Author: admin
ತಾನೋರ್ವ ಉದ್ಯಮಿಯಾಗಬೇಕು, ತನ್ನ ಬಾಳಿಗೊಂದು ಭದ್ರ ತಳಪಾಯ ನಿರ್ಮಾಣ ಮಾಡಿಕೊಳ್ಳುವ ಮೂಲಕ ಬಡತನದಿಂದ ಮೇಲೆದ್ದು ತನ್ನ ಆದಾಯವನ್ನು ತಾನೇ ಸೃಷ್ಟಿಸಿಕೊಂಡು ಸಮಾಜದಲ್ಲಿ ಸಾಧಕರ ಸಾಲಿನಲ್ಲಿ ಗುರುತಿಸಿಕೊಳ್ಳಬೇಕೆಂಬ ಕನಸು ಕಂಡು ಕುಂದಾಪುದಿಂದ ಬೆಂಗಳೂರಿಗೆ ಬಂದು ಹಗಲು ರಾತ್ರಿ ಸಂಘರ್ಷದಿಂದ ಕೈಗಾರಿಕೋದ್ಯಮದಲ್ಲಿ ಯಶಸ್ಸು ಕಂಡ ಯುವಕನ ಜೀವನ ಗಾಥೆ ಇದು. ಮಂದಾರ್ತಿ ಶೀರೂರು ಶೇಖರ್ ಶೆಟ್ಟಿ ಹಾಗೂ ಹಳ್ನಾಡು ನಯನಾ ಶೆಟ್ಟಿ ದಂಪತಿಯ ಪುತ್ರ ಸಂಪತ್ ಶೆಟ್ಟಿಯವರು ಆರಂಭದಲ್ಲಿ ಉದ್ಯೋಗವನ್ನರಸಿಕೊಂಡು ಬೆಂಗಳೂರಿಗೆ ಬಂದಿದ್ದರೂ ತನಗೆ ಸೂಕ್ತ ಎನಿಸುವ, ತೃಪ್ತಿ ನೀಡುವ ಉದ್ಯೋಗ ಲಭಿಸದ ಕಾರಣ ಏನಾದರೂ ಸಣ್ಣ ಬಂಡವಾಳದಿಂದ ವ್ಯಾಪಾರ ಅಥವಾ ಉದ್ದಿಮೆ ಆರಂಭಿಸಬೇಕೆಂದು ಯೋಚಿಸಿದ ಸಂಪತ್ ತನಗೆ ಅನುಭವ ಇದ್ದ ಗೇರು ಬೀಜ ಸಂಸ್ಕರಣ ಉದ್ಯಮ ಆರಂಭಿಸಬೇಕೆನ್ನುವ ಮನೋ ಇಂಗಿತದೊಂದಿಗೆ ಜನಪ್ರಿಯ ಸಮಾಜ ಸೇವಕ, ಜನಪ್ರತಿನಿಧಿ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರಿಂದ ಆರಂಭಿಕ ಸಹಕಾರ ಕೋರಿದಾಗ ಹಾಲಾಡಿ ಶೆಟ್ಟರು ಸಂಪತ್ ಅವರಿಗೆ ಸಹಾಯ ಹಸ್ತ ನೀಡಿದರು. ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ವೈಯಕ್ತಿಕ…
ಬಹಳ ಹಿಂದಿನ ಕಾಲದಿಂದಲೂ ಕೇಳಿ ಬಂದ ಗಾದೆ ಮಾತು “ಹೆಣ್ಣು ಒಲಿದರೆ ನಾರಿ ಮುನಿದರೆ ಮಾರಿ” ಎಂಬ ಮಾತೊಂದಿದೆ. ಇಂದಿನ ಜನಾಂಗಕ್ಕೆ ಅದು ಸರಿಯಾಗಿ ಒಪ್ಪುತ್ತದೆ. ‘ಹೆಣ್ಣು ಅಬಲೆಯಲ್ಲ ಸಬಲೆ’ ಎಂದು ಇಂದಿನ ನಾರಿ ಶಕ್ತಿ ಸಮಾಜಕ್ಕೆ ತೋರಿಸಿಕೊಟ್ಟಿದೆ. ಹೆಣ್ಣು ಮನಸ್ಸು ಮಾಡಿದರೆ ಏನು ಬೇಕಾದರೂ ಸಾಧಿಸಿಯಾಳು ಎಂದು ಇತಿಹಾಸ ಹೇಳುತ್ತದೆ. ಕೇವಲ ಅಡುಗೆ ಮಾಡುತ್ತಾ ನಾಲ್ಕು ಗೋಡೆಗಳ ಮಧ್ಯೆ ಇದ್ದು ತನ್ನ ಜೀವನವೇ ಇಷ್ಟು ಎಂದು ಪರಿತಪಿಸುವ ಕಾಲ ಈಗ ಬದಲಾಗಿ ಹೆಣ್ಣು ಕೂಡಾ ಹೊರಗೆ ಹೋಗಿ ದುಡಿಯಬಲ್ಲಳು. ಏನು ಬೇಕಾದರೂ ಸಾಧಿಸಬಲ್ಲಳು ಎಂದು ಸಾಬೀತಾಗಿದೆ. ಒಂದು ಹೆಣ್ಣು, ತಂದೆ ತಾಯಿಯ ಮಮತೆಯ ಮಗುವಾಗಿ, ಗುರುವಿಗೆ ನೆಚ್ಚಿನ ವಿದ್ಯಾರ್ಥಿನಿಯಾಗಿ, ಗೆಳೆಯರಿಗೆ ಅತ್ಯುತ್ತಮ ಸಹಪಾಠಿಯಾಗಿ, ತನ್ನ ಕಾರ್ಯಕ್ಷೇತ್ರದಲ್ಲಿ ಅತ್ಯುತ್ತಮ ಕೆಲಸಗಾರ್ತಿಯಾಗಿ, ಕೈ ಹಿಡಿದ ಗಂಡನ ಆದರ್ಶ ಮಡದಿಯಾಗಿ, ತನ್ನ ಮಕ್ಕಳ ಮುದ್ದಿನ ತಾಯಿಯಾಗಿ, ಅಳಿಯ ಸೊಸೆಯರ ಅಕ್ಕರೆಯ ಅತ್ತೆಯಾಗಿ, ಮೊಮ್ಮಕ್ಕಳ ಪ್ರೀತಿಯ ಅಜ್ಜಿಯಾಗಿ, ನೆರೆಹೊರೆಯವರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಹೀಗೆ ಎಲ್ಲಾ…
ಹಳೆಯಂಗಡಿ ಸಮೀಪದ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದಲ್ಲಿ ಮಾರ್ಚ್ 4 ರಿಂದ 8ರವರೆಗೆ ನಡೆಯುವ ಬ್ರಹ್ಮಕಲಶೋತ್ಸವದಲ್ಲಿ ವಿವಿಧ ಬಗೆಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಈ ಸಂದರ್ಭ ಮಾರ್ಚ್ 7ರಂದು ಶನಿವಾರ ಅಪರಾಹ್ನ ಗಂ. 3 ರಿಂದ ಕಲಾ ಸೌರಭ ಮುಂಬಯಿ ಆಶ್ರಯದಲ್ಲಿ ‘ಶ್ರೀ ಭಗವತಿ ಅಮ್ಮ ಸ್ವರ ಸಂಗೀತಾಭಿಷೇಕ’ ಎಂಬ ಭಕ್ತಿ ಭಾವ, ಜಾನಪದ, ಯಕ್ಷಗಾಯನ ಹಾಗೂ ನೃತ್ಯ ರಂಜನೆಯ ವಿಶಿಷ್ಟ ಜುಗಲ್ಬಂದಿ ಕಾರ್ಯಕ್ರಮವನ್ನು ಸಂಯೋಜಿಸಲಾಗಿದೆ. ಮುಂಬಯಿ ಕಲಾ ಸೌರಭದ ರೂವಾರಿ, ಹೆಸರಾಂತ ಸಂಗೀತ ನಿರ್ದೇಶಕ ಮತ್ತು ಗಾಯಕ ಪದ್ಮನಾಭ ಸಸಿಹಿತ್ಲು ಅವರ ಪರಿಕಲ್ಪನೆ ಮತ್ತು ನಿರ್ದೇಶನದಲ್ಲಿ ಕಾರ್ಯಕ್ರಮ ಮೂಡಿಬರಲಿದೆ. ಹಿರಿಯ ಕವಿ, ಲೇಖಕ ಮತ್ತು ಯಕ್ಷಗಾನ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಸಮಗ್ರ ನಿರೂಪಣೆಯಿದ್ದು, ಪ್ರಸಿದ್ಧ ಕೀಬೋರ್ಡ್ ವಾದಕ ಸತೀಶ್ ಸುರತ್ಕಲ್ ಮತ್ತು ಸಂಗಡಿಗರು ಹಿನ್ನೆಲೆ ಸಂಗೀತ ಒದಗಿಸುವರು. ‘ಸ್ವರ ಸಂಗೀತಾಭಿಷೇಕ’ವನ್ನು ಭಕ್ತಿ ಭಾವ ಗಾನಸುಧೆ, ಜಾನಪದ ಹಾಡು, ತೆಂಕು ಬಡಗು ಯಕ್ಷ ಸಂಗೀತ…
ಸಂಚಾರ ಸುರಕ್ಷತೆ ಎಲ್ಲರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ರಸ್ತೆಯು ನಮ್ಮ ಹಕ್ಕಲ್ಲ ಅದು ಸರಕಾರ ನೀಡಿದ ಸವಲತ್ತು, ಮನೆಯಿಂದ ಹೊರಟವರು ಸುರಕ್ಷಿತವಾಗಿ ಹಿಂತಿರುಗಿ, ನಿಮ್ಮನ್ನು ನಂಬಿಕೊಂಡ ನಿಮ್ಮ ಕುಟುಂಬವಿದೆ. ಆದುದರಿಂದ ಸಂಚಾರ ನಿಯಮಗಳನ್ನು ಪಾಲಿಸಿ, ನೀವು ಸುರಕ್ಷಿತವಾಗಿರುವುದರ ಜೊತೆಗೆ ಇತರರು ಸುರಕ್ಷಿತವಾಗಿರುವಂತೆ ನೋಡಿಕೊಳ್ಳಿ ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಉಡುಪಿ ಇಲ್ಲಿನ ವಾಹನ ನಿರೀಕ್ಷಕ ಶ್ರೇಯಸ್ ಕುಮಾರ್ ಕೆ ಹೇಳಿದರು. ಅವರು ರೋಟರಿ ಕ್ಲಬ್ ಕಾರ್ಕಳ, ಪ್ರಾದೇಶಿಕ ಸಾರಿಗೆ ಇಲಾಖೆ ಉಡುಪಿ ಜಿಲ್ಲೆ ಹಾಗೂ ಪೋಲೀಸ್ ಇಲಾಖೆ ಕಾರ್ಕಳ ಇವರ ಸಹಯೋಗದೊಂದಿಗೆ ಕಾರ್ಕಳ ಬಸ್ ನಿಲ್ದಾಣದಲ್ಲಿ ನಡೆದ ರಸ್ತೆ ಸಂಚಾರ ಸುರಕ್ಷತಾ ಅಭಿಯಾನ ಕಾರ್ಯಕ್ರಮದಲ್ಲಿ ಚಾಲಕರು ಹಾಗೂ ಜನತೆಗೆ ರಸ್ತೆ ಸುರಕ್ಷತೆ ಬಗ್ಗೆ ಅಮೂಲ್ಯ ಮಾಹಿತಿಯನ್ನು ನೀಡಿ ಮಾತನಾಡುತ್ತಿದ್ದರು. ಕಾರ್ಕಳ ನಗರ ಆರಕ್ಷಕ ಠಾಣೆಯ ಉಪನಿರೀಕ್ಷಕ ಮುರಳಿಧರ್ ನಾಯಕ್ ಮಾತನಾಡುತ್ತಾ, ವಾಹನ ಚಲಾವಣೆಯಲ್ಲಿ ತಾರತಮ್ಯ ಬೇಡ, ಸಣ್ಣ ವಾಹನ ದೊಡ್ಡ ವಾಹನ ಎಲ್ಲವೂ ಸಮಾನ, ಎಲ್ಲರ ಜೀವವು ಅತ್ಯಂತ ಅಮೂಲ್ಯ, ಚಾಲಕರು…
ಮೊನ್ನೆಯ ಪತ್ರಿಕೆಯಲ್ಲಿನ ಒಂದು ಸುದ್ದಿ ಹೀಗಿತ್ತು. ಲಕ್ನೋದಲ್ಲಿ ನೀಟ್ ಪರೀಕ್ಷೆಗೆ ಓದು ಎಂದ ತಂದೆಯನ್ನೇ ಮಗ ಗುಂಡಿಕ್ಕಿ ಕೊಂದ. ಒಮ್ಮೆ ಆಶ್ಚರ್ಯವೆನಿಸಬಹುದು. ಆದರೆ ಹೀಗೆ ಕೊಂದು ಪ್ರಾಣ ತೆಗೆದ ಪ್ರಕರಣಗಳು ಕೆಲವೇ ಇದ್ದರೆ, ತಂದೆ ತಾಯಿಯ ಮಾತು ಕೇಳದ ಇಂತಹ ಇಚ್ಚಾನುಸಾರಿ, ಬೇಜವಾಬ್ದಾರಿ ಮಕ್ಕಳ ವಿಪರೀತ ಬುದ್ದಿಗೆ ಬದುಕಿಯೂ ಸತ್ತ ಮಂದಿಗಳಿರುವ ಮನೆಗಳ ಕತೆ ಬಹಳಷ್ಟಿದೆ. ಬಡತನ, ಹೀಯಾಳಿಕೆ, ಕಷ್ಟ ನಷ್ಟಗಳಿಂದ ಬಳಲಿ ಕೊರಗಿ ಕೊನೆಗೆ ಪ್ರಯತ್ನ ಮತ್ತು ಹಠದಿಂದ ನೆಲದಿಂದ ಮೇಲಕ್ಕೆದ್ದು ಹಾಗೋ ಹೀಗೋ ತಮ್ಮ ಮಕ್ಕಳನ್ನು ರಾಜನ ತರಹ ಬೆಳೆಸಿದ ತಂದೆ ತಾಯಿಯಂದಿರು ತಾವು ಪಟ್ಟ ಪಡಿಪಾಟೀಲು ತಮ್ಮ ಮಕ್ಕಳು ಅನುಭವಿಸಬಾರದು ಎಂದು ಹೈಫೈ ಇಂಗ್ಲೀಷ್ ಮಾಧ್ಯಮ ಶಾಲೆ ಕಾಲೇಜ್ ಗಳಲ್ಲಿ ಓದಿಸುತ್ತಾರೆ. ಉದ್ದೇಶ ಇಷ್ಟೇ ತಾನು ಅನುಭವಿಸಿದ ಯಾತನೆ ನಮ್ಮ ಮಕ್ಕಳು ಅನುಭವಿಸಬಾರದು. ಸಮಾಜದಲ್ಲಿ ಯೋಗ್ಯತೆಯ ಉನ್ನತ ಸ್ಥಾನಮಾನ ಪಡೆದುಕೊಂಡು ತಮ್ಮ ಮಕ್ಕಳು ಗುರುತಿಸಿಕೊಳ್ಳಬೇಕು ಮತ್ತು ಆ ಮಕ್ಕಳ ತಂದೆ ತಾಯಿ ಎಂದು ನಮ್ಮನ್ನು ನಾಲ್ಕು ಜನ…
ಕುಂದಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ಗೆ ನೂತನ ಸಾರಥಿಯಾಗಿ ಯುವ ನಾಯಕ ಕೆ. ವಿಕಾಸ್ ಹೆಗ್ಡೆ ಅವರನ್ನು ನೇಮಕಾತಿ ಮಾಡಿ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ (ಕೆಪಿಸಿಸಿ) ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರ ಬದಲಾವಣೆ ಮಾಡುವಂತೆ ಹಲವು ದಿನಗಳಿಂದ ಕಾಂಗ್ರೆಸ್ ಪಾಳಯದಲ್ಲಿ ಕೂಗು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿಯವರು ಕೆಪಿಸಿಸಿ ಅಧ್ಯಕ್ಷರಿಗೆ ನೂತನ ಅಧ್ಯಕ್ಷರ ಆಯ್ಕೆಯ ಕುರಿತಂತೆ ಪತ್ರವನ್ನು ಬರೆದಿದ್ದರು ಎಂದು ತಿಳಿದುಬಂದಿದೆ. ಕಾಂಗ್ರೆಸ್ ಚಟುವಟಿಕೆಗಳಿಗೆ ಶಕ್ತಿ ತುಂಬಬೇಕು ಎನ್ನುವ ಹಿನ್ನೆಲೆಯಲ್ಲಿ ಅಧ್ಯಕ್ಷಗಿರಿಯ ಚುಕ್ಕಾಣಿ ಯಾರಿಗೆ ನೀಡಬೇಕು ಎನ್ನುವುದನ್ನು ಮಾಹಿತಿ ಪಡೆದು ತೀರ್ಮಾನ ಕೈಗೊಂಡಿದ್ದ ಕೆಪಿಸಿಸಿ ಅಧ್ಯಕ್ಷರು ಕಳೆದ ಫೆಬ್ರವರಿ 9 ರಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ವಿಕಾಸ್ ಹೆಗ್ಡೆ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದರು.
ಶಿಕ್ಷಣವು ಕೇವಲ ಪುಸ್ತಕದ ಪಾಠಗಳಿಗೆ ಸೀಮಿತವಾಗಿರಬಾರದು. ಜ್ಞಾನ, ಮೌಲ್ಯ ಮತ್ತು ಕೌಶಲ್ಯಗಳ ಸಮನ್ವಯವೇ ನಿಜವಾದ ಶಿಕ್ಷಣವಾಗಿದ್ದು, ಮೌಲ್ಯವಿಲ್ಲದ ಶಿಕ್ಷಣ ಅಪೂರ್ಣವಾಗುತ್ತದೆ ಎಂದು ರಾಷ್ಟ್ರೀಯ ಪರಿಸರ ಸಂರಕ್ಷಣಾ ಫೆಡರೇಶನ್(ಎನ್ಇಸಿಎಫ್)ನ ರಾಜ್ಯ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಹೇಳಿದರು. ಅವರು ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ಮಾನವಿಕ ವಿಭಾಗದ ವತಿಯಿಂದ ‘ಆರ್ಟ್ಸ್ ಎಕ್ಸುಂಬುರೆನ್ಸ್ 2026’ ಅಂಗವಾಗಿ ಆಯೋಜಿಸಲಾದ ‘ಕ್ಷಿತಿವನ್ಷ್’ ರಾಜ್ಯಮಟ್ಟದ ಅಂತರ್ ಕಾಲೇಜು ಫೆಸ್ಟ್ ಉದ್ಘಾಟಿಸಿ ಮಾತನಾಡಿದರು. ದೈನಂದಿನ ಜೀವನದಲ್ಲಿ ಕೃತಜ್ಞತೆಯ ಭಾವವನ್ನು ಬೆಳೆಸಿಕೊಳ್ಳುವುದು ಅತ್ಯಂತ ಮುಖ್ಯ. ಸಮಾಜವು ಕನ್ನಡಿಯಂತಿದ್ದು, ನಾವು ಹೇಗೆ ವರ್ತಿಸುತ್ತೇವೋ ಅದೇ ರೀತಿಯಲ್ಲಿ ಸಮಾಜ ಪ್ರತಿಬಿಂಬಿಸುತ್ತದೆ. ಆದ್ದರಿಂದ ಸಮಾಜವನ್ನು ದೂಷಿಸುವುದಕ್ಕಿಂತ ನಮ್ಮ ನಡವಳಿಕೆಯನ್ನು ಸರಿಪಡಿಸಿಕೊಳ್ಳುವುದು ಅಗತ್ಯ. ಭೂಮಿ ಕೇವಲ ಮಾನವರಿಗೆ ಮಾತ್ರವಲ್ಲ. ಎಲ್ಲಾ ಜೀವಿಗಳಿಗೆ ಸೇರಿದೆ. ‘ತನ್ನಂತೆ ಪರರನ್ನು ಬಗೆದೊಡೆ ಬಿನ್ನಾಣುವಕ್ಕೂ ಇಲ್ಲವಯ್ಯ’ ಎಂಬ ಸರ್ವಜ್ಞನ ನುಡಿಯಂತೆ, ಇತರರನ್ನು ನಮ್ಮಂತೆಯೇ ಕಾಣುವ ಮೌಲ್ಯ ಬಹಳ ಮುಖ್ಯ. ಇಂತಹ ಮೌಲ್ಯಗಳು ಕೇವಲ ಮನುಷ್ಯರಲ್ಲಿ ಮಾತ್ರವಲ್ಲ, ಪ್ರಕೃತಿಯ ಪ್ರತಿಯೊಂದು ಜೀವಿಯಲ್ಲೂ ಕಂಡುಬರುತ್ತದೆ.…
ಲಯನ್ಸ್ ಜಿಲ್ಲೆ 317 ಡಿ ಪ್ರಾಂತ್ಯ 2 : ಕದ್ರಿ ಶ್ರೀ ಮಂಜುನಾಥ ದೇಗುಲದ ಪ್ರವೇಶ ದ್ವಾರ ಡಾ| ಎ.ಜೆ ಶೆಟ್ಟಿಯವರಿಂದ ಉದ್ಘಾಟನೆ
ಲಯನ್ಸ್ ಜಿಲ್ಲೆ 317 ಡಿಯ ಪ್ರಾಂತ್ಯ 2ರ ಪ್ರಾಂತೀಯ ಸಮ್ಮೇಳನ – 2026 ‘ಗ್ರಂಥ’ ಇದರ ಶಾಶ್ವತ ಸೇವಾ ಯೋಜನೆಗಳ ಅಂಗವಾಗಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನಕ್ಕೆ ಕದ್ರಿ ಪಾರ್ಕ್ ಬಳಿ ಪ್ರವೇಶ ದ್ವಾರ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ದ್ವಾರ ಉದ್ಘಾಟಿಸಿದ ಕದ್ರಿ ಮಂಜುನಾಥ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ ಹಾಗೂ ಎ.ಜೆ ಆಸ್ಪತ್ರೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ| ಎ.ಜೆ. ಶೆಟ್ಟಿ ಅವರು ಶುಭ ಹಾರೈಸಿದರು. ಲಯನ್ಸ್ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ್ ಶೆಣೈ, ಪ್ರಾಂತ್ಯಾಧ್ಯಕ್ಷ ಚರಣ್ ಆಳ್ವ ಚಿಪ್ಪಾರು ಗುತ್ತು, ಎರಡನೇ ಉಪ ಜಿಲ್ಲಾ ಗವರ್ನರ್ ಗೋವರ್ಧನ್ ಶೆಟ್ಟಿ, ಪ್ರಾಂತ್ಯ ಸಮ್ಮೇಳನ ಸಮಿತಿ ಅಧ್ಯಕ್ಷ ಲೋಕೇಶ್ ಉಳ್ಳಾಲ್, ಕಾರ್ಯದರ್ಶಿ ಮನೋಜ್ ಶೆಟ್ಟಿ, ಖಜಾಂಚಿ ಕುಸುಮ ಯು. ರಾವ್, ರೀಜನ್ -1 ರ ವಲಯಾಧ್ಯಕ್ಷ ನರೇಶ್ ಶೆಟ್ಟಿ, ರೀಜನ್ -2 ರ ವಲಯಾಧ್ಯಕ್ಷ ಸುನಿಲ್ ಕುಮಾರ್, ಲಯನ್ಸ್ ಕ್ಲಬ್ ಅಶೋಕನಗರ ಇದರ ಅಧ್ಯಕ್ಷ ಪ್ರಶಾಂತ್ ಶೆಟ್ಟಿ, ಕಾರ್ಯದರ್ಶಿ ಬ್ರಿಜೇಶ್ ಶೆಟ್ಟಿ, ಖಜಾಂಚಿ ನಿಖಿಲ್…
ಗೋರೆಗಾಂವ್ ಕರ್ನಾಟಕ ಸಂಘ ಇದರ 67 ನೇಯ ನಾಡಹಬ್ಬ ಸಮಾರಂಭ ಹಾಗೂ ವಿಚಾರಗೋಷ್ಠಿ ಸಮಾರಂಭವು ಮಾರ್ಚ್ 1 ರಂದು ಬೆಳಿಗ್ಗೆ ಮಲಾಡ್ ಪಶ್ಚಿಮ ಸುಂದರ ನಗರದ ಹಿಂದಿರುವ ಡಿ.ಜಿ ಕೇತನ್ ಇಂಟರ್ನ್ಯಾಷನಲ್ ಸಭಾಗೃಹದಲ್ಲಿ ಜರಗಿತು. ಕಾರ್ಯಕ್ರಮದ ವಿಚಾರಗೋಷ್ಠಿಯ ಉದ್ಘಾಟನಾ ಸಮಾರಂಭವನ್ನು ಸಮಾಜಸೇವಕ ಸತೀಶ್ ಶೆಟ್ಟಿ ಕೊಟ್ರಪಾಡಿ ಉದ್ಘಾಟಿಸಿ ಶುಭ ಹಾರೈಸುತ್ತಾ, ಗೋರೆಗಾಂವ್ ಕರ್ನಾಟಕ ಸಂಘದ ನಮ್ಮ ನಾಡಿನ ಭಾಷೆ ಮಾತ್ರವಲ್ಲದೆ ಧರ್ಮ, ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯದಲ್ಲಿ ನಿರತವಾಗಿದ್ದು ಈ ಸಂಘಕ್ಕೆ ನಾವೆಲ್ಲರೂ ಪ್ರೋತ್ಸಾಹಿಸಬೇಕಾಗಿದೆ. ಕನ್ನಡಪರ ಕಾರ್ಯಕ್ರಮಗಳನ್ನು ಆಗಾಗ ನಡೆಸುತ್ತಾ, ತುಳು ಕನ್ನಡಿಗರನ್ನು ಒಂದೆಡೆ ಸೇರಿಸುತ್ತಾ ಬಂದಿರುವ ಗೋರೆಗಾಂವ್ ಕರ್ನಾಟಕ ಸಂಘವು ಇನ್ನೂ ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿ ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಡಾ| ದಿವಾಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಕನ್ನಡದ ಕಾರ್ಯಕ್ರಮಗಳಲ್ಲಿ ಬಾಗವಹಿಸಲು ನನಗೆ ಸಂತೋಷವಾಗುತ್ತಿದೆ. ಕನ್ನಡಿಗರಾದ ನಾವು ಕನ್ನಡವನ್ನು ಉಳಿಸಿ ಬೆಳೆಸುವಲ್ಲಿ ಕಾರ್ಯನಿರತರಾಗಬೇಕು. ಈ ನಿಟ್ಟಿನಲ್ಲಿ ಗೋರೆಗಾಂವ್ ಕರ್ನಾಟಕ ಸಂಘಕ್ಕೆ ಅಭಿನಂದನೆ…
ಹಿಂದೂಗಳು ಜಾತಿಯ ಹೆಸರಿನಲ್ಲಿ ವಿಂಗಡನೆ ಆಗದೇ ಹಿಂದೂಗಳೆಂದು ಒಟ್ಟಾಗಬೇಕಾಗಿದೆ. ಹಿಂದೂ ಮಕ್ಕಳಿಗೆ ಧಾರ್ಮಿಕ, ಸಂಸ್ಕಾರಯುತ ಶಿಕ್ಷಣ ನೀಡುವ ಅಗತ್ಯವಿದೆ ಎಂದು ಉದ್ಯಮಿ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಹೇಳಿದರು. ಅವರು ಬಜಗೋಳಿಯ ಶ್ರೀ ಗಣಪತಿ ಸಭಾಭವನದಲ್ಲಿ ಹಿಂದೂ ಜನ ಜಾಗೃತಿ ಸಮಿತಿ ವತಿಯಿಂದ ನಡೆದ “ಹಿಂದೂ ರಾಷ್ಟ್ರ ಜಾಗೃತಿ ಸಂವಾದ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಯುವ ಪೀಳಿಗೆಯಲ್ಲಿ ರಾಷ್ಟ್ರೀಯತೆ ಮತ್ತು ಧಾರ್ಮಿಕತೆಯನ್ನು ಹೆಚ್ಚಿಸುವುದು ಅವಶ್ಯವಾಗಿದೆ. ಈ ದಿಸೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ಲಾಘನೀಯ ಪ್ರಯತ್ನ ಎಂದರು. ಸನಾತನ ಸಂಸ್ಥೆಯ ಸೌ. ಅಶ್ವಿನಿ ನಾಯಕ್ ಮಾತನಾಡಿ, “ಯತೋ ಧರ್ಮಸ್ತತೋ ಜಯ” ಎಲ್ಲಿ ಧರ್ಮವಿರುತ್ತದೆಯೋ ಅಲ್ಲಿ ಜಯವಿರುತ್ತದೆ. ಕೇವಲ ಜನ್ಮತಃ ಹಿಂದೂ ಎಂದು ಕರೆಸಿಕೊಳ್ಳುವುದರಲ್ಲಿ ಸಾರ್ಥಕತೆಯಿಲ್ಲ. ನಮ್ಮ ಕರ್ಮ ಮತ್ತು ಆಚರಣೆಗಳಲ್ಲಿ ಹಿಂದುತ್ವ ಪ್ರತಿಫಲಿಸಬೇಕು ಎಂದರು. ಇಂದು ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯಿಂದಾಗಿ ನಾವು ನಮ್ಮ ಭವ್ಯ ಪರಂಪರೆಯನ್ನೇ ಮರೆಯುತ್ತಿದ್ದೇವೆ ನಮ್ಮ ಪ್ರತಿಯೊಂದು ಹಬ್ಬ ಸಂಪ್ರದಾಯ ಮತ್ತು ಉತ್ಸವಗಳ ಹಿಂದೆ ವೈಜ್ಞಾನಿಕ ಧರ್ಮಶಾಸ್ತ್ರ ಅಡಗಿದೆ. ಈ…















