Author: admin
ಅವನ ಹೆಸರು ಹಾಗಲ್ಲ. ಅದ್ಯಾಕೆ ಅವ? ನನಗಿಂತ ನಾಲ್ಕಾರು ವರ್ಷ ಮೊದಲೇ ಜನ್ಮ ಪಡೆದಾತ. ಏಕವಚನ ಏಕೆಂದರೆ, ಅವನ ಒಡ ಹುಟ್ಟಿದ ತಂಗಿಯರು, ಅಳಿಯ ಸೇರಿದಂತೆ ಆತನನ್ನು ಯಾರೂ ಬಹುವಚನದಲ್ಲಿ ಕರೆದುದು ಇಲ್ಲ. ಆ ಹೆಸರಿನ ಅನೇಕರು ಇದ್ದರು ನಮ್ಮೂರಿನಲ್ಲಿ. ಅವರನ್ನು ನಿರ್ದಿಷ್ಟವಾಗಿ ಗುರುತಿಸಲು, ಅವರೆಲ್ಲರ ಹೆಸರಿನ ಮುಂದೆ ಮನೆ ಹೆಸರು ಸೇರಿಸುತ್ತಿದ್ದರು. ಮುಲ್ಲಡ್ಕ ಬೊಗ್ಗು, ಹೊಸವಕ್ಲು ಬೊಗ್ಗು, ಹಾಡಿಮನೆ ಬೊಗ್ಗು, ಕೋಡಿಮನೆ ಬೊಗ್ಗು… ಹೀಗೆ. ಆದರೆ ನಾನು ಹೇಳ ಹೊರಟಿರುವ ಬೊಗ್ಗು, ಮನೆಯ ಹೆಸರಿನಿಂದಾಗಲಿ, ಅಪ್ಪನ ಹೆಸರಿನಿಂದಾಗಲಿ ಗುರುತಿಸಿಕೊಂಡಿಲ್ಲ. ಆತನಿಗೆ ಹೆಸರಿಗೊಂದು ಹೆಸರಿತ್ತಷ್ಟೇ ವಿನಾಃ ತನ್ನದೇ ಆದ ಅಸ್ಮಿತೆ ಇರಲಿಲ್ಲ. ಆ ಹೆಸರಿನಿಂದ ಕರೆದರೆ ಓಗೊಡುತ್ತಿರಲಿಲ್ಲ, ತಿರುಗಿ ನೋಡುತ್ತಿದ್ದ. ಆದರೆ ಆ ಹೆಸರಿನಿಂದ ಹೊರಗಿನವರು ಯಾರೂ ಕರೆದುದಿಲ್ಲ. ತೀರಾ ಅಗತ್ಯ ಬಿದ್ದರೆ, “ಅವ ಮೂಗ” ಎಂದೇ ಜನ ಅವನನ್ನು ಹಿಂದಿನಿಂದ ಕರೆಯುತ್ತಿದ್ದರು. ಆ ಹೆಸರು ಕೇಳಿದಾಗ, ಓದಿದಾಗಲೆಲ್ಲಾ ನನಗೆ ಈ ಬೊಗ್ಗುನ ರೂಪ ಕಣ್ಣೆದುರು ನಿಲ್ಲುತ್ತದೆ. ಆರಡಿಗೂ ಮಿಕ್ಕಿದ ಎತ್ತರದ,…
ಬಂಟರು ಆರ್ಥಿಕವಾಗಿ ಬಲಿಷ್ಠರಾಗುತ್ತಿದ್ದಂತೆ ತಮ್ಮ ಪದ್ದತಿ, ಸಂಪ್ರದಾಯಕ್ಕೆ ನಿಧಾನವಾಗಿ ಎಳ್ಳುನೀರು ಬಿಡುತ್ತಿದ್ದಾರೆ. ಯಾಕೋ ನಾಗಾರಾಧನೆಯಲ್ಲಾಗಲೀ, ಭೂತಾರಾಧನೆಯಲ್ಲಾಗಲೀ, ವಿವಾಹ ಅಪರಕ್ರಿಯೆಯಂತಹ ಕಾರ್ಯಕ್ರಮಗಳಲ್ಲಿಯೂ ನಮಗೆ ತೌಳವ ಸಂಪ್ರದಾಯವೆಂದರೆ ಒಂದು ರೀತಿ ಅಸಡ್ಡೆ. ವೈದಿಕ ಸಂಪ್ರದಾಯವೇ ಶ್ರೇಷ್ಠ ಎಂಬ ಭಾವನೆ. ಇದಕ್ಕೆ ಸರಿಯಾಗಿ ತೌಳವ ಸಂಪ್ರದಾಯದ ಬಗ್ಗೆ ಮಾರ್ಗದರ್ಶನ ಮಾಡಬಲ್ಲ ಹಿರಿಯರ ಕೊರತೆಯೂ ನಮ್ಮಲ್ಲಿದೆ. ನಮ್ಮ ಭೂತಗಳಿಗೆ ಬ್ರಹ್ಮಕಲಶ ಮಾಡಿಸುವ, ನಾಗನ ಪ್ರಾಕೃತಿಕ ಆವಾಸ ಸ್ಥಾನವನ್ನು ಕಡಿದು ಕಾಂಕ್ರೀಟ್ ಗುಡಿಯಲ್ಲಿ ಕುಳ್ಳಿರಿಸಲು ಪ್ರಯತ್ನಿಸುವ ನಮಗೆ ವಿವಾಹವೇನು ಮಹಾ? ವೈದಿಕ ಸಂಪ್ರದಾಯದಂತೆ ಹೋಮ, ಸಪ್ತಪದಿ, ಕನ್ಯಾದಾನ ಮಾಂಗಲ್ಯಧಾರಣೆ ಇದ್ದರೇನೆ ಅದು ಮದುವೆ. ಸದ್ಯಕ್ಕೆ ವರಪೂಜೆ, ಕಾಶೀಯಾತ್ರೆ, ಉರುಟಣೆ ಇತ್ಯಾದಿಗಳು ಪ್ರಾಂಭವಾಗಿಲ್ಲ. ಕ್ರಮೇಣ ಪ್ರಾರಂಭವಾಗಲೂಬಹುದು. ಬಂಟರು ಮೂಲತಃ ಕ್ಷತ್ರಿಯರು ಹಾಗೂ ಕೃಷಿಯನ್ನು ನಂಬಿ ಬದುಕಿದವರು. ನಮ್ಮಲ್ಲಿ ಭೂಮಿ ಸಾಕ್ಷಿಯಾಗಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗುವುದೇ ಸಂಪ್ರದಾಯ. ಹಿಂದೆ ಅಂದರೆ ಸುಮಾರು ಅರುವತ್ತು ಎಪ್ಪತ್ತು ವರ್ಷಗಳ ಹಿಂದೆ ಮಾಂಗಲ್ಯಧಾರಣೆಯೂ ನಮ್ಮಲ್ಲಿ ಇರಲಿಲ್ಲವಂತೆ. ವಧುವನ್ನು ಅಲಂಕರಿಸುವಾಗ ಮುತ್ತೈದೆಯರೇ ಅವಳ ಕೊರಳಿಗೆ ಕರಿಮಣಿ ಕಟ್ಟಿ,…
ಮಧ್ಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲೆಗೆ ನೂತನ ಪ್ರೌಢಶಾಲಾ ಕೊಠಡಿ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ 1.5 ಲಕ್ಷ ಅನುದಾನ ಮಂಜೂರು
ಮಧ್ಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಪ್ರೌಢಶಾಲಾ ಕೊಠಡಿ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ವತಿಯಿಂದ ರೂಪಾಯಿ 1 ಲಕ್ಷ 50 ಸಾವಿರ ಅನುದಾನ ಮಂಜೂರಾಗಿದ್ದು, ಅದರ ಆದೇಶ ಪತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ ಟ್ರಸ್ಟ್ ಬಜಪೆ ವಲಯ ಯೋಜನಾಧಿಕಾರಿ ಗಿರೀಶ್ ಅವರು ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿಯವರಿಗೆ ಹಸ್ತಾಂತರ ಮಾಡಿದರು. ಈ ಸಂಧರ್ಭದಲ್ಲಿ ಟ್ರಸ್ಟ್ ಉಪಾಧ್ಯಕ್ಷ ಕೃಷ್ಣಮೂರ್ತಿ ಭಟ್, ಕೋಶಾಧಿಕಾರಿ ವಿಠಲ ಶೆಟ್ಟಿ, ಸದಸ್ಯರಾದ ವಜ್ರಾಕ್ಷಿ ಪಿ ಶೆಟ್ಟಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಪ್ರಪುಲ್ಲ ಪಂಜ, ಉಪಾಧ್ಯಕ್ಷ ಅನಿಲ್ ಸಾಲ್ಯಾನ್, ಸದಸ್ಯೆ ಕಾವ್ಯ, ಗ್ರಾಮಾಭಿವೃದ್ದಿ ಯೋಜನೆ ಮೇಲ್ವಿಚಾರಕಿ ನಿಶ್ಮಿತಾ ಸುರೇಶ್ ಶೆಟ್ಟಿ, ಸೇವಾ ಪ್ರತಿನಿಧಿ ಯಶೋದ ಬಾಲಕೃಷ್ಣ ಮುಂತಾದವರು ಉಪಸ್ಥಿತರಿದ್ದರು.
ಧರ್ಮಸ್ಥಳದ ವಿರುದ್ಧ ಅಪಪ್ರಚಾರದ ಬಗ್ಗೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಮೂಡಬಿದ್ರೆಯ ಸಂಪಿಗೆ ಹೋಟೆಲ್ ನಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿದ್ದು, ಈ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರಕ್ಕೆ ತನ್ನ ಕರ್ತವ್ಯ, ಅಪಪ್ರಚಾರ ಮಾಡುವವರಿಗೆ ಹಾಗೂ ಮಾಡಿದವರಿಗೆ ಸಾಕ್ಷಿಗಳನ್ನು ನೀಡಲು ಡಿಸೆಂಬರ್ 31ರ ತನಕ ಡೆಡ್ ಲೈನ್ ನೀಡಿದರು. ಧರ್ಮಸ್ಥಳ ಕ್ಷೇತ್ರ, ಅದರ ಆಡಳಿತ ಮಂಡಳಿ ಅಥವಾ ಅದರ ಕುಟುಂಬ ಸದಸ್ಯರ ವಿರುದ್ಧ ಯಾವುದೇ ಅತ್ಯಾಚಾರ ಅಥವಾ ಕೊಲೆ ಘಟನೆ ಆವರಣದಲ್ಲಿ ಅಥವಾ ಅದರ ಸುತ್ತಮುತ್ತ ನಡೆದಿದೆ ಎಂದು ಆರೋಪಿಸುತ್ತಿರುವವರು ಡಿಸೆಂಬರ್ 31ರ ಒಳಗೆ ಅದಕ್ಕೆ ಸಂಬಂಧಪಟ್ಟ ಸ್ಪಷ್ಟವಾದ ಸಾಕ್ಷ್ಯವನ್ನು ಸಲ್ಲಿಸಬೇಕು. ಒಂದು ವೇಳೆ ಆರೋಪ ಮಾಡುತ್ತಿರುವವರು ಸಾಕ್ಷ್ಯ ಸಲ್ಲಿಸಲು ಸಾಧ್ಯವಾಗದಿದ್ದಲ್ಲಿ ಧರ್ಮಸ್ಥಳದ ವಿರುದ್ಧ ನಡೆಸುತ್ತಿರುವ ಎಲ್ಲಾ ಆರೋಪಗಳು ಸತ್ಯಕ್ಕೆ ದೂರವಾದುದು ಹಾಗೂ ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಸುತ್ತಿರುವ ಸುಳ್ಳು ಆರೋಪಗಳ ಪ್ರಕರಣವನ್ನು ಮುಚ್ಚಲಾಗಿದೆ ಎಂದು ಕರ್ನಾಟಕ ರಾಜ್ಯದ ಗೃಹ ಸಚಿವರು ಅಧಿಕೃತವಾಗಿ ಘೋಷಿಸಬೇಕು ಎಂದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಆಗ್ರಹಿಸಿದೆ. ಪ್ರಸ್ತುತ ಪೊಲೀಸ್ ಇಲಾಖೆ,…
ಹೆಸರು “ಪ್ರಶಾಂತ”ವಾಗಿದ್ದಾಗ ಬದುಕು ಅಶುಭವಾಗಿತ್ತು. “ರಿಷಭ”ನಾದ ಮೇಲೆ ಶುಭವು ತಾನಾಗಿ ಕದ ಬಡಿದು ಕೈ ಹಿಡಿಯಿತು. ಜೀವನದ ದಾರಿಯಲ್ಲೀಗ “ಪ್ರಗತಿ”…! ಆತನ ಜೀವದಡದ ತುಂಬೆಲ್ಲ ಅದೆಷ್ಟು ಅವಮಾನದ ಅಲೆಗಳು, ಅವುಗಳೆಲ್ಲ ಸುಖದ ಕುರುಹುಗಳಾಗಿರಲಿಲ್ಲ. ಜ್ವಾಲಾಮುಖಿಯಿಂದ ನೊರೆಗೆರೆದು ಕುದಿವ ಸೋತ ನೀರಿನ ಹನಿಗಳ ಉಂಡೆಯಾಗಿತ್ತು. ವಿದ್ಯಾರ್ಥಿ ದೆಸೆಯಲ್ಲಿ ರಿಷಬ್ ಬುದ್ಧಿವಂತ ಹುಡುಗನಾಗಿರಲಿಲ್ಲ. ಹುಡುಗಾಟದ ಮನಸ್ಸಿಗೆ ಉತ್ತೀರ್ಣನಾಗುವಷ್ಟು ಅಂಕ ದೊರೆತರೆ ಸಾಕೆನ್ನುವ ನಿರ್ಲಿಪ್ತ ಭಾವ. ಬದುಕು ಆತನನ್ನು ಹೇಗೇಗೋ ನಡೆಸಿಕೊಂಡಿತು. ಕುಟುಂಬದ ನೊಗ ಹೊರಲು ನೀರಿನ ಕ್ಯಾನು ಹೊತ್ತರು. ಜೀವನಕ್ಕಂಟಿದ ಆರ್ಥಿಕ ಕೊಳೆಯನ್ನು ತೊಳೆಯಲು ಹೋಟೆಲಿನ ಮೋರಿಯಲ್ಲಿ ನಿಂತು ಪಾತ್ರೆಯನ್ನು ತೊಳೆದರು. ಟೇಬಲನ್ನೂ ಒರೆಸಿದರು. ಸಿನಿಮಾ ಸೆಟ್ ನಲ್ಲಿ ಕಾರ್ಮಿಕರಾಗಿ ದುಡಿದರು. ಅವತ್ತಿನ ದಿನಗೂಲಿ ಹುಡುಗ ಇವತ್ತಿಗೆ ಜಗಮೆಚ್ಚಿದ ಹೀರೋ. ಕುಂದಾಪುರ ಸಮೀಪದ “ಕೆರಾಡಿ” ಎನ್ನುವ ಕಾಂತಾರದ ಊರಿನಿಂದ ಹೊರಟ ಬೆಳ್ಳಿಕಿರಣವೊಂದು ಇವತ್ತಿಗೆ ಇಡಿಯ ಜಗತ್ತನ್ನು ವ್ಯಾಪಿಸಿ ನಿಂತಿದೆ. ಆದರೂ ರಿಷಬ್ ಅವರ ತಲೆಯಿನ್ನೂ ಭುಜದ ಮೇಲೆಯೇ ನಿಂತಿದೆ. ತನ್ನೂರಿನ ಒಡನಾಡಿಗಳು ಸಿಕ್ಕಾಗ, ಪರಿಚಿತರು…
ಸಮಾಜದ ಹಿತಕ್ಕಾಗಿ ಶ್ರಮಿಸುವ ಅನಾಯಾಸ ರಂಗಕಲಾವಿದ, ಕ್ರೀಡಾ ಸ್ಪೂರ್ತಿ, ಸಾಹಿತ್ಯ ಸಾಂಸ್ಕೃತಿಕ ನಿರ್ದೇಶಕ, ಸಮಾಜಮುಖಿ ಬೆಳವಣಿಗೆಯ ಹರಿಕಾರ, ಸಂಘಟನೆ ಸೇವೆ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಟಿಯಿಲ್ಲದ ಹೆಜ್ಜೆಯಿಟ್ಟ ನಿಷ್ಕಲ್ಮಶ ಮನಸ್ಸಿನ ನೇರ ನಡೆ ನುಡಿಯ ಹೆಮ್ಮೆಯ ವ್ಯಕ್ತಿತ್ವ ಮೋಹನದಾಸ್ ರೈ ಎರುಂಬು ಅವರದ್ದು. ಸಿರಿಬಾಗಿಲು ಕಜೆ ಮುತ್ತಣ್ಣ ರೈ ಹಾಗೂ ಯಮುನಾ ರೈ (ಸೂರಂಬೈಲ್ ಬಾರಿಕೆ) ದಂಪತಿಗಳ ಸುಪುತ್ರರಾಗಿ, ಕಾನತಡ್ಕ ಮತ್ತು ಮಾಡತಡ್ಕ ಪ್ರಾಥಮಿಕ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು, ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆ ಹಾಗೂ ಜನತಾ ಪ್ರೌಢ ಶಾಲೆ ಅಡ್ಯನಡ್ಕದಲ್ಲಿ ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದರು. ವಿಟ್ಲ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣದ ಹೊತ್ತಲ್ಲೇ ನಾಯಕತ್ವದ ಚುಕ್ಕಾಣಿ ಹಿಡಿದು ವಿದ್ಯಾರ್ಥಿ ನಾಯಕನಾಗಿ ವಿದ್ಯಾರ್ಥಿಗಳಿಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದರು. ಬಿ.ಕಾಂ ಪದವಿಯನ್ನು ಸಂತ ಫಿಲೋಮಿನಾ ಕಾಲೇಜು ಪುತ್ತೂರಿನಲ್ಲಿ ಮುಗಿಸಿ, ತನ್ನೂರಿಗೆ ಬಸ್ಸಿನ ವ್ಯವಸ್ತೆಯಲ್ಲಿಯ ಅಡಚಣೆಗೆ ನ್ಯಾಯ ಒದಗಿಸಿಕೊಟ್ಟವರು. ಬಾಲ್ಯದಲ್ಲಿಯೇ ಭಜನೆ ಮತ್ತು ನಾಟಕದಲ್ಲಿ ಅಪಾರ ಆಸಕ್ತಿ ಹೊಂದಿದ್ದ ರೈಯವರು 9 ನೇ ತರಗತಿಯಲ್ಲಿರುವಾಗಲೇ…
ಮಧ್ಯ ಕುಲ್ಲಂಗಾಲು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ನೂತನ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾಗಿ ಮನೋಹರ ಶೆಟ್ಟಿ ಸೂರಿಂಜೆ ಆಯ್ಕೆಯಾಗಿದ್ದಾರೆ. ಮನೋಹರ ಶೆಟ್ಟಿ ಅವರು ಸುರತ್ಕಲ್ ಬಂಟರ ಸಂಘದ ನಿರ್ದೇಶಕರಾಗಿ, ಸುರತ್ಕಲ್ ಸ್ಪೋಟ್ಸ್೯ ಮತ್ತು ಕಲ್ಚರಲ್ ಸಂಸ್ಥೆಯ ಅಧ್ಯಕ್ಷರಾಗಿ, ಅನೇಕ ಸಂಘ ಸಂಸ್ಥೆಗಳಲ್ಲಿ ದುಡಿದು ಸಮಾಜ ಸೇವೆ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಅವರ ಧಾರ್ಮಿಕ ಸೇವಾ ಮನೋಭಾವನೆಯಿಂದ ಈಗ ಕುಲ್ಲಂಗಾಲು ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ. ಮುಂಬಯಿ ಸಮಿತಿ ಅಧ್ಯಕ್ಷರಾಗಿ ಪ್ರವೀಣ್ ಜಯರಾಮ ಶೆಟ್ಟಿ ಕುಲ್ಲಂಗಾಲು, ಮಹಿಳಾ ಸಮಿತಿ ಅಧ್ಯಕ್ಷೆಯಾಗಿ ಪೂರ್ಣಿಮಾ ಯತೀಶ್ ರೈ ಕುಲ್ಲಂಗಾಲು ಅಯ್ಕೆಯಾದರು.
ಶರನ್ನವರಾತ್ರಿ ಪ್ರಯುಕ್ತ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಸೆಪ್ಟೆಂಬರ್ 22 ರಿಂದ ಮೊದಲ್ಗೊಂಡು ನವರಾತ್ರಿ ಮಹೋತ್ಸವ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಅಕ್ಟೋಬರ್ 2 ಗುರುವಾರ ವಿಜಯ ದಶಮಿಯಂದು ಸಾಯಂಕಾಲ ಗಂ. 4:30 ರಿಂದ ‘ದಸರಾ ಕವಿಗೋಷ್ಠಿ – 2025’ ನವರಸ ರಂಜನೆಯ ಬಹುಭಾಷಾ ಕವಿ ಮೇಳವನ್ನು ಏರ್ಪಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಎಸ್ ಪ್ರದೀಪ ಕುಮಾರ್ ಕಲ್ಕೂರ ಕವಿಗೋಷ್ಠಿಯನ್ನು ಉದ್ಘಾಟಿಸುವರು. ಕವಿ, ಸಾಹಿತಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲೆಯ 10 ಮಂದಿ ಪ್ರಮುಖ ಕವಿಗಳು ಗೋಷ್ಠಿಯಲ್ಲಿ ಭಾಗವಹಿಸುವರು. ಕವಿಗಳಾದ ಡಾ. ಸುರೇಶ್ ನೆಗಳಗುಳಿ (ಕನ್ನಡ ಗಝಲ್), ಮಹಮ್ಮದ್ ಬಡ್ಡೂರು (ಬ್ಯಾರಿ), ಗುಣಾಜೆ ರಾಮಚಂದ್ರ ಭಟ್ (ಕನ್ನಡ), ಡಾ. ಮೀನಾಕ್ಷಿ ರಾಮಚಂದ್ರ (ಮಲೆಯಾಳಂ), ಅಕ್ಷತಾ ರಾಜ್ ಪೆರ್ಲ (ಹವ್ಯಕ), ಡಾ. ಕವಿತಾ ಸುವರ್ಣ (ಹಿಂದಿ), ಅಕ್ಷಯ ಆರ್. ಶೆಟ್ಟಿ, ವಿಜಯಲಕ್ಷ್ಮಿ ಕಟೀಲು, ವಸಂತಿ ನಿಡ್ಲೆ…
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಧ್ಯ ಇಲ್ಲಿಗೆ ವಿಧಾನ ಸಭೆಯ ಸ್ಪೀಕರ್ ಯು.ಟಿ ಖಾದರ್ ಅವರ ಶಿಫಾರಸ್ಸಿನ ಮೇರೆಗೆ ನೂತನವಾಗಿ ಪ್ರೌಢಶಾಲೆ ಮಂಜೂರಾಗಿದ್ದು, ಆ ಪ್ರಯುಕ್ತ ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಮಧ್ಯ ಶಾಲೆಯ ವತಿಯಿಂದ ಸ್ಪೀಕರ್ ಅವರನ್ನು ಮಂಗಳೂರು ಕಚೇರಿಯಲ್ಲಿ ಅಭಿನಂದಿಸಲಾಯಿತು. ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಮಧ್ಯ, ಖ್ಯಾತ ಉದ್ಯಮಿಗಳಾದ ಶಿವಪ್ರಸಾದ್ ಶೆಟ್ಟಿ, ರಂಜನ್ ಚೌಟ ಮಧ್ಯ ಉಪಸ್ಥಿತರಿದ್ದರು.
ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಹಾಗೂ ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಇವರ ಜಂಟಿ ಆಶ್ರಯದಲ್ಲಿ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮ
ಮುಂಬಯಿ:- ವಿಶ್ವ ವಿದ್ಯಾಲಯ, ಕನ್ನಡ ವಿಭಾಗ ಹಾಗೂ ಡಾ. ವಿಶ್ವನಾಥ ಕಾರ್ನಾಡ್ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಿರುವ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮವು ಸೆಪ್ಟೆಂಬರ್ 26ರಂದು ಶುಕ್ರವಾರ ಬೆಳಿಗ್ಗೆ 11.30ರಿಂದ ಮುಂಬೈ ವಿಶ್ವವಿದ್ಯಾಲಯದ ಜೆ.ಪಿ ನಾಯಕ್ ಭವನ, ವಿದ್ಯಾನಗರಿ ಸಾಂತಾಕ್ರೂಜ್( ಪೂ) ಇಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಂಬೈ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಪ್ರೊ.ಜಿ.ಎನ್ ಉಪಾಧ್ಯ ಅವರ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಹಿರಿಯ ಜಾನಪದ ವಿದ್ವಾಂಸರಾದ ಡಾ. ಕಾಳೇಗೌಡ ನಾಗವಾರ ಅವರು, ಅತಿಥಿಯಾಗಿ ಬಾಂಬೆ ಬಂಟ್ಸ್, ಅಸೋಸಿಯೇಷನ್ ಮುಂಬೈ ಇದರ ಅಧ್ಯಕ್ಷರಾದ ನ್ಯಾಯವಾದಿ ಡಿ.ಕೆ ಶೆಟ್ಟಿ ಇವರು ಪಾಲ್ಗೊಳ್ಳಲಿದ್ದಾರೆ. ಅಂದು ಡಾ. ವಿಶ್ವನಾಥ್ ಕಾರ್ನಾಡರ ಅಪರಾಧಿ( ಕನ್ನಡದಿಂದ ಮರಾಠಿಗೆ ಅನುವಾದಿತ ಕಥೆಗಳು) ಹಾಗೂ ಲಿಲ್ಲಿ ಬಂದು ಹೋದಳು (ಕಥಾಸಂಕಲನ) ಕೃತಿಗಳು ಬಿಡುಗಡೆಗೊಳ್ಳಲಿವೆ. ಇದೇ ಸಂದರ್ಭದಲ್ಲಿ ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿರುವ ಅಂತಹ ಗಣೇಶ ಮಂಗಳಮೂರ್ತಿ (ಮೂಲ ಮರಾಠಿ ಲೇಖಕರಾದ ಮಾಧವಿ ಕುಂಠೆ, ಅನುವಾದ ಸರೋಜಿನಿ ತರೆ) ಕೃತಿಯೂ ಬಿಡುಗಡೆಗೊಳ್ಳಲಿದೆ. ಇದೇ…