Author: admin
ಐತಿಹಾಸಿಕ ಹಿನ್ನೆಲೆಯುಳ್ಳ ಹಾಗೂ ತುಳುನಾಡಿನ ಅಧಿದೇವತೆ ಎಂದೇ ಪ್ರಸಿದ್ಧವಾಗಿರುವ ಬಸ್ರೂರಿನ ಶ್ರೀ ತುಳುವೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಸಹಸ್ರ ಸಹಸ್ರ ದೀಪಗಳ ದೀಪೋತ್ಸವದ ವೈಭವ ಕಣ್ಮನ ಸೆಳೆಯಿತು. ದೇಗುಲದ ಪರಿಸರವು ಜಗಮಗಿಸುವ ದೀಪಗಳ ಅಲಂಕಾರದಿಂದ ಕಂಗೊಳಿಸಿತು. ವಿನಾಶದ ಅಂಚಿನಲ್ಲಿದ್ದರೂ, ಪ್ರಕೃತಿಯ ಆಲಯದಲ್ಲಿ ನೆಲೆಸಿರುವ ತುಳುವೇಶ್ವರನಿಗೆ ಸಮರ್ಪಿತವಾದ ಈ ದೀಪೋತ್ಸವವು ಭಕ್ತ ಸಮೂಹಕ್ಕೆ ಒಂದು ವಿಶಿಷ್ಟ ಆಧ್ಯಾತ್ಮಿಕ ಅನುಭವ ನೀಡಿತು. ಆಲದ ಮರದ ಬುಡದಲ್ಲಿರುವ ಶಿವಲಿಂಗದ ಸುತ್ತಲೂ ಹಾಗೂ ದೇವಸ್ಥಾನದ ಪ್ರಾಂಗಣದಲ್ಲಿ ಸಾವಿರಾರು ಮಣ್ಣಿನ ದೀಪಗಳನ್ನು ಬೆಳಗಿಸಲಾಗಿತ್ತು. ಆ ದೀಪಗಳ ಪ್ರಕಾಶದಲ್ಲಿ ದೇವಾಲಯದ ಶಿಥಿಲಗೊಂಡ ಗೋಡೆಗಳು ಮತ್ತು ಪ್ರಾಚೀನ ಶಿಲಾಕುರುಹುಗಳು ಮತ್ತಷ್ಟು ಪುರಾತನ ವೈಭವವನ್ನು ನೆನಪಿಸಿದವು. ದೀಪಾರಾಧನೆಯ ಸಂದರ್ಭದಲ್ಲಿ ಸೇರಿದ್ದ ಸಹಸ್ರಾರು ಭಕ್ತರು ಶಿವನಾಮ ಸ್ಮರಣೆ ಮಾಡುತ್ತಾ, ಭಕ್ತಿಪರವಶರಾಗಿ ‘ಓಂ ನಮಃ ಶಿವಾಯ’ ಪಂಚಾಕ್ಷರಿ ಮಂತ್ರವನ್ನು ಜಪಿಸಿದರು. ಭಕ್ತರ ಘೋಷಣೆ, ಮಂಗಳವಾದ್ಯಗಳ ನಿನಾದ ಮತ್ತು ದೀಪಗಳ ಪ್ರಕಾಶದಿಂದ ದೇವಳದ ವಾತಾವರಣ ಸಂಪೂರ್ಣವಾಗಿ ದೈವಿಕ ಶಕ್ತಿಯಿಂದ ತುಂಬಿಹೋಗಿತ್ತು. ಈ ಸಂದರ್ಭದಲ್ಲಿ ಶಿವನನ್ನು ಸ್ತುತಿಸುವ ವಿಶೇಷ ಭಜನೆ…
ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ವೆಂಕಟ್ ಭಾರಧ್ವಜ್ ನಿರ್ದೇಶನದ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪುಣೆಯ ಮಕ್ಕಳ ವೈದ್ಯ ಡಾ. ಸುಧಾಕರ್ ಶೆಟ್ಟಿ ಅವರು ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಬಹು ನಿರೀಕ್ಷೆಯ ‘ಹೇ ಪ್ರಭು’ ಸಿನಿಮಾ ನವೆಂಬರ್ 7 ರಂದು ಪ್ರಪಂಚದಾದ್ಯಂತ ಅದ್ದೂರಿಯಾಗಿ ಬಿಡುಗಡೆಗೊಳ್ಳಲಿದೆ. ಈ ಚಿತ್ರದ ಮೊದಲ ಹಾಡು ‘ಎದ್ದೇಳೋ ಈಗ’ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಹೃದಯವನ್ನು ಗೆದ್ದಿದೆ. ಸ್ಫೂರ್ತಿದಾಯಕ ಸಾಹಿತ್ಯ, ಉತ್ತಮ ಗಾಯನ ಮತ್ತು ಸಂಗೀತದೊಂದಿಗೆ ಈ ಹಾಡು ಸಂಗೀತ ಪ್ರಿಯರು ಹಾಗೂ ಚಿತ್ರಾಭಿಮಾನಿಗಳ ಹೃದಯದಲ್ಲಿ ಭಾವುಕ ಸ್ಪಂದನ ಮೂಡಿಸಿದೆ. ತೇಜಸ್ವಿ ಹರಿದಾಸ್ ಅವರ ಆತ್ಮಸ್ಪರ್ಶಿ ಕಂಠದಲ್ಲಿ ಮೂಡಿ ಬಂದಿರುವ ಈ ಹಾಡು ಆಸೆ, ಆತ್ಮವಿಶ್ವಾಸ ಮತ್ತು ಹೋರಾಟದ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಚಿತ್ರ ಸಾಹಿತಿ ಅರಸು ಅಂತಾರೆ ಅವರ ಹೃದಯ ಮುಟ್ಟುವ ಸಾಹಿತ್ಯ ಮತ್ತು ಡ್ಯಾನಿ ಆಂಡರ್ಸನ್ ಅವರ ಉತ್ಸಾಹಭರಿತ ಸಂಗೀತ ಸಂಯೋಜನೆ ಜೊತೆಯಾಗಿ “ಎದ್ದೇಳೋ ಈಗ”…
ಪುತ್ತೂರು ಬಂಟರ ಸಂಘಕ್ಕೆ 5.5 ಎಕರೆ ಜಾಗ ಮಂಜೂರುಗೊಳಿಸಿದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಶೋಕ ಜನಮನ ಕಾರ್ಯಕ್ರಮದಲ್ಲಿ ಪುತ್ತೂರು ಬಂಟರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದ ಪುತ್ತೂರು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಅವರು ಇಷ್ಟು ವರ್ಷದಲ್ಲಿ ಬಂಟರ ಸಂಘಕ್ಕೆ ಒಂದಿಂಚು ಜಾಗವನ್ನು ಯಾರೂ ನೀಡಿರಲಿಲ್ಲ. ಶಾಸಕ ಅಶೋಕ್ ರೈ ಅವರ ಮುತುವರ್ಜಿಯಿಂದ ನಮ್ಮ ಸಂಘಕ್ಕೆ 5.5 ಎಕರೆ ಜಾಗವನ್ನು ನೀವು ಮಂಜೂರಾತಿ ನೀಡಿದ್ದೀರಿ. ಇದಕ್ಕಾಗಿ ಬಂಟರ ಸಂಘ ಎಂದೆಂದೂ ಚಿರಋಣಿಯಾಗಿರುತ್ತದೆ. ಸಂಘದ ವತಿಯಿಂದ ಮಾಡುವ ಸನ್ಮಾನವನ್ನು ಸ್ವೀಕರಿಸಬೇಕೆಂದು ಮುಖ್ಯಮಂತ್ರಿಗಳ ಬಳಿ ಕೇಳಿಕೊಂಡರು. ಬಂಟರ ಸಂಘದ ವತಿಯಿಂದ ನೀಡಿದ ಸನ್ಮಾನವನ್ನು ಮುಖ್ಯಮಂತ್ರಿಗಳು ಸ್ವೀಕರಿಸಿ ಧನ್ಯವಾದ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಪುತ್ತೂರು ಶಾಸಕ ಅಶೋಕ್ ರೈ, ಮಾಜಿ ಸಚಿವ ರಮಾನಾಥ ರೈ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಸುಮಾ ಅಶೋಕ್ ರೈ, ಗ್ಯಾರಂಟಿ…
ತುಳು ನಾಟಕ ಕಲಾವಿದರ ಒಕ್ಕೂಟ (ರಿ.) ಇದರ ನೂತನ ಅಧ್ಯಕ್ಷರಾಗಿ ಲಕುಮಿ ತಂಡದ ನಿರ್ದೇಶಕ, ಉದ್ಯಮಿ, ಸಮಾಜಸೇವಕ ಕಿಶೋರ್ ಡಿ ಶೆಟ್ಟಿಯವರು ಪುನರಾಯ್ಕೆಯಾಗಿದ್ದಾರೆ. ಮಂಗಳೂರು ತುಳು ನಾಟಕ ಕಲಾವಿದರ ಒಕ್ಕೂಟ ಇದರ 2024- 25 ನೇ ಸಾಲಿನ ವಾರ್ಷಿಕ ಮಹಾಸಭೆಯು ಕದ್ರಿ ಪಾರ್ಕ್ ಬಳಿಯ ಲಯನ್ಸ್ ಅಶೋಕ ಸೇವಾಭವನದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಕಿಶೋರ್ ಡಿ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಂದಿನ ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಕಿಶೋರ್ ಡಿ ಶೆಟ್ಟಿಯವರು ಸರ್ವಾನುಮತದಿಂದ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಗೋಕುಲ್ ಕದ್ರಿ ಮತ್ತು ತಾರಾನಾಥ ಶೆಟ್ಟಿ ಬೋಳಾರ, ಪ್ರಧಾನ ಕಾರ್ಯದರ್ಶಿಯಾಗಿ ಲಕ್ಷಣ್ ಕುಮಾರ್ ಮಲ್ಲೂರ್, ಕೋಶಾಧಿಕಾರಿಯಾಗಿ ಮೋಹನ ಕೊಪ್ಪಲ ಕದ್ರಿ, ಕ್ಷೇಮನಿಧಿ ಪ್ರಧಾನ ಸಂಚಾಲಕರಾಗಿ ಪ್ರದೀಪ್ ಆಳ್ವ ಕದ್ರಿ, ಕ್ಷೇಮನಿಧಿ ಸಂಚಾಲಕರಾಗಿ ರಾಘವೇಂದ್ರ ರಾವ್, ಜೊತೆ ಕಾರ್ಯದರ್ಶಿಯಾಗಿ ತುಳಸೀ ದಾಸ್ ಉರ್ವ, ಸಲಹಾ ಸಮಿತಿ ಸದಸ್ಯರಾಗಿ ತಮ್ಮ ಲಕ್ಷ್ಮ್ಮಣ್, ಶೋಭಾ ಶೆಟ್ಟಿ, ಶರತ್ ಶೆಟ್ಟಿ ಮುಂಡ್ಕೂರು, ಸಂಘಟನಾ ಕಾರ್ಯದರ್ಶಿಯಾಗಿ…
ಬೆಂಗಳೂರಿನಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿವಿಯ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಆಳ್ವಾಸ್ ನ್ಯಾಚುರೋಪಥಿ ಮತ್ತು ಯೋಗಿಕ್ ಸೈನ್ಸ್ ಕಾಲೇಜಿನ ಪ್ರಾಂಶುಪಾಲೆ ಡಾ| ವನಿತಾ ಶೆಟ್ಟಿಯವರಿಗೆ ಆರೋಗ್ಯ ವಿಜ್ಞಾನದ ಶೈಕ್ಷಣಿಕ ವಲಯಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಶ್ರೇಷ್ಠ ಶಿಕ್ಷಕಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಪ್ರಶಸ್ತಿ ನೀಡಿ ಗೌರವಿಸಿದರು. ಇವರು ಆಳ್ವಾಸ್ ನ್ಯಾಚುರೋಪಥಿ ಕಾಲೇಜಿನಲ್ಲಿ ಕಳೆದ ೧೮ ವರ್ಷಗಳಿಂದ ಪ್ರಾಚಾರ್ಯೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಕರ್ನಾಟಕದ ನ್ಯಾಚುರೋಪಥಿ ಮತ್ತು ಯೋಗಿಕ್ ಸೈನ್ಸ್ ಕಾಲೇಜುಗಳ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ತುಳುನಾಡ್ ಡ್ ಪರ್ಬ ಪಂಡ ದೀಪಾವಳಿ ಪಂದ್ ಅರ್ಥ. ಬೆನ್ನಿದೊಂಬುಗೆದ ಬದ್ಕ್ಡ್ ನೆಕ್ಕ್ ಎಡ್ಡೆ ಪುಗರ್ತೆ ಉಂಡು. ಹಿರಿಯಕ್ಲೆ ಆಚರಿಪು, ನಂಬೊಲಿಗೆದ ಪಿರವು ಎಡ್ಡೆಪುದ ಕಾರಣ ಇತ್ತ್ದ್, ಆಚರಣೆಡ್ ಪ್ರದೇಶವಾರು ಪರಾಕ್ ಇತ್ತ್ಂಡಲಾ ಆಶಯ ಒಂಜೆ ಆದಿತ್ತ್ಂಡ್ ಪಂದ್ ಸುರತ್ಕಲ್ ಗೋವಿಂದದಾಸ ಕಾಲೇಜ್ ಉಪನ್ಯಾಸಕಿ ಅಕ್ಷತಾ ವಿ ಕೆನರಾ ಕಾಲೇಜ್ ಸಭಾಂಗಣಡ್ ನಡತಿ ತುಲುವೆರೆ ಕಲ ಟ್ರಸ್ಟ್ (ರಿ)ದ ಪದಗ್ರಹಣ ಬೊಕ್ಕ ತುಡರ್ ಪರ್ಬ ಲೇಸ್ಡ್ ಪಾತೆರೊಂದು ಪಂಡೆರ್. ತುಲುವೆರೆ ಕಲ ಟ್ರಸ್ಟ್ ಗುರ್ಕಾರ್ದಿ ಗೀತಾ ಲಕ್ಷ್ಮೀಶ್ ಗುರ್ಕಾರ್ಮೆದ ಲೇಸ್ನ್ ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಗುರ್ಕಾರ್ರ್ ರಾಜೇಶ್ ಬಿ ಉದಿಪನ ಮಲ್ತೆರ್. ತುಲುವೆರೆ ಕಲತ್ತ ಗೌರವಾಧ್ಯಕ್ಷೆರಾಯಿನ ಮುದ್ದು ಮೂಡುಬೆಳ್ಳೆ, ಮಾರ್ಗದರ್ಶಕೆ ಸದಾನಂದ ನಾರಾವಿ ದುಂಬಾಯಿನಕ್ಲ್ ಲೇಸ್ದ ಮಿತ್ತರ್ಮೆಡಿತ್ತೆರ್. ಪ್ರಶಾಂತ್ ಆಚಾರ್ಯ ಎಡಪದವು ದೇವೆರೆನ್ ಸುಗಿತ್, ರೇಣುಕಾ ಕಣಿಯೂರು ಲೇಸ್ ಸುಧಾರಿಕೆ ಮಲ್ತೆರ್. ಸಾಹಿತಿ, ಉಪನ್ಯಾಸಕೆ ರಘು ಇಡ್ಕಿದು ಗುರ್ಕಾರ್ಮೆದ ತುಡರ್ ಕಬಿಕೂಟೊಡು ವಿಶ್ವನಾಥ ಕುಲಾಲ್ ಮಿತ್ತೂರು, ಡಾ. ಸುರೇಶ್ ನೆಗಳಗುಳಿ,…
ದ.ಕ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಜೈನ್ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಸ್ವರಾಜ್ಯ ಮೈದಾನದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜು ಒಟ್ಟು ೨೮ ಚಿನ್ನ, ೨೦ ಬೆಳ್ಳಿ ಮತ್ತು ೦೪ ಕಂಚಿನ ಪದಕಗಳೊಂದಿಗೆ ೫೨ ಪದಕಗಳನ್ನು ಪಡೆದು ಬಾಲಕರ ವಿಭಾಗದಲ್ಲಿ ೧೦೦ ಅಂಕ ಮತ್ತು ಬಾಲಕಿಯರ ವಿಭಾಗದಲ್ಲಿ ೧೦೪ ಅಂಕ ಒಟ್ಟು ೨೦೪ ಅಂಕದೊಂದಿಗೆ ಸಮಗ್ರ ಪ್ರಶಸ್ತಿಯನ್ನು ಪಡೆಯಿತು. ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ೧೬ ಅಂಕಗಳೊಂದಿಗೆ ಪ್ರಶಸ್ತಿಯನ್ನು ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಜೈನ್ ಪದವಿಪೂರ್ವ ಕಾಲೇಜು ೧೯ ಅಂಕ ಪಡೆದು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಬಾಲಕರ ವೈಯಕ್ತಿಕ ಪ್ರಶಸ್ತಿಯನ್ನು ಆಳ್ವಾಸಿನ ಸಮರ್ಥ ಪಡೆದುಕೊಂಡರೆ, ಬಾಲಕಿಯರ ವೈಯಕ್ತಿಕ ವಿಭಾಗದಲ್ಲಿ ಆಳ್ವಾಸಿನ ನಾಗಿಣಿ ಪಡೆದುಕೊಂಡರು. ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು ಅಭಿನಂದನೆ ಸಲ್ಲಿಸಿದರು.
ಬಂಟ ಸಮಾಜದವರನ್ನು ಒಟ್ಟಿಗೆ ಸೇರಿಸಿಕೊಂಡು ಸಮುದಾಯದ ಏಳಿಗೆಗಾಗಿ ಸರಕಾರದ ಮೇಲೆ ಒತ್ತಡ ಹಾಕಿ ಬಂಟ ಅಭಿವೃದ್ದಿ ನಿಗಮ ಸ್ಥಾಪನೆಗೆ ಪ್ರಯತ್ನಿಸಲಾಗುವುದು ಎಂದು ಶ್ರೀ ಬಾರ್ಕೂರು ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ವಿದ್ಯಾವಾಚಾಸ್ಪತಿ ಡಾ. ವಿಶ್ವ ಸಂತೋಷ ಭಾರತೀ ಸ್ವಾಮೀಜಿ ತಿಳಿಸಿದರು. ಅಡ್ಯಾರ್ ಗಾರ್ಡನ್ ನಲ್ಲಿ ನಡೆದ ಶ್ರೀ ಬಾರ್ಕೂರು ಮಹಾ ಸಂಸ್ಥಾನದ ದಶಮ ಸಂಭ್ರಮ ಸಂಕಲ್ಪ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ವಿದ್ಯಾವಾಚಾಸ್ಪತಿ ಡಾl ವಿಶ್ವ ಸಂತೋಷ ಭಾರತೀ ಸ್ವಾಮೀಜಿಯವರು ಬಂಟ ಸಂಸ್ಕೃತಿ ಪರಂಪರೆ ತುಳುನಾಡಿನ ದೈವ ದೇವರುಗಳ ಆಚರಣೆಯ ಕುರಿತು ಮಾತನಾಡಿದರು. ನನಗೆ ಬಹಳ ದೊಡ್ಡ ಕನಸು ಇದೆ ನಮ್ಮವರನ್ನೆಲ್ಲಾ ಒಂದು ಸೂರಿನಡಿ ಸೇರಿಸಿ ಮಾತನಾಡಬೇಕು, ಜೊತೆಗೆ ಈ ಸಮಾಜದ ಬಹು ದೊಡ್ಡ ಸಂಘಟನೆಯ ನಿರೀಕ್ಷೆಯೂ ಇದೆ. ಈ ಸಂಸ್ಥಾನ ಸ್ಥಾಪಿಸಲು ಹೋಗಿ ನಾನು ಬಹಳಷ್ಟು ನೋವುಗಳನ್ನು ಅನುಭವಿಸಿದೆ. ಆದರೂ ನನ್ನ ಪೂರ್ವ ಆಶ್ರಮದ ಈ ಬಂಟ ಜಾತಿಯವರಿಗೆ ಏನಾದರೂ ಮಾಡಲೇ ಬೇಕು ಎಂದು ನಿರ್ಧರಿಸಿ…
ತುಳು ಕೂಟ ಪುಣೆಯ ವಾರ್ಷಿಕ ಸಭೆ : ಸಮಾನತೆ, ಕರುಣೆ, ಮಾನವೀಯತೆ, ಸಹಭಾಗಿತ್ವವೇ ಸಮಾಜ ಸೇವೆಗೆ ಪ್ರೇರಣೆ – ದಿನೇಶ್ ಶೆಟ್ಟಿ ಕಳತ್ತೂರು
ಪ್ರತಿಯೊಬ್ಬ ವ್ಯಕ್ತಿಯು ತನಗೆ ತಾನೇ ವಿಕಾಸಗೊಂಡು ತನ್ನ ಮಟ್ಟವನ್ನು ತಲುಪಿದಾಗ ಸಂತೃಪ್ತಿಯನ್ನು ಹೊಂದುತ್ತಾನೆ. ಇದು ತನ್ನ ಸ್ವಸಾಮರ್ಥ್ಯದಿಂದ ಪಡೆದದ್ದು ಆಗಿರುತ್ತದೆ. ಅದೇ ರೀತಿ ಒಡಲಲ್ಲಿ ತುಂಬಿರುವ ಸಮಾಜ ಸೇವೆ ಎಂಬ ತುಡಿತ ಎಲ್ಲರಲ್ಲೂ ಬರಲು ಸಾದ್ಯವಿಲ್ಲ. ಅಂತಹ ತುಡಿತ ಇದ್ದವನು ಸಮಾಜ ಸೇವೆಗೆ ಇಳಿಯದೆ ಸುಮ್ಮನಿರಲಾರ. ಇದೇ ನಾವು ಇಂದು ಸಮಾಜದಲ್ಲಿ ಕಾಣುತ್ತಾ ಇದ್ದೇವೆ. ಸಂಘಟನೆ ಮಾಡುವುದು ಸುಲಭ. ಆದರೆ ಅದರ ಗುರಿ ಮುಟ್ಟಲು ಚಿಂತನಾಶೀಲ, ಸಂಘಟನಾತ್ಮಕ ಮತ್ತು ದೃಡ ಸಂಕಲ್ಪ ಬೇಕು. ಹೃದಯದಲ್ಲಿ ಕರುಣೆ, ಸಮಾನತೆ, ಮಾನವೀಯ ಮೌಲ್ಯಗಳು ಮತ್ತು ಸಹಭಾಗಿತ್ವ ಎಂಬ ಆಶಾ ಭಾವ ನಮ್ಮಲ್ಲಿ ಇದ್ದರೆ ಯಾವ ರೀತಿಯಿಂದಲಾದರೂ ಸೇವೆ ಮಾಡಿ ತೋರಿಸಬಹುದು. ತುಳುಕೂಟ ಪುಣೆ ಸ್ಥಾಪನೆ ಆಗಿ 27 ವರ್ಷಗಳ ಪರ್ಯಂತ ತುಳುವರಿಗಾಗಿ ಶ್ರಮಿಸುತ್ತಾ ಬಂದಿದೆ. ಹಿಂದಿನ ಎಲ್ಲಾ ಅಧ್ಯಕ್ಷರುಗಳು ಹಲವಾರು ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಆದರೆ ನಮ್ಮ ಉದ್ದೇಶ ಏನಿತ್ತೋ ಸಂಘಕ್ಕಾಗಿ ತುಳುವರಿಗಾಗಿ ಸ್ವಂತ ಮಿನಿ ಭವನ ಮಾಡಿ ಅ ಮೂಲಕ ತುಳುವರಿಗೆ ಉಪಯೋಗಕಾರಿ…
ಮಹಾರಾಷ್ಟ್ರದ ಪ್ರಖ್ಯಾತ ದಿನಪತ್ರಿಕೆಯಾದ ಪುಡಾರಿಯು ಕೊಡ ಮಾಡುವ ಪಿಂಪ್ರಿ ಚಿಂಚ್ವಾಡ್ ಭೂಷಣ ಗೌರವ ಪುರಸ್ಕಾರ ಕಾರ್ಯಕ್ರಮವು ರಾಗ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಿತ್ತು. ಈ ಬಾರಿಯ ಪಿಂಪ್ರಿ ಚಿಂಚ್ವಾಡ್ ಭೂಷಣ್ ಪುರಸ್ಕಾರವು ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆಯವರಿಗೆ ನೀಡಿ ಗೌರವಿಸಿದೆ. ಅಲ್ಲದೇ ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ಉಪಾಧ್ಯಕ್ಷರಾದ ಪ್ರಸಾದ್ ಶೆಟ್ಟಿ ಅವರಿಗೆ ಕೂಡಾ ಪಿಂಪ್ರಿ ಚಿಂಚ್ವಾಡ್ ಭೂಷಣ್ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿಯನ್ನು ಸರಕಾರದ ಆರೋಗ್ಯ ಸಚಿವರಾದ ಪ್ರಕಾಶ್ ಅಬಿತ್ಕರ್ ಮತ್ತು ಸಂಸದರಾದ ಶ್ರೀರಂಗ (ಅಪ್ಪ) ಬಾರ್ನೆ ಮತ್ತು ಎಂ ಎಲ್ ಸಿ ಅಮಿತ್ ಗೋರ್ಕೆ ಎಂಎಲ್ಸಿ ಮತ್ತು ಶತ್ರುಘ್ನ ಕಾಟೆಯವರು ಒಡಗೂಡಿ ಪ್ರದಾನ ಮಾಡಿದರು. ವರದಿ : ಹರೀಶ್ ಮೂಡಬಿದ್ರಿ, ಪುಣೆ














