Author: admin
ಮೂಡುಬಿದಿರೆ ಲಯನ್ಸ್ ಕ್ಲಬ್ ಪದಗ್ರಹಣ ಕಾರ್ಯಕ್ರಮವು ಜುಲೈ 02 ರಂದು ಹೋಟೆಲ್ ಪಂಚರತ್ನ ಇಂಟರ್ನ್ಯಾಷನಲ್ ನಲ್ಲಿ ನೆರವೇರಿತು. ಪದಗ್ರಹಣ ಅಧಿಕಾರಿಯಾಗಿ ಪೂರ್ವ ರಾಜ್ಯಪಾಲರಾದ ಲಯನ್ ವಸಂತ್ ಕುಮಾರ್ ಶೆಟ್ಟಿಯವರು ಭಾಗವಹಿಸಿದ್ದರು. 2025 – 26 ರ ಸುವರ್ಣ ಮಹೋತ್ಸವದ ಅವಧಿಗೆ ಅಧ್ಯಕ್ಷರಾಗಿ ಶಿವಪ್ರಸಾದ್ ಹೆಗ್ಡೆ ಕಣಂಜಾರು ಅಧಿಕಾರವನ್ನು ಸ್ವೀಕರಿಸಿದರು. ಕಾರ್ಯದರ್ಶಿಗಳಾಗಿ ಲಯನ್ ಓಸ್ವಾಲ್ಡ್ ಡಿಕೋಸ್ಟ, ಕೋಶಾಧಿಕಾರಿಗಳಾಗಿ ಲಯನ್ ಹರೀಶ್ ತಂತ್ರಿ, ಲಿಯೋ ಕ್ಲಬ್ಬಿನ ಅಧ್ಯಕ್ಷರಾಗಿ ಪ್ರಖ್ಯಾತ್ ಹೆಗ್ಡೆ, ಕಾರ್ಯದರ್ಶಿಗಳಾಗಿ ಸ್ವಯಂ ಎಸ್ ಪೂಜಾರಿ, ಕೋಶಾಧಿಕಾರಿಗಳಾಗಿ ಶಶಾಂಕ್ ಅಧಿಕಾರವನ್ನು ಸ್ವೀಕರಿಸಿದರು. ನಿಕಟಪೂರ್ವ ಅಧ್ಯಕ್ಷರಾದ ಬೋನವೆಂಚರ್ ಮೆನೇಜಸ್, ಪ್ರಾಂತ್ಯಾಧ್ಯಕ್ಷರಾದ ಲಯನ್ ಜಗದೀಶ್ಚಂದ್ರ ಡಿ.ಕೆ, ವಲಯಾಧ್ಯಕ್ಷರಾದ ಲಯನ್ ಜೋಸ್ಸಿ ಮೆನೇಜಸ್, ಲಯನ್ ಮೇಲ್ವಿನ್ ಸಲ್ದಾನ್ಹ, ಮಾಜಿ ಕಾರ್ಯದರ್ಶಿಗಳಾದ ವಿನೋದ್ ಡೇಸಾ ಕೋಶಾಧಿಕಾರಿಗಳಾದ ಪ್ರಶಾಂತ್ ಶೆಟ್ಟಿ, ಪ್ರಾಂತ್ಯದ ಎಲ್ಲಾ ಎಂಟು ಕ್ಲಬ್ ಗಳ ಅಧ್ಯಕ್ಷರುಗಳು ಹಾಗೂ ಕ್ಲಬ್ಬಿನ ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು.
ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜು ಸಾಣೂರು ಇಲ್ಲಿನ ಪಿಯುಸಿ ಮತ್ತು ಹತ್ತನೇ ತರಗತಿಯಲ್ಲಿ 90 ಶೇಕಡಕ್ಕಿಂತ ಅಧಿಕ ಅಂಕ ಗಳಿಸಿದ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವರವರು ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಎಂದೂ ಕೀಳರಿಮೆ ಇರಬಾರದು. ಪ್ರತಿಭೆಗಳಿರುವುದು ಹಳ್ಳಿಗಳಲ್ಲಿಯೇ. ಸಮಾಜದಲ್ಲಿ ಸವಾಲನ್ನು ಎದುರಿಸಬಲ್ಲವರು ಸರಕಾರಿ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು. ಮಕ್ಕಳ ಭವಿಷ್ಯದ ಬಗ್ಗೆ ಸದಾ ಚಿಂತಿಸುತ್ತಿರುವ, ಶ್ರಮಪಡುತ್ತಿರುವ ಹೆತ್ತವರನ್ನು ಎಂದೂ ನಿರಾಶೆಗೊಳಿಸದಿರಿ ಎಂದರು. ಮುಖ್ಯ ಅತಿಥಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ನೆಲ್ಲಿ ಇಲ್ಲಿಯ ಮೊಕ್ತೇಸರರಾದ ಸುನಿಲ್ ಕೆ ಆರ್ ರಾಷ್ಟ್ರೀಯತೆ ಮತ್ತು ಸಂಸ್ಕಾರವನ್ನು ಮೂಡಿಸುವ ಶಿಕ್ಷಣ ಅಗತ್ಯವಾಗಿದೆ ಎಂದರು. ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಅಶೋಕ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಕಳ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಸಂದೀಪ್ ಕುಡ್ವ, ನ್ಯಾಯವಾದಿಗಳಾದ ನಂದಿನಿ ಶೆಟ್ಟಿ ಹಾಗೂ…
ಇತ್ತೆಡ್ದ್ ಐವ ಐವತ್ತೈನ್ ವರ್ಸ ದುಂಬು, ನಮ್ಮ ಊರೆಂಚ ಇತ್ತುಂಡ್? ಅರಿಕ್ ಮುಡಿಕ್ ನಲ್ಪ ರುಪಾಯಿ ಆಂಡ್, ಬಾರಿ ಚಡ್ತೆದ ಇಸಯ. ಸಾಲೆದ ಚರ್ಚಾ ಸ್ಪರ್ಧೆಡ್ ಒರ್ತಿ ಪಂಡೊಲು “ಬರುವ ವರ್ಷ ಅಕ್ಕಿಗೆ ಐವತ್ತಾದರೂ (ರುಪಾಯಿ) ಆಶ್ಚರ್ಯ ಪಡಬೇಕಾಗಿಲ್ಲ”. ಆಲ್ ಪಂಡ್ ದ್ ರಡ್ಡೇ ವರ್ಸಡ್ ಒಂಜಿ ಮುಡಿ (42 ಸೇರ್, 40 ಕಿಲ) ಕ್ ಐವ ಆಂಡ್. ಇತ್ತೆ ಐವ ವರ್ಸೊಡ್ ಬೊಕ್ಕ ಕಿಲೋಕು ಐವ ಆತ್ಂಡ್. ಆ ಕಾಲೊಡು ಪೆಟ್ರೋಲ್ ದ ಕಿರಯ ನಂಕ್ ದಾಲ ಬೂರ್ದು ಪೋತುಜಿ. ಎಚ್ಚಿನಗಲೆಡ ರಡ್ಡ್ ರಡ್ಡೇ ಕಾರ್ ಇತ್ತಿನಿ. ನೀರುಳ್ಳಿ, ಬಟಾಟೆದ ಕಿರಯ ಏರ್ಂಡಲಾ ತಗ್ಗ್ಂಡಲಾ ನಮ ಮಂಡೆ ಬೆಚ್ಚ ಮಲ್ತೊಂದು ಇತ್ತುಜ. ಬಟಾಟೆ ನಮ ಊರುಡು ಬಾರಿ ಅಪರೂಪ ಅಪಗ, ತಂಬಟೆ ಇಪ್ಪೆರೆನೇ ಇತ್ತುಜಿ. ನೀರುಳ್ಳಿಲಾ ಲೆಕ್ಕೊಡು ತಿನೊಂದು ಇತ್ತ. ಆಂಡ ಅರಿ ಪಿರಿಯ ಆಂಡಾ ಬಂಙದಗುಲು ಬದುಕುನು ಎಂಚ ಪನ್ಪಿನ ಪಾತೆರ ಕೊಡೀ ಕಡೆ. ರೆಡಿಯೋನೇ ಇತ್ತುಜಿ. ಮಂಗಳೂರು…
ಕಳೆದ ಮೇ ತಿಂಗಳಿನಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ ಅಂತಿಮ ಬಿಇ ಪರೀಕ್ಷೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಕೃಷಿ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಹಲವು ರ್ಯಾಂಕ್ಗಳನ್ನು ಪಡೆದು ಸಾಧನೆ ಮೆರೆದಿದ್ದಾರೆ. ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕೃಷಿ ಇಂಜಿನಿಯರಿಂಗ್ ವಿಭಾಗದ ಪ್ರಥಮ ಬ್ಯಾಚ್ನ ವಿದ್ಯಾರ್ಥಿಗಳಾದ ಸಂತೋಷ ಎಂ ದ್ವಿತೀಯ ರ್ಯಾಂಕ್, ತೇಜಸ್ ತೃತೀಯ ರ್ಯಾಂಕ್, ಮೋನಿಷಾ 8 ನೇ ರ್ಯಾಂಕ್ ಹಾಗೂ ಅದೇ ವಿಭಾಗದ ಕಿರಣ್ ವಿ 9 ನೇ ರ್ಯಾಂಕ್ ಗಳಿಸಿ ಸಾಧನೆ ಮೆರೆದಿದ್ದಾರೆ. ಸಾಧನೆ ಮೆರೆದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ ಆಳ್ವ, ಟ್ರಸ್ಟಿ ವಿವೇಕ್ ಆಳ್ವ ಹಾಗೂ ಪ್ರಾಚಾರ್ಯರು ಹಾಗೂ ಶಿಕ್ಷಕ ವೃಂದ ಶ್ಲಾಘಿಸಿದೆ.
ಬಂಟರ ಯಾನೆ ನಾಡವರ ಸಂಘ (ರಿ.) ಬೈಂದೂರಿನ ಅಧಿಕೃತ ವೆಬ್ಸೈಟ್ bansbyndoor.com ಹಾಗೂ ನೂತನ ಗ್ರಂಥಾಲಯದ ಲೋಕಾರ್ಪಣೆ ಸಮಾರಂಭವು ಜೂನ್ 29 ರಂದು ಬೈಂದೂರಿನ ಬಂಟರ ಭವನದಲ್ಲಿ ವಿಜೃಂಭಣೆಯಿಂದ ಜರಗಿತು. ಈ ಸಮಾರಂಭವನ್ನು ಮಾನ್ಯ ಬೈಂದೂರು ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆ ಉದ್ಘಾಟಿಸಿದರು. ಅವರು ಲ್ಯಾಪ್ಟಾಪ್ನಲ್ಲಿ ಬಟನ್ ಒತ್ತುವ ಮೂಲಕ ವೆಬ್ಸೈಟ್ನ್ನು ಲೋಕಾರ್ಪಣೆಗೊಳಿಸಿ, ನಂತರ ಜ್ಯೋತಿ ಬೆಳಗಿಸುವ ಮೂಲಕ ಗ್ರಂಥಾಲಯದ ಪ್ರಾರಂಭಕ್ಕೆ ಸಾಂಕೇತಿಕ ಚಾಲನೆ ನೀಡಿದರು. ಅದಷ್ಟೇ ಅಲ್ಲದೆ, ಗ್ರಂಥಾಲಯದ ಆರಂಭಿಕ ಪುಸ್ತಕ ಸಂಗ್ರಹವನ್ನೂ ಅವರು ಬಿಡುಗಡೆ ಮಾಡಿದರು. bansbyndoor.com ವೆಬ್ಸೈಟ್ ಮುಖಾಂತರ ವಿದ್ಯಾರ್ಥಿವೇತನ, ಸಾಧಕರ ಸನ್ಮಾನ ಹಾಗೂ ಸಂಘದ ವಿವಿಧ ಸಮಾಜಮುಖಿ ಯೋಜನೆಗಳ ಮಾಹಿತಿ ತಂತ್ರಜ್ಞಾನ ಪ್ರಯುಕ್ತ ಸಮಾಜದ ಸದಸ್ಯರಿಗೆ ಸುಲಭವಾಗಿ ಲಭ್ಯವಾಗಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು. ಈ ವೇದಿಕೆಯಿಂದ ಸಂಘದ ಕಾರ್ಯವೈಭವ ಹೆಚ್ಚಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಸಾಲ್ಗದ್ದೆ ಶಶಿಧರ್ ಶೆಟ್ಟಿ ವಹಿಸಿದ್ದರು. ಉಪಾಧ್ಯಕ್ಷರಾದ ಜಗದೀಶ್ ಶೆಟ್ಟಿ ಕುದ್ರುಕೊಡು,…
ಇಂಡಿಯನ್ ರೆಡ್ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ (ಹಳೆ) ಆವರಣದಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ರೆಡ್ಕ್ರಾಸ್ ಶತಮಾನೋತ್ಸವ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ರೆಡ್ಕ್ರಾಸ್ ದ.ಕ ಜಿಲ್ಲಾ ಘಟಕದ ಛೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅವರು ರಾಜ್ಯಪಾಲ ಹಾಗೂ ರೆಡ್ಕ್ರಾಸ್ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಥಾವರ್ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿಯಾಗಿ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಲು ಆಗಮಿಸುವಂತೆ ಆಹ್ವಾನಿಸಿದರು. ರೆಡ್ಕ್ರಾಸ್ ದ.ಕ ಜಿಲ್ಲಾ ಘಟಕದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದ ರಾಜ್ಯಪಾಲರು ಉದ್ಘಾಟನೆಗೆ ಆಗಮಿಸುವುದಾಗಿ ತಿಳಿಸಿದರು. ರೆಡ್ಕ್ರಾಸ್ ರಾಜ್ಯ ಘಟಕದ ಚೇರ್ಮನ್ ಬಸ್ರೂರು ರಾಜೀವ್ ಶೆಟ್ಟಿ ಈ ಸಂಧರ್ಭ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಸಾಂಪ್ರದಾಯಿಕ ವೃತ್ತಿ ಮಾರ್ಗಗಳನ್ನು ಮೀರಿ ಲಾಜಿಸ್ಟಿಕ್ ನಂತಹ ಉದಯೋನ್ಮುಖ ವಲಯಗಳನ್ನು ಅನ್ವೇಷಿಸಿ : ಕಾರ್ತಿಕ್ ಶೆಟ್ಟಿ
ಆಳ್ವಾಸ್ ಕಾಲೇಜಿನ (ಸ್ವಾಯತ್ತ) ನಿರ್ವಹಣಾ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಬುಧವಾರ ವಿದ್ಯಾಗಿರಿ ಆವರಣದಲ್ಲಿ ‘ಸ್ಪೆಕ್ಟಾಕಲ್’ ವೇದಿಕೆಯ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರಿನ ಗಣೇಶ್ ಶಿಪ್ಪಿಂಗ್ ಏಜೆನ್ಸಿಯ ಸಿಇಒ ಕಾರ್ತಿಕ್ ಶೆಟ್ಟಿ, “ಲಾಜಿಸ್ಟಿಕ್ಸ್ ಮತ್ತು ಶಿಪ್ಪಿಂಗ್ ವಲಯವು ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಆಕರವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಆದರೆ ಈ ಕ್ಷೇತದಲ್ಲಿರುವ ಅವಕಾಶಗಳನ್ನು ಅನ್ವೇಷಿಸಲು ನಾವು ಸೋತಿದ್ದೇವೆ ಎಂದರು. ನವಮಂಗಳೂರು ಬಂದರಿನ ಜೆಎಸ್ಡಬ್ಲ್ಯೂ ಕಂಟೇನರ್ ಟರ್ಮಿನಲ್ನೊಂದಿಗೆ ಅವರ ಅನುಭವವನ್ನು ಹಂಚಿಕೊಂಡ ಅವರು “ಸ್ಥಳೀಯ ಕೌಶಲ್ಯವಂತ ಪ್ರತಿಭೆಗಳ ಕೊರತೆಯಿಂದ ಅನಿವಾರ್ಯವಾಗಿ ಗುಜರಾತ್ ಮತ್ತು ತಮಿಳುನಾಡಿನ ಸಿಬ್ಬಂದಿಯನ್ನು ನೇಮಿಸಬೇಕಾಯಿತು. ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ನವೀನ ಉದ್ಯಮಗಳಿಗೆ ಅನುಗುಣವಾಗಿ ರೂಪಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಮುಖ್ಯವಾಗಿ ಈ ಉದ್ಯಮದಲ್ಲಿ ಕುತೂಹಲ, ಹೊಂದಿಕೊಳ್ಳುವಿಕೆ, ಸಮಸ್ಯೆ ಪರಿಹಾರ ಸಾಮರ್ಥ್ಯ, ಸ್ಪಷ್ಟ ಸಂವಹನ ಹಾಗೂ ತಂಡದ ಕಾರ್ಯತಂತ್ರ ಈ ಎಲ್ಲಾ ಕೌಶಲ್ಯಗಳು ನಿರ್ಣಾಯಕವಾಗಿರುತ್ತವೆ. ವಿದ್ಯಾರ್ಥಿಗಳು ಸಾಂಪ್ರದಾಯಿಕ ವೃತ್ತಿ ಮಾರ್ಗಗಳನ್ನು ಮೀರಿ ಲಾಜಿಸ್ಟಿಕ್ಸ್ ನಂತಹ ಉದಯೋನ್ಮುಖ ವಲಯಗಳನ್ನು ಅನ್ವೇಷಿಸಬೇಕು. ವಿಶೇಷವಾಗಿ…
ಅವಕಾಶ ವಂಚಿತ ವಿದ್ಯಾರ್ಥಿಗಳಲ್ಲಿ ಯಕ್ಷಗಾನದ ಕಲಾ ನೈಪುಣ್ಯತೆಯನ್ನು ಬೆಳಗಿಸಿ ಸಂಸ್ಕಾರ ಬದ್ಧ ಬುನಾದಿಯನ್ನು ಹಾಕಿಕೊಡುವ ವಿಶಿಷ್ಟ ಯೋಜನೆ ಯಕ್ಷಧ್ರುವ ಯಕ್ಷ ಶಿಕ್ಷಣವು ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಇದರ ಕನಸಾಗಿದೆ. ಮೂರನೇ ಶೈಕ್ಷಣಿಕ ಸಾಲಿಗೆ ಪಾದಾರ್ಪಣೆ ಮಾಡುತ್ತಿರುವ ಯಕ್ಷ ಶಿಕ್ಷಣ ಯೋಜನೆಯ ಉದ್ಘಾಟನಾ ಕಾರ್ಯಕ್ರಮವನ್ನು ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಜುಲೈ 1 ರಂದು ಹಮ್ಮಿಕೊಳ್ಳಲಾಗಿತ್ತು. ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗುವುದರ ಮೂಲಕ ಯಕ್ಷಧ್ರುವ ಯಕ್ಷ ಶಿಕ್ಷಣಕ್ಕೆ ಚಾಲನೆ ನೀಡಿದ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ವಿಟ್ಲ ಘಟಕದ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಮಾತನಾಡಿ, ಯಾವುದೇ ಕಲೆಗಳನ್ನು ಒಲಿಸಿಕೊಳ್ಳಲು ಅದಕ್ಕೆ ಋಣಾನುಬಂಧ ಬೇಕು. ಕಷ್ಟದ ದಿನಗಳಲ್ಲೂ ಕೂಡ ಯಕ್ಷಗಾನದ ಒಲವಿಗೆ ಶರಣಾಗಿ ಮೇಲೆದ್ದ ಅನೇಕ ಕಲಾವಿದರ ಪಾಲಿಗೆ ಕೊರತೆಯಾಗದಂತೆ ಈ ಕಾಲಘಟ್ಟವು ವಿನೂತನ ಪ್ರಯೋಗದ ಮೂಲಕ ಯಕ್ಷಗಾನದ ಪ್ರತಿಭೆಗಳನ್ನು ಬೆಳೆಸುತ್ತಿದೆ. ಪಟ್ಲ ಫೌಂಡೇಶನ್ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿದೆ ಎಂದರು. ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ವಿಟ್ಲ ಘಟಕದ…
ಅಷ್ಟ ವಿನಾಯಕ ಎಂದರೆ ಎಂಟು ಗಣೇಶ ದೇವಾಲಯಗಳ ಗುಂಪು. ಇವು ಮಹಾರಾಷ್ಟ್ರದಲ್ಲಿದ್ದು, ಪ್ರತಿಯೊಂದು ದೇವಾಲಯವು ತನ್ನದೇ ಆದ ವಿಶಿಷ್ಟ ಇತಿಹಾಸ ಮತ್ತು ಪ್ರಾಮುಖ್ಯತೆಯನ್ನು ಹೊಂದಿದೆ. ಅಷ್ಟ ವಿನಾಯಕ ದರ್ಶನ ಮಾಡಲು ಒಂದು ವಿಧಿವತ್ತಾಗಿ ಹೋಗಬೇಕೆಂದು ಪುರಾಣದಲ್ಲಿ ನಿರೂಪಿಸಲಾಗಿದೆ. ಶ್ಲೋಕದಲ್ಲಿ ಹೇಳಿರುವಂತೆ ಮೊದಲಿಗೆ ಮೋರ್ ಗಾಂವ್, ತೇವೂರ್, ಸಿದ್ಧಟೇಕ್, ರಾಜನ್ಗಾಂವ್, ಲೆನ್ಯಾದ್ರಿ, ಓಜಾರ್, ಪಾಲಿ ಮತ್ತು ಮಹಾಡ್ ಹೀಗೆ ಎಂಟು ಗಣಪತಿ ದೇವಸ್ಥಾನಗಳ ದರ್ಶನವೇ ಅಷ್ಟ ವಿನಾಯಕ ದರ್ಶನ. ಬಾಂಬೆ ಅಸೋಸಿಯೇಷನ್ ನ ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಶ್ರೀಮತಿ ಶಾಂತಾ ಎನ್ ಶೆಟ್ಟಿಯವರ ಮುಂದಾಳತ್ವ ಹಾಗೂ ಸಮಿತಿ ಸದಸ್ಯೆಯರ ಸಹಕಾರದೊಂದಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಡಿ.ಕೆ ಶೆಟ್ಟಿ ಮತ್ತು ಆಡಳಿತ ಸಮಿತಿಯ ಸಂಪೂರ್ಣ ಬೆಂಬಲದಲ್ಲಿ ಜೂನ್ 27 ರಿಂದ 29 ತಾರೀಖಿನವರೆಗೆ ಮೂರು ದಿನಗಳ ಪ್ರವಾಸದಲ್ಲಿ 2 ಬಸ್ಸುಗಳ ವ್ಯವಸ್ಥೆಯೊಂದಿಗೆ 61 ಮಹಿಳೆಯರು ಭಾಗವಹಿಸಿದ್ದರು. ಎಲ್ಲಾ ಮಹಿಳೆಯರು ತುಂಬಾ ಉತ್ಸುಕತೆ, ಉಲ್ಲಾಸದಿಂದ ಪ್ರಯಾಣದ ಬಸ್ಸಿನಲ್ಲಿ ಭಜನೆ, ಕೀರ್ತನೆ ಹಾಡುಗಳನ್ನು ಹಾಡುತ್ತಾ ಆನಂದ ನೀಡುತ್ತಾ…
ಸ್ವತಂತ್ರವಾಗಿ ಬೆಳೆದೆ ನೇತ್ರಾವತಿ ನದಿ ದಂಡೆ ಮೇಲೆ ಬಾಲ್ಯದ ನೆನಪುಗಳು ಇವೆ ಇನ್ನೂ ಹಸಿರಾಗಿಯೇ ಪ್ರತಿಧ್ವನಿಸುವ ನದಿಯ ದನಿಯು ರೋಮಾಂಚನಗೊಳಿಸುತ್ತೆ ಇನ್ನೂ ಆಪ್ತ ಗೆಳತಿಯ ಸುಮಧುರ ಹಾಡಿನಂತೆ ಆ ಸೌಮ್ಯವಾದ ಹರಿವು ಹಿತವಾದ ತಂಗಾಳಿ ಮೊಣಕಾಲುಗಳನ್ನು ಅದ್ದಿ ಆಡಿದ ತಂಪಾದ ಸಿಹಿ ನೀರು ಸೂರ್ಯಾಸ್ತದ ಸಮಯದಿ ಮೋಡದ ನಡುವೆ ಬಣ್ಣದ ಜಾದು ಮಳೆಗಾಲದಲ್ಲಿ ಕೋಪದಿಂದ ಉಬ್ಬುವಳು ಬಲು ಹೆಮ್ಮೆಯಿಂದ ಹೊರಗೆ ತುಂಬಾ ಉಗ್ರ ಆದರೆ ಒಳಗೆ ಬಹು ಶಾಂತ ಕಲ್ಲನ್ನು ಕೊರೆಯುತ್ತಾ ಮರಳನ್ನು ನುಣುಪಾಗಿಸುತ್ತಾ ನಾನು ದೂರವಾದರೂ ನೆನಪು ಮಾತ್ರ ಬಲು ನಿಕಟ ಬಂದಿದೆ ಈಗ ಅಕ್ರಮ ಮರಳಿನ ದಂಧೆ ಮಾಡುತ್ತಾ ಇದ್ದಾರೆ ನದಿಯ ಆಂತರಿಕ ಅಂಗದ ವಧೆ ಕಳೆದು ಹೋಗಿದೆ ಸೌಮ್ಯ ಹರಿವು ಹೆಚ್ಚಾಗಿದೆ ಹರಿವಿನ ವೇಗ ಸವೆದಿದೆ ನದಿಯ ದಡ ಆಳವಾಗಿದೆ ನದಿಯ ಮುಖ ತಟ್ಟಲಿದೆ ನೇತ್ರಾವತಿಯ ಶಾಪ ಕಾದಿದೆ ಮನುಷ್ಯನಿಗೆ ವಿನಾಶ ! ಲೇಖಕಿ : ಅಶ್ವಿತಾ ಶೆಟ್ಟಿ ಇನೋಳಿ (ಮುಂಬೈ)