Author: admin
ಬಾಲ್ಯದಿಂದಲೂ ನಾವು ಅತೀವವಾಗಿ ಸಂಭ್ರಮಿಸುವ ಕ್ಷಣವೆಂದರೆ ಒಂದು ದೀಪಾವಳಿ ಹಬ್ಬ. ಮತ್ತೊಂದು ನೀಲಾವರ ರಥೋತ್ಸವ. ಮೊನ್ನೆಯ ದಿನ ನೀಲಾವರ ಹಬ್ಬ ಬಹಳ ಅದ್ದೂರಿಯಾಗಿ ನಡೆಯಿತು. ಎಷ್ಟೇ ಸಂತಸವಾದರೂ ಬಾಲ್ಯದ ಸವಿ ಈವಾಗ ಇಲ್ಲ, ನೀಲಾವರ ಹಬ್ಬಕ್ಕೆ ಮೂರು ತಿಂಗಳ ಹಿಂದೆಯೇ ತಯಾರಿ ನಡೆಯುತ್ತಿತ್ತು. ಒಂದಿಷ್ಟು ಗೇರು ಬೀಜವನ್ನು ಸಂಗ್ರಹಿಸಿ ಅದನ್ನು ಮಾರಿ ಹಬ್ಬಕ್ಕೆ ಖರ್ಚು ಮಾಡುತ್ತಿದ್ದ ನೆನಪುಗಳು ಇದ್ದವು. ಮನೆಯವರು ಕೊಟ್ಟ ಹಣ ಸಾಕಾಗುದಿಲ್ಲವೆಂದು ಜಗಳ ಮಾಡಿ ಪೆಟ್ಟು ತಿಂದು ಹಬ್ಬಕ್ಕೆ ಹೋಗುವುದಿಲ್ಲವೆಂದು ಸಿಟ್ಟು ಮಾಡಿ ಮೂಲೆಯಲ್ಲಿ ಕೂತು ಅದಕ್ಕೆ ಮತ್ತೆರಡು ಸೇರಿಸಿಕೊಟ್ಟು ಕಡೆಗೆ ಮುಖ ತೊಳೆದುಕೊಂಡು ಹಬ್ಬಕ್ಕೆ ಓಡುತ್ತಿದ್ದೆವು. ಬೆಳಿಗ್ಗೆ ಹಬ್ಬಕ್ಕೆ ಹೋದವರು ಮತ್ತೆ ವಾಪಸ್ಸು ಮನೆಗೆ ಬರುತ್ತಿದ್ದದ್ದು ರಾತ್ರಿಯೇ. ಇದ್ದ ಒಂದು ಅಂಗಡಿಯನ್ನು ಬಿಡುತ್ತಿರಲಿಲ್ಲ ಅದೆಷ್ಟು ಸುತ್ತು ಹಾಕಿದರೂ ಕಾಲಿಗೆ ದಣಿವು ಅನಿಸುತ್ತಿರಲಿಲ್ಲ. ವಸ್ತುಗಳಿಗೆ ರಿಂಗ್ ಹಾಕುವುದು, ಅದೃಷ್ಟ ಚೀಟಿಯಲ್ಲಿ ಐಸ್ ಕ್ರೀಮ್ ಈ ಆಟದಲ್ಲಿ ತಂದೆ ಕೊಟ್ಟ 20-30 ರೂಪಾಯಿ ಖಾಲಿಯಾಗಿ ಮನೆಯವರು ಹಬ್ಬಕ್ಕೆ ಎಷ್ಟೊತ್ತಿಗೆ ಬರುತ್ತಾರೆಂದು…
ಕಾರ್ಕಳ/ಉಡುಪಿ : ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ ನಡೆಸುವ ಜೆ.ಇ.ಇ ಮೈನ್ ಪರೀಕ್ಷೆಯ 2ನೇ ಫೇಸ್ನ ಅಂತಿಮ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 9 ವಿದ್ಯಾರ್ಥಿಗಳು 99ಕ್ಕೂ ಅಧಿಕ ಪರ್ಸಂಟೈಲ್ ಪಡೆದಿದ್ದು, ಇಬ್ಬರು ವಿದ್ಯಾರ್ಥಿಗಳು ಭೌತಶಾಸ್ತ್ರದಲ್ಲಿ 100 ಪರ್ಸಂಟೈಲ್ ಗಳಿಸಿದ್ದಾರೆ. ವಿದ್ಯಾರ್ಥಿಗಳಾದ ಆಕಾಶ್ ಎಚ್. ಪ್ರಭು 99.9194206 ಪರ್ಸಂಟೈಲ್, ಧನುಶ್ ನಾಯಕ್ 99.7330507 ಪರ್ಸಂಟೈಲ್, ತರುಣ್ ಎ. ಸುರಾನ 99.7329879 ಪರ್ಸಂಟೈಲ್, ಕೆ. ಮನೋಜ್ ಕಾಮತ್ 99.6811864 ಪರ್ಸಂಟೈಲ್, ಚಿಂತನ್ ಜೆ.ಮೆಘಾವತ್ 99.6686123 ಪರ್ಸಂಟೈಲ್, ಹೃತ್ವಿಕ್ ಶೆಟ್ಟಿ 99.6582215 ಪರ್ಸಂಟೈಲ್, ವೇದಾಂತ್ ಶೆಟ್ಟಿ 99.2929708 ಪರ್ಸಂಟೈಲ್, ಸತೀಶ್ ಎಸ್.ಕರಗನ್ನಿ 99.1444377 ಪರ್ಸಂಟೈಲ್ ಹಾಗೂ ಅಪೂರ್ವ್ ವಿ. ಕುಮಾರ್ 99.0512045 ಪರ್ಸಂಟೈಲ್ ಪಡೆದಿದ್ದಾರೆ. ವಿಷಯವಾರು ಅತ್ಯಧಿಕ ಪರ್ಸಂಟೈಲ್ ಗಳಿಸಿದ ಸಂಸ್ಥೆಯ ವಿದ್ಯಾರ್ಥಿಗಳಲ್ಲಿ, ಭೌತಶಾಸ್ತ್ರದಲ್ಲಿ 100 ಪರ್ಸಂಟೈಲ್ನೊಂದಿಗೆ ಸರ್ವಜಿತ್ ಕೆ.ಆರ್ ಮತ್ತು ಸಿದ್ಧಾರ್ಥ್ ಎ, ರಸಾಯನಶಾಸ್ತ್ರದಲ್ಲಿ ಅಮಥ್ರ್ಯ ಭಟ್ 99.9714342 ಪರ್ಸಂಟೈಲ್ ಹಾಗೂ ಗಣಿತಶಾಸ್ತ್ರದಲ್ಲಿ ಕೆ.ಮನೋಜ್ಕಾಮತ್ 99.9331666 ಪರ್ಸಂಟೈಲ್ ಪಡೆದಿದ್ದಾರೆ. ವಿಷಯವಾರು ವಿಭಾಗದಲ್ಲಿ…
ಜೆ ಇ ಇ ಮೈನ್ ಫಲಿತಾಂಶದಲ್ಲಿ ಕ್ರಿಯೇಟಿವ್ ಶಿಕ್ಷಣ ಸಂಸ್ಥೆ ಅಮೋಘ ಸಾಧನೆ : 202 ವಿದ್ಯಾರ್ಥಿಗಳು ಅರ್ಹತೆ : ಮೋಹಿತ್. ಎಂ ದೇಶಕ್ಕೆ 29ನೇ ರ್ಯಾಂಕ್
ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾನಿಲಯಗಳಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ನಡೆಸುವ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಜೆ ಇ ಇ ( ಮೈನ್ ) 2025 ಅರ್ಹತಾ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ 202 ವಿದ್ಯಾರ್ಥಿಗಳು ತೇರ್ಗಡೆ ಪಡೆಯುವ ಮೂಲಕ ಮುಂಬರುವ ಜೆ ಇ ಇ ಅಡ್ವಾನ್ಸ್ ಪರೀಕ್ಷೆಗೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಾದ ಚೇತನ್ ಗೌಡ ಎನ್. ಎಸ್. 99.7656463 ಪರ್ಸೆಂಟೈಲ್ ಮೂಲಕ AIR ( ಆಲ್ ಇಂಡಿಯಾ ರ್ಯಾಂಕ್ ) 733ನೇ ಕೆಟಗರಿ ರ್ಯಾಂಕ್, ಸಾನಿಕ ಕೆ. ಎನ್ 99.5385594 ಪರ್ಸೆಂಟೈಲ್, ಮೋಹಿತ್. ಎಂ 99.4982099 ಪರ್ಸೆಂಟೈಲ್ ಮೂಲಕ 29ನೇ ಕೆಟಗರಿ ರ್ಯಾಂಕ್, ಸುಮಂತ ಗೌಡ ಎಸ್. ಡಿ 99.1307112 ಪರ್ಸೆಂಟೈಲ್, ಎಚ್. ಎ ರಾಜೇಶ್ 99.1055485 ಪರ್ಸೆಂಟೈಲ್, ಎಂ. ಮಂಜುನಾಥ್ 99.0174525 ಪರ್ಸೆಂಟೈಲ್, ಟಿ. ಪ್ರದೀಪ್ 98.7911580 ಪರ್ಸೆಂಟೈಲ್ ಮೂಲಕ 103ನೇ ಕೆಟಗರಿ ರ್ಯಾಂಕ್, ಮೋನಿಕ ಕೆ. ಪಿ 98.5400006 ಪರ್ಸೆಂಟೈಲ್ ಮೂಲಕ 126ನೇ ಕೆಟಗರಿ ರ್ಯಾಂಕ್, ಸಾಚಿ…
ಪ್ರತಿಷ್ಠಿತ ಬಂಟರ ಸಂಘ ಪುಣೆಯ ಗೌರವಾಧ್ಯಕ್ಷರಾಗಿ ಸಮಾಜಸೇವಕ, ಪುಣೆ ಬಂಟರ ಭವನದ ರೂವಾರಿ, ಬಂಟ ಭಗೀರಥ ಸಂತೋಷ್ ವಿ ಶೆಟ್ಟಿ ಇನ್ನಾ ಕುರ್ಕಿಲ್ ಬೆಟ್ಟು ಬಾಳಿಕೆ ಅವರು ಆಯ್ಕೆಯಾಗಿದ್ದಾರೆ. ತಾನು ಕೈಗೆತ್ತಿಕೊಂಡ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿಯೇ ನೆಮ್ಮದಿಯ ಉಸಿರು ಬಿಡುವ ಛಲವಂತ. ಸಮುದಾಯದ ಸೇವೆಗೆಂದೇ ಜನ್ಮ ತಳೆದರೋ ಎಂಬಂತೆ ಅರ್ಪಣಾ ಭಾವದಿಂದ ತನ್ನವರ ಏಳಿಗೆಗಾಗಿ ಟೊಂಕಕಟ್ಟಿ ದುಡಿದಿರುವ ಸಂತೋಷ್ ವಿ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಅವರನ್ನು ಅಪರೂಪದ ಅಪರಂಜಿ ಎಂದರೂ ತಪ್ಪಾಗಲಾರದು. ಸಮಸ್ತ ಸಮುದಾಯ ಬಾಂಧವರ ಅಸ್ಮಿತೆಯ ಕೇಂದ್ರವಾಗಿ ಗುರುತಿಸಲ್ಪಡುವ ಮಹಾರಾಷ್ಟ್ರದ ಸಾಂಸ್ಕೃತಿಕ ನಗರವೆಂದೇ ಖ್ಯಾತಿವೆತ್ತ ಪುಣೆ ನಗರದಲ್ಲಿ ಇಂದು ತಲೆಯೆತ್ತಿ ನಿಂತ ಸುಂದರ ಸುಸಜ್ಜಿತ ಬಂಟರ ಭವನ ಆದರಣೀಯ ಸಂತೋಷ್ ಶೆಟ್ಟಿ ಅವರ ಸಂಘರ್ಷ, ಛಲ, ಪರಿಶ್ರಮ ಅರ್ಪಣಾ ಭಾವದ ಕತೆಯನ್ನು ಸಾರಿ ಹೇಳುತ್ತಿದೆ. ಹೀಗೆ ಸಿಧ್ಧಿ ಸಾಧನೆಗಳೆರಡೂ ಸಮನ್ವಯಗೊಂಡು ಪ್ರಖರ ತೇಜ ಹೊಂದಿದ ಬಂಟ ನಾಯಕ ಸಂತೋಷ್ ಶೆಟ್ಟಿಯವರು ಇಂದು ಮಹಾನಗರ ಹಾಗೂ ಹುಟ್ಟೂರಿನ ಹೆಮ್ಮೆಯ…
ಪುಣೆ ಬಂಟರ ಸಂಘದ ನೂತನ ಅಧ್ಯಕ್ಷ ಕೆಂಜಾರು ಅಜಿತ್ ಹೆಗ್ಡೆ ಹಾಗೂ ಮಹಿಳಾ ವಿಭಾಗದ ಅಧ್ಯಕ್ಷೆ ಶಮ್ಮಿ ಅಜಿತ್ ಹೆಗ್ಡೆ ಅವರನ್ನು ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ನಡೆದ ಬಿಸು ಕಾರ್ಯಕ್ರಮದಲ್ಲಿ ಟ್ರಸ್ಟ್ ಗೌರವಾಧ್ಯಕ್ಷ ಡಾ ಎ ಸದಾನಂದ ಶೆಟ್ಟಿಯವರ ಉಪಸ್ಥಿತಿಯಲ್ಲಿ ಸನ್ಮಾನಿಸಿದರು.ಈ ಸಂಧರ್ಭ ಟ್ರಸ್ಟ್ ಕಾರ್ಯಾಧ್ಯಕ್ಷ ದೇವಿಚರಣ್ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ವಿಜಯಲಕ್ಷ್ಮಿ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ, ಜೆಪ್ಪು ಬಂಟರ ಸಂಘದ ಅಧ್ಯಕ್ಷ ವಸಂತ ಶೆಟ್ಟಿ, ಗುರುಪುರ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ಕದ್ರಿ ನವನೀತ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ, ರಾಜಗೋಪಾಲ್ ರೈ, ಪ್ರಸಾದ್ ರೈ ಕಲ್ಲಿಮಾರ್ ಮತ್ತಿತರರು ಉಪಸ್ಥಿತರಿದ್ದರು.
ಮೂಡುಬಿದಿರೆ: ಬ್ರಹ್ಮಾವರದ ಸೈಂಟ್ ಮೇರಿಸ್ ಸಿರಿಯನ್ ಕಾಲೇಜು ಹಾಗೂ ಮಂಗಳೂರು ವಿವಿ ಜಂಟಿ ಆಶ್ರಯದಲ್ಲಿ ನಡೆದ ಮಂಗಳೂರು ವಿವಿ ಅಂತರ್ ಕಾಲೇಜು ಉಡುಪಿ ವಲಯ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ಕ್ರಿಕೆಟ್ ತಂಡವು ಜಯಶಾಲಿಯಾಯಿತು. ಫೈನಲ್ ಪಂದ್ಯದಲ್ಲಿ ಕುಂದಾಪುರದ ಬಿಬಿ ಹೆಗ್ಡೆ ಕಾಲೇಜಿನ ತಂಡವನ್ನು 8 ವಿಕೆಟ್ಗಳ ಅಂತರದಿ0ದ ಗೆದ್ದು, ಶಿರ್ವ ಲೆಸ್ಲಿ ಡಿಸೋಜಾ ಮೆಮೋರಿಯಲ್ ರೋಲಿಂಗ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಇದಕ್ಕೂ ಮುನ್ನ ಸೆಮಿಫೈನಲ್ ಪಂದ್ಯದಲ್ಲಿ ಬ್ರಹ್ಮಾವರದ ಎಸ್ಎಮ್ಎಸ್ ಕಾಲೇಜಿನ ತಂಡದ ವಿರುದ್ಧ 23 ರನ್ಗಳ ಅಂತರದಲ್ಲಿ ಗೆದ್ದು ಫೈನಲ್ ಪ್ರವೇಶಿಸಿತ್ತು. ಆಳ್ವಾಸ್ ಕಾಲೇಜಿನ ಜಿಷ್ಣು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದುಕೊಂಡರು. ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.
ದೀರ್ಘಕಾಲ ಹೊರನಾಡು ಮುಂಬಯಿಯಲ್ಲಿದ್ದು, ಕನ್ನಡ ನಾಡುನುಡಿಯ ಕೈಂಕರ್ಯ ಮಾಡುತ್ತಾ ಅಲ್ಲಿ ಕನ್ನಡದ ಉಳಿವಿಗೆ, ಬೆಳವಣಿಗೆಗೆ ಶ್ರಮಿಸಿದ ವಿದ್ವಾನ್ ರಾಮಚಂದ್ರ ಉಚ್ಚಿಲರ ಬರಹ ಬದುಕನ್ನು ಅನಾವರಣಗೊಳಿಸಬೇಕು. ಅದು ದಾಖಲೀಕರಣಗೊಳ್ಳಬೇಕು ಎಂಬುದಾಗಿ ಈ ಮೇಲಿನ ಮೂರು ಸಂಸ್ಥೆಗಳು ಒಂದುಗೂಡಿ ಮಾಡಿದ ಕಾರ್ಯವೇ ಚ.ರಾ. ನೆನಪಿನ ನಾಲ್ಕು ಸಂಪುಟಗಳ ಸಂಚಯ. ಉಚ್ಚಿಲರ ಹುಟ್ಟೂರಿನಲ್ಲಿ ಈ ಸಂಪುಟಗಳು ಲೋಕಾರ್ಪಣೆಗೊಳ್ಳುತ್ತಿರುವುದು ಅದೂ ಉಚ್ಚಿಲರ ಜನ್ಮ ಶತಮಾನೋತ್ಸವದ ಸಂಸ್ಮರಣೆಯನ್ನು ಮಾಡುವ ವಿಶೇಷ ದಿನ. ಅದರೊಂದಿಗೆ ಡಾ. ವಾಣಿ ಎನ್. ಉಚ್ಚಿಲ್ಕರ್ ರವರ ಮೂರು ಕೃತಿಗಳು ಹಾಗೂ ಇನ್ನೊಂದು ಸಂಪಾದಿತ ಕೃತಿ ಹಾಗೆ ಒಟ್ಟು ೮ ಕೃತಿಗಳು ಲೋಕಾರ್ಪಣೆಗೊಳ್ಳಲಿದೆ. ಚ.ರಾ. ನೆನಪಿನ ಸಂಪುಟ ಒಂದರಲ್ಲಿ ಚ.ರಾ.ರವರ ಪ್ರಕಟಿತ ಕೃತಿಗಳಲ್ಲಿ ೫ ಕೃತಿಗಳನ್ನು ೧ ಸಂಪುಟವಾಗಿ ಸಂಕಲಿಸಲಾಗಿದೆ. ಸಂಪುಟ ಒಂದರಲ್ಲಿ ಕಡಲಕರೆಯ ಚಿತ್ರಗಳು, ೨ನೇ ಕೃತಿ ಪದರ, ೩ನೇ ಕೃತಿ ನೆನಪಿನ ಬುತ್ತಿ ೪ನೇ ಕೃತಿ ಯಕ್ಷಗಾನ ನಡೆದು ಬಂದ ದಾರಿ ಹಾಗೂ ೫ನೇ ಕೃತಿ ಗಿಡ, ಮರ, ಬಳ್ಳಿ, ಮೂಲಿಕೆಗಳು ಇದರ…
ನಿಮ್ಮ ಪ್ರೀತಿಪಾತ್ರರೊಂದಿಗೆ ಶಾಂತತೆಯಿಂದ ಸಮಯ ಕಳೆಯಲು ತಕ್ಕ ಸ್ಥಳವನ್ನು ಹುಡುಕುತ್ತಿದ್ದೀರಾ? ಮಂಗಳೂರಿನ ಕಿನ್ನಿಗೋಳಿ ಬಳಿ ಇರುವ ಎಸ್ಬಿಎಸ್ ಫಾರ್ಮ್ಹೌಸ್ (Sugandhi Bhoja Shetty Farm House ) ನಿಮಗೆ ಸರಿಯಾದ ಆಯ್ಕೆ. ಇದು ನಗರದ ಜೀವನದ ಜಂಜಾಟದಿಂದ ದೂರವಿದ್ದು, ನಿಸರ್ಗದ ಸೌಂದರ್ಯವನ್ನು ಅನುಭವಿಸಲು ಮತ್ತು ಕುಟುಂಬ ಹಾಗೂ ಸ್ನೇಹಿತರೊಂದಿಗೆ ಅಮೂಲ್ಯ ಕ್ಷಣಗಳನ್ನು ರಚಿಸಲು ಶಾಂತವಾದ ಪರಿಸರವನ್ನು ಹೊಂದಿದೆ. ನಿಸರ್ಗದ ಸೌಂದರ್ಯದಲ್ಲಿ ವಿಶ್ರಾಂತಿ ಎಸ್ಬಿಎಸ್ ಫಾರ್ಮ್ಹೌಸ್ ತೆಂಗಿನ ತೋಟ , ಎತ್ತರದ ಮರಗಳು ಮತ್ತು ತಾಜಾ ಗಾಳಿಯಿಂದ ಆವರಿತವಾಗಿದೆ. ಇಲ್ಲಿ ನೀವು ದಿನನಿತ್ಯದ ಒತ್ತಡ ಮತ್ತು ಗದ್ದಲವನ್ನು ಮರೆತು, ನಿಜವಾದ ವಿಶ್ರಾಂತಿಯ ಅನುಭವ ಪಡೆಯಬಹುದು. ಮರಗಳ ನೆರಳಿನಲ್ಲಿ ಕುಳಿತುಕೊಳ್ಳುವುದು ಅಥವಾ ಹುಲ್ಲಿನ ಮೇಲೆ ನಡೆಯುವುದು—ಇದಕ್ಕೆಲ್ಲ ನಿಸರ್ಗದ ಶಾಂತಿಯೇ ಸಾಥಿ. ಇದು ಶಾಂತವಾದ ಸ್ಥಳವಾದರೂ, ತುಂಬಾ ಸುಲಭವಾಗಿ ತಲುಪಬಹುದಾಗಿದೆ. ಕಿನ್ನಿಗೋಳಿ, ಮುಲ್ಕಿ ಮತ್ತು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಜ್ಪೆ) ಇವೆಲ್ಲದರ ಹತ್ತಿರವಿರುವ ಈ ಸ್ಥಳ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಸಹ ಸುಂದರವಾದ ತಾಣವಾಗಿದೆ. ಮೋಜು ಮತ್ತು ಆಚರಣೆಗಳಿಗೆ ( Event ) ಸೂಕ್ತ ಸ್ಥಳ ನೀವು ಹುಟ್ಟುಹಬ್ಬದ ಪಾರ್ಟಿ, ವಾರಾಂತ್ಯದ ಗೆಟ್-ಟುಗೆದರ್ ಅಥವಾ ಸ್ನೇಹಿತರೊಂದಿಗೆ ಮೋಜಿನ ಸಮಯವನ್ನು…
ಬಂಟರ ಸಂಘ ಪುಣೆ : ಉಪಾಧ್ಯಕ್ಷರಾಗಿ ವಿಶ್ವನಾಥ್ ಶೆಟ್ಟಿ, ರಾಮಕೃಷ್ಣ ಶೆಟ್ಟಿ, ಕಾರ್ಯದರ್ಶಿಯಾಗಿ ಸುಧೀರ್ ಶೆಟ್ಟಿ
ಪುಣೆ ಬಂಟರ ಸಂಘದ ಸಮಿತಿಯ 2025-2027 ರ ಅವಧಿಗೆ ನೂತನ ಅಧ್ಯಕ್ಷರಾಗಿ ಕೆಂಜಾರುಗುತ್ತು ಅಜಿತ್ ಹೆಗ್ಡೆ ಹಾಗೂ ಸಂಘದ ನೂತನ ಉಪಾಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ ಶೀತಲ್ ಹಾಗೂ ರಾಮಕೃಷ್ಣ ಶೆಟ್ಟಿ ಸರ್ವಾನುಮತದಿಂದ ಆಯ್ಕೆಗೊಂಡಿದ್ದಾರೆ. ಏಪ್ರಿಲ್ 14 ರಂದು ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಬಂಟರ ಭವನದಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆಯವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಿಶೇಷ ಮಹಾಸಭೆಯಲ್ಲಿ ಸಂಘದ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ಹಾಗೂ ದಕ್ಷಿಣ, ಉತ್ತರ, ಪೂರ್ವ ಹಾಗೂ ಪಶ್ಚಿಮ ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು.ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ್ ಶೆಟ್ಟಿ ಕಣಂಜಾರು, ಗೌರವ ಕೋಶಾಧಿಕಾರಿಯಾಗಿ ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು, ಜೊತೆ ಕಾರ್ಯದರ್ಶಿಯಾಗಿ ಚಂದ್ರಶೇಖರ ಶೆಟ್ಟಿ ನಿಟ್ಟೆ ಆಯ್ಕೆಗೊಂಡಿದ್ದಾರೆ.
ಮೂಡುಬಿದಿರೆ: 2024-25ನೇ ಸಾಲಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ವಿಭಾಗದ ರ್ಯಾಂಕ್ ಪಟ್ಟಿ ಬಿಡುಗಡೆಗೊಂಡಿದ್ದು, ಆಳ್ವಾಸ್ ನ್ಯಾಚುರೋಪತಿ ಹಾಗೂ ಯೋಗಿಕ್ ಸೈನ್ಸ್ ಕಾಲೇಜಿನ ಡಾ. ಜ್ಯೋತಿ ಕೆ. ವಿ. ಕ್ಲಿನಿಕಲ್ ನಾಚುರೋಪತಿ ವಿಭಾಗದಲ್ಲಿ ದ್ವಿತೀಯ ರ್ಯಾಂಕ್, ಡಾ. ಅನಘಶ್ರೀ ಎಸ್ ಕ್ಲಿನಿಕಲ್ ಯೋಗ ವಿಭಾಗದಲ್ಲಿ ತೃತೀಯ ರ್ಯಾಂಕ್, ಡಾ. ಲೆಂಜಿಕ್ಲೂ ಗಾನ್ಮೈ ಕ್ಲಿನಿಕಲ್ ಯೋಗ ವಿಭಾಗದಲ್ಲಿ ಆರನೆಯ ರ್ಯಾಂಕ್, ಡಾ. ಮೇಘನಾ ಎಂ. ಕ್ಲಿನಿಕಲ್ ನ್ಯಾಚುರೋಪತಿ ವಿಭಾಗದಲ್ಲಿ ಒಂಬತ್ತನೆಯ ರ್ಯಾಂಕ್ ಗಳಿಸಿದ್ದಾರೆ. ರ್ಯಾಂಕ್ ವಿಜೇತ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ, ಪ್ರಾಚಾರ್ಯರು ಅಭಿನಂದಿಸಿದ್ದಾರೆ.