Author: admin

ಶಿವಮೊಗ್ಗದ ನೆಹರೂ ಕ್ರೀಡಾಂಗಣದಲ್ಲಿ ಡಿಸೆಂಬರ್ 20 ಮತ್ತು 21 ರಂದು ನಡೆದ ರೋಟರಿ ಅಂತರಾಷ್ಟ್ರೀಯ ಜಿಲ್ಲೆ 3182 ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾಕೂಟದಲ್ಲಿ, ರೋಟರಿ ಕ್ಲಬ್ ಕಾರ್ಕಳದ ಸದಸ್ಯರು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. 12 ಚಿನ್ನದ ಪದಕ, 10 ಬೆಳ್ಳಿ ಪದಕ ಹಾಗೂ 13 ಕಂಚಿನ ಪದಕದೊಂದಿಗೆ ಒಟ್ಟು 35 ಪದಕಗಳನ್ನು ಪಡೆಯುವ ಮೂಲಕ ಕಾರ್ಕಳ ರೋಟರಿ ಸಂಸ್ಥೆಯು ರೋಟರಿ ಅಂತರಾಷ್ಟ್ರೀಯ ಜಿಲ್ಲೆ ವಲಯ 5 ಹಿರಿಮೆಯನ್ನು ಎತ್ತಿ ಹಿಡಿದಿದೆ. ಕ್ಲಬ್ ಅಧ್ಯಕ್ಷರಾದ ಕೆ ನವೀನ್ ಚಂದ್ರ ಶೆಟ್ಟಿ ಅವರು ಮಾತನಾಡಿ, ಈ ಜಯ ರೋಟರಿ ಸ್ಫೂರ್ತಿ, ಒಗ್ಗಟ್ಟು, ಶಿಸ್ತಿನ ಪ್ರತಿರೂಪ. ಸದಸ್ಯರ ತಯಾರಿ, ಕ್ರೀಡಾಸ್ಫೂರ್ತಿ ಹಾಗೂ ತಂಡಾತ್ಮಕತೆ ನಮ್ಮ ಕ್ಲಬ್‌ಗೆ ಈ ಗೌರವ ತಂದುಕೊಟ್ಟಿವೆ ಎಂದು ತಿಳಿಸಿದ್ದಾರೆ. ಕ್ರೀಡಾಕೂಟದಲ್ಲಿ ಕಾರ್ಕಳ ರೋಟರಿ ಕ್ಲಬ್ ನ ಸ್ಪೋರ್ಟ್ಸ್ ಛೇರ್ಮನ್ ಜೋಸ್ಸಿ ಕಿರಣ್ ಪಿಂಟೋ, ಜಿಲ್ಲಾ ಮಟ್ಟದ ಅಧಿಕಾರಿಗಳು, ಕ್ಲಬ್ ಸದಸ್ಯರು ಹಾಗೂ ಕ್ರೀಡಾಪಟುಗಳು ಹಾಜರಿದ್ದರು. ಕ್ಲಬ್ ಕಾರ್ಯದರ್ಶಿ…

Read More

ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ಸುರತ್ಕಲ್ ಬಂಟರ ಭವನದ ಆವರಣದಲ್ಲಿ ನಡೆದ “ಪರ್ವ -2025” ಸಮಾರಂಭದಲ್ಲಿ ಆಹಾರ ಮೇಳ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಜರಗಿತು. ಕಾರ್ಯಕ್ರಮವನ್ನು ಮಧು ಕನ್ಸ್ಟ್ರಕ್ಷನ್ ಮತ್ತು ಅಟೊಮ್ ಫಿಟ್ನೆಸ್ ಕ್ಲಬ್ ಸಂಸ್ಥೆಯ ಮಾಲಕಿ ವಿಜಯಲಕ್ಷ್ಮಿ ಮಲ್ಲಿ ಅವರು ವೇದಿಕೆಯಲ್ಲಿ ದೋಸೆ ಮಾಡುವ ಮೂಲಕ ಉದ್ಘಾಟಿಸಿದರು. ನಮ್ಮ ಜೀವನದಲ್ಲಿ ಆಹಾರಕ್ಕಿಂತ ದೊಡ್ಡ ಶಕ್ತಿ ಯಾವುದೂ ಇಲ್ಲ. ಆಹಾರವೇ ದೇಹಕ್ಕೆ ಶಕ್ತಿ. ನಮ್ಮ ಪೂರ್ವಜರು ಹೇಳಿದಂತೆ ಊಟ ಔಷಧಿ ಆಗಬೇಕೇ ಹೊರತು ಔಷಧಿ ಊಟ ಆಗಬಾರದು. ಆಹಾರ ಮೇಳವು ಕೇವಲ ಆಹಾರದ ಪ್ರದರ್ಶನವಲ್ಲ, ಅಡುಗೆಗೆ ಕೂಡಾ ವೇದಿಕೆಯಾಗಿದೆ ಎಂದು ವಿಜಯಲಕ್ಷ್ಮೀ ಮಲ್ಲಿ ತಿಳಿಸಿದರು. ಆಹಾರ ಮೇಳಗಳಂತಹ ಕಾರ್ಯಕ್ರಮಗಳು ವಿವಿಧ ಸಂಸ್ಕೃತಿಗಳ ಆಹಾರಗಳನ್ನು ಪರಿಚಯಿಸುತ್ತದೆ. ರುಚಿಯ ಜೊತೆಗೆ ಆರೋಗ್ಯದ ಅರಿವನ್ನು ಕೂಡಾ ಮೂಡಿಸುತ್ತದೆ ಹಾಗೂ ಜನರನ್ನು ಒಟ್ಟಿಗೆ ಸೇರಿಸುವ ಸೇತುವೆ ಕೂಡಾ ಆಗಿದೆ ಎಂದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಮೂಡಬಿದ್ರೆ ಬಂಟರ ಸಂಘದ ಮಹಿಳಾ…

Read More

ಕರಾವಳಿಯ ಶ್ರೀಮಂತ ಜಾನಪದ ಸಂಸ್ಕೃತಿಗೆ ವೈಚಾರಿಕ ಆಯಾಮ ನೀಡುವ ಮಹತ್ವದ ಸಂಶೋಧನಾ ಕೃತಿಯಾದ “ಭೂತಾರಾಧನೆ ಮಾಯದ ನಡೆ ಜೋಗದ ನುಡಿ” ಕೃತಿಯ ಬಿಡುಗಡೆ ಸಮಾರಂಭವು ಕ್ರಿಯೇಟಿವ್ ಪುಸ್ತಕ ಮನೆ ಕಾರ್ಕಳ ಮತ್ತು ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಹಯೋಗದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಎಲ್.ಎಫ್. ರಸ್ಕಿನ್ಹ ಸಭಾಂಗಣದಲ್ಲಿ ನಡೆಯಿತು. ಕೃತಿಯನ್ನು ಖ್ಯಾತ ಸಾಹಿತಿ, ಜಾನಪದ ವಿದ್ವಾಂಸ ಹಾಗೂ ವಿಶ್ರಾಂತ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಅವರು ಅನಾವರಣಗೊಳಿಸಿ ಮಾತನಾಡಿ, ಭೂತಾರಾಧನೆ ಕೇವಲ ಆಚರಣೆಯಲ್ಲ. ಅದು ಸಮುದಾಯದ ಸ್ಮೃತಿ, ನಂಬಿಕೆ ಮತ್ತು ಬದುಕಿನ ದರ್ಶನ ಎಂದು ಅಭಿಪ್ರಾಯಪಟ್ಟರು. ಡಾ. ಕೆ. ಚಿನ್ನಪ್ಪ ಗೌಡರ ಈ ಕೃತಿ ಜಾನಪದ ಅಧ್ಯಯನ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲಾಗಲಿದೆ ಎಂದರು. ಕೃತಿ ಅವಲೋಕನವನ್ನು ಡಾ. ರಾಜಶೇಖರ್ ಹಳೆಮನೆ ಅವರು ನಡೆಸಿ, ಭೂತಾರಾಧನೆಯ ಆಚರಣೆ, ನುಡಿ, ನಡೆ ಮತ್ತು ಸಮಾಜದ ಒಳಹೊಮ್ಮುಗಳನ್ನು ವೈಜ್ಞಾನಿಕ ದೃಷ್ಟಿಯಿಂದ ದಾಖಲಿಸುವ ಗಂಭೀರ ಸಂಶೋಧನಾ ಕೃತಿಯಿದು ಎಂದು ಪ್ರಶಂಸಿಸಿದರು.…

Read More

ದೇವಸ್ಥಾನ, ದೈವಸ್ಥಾನಗಳಿಗೆ ಸಂಬಂಧಿಸಿ ಆಯಾ ಸ್ಥಳಕ್ಕೆ ಅನುಗುಣವಾಗಿ ನಿಯಮ, ಕ್ರಮಗಳು, ನಂಬಿಕೆಗಳು ಬದಲಾಗುತ್ತವೆ. ಧಾರ್ಮಿಕ ನಂಬಿಕೆಗಳನ್ನು ಪ್ರಶ್ನೆ ಮಾಡದೆ ಜನರ ವಿವೇಚನೆಗೆ ಬಿಡಬೇಕು ಎಂದು ಶ್ರೀ ಕಟೀಲು ಕ್ಷೇತ್ರದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಹೇಳಿದರು. ಗುರುಪುರ ದೋಣಿಂಜೆ ಗುತ್ತು ಗಡಿ ಪ್ರಧಾನರಾದ ಪ್ರಮೋದ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ವಿಶ್ವ ಹಿಂದು ಪರಿಷತ್ತು, ಹಿಂದು ಯುವಸೇನೆ, ತುಳುನಾಡ ರಕ್ಷಣಾ ವೇದಿಕೆ ಸಹಯೋಗದಲ್ಲಿ ಮಂಗಳೂರಿನ ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ನಡೆದ ‘ಧರ್ಮಾವಲೋಕನ ಸಭೆ, ಧರ್ಮಾಚರಣೆ – ಒಂದು ಅವಲೋಕನ’ ಮೊದಲ ಗೋಷ್ಠಿಯಲ್ಲಿ ‘ದೇವಸ್ಥಾನಗಳು ಮತ್ತು ಧರ್ಮಾಚರಣೆ’ ವಿಷಯದ ಬಗ್ಗೆ ಅವರು ಮಾತನಾಡಿದರು. ದೇವಸ್ಥಾನಕ್ಕೆ ಆಗಮಿಸದವರು ಧರ್ಮಾ ಚರಣೆ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ದೈವಸ್ಥಾನ, ನೇಮಗಳಿಗೆ ಬರದವರು ದೈವಾರಾಧನೆಯನ್ನು ವಿಮರ್ಶಿಸುತ್ತಾರೆ. ಒಂದು ಸ್ಥಳ, ಒಬ್ಬ ವ್ಯಕ್ತಿಯ ನಂಬಿಕೆ, ನಿಯಮಗಳನ್ನು ಪ್ರಶ್ನೆ ಮಾಡಿದರೆ ಪರಸ್ಪರ ದೂಷಣೆಗೆ ಕಾರಣವಾಗಿ ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹಿಂದು ಧರ್ಮ ಸರಿ ಇಲ್ಲ ಎಂಬಲ್ಲಿಗೆ…

Read More

ಒಬ್ಬ ದೈವಭಕ್ತನು ರಾತ್ರಿ ವೇಳೆ ತನ್ನ ನಿತ್ಯ ಪ್ರಾರ್ಥನೆಗೆ ಸಿದ್ಧನಾಗಿ ಪೂಜಾಗೃಹದಲ್ಲಿ ಕುಳಿತುಕೊಂಡ. ಆದರೆ ಆ ರಾತ್ರಿ ಯಾವುದೋ ಒಂದು ಕಾಡುಗಪ್ಪೆಯೊಂದು ಗಟ್ಟಿಯಾಗಿ ವಟಗುಟ್ಟತೊಡಗಿತು. ಅದರಿಂದ ಆ ದೈವಭಕ್ತನ ಪ್ರಾರ್ಥನೆಗೆ ಭಂಗವುಂಟಾಯಿತು. ಮನಸ್ಸನ್ನು ಕೇಂದ್ರೀಕರಿಸಿ ತನ್ನ ಪೂಜಾ ಕಾರ್ಯಕ್ರಮವನ್ನು ಮುಂದುವರೆಸಲು ಆತನು ಎಷ್ಟು ಪ್ರಯತ್ನಿಸಿದರೂ ಆ ಕಪ್ಪೆಯ ಶಬ್ದದಿಂದಾಗಿ ಪ್ರಾರ್ಥನೆ ಮಾಡುವುದು ಅವನಿಗೆ ಅಸಾಧ್ಯವೆನಿಸಿತು. ಅವನು ಸಹನೆಯನ್ನು ಕಳೆದುಕೊಂಡು ಕಿಟಿಕಿಯ ಹೊರಗೆ ತಲೆಯಿಟ್ಟು ಗಟ್ಟಿಯಾಗಿ ಕಿರುಚಿದನು, “ಸಾಕು ಮಾಡು ನಿನ್ನ ಗೋಳು! ನಾನು ಪ್ರಾರ್ಥನೆ ಮಾಡುತ್ತಿದ್ದೇನೆ ಎನ್ನುವುದು ನಿನಗೆ ಅರಿವಾಗದೇ?” ನಮ್ಮ ದೈವಭಕ್ತನು ಶಕ್ತಿಸಮನ್ವಿತನಾಗಿದ್ದ, ವಾಕ್ಸಿದ್ಧಿಯನ್ನು ಗಳಿಸಿದ್ದ. ಹಾಗಾಗಿ ಆ ಮಾತುಗಳನ್ನು ಆ ಕಪ್ಪೆ ಶಿರಸಾವಹಿಸಿ ಪಾಲಿಸಿತು. ಅದು ವಟಗುಟ್ಟುವುದನ್ನು ಸಂಪೂರ್ಣವಾಗಿ ನಿಲ್ಲಿಸಿತು. ಆತನ ಪ್ರಾರ್ಥನೆಗೆ ಭಂಗವುಂಟು ಮಾಡಬಾರದೆಂದು ಉಳಿದ ಜೀವರಾಶಿಯೂ ಸಹ ತಾವು ಸಾಧಾರಣವಾಗಿ ಮಾಡುತ್ತಿದ್ದ ಶಬ್ದಗಳನ್ನು ನಿಲ್ಲಿಸಿ ನಿಶ್ಶಬ್ದವಾದವು. ಆದರೆ ಆ ಭಕ್ತನ ಹೃದಯಾಂತರಾಳದಿಂದ ಸಣ್ಣ ದನಿಯೊಂದು ಕೇಳಿಸಿತು. “ನಿನ್ನ ಪ್ರಾರ್ಥನೆ, ಜಪತಪಗಳು, ಶ್ಲೋಕಗಳನ್ನು ಪಠಿಸುವುದರ ಮೂಲಕ ಭಗವಂತನು…

Read More

ರೋಟರಿ ಕ್ಲಬ್ ಕಾರ್ಕಳ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ನೀಡುವ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಸರಕಾರಿ ಸಾರ್ವಜನಿಕ ಆಸ್ಪತ್ರೆ ಕಾರ್ಕಳ ಇಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕಾರ್ಕಳದ ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯ ಮಕ್ಕಳ ತಜ್ಞೆ ಆಶಾ ಪಿ. ಹೆಗ್ಡೆ ಮಾತನಾಡಿ, ಪೋಲಿಯೋ ಕಾಯಿಲೆಯನ್ನು ನಿರ್ಮೂಲನೆ ಮಾಡುವಲ್ಲಿ ರೋಟರಿಯು ಮಹತ್ತರ ಪಾತ್ರ ವಹಿಸಿದೆ. ಆರೋಗ್ಯ ಇಲಾಖೆಯ ಪರಿಶ್ರಮ ಪ್ರಶಂಸನೀಯ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಆರೋಗ್ಯ ಅಧಿಕಾರಿ ಡಾ. ಸಂದೀಪ್ ಕುಡ್ವ ಪೋಲಿಯೋ ಲಸಿಕೆ ಅಭಿಯಾನದ ಇತಿಹಾಸವನ್ನು ವಿವರಿಸುತ್ತಾ ಇನ್ನೂ ಕೆಲವು ದೇಶಗಳಲ್ಲಿ ಪೋಲಿಯೋ ಸಕ್ರಿಯವಾಗಿರುವುದರಿಂದ ನಾವು ಇನ್ನೂ ಜಾಗೃತರಾಗಿ ಇರಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಡಾ. ಶಶಿಕಲಾ ಆಡಳಿತ ವೈದ್ಯಾಧಿಕಾರಿ ಸಾರ್ವಜನಿಕ ಆಸ್ಪತ್ರೆ ಕಾರ್ಕಳ, ಡಾ. ಸೌಜನ್ಯ ಮಕ್ಕಳ ತಜ್ಞರು, ಡಾ. ಉದಯ ಕುಮಾರ್ ಶಸ್ತ್ರಚಿಕಿತ್ಸಾ ತಜ್ಞರು, ಆಯುಷ್ ವೈದ್ಯಾಧಿಕಾರಿಗಳಾದ ಡಾ. ಸುಜಾತ ಮತ್ತು ಡಾ. ರೇಷ್ಮಾ ಪೈ, ಹಿರಿಯ ಪ್ರಾಥಮಿಕ…

Read More

ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ಡಿಸೆಂಬರ್ 19, 20 ಮತ್ತು 21 ರಂದು ಸುರತ್ಕಲ್ ಬಂಟರ ಭವನದ ಆವರಣದಲ್ಲಿ “ಪರ್ವ -2025” ಸೀರೆ ಮೇಳ, ಲೈಫ್ ಸ್ಟೈಲ್ ಮತ್ತು ಫುಡ್ ಫೆಸ್ಟಿವೆಲ್ ನಡೆಯಲಿದ್ದು, ಕಾರ್ಯಕ್ರಮವನ್ನು ಮನಪಾ ಸುರತ್ಕಲ್ ವಲಯ ಕಛೇರಿಯ ಆಯುಕ್ತರಾದ ವಾಣಿ ಆಳ್ವ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸುರತ್ಕಲ್ ಬಂಟರ ಸಂಘದಲ್ಲಿ ಮಹಿಳಾ ವೇದಿಕೆ ನಿರಂತರ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಒಳ್ಳೆಯ ಹೆಸರನ್ನು ಗಳಿಸಿದೆ. ಸಾಂಸ್ಕೃತಿಕ, ಕ್ರೀಡೆ ಸಹಿತ ಎಲ್ಲಾ ವಿಭಾಗಗಳಲ್ಲೂ ಮಹಿಳಾ ವೇದಿಕೆ ಮುಂಚೂಣಿಯಲ್ಲಿದೆ ಎಂದರು. ಮುಖ್ಯ ಅತಿಥಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಕಾಟಿಪಳ್ಳ ಶಾಖೆಯ ಶಾಖಾ ವ್ಯವಸ್ಥಾಪಕರಾದ ಕೇಸರಿ ಶೆಟ್ಟಿ ಶುಭ ಹಾರೈಸಿದರು. ಮಹಿಳಾ ವೇದಿಕೆಯ ಅಧ್ಯಕ್ಷೆ ಸರೋಜ ಟಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಜಯಂತಿ ಟಿ ರೈ, ಪ್ರಧಾನ ಕಾರ್ಯದರ್ಶಿ ರಾಜೇಶ್ವರಿ ಡಿ…

Read More

ಬ್ರಹ್ಮಾವರ: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‍ನಲ್ಲಿ ಮಕ್ಕಳಿಗೆ, ಸಮಾಜದಲ್ಲಿ ವ್ಯಾಪಾರ ಮತ್ತು ವಹಿವಾಟುವಿನ ಅನುಭವವನ್ನು ನೀಡುವ ಉದ್ದೇಶದಿಂದ ಚಿಣ್ಣರ ಸಂತೆಯನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ಆಡಳಿತ ಮಂಡಳಿಯ ಸದಸ್ಯೆ ತಾರಾ ಪ್ರಕಾಶ್ಚಂದ್ರ ಶೆಟ್ಟಿಯವರು ದೀಪ ಬೆಳಗಿ ಚಿಣ್ಣರ ಸಂತೆಯನ್ನು ಉದ್ಘಾಟಿಸಿ ಮಾತನಾಡಿ ಇಂದು ವ್ಯವಹಾರದಲ್ಲಿ ಮೋಸ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮಕ್ಕಳಿಗೆ ಕೊಡು- ಕೊಳ್ಳುವುದರ ಪರಿಜ್ಞಾನವಿರಬೇಕು. ಆ ನಿಟ್ಟಿನಲ್ಲಿ ಮಕ್ಕಳು ಎಳೆಯ ವಯಸ್ಸಿನಲ್ಲೆ ವ್ಯಾವಹಾರಿಕ ಜ್ಞಾನವನ್ನು ಮೈಗೂಡಿಸಿಕೊಳ್ಳುವಂತೆ ಪೆÇೀಷಕರು ಮುತುವರ್ಜಿ ವಹಿಸಬೇಕೆಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್‍ರವರು ಮಾತನಾಡಿ ಹಣವು ದಿನನಿತ್ಯದ ಜೀವನಕ್ಕೆ ಅಗತ್ಯ, ಮಕ್ಕಳಿಗೆ ಹಣ ಸಂಪಾದನೆಯ ಜೊತೆಗೆ ಅದನ್ನು ಸೂಕ್ತ ರೀತಿಯಲ್ಲಿ ವಿನಿಯೋಗಿಸುವ ಅರಿವಿರಬೇಕು ಅದೇ ರೀತಿ ವ್ಯವಹಾರಕ್ಕೆ ಕೌಶಲ್ಯತೆ ಮತ್ತು ಉತ್ತಮ ಸೇವೆ ಅತ್ಯಗತ್ಯ. ಗ್ರಾಹಕರು ಸಂತೃಪ್ತಿಯಿಂದ ವ್ಯಾಪಾರ ಮಾಡಿದಾಗ ವ್ಯವಹಾರದಲ್ಲಿ ಯಶಸ್ಸನ್ನು ಕಾಣಬಹುದೆಂದು ತಿಳಿಸಿದರು. ಶಾಲೆಯ ಪ್ರಿ ನರ್ಸರಿ, ಎಲ್.ಕೆ.ಜಿ, ಯು.ಕೆ.ಜಿ ವಿದ್ಯಾರ್ಥಿಗಳು ತಾವೇ ತಯಾರಿಸಿದ ವಸ್ತುಗಳ ಪ್ರದರ್ಶನ ಮಾಡಿದರು ಮತ್ತು ತಮ್ಮ ಪೆÇೀಷಕರ…

Read More

ಗಣಿತನಗರ: ಬದುಕಿಗೆ ಆಸೆಗಳೇ ಇಂಧನ. ನಮ್ಮ ಸಾಮಥ್ರ್ಯದ ಅರಿವು ನಮಗಿರ ಬೇಕು. ನಮ್ಮ ಗೌರವದ ಸ್ಥಾನಮಾನಗಳು ಸಾವಿರ ಮಂದಿಗೆ ಕನಸಿನ ತಾಣವಾಗಿರುವಂತೆ ಬೆಳೆಯಬೇಕು. ಅತಿಯಾಸೆ ಇರುವವನು ಬಡವ, ಮಹತ್ತರವಾದ ಕನಸುಗಳನ್ನು ಕಾಣುವವನು ಶ್ರೀಮಂತ ಎಂದು ಮೈಸೂರಿನ ಸುತ್ತೂರು ಜೆ.ಎಸ್.ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ, ಲೇಖಕರು ಮತ್ತು ವಾಗ್ಮಿಯಾಗಿರುವ ಶ್ರೀ ಜಿ.ಎಲ್ ತ್ರಿಪುರಾಂತಕ ನುಡಿದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‍ನ ಸಹಯೋಗದಲ್ಲಿ ನಡೆಯುತ್ತಿರುವ ಮೌಲ್ಯಸುಧಾ ಮಾಲಿಕೆ-43ರಲ್ಲಿ ‘ಆಕಾಂಕ್ಷೆಗಳು ಮತ್ತು ಕನಸುಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು. ಬೆಲೆಬಾಳುವ ಒಂದು ವಜ್ರ ದಕ್ಕಿದ ಮೇಲೆ ಎಷ್ಟಾದರೂ ಕಲ್ಲುಗಳನ್ನು ಕಲೆಹಾಕಬಹುದು. ಹೆತ್ತವರು ನಮ್ಮ ಆಸೆಗಳನ್ನು ಈಡೇರಿಸಬಹುದು. ಆದರೆ ನಮ್ಮ ಕನಸುಗಳನ್ನು ನನಸು ಮಾಡುವ ಹೊಣೆ ನಮ್ಮದೇ ಎಂದರು. ಕಾರ್ಯಕ್ರಮದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಶ್ರೀ ಅನಿಲ್ ಕುಮಾರ್ ಜೈನ್, ಸಿ.ಇ.ಒ ಹಾಗೂ ಪ್ರಾಂಶುಪಾಲರಾದ ಶ್ರೀ ದಿನೇಶ್ ಎಂ ಕೊಡವೂರ್,…

Read More

ದಕ್ಷಿಣ ಭಾರತದಲ್ಲೇ ಪ್ರಸಿದ್ಧಿ ಪಡೆದ ಸಿದ್ವಿನ್ ಇಂಡಸ್ಟ್ರೀಸ್ ಸ್ಥಾಪಕ ಸನತ್ ಶೆಟ್ಟಿ ಅವರು ತುಳುನಾಡಿನ ಸಮೃದ್ಧ ಸಂಸ್ಕ್ರತಿ ಸಂಪ್ರದಾಯಗಳನ್ನು ಮೈಗೂಡಿಸಿಕೊಂಡು ಬೆಳೆದ ಪ್ರತಿಷ್ಠಿತ ಬೈಲುಮೇಗಿನ ಮನೆ ಬಂಟ ಮನೆತನದಿಂದ ಬಂದವರು. ಸಿದ್ವಿನ್ ಇಂಡಸ್ಟ್ರೀಸ್ ಆತಿಥ್ಯ, ಆರೋಗ್ಯ ಕಾಳಜಿ, ಸ್ವಚ್ಛತಾ ಕಾಳಜಿ, ಸ್ವಚ್ಛತಾ ಸಾಧನ ಕರವಸ್ತ್ರಗಳಿಗೆ ಪರ್ಯಾಯವಾಗಿ ಉಪಯೋಗಿಸುವ ಟಿಶ್ಯೂ ಕಾಗದ, ಇತ್ಯಾದಿಗಳ ತಯಾರಿ ಪೂರೈಕೆಗೆ ಹೆಸರಾದ ವ್ಯಾವಹಾರಿಕ ಸಂಸ್ಥೆ ಎಂದು ಈಗಾಗಲೆ ಪ್ರಸಿದ್ಧಿ ಪಡೆದಿದೆ. ಸನತ್ ಇವರದ್ದು ಹಣ ಸಂಪಾದನೆಯೊಂದೇ ಉದ್ದೇಶವಾಗಿರದೆ ಒಂದು ಆರೋಗ್ಯಕರ ಸಮಾಜ, ಅದರ ಪ್ರಗತಿ, ನವೀಕರಣ ಇತ್ಯಾದಿ ಕುರಿತ ಚಿಂತನೆಗಳಿಂದಲೂ ಗುರುತಿಸಿ ಕೊಂಡಿರುತ್ತದೆ. ತನ್ನ ಧರ್ಮಪತ್ನಿ ಅಖಿಲಾ ವಸಿಷ್ಠ ಶೆಟ್ಟಿ ಅವರ ಜೊತೆಗೂಡಿ ಆರಂಭಿಸಿದ ಮೈ ಸ್ಪೇಸ್ ಎಂಬ ಹಬ್ ಸಮೂಹಗಳು ಸನತ್ ದಂಪತಿಯರ ವ್ಯಾವಹಾರಿಕ ದೂರದೃಷ್ಟಿಗೆ ಉತ್ತಮ ಉದಾಹರಣೆಯಾಗಿದೆ. ಒಂದರ್ಥದಲ್ಲಿ ಒಂದು ಬಹೂದ್ಧೇಶ ಕೈಗಾರಿಕಾ ಸಮೂಹದಂತಿರುವ ಸಿದ್ವಿನ್ ಇಂಡಸ್ಟ್ರೀಸ್ ಸಮಾಜದ ವಿವಿಧ ವರ್ಗಗಳ ವಿವಿಧ ವ್ಯವಹಾರಗಳಿಗೆ ಸ್ಪಂದಿಸಬಲ್ಲ ಬಲು ಅಪರೂಪದ ಸಂಸ್ಥೆ ಎನಿಸಿದ್ದಷ್ಟೇ ಅಲ್ಲದೇ ಒಂದು…

Read More