Author: admin

ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ. ನಡೆಸಿದ ಜೆಇಇ ಮೈನ್ಸ್ ಪರೀಕ್ಷೆಯ ಪ್ರಥಮ ಹಂತದ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿಪೂರ್ವ ಕಾಲೇಜಿನ ಪಿಯುಷ್ ಎಚ್ 99.4585176 ಪರ್ಸೇಂಟೈಲ್ ಗಳಿಸಿ ಸಾಧನೆ ಮೆರೆದಿದ್ದಾರೆ. 8 ವಿದ್ಯಾರ್ಥಿಗಳು 98.5 ಪರ್ಸೇಂಟೈಲ್‌ಗಳಿಗಿಂತ ಅಧಿಕ ಅಂಕ ಪಡೆದು ತೇರ್ಗಡೆ ಹೊಂದಿದ್ದಾರೆ. ಶಶಾಂಕ್ ಬೋರ್ಕರ್ (98.9610456), ಸೃಜನ್ ವಿ (98.7320359), ಮೆಲ್ರೋಯ್ ಕಾಸ್ಟೆಲಿನೋ (98.648776), ಪ್ರಣವ್ ಎನ್. ಪಂಡಿತ್ (98.5677958), ಹರ್ಷವರ್ಧನ ಕೆ.ಪಿ. (98.5552656), ಕ್ಷಮಾ ಅಶೋಕ್ ಹಕಟಿ (98.5177603), ಕ್ಲಾರೆನ್ಸ್ ಡಿಸೋಜ (98.4810184) ಸೇರಿದಂತೆ ಈ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಸಾಧನೆ ಮೆರೆದಿದ್ದಾರೆ. 97 ಪರ್ಸೆಂಟೈಲ್‌ಗಿಂತ ಅಧಿಕ 22 ವಿದ್ಯಾರ್ಥಿಗಳು, 96 ಪರ್ಸೆಂಟೈಲ್‌ಗಿಂತ ಅಧಿಕ 38 ವಿದ್ಯಾರ್ಥಿಗಳು ಮತ್ತು 95 ಪರ್ಸೆಂಟೈಲ್‌ಗಿಂತ ಅಧಿಕ 58 ವಿದ್ಯಾರ್ಥಿಗಳು ಅಂಕ ಪಡೆದಿದ್ದಾರೆ. ಭೌತಶಾಸ್ತ್ರ ವಿಷಯದಲ್ಲಿ 5 ವಿದ್ಯಾರ್ಥಿಗಳು, ರಸಾಯನಶಾಸ್ತ್ರ ವಿಷಯದಲ್ಲಿ 11 ವಿದ್ಯಾರ್ಥಿಗಳು ಮತ್ತು ಗಣಿತದಲ್ಲಿ 3 ವಿದ್ಯಾರ್ಥಿಗಳು 99 ಪರ್ಸೆಂಟೈಲ್‌ಗಳಿಗಿಂತ ಅಧಿಕ ಅಂಕ ಪಡೆದಿದ್ದಾರೆ. ಸಾಧನೆ ಮೆರೆದ ಈ ಎಲ್ಲಾ…

Read More

ಯುವಾವಸ್ಥೆಯಲ್ಲಿ ಗರಿಕೆದರುವ ಬಯಕೆ ಹಕ್ಕಿಗಳು ಸ್ವಚ್ಛಂದವಾಗಿ ಹಾರಾಡಲು ವಿಶಾಲ ಆಕಾಶ ಅರ್ಥಾತ್ ಅವಕಾಶಗಳು ಒದಗಿ ಬರಬೇಕು. ಓರ್ವ ರೂಪದರ್ಶಿಯಾಗಿ ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಸಾಕಷ್ಟು ಯಶಸ್ಸು ಸಂಪಾದಿಸಿದ ಮೇಲೆ ಚಿತ್ರ ಜಗತ್ತಿಗೆ ಪಾದಾರ್ಪಣೆ ಮಾಡಿದ ಬಲು ಪ್ರಸಿದ್ಧಿ ಪಡೆದ ಯುವ ಮಾಡೆಲ್ ಸಂದೀಪ್ ಶೆಟ್ಟಿ. ಬಾಲ್ಯದಿಂದಲೂ ನಟನೆ ಬಗ್ಗೆ ವಿಶೇಷ ಒಲವು ಹೊಂದಿದ್ದ ಸಂದೀಪ್ ಅನೇಕ ಅವಕಾಶಗಳ ಸದುಪಯೋಗ ಪಡಿಸಿಕೊಂಡು ರಂಗ ಭೂಮಿಯಲ್ಲಿ ಈಗಾಗಲೇ ಮಿಂಚಿದ್ದಾರೆ. ಸುಂದರ ಅಂಗಸೌಷ್ಠವ ಹೊಂದಿದ್ದ ಸಂದೀಪ್ ತನಗೆ ಮಾಡೆಲಿಂಗ್ ಕ್ಷೇತ್ರ ಸರಿ ಹೊಂದಬಹುದೆಂಬ ಭಾವ ಬಲಿತ ಪರಿಣಾಮ ಆ ಕ್ಷೇತ್ರದಲ್ಲಿ ಅಪಾರ ಶ್ರದ್ಧೆ, ಶ್ರಮಗಳ ಮೂಲಕ ಯಶಸ್ಸನ್ನು ಸಂಪಾದಿಸಿ ಅನೇಕ ಉತ್ಪನ್ನಗಳ ರೂಪದರ್ಶಿಯಾಗಿ ಗಮನ ಸೆಳೆದಿದ್ದಾರೆ. ಚಿತ್ರದಲ್ಲಿ ಅಭಿನಯಕ್ಕೆ ಮುನ್ನ ಸಾಕಷ್ಟು ಪೂರ್ವ ತಯಾರಿ ಮಾಡಿರುವ ಸಂದೀಪ್ ತಾನು ಆದರ್ಶ್ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ನಟನೆ ಕುರಿತ ವಿಶೇಷ ತರಬೇತಿ ಪಡೆಯುವ ಹೊತ್ತಿಗೆ ಕನ್ನಡ ಚಿತ್ರರಂಗದ ಘಟಾನುಘಟಿ ನಿರ್ದೇಶಕರು ಸೆಲೆಬ್ರಿಟಿ ಲೆಕ್ಚರರ್ ಆಗಿ ಬರುತ್ತಿದ್ದಾಗ ಅವರಿಂದ…

Read More

ನಿರಂತರ ಅಧ್ಯಯನ, ಉಚ್ಛ ವೈದ್ಯಕೀಯ ಶಿಕ್ಷಣ, ದೀರ್ಘ ಕಾಲೀನ ವೃತ್ತಿಪರ ಅನುಭವ ಮುಪ್ಪುರಿಗೊಂಡು ವಿಜ್ಞಾನದ ಜೀವಶಾಸ್ತ್ರ ಸೇರಿದಂತೆ ಸರ್ವಾಂಗೀಣ ಮಾನವ ಆರೋಗ್ಯ ಜ್ಞಾನದ ಸಮೃದ್ಧ ಅನುಭವ ಹೊಂದಿದ ವೈದ್ಯಭೂಷಣ ನರೇನ್ ಶೆಟ್ಟಿ ವೈದ್ಯಕೀಯ ಕ್ಷೇತ್ರದ ವಿಸ್ಮಯವೇ ಸರಿ. ಇವರ ಜೀವವಿಜ್ಞಾನ ಕುರಿತ ಸಂಶೋಧನೆ ಪ್ರಕಟಣೆಗಳು ಮಾನವ ಜೀವಜಗತ್ತಿಗೆ ಬಹುಮೂಲ್ಯ ಕೊಡುಗೆಗಳಾಗಿವೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ವಾಸ್ತವ್ಯ ಹೊಂದಿದ ನರೇನ್ ಶೆಟ್ಟಿ ತನ್ನ ಅವಿಶ್ರಾಂತ ಸೇವೆಯ ಮೂಲಕ ವಿಶೇಷ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಸಾಮಾನ್ಯ ಶಸ್ತ್ರಚಿಕಿತ್ಸೆಗಳಿಂದ ಮೊದಲ್ಗೊಂಡು ಮಾನವ ದೇಹದ ವಿವಿಧ ವಿಭಾಗಗಳ ಕಾರ್ಯ ನಿರ್ವಹಣೆ ಮತ್ತವುಗಳಲ್ಲಿನ ತೊಡಕು ಸೋಂಕು ಡ್ಯಾಮೇಜ್ ಕುರಿತ ವಿಶೇಷ ಜ್ಞಾನ ಇರುವ ನರೇನ್ ಶೆಟ್ಟಿ ಪ್ಲಾಸ್ಟಿಕ್ ಸರ್ಜರಿ ಹಾಗೂ ಪುನರ್ ಸ್ಥಾಪನೆ ಕುರಿತ ಸ್ಪೆಷಲಿಸ್ಟ್ ಆಗಿದ್ದಾರೆ. ವೈದ್ಯಕೀಯ ವಿಭಾಗದ ಎಂ.ಬಿ.ಬಿ.ಎಸ್, ಎಂ.ಎಸ್, ಎಂ.ಸಿ.ಎಚ್ ಪದವಿಗಳು ಸೇರಿದಂತೆ ಮಾನವ ದೇಹದ ಅಂಗ ಪ್ರತ್ಯಂಗಗಳ ಕುರಿತ ವಿಶೇಷ ಉಪಪದವಿ ಡಿಪ್ಲೋಮಾ ಗೀಳನ್ನು ಹೊಂದಿದ ಅಪರೂಪದ ವೈದ್ಯಕೀಯ ಕ್ಷೇತ್ರದ ವಿಚಕ್ಷಣ ಮೇಧಾವಿ. ಬೆಂಗಳೂರು,…

Read More

ಹಿಂದಿನ ಕಾಲ ಕಳೆದೋಯ್ತು. ಅದರ ಬಗ್ಗೆ ಹೇಳುವುದು, ಬರೆಯುವುದು ವ್ಯರ್ಥ. ಅಂದಿಗೆ ಅದೇ ಸುಖ ಇಂದಿಗೆ ಇದೇ ಸುಖ. ಕಳೆದದ್ದು ಕಳೆದಾಯ್ತು ಉಳಿದುದರ ಬಗ್ಗೆ ಮಾತ್ರ ಚಿಂತಿಸೋಣ. ಇದು ಜೀವನ ಆಗಿರಬಹುದು ಅಥವಾ ಉಳಿದ ಆಯುಷ್ಯ ಆಗಿರಬಹುದು. ಆದರೂ ಕೆಲವರಾದರೂ ಈ ಬಗ್ಗೆ ಉತ್ಸಾಹ ತೋರಿದ ಕಾರಣ ಈ ಲೇಖನಕ್ಕೆ ಮುಂದಾದೆ. ಇಂದಿನ ಹದಿಹರೆಯದ ನವ ಯುವಕರು ಹಾದಿ ತಪ್ಪುತ್ತಿರುವ ಆಲೋಚನೆಗಳ ಬಗೆಗೆ ಈ ಒಂದು ಚಿಂತನೆ. ಹೆಚ್ಚುತ್ತಿರುವ ಆಡಂಬರ, ಶೋಕಿಯ ಜೀವನ ಶೈಲಿ ಇದೊಂದು ಸಾಮಾಜಿಕ ಪಿಡುಗಾಗಿ ಮಾರ್ಪಡುತ್ತಿದೆ. ಸಾಲ ಮಾಡಿ ದುಬಾರಿ ಬೆಲೆಯ ಮೊಬೈಲು, ಕುತ್ತಿಗೆಯ ದಪ್ಪ ಚೈನು (ಅಪ್ಪನಲ್ಲೂ ಇರದ) ಕೈಯ್ಯಲ್ಲಿ ಅಬ್ಬರದ ಕಡ, ಮೂರು ನಾಲ್ಕು ಲಕ್ಷದ ಬೈಕು, ಕಾರು ಸಾಲ ಮಾಡಿ ಇವೆಲ್ಲವೂ ಯಾರನ್ನು ಮೆಚ್ಚಿಸುವುದಕ್ಕಾಗಿ? ಸಾಲ ಮಾಡಿ ಹುಟ್ಟುಹಬ್ಬದ ದಿನ ಗೆಳೆಯರಿಗೆ ಭರ್ಜರಿ ಪಾರ್ಟಿ, ಅದ್ದೂರಿಯಾಗಿ ಬ್ಯಾಚುಲರ್ ಪಾರ್ಟಿ, ಸಂಗೀತ್, ಮೆಹಂದಿ, ಮದುವೆ, ರಿಸೆಪ್ಶನ್ ಅಯ್ಯೋ ನಾಲ್ಕು ನಾಲ್ಕು ದಿನದ ಸಂಭ್ರಮಾಚರಣೆ ಇದೆಲ್ಲಾ…

Read More

ಇತ್ತೀಚಿನ ಕೆಲವು ಬೆಳವಣಿಗೆಗಳಿಂದ ಮನನೊಂದು ಮುಂಬಯಿಯ ಖ್ಯಾತ ಉದ್ಯಮಿ ಹಾಗೂ ದಾನಿ ಡಾ| ಕನ್ಯಾನ ಸದಾಶಿವ ಶೆಟ್ಟಿ ಅವರು ಸಂಘ ಸಂಸ್ಥೆಗಳ ಸಮಾಜ ಸೇವಾ ಕಾರ್ಯಗಳಿಗೆ ವಿದಾಯ ಘೋಷಿಸಿದ್ದಾರೆ. ಇನ್ಮುಂದೆ ಯಾವುದೇ ಸಂಘ ಸಂಸ್ಥೆಗಳಿಗೆ ದೇಣಿಗೆ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಲೆಕ್ಕಪತ್ರ ವಿಚಾರದಲ್ಲಿ ಉಂಟಾದ ವಿವಾದ ಮತ್ತು ತಮ್ಮ ವಿರುದ್ಧ ನಡೆಯುತ್ತಿರುವ ತೇಜೋವಧೆಯಿಂದ ಬೇಸತ್ತು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ​​ತಮ್ಮ ನೋವನ್ನು ತೋಡಿಕೊಂಡಿರುವ ಡಾ| ಕನ್ಯಾನ, ನಾನು ಬಡತನದ ಹಿನ್ನೆಲೆಯಿಂದ ಬಂದವನು. ಊರು ಬಿಟ್ಟು ಪರ ಊರಿಗೆ ಹೋಗಿ, ಕಷ್ಟಪಟ್ಟು ಉದ್ಯೋಗ ಮಾಡಿ ಉದ್ಯಮ ಕಟ್ಟಿದೆ. ಕಳೆದ ಆರು ವರ್ಷಗಳಿಂದ ಆತ್ಮತೃಪ್ತಿಗಾಗಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೆ. ಆದರೆ ಲೆಕ್ಕಪತ್ರ ಕೇಳಿದ್ದನ್ನೇ ದೊಡ್ಡ ತಪ್ಪು ಎಂದು ಬಿಂಬಿಸಿ ನನ್ನ ತೇಜೋವಧೆ ಮಾಡಲಾಗುತ್ತಿದೆ. ಇದು ಕೋಲು ಕೊಟ್ಟು ಪೆಟ್ಟು ತಿನ್ನುವ ಪರಿಸ್ಥಿತಿಯಂತಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ​ಫೆಬ್ರವರಿ 16 ರಂದು ಮುಂಬಯಿಯಲ್ಲಿ ದಾನಿಗಳು…

Read More

ಕಳೆದ ಕೆಲವು ದಿನಗಳಿಂದ ಕೆಲವು ಮಾಧ್ಯಮ ಜಾಲತಾಣಗಳಲ್ಲಿ ಹರಡುತ್ತಿರುವ ಸುದ್ದಿಗಳನ್ನು ನೀವೆಲ್ಲರೂ ಗಮನಿಸಿರುತ್ತೀರಿ. ಕಾಸರಗೋಡು ಜಿಲ್ಲೆಯ ಕೂಳೂರು ಗ್ರಾಮದ ಪ್ರತಿಷ್ಠಿತ ಉದ್ಯಮಿಗಳು ಹಾಗೂ ಕೊಡುಗೈ ದಾನಿಗಳಾದ ಡಾ| ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಇವರ ಮೇಲೆ ನಡೆಯುತ್ತಿರುವ ಅಪಪ್ರಚಾರ ಹಾಗೂ ಇಲ್ಲಸಲ್ಲದ ಮಾನಹಾನಿ ಹಾಗೂ ಆರೋಪಗಳು ಸಾರ್ವಜನಿಕವಾಗಿ ಚರ್ಚೆಯಾಗಿರುವುದು ತುಂಬಾ ಬೇಸರದ ಸಂಗತಿ ಎಂದು ಕಾಸರಗೋಡು ಜಿಲ್ಲಾ ಬಂಟರ ಸಂಘದ ಅಧ್ಯಕ್ಷ ನ್ಯಾಯವಾದಿ ಬಿ. ಸುಬ್ಬಯ ರೈ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ರಾಜರಾಜೇಶ್ವರಿ ದೇವಸ್ಥಾನ ದಬಾರ್ ಕಟ್ಟೆ ಇದರ ಆಡಳಿತ ಮೊಕೇಸರರಾದ ಕೆ.ಕೆ. ಶೆಟ್ಟಿ ಕುತ್ತಿಕ್ಕಾರು ಮಾತನಾಡಿ, ಕೆಲವು ದಿನಗಳಿಂದ ನಡೆಯುತ್ತಿರುವ ಘಟನೆಗಳಿಂದ ಮನನೊಂದು ಕುಳೂರು ಕನ್ಯಾನ ಡಾ| ಸದಾಶಿವ ಶೆಟ್ಟಿಯವರು ಪತ್ರಿಕಾ ಪ್ರಕಟಣೆಯೊಂದನ್ನು ನೀಡಿರುವುದು ಸಮಸ್ತ ಕಾಸರಗೋಡು ಜಿಲ್ಲೆಯ ಬಂಟ ಬಾಂಧವರಿಗೆ ಆಘಾತ ಉಂಟು ಮಾಡಿರುತ್ತದೆ. ಕಾಸರಗೋಡಿನ ಬಂಟರು ಎಲ್ಲರೂ ಒಗ್ಗಟ್ಟಿನಿಂದ ಕನ್ಯಾನ ಸದಾಶಿವ ಶೆಟ್ಟಿಯವರಿಗೆ ಆಗಿರುವ ನೋವಿನಲ್ಲಿ ನಾವು ಪೂರ್ಣ ಪ್ರಮಾಣದಲ್ಲಿ ಭಾಗಿಯಾಗಿರುತ್ತೇವೆ ಎಂದರು. ಮುಂದಿನ ದಿನಗಳಲ್ಲಿ ಡಾ| ಕನ್ಯಾನ…

Read More

ಪಡುಬಿದ್ರಿಯ ಅಗ್ರಜ ಮಂಜುಶ್ರೀ ಕಟ್ಟಡದಲ್ಲಿ ಪ್ರಾರಂಭಿಸಲಾದ ಶಮಿತ್ ಶೆಟ್ಟಿ ನೇತೃತ್ವದ ಮಂಗಳೂರು ಗ್ರೂಪ್ ನ 25ನೇ ಶಾಖೆ ‘ಸೆವೆನ್ತ್ ಹೆವನ್ ಕೇಕ್ ಶಾಪ್’ ಅನ್ನು ಫೆಬ್ರವರಿ 15ರಂದು ಕಾಪು ಕ್ಷೇತ್ರದ ಜನಪ್ರಿಯ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿ, ತುಳುನಾಡಿನ ಯುವಕ ಶಮಿತ್ ಶೆಟ್ಟಿ ಅವರು ಸೆವೆನ್ತ್ ಹೆವನ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಅವರಿಗೆ ಶುಭವಾಗಲಿ ಎಂದು ಹಾರೈಸಿದರು. ಅಲೆವೂರು ದೇವಿ ಪ್ರಸನ್ನ ಉಪಾಧ್ಯಾಯ ಶುಭಾಶಯಗೈದರು. ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ವಂದನಾ ರೈ ಮಾತನಾಡಿ, ರುಚಿಗೆ ಸೆವೆನ್ತ್ ಹೆವನ್ ಮನೆ ಮಾತಾಗಲಿ ಎಂದರು. ಯೂಟ್ಯೂಬರ್ ಹೆಗ್ಗದ್ದೆ ಸಂದೀಪ್ ಶೆಟ್ಟಿ ಅವರು ಮಾತನಾಡಿದರು. ನೆರೆದ ಗಣ್ಯರನ್ನು ಗೌರವಿಸಲಾಯಿತು. ಕಿರಣ್, ಸುಧಾಕರ ಶೆಟ್ಟಿ, ದೇವಕಿ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಕೃತಿಶ್ರೀ ಶೆಟ್ಟಿ ಪ್ರಾಸ್ತಾವಿಸಿ, ಮುಂಬಯಿ ಮೂಲದ ಸಸ್ಯಾಹಾರಿ ಕೇಕ್ ಶಾಪ್ ಇದಾಗಿದ್ದು, ಇಲ್ಲಿ ಏಳು ನಿಮಿಷದಲ್ಲಿ ಕೇಕ್ ತಯಾರಿಸಿ ಕೊಡಲಾಗುವುದು. ಮುಂದೆ ಬ್ರಹ್ಮಾವರ, ರಾಣೆಬೆನ್ನೂರು ಮುಂತಾಡೆದೆಗಳಲ್ಲಿ ಶಾಖೆಗಳು ತೆರೆಯಲಿವೆ ಎಂದರು.…

Read More

ಕಾರ್ಕಳ : ರಾಷ್ಟಮಟ್ಟದಲ್ಲಿ ಇಂಜಿನಿಯರಿ0ಗ್ ಪ್ರವೇಶಕ್ಕಾಗಿ ಎನ್.ಟಿ..ಎ ನಡೆಸಿದ ಜೆಇಇ ಮೈನ್(ಬಿ.ಟೆಕ್)-೨೦೨೬ರ ಪ್ರಥಮ ಹಂತದ ಫಲಿತಾ0ಶದಲ್ಲಿ ಜ್ಞಾನಸುಧಾ ಪಿ.ಯು ಕಾಲೇಜಿನ ೮ ವಿದ್ಯಾರ್ಥಿಗಳು ೯೯ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿ ಉತ್ತಮ ಸಾಧನೆ ಮಾಡಿರುತ್ತಾರೆ. ಟಾಪರ್ ಆಗಿ ೯೯.೯೦೫೫೧೯೯ ಪರ್ಸಂಟೈಲ್‌ನೊAದಿಗೆ ಕನಿಷ್ಕ್ ಅಮೀನ್ ಹೊರಹೊಮ್ಮಿದ್ದಾರೆ. ೨೨ ವಿದ್ಯಾರ್ಥಿಗಳು ೯೮ ಪರ್ಸಂಟೈಲ್‌ಗಿ0ತ ಅಧಿಕ, ೪೮ ವಿದ್ಯಾರ್ಥಿಗಳು ೯೭ ಪರ್ಸಂಟೈಲ್‌ಗಿAತ ಅಧಿಕ, ೭೪ ವಿದ್ಯಾರ್ಥಿಗಳು ೯೬ ಪರ್ಸಂಟೈಲ್‌ಗಿ0ತ ಅಧಿಕ, ೯೪ ವಿದ್ಯಾರ್ಥಿಗಳು ೯೫ ಪರ್ಸಂಟೈಲ್‌ಗಿ0ತ ಅಧಿಕ ಹಾಗೂ ೨೨೦ ವಿದ್ಯಾರ್ಥಿಗಳು ೯೦ ಪರ್ಸಂಟೈಲ್‌ಗಿ0ತ ಅಧಿಕ ಫಲಿತಾಂಶ ತಮ್ಮದಾಗಿಸಿಕೊ0ಡಿದ್ದಾರೆ. ಸಾಧಕ ವಿದ್ಯಾರ್ಥಿಗಳಿಗೆ ೩.೪೨ಲಕ್ಷ ರೂಪಾಯಿ ಟ್ರಸ್ಟಿನಿಂದ ಘೋಷಣೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ. ಸುಧಾಕರ್ ಶೆಟ್ಟಿಯವರು ೯೭ಕ್ಕಿಂತ ಅಧಿಕ ಪರ್ಸಂಟೈಲ್ ಗಳಿಸಿದ ಸಾಧಕ ವಿದ್ಯಾರ್ಥಿಗಳಿಗೆ ೩.೪೨ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನವನ್ನು ಘೋಷಿಸಿದ್ದಾರೆ. ಜೆ.ಇ.ಇ ಮೈನ್ ಪ್ರಥಮ ಹಂತದ ಫಲಿತಾಂಶದಲ್ಲಿ ೯೯.೯೦೫೫೧೯೯ ಪರ್ಸಂಟೈಲ್ ಪಡೆದ ಕನಿಷ್ಕ್ ಅಮೀನ್‌ರವರಿಗೆ ೧ ಲಕ್ಷ ರೂಪಾಯಿಯನ್ನು, ೯೯.೮೨೫೪೪೯೯ ಪರ್ಸಂಟೈಲ್ ಪಡೆದ…

Read More

ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯವರು ನಡೆಸುವ ಅತಿ ಕ್ಲಿಷ್ಟಕರವೆನಿಸಿದ ಪರೀಕ್ಷೆಗಳಲ್ಲೊಂದಾದ ಜೆಇಇ ಮೈನ್ಸ್ (ಸೆಷನ್-1) 2026 ನೇ ಸಾಲಿನ ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಕಾರ್ಕಳದ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ 102 ಮಂದಿ ವಿದ್ಯಾರ್ಥಿಗಳು 90 ಪರ್ಸೆಂಟೈಲ್ ಗಿಂತ ಅಧಿಕ ಅಂಕವನ್ನು ಪಡೆದು ವಿಶಿಷ್ಟ ಸಾಧನೆ ಗೈದು ಮುಂದಿನ ಹಂತದ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ತೇರ್ಗಡೆಯನ್ನು ಹೊಂದಿದ್ದಾರೆ. ವಿದ್ಯಾರ್ಥಿಗಳಾದ ನಮಿತ್ ಕೃಷ್ಣಮೂರ್ತಿ ಹೆಗಡೆ – 99.4981217 ಪರ್ಸೆಂಟೈಲ್, ನಾಗದೇವ್ ಎಂ.ಜಿ. – 99.3310617 ಪರ್ಸೆಂಟೈಲ್, ಪ್ರಥಮ್ ತಮ್ಮಣ್ಣ ಗೌಡರ್ – 99.1416986 ಪರ್ಸೆಂಟೈಲ್ ಪಡೆದುಕೊಳ್ಳುವ ಮೂಲಕ ವಿಶಿಷ್ಟ ಶ್ರೇಣಿಗಳಿಸಿದ್ದಾರೆ. ತೇಜಸ್ ಆರ್. ಬಿ.- 98.9615457 ನಿನಾದ್ ರಾಜೇಶ್ ನಾಯ್ಕ್- 98.9463580 ಧನುಷ್ ಹೆಚ್. ಎ.- 98.5706065 ಸಂವಿತ್‌ ಅಮಿತ್ ಗೋಕರ್ಣ- 98.5706065 ದೃಶ್ಯ್‌- 98.4130581 ಸುಕ್ಷಿತ್ ಗಿರೀಶ್ ಗೌಡ- 98.3503880 ತೇಜಸ್ ಎನ್. ಇ. – 98.3227894 ತೇಜಸ್ ಹೆಗಡೆ ಎಚ್. ಡಿ.-…

Read More

ಬ್ರಹ್ಮಾವರದ ಸಮೀಪದ ಸಾಲಿಕೇರಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅಗತ್ಯತೆಗಳನ್ನು ಮನಗಂಡು ಸಂಪತ್ ಕುಮಾರ್ ಶೆಟ್ಟಿ ಇವರ ಮಾಲಿಕತ್ವದ ಶ್ರೀ ಕ್ರಷ್ಣಪ್ರಸಾದ್ ಕ್ಯಾಶ್ಯೂ ಸಂಸ್ಥೆಯ ವತಿಯಿಂದ ನೂತನ ತಂಗುದಾಣವನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸಲಾಯಿತು. ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಮಾಲಿಕರಾದ ಸಂಪತ್ ಕುಮಾರ್ ಶೆಟ್ಟಿ, ನಮ್ಮ ಉದ್ಯಮ ಕ್ಷೇತ್ರದಲ್ಲಿ 15 ವರ್ಷಗಳಲ್ಲಿ ಸಾಧಿಸಿದ್ದನ್ನು, ಸಾಲಿಕೇರಿಯ ದೈವ ದೇವರ ಅನುಗ್ರಹದಿಂದ ಕೇವಲ ಒಂದು ವರ್ಷದ ಅವಧಿಯಲ್ಲಿ ಸಾಧಿಸಲು ಸಾಧ್ಯವಾಯಿತು. ಈ ಊರು ನಮಗೆ ಬಹಳಷ್ಟು ಕೊಟ್ಟಿದ್ದು, ಆದ್ದರಿಂದ ಊರಿನ ಅಭಿವೃದ್ಧಿ ವಿಚಾರದಲ್ಲಿ ಸದಾ ಜನರೊಂದಿಗೆ ನಿಂತು ಕೆಲಸ ಮಾಡುವ ಬದ್ಧತೆ ನಮ್ಮದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾರಂಬಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯಾನಂದ ಮಾತನಾಡಿ, ಕೃಷ್ಣ ಪ್ರಸಾದ್ ಕ್ಯಾಶ್ಯೂ ಸಂಸ್ಥೆಯು ಸಾವಿರಾರು ಬಡ ವರ್ಗದ ಜನರಿಗೆ ಉದ್ಯೋಗ ಕಲ್ಪಿಸುವ ಮೂಲಕ ಅವರ ಜೀವನೋಪಾಯಕ್ಕೆ ಭದ್ರತೆ ಒದಗಿಸುತ್ತಿದೆ. ಬಡವರ ಹೊಟ್ಟೆ ತುಂಬಿಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತಿರುವ ಈ ಸಂಸ್ಥೆಗೆ ವಾರಂಬಳ್ಳಿ ಗ್ರಾಮ ಪಂಚಾಯತ್ ಸದಾ…

Read More