್ರಾಳಿ ಜಯಕರ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿ ದೀಪ ಬೆಳಗಿಸುವ ಮೂಲಕ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ ಇಂತಹ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿ ಪಡೆದುಕೊಂಡ ಅನುಭವಗಳನ್ನು ಜೀವನದಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿ ಶಿಸ್ತು, ಸಹಬಾಳ್ವೆ, ಪರೋಪಕಾರ ಮುಂತಾದ ಸದ್ಗುಣಗಳನ್ನು ಇಂತಹ ತರಬೇತಿಯಿಂದ ಕಲಿತು ಉತ್ತಮ ಪ್ರಜೆಗಳಾಗಬೇಕು ಎಂದರು. ಸ್ಥಳೀಯ ಸಂಸ್ಥೆಯ ಅಧ್ಯಕ್ಷ ಕೆ. ಅಶೋಕ ಭಟ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿತೇಶ್ ಕಾಂಚನ್‌ರವರು…

Read More

ಕೊಡಾಜೆ ಕುಟುಂಬದ ಅತ್ಯಂತ ಕ್ರಿಯಶಾಲಿ ಯುವ ಸದಸ್ಯ, ಹಸನ್ಮುಖಿ, ಹೆಸರಾಂತ ಕ್ಯಾಟರಿಂಗ್ ಸಂಸ್ಥೆ ‘ವೇದ್ ಕಿಚನ್’ ಇದರ ಮಾಲಕ, ಯುವ ಉದ್ಯಮಿ ದೇವಿಪ್ರಸಾದ್ ಶೆಟ್ಟಿಯವರು ಬಜಪೆ ಬಂಟರ ಸಂಘದ ಯುವ ವಿಭಾಗದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದೇವಿಪ್ರಸಾದ್ ಶೆಟ್ಟಿಯವರ ಅವಧಿಯಲ್ಲಿ ಬಜಪೆ ಬಂಟರ ಸಂಘ ಸರ್ವತೋಮುಖ ಬೆಳವಣಿಗೆಯಾಗಲಿ ಎಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.

Read More

ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ (ಎಐಸಿಟಿಇ) ಸಹಕಾರದಲ್ಲಿ ಸ್ಥಾಪಿಸಲಾದ ಐಡಿಯಾ ಲ್ಯಾಬ್‌ನ ಉದ್ಘಾಟನಾ ಸಮಾರಂಭ ಮಿಜಾರಿನ ಕಾಲೇಜಿನ ಕ್ಯಾಂಪಸನಲ್ಲಿ ನಡೆಯಿತು. ಬಿಟಾ ಸಿಎಇ ಸಿಸ್ಟಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಮಾರಾಟ ವಿಭಾಗದ ನಿರ್ದೇಶಕ ಸ್ಟಾವ್ರೋಸ್ ಕ್ಲೈಡಾರಿಯಾಸ್ ಲ್ಯಾಬ್‌ನ್ನು ಉದ್ಘಾಟಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಉಪಸ್ಥಿತರಿದ್ದರು. ಐಡಿಯಾ ಲ್ಯಾಬ್ ಎಐಸಿಟಿಇಯ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಇಂಜಿನಿಯರಿಂಗ್ ಶಿಕ್ಷಣವನ್ನು ಅನುಭವಾತ್ಮಕ ಶಿಕ್ಷಣ ಸಂಸ್ಕೃತಿಗೆ ಉತ್ತೇಜಿಸುವ ಕಾರ‍್ಯಕ್ರಮವಾಗಿದೆ. ಆಳ್ವಾಸ್‌ನಲ್ಲಿ ನಿರ್ಮಾಣಗೊಂಡಿರುವ ಲ್ಯಾಬ್ ಮೂಲಕ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ವಾಸ್ತವ ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಪ್ರಯೋಗ, ವಿನ್ಯಾಸ ಮತ್ತು ಮಾದರಿ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ಅಗತ್ಯವಾದ ಕೇಂದ್ರಿತ ಸೌಲಭ್ಯವನ್ನು ಇದು ಒದಗಿಸಲಿದೆ. ಈ ಲ್ಯಾಬ್‌ನ ಮೂಲಕ ವಿದ್ಯಾರ್ಥಿಗಳು ಪಠ್ಯಪುಸ್ತಕಗಳಾಚೆ, ಪ್ರೋಟೋಟೈಪ್ ನಿರ್ಮಾಣದ ಮೂಲಕ ನವೀನ ತಂತ್ರಜ್ಞಾನ ಅನುಭವ ಪಡೆಯಲು, ವಿಮರ್ಶಾತ್ಮಕ ಚಿಂತನೆ, ಸಹಕಾರ ಹಾಗೂ ಸಮಸ್ಯ ಪರಿಹಾರದ ಕೌಶಲ್ಯಗಳನ್ನು ಬೆಳೆಸುವುದು ಮತ್ತು ರಾಷ್ಟ್ರೀಯ ಶಿಕ್ಷಣ ನೀತಿ…

Read More

ಭಾರತದಲ್ಲಿ ಹಲವು ಬಗೆಯ ಚಿಕಿತ್ಸೆ ಪದ್ಧತಿಗಳಿವೆ. ಅಲೋಪಥಿ, ಹೋಮಿಯೋಪಥಿ ಮತ್ತು ಆಯುರ್ವೇದ ಮುಖ್ಯ. ನಮ್ಮ ಜಗತ್ತಿನಲ್ಲೇ ಅತ್ಯಂತ ಇತ್ತೀಚಿನ ಚಿಕಿತ್ಸಾ ಪದ್ಧತಿಯೆಂದರೆ ಅದು ಹೋಮಿಯೋಪಥಿ. ಕೇವಲ 230 ವರ್ಷಗಳ ಹಿಂದೆಯಷ್ಟೇ ಇದರ ಆವಿಷ್ಕಾರವಾಯಿತು. ಆಯುರ್ವೇದಕ್ಕೆ 5000 ವರ್ಷಗಳ ಇತಿಹಾಸವಿದೆ. ಯಾವುದೇ ಹೊಸ ಆವಿಷ್ಕಾರ ಹೇತುವೇ ಅವಶ್ಯಕತೆ ಎನ್ನುವುದು. ಅಂದಿನ ಅಲೋಪಥಿ ವೈದ್ಯರಾಗಿದ್ದ ಡಾ. ಸಾಮ್ಯುವೆಲ್ ಹಾನಿಮನ್ ತಾನು ಕಲಿತ ವೈದ್ಯ ಪದ್ಧತಿಯಲ್ಲಿ ಕುಂದು ಕೊರತೆಗಳಿಗೆ ಬೇಸತ್ತು ವೈದ್ಯ ವೃತ್ತಿಗೆ ತಿಲಾಂಜಲಿಯಿಟ್ಟು ಬಿಟ್ಟವರು. ಅಡ್ಡ ಪರಿಣಾಮಗಳಿಲ್ಲದೆ ಸುಲಭದಲ್ಲಿ ಕಾಯಿಲೆಗಳನ್ನು ಗುಣಬಡಿಸಬಲ್ಲ ಔಷಧಿಯ ಚಿಕಿತ್ಸಾ ಪದ್ದತಿಯನ್ನು ಕಂಡು ಹುಡುಕುವ ನಿರಂತರ ಪ್ರಯತ್ನದ ಫಲವೇ ಹೋಮಿಯೋಪಥಿಯೆಂಬ ವಿಶಿಷ್ಟ ಚಿಕಿತ್ಸಾ ಪದ್ಧತಿಯನ್ನು ಕಂಡು ಹಿಡಿದರು. ಜರ್ಮನಿಯಲ್ಲಿ ಅವಿಷ್ಕಾರಗೊಂಡ ಹೋಮಿಯೋಪತಿ ಚಿಕಿತ್ಸಾ ಪದ್ಧತಿ ಕೇವಲ 15 ವರ್ಷಗಳಲ್ಲಿ ಅಂದರೆ 1910ಕ್ಕೆ ಭಾರತಕ್ಕೆ ಕಾಲಿಟ್ಟಿತು. ಸೋಂಕು ರೋಗಗಳಿರಲಿ, ದೀರ್ಘಕಾಲೀನ ರೋಗಗಳಿರಲಿ ಹೋಮಿಯೋಪತಿ ಚಿಕಿತ್ಸೆಯ ಅದ್ಭುತ ಪರಿಣಾಮಗಳನ್ನು ಕಂಡುಕೊಂಡ ನೂರಾರು ಯುರೋಪಿನ ವೈದ್ಯರು ಹೋಮಿಯೋಪಥಿಯತ್ತ ವಾಲಿದರು. ಡಾ. ಹೆರಿಂಗ್, ಡಾ. ಕೆಂಟ್,…

Read More