Author: admin

ಒಮ್ಮೆ ರಾವಣ ಒಂದು ಸುಂದರ ನಗರ ‘ಅಲಕಾ’ ವನ್ನು ಲೂಟಿ ಮಾಡಿದ. ಅದು ಅವನ ತಮ್ಮನಾದ ಕುಬೇರನದಾಗಿತ್ತು. ನಗರವನ್ನು ಲೂಟಿ ಮಾಡಿ ತನ್ನ ಪುಷ್ಪಕ ವಿಮಾನದಲ್ಲಿ ಲಂಕೆಗೆ ಮರಳುತ್ತಿರುವಾಗ ಒಂದು ಸುಂದರ ಪ್ರದೇಶವನ್ನು ಕಂಡ. ಅಲ್ಲಿ ಹೋಗುವ ಮನಸ್ಸಾಯಿತು ರಾವಣನಿಗೆ. ಆದರೆ ಆ ಪ್ರದೇಶದ ಪ್ರವೇಶದ್ವಾರದಲ್ಲಿ ನಂದಿಕೇಶ್ವರ ಕಾವಲುಗಾರನಾಗಿ ನಿಂತಿದ್ದ. ಇದರಿಂದ ರಾವಣನ ಪುಷ್ಪಕ ವಿಮಾನವು ಚಲಿಸಲಾಗದೆ ನಿಂತಿತು. ರಾವಣನು ನಂದಿಕೇಶ್ವರನಿಗೆ ಆ ದಾರಿಯನ್ನು ಬಿಟ್ಟುಕೊಡಲು ಹೇಳಿದ. ಆಗ ನಂದಿಕೇಶ್ವರನು ‘ಈ ನಗರದಲ್ಲಿ ಶಿವ ಪಾರ್ವತಿಯರು ಸಮಯವನ್ನು ಕಳೆಯುತ್ತಿದ್ದಾರೆ. ಆದರಿಂದ ಇಲ್ಲಿ ಯಾರಿಗೂ ಪ್ರವೇಶವಿಲ್ಲ. ಇದನ್ನು ಕಾಯುವ ಹೊಣೆ ನನ್ನದಾಗಿದೆ’ ಎಂದು ತಿಳಿಸಿದ. ಕುಪಿತಗೊಂಡ ರಾವಣ ಶಿವ ಮತ್ತು ನಂದಿಯನ್ನು ಮೂದಲಿಸುತ್ತಾನೆ. ಆಗ ನಂದಿಯು ಕೋಪಗೊಂಡು “ನಿನ್ನ ಸಾವಿಗೆ ಮಂಗಗಳು ಕಾರಣವಾಗಲಿ” ಎಂದು ಶಪಿಸುತ್ತಾನೆ. ಆಗ ರಾವಣನು ತನ್ನ ತೋಳುಗಳನ್ನು ಆಗಲಿಸಿ ಆಗ ಕೈಲಾಸ ಪರ್ವತದ ತಳಕ್ಕೆ ಕೈಹಾಕಿ ಅಲುಗಾಡಿಸುತ್ತಾನೆ. ಕೈಲಾಸ ಪರ್ವತ ಅಲುಗಾಡಿದಾಗ ಪಾರ್ವತಿ ದೇವಿ ಭಯದಿಂದ ಕಿರುಚುತ್ತಾಳೆ. ಎಲ್ಲವನ್ನೂ…

Read More

ವಿದ್ಯಾಗಿರಿ: ‘ಮಹಿಳೆ ಇಲ್ಲದೇ ಪ್ರಕೃತಿ ಇಲ್ಲ. ‘ಶಕ್ತಿ’ ಇಲ್ಲದೆ ಶಿವನೂ ನಿಶ್ಶಕ್ತ. ಶೋಷಣೆ ಮೆಟ್ಟಿ ನಿಲ್ಲುವವಳೇ ನಿಜವಾದ ‘ಹೆಣ್ಣು’. ಹೆಣ್ಣಿಗೆ ವಿದ್ಯೆಯೇ ಸೌಂದರ್ಯ, ತೇಜಸ್ಸು’ ಎಂದು ಹಿರಿಯ ರಂಗಕರ್ಮಿ, ಬೆಳ್ಳಿತೆರೆ ಮತ್ತು ಕಿರುತೆರೆ ನಟಿ ಗಿರಿಜಾ ಲೋಕೇಶ್ ಹೇಳಿದರು. ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣ (ಕೃಷಿಸಿರಿ) ವೇದಿಕೆಯಲ್ಲಿ ಶನಿವಾರ ಆಳ್ವಾಸ್ ಮಹಿಳಾ ವೇದಿಕೆ ‘ಸಕ್ಷಮ’ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡರ ಸ್ಮರಣೆಯಲ್ಲಿ ಆಯೋಜಿಸಿದ ‘ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ-2025’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಮಹಿಳೆ ಇಲ್ಲದೇ ಪ್ರಕೃತಿಯ ಇಲ್ಲ. ಆದರೆ ಹಿಂದೆ ಪುರಷನೂ ಬೇಕು ಎಂಬುದು ಗುಟ್ಟು’ ಎಂದು ನಸುನಕ್ಕ ಅವರು, ‘ವಿದ್ಯೆ- ವಿನಯ ಇಲ್ಲದವರಿಗೆ ಮೇಕಪ್ ಹೆಚ್ಚು ಬೇಕು’ ಎಂದು ಚಟಾಕಿ ಹಾರಿಸಿದರು. ‘ಅಮ್ಮ ಹೊಡೆದು ತಿದ್ದಿ ತೀಡಿದಾಗ ಗೊತ್ತಾಗಲಿಲ್ಲ. ಈಗ ಅದರ ಫಲ ಅನುಭವಿಸುತ್ತಿದ್ದೇನೆ. ಅಮ್ಮನ ಋಣ ಹೇಗೆ ತೀರಿಸಲಿ’ ಎಂದು ಭಾವುಕರಾದರು.…

Read More

ಇದು ಟ್ಯಾಕ್ಸಿ ಡ್ರೈವರ್‌ನೊಬ್ಬ ತನ್ನ ಡೈರಿಯಲ್ಲಿ ಬರೆದುಕೊಂಡ ಘಟನೆ. ಅವತ್ತು ಆಗಲೇ ಸಂಜೆಗತ್ತಲು ಕವಿದಿತ್ತು. ಬೆಳಗ್ಗೆಯಿಂದ ಡ್ರೈವ್ ಮಾಡಿ, ಬೇರೆ ಬೇರೆ ರೀತಿಯ ಜನರೊಂದಿಗೆ ವ್ಯವಹರಿಸಿ ದೇಹಕ್ಕೆ, ಮನಸ್ಸಿಗೆ ದಣಿವಾಗಿತ್ತು. ಇನ್ನೇನು ಮನೆಗೆ ಹೊರಡಬೇಕು ಅನ್ನುವಷ್ಟರಲ್ಲಿ ಯಾರೋ ಫೋನ್ ಮಾಡಿ ಬರ ಹೇಳಿದರು. ‘ಇಲ್ಲ ಬೇರೆ ಟ್ಯಾಕ್ಸಿಗೆ ಹೇಳಿ. ಇವತ್ತಿನ ಟ್ರಿಪ್ ಮುಗಿದಿದೆ’ ಎಂದು ಹೇಳಬೇಕೆನಿಸಿದರೂ ಯಾಕೋ ಹೇಳಲಿಲ್ಲ. ಅವರು ಹೇಳಿದ ಅಡ್ರೆಸ್‌ಗೆ ಹೋದೆ. ಅದೊಂದು ಹಳೆಯ ಮನೆ. ಅಲ್ಲಿ ಜನವಾಸವಿದೆ ಎಂದು ಹೇಳಿದರೆ ನಂಬುವುದೇ ಕಷ್ಟ. ನಾನು ಕಾರ್ ನಿಲ್ಲಿಸಿ ಒಂದೆರಡು ಬಾರಿ ಹಾರ್ನ್ ಮಾಡಿದೆ. ಯಾರೂ ಬಾಗಿಲು ತೆರೆಯಲಿಲ್ಲ. ಇದು ತಪ್ಪು ಅಡ್ರೆಸ್ ಇರಬಹುದೇ, ವಾಪಸ್ ಹೋಗಿ ಬಿಡೋಣವೇ ಅನಿಸಿತು. ಏನಾದರಾಗಲಿ ನೋಡೋಣ ಎಂದು ಕಾರಿನಿಂದಿಳಿದು ಮನೆ ಬಾಗಿಲು ತಟ್ಟಿದೆ. ಒಳಗಿನಿಂದ ಯಾರೋ ಕ್ಷೀಣ ದನಿಯಲ್ಲಿ ‘ಒಂದು ನಿಮಿಷ’ ಎಂದರು. ಒಳಗಿನಿಂದ ಅಸ್ಪಷ್ಟವಾಗಿ ಸದ್ದು ಕೇಳಿ ಬರುತ್ತಿತ್ತು. ಕೆಲ ಕ್ಷಣಗಳ ಮೌನದ ನಂತರ 90-95 ವರ್ಷದ ಮುದುಕಿಯೊಬ್ಬರು ನಿಧಾನವಾಗಿ…

Read More

ಮೂಡುಬಿದಿರೆ: 2024 ಡಿಸೆಂಬರ್‌ನಲ್ಲಿ ನಡೆದ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಿ.ಕಾಂ. ವಿದ್ಯಾರ್ಥಿಯಾದ ಪ್ರೀಮಾ (250), ಮಹೇಶ್ (235), ಕೃತಿ ಎಮ್ (233), ಶ್ರೇಯಾ (223), ಚೇತನ್(223), ಶೆಟ್ಟಿ ತ್ರಿಶಾ(223), ಪ್ರಗತಿ(219), ಅಜ್‌ವೀನ್(218), ಸ್ವಾತಿ(218), ಜ್ಯೋತಿ(210), ಶ್ರೇಯಾ ಶೆಟ್ಟಿ (200),ಸುರಕ್ಷಾ (200) ಹಾಗೂ ಸಾಯಿ ಪ್ರಸಾದ್(200) ಇವರು ಉತ್ತಮ ಫಲಿತಾಂಶದೊAದಿಗೆ ಉತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಪ್ರಾಂಶುಪಾಲ ಡಾ.ಕುರಿಯನ್, ವೃತ್ತಿಪರ ವಾಣಿಜ್ಯ ವಿಭಾಗದ ಸಂಯೋಜಕ ಅಶೋಕ ಕೆ. ಜಿ., ಆಳ್ವಾಸ್ ಪದವಿ ಪೂರ್ವ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ. ಹಾಗೂ ಸಿ.ಎ. ಸಂಯೋಜಕರು ಅಭಿನಂದಿಸಿದ್ದಾರೆ.

Read More

ವಿದ್ಯಾಗಿರಿ: ಆಳ್ವಾಸ್ ಪದವಿ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸಹಯೋಗದ ‘ಆಳ್ವಾಸ್ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರ’ವು 2024-2025ರ ಜನವರಿ ಆವೃತ್ತಿಯ ಪ್ರಥಮ ವರ್ಷದ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ. ಈ ಕೇಂದ್ರದ ಮೂಲಕ ವಿದ್ಯಾರ್ಥಿಗಳು ಸ್ನಾತಕ (ಯುಜಿ)ದ ಬಿ.ಎ, ಬಿ.ಕಾಂ, ಬಿ.ಲಿಬ್.ಐ.ಎಸ್.ಸಿ, ಬಿ.ಬಿ.ಎ, ಬಿ.ಎಸ್.ಡಬ್ಲೂ, ಬಿ.ಎಸ್ಸಿ (ಸಂಯೋಜನೆಗಳು), ಬಿ.ಎಸ್‌ಸಿ ಹೋಮ್ – ಇನ್ಫಾರ್ಮೇಷನ್ ಟೆಕ್ನಾಲಜಿ, ಬಿ.ಸಿ.ಎ (ಬ್ಯಾಚುರಲ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್) ಪದವಿಗಳನ್ನು ಮಾಡಬಹುದಾಗಿದೆ. ಸ್ನಾತಕೋತ್ತರ ವಿಭಾಗದಲ್ಲಿ ಎಂ.ಎ- ಶಿಕ್ಷಣ, ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ಇತಿಹಾಸ, ರಾಜ್ಯಶಾಸ್ತ, ಸಾರ್ವಜನಿಕ ಆಡಳಿತ, ಉರ್ದು, ಸಂಸ್ಕೃತ, ಸಮಾಜಶಾಸ್ತ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಎಂ.ಎಸ್.ಡಬ್ಲೂ, ಎಂ.ಬಿ.ಎ-ಆನ್‌ಲೈನ್ ಪ್ರವೇಶ ಪರೀಕ್ಷೆ ಮೂಲಕ (ಫೈನಾನ್ಸ್, ಮಾರ್ಕೆಟಿಂಗ್, ಎಚ್.ಆರ್. ಆಪರೇಷನ್. ಟೂರಿಸಂ ಕಾಪ್ರೊರೇಟ್ ಲಾ, ಇನ್‌ಫರ್ಮನೇಷನ್ ಟೆಕ್ನಾಲಜಿ, ಆಸ್ಪತ್ರೆ ಮತ್ತುಆರೋಗ್ಯ ಕಾಳಜಿ ನಿರ್ವಹಣೆ.), ಎಂ.ಕಾA ಡ್ಯುಯೆಲ್ ಸ್ಪೆಷಲೈಜೇಷನ್ (ಅಕೌಂಟಿAಗ್ ಮತ್ತು ಫೈನಾನ್ಸ್ /…

Read More

ಇತ್ತೀಚಿನ ವರ್ಷಗಳಲ್ಲಿ ಯುವ ಜನತೆಯಲ್ಲಿ ಜಂಕ್ ಫುಡ್ ಸೇವನೆ ಹೆಚ್ಚುತ್ತಿದ್ದು, ಇದು ಸ್ಥೂಲಕಾಯಕ್ಕೆ ಕಾರಣವಾಗುತ್ತಿದೆ. 2025 ರ ವೇಳೆ ಭಾರತದಲ್ಲಿ ಸ್ಥೂಲಕಾಯ ಸಮಸ್ಯೆಯಿಂದ ಬಳಲುತ್ತಿರುವವರ ಸಂಖ್ಯೆ 44 ಕೋಟಿ ತಲುಪಲಿದೆ ಎಂದು ಲ್ಯಾನ್ಸೆಟ್ ಜನರಲ್ ಅಧ್ಯಯನ ವರದಿ ಹೇಳಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಸಂಸ್ಕರಿಸಿದ ಆಹಾರ ಪದಾರ್ಥಗಳು ಹಾಗೂ ಪಾನೀಯಗಳ ಮಾರಾಟದಲ್ಲಿ ಏರಿಕೆ ಕಂಡು ಬರುತ್ತಿದೆ. ಸಂಸ್ಕರಿಸಿದ ಆಹಾರಗಳ ಅತಿಯಾದ ಸೇವನೆ, ನಿಯಮಿತ ವ್ಯಾಯಾಮವಿಲ್ಲದ ಜೀವನ ಶೈಲಿಯಿಂದ ಅಧಿಕ ದೇಹ ತೂಕ ಹೊಂದಿದವರ ಸಂಖ್ಯೆ ಹೆಚ್ಚುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದಲ್ಲಿ ಸ್ಥೂಲಕಾಯದವರ ಏರಿಕೆ ಕಂಡು ಬರಲಿದೆ ಎಂದು ವರದಿ ಹೇಳಿದೆ. 2050ರ ಹೊತ್ತಿಗೆ ಭಾರತದಲ್ಲಿ ಸ್ಥೂಲಕಾಯ ಸಮಸ್ಯೆಯಿಂದ ಬಳಲುವವರ ಪುರುಷರ ಸಂಖ್ಯೆ 21.8 ಕೋಟಿ ಹಾಗೂ ಮಹಿಳೆಯರ ಸಂಖ್ಯೆ 23.1 ಕೋಟಿಯಷ್ಟಿರಲಿದೆ. ಇದರೊಂದಿಗೆ ಆ ಹೊತ್ತಿಗೆ ವಿಶ್ವದಲ್ಲಿಯೇ ಅತಿ ಹೆಚ್ಚು ಸ್ಥೂಲಕಾಯ ವ್ಯಕ್ತಿಗಳನ್ನು ಹೊಂದಿದ ಎರಡನೇ ರಾಷ್ಟ್ರವಾಗಲಿದೆ. ಚೀನಾ ಮೊದಲ ಸ್ಥಾನದಲ್ಲಿ ಇರಲಿದೆ. ಅಮೆರಿಕ, ಬ್ರೆಜಿಲ್, ನೈಜೀರಿಯಾ 3,4, ಮತ್ತು 5ನೇ…

Read More

ಅಗತ್ಯ ಇದ್ದವರಿಗೆ ಸೇವೆ ಮಾಡುವುದರಿಂದ ಮನಸ್ಸಿಗೆ ಶಾಂತಿ ದೊರೆಯುತ್ತದೆ ಹಾಗೂ ನಾವು ಈ ಸಮಾಜಕ್ಕೆ ಏನನ್ನಾದರೂ ನೀಡಿದ್ದೇವೆ ಎನ್ನುವ ಆತ್ಮ ತೃಪ್ತಿ ಇರುತ್ತದೆ ಎಂದು ಜಿಲ್ಲೆ-317ಸಿ, ಪ್ರಾಂತ್ಯ 5 ರ ಪ್ರಥಮ ಮಹಿಳೆ ಅಂಪಾರು ಅರುಣಾ ಸೋಮನಾಥ ಹೆಗ್ಡೆ ಹೇಳಿದರು. ಅವರು ಲಯನ್ಸ್ ಇಂಟರ್ನ್ಯಾಷನಲ್, ಜಿಲ್ಲೆ-317ಸಿ, ಪ್ರಾಂತ್ಯ 5ರ ಲಯನ್ಸ್ ರಿಜನ್ ಮೀಟ್ ‘ಅದ್ವಿತಾ-2025’ ವನ್ನು ಉಪ್ಲಾಡಿ ಹೊರ್ ಮಕ್ಲು ಜಡ್ಡಿನ ಮೈದಾನದಲ್ಲಿ ಅದ್ವಿತಾ ಜತೆಗೂಡಿ ಉದ್ಘಾಟಿಸಿ ಮಾತನಾಡಿದರು. ಪ್ರಾಂತ್ಯಾಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಹೊಸನಗರ ಕೊಡಚಾದ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ಕೆ. ಶ್ರೀಪತಿ ಹಳಗುಂದ, ಲಯನ್ಸ್ ಪ್ರಥಮ ಉಪ ಜಿಲ್ಲಾ ಗವರ್ನರ್ ಸಪ್ನಾ ಸುರೇಶ್, ದ್ವಿತೀಯ ಉಪ ಜಿಲ್ಲಾ ಗವರ್ನರ್ ರಾಜೀವ್ ಕೋಟ್ಯಾನ್, ಪಿ.ಡಿ.ಜಿ ಜಯಕರ್ ಶೆಟ್ಟಿ ಕುಂದಾಪುರ, ಎಲ್.ಸಿ.ಐ.ಎಫ್. ಕೋ- ಆರ್ಡಿನೇಟರ್ ಹರಿಪ್ರಸಾದ್ ರೈ, ರೀಜನ್ ಸೆಕ್ರೆಟರಿ ಕಬೈಲ್ ಆನಂದ ಶೆಟ್ಟಿ, ಹೋಸ್ಟ್ ಕ್ಲಬ್ ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಅಧ್ಯಕ್ಷ…

Read More

ಸರ್ ಎಂ. ವಿಶ್ವೇಶ್ವರಯ್ಯನವರಿಗೆ ಶಿಕ್ಷಣದ ಮಹತ್ವ ಚೆನ್ನಾಗಿ ತಿಳಿದಿತ್ತು. ಅವರು ಬಹಳ ಕಷ್ಟಪಟ್ಟು ಓದಿ ಮುಂದೆ ಬಂದಿದ್ದವರು. ಹಾಗಾಗಿ ಅವರು ಓದುವ ಮಕ್ಕಳಿಗೆ ಬಹಳವಾಗಿ ಪ್ರೋತ್ಸಾಹ ನೀಡುತ್ತಿದ್ದರು. ತಮ್ಮ ಹತ್ತಿರದ ಬಂಧು- ಬಳಗದವರಲ್ಲಿ, ಸ್ನೇಹಿತರಲ್ಲಿ ಯಾರಿಗಾದರೂ ಓದಿಗೆ ತೊಂದರೆಯಾಗಿದ್ದರೆ, ಅದನ್ನು ತಕ್ಷಣವೇ ಪರಿಹರಿಸುತಿದ್ದರು. ಚೆನ್ನಾಗಿ ಓದುವ ಹುಡುಗರಿಗೆ, ಓದಿನ ಬಗೆ ಇನ್ನೂ ಹೆಚ್ಚಿನ ಆಸಕ್ತಿ ಮೂಡಿಸಲು ಬಹುಮಾನಗಳನ್ನು ಕೊಟ್ಟು ಪ್ರೋತ್ಸಾಹಿಸುತ್ತಿದ್ದರು. ಯಾರಾದರೂ ಆಗಿನ ಕಾಲದ ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದವರಿಗೆ ತಾವು ನೂರು ರೂಪಾಯಿಗಳ ಬಹುಮಾನ ಕೊಡುವುದಾಗಿ ಪ್ರಕಟಪಡಿಸಿದ್ದರು. ಆಗಿನ ಕಾಲದಲ್ಲಿ ನೂರು ರೂಪಾಯಿಗಳು ಬಹಳ ದೊಡ್ಡ ಮೊತ್ತವೇ ಆಗಿತ್ತು. ಪ್ರತಿ ವರ್ಷ ಕೊಟ್ಟ ಮಾತಿನಂತೆ ಈ ಬಹುಮಾನವನ್ನು ನೀಡುತ್ತಾ ಬಂದಿದ್ದರು. ಒಂದು ವರ್ಷ ಅವರ ಸಂಬಂಧಿಗಳ ಮಗನೊಬ್ಬ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿದ್ದ. ಹೀಗಾಗಿ ಆತ ಬಹುಮಾನಕ್ಕೆ ಅರ್ಹನಾಗಿದ್ದ. ಬಹುಮಾನ ಪಡೆಯುವ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿ, ವಿಶ್ವೇಶ್ವರಯ್ಯನವರ ಮನೆಗೆ ರಾತ್ರಿ ಏಳು ಮುಕ್ಕಾಲಿನ ಸಮಯಕ್ಕೆ ಹೋಗಬೇಕಾಗಿತ್ತು. ಸರಿಯಾಗಿ ವಿಶ್ವೇಶ್ವರಯ್ಯನವರೊಂದಿಗೆ…

Read More

ಮಣಿಪಾಲ : ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಸಹಭಾಗಿತ್ವದಲ್ಲಿರುವ ಮಣಿಪಾಲ್ ಹೈಸ್ಕೂಲ್ ಟ್ರಸ್ಟ್‍ನ ಸಾರ್ವಜನಿಕ ಸಂಪರ್ಕಾಧಿಕಾರಿ (ಪಿ.ಆರ್.ಒ)ಯಾಗಿ ಶ್ರೀ ರಾಮಚಂದ್ರ ನೆಲ್ಲಿಕಾರು ನೇಮಕಗೊಂಡಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ 33 ವರ್ಷದ ಅನುಭವ ಹೊಂದಿರುವ ಇವರು ಕಳೆದ 12 ವರ್ಷಗಳಿಂದ ಪ್ರಾಂಶುಪಾಲರಾಗಿ, ಆಂಗ್ಲಭಾಷಾ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಅನುಭವಿ. ಖ್ಯಾತ ವಾಗ್ಮಿಯಾಗಿರುವ ಶ್ರೀಯುತರು 2ಸಾವಿರಕ್ಕೂ ಅಧಿಕ ಅನೇಕ ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ಭಾಷಣಕಾರರಾಗಿ, ರಾಜ್ಯಮಟ್ಟದಲ್ಲಿ ನಡೆದ ಎನ್.ಎಸ್.ಎಸ್ ಶಿಬಿರದಲ್ಲಿ ಮೂರು ಬಾರಿ ಸಂಪನ್ಮೂಲ ವ್ಯಕಿಯಾಗಿ ಹಾಗೂ 300ಕ್ಕೂ ಅಧಿಕ ಎನ್.ಎಸ್.ಎಸ್ ಶಿಬಿರದಲ್ಲಿ ಉಪನ್ಯಾಸಕರಾಗಿಯೂ ಜನಪ್ರಿಯರಾಗಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲಿಯೇ ಮೂಡಬಿದ್ರಿಯ ದವಳಾ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿಯೂ, ತದನಂತರ ವೃತ್ತಿ ಬದುಕಿನಲ್ಲಿ ಕಾರ್ಕಳ-ನಾರಾವಿ ದೇವಾಡಿಗ ಸಂಘದ ಕಾರ್ಯದರ್ಶಿಯಾಗಿ, ಕಾರ್ಕಳದ ಜೆ.ಸಿ.ಐನ ಉಪಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿಯೂ ಸೇವೆಸಲ್ಲಿಸಿದ ಹೆಗ್ಗಳಿಕೆ ಇವರದ್ದು. ವೃತ್ತಿಯಲ್ಲಿ ಉಪನ್ಯಾಸಕನಾಗಿದ್ದರೂ, ಪ್ರವೃತ್ತಿಯಲ್ಲಿ ರಂಗಭೂಮಿ ಕ್ಷೇತ್ರದಲ್ಲಿ 300ಕ್ಕೂ ಅಧಿಕ ನಾಟಕಗಳಲ್ಲಿ ಕಲಾವಿದರಾಗಿಯೂ ಜೊತೆಗೆ 8 ತುಳು ನಾಟಕಗಳನ್ನು ಬರೆದು ಕಲಾರಸಿಕರ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ವಿದ್ಯಾನಗರದ ಮಣಿಪಾಲ್ ಪದವಿ…

Read More

ಸಾವಿರದ ಸನಿಹ ರಂಗ ಪ್ರದರ್ಶನದೊಂದಿಗೆ ಖ್ಯಾತಿಗಳಿಸಿದ ‘ಶಿವದೂತೆ ಗುಳಿಗೆ’ ಯಶಸ್ಸಿನ ಪಥದಲ್ಲಿ ಮಿಂಚುತ್ತಿರುವಾಗಲೇ ಸ್ಟಾರ್ ನಿರ್ದೇಶಕ ವಿಜಯಕುಮಾರ್ ಕೊಡಿಯಲ್ ಬೈಲ್ ಅವರ ವಿನೂತನ ಪರಿಕಲ್ಪನೆಯ ತುಳು ಚಾರಿತ್ರಿಕ ನಾಟಕ ‘ಛತ್ರಪತಿ ಶಿವಾಜಿ’ ಅದ್ಭುತ ರಂಗವಿನ್ಯಾಸ- ವಸ್ತ್ರ ವಿನ್ಯಾಸದೊಂದಿಗೆ ಮಾರ್ಚ್ 6ರಂದು ರಾತ್ರಿ 7 ಗಂಟೆಗೆ ಕಲಾಮಾತೆ ಕಟೀಲು ಭ್ರಮರಾಂಬಿಕೆಯ ದಿವ್ಯ ಅಂಗಣದಲ್ಲಿ ರಂಗ ಪ್ರವೇಶ ಮಾಡಲಿದೆ. ಶಶಿರಾಜ್ ಕಾವೂರು ಅವರ ಅಧ್ಯಯನಾತ್ಮಕ ಕಥೆ ಆಧರಿಸಿ ಮರಾಠಿ ವಾತಾವರಣದ ಕಥೆಯನ್ನು ತುಳು ಭಾಷೆಯಲ್ಲಿ ಸಿನಿಮಾ ಶೈಲಿಯ ಡಬ್ಬಿಂಗ್ ಸಿನಿಮಾ ಗ್ರಾಫಿ, ರಂಗ ವಿನ್ಯಾಸ ಬಳಸಿ ಚಾರಿತ್ರಿಕ ನಾಟಕ ರೂಪುಗೊಳಿಸುವಲ್ಲಿ ಕೊಡಿಯಾಲ್ ಬೈಲ್ ರ ಜಾಣ್ಮೆ ಪರಿಶ್ರಮ ರಂಗದ ಮೇಲೆ ಗೋಚರವಾಗಲಿದೆ. ಎರಡೂ ಕಾಲು ಗಂಟೆಯ ನಾಟಕ 11 ದೃಶ್ಯಗಳಲ್ಲಿ ಸಂಯೋಜನೆಗೊಂಡಿದ್ದು, 15 ಪ್ರಬುದ್ಧ ಕಲಾವಿದರು ಕಥೆಗೆ ಜೀವ ತುಂಬಿದ್ದಾರೆ. ಪ್ರಮೋದ್ ಮರವಂತೆ ಹಾಡುಗಳು, ಎ.ಕೆ. ವಿಜಯ್ ಕೋಕಿಲ ಮತ್ತು ಮಣಿಕಾಂತ್ ಕದ್ರಿ ಅವರ ಸಂಗೀತ ನಿರ್ದೇಶನದಲ್ಲಿ ವಿಶೇಷ ಆಕರ್ಷಣೆಯಾಗಿ ಬಾಲಿವುಡ್ ಗಾಯಕ ಕೈಲಾಸ್…

Read More