Author: admin

ಬ್ರಹ್ಮಾವರ: ಇಲ್ಲಿನ ಜಿ ಎಮ್ ಸಮೂಹ ವಿದ್ಯಾಸಂಸ್ಥೆಯಲ್ಲಿ ೭೯ನೇ ಸ್ವಾತಂತ್ರ್ಯ ದಿನವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಭಾರತೀಯ ಸೇನೆಯ ನಿವೃತ್ತ ಹವಾಲ್ದಾರ್ ವೆಂಕಟೇಶ ಪ್ರಭು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ವಿದ್ಯಾರ್ಥಿಗಳ ಪಥಸಂಚಲನದ ಗೌರವ ವಂದನೆಯನ್ನು ಸ್ವಿಕರಿಸಿ ಮಾತನಾಡಿ ಸ್ವಾತಂತ್ರ÷್ಯ ದಿನಾಚರಣೆ ಕೇವಲ ಸಂಭ್ರಮಕ್ಕೆ ಸೀಮಿತವಾಗಿರಬಾರದು. ದೇಶಕ್ಕಾಗಿ ಹೋರಾಡಿದ ಮಾಹಾನ್ ನಾಯಕರ, ಸೈನಿಕರ ತ್ಯಾಗವನ್ನು ಸ್ಮರಿಸಬೇಕು. ಸಮವಸ್ತ್ರವನ್ನು ಧರಿಸಿಯೇ ದೇಶ ಸೇವೆ ಮಾಡಬೇಕಿಲ್ಲ, ಪ್ರತಿಯೊಬ್ಬರೂ ದೇಶಕ್ಕಾಗಿ ಸಮಾಜಕ್ಕಾಗಿ ಕೊಡುಗೆಯನ್ನು ಸಲ್ಲಿಸಬೇಕು. ವಿದ್ಯಾರ್ಥಿಗಳು ಆನ್‌ಲೈನ್ ಗೇಮ್, ಮಾದಕ ವಸ್ತುಗಳಿಂದ ದೂರವಿದ್ದು ಉತ್ತಮ ಶಿಕ್ಷಣ ಪಡೆದು ದೇಶವನ್ನು ಕಟ್ಟಬೇಕೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಇಂದು ಭಾರತ ವಿಜ್ಞಾನ, ತಂತ್ರಜ್ಞಾನದಲ್ಲಿ ಸಾಕಷ್ಟು ಸಾಧನೆಯನ್ನು ಮಾಡಿ ಆರ್ಥಿಕವಾಗಿ ಬಲಿಷ್ಟವಾಗಿ ಬೆಳೆಯುತ್ತಿದೆ. ಭಾರತಕ್ಕಾಗಿ ಹೋರಾಡಿದ, ಶ್ರಮಿಸಿದ ಎಲ್ಲಾ ಮಹಾನ್ ನಾಯಕರಿಗೆ ನಾವು ಗೌರವವನ್ನು ಸೂಚಿಸಬೇಕೆಂದರು. ಜಿ ಎಮ್ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಧ್ವಜಾರೋಹಣವನ್ನು ನೆರವೇರಿಸಿ ಎಲ್ಲರಿಗೂ ಸ್ವಾತಂತ್ರ್ಯ ದಿನದ…

Read More

ಗಣಿತನಗರ : ಲಕ್ಷಾಂತರ ದೇಶಪ್ರೇಮಿಗಳ ತ್ಯಾಗ, ಬಲಿದಾನಗಳಿಗೆ ನಾವು ಧನ್ಯವಾದ ಹೇಳುವ ಅವರ ಚಿರಸ್ಮರಣೆ ಗೈಯ್ಯುವ ಶುಭದಿನ. ಸ್ವಾತಂತ್ರ್ಯವೆಂಬುದು ಉಚಿತವಾಗಿ ದೊರೆತುದಲ್ಲ. ಅದೊಂದು ಜವಾಬ್ದಾರಿಯ ಸಂಕೇತ ಎಂದು ಪದ್ಮಶ್ರೀ ಡಾ.ಎಂ.ಎo.ಜೋಷಿ ಸೇವಾಪ್ರಶಸ್ತಿ ಪುರಸ್ಕೃತ ನೇತ್ರತಜ್ಞ ಡಾ.ಶ್ರೀನಿವಾಸ್ ದೇಶಪಾಂಡೆ ಹೇಳಿದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜರುಗಿದ ೭೯ನೇ ಸ್ವಾತಂತ್ರ್ಯದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪಿ.ಆರ್.ಒ ಜ್ಯೋತಿಪದ್ಮನಾಭ್ ಭಂಡಿ. ಪಿ.ಯು. ಉಪಪ್ರಾಂಶುಪಾಲರುಗಳಾದ ಶ್ರೀ ಸಾಹಿತ್ಯ, ಶ್ರೀಮತಿ ಉಷಾ ರಾವ್ ಯು, ಜ್ಞಾನಸುಧಾ ಆಂಗ್ಲಮಾಧ್ಯಮಪ್ರೌಢಶಾಲಾ ಉಪಪ್ರಾ0ಶುಪಾಲೆ ಶ್ರೀಮತಿ ವಾಣಿ ಕೆ, ಲೆಫ್ಟಿನೆಂಟ್ ಮ0ಜುನಾಥ್ ಮುದೂರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಮತಿ ಸೌಜನ್ಯ ಹೆಗ್ಡೆ, ರೇಶ್ಮಾ ಸಾಲಿಸ್, ಕಿರಣ್ ಕುಮಾರ್ ಮತ್ತು ದರ್ಶನ್ ಕುಮಾರ್ ಉಪಸ್ಥಿತರಿದ್ದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲ ಶ್ರೀ ದಿನೇಶ್ ಎಂ ಕೊಡವೂರ್ ವಂದಿಸಿ, ಜೀವಶಾಸ್ತ್ರ ಉಪನ್ಯಾಸಕ ಶ್ರೀ ಪ್ರಸಾದ್ ಆಚಾರ್ಯ ನಿರೂಪಿಸಿ ಸ್ವಾಗತಿಸಿದರು.

Read More

ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನಲ್ಲಿ 79ನೇ ಸಂಭ್ರಮದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಮತ್ತು ಇಸ್ರೋ ಮಾಜಿ ಅಧ್ಯಕ್ಷರಾದ ಎ.ಎಸ್ ಕಿರಣ್ ಕುಮಾರ್ ರವರು ಧ್ವಜಾರೋಹಣವನ್ನು ನೆರವೇರಿಸಿ , ಸ್ವಾತಂತ್ರ್ಯ ಎಂಬುದು ಇಂದು ವಿಜ್ಞಾನದ ಮಾರ್ಗದಲ್ಲಿ ಸ್ವಾಯತ್ತತೆ, ಪ್ರಗತಿ ಮತ್ತು ಜನಕೇಂದ್ರಿತ ಸೇವೆಯ ಸಂಕೇತವಾಗಿದೆ. ನಾವು ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಯ ಮೂಲಕ ಹೊಸ ಸಾಮರಸ್ಯವನ್ನು ರೂಪಿಸುತ್ತಿದ್ದೇವೆ. ಅಂತರಿಕ್ಷ ಕ್ಷೇತ್ರ, ಅಣುಶಕ್ತಿ ಕ್ಷೇತ್ರ, ವೈದ್ಯಕೀಯ ಕ್ಷೇತ್ರ, ಕೃಷಿ ಕ್ಷೇತ್ರ, ಮಾಹಿತಿ ತಂತ್ರಜ್ಞಾನ ಹೀಗೆ ಸ್ವತಂತ್ರ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಕಾಶ ಮಟ್ಟದ ಸಾಧನೆಗಳನ್ನು ಕಾಣುತ್ತಿದೆ ಎಂದರು. ಈ ಸಂದರ್ಭದಲ್ಲಿ ಕ್ರಿಯೇಟಿವ್ ಕಾಲೇಜಿನಲ್ಲಿ ಹೊಸದಾಗಿ ಆರಂಭಗೊಂಡ 6/8 ನೌಕಾ ಉಪವಿಭಾಗ – ಎನ್.ಸಿ.ಸಿ ಉಡುಪಿ ಘಟಕ ಇದರ ಪ್ರಾಯೋಜಕರಾದ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕ ಹಾಗೂ CTO ಮಹೇಶ್ ಆರ್. ಶೆಣೈ. ಕೆ. ಇವರ ನೇತೃತ್ವದಲ್ಲಿ ಎನ್. ಸಿ.ಸಿ ಕೆಡೆಟ್ ಗಳಿಂದ…

Read More

ಮೂಡುಬಿದಿರೆ: ಶಿಕ್ಷಕರು ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿ ಆಧುನಿಕ ಭಾರತ ನಿರ್ಮಿಸುವಲ್ಲಿ ಶ್ರಮವಹಿಸುತ್ತಿದ್ದಾರೆ ಎಂದು ಭಾರತೀಯ ಸೇನೆ ನಿವೃತ್ತ ಅಧಿಕಾರಿ ಲೆ. ಜನರಲ್ ಅರುಣ್ ಅನಂತನಾರಾಯಣ್ ಹೇಳಿದರು. ವಿದ್ಯಾಗಿರಿಯ ಕೆ. ವಿ. ಸುಬ್ಬಣ್ಣ ಬಯಲು ವೇದಿಕೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ವತಿಯಿಂದ ನಡೆದ 79ನೇ ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಧ್ವಜಾರೋಹಣ ಗೈದು ಮಾತನಾಡಿದ ಅವರು, ಇಂದಿನ ಪೀಳಿಗೆಗೆ ಸ್ವಾತಂತ್ರ‍್ಯವೆoದರೆ ಏನನ್ನಾದರೂ ಸಾಧಿಸುವ ಅವಕಾಶ ಎಂದು ಭಾಸವಾಗಬಹುದು, ಆದರೆ ನಮ್ಮ ಹಿರಿಯರು ಸರಿಯಾದ ಶಿಕ್ಷಣ ವೈದ್ಯಕೀಯ ಸೌಲಭ್ಯ ಮತ್ತು ಇನ್ನಿತರ ಮೂಲಭೂತ ಸೌಲಭ್ಯಗಳಿಲ್ಲದೇ ಬದುಕಿದ್ದರು. ನಿಜವಾದ ಸ್ವಾತಂತ್ರ‍್ಯ ಎಂದರೆ ಅಭಿವೃದ್ಧಿ ಪ್ರತಿಯೊಬ್ಬರಿಗೂ ತಲುಪಿದಾಗ ಹಾಗೂ ಪ್ರತಿಯೊಬ್ಬರೂ ಈ ಅಗತ್ಯ ಸೌಲಭ್ಯಗಳನ್ನು ಪಡೆದಾಗ ಸಾಧ್ಯವಾಗುವುದು. ಸ್ವಾತಂತ್ರ‍್ಯ ಹೋರಾಟದಲ್ಲಿ ಹಿರಿಯರು ನೀಡಿದ ತ್ಯಾಗಗಳಿಗೆ ಗೌರವ ಸಲ್ಲಿಸಿದ ಅವರು, “ಆಧುನಿಕ ಭಾರತವನ್ನು ಒಬ್ಬ ವ್ಯಕ್ತಿ ಮಾತ್ರ ನಿರ್ಮಿಸಲು ಸಾಧ್ಯವಿಲ್ಲ,ಅದಕ್ಕೆ ಸಮೂಹ ಶ್ರಮ ಅಗತ್ಯ. ಶಿಕ್ಷಕರು ಕೇವಲ ವೃತ್ತಿಯಲ್ಲಿಲ್ಲ, ಸೇವೆಯಲ್ಲಿ ಇದ್ದು, ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿ ಆಧುನಿಕ ಭಾರತವನ್ನು ಕಟ್ಟುವವರಾಗಿದ್ದಾರೆ…

Read More

ಗಣಿತನಗರ : ಸ್ವದೇಶವೇ ಹೆಚ್ಚು ನಮಗೆ ಪ್ರಾಣಪ್ರಿಯವಾಗಿರುವುದು. ತೃಪ್ತಿಯನ್ನು ಹಾಗೂ ಆನಂದವನ್ನು ಮಾತೃಭೂಮಿ ಮಾತ್ರ ನೀಡಲು ಸಾಧ್ಯ. ಅದೆಷ್ಟೋ ವೀರಸೇನಾನಿಗಳ ತ್ಯಾಗ, ಬಲಿದಾನಗಳಿಗೆ ದೇಶಭಕ್ತಿಯ ಸ್ಪೂರ್ತಿಗೆ ಸ್ವದೇಶ ಮಂತ್ರವೇ ಅಸ್ತçವಾಗಿತ್ತು ಎಂದು ಮೈಸೂರಿನ ವಿವೇಕವಂಶಿ ಫೌಂಡೇಶನ್‌ನ ಸ್ಥಾಪಕರಾದ ಶ್ರೀ ನಿತ್ಯಾನಂದ ಎಸ್.ಬಿ ನುಡಿದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ನಡೆಯುತ್ತಿರುವ ಮೌಲ್ಯಸುಧಾ ಮಾಲಿಕೆ-೩೯ರಲ್ಲಿ ‘ಸ್ವದೇಶಿ ಚಿಂತನೆ- ಯುವಕರಲ್ಲಿ ರಾಷ್ಟ್ರಭಕ್ತಿಯ ಬೆಳವಣಿಗೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು. ಈಗಿನ ಶಿಕ್ಷಣ ಕೇವಲ ಹೊಟ್ಟೆಪಾಡಿನ ಗುರಿಯಾಗಿದೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಮೌಲ್ಯಶಿಕ್ಷಣ ಕೂಡ ಅತ್ಯಗತ್ಯ. ನಮ್ಮ ಸಮಾಜ ಸುಂದರವಾಗಬೇಕಾದರೆ, ಅದರ ಭವಿಷ್ಯವನ್ನು ನಿರ್ಮಾಣ ಮಾಡುವ ಭಾವಿ ಪ್ರಜೆಗಳಾದ ವಿದ್ಯಾರ್ಥಿಗಳಿಗೆ ಸಿಗಲೇ ಬೇಕಾದ ನೈತಿಕತೆಯನ್ನು ಈ ಮೌಲ್ಯಸುಧಾದ ಮೂಲಕ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಕೊಡುತ್ತಿರುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ…

Read More

ವಲಸೆ ಮನುಷ್ಯ ಜೀವನದ ಗತಿ ಮತ್ತು ಚೆಹರೆಯನ್ನು ಬದಲಾಯಿಸುವ ಒಂದು ಮಹತ್ವದ ಸಂಗತಿ. ವಿಶ್ವದೆಲ್ಲೆಡೆ ವಿವಿಧ ಕಾರಣಗಳಿಗೆ ವಿವಿಧ ಪ್ರದೇಶ, ರಾಜ್ಯ, ದೇಶಗಳನ್ನೂ ದಾಟಿ ಜನ ಜನಾಂಗದ ಸಮುದಾಯದ ವಲಸೆ ನಡೆದಿವೆ, ನಡೆಯುತ್ತಲೇ ಇವೆ. ಕಳೆದೊಂದು ಒಂದೂವರೆ ಶತಮಾನಕ್ಕೂ ಹೆಚ್ಚು ಕಾಲಾವಧಿಯಿಂದ ನಡೆದ ತುಳುನಾಡ ಕರಾವಳಿಗರ ಆಧುನಿಕ ಮುಂಬಯಿ ವಲಸೆ ಕೂಡ ಈ ಹಿನ್ನೆಲೆಯಲ್ಲಿ ಬಹು ಮುಖ್ಯವಾದುದು. ವಿಶಿಷ್ಟ ಜನಪದ ಮತ್ತು ಜನಾಂಗೀಯ ಹಿನ್ನಲೆ ಮತ್ತು ಸಂಸ್ಕ್ರತಿಯುಳ್ಳ ದಕ್ಷಿಣೋತ್ತರ ಹಾಗೂ ಕಾಸರಗೋಡು ಜಿಲ್ಲೆಗಳ ತುಳುವರು ಸಾವಿರದ ಎಂಟುನೂರರ ಉತ್ತರಾರ್ಧದಲ್ಲಿ ಮುಂಬಯಿಯತ್ತ ಕಣ್ಣು ನೆಟ್ಟು ಕಾಲು ಬೆಳೆಸಿದ್ದು ಬಹು ಮಹತ್ವದ ವಿದ್ಯಮಾನವೆನ್ನಬಹುದು. ಹೀಗೆ ವಲಸೆ ಬರಲಾರಂಭಿಸಿದ ಕನ್ನಡ ಕರಾವಳಿಯ ತುಳುವ ಜನಸಂಖ್ಯೆ ಯ ಪೈಕಿ ಅತಿ ಮುಖ್ಯವಾದ ಸಮುದಾಯ ಬಂಟರದ್ದು. ಹತ್ತು ಹಲವು ಉಪನಾಮಗಳನ್ನು ಹೊಂದಿದ್ದರೂ ಮಹಾನಗರಿ ಮುಂಬಯಿಯ ಉದ್ದಗಲಕ್ಕೆ ಶೆಟ್ಟಿ ಎಂದೇ ಪರಿಚಿತವಾದ ಈ ‘ಸ್ವಾಭಿಮಾನಧನ’ ಸಮುದಾಯ ತನ್ನ ಉದ್ಯಮಶೀಲತೆ, ನಾಯಕತ್ವ ಗುಣಗಳಿಂದ ಮರಾಠಿ ಮಣ್ಣಿನ ಉದ್ದಗಲಕ್ಕೆ ಗಟ್ಟಿಯಾಗಿ ನೆಲೆನಿಂತ ಪರಿ…

Read More

ಬಂಟರ ಸಂಘ ಮುಂಬಯಿಯ ಜೋಗೇಶ್ವರಿ ದಹಿಸರ್ ಸಮಿತಿಯ ವತಿಯಿಂದ ಇದೇ ಬರುವ ಆಗಸ್ಟ್ 15 ರಂದು ಶುಕ್ರವಾರ ಅಪರಾಹ್ನ 2.30 ಕ್ಕೆ ಸರಿಯಾಗಿ ಕಾಂದಿವಲಿ ಪಶ್ಚಿಮದ ಮಹಾವೀರ ನಗರದಲ್ಲಿರುವ ಕಮಲಾ ವಿಹಾರ್ ಸ್ಪೋರ್ಟ್ಸ್ ಕ್ಲಬ್ ನ ಸಭಾಂಗಣದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಸಂಚಾಲಕತ್ವದ ಊರಿನ ಸುಪ್ರಸಿದ್ಧ ಆಟಕೂಟಗಳ ಹಿಮ್ಮೇಳ ಹಾಗೂ ಮುಮ್ಮೇಳದ ಕಲಾವಿದರ ಸಮಾಗಮದೊಂದಿಗೆ “ಕೃಷ್ಣ ರಾಜಿ ಪ್ರಸಂಗೊ- ಅಂಕೊದ ಬೂಲ್ಯ” (ಕೃಷ್ಣ ಸಂಧಾನ – ಧುರ ವೀಳ್ಯ) ಎಂಬ ತುಳು ಯಕ್ಷಗಾನ ತಾಳಮದ್ದಳೆಯು ಸಂಪನ್ನಗೊಳ್ಳಲಿದೆ. ನಗರದಲ್ಲಿರುವ ಕನ್ನಡ ಭಾಷೆಯನ್ನರಿಯದ ತುಳುವರಿಗೆ ಯಕ್ಷಗಾನ ತಾಳಮದ್ದಳೆಯ ಸವಿಯನ್ನುಣ್ಣಿಸುವ ಉದ್ದೇಶದಿಂದಲೇ ಹಮ್ಮಿಕೊಂಡ ಈ ಕೂಟದಲ್ಲಿ ಊರಿನಿಂದ ಆಗಮಿಸಿದ ಆಟಕೂಟಗಳ ಬಹಳ ಬೇಡಿಕೆಯ ಕಲಾವಿದರುಗಳು ಶ್ರೋತೃಗಳನ್ನು ಮಂತ್ರ ಮುಗ್ಧಗೊಳಿಸಲಿದ್ದಾರೆ. ಕಲಾವಿದರಾಗಿ ಭಾಗವತರು : ದೇವಿಪ್ರಸಾದ್ ಆಳ್ವ ತಲಪಾಡಿ, ಚೆಂಡೆ: ಸುಬ್ರಮಣ್ಯ ಭಟ್ ದೇಲಂತಮಜಲು, ಮದ್ದಳೆ: ಪ್ರಶಾಂತ ಶೆಟ್ಟಿ ವಗೆನಾಡು, ಶ್ರೀ ಕೃಷ್ಣ: ಡಾ| ಎಂ. ಪ್ರಭಾಕರ ಜೋಶಿ, ಕೌರವ: ಜಯಪ್ರಕಾಶ್ ಶೆಟ್ಟಿ ಪೆರ್ಮುದೆ, ವಿದುರ: ಭಾಸ್ಕರ…

Read More

ಮುಂಬೈಯ ಹೋಟೆಲ್ ಉದ್ಯಮಿಗಳು ಒಟ್ಟು ಸೇರಿ ಜವಾಬ್ ಆಶ್ರಯದಲ್ಲಿ ಕಳೆದ ಎರಡು ದಶಕಗಳಿಂದ ಅಜೆಕಾರು ಕಲಾಭಿಮಾನಿ ಬಳಗದ ತಾಳಮದ್ದಳೆ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿದ್ದಾರೆ. ಅದು ನಮ್ಮ ಅಭಿರುಚಿಗೆ ಪೂರಕವಾಗಿ ಎಲ್ಲರನ್ನೂ ಆಕರ್ಷಿಸುತ್ತಿರುವುದರಿಂದ ಪ್ರತಿ ಬಾರಿಯೂ ಒಳ್ಳೆಯ ಪ್ರೇಕ್ಷಕ ವರ್ಗವನ್ನು ಸೆಳೆಯುತ್ತಿದೆ. ಯಕ್ಷಗಾನ ತಾಳಮದ್ದಳೆ ಪ್ರಕಾರದಲ್ಲಿ ಪುರಾಣ ಜ್ಞಾನದೊಂದಿಗೆ ಜೀವನಕ್ಕೆ ಸಂಸ್ಕಾರ ನೀಡುವಂತಹ ಹಲವು ವಿಚಾರಗಳನ್ನು ತಿಳಿಯಲು ಸಾಧ್ಯವಾಗುತ್ತದೆ ಎಂದು ಜವಾಬ್ ನ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ರಘು ಎಲ್. ಶೆಟ್ಟಿ ಹೇಳಿದ್ದಾರೆ. ಮುಂಬೈ ಮಹಾನಗರದ ಹೋಟೆಲ್ ಉದ್ಯಮಿಗಳ ಬೃಹತ್ ಸಂಘಟನೆಯಾದ ಜವಾಬ್ ವತಿಯಿಂದ ಅಂಧೇರಿಯ ಹೋಟೆಲ್ ಪ್ಯಾಪಿಲೋನ್ ನಲ್ಲಿ ಆಗಸ್ಟ್ 11ರಂದು ಜರಗಿದ ಅಜೆಕಾರು ಕಲಾಭಿಮಾನಿ ಬಳಗದ 24ನೇ ಸರಣಿಯ ಮೂರನೇ ದಿನದ ತಾಳಮದ್ದಳೆ ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿ ಅವರು ಮಾತನಾಡಿದರು. ಜವಾಬ್ ಬಂಟ್ಸ್ ಅಧ್ಯಕ್ಷ ರಾಜೇಶ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಯಕ್ಷಗಾನ ವಿದ್ವಾಂಸ ಡಾ| ಎಂ. ಪ್ರಭಾಕರ ಜೋಶಿ ಅವರು ಮುಂಬೈ ಪ್ರೇಕ್ಷಕರ ಕಲಾಭಿಮಾನವನ್ನು…

Read More

ತಾಯ್ನಾಡಿನ ಸಂಸ್ಕೃತಿ ಮತ್ತು ಧರ್ಮವನ್ನು ಪ್ರೋತ್ಸಾಹಿಸುತ್ತಿರುವ ಕಲೆಗೆ ಸದಾ ನಾವು ಪ್ರೋತ್ಸಾಹಿಸಬೇಕು. ನಮ್ಮ ತಾಯ್ನಾಡಿನ ಮಣ್ಣಿನ ಪರಂಪರೆ ಅಗಾಧವಾದುದು. ದೈವ ದೇವರುಗಳ ಪ್ರತೀಕಗಳು ನಮ್ಮ ಮುಂದಿನ ಪೀಳಿಗೆಗಳಲ್ಲೂ ಜಾಗೃತವಾಗಿರಿಸುವಂತಹ ಕಾಲವಿದು. ಧರ್ಮ ಜಾಗೃತಿಯ ಕಲೆಗಳಿಗೆ ನಮ್ಮೂರವರ ಬೆಂಬಲ ಅತ್ಯಗತ್ಯ ಎಂದು ಬಂಟ್ಸ್ ಪೋರಂ ಮೀರಾ ಭಯಂದರ್ ಇದರ ಮಾಜಿ ಅಧ್ಯಕ್ಷ ಹಾಗೂ ಉದ್ಯಮಿ ಜಯಪ್ರಕಾಶ್ ಭಂಡಾರಿಯವರು ನುಡಿದರು. ಅವರು ಆಗಸ್ಟ್ 10 ರಂದು ಮ್ಯಾಕ್ಸಸ್ ಮಾಲ್ ಸಿನೇಮಾ ಮಂದಿರದಲ್ಲಿ ದ್ವಿತೀಯ ಬಾರಿಗೆ ಹೌಸ್ ಫುಲ್ ಪ್ರದರ್ಶನದ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಧರ್ಮಚಾವಡಿ ತುಳು ಚಲನಚಿತ್ರದ ಪ್ರಾರಂಭದಲ್ಲಿ ಗಣ್ಯರೊಂದಿಗೆ ದೀಪ ಪ್ರಜ್ವಲನೆಗೈದು ಮಾತನಾಡುತ್ತಿದ್ದರು. ಅಧ್ಯಕ್ಷತೆಯನ್ನು ವಹಿಸಿದ್ದ ಬಂಟ್ಸ್ ಪೋರಂ ಮೀರಾ ಭಯಂದರ್ ನ ಅಧ್ಯಕ್ಷ ಮಲಾರಬೀಡು ಉದಯ ಎಂ. ಶೆಟ್ಟಿಯವರು ಧರ್ಮ ಜಾಗೃತಿಯ ಬಗ್ಗೆ ಉತ್ತಮ ಸಂದೇಶವುಳ್ಳ ಇಂತಹ ಕಲಾಪ್ರರ್ಶನಗಳು ಸದಾ ಮೂಡಿಬರಲಿ ಎಂದು ಹಾರೈಸಿದರು. ಉದ್ಘಾಟನಾ ಸಮಾರಭದಲ್ಲಿ ಜಯ ಪ್ರಕಾಶ್ ಭಂಡಾರಿ (ಮಾಜಿ ಅಧ್ಯಕ್ಷರು: ಬಂಟ್ಸ್ ಪೋರಮ್ ಮೀರಾ – ಭಯಂದರ್), ಉದಯ…

Read More

ಆಳ್ವಾಸ್ ಪದವಿಪೂರ್ವ ಕಾಲೇಜಿನ ಆಂತರಿಕ ಸಮಿತಿಯು ಬುಧವಾರ ಕಾಲೇಜಿನ ವಿಎಸ್ ಆಚಾರ್ಯ ಸಭಾಂಗಣದಲ್ಲಿ ‘ನಿತ್ಯ ಜೀವನದಲ್ಲಿ ಕಾನೂನು’ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಬಂಟ್ವಾಳದ ಹಿರಿಯ ನ್ಯಾಯವಾದಿ ಶೈಲಜಾ ರಾಜೇಶ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಕಾನೂನಿನ ಮಹತ್ವ ಹಾಗೂ ಜೀವನದಲ್ಲಿನ ಅದರ ಅನ್ವಯ ಕುರಿತು ಮಾರ್ಗದರ್ಶನ ನೀಡಿದರು. ಮನುಷ್ಯನ ಬದುಕಿನ ಪ್ರತಿಯೊಂದು ಹಂತವೂ ಕಾನೂನಿನ ನಿಯಮಗಳು, ಹಕ್ಕುಗಳು ಮತ್ತು ಕರ್ತವ್ಯಗಳಿಂದ ಕೂಡಿರುತ್ತದೆ. ಜನನದಿಂದ ಆರಂಭಿಸಿ ಸಾವಿನವರೆಗಿನ ಪ್ರತಿಯೊಂದು ಪ್ರಕ್ರಿಯೆಯು ಕಾನೂನು ನಿರ್ದಿಷ್ಟಗೊಳಿಸಿದ ವ್ಯವಸ್ಥೆಯೊಳಗೆ ನಡೆಯುತ್ತದೆ. ಕಾನೂನಿನ ಈ ಚೌಕಟ್ಟಿನ ಅರಿವಿದ್ದಾಗ ನಾವೂ ಜವಾಬ್ದಾರಿಯಿಂದ ಸಮಾಜದಲ್ಲಿ ಬದುಕಲು ಸಾಧ್ಯ ಎಂದರು. ಮಹಿಳೆಯರು ಸಮಾಜದಲ್ಲಿ ಅನೇಕ ಬಾರಿ ವಂಚನೆಗೆ ಒಳಗಾಗುತ್ತಾರೆ ಎಂಬುದು ಸತ್ಯ. ಆದರೆ ಕೆಲವರು ಅದೇ ಕಾನೂನನ್ನು ದುರುಪಯೋಗ ಪಡಿಸಿಕೊಂಡ ಉದಾಹರಣೆಗಳಿವೆ ಎಂದರು. ನಾವೆಲ್ಲ ಹಕ್ಕುಗಳ ಬಗ್ಗೆ ಹೆಚ್ಚು ಚರ್ಚಿಸುತ್ತೇವೆ, ಆದರೆ ಕರ್ತವ್ಯಗಳಿಂದ ದೂರವಾಗುತ್ತಿರುವುದು ದುಂಖಕರ. ಮಕ್ಕಳು ಸುಖ ಜೀವನದಲ್ಲೇ ಬೆಳೆದರೆ ಕಷ್ಟದ ಮೌಲ್ಯ ಅರಿಯಲಾರರು. ಶ್ರೀಮಂತಿಕೆ ಹಣದಿಂದಲ್ಲ, ಪ್ರೀತಿ, ಮಮತೆ, ಗುಣ…

Read More