Author: admin
‘ಅಂಕಿತ್ ವಿಸ್ತಾ’ ಸುಮಾರು ಇಪ್ಪತ್ತು ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಎದ್ದು ನಿಂತಿರುವ ರೆಸಾರ್ಟ್. ಬೆಂಗಳೂರಿನ ನೆಲಮಂಗಳದಲ್ಲಿ ಪ್ರವಾಸಿಗರ ಆಕರ್ಷಣೆ ಕೇಂದ್ರವೆಂದು ದೇಶಾದ್ಯಂತ ಹೆಸರು ಗಳಿಸಿದ ಈ ಸಂಕೀರ್ಣದಲ್ಲಿ ವಿವಾಹ ಸಮಾರಂಭ ಮೊದಲಾದ ಶುಭಕಾರ್ಯಗಳಿಗೆ ತೆರೆದುಕೊಂಡಿರುವ ಸುಸಜ್ಜಿತ ಸಭಾಗೃಹ ಜೊತೆಗೆ ದಣಿದ ಜೀವಗಳಿಗೆ ವಿಶ್ರಾಂತಿ ನೀಡುವ ಸಕಲ ಸೌಲಭ್ಯಗಳನ್ನು ಹೊಂದಿದ ವಸತಿ ಗೃಹ ಸಮುಚ್ಚಯ ಪ್ರವಾಸಿಗರನ್ನು ಈ ಕಡೆಗೆ ಕೈ ಬೀಸಿ ಕರೆಯುತ್ತಿದೆ. ಈಜು ಕೊಳ, ವಿಶಾಲ ಆಟದ ಮೈದಾನ, ದೇಹ ಮನಸ್ಸುಗಳಿಗೆ ಹಿತವಾದ ವ್ಯಾಯಾಮ ನೀಡಬಹುದಾದ ಪ್ರಶಸ್ತ ಸ್ಥಳ ಸಲಕರಣೆಗಳು, ಭೋಜನ ಶಾಲೆ, ಅತಿಥಿ ಸತ್ಕಾರ ವಿಭಾಗ ಎಲ್ಲವೂ ಇಲ್ಲಿವೆ. ಸಮಾಲೋಚನಾ ಕೊಠಡಿಗಳು, ಹಸಿರು ತಂಪು ವಾತಾವರಣ, ಬಗೆ ಬಗೆಯ ವೃಕ್ಷ ಜಾತಿಗಳು ಗಿಡ ಬಳ್ಳಿಗಳು ಎಲ್ಲವೂ ಸುಂದರ ಹೃದ್ಯ ಮನೋಹರ. ಕರಾವಳಿ ಕರ್ನಾಟಕದ ಪರಿಸರದೊಂದಿಗೆ ನಮ್ಮನ್ನು ಜೋಡಿಸಿ ತಾದಾತ್ಮ್ಯತೆಗೊಳಿಸುವ ನಿಸರ್ಗ ಸೌಂದರ್ಯ ಇದೆ.ತುಳುನಾಡಿನ ಹೆಮ್ಮೆಯ ಉದ್ಯಮಿ ವಸಂತ ಕುಮಾರ್ ಶೆಟ್ಟಿ ಅವರ ಕನಸಿನ ಕೂಸು ಇಲ್ಲಿ ಅದ್ಭುತ ರೀತಿಯಲ್ಲಿ ಸಾಕಾರಗೊಂಡಿದೆ.…
ಗ್ಲೋಬಲ್ ಅಲಿಯನ್ಸ್ ಆಫ್ ತುಳು ಅಸೋಸಿಯೇಷನ್ (GATA) ವತಿಯಿಂದ ಜಾಗತಿಕ ಮಟ್ಟದಲ್ಲಿ ತುಳು ಲಿಪಿ ಕಲಿಕಾ ತರಗತಿ ಆರಂಭ
ಗ್ಲೋಬಲ್ ಅಲಿಯನ್ಸ್ ಆಫ್ ತುಳು ಅಸೋಸಿಯೇಷನ್ (GATA) ವಿಶ್ವದ ಎಲ್ಲಾ ದೇಶಗಳ ತುಳು ನಾಯಕರುಗಳನ್ನು ಒಳಗೊಂಡ ಸಂಸ್ಥೆ. ತನ್ನ ಮೊದಲನೆಯ ತುಳು ಲಿಪಿ ಕಲಿಕಾ ಕಾರ್ಯಕ್ರಮದ ಉದ್ಘಾಟನೆಯನ್ನು ಈ ತಿಂಗಳ ಸೆಪ್ಟೆಂಬರ್ 21 ರಂದು Zoom ವೇದಿಕೆಯಲ್ಲಿ ಭಾರತದ ಸಮಯ ಸಂಜೆ 7 ಗಂಟೆಗೆ ಆಯೋಜಿಸಿದೆ. ಈ ಸಂದರ್ಭದಲ್ಲಿ ಒಡಿಯೂರು ಶ್ರೀಗಳು ಆಶೀರ್ವಚನ ಕೊಡಲಿದ್ದು, ಹಿರಿಯರಾದ ಡಿ.ಕೆ. ಶೆಟ್ಟಿ ಹಾಗೂ ಸರ್ವೋತ್ತಮ ಶೆಟ್ಟಿ (ಅಬುಧಾಬಿ) ಅತಿಥಿಗಳಾಗಿ ಭಾಗವಹಿಸಲಿದ್ದಾರೆ.ಫ್ಲೋರಿಡಾ (ಯುಎಸ್ಎ) ದ ಶ್ರೀಮತಿ ಶ್ರೀವಲ್ಲಿ ರೈ ಮಾರ್ಟೆಲ್ ಅವರು ತುಳು ಲಿಪಿ ಕಲಿಸುತ್ತಿದ್ದು, ಅವರಿಗೆ ಸಹಾಯಕರಾಗಿ ಪ್ರಭಾಕರ್ ಭಟ್ (ಯುಎಸ್ಎ), ಸುರೇಶ್ ಪೂಂಜ ಆಸ್ಟ್ರೇಲಿಯಾ, ಶುಭಶ್ರಿ ಕೆ.ಎಂ(ಇಂಡಿಯಾ), ಸರಿತಾ ಅರುಣ್ ಶೆಟ್ಟಿ (ಯುಕೆ), ಶ್ರುತಾ ಶೆಟ್ಟಿ (ಯುಕೆ), ಚಂದ್ರಹಾಸ ಶೆಟ್ಟಿ (ಮಸ್ಕಟ್) ಸಹಕರಿಸಲಿದ್ದಾರೆ. ತಂಡಕ್ಕೆ ಟೀಮ್ ಐಲೇಸಾ ತಾಂತ್ರಿಕ ಸಹಕಾರ ನೀಡುತ್ತಿದೆ. ತುಳು ಲಿಪಿ ಕಲಿಯಲು ಇಚ್ಛಿಸುವವರು ಕೆಳಗಿನ Google Form ಮೂಲಕ ತಮ್ಮ ಹೆಸರು ನೋಂದಾಯಿಸಿಕೊಳ್ಳಬಹುದು.Registration Form https://forms.gle/y3VRfqvRDUT6UBQ68 ಫಾರ್ಮ್ ತುಂಬಲು…
ಎಪಿಟಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಪೆರ್ಡೂರಿನಲ್ಲಿ 33 ವರ್ಷಗಳ ಕಾಲ ಶಿಕ್ಷಕರಾಗಿ ವಯೋ ನಿವೃತ್ತಿ ಹೊಂದಿದ ಉದಯಕುಮಾರ್ ಹೆಗ್ಡೆ ಕುಕ್ಕೆಹಳ್ಳಿ ಇವರನ್ನು ಅವರ ಸ್ವಗೃಹ ಕುಕ್ಕೆಹಳ್ಳಿಯಲ್ಲಿ ಕುಂದಾಪುರ ಫ್ರೆಂಡ್ಸ್ ವತಿಯಿಂದ ಸನ್ಮಾನಿಸಲಾಯಿತು. ಕೆಂಜೂರು ವೀರೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ನವೀನ್ ಚಂದ್ರ ಶೆಟ್ಟಿ ಪ್ರಸ್ತಾವಿಸಿದರು. ನಿವೃತ್ತ ಶಿಕ್ಷಕ ಸಂತೋಷ್ ಕುಮಾರ್ ಹೆಗ್ಡೆ ಮೊಳಹಳ್ಳಿ ಅವರು ನಿವೃತ್ತರಿಗೆ ಶಾಲು ಹೊದಿಸಿ ಸನ್ಮಾನಿಸಿದರು.ಟೀಚರ್ಸ್ ಕೋ ಆಪರೇಟಿವ್ ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಸಮೂಹ ಸಂಪನ್ಮೂಲ ವ್ಯಕ್ತಿ ವಂಡ್ಸೆ ನಾಗರಾಜ ಶೆಟ್ಟಿ, ಚೋನಾಳಿ ಶಾಲೆಯ ಮುಖ್ಯ ಉಪಾಧ್ಯಾಯ ಪ್ರದೀಪ್ ಕುಮಾರ್ ಭಂಡಾರಿ, ದೈಹಿಕ ಶಿಕ್ಷಕ ಅಶೋಕ್ ಕುಮಾರ್ ಶೆಟ್ಟಿ ಕೆಂಜೂರು, ಪಿಎಂ ಶ್ರೀ ಕುವೆಂಪು ಶಾಲೆ ತೆಕ್ಕಟ್ಟೆಯ ಅಧ್ಯಾಪಕ ಸದಾನಂದ ಶೆಟ್ಟಿ ವಕ್ವಾಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹನುಮಂತನಗರದ ದೈಹಿಕ ಶಿಕ್ಷಣ ಶಿಕ್ಷಕಿ ವಿನಯ ಹೆಗ್ಡೆ ಉಪಸ್ಥಿತರಿದ್ದರು.
ಯಕ್ಷ ಮಿತ್ರರು ದುಬೈ ಇವರ 22 ನೇ ವರ್ಷದ ದುಬೈ “ಯಕ್ಷ ಸಂಭ್ರಮ – 2025” ಕಾರ್ಯಕ್ರಮದಲ್ಲಿ ತಂಡದ ಹಿರಿಯ ಸದಸ್ಯ ಜಯಂತ್ ಶೆಟ್ಟಿ ದುಬೈಯವರನ್ನು ಗೌರವಿಸಿ ಸನ್ಮಾನಿಸಲಾಯಿತು. ಸೆಪ್ಟೆಂಬರ್ 14 ರಂದು ನಗರದ ಎಮಿರೇಟ್ಸ್ ಥೀಯೇಟರ್ ನಲ್ಲಿ ಯಕ್ಷ ಸಂಭ್ರಮದ ಸಭಾ ವೇದಿಕೆಯಲ್ಲಿ ದುಬೈನಲ್ಲಿ ಕಳೆದ ಮೂವತ್ತೇಳು ವರ್ಷಗಳಿಂದ ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ಉತ್ತಮ ಸಂಘಟಕರ ಎಂಬ ಖ್ಯಾತಿ ಪಡೆದಿರುವ ಜಯಂತ್ ಶೆಟ್ಟಿಯವರನ್ನು ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಉದ್ಯಮಿಗಳಾದ ದಿವಾಕರ ಶೆಟ್ಟಿ, ಪುತ್ತಿಗೆ ವಾಸುದೇವ ಭಟ್, ಸತೀಶ್ ಶೆಟ್ಟಿ, ಪದ್ಮರಾಜ್ ಎಕ್ಕಾರ್, ದಯಾ ಕಿರೊಡಿಯನ್, ರವಿ ಕೋಟ್ಯಾನ್ ಉಪಸ್ಥಿತರಿದ್ದರು. ನಂತರ ತಂಡದ ಕಲಾವಿದರು ಹಾಗೂ ಊರಿನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ “ಶಬರಿಮಲೆ ಸ್ವಾಮಿ ಅಯ್ಯಪ್ಪ” ಯಕ್ಷಗಾನ ಪ್ರದರ್ಶನಗೊಂಡಿತು. ಮುಂಬಯಿ ಮಹಾನಗರದಲ್ಲಿ ಐತಪ್ಪ ಶೆಟ್ಟಿ ಮತ್ತು ಭವಾನಿ ಶೆಟ್ಟಿಯವರ ಮಗನಾಗಿ ಜನಿಸಿದ ಜಯಂತ್ ಶೆಟ್ಟಿಯವರು ಅರ್ಥಶಾಸ್ತ್ರ ವಿಭಾಗದಲ್ಲಿ ಪದವಿಯನ್ನು ಮುಂಬಯಿಯಲ್ಲಿ ಪಡೆದು ಉದರ ನಿಮಿತ್ತ…
ಮೂಡುಬಿದಿರೆ: ವೈಜ್ಞಾನಿಕ ಅಧ್ಯಯನಗಳ ಮೂಲಕ ಹೋಮಿಯೋಪಥಿಗೆ ಇನ್ನೂ ಹೆಚ್ಚಿನ ಮಾನ್ಯತೆ ಸಿಗಬೇಕು ಎಂದು ದೆಹಲಿಯ ಕೇಂದ್ರೀಯ ಹೋಮಿಯೋಪತಿ ಸಂಶೋಧನಾ ಪರಿಷತ್ನ ವೈಜ್ಞಾನಿಕ ಸಲಹಾ ಮಂಡಳಿ ಅಧ್ಯಕ್ಷ ಡಾ. ಎ. ಎಸ್. ಕುಮಾರ್ ಮಿತ್ರಚಂದ್ರ ಧಾವಲೆ ಹೇಳಿದರು. ಆಳ್ವಾಸ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ವತಿಯಿಂದ ವಿದ್ಯಾಗಿರಿಯ ಮುಂಡ್ರುದೆಗುತ್ತು ಕೆ ಅಮರನಾಥ ಶೆಟ್ಟಿ ಕೃಷಿಸಿರಿ ವೇದಿಕೆಯಲ್ಲಿ ನಡೆಯುತ್ತಿರುವ 2 ದಿನಗಳ ಪ್ರೊವಿನಿಯೋ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹೊಮಿಯೋಪತಿ ಪಠ್ಯಕ್ರಮದಲ್ಲಿ ಸಂಶೋಧನಾ ವಿಧಾನಶಾಸ್ತ್ರ ವಿಷಯವನ್ನು ಪರಿಚಯಿಸಿರುವುದು ಉತ್ತಮ ನಿರ್ಧಾರ. ಇದರಿಂದ ಹೋಮಿಯೋಪಥಿ ವಿದ್ಯಾರ್ಥಿಗಳಿಗೆ ಹೋಮಿಯೋಪಥಿಯನ್ನು ವೈಜ್ಞಾನಿಕ ರೀತಿಯಲ್ಲಿ ಅಧ್ಯಯನ ಮಾಡಲು, ಸಂಶೋಧನೆ ನಡೆಸಲು ಮತ್ತು ಲೇಖನಗಳನ್ನು ಪ್ರಕಟಿಸಲು ಸಹಾಯವಾಗುತ್ತದೆ.ಹೋಮಿಯೋಪಥಿಯಲ್ಲಿ ವೈಜ್ಞಾನಿಕವಾಗಿ ಸಾಬೀತಾದ ಅಧ್ಯಯನಗಳು ಮತ್ತು ಅವುಗಳ ಪ್ರಕಟಣೆಗಳಿಲ್ಲದೆ, ಅದಕ್ಕೆ ತಕ್ಕ ಮಾನ್ಯತೆ ಸಿಗುವುದಿಲ್ಲ. ಹೋಮಿಯೋಪಥಿಗೆ 250 ವರ್ಷಗಳ ಇತಿಹಾಸವಿದ್ದರೂ, ಅದನ್ನು ವಿಜ್ಞಾನವೆಂದು ಸ್ವೀಕರಿಸುವಲ್ಲಿ ಇನ್ನೂ ಅಡೆತಡೆಗಳಿವೆ. ವೈಜ್ಞಾನಿಕ ಅಧ್ಯಯನಗಳ ಚರ್ಚೆ ಇನ್ನಷ್ಟು ವಿಚಾರ ಸಂಕಿರಣಗಳಲ್ಲಿ ನಡೆಯಬೇಕು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ…
ಗಣಿತನಗರ : ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಡುಪಿ ಜಿಲ್ಲೆ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ ಇವರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ತೋಷಿತ್ ಎಸ್ ಬಾಬು 50ಮೀ ಮತ್ತು 100ಮೀ ಫ್ರೀಸ್ಟೈಲ್ನಲ್ಲಿ ಪ್ರಥಮ ಹಾಗೂ 50ಮೀ ಬ್ರೆಸ್ಟ್ಸ್ಟ್ರೋಕ್ಲ್ಲಿ ದ್ವಿತೀಯ, ಸುಯಾಶ್ ಎನ್ ಹೆಗ್ಡೆ 100ಮೀ ಬಟರ್ಫ್ಲೈಲ್ಲಿನಲ್ಲಿ ಪ್ರಥಮ ಹಾಗೂ 100ಮೀ ಫ್ರೀಸ್ಟೈಲ್ ವಿಭಾಗದಲ್ಲಿ ತೃತೀಯ ಸ್ಥಾನವನ್ನು, ಶಶಾಂಕ್ ವಿ 50ಮೀ ಬಟರ್ಫ್ಲೈನಲ್ಲಿ ಪ್ರಥಮ ಮತ್ತು 400ಮೀ ಫ್ರೀಸ್ತೈಲ್ನಲ್ಲಿ ತೃತೀಯ ಸ್ಥಾನವನ್ನು, ಯು.ಭಕ್ತಿ 50ಮೀ. ಮತ್ತು 100ಮೀ ಬ್ರೆಸ್ಟ್ಸ್ಟ್ರೋಕ್ನಲ್ಲಿ ಪ್ರಥಮ ಸ್ಥಾನವನ್ನು, ಶ್ರೇಯಾ ಎಸ್.ಆರ್.ಯು 50ಮೀ. ಮತ್ತು 100ಮೀ ಫ್ರೀಸ್ಟೈಲ್ನಲ್ಲಿ ಪ್ರಥಮ ಸ್ಥಾನವನ್ನು ಹಾಗೂ 4×100ಮೀ ರಿಲೆಯಲ್ಲಿ ಕಾರ್ಕಳ ಜ್ಞಾನಸುಧಾ ತಂಡವು ಪ್ರಥಮ ಸ್ಥಾನವನ್ನು ಪಡೆದು ಈ ಮೂಲಕ ದಿಗಂತ್ ಎಚ್ ಸೇರಿದಂತೆ ಒಟ್ಟು 6 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಎಲ್ಲಾ ಸಾಧಕ ವಿದ್ಯಾರ್ಥಿಗಳನ್ನು…
ತನ್ನ ಪ್ರಭಲ ಇಚ್ಚಾಶಕ್ತಿ ಯಿಂದ ಏನನ್ನಾದರೂ ಸಾಧಿಸಬಹುದೆಂಬ ಮಾತಿಗೆ ಉದಾಹರಣೆಯಾದವರು ಬೇಕರಿ ಕ್ಷೇತ್ರದಲ್ಲಿ ದಾಖಲೆ ಯಶಸ್ಸು ಸಾಧಿಸಿದ ಅಪರೂಪದ ವ್ಯಕ್ತಿ ಶಮಿತ್ ಶೆಟ್ಟಿ ಕೆಮ್ತೂರು. ಬಾಲ್ಯದಲ್ಲಿಯೇ ತನ್ನ ತಂದೆಯನ್ನು ಕಳೆದುಕೊಂಡ ಶಮಿತ್ ಅವರು ಪ್ರತಿಕೂಲ ಪರಿಸ್ಥಿತಿಗಳನ್ನು ತನ್ನ ಬಲವನ್ನಾಗಿ ಪರಿವರ್ತಿಸಿಕೊಂಡು ತನ್ನ ಅದೃಷ್ಟವನ್ನು ತಾನೇ ಬರೆದು ಬಡತನದಲ್ಲಿ ಬಾಲ್ಯಕಳೆದರೂ ಇಂದು ಓರ್ವ ಯಶಸ್ವಿ ಉದ್ಯಮಿಯಾಗಿ ಗುರುತಿಸಿ ಕೊಂಡಿದ್ದಾರೆ. ತನ್ನ ಬೆನ್ನಲ್ಲಿ ಹುಟ್ಟಿಕೊಂಡ ಮೂವರು ಸಹೋದರಿಯರ ಭವಿಷ್ಯ ರೂಪಿಸಬೇಕಾದ ಹೊಣೆ ಬಾಲಕ ಶಮಿತ್ ಅವರ ಹೆಗಲೇರಿತ್ತು. ಆದರೆ ಎದೆಗುಂದದೆ ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸುತ್ತಲೇ ಬೆಂಕಿಯಲ್ಲಿ ಅರಳಿದ ಹೂವಿನಂತೆ ತನ್ನ ವ್ಯಕ್ತಿತ್ವವನ್ನು ತಾನೇ ರೂಪಿಸಿಕೊಂಡು ಮೂವರು ಸಹೋದರಿಯರ ವಿವಾಹವನ್ನೂ ಪೂರೈಸಿ ಧನ್ಯತಾ ಭಾವವನ್ನು ಹೊಂದಿದ ಅಪ್ರತಿಮ ಸಾಧಕರಿವರು.ಮೂಡುಬೆಳ್ಳೆ ಸಮೀಪದ ಎಡ್ಮೇರು ಮೂಲದ ಶಮಿತ್ ಶೆಟ್ಟಿ ಅವರು ಬಿ ಕಾಂ ಪದವಿಧರು. ಎಡ್ಮೇರು ಅಪ್ಪು ಶೆಟ್ಟಿ ಹಾಗೂ ಕೆಮ್ತೂರು ದೇವಕಿ ಶೆಟ್ಟಿ ದಂಪತಿಗೆ ಪುತ್ರರಾಗಿ ಜನಿಸಿದ ಶಮಿತ್ ಶೆಟ್ಟಿ ಅವರು ಮಂಗಳೂರಿನ ಹೃದಯಭಾಗದಲ್ಲಿ ಬೇಕರಿ…
ಮೋಟಾರು ರ್ಯಾಲಿಯಲ್ಲಿ ಕಳೆದ ಎರಡೂವರೆ ದಶಕಗಳಿಂದ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅಶ್ವಿನ್ ನಾಯ್ಕ್ ಅತ್ಯುನ್ನತ ಮಟ್ಟದ ಪ್ರದರ್ಶನ ನೀಡುತ್ತಾ ದೇಶ ಮತ್ತು ವಿದೇಶಗಳ 250 ಕ್ಕೂ ಹೆಚ್ಚು ರ್ಯಾಲಿಗಳಲ್ಲಿ ಭಾಗವಹಿಸಿದ ಎಲ್ಲಾ ರ್ಯಾಲಿಗಳಲ್ಲೂ ಪ್ರಶಸ್ತಿಗಳನ್ನು ಮುಡಿಗೆರಿಸಿಕೊಂಡಿರುವ ದಾಖಲೆಯನ್ನು ಹೊಂದಿದ್ದಾರೆ. 150ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ರ್ಯಾಲಿಗಳಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿ ಭಾರತ ಮತ್ತು ಬ್ರಿಟಿಷ್ ಹಾಗೂ ಯುರೋಪಿಯನ್ ರ್ಯಾಲಿಯ ಚಾಂಪಿಯನ್ ಶಿಪ್ ರೌಂಡ್ ನ ವಿನ್ನರ್ ಪಟ್ಟಕ್ಕೇರಿದ ಭಾರತದ ಪ್ರಥಮ ಹಾಗೂ ಏಕೈಕ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ಮಂಗಳೂರಿನ ಮಿಲಾಗ್ರಿಸ್ ಹೈಸ್ಕೂಲ್ ನಲ್ಲಿ ಪಡೆಯುತ್ತಿರುವಾಗಲೇ ಕ್ರೀಡೆಯಲ್ಲಿ (ಟ್ರ್ಯಾಕ್ & ಫೀಲ್ಡ್ ) ವಾಲಿಬಾಲ್, ಜಾವಲಿನ್ ತ್ರೋ ಮತ್ತು ಹೈ ಜಂಪ್ ಗಳಲ್ಲಿ ಜಿಲ್ಲಾ ಮತ್ತು ರಾಜ್ಯ ತಂಡವನ್ನು ಪ್ರತಿನಿಧಿಸಿದ್ದರು. 6 ಅಡಿ 2 ಇಂಚು ಎತ್ತರದ ದೃಢಕಾಯದ ಅಶ್ವಿನ್ ನಾಯ್ಕ್ ಅವರು 1995 – 1999 (ಸೈಂಟ್ ಅಲೋಶಿಯಸ್ ಪಿ.ಯು ಕಾಲೇಜಿನ ದಿನಗಳಲ್ಲಿ…
ಬಂಟರು ನಾಡವರು ಎಂಬ ವಿಂಗಡಣೆ ಬೇಡ. ಜಾತಿ ಸಮೀಕ್ಷೆಯ ಬಗ್ಗೆ ಸಮಾಜ ಬಾಂಧವರು ತಿಳಿದುಕೊಳ್ಳಿ – ಕೆ ಅಜಿತ್ ಕುಮಾರ್ ರೈ ಮಾಲಾಡಿ
ಬಂಟರು ಮತ್ತು ನಾಡವರು ಅನಾದಿ ಕಾಲದಿಂದಲೂ ಒಂದೇ ಆಗಿದ್ದಾರೆ. ಬ್ರಿಟಿಷರ ಕಾಲದ ದಾಖಲೆಗಳಲ್ಲೂ ಇದನ್ನೇ ಹೇಳಲಾಗಿದೆ. ಆನಂತರ ಬಂಟರು ಮತ್ತು ನಾಡವರನ್ನು ವಿಂಗಡಣೆ ಮಾಡಲಾಗಿದೆ. ಬಂಟರು ಮತ್ತು ನಾಡವರನ್ನು ಒಂದೇ ಕೆಟಗರಿಯಲ್ಲಿ ಸೇರಿಸುವಂತೆ ಅನೇಕ ಸಲ ಸರಕಾರಗಳ ಗಮನಕ್ಕೆ ತಂದಿದ್ದೇವೆ. ನಾನೇ ಸುಮಾರು 20 ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದೇನೆ. ಆದರೂ ಇಲ್ಲಿಯವರೆಗೆ ಬೇಡಿಕೆ ಈಡೇರಿಲ್ಲ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷರಾದ ಕೆ ಅಜಿತ್ ಕುಮಾರ್ ರೈ ಮಾಲಾಡಿ ಹೇಳಿದರು. ಅವರು ನಗರದ ಬಂಟ್ಸ್ ಹಾಸ್ಟೆಲ್ ನ ಅಮೃತ ಮಹೋತ್ಸವ ಕಟ್ಟಡದ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚಿಗೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿದ ವರದಿಯಲ್ಲಿ ಬಂಟರ ಹಾಗೂ ನಾಡವರ ಜನಸಂಖ್ಯೆ 3,15,000 ಇದೆ ಎಂದು ನಮೂದಿಸಲಾಗಿದೆ ಎಂದು ಮಾಹಿತಿ…
ಮಂಗಳೂರು ಎಂದರೆ ಒಂದು ಕಾಲದಲ್ಲಿ ರೌಡಿಸಂ, ಹೋಟೆಲ್ ಉದ್ಯಮ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಪ್ರಸಿದ್ಧ. ಅದರಂತೆಯೆ ಮಂಗಳೂರನ್ನು ಅದೆಷ್ಟೋ ಜನ ಆಳೆದು ಹೋಗಿದ್ದಾರೆ. ಅಂತಹದರಲ್ಲಿ ಬಂಟ್ವಾಳ ಮೂಲದ ಪ್ರಭಾಕರ ಪೂಂಜಾ ಕೂಡ ಒಬ್ಬರು. ಒಂದು ಕಾಲದಲ್ಲಿ ಮಂಗಳೂರಿನ ಹೆಸರಾಂತ ಹೊಟೇಲ್ ಪೂಂಜಾ ಇಂಟರ್ನ್ಯಾಶನಲ್ ಇದರ ಮಾಲಕ, ಬಂಟ್ವಾಳ ಮೂಲದ ಪ್ರಭಾಕರ ಪೂಂಜಾ (72) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮುಂಬೈ ಭೂಗತ ಲೋಕಕ್ಕೆ ಮಂಗಳೂರು ಸನಿಹ ಇತ್ತು. ಅದರಂತೆಯೇ 40 ವರ್ಷಗಳ ಹಿಂದೆ ಮುಂಬೈನಲ್ಲಿ ಭೂಗತ ಜಗತ್ತಿನ ಸಂಪರ್ಕದಲ್ಲಿದ್ದ ಪ್ರಭಾಕರ ಪೂಂಜಾ ಅಲ್ಲಿನ ಒಬ್ಬ ಡಾನ್ ಗೆ ಕಾರು ಚಾಲಕನಾಗಿದ್ದರು. ಬಳಿಕ ಮಂಗಳೂರಿಗೆ ಬಂದು 1986ರಲ್ಲಿ ಪೂಂಜಾ ಇಂಟರ್ನ್ಯಾಶನಲ್ ಹೊಟೇಲ್ ನಿರ್ಮಾಣ ಮಾಡಿದ್ದರು. ಆ ಸಮಯದಲ್ಲಿ ಐಷಾರಾಮಿ ಹೋಟೆಲ್ ಅಂದರೆ ಮೋತಿಮಹಲ್ ಬಿಟ್ಟರೆ ಪೂಂಜಾ ಇಂಟರ್ ನ್ಯಾಷನಲ್ ಆಗಿತ್ತು. ಭೂಗತ ಜಗತ್ತಿನಲ್ಲಿ ಡಾನ್ ಆಗಿದ್ದ ಶರದ್ ಶೆಟ್ಟಿ ಇವರ ಖಾಸಾ ಭಾವನಾಗಿದ್ದು, ಅದೇ ನಂಟಿನಲ್ಲಿ ಮಂಗಳೂರಿನಲ್ಲಿ ಹೊಟೇಲ್ ವ್ಯವಹಾರ…