Author: admin
ಆಕೆ ಮನೆಯ ಯಜಮಾನಿ. 60ರ ಹರೆಯ. ಬಂದಾಕೆ ತೋರಿಸಿದ್ದು ತನ್ನ ಕೈಯ ಬೆರಳುಗಳನ್ನು. ಬಲದ ಕೈಯ ಮೂರು ಉಗುರುಗಳು ಕಪ್ಪಾಗಿದ್ದವು. ಅದರ ಸುತ್ತ ಬಾತುಕೊಂಡಿತ್ತು. ಒಂದರಲ್ಲಿ ಸ್ವಲ್ಪ ಕೀವು. ತುಂಬಾ ನೋವು ಯಾಕೆ ಹೀಗೆ? ಎಂದು ಕೇಳಿದಳು. ಇದೊಂದು ಸಾಮಾನ್ಯ ತೊಂದರೆ ಮತ್ತು ಸಾಮಾನ್ಯ ಪ್ರಶ್ನೆ. ಪಾತ್ರೆ ತೊಳೆಯುವ ಸಾಬೂನು ಬದಲಾಯಿಸಿದೆ. ವ್ಯತ್ಯಾಸವಿಲ್ಲ. ಈ ಸಂಭಾಷಣೆಯ ಮುಂದುವರಿದ ಭಾಗ ಹೀಗೆಯೇ ಇರುತ್ತದೆ. ಉಗುರು ಸುತ್ತು ಎನ್ನುವ ಹೆಸರಿನಲ್ಲಿ ಹಲವು ಅಂಶಗಳು ಅಡಗಿವೆ. ಉಗುರಿನ ಸುತ್ತ ಬರುವ ಸೋಂಕು ಇದು. ಉಗುರಿನ ಸುತ್ತಲಿನ ಚರ್ಮ ಮತ್ತು ಅಂಗಾಂಶ ದಪ್ಪವಾಗಿ ಕೆಂಪಾಗುತ್ತದೆ. ಕೀವು ತುಂಬಿಕೊಂಡು ಬಹಳ ವೇದನೆ ಇರಬಹುದು. ಉಗುರಿನ ಬಣ್ಣ ಕ್ರಮೇಣ ಬದಲಾಗಿ ಹಳದಿ ಅಥವಾ ಬದಿಗಳಲ್ಲಿ ಆಕಾರವೇ ಬದಲಾಗಿ ಸೊಟ್ಟಗಾಗಿ ಬಿಡಬಹುದು. ಹೆಚ್ಚಾಗಿ ಇದು ಕಂಡುಬರುವುದು ಮಹಿಳೆಯರಲ್ಲಿ ಮತ್ತು ಹೋಟೆಲಿನ ಮಾಣಿಗಳಲ್ಲಿ. ಕಾರಣ? : ಉಗುರು ಸುತ್ತಿನ ಮುಖ್ಯ ಕಾರಣವೇ ಬೆರಳುಗಳಲ್ಲಿ ಸದಾ ನೀರಿನ ಪಸೆ ಇರುವುದು. ಮನೆಯಲ್ಲಿ ಮಹಿಳೆಯರ ಅತ್ಯಂತ…
ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ: ಅಧ್ಯಕ್ಷರಾಗಿ ಪುಷ್ಪರಾಜ್ ಶೆಟ್ಟಿ, ಉಪಾಧ್ಯಕ್ಷರಾಗಿ ರಾಜೇಶ್ ಶೆಟ್ಟಿ
ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಾರ್ತಾಭಾರತಿ ದಿನಪತ್ರಿಕೆಯ ಮಂಗಳೂರು ಬ್ಯೂರೋ ಚೀಫ್, ಸಜ್ಜನ ಸಹೃದಯಿ ಪುಷ್ಪರಾಜ್ ಶೆಟ್ಟಿ ಬಿ.ಎನ್ ಆಯ್ಕೆಯಾಗಿದ್ದಾರೆ. ದ.ಕ ಜಿಲ್ಲಾ ವಾರ್ತಾ ಇಲಾಖೆಯ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ 2025-28ನೆ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾದರು. ಪುಷ್ಪರಾಜ್ 187 ಮತಗಳನ್ನು ಗಳಿಸಿದರೆ ಅವರ ಪ್ರತಿಸ್ಪರ್ಧಿ ವಿಜಯವಾಣಿ ಪತ್ರಿಕೆಯ ವರದಿಗಾರ ಯುವ ಫೈಯರ್ ಬ್ರಾಂಡ್ ಹೆಸರಾದ ಶ್ರವಣ್ ಕುಮಾರ್ ನಾಳ ಕೊನೆಯ ದಿನ ನಾಮಪತ್ರ ಸಲ್ಲಿಸಿದರೂ ತೀವ್ರ ಸ್ಪರ್ಧೆ ನೀಡಿ 144 ಮತಗಳನ್ನು ಪಡೆದರು. ಉಪಾಧ್ಯಕ್ಷರಾಗಿ ಅತ್ಯಧಿಕ ಮತಗಳನ್ನು ಪಡೆದ ವಿಜಯ ಕರ್ನಾಟಕದ ಮುಹಮ್ಮದ್ ಆರೀಫ್, ವಿಲೈಡ್ ಡಿ ಸೋಜ ಮತ್ತು ರಾಜೇಶ್ ಶೆಟ್ಟಿ, ಕಾರ್ಯದರ್ಶಿಗಳಾಗಿ ಅತೀ ಹೆಚ್ಚಿನ ಮತಗಳನ್ನು ಪಡೆದ ಉದಯವಾಣಿಯ ಸತೀಶ್ ಇರಾ, ಹೊಸ ದಿಗಂತದ ಸುರೇಶ್ ಪಳ್ಳಿ, ಪುತ್ತೂರಿನ ಸಿದ್ದೀಕ್ ನೀರಾಜೆ ಗೆಲುವು ಸಾಧಿಸಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅತಿ ಹೆಚ್ಚಿನ ಮತಗಳನ್ನು ಪಡೆದ ಕನ್ನಡಪ್ರಭ ದ ಸಂದೀಪ ವಾಗ್ಲೇ, ದಿವಾಕರ ಪದ್ಮುಂಜ, ಸಂದೇಶ್…
ಕರ್ನಾಟಕ ರಾಜ್ಯ ವೇಯ್ಟ್ ಲಿಫ್ಟಿಂಗ್ ಅಸೋಸಿಯೇಷನ್ (ರಿ.) ಮತ್ತು ಸ್ಫೋರ್ಟ್ಸ್ ಎಂಡ್ ಆರ್ಟ್ಸ್ ಅಸೋಸಿಯೇಷನ್ (ರಿ.) ಸುಳ್ಯ ಇವುಗಳ ಜಂಟಿ ಆಶ್ರಯದಲ್ಲಿ ಜರುಗಿದ ಕರ್ನಾಟಕ ರಾಜ್ಯ ಮಟ್ಟದ ಜೂನಿಯರ್, ಸಬ್ ಜೂನಿಯರ್ (ಬಾಲಕ ಬಾಲಕಿಯರು), ಸೀನಿಯರ್ (ಪುರುಷ ಮತ್ತು ಮಹಿಳೆಯರು) ವೇಯ್ಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಆಳ್ವಾಸ್ ಕಾಲೇಜು ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿತು. ಜೂನಿಯರ್ ವಿಭಾಗದ ಬಾಲಕ ಬಾಲಕಿಯರ, ಸಬ್ ಜೂನಿಯರ್ ಬಾಲಕ ಬಾಲಕಿಯರ ಮತ್ತು ಮಹಿಳೆಯರ ಹೀಗೆ ಒಟ್ಟು ಎಲ್ಲಾ 6 ವಿಭಾಗದಲ್ಲಿ ತಂಡ ಪ್ರಶಸ್ತಿಯನ್ನು ಪಡೆದು ಸಮಗ್ರ ಚಾಂಪಿಯನ್ ಆಗಿ ಆಳ್ವಾಸ್ ಹೊರಹೊಮ್ಮಿತು. ಬಾಲಕಿಯರ ಸಬ್ ಜೂನಿಯರ್ ವಿಭಾಗದಲ್ಲಿ ಆಳ್ವಾಸ್ ನ ಮಾನಸ, ಮಹಿಳಾ ವಿಭಾಗದಲ್ಲಿ ಆಳ್ವಾಸ್ ನ ತನುಷ ಬೆಸ್ಟ್ ಲಿಪ್ಟ್ ರ್ ವೈಯಕ್ತಿಕ ಪ್ರಶಸ್ತಿಯನ್ನು ಪಡೆದುಕೊಂಡರು. ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು ಡಾ. ಎಂ. ಮೋಹನ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.
ಒಬ್ಬೊಬ್ಬರ ಮನುಷ್ಯನ ವ್ಯಕ್ತಿತ್ವ ಸರಳತೆ ಕೆಲವರನ್ನು ಸಹಜವಾಗಿಯೇ ಆಕರ್ಷಿಸುತ್ತದೆ. ಅದು ಸ್ವಾಭಾವಿಕ. ಕೆಲವರು ತಮ್ಮ ಮಾತುಗಳಿಂದಾಗಲಿ, ಕೆಲಸಗಳಿಂದಾಗಲಿ ಅಥವಾ ಗೌರವಪೂರ್ಣ ನಡವಳಿಕೆಯಿಂದಾಗಲಿ ಇತರರ ಮನ ಗೆದ್ದುಕೊಳ್ಳುತ್ತಾರೆ. ಅವರ ವ್ಯಕ್ತಿತ್ವವೇ ಅವರಿಗೆ ಎತ್ತರದ ಸ್ಥಾನವನ್ನು ನೀಡುತ್ತದೆ. ಅದೇ ರೀತಿಯ ಒಬ್ಬ ಸ್ನೇಹಿತನಾಗಿದ್ದನು ಪುನೀತ್ ಶೆಟ್ಟಿ. ಹೃದಯಾಘಾತದಿಂದ ಅವನು ಅಕಾಲಿಕವಾಗಿ ನಿಧನರಾದರು ಎಂಬುದು ಮನಸ್ಸಿಗೆ ತುಂಬಾ ನೋವು ತಂದ ಸಂಗತಿ. ಕೇವಲ 37ನೇ ವಯಸ್ಸಿನಲ್ಲೇ ಬದುಕು ಮುಗಿದರೂ, ಅವನ ವ್ಯಕ್ತಿತ್ವ ಎಲ್ಲರಿಗೂ ಆದರ್ಶಪ್ರಾಯವಾಗಿದೆ. ಪುನೀತ್ ಶೆಟ್ಟಿ ಸೆಲ್ಕೋ ಸೊಲಾರ್ನಲ್ಲಿ ಉದ್ಯೋಗದಲ್ಲಿದ್ದು, ಹೆಬ್ರಿ ಕಾರ್ಕಳ ಪ್ರದೇಶದಲ್ಲಿ ನಿಜಕ್ಕೂ ಕ್ರಾಂತಿ ಮೂಡಿಸಿದ್ದ. ಸೋಲಾರ್ ಕ್ಷೇತ್ರದಲ್ಲಿ ಅವನು ಮಾಡಿದ ಸಮಾಜಮುಖಿ ಕಾರ್ಯಗಳು ಎಲ್ಲರಿಗೂ ಅಚ್ಚುಮೆಚ್ಚಾಗಿದ್ದವು. ಗುಡ್ಡದ ಮೇಲಿನ ನಾರಾಯಣಣ್ಣನ ಮನೆಗೆ ಸೋಲಾರ್ ಲೈಟ್ ಅಳವಡಿಸಿ ಮನೆಗೆ ಬೆಳಕು ಕೊಟ್ಟದ್ದು ಅವನೇ. ಕಳೆದ ವರ್ಷ ನಕ್ಸಲ್ ವಿಕ್ರಂ ಗೌಡ ನ ಎನ್ಕೌಂಟರ್ ನಡೆದ ಪೀತಬೈಲಿನಲ್ಲಿ ಸೋಲಾರ್ ವಿದ್ಯುತ್ ಘಟಕ ಸ್ಥಾಪಿಸಿ ಹಲವಾರು ಮನೆಗಳಿಗೆ ಬೆಳಕು ಚೆಲ್ಲಿದ್ದವನು ಕೂಡ ಅವನೇ. ಇವು…
ಬ್ರಹ್ಮಾವರ ನ. 8: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನ ಸುಸಜ್ಜಿತ ಕ್ರೀಡಾಂಗಣ ಜಿ ಎಮ್ ಅರೆನಾದಲ್ಲಿ 21ನೇ ವಾರ್ಷಿಕ ಕ್ರೀಡಾಕೂಟ ಯಶಸ್ವಿಯಾಗಿ ಜರಗಿತು. ಶ್ರೀಯುತ ಸೋಮಶೇಖರ ಪಡುಕರೆ, ಕರ್ನಾಟಕದ ಪ್ರಸಿದ್ಧ ಸ್ಪೋರ್ಟ್ಸ್ ಜರ್ನಲಿಸ್ಟ್, ಉಡುಪಿ ಇವರು ಕ್ರೀಡಾಜ್ಯೋತಿಯನ್ನು ಬೆಳಗಿ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ ನಮ್ಮ ದೇಶಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ತಂದು ಕೊಟ್ಟಿದ್ದು ಹಾಕಿ ಕ್ರೀಡೆ ಎಂದು ತಿಳಿಸಿದರು. ಹಾಗೆಯೇ ಜಿ ಎಮ್ ವಿದ್ಯಾಸಂಸ್ಥೆಯಿಂದ ಅಂತರಾಷ್ಟ್ರೀಯ ಕ್ರೀಡೆಗೆ ಆಯ್ಕೆಯಾದ ವಿದ್ಯಾರ್ಥಿಗಳ ಹೆಸರುಗಳನ್ನು ಗುರುತಿಸಿದರು. ವಿದ್ಯಾರ್ಥಿಗಳಿಗೆ ನಿಮ್ಮ ಜೀವನಕ್ಕಾಗಿ ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಿ ಆದರೆ ನಿಮ್ಮ ಬದುಕಿನ ಅಂತರಾತ್ಮದಲ್ಲಿ ಒಬ್ಬ ಕ್ರೀಡಾಪಟುವಿರಲಿ ಎಂದು ಕರೆನೀಡಿದರು. ಸಮಾರೋಪ ಸಮಾರಂಭದಲ್ಲಿ ಶ್ರೀಯುತ ಜಗದೀಶ್ ಕೆ. ದೈಹಿಕ ಶಿಕ್ಷಣ ನಿರ್ದೇಶಕರು, ಕರ್ನಾಟಕ ಪಬ್ಲಿಕ್ ಸ್ಕೂಲ್ ಬ್ರಹ್ಮಾವರ. ಇವರು ಮಾತನಾಡಿ ಕ್ರೀಡೆಯು ನಮ್ಮಲ್ಲಿ ಜೀವನ ಕೌಶಲ, ನಾಯಕತ್ವ ಗುಣ, ಮನೋಲ್ಲಾಸ ಮತ್ತು ನಾವೆಲ್ಲರೂ ಒಂದೇ ಎಂಬ ಮನೋಭಾವನೆಯನ್ನು ಮೂಡಿಸುತ್ತದೆ ಎಂದು ತಿಳಿಸಿದರು. ಶಾಲಾ…
ಜಿಲ್ಲಾಮಟ್ಟದ ಯೋಗ ಸ್ಪರ್ಧೆಯು ಉಡುಪಿಯ ವಿದ್ಯೋದಯ ಪಿ.ಯು ಕಾಲೇಜಿನಲ್ಲಿ 7-11- 2025ರಂದು ಜರುಗಿತು. ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಅರ್ಥಮ್ ಎ. ಶೆಟ್ಟಿ ಹಾಗೂ ರಕ್ಷಕ್ ಎಸ್. ಗೌಡ ಇವರು ಕಲಾತ್ಮಕ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕದೊಂದಿಗೆ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಸಾಂಪ್ರದಾಯಿಕ ಯೋಗ ಸ್ಪರ್ಧೆಯಲ್ಲಿ ಜಾಹ್ನವಿ ಜೆ. ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಹಾಗೂ ಅರ್ಥಮ್ ಎ. ಶೆಟ್ಟಿ ರವರು ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ವಿಜೇತರಾಗಿದ್ದಾರೆ. ಪ್ರಥಮ ಸ್ಥಾನಿಗಳಾದ ಅರ್ಥಮ್ ಎ. ಶೆಟ್ಟಿ ಹಾಗೂ ರಕ್ಷಕ್ ಎಸ್. ಗೌಡರವರು ಹಾವೇರಿಯಲ್ಲಿ ನಡೆಯುವ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿ, ಬೋಧಕ – ಬೋಧಕೇತರ ವರ್ಗದವರು ಶ್ಲಾಘಿಸಿ, ಅಭಿನಂದಿಸಿದ್ದಾರೆ.
ಅಶೋಕ ಇದ್ದಲ್ಲಿ ಶೋಕವಿಲ್ಲ. ಈ ವ್ಯಕ್ತಿಯ ಹೆಸರಿನಲ್ಲೇ ಸಾಮರಸ್ಯ ಅಡಗಿದೆ ಅದಕ್ಕೆ ಇವರ ವ್ಯಕ್ತಿತ್ವವೂ ಪೂರಕವಾಗಿದೆ. ಲೆಕ್ಕ ಹಾಕಿದರೆ ನಾನಿವರನ್ನು ಮುಖತಃ ಭೇಟಿಯಾಗಿದ್ದು 4-5 ಸಲವಷ್ಟೇ. ಮೊದಲ ಬಾರಿಗೆ ನೋಡಿದಾಗಲೇ ಇವರ ವರ್ಚಸ್ಸಿಗೆ, ಕ್ಷಾತ್ರ ತೇಜಸ್ಸಿಗೆ, ನಿಷ್ಕಲ್ಮಶ ನಗುವಿಗೆ, ಎಲ್ಲಕ್ಕಿಂತ ಮಿಗಿಲಾಗಿ ಅಹಂಕಾರವೇ ಇಲ್ಲದ ಸರಳತೆಗೆ ಅಭಿಮಾನಿಯಾಗಿದ್ದೆ. ಅಂತಃಕರಣದಲ್ಲೊಂದು ಅಶೋಕಣ್ಣನ ಕುರಿತಾಗಿ ಅಪರಿಮಿತ ಆಸಕ್ತಿ ಪುಟಿದೆದ್ದಿತ್ತು. ಮೈರ್ಮಾಡಿ ಅಶೋಕ್ ಶೆಟ್ರು ಅಪರಂಜಿ ಅಂತಹ ವ್ಯಕ್ತಿ ಎಂದು ಅದೆಷ್ಟೋ ಜನರ ಬಾಯಲ್ಲಿ ಕೇಳಿದ ಮಾತು ಇವರ ಮನೆಯಲ್ಲಿ ಕುಳಿತು ಇವರೊಡನೆ ಮಾತನಾಡುವಾಗ ದಿಟವೆನಿಸಿತು. ಎಂಥವರಿಗೂ ಕೂಡ ಇವರನ್ನು ವಿರೋಧಿಸಬೇಕು ಇವರ ಅಮೂಲ್ಯವಾದ ಸ್ನೇಹವನ್ನು ಕೈಚೆಲ್ಲಬೇಕೆನ್ನುವ ಬಯಕೆ ಮೂಡುವುದಿಲ್ಲ, ಇಂತಹ ಒಬ್ಬ ವ್ಯಕ್ತಿ ನಮ್ಮ ಜೊತೆ ಇದ್ದರೆ ಸಾಕು ಎನ್ನುವ ಅನುರಾಗ ಅರಳುತ್ತೆ ಇವರನ್ನು ಅಪ್ಪಿ ಹಿಡಿಯಬೇಕೆನಿಸುತ್ತೆ. ಮಾಸ್ಟ್ರೇ ನಿಮ್ಮೂರು ಯಾವುದು ಅಂತ ನಾನು ಕರ್ತವ್ಯ ನಿರ್ವಹಿಸುವ ಕಾರ್ಕಳ ತಾಲೂಕಿನಲ್ಲಿ ಅದೆಷ್ಟೋ ಜನ ಕೇಳಿದಾಗ ಬ್ರಹ್ಮಾವರ ಸಮೀಪ ನೀಲಾವರದ ಎಳ್ಳಂಪಳ್ಳಿ ಅಂದಾಗ ಮರುಕ್ಷಣ ಅವರು…
ಕರ್ನಾಟಕ ರಾಜ್ಯ ಅನುದಾನ ರಹಿತ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಒಕ್ಕೂಟ (KUPMA) ಇದರ ಉಡುಪಿ ಜಿಲ್ಲಾ ಕಾರ್ಯಕಾರಿಣಿ ಸಮಿತಿಯ ಗೌರವ ಅಧ್ಯಕ್ಷರನ್ನಾಗಿ ಡಾ. ಪ್ರಶಾಂತ್ ಶೆಟ್ಟಿ ದಂಡತೀರ್ಥ ಸಂಸ್ಥೆ ಕಾಪು ಹಾಗೂ ಅಧ್ಯಕ್ಷರನ್ನಾಗಿ ತ್ರಿಷಾ ಶಿಕ್ಷಣ ಸಂಸ್ಥೆಯ ಗೋಪಾಲಕೃಷ್ಣ ಭಟ್ ಅವರನ್ನು ಉಡುಪಿ ಓಶಿಯನ್ ಪರ್ಲ್ ನಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ನಿರ್ಣಯಿಸಲಾಯಿತು. ಖಜಾಂಚಿಯಾಗಿ ಜ್ಞಾನಸುಧಾ ಸಂಸ್ಥೆಯ ಡಾ. ಸುಧಾಕರ್ ಶೆಟ್ಟಿ, ಕಾರ್ಯದರ್ಶಿಯಾಗಿ ಕ್ರಿಯೇಟಿವ್ ಸಂಸ್ಥೆಯ ಅಶ್ವತ್ ಎಸ್. ಎಲ್, ಸಹಕಾರ್ಯದರ್ಶಿಗಳಾಗಿ ಕ್ರಿಯೇಟಿವ್ ಸಂಸ್ಥೆಯ ಡಾ. ಗಣನಾಥ್ ಶೆಟ್ಟಿ, ಸುಜ್ಞಾನ ಸಂಸ್ಥೆಯ ಪ್ರತಾಪ್ ಚಂದ್ರ ಶೆಟ್ಟಿ, ಉಪಾಧ್ಯಕ್ಷರುಗಳನ್ನಾಗಿ ಸುಜ್ಞಾನ ಸಂಸ್ಥೆಯ ರಮೇಶ್ ಶೆಟ್ಟಿ, ಎಕ್ಸಲೆಂಟ್ ಕುಂದಾಪುರದ ದೀಪಾ ಎಂ. ಹೆಗಡೆ, ಅಮೃತ ಭಾರತಿ ಹೆಬ್ರಿಯ ಸತೀಶ್ ಪೈ ಹಾಗೂ ರಾಜೇಶ್ವರಿ ಸಂಸ್ಥೆ ಕಾರ್ಕಳದ ದೇವಿಪ್ರಸಾದ್ ಶೆಟ್ಟಿಯವರನ್ನು ಆಯ್ಕೆ ಮಾಡಲಾಯಿತು. ಆಯ್ಕೆ ಪ್ರಕ್ರಿಯೆಯಲ್ಲಿ ರಾಜ್ಯ ಸಮಿತಿಯ ಗೌರವ ಉಪಾಧ್ಯಕ್ಷರಾದ ರಾಧಕೃಷ್ಣ ಶೆಣೈ, ಫಾದರ್ ವಿನ್ಸೆಂಟ್ ಕ್ರಾಸ್ತ, ಪ್ರೋ. ಆಲ್ಬಂಟ್ ರೋಡ್ರಿಗಸ್ (ದಂಡತೀರ್ಥ…
ಇತ್ತೀಚಿಗೆ ಪರಿಚಯವಾದ ಒಬ್ರು ಮಾತನಾಡುತ್ತ ನನ್ನ ಬಳಿ ನಿಮ್ಮ ಹೆಂಡತಿ ಏನು ಕೆಲಸ ಮಾಡೋದು ಎನ್ನುವುದಾಗಿ ಪ್ರಶ್ನಿಸಿದ್ರು ಅವಳದ್ದು ಅರಣ್ಯ ಇಲಾಖೆ ಉಪವಲಯ ಅರಣ್ಯಾಧಿಕಾರಿಗಳು ಅಂದೆ. ಅದು ಹೇಗೆ ಮರ್ರೆ ನಿಮಗೆ ಅವರನ್ನು ಮದುವೆ ಮಾಡಿ ಕೊಟ್ರು ಅಂದ್ರು ??? ಕಸಿವಿಸಿಯಾದರೂ ವ್ಯಂಗ್ಯವೆನಿಸಿದರೂ ಯಾಕೆ ಎಂದು ಮರು ಪ್ರಶ್ನಿಸಿದೆ ಅಲ್ಲಾ ನೀವು ನೋಡಿದ್ರೆ ಪ್ರಾಥಮಿಕ ಶಾಲೆಯ ಟೀಚರು ಅವರು ಅರಣ್ಯ ಇಲಾಖೆಯ ಆಫೀಸರ್ ನಿಮ್ಮ ಅದೃಷ್ಟ ಅಂದ್ರು. ನಾನೇ ಮಹಾನ್ ವ್ಯಕ್ತಿ ಎಂದುಕೊಂಡಿದ್ದವನ ಜಂಘಾಬಲ ಉಡುಗಿ ಹೋಯಿತು. ಈ ಸಮಾಜದರಲ್ಲಿರುವ ಮನುಷ್ಯರು ನಾವು ಅಂದುಕೊಂಡಷ್ಟು ಸುಲಭವಲ್ಲ. ಎಲ್ಲವನ್ನು ಎಲ್ಲರನ್ನೂ ಲೆಕ್ಕಹಾಕಿ ನೋಡ್ತಾರೆ ಅಂತ ಅರಿವಾಯಿತು ಇನ್ನು ಸ್ವಲ್ಪ ಸಮಯ ಬಿಟ್ಟಿದ್ರೆ ನಿನಗೆ ಮದುವೆಯಾಗ್ಲಿಕ್ಕೆ ಹೆಣ್ಣು ಕೊಟ್ಟಿದ್ದೆ ಹೆಚ್ಚು ಅಂತ ಹೇಳುತ್ತಿದ್ರೇನೋ ಆ ಅವಕಾಶ ಕೊಡದೆ ನಮ್ಮ ಮಾತನ್ನು ತುಂಡರಿಸಿದೆ. ತದನಂತರ ಮನಸ್ಸಿನಲ್ಲಿ ಒಂದಿಷ್ಟು ಆಲೋಚನೆಗಳು ಅವರು ಕೇಳಿದ್ದು ಸರಿ ಇದೆ ಅಲ್ವಾ ನಾನು ಜೀವನದಲ್ಲಿ ಏನನ್ನ ಸಾಧಿಸಿದ್ದೇನೆ ! ಗುರುತರವಾದಂತದ್ದು ಏನೂ…
ಪ್ರತಿಯೊಬ್ಬರು ತಮಗೆ ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು – ನವೀನ್ ಚಂದ್ರ ಶೆಟ್ಟಿ
ರೋಟರಿ ಕ್ಲಬ್ ಕಾರ್ಕಳ, ರೋಟರಿ ಆನ್ಸ್ ಕ್ಲಬ್ ಮತ್ತು ವಿಹಾನ ಮೆಲೋಡೀಸ್ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ಚಾಣಕ್ಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ (ರಿ). ಇವರ ವತಿಯಿಂದ “ವಾಯ್ಸ್ ಆಫ್ ಚಾಣಕ್ಯ- 2025” ಸೀಸನ್ 8 ಇದರ ಆಯ್ಕೆ ಪ್ರಕ್ರಿಯೆಯು ರೋಟರಿ ಬಾಲ ಭವನ ಅನಂತಶಯನ ಕಾರ್ಕಳ ಇಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿಕೊಂಡು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಮಾತನಾಡಿದ ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿಯವರು, ಪ್ರತಿಯೊಬ್ಬರು ತಮಗೆ ಸಿಕ್ಕಿದ ಅವಕಾಶವನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳಬೇಕು. ಸತತ ಪ್ರಯತ್ನದಿಂದ ಯಾವುದೇ ಕ್ಷೇತ್ರದಲ್ಲಿ ಮುಂದೆ ಬರಬಹುದು ಎಂದರು. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆಯ ಪ್ರಯತ್ನ ಅಭಿನಂದನೀಯ ಎಂದರು. ವೇದಿಕೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೆಬ್ರಿ ಇಲ್ಲಿನ ಪ್ರಭಾರ ಪ್ರಾಂಶುಪಾಲರಾದ ವಿದ್ಯಾದರ ಹೆಗ್ಡೆ, ಆನ್ಸ್ ಕ್ಲಬ್ಬಿನ ಅಧ್ಯಕ್ಷೆ ಜಯಂತಿ ಆನಂದ ನಾಯಕ್, ತರಬೇತುದಾರರಾದ…














