Author: admin

ಕೃಷ್ಣವಾಣಿ ಪಿಕ್ಚರ್ಸ್ ಲಾಂಛನದಲ್ಲಿ ತಯಾರಾದ ನಡುಬೈಲ್ ಜಗದೀಶ್ ಅಮೀನ್ ನಿರ್ಮಾಣದ ನಿತಿನ್ ರೈ ಕುಕ್ಕವಳ್ಳಿ ನುಳಿಯಾಲು ನಿರ್ದೇಶನದಲ್ಲಿ ಮೂಡಿ ಬಂದಿರುವ “ಧರ್ಮ ಚಾವಡಿ” ತುಳು ಚಿತ್ರ ಭಾರತ್ ಮಾಲ್ ನ ಭಾರತ್ ಸಿನಿಮಾಸ್ ನಲ್ಲಿ ಇಂದು ಬಿಡುಗಡೆಗೊಂಡಿತು. ದೀಪ ಬೆಳಗಿಸುವ ಮೂಲಕ ಸಿನಿಮಾಕ್ಕೆ ಚಾಲನೆ ನೀಡಿ ಮಾತಾಡಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು, ಆತ್ಮೀಯ ಮಿತ್ರ ನಿತಿನ್ ರೈ ಕುಕ್ಕುವಳ್ಳಿ ಅವರು ಮಾಡಿರುವ ಮೊದಲ ಸಿನಿಮಾ “ಧರ್ಮ ದೈವ” ತುಳುವರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇಂದು ಅವರ ಎರಡನೇ ಸಿನಿಮಾ “ಧರ್ಮ ಚಾವಡಿ” ಬಿಡುಗಡೆಯಾಗುತ್ತಿದೆ. ತುಳುವರ ಆರಾಧನೆಯಾಗಿರುವ ದೈವಾರಾಧನೆ ಕುರಿತಾದ ಸಿನಿಮಾ ಇದಾಗಿದ್ದು ತುಳುವರು ಮನಪೂರ್ವಕವಾಗಿ ಸಿನಿಮಾ ನೋಡುವ ಮೂಲಕ ಗೆಲ್ಲಿಸಬೇಕು ಎಂದರು. ವೇದಿಕೆಯಲ್ಲಿ ಹಿರಿಯ ರಂಗಕರ್ಮಿ ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್, ಡಾ| ದೇವದಾಸ್ ಕಾಪಿಕಾಡ್, ಪ್ರಕಾಶ್ ಪಾಂಡೇಶ್ವರ್, ತುಳು ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್ ಧನರಾಜ್, ಕ್ಯಾಟ್ಕಾ ಅಧ್ಯಕ್ಷ ಲಂಚುಲಾಲ್ ಕೆ ಎಸ್, ತುಳು…

Read More

ತುಳುವರ ಪರಂಪರೆ, ಭಾಷೆ ಹಾಗೂ ಸಂಸ್ಕೃತಿಯ ಪೋಷಣೆಗೆ ಶತಮಾನದಿಂದ ಶ್ರಮಿಸುತ್ತಿರುವ ತುಳುವ ಮಹಾಸಭೆಯ ಕುಂದಾಪುರ ತಾಲೂಕು ಸಂಚಾಲಕರಾಗಿ ಹಿರಿಯ ಶಿಕ್ಷಣಾಧಿಕಾರಿ ಹಿಲಿಯಾಣ ಬಾಲಕೃಷ್ಣ ಶೆಟ್ಟಿಯವರನ್ನು ನೇಮಕ ಮಾಡಲಾಗಿದೆ. 1941ರ ಜೂನ್ 15ರಂದು ಕುಂದಾಪುರ ತಾಲ್ಲೂಕಿನ ಹಾರಾಡಿಯಲ್ಲಿ ಜನಿಸಿದ ಬಾಲಕೃಷ್ಣ ಶೆಟ್ಟಿಯವರು, ದಿವಂಗತ ಕುಚ್ಚೂರು ಮಹಾಬಲ ಶೆಟ್ಟಿ ಮತ್ತು ಹಿಲಿಯಾಣ ಕೃಷ್ಣಮ್ಮ ಶೆಡ್ತಿಯವರ ಪುತ್ರರಾಗಿದ್ದಾರೆ. ತಮ್ಮ ಶಿಕ್ಷಣವನ್ನು ಬ್ರಹ್ಮಾವರ, ಉಡುಪಿ, ಮಂಗಳೂರು ಹಾಗೂ ಧಾರವಾಡದಲ್ಲಿ ಪಡೆದು ಎಂ.ಎ., ಬಿ.ಎಡ್ ಪದವಿಗಳನ್ನು ಗಳಿಸಿದ್ದಾರೆ. 1960ರಲ್ಲಿ ಮುದೂರಿಯ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಪ್ರಾರಂಭಿಸಿದ ಅವರು ನೂಜಿ, ಕೋಣಿ, ವಡೇರಹೋಬಳಿ ಸೇರಿದಂತೆ ಹಲವು ಶಾಲೆಗಳಲ್ಲಿ ಹಂತ ಹಂತವಾಗಿ ಪದೋನ್ನತಿ ಪಡೆದು, ಕೊನೆಗೆ ಕುಂದಾಪುರ ತಾಲೂಕು ಶಿಕ್ಷಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. 1986 ರಲ್ಲಿ ಇತಿಹಾಸ ಉಪನ್ಯಾಸಕನಾಗಿ ವಂಡ್ಸೆ ಸರಕಾರಿ ಪಿ.ಯು ಕಾಲೇಜಿನಲ್ಲಿ ಸೇವೆ ಆರಂಭಿಸಿ, ನಂತರ ಕುಂದಾಪುರ ಸರ್ಕಾರಿ ಪಿ.ಯು. ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ 1999ರಲ್ಲಿ ನಿವೃತ್ತಿ ಹೊಂದಿದರು. ನಿವೃತ್ತಿ ನಂತರವೂ ಅವರು ಶ್ರಮನಿಷ್ಠತೆಯಿಂದ ಸೇವಾ ಕಾರ್ಯಗಳಲ್ಲಿ…

Read More

ವಿವಿಧ ಚಾರಿಟಿ ಸಂಸ್ಥೆಗಳಿಂದ ವಿದ್ಯಾರ್ಥಿವೇತನ ಪಡೆಯುವ ವಿದ್ಯಾರ್ಥಿಗಳು ಮುಂದೆ ಅದೇ ರೀತಿಯ ವಿದ್ಯಾರ್ಥಿವೇತನಗಳನ್ನು ಕೊಡುವಂತರಾಗಬೇಕು. ಕೃತಜ್ಞತೆಯು ಅತಿ ದೊಡ್ಡ ಮೌಲ್ಯವಾಗಿದೆ. ನಮ್ಮ ಶಿಕ್ಷಣಕ್ಕೆ ವಿವಿಧ ವ್ಯಕ್ತಿ ಮತ್ತು ಸಂಸ್ಥೆಗಳಿಂದ ದೊರೆತ ವಿದ್ಯಾರ್ಥಿವೇತನವನ್ನು ಸದುಪಯೋಗಪಡಿಸುವುದು ಮಾತ್ರವಲ್ಲದೇ ಅದನ್ನು ನೆನಪಲ್ಲಿ ಇಟ್ಟುಕೊಳ್ಳುವುದು ಮತ್ತು ಮುಂದೆ ನಾವು ಸಂಪಾದನೆ ಆರಂಭಿಸಿದಾಗ ಅದರ ಒಂದು ಭಾಗವನ್ನು ಸಮಾಜಕ್ಕೆ ಹಿಂದಿರುಗಿಸುವುದು ನಮ್ಮೆಲ್ಲರ ಕರ್ತವ್ಯ ಆಗಬೇಕು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಹೇಳಿದರು. ಅವರು ಬೆಳ್ಮಣ್ ಜೂನಿಯರ್ ಕಾಲೇಜಿನ ಸಭಾಂಗಣದಲ್ಲಿ ಅಮ್ಮನ ನೆರವು ಫೌಂಡೇಶನ್ ವತಿಯಿಂದ ನಡೆದ ವಿದ್ಯಾರ್ಥಿವೇತನ ಮತ್ತು ಸಹಾಯಧನ ಹಸ್ತಾಂತರ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಿದ್ದರು. ಅಮ್ಮನ ನೆರವು ಫೌಂಡೇಶನ್ ಮೂಲಕ ಸರಕಾರಿ ಶಾಲೆಗಳ ಪ್ರತಿಭಾವಂತ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಮೂರು ಲಕ್ಷ ರೂ ಮೊತ್ತದ ವಿದ್ಯಾರ್ಥಿವೇತನಗಳನ್ನು ಹಸ್ತಾಂತರ ಮಾಡಿ ಅವರು ಶುಭ ಕೋರಿದರು. ಸಹಕಾರಿ ಧುರೀಣ ಹಾಗೂ ಬೆಳಪು ಗ್ರಾಮದ ಅಭಿವೃದ್ಧಿಯ ಹರಿಕಾರರಾದ ಡಾ| ಬೆಳಪು ದೇವಿಪ್ರಸಾದ್…

Read More

ಶ್ರೀಲಂಕಾದಲ್ಲಿ ಜುಲೈ 4 ರಿಂದ 10 ರ ವರೆಗೆ ನಡೆದ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಸ್ಪರ್ಧಿಸಿದ್ದ ಬಬಿತಾ ಶೆಟ್ಟಿ ಸುರತ್ಕಲ್ ಅವರು ಹೈಜಂಪ್ ನಲ್ಲಿ ಬೆಳ್ಳಿ, ರಿಲೇಯಲ್ಲಿ ಕಂಚು ಪದಕ ಪಡೆದಿದ್ದಾರೆ‌. ಶ್ರೀಲಂಕಾದ ಮಹೀಂದ್ರ ರಾಜಪಕ್ಷ ಮೈದಾನದಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ಭಾರತದಿಂದ ಒಟ್ಟು 46 ಕ್ರೀಡಾ ಪಟುಗಳು ಭಾಗವಹಿಸಿದ್ದರು. ಬಬಿತಾ ಶೆಟ್ಟಿ ಅವರು ಸುರತ್ಕಲ್ ಬಂಟರ ಸಂಘದ ಮಹಿಳಾ ಕ್ರೀಡಾ ಕಾರ್ಯದರ್ಶಿಯಾಗಿದ್ದಾರೆ. ಕ್ರೀಡೆಯಲ್ಲಿ ಇವರು ಅನೇಕ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ. ವರದಿ : ಬಾಳ ಜಗನ್ನಾಥ ಶೆಟ್ಟಿ

Read More

ಪಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯಕ್ಷಧ್ರುವ ಯಕ್ಷ ಶಿಕ್ಷಣ, ಯಕ್ಷಗಾನ ಶಿಕ್ಷಣ ಅಭಿಯಾನವು ಯಕ್ಷಧ್ರುವ ಪಟ್ಲ ಫೌಂಡೇಶನ್ ಪಳ್ಳಿ ನಿಂಜೂರು ಘಟಕದ ಸಹಯೋಗದಲ್ಲಿ 2025-26ನೇ ಸಾಲಿನ ಉಚಿತ ಯಕ್ಷಗಾನ ತರಬೇತಿ ಉದ್ಘಾಟನೆ ಪಳ್ಳಿ ನಿಂಜೂರು ಘಟಕದ ಗೌರವಾಧ್ಯಕ್ಷರಾದ ಭರತ್ ಹೆಗ್ಡೆ ಪಳ್ಳಿಯವರು ದೀಪ ಬೆಳಗಿ, ಮಕ್ಕಳ ಯಕ್ಷಯಾನಕ್ಕೆ ಶುಭ ಹಾರೈಸಿದರು. ಉದ್ಘಾಟನಾ ಸಮಾರಂಭದಲ್ಲಿ ಪಟ್ಲ ಫೌಂಡೇಶನ್ ಪಳ್ಳಿ ನಿಂಜೂರು ಘಟಕದ ಅಧ್ಯಕ್ಷರಾದ ಸುನಿಲ್ ಶೆಟ್ಟಿ, ಘಟಕದ ಉಪಾಧ್ಯಕ್ಷರಾದ ರಮಾನಂದ ಕಿಣಿ, ಘಟಕದ ಸಂಚಾಲಕರಾದ ಸುನಿಲ್ ಕೋಟ್ಯಾನ್, ಘಟಕದ ಕೋಶಾಧಿಕಾರಿ ನಿಧೀಶ್ ಆಚಾರ್ಯ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಪ್ರಭಾಕರ ಬಂಗೇರ, ಕಲಾ ಪೋಷಕರಾದ ಸುರೇಶ್ ಪಾಣರ, ಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪ್ರೇಮಲತಾ ಉಪಸ್ಥಿತರಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಪಳ್ಳಿ ನಿಂಜೂರು ಘಟಕದ ಸಂಚಾಲಕರಾದ ಸುನಿಲ್ ಕೋಟ್ಯಾನ್ ಮಾತನಾಡಿ, ಶಾಲಾ ಮಕ್ಕಳ ಯಕ್ಷಗಾನ ಕಲಿಕೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ, ಈ ವರ್ಷದ ಉಚಿತ ಯಕ್ಷಗಾನ ತರಗತಿಗೆ ಶುಭ ಹಾರೈಸಿದರು. ಶಾಲಾ ಎಸ್.ಡಿ.ಎಂ.ಸಿ…

Read More

ಮುಂಬಯಿಯ ಪ್ರಸಿದ್ಧ ಹೊಟೇಲ್ ಉದ್ಯಮಿ, ಸಮಾಜಸೇವಕ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಕರುಣಾಕರ್ ಶೆಟ್ಟಿ ಏಳಿಂಜೆ ಕೊಂಜಾಲು ಇವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ವಿಶೇಷ ಮನವಿಗೆ ಸ್ಪಂದಿಸಿ ಜಾಗತಿಕ ಬಂಟರ ಸಂಘಗಳ ಒಕ್ಕೂಟಕ್ಕೆ ಪೋಷಕ ಸದಸ್ಯರಾಗಿ ಸೇರ್ಪಡೆಗೊಂಡಿದ್ದಾರೆ. ಕಲಿಯುತ್ತಿರುವ ಬಡ ಮಕ್ಕಳಿಗೆ ಸದಾ ನೆರವನ್ನು ನೀಡುತ್ತಿರುವ ಇವರಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನ ದಯೆ ಇವರ ಮತ್ತು ಇವರ ಕುಟುಂಬದ ಮೇಲೆ ಸದಾ ಇರಲಿ ಎಂದು ಹಾರೈಸಿ, ಒಕ್ಕೂಟದ ಪರವಾಗಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Read More

ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಕಾತ್ರಜ್ ಪುಣೆ ಇದರ ಆಡಳಿತ ಮಂಡಳಿ, ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಂಘ ಇದರ ವತಿಯಿಂದ 2024 -25 ರ ಶೈಕ್ಷಣಿಕ ಸಾಲಿನಲ್ಲಿ ಎಸ್.ಎಸ್.ಸಿ ಹಾಗೂ ಎಚ್.ಎಸ್.ಸಿ ಪರೀಕ್ಷೆಯಲ್ಲಿ ಶೇಕಡಾ 80% ಕ್ಕಿಂತ ಜಾಸ್ತಿ ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವು ಜುಲೈ 16 ಬುಧವಾರ ಸಂಕ್ರಮಣದಂದು ನಡೆಯಲಿರುವ ಪೂಜೆಯ ಬಳಿಕ ಮಧ್ಯಾಹ್ನ 2:00 ಗಂಟೆಗೆ ಸರಿಯಾಗಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಎಸ್.ಎಸ್.ಸಿ ಹಾಗೂ ಎಚ್.ಎಸ್.ಸಿ ಪರೀಕ್ಷೆಯಲ್ಲಿ ಶೇಖಡಾ 80% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಅಥವಾ ಪಾಲಕರು ಮಕ್ಕಳ ಹೆಸರನ್ನು ಆಡಳಿತ ಮಂಡಳಿಯ ಸುಭಾಶ್ ಶೆಟ್ಟಿ (82378 39763 ), ರಘರಾಮ ರೈ (9423011274), ಸಚ್ಚಿದಾನಂದ ಶೆಟ್ಟಿ (94219 10330) ಜಗದೀಶ್ ಶೆಟ್ಟಿ (93733 11288) ಅಥವಾ ದೇವಸ್ಥಾನದ ಮೇಲ್ವಿಚಾರಕರಾದ ರಶ್ವಿತ್ (6364-225113) ರವರನ್ನು ಸಂಪರ್ಕಿಸಿ ನೊಂದಾಯಿಸಿಕೊಳ್ಳುವಂತೆ ದೇವಸ್ಥಾನದ ವಿಶ್ವಸ್ಥ ಮಂಡಳಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿರುತ್ತಾರೆ. ವರದಿ…

Read More

ಮೂಡುಬಿದಿರೆ: ಮೇ 2025 ರಲ್ಲಿ ನಡೆದ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಶೇಕಡಾ 15.09 ಫಲಿತಾಂಶ ಬಂದಿದ್ದರೆ, ಆಳ್ವಾಸ್‌ನ ಒಟ್ಟು 43 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 44.79 ಫಲಿತಾಂಶ ದಾಖಲಿಸಿದ್ದಾರೆ. ಆಳ್ವಾಸ್‌ನ ವಿದ್ಯಾರ್ಥಿಗಳಾದ ಗೋಡ್ವಿಲ್(309), ಜೆ ಬಸವರಾಜ್ (289), ಅವನಿ ಉಮೇಶ್ ರಾವ್ (283), ನಂದಿಶ್ ಕೆ ಎ (274), ಹರ್ಷವರ್ಧನ್ (273), ಸನ್ನಿಧಿ (271), ಅಪರ್ಣ ಸುಧಿ (265), ಚಿರಂತನ (263), ಅಂಕಿತಾ ರಾವ್(258), ಪ್ರಜ್ನಾ ಎನ್ (253), ನವದೀಪ್ ರೆಡ್ಡಿ (249), ವಿಸ್ಮಯ್ ಭಟ್(244) ಅನಿರುಧ್ದ್(241), ನಂದೀಶ್ ಎಸ್. (238), ಪ್ರಣಯ್ (237), ಜೈಶ್ನವ್ (236), ರೋಹಿತ್ ಪೂಜಾರಿ (234), ಶ್ರವಣ್ (228), ವೈಷ್ಣವಿ ಪ್ರಸಾದ್ (228), ಅಸ್ನಾ (225), ನಕ್ಷತ್ರಾ ಸಿ. (224), ರಿಯೋನಾ (224), ಸಾಕ್ಷಿ ಆರ್ (224), ಕ್ರಷ್ಣ ವರ್ಮ (221), ಸಮೀಕ್ಷಾ ಕೋಟ್ಯಾನ್ (218), ವೃಂದಾ (218), ಮಿಝ್ಬಾ ಶೇಖ್ (217), ವಚನ್ ರವಿಕುಮಾರ್ (217), ಅಂಬಿಕಾ ಕೆ ಎಸ್. (214),…

Read More

ಗುರುಗಳು ಅಂದಾಗ ನಮಗೆ ನೆನಪಿಗೆ ಬರೋದು ಬರೀ ಪಾಠ ಮಾಡಿದ ಗುರುಗಳು. ನಿಜ, ಅದರಲ್ಲೇನು ತಪ್ಪಿಲ್ಲ. ಒಮ್ಮೆ ಬದುಕಿನ ಕಿರುದಾರಿಯಿಂದ ನಡೆದುಕೊಂಡು ಬಂದು ಹೆದ್ದಾರಿಯ ತನಕ ಕೈ ಹಿಡಿದವರು. ಕೈ ಕೊಟ್ಟವರು, ಬೆಳೆಸಿದವರು, ಬೆರೆಸಿದವರು ಬಳಸಿದವರು ಎಲ್ಲರೂ ಗುರುಗಳೇ ಅಲ್ವಾ? ನಮಗೆ ಯಾರು ಯಾವ ರೀತಿ ಗುರುಗಳು ಆದ್ರು ಅನ್ನೋದರ ಬಗ್ಗೆ ನಾವು ಮಾತಾಡೋಣ. ಗುರು ಪೂರ್ಣಿಮೆಯಂದು ಎಲ್ಲಾ ಗುರುಗಳನ್ನು ಅವರ ಉಪದೇಶ, ಉಪನಿಷತ್ತನ್ನು ಮನಸಾರೆ ಒಪ್ಪಿಕೊಳ್ಳೋಣ. ಅಪ್ಪಿಕೊಳ್ಳೋಣ. ಬಾಲ್ಯದಲ್ಲಿ ನಮ್ಮ ಯೋಚನಾ ಶಕ್ತಿಯೇ ನಮಗೆ ಗುರು ಮತ್ತೆ ಆಗುತ್ತೆ ಜೀವನ ಶುರು. ಕಲಿಯುವ, ಕಲಿಸುವ, ಮುನ್ನಡೆಯುವ, ಮುನ್ನಡೆಸುವ, ಮುಗ್ಗರಿಸುವ, ಮಗ್ಗುಲು ಬದಲಿಸುವ ಪಾಠ. ಒಂದು ಕಾಲದಲ್ಲಿ ಗುರುಕುಲವಿತ್ತು. ಶಿಷ್ಯರನ್ನು ಬಲಿಷ್ಠರನ್ನಾಗಿ ಮಾಡುವ ಸರಸ್ವತಿ ದೇಗುಲ ಈಗ ಅದುವೇ ವಿಶ್ವವಿದ್ಯಾಲಯವಾಗಿ ವಿಶ್ವರೂಪ ಪಡೆದಿದೆ. ನಮ್ಮಕಾಲದ ಗುರುಗಳ ಹಾಗೆ ಈಗಿನ ಕಾಲದಲ್ಲಿ ಅಂತಹ ಗುರುಗಳು ಇಲ್ಲ ಅನ್ನೋದು ವಾಡಿಕೆ. ಕೆಲವೊಮ್ಮೆ ಅದೂ ಸರಿ ಅಂತಾನೂ ಅನಿಸ್ತದೆ. ಆವಾಗ ಗುರುಗಳು ಹೆಚ್ಚಾಗಿ ಪರಿವಾರದ ಸದಸ್ಯರಂತೆ…

Read More

ನಮ್ಮ ವಿವಿಧ ಧರ್ಮದ ಆಚರಣೆಗಳು ಬೇರೆಯಾದರೂ ಉದ್ದೇಶ ಒಂದೇ ಜಗತ್ತಿಗೆ ಒಳಿತು ಮಾಡುವ ಬೆಳಕು ನೀಡುವುದು. ಮುದ್ರಾಡಿ ಶ್ರೀ ಕ್ಷೇತ್ರವು ಅಂತಹ ಮಹತ್ವದ ಕಾರ್ಯವನ್ನು ನಡೆಸುತ್ತಿದೆ. ಮುದ್ರಾಡಿ ಕ್ಷೇತ್ರಕ್ಕೆ ಅದ್ಭುತ ಶಕ್ತಿಯಿದೆ. ಧರ್ಮ ಯೋಗಿ ಮತ್ತು ಕರ್ಮಯೋಗಿಯಾಗಿದ್ದ ಮೋಹನ ಸ್ವಾಮೀಜಿಯಿಂದ ಕ್ಷೇತ್ರವು ಬೆಳಗುತ್ತಿದೆ ಎಂದು ಗೌರಿಗದ್ದೆಯ ಶ್ರೀ ವಿನಯ್‌ ಗುರೂಜಿ ಹೇಳಿದರು. ಅವರು ಹೆಬ್ರಿಯ ಶ್ರೀ ಕ್ಷೇತ್ರ ಮುದ್ರಾಡಿ ಅಭಯಹಸ್ತೆ ಶ್ರೀ ಆದಿಶಕ್ತಿ ಮತ್ತು ನಂದಿಕೇಶ್ವರ ದೇವಸ್ಥಾನದಲ್ಲಿ ನಡೆದ ಧರ್ಮಯೋಗಿ ಮೋಹನ ಸ್ವಾಮೀಜಿಯವರ ೪ನೇ ವರ್ಷದ ಆರಾಧನಾ ಮಹೋತ್ಸವದಲ್ಲಿ ಧರ್ಮಯೋಗಿ ಸಮ್ಮಾನ ಸ್ವೀಕರಿಸಿ ಮಾತನಾಡಿದರು. ಜಾತಿ ಮತ ಧರ್ಮವನ್ನು ನಾವು ಪ್ರೀತಿಸುವುದರಿಂದ ಮಾತ್ರ ಧರ್ಮ ಬೆಳೆಯುತ್ತದೆ. ಕರಾವಳಿ ಜಿಲ್ಲೆ ತುಳುನಾಡಿನಲ್ಲಿ ನಾಗರಾಧನೆ ಮತ್ತು ದೈವರಾಧನೆಯ ಮೂಲಕ ಒಗ್ಗಟ್ಟು ಇದೆ. ಅದು ಸದೃಡ ಕುಟುಂಬದ ವ್ಯವಸ್ಥೆಗೆ ಕಾರಣವಾಗಿದೆ. ಆ ಮೂಲಕ ಸಂಘಟಿತ ಸಮಾಜ ನಿರ್ಮಾಣವಾಗಿದೆ ಎಂದು ವಿನಯ ಗುರೂಜಿ ಹೇಳಿದರು. ಮುಖಂಡ ಮುದ್ರಾಡಿ ಮಂಜುನಾಥ ಪೂಜಾರಿ ಮಾತನಾಡಿ, ಸರ್ವ ಧರ್ಮದವರೂ ಕೂಡ ಬಂದು…

Read More