Author: admin

ನಮಗೆ ಜೀವನದಲ್ಲಿ ವಿದ್ಯೆ, ಬುದ್ದಿ, ಸಂಸ್ಕಾರ, ಸಂಸ್ಕ್ರತಿಯನ್ನು ತಿಳಿ ಹೇಳಿ ಸುಸಂಸ್ಕ್ರತರನ್ನಾಗಿ ಮಾಡಿದ ಮಾತಾ ಪಿತರ ಸೇವೆ ಮಾಡುವುದು ಪ್ರತಿಯೊಬ್ಬನ ಕರ್ತವ್ಯ. ಹಾಗೆಯೇ ಸಮಾಜದಲ್ಲಿ ಬೆಳೆದು ನೆಲೆ ನಿಂತು ಗಣ್ಯ ವ್ಯಕ್ತಿಯಾಗಿ ರೂಪಿಸುವಲ್ಲಿ ಸಹಾಯ ಮಾಡಿದ ವ್ಯಕ್ತಿ, ಸಂಘ ಅಥವಾ ಸಮಾಜದ ಋಣವನ್ನು ಸಂದಾಯ ಮಾಡುವುದು ಕೂಡಾ ನಮ್ಮ ಧರ್ಮ ಎಂದು ಅರಿಯಬೇಕು. ನಾವು ನೀಡುವ ಯಾವುದೇ ದಾನ, ಧರ್ಮ, ಸೇವೆ ಯಾವುದೇ ಇರಲಿ ಅದು ನಮ್ಮ ತಂದೆ ತಾಯಿಯವರ ಆಶೀರ್ವಾದ ಮತ್ತು ದೈವ ದೇವರ ಕೃಪೆಯಿಂದ ಸಾಧ್ಯವಾಗಿದೆ. ನಾವು ಮಾಡಿದ ಸೇವೆಯ ಫಲ ನಮ್ಮ ಮಕ್ಕಳಿಗೆ ಸಿಗಬಹುದು. ಬಂಟ ಸಮಾಜಕ್ಕೆ ಸಂಘದ ಮೂಲಕ ಮಾನವೀಯತೆಯ ಸೇವೆ ಸಿಗಲಿ. ತಾವುಗಳು ಸಂಘದ ಮೂಲಕ ಹಾಕಿದ ಮೂರು ಯೋಜನೆಗಳು ಇಂದಿನ ದಿನಕ್ಕೆ ನಮ್ಮ ಸಮಾಜಕ್ಕೆ ಖಂಡಿತವಾಗಿ ಬೇಕಾಗಿದೆ. ದೈವ ದೇವರ ಆಶೀರ್ವಾದ ಹಿಡಿದುಕೊಂಡು ಬಂದಿದ್ದೇವೆ. ಇಲ್ಲಿ ನೆಲೆ ನಿಂತು ಬೆಳೆದಿದ್ದೇವೆ. ಬಂಟ ಸಮಾಜಕ್ಕಾಗಿ ನಮ್ಮ ಸಂಸ್ಕ್ರತಿಯನ್ನು ಬೆಳೆಸಬೇಕು. ಯಾವುದೇ ದ್ವೇಷ ಬೇದ ಭಾವ…

Read More

ತ್ರಿರಂಗ ಸಂಗಮ ಮುಂಬಯಿ ಇದರ ರೂವಾರಿಗಳಾದ ಕರ್ನೂರು ಮೋಹನ್ ರೈ, ಅಶೋಕ್ ಪಕ್ಕಳ ಮತ್ತು ನವೀನ್ ಶೆಟ್ಟಿ ಇನ್ನಬಾಳಿಕೆ ಈ ತ್ರಿಮೂರ್ತಿಗಳು ಲಕ್ಷ್ಮೀ ಪುತ್ರರಲ್ಲದಿದ್ದರೂ ಸರಸ್ವತಿ ಪುತ್ರರು ಎನ್ನುವುದರಲ್ಲಿ ಯಾವ ಸಂದೇಹವೂ ಇಲ್ಲ. ಇದಕ್ಕೆ ಈ ಮೂವರಲ್ಲಿರುವ ವಿಭಿನ್ನ ರೀತಿಯ ಬಹುಮುಖ ಪ್ರತಿಭೆಗಳೇ ಸಾಕ್ಷಿ. ಬಂಟರ ಸಂಘದ ಎಲ್ಲಾ ಕಾರ್ಯಕ್ರಮಗಳ ಯಶಸ್ವಿಯ ಹಿಂದೆ ಈ ಮೂವರ ಯೋಗದಾನವೂ ಆವಿಸ್ಮರಣೀಯ ಎನ್ನುವಂತಿದೆ. ಅವರ ಸಮಾಜಪರ ಸೇವಾಕಾರ್ಯ ಅಪಾರ. ಇಂದು ಈ ಸಂಸ್ಥೆಯ ಮೂರನೇ ವರ್ಷದ ಈ ವಾರ್ಷಿಕೋತ್ಸವವು ಇಷ್ಟೊಂದು ಅದ್ದೂರಿಯೊಂದಿಗೆ ಜನಸಾಗರದ ಮಧ್ಯೆ ಜರಗಿದೆ ಎನ್ನುವಂತಿದ್ದರೆ ಅದಕ್ಕೆ ಈ ಮೂವರ ಸೇವಾಕಾರ್ಯವೇ ನಿದರ್ಶನವಾಗಿದೆ. ಕೇವಲ ಮಾತು ಮುಖ್ಯವಲ್ಲ. ನಾವು ಮಾಡುವ ಕೆಲಸಕ್ಕೆ ಮಾತನಾಡಬೇಕು ಎನ್ನುವುದನ್ನು ಮತ್ತು ಹಣ ಸಂಪಾದನೆಗಿಂತ ಜನರ ಮನಸ್ಸು ಗೆಲ್ಲುವುದು ಮುಖ್ಯ. ಇದುವೇ ದೊಡ್ಡ ಸಾಧನೆ ಎಂಬುದನ್ನು ಕಾರ್ಯಕ್ರಮದ ಮೂಲಕ ತೋರಿಸಿ ಕೊಟ್ಟ ಹಿರಿಮೆ ತ್ರಿರಂಗ ಸಂಗಮದ ರೂವಾರಿಗಳದ್ದಾಗಿದೆ ಎಂದು ಬಂಟರ ಸಂಘ ಮುಂಬೈ ಇದರ ಅಧ್ಯಕ್ಷ ಪ್ರವೀಣ್ ಭೋಜ…

Read More

ಮೂಡುಬಿದಿರೆ: ಮುಸ್ಲಿಂ ಭಾಂದವ್ಯ ವೇದಿಕೆ ಕರ್ನಾಟಕದ ವತಿಯಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವರಿಗೆ ಸೌಹಾರ್ದ ಸಿರಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಯಕ್ಷಗಾನ ಅರ್ಥದಾರಿ ಜಬ್ಬಾರ್ ಸಮೊ ಸಂಪಾಜೆ ಮಾತನಾಡಿ, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮೂಲಕ ಆಧುನಿಕ ಕಾಲಕ್ಕೆ ಅಗತ್ಯವಿರುವ ಶಿಕ್ಷಣ ವ್ಯವಸ್ಥೆ, ನೂತನ ಪ್ರಯೋಗಗಳನ್ನು ಹಳ್ಳಿಗಳಿಗೂ ತಲುಪಿಸುವ ಕಾರ್ಯವಾಗುತ್ತಿದೆ. ಅಲ್ಲದೇ ಮೂಡುಬಿದಿರೆಯ ಸಂಸ್ಕೃತಿಯ ಪರಂಪರೆಯನ್ನು ಮುಂದುವರಿಸಲು ಮೋಹನ್ ಆಳ್ವರು ಸೌಹಾರ್ದಯುತವಾಗಿ ಶ್ರಮಿಸುತ್ತಿದ್ದಾರೆ. ಇವರು ನಾಡಿನ ಅಸ್ಮಿತೆಯನ್ನು ಮೈಗೂಡಿಸಿಕೊಂಡು ವಿಶ್ವವ್ಯಾಪಕವಾಗಿ ಅಂಗೀಕೃತ ಹೊಂದಿರುವ ಓರ್ವ ಮಹಾನ್ ಸಾಧಕ ಎಂದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಎಂ. ಮೋಹನ್ ಆಳ್ವ, ಮನಸ್ಸು ಹಾಗೂ ಜೀವನ ಪದ್ಧತಿಯನ್ನು ಉತ್ತಮಗೊಳಿಸುವ ಮೂಲಕ ಸೌಹಾರ್ದ ಜೀವನ ನಡೆಸಲು ಸಾಧ್ಯ. ಬದುಕಿನ ಪ್ರತಿ ಹಂತದಲ್ಲೂ ಮೌಲ್ಯಯುತವಾಗಿರುವುದು ಬಹಳ ಅಗತ್ಯ. ತನ್ನ 73 ವರ್ಷಗಳ ಬದುಕಿನ ರೀತಿಗೆ ಸೌಹಾರ್ದ ಸಿರಿ ಪ್ರಶಸ್ತಿ…

Read More

ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಹೊರೆಕಾಣಿಕೆ ಸಂಗ್ರಹಣಾ ಕಚೇರಿಯ ಉದ್ಘಾಟನೆ ನೆರವೇರಿತು. ಶರವು ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿಗಳು ಉದ್ಘಾಟನೆ ನೆರವೇರಿಸಿ, ದೇವತಾ ಕಾರ್ಯದಲ್ಲಿ ಎಲ್ಲರೂ ಭಾಗವಹಿಸಿ ಮಾರಿಯಮ್ಮನ ಕೃಪೆಗೆ ಪಾತ್ರರಾಗೋಣ. ಯಾವುದೇ ಕಾರ್ಯ ಆರಂಭ ಮಾಡುವಾಗ ಗಣಪತಿಯ ಸ್ಮರಣೆ ಅಗತ್ಯ. ಹೀಗಾಗಿ ಶರವು ದೇವಸ್ಥಾನದಲ್ಲಿ ಗಣಪತಿಯನ್ನು ಸ್ಮರಿಸಿ ಕಾಪು ಕ್ಷೇತ್ರಕ್ಕೆ ದಕ್ಷಿಣ ವಾಹಿನಿಯ ಹೊರೆಕಾಣಿಕೆ ಕಚೇರಿ ಶರವು ಕ್ಷೇತ್ರದಲ್ಲಿ ಉದ್ಘಾಟನೆಗೊಂಡು ಹೊರೆ ಕಾಣಿಕೆಗೆ ಚಾಲನೆ ನೀಡಲಾಗಿದೆ. ಫೆ. 25 ರಿಂದ ಮಾರ್ಚ್ 5 ರ ವರೆಗೆ ಕಾಪುವಿನ ಅಮ್ಮನ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ. ಈ ಪುಣ್ಯ ಕಾರ್ಯದಲ್ಲಿ ಎಲ್ಲರೂ ಭಾಗವಹಿಸೋಣ ಎಂದರು. ಬಳಿಕ ಮಾತನಾಡಿದ ಹಸಿರುವಾಣಿ ಹೊರೆ ಕಾಣಿಕೆ ಸಮಿತಿಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿಯವರು ಕಾಪುವಿನ ಅಮ್ಮನ ದೇವಾಲಯ ದಕ್ಷಿಣ ಭಾರತದಲ್ಲಿ ಅತೀ ಸುಂದರವಾಗಿ ಧಾರ್ಮಿಕ ಕ್ಷೇತ್ರಕ್ಕೆ ಮೆರುಗು ನೀಡುವ ವಾಸ್ತುವಿಗೆ ಅನುಗುಣವಾಗಿ ದೇವಸ್ಥಾನದ ಕಾಮಗಾರಿ ನಡೆಯುತ್ತಿದ್ದು ಕವಚ,…

Read More

ತುಳು ರಂಗಭೂಮಿಯಲ್ಲೇ ಹೊಸ ದಾಖಲೆ ಬರೆದಿರುವ “ಶಿವದೂತೆ ಗುಳಿಗೆ”ಯ ರೂವಾರಿ ವಿಜಯಕುಮಾರ್‌ ಕೊಡಿಯಾಲ್‌ಬೈಲ್‌ ಅವರು ಈಗ ಮತ್ತೊಂದು ಹೊಸ ಚಾರಿತ್ರಿಕ ನಾಟಕವನ್ನು ಪ್ರೇಕ್ಷಕರ ಮುಂದಿಡಲು ಮುಂದಾಗಿದ್ದಾರೆ. ಭಾರೀ ನಿರೀಕ್ಷೆ ಮೂಡಿಸಿರುವ ಈ ನಾಟಕವೇ “ಶಿವಾಜಿ”. ಈ ನಾಟಕವು ಮಾರ್ಚ್ 6ರಂದು ಕಟೀಲಿನಲ್ಲಿ ಮೊದಲ ಪ್ರದರ್ಶನ ಕಾಣಲಿದ್ದು, ಮಾರ್ಚ್‌ 13ರಂದು ಮಂಗಳೂರಿನ ಪುರಭವನದಲ್ಲಿ ಪ್ರದರ್ಶನ ನಡೆಯಲಿದೆ. ಆ ಮೂಲಕ ನಿರೀಕ್ಷೆ ಯಾವ ಮಟ್ಟಕ್ಕೆ ಇದೆ ಎಂಬುದು ಸ್ಪಷ್ಟವಾಗಲಿದೆ. ಮೊದಲ ಪ್ರದರ್ಶನ ಆಗುವ ಮೊದಲೇ ಈ ನಾಟಕದ 69 ಪ್ರದರ್ಶನಗಳು ಈಗಾಗಲೇ ಬುಕ್ಕಿಂಗ್‌ ಆಗಿದೆ. ಇದು ಆ ನಾಟಕ ಹಾಗೂ ವಿಜಯಕುಮಾರ್‌ ಕೊಡಿಯಾಲ್‌ಬೈಲ್‌ ಅವರ ಮೇಲೆ ತುಳುನಾಡಿಗರು ಇರಿಸಿದ ವಿಶ್ವಾಸಕ್ಕೆ ಸಾಕ್ಷಿಯಾಗಿದೆ.ಶಿವಾಜಿ ನಾಟಕಕ್ಕೆ ಮಹಾರಾಷ್ಟ್ರದಲ್ಲೇ ರಂಗವಿನ್ಯಾಸಕ್ಕೆ ಮುನ್ನುಡಿ ಬರೆಯಲಾಗಿದೆ. ಶಿವದೂತೆ ಗುಳಿಗನಿಕ್ಕಿಂತಲೂ ಅದ್ದೂರಿ ರಂಗವಿನ್ಯಾಸ ಈ ನಾಟಕದಲ್ಲಿ ಇರಲಿದ್ದು, ಇದಕ್ಕೆ ಸಾಕಷ್ಟು ಪೂರ್ವ ತಯಾರಿಯನ್ನೂ ಕೊಡಿಯಾಲ್‌ಬೈಲ್‌ ಅವರ ನೇತೃತ್ವದಲ್ಲಿ ಮಾಡಲಾಗಿದೆ. ಶಶಿರಾಜ್‌ ಕಾವೂರು ಅವರ ‘ಶಿವಾಜಿ’ ಕಥೆಯನ್ನು ಕೊಡಿಯಾಲ್‌ಬೈಲ್‌ ರಂಗಕ್ಕೆ ತರುತ್ತಿದ್ದು, ಎಷ್ಟು ಅದ್ದೂರಿತನ…

Read More

ಕಾರ್ಕಳ: ತಂದೆ-ತಾಯಿ-ಗುರುಗಳಿಗೆ ವಂದಿಸಿ ಪಡೆದ ವಿದ್ಯೆಯು ವಿದ್ಯಾರ್ಥಿಯ ಸಾಧನೆಗೆ ಕಾರಣವಾಗುತ್ತದೆ. ಸಂಕಲ್ಪ ಶುದ್ಧದಿಂದ ಇಟ್ಟಹೆಜ್ಜೆಯು ಯಶಸ್ಸನ್ನೇ ತಂದುಕೊಡುತ್ತದೆ. ಯಶಸ್ವಿ ಬದುಕಿನ ಸಾರ್ಥಕತೆ ಪೋಷಕರದಾಗುತ್ತದೆ ಎಂದು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಹೇಳಿದರು. ಅವರು ರಾಷ್ಟ್ರೀಯ ಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕೆ ಎನ್.ಟಿ.ಎ ನಡೆಸಿದ ಪ್ರಥಮ ಹಂತದ ಜೆ.ಇ.ಇ ಮೈನ್ ಫಲಿತಾಂಶದಲ್ಲಿ 97ಕ್ಕೂ ಅಧಿಕ ಪರ್ಸಂಟೈಲ್ ಗಳಿಸಿದ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 47 ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು. ಸಾಧಕರಿಗೆ ಸನ್ಮಾನ ಹಾಗೂ ನಗದು ಪುರಸ್ಕಾರ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ವತಿಯಿಂದ 99.6ಕ್ಕೂ ಅಧಿಕ ಪರ್ಸಂಟೈಲ್ ಗಳಿಸಿದ ಸಾಧಕ ವಿದ್ಯಾರ್ಥಿಗಳಾದ ಧನುಶ್ ನಾಯಕ್, ತರುಣ್ ಎ. ಸುರಾನ, ಚಿಂತನ್ ಜೆ. ಎಂ ಮತ್ತು ಆಕಾಶ್ ಎಚ್ ಪ್ರಭು ಇವರಿಗೆ ತಲಾ 50 ಸಾವಿರ ರೂಪಾಯಿಯನ್ನು, 99ಕ್ಕೂ ಅಧಿಕ ಪರ್ಸಂಟೈಲ್ ಗಳಿಸಿದ ಹೃತ್ವಿಕ್ ಶೆಟ್ಟಿ, ಮನೋಜ್ ಕಾಮತ್, ವೇದಾಂತ್ ಶೆಟ್ಟಿ ಮತ್ತು ಸತೀಶ್ ಎಸ್.ಕೆ. ಇವರಿಗೆ ತಲಾ 20 ಸಾವಿರ…

Read More

ಬಂಟ್ವಾಳ ತಾಲೂಕಿನ ಸಜೀಪ ಮಾಗಣೆಯ ಪ್ರಧಾನ ದೇವಾಲಯ ಪಾಣೆಮಂಗಳೂರಿಗೆ ಸಮೀಪದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುಗಾಂಭ ಕ್ಷೇತ್ರದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾಂತಾಡಿಗುತ್ತು ಪ್ರಭಾಕರ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಉಳಿದಂತೆ ಸಮಿತಿ ಸದಸ್ಯರಾಗಿ ಪ್ರಧಾನ ಅರ್ಚಕರಾದ ವೇ.ಮೂ ಮಹೇಶ್ ಭಟ್, ದೇವಿಪ್ರಸಾದ್ ಪೂಂಜಾ ಬರಂಗರೆ, ಸುಧೀರ್ ಕುಮಾರ್, ಕೆ.ಮೋಹನದಾಸ್ ಪೂಜಾರಿ, ನವೀನ್ ಕುಮಾರ್ ಪಣೋಲಿಬೈಲ್, ಅಣ್ಣು ನಾಯ್ಕ್ ನಗ್ರಿ, ಸುಜಾತ ಗಣೇಶ್ ಶೆಟ್ಟಿ, ಬೇಬಿ ಯೋಗೀಶ್ ಪೂಜಾರಿ ಅವರು ನೇಮಕಗೊಂಡಿದ್ದಾರೆ. ನೂತನ ವ್ಯವಸ್ಥಾಪನಾ ಸಮಿತಿ ದೇವಳದಲ್ಲಿ ಅಧಿಕಾರ ಸ್ವೀಕರಿಸಿದೆ. ಈ ಸಂದರ್ಭ ದೇವಳದ ಆಡಳಿತಾಧಿಕಾರಿ ತಾರನಾಥ ಸಾಲಿಯಾನ್ ಪಿ., ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಎ.ಸಿ.ಭಂಡಾರಿ, ಸಜೀಪ ಮುನ್ನೂರು ಮೂರ್ತೆದಾರರ ಸೇ.ಸ. ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಬೊಳ್ಳಾಯಿ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.

Read More

ಮಾನವ ಜನ್ಮ ದೊಡ್ಡದು, ಅದನ್ನು ಹಾಳು ಮಾಡಬೇಡಿ, ಹುಚ್ಚಪ್ಪಗಳಿರಾ ಎಂಬ ಪದ ಮನುಜನ ಬದುಕಿನ ಸಾರ್ಥಕ್ಯಕ್ಕೆ ಕನ್ನಡಿಯಾಗಿದೆಯೋ ಅದೇ ರೀತಿ ಸಮಾಜದಲ್ಲಿ ಶಾಂತಿ ಸೌಹಾರ್ದತೆಯಿಂದ ಮಾನವನಾಗಿ ಬದುಕಿ ನಾವು ಸಮಾಜಕ್ಕೆ ಮಾದರಿಯಾಬೇಕು. ಜೀವನದಲ್ಲಿ ತೃಪ್ತಿ ಎಂಬುದು ಇದ್ದರೆ ದುರಾಸೆ ಬರುವುದಿಲ್ಲ ಹಾಗೂ ಜೀವನ ಸಮಾಧಾನಕರವಾಗಿರುತ್ತದೆ. ಶಾಂತಿ ಸೌಹಾರ್ದತೆ ಸಮಾಜದಲ್ಲಿ ನೆಲೆಯಾದರೆ ದೇಶ ಸದೃಡವಾಗಲು ಸಾದ್ಯ. ದೇಶ ಕಟ್ಟುವ ಕೆಲಸದಲ್ಲಿ ಪ್ರತಿಯೊಬ್ಬರ ಪಾಲು ಮಹತ್ವದ್ದು. ಆಕಾಂಕ್ಷೆ ಎಲ್ಲರಲ್ಲಿಯೂ ಇರಬೇಕು. ಆದರೆ ನಿಯತ್ತು ಮತ್ತು ಕಾನೂನು ಚೌಕಟ್ಟಿನಲ್ಲಿರಬೇಕು. ಮನುಷ್ಯ ಜೀವನದಲ್ಲಿ ವೈಯುಕ್ತಿಕವಾಗಿ ಮತ್ತು ಸಮಾಜದಲ್ಲಿ ನಮ್ಮ ಭಾವನೆಗಳು ಬದಲಾವಣೆ ಆಗುವುದು ಸಹಜ. ಆದರೆ ನಿಯತ್ತಿಗೆ ಬೆಲೆ ತರುವಂತಹ ಬದಲಾವಣೆ ಆಗಬೇಕು. ಅಧಿಕಾರದಲ್ಲಿರುವಾಗ ಅನ್ಯಾಯ, ಮೋಸ, ವಂಚನೆ, ಭ್ರಷ್ಟಾಚಾರ ಮಾಡುವುದು ಮಾನವೀಯತೆಯಲ್ಲ. ಅದು ದೇಶ ದ್ರೋಹ. ಕೇವಲ ವ್ಯಕ್ತಿಯಿಂದ ಮಾತ್ರ ತಪ್ಪುಗಳಾವುದು ಅಲ್ಲ. ಸಮಾಜದಿಂದ ಕೂಡಾ ತಪ್ಪುಗಳಾಗುತ್ತವೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಮಾನವೀಯತೆಯ ಸೇವೆಯಿಂದ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸಲು ಸಾದ್ಯ ಎಂದು ಸುಪ್ರೀಂಕೋರ್ಟ್ ನ…

Read More

ಸಮಯ, ಸಂದರ್ಭ ಮತ್ತು ಧರ್ಮ ಕರ್ಮ ಅವನಿಂದ ಕೆಲವು ತಪ್ಪು ಕೆಲಸವನ್ನ ಮಾಡಿಸಿದವು. ಅದರಿಂದ ಅವನು ಕೆಟ್ಟವನು ಎನ್ನುವ ಹಣೆಪಟ್ಟಿ ಹೊತ್ತು ಕೊಂಡಿದ್ದಾನೆ. ಅವತಾರ ಪುರುಷರಾದಿಯಾಗಿ ಯಾವ ವ್ಯಕ್ತಿಯೂ ಪೂರ್ತಿ ಕೆಟ್ಟವನೂ ಅಲ್ಲ ಪೂರ್ತಿ ಒಳ್ಳೆಯವನೂ ಅಲ್ಲ. ಅವರವರ ಕರ್ಮಾನುಸಾರವಾಗಿ ಧನಾತ್ಮಕ ಮತ್ತು ಋಣಾತ್ಮಕ ಗುಣಗಳನ್ನು ಎಲ್ಲರೂ ಹೊಂದಿರಲೇಬೇಕು. ಅದಕ್ಕೆ ರಾಮ ರಾವಣರೂ ಹೊರತಲ್ಲ. ರಾವಣನ ಒಳ್ಳೆಯ ಗುಣಗಳನ್ನು ಸ್ವತಃ ರಾಮನೇ ಒಪ್ಪಿಕೊಂಡು ಪ್ರಶಂಸಿಸಿದ ನಿದರ್ಶನ ರಾಮಾಯಣ ಮಹಾ ಗ್ರಂಥದಲ್ಲಿ ಉಲ್ಲೇಖವಾಗಿದೆ. ರಾವಣನ ಅಂತಹ ಕೆಲವು ಒಳ್ಳೆಯತನವನ್ನ ನೋಡೋಣ.ರಾವಣನೊಬ್ಬ ಮಹಾನ್ ವಿದ್ವಾಂಸ, ಕವಿ, ಸಂಗೀತಗಾರ, ವೀಣಾ ವಾದಕ ಮತ್ತು ಜ್ಯೋತಿಷ್ಯ ಶಾಸ್ತ್ರ ಹಾಗೂ ವೇದಗಳಲ್ಲಿ ಪಾರಂಗತನಾಗಿದ್ದನು. ಶಿವನಿಗೆ ಅತ್ಯಂತ ಪ್ರಿಯವಾದ ತಾಂಡವ ನೃತ್ಯದ ಸಂಯೋಜನೆ ಮಾಡಿದ್ದು ರಾವಣನೇ ಎಂದು ಹೇಳುತ್ತಾರೆ. ರಾವಣನು ಮಹಾನ್ ಆಡಳಿತಗಾರ ಮತ್ತು ತನ್ನ ಪ್ರಜೆಗಳ ಬಗ್ಗೆ ಅತಿಯಾದ ಕಾಳಜಿ ಹೊಂದಿದ್ದ. ಆತನ ಆಡಳಿತವನ್ನು ಲಂಕಾದ ಸುವರ್ಣಯುಗ ಎಂದು ಪರಿಗಣಿಸಲಾಗಿತ್ತು. ಸಾಯುತ್ತಿರುವ ರಾವಣನು ಲಕ್ಷ್ಮಣನಿಗೆ ಜೀವನದ ಸತ್ಯ, ಸಾರ…

Read More

ಸರ್ಕಾರಿ ಶಾಲೆಗಳನ್ನು ಉಳಿಸುವ ಮತ್ತು ಬೆಳೆಸುವ ನಿಟ್ಟಿನಲ್ಲಿ ಸ್ವಯಂಸ್ಪೂರ್ತಿ ಫೌಂಡೇಶನ್ ವತಿಯಿಂದ ಕಂಪ್ಯೂಟರ್ ತರಬೇತಿ ಕೇಂದ್ರ ಮತ್ತು ಕ್ರೀಡಾ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು. ಸ್ವಯಂಸ್ಪೂರ್ತಿ ಫೌಂಡೇಶನ್ ವತಿಯಿಂದ ಸಮೃದ್ಧ ಬೈಂದೂರು- 300 ಟ್ರೀಸ್ ಯೋಜನೆಯ ಭಾಗವಾಗಿ ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವ ಯಳಜಿತ್ ಸ.ಹಿ.ಪ್ರಾ. ಶಾಲೆಯಲ್ಲಿ ನಿರ್ಮಿಸಿರುವ ಕಂಪ್ಯೂಟರ್ ಲ್ಯಾಬ್ ಮತ್ತು ಕ್ರೀಡಾ ಸಾಮಾಗ್ರಿಗಳು, ಪುಸ್ತಕಗಳನ್ನು ಒಳಗೊಂಡ “ಸ್ವಯಂಸ್ಪೂರ್ತಿ ಕೌಶಲ್ಯ ಕೇಂದ್ರ”ವನ್ನು ಉದ್ಯಮಿಗಳು, ಬರಹಗಾರರು, ಕೊಡುಗೈ ದಾನಿಗಳು ಆದ ನಾಡೋಜ ಎಸ್ ಷಡಕ್ಷರಿಯವರು ಉದ್ಘಾಟಿಸಿದರು. ಗ್ರಂಥಾಲಯಕ್ಕೆ ಪುಸ್ತಕಗಳನ್ನು, ಕ್ರೀಡಾ ಸಾಮಗ್ರಿಗಳನ್ನು ಹಸ್ತಾಂತರಿಸಿದರು. ಅಂಗನವಾಡಿ ಮಕ್ಕಳಿಗೆ ಆಟಿಕೆಗಳನ್ನು, ಪುಸ್ತಕಗಳನ್ನು ವಿತರಿಸಿದರು ಹಾಗೂ ಸ್ವಯಂಸ್ಪೂರ್ತಿ ಫೌಂಡೇಶನ್ ವತಿಯಿಂದ ಆಯೋಜಿಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಹತ್ತಾರು ಗಣ್ಯರ ಉಪಸ್ಥಿತಿ ಹಾಗೂ ಸಾವಿರಾರು ಗ್ರಾಮಸ್ಥರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು. ಸ್ವಯಂ ಸ್ಫೂರ್ತಿ ಫೌಂಡೇಶನ್ ಮುಖ್ಯಸ್ಥ ನಾಗರಾಜ್ ಶೆಟ್ಟಿ ಜಡ್ಕಲ್ ಉಪಸ್ಥಿತರಿದ್ದು, ಈ ಸಂಧರ್ಭದಲ್ಲಿ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸ್ವಯಂಸ್ಪೂರ್ತಿ ಕೌಶಲ್ಯ ಕೇಂದ್ರದ ಸದುಪಯೋಗವನ್ನು ಎಲ್ಲಾ ವಿದ್ಯಾರ್ಥಿಗಳು ಶಿಕ್ಷಕರ ಸಹಾಯದಿಂದ…

Read More