Author: admin
ಬೊರಿವಲಿ ಪಶ್ಚಿಮದ ಜಯರಾಜ್ ನಗರದಲ್ಲಿರುವ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನವೆಂಬರ್ 17 ರಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿಮಂತೂರು ನಡಿಗುತ್ತು ಡಾ. ಪಿ.ವಿ. ಶೆಟ್ಟಿ ಮತ್ತು ಅವರ ಪರಿವಾರದವರಿಂದ ವಿಶೇಷ ಧಾರ್ಮಿಕ ಕಾರ್ಯಕ್ರಮವಾದ ರಂಗಪೂಜೆಯನ್ನು ಆಯೋಜಿಸಲಾಗಿತ್ತು. ಇದೇ ಸಂದರ್ಭದಲ್ಲಿ ಡಾ. ಪಿ.ವಿ. ಶೆಟ್ಟಿಯವರಿಗೆ ದೇವಸ್ಥಾನದ ವತಿಯಿಂದ ಸನ್ಮಾನ ಕಾರ್ಯಕ್ರಮವೂ ನಡೆಯಿತು.ಪುರೋಹಿತರಾದ ಕಲ್ಲಮುಂಡ್ಕೂರು ವಿನಾಯಕ ಭಟ್, ಕೃಷ್ಣ ಮೂರ್ತಿ ಭಟ್, ಪ್ರಶಾಂತ್ ಭಟ್ (ಉಡುಪಿ) ಮತ್ತು ವಿಪ್ರವೃಂದರು ರಂಗಪೂಜೆಯ ವಿಧಿವಿಧಾನಗಳನ್ನು ನೆರವೇರಿಸಿದರು. ಡಾ. ಪಿ.ವಿ. ಶೆಟ್ಟಿಯವರೊಂದಿಗೆ ಅವರ ಸಹಧರ್ಮಿಣಿ ಶಕೀಲಾ ಶೆಟ್ಟಿ ಮತ್ತು ಪುತ್ರಿ ಅನೀಷಾ ಶೆಟ್ಟಿ ಅವರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ರಂಗಪೂಜೆಯ ಬಳಿಕ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಕಣಂಜಾರು ಕೊಳಕೆಬೈಲು ಪ್ರದೀಪ್ ಸಿ. ಶೆಟ್ಟಿ ಯವರು ಡಾ. ಪಿ.ವಿ. ಶೆಟ್ಟಿಯವರನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಿ ಅಭಿನಂದಿಸಿದರು. ಸನ್ಮಾನಿತರನ್ನು ಉದ್ದೇಶಿಸಿ ಮಾತನಾಡಿದ ಪ್ರದೀಪ್ ಸಿ. ಶೆಟ್ಟಿ ಅವರು, ಡಾ. ಪಿ.ವಿ. ಶೆಟ್ಟಿ ಅವರು ಯಾವುದೇ…
ಸಮಾಜಸೇವಕ ಹಾಗೂ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ) ಯ ಮಾಜಿ ಅಧ್ಯಕ್ಷ ವಿಶ್ವನಾಥ ಯು ಮಾಡ ಅವರು ನವೆಂಬರ್ 19 ರಂದು ನಿಧನರಾಗಿದ್ದು, ಕರಾವಳಿ ಜಿಲ್ಲೆಗಳ ಅಭಿವೃದ್ದಿಗಾಗಿ ಕಳೆದ 25 ವರ್ಷಗಳಿಂದ ಕ್ರಿಯಾಶೀಲವಾಗಿರುವ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯಾನ್, ಗೌರವ ಕೋಶಾಧಿಕಾರಿ ಸದಾನಂದ ಆಚಾರ್ಯ, ಉಪಾಧ್ಯಕ್ಷರುಗಳು, ಸಲಹೆಗಾರರು, ಇತರ ಪದಾಧಿಕಾರಿಗಳು, ಮಾಜಿ ಅಧ್ಯಕ್ಷರು, ಸಾಗರೋತ್ತರ ಸಮಿತಿಯ ಉಪಾಧ್ಯಕ್ಷರು, ಜಿಲ್ಲಾ ಕಾರ್ಯಧ್ಯಕ್ಷರು, ರಾಜ್ಯ ಸಂಯೋಜಕರು ಮತ್ತು ಕೇಂದ್ರ ಹಾಗೂ ಜಿಲ್ಲಾ ಸಮಿತಿಯ ಎಲ್ಲಾ ಸದಸ್ಯರುಗಳು ಗಾಢ ಸಂತಾಪ ಸೂಚಿಸಿದ್ದಾರೆ. ವಿಶ್ವನಾಥ ಮಾಡ ಅವರು ಶಿಸ್ತಿನ, ಸರಳತೆ ಹಾಗೂ ನಿಸ್ವಾರ್ಥ ಸಮಾಜಸೇವೆಯಿಂದ ಸಮುದಾಯದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅವರ ನಾಯಕತ್ವ, ಮಾರ್ಗದರ್ಶನ ಮತ್ತು ಸೇವಾಭಾವ ಸಂಘಟನೆಯನ್ನು ಸದಾ ಪ್ರೇರೇಪಿಸುತ್ತಿತ್ತು. ಅವರ ಕುಟುಂಬಕ್ಕೆ ದುಃಖವನ್ನು ತಾಳುವ ಶಕ್ತಿ ದೊರಕಲೆಂದು ಸಮಿತಿಯ ಸಂಸ್ಥಾಪಕರಾದ ತೋನ್ಸೆ…
ಬ್ಯಾಡ್ಮಿಂಟನ್ ಆಟಗಾರ ಕಾರ್ಕಳದ ಆಯುಷ್ ಶೆಟ್ಟಿಗೆ ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿಯಿಂದ ಕೊಡ ಮಾಡುವ ಇಂಡಿಯಾ ಸ್ಪೋರ್ಟ್ಸ್ ಅವಾರ್ಡ್- 2025 ವರ್ಷದ ಉದಯೋನ್ಮುಖ ಕ್ರೀಡಾಪಟು ಪ್ರಶಸ್ತಿ ಲಭಿಸಿದೆ. ನವೆಂಬರ್ 21ರಂದು ದೆಹಲಿಯ ಎಫ್.ಐ.ಸಿ.ಸಿ.ಐ ಫೆಡರೇಶನ್ ಹೌಸ್ ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದರು. ಆಯುಷ್ ಶೆಟ್ಟಿ ಸಾಣೂರಿನ ಮಿತ್ತಲ ಮನೆಯ ರಾಮಪ್ರಕಾಶ್ ಶೆಟ್ಟಿ ಮತ್ತು ಶಾಲ್ಮಿಲಿ ದಂಪತಿಯವರ ಪುತ್ರ. ತಮ್ಮ ಎಂಟನೇ ವಯಸ್ಸಿನಲ್ಲಿ ಬ್ಯಾಡ್ಮಿಂಟನ್ ಆಡಲು ಆರಂಭಿಸಿದ್ದರು. ಆರಂಭದಲ್ಲಿ ಕಾರ್ಕಳ ಮತ್ತು ಮಂಗಳೂರಿನಲ್ಲಿ ತರಬೇತಿ ಪಡೆದಿದ್ದರು. ನಂತರ ಆಯುಷ್ ಶೆಟ್ಟಿ ಕುಟುಂಬ ಬೆಂಗಳೂರಿಗೆ ಶಿಫ್ಟ್ ಆದರು. ಯುಎಸ್ ಓಪನ್ ಬಿಡಬ್ಲ್ಯೂಎಫ್ ಸೂಪರ್ 300 ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನಲ್ಲಿ ಆಯುಷ್ ಮೊದಲ ಬಿಡಬ್ಲ್ಯೂಎಫ್ ಟೂರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. 2025ರಲ್ಲಿ ಭಾರತಕ್ಕೆ ಸಿಕ್ಕಿದ ಮೊದಲ ಬಿಡಬ್ಲ್ಯೂಎಫ್ ಪ್ರಶಸ್ತಿ ಇದಾಗಿದೆ.
ದೊಡ್ಡಣ್ಣ ಶೆಟ್ರೆನ “ಮೊಡಂಗ್ ಮದ್ಮಲ್ ಅಬ್ರೊಣಿ ಮದ್ಮಯೆ ದಿಬ್ಬಣ ಪೋವ್ನಗ” ಪದೊಟು “ಇಜಾರ್ ಪೋಲಿಸ್” ಪಂದ್ ಉಂಡು. ಇಜಾರ್ ಪಂಡ ಕನ್ನಡದ ಇಜಾರು, ಪಂಡ ಚಡ್ಡಿ (Trousers). ತೆಂಕು ತಿಟ್ಟು ಯಕ್ಷಗಾನೊಡು ಮೊರಂಪುದ ಗಂಟ್ ಗ್ ಬರ್ಪಿನ ಇಜಾರ್ ಪಾಡುವ. ಅಂಚೆನೆ ಪತ್ತೈವ ವರ್ಸ ದುಂಬು ನಮ್ಮ ಮೈಸೂರು (1971 ಡ್ ಕರ್ನಾಟಕ ಆಂಡ್)ದ ಪೋಲಿಸ್ ಮಲ್ಲ ಕಾಕಿ ಚಡ್ಡಿ ಪಾಡೊಂದು ಇತಿನಿ. ಅಂಚ ಮುಲ್ಪ ದೊಡ್ಡಣ್ಣ ಶೆಟ್ರು ಇಜಾರ್ ಪೋಲಿಸ್ ಪಂಡಿನೇ? ಅತ್ತ್, ಇಜಾರ್ ಪೋಲಿಸ್ ಪಂಡ ರಿಜರ್ವ್ ಪೋಲಿಸ್. ಇಂಗ್ಲೀಷ್ ದ reserve ತುಲುಟು ಇಜಾರ್ ಆತಿನಿ. ಅಂಚ ಇಂಗ್ಲೀಸ್ ಪಾತೆರುನಗಲೆನ್ ಇಂಗ್ರೀಟ್ ಬಿಂಗ್ರೀಟ್ ಪಾತೆರುನು ಪನೊಂದು ಇತ್ತೆರ್. ಇಂಚಿನ ಕೆಲವು ಇಂಗ್ಲೀಷ್ ಪದೊಕುಲೆನ್ ತುಲುಟು ಎಂಚ ಪನೊಂದು ಇತ್ತೆರ್ ಪಂದ್ ಕೇಂಡರ್ ಡ, ಇನಿ ಕೂಲಿ ಬುಡ್ದು ತೆಲಿಪರ್. ಆ ಕಾಲೊಡು, ಓದು ಬರವು ದಾಂತಿನಗಲೆಗ್ ಅವು ಕರ್ಬದ ಕಡ್ಲೆ. ದಾಕ್ ದಾರ್ಲು ಪಂಡ ಡಾಕ್ಟರ್. ಇಂಚಪದ…
ಲಯನ್ಸ್ ಕ್ಲಬ್ ಹಂಗಳೂರು, ಲಯನ್ಸ್ ಕ್ಲಬ್ ಕುಂದಾಪುರ ಮತ್ತು ಲಯನ್ಸ್ ಕ್ಲಬ್ ಉಡುಪಿ ಆಶ್ರಯದಲ್ಲಿ ನವೆಂಬರ್ 11 ರಂದು ಕುಂದಾಪುರ ಗಾಂಧಿ ಮೈದಾನದಲ್ಲಿ ಲಯನ್ಸ್ ಕ್ಲಬ್ ಹಂಗಳೂರು ಮತ್ತು ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ನಡುವೆ ನಡೆದ ಫೈನಲ್ ಪಂದ್ಯಾಟದಲ್ಲಿ “ಲಯನ್ಸ್ ಜಿಲ್ಲಾ ಸ್ಪೋರ್ಟ್ಸ್ ಮೀಟ್ 2025-26” ರ “ವಿನ್ನರ್ಸ್” ಪ್ರಶಸ್ತಿಯನ್ನು ಲಯನ್ಸ್ ಕ್ಲಬ್ ಹಂಗಳೂರು ಹಾಗೂ “ರನ್ನರ್ಸ್ ಅಪ್” ಪ್ರಶಸ್ತಿಯನ್ನು ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಪಡೆಯಿತು. ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಲಯನ್ ಅಜಿತ್ ಶೆಟ್ಟಿ ಕೊತ್ತಾಡಿ ಟೂರ್ನಮೆಂಟ್ ನ ಅತ್ಯುತ್ತಮ ಆಟಗಾರ “ಮ್ಯಾನ್ ಆಫ್ ದ ಸಿರೀಸ್” ಪ್ರಶಸ್ತಿಯ ಜೊತೆ ಲಯನ್ ಅರುಣ್ ಕುಮಾರ್ ಹೆಗ್ಡೆ ಮತ್ತು ಲಯನ್ ರಜತ್ ಕುಮಾರ್ ಹೆಗ್ಡೆ ಕೊಡಮಾಡಿದ “ಸೈಕಲ್”ನ್ನು ಹಾಗೂ ಲಯನ್ ಅಶ್ವತ್ ಶೆಟ್ಟಿ ಸೆಮಿಫೈನಲ್ ನಲ್ಲಿ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಯನ್ನು ಪಡೆದರು. ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ, ಲಯನ್ಸ್ ಕ್ಲಬ್ ಬನ್ನಾಡಿ…
ಪ.ಪೂ ಕಾಲೇಜುಗಳ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಳ್ವಾಸ್ ಪ.ಪೂ ಕಾಲೇಜಿನ 12 ವಿದ್ಯಾರ್ಥಿಗಳು ಆಯ್ಕೆ
ಹರಿಯಾಣದಲ್ಲಿ ನವೆಂಬರ್ 26 ರಿಂದ 30ರವರೆಗೆ ನಡೆಯಲಿರುವ ಪದವಿ ಪೂರ್ವ ಕಾಲೇಜುಗಳ ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟಕ್ಕೆ ಆಳ್ವಾಸ್ ಪದವಿಪೂರ್ವ ಕಾಲೇಜಿನ 12 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಬಾಲಕರ ವಿಭಾಗದಲ್ಲಿ ಸಮರ್ಥ್ – 1500ಮೀ, ಆಕಾಶ್ ಹುಕ್ಕೇರಿ – 400ಮೀ ಹರ್ಡಲ್ಸ್, ಮನೀಶ್ – ತ್ರಿವಿಧ ಜಿಗಿತ, ರೂಪೇಶ್ ಲಮನಿ – ಪೋಲೊ ವಾಲ್ಟ್. ಬಾಲಕಿಯರ ವಿಭಾಗದಲ್ಲಿ ನಾಗಿಣಿ – 800ಮೀ, 1500ಮೀ, ಗುಡ್ಡಗಾಡು ಓಟ, 4*400ಮೀ ರಿಲೇ ಚರಿಷ್ಮಾ – 3000ಮೀ, 1500ಮೀ, ಗುಡ್ಡಗಾಡು ಓಟ, 4*400ಮೀ ರಿಲೇ, ಗೋಪಿಕಾ ಜಿ – 100ಮೀ, 4*100ಮೀ ರಿಲೇ, ಮಾನ್ವಿ ವಿ ಶೆಟ್ಟಿ – 4*100ಮೀ ರಿಲೇ, ಭಾನವಿ – 4*100ಮೀ ರಿಲೇ, ವೈಷ್ಣವಿ – 4*100ಮೀ ರಿಲೇ, ನಿರ್ಮಲಾ – 400ಮೀ ಹರ್ಡಲ್ಸ್, 4*400ಮೀ ರಿಲೇ, ಜಾನಕಿ ಜಿ ಸಿ – 400ಮೀ ಹರ್ಡಲ್ಸ್, 4*400ಮೀ ರಿಲೇ. ಆಯ್ಕೆಯಾದ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.
ಗಣಿತನಗರ : ಭಾರತ ಆರ್ಥಿಕವಾಗಿ, ಉದ್ಯಮರಂಗದಲ್ಲಿ, ಕೈಗಾರಿಕಾ ರಂಗದಲ್ಲಿ ವಿವಿಧ ಕ್ಷೇತ್ರದಲ್ಲಿ ಸಮರ್ಥವಾಗಿ, ಸಮೃದ್ಧವಾಗಿ, ಸ್ವಾಭಿಮಾನಿಯಾಗಿ ಹಾಗೂ ಶಕ್ತಿಶಾಲಿಯಾಗಿ ಬೆಳೆದು ನಿಂತಿದೆ. ಇಂದು ಭಾರತ ಬದಲಾದರು, ವಂದೇ ಮಾತರಂ ಬದಲಾಗದೆ ಕೋಟಿ ಕೋಟಿ ಭಾರತೀಯರಲ್ಲಿ ಇಂದಿಗೂ ಅನುರಣಿಸುತ್ತಿದೆ ಉಡುಪಿ-ಚಿಕ್ಕಮಗಳೂರು ಸಂಸದರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆದ ವಂದೇ ಮಾತರಂ – 150 ಐತಿಹಾಸಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯರಾದ ಶ್ರೀಮತಿ ಶ್ಯಾಮಲಾ ಕುಂದರ್ ಮಾತನಾಡಿ, ದೇವರ ಬಗ್ಗೆ ಭಜನೆ ಭಕ್ತಿ ಗೀತೆ ಹೇಗೆ ಮುಖ್ಯವಾಗುವುದೋ, ಅದೇ ರೀತಿ ದೇಶದ ಬಗ್ಗೆ ಭಕ್ತಿ ಬೇಕು ಅಂದರೆ ವಂದೇ ಮಾತರಂ ಗೀತೆಯನ್ನು ಹೃದಯಪೂರ್ವಕವಾಗಿ ನಮಗೆ ನಾವೇ ಅರ್ಪಿಸಿಕೊಳ್ಳಬೇಕು. ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸುವ ವಂದೇ ಮಾತರಂ ಗೀತೆ ನಮ್ಮ ದ್ವನಿಯಾಗಿದೆ. ಕೋಟ್ಯಾಂತರ ಭಾರತೀಯರ ಮಂತ್ರ ಶಕ್ತಿಯಾಗಿದೆ ಎಂದರು. ಇದೇ ಸಂದರ್ಭ ಎಲ್ಲಾ ವಿದ್ಯಾರ್ಥಿಗಳು ವಂದೇ ಮಾತರಂನ್ನು ಸಾಮೂಹಿಕವಾಗಿ…
ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಪಿ.ವಿ ಶೆಟ್ಟಿಯವರಿಗೆ ಬಂಟರ ಸಂಘ ಮುಂಬಯಿ ವತಿಯಿಂದ ರಾಧಾಬಾಯಿ.ಟಿ ಭಂಡಾರಿ ಅಡಿಟೋರಿಯಂನಲ್ಲಿ ಅಭಿನಂದನಾ ಸಮಾರಂಭವು ಜರಗಿತು. ಎಂ.ಬಿ.ಬಿ.ಎಸ್ ಪದವೀಧರರಾದ ಡಾ. ಪಿ.ವಿ ಶೆಟ್ಟಿಯವರು ಉದ್ಯಮಿಯಾಗಿ, ಸಮಾಜಸೇವಕರಾಗಿ ಗುರುತಿಸಿಕೊಂಡವರು. ಕ್ರೀಡಾ ಕ್ಷೇತ್ರದಲ್ಲಿ ಅವರ ಕೊಡುಗೆ ಅಪೂರ್ವವಾದುದು. ಪಯ್ಯಡೆ ಸ್ಪೋರ್ಟ್ಸ್ ಕ್ಲಬ್ ಅಕಾಡೆಮಿಯಿಂದ ಎಷ್ಟೋ ಕ್ರೀಡಾ ಪ್ರತಿಭೆಗಳು ಅರಳಿವೆ. ಕ್ರಿಕೆಟ್ ತಾರೆಗಳಾದ ರೋಹಿತ್ ಶರ್ಮಾ, ಅಜಿಂಕ್ಯಾ ರಹಾನೆ, ಪುಟ್ಬಾಲ್ ನಲ್ಲಿ ಮಿಂಚುತ್ತಿರುವ ಮಹಾರಾಷ್ಟ್ರ ರಾಜ್ಯ ಪುಟ್ಬಾಲ್ ತಂಡದ ನಾಯಕ ವಿಜೇಶ್ ಶೆಟ್ಟಿ ಇವರೆಲ್ಲಾ ಡಾ. ಪಿ.ವಿ ಶೆಟ್ಟಿ ಅವರ ಗರಡಿಯಲ್ಲಿ, ಪಳಗಿ ಬೆಳಗಿದವರು. ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಬಂಟರ ಸಂಘ ಮುಂಬೈಯ ಅಧ್ಯಕ್ಷ ಪ್ರವೀಣ್ ಬೋಜ ಶೆಟ್ಟಿ, ಉಪಾಧ್ಯಕ್ಷ ಮಹೇಶ್ ಎಸ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್ ಕೆ ಶೆಟ್ಟಿ, ಕೋಶಾಧಿಕಾರಿ ಸಿಎ ರಮೇಶ್ ಶೆಟ್ಟಿ, ಮಾಜಿ ಅಧ್ಯಕ್ಷರಾದ ಸಿಎ ಶಂಕರ್ ಶೆಟ್ಟಿ,…
ಸಹಕಾರಿ ಸಂಘದಲ್ಲಿ ಎಂದೂ ರಾಜಕೀಯ ಪ್ರವೇಶಿಸಬಾರದು ಎಂದು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಹೇಳಿದರು. ನವೆಂಬರ್ 17ರಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ಮತ್ತು ಜಿಲ್ಲಾ ಸಹಕಾರ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಪಡುಬಿದ್ರಿಯಲ್ಲಿ ನಡೆದ ಸಹಕಾರಿ ಸಪ್ತಾಹದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಭಾರತ್ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ ಉದ್ಘಾಟಿಸಿ, ಮಾನವೀಯತೆಯ ನೆಲೆಯಲ್ಲಿ ಸಹಕಾರಿ ತತ್ವದ ಆಧಾರದಲ್ಲಿ ಈ ರಂಗವು ಸಾಲ ನೀಡುತ್ತಿದೆ. ಜನರಿಂದಾಗಿಯೇ ಸಹಕಾರಿ ಸಂಘವು ಇಂದು ಉನ್ನತಿಯಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಪಡುಬಿದ್ರಿ ಸೊಸೈಟಿಯ ಮೂಲಕ 180 ರೈತರಿಗೆ ತಲಾ ರೂ.3,000 ರೂಪಾಯಿಗಳ ಕೃಷಿ ಪ್ರೋತ್ಸಾಹಧನವನ್ನು ವಿತರಿಸಿದರು. ಸೂರ್ಯಕಾಂತ್ ಜಯ ಸುವರ್ಣ ಅವರನ್ನು ಸನ್ಮಾನಿಸಲಾಯಿತು. ಸಹಕಾರ ರತ್ನ ಪುರಸ್ಕೃತ ರಮೇಶ್ ಶೆಟ್ಟಿ ಹಾವಂಜೆ ಅವರನ್ನು ಅಭಿನಂದಿಸಲಾಯಿತು.…
ಯಕ್ಷಾಂಗಣ ಮಂಗಳೂರು ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ ವತಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ಡಾ| ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷಭಾರತಿ ಪುತ್ತೂರು ಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ನಡೆಸಲ್ಪಡುವ ಹದಿಮೂರನೇ ವರ್ಷದ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ _ 2025’ ತ್ರಯೋದಶ ಸರಣಿಯು ಇದೇ ನವೆಂಬರ್ 23 ರಿಂದ 29ರವರೆಗೆ ನಗರದ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಜರಗಲಿದೆ. ‘ಸಂಘಟನಾ ಪರ್ವ’ ಎಂಬ ಹೆಸರಿನಲ್ಲಿ ಜಿಲ್ಲೆಯ ವಿವಿಧ ಯಕ್ಷಗಾನ ಸಂಘಗಳ ಸಹಕಾರದಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ನವೆಂಬರ್ 23 ರಿಂದ ಕ್ರಮವಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ‘ಮಿತ್ತ ಲೋಕೊದ ಪೆತ್ತ’ ತುಳು ತಾಳಮದ್ದಳೆ ಮತ್ತು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಯಕ್ಷಗಾನ ಸಂಘ ಸೂಡ, ಕಾರ್ಕಳ (ನಚಿಕೇತ), ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ ಬೆಟ್ಟಂಪಾಡಿ (ಶಾರದಾ ವಿವಾಹ), ಯಕ್ಷಧ್ರುವ ಪಟ್ಲ ಫೌಂಡೇಶನ್ ಹವ್ಯಾಸಿ ಘಟಕ…














