Author: admin
ಇದು ಯಾವುದೇ ಆರಾಧನಾ ಪದ್ಧತಿಯನ್ನು ವೈಭವಿಕರಿಸುವ ಅಥವಾ ಕನಿಷ್ಠ ಅಂತ ಹೇಳುವ ಉದ್ದೇಶದಿಂದ ಬರೆದದ್ದು ಅಲ್ಲ. ವೈದಿಕರು ಮಾಡುವ ದೇವರ ಆರಾಧನೆ ಹಾಗೂ ಅವೈದಿಕ, ತೌಳವರು ಮಾಡುವ ದೈವಗಳ (ಭೂತಗಳ ಅಥವಾ ಸತ್ಯಗಳ) ಆರಾಧನೆ ಎರಡು ಸಂಪೂರ್ಣ ಬೇರೆ ಬೇರೆ. ವೈದಿಕರು ಮಾಡುವ ದೇವರ ಆರಾಧನೆ ಆಗಮ ಶಾಸ್ತ್ರದ ಪ್ರಕಾರ ಆದರೆ, ತೌಳವರು ಮಾಡುವ ದೈವಗಳ ಆರಾಧನೆ ಯಾವುದೇ ಗ್ರಂಥಗಳ ಪ್ರಕಾರ ನಡೆಯುವಂತದ್ದಲ್ಲ. ಇಲ್ಲೊಂದು ಆಲಿಖಿತ ತಲೆತಲಾಂತರದಿಂದ ಬಂದಿರುವ ನಿಯಮವಿದೆ. ವೈದಿಕರು ತುಳುನಾಡಿಗೆ ಬರುವ ಮೊದಲೇ ಈ ಮಣ್ಣಿನಲ್ಲಿ ದೈವಗಳ ಆರಾಧನೆ ನಡೆಯುತ್ತಿತ್ತು. ನಮ್ಮ ಆರಾಧನಾ ಪದ್ಧತಿ ಬಹಳ ಸರಳ. “ಗುಡ್ಡದ ಪೂ, ತೋಡುದ ನೀರ್” ಇಷ್ಟರಿಂದಲೇ ಸಂತೃಪ್ತರಾಗುತ್ತಿದ್ದವು ನಮ್ಮ ದೈವಗಳು. ಇದರಲ್ಲಿ ಭಾಗವಹಿಸುವರು, ಗಡಿಕಾರರು, ಬಿಲ್ಲವರು, ಮಡಿವಾಳರು ಮತ್ತು ಕೆಲೆಸಿಗಳು. ದೈವಗಳನ್ನು ಶುದ್ಧೀಕರಿಸುವುದಕ್ಕೂ ಪುಣ್ಯಾರ್ಚನೆ ಇತ್ಯಾದಿಗಳ ಅಗತ್ಯ ಇಲ್ಲ. ಬಿಲ್ಲವರು ಮತ್ತು ಮಡಿವಾಳರೆ ಮಾಡುತ್ತಿದ್ದರು. ನಿಜಕ್ಕಾದರೆ ದೈವಗಳನ್ನು ಶುದ್ಧೀಕರಿಸುವ ಅಗತ್ಯವೇ ಇಲ್ಲ, ಅವುಗಳು ಶುದ್ಧವಾಗಿಯೆ ಇರುತ್ತದೆ. ಶುದ್ಧೀಕರಿಸಬೇಕಾದದ್ದು ನಮ್ಮನ್ನು ನಾವು.…
ಶಿಕ್ಷಣ, ಕ್ರೀಡೆ, ಸಂಸ್ಕೃತಿ ಸಂಗಮವಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ಬುಧವಾರ ಬೆಳಕಿನ ಹಬ್ಬವಾದ ‘ಆಳ್ವಾಸ್ ದೀಪಾವಳಿ-2025’ರ ಸೊಬಗು. ಅದು ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರ ಪರಿಕಲ್ಪನೆಯ ಬೌದ್ಧಿಕ, ಭೌತಿಕ ಹಾಗೂ ಬಾಂಧವ್ಯ ಬೆಳೆಸುವ ಬೆಳಕು. ಸರ್ವ ಧರ್ಮಗಳ ಸಮಭಾವ, ಭಾರತೀಯತೆಯ ಭ್ರಾತೃತ್ವ, ಸೌಹಾರ್ದತೆಯ ಸಮಗ್ರತೆ ಎಂಬಂತೆ ಸರ್ವ ಧರ್ಮೀಯರ ಹಾಗೂ ದೇಶದ ಐಕ್ಯತೆಯ ಹಬ್ಬಗಳನ್ನು ಆಚರಿಸಿಕೊಂಡು ಬಂದಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಬುಧವಾರ ಸಂಜೆ ಇಲ್ಲಿನ ಪುತ್ತಿಗೆ ವಿವೇಕಾನಂದ ನಗರದ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲುರಂಗ ಮಂದಿರದಲ್ಲಿ ‘ಆಳ್ವಾಸ್ ದೀಪಾವಳಿ-2025’ ಸಂಭ್ರಮಿಸಿತು. ನೇಸರ ಇಳಿಜಾರುವ ಮುಸ್ಸಂಜೆಯಲ್ಲಿ ಆಳ್ವಾಸ್ ಅಂಗಣದಲ್ಲಿ ಸೇರಿದ್ದ ವಿದ್ಯಾರ್ಥಿ ಸಾಗರವು ಮಿನುಗುವ ಭವಿಷ್ಯದ ತಾರೆಗಳಂತೆ ಕಣ್ಮನ ಸೆಳೆಯಿತು. 15 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಸೇರಿದಂತೆ ಪೋಷಕರು, ಸ್ಥಳೀಯರು ಸೇರಿ 25 ಸಾವಿರಕ್ಕೂ ಅಧಿಕ ಜನರ ಸಮ್ಮುಖದಲ್ಲಿ ದೀಪಾವಳಿಯು ತನು ಮನ ಬೆಳಗಿತು. ಕೊಂಬು, ಕಹಳೆ, 30 ಶ್ವೇತ ಛತ್ರಿ ಚಾಮರದ ಜೊತೆ,…
ಸುರತ್ಕಲ್ ಬಂಟರ ಸಂಘಕ್ಕೆ ಬೆಂಗಳೂರಿನ ಬಂಟರ ಸಂಘದ ಸಾಂಸ್ಕೃತಿಕ ನಾಟ್ಯ ಕಥಾ ರೂಪಕ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ
ಬಂಟರ ಸಂಘ ಬೆಂಗಳೂರು ಇದರ ಆಶ್ರಯದಲ್ಲಿ ದೀಪಾವಳಿ ಸಂಭ್ರಮಾಚರಣೆಯ ಪ್ರಯುಕ್ತ ನಡೆದ ಅಂತರ್ ಬಂಟರ ಸಂಘಗಳ ಸಾಂಸ್ಕೃತಿಕ ನಾಟ್ಯ ಕಥಾ ರೂಪಕ ಸ್ಪರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘ 1,50,000 ನಗದಿನೊಂದಿಗೆ ಶಾಶ್ವತ ಫಲಕದೊಂದಿಗೆ ಪ್ರಥಮ ಸ್ಥಾನವನ್ನು ಗಳಿಸಿದೆ. ಪ್ರಶಸ್ತಿಯನ್ನು ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸಿಎ ಅಶೋಕ್ ಶೆಟ್ಟಿ ಎಂ, ಸಾಂಸ್ಕೃತಿಕ ಸಮಿತಿಯ ಚೇರ್ ಪರ್ಸನ್ ರಮೇಶ್ ಶೆಟ್ಟಿ, ಸಂಘದ ಗೌರವ ಕಾರ್ಯದರ್ಶಿ ವಿಜಯ ಜೆ ಶೆಟ್ಟಿ ಹಾಲಾಡಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಸಂತೋಷ್ ಶೆಟ್ಟಿ ತಲೇಕಳ ಅವರು ಪ್ರಶಸ್ತಿಯನ್ನು ವಿತರಿಸಿದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಮಾಜಿ ಅಧ್ಯಕ್ಷ ಉಲ್ಲಾಸ್ ಆರ್ ಶೆಟ್ಟಿ ಪೆರ್ಮುದೆ, ಸಂಘದ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಲೀಲಾಧರ ಶೆಟ್ಟಿ, ಕೋಶಾಧಿಕಾರಿ ರತ್ನಾಕರ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯದರ್ಶಿ ದೇವೇಂದ್ರ ಶೆಟ್ಟಿ, ಮಹಿಳಾ ವೇದಿಕೆಯ ಸಾಂಸ್ಕೃತಿಕ ಕಾರ್ಯದರ್ಶಿ ಆಶಾಕಿರಣ್ ಪ್ರಸಾದ್ ರೈ, ಮಹಿಳಾ ವೇದಿಕೆಯ ಅಧ್ಯಕ್ಷೆ ಸರೋಜ ಟಿ ಶೆಟ್ಟಿ…
ಕಾರ್ಕಳ ಬಂಟರ ಸಂಘಕ್ಕೆ ಬೆಂಗಳೂರಿನ ಬಂಟರ ಸಂಘದ ಸಾಂಸ್ಕೃತಿಕ ನಾಟ್ಯ ಕಥಾ ರೂಪಕ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ
ಬಂಟರ ಸಂಘ ಬೆಂಗಳೂರು ಇದರ ಆಶ್ರಯದಲ್ಲಿ ದೀಪಾವಳಿ ಸಂಭ್ರಮಾಚರಣೆಯ ಪ್ರಯುಕ್ತ ನಡೆದ ಅಂತರ್ ಬಂಟರ ಸಂಘಗಳ ಸಾಂಸ್ಕೃತಿಕ ನಾಟ್ಯ ಕಥಾ ರೂಪಕ ಸ್ಪರ್ಧೆಯಲ್ಲಿ ಕಾರ್ಕಳ ಬಂಟರ ಸಂಘ 75,000 ನಗದಿನೊಂದಿಗೆ ಶಾಶ್ವತ ಫಲಕದೊಂದಿಗೆ ದ್ವಿತೀಯ ಸ್ಥಾನವನ್ನು ಗಳಿಸಿದೆ. ಪ್ರಶಸ್ತಿಯನ್ನು ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಸಿಎ ಅಶೋಕ್ ಶೆಟ್ಟಿ ಎಂ, ಸಾಂಸ್ಕೃತಿಕ ಸಮಿತಿಯ ಚೇರ್ ಪರ್ಸನ್ ರಮೇಶ್ ಶೆಟ್ಟಿ, ಸಂಘದ ಗೌರವ ಕಾರ್ಯದರ್ಶಿ ವಿಜಯ ಜೆ ಶೆಟ್ಟಿ ಹಾಲಾಡಿ, ಉಪಾಧ್ಯಕ್ಷೆ ಕಾಂತಿ ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಸಂಚಾಲಕ ಸಂತೋಷ್ ಶೆಟ್ಟಿ ತಲೇಕಳ ಅವರು ಪ್ರಶಸ್ತಿಯನ್ನು ವಿತರಿಸಿದರು. ಕಾರ್ಕಳ ಬಂಟರ ಸಂಘದ ಅಧ್ಯಕ್ಷ ವಿಜಯ್ ಶೆಟ್ಟಿ, ಮಹಿಳಾ ಅಧ್ಯಕ್ಷೆ ಪೂರ್ಣಿಮಾ ಹೆಗ್ಡೆ, ವಂದನಾ ರೈ ಕಾರ್ಕಳ, ಸುಹಾಸ್ ಶೆಟ್ಟಿ ಮತ್ತಿತರರು ಪ್ರಶಸ್ತಿ ಸ್ವೀಕರಿಸಿದರು.
ಬಹುನಿರೀಕ್ಷಿತ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ “45” ಸಿನಿಮಾದ ಆಫ್ರೋ ಟಪಂಗ್ ಹಾಡಿನ ಪ್ರಮೋಷನ್ ಗಾಗಿ ಆಗಮಿಸಿದ್ದ ಚಿತ್ರತಂಡ ಫೋರಂ ಫಿಜಾ ಮಾಲ್ ನಲ್ಲಿ ನೆರೆದಿದ್ದ ಸಿನಿಮಾ ಪ್ರೇಮಿಗಳು ಮತ್ತು ಅಭಿಮಾನಿಗಳನ್ನು ಮೋಡಿ ಮಾಡಿತು. ನಿರ್ದೇಶಕ ಅರ್ಜುನ್ ಜನ್ಯ, ರಾಜ್ ಬಿ ಶೆಟ್ಟಿ, ಗಾಯಕರಾದ ನಿಶಾನ್ ರೈ, ಎಂ.ಸಿ.ಬಿಜು ಅವರಿಗೆ ಅನುಶ್ರೀ ಸಾಥ್ ನೀಡಿದ್ದರು. ಕಾರ್ಯಕ್ರಮಕ್ಕೂ ಮುನ್ನ ಹಾಡಿನ ನೃತ್ಯ ಪ್ರದರ್ಶನ ನೆರೆದಿದ್ದವರ ಮನಸೂರೆಗೊಂಡಿತು. ಹಾಡಿಗೆ ರಾಜ್ ಬಿ ಶೆಟ್ಟಿ ಟಪಾಂಗುಚ್ಚಿ ಕುಣಿಯುವ ಮೂಲಕ ಆಕರ್ಷಣೆ ಹೆಚ್ಚಿಸಿದ್ದು ವಿಶೇಷವಾಗಿತ್ತು. ಬಳಿಕ ಮಾಧ್ಯಮಗಳ ಜೊತೆಗೆ ಮಾತಾಡಿದ ಅರ್ಜುನ್ ಜನ್ಯ ಅವರು, ಮಂಗಳೂರಿನ ಜನ ಬಹಳ ಒಳ್ಳೆಯವರು. ಇಲ್ಲಿಗೆ ಪ್ರತೀ ಬಾರಿ ಬಂದಾಗಲೂ ಒಳ್ಳೆಯ ಫೀಲ್ ಉಂಟಾಗುತ್ತೆ. ಹಾಗಾಗಿ ಸಿನಿಮಾದಲ್ಲಿ ನಿಶಾನ್ ರೈ ಬರೆದಿರುವ ತುಳು ಸಾಹಿತ್ಯವಿರುವ ಹಾಡನ್ನು ಅಳವಡಿಸಲಾಗಿದೆ. ಈಗಾಗಲೇ ಹಾಡು 25 ಮಿಲಿಯನ್ ವೀಕ್ಷಣೆ ಪಡೆಯುವ ಸನಿಹದಲ್ಲಿಯುವುದು ಖುಷಿ ಎನಿಸುತ್ತಿದೆ. ಚಿತ್ರವು ಡಿಸೆಂಬರ್ 25ರಂದು ಬಿಡುಗಡಯಾಗುತ್ತಿದೆ…
ಗಣಿತನಗರ : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ವಿದ್ಯೋದಯ ಪದವಿ ಪೂರ್ವ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ಜರುಗಿದ ಉಡುಪಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಆರ್ಟಿಸ್ಟಿಕ್ ಸೋಲೊ ವಿಭಾಗದಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿಯ ಪೂರ್ವಜ್ ಗೌಡ ವಿ ಹಾಗೂ ದೃತಿ.ಡಿ.ಎಲ್, ರಿದಮಿಕ್ ವಿಭಾಗದಲ್ಲಿ ದ್ವಿತೀಯ ಪಿಯುಸಿಯ ವಿಶ್ರುತ್ರಾಜ್ ಟಿ.ಬಿ ಹಾಗೂ ಪೂರ್ವಜ್ ಗೌಡ ವಿ ಅತ್ಯುತ್ತಮ ಪ್ರದರ್ಶನ ನೀಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸಾಧಕ ವಿದ್ಯಾರ್ಥಿಯನ್ನು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಕ್ಷಕ್ಷರಾದ ಡಾ, ಸುಧಾಕರ ಶೆಟ್ಟಿಯವರು ಅಭಿನಂದಿಸಿದ್ದಾರೆ.
ರೋಟರಿ ಕ್ಲಬ್ ಕಾರ್ಕಳ ಮತ್ತು ರೋಟರಿ ಕ್ಲಬ್ ಮಣಿಪಾಲ್ ಟೌನ್ ಹಾಗೂ ಐ.ಎಪ್.ಎಂ.ಆರ್. ಉಡುಪಿ ಇವರ ಸಹಯೋಗದೊಂದಿಗೆ ಅಂಗ ಮತ್ತು ಚರ್ಮದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಬುಲೆಟ್ ಬೈಕ್ ರ್ಯಾಲಿ ನಡೆಯಿತು. ಕಾರ್ಕಳ ಬಂಡಿಮಠ ಬಸ್ ನಿಲ್ದಾಣದಿಂದ ಪ್ರಾರಂಭವಾದ ಜಾಥಾಕ್ಕೆ Rtn. ಸತೀಶ್ ನಾಯಕ್ ಶ್ರೀನಿಧಿ ಲ್ಯಾಬೋರೇಟರಿ ಕಾರ್ಕಳ ಇವರು ಚಾಲನೆ ನೀಡಿದರು. ಸುಮಾರು 30 ಬುಲೆಟ್ ಗಳು ಅಂಗ ದಾನ ಬಗೆಗಿನ ಜಾಗೃತಿ ಫಲಕಗಳೊಂದಿಗೆ ಕಾರ್ಕಳ ಪೇಟೆಯ ಮೂಲಕ ಸಾಗಿ ಅನಂತಶಯನ ರೋಟರಿ ಬಾಲಭವನದಲ್ಲಿ ಸಮಾಪ್ತಿಗೊಂಡಿತು. ಬಳಿಕ ನಡೆದ 2 ಕ್ಲಬ್ ಗಳ ಜಂಟಿ ಸಭೆ ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿ ಮಣಿಪಾಲ ಕೆಎಂಸಿಯ ಪ್ಲಾಸ್ಟಿಕ್ ಸರ್ಜರಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಹರ್ಷವರ್ಧನ್ ಕೆ ಶೆಟ್ಟಿ ಚರ್ಮದ ಮತ್ತು ಚರ್ಮದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಇನ್ನೋರ್ವ ಮುಖ್ಯ ಅತಿಥಿ ಅನಾಟಮಿ ವಿಭಾಗದ ಡಾ.…
ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು । ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ ।। ಬೆಲ್ಲ ಸಕ್ಕರೆಯಾಗು ದೀನದುರ್ಬಲರಿಂಗೆ । ಎಲ್ಲರೊಳಗೊಂದಾಗು – ಮಂಕುತಿಮ್ಮ ।। ಡಿ.ವಿ.ಜಿ.ಯವರ ಈ ಕಗ್ಗದ ಸಾಲುಗಳು ನಮ್ಮ ಬದುಕಿನ ಸಾರ್ಥಕತೆಯನ್ನು ಬಲು ಅರ್ಥಪೂರ್ಣವಾಗಿ ತಿಳಿಸಿದೆಯಾದರೂ ಅದನ್ನು ಜೀವನದುದ್ದಕ್ಕೂ ಪಾಲಿಸಿ ಬದುಕು ಕಟ್ಟಿಕೊಂಡಿರುವ ಬಲು ವಿರಳ ಸಜ್ಜನರಲ್ಲಿ ಒಬ್ಬರೆನಿಸಿಕೊಂಡಿರುವ ಚೆಲ್ಲಡ್ಕ ಕುಸುಮೋದರ ದೇರಣ್ಣ ಶೆಟ್ಟಿ (ಕೆ.ಡಿ ಶೆಟ್ಟಿ)ಯವರ ಪರಿಕಲ್ಪನೆಯ ಮಾತೃ ವಾತ್ಸಲ್ಯದ ಪ್ರತೀಕದ ಸೇವಾ ಸಂಸ್ಥೆ ಭವಾನಿ ಫೌಂಡೇಶನ್ ಗೆ ಇದೀಗ ಹತ್ತರ ಹರೆಯ. ಅಂಬೆಗಾಲಿಡುತ್ತಾ ಇದೀಗ ತನ್ನ ಹೆಜ್ಜೆಗಳನ್ನು ತನ್ನ ಸೇವಾ ಕೈಂಕರ್ಯದ ಮುಖೇನ ರಾಜ್ಯ ಮಾತ್ರವಲ್ಲದೇ ರಾಷ್ಟ್ರವ್ಯಾಪಿಯಾಗಿ ಗುರುತಿಸಿಕೊಂಡಿರುವುದರ ಹಿಂದೆ ಭವಾನಿ ಫೌಂಡೇಶನ್ ಸ್ಥಾಪನೆಯ ಒಂದು ರೋಚಕ ಕಥೆಯಿದೆ. ಹೌದು ಹತ್ತು ವರುಷದ ಹಿಂದೆ ಭವಾನಿ ಶಿಪ್ಪಿಂಗ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ವೃತ್ತಿ ಮಾಡುತ್ತಿದ್ದ ಸಿಬ್ಬಂದಿಯಾದ ಸಂದೀಪ್ ಉದನೆ ಎಂಬುವರು ಭೀಕರ ವಾಹನ ಅಪಘಾತಕ್ಕೀಡಾಗಿ ಅಂಗಾಂಗ ಕಳೆದುಕೊಂಡು ನಿಷ್ಕ್ರಿಯವಾಗಿ ಕೋಮಾವಸ್ಥೆಗೆ ತಲುಪಿದಾಗ…
ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಯುವಜನತೆ ಪ್ರತಿಭಾವಂತರು. ಪ್ರತಿಭಾನ್ವಿತರಿಗೆ ಉದ್ಯೋಗ ಒದಗಿಸುವ ಜೊತೆಗೆ ಕೇಂದ್ರ, ರಾಜ್ಯ ಸರಕಾರವು ಕೌಶಲ ಅಭಿವೃದ್ಧಿಗೆ ಹೆಚ್ಚು ಆಸಕ್ತಿ ಹೊಂದಿದ್ದು, ಇವೆಲ್ಲವನ್ನೂ ಒಂದೇ ಸೂರಿನಡಿ ಅಶೋಕ್ ಕುಮಾರ್ ಶೆಟ್ಟಿ ನೇತೃತ್ವದ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಇದರ ಯೋಜನೆಯು ಸಮಾಜಕ್ಕೆ ಮಾರ್ಗದರ್ಶಕವಾಗಿದೆ ಎಂದು ಮಾಜಿ ಸಚಿವ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು. ಅವರು ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಂ ಆರ್ ಜಿ ಗ್ರೂಪ್ ಪ್ರಾಯೋಜಕತ್ವದಲ್ಲಿ ಮಣಿಪುರ ಕುಂತಳನಗರದ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಷನ್ ಸೆಂಟರ್ ಹಾಗೂ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ನಾಲ್ಕನೇ ಬಾರಿ ನಡೆದ ಉಚಿತ ಬೃಹತ್ ಉದ್ಯೋಗ ಮೇಳದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂಎ ಗಫೂರ್ ಮಾತನಾಡಿ, ನಿರುದ್ಯೋಗವನ್ನು ಹೋಗಲಾಡಿಸುವ ಕೌಶಲ ಅಭಿವೃದ್ಧಿ ತರಬೇತಿಯೊಂದಿಗೆ ಉದ್ಯೋಗ ಮೇಳ ಆಯೋಜನೆ ಮೂಲಕ ಉದ್ಯೋಗವಕಾಶವನ್ನು ಯುವಜನತೆಗೆ…
ಪುತ್ತೂರು ತಾಲೂಕು ಬಂಟರ ಸಂಘ : ಬಂಟೆರೆ ಸೇರಿಗೆ -2025, ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಮಂತ್ರಣ ಪತ್ರ ಬಿಡುಗಡೆ
ಬಂಟರ ಸಂಘ ಪುತ್ತೂರು ತಾಲೂಕು ಇದರ ಸಾರಥ್ಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ ಇದರ ಮಾರ್ಗದರ್ಶನದಲ್ಲಿ ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ವಿಭಾಗ ಇದರ ಸಹಕಾರದಲ್ಲಿ ನವೆಂಬರ್ 22 ರಂದು ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿರುವ ಬಂಟೆರೆ ಸೇರಿಗೆ -2025, ಸಾಧಕರಿಗೆ ಸನ್ಮಾನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಅಮಂತ್ರಣ ಪತ್ರ ಬಿಡುಗಡೆ ನವೆಂಬರ್ 10 ರಂದು ಜರಗಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರ ನೇತೃತೃದಲ್ಲಿ ಪ್ರಾರ್ಥನೆ ನಡೆಯಿತು. ದೇವಾಲಯದ ಪ್ರಧಾನ ಅರ್ಚಕ ವಸಂತ ಕೆದಿಲಾಯರವರು ಕಾರ್ಯಕ್ರಮ ಸಾಂಗವಾಗಿ ನಡೆಯಲಿ, ಕಾರ್ಯಕ್ರಮದ ಯಶಸ್ಸಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹ ಸದಾ ಇದೆ ಎಂದು ಪ್ರಾರ್ಥನೆಗೈದರು. ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಬಂಟರ ಯಾನೆ ನಾಡವರ ಮಾತೃ…














