Author: admin

ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಖಂಬದಕೋಣೆ ರೈತರ ಸೇವಾ ಸಹಕಾರ ಸಂಘದ ಹಿರಿಯ ಮತ್ತು ದಕ್ಷ ಅಧ್ಯಕ್ಷ, ಕಳೆದ 28 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸುತ್ತಾ, ಸಂಘವನ್ನು ರಾಜ್ಯ ಮಟ್ಟದಲ್ಲಿ ಗುರುತಿಸಿಸುವಂತೆ ಮಾಡಿದ ಮಹಾನ್ ಸಾಧಕ ಎಸ್ ಪ್ರಕಾಶ್ಚಂದ್ರ ಶೆಟ್ಟಿಯವರಿಗೆ ಸಹಕಾರಿ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಸಹಕಾರ ಸಂಘವು ಈಗ ಸಾವಿರ ಕೋಟಿಗೂ ಮಿಕ್ಕಿ ವಾರ್ಷಿಕ ವಹಿವಾಟು ದಾಖಲಿಸುತ್ತಿರುವುದು ಅವರ ಪ್ರಗತಿಪರ ನಾಯಕತ್ವದ ಪ್ರತೀಕವಾಗಿದೆ. ಅವರ ಈ ಅಮೂಲ್ಯ ಸೇವೆ ಹಾಗೂ ಕ್ರಿಯಾತ್ಮಕ ಚಿಂತನೆಗಳನ್ನು ಗುರುತಿಸಿ ಅವಿಭಜಿತ ಕುಂದಾಪುರ ತಾಲೂಕಿನ ಕೃಷಿ ಪತ್ತಿನ ಸಹಕಾರಿ ಸಂಘಗಳ ವತಿಯಿಂದ ನಡೆಯುವ ಅಭಿನಂದನಾ ಕಾರ್ಯಕ್ರಮದಲ್ಲಿ ಕುಂದಾಪುರ ಬಂಟರ ಸಂಘದ ಆರ್.ಎನ್ ಶೆಟ್ಟಿ ಸಭಾಭವನದಲ್ಲಿ ಜುಲೈ 20 ರಂದು ಬೆಳಗ್ಗೆ 10.30 ಕ್ಕೆ 2024- 25ನೇ ಸಾಲಿನ ‘ಸಹಕಾರ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

Read More

ಹೋಟೆಲು ಉದ್ಯಮಿ, ಶ್ರೀ ಕಾವೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರಘು ಎಲ್ ಶೆಟ್ಟಿಯವರು ಪಟ್ಲ ದಶಮ ಸಂಭ್ರಮಕ್ಕೆ ಘೋಷಣೆ ಮಾಡಿರುವ 5 ಲಕ್ಷ ರೂಪಾಯಿಗಳ ಚೆಕ್ಕನ್ನು ಶ್ರೀ ಕಾವೇಶ್ವರ ದೇವರ ಸನ್ನಿಧಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ಸಂದರ್ಭದಲ್ಲಿ ಪಟ್ಲ ಫೌಂಡೇಶನ್ನಿನ ಅಧ್ಯಕ್ಷರಾದ ಪಟ್ಲ ಸತೀಶ್ ಶೆಟ್ಟಿಯವರಿಗೆ ಹಸ್ತಾಂತರಿಸಿದರು. ಈ ಸಂಧರ್ಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಸುರತ್ಕಲ್ ಘಟಕದ ಅಧ್ಯಕ್ಷ ಸುಧಾಕರ್ ಎಸ್ ಪೂಂಜಾ, ಪ್ರದೀಪ್ ಆಳ್ವ ಕದ್ರಿ ಹಾಗೂ ಪಟ್ಲ ಫೌಂಡೇಶನ್ ನ ಪದಾಧಿಕಾರಿಗಳು, ಹಿತೈಷಿಗಳು ಉಪಸ್ಥಿತರಿದ್ದರು.

Read More

ಕಳೆದ ವಾರ ನನ್ನ ಜೀವನದಲ್ಲೊಂದು ಘಟನೆ ನಡೆಯಿತು. ಬೈಕಿನಲ್ಲಿ ಶಾಲೆಗೆ ಹೋದವ ನನ್ನ ದ್ವಿಚಕ್ರ ವಾಹನವನ್ನು ಶಾಲೆಯ ಮೂಲೆಯ ಕಾರಿಡಾರಿನಲ್ಲಿ ನಿಲ್ಲಿಸುವುದು ನನ್ನ ಅಭ್ಯಾಸ. ಆವತ್ತು ನಿಲ್ಲಿಸಲು ತೆಗೆದುಕೊಂಡು ಹೋದಾಗ ಗ್ರಾನೈಟ್ ಮತ್ತು ಟೈಲ್ಸ್ ಹಾಕಿದ ನೆಲದ ಮೇಲೆ ನೀರು ನಿಂತಿದ್ದರಿಂದ ನನ್ನ ಬೈಕ್ ಕೇರೆ ಹಾವಿನಂತೆ ಅತ್ತಿತ್ತ ಉರುಳಾಡಿ ಕ್ಷಣ ಮಾತ್ರದಲ್ಲಿ ಏನು ಮಾಡಬೇಕೆಂದು ಅರಿವಾಗದೆ ನನ್ನನ್ನು ಸೇರಿ ದೊಪ್ಪನೆ ಕೆಳಗೆ ಬಿತ್ತು. ಬಿದ್ದದ್ದು ನಾನು ಕರ್ತವ್ಯ ನಿರ್ವಹಿಸುವ ಶಾಲೆಯಲ್ಲೇ. ಒಳಗಿನ ಹಾಲಿನಲ್ಲಿ ಮುಂಜಾನೆಯ ಅಸೆಂಬ್ಲಿ ನಡೆಯುತ್ತಿತ್ತು. ಶಿಕ್ಷಕರೆಲ್ಲರೂ ಓಡಿ ಬಂದ್ರು. ಮಕ್ಕಳು ಕೂಡಾ ಏನಾಯಿತೆಂದು ಕುತೂಹಲದಿಂದ ಕಿಟಕಿ ಎಡೆಗಳಿಂದ ಇಣುಕಿದರು. ಬಿದ್ದವ ಕೀ ಆಫ್ ಮಾಡಿ ಬೈಕನ್ನು ಎತ್ತಿ ನಿಲ್ಲಿಸಿದೆ. (ದೇವರ ಆಶೀರ್ವಾದ ಮತ್ತು ನಿಮ್ಮಂತ ಒಂದಿಷ್ಟು ಜನರ ಸದಾಕಾಲದ ಹೃದಯಾಂತರಾಳದ ಹಾರೈಕೆ ನನಗೂ ಬೈಕಿಗೂ ಏನು ಆಗ್ಲಿಲ್ಲ) ಇದೇ ಘಟನೆ ನನ್ನ ಜೀವನದಲ್ಲಿ ಮುಂಚೆ ಎಲ್ಲಾದರೂ ನಡೆದಿದ್ರೆ ನಾನು ಪಾಠ ಮಾಡುವ ಶಾಲೆಯಲ್ಲಿ ಮಕ್ಕಳೆದುರು ಬಿದ್ದೆ ಎಂದು…

Read More

ಬೋಂಬೆ ಬಂಟ್ಸ್ ಅಸೋಸಿಯೇಶನ್ ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಊರಿನ ಪ್ರಸಿದ್ಧ ಕಲಾವಿದರಿಂದ ಜುಲೈ 17 ರಂದು ಸ್ವಾಮಿ ನಿತ್ಯಾನಂದ ಹಾಲ್ ಸಯನ್ ಇಲ್ಲಿ “ಅಂಬಾ ಶಪಥ” ತಾಳಮದ್ದಳೆ ನಡೆಯಿತು. ಅಸೋಸಿಯೇಷನ್ ಅಧ್ಯಕ್ಷರಾದ ಅಡ್ವಕೇಟ್ ಡಿ.ಕೆ ಶೆಟ್ಟಿಯವರು ಪ್ರಾರಂಭದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿ, ವರ್ಷಪೂರ್ತಿ ಅಸೋಸಿಯೇಶನ್ ಸಾಂಸ್ಕೃತಿಕ ಸಮಿತಿಯ ಆಶ್ರಯದಲ್ಲಿ ಮನೋರಂಜನಾ ಕಾರ್ಯಕ್ರಮಗಳ ಅಂಗವಾಗಿ ನಾಟಕ, ಯಕ್ಷಗಾನ, ತಾಳಮದ್ದಲೆ ಮತ್ತಿತರ ವೈವಿಧ್ಯಮಯ ಕಾರ್ಯಕ್ರಮವು ನಡೆಯುತ್ತವೆ. ಕಲಾ ಪೋಷಕನಾಗಿರುವ ನಾನು ಕಲಾವಿದನಲ್ಲ. ನಮ್ಮ ಸಂಸ್ಥೆಯಲ್ಲಿ ಬಹಳಷ್ಟು ಒಳ್ಳೆಯ ಪ್ರತಿಭಾವಂತ ಕಲಾವಿದರಿದ್ದಾರೆ. ಅವರಿಗೂ ಮತ್ತು ಕಲಾವಿದರಿಗೆ ನಿರಂತರವಾಗಿ ಅಸೋಸಿಯೇಷನ್ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ ಎಂದು ನುಡಿದರು. ಅಸೋಸಿಯೇಷನ್ ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅದ್ಯಪಾಡಿ ಸ್ವಾಗತಿಸಿ ಅಸೋಸಿಯೇಷನ್ ಬಗ್ಗೆ ಮಾತನಾಡಿ, ಮುಂದಿನ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು. ಉದ್ಘಾಟನಾ ಸಂದರ್ಭದಲ್ಲಿ ಅಸೋಸಿಯೇಷನ್ ನ ಗೌರವ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಶೇಖರ್…

Read More

ಬಂಟ್ವಾಳ ತಾಲೂಕು ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಜಗನ್ನಾಥ ಚೌಟ ಮಾಣಿ ಬದಿಗುಡ್ಡೆ ಇವರು ಆಯ್ಕೆಯಾಗಿದ್ದಾರೆ. ಇವರು ದಕ್ಷಿಣ ಕನ್ನಡ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯರಾಗಿ ಜಿಲ್ಲೆಯ ಹಲವು ದೇವಸ್ಥಾನ ದೈವಸ್ಥಾನಗಳ ಜೀರ್ಣೋದ್ದಾರ ಸಮಿತಿಯ ಜವಾಬ್ದಾರಿಯನ್ನು ವಹಿಸಿ ಧಾರ್ಮಿಕವಾಗಿ ಸಾಮಾಜಿಕವಾಗಿ ಜನಾನುರಾಗಿಯಾಗಿದ್ದಾರೆ. ಮಾತ್ರವಲ್ಲದೆ ಪ್ರಗತಿಪರ ಕೃಷಿಕರೂ ಆಗಿದ್ದಾರೆ. ಉಪಾಧ್ಯಕ್ಷರಾಗಿ ಉದ್ಯಮಿ ಐತಪ್ಪ ಆಳ್ವ, ಕಾರ್ಯದರ್ಶಿಯಾಗಿ ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ಸದಾನಂದ ಆಳ್ವ ಕಂಪ, ಕೋಶಾಧಿಕಾರಿಯಾಗಿ ಉದ್ಯಮಿ ಲೋಕೇಶ್ ಶೆಟ್ಟಿ ಕುಳ, ಜೊತೆ ಕಾರ್ಯದರ್ಶಿಯಾಗಿ ಶಿವಪ್ರಸಾದ್ ಶೆಟ್ಟಿ ಸಜಿಪ, ಜೊತೆ ಕೋಶಾಧಿಕಾರಿಯಾಗಿ ವಿದ್ಯಾ ರೈ ಆಯ್ಕೆಯಾಗಿದ್ದಾರೆ.ಪದಾಧಿಕಾರಿಗಳ ಆಯ್ಕೆಯ ಸಭೆಯು ಬಂಟ್ವಾಳ ತಾಲೂಕು ಬಂಟರ ಭವನದ ಸಭಾಂಗಣದಲ್ಲಿ ಜರಗಿತು. ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಕಿರಣ್ ಹೆಗ್ಡೆ ಅನಂತಾಡಿ, ವಿವೇಕ್ ಶೆಟ್ಟಿ ನಗ್ರಿಗುತ್ತು, ಲೋಕನಾಥ ಶೆಟ್ಟಿ ಬಿಸಿರೋಡ್, ಶಾಂತಾರಾಮ ಶೆಟ್ಟಿ ಬೋಳಂತೂರು ನಡೆಸಿಕೊಟ್ಟರು. ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ ಮತ್ತು ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.

Read More

ಸಾಮಾಜಿಕ ಜವಾಬ್ದಾರಿಯಿಂದ ಸಮಾಜಕ್ಕೆ ಸೇವೆ ಸಲ್ಲಿಸಿದ ಕುಟುಂಬದಲ್ಲಿ ನೊಚ್ಚ ಮನೆತನ ಕೂಡ ಒಂದಾಗಿದೆ. ಇಂದಿನ ಕಾಲದಲ್ಲಿ ಸೆರಾಮಿಕ್ಸ್ ನ್ನು ಬೇರೆ ಊರಿನಿಂದ ತರಿಸಬೇಕಿತ್ತು. ಇಂದು ನಮ್ಮೂರಿನಲ್ಲಿ ಸೆರಾಮಿಕ್ಸ್ ಸಂಸ್ಥೆ ಪ್ರಾರಂಭಿಸುವ ಮೂಲಕ ನೊಚ್ಚ ಕುಟುಂಬ ಊರಿಗೆ ವಿಶೇಷ ಕೊಡುಗೆ ನೀಡಿದೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಅವರು ಪ್ರತೀಕ್ ಶೆಟ್ಟಿ ನೊಚ್ಚ ಅವರ ಮಾಲಕತ್ವದ ‘ನೊಚ್ಚ ಸೆರಾಮಿಕ್ಸ್’ (ಪ್ರತಿಷ್ಠಿತ ಓರಿಯಂಟ್ ಬೆಲ್ಸ್ ನ ಅಧಿಕೃತ ಮಾರಾಟಗಾರರು) ಇದರ ಉದ್ಘಾಟನೆಯನ್ನು ಆಳದಂಗಡಿ ಶ್ರೀ ಲಕ್ಷ್ಮಿ ಕಟ್ಟಡದಲ್ಲಿ ಜುಲೈ 14ರಂದು ನೆರವೇರಿಸಿ ಮಾತನಾಡಿದರು. ನಾವು ಉದ್ಯೋಗಿಗಳಾಗಬಾರದು. ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆಯಬೇಕು. ಪ್ರತೀಕ್ ಶೆಟ್ಟಿಯವರು ವಿವಿಧ ಉದ್ಯಮದೊಂದಿಗೆ ನೂರಾರು ಜನರಿಗೆ ಉದ್ಯೋಗ ನೀಡುವ ಮೂಲಕ ಉದ್ಯಮಿಯಾಗಿ ಬೆಳೆಯಬೇಕು ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಳದಂಗಡಿ ಸತ್ಯದೇವತಾ ದೈವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ ಅವರು ಮಾತನಾಡಿ, ಆಳದಂಗಡಿಯಲ್ಲಿ ಸೆರಾಮಿಕ್ಸ್ ಸಂಸ್ಥೆಯ ಅಗತ್ಯವಿತ್ತು. ಆ ಕೊರತೆಯನ್ನು ಪ್ರತೀಕ್ ಶೆಟ್ಟಿಯವರು ಪೂರ್ಣಗೊಳಿಸಿದರು. ದೈವ ದೇವರ…

Read More

ಬೆಂಗಳೂರು ಬಂಟರ ಸಂಘದ ಸಭಾಂಗಣದಲ್ಲಿ ಜುಲೈ 17 ರಂದು ಬೈಂದೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ ಅವರ ಹಿತೈಷಿಗಳು ಆಯೋಜಿಸಿದ್ದ ‘ಸಂಕಲ್ಪ’ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಯಡಿಯೂರಪ್ಪ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಬಿ.ವೈ ವಿಜಯೇಂದ್ರ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಸ್ವಾಭಿಮಾನದಿಂದ ಹುಟ್ಟೂರು ಬೈಂದೂರನ್ನು ಬಿಟ್ಟು ದೂರದ ಬೆಂಗಳೂರಿನಲ್ಲಿ ನೆಲೆಸಿ ಸ್ವಾಭಿಮಾನಿ ಬದುಕು ಕಟ್ಟಿಕೊಂಡಿರುವ ಬೈಂದೂರಿನ ಬೆಂಗಳೂರು ನಿವಾಸಿಗರೆಲ್ಲರೂ ಸೇರಿ ಒಬ್ಬ ಸಾಮಾನ್ಯ ಶಾಸಕರ ಪರವಾಗಿ ನಿಂತು, ಅಭಿಮಾನದಿಂದ ಕರಾವಳಿಯ ಸಂಸ್ಕೃತಿಯಾದ ಭಜನೆ ಮತ್ತು ಯಕ್ಷಗಾನದ ಕಾರ್ಯಕ್ರಮವನ್ನು ಆಯೋಜಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಕರಾವಳಿ ಭಾಗದ ಬಂಧುಗಳು ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ, ಬಾಂಧವ್ಯ ಎಂದಿಗೂ ಮರೆಯಲಾಗದು, ಅಲ್ಲದೇ ಬೈಂದೂರು ಅಭಿವೃದ್ಧಿಗೆ ಹಾಗೂ ಅಲ್ಲಿನ ಸಂಸ್ಕೃತಿ ರಕ್ಷಣೆಗೆ ಸಂಘಟಿತರಾಗಿರುವ ಎಲ್ಲರೂ ಸಹ ಸ್ವಚ್ಛ ಸುಂದರ, ಸಮೃದ್ಧ ಬೈಂದೂರನ್ನು ಕಟ್ಟುವ ನಿಟ್ಟಿನಲ್ಲಿ ಜನಪರ ಕಳಕಳಿಯುಳ್ಳ ಶಾಸಕರಾದ ಶ್ರೀ…

Read More

‘ಇಂಗು ತೆಂಗು ಇವೆರಡಿದ್ದರೆ, ಮಂಗವೂ ಅಡುಗೆ ಮಾಡಬಲ್ಲದು’ ಈ ನಾಣ್ಣುಡಿಯು ನಮ್ಮ ದೈನಂದಿನ ಅಡುಗೆ, ಅಭ್ಯಾಸ, ಹವ್ಯಾಸಗಳಲ್ಲಿ ತೆಂಗಿನ ಎಣ್ಣೆಯ ಬಳಕೆಯ ಮಹತ್ವವನ್ನು ಹೇಳುತ್ತವೆ. ಮರದಿಂದ ಕಾಯಿ ಕಿತ್ತ 2-3 ದಿನಗಳಲ್ಲಿ ಹಸಿ ತೆಂಗಿನ ಕಾಯಿಯಿಂದ ಹಾಲು ಸಂಸ್ಕರಿಸಿ, ಉತ್ಪಾದಿಸುವ ಎಣ್ಣೆಯನ್ನು ವರ್ಜಿನ್ (ತಾಜಾ)ತೆಂಗಿನ ಎಣ್ಣೆ ಎನ್ನುವರು. ವರ್ಜಿನ್ ತೆಂಗಿನ ಎಣ್ಣೆಯಲ್ಲಿ, ಆಂಟಿ ಬ್ಯಾಕ್ಟೀರಿಯಲ್ ಮತ್ತು ಆಂಟಿ ಫಂಗಲ್ ಗುಣಗಳು ಹೇರಳವಾಗಿರುವುದರಿಂದ ನಮ್ಮ ಹತ್ತಾರು ಆರೋಗ್ಯ ಸಮಸ್ಯೆಗಳಿಗೆ ಇದು ರಾಮಭಾಣವಾಗಬಲ್ಲುದು. ಖ್ಯಾತ ಹೃದಯ ರೋಗ ತಜ್ಞರೂ ಹಾಗೂ ಸಂಸದರೂ ಆದ ಡಾ. ಸಿ.ಎನ್ ಮಂಜುನಾಥರವರು ಅಭಿಪ್ರಾಯ ಪಡುವಂತೆ, ತೆಂಗಿನ ಎಣ್ಣೆಯಲ್ಲಿ ಲಾರಿಕ್ ಆಮ್ಲ ಇರುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ನಿಯಂತ್ರಣ, ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು, ಕೊಬ್ಬಿನ ಅಂಶ ಕಡಿಮೆ ಮಾಡಿ ರಕ್ತನಾಳಗಳ ಕಾರ್ಯ ನಿರ್ವಹಣೆಗೂ ನೆರವಾಗಬಲ್ಲದು. ಅಂತರರಾಷ್ಟ್ರೀಯ ಖ್ಯಾತಿಯ ಆರೋಗ್ಯ ತಜ್ಞರಾದ ಡಾ. ಬಿ.ಎಂ ಹೆಗ್ಡೆಯವರು ತೆಂಗಿನ ಎಣ್ಣೆ ಆರೋಗ್ಯಕ್ಕೆ ಬಹಳ ಉಪಯುಕ್ತ ಎಂದು ತಿಳಿಸಿರುತ್ತಾರೆ. ವರ್ಜಿನ್ ತೆಂಗಿನ ಎಣ್ಣೆಯನ್ನು…

Read More

ಬಂಟ್ವಾಳ ತಾಲೂಕಿನ ನೇರಳಕಟ್ಟೆ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಎಂ.ಆರ್.ಪಿ.ಎಲ್ ಸಂಸ್ಥೆಯ ಸಿ.ಎಸ್.ಆರ್ ಅನುದಾನ ಹಾಗೂ ಎನ್.ಎಮ್.ಪಿ.ಎ. ಸಂಸ್ಥೆಯ ಸಿ.ಎಸ್.ಆರ್. ನಿಧಿಯಿಂದ ನಿರ್ಮಾಣವಾದ ನೂತನ ತರಗತಿ ಕೊಠಡಿಗಳ ಹಸ್ತಾಂತರ ಹಾಗೂ ಉದ್ಘಾಟನಾ ಸಮಾರಂಭ ಸೋಮವಾರ ನಡೆಯಿತು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಕಿಶೋರ್ ಬಿ.ಆರ್, ಮಂಗಳೂರು ಎಂ.ಆರ್.ಪಿ.ಎಲ್ ನ ಎಚ್.ಆರ್ ಕೇಶವ ಪಿ, ಶಾಲಾ ನಾಯಕಿ ಕು| ಸಾದಿಯಾ ಅವರು ನೂತನ ಕೊಠಡಿಗಳನ್ನು ಉದ್ಘಾಟಿಸಿದರು. ಪ್ರಸಕ್ತ ಸಾಲಿನಲ್ಲಿ ನೂತನವಾಗಿ ಆರಂಭಗೊಂಡ ಎಲ್.ಕೆ.ಜಿ ಹಾಗೂ ಯು.ಕೆ.ಜಿ ತರಗತಿಗಳನ್ನು ಮಾಜಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಅವರು ಮಾತನಾಡಿ, ಎಲ್ಲಾ ಧರ್ಮೀಯರ ಜ್ಞಾನ ಕೇಂದ್ರವಾದ ವಿದ್ಯಾ ದೇಗುಲದ ಅಭಿವೃದ್ಧಿಯಲ್ಲಿ ನಾವೆಲ್ಲರೂ ಕೈಜೋಡಿಸಿದಾಗ ಆ ಶಾಲೆ ನಮ್ಮದು ಅನ್ನುವ ಮನೋಭಾವ ಮೂಡಿಬರಲು ಸಾದ್ಯ. ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.…

Read More

ಅಪ್ಪ ಅಷ್ಟು ಸುಲಭವಾಗಿ ಮಕ್ಕಳಿಗಾಗಲಿ, ಮಡದಿಗಾಗಲಿ, ಅರ್ಥವಾಗುವುದೇ ಇಲ್ಲ. ಅಪ್ಪನ ಅಂತರಾಳ ಅರ್ಧಾಂಗಿ ಎನಿಸಿಕೊಂಡು ಸದಾ ಅಪ್ಪನ ಮಗ್ಗುಲಲ್ಲೇ ಇರುವ ಅಮ್ಮನಿಗೂ ಸಹ ಅರ್ಥವಾಗುವುದಿಲ್ಲ. ಮೇಲಾಗಿ ಅಪ್ಪನನ್ನು ಅರ್ಥ ಮಾಡಿಕೊಳ್ಳಲು ಅಮ್ಮ ಬಿಡುವುದೇ ಇಲ್ಲ. ನಿಮ್ಮಪ್ಪ ಯಾವಾಗಲೂ ಹೀಗೆ ಅನ್ನುತ್ತಲೇ ಇರುತ್ತಾಳೆ. ನಿಜ ಹೇಳಬೇಕೆಂದರೆ ಸಾಲಗಾರರಿಗೆ ಅಪ್ಪ ಚೂರುಪಾರು ಅರ್ಥವಾಗಿರುತ್ತಾನೆ. ತನ್ನ ಗೆಳೆಯರಲ್ಲಿ ಒಬ್ಬಿಬ್ಬರಿಗೆ ಅಪ್ಪ ಕಾಲು ಭಾಗ ಮಾತ್ರ ಅರ್ಥ ಆಗಿರುತ್ತಾನೆ.‌ ಅಪ್ಪನ ಸವೆದು ಹೋಗಿರುವ ಚಪ್ಪಲಿಗಳಿಗೆ, ಅಪ್ಪ ವರ್ಷಗಟ್ಟಲೆ ಹಾಕಿದ ಹಳೆಯ ಬಟ್ಟೆಗಳಿಗೆ ಮಕ್ಕಳು ಮತ್ತು ಮಡದಿಗಿಂತಲೂ ಅಪ್ಪ ಚೆನ್ನಾಗಿ ಅರ್ಥ ಆಗಿರುತ್ತಾನೆ. ಅವುಗಳು ಹಳೆಯದಾದರೂ ಅಪ್ಪ ಅವುಗಳನ್ನೇ ಪ್ರೀತಿಯಿಂದ ಬಳಸುತ್ತಾನೆ. ಅಪ್ಪ ಅವುಗಳನ್ನು ಬದಲಿಸುವುದಿಲ್ಲ. ಆ ಹಳೆಯ ವಸ್ತುಗಳಲ್ಲಿಯೇ ಅಪ್ಪ ಹೊಸದನ್ನು ಕಂಡುಕೊಂಡಿದ್ದಾನೆ. ಅಪ್ಪ ಹಳೆಯ ಕಾಲದವ. ಆತನಿಗೆ ಹೊಳೆಯುವುದೆಲ್ಲಾ ಬರೀ ಹಳೆಯ ಯೋಚನೆಗಳು. ಅಪ್ಪ ಈಗಿನ ಕಾಲಕ್ಕೆ ತಕ್ಕಂತೆ ಆಗಿಲ್ಲ ಅನ್ನುವ ಮಡದಿ ಮಕ್ಕಳು. ಅಪ್ಪ ಆದರೂ ಅಪ್ಪನ ಬೆಲೆ ಮೂರು ಕಾಸು. ಅಪ್ಪನ ಆಸೆ…

Read More