Author: admin

ದುಬೈನ ಶೇಖ್ ಝಯೀದ್ ರಸ್ತೆಯ ಮಿಲೇನಿಯಂ ಪ್ಲಾಝ ಹೋಟೆಲ್ ನ ಸಭಾಂಗಣದಲ್ಲಿ ಯುಎಇಯ ಒಂದು ಸಾವಿರದ ಐದು ನೂರಕ್ಕೂ ಅಧಿಕ ಬಂಟರು ಸೇರಿ ಯುಎಇ ಬಂಟ್ಸ್ ನ 48 ನೇ ವರ್ಷದ ಕೂಡುಕಟ್ಟ್ “ಭಾವೈಕ್ಯ” ಬಂಟರ ಸಮಾಗಮ ಅದ್ದೂರಿಯಾಗಿ ನಡೆಯಿತು. ಯುಎಇ ಬಂಟ್ಸ್ ನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರ, ಸಲಹಾ ಸಮಿತಿಯ ಸದಸ್ಯರ ಮತ್ತು 2025 ನೇ ಸಾಲಿನ ಸಂಘಟನಾ ಸಮಿತಿಯ ಸರ್ವ ಸದಸ್ಯರ ಕಳೆದ ನಾಲ್ಕು ತಿಂಗಳುಗಳ ಕಠಿಣ ಪರಿಶ್ರಮದ ಫಲವೇ ಅಷ್ಟೊಂದು ಸಂಖ್ಯೆಯ ಬಂಟರು ಸೇರಲು ಹಾಗೂ ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು. ಬೆಳಿಗ್ಗೆ ಹತ್ತು ಗಂಟೆಗೆ 48ನೇ ವರ್ಷದ ಕೂಡುಕಟ್ಟ್ ‘ಭಾವೈಕ್ಯ’ ಕಾರ್ಯಕ್ರಮ‌ದ ಉದ್ಘಾಟನೆಯನ್ನು ಸಂಘದ ಪೋಷಕರಾದ ಸರ್ವೋತ್ತಮ ಶೆಟ್ಟಿ, ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಉಪಾಧ್ಯಕ್ಷರಾದ ಪ್ರೇಮ್ ನಾಥ್ ಶೆಟ್ಟಿ, ಪ್ರದಾನ ಕಾರ್ಯದರ್ಶಿ ರವಿರಾಜ್ ಶೆಟ್ಟಿ ಮತ್ತು ಸಂಘಟನಾ ಸಮಿತಿಯ ಮಹಿಳಾ ಸದಸ್ಯೆಯರು ದೀಪ ಬೆಳಗಿಸಿ ಚಾಲನೆ ನೀಡಿದರು. ಸಲಹಾ ಸಮಿತಿಯ ಸದಸ್ಯರಾದ…

Read More

ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ಡಿಸೆಂಬರ್ 19, 20 ಮತ್ತು 21 ರಂದು ಸುರತ್ಕಲ್ ಬಂಟರ ಭವನದ ಆವರಣದಲ್ಲಿ “ಪರ್ವ – 2025” ಸೀರೆ ಮೇಳ, ಲೈಫ್ ಸ್ಟೈಲ್ ಮತ್ತು ಫುಡ್ ಫೆಸ್ಟಿವಲ್ ನಡೆಯಲಿದೆ ಎಂದು ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ ಕಾರ್ಯದರ್ಶಿ ರಾಜೇಶ್ವರಿ ಡಿ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಡಿಸೆಂಬರ್ 20 ರಂದು ಶನಿವಾರ ಸಂಜೆ 7 ಕ್ಕೆ ಪೆರ್ಮೆದ ಕಲಾವಿದೆರ್ ಚೇಳಾರ್ ತಂಡದಿಂದ “ಎನ್ನಿಲೆಕ್ಕ ಇಜ್ಜೆರ್” ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಡಿಸೆಂಬರ್ 21 ರಂದು ಸಂಜೆ 6 ಗಂಟೆಗೆ ವಿಶ್ವಾಸ್ ಮ್ಯೂಸಿಕಲ್ ಮಂಗಳೂರು ತಂಡದಿಂದ “ಸಂಗೀತ ರಸ ಮಂಜರಿ” ಬಳಿಕ 7 ಗಂಟೆಗೆ ಉಮೇಶ್ ಮಿಜಾರ್ ಸಾರಥ್ಯದ ನಮ್ಮ ಕಲಾವಿದೆರ್ ಬೆದ್ರ ತಂಡದಿಂದ ಈ ವರ್ಷದ ಸೂಪರ್ ಹಿಟ್ ಹಾಸ್ಯ ನಾಟಕ “ವೈರಲ್ ವೈಶಾಲಿ” ಪ್ರದರ್ಶನ ಗೊಳ್ಳಲಿದೆ ಎಂದರು. ಡಿ. 20 ಮತ್ತು 21 ರಂದು ಸಂಜೆ ನಾಲ್ಕು ಗಂಟೆಯಿಂದ ರಾತ್ರಿ…

Read More

ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ಸೆವೆನ್ತ್ ಹೆವೆನ್ ಕೇಕ್ ಶಾಪ್ ನ 23ನೇ ಶಾಖೆ ಡಿಸೆಂಬರ್ 12ರಂದು ಕುಂದಾಪುರದ ಪಾರಿಜಾತ ಹೋಟೆಲ್ ಸಮೀಪವಿರುವ ಶಂಕರ್ ಟವರ್ಸ್ ನೆಲಮಹಡಿಯಲ್ಲಿ ಶುಭಾರಂಭಗೊಂಡಿತು. ಮಾಲಕ ಶಮಿತ್ ಶೆಟ್ಟಿ ಕೆಮ್ತೂರು ಅವರ ತಾಯಿ ದೇವಕಿ ಶೆಟ್ಟಿ ನೂತನ ಶಾಖೆಯನ್ನು ಉದ್ಘಾಟಿಸಿದರು. ಕಟ್ಟಡದ ಮಾಲಕ ಉದ್ಯಮಿ ಸುರೇಶ್ ಭಂಡಾರ್ಕರ್ ರವರು ದೀಪ ಬೆಳಗಿದರು. ಅಶೋಕ್ ಶೆಟ್ಟಿ ಕೆಮ್ತೂರು, ರವೀಂದ್ರ ಶೆಟ್ಟಿ ಮೂಲ್ಕಿ, ರತ್ನಾಕರ ಶೆಟ್ಟಿ ಕಟ್ಟಂಗೇರಿ, ಅಶೋಕ್ ಶೆಟ್ಟಿ ಪೂನಾ, ಜೀವನ್ ಬೆಂಗಳೂರು, ಕುಸುಮ ಶೆಟ್ಟಿ ಮೂಲ್ಕಿ, ವನಿತಾ ಶಿರ್ವ, ಮಾಲಕರಾದ ಶಮಿತ್ ಶೆಟ್ಟಿ, ರಶ್ಮಿ ಶೆಟ್ಟಿ, ಸುಕೇಶ್ ಶೆಟ್ಟಿ, ಸರಿತಾ ಶೆಟ್ಟಿ ಉಪಸ್ಥಿತರಿದ್ದರು. ಶುದ್ಧ ಸಸ್ಯಹಾರಿ ಉತ್ಪನ್ನಗಳನ್ನು ತಯಾರಿಸುವ ಈ ಬೇಕರಿಯ ಶಾಖೆಗಳು ದೇಶದ ವಿವಿಧ ನಗರಗಳಲ್ಲಿ ಕಾರ್ಯಾಚರಿಸುತ್ತಿದೆ. ಗ್ರಾಹಕರಿಗೆ ಸ್ಥಳದಲ್ಲಿಯೇ ಬೇಕರಿ ಉತ್ಪನ್ನಗಳನ್ನು ತಯಾರಿಸಿ ಕೊಡುವುದು ಇಲ್ಲಿನ ವಿಶೇಷತೆಯಾಗಿದೆ. ಇಲ್ಲಿ ಶುಚಿ ರುಚಿಯಾದ ವೈವಿಧ್ಯಮಯ ಕೇಕ್ ಐಟಂಗಳು ಗ್ರಾಹಕರ ಕೈಗೆಟಗುವ ಬೆಲೆಯಲ್ಲಿ ದೊರೆಯಲಿದೆ. ಅತ್ಯುತ್ತಮ ಆತಿಥ್ಯ, ರುಚಿಕರ…

Read More

ಇನೋಳಿ ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನವು ಅತೀ ಪುರಾತನ ದೇವಾಲಯವಾಗಿದ್ದು, ಪ್ರಕೃತಿಯ ಸೌಂದರ್ಯಮಯವಾದ ದೇವೆಂದಬೆಟ್ಟ ಮೇಲೆ ಶ್ರೀ ಸೋಮನಾಥೇಶ್ವರನ ದೇವಾಲಯವಿದೆ. ನೇತ್ರಾವತಿ ನದಿಯು ದೇವಾಲಯವಿರುವ ಪ್ರದೇಶದ ಮೂರು ಸುತ್ತಾ ಬಳುಕುತ್ತಾ ಹರಿದು ಅರಬ್ಬಿ ಸಮುದ್ರ ಸೇರುವ ದೃಶ್ಯ ಮೈನವಿರೇಳಿಸುತ್ತದೆ. ಹಸಿರು ಪರ್ವತಗಳ ನಡುವೆ ಹರಿಯುವ ನದಿ, ಸೂರ್ಯಾಸ್ತ ಅಥವಾ ಸೂರ್ಯೋದಯದ ವೀಕ್ಷಣೆಯ ದೃಶ್ಯ ನಮ್ಮನ್ನು ಸಮ್ಮೋಹನಗೊಳಿಸುತ್ತದೆ. ಇನೋಳಿ ಅಥವಾ ಇನವಳ್ಳಿ ಎಂಬ ಪುಟ್ಟ ಹಳ್ಳಿ ದಕ್ಷಿಣ ಕನ್ನಡ ಜಿಲ್ಲೆಯ ಪಾವೂರು ಗ್ರಾಮದ ನೇತ್ರಾವತಿ ನದಿಯ ದಂಡೆಯಲ್ಲಿದೆ. ಈ ದೇವಸ್ಥಾನಕ್ಕೆ ಮಂಗಳೂರಿನಿಂದ ತೊಕ್ಕೊಟ್ಟು, ದೇರಳಕಟ್ಟೆ ಕೋಣಾಜೆ ವಿಶ್ವವಿದ್ಯಾಲಯ ಮಾರ್ಗವಾಗಿ ಹೋಗುವುದಾದರೆ ೨೮ಕಿ.ಮೀ ದೂರವಿದೆ ಹಾಗೂ ಬಸ್ ವ್ಯವಸ್ಥೆ ಕೂಡಾ ಇದೆ. ಇತ್ತೀಚೆಗೆ ರಾ. ಹೆ. ೨೭೫ರ ಅಡ್ಯಾರಿನಲ್ಲಿ ನೇತ್ರಾವತಿ ನದಿಗೆ ಕಟ್ಟಲಾದ ಸೇತುವೆ ಹರೇಕಳ ಪಾವೂರು ಎಂಬಲ್ಲಿ ಸೇರುತ್ತದೆ. ಈ ಮೂಲಕ ಮಂಗಳೂರಿನಿಂದ ಬರುವುದಾದರೆ ಕೇವಲ ೧೮ಕಿ.ಮೀ ದೂರದಲ್ಲಿದೆ. ಅಲ್ಲದೇ ಇದೇ ಹೆದ್ದಾರಿಯಲ್ಲಿ ಸಿಗುವ ಫರಂಗಿಪೇಟೆ, ಅರ್ಕುಲ ಎಂಬಲ್ಲಿ ದೋಣಿ ಮೂಲಕ ನದಿ…

Read More

ಒಂದು ಕಾಲದಲ್ಲಿ ಅಯ್ಯೋ ಚಳಿಚಳಿ ಎಂಬ ಕಾಲಕ್ಕೆ ಬರುತ್ತಿತ್ತು ಈ ಧನುರ್ಮಾಸ. ಆದರೆ ಕಾಲ ಪ್ರಭಾವವೋ, ಪ್ರಕೃತಿಯ ಮೇಲಿನ ಮನುಷ್ಯನ ನಿರಂತರವಾದ ಆಕ್ರಮಣದ ಕಾರಣವೋ? ಎಂಬಂತೆ ಕೆಲ ವರ್ಷಗಳಿಂದ ಚಳಿಯೇ ಇಲ್ಲ. ಆದರೆ ಈ ಸಲ ಸ್ವಲ್ಪ ಚಳಿಯ ವಾತಾವರಣ ಇದೆ. ಈಗೀಗ ವರ್ಷದ ಮೂರು ಕಾಲಗಳೂ ಋತುಮಾನಕ್ಕನುಗುಣವಾಗಿ ಇಲ್ಲವೇ ಇಲ್ಲ. ಆದರೆ ಕ್ಯಾಲೆಂಡರ್ ಮತ್ತು ಪಂಚಾಂಗದ ಪ್ರಕಾರ ನಮ್ಮೆಲ್ಲಾ ಹಬ್ಬ ಹರಿದಿನ, ರೀತಿ ರಿವಾಜುಗಳು ಹಿಂದೆಂದಿಗಿಂತಲೂ ವಿಜೃಂಭಣೆಯಿಂದ ನಡೆಯುತ್ತಿದೆ. ಇದು ಸಂತೋಷವೂ ಆಗಿದೆ. ಜೊತೆಗೆ ನಮ್ಮ ಮುಂದಿನ ಪೀಳಿಗೆಗೆ ಜಾಗೃತಿ ಮೂಡಿಸುವ ಉದ್ದೇಶವೂ ಆಗಿದೆ. ಈ ಸಲ ಈವತ್ತಿನಿಂದ ಪ್ರಾರಂಭವಾಗಿದೆ ಧನುರ್ಮಾಸ. ಹೆಚ್ಚಿನ ಎಲ್ಲಾ ಊರಿನ ಬಹುತೇಕ ದೇವಾಲಯಗಳಲ್ಲೂ ಪ್ರಾತಃ ಕಾಲದ “ಧನುಪೂಜೆ” ವಿಶೇಷವಾಗಿ ನಡೆಯುತ್ತದೆ. ಈ ಕುರಿತು ಸಂಗ್ರಹಿತ ಮಾಹಿತಿಯಂತೆ ಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಮಾಸಗಳನ್ನು ಕುರಿತು ಹೇಳುವಾಗ ಧನುರ್ಮಾಸದ ಮಹಾತ್ಮೆಗೆ ವಿಶೇಷ ಒತ್ತು ನೀಡಿ “ಮಾಸಾನಾಂ ಮಾರ್ಗಶೀರ್ಷೋಸ್ಮಿ” ಎಂದು ಅಪ್ಪಣೆ ಕೊಡಿಸಿದ್ದಾರೆ. ಸೂರ್ಯ ಒಂದು ರಾಶಿಯಿಂದ ಇನ್ನೊಂದು…

Read More

ಶಾಲಾಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ವತಿಯಿಂದ ಕೊಪ್ಪಳದಲ್ಲಿ ಜರುಗಿದ ರಾಜ್ಯಮಟ್ಟದ ಜಂಪ್‍ರೋಪ್ ಸ್ಪರ್ಧೆಯ 30ಸೆಕೆಂಡ್ ಡಬಲ್ ಅಂಡರ್ ರಿಲೇ ವಿಭಾಗದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ನಿಖಿಲ್ ಎಂ.ವಿ, ಪೂರ್ವಜ್ ಗೌಡ ವಿ, ಪ್ರಥಮೇಶ್ ಡಿ.ಪಿ, ಎನ್.ನಿಖಿಲ್, ಶಾನ್ವಿ ಎಸ್ ಹಾಗೂ ಕಾಜೊಲ್.ಎಂ.ಪಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ. ಈ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.

Read More

ಬ್ರಹ್ಮಾವರ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ಡಿಸೆಂಬರ್ 16 ರಂದು ಡಾ. ಚಂದ್ರಶೇಖರ ಕಂಬಾರ ಅವರು ಬರೆದ ಕಥೆಗಳನ್ನಾಧರಿಸಿದ ಕೆ. ಜಿ. ಕೃಷ್ಣಮೂರ್ತಿ, ಸಜಿ ಆರ್. ತುಮರಿ ಅರುಣ ಎನ್, ಕಿನ್ನರಿ ಮೇಳದವರು ನಿರ್ದೇಶಿಸಿರುವ ‘ಮರವೇ ಮರ್ಮರ’ವೇ ಮಕ್ಕಳ ನಾಟಕದ ರಂಗಪ್ರದರ್ಶನ ಏರ್ಪಡಿಸಲಾಗಿತ್ತು. ಜಾನಪದ ಕಥೆಗಳನ್ನಾಧರಿಸಿದ ರಂಗ ಪ್ರಸ್ತುತಿಯಲ್ಲಿ ಕಾಡು ಮತ್ತು ನಾಡಿಗೆ ತಾಯಿ ಮಕ್ಕಳ ಸಂಬಂಧವಿದೆ. ಆದರೆ ಪ್ರಕೃತಿ ಕೊಟ್ಟ ವರಗಳನ್ನು ಮನುಷ್ಯ ತನ್ನ ದುರಾಸೆಯಿಂದಾಗಿ ಶಾಪವಾಗಿ ಪರಿವರ್ತಿಸಿಕೊಳ್ಳುತ್ತಿದ್ದಾನೆಂಬ ಅಂಶವನ್ನು ಪ್ರದರ್ಶನದ ಮೂಲಕ ಬೆಳಕಿಗೆ ತಂದರು. ಇದ್ದಿಲು ಮಹಾರಾಜ, ಬಿದಿರಿನ ಚೆಲುವೆ ಮತ್ತು ಆತ್ಮಹತ್ಯೆ ಎಂಬ ಮೂರು ಕಥೆಗಳ ಆಯ್ಕೆಯ ಮೂಲಕ ರಂಗ ಪ್ರಸ್ತುತಿ ಏರ್ಪಡಿಸಿದ್ದರು. ವಿದ್ಯಾರ್ಥಿಗಳು ಕಾಡು ಮತ್ತು ನಾಡಿಗಿರುವ ತಾಯಿಯ ಸಂಬಂಧ ಮತ್ತು ಮರದ ರಕ್ಷಣೆಯ ಕುರಿತು ಮನುಷ್ಯರಿಗಿರುವ ಜವಾಬ್ದಾರಿಗಳನ್ನು ಅರಿತುಕೊಂಡರು. ವಿದ್ಯಾರ್ಥಿಗಳಿಗೆ ಕಾಡು ಬೆಳೆಸಿ ನಾಡು ಉಳಿಸಿ ಎಂಬ ಸಂದೇಶವನ್ನು ನೀಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್‍ರವರು ರಂಗ ಪ್ರದರ್ಶನದ ಕುರಿತು ಮೆಚ್ಚುಗೆ…

Read More

ಹಲವಾರು ಅನಿವಾಸಿ ಕನ್ನಡಿಗರ ಸಂಘಟನೆಗಳು ಡಾ| ರೊನಾಲ್ಡ್ ಕೊಲಾಸೊ ಅವರ ನೇತೃತ್ವದಲ್ಲಿ ತಮ್ಮ ವಿವಿಧ ಬೇಡಿಕೆಗಳ ಬಗ್ಗೆ ಕರ್ನಾಟಕ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ. 2023 ರ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನೀಡಿದ್ದ ಎರಡು ಪ್ರಮುಖ ಚುನಾವಣಾ ಭರವಸೆಗಳಾಗಿದ್ದ ಅನಿವಾಸಿ ಕನ್ನಡಿಗರ ವ್ಯವಹಾರಗಳಿಗೆ ಪ್ರತ್ಯೇಕ ಸಚಿವಾಲಯ ಮತ್ತು ಇಲಾಖೆಯ ರಚನೆ ಹಾಗೂ ಕರ್ನಾಟಕದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಅಥವಾ ರಾಜ್ಯಕ್ಕೆ ಶಾಶ್ವತವಾಗಿ ಸ್ಥಳಾಂತರಗೊಳ್ಳಲು ಬಯಸುವ ಅನಿವಾಸಿ ಕನ್ನಡಿಗರನ್ನು ಬೆಂಬಲಿಸಲು 1,000 ಕೋ. ರೂ. ಮೊತ್ತದ ನಿಧಿ ಸ್ಥಾಪನೆ ಬಗ್ಗೆ ಸರಕಾರ ಇನ್ನೂ ಕ್ರಮ ಕೈಗೊಂಡಿಲ್ಲ. ಸರಕಾರ ರಚನೆಯಾಗಿ 2.5 ವರ್ಷ ಕಳೆದಿದ್ದರೂ ಈ ಭರವನೆಗಳನ್ನು ಈಡೇರಿಸದೆ ಇರುವುದು ನಮಗೆಲ್ಲ ತುಂಬಾ ಬೇಸರ ಉಂಟು ಮಾಡಿದೆ. ಈ ಭರವಸೆಗಳು ಈಡೇರಿದ್ದರೆ ರಾಜ್ಯಕ್ಕೆ ಹಾಗೂ ಅನಿವಾಸಿ ಕನ್ನಡಿಗರಿಗೂ ತುಂಬಾ ಅನುಕೂಲ ಆಗುತ್ತಿತ್ತು. ಆದ್ದರಿಂದ ಈ ಎರಡು ಬೇಡಿಕೆಗಳನ್ನು ಆದಷ್ಟು ಬೇಗ ಈಡೇರಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಇವೆರಡು ಕಾರ್ಯರೂಪಕ್ಕೆ ಬಂದರೆ ಹೂಡಿಕೆ,…

Read More

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಾಥಮಿಕ ಆರೋಗ್ಯ ಕೇಂದ್ರ ಕುಕ್ಕುಂದೂರು, ರೋಟರಿ ಕ್ಲಬ್ ಕಾರ್ಕಳ, ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್, ಪ್ರಸಾದ್ ನೇತ್ರಾಲಯ ಇವರ ಸಹಯೋಗದೊಂದಿಗೆ ಉಚಿತ ನೇತ್ರ ತಪಾಸಣೆ ಹಾಗೂ ಪೊರೆ ಶಸ್ತ್ರಚಿಕಿತ್ಸಾ ಶಿಬಿರವು ಪ್ರಾಥಮಿಕ ಆರೋಗ್ಯ ಕೇಂದ್ರ ಕುಕ್ಕುಂದೂರು ಕಾರ್ಕಳ ಇಲ್ಲಿ ನಡೆಯಿತು. ಕುಕ್ಕುಂದೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾ ಯು ಅವರ ಅಧ್ಯಕ್ಷತೆಯಲ್ಲಿ ನಡೆದ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿದ ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮಾತನಾಡುತ್ತಾ, ಕಣ್ಣು ದೇಹದ ಅಮೂಲ್ಯವಾದ ಅಂಗ. ಇದರ ಬಗ್ಗೆ ಗ್ರಾಮೀಣ ಜನರಿಗೆ ಮಾಹಿತಿ ಹಾಗೂ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ. ಇದರಲ್ಲಿ ಎಲ್ಲರೂ ಕೈಜೋಡಿಸಬೇಕಾಗಿದೆ ಎಂದರು. ಕಾರ್ಕಳ ತಾಲೂಕು ಆರೋಗ್ಯ ಅಧಿಕಾರಿ ಸಂದೀಪ್ ಕುಡ್ವ ಮಾತನಾಡುತ್ತಾ, ಈಗಿನ ಜೀವನ ಶೈಲಿ, ಕೆಲಸದ ಒತ್ತಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇಂಥ ಕಾರ್ಯಕ್ರಮಗಳಿಗೆ ಸ್ವಯಂ ಸೇವಾ ಸಂಸ್ಥೆಗಳ ಸಹಕಾರ ಅತಿ ಅಗತ್ಯ ಎಂದರು. ಗ್ರಾಮ ಪಂಚಾಯತ್…

Read More

ಗುರುಪುರ ದೋಣಿಂಜೆ ಗುತ್ತು ಗಡಿ ಪ್ರಧಾನರಾದ ಪ್ರಮೋದ್ ಕುಮಾರ್ ರೈಯವರ ಅಧ್ಯಕ್ಷತೆಯಲ್ಲಿ, ಯತಿವರ್ಯ ಹಾಗೂ ತಂತ್ರಿವರ್ಯರ ಅನುಗ್ರಹ ಮಾರ್ಗದರ್ಶನ ಮತ್ತು ಪವಿತ್ರ ಸಾನ್ನಿಧ್ಯದಲ್ಲಿ ಡಿಸೆಂಬರ್ 21ರಂದು ನಗರದ ಉರ್ವಾ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ನಡೆಯಲಿರುವ ‘ಧರ್ಮಾವಲೋಕನ ಸಭೆ’ಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಶುಕ್ರವಾರ ಜರಗಿತು. ಈ ಕಾರ್ಯಕ್ರಮವನ್ನು ವಿಶ್ವ ಹಿಂದೂ ಪರಿಷತ್‌, ಹಿಂದೂ ಯುವಸೇನೆ ಮತ್ತು ತುಳುನಾಡ ರಕ್ಷಣಾ ವೇದಿಕೆಯ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಆಮಂತ್ರಣ ಪತ್ರಿಕೆ ಬಿಡುಗಡೆ ನಂತರ ಮಾತನಾಡಿದ ಗಡಿ ಪ್ರಧಾನ ಪ್ರಮೋದ್ ಕುಮಾರ್ ರೈ ಅವರು, ‘ಹಿಂದೂ ಧರ್ಮದ ಸಂರಕ್ಷಣೆ, ಧರ್ಮದ ಮೂಲ ಸಿದ್ಧಾಂತಗಳ ಅರಿವು ಮತ್ತು ಯುವ ಪೀಳಿಗೆಯಲ್ಲಿ ಧಾರ್ಮಿಕ ಜಾಗೃತಿ ಮೂಡಿಸಲು ಸಮಾಜದ ಎಲ್ಲ ವರ್ಗದ ಜನರನ್ನು ಒಂದೇ ವೇದಿಕೆಗೆ ತರಲು ಈ ಧರ್ಮಾವಲೋಕನ ಸಭೆಯನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಧರ್ಮದ ಒಳಿತು ಕೆಡುಕುಗಳ ಅಧ್ಯಯನ ಮತ್ತು ಚಿಂತನೆಗೆ ಇದು ಮಹತ್ತ್ವದ ವೇದಿಕೆ ಆಗಲಿದೆ’ ಎಂದು ಹೇಳಿದರು.…

Read More