
ಹೈದರಾಬಾದ್ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಹೈದರಾಬಾದ್ ನ ಹಿರಿಯ ಹೋಟೆಲ್ ಉದ್ಯಮಿ, ಕುಂದಾಪುರದ ಶ್ರೀ ಸಾಯಿ ಸೆಂಟರ್ ಕಟ್ಟಡದ ಮಾಲೀಕರಾದ ಶ್ರೀ ಎಚ್ ಚಂದ್ರ ಶೆಟ್ಟಿ ಮಂಚಿರಲ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಉದಾರ ದಾನಿಯಾಗಿ, ಸಮಾಜಸೇವಕರಾಗಿ ಗುರುತಿಸಿಕೊಂಡಿದ್ದಾರೆ. ಚಂದ್ರ ಶೆಟ್ಟಿಯವರ ಸೇವಾ ಅವಧಿಯಲ್ಲಿ ಹೈದರಾಬಾದ್ ಬಂಟರ ಸಂಘ ಉತ್ತರೋತ್ತರ ಶ್ರೇಯಸ್ಸನ್ನು ಕಾಣುವಂತಾಗಲಿ ಎಂದು ಸಮಸ್ತ ಬಂಟ ಸಮಾಜದ ಪರವಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.



























































































































