Author: admin

ಕನ್ನಡ ಸಂಘ ಬಹರೈನ್ ನ ಹಿರಿಯ ಸದಸ್ಯ ದಿವಂಗತ ದಿನಕರ್ ಶೆಟ್ಟಿ ಯು.ಎಂ ಅವರ ನಿಧನಕ್ಕೆ ಶ್ರದ್ಧಾಂಜಲಿ ಸಭೆ ನಡೆಯಿತು. ಅವರು ಕಳೆದ ನವೆಂಬರ್ 30 ರಂದು ಅಲ್ಪಕಾಲದ ಅಸೌಖ್ಯದಿಂದ ವಿಧಿವಶರಾದರು. ಈ ಸಂದರ್ಭ ಕನ್ನಡ ಸಂಘ ಮತ್ತು ಬಂಟರ ಸಂಘ ಅವರ ಸಹಯೋಗದಲ್ಲಿ ಕನ್ನಡ ಭವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಳೆದ ಶನಿವಾರ ಡಿಸೆಂಬರ್ 6, 2025 ರಂದು ಕನ್ನಡ ಭವನ ಕ್ರೀಡಾ ಕೇಂದ್ರದಲ್ಲಿ ದಿವಂಗತ ದಿನಕರ್ ಶೆಟ್ಟಿಗೆ ಗೌರವ ಸಲ್ಲಿಸಲಾಯಿತು. ಸಂಘದ ಸದಸ್ಯರು, ಆತ್ಮೀಯರು ಮತ್ತು ಸಮುದಾಯದ ಪ್ರಮುಖರು ಹಾಜರಾಗಿ ತಮ್ಮ ಶೋಕವನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ, ಬಂಟ್ಸ್ ಬಹರೈನ್ ಅಧ್ಯಕ್ಷ ಡಾ. ಮಿಥುನ್ ಭಂಡಾರಿ, ಕನ್ನಡ ಸಂಘದ ಮಾಜಿ ಅಧ್ಯಕ್ಷರುಗಳಾದ ಅಮರನಾಥ್ ರೈ, ಪ್ರದೀಪ್ ಕುಮಾರ್ ಶೆಟ್ಟಿ, ರಾಜೇಶ್ ಶೆಟ್ಟಿ, ಸದಸ್ಯರಾದ ನಾಗೇಶ್ ಶೆಟ್ಟಿ, ಕಮಲಾಕ್ಷ ಅಮೀನ್, ಪ್ರದೀಪ್ ಆರ್. ಶೆಟ್ಟಿ ಮತ್ತು ಉಪಾಧ್ಯಕ್ಷ ನಿತಿನ್ ಶೆಟ್ಟಿ ನುಡಿನಮನ ಸಲ್ಲಿಸಿದರು. ಹಿರಿಯ ಹಾಗೂ…

Read More

ಹೊಸ ಬಾಟಲಿಯಲ್ಲಿ ಹಳೆಯ ಮದಿರೆ (Old wine in a new bottle) ಅಂದರೆ ಹಳೆಯ, ಸಾಂಪ್ರದಾಯಿಕ ಅಥವಾ ಬದಲಾಗದ ಏನನ್ನಾದರೂ ತಾಜ, ಹೊಸ ರೀತಿಯಲ್ಲಿ ಪ್ರಸ್ತುತಪಡಿಸುವುದು. ಉದಾಹರಣೆಗೆ, ಪ್ರಸಿದ್ಧ ಐವತ್ತು ವರ್ಷಕ್ಕೂ ಮಿಕ್ಕಿದ ಸ್ನಾನದ ಸಾಬೂನಿನ ಹೊದಿಕೆ (wrapper) ಆಗಾಗ್ಗೆ ಮಾರ್ಕೆಟಿಂಗ್ ಅಥವಾ ಆಕರ್ಷಣೆಗಾಗಿ ಬದಲಿಸುತ್ತಾ ಬಂದಿದ್ದಾರೆ. ಆದರೆ ಮೂಲ ವಸ್ತು ಸಾಬೂನು ಮೊದಲಿನದ್ದೇ ಆಗಿರುತ್ತದೆ. ಈ ಮಾತಿಗೆ ವ್ಯತಿರಿಕ್ತವಾಗಿ, ಚಿತ್ರದಲ್ಲಿ ತೋರಿಸಿರುವುದು, ಹೊಸ ಮದಿರೆ, ಹೊಸ ಬಾಟಲಿಯಲ್ಲಿ. ಅದರೊಂದಿಗೆ ಕಸ್ತಾನ್ಯೆ (Castagne ಅಂದರೆ chestnut). ಹೊಸ ಮದಿರೆಯನ್ನು ನೋವೆಲ್ಲೋ (Novello, New) ಅನ್ನುತ್ತಾರೆ ಇಟಾಲಿಯನ್ ನಲ್ಲಿ. ಶರದ್ ಋತುವಿನ (autumn) ಮಧ್ಯಭಾಗದಲ್ಲಿ ಹೊಸ ಮದಿರೆಗಳು ಮಾರುಕಟ್ಟೆಗೆ ಬರುತ್ತವೆ. ಕೆಲವೇ ಕೆಲವು ಬಾಟಲಿಗಳಷ್ಟೇ, ಯಾಕೆಂದರೆ ಮದಿರೆ ವಿಶೇಷವಾಗಿ ಕೆಂಪು ಮದಿರೆ ಹಳೆಯದಾದಂತೆ ಅದರ ರುಚಿ ಚೆನ್ನಾಗಿರುತ್ತದೆ, ಬೆಲೆಯೂ ಏರುತ್ತದೆ. ಇದೇ ಕಾಲಕ್ಕೆ ಅಂದರೆ ಚಳಿಗಾಲಕ್ಕೆ ಮುನ್ನ ಈ ಕಸ್ತಾನ್ಯೆ ಇಲ್ಲಿನ ಹಾಡಿಗಳಲ್ಲಿ ಹೇರಳವಾಗಿ ಸಿಗುತ್ತವೆ. ಇದನ್ನು ನಾವು ಗೆಣಸು ಯಾ…

Read More

ಸವಣೂರು ಬೊಳ್ಳಿ ಬೊಲ್ಪು ತುಳುಕೂಟದ ಅಧ್ಯಕ್ಷ, ಹಿಂದೂ ಜಾಗರಣ ವೇದಿಕೆ ಪುತ್ತೂರು ನಗರದ ಮಾಜಿ ಗೌರವಾಧ್ಯಕ್ಷ, ಹಿರಿಯ ಧಾರ್ಮಿಕ ಮುಂದಾಳು ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು (72 ವ)ರವರು ಡಿಸೆಂಬರ್ 7 ರಂದು ನಿಧನರಾದರು. ಮೃತರು ಪತ್ನಿ ರಮಾ ಪ್ರಕಾಶ್ಚಂದ್ರ ರೈ, ಪುತ್ರ ಕೆಪಿಟಿಸಿಎಲ್ ನಲ್ಲಿ ಉನ್ನತ ಅಧಿಕಾರಿಯಾಗಿರುವ ಶಶಾಂಕ್ ರೈ, ಸೊಸೆ ಇಂಚರ ರೈ, ಸಹೋದರ ಕುಂಜಾಡಿ ಪ್ರಪುಲ್ಲಚಂದ್ರ ರೈ, ಸಹೋದರಿಯರಾದ ಸುಪ್ರಭಾ ರೈ, ಲತಾ ಶೆಟ್ಟಿ ಹಾಗೂ ಸುಧಾ ಶೆಟ್ಟಿ ಅವರನ್ನು ಅಗಲಿದ್ದಾರೆ.

Read More

ವಿದ್ಯಾರ್ಥಿಗಳಿಗೆ ಸ್ಪಷ್ಟವಾದ ಗುರಿ ಇರಬೇಕು. ಸ್ಪಷ್ಟತೆ ಇದ್ದಾಗ ಮಾತ್ರ ಗುರಿ ತಲುಪಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ ಅವರು ಹೇಳಿದರು. ಕುಂದಾಪುರದ ಯಡಾಡಿ ಮತ್ಯಾಡಿಯಲ್ಲಿರುವ ಸುಜ್ಞಾನ ಪದವಿಪೂರ್ವ ಕಾಲೇಜಿನ ‘ಕಂಪ್ಯೂಟರ್ ಲ್ಯಾಬ್’ ಉದ್ಘಾಟಿಸಿ ಮಾತನಾಡಿದ ಅವರು, ಅತ್ಯುತ್ತಮ ವಿದ್ಯಾರ್ಥಿಯಾಗಬೇಕು ಎಂಬ ಛಲ ಇಟ್ಟುಕೊಳ್ಳಿ. ನಿಮ್ಮ ತಂದೆ ತಾಯಿಗೆ ಒಳ್ಳೆಯ ಮಕ್ಕಳಾಗಿ. ಶಾಲೆಗೆ ಕೀರ್ತಿ ತರುವಂಥ ವಿದ್ಯಾರ್ಥಿಗಳಾಗಿ. ಹಾಗೆಯೇ ದೇಶದ ಉತ್ತಮ ಪ್ರಜೆಗಳಾಗಿ ಎಂದು ಕಿವಿಮಾತು ನುಡಿದರು. ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ| ರಮೇಶ್ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಈ ಕಂಪ್ಯೂಟರ್ ಲ್ಯಾಬ್ ನ ಸದುಪಯೋಗಪಡಿಸಿಕೊಂಡು ಉತ್ತಮವಾದ ಭವಿಷ್ಯ ಕಟ್ಟಿಕೊಳ್ಳಬೇಕು ಎಂದು ಆಶಿಸಿದರು. ವೇದಿಕೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ, ಟಿ.ಎ.ಪಿ.ಎಂ.ಎಸ್ ನ ಉಪಾಧ್ಯಕ್ಷ ಶರತ್ ಶೆಟ್ಟಿ, ಅಂಪಾರು ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಪ್ರದೀಪ್ ಶೆಟ್ಟಿ, ನಿರಮಯಾ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾ…

Read More

ನೋಡಲಿಕ್ಕೆ ನಟಿಸುವರು, ನೀನೇ ಎನ್ನ ಆತ್ಮೀಯ ಬಂಧು, ಆದರೆ ಗೊತ್ತಿಲ್ಲದಂತೆ ನಮ್ಮನ್ನೇ ತಿವಿದು ಕೊಂದು. ತಿಳಿಯಬೇಕಾಗಿದೆ ನಿಜಾರ್ಥದಲ್ಲಿ ನಮಗೆ ನಾವೇ ಬಂಧು!. ಪ್ರಸಿದ್ಧ ಕವಿ ಶ್ರೀಯುತ ನಿಸಾರ್ ಅಹಮದ್ ಅವರ ಒಂದು ಹಾಡಿನ ಸಾಲು ಹೀಗಿದೆ… “ಒಳಗೊಳಗೆ ಬೇರು ಕೊಯ್ದು, ಲೋಕದೆದುರು ನೀರು ಹೊಯ್ದು, ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ ಗೊತ್ತಿಲ್ಲದಂತೆ ನಟಿಸಿ ಚಕಾರವೆತ್ತದೆ ನಿಮ್ಮೊಡನೆ ಕಾಫಿ ಹೀರಿ, ಪೇಪರ್ ಓದಿ ಹರಟಿ ಬಾಳ ತಳ್ಳುವುದಿದೆ ಅದು ಬಹಳ ಕಷ್ಟದ ಕೆಲಸ…” ಎಂದು. ಇದು ಇಂದಿನ ಹೆಚ್ಚಿನ ಎಲ್ಲರ ಬದುಕಿನ ಸಮಸ್ಯೆ. ಇದು ಮನೆ, ಆಫೀಸು, ಸಹೋದ್ಯೋಗಿ, ಶಾಲೆ, ಕಾಲೇಜು ಎಂದು ಭೇದವೇ ಇಲ್ಲದೆ ನಡೆಯುತ್ತಿದೆ. ಪರಸ್ಪರ ತಿಳಿದು ಮಿತ್ರತ್ವದಲ್ಲಿ ಒಪ್ಪಿ ನಡೆದರೆ ಅದು ಅವರ ವೈಯಕ್ತಿಕ ವಿಚಾರ. ಆದರೆ ಒತ್ತಾಯದಿಂದ, ಬಾಸಿಸಮ್ ತಂತ್ರದಿಂದ, ಬ್ಲ್ಯಾಕ್ ಮೇಲೆ ಮಾಡಿ, ಬೇರೆ ದಾರಿಯೇ ತೋಚದಂತೆ ಮಾಡಿ ಎಲ್ಲವನ್ನೂ ದೋಚಿ ಗೋಳೊಯಿಸಿಕೊಳ್ಳುವ ಕೆಲವಾರು ಮಂದಿ ಇಡೀ ಸಮಾಜದ ಸ್ವಾಸ್ಥ್ಯವನ್ನೇ ಕೆಡಿಸಿ ಸಾಕಷ್ಟು ಹನಿಟ್ರಾಪ್…

Read More

ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ಜೈ ತುಳು ಮತ್ತು ಕನ್ನಡ ಭಾಷೆಯಲ್ಲಿ ಅತ್ಯಧಿಕ ಪ್ರದರ್ಶನ ಕಂಡಿದೆ. ಪ್ರಥಮ ದಿನವೇ 1020 ಪ್ರದರ್ಶನಗಳನ್ನು ಕಂಡು ದಾಖಲೆ ಬರೆದಿದ್ದು, ಅಲ್ಲದೇ 25 ದಿನಗಳನ್ನು ಪೂರೈಸಿದೆ. ಜೈ ಸಿನಿಮಾ ಡಿಸೆಂಬರ್ 14 ರಂದು ಮುಂಬಯಿಯಲ್ಲಿ ಪ್ರದರ್ಶನಗೊಳ್ಳಲಿದೆ. ಮುಂಬಯಿಯಲ್ಲಿ ಇತಿಹಾಸದಲ್ಲೇ ಅತೀ ದೊಡ್ಡ ತುಳು ಪ್ರೀಮಿಯರ್ ಒಂದೇ ದಿನ 9 ಟಾಕೀಸ್ ಗಳಲ್ಲಿ 25 ಕ್ಕೂ ಹೆಚ್ಚು ಶೋ ನಡೆಯಲಿದೆ. ಈಗಾಗಲೇ ಸಿನಿಮಾ ತೆರೆಕಂಡ ಎಲ್ಲಾ ಕಡೆ ಅದ್ಬುತ ಪ್ರದರ್ಶನ ಕಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಮಂಗಳೂರಿನಲ್ಲಿ ಸತತ ನಾಲ್ಕು ವಾರಗಳ ಪ್ರದರ್ಶನದಲ್ಲಿ ಉತ್ತಮ ಮೊತ್ತವನ್ನು ಕಲೆ ಹಾಕಿದೆ. ಸಿನಿಮಾದ ಡಬ್ಬಿಂಗ್ ರೈಟ್ಸ್, ಆಡಿಯೋ ರೈಟ್ಸ್ ಮತ್ತು ಪ್ರೀಮಿಯರ್ ಶೋ ಸೇರಿ ದೊಡ್ಡ ಮಟ್ಟದಲ್ಲಿ ಚಿತ್ರ ತಂಡಕ್ಕೆ ಹಣ ಸಂಗ್ರಹವಾಗಿದೆ. ಸಿನಿಮಾವನ್ನು ಜನರು ನೋಡಿ ಮೆಚ್ಚಿಕೊಂಡಿದ್ದಾರೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಮನೆಮಂದಿ ಎಲ್ಲಾ ಇಷ್ಟ ಪಡುವುದರ ಜೊತೆಗೆ ಶಾಲಾ ಮಕ್ಕಳು ಕೂಡಾ…

Read More

ರಾಮಾಯಣ ಮಹಾಭಾರತಗಳಲ್ಲಿ ಬರುವ ಎರಡು ರಾಕ್ಷಸಿ ಪಾತ್ರಗಳಿವು. ಇವೆರಡರ ನಡುವಿನ ಸಾಮ್ಯತೆ ಇಬ್ಬರೂ ಪುರುಷಾಕರ್ಷಣೆಗೆ ಒಳಗಾದವರು. ಆದರೆ ಇಬ್ಬರಿಗೆ ಸಿಕ್ಕ ಫಲ ಬೇರೆ ಬೇರೆ. ಅದಕ್ಕೆ ಕಾರಣವೂ ಇಲ್ಲದ್ದಿಲ್ಲ. ಒಬ್ಬಾಕೆಯದು ಕಾಮವಾದರೆ ಇನ್ನೊಬ್ಬಳದು ನಿಜವಾದ ಪ್ರೇಮ. ಶೂರ್ಪನಖಿ ಮೊದಲು ರಾಮನನ್ನ ಬಯಸಿ ಆತ ತನ್ನ ಪತಿಯಾಗಬೇಕು ಅಂತ ಬಯಸುತ್ತಾಳೆ. ಬರಿಯ ಬಯಕೆ ಪ್ರೇಮವಾದೀತೇ? ಆದರೆ ಆಕೆ ರಾಮನ ಪತ್ನಿಯಾಗುವಲ್ಲಿ ಸೀತೆ ತನ್ನ ಪಾಲಿನ ಮುಳ್ಳಾದಾಗ ಅವಳನ್ನ ತನ್ನ ಮಾರ್ಗದಿಂದ ಸರಿಸಲು ಯೋಚಿಸುತ್ತಾಳೆ. ಅಲ್ಲಿಗೆ ಆಕೆಯ ಪ್ರೇಮ ಇನ್ನೊಂದು ಆಯಾಮ ಪಡೆದುಕೊಂಡಂತಾಗುತ್ತದೆ. ಪ್ರೇಮವೆಂದರೆ ಯಾಚಿಸಬೇಕು. ಯಾಚನೆಯೇ ಪ್ರಮುಖವಾಗಬೇಕಿತ್ತು. ಆದರೆ ತನ್ನ ಪಾಲಿನ ಮುಳ್ಳು ಅಂತೆಲ್ಲಾ ಯೋಚಿಸುವಲ್ಲಿ ಆಕೆಗೆ ರಾಮನನ್ನು ಪಡೆಯಲೇಬೇಕು ಎನ್ನುವ ಹಠವೇ ಪ್ರಾಮುಖ್ಯವಾಗಿ ಬಿಟ್ಟಿತು. ರಾಮನೋ ಇದನ್ನರಿತು ನನ್ನಂತೆ ಇರುವ ಲಕ್ಷ್ಮಣನನ್ನ ಕೇಳು ಅಂದಾಗ ಆಕೆ ಮರು ಮಾತಿಲ್ಲದೆ ಲಕ್ಷ್ಮಣನ ಬಳಿ ಸಾಗುತ್ತಾಳೆ. ಅಂದರೆ ರಾಮನೇ ಬೇಕಿಲ್ಲ. ಅವನಂತಿರುವ ಗಂಡು ಯಾರಾದರೂ ಆದೀತು. ಇದರ ಅರ್ಥ ಆಕೆಯದು ಪ್ರೇಮವಲ್ಲ ಕಾಮ. ಅದೂ…

Read More

ಬಂಟ ಸಮುದಾಯದ ಸಹೋದರರು ಎಲ್ಲಾ ಕ್ಷೇತ್ರಗಳಲ್ಲಿ ಮಿಂಚುತ್ತಿದ್ದಾರೆ ಎನ್ನುವ ಮಾತಿಗೆ ಸಾಕ್ಷಿ ಆಗಬಲ್ಲ ಸಮರ್ಥ ಸಾಧಕ ಶ್ರೀ ಹರೀಶ್ಚಂದ್ರ ಶೆಟ್ಟಿ ಅವರ ಜೀವನ ಪಯಣ ಇಂದಿನ ನವ ಯುವ ಜನಾಂಗಕ್ಕೆ ಮಾದರಿ ಆಗಬಲ್ಲುದು. ಅಗ್ನಿ ಶಾಮಕ ದಳದಲ್ಲಿ ಸಾಮಾನ್ಯ ಉದ್ಯೋಗಿಯಾಗಿ ಸೇರಿಕೊಂಡ ಹರೀಶ್ಚಂದ್ರ ಶೆಟ್ಟಿ ಅವರು ಇತರರಿಗಿಂತ ಭಿನ್ನ ರೀತಿಯಲ್ಲಿ ಗುರುತಿಸಿಕೊಂಡು ಅಗ್ನಿ ಶಾಮಕ ದಳದಂತಹ ತುರ್ತು ಸೇವಾ ವಿಭಾಗದ ಘನತೆಯನ್ನು ಹೆಚ್ಚಿಸಿದ್ದಾರೆ ಎಂದರೆ ಅತಿಶಯದ ಮಾತಲ್ಲ. ಈ ವಿಭಾಗದಲ್ಲಿ ತನ್ನ ಸೇವಾ ತತ್ಪರತೆಯಿಂದ ಮೇಲಾಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿ ಹಂತ ಹಂತವಾಗಿ ಪದೋನ್ನತಿ ಹೊಂದುತ್ತಾ, ಗೌರವದ ಹುದ್ದೆಯನ್ನು ಹೊಂದಿದ ಸಾಧಕ ಹರಿಶ್ಚಂದ್ರ ಶೆಟ್ಟಿಯವರು ಬಂಟ ಸಮಾಜಕ್ಕೆ ನಿಜಾರ್ಥದ ಘನತೆ ತಂದ ಸಮಾಜ ಬಾಂಧವ. 1993 ರಿಂದ ಇವರ ಸೇವಾ ಅವಧಿಯಲ್ಲಿ ಅನೇಕ ಜವಾಬ್ದಾರಿ ಸ್ಥಾನವನ್ನು ನಿರ್ವಹಿಸುತ್ತಲೇ ಉನ್ನತ ಹಾಗೂ ಉಚ್ಛ ಸ್ಥಾನವನ್ನು ಅಲಂಕರಿಸಿದ ಕೀರ್ತಿ ಶೆಟ್ಟರದ್ದು. ಡೆಪ್ಯೂಟಿ ಚೀಫ್ ಆಫೀಸರ್ ಸ್ಥಾನವನ್ನು ಅಲಂಕರಿಸಿದ ಅಪರೂಪದ ಏಕಮೇವ ಬಂಟ ಬಾಂಧವ. ಅಗ್ನಿ ಶಾಮಕ…

Read More

ಒಳನಾಡು ಹಾಗು ಹೊರನಾಡಿನಲ್ಲಿ ತಮ್ಮ ಬರವಣಿಗೆಯ ಮೂಲಕ ಛಾಪು ಮೂಡಿಸಿದ ಖ್ಯಾತ ಅಂಕಣಕಾರರು, ಕಾದಂಬರಿಗಾರ್ತಿ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಅವರ ಯಶಸ್ವಿ ಪಯಣ ಪ್ರವಾಸ ಕಥನ (284 ಪುಟಗಳ) ಮಾಮರ ಪ್ರಕಾಶನದಿಂದ ಪ್ರಕಾಶಿತ ಕೃತಿಯನ್ನು ನವೆಂಬರ್ 29 ರಂದು ಮುಂಬಯಿಯ ಮೈಸೂರು ಅಸೋಸಿಯೇಷನ್ ನ ಸಭಾಗೃಹದಲ್ಲಿ ಸಂಜೆ 5.30ಕ್ಕೆ ಜರುಗಿದ ಕೃತಿಗಳ ಸಮೀಕ್ಷೆಯ ಸಭಾ ಕಾರ್ಯಕ್ರಮದಲ್ಲಿ ‘ಯಶಸ್ವಿ ಪಯಣ’ ಪ್ರವಾಸ ಕಥನವನ್ನು ಹಿರಿಯ ಸಾಹಿತಿ ಶ್ಯಾಮಲ ಮಾಧವ ಮತ್ತು ಸೃಜನಾ ಬಳಗದ ಸಂಚಾಲಕಿ ಪದ್ಮಜಾ ಮಣ್ಣೂರ ಹಾಗೂ ಬಳಗದ ಪದಾಧಿಕಾರಿಗಳಿಗೆ ಲತಾ ಸಂತೋಷ್ ಶೆಟ್ಟಿ ಮುದ್ದುಮನೆ ಅವರು ಸೃಜನಾ ಮುಂಬಯಿ ಕನ್ನಡ ಲೇಖಕಿಯರ ಬಳಗಕ್ಕೆ ಹಸ್ತಾಂತರಿಸಿದರು. ಬೇರೆ ಬೇರೆ ಪ್ರವಾಸಿ ತಾಣಗಳಿಗೆ ಭೇಟಿ ಕೊಟ್ಟು ಸಂತೋಷಗೊಂಡ ದೃಶ್ಯ ವಿಶೇಷತೆಗಳನ್ನು, ಸ್ಥಳ ಪರಿಚಯವನ್ನು, ಅಲ್ಲಿ ಆಗಬೇಕಾದ ಬದಲಾವಣೆ, ಕಂಡು ಬಂದ ಲೋಪದೋಷಗಳನ್ನು ಬರೆದಿದ್ದು, ಈ ಹೊತ್ತಿಗೆಯ ಶೀರ್ಷಿಕೆಯೇ ಹೇಳುವಂತೆ ಯಶಸ್ವಿ ಪಯಣದ ವಿವಿಧ ಮಗ್ಗುಲುಗಳನ್ನು ಈ ಕೃತಿಯೊಳಗೆ ‌ಮೂಡಿಸಿ ಸಾಹಿತ್ಯ ಕ್ಷೇತ್ರದ…

Read More

ಕರ್ನಾಟಕ ಸರಕಾರದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಂಗವಾಗಿ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಕೇಂದ್ರ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ವಿಭಾಗ, ಉಡುಪಿ. ತಾಲೂಕು ಆರೋಗ್ಯಾಧಿಕಾರಿಗಳ ಕಛೇರಿ, ಸರಕಾರಿ ಸಾರ್ವಜನಿಕ ಆಸ್ಪತ್ರೆ, ರೋಟರಿ ಕ್ಲಬ್, ಇಂಡಿಯನ್ ರೆಡ್ ಕ್ರಾಸ್ ಸೊಸೖಟಿ ಕಾರ್ಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಭುವನೇಂದ್ರ ಕಾಲೇಜು, ಕಾರ್ಕಳದ ಐಕ್ಯೂಎಸಿ ಹಾಗೂ ಕಾಲೇಜಿನ ಎನ್.ಸಿ.ಸಿ, ಎನ್.ಎಸ್.ಎಸ್ ರೆಡ್ ಕ್ರಾಸ್, ರೋವರ್ಸ್ ರೇಂಜರ್ಸ್ ನ ಸಹಯೋಗದೊಂದಿಗೆ ವಿಶ್ವ ಏಡ್ಸ್ ದಿನಾಚರಣೆ -2025 ಇದರ ಮಾಹಿತಿ ಕಾರ್ಯಕ್ರಮವು ನೆರವೇರಿತು. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕಾರ್ಕಳ ಶಾಖೆ ಇದರ ಅಧ್ಯಕ್ಷರಾದ ಕೆ.ಆರ್ ಜೋಶಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಏಡ್ಸ್ ಹರಡುವಿಕೆಯ ಕುರಿತಂತೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಕಾರ್ಕಳ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ಸಂದೀಪ್ ಕುಡ್ವ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ, ಏಡ್ಸ್ ಕಾಯಿಲೆಯು ಆರಂಭದಲ್ಲಿ ಮಂಗನ ಹಿನ್ನೆಲೆಯಲ್ಲಿ ಮನುಷ್ಯನಿಗೆ ಈ ವೖರಸ್ ಬಂದಿರುವಂಥದ್ದು. ತಂತ್ರಜ್ಞಾನ ಎಷ್ಟೇ ಮುಂದುವರಿದರೂ…

Read More