Author: admin

ಕರಾವಳಿಯ ಬಹುತೇಕ ಸಾಧಕರು ಮುಂಬಯಿ ಮಹಾನಗರಕ್ಕೆ ಹೋಗಿ ಅಲ್ಲಿ ಉದ್ಯಮಪತಿಗಳಾಗಿ ಎತ್ತರಕ್ಕೆ ಬೆಳೆದಿದ್ದಾರೆ. ಅದರೊಂದಿಗೆ ತಾಯ್ನಾಡಿನ ಕಲಾ ಪ್ರಕಾರಗಳಿಗೆ ಅವರು ನೀಡುತ್ತಿರುವ ಪ್ರೋತ್ಸಾಹ ಅನುಪಮವಾದುದು. ಈಗಲೂ ಯಕ್ಷಗಾನಕ್ಕೆ ಮುಂಬಯಿಯಲ್ಲಿ ರಾಜಾಶ್ರಯವಿದೆ. ಅಲ್ಲಿನ ಕಲಾಭಿಮಾನಿಗಳು ಯಕ್ಷಗಾನ ಕಲೆಯನ್ನು ಮತ್ತು ಕಲಾವಿದರನ್ನು ನಿರಂತರ ಪೋಷಿಸುತ್ತಿದ್ದಾರೆ ಎಂದು ಹಿರಿಯ ವಿದ್ವಾಂಸ ಮತ್ತು ಯಕ್ಷಗಾನ ಅರ್ಥಧಾರಿ ಡಾ| ಎಂ ಪ್ರಭಾಕರ ಜೋಶಿ ಹೇಳಿದರು. ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಬೆಳ್ಳಿಹಬ್ಬದ ಪ್ರಯುಕ್ತ ಈ ಬಾರಿ ನಡೆಸುವ ‘ಮುಂಬಯಿ ಯಕ್ಷಗಾನ ಸಮ್ಮೇಳನ’ದ ಸಲುವಾಗಿ ಅಜೆಕಾರು ಶ್ರೀರಾಮ ಭಜನಾ ಮಂದಿರದಲ್ಲಿ ಮಾರ್ಚ್ 10 ರಂದು ಜರಗಿದ ಪೂರ್ವಭಾವಿ ಸಭೆಯಲ್ಲಿ ಪ್ರಧಾನ ಸಲಹೆಗಾರರಾಗಿ ಡಾ| ಜೋಶಿ ಮಾತನಾಡಿದರು. ಮುಂಬಯಿಯಲ್ಲಿ ಯಕ್ಷಗಾನ ಸಂಪ್ರದಾಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಕಾರ್ಯ ಸ್ಮರಣೀಯ. ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟರು ಮಹಾನಗರದ ಉದ್ದಗಲಕ್ಕೂ ನೂರಾರು ಸ್ತ್ರೀ ಪುರುಷರಿಗೆ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿಸುವ ಮೂಲಕ ಅಸಂಖ್ಯ ಯುವ ಕಲಾವಿದರ ಉದಯಕ್ಕೆ ಕಾರಣರಾಗಿದ್ದಾರೆ. ಕಾರ್ಯಕ್ರಮ…

Read More

ಇಂಡೋನೇಷ್ಯಾದಲ್ಲಿ ನಡೆದ ಜಕಾರ್ತ ಪ್ರೀಮಿಯರ್ ಲೀಗ್ ನಲ್ಲಿ ಹೊಸ್ಮಾರು ಸುಧಾಕರ್ ಶೆಟ್ಟಿ ಮಾಲೀಕತ್ವದ ಉಡುಪಿ ಕೋಸ್ಟಲ್ ಕ್ರಿಕೆಟ್ ಕ್ಲಬ್ ತಂಡವು ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇಂಡೋನೇಷ್ಯಾ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಅಗುಸ್, ರಾಮ, ಧೋನಿ, ಮ್ಯಾಕ್ಸಿ, ಧನೇಶ್, ಸಂಪತ್, ಕಿರುಬ, ಪದ್ಮಾಕರ ಸುರ್ವೆ ಉಡುಪಿ ಕೋಸ್ಟಲ್ ಕ್ರಿಕೆಟ್ ತಂಡದಲ್ಲಿದ್ದರು. ಜಕಾರ್ತ ಪ್ರೀಮಿಯರ್ ಲೀಗ್ ಎಂಟು ತಿಂಗಳ ಕಾಲ ಸುದೀರ್ಘವಾಗಿ ನಡೆಯುತ್ತಿದ್ದು, ಈ ಬಾರಿ 13 ತಂಡಗಳಿದ್ದವು. ಸತತ ಎರಡನೇಯ ಬಾರಿಗೆ ಉಡುಪಿ ಕೋಸ್ಟಲ್ ಕ್ರಿಕೆಟ್ ಕ್ಲಬ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಉಡುಪಿ ಕೋಸ್ಟಲ್ ತಂಡ 30 ಓವರ್ ನಲ್ಲಿ 190 ರನ್ ಗಳಿಸಿತ್ತು. ಬಳಿಕ ಬ್ಯಾಟಿಂಗ್‌ ಮಾಡಿದ ಸ್ಡಾಮ್‌ ರುಸನಾ ಕ್ರಿಕೆಟ್ ಕ್ಲಬ್ 93 ರನ್ ಗಳಿಸಲಷ್ಟೇ ಶಕ್ತವಾಯಿತು.

Read More

ರೋಟರಿ ಆನ್ಸ್ ಕ್ಲಬ್ ಕಾರ್ಕಳ ವತಿಯಿಂದ ಮಹಿಳಾ ದಿನಾಚರಣೆಯು ಕಾರ್ಕಳ ರೋಟರಿ ಬಾಲ ಭವನದಲ್ಲಿ ನಡೆಯಿತು. ಇದರ ಅಂಗವಾಗಿ ಮಹಿಳೆಯರ ಶಕ್ತಿ, ಸಾಧನೆ, ಸ್ನೇಹ, ಸೌಹಾರ್ದತೆಯನ್ನು ಸಂಭ್ರಮಿಸುವ ವಿಶೇಷ ದಿನದ ಅಂಗವಾಗಿ ‘ಮಹಿಳಾ ಶಕ್ತಿ ಸಮಾಜದ ಭವಿಷ್ಯ’ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದೇ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಹಕರಿಸಿದ ಡಾ. ಆಶಾ ಪಿ ಹೆಗ್ಡೆಯವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ಬಿನ ಅಧ್ಯಕ್ಷೆ ಜಯಂತಿ ನಾಯಕ್ ರವರು ವಹಿಸಿದ್ದು, ಕಾರ್ಯಕ್ರಮದಲ್ಲಿ ಕ್ಲಬ್ಬಿನ ಸಭಾಪತಿ ವೃಂದಾ ಹರಿಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು. ಮಹಿಳಾ ದಿನಾಚರಣೆ ಪ್ರಯುಕ್ತ ಕ್ಲಬ್ಬಿನ ಸದಸ್ಯ ಮಹಿಳೆಯರಿಗಾಗಿ ಸ್ಪರ್ಧೆಗಳು ಮತ್ತು ಮನರಂಜನಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ತುರುಬಿನ ಅಲಂಕಾರ ಸ್ಪರ್ಧೆಯಲ್ಲಿ ಕಸ್ತೂರಿ ವಸಂತ ಹಾಗೂ ವಿಜಯಶ್ರೀ ರಾವ್, ಅದೇ ರೀತಿ ಜಡೆಯ ಅಲಂಕಾರ ಸ್ಪರ್ಧೆಯಲ್ಲಿ ರೇಖಾ ಜಿ ಹಾಗೂ ಅರ್ಚನಾ ಪ್ರಭಾತ್ ಪ್ರಥಮ ದ್ವಿತೀಯ ಸ್ಥಾನವನ್ನು ಪಡೆದುಕೊಂಡರು. ಸುಮಾ ನಾಯಕ್ ಪ್ರಾರ್ಥಿಸಿದರು. ಗಾಯತ್ರಿ ವಿಜೇಂದ್ರ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಿಸಿದ ಕಾರ್ಯದರ್ಶಿ…

Read More

ಉಡುಪಿ ಜಿಲ್ಲೆಯ ಹೆಜಮಾಡಿ ಗ್ರಾಮದ ಕಣ್ಣಂಗಾರು ಕಮಲಾ ನಿವಾಸದ ಯೋಗೀಶ್ ಟಿ ಶೆಟ್ಟಿಯವರು ಮೂಲತಃ ಹೆಜಮಾಡಿ ಪಡುಮನೆ ತಬುರ ಶೆಟ್ಟಿ ಹಾಗೂ ಕರ್ನಿರೆ ಹೊಸಮನೆ ಕಮಲಾ ಶೆಟ್ಟಿ ದಂಪತಿಯವರ ಮೂರು ಜನ ಗಂಡು ಮಕ್ಕಳಲ್ಲಿ ಕೊನೆಯ ಸುಪುತ್ರರು. ಪ್ರಾಥಮಿಕ ವಿದ್ಯಾಭ್ಯಾಸವನ್ನು ಹೆಜಮಾಡಿ ಪ್ರೈಮರಿ ಸ್ಕೂಲ್, ಹೈಸ್ಕೂಲ್ ವಿದ್ಯಾಭ್ಯಾಸವನ್ನು ಹೆಜಮಾಡಿ ಹೈಯರ್ ಸೆಕೆಂಡರಿ ಸ್ಕೂಲಿನಲ್ಲಿ ಗೈದರು. ವಾಣಿಜ್ಯ ಪದವಿಯನ್ನು ಮೂಲ್ಕಿ ವಿಜಯಾ ಕಾಲೇಜಿನಲ್ಲಿ ಪೂರ್ಣಗೊಳಿಸಿದರು. ಶಾಲಾ ಕಾಲೇಜಿನಲ್ಲಿ ಇರುವಾಗಲೇ ಎಲ್ಲಾ ಆಟೋಟಗಳಲ್ಲಿ ಭಾಗವಹಿಸಿ ಒರ್ವ ಉತ್ತಮ ಕ್ರೀಡಾಪಟುವಾಗಿದ್ದರು. ಬಾಲ್ಯದಿಂದಲೇ ಯಕ್ಷಗಾನ, ನಾಟಕಗಳಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸಿ ಅನೇಕ ಬಹುಮಾನಗಳನ್ನು ಪಡೆದವರಾಗಿದ್ದಾರೆ. ವಿಚಾರ ಸಂಕೀರಣ, ಭಾಷಣ, ಕವಿಗೋಷ್ಠಿ, ಪ್ರಬಂಧ ಸ್ಪರ್ಧೆ ಇಂತಹ ಅನೇಕ ಚಟುವಟಿಕೆಗಳಲ್ಲಿ ಸ್ಪರ್ಧಾತ್ಮಕವಾಗಿ ಸ್ಪರ್ಧಿಸಿ ಹಲವಾರು ಬಹುಮಾನಗಳ ಸರಮಾಲೆಯನ್ನು ಗಳಿಸಿದ್ದಾರೆ. ಹೈಸ್ಕೂಲ್ ನಲ್ಲಿ ಕಲಿಯುತ್ತಿದ್ದಾಗ ಹೈಸ್ಕೂಲಿನ ವಿದ್ಯಾರ್ಥಿ ಸಂಘದ ನಾಯಕನಾಗಿ ಸ್ಪರ್ಧಿಸುವ ಅವಕಾಶ ಸಿಕ್ಕಿದಾಗ ಯೋಗೀಶ್ ರವರ ಹೆಸರು ವೈ.ಟಿ ಶೆಟ್ಟಿ ಎಂಬ ನಾಮಾಂಕಿತದೊಂದಿಗೆ ಇಂದಿನವರೆಗೂ ವೈ.ಟಿ ಎಂಬ ಹೆಸರಿನಲ್ಲಿ ಪ್ರಚಲಿತರಾದರು.…

Read More

ವಿಶ್ವ ಪ್ರಸಿದ್ಧ ಬಂಟರ ಸಂಘ ಮುಂಬಯಿ ಆಳಿದ ನಾಲ್ವರು ಅಧ್ಯಕ್ಷರು ವಿಜಯ ಕಾಲೇಜು ಮೂಲ್ಕಿ ಇದರ ಹಳೆ ವಿದ್ಯಾರ್ಥಿಗಳು ಎನ್ನುವುದು ಅಭಿಮಾನವೆನಿಸುತ್ತಿದೆ. ಈ ಕಾಲೇಜ್‍ನ ವಿದ್ಯಾರ್ಥಿಗಳು ಸಭ್ಯ ಮತ್ತು ಶಿಸ್ತುಬದ್ಧರು ಎಂದು ಹೇಳುವುದೇ ಅಭಿಮಾನದ ಸಂಗತಿ. ಆವಾಗಿನ ಮಕ್ಕಳೇ ಇಂದು ಒಳ್ಳೆಯವರೆಣಿಸಿ ಸಾಧಕರಾಗಿರುವುದು ಪ್ರಶಂಸನೀಯ. ನನ್ನ ಹುಟ್ಟು ಮೂಲ್ಕಿಯಲ್ಲಿ ಆದರೂ ಬಾಲ್ಯಾವಸ್ಥೆ ಮುಂಬಯಿಯಲ್ಲಿ ಕಳೆದ ಕಾರಣ ನಾನು ವಿಜಯ ಕಾಲೇಜ್‍ನಲ್ಲಿ ಕಲಿಯಲು ಅಸಾಧ್ಯವಾಯಿತು. ವಿಜಯ ಕಾಲೇಜ್‍ನ ಶೈಕ್ಷಣಿಕ ಕೊಡುಗೆ ಗಣನೀಯವಾದುದು ಎಂದು ಪಯ್ಯಡೆ ಹೊಟೇಲ್ಸ್ ಪ್ರೈವೇಟ್ ಲಿಮಿಟೆಡ್ ಇದರ ನಿರ್ದೇಶಕ, ಮುಂಬಯಿ ಕ್ರಿಕೆಟ್ ಅಸೋಶಿಯೇಶನ್‍ನ ಮಾಜಿ ಜೊತೆ ಕಾರ್ಯದರ್ಶಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಡಾ. ಪದ್ಮನಾಭ ವಿ. ಶೆಟ್ಟಿ ತಿಳಿಸಿದರು. ವಿಜಯ ಕಾಲೇಜು ಮೂಲ್ಕಿ ಗ್ಲೋಬಲ್ ಅಲ್ಯೂಮ್ನಿ ಅಸೋಸಿಯೇಶನ್ ಮಾರ್ಚ್ 7 ರಂದು ಅಂಧೇರಿ ಪೂರ್ವದ ಸಾಕಿನಾಕ ಇಲ್ಲಿನ ಪೆನಿನ್ಸುಲಾ ಗ್ರ್ಯಾಂಡ್ ಹೋಟೆಲ್ ಸಭಾಗೃಹದಲ್ಲಿ ಆಯೋಜಿಸಿದ್ದ ವಿಶೇಷ ಮಹಾಸಭೆ, ವಾರ್ಷಿಕ ಸಂಭ್ರಮ, ಗುರುವಂದನೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ…

Read More

ರಾಜ್ಯ ಅರಣ್ಯ ಸೇವೆಗೆ ಸೇರಿದ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸೂಚಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಸರಕಾರ ಆದೇಶಿಸಿದ್ದು, ಹಾಸನ ಅರಣ್ಯ ಸಂಚಾರಿ ಸ್ಥಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕುಂಬ್ರದ ಹಸ್ತ ಶೆಟ್ಟಿಯವರನ್ನು ನಿಯುಕ್ತಿಗೊಳಿಸಿದೆ. ಒಳಮೊಗ್ರು ಗ್ರಾಮದ ಮುಡಾಲ ಪುರಂದರ ಶೆಟ್ಟಿ ಮತ್ತು ವಾರಿಜಾ ಶೆಟ್ಟಿಯವರ ಪುತ್ರಿಯಾಗಿರುವ ಹಸ್ತ ಶೆಟ್ಟಿಯವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಪುತ್ತೂರು ಲಿಟ್ಟಲ್ ಫ್ಲವರ್ ಸ್ಕೂಲ್, ಹೈಸ್ಕೂಲ್ ಶಿಕ್ಷಣವನ್ನು ಪುತ್ತೂರು ಬೆಥನಿಯಲ್ಲಿ, ಉಜಿರೆ ಎಸ್.ಡಿ.ಎಂ ನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆದು ಮಡಿಕೇರಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದಾರೆ. ತನ್ನ ಪದವಿ ಶಿಕ್ಷಣ ಮುಗಿಸಿ 2019ರಲ್ಲಿ ಉಪವಲಯ ಅರಣ್ಯ ಅಧಿಕಾರಿಯಾಗಿ ನೇಮಕಗೊಂಡು ಎರಡು ವರ್ಷ ಕುಂದಾಪುರ ವಿಭಾಗದಲ್ಲಿ ಸೇವೆ ಸಲ್ಲಿಸಿ ಬಳಿಕ 2022ರಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಆಯ್ಕೆಯಾಗಿ ಎರಡು ವರ್ಷ ಕೊಯಂಬತ್ತೂರಿನಲ್ಲಿ ತರಬೇತಿ ಪಡೆದಿದ್ದರು. ಬಳಿಕ ಒಂದು ವರ್ಷ…

Read More

ಬ್ರಿಟಿಷರ ಆಡಳಿತದ ಕಾಲದಲ್ಲೇ ಗ್ರಾಮಗಳ ಸುತ್ತಮುತ್ತ ಗೋವುಗಳು ಮೇಯಲು ಗೋಮಾಳ ಭೂಮಿಗಳನ್ನು ಮೀಸಲಿಟ್ಟಿದ್ದರು. ಅದರ ಉದ್ದೇಶ ಸ್ಪಷ್ಟವಾಗಿತ್ತು. ಕೃಷಿ, ಹಾಲು ಉತ್ಪಾದನೆ ಮತ್ತು ಗೋ ಸಂತತಿಯನ್ನು ಉಳಿಸುವುದು. ಕೃಷಿ ಭೂಮಿ ಮತ್ತು ಗೋಮಾಳ ಇದ್ದಾಗ ಮಾತ್ರ ಪಶುಸಂಪತ್ತು ಸಹಜವಾಗಿ ಬೆಳೆಯುತ್ತದೆ. ಆದರೆ ಇಂದಿನ ಪರಿಸ್ಥಿತಿಯಲ್ಲಿ ‘ಗೋಮಾತೆ’ ಎಂಬ ಭಾವನೆಯನ್ನು ಹೇಳುವವರೇ ಕೆಲವೊಮ್ಮೆ ಗೋಮಾಳ ಭೂಮಿಗಳನ್ನು ಕಬಳಿಸುವ ಸ್ಥಿತಿ ಕಾಣಿಸುತ್ತದೆ. ಗೋ ಆಶ್ರಮಗಳ ಹೆಸರಿನಲ್ಲಿ ಕಟ್ಟಡಗಳು ನಿರ್ಮಾಣವಾಗುತ್ತವೆ. ಅದರಲ್ಲೂ ಲಾಭ ಮತ್ತು ರಾಜಕೀಯ ಲೆಕ್ಕಾಚಾರ ಕಾಣಿಸಿಕೊಳ್ಳುತ್ತದೆ. ನಿಜವಾಗಿ ಗೋ ರಕ್ಷಣೆ ಎಂದರೆ ಕೇವಲ ಗೋ ಪೂಜೆ ಅಲ್ಲ; ಗೋವುಗಳಿಗೆ ಮೇಯುವ ಭೂಮಿ, ನೀರು ಮತ್ತು ಕೃಷಿಯೊಂದಿಗೆ ಇರುವ ಸಹಜ ಸಂಬಂಧವನ್ನು ಉಳಿಸುವುದೇ ಮುಖ್ಯ. ಕೃಷಿ ಭೂಮಿ ಇಲ್ಲದೆ ಮತ್ತು ಗೋಮಾಳಗಳು ನಾಶವಾದರೆ ಗೋ ಸಂತತಿ ಉಳಿಯುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದರೂ ಈ ಮೂಲ ವಿಚಾರವನ್ನು ಅನೇಕ ‘ಗೋ ರಕ್ಷಕರು’ ಗಮನಿಸುವುದಿಲ್ಲ ಎಂಬ ಟೀಕೆ ಕೇಳಿ ಬರುತ್ತಿದೆ. ಕೆಲ ಸಂದರ್ಭಗಳಲ್ಲಿ ಸರ್ಕಾರಗಳು…

Read More

ಮಂಗಳೂರು ವಿಶ್ವವಿದ್ಯಾಲಯವು 2025ನೇ ಸಾಲಿನಲ್ಲಿ ನಡೆಸಿದ್ದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳ ರ‍್ಯಾಂಕ್ ಪಟ್ಟಿ ಪ್ರಕಟಗೊಳಿಸಿದ್ದು, ಆಳ್ವಾಸ್‌ನ ವಿದ್ಯಾರ್ಥಿಗಳು ಒಟ್ಟು 15 ರ‍್ಯಾಂಕ್‌ ಗಳಿಸಿ ಶ್ರೇಷ್ಠ ಸಾಧನೆ ಮೆರೆದಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ರ‍್ಯಾಂಕ್ ಪಟ್ಟಿಯಲ್ಲಿ 2009ರಿಂದಲೂ ಮುಂಚೂಣಿಯಲ್ಲಿರುವ ಆಳ್ವಾಸ್ ಕಾಲೇಜು, ಇಲ್ಲಿಯವರೆಗೆ ಒಟ್ಟು 447 ರ‍್ಯಾಂಕ್‌ಗಳನ್ನು ಪಡೆದುಕೊಂಡಿದೆ. ಸ್ನಾತಕೋತ್ತರ ರ‍್ಯಾಂಕ್ : ಎಂಎ ಇಂಗ್ಲೀಷ್ ವಿಭಾಗದ ಪವಿತ್ರ ತೇಜ್, ಎಂಕಾಂ ಎಚ್‌ಆರ್‌ಡಿ ವಿಭಾಗದ ಹರ್ಷಿತಾ, ಆಹಾರ ವಿಜ್ಞಾನ ಹಾಗೂ ಪೋಷಣೆ ವಿಭಾಗದ ವಿಭಾಶ್ರೀ ಜಿಆರ್, ಸಾವಯವ ರಸಾಯನಶಾಸ್ತ್ರ ವಿಭಾಗದ ಪ್ರತೀಕ್ಷಾ, ರಸಾಯನಶಾಸ್ತ್ರ ವಿಭಾಗದ ಮೆಲಿಸಾ ವಿಡಿ ಹಾಗೂ ಮನಶಾಸ್ತ್ರ ವಿಭಾಗದ ಸಾಮ್ನ ಜಾರ್ಜ ಪ್ರಥಮ ರ‍್ಯಾಂಕ್‌ನೊಂದಿಗೆ ಆರು ಪ್ರಥಮ ರ‍್ಯಾಂಕ್‌ಗಳು ಆಳ್ವಾಸ್ ಸ್ನಾತಕೋತ್ತರ ವಿದ್ಯಾರ್ಥಿಗಳು ಗಳಿಸಿದ್ದಾರೆ. ಪದವಿ ರ‍್ಯಾಂಕ್‌ಗಳು : ಬಿಎ ವಿಭಾಗದ ನಂದಿನಿ ಶೆಣೈ ನಾಲ್ಕನೇ ರ‍್ಯಾಂಕ್ ಗಳಿಸಿದರೆ, ಬಿಕಾಂ ವಿಭಾಗದಲ್ಲಿ ಪ್ರಜ್ಞಾ ನಾಲ್ಕನೇ ರ‍್ಯಾಂಕ್ ಹಾಗೂ ಸುರಕ್ಷಾ ಜೈನ್ ಆರನೇ ರ‍್ಯಾಂಕ್ ಹಾಗೂ ಶ್ರದ್ಧಾ ಮೀರಾ 8ನೇ…

Read More

ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗವು ಮಾರ್ಚ್ 7 ರಂದು ಶನಿವಾರ ಅಪರಾಹ್ನ ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾರ್ಗದರ್ಶನ, ಮಹಿಳಾ ವಿಭಾಗದ ಅಧ್ಯಕ್ಷೆ ಚಿತ್ರಾ ಆರ್ ಶೆಟ್ಟಿ ಮುಂದಾಳತ್ವದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ವಾರ್ಷಿಕ ವಿಶ್ವ ಮಹಿಳಾ ದಿನಾಚರಣೆ ಅದ್ದೂರಿಯಾಗಿ ಸಂಭ್ರಮಿಸಿತು. ಅಧ್ಯಕ್ಷ ಪ್ರವೀಣ್ ಬಿ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆಸಲಾದ ಸಮಾರಂಭದಲ್ಲಿ ಭಾರತ್ ಕಾಲೇಜ್ ಆಫ್ ಇಂಜಿನಿಯರಿಂಗ್ (ಬದ್ಲಾಪುರ) ಇದರ ಸ್ಥಾಪಕ ಟ್ರಸ್ಟಿ ಪ್ರೊ| ಶುಭಲಕ್ಷ್ಮೀ ಸುದರ್ಶನ್ ಹೆಗ್ಡೆ, ಪಾನ್‌ಬಾಯ್ ಇಂಟರ್‌ನ್ಯಾಶನಲ್ ಸ್ಕೂಲ್ (ಸಾಂತಾಕ್ರೂಜ್) ಇದರ ಆಡಳಿತ ಟ್ರಸ್ಟಿ ಮೋಹಿನಿ ಪಿ ಶೆಟ್ಟಿ ಅತಿಥಿ ಅಭ್ಯಾಗತರುಗಳಾಗಿದ್ದರು. ೨೦೨೬ನೇ ಸಾಲಿನ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸ್ಮಾರಕ ಪ್ರಶಸ್ತಿಯನ್ನು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ| ಪೂರ್ಣಿಮಾ ಎಸ್ ಶೆಟ್ಟಿ ಅವರಿಗೆ (ಪತಿ ಸುಧಾಕರ್ ಶೆಟ್ಟಿ ಅವರನ್ನೊಳಗೊಂಡು) ಪ್ರದಾನಿಸಿ ಅಭಿನಂದಿಸಲಾಯಿತು. ಬಂಟರ…

Read More

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಕ್ಷಮ ಮಹಿಳಾ ಸಂಘದ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಆಳ್ವಾಸ್‌ನ ಮಹಿಳಾ ಸಿಬ್ಬಂದಿಗಳಿಗಾಗಿ ‘ಖೇಲ್ ಕೂದ್ ಮಹೋತ್ಸವ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಳೆದ ಒಂದು ವರ್ಷದ ಅವಧಿಯಲ್ಲಿ ಪ್ರತೀ ಶನಿವಾರ ಮಧ್ಯಾಹ್ನ ಶಿಕ್ಷಕ ಹಾಗೂ ಶಿಕ್ಷಕೇತರ ಮಹಿಳಾ ಸಿಬ್ಬಂದಿಗಳಿಗಾಗಿ ಕ್ರೀಡಾ ಚಟುವಟಿಕೆಗಳನ್ನು ನಿಯಮಿತವಾಗಿ ನಡೆಸಲಾಗುತ್ತಿದ್ದು, ಅದರ ಸಮಾರೋಪವಾಗಿ ಈ ಖೇಲ್ ಕೂದ್ ಮಹೋತ್ಸವವನ್ನು ಆಚರಿಸಲಾಯಿತು. ನೋವೊ ಟ್ರೀ ಮೈಂಡ್ಸ್ ಸಂಸ್ಥೆಯ ಸಹನಾ ನಾಗರಾಜ್ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿ, ಮಹಿಳೆಯರು ಪರಸ್ಪರ ಒಬ್ಬರನ್ನೊಬ್ಬರು ಬೆಂಬಲಿಸಿ ಕಾರ‍್ಯ ನಿರ್ವಹಿಸಿದರೆ ನಿಜವಾದ ಸಬಲೀಕರಣ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮವನ್ನು ಕಬಡ್ಡಿ ವಿಶ್ವಕಪ್‌ನ ಚಿನ್ನದ ಪದಕ ವಿಜೇತೆ ಹಾಗೂ ಭಾರತವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ ಧನಲಕ್ಷ್ಮಿ ಉದ್ಘಾಟಿಸಿದರು. ಸಕ್ಷಮಾ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಸಕ್ಷಮಾ ಸಂಚಾಲಕಿ ಡಾ. ಗ್ರೀಷ್ಮಾ ಆಳ್ವ ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಶ್ರಮಿಸಿದ ತಂಡದ ಪರಿಶ್ರಮವನ್ನು ಪ್ರಶಂಸಿಸಿ, ಮುಂದಿನ ದಿನಗಳಲ್ಲಿ ಮಹಿಳೆಯರಿಗಾಗಿ ಇನ್ನಷ್ಟು ಅರ್ಥಪೂರ್ಣ ಹಾಗೂ ಪರಿಣಾಮಕಾರಿ ಕಾರ್ಯಕ್ರಮಗಳನ್ನು…

Read More