Author: admin

ಅಂಬಲಪಾಡಿ ಕಪ್ಪೆಟ್ಟು ಶ್ರೀ ಬ್ರಹ್ಮಬೈದರ್ಕಳ ಗರೋಡಿಯ ವಾರ್ಷಿಕ ನೇಮ ಏಪ್ರಿಲ್ 4ರಂದು ನಡೆಯಲಿದೆ. ಏಪ್ರಿಲ್ 3ರಂದು ರಾತ್ರಿ 8 ಗಂಟೆಗೆ ಅನ್ನ ನೈವೇದ್ಯ ಸೇವೆ, ಏಪ್ರಿಲ್ 4 ರಂದು ಮಧ್ಯಾಹ್ನ 12:30 ಕ್ಕೆ ಅನ್ನಸಂತರ್ಪಣೆ, ರಾತ್ರಿ 7:00 ಗಂಟೆಗೆ ಭಂಡಾರ ಇಳಿಯುವುದು, ಅನಂತರ ಶ್ರೀ ಬ್ರಹ್ಮಬೈದರ್ಕಳ ನೇಮ ಜರಗಲಿದೆ. ಏಪ್ರಿಲ್ 7 ರಂದು ರಾತ್ರಿ 10 ಗಂಟೆಗೆ ಪಡು ಗಡುವಾಡಿನಲ್ಲಿ, ಏಪ್ರಿಲ್ 16ರಂದು ರಾತ್ರಿ 10 ಗಂಟೆಗೆ ಮೂಡು ಗಡುವಾಡಿನಲ್ಲಿ (ಸರಕಾರಿ ಆಸ್ಪತ್ರೆ ಬಳಿ) ಶ್ರೀ ವ್ಯಾಘ್ರ ಚಾಮುಂಡಿ ದೈವದ ಕೋಲ ನಡೆಯಲಿದೆ ಎಂದು ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು ತಿಳಿಸಿದ್ದಾರೆ.

Read More

ಮಾನವೀಯ ಸೇವೆಯೇ ರೆಡ್ ಕ್ರಾಸ್ ಸಂಸ್ಥೆಯ ಧ್ಯೇಯವಾಗಿದ್ದು ರಕ್ತನಿಧಿ ಸೇವೆ, ಅಗತ್ಯ ಇರುವ ವಿಕಲ ಚೇತನರಿಗೆ ಗಾಲಿಕುರ್ಚಿ ವಿತರಣೆ, ಉಚಿತ ವೈದ್ಯಕೀಯ ಶಿಬಿರ ಮುಂತಾದ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಅಶಕ್ತರ ಸೇವೆಗೆ ದಕ್ಷಿಣ ಕನ್ನಡ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆ ಸದಾ ಭದ್ದವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ರೆಡ್ ಕ್ರಾಸ್ ಸಮಿತಿಯ ಚೇರ್ಮನ್ ಸಿಎ ಶಾಂತರಾಮ ಶೆಟ್ಟಿ ಹೇಳಿದರು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಪದವಿನಂಗಡಿಯ ಮಹಿಳೆಗೆ ರೆಡ್ ಕ್ರಾಸ್ ಸಮಿತಿ ವತಿಯಿಂದ ವಿಶೇಷ ಆರಾಮದಾಯಕ ಮಂಚ ವಿತರಿಸಿ ಮಾತನಾಡಿದರು. ಮಾಜಿ ಮೇಯರ್ ಜಯಾನಂದ ಅಂಚನ್, ರೆಡ್ ಕ್ರಾಸ್ ಜಿಲ್ಲಾ ಸಮಿತಿ ನಿರ್ದೇಶಕ ಪಿ.ಬಿ ಹರೀಶ್ ರೈ, ಕಾರ್ಯದರ್ಶಿ ಕಿಶೋರ್ ಚಂದ್ರ ಹೆಗ್ಡೆ, ಪ್ರಮುಖರಾದ ಪ್ರಜ್ವಲ್ ಶೆಟ್ಟಿ, ಹರಿಪ್ರಸಾದ್, ಉಮೇಶ್ ಶೆಟ್ಟಿ, ರವೀಂದ್ರ ಅಮೀನ್, ಸಂಜೀತ್ ಶೆಟ್ಟಿ, ಸರೋಜಿನಿ, ದಿವ್ಯಾ, ಜಯ ಮೇರಿಹಿಲ್, ಮಾಧವ, ಫಲಾನುಭವಿಯ ತಾಯಿ ಮೀನಾಕ್ಷಿ, ರೆಡ್ ಕ್ರಾಸ್ ಸಿಬ್ಬಂದಿ ಗಿರೀಶ್ ಕುಮಾರ್, ಅನಿತಾ ಮೊದಲಾದವರು ಉಪಸ್ಥಿತರಿದ್ದರು.

Read More

ಈಗಿನ ಯುವ ಪೀಳಿಗೆಯ ಕೆಲವು ಹುಡುಗಿಯರಿಗೆ ಅತಿಯಾದ ಸ್ವೇಚ್ಛಾಚಾರ ಜಾಸ್ತಿಯಾಗಿ ಕೆಲವು ಹುಡುಗರ ಜೀವನ ಹಾಳಾಗ್ತಾ ಇದೆ. ಮುಖ್ಯವಾಗಿ ಈಗ ಇರುವುದೇ ತಂದೆ ತಾಯಿಗಳಿಗೆ ಒಬ್ಬಳೇ ಮಗಳು ಅಥವಾ ಒಬ್ಬನೇ ಮಗ. ಆದ್ದರಿಂದ ಅವರನ್ನು ಚಿಕ್ಕಂದಿನಿಂದಲೇ ಅತಿಯಾದ ಮುದ್ದು ಮಾಡಿ ಸಾಕಿರ್ತಾರೆ. ಅವುಗಳಿಗೆ ತಮ್ಮ ಹೆತ್ತವರು ತಮ್ಮನ್ನು ಸಾಕಿ ಸಲಹಲು, ಒಳ್ಳೆ ವಿದ್ಯಾಭ್ಯಾಸ ಕೊಡಿಸಲು ಎಷ್ಟು ಕಷ್ಟ ಪಟ್ಟಿದ್ದಾರೆ ಅನ್ನುವ ಅರಿವು ಇರುವುದಿಲ್ಲ. ಹೆತ್ತವರೂ ಹಾಗೆ ತಾವು ಪಡುವ ಕಷ್ಟ ಮಕ್ಕಳಿಗೆ ಗೊತ್ತಾಗಬಾರದೆಂದು ಅದನ್ನು ಮುಚ್ಚಿಡುತ್ತಾರೆ. ಇದರಿಂದ ಮಕ್ಕಳಿಗೂ ಹೆತ್ತವರ ಕಷ್ಟ ಗೊತ್ತಿರುವುದಿಲ್ಲ. ಅವರಿಗೆ ತಾವು ಕೇಳಿದ್ದನ್ನೆಲ್ಲಾ ಹೆತ್ತವರು ತೆಗೆದು ಕೊಡುತ್ತಾರೆ. ಎಲ್ಲಾ ಸುಲಭದಲ್ಲಿ ಸಿಕ್ಕಿದ ಕೂಡಲೇ ಅವುಗಳಿಗೆ ಸ್ವೇಚ್ಛಾಚಾರ ಬೆಳೆಯುತ್ತದೆ. ತಾನು ಏನು ಮಾಡಿದರೂ ಮನೆಯವರು ನಮ್ಮನ್ನು ಪ್ರಶ್ನೆ ಮಾಡುವುದಿಲ್ಲವೆಂಬ ಹುಂಬ ಧೈರ್ಯದಿಂದ ನಿಧಾನವಾಗಿ ದಾರಿ ತಪ್ಪಲು ಶುರು ಮಾಡುತ್ತಾರೆ. ಇದರಲ್ಲಿ ಹೆತ್ತವರ ತಪ್ಪು ತುಂಬಾ ಇದೆ. ಯಾರೇ ಆಗಲಿ ಮಕ್ಕಳಿಗೆ ಚಿಕ್ಕಂದಿನಿಂದಲೇ ಕಷ್ಟದ ಅರಿವು ಮೂಡಿಸಬೇಕು. ಮಕ್ಕಳಿಗೆ ಬರೀ…

Read More

ಬಂಟರ ಸಂಘ ಮುಂಬಯಿ ಪ್ರತಿ ವರ್ಷ ಏಪ್ರಿಲ್ 14 ರಂದು ಬಿಸು ಪರ್ಬ ಆಚರಣೆಯ ದಿನದಂದು ವಿಶ್ವ ಬಂಟರ ದಿನಾಚರಣೆಯನ್ನಾಗಿ ಆಚರಿಸಿಕೊಂಡು ಬರುತ್ತಿದೆ. ಪ್ರತೀ ವರ್ಷ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಿಕೊಂಡು ಬರುತ್ತಿದೆ. ಈ ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸಿದ ಅತ್ಯುತ್ತಮ ಸೇವೆಗೆ ರೈ ಸುಮತಿ ಎಜುಕೇಶನ್ ಟ್ರಸ್ಟ್ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ| ಅರುಣೋದಯ ಎಸ್ ರೈ ಹಾಗೂ 2025 ರ ಸಾಲಿನ ಮಿಸೆಸ್ ಇಂಡಿಯಾ ಕಿರೀಟ ಹೊತ್ತ ಡಾ. ರಷ್ಮಾ ಮೋಹಿತ್ ಶೆಟ್ಟಿಯವರು 2026 ರ ಸಾಲಿನ ಬೆಸ್ಟ್ ಬಂಟ್ ಅಚೀವರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಾರ್ಯಕ್ರಮವು ಏಪ್ರಿಲ್ 14 ರಂದು ಕುರ್ಲಾ ಬಂಟರ ಭವನದಲ್ಲಿ ನಡೆಯಲಿದೆ.

Read More

ಒಬ್ಬಾಕೆ ಮಹಿಳೆ ತನ್ನ ಸಂಸಾರ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಜೊತೆ ಜೊತೆಗೆ ಉದ್ಯಮ ವ್ಯವಹಾರಗಳಲ್ಲಿ ತನ್ನ ಕಾರ್ಯಕೌಶಲತೆಯನ್ನು ಮೆರೆಯ ಬಲ್ಲಳು ಎನ್ನುವುದಕ್ಕೆ ಉತ್ತಮ ನಿದರ್ಶನ ಆಗಬಲ್ಲವರು ಶ್ರೀಮತಿ ಕಾಂತಿ ಶೆಟ್ಟಿ. ಮೂಲತಃ ಶಿರ್ವ ನಡಿಬೆಟ್ಟಿನವರಾದ ಕಾಂತಿ ಶೆಟ್ಟಿ ಅವರು ತನ್ನ ಹುಟ್ಟೂರಿನಲ್ಲಿ ಶಿಕ್ಷಣ ಮುಗಿಸಿದ ಬಳಿಕ ಬೆಂಗಳೂರು ಸೇರಿ ತನ್ನ ಉದ್ಯಮ ವಿಚಕ್ಷಣೆಯಿಂದ ಯಶಸ್ವಿ ಮಹಿಳಾ ಉದ್ಯಮಿ ಎನಿಸಿಕೊಂಡ ನಂತರದ ದಿನಗಳಲ್ಲಿ ತನ್ನ ಚಿಂತನಶೀಲ ಸ್ವಭಾವ, ಸಮಕಾಲೀನ ಸಮಸ್ಯೆಗಳು, ರಾಜಕೀಯ ವಿದ್ಯಮಾನಗಳು ಕುರಿತಂತೆ ಆಳವಾದ ಚಿಂತನ ಮಂಥನದ ಬಳಿಕ ಸಾಮಾಜಿಕ, ರಾಜಕೀಯ ಹಾಗೂ ಸಂಘಟನಾ ಕ್ಷೇತ್ರಗಳಲ್ಲಿ ಗುರುತಿಸಿಕೊಂಡರು. ಇವರ ಸಂಕಲ್ಪ ಶಕ್ತಿ ಅದ್ಭುತವಾದುದು. ಜೊತೆಗೆ ಕನ್ನಡ ಭಾಷೆಯ ಮೇಲೆ ಇವರ ಹಿಡಿತ, ವಾಕ್ಪಟುತ್ವ, ತಾರ್ಕಿಕ ಚಿಂತನೆ ಮೊದಲಾದ ವಿಶೇಷ ಗುಣಗಳಿಂದ ದೇಶದ ಆಡಳಿತ ಪಕ್ಷ ಮೋದೀಜಿ ನೇತೃತ್ವದ ಭಾರತೀಯ ಜನತಾ ಪಕ್ಷದ ನಿಸ್ವಾರ್ಥ ಭಾವದ ಕಾರ್ಯಕರ್ತೆಯಾಗಿ ತನ್ನ ಜನಪ್ರಿಯತೆಯನ್ನು ಬೆಳೆಸಿಕೊಳ್ಳುವ ಮೂಲಕ ಅತ್ಯುತ್ತಮ ಸಂಘಟಕಿಯಾಗಿ ರೂಪುಗೊಂಡ ಬಳಿಕ ತನ್ನ ಸ್ವಸಮುದಾಯದ ಸಂಘಟನೆಯಾದ…

Read More

ಆತ್ಮನಿರ್ಭರ ಭಾರತವು ಕೇವಲ ಘೋಷಣೆ ಅಲ್ಲ, ಜನರ ಚಳವಳಿಯಾಗಿದೆ. ಪ್ರತಿಯೊಬ್ಬ ನಾಗರಿಕನು ಸ್ಥಳೀಯವಾಗಿ ಉತ್ಪಾದಿಸಿದ ಉತ್ಪನ್ನಗಳನ್ನು ಬಳಸುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆಯಾಗಬೇಕಾಗಿದೆ. ಅಭಿವೃದ್ಧಿ ಹೊಂದಿದ ಭಾರತದ ಗುರಿಯನ್ನು ಸಾಧಿಸಲು ದೇಶದೊಳಗೆ ಉತ್ಪಾದಿಸಿದ ಸರಕುಗಳನ್ನು ಹಾಗೂ ಆಹಾರ ಪದಾರ್ಥಗಳನ್ನು ಬಳಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷ ನವೀನ್ ಚಂದ್ರ ಜೆ ಶೆಟ್ಟಿ ಹೇಳಿದರು. ಅವರು ಪಡುಬಿದ್ರಿ ರೋಟರಿ ಕ್ಲಬ್ ಓಂಕಾರ್ ಕಾಸ್ಟೂಮ್ಸ್ ಮತ್ತು ಕಲಾಸಂಗಮ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ), ಬೆನಕ ಈವೆಂಟ್ಸ್ ಸಹಭಾಗಿತ್ವದಲ್ಲಿ ಮಾರ್ಚ್ 27ರಿಂದ ಮಾರ್ಚ್ 29 ರವರೆಗೆ ಪಡುಬಿದ್ರಿ ಬಂಟರ ಸಂಘದಲ್ಲಿ 3 ದಿನಗಳ ಕಾಲ ನಡೆಯುವ ಬೃಹತ್ ಆಹಾರ ಮತ್ತು ಸ್ವದೇಶಿ ಉತ್ಪನ್ನಗಳ ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷ ಸುನಿಲ್ ಕುಮಾರ್ ವಹಿಸಿದ್ದರು. ಇಂದಿನ ಯುವ ಜನತೆ ಆಧುನಿಕ ಬದುಕಿಗೆ ಒಳಗೊಂಡು ಆಹಾರ ಪದ್ಧತಿಯನ್ನು ಬದಲಾಯಿಸಿ ಕೊಳ್ಳುವ ಮೂಲಕ ವಿದೇಶಿಯರ ಸರಕು…

Read More

62 ವರ್ಷಗಳ ಇತಿಹಾಸವಿರುವ ಸುಮಾರು 130 ಸದಸ್ಯರಿರುವ ಕಾರ್ಕಳ ರೋಟರಿ ಕ್ಲಬ್ ಹಿಂದಿನ ಹಲವಾರು ವರ್ಷಗಳಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಶಿಕ್ಷಣ ಕ್ಷೇತ್ರ ಇರಬಹುದು, ಆರೋಗ್ಯ ಕ್ಷೇತ್ರ ಇರಬಹುದು, ಪರಿಸರ ಸಂರಕ್ಷಣೆ, ರೋಡ್ ಸೇಫ್ಟಿ ಅಂತಹ ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡುತ್ತಾ ಬಂದಿದೆ. ಅಶಕ್ತರಿಗೆ ಶಕ್ತಿಯನ್ನು ನೀಡುವಂತಹ ಯಾವುದೇ ಕಾರ್ಯಕ್ರಮ ಇರಬಹುದು ಅದರಲ್ಲಿ ಕಾರ್ಕಳ ರೋಟರಿ ಕ್ಲಬ್ ಮುಂಚೂಣಿಯಲ್ಲಿದೆ. ಕಾರ್ಕಳದಲ್ಲಿರುವ ರೋಟರಿ ಹಾಸ್ಪಿಟಲ್ ಒಂದು ಉತ್ತಮ ಗುಣಮಟ್ಟದ ಆಸ್ಪತ್ರೆ ಎನ್ನುವುದರಲ್ಲಿ ಸಂಶಯವಿಲ್ಲ. ಗ್ಲೋಬಲ್ ಗ್ರಾಂಟ್ ಮುಖಾಂತರ ಸುಮಾರು 90 ಲಕ್ಷ ವೆಚ್ಚದಲ್ಲಿ ಬ್ಲಡ್ ಬ್ಯಾಂಕ್ ನ್ನು ಓಪನ್ ಮಾಡುವ ಎಲ್ಲಾ ಕೆಲಸಗಳು ಮುಗಿದಿದೆ. ಸರಕಾರದಿಂದ ಅನುಮತಿ ಸಿಗುವ ಕೆಲಸ ಮಾತ್ರ ಬಾಕಿ ಇದೆ. ಸದ್ಯದಲ್ಲಿ ಅದು ಕೂಡಾ ಇನ್ನು ಒಂದೆರಡು ತಿಂಗಳಲ್ಲಿ ಸಿಗುವ ನಿರೀಕ್ಷೆಯಲ್ಲಿದೆ. ರೋಟರಿ ಕ್ಲಬ್ ವತಿಯಿಂದ ಹಲವಾರು ಮನೆಗಳನ್ನು ಕೂಡಾ ನಿರ್ಮಿಸಿ ಕೊಟ್ಟಿದೆ. ಹಲವಾರು ಮನೆಗಳಿಗೆ ಸೋಲಾರ್ ವಿದ್ಯುತ್ತನ್ನು ಅಳವಡಿಸಿ ಕೊಟ್ಟಿದೆ. ಹಲವಾರು ಕ್ಯಾನ್ಸರ್ ರೋಗಿಗಳಿಗೆ…

Read More

ಕರ್ನಾಟಕದ ಸುಂದರ ಕರಾವಳಿ ಪ್ರದೇಶವಾದ ಕಾರ್ಕಳವು ಸಾಂಸ್ಕೃತಿಕ ವೈಭವ, ಪ್ರಕೃತಿ ಸೌಂದರ್ಯ ಮತ್ತು ಶಾಂತ ವಾತಾವರಣಕ್ಕೆ ಪ್ರಸಿದ್ಧಿ. ಇದೇ ಊರಲ್ಲಿ ರಹಸ್ಯ ಸಂಚು ಮತ್ತು ಸತ್ಯದ ಹುಡುಕಾಟದಿಂದ ತುಂಬಿರುವ ಒಂದು ವಿಭಿನ್ನ ಕಥೆ ಮೂಡಿ ಬರುತ್ತದೆ. ಅದೇ ಅಮೃತ್ ರೈ ಮತ್ತು ಸುನೀಲ್ ಶೆಟ್ಟಿ ನಿರ್ಮಾಣದ ‘ಡಿಟೆಕ್ಟಿವ್ ದಿವಾಕರ್’. ಈ ತುಳು ಚಲನಚಿತ್ರದ ಟೀಸರ್ ಲಾಂಚ್ ಮತ್ತು ಎರಡನೇ ಪೋಸ್ಟರ್ ಬಿಡುಗಡೆ ಸಮಾರಂಭವು ಕ್ರಿಯೇಟಿವ್ ಕಾಲೇಜು ಕಾರ್ಕಳದಲ್ಲಿ ಮಾರ್ಚ್ 28 ರಂದು ಶನಿವಾರ ನೆರವೇರಿತು. ಕಾರ್ಯಕ್ರಮ ಅತಿಥಿಗಳಿಂದ ಜ್ಯೋತಿ ಬೆಳಗುವುದರ ಮುಖೇನ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅತಿಥಿಗಳಲ್ಲಿ ಓರ್ವರಾದ ಡಾ| ರವೀಂದ್ರ ಶೆಟ್ಟಿ ಬಜಗೋಳಿಯವರು, ನಮ್ಮ ನೆಲದ ಕಥೆಯನ್ನು ಹೇಳುವ ಈ ಚಲನಚಿತ್ರವು ಮುಂದಿನ ತಲೆಮಾರಿಗೆ ಒಂದು ಉತ್ತಮ ಸಂದೇಶವನ್ನು ನೀಡಲಿದೆ ಎಂದು ತಿಳಿಸುತ್ತಾ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಲನಚಿತ್ರದ ಸಹ ನಿರ್ಮಾಪಕರಾದ ವಿಭಾ ಪ್ರೊಡಕ್ಷನ್ ನ ಅಶ್ವತ್ ಎಸ್.ಎಲ್ ರವರು, ಈ ಚಲನಚಿತ್ರವು ಒಂದು ಹೊಸ ಕಥಾಹಂದರವನಿಟ್ಟುಕೊಂಡು…

Read More

ಪ್ರಸ್ತುತ ದಿನಮಾನದಲ್ಲಿ ರಜಾ ಸಮಯವನ್ನು ಮಕ್ಕಳು ಕೇವಲ ಮೊಬೈಲ್ ಗೆ ದಾಸರಾಗಿ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೆ ತಮ್ಮ ಅಮೂಲ್ಯ ಬಾಲ್ಯದ ಕ್ಷಣಗಳನ್ನು ವ್ಯರ್ಥವಾಗಿ ಕಳೆಯುತ್ತಿದ್ದಾರೆ. ಇದು ಪ್ರಸ್ತುತ ಹೆತ್ತ ತಂದೆ ತಾಯಿಯರಿಗೂ ಮಕ್ಕಳ ಈ ವರ್ತನೆ ನುಂಗಲಾರದ, ಅರಗಿಸಿಕೊಳ್ಳಲಾಗದ ನೋವಿನ ಕ್ಷಣಗಳು ಹೌದು. ಈ ನಿಟ್ಟಿನಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆರಂಭಗೊಳ್ಳಲಿರುವ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ನಲ್ಲಿ ಮಕ್ಕಳು ತಮ್ಮ ರಜಾ ದಿನಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂಬ ಧ್ಯೇಯವನ್ನು ಇಟ್ಟುಕೊಂಡು ಇದೇ ಬರುವ ಏಪ್ರಿಲ್ 2,3,4 2026 ರಂದು ಮಕ್ಕಳ ವಿಶೇಷ ಶಿಬಿರ ಚಿಲಿಪಿಲಿ -2026 ನಡೆಯಲಿದೆ. ಇಂದಿನ ಸ್ಕ್ರೀನ್ ಟೈಮ್ ಯುಗದಲ್ಲಿ ಮಕ್ಕಳು ತಮ್ಮ ಬಾಲ್ಯವನ್ನು ವ್ಯರ್ಥ ಮಾಡಿಕೊಳ್ಳುತ್ತಿರುವಾಗ ಈ ಶಿಬಿರವು ನೆನಪುಗಳನ್ನು ಸೃಷ್ಟಿಸಲು, ಸೃಜನಶೀಲತೆಯನ್ನು ಹೆಚ್ಚಿಸಲು, ಸ್ನೇಹಿತರನ್ನು ಮಾಡಿಕೊಳ್ಳಲು, ಹೊಸ ಆಸಕ್ತಿಗಳನ್ನು ಕಂಡುಕೊಳ್ಳಲು ಒಟ್ಟಾರೆಯಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಈ ಶಿಬಿರವು ಮಕ್ಕಳಿಗೆ ಅತ್ಯಂತ ಮಹತ್ವವುಳ್ಳದ್ದಾಗಿದೆ. ಮಾತ್ರವಲ್ಲದೇ 90 ರ ದಶಕದ ಜೀವನ…

Read More

ಗೋವಾ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಹೋಟೆಲು ಉದ್ಯಮಿ, ಪಟ್ಲ ಫೌಂಡೇಶನ್ ಗೋವಾ ಘಟಕದ ಉಪಾಧ್ಯಕ್ಷ, ತುಳುಕೂಟ ಗೋವಾದ ಉಪಾಧ್ಯಕ್ಷ, ಸಮಾಜಸೇವಕ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾದ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕೊಡೆಂಕಿರಿ ಶಶಿಧರ ರೈಯವರು ಆಯ್ಕೆಯಾಗಿದ್ದಾರೆ. ದಿವಂಗತ ಬೆಳಿಯೂರು ಬೀಡು ಕಿಟ್ಟಣ್ಣ ರೈ ಹಾಗೂ ಡಿಂಬ್ರಿ ಗುತ್ತು ದುಗ್ಗಮ್ಮ ರೈಯವರ ಸುಪುತ್ರ ಕೆ ಶಶಿಧರ್ ರೈಯವರು ಹಲವಾರು ವರ್ಷಗಳಿಂದ ಶೆಟ್ಟಿ ಕೇಟರಿಂಗ್ ಸರ್ವಿಸಸ್ ಎಂಬ ಕೇಟರಿಂಗ್ ಉದ್ಯಮವನ್ನು ನಿರ್ವಹಿಸಿಕೊಂಡು ಬರುತ್ತಿದ್ದು, ಹುಟ್ಟೂರಿನ ಬಡ ವಿದ್ಯಾರ್ಥಿಗಳಿಗೆ ಹಲವಾರು ವರ್ಷಗಳಿಂದ ವಿದ್ಯಾರ್ಜನೆಗೆ ಸಹಕಾರ ನೀಡುತ್ತಿದ್ದಾರೆ. ಗೋವಾದ ತುಳು ಕನ್ನಡಿಗರಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದು ಹಲವಾರು ಸಂಘ ಸಂಸ್ಥೆಗಳಲ್ಲಿ ಕೈ ಜೋಡಿಸಿಕೊಂಡು, ಗೋವಾ ಬಂಟರ ಸಂಘದಲ್ಲಿಯೂ ಸಿಕ್ಕಿದ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಓರ್ವ ಯಶಸ್ವೀ ಉದ್ಯಮಿಯಾಗಿ, ಸಂಘಟಕರಾಗಿ, ಸಮಾಜ ಸೇವಕರಾಗಿ ಹೊರಹೊಮ್ಮಿದ್ದು, ಇಂದು ಉದಾರ ಹೃದಯಿ ದಾನಿಯಾಗಿ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ಇದೀಗ ಇವರ ಕೀರ್ತಿ ಕಿರೀಟಕ್ಕೆ ಮುತ್ತಿನ ಮಣಿ ಸೇರಿಕೊಂಡಂತೆ ಗೋವಾ…

Read More