Author: admin
ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ ಯುವಜನತೆ ಪ್ರತಿಭಾವಂತರು. ಪ್ರತಿಭಾನ್ವಿತರಿಗೆ ಉದ್ಯೋಗ ಒದಗಿಸುವ ಜೊತೆಗೆ ಕೇಂದ್ರ, ರಾಜ್ಯ ಸರಕಾರವು ಕೌಶಲ ಅಭಿವೃದ್ಧಿಗೆ ಹೆಚ್ಚು ಆಸಕ್ತಿ ಹೊಂದಿದ್ದು, ಇವೆಲ್ಲವನ್ನೂ ಒಂದೇ ಸೂರಿನಡಿ ಅಶೋಕ್ ಕುಮಾರ್ ಶೆಟ್ಟಿ ನೇತೃತ್ವದ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ಇದರ ಯೋಜನೆಯು ಸಮಾಜಕ್ಕೆ ಮಾರ್ಗದರ್ಶಕವಾಗಿದೆ ಎಂದು ಮಾಜಿ ಸಚಿವ, ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದರು. ಅವರು ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಂ ಆರ್ ಜಿ ಗ್ರೂಪ್ ಪ್ರಾಯೋಜಕತ್ವದಲ್ಲಿ ಮಣಿಪುರ ಕುಂತಳನಗರದ ಆಶಾ ಪ್ರಕಾಶ್ ಶೆಟ್ಟಿ ಕನ್ವೆನ್ಷನ್ ಸೆಂಟರ್ ಹಾಗೂ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ನಾಲ್ಕನೇ ಬಾರಿ ನಡೆದ ಉಚಿತ ಬೃಹತ್ ಉದ್ಯೋಗ ಮೇಳದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂಎ ಗಫೂರ್ ಮಾತನಾಡಿ, ನಿರುದ್ಯೋಗವನ್ನು ಹೋಗಲಾಡಿಸುವ ಕೌಶಲ ಅಭಿವೃದ್ಧಿ ತರಬೇತಿಯೊಂದಿಗೆ ಉದ್ಯೋಗ ಮೇಳ ಆಯೋಜನೆ ಮೂಲಕ ಉದ್ಯೋಗವಕಾಶವನ್ನು ಯುವಜನತೆಗೆ…
ಪುತ್ತೂರು ತಾಲೂಕು ಬಂಟರ ಸಂಘ : ಬಂಟೆರೆ ಸೇರಿಗೆ -2025, ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಮಂತ್ರಣ ಪತ್ರ ಬಿಡುಗಡೆ
ಬಂಟರ ಸಂಘ ಪುತ್ತೂರು ತಾಲೂಕು ಇದರ ಸಾರಥ್ಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಪುತ್ತೂರು ತಾಲೂಕು ಸಮಿತಿ ಇದರ ಮಾರ್ಗದರ್ಶನದಲ್ಲಿ ಮಹಿಳಾ, ಯುವ ಹಾಗೂ ವಿದ್ಯಾರ್ಥಿ ಬಂಟರ ವಿಭಾಗ ಇದರ ಸಹಕಾರದಲ್ಲಿ ನವೆಂಬರ್ 22 ರಂದು ಪುತ್ತೂರು ಎಂ. ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಲಿರುವ ಬಂಟೆರೆ ಸೇರಿಗೆ -2025, ಸಾಧಕರಿಗೆ ಸನ್ಮಾನ, ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದ ಅಮಂತ್ರಣ ಪತ್ರ ಬಿಡುಗಡೆ ನವೆಂಬರ್ 10 ರಂದು ಜರಗಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರ ನೇತೃತೃದಲ್ಲಿ ಪ್ರಾರ್ಥನೆ ನಡೆಯಿತು. ದೇವಾಲಯದ ಪ್ರಧಾನ ಅರ್ಚಕ ವಸಂತ ಕೆದಿಲಾಯರವರು ಕಾರ್ಯಕ್ರಮ ಸಾಂಗವಾಗಿ ನಡೆಯಲಿ, ಕಾರ್ಯಕ್ರಮದ ಯಶಸ್ಸಿಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅನುಗ್ರಹ ಸದಾ ಇದೆ ಎಂದು ಪ್ರಾರ್ಥನೆಗೈದರು. ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಬಂಟರ ಯಾನೆ ನಾಡವರ ಮಾತೃ…
ರಾಜ್ಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಮಲ್ಲಕಂಬ ಸ್ಪರ್ಧೆ : ಆಳ್ವಾಸ್ ಶಾಲೆಗೆ ತಂಡ ಪ್ರಶಸ್ತಿ
ಉಪ ನಿರ್ದೇಶಕರ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಗದಗ, ಕೆ.ಹೆಚ್ ಪಾಟೇಲ್ ಜಿಲ್ಲಾ ಕ್ರೀಡಾಂಗಣ ಕೆಸಿ ರಾಣಿ ರಸ್ತೆ ಗದಗ, ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ 14 ವರ್ಷ ಮತ್ತು 17 ವರ್ಷ ವಯೋಮಿತಿಯ ಪ್ರಾಥಮಿಕ, ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ರಾಜ್ಯ ಮಟ್ಟದ ಮಲ್ಲಕಂಬ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ ಆಳ್ವಾಸ್ ಮಲ್ಲಕಂಬ ತಂಡವು 14 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಮತ್ತು 17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಚಾಂಪಿಯನ್ ಮತ್ತು 14 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಮತ್ತು 17 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಮುಂದಿನ ತಿಂಗಳು ನಡೆಯುವ ರಾಷ್ಟ್ರೀಯ ಮಲ್ಲಕಂಬ ಸ್ಪರ್ಧೆಗೆ ಆಳ್ವಾಸ್ ಶಾಲೆಯಿಂದ ಒಟ್ಟು 09 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಫಲಿತಾಂಶ: 14 ವರ್ಷದ ವಯೋಮಿತಿಯ ಬಾಲಕರ ವಿಭಾಗದಲ್ಲಿ: ಗೌರೀಶ್ ಎಂ ಕೆ – ದ್ವಿತೀಯ ಸ್ಥಾನ, ಭೀಮಪ್ಪ ಎಂ ಜಿ ತೃತೀಯ ಸ್ಥಾನ, ಪ್ರೀತಮ್ ಜಿ -…
ಮಂಗಳೂರಿನ ಬೋಳಾರದ ಉದ್ಯಮಿ ಮಂಜರಿ ಫುಡ್ಸ್, ಎಸ್.ಆರ್ ಎಂಟರ್ಪ್ರೈಸಸ್ ಮಾಲಕ ರಮೇಶ್ ಶೆಟ್ಟಿ ಕಲ್ಕಾರು ಅವರ ತಾಯಿ ಹರಿಣಾಕ್ಷಿ ಎಂ ಶೆಟ್ಟಿ ಅವರಿಗೆ ನುಡಿನಮನ ರವಿವಾರ ಕದ್ರಿ ಶ್ರೀ ಮಂಜುನಾಥೇಶ್ವರ ಕ್ಷೇತ್ರದ ಮಂಜುಶ್ರೀ ಹಾಲ್ ನಲ್ಲಿ ನೆರವೇರಿತು. ಸವಣೂರು ವಿದ್ಯಾರಶ್ಮಿ ಸಂಸ್ಥೆಗಳ ಮುಖ್ಯಸ್ಥ ಕೆ ಸೀತಾರಾಮ ರೈ ಸವಣೂರು ಅವರು ಮಾತನಾಡಿ, ಹರಿಣಾಕ್ಷಿ ಎಂ ಶೆಟ್ಟಿಯವರು ನಾಲ್ಕು ಜನ ಗಂಡು ಮಕ್ಕಳನ್ನು ಸಲಹಿ ಒಳ್ಳೆ ವಿದ್ಯಾವಂತರನ್ನಾಗಿ ಮಾಡಿ ಧರ್ಮ ನಿಷ್ಠರಾಗಿ ಬೆಳೆಸಿದ್ದಾರೆ. ಸಮಾಜಕ್ಕೆ ದಾನ ಧರ್ಮ ಮಾಡುವ ಮೂಲಕ ದೊಡ್ಡ ಶಕ್ತಿಯಾಗಿಸಿದ್ದು ಅವರು ಹಾಕಿಕೊಟ್ಟ ಹಾದಿಯನ್ನು ಮಕ್ಕಳು ಮುನ್ನಡೆಸಲಿ ಎಂದರು. ಕಂಬಳ ಪ್ರೇಮಿ, ಚಲನಚಿತ್ರ ನಟ ಎಡ್ತೂರು ರಾಜೀವ ಶೆಟ್ಟಿ ಅವರು ನುಡಿ ನಮನ ಸಲ್ಲಿಸಿದರು. ಭಾಗವತ ಪಟ್ಟ ಸತೀಶ್ ಶೆಟ್ಟಿ, ಸಂತೋಷ್ ಕುಮಾರ್ ರೈ ಬೋಳಿಯಾರ್, ಪ್ರಶಾಂತ್ ಕಾಜವ ಮಿತ್ತಕೋಡಿ, ಜಗದೀಶ ಶೆಟ್ಟಿಕುವೆತ್ತ ಬೈಲ್, ಎ ಸಿ ಭಂಡಾರಿ, ಸುಧಾಕರ ರೈ ಮೈಸೂರು, ವಸಂತ ಶೆಟ್ಟಿ ಜೆಪ್ಪು, ಲಯನ್ ಮನೋಜ್…
ಬೋಂಬೆ ಬಂಟ್ಸ್ ಅಸೋಸಿಯೇಷನ್ ಇದರ 42 ನೇ ವಾರ್ಷಿಕ ಮಹಾಸಭೆಯು ಅಧ್ಯಕ್ಷರಾದ ಅಡ್ವೋಕೇಟ್ ಡಿ.ಕೆ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನವೆಂಬರ್ 16ರಂದು ರವಿವಾರ ಬೆಳಿಗ್ಗೆ 10.00 ಗಂಟೆಗೆ ಸರಿಯಾಗಿ ನವಿ ಮುಂಬಯಿ ಜೂಹಿ ನಗರ ಪಶ್ಚಿಮದಲ್ಲಿರುವ ಬಂಟ್ಸ್ ಸೆಂಟರ್ ನಲ್ಲಿ ಜರಗಲಿದೆ. ಈ ಸಭೆಯಲ್ಲಿ ವಾರ್ಷಿಕ ವರದಿಯ ಮಂಡನೆ, ವಾರ್ಷಿಕ ಲೆಕ್ಕ ಪತ್ರಗಳ ಮಂಡನೆ, 2025-26 ರ ಸಾಲಿನ ಲೆಕ್ಕ ಪರಿಶೋಧಕರ ನೇಮಕ ಮತ್ತು ಇನ್ನಿತರ ವಿಷಯಗಳ ಬಗ್ಗೆ ಸದಸ್ಯರ ಜತೆ ಸಮಾಲೋಚನೆ, ಬಹಿರಂಗ ಅಧಿವೇಶನ ನಡೆಯಲಿದೆ. ಅಡ್ವೋಕೇಟ್ ಡಿ.ಕೆ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭವನ್ನು ಬಂಟರ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ, ಸಂಪೂರ್ಣ ಹೊಟೇಲ್ಸ್ ಪ್ರೈವೇಟ್ ಲಿಮಿಟೆಡ್ ನ ಸಿಎಂಡಿ ಪದ್ಮನಾಭ ಎಸ್ ಪಯ್ಯಡೆಯವರು ಉದ್ಘಾಟಿಸಲಿದ್ದು ಭವಾನಿ ಸಮೂಹ ಸಂಸ್ಥೆಗಳ ಸಿಎಂಡಿ ಕುಸುಮೋಧರ ಡಿ ಶೆಟ್ಟಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಬಂಟ ಸಮಾಜದ ಶಿಕ್ಷಣ ಕ್ಷೇತ್ರದ ಸಾಧಕ ಲ| ಸಂತೋಷ ಆರ್ ಶೆಟ್ಟಿ, ವೈದ್ಯಕೀಯ ಕ್ಷೇತ್ರದ ಸಾಧಕ ಡಾ. ಸ್ವರೂಪ್…
ಕೆಲಸದ “ಬಾಂಡ್”ಗಳಿಗಿಂತ ಮನಸ್ಸು ಮನಸ್ಸುಗಳ ಭಾಂಧವ್ಯ ಮುಖ್ಯ. ತಂದೆ ತಾಯಿ ಕಷ್ಟದಿಂದ ಮುತ್ತಿಕ್ಕಿ ತುತ್ತಿಕ್ಕಿ ಸಾಕಿ, ಸಲಹಿ ವಿದ್ಯೆ ಕಲಿಸಿದರೂ ಯಾವುದೇ ಕಾನೂನಿನ ಕರಾರು ಮಾಡಿಸುವುದಿಲ್ಲ. ಆದರೆ ಅವರು ಲಕ್ಷಗಟ್ಟಲೆ ಹಣ ಸುರಿದು ಕಲಿಸಿದ ಅವರ ಮಕ್ಕಳ ಶ್ರಮದ ವಿದ್ಯಾ ಸರ್ಟಿಫಿಕೇಟ್ ಗಳನ್ನು ಯಾವುದೇ ಕಂಪನಿ ತೆಗೆದಿರಿಸುವ ಹಕ್ಕು ಯಾರು ಕೊಟ್ಟರು? ಪ್ರಸ್ತುತ ಎಲ್ಲಾ ಮನೆಯ ಮಕ್ಕಳೂ ಇಂಜಿನಿಯರ್, ಡಾಕ್ಟರ್ ಲಾಯರ್, ಪೈಲೆಟ್, ಐ.ಎ.ಎಸ್ ಇತ್ಯಾದಿ ಡಿಗ್ರಿ ಪಡೆದವರೇ. ಆದರೆ ಅವರ ಕಲಿತಾದ ಮೇಲೆ ಸರಿಯಾದ ಕೆಲಸಗಳಿಲ್ಲ. ಬೆಟ್ಟದಷ್ಟು ಆಸೆ ತುಂಬಿದ ಮುಖ ಮನಸ್ಸುಗಳ ಆಸೆಗಳನ್ನು ವರ್ಷಗಟ್ಟಲೆ ಕಸಿಯುವ ಕೆಲ ಸ್ವಾರ್ಥಿ ಖದೀಮರಿದ್ದಾರೆ ಎಚ್ಚರ!. ಸಾಕಷ್ಟು ಸಂಪಾದನೆ ಇದ್ದು ಸ್ಥಿತಿವಂತರಾದವರು ಏನೂ ಸಮಸ್ಯೆ ಇಲ್ಲದೆ ಕಲಿಯುತ್ತಾರೆ. ಕಲಿಸುತ್ತಾರೆ. ಈಗಿನ ಹೆಚ್ಚಿನ ಮಕ್ಕಳು ಹಿಂದಿನಂತೆ ಕಿಮೀ ಗಟ್ಟಲೆ ಕಾಲ್ನಡಿಗೆಯಲ್ಲಿ ಕ್ರಮಿಸಿ ಕಷ್ಟದಿಂದ ಶಾಲೆ ಕಾಲೇಜು ಕಲಿತವರಲ್ಲ. ಅದರಲ್ಲೂ ಮಧ್ಯಮ ವರ್ಗದ ಮತ್ತು ಕೆಳ ಮಧ್ಯಮ ವರ್ಗದ ಮನೆಯ ಹೊಸ ತಲೆಮಾರಿನ ಮಕ್ಕಳದ್ದು ಹೊಸತನದ…
ಮಂಗಳೂರು ವಿ.ವಿ.ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ನವೆಂಬರ್ 23 ರಿಂದ ನಗರದ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ನಡೆಸುವ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ – 2025’ ಹದಿಮೂರನೇ ವರ್ಷದ ನುಡಿಹಬ್ಬ ಕಾರ್ಯಕ್ರಮದ ವರ್ಣರಂಜಿತ ಪೋಸ್ಟರನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು. ಯಕ್ಷಾಂಗಣದ ಗೌರವಾಧ್ಯಕ್ಷ ಹಾಗೂ ಕದ್ರಿ ಶ್ರೀ ಮಂಜುನಾಥ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ|ಎ.ಜೆ ಶೆಟ್ಟಿ ಅವರು ಪೋಸ್ಟರ್ ಬಿಡುಗಡೆಗೊಳಿಸಿದರು. ಕಳೆದ ಹನ್ನೆರಡು ವರ್ಷಗಳಿಂದ ವಿಶೇಷವಾಗಿ ನವೆಂಬರ್ ತಿಂಗಳಲ್ಲಿ ನುಡಿ ಹಬ್ಬ ರೂಪದಲ್ಲಿ ನಡೆಸುವ ಯಕ್ಷಾಂಗಣದ ಸಪ್ತಾಹ ಯಶಸ್ವಿಯಾಗುವಲ್ಲಿ ಕಾರ್ಯಕರ್ತರ ಪಾತ್ರ ಬಹಳ ದೊಡ್ಡದು ಎಂದವರು ಸಮಿತಿಯ ಪದಾಧಿಕಾರಿಗಳನ್ನು ಅಭಿನಂದಿಸಿದರು. ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮದ ರೂಪು ರೇಷೆಗಳ ವಿವರ ನೀಡಿದರು. ಉಪಾಧ್ಯಕ್ಷ ಎಂ ಸುಂದರ ಶೆಟ್ಟಿ ಬೆಟ್ಟಂಪಾಡಿ, ಸಂಚಾಲಕಿ ನಿವೇದಿತಾ ಎನ್ ಶೆಟ್ಟಿ ಹಾಗೂ ಕಾರ್ಯದರ್ಶಿಗಳಾದ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ…
ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮತ್ತು ಜಾಗತಿಕ ಬಂಟರ ಸಂಘದ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ 70ರ ಸಂಭ್ರಮ ಕಾರ್ಯಕ್ರಮ
ಸಮುದಾಯದ ಜನರು ಗುಂಪಿನಲ್ಲಿ ವಾಸಿಸುವಾಗ ಏಕತೆ, ಒಗ್ಗಟ್ಟಿನ ಬಂಧವನ್ನು ಪಡೆದುಕೊಳ್ಳುತ್ತಾರೆ. ಪ್ರತೀ ಸಮುದಾಯಕ್ಕೆ ಸ್ವಂತ ಅಸ್ತಿತ್ವ ಮತ್ತು ಗುರುತು ಇರುತ್ತದೆ. ಸಮುದಾಯದಲ್ಲಿ ಸಾಮಾಜಿಕ ರಚನೆ ಮತ್ತು ನಿಯಂತ್ರಣ ಕೂಡ ಬಹಳ ಮುಖ್ಯವಾಗಿರುತ್ತದೆ. ಮೊಗವೀರರು ಊರ ಒಳಗಿನ ಸಮಸ್ಯೆಗಳನ್ನು ಗ್ರಾಮ ಪಂಚಾಯತ್ ಪದ್ಧತಿಯ ಮೂಲಕ ಪರಿಹರಿಸಿಕೊಳ್ಳುತ್ತಿದ್ದರು. ಇದರಿಂದಾಗಿ ಮೊಗವೀರರಿಗೆ ಕೋರ್ಟು ಕಚೇರಿ ಹತ್ತುವ ಪ್ರಸಂಗ ಬರುತ್ತಿರಲಿಲ್ಲ. ವ್ಯಾಜ್ಯಗಳನ್ನು ಸಮುದಾಯದ ಒಳಗೆ ತೀರ್ಮಾನಿಸಿಕೊಳ್ಳುತ್ತಿದ್ದರು ಎಂದು ಮುಂಬೈಯ ಕವಿ ಲೇಖಕಿ ಡಾ. ಜಿ.ಪಿ. ಕುಸುಮಾ ಅವರು ಅಭಿಪ್ರಾಯ ಪಟ್ಟರು. ಅವರು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟ ನವೆಂಬರ್ 1ರಂದು ಕಲೀನಾ ಕ್ಯಾಂಪಸ್ ನ ರಾನಡೆ ಭವನದ ಇಂಗ್ಲಿಷ್ ವಿಭಾಗದ ಸೆಮಿನಾರ್ ಹಾಲ್ ನಲ್ಲಿ ಆಯೋಜಿಸಿದ್ದ ‘ಮುಂಬೈ ಕನ್ನಡಿಗರ ಅಸ್ಮಿತೆ ಚಿಂತನ ಮಂಥನ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸಮುದಾಯ ಅಧ್ಯಯನದ ಅಗತ್ಯ ಮತ್ತು ಮಹತ್ವ (ಮೊಗವೀರ ಸಮುದಾಯದ ಹಿನ್ನೆಲೆಯಲ್ಲಿ) ಎಂಬ ವಿಷಯದ ಕುರಿತು ಉಪನ್ಯಾಸಕರಾಗಿ ಮಾತನಾಡುತ್ತಿದ್ದರು. ಅವರು ಸಮುದಾಯದ ಅಧ್ಯಯನದ…
ಮಹಾರಾಷ್ಟ್ರ ಸರಕಾರದ ಆದೇಶದಂತೆ ಮುಂಬೈ ವಿಶ್ವವಿದ್ಯಾಲಯದ ಸೂಚನೆಯಂತೆ ವಿವಿಯ ಕನ್ನಡ ವಿಭಾಗದಲ್ಲಿ ನವೆಂಬರ್ 7ರಂದು ವಂದೇ ಮಾತರಂ ಸಮೂಹ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗಾಯನದ ತರುವಾಯ ಗೀತೆಯ ಕುರಿತಾಗಿ ಸಂವಾದ ಕಾರ್ಯಕ್ರಮ ಸಹ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಪ್ರೊ. ಜಿ. ಎನ್. ಉಪಾಧ್ಯ ಅವರು ಮಾತನಾಡುತ್ತಾ, ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗವು ಕಳೆದ 46 ವರ್ಷಗಳಿಂದ ನಮ್ಮ ದೇಶ ಭಾಷೆ ಸಾಹಿತ್ಯ ಸಂಸ್ಕೃತಿಯ ಬಲವರ್ಧನೆಗೆ ಸಂಬಂಧಪಟ್ಟ ಎಲ್ಲ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ವಂದೇ ಭಾರತ ಗೀತೆಯು ಭಾರತೀಯರ ಭಾವ ಕೋಶದಲ್ಲಿ ಸೇರಿದ ಭಾವಗೀತೆಯಾಗಿದೆ. ಭಾರತದ ಜನಮನವನ್ನು ಬೆಸೆಯುವಲ್ಲಿ, ಸ್ವದೇಶಿ ಚಳುವಳಿ ಮತ್ತು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಈ ಗೀತೆಯು ಪ್ರಧಾನಪಾತ್ರವನ್ನು ವಹಿಸಿದೆ. ಬಂಕಿಮ್ ಚಂದ್ರ ಚಟರ್ಜಿ ವಿರಚಿತ 1875ರ ಗೀತೆಗೆ ಇಂದು 150ರ ಸಂಭ್ರಮ. ಇದನ್ನು ಸಾಮೂಹಿಕವಾಗಿ ಗಾಯನ ಮಾಡಿ ಚಿಂತನ ಮಂಥನ ಮಾಡುವ ಅವಕಾಶ ಲಭಿಸಿದ್ದು ಸಂತಸದ ವಿಷಯವಾಗಿದೆ…
ಗೆಳೆಯರ ಬಳಗ (ರಿ) ಬಲ್ಲಂಗುಡೆಲು : ನೂತನ ಅಧ್ಯಕ್ಷರಾಗಿ ಕಾರ್ತಿಕ್ ಶೆಟ್ಟಿ ಮಜಿಬೈಲು, ಕಾರ್ಯದರ್ಶಿಯಾಗಿ ಪ್ರದೀಪ್ ಶೆಟ್ಟಿ
ಗೆಳೆಯರ ಬಳಗ (ರಿ) ಬಲ್ಲಂಗುಡೆಲು ಇದರ ವಾರ್ಷಿಕ ಮಹಾಸಭೆ ಬಲ್ಲಂಗುಡೆಲು ಶ್ರೀ ಕ್ಷೇತ್ರದ ಪರಿಸರದ ಸಂಘದ ಕಟ್ಟಡದಲ್ಲಿ ಸಂಘದ ಅಧ್ಯಕ್ಷರಾದ ಮಾದವ ಉಳಿಯರವರ ಅಧ್ಯಕ್ಷತೆಯಲ್ಲಿ ಜರಗಿತು. ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರ ಮಂಡನೆ ಮತ್ತು ನೂತನ ಸಮಿತಿಯ ರೂಪೀಕರಣ ನಡೆಯಿತು. ಸಮಿತಿಯ ನೂತನ ಗೌರವ ಅಧ್ಯಕ್ಷರಾಗಿ ರಾಮ್ ಪ್ರಕಾಶ್ ಆಳ್ವ ಪಟ್ಟತ್ತಮೊಗರು, ಅಧ್ಯಕ್ಷರಾಗಿ ಕಾರ್ತಿಕ್ ಶೆಟ್ಟಿ ಮಜಿಬೈಲು, ಉಪಾಧ್ಯಕ್ಷರಾಗಿ ಪ್ರವೀಣ್ ಕುಮಾರ್ ಶೆಟ್ಟಿ ಕರಿಬೈಲು, ಮೋಹನದಾಸ್ ಚಿಗುರುಪಾದೆ, ಪ್ರದಾನ ಕಾರ್ಯದರ್ಶಿಯಾಗಿ ಪ್ರದೀಪ್ ಶೆಟ್ಟಿ ಬಲ್ಲಂಗುಡೆಲು, ಜತೆ ಕಾರ್ಯದರ್ಶಿಯಾಗಿ ಜಗದೀಶ್ ಅಜ್ಜಿಹಿತ್ತಿಲು, ಕೇಶವ ಮಜಿಬೈಲು, ಕೋಶಾಧಿಕಾರಿಯಾಗಿ ಬಶೀರ್ ಮೂಡಂಬೈಲು, ಗೌರವ ಸಲಹೆಗಾರರಾಗಿ ಮೂಸ ಅಜ್ಜಿಹಿತ್ತಿಲು, ಮಾದವ ಉಳಿಯ, ರಾಜೇಶ್ ಬಲ್ಲಂಗುಡೆಲು, ಆನಂದ ಮಜಿಬೈಲು ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಸ್ವಾಗತಿಸಿ ಕೋಶಾಧಿಕಾರಿ ಬಶೀರ್ ಮೂಡಂಬೈಲು ಧನ್ಯವಾದವಿತ್ತರು.















