Author: admin
ತುಮಕೂರು : ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಬಜಗೋಳಿಯಲ್ಲಿ ಕಾರ್ಕಳ ತಾಲೂಕು ಮಟ್ಟದ ಕನ್ನಡ ಪ್ರಬಂಧ ಸ್ಪರ್ದೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಥಮ ವಿಜ್ಞಾನ ವಿಭಾಗದ ಇಬ್ಬನಿ ದ್ವಿತೀಯ ಸ್ಥಾನಿಯಾಗಿ ಉಡುಪಿ ಜಿಲ್ಲಾಮಟ್ಟಕ್ಕೆ ಆಯ್ಕೆ ಗೊಂಡಿರುತ್ತಾರೆ.
ತುಮಕೂರು : ತುಮಕೂರಿನ ಎಂಪ್ರೈಸ್ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಹಾಗೂ ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಸಹಯೋಗದಲ್ಲಿ ನಡೆದ ಪದವಿ ಪೂರ್ವ ಕಾಲೇಜಿನ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆ-2025ರ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ಪ್ರಜ್ಞಾಮೋಹನ್ ತೃತೀಯ ಸ್ಥಾನ ಪಡೆದಿರುತ್ತಾರೆ. ಈಕೆ ಹಾಸನದ ಶ್ರೀ ಮೋಹನ್ ಕುಮಾರ್ ಮತ್ತು ಶ್ರೀಮತಿ ಶೀಲಾ ದಂಪತಿಗಳ ಸುಪುತ್ರಿಯಾಗಿದ್ದಾರೆ. ಇವರಿಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದರೆ.
ಒಬ್ಬ ವ್ಯಕ್ತಿ ಸುಮ್ಮನೆ ನಾಯಕನಾಗಿ ಗುರುತಿಸಲ್ಪಡುವುದಿಲ್ಲ. ನಾಯಕನಾಗಿ ಕಾಣಿಸಿಕೊಳ್ಳಬೇಕಾದರೆ ಮೂಲತಃ ಆತನಲ್ಲಿ ನಾಯಕತ್ವದ ಗುಣಗಳಿರಬೇಕು. ಅದನ್ನು ಪೋಷಿಸಿ ಬೆಳಕಿಗೆ ತರುವ ವಾತಾವರಣ ಇರಬೇಕು. ಜೊತೆಗೆ ಸದಾ ಪ್ರಯತ್ನಶೀಲತೆ, ದೃಢ ಸಂಕಲ್ಪ, ಛಲ, ಸವಾಲುಗಳನ್ನು ಎದುರಿಸಿ ಅದನ್ನು ಮೀರಿ ನಿಲ್ಲುವ ತಾಕತ್ತು, ಆಕರ್ಷಕ ವ್ಯಕ್ತಿತ್ವ, ನಿಷ್ಕಲ್ಮಶ ಭಾವಶುದ್ಧಿ, ನೇರ ನಡೆ ನುಡಿ, ಯೋಜನೆ ಯೋಚನೆಯ ಬಗ್ಗೆ ಖಚಿತತೆ ಇವೆಲ್ಲವೂ ಮೇಳೈಸಿದಾಗ ಒಬ್ಬ ಸಾಮಾನ್ಯ ಅಸಾಮಾನ್ಯನಾಗುತ್ತಾನೆ. ನಾಯಕನಾಗುತ್ತಾನೆ. ಮಹಾ ನಾಯಕನಾಗುತ್ತಾನೆ. ಇಂತಹ ಒಬ್ಬ ಮಹಾನಾಯಕ ನಮ್ಮೊಂದಿಗಿದ್ದಾರೆ. ಅವರೇ ಜಾಗತಿಕ ಬಂಟರ ಸಂಘಗಳ ಒಕ್ಕೂಟವೆಂಬ ಹೊನ್ನಿನ ತೇರನ್ನೇರಿ ಅದನ್ನು ಯಶಸ್ಸಿನ ಶಿಖರಾಗ್ರಕ್ಕೆ ಸಾಗಿಸುತ್ತಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ‘ಐಕಳದ ಮುತ್ತು ಬಂಟರ ಗತ್ತು ಹರೀಶ್ ಶೆಟ್ಟಿ ಎನ್ನುವ ಸೊತ್ತು’. ವಿಶ್ವದಾದ್ಯಂತ ವಿವಿದೆಡೆ ಸ್ಥಾಪಿಸಲ್ಪಟ್ಟ ಸುಮಾರು 150ಕ್ಕೂ ಹೆಚ್ಚು ಬಂಟರ ಸಂಘಗಳು ಒಂದಾಗಿ ಸೇರಿ ನಿರ್ಮಾಣಗೊಂಡ ತುಳುವ ನಾಡಿನ ಹೆಮ್ಮೆಯ ಬಂಟ ಸಮುದಾಯದ ಏಕೈಕ ಕೇಂದ್ರೀಯ ಪ್ರಧಾನ ಸಂಸ್ಥೆ ಅದು ಜಾಗತಿಕ ಬಂಟರ ಸಂಘಗಳ…
ದುಬೈನ ಶೇಖ್ ಝಯೀದ್ ರಸ್ತೆಯ ಮಿಲೇನಿಯಂ ಪ್ಲಾಝ ಹೋಟೆಲ್ ನ ಸಭಾಂಗಣದಲ್ಲಿ ಯುಎಇಯ ಒಂದು ಸಾವಿರದ ಐದು ನೂರಕ್ಕೂ ಅಧಿಕ ಬಂಟರು ಸೇರಿ ಯುಎಇ ಬಂಟ್ಸ್ ನ 48 ನೇ ವರ್ಷದ ಕೂಡುಕಟ್ಟ್ “ಭಾವೈಕ್ಯ” ಬಂಟರ ಸಮಾಗಮ ಅದ್ದೂರಿಯಾಗಿ ನಡೆಯಿತು. ಯುಎಇ ಬಂಟ್ಸ್ ನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿಯವರ, ಸಲಹಾ ಸಮಿತಿಯ ಸದಸ್ಯರ ಮತ್ತು 2025 ನೇ ಸಾಲಿನ ಸಂಘಟನಾ ಸಮಿತಿಯ ಸರ್ವ ಸದಸ್ಯರ ಕಳೆದ ನಾಲ್ಕು ತಿಂಗಳುಗಳ ಕಠಿಣ ಪರಿಶ್ರಮದ ಫಲವೇ ಅಷ್ಟೊಂದು ಸಂಖ್ಯೆಯ ಬಂಟರು ಸೇರಲು ಹಾಗೂ ಕಾರ್ಯಕ್ರಮದ ಯಶಸ್ವಿಗೆ ಕಾರಣವಾಯಿತು. ಬೆಳಿಗ್ಗೆ ಹತ್ತು ಗಂಟೆಗೆ 48ನೇ ವರ್ಷದ ಕೂಡುಕಟ್ಟ್ ‘ಭಾವೈಕ್ಯ’ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಘದ ಪೋಷಕರಾದ ಸರ್ವೋತ್ತಮ ಶೆಟ್ಟಿ, ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ, ಉಪಾಧ್ಯಕ್ಷರಾದ ಪ್ರೇಮ್ ನಾಥ್ ಶೆಟ್ಟಿ, ಪ್ರದಾನ ಕಾರ್ಯದರ್ಶಿ ರವಿರಾಜ್ ಶೆಟ್ಟಿ ಮತ್ತು ಸಂಘಟನಾ ಸಮಿತಿಯ ಮಹಿಳಾ ಸದಸ್ಯೆಯರು ದೀಪ ಬೆಳಗಿಸಿ ಚಾಲನೆ ನೀಡಿದರು. ಸಲಹಾ ಸಮಿತಿಯ ಸದಸ್ಯರಾದ…
ಡಿಸೆಂಬರ್ 19 ರಿಂದ 21 ರವರೆಗೆ ಸುರತ್ಕಲ್ ಬಂಟರ ಭವನದಲ್ಲಿ ಜನ ಜಾತ್ರೆ, “ಪರ್ವ – 2025” : ಸೀರೆ, ಲೈಫ್ ಸ್ಟೈಲ್ ಮತ್ತು ಫುಡ್ ಫೆಸ್ಟಿವಲ್
ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ಡಿಸೆಂಬರ್ 19, 20 ಮತ್ತು 21 ರಂದು ಸುರತ್ಕಲ್ ಬಂಟರ ಭವನದ ಆವರಣದಲ್ಲಿ “ಪರ್ವ – 2025” ಸೀರೆ ಮೇಳ, ಲೈಫ್ ಸ್ಟೈಲ್ ಮತ್ತು ಫುಡ್ ಫೆಸ್ಟಿವಲ್ ನಡೆಯಲಿದೆ ಎಂದು ಸುರತ್ಕಲ್ ಬಂಟರ ಸಂಘದ ಮಹಿಳಾ ವೇದಿಕೆಯ ಕಾರ್ಯದರ್ಶಿ ರಾಜೇಶ್ವರಿ ಡಿ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಡಿಸೆಂಬರ್ 20 ರಂದು ಶನಿವಾರ ಸಂಜೆ 7 ಕ್ಕೆ ಪೆರ್ಮೆದ ಕಲಾವಿದೆರ್ ಚೇಳಾರ್ ತಂಡದಿಂದ “ಎನ್ನಿಲೆಕ್ಕ ಇಜ್ಜೆರ್” ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಡಿಸೆಂಬರ್ 21 ರಂದು ಸಂಜೆ 6 ಗಂಟೆಗೆ ವಿಶ್ವಾಸ್ ಮ್ಯೂಸಿಕಲ್ ಮಂಗಳೂರು ತಂಡದಿಂದ “ಸಂಗೀತ ರಸ ಮಂಜರಿ” ಬಳಿಕ 7 ಗಂಟೆಗೆ ಉಮೇಶ್ ಮಿಜಾರ್ ಸಾರಥ್ಯದ ನಮ್ಮ ಕಲಾವಿದೆರ್ ಬೆದ್ರ ತಂಡದಿಂದ ಈ ವರ್ಷದ ಸೂಪರ್ ಹಿಟ್ ಹಾಸ್ಯ ನಾಟಕ “ವೈರಲ್ ವೈಶಾಲಿ” ಪ್ರದರ್ಶನ ಗೊಳ್ಳಲಿದೆ ಎಂದರು. ಡಿ. 20 ಮತ್ತು 21 ರಂದು ಸಂಜೆ ನಾಲ್ಕು ಗಂಟೆಯಿಂದ ರಾತ್ರಿ…
ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ಸೆವೆನ್ತ್ ಹೆವೆನ್ ಕೇಕ್ ಶಾಪ್ ನ 23ನೇ ಶಾಖೆ ಡಿಸೆಂಬರ್ 12ರಂದು ಕುಂದಾಪುರದ ಪಾರಿಜಾತ ಹೋಟೆಲ್ ಸಮೀಪವಿರುವ ಶಂಕರ್ ಟವರ್ಸ್ ನೆಲಮಹಡಿಯಲ್ಲಿ ಶುಭಾರಂಭಗೊಂಡಿತು. ಮಾಲಕ ಶಮಿತ್ ಶೆಟ್ಟಿ ಕೆಮ್ತೂರು ಅವರ ತಾಯಿ ದೇವಕಿ ಶೆಟ್ಟಿ ನೂತನ ಶಾಖೆಯನ್ನು ಉದ್ಘಾಟಿಸಿದರು. ಕಟ್ಟಡದ ಮಾಲಕ ಉದ್ಯಮಿ ಸುರೇಶ್ ಭಂಡಾರ್ಕರ್ ರವರು ದೀಪ ಬೆಳಗಿದರು. ಅಶೋಕ್ ಶೆಟ್ಟಿ ಕೆಮ್ತೂರು, ರವೀಂದ್ರ ಶೆಟ್ಟಿ ಮೂಲ್ಕಿ, ರತ್ನಾಕರ ಶೆಟ್ಟಿ ಕಟ್ಟಂಗೇರಿ, ಅಶೋಕ್ ಶೆಟ್ಟಿ ಪೂನಾ, ಜೀವನ್ ಬೆಂಗಳೂರು, ಕುಸುಮ ಶೆಟ್ಟಿ ಮೂಲ್ಕಿ, ವನಿತಾ ಶಿರ್ವ, ಮಾಲಕರಾದ ಶಮಿತ್ ಶೆಟ್ಟಿ, ರಶ್ಮಿ ಶೆಟ್ಟಿ, ಸುಕೇಶ್ ಶೆಟ್ಟಿ, ಸರಿತಾ ಶೆಟ್ಟಿ ಉಪಸ್ಥಿತರಿದ್ದರು. ಶುದ್ಧ ಸಸ್ಯಹಾರಿ ಉತ್ಪನ್ನಗಳನ್ನು ತಯಾರಿಸುವ ಈ ಬೇಕರಿಯ ಶಾಖೆಗಳು ದೇಶದ ವಿವಿಧ ನಗರಗಳಲ್ಲಿ ಕಾರ್ಯಾಚರಿಸುತ್ತಿದೆ. ಗ್ರಾಹಕರಿಗೆ ಸ್ಥಳದಲ್ಲಿಯೇ ಬೇಕರಿ ಉತ್ಪನ್ನಗಳನ್ನು ತಯಾರಿಸಿ ಕೊಡುವುದು ಇಲ್ಲಿನ ವಿಶೇಷತೆಯಾಗಿದೆ. ಇಲ್ಲಿ ಶುಚಿ ರುಚಿಯಾದ ವೈವಿಧ್ಯಮಯ ಕೇಕ್ ಐಟಂಗಳು ಗ್ರಾಹಕರ ಕೈಗೆಟಗುವ ಬೆಲೆಯಲ್ಲಿ ದೊರೆಯಲಿದೆ. ಅತ್ಯುತ್ತಮ ಆತಿಥ್ಯ, ರುಚಿಕರ…
ಇನೋಳಿ ಶ್ರೀ ಸೋಮನಾಥೇಶ್ವರ ದುರ್ಗಾಪರಮೇಶ್ವರಿ ದೇವಸ್ಥಾನವು ಅತೀ ಪುರಾತನ ದೇವಾಲಯವಾಗಿದ್ದು, ಪ್ರಕೃತಿಯ ಸೌಂದರ್ಯಮಯವಾದ ದೇವೆಂದಬೆಟ್ಟ ಮೇಲೆ ಶ್ರೀ ಸೋಮನಾಥೇಶ್ವರನ ದೇವಾಲಯವಿದೆ. ನೇತ್ರಾವತಿ ನದಿಯು ದೇವಾಲಯವಿರುವ ಪ್ರದೇಶದ ಮೂರು ಸುತ್ತಾ ಬಳುಕುತ್ತಾ ಹರಿದು ಅರಬ್ಬಿ ಸಮುದ್ರ ಸೇರುವ ದೃಶ್ಯ ಮೈನವಿರೇಳಿಸುತ್ತದೆ. ಹಸಿರು ಪರ್ವತಗಳ ನಡುವೆ ಹರಿಯುವ ನದಿ, ಸೂರ್ಯಾಸ್ತ ಅಥವಾ ಸೂರ್ಯೋದಯದ ವೀಕ್ಷಣೆಯ ದೃಶ್ಯ ನಮ್ಮನ್ನು ಸಮ್ಮೋಹನಗೊಳಿಸುತ್ತದೆ. ಇನೋಳಿ ಅಥವಾ ಇನವಳ್ಳಿ ಎಂಬ ಪುಟ್ಟ ಹಳ್ಳಿ ದಕ್ಷಿಣ ಕನ್ನಡ ಜಿಲ್ಲೆಯ ಪಾವೂರು ಗ್ರಾಮದ ನೇತ್ರಾವತಿ ನದಿಯ ದಂಡೆಯಲ್ಲಿದೆ. ಈ ದೇವಸ್ಥಾನಕ್ಕೆ ಮಂಗಳೂರಿನಿಂದ ತೊಕ್ಕೊಟ್ಟು, ದೇರಳಕಟ್ಟೆ ಕೋಣಾಜೆ ವಿಶ್ವವಿದ್ಯಾಲಯ ಮಾರ್ಗವಾಗಿ ಹೋಗುವುದಾದರೆ ೨೮ಕಿ.ಮೀ ದೂರವಿದೆ ಹಾಗೂ ಬಸ್ ವ್ಯವಸ್ಥೆ ಕೂಡಾ ಇದೆ. ಇತ್ತೀಚೆಗೆ ರಾ. ಹೆ. ೨೭೫ರ ಅಡ್ಯಾರಿನಲ್ಲಿ ನೇತ್ರಾವತಿ ನದಿಗೆ ಕಟ್ಟಲಾದ ಸೇತುವೆ ಹರೇಕಳ ಪಾವೂರು ಎಂಬಲ್ಲಿ ಸೇರುತ್ತದೆ. ಈ ಮೂಲಕ ಮಂಗಳೂರಿನಿಂದ ಬರುವುದಾದರೆ ಕೇವಲ ೧೮ಕಿ.ಮೀ ದೂರದಲ್ಲಿದೆ. ಅಲ್ಲದೇ ಇದೇ ಹೆದ್ದಾರಿಯಲ್ಲಿ ಸಿಗುವ ಫರಂಗಿಪೇಟೆ, ಅರ್ಕುಲ ಎಂಬಲ್ಲಿ ದೋಣಿ ಮೂಲಕ ನದಿ…
ಒಂದು ಕಾಲದಲ್ಲಿ ಅಯ್ಯೋ ಚಳಿಚಳಿ ಎಂಬ ಕಾಲಕ್ಕೆ ಬರುತ್ತಿತ್ತು ಈ ಧನುರ್ಮಾಸ. ಆದರೆ ಕಾಲ ಪ್ರಭಾವವೋ, ಪ್ರಕೃತಿಯ ಮೇಲಿನ ಮನುಷ್ಯನ ನಿರಂತರವಾದ ಆಕ್ರಮಣದ ಕಾರಣವೋ? ಎಂಬಂತೆ ಕೆಲ ವರ್ಷಗಳಿಂದ ಚಳಿಯೇ ಇಲ್ಲ. ಆದರೆ ಈ ಸಲ ಸ್ವಲ್ಪ ಚಳಿಯ ವಾತಾವರಣ ಇದೆ. ಈಗೀಗ ವರ್ಷದ ಮೂರು ಕಾಲಗಳೂ ಋತುಮಾನಕ್ಕನುಗುಣವಾಗಿ ಇಲ್ಲವೇ ಇಲ್ಲ. ಆದರೆ ಕ್ಯಾಲೆಂಡರ್ ಮತ್ತು ಪಂಚಾಂಗದ ಪ್ರಕಾರ ನಮ್ಮೆಲ್ಲಾ ಹಬ್ಬ ಹರಿದಿನ, ರೀತಿ ರಿವಾಜುಗಳು ಹಿಂದೆಂದಿಗಿಂತಲೂ ವಿಜೃಂಭಣೆಯಿಂದ ನಡೆಯುತ್ತಿದೆ. ಇದು ಸಂತೋಷವೂ ಆಗಿದೆ. ಜೊತೆಗೆ ನಮ್ಮ ಮುಂದಿನ ಪೀಳಿಗೆಗೆ ಜಾಗೃತಿ ಮೂಡಿಸುವ ಉದ್ದೇಶವೂ ಆಗಿದೆ. ಈ ಸಲ ಈವತ್ತಿನಿಂದ ಪ್ರಾರಂಭವಾಗಿದೆ ಧನುರ್ಮಾಸ. ಹೆಚ್ಚಿನ ಎಲ್ಲಾ ಊರಿನ ಬಹುತೇಕ ದೇವಾಲಯಗಳಲ್ಲೂ ಪ್ರಾತಃ ಕಾಲದ “ಧನುಪೂಜೆ” ವಿಶೇಷವಾಗಿ ನಡೆಯುತ್ತದೆ. ಈ ಕುರಿತು ಸಂಗ್ರಹಿತ ಮಾಹಿತಿಯಂತೆ ಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಮಾಸಗಳನ್ನು ಕುರಿತು ಹೇಳುವಾಗ ಧನುರ್ಮಾಸದ ಮಹಾತ್ಮೆಗೆ ವಿಶೇಷ ಒತ್ತು ನೀಡಿ “ಮಾಸಾನಾಂ ಮಾರ್ಗಶೀರ್ಷೋಸ್ಮಿ” ಎಂದು ಅಪ್ಪಣೆ ಕೊಡಿಸಿದ್ದಾರೆ. ಸೂರ್ಯ ಒಂದು ರಾಶಿಯಿಂದ ಇನ್ನೊಂದು…
ಶಾಲಾಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ವತಿಯಿಂದ ಕೊಪ್ಪಳದಲ್ಲಿ ಜರುಗಿದ ರಾಜ್ಯಮಟ್ಟದ ಜಂಪ್ರೋಪ್ ಸ್ಪರ್ಧೆಯ 30ಸೆಕೆಂಡ್ ಡಬಲ್ ಅಂಡರ್ ರಿಲೇ ವಿಭಾಗದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ನಿಖಿಲ್ ಎಂ.ವಿ, ಪೂರ್ವಜ್ ಗೌಡ ವಿ, ಪ್ರಥಮೇಶ್ ಡಿ.ಪಿ, ಎನ್.ನಿಖಿಲ್, ಶಾನ್ವಿ ಎಸ್ ಹಾಗೂ ಕಾಜೊಲ್.ಎಂ.ಪಿ ತೃತೀಯ ಸ್ಥಾನ ಪಡೆದು ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ. ಈ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.
ಬ್ರಹ್ಮಾವರ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ಡಿಸೆಂಬರ್ 16 ರಂದು ಡಾ. ಚಂದ್ರಶೇಖರ ಕಂಬಾರ ಅವರು ಬರೆದ ಕಥೆಗಳನ್ನಾಧರಿಸಿದ ಕೆ. ಜಿ. ಕೃಷ್ಣಮೂರ್ತಿ, ಸಜಿ ಆರ್. ತುಮರಿ ಅರುಣ ಎನ್, ಕಿನ್ನರಿ ಮೇಳದವರು ನಿರ್ದೇಶಿಸಿರುವ ‘ಮರವೇ ಮರ್ಮರ’ವೇ ಮಕ್ಕಳ ನಾಟಕದ ರಂಗಪ್ರದರ್ಶನ ಏರ್ಪಡಿಸಲಾಗಿತ್ತು. ಜಾನಪದ ಕಥೆಗಳನ್ನಾಧರಿಸಿದ ರಂಗ ಪ್ರಸ್ತುತಿಯಲ್ಲಿ ಕಾಡು ಮತ್ತು ನಾಡಿಗೆ ತಾಯಿ ಮಕ್ಕಳ ಸಂಬಂಧವಿದೆ. ಆದರೆ ಪ್ರಕೃತಿ ಕೊಟ್ಟ ವರಗಳನ್ನು ಮನುಷ್ಯ ತನ್ನ ದುರಾಸೆಯಿಂದಾಗಿ ಶಾಪವಾಗಿ ಪರಿವರ್ತಿಸಿಕೊಳ್ಳುತ್ತಿದ್ದಾನೆಂಬ ಅಂಶವನ್ನು ಪ್ರದರ್ಶನದ ಮೂಲಕ ಬೆಳಕಿಗೆ ತಂದರು. ಇದ್ದಿಲು ಮಹಾರಾಜ, ಬಿದಿರಿನ ಚೆಲುವೆ ಮತ್ತು ಆತ್ಮಹತ್ಯೆ ಎಂಬ ಮೂರು ಕಥೆಗಳ ಆಯ್ಕೆಯ ಮೂಲಕ ರಂಗ ಪ್ರಸ್ತುತಿ ಏರ್ಪಡಿಸಿದ್ದರು. ವಿದ್ಯಾರ್ಥಿಗಳು ಕಾಡು ಮತ್ತು ನಾಡಿಗಿರುವ ತಾಯಿಯ ಸಂಬಂಧ ಮತ್ತು ಮರದ ರಕ್ಷಣೆಯ ಕುರಿತು ಮನುಷ್ಯರಿಗಿರುವ ಜವಾಬ್ದಾರಿಗಳನ್ನು ಅರಿತುಕೊಂಡರು. ವಿದ್ಯಾರ್ಥಿಗಳಿಗೆ ಕಾಡು ಬೆಳೆಸಿ ನಾಡು ಉಳಿಸಿ ಎಂಬ ಸಂದೇಶವನ್ನು ನೀಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ರವರು ರಂಗ ಪ್ರದರ್ಶನದ ಕುರಿತು ಮೆಚ್ಚುಗೆ…















