
ಸವಣೂರು ಗ್ರಾಮದ ಮುಗೇರು ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಮಾರ್ಚ್ 25 ಹಾಗೂ 26 ರಂದು ನಡೆಯುವ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವದ ಆಮಂತ್ರಣ ಪತ್ರ ಬಿಡುಗಡೆಯು ದೇವಸ್ಥಾನದಲ್ಲಿ ಫೆಬ್ರವರಿ 27 ರಂದು ಜರುಗಿತು. ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಕೆ ಸೀತಾರಾಮ ರೈ ಸವಣೂರು, ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಕಿನಾರ, ಸಮಿತಿ ಸದಸ್ಯರಾದ ಮೋನಪ್ಪ ಗೌಡ ಆರೆಲ್ತಡಿ, ರಾಕೇಶ್ ರೈ ಕೆಡಂಜಿ, ಅರ್ಚಕರಾದ ಪದ್ಮನಾಭ ಕುಂಜತ್ತಾಯ, ಸವಣೂರು ಪ್ರಾ.ಕೃ.ಪ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ಸವಣೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಪ್ರಭಾಕರ ಶೆಟ್ಟಿ ನಡುಬೈಲು, ಮುಗೇರು ಶ್ರೀ ಮಹಾವಿಷ್ಣು ಭಜನಾ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ಮೆದು, ಸದಸ್ಯರಾದ ಹರಿಶ್ಚಂದ್ರ ಕಾಯರ್ಗ, ಹರೀಶ್ ಕುಕ್ಕುಜೆ, ಬಾಲಕೃಷ್ಣ ಕುದ್ಮನಮಜಲು, ಪ್ರಥಮ್ ಕಾಯರ್ಗ ಉಪಸ್ಥಿತರಿದ್ದರು.




























































































































