Author: admin

ಇತ್ತೀಚಿಗೆ ಒಂದು ಬೋಡೊ ಭಾಷೆಯ ಕಥೆಯನ್ನು ಇಂಗ್ಲಿಷ್‌ನಲ್ಲಿ ಓದಿದೆ. ಧುಬಡಿ ಎಂಬ ಊರಿನಲ್ಲಿ ಶಾಲಾ ಇನ್‌ಸ್ಪೆಕ್ಟರ್‌ ಕಚೇರಿಯಲ್ಲಿ ಯಾದವ ಬೋರಾ ಎಂಬ ವ್ಯಕ್ತಿ ಮುಖ್ಯ ಗುಮಾಸ್ತ. ಈತನ ಮೇಲೆ ಸಬ್‍ ಇನ್‌ಸ್ಪೆಕ್ಟರ್‌ ಮತ್ತು ಇನ್‌ಸ್ಪೆಕ್ಟರ್‌ ಇದ್ದಾರೆ. ಯಾದವ ಬೋರಾ ಕುಳಿತು ಕೊಳ್ಳೋದು ಕಚೇರಿಯ ಒಂದು ಮೂಲೆಯಲ್ಲಿದ್ದ ಕೊಠಡಿಯಲ್ಲಿ. ಹಳೆಯ ಮರದ ಮೇಜು, ಅದರ ಮೇಲೆ ಹಸಿರು ಪ್ಲಾಸ್ಟಿಕ್ ಬಟ್ಟೆ ಹೊದಿಸಿದ್ದಾರೆ. ಮೇಜಿನ ಮೇಲೆಲ್ಲ ಫೈಲುಗಳು. ಒಂದೆರಡು ಬಳಸಿ ಬಳಸಿ ನುಣುಪಾದ ಕಲ್ಲುಗಳು ಕಾಗದಗಳು ಹಾರಿ­ಹೋಗ­ದಂತೆ ನೋಡಿಕೊಳ್ಳುತ್ತವೆ. ಮೇಜಿನ ಮಧ್ಯದಲ್ಲಿರುವುದು ಹೊಳೆವ ಕರೆಗಂಟೆ. ಯಾದವ ಬೋರಾನಿಗೆ ಈ ಕರೆಗಂಟೆ ಅಧಿಕಾರದ ಲಾಂಛನ. ಅದು ಬ್ರಿಟಿಷರ ಕಾಲದ ಗಂಟೆ. ಬೋರಾನ ಅಧಿಕಾರಿಗಳ ಹತ್ತಿರವೂ ಕರೆಗಂಟೆ­ಗಳಿದ್ದರೂ ಅವುಗಳ ಧ್ವನಿ ಇಷ್ಟು ತೀಕ್ಷ್ಣವಾಗಿಲ್ಲ. ಅದಲ್ಲದೇ ಅವು ಹಲ­ವಾರು ಬಾರಿ ಬದಲಾಗಿವೆ. ಆದರೆ, ಬೋರಾನ ಕರೆಗಂಟೆ ಮಾತ್ರ ದಶಕ­ಗಳಿಂದ ಹಾಗೆಯೇ ಇದೆ. ತಾನು ಎರಡನೇ ದರ್ಜೆ ಗುಮಾಸ್ತನಾಗಿ­ದ್ದಾಗಿ­ನಿಂದ ಈ ಕರೆಗಂಟೆಯನ್ನು ಕೇಳಿದ್ದಾನೆ. ತಾನೂ ಮುಂದೆ ಮುಖ್ಯ ಗುಮಾಸ್ತ­ನಾದ ಮೇಲೆ…

Read More

ಮೂಡುಬಿದಿರೆ: ಪೋಷಕರು ಮತ್ತು ಶಿಕ್ಷಕರು ಎರಡು ಕಣ್ಣುಗಳಿದ್ದಂತೆ. ನಮ್ಮ ಕಣ್ಣುಗಳೂ ಒಂದೇ ರೀತಿಯ ದೃಷ್ಟಿ ನೀಡಿದರೂ, ಅವುಗಳನ್ನು ಸಮನ್ವಯದಿಂದ ಬಳಸದಿದ್ದರೆ, ಆಳ ಮತ್ತು ಅಂತರವನ್ನು ಸರಿಯಾಗಿ ಅಳೆಯಲು ಸಾಧ್ಯವಾಗುವುದಿಲ್ಲ. ಅಂತೆಯೇ ಪೋಷಕರ ಹಾಗೂ ಶಿಕ್ಷಕರ ನಡುವಿನ ಸಂಬAಧ ಎಂದು ಕೆ.ಎಸ್.ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಶರೀರಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಆಳ್ವಾಸ್ ವಿಜ್ಞಾನ ವಿಭಾಗಗಳ ಪೋಷಕ-ಶಿಕ್ಷಕ ಸಂಘದ ಅಧ್ಯಕ್ಷ ಡಾ. ದಾಮೋದರ ಗೌಡ ಕೆ.ಎಸ್. ನುಡಿದರು. ಅವರು ಶನಿವಾರ ಕುವೆಂಪು ಸಭಾಂಗಣದಲ್ಲಿ ಆಳ್ವಾಸ್ ಪದವಿ ವಿಜ್ಞಾನ ವಿಭಾಗಗಳ ಪೋಷಕ-ಶಿಕ್ಷಕ ಸಂಘದ ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು. ಮೂಲಭೂತ ವಿಜ್ಞಾನ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಲಭ್ಯವಿರುವ ಅವಕಾಶಗಳ ಕುರಿತ ವಿವರಿಸಿದರು. ಬಹುತೇಕ ನೊಬೆಲ್ ಪ್ರಶಸ್ತಿ ವಿಜೇತರ ಹಿನ್ನಲೆ ಮೂಲಭೂತ ವಿಜ್ಞಾನವಾಗಿತ್ತು ಎಂದು ಉದಾಹರಣೆಯೊಂದಿಗೆ ತಿಳಿಸಿದರು. ಮುಂಬರುವ ದಿನಗಳಲ್ಲಿ ಬಹಳಷ್ಟು ಅವಕಾಶಗಳು ಈ ವಿದ್ಯಾರ್ಥಿಗಳ ಮುಂದಿದ್ದು, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು. ಕರ‍್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಪ್ರಾಚರ‍್ಯ ಡಾ. ಕುರಿಯನ್, ವಿದ್ಯಾರ್ಥಿಗಳ ಶೈಕ್ಷಣಿಕ ಹಂತದಲ್ಲಿ ಪೋಷಕರು, ಶಿಕ್ಷಕರು ಮತ್ತು…

Read More

ವೇದ ಕಾಲದಿಂದಲೂ ಮಹಿಳೆಯರಿಗೆ ಗೌರವ ನೀಡುತ್ತಾ ಬರಲಾಗಿದೆ‌. ಸ್ತ್ರೀಯಲ್ಲಿ ಕೀರ್ತಿ, ಕ್ಷಮೆಯೇ ನಾನು ಎಂದು ಕೃಷ್ಣ ಪರಮಾತ್ಮ ಭಗವದ್ಗೀತೆಯಲ್ಲಿ ಹೇಳಿದ್ದಾನೆ. ದಶ ಮಹಾವಿದ್ಯೆಯಲ್ಲಿ ದೇವಿ ತನ್ನ ಶಕ್ತಿ ಬೇಕೇ ಬೇಕು ಎಂದು ತೋರಿಸಿದ್ದಾಳೆ. ಹಾಗಾಗಿ ಸ್ತ್ರೀಯರು ತಮ್ಮ ಚೈತನ್ಯ ಶಕ್ತಿಯನ್ನು ಜಾಗೃತಗೊಳಿಸಿ ಸಾಧನೆ ಮಾಡಬೇಕು‌ ಎಂದು ಖ್ಯಾತ ಅಂಕಣಕಾರ್ತಿ, ಚಿತ್ರ ನಟಿ, ಚಿತ್ರ ನಿರ್ದೇಶಕಿ, ಸಮಾಜಸೇವಕಿ ರೂಪಾ ಅಯ್ಯರ್ ಹೇಳಿದರು. ಅವರು ಮಾರ್ಚ್ 8ರಂದು ಶನಿವಾರ ಮಂಗಳೂರಿನ ಪುರಭವನದಲ್ಲಿ ನಡೆದ ಲಯನ್ಸ್‌ ಇಂಟರ್‌ನ್ಯಾಷನಲ್‌ ಡಿಸ್ಟ್ರಿಕ್ಟ್ 317 ಐಡಿಎಫ್‌ಸಿ ಫ‌ಸ್ಟ್‌ ಬ್ಯಾಂಕ್‌ ಮತ್ತು ಬಿಎಎನ್‌ಎಂಎಸ್‌ ಮಂಗಳೂರು ತಾಲೂಕು ಸಮಿತಿ ಮಹಿಳಾ ಘಟಕದ ಸಹಯೋಗದಲ್ಲಿ ತಪಸ್ಯ ಫೌಂಡೇಶನ್ ವತಿಯಿಂದ ಶೌರ್ಯದ ಹೆಸರಲ್ಲಿ ಸಾಹಸಿಗಳನ್ನು ಗೌರವಿಸುವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಸಮಾಜದಲ್ಲಿ ಮಹಿಳೆಯರಿಗೆ ದೌರ್ಜನ್ಯಗಳಾಗುತ್ತಿರುವುದು ಮಾತ್ರವಲ್ಲ, ದೇವಾನು ದೇವತೆಗಳಿಗೂ ಆಗಿವೆ‌. ಪುರುಷರಿಗೂ ದೌರ್ಜನ್ಯಳಾಗುತ್ತಿದೆ. ಹೀಗಾಗಿ ನಾವು ಮೇಲು ಕೀಳು ಎಂಬ ಸ್ಪರ್ಧೆಯಲ್ಲಿಯೇ ಹೋದರೆ ದೌರ್ಜನ್ಯಗಳಿಗೆ ಪರಿಹಾರ ಖಂಡಿತಾ ಸಾಧ್ಯವಿಲ್ಲ. ಸಮಾಜದಲ್ಲಿ ಅನೇಕ ಕಷ್ಟಗಳನ್ನು ಮೆಟ್ಟಿ…

Read More

ಹುಬ್ಬಳ್ಳಿಯ ಲಿಂಗರಾಜನಗರ ಬಿವ್ಹಿಕೆ ವ್ಹಿಸಿಬಿ ಬಾಲಿಕೆಯರ ಪ್ರೌಢಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ನ ಸಂಸ್ಥಾಪಕ ರಾಜೇಂದ್ರ ವಿ ಶೆಟ್ಟಿಯವರು, ಇಂದು ಹೆಣ್ಣು ಮಕ್ಕಳ ಯುಗವಾಗಿದ್ದು ಹೆಣ್ಣು ಮಕ್ಕಳು ಗೃಹಿಣಿಯ ಕೆಲಸದಿಂದ ಉಪಗ್ರಹ ಉಡಾವಣೆವರೆಗೂ ಎಲ್ಲಾ ಕೆಲಸಗಳಲ್ಲಿ ತಮ್ಮ ಸಂಸ್ಕಾರಯುತವಾದ ಜೀವನದಿಂದ ದೇಶದ ಅಭಿವೃದ್ಧಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಪ್ರತಿಯೊಬ್ಬರು ಸತ್ಯ ಪ್ರಾಮಾಣಿಕತೆ ಧರ್ಮ ಹಾಗೂ ನ್ಯಾಯಯುತವಾದ ಜೀವನವನ್ನು ನಡೆಸಲು ಸಲಹೆ ನೀಡಿದರು. ತಂದೆ ತಾಯಿ ಹಾಗೂ ಗುರುಗಳನ್ನು ಗೌರವಿಸಬೇಕು. ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಪರೀಕ್ಷೆ ಬರೆದು ಉತ್ತಮ ಜೀವನ ರೂಪಿಸಿಕೊಳ್ಳಲು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಉದ್ಯಮಿ ಮಹೇಶ್ ಶೆಟ್ಟಿಯವರು, ಶಾಲೆಗೆ 100 ಪ್ರತಿಶತ ಫಲಿತಾಂಶ ತಂದು ಕೊಡಲು ವಿದ್ಯಾರ್ಥಿನಿಯರು ತುಂಬಾ ಶ್ರಮ ಪಟ್ಟು ಪ್ರಾಮಾಣಿಕವಾಗಿ ಓದಬೇಕು ಹಾಗೂ ಪ್ರತಿಯೊಬ್ಬರು ಒಂದಲ್ಲ ಒಂದು ಕ್ಷೇತ್ರದಲ್ಲಿ ಕೆಲಸ ಮಾಡಿ ಸಾಧನೆ ಮಾಡಬಹುದು. ಕೆಲಸದಲ್ಲಿ ಮೇಲು ಕೀಳು ಇಲ್ಲ…

Read More

ಬಾಲ್ಯದಲ್ಲಿ ಬೆಳೆದ ಮಲೆನಾಡಿನ ಪರಿಸರ, ಪುಸ್ತಕ ಓದುವ ಹವ್ಯಾಸ, ಶ್ರೇಷ್ಠ ಗುರುಗಳ ಮಾರ್ಗದರ್ಶನ, ಯಕ್ಷಗಾನದ ಆಕರ್ಷಣೆ ಇದೆಲ್ಲವೂ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿತು. ಪುರಾಣ ಕೃತಿಗಳ ಅಧ್ಯಯನದ ಆಸಕ್ತಿಯಿಂದ ಹೆಚ್ಚಿನ ಜ್ಞಾನ ಸಂಪಾದನೆ ಸಾಧ್ಯವಾಯಿತು ಎಂದು ಹಿರಿಯ ಸಾಹಿತಿ, ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಶ್ರೀಧರ ಡಿ.ಎಸ್ ಕಿನ್ನಿಗೋಳಿ ಹೇಳಿದರು. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಯೋಜಿಸಿದ ಹಿರಿಯ ಸಾಹಿತಿಗಳ ಸಂಪರ್ಕ ಅಭಿಯಾನದಡಿ ಶುಕ್ರವಾರ ಸ್ವಗೃಹದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಉಡುಪಿ ಮತ್ತು ಕಟೀಲು ಕ್ಷೇತ್ರದ ಪರಿಸರ ಸಾಂಸ್ಕೃತಿಕವಾಗಿ ಬೆಳೆಯಲು ಇನ್ನಷ್ಟು ಅವಕಾಶ ಕಲ್ಪಿಸಿತು ಎಂದರು. ಪುರಾಣ ಕೃತಿಗಳು ಸೇರಿದಂತೆ ಭಾರತೀಯ ಸಂವೇದನೆಯುಳ್ಳ ಕೃತಿಗಳ ಸಂದೇಶವನ್ನು ಸಮಾಜಕ್ಕೆ ಪಸರಿಸುವುದು ಅಗತ್ಯ. ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಇಂತಹ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ಅವರು ಹೇಳಿದರು. ಮುಖ್ಯ ಅತಿಥಿಯಾಗಿದ್ದ ಹಿರಿಯ ವಿದ್ವಾಂಸ ಪಶುಪತಿ ಶಾಸ್ತ್ರಿ ಶಿರಂಕಲ್ಲು ಮಾತನಾಡಿ, ಬಹುಶ್ರುತ ವಿದ್ವಾಂಸರಾದ ಶ್ರೀಧರ್ ಡಿ.ಎಸ್ ಅವರು ಪುರಾಣ ಲೋಕದ ವಿಶಿಷ್ಟ ಪಾತ್ರಗಳನ್ನು…

Read More

ಒಮ್ಮೆ ರಾವಣ ಒಂದು ಸುಂದರ ನಗರ ‘ಅಲಕಾ’ ವನ್ನು ಲೂಟಿ ಮಾಡಿದ. ಅದು ಅವನ ತಮ್ಮನಾದ ಕುಬೇರನದಾಗಿತ್ತು. ನಗರವನ್ನು ಲೂಟಿ ಮಾಡಿ ತನ್ನ ಪುಷ್ಪಕ ವಿಮಾನದಲ್ಲಿ ಲಂಕೆಗೆ ಮರಳುತ್ತಿರುವಾಗ ಒಂದು ಸುಂದರ ಪ್ರದೇಶವನ್ನು ಕಂಡ. ಅಲ್ಲಿ ಹೋಗುವ ಮನಸ್ಸಾಯಿತು ರಾವಣನಿಗೆ. ಆದರೆ ಆ ಪ್ರದೇಶದ ಪ್ರವೇಶದ್ವಾರದಲ್ಲಿ ನಂದಿಕೇಶ್ವರ ಕಾವಲುಗಾರನಾಗಿ ನಿಂತಿದ್ದ. ಇದರಿಂದ ರಾವಣನ ಪುಷ್ಪಕ ವಿಮಾನವು ಚಲಿಸಲಾಗದೆ ನಿಂತಿತು. ರಾವಣನು ನಂದಿಕೇಶ್ವರನಿಗೆ ಆ ದಾರಿಯನ್ನು ಬಿಟ್ಟುಕೊಡಲು ಹೇಳಿದ. ಆಗ ನಂದಿಕೇಶ್ವರನು ‘ಈ ನಗರದಲ್ಲಿ ಶಿವ ಪಾರ್ವತಿಯರು ಸಮಯವನ್ನು ಕಳೆಯುತ್ತಿದ್ದಾರೆ. ಆದರಿಂದ ಇಲ್ಲಿ ಯಾರಿಗೂ ಪ್ರವೇಶವಿಲ್ಲ. ಇದನ್ನು ಕಾಯುವ ಹೊಣೆ ನನ್ನದಾಗಿದೆ’ ಎಂದು ತಿಳಿಸಿದ. ಕುಪಿತಗೊಂಡ ರಾವಣ ಶಿವ ಮತ್ತು ನಂದಿಯನ್ನು ಮೂದಲಿಸುತ್ತಾನೆ. ಆಗ ನಂದಿಯು ಕೋಪಗೊಂಡು “ನಿನ್ನ ಸಾವಿಗೆ ಮಂಗಗಳು ಕಾರಣವಾಗಲಿ” ಎಂದು ಶಪಿಸುತ್ತಾನೆ. ಆಗ ರಾವಣನು ತನ್ನ ತೋಳುಗಳನ್ನು ಆಗಲಿಸಿ ಆಗ ಕೈಲಾಸ ಪರ್ವತದ ತಳಕ್ಕೆ ಕೈಹಾಕಿ ಅಲುಗಾಡಿಸುತ್ತಾನೆ. ಕೈಲಾಸ ಪರ್ವತ ಅಲುಗಾಡಿದಾಗ ಪಾರ್ವತಿ ದೇವಿ ಭಯದಿಂದ ಕಿರುಚುತ್ತಾಳೆ. ಎಲ್ಲವನ್ನೂ…

Read More

ವಿದ್ಯಾಗಿರಿ: ‘ಮಹಿಳೆ ಇಲ್ಲದೇ ಪ್ರಕೃತಿ ಇಲ್ಲ. ‘ಶಕ್ತಿ’ ಇಲ್ಲದೆ ಶಿವನೂ ನಿಶ್ಶಕ್ತ. ಶೋಷಣೆ ಮೆಟ್ಟಿ ನಿಲ್ಲುವವಳೇ ನಿಜವಾದ ‘ಹೆಣ್ಣು’. ಹೆಣ್ಣಿಗೆ ವಿದ್ಯೆಯೇ ಸೌಂದರ್ಯ, ತೇಜಸ್ಸು’ ಎಂದು ಹಿರಿಯ ರಂಗಕರ್ಮಿ, ಬೆಳ್ಳಿತೆರೆ ಮತ್ತು ಕಿರುತೆರೆ ನಟಿ ಗಿರಿಜಾ ಲೋಕೇಶ್ ಹೇಳಿದರು. ಇಲ್ಲಿನ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದ ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣ (ಕೃಷಿಸಿರಿ) ವೇದಿಕೆಯಲ್ಲಿ ಶನಿವಾರ ಆಳ್ವಾಸ್ ಮಹಿಳಾ ವೇದಿಕೆ ‘ಸಕ್ಷಮ’ ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡರ ಸ್ಮರಣೆಯಲ್ಲಿ ಆಯೋಜಿಸಿದ ‘ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ-2025’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಮಹಿಳೆ ಇಲ್ಲದೇ ಪ್ರಕೃತಿಯ ಇಲ್ಲ. ಆದರೆ ಹಿಂದೆ ಪುರಷನೂ ಬೇಕು ಎಂಬುದು ಗುಟ್ಟು’ ಎಂದು ನಸುನಕ್ಕ ಅವರು, ‘ವಿದ್ಯೆ- ವಿನಯ ಇಲ್ಲದವರಿಗೆ ಮೇಕಪ್ ಹೆಚ್ಚು ಬೇಕು’ ಎಂದು ಚಟಾಕಿ ಹಾರಿಸಿದರು. ‘ಅಮ್ಮ ಹೊಡೆದು ತಿದ್ದಿ ತೀಡಿದಾಗ ಗೊತ್ತಾಗಲಿಲ್ಲ. ಈಗ ಅದರ ಫಲ ಅನುಭವಿಸುತ್ತಿದ್ದೇನೆ. ಅಮ್ಮನ ಋಣ ಹೇಗೆ ತೀರಿಸಲಿ’ ಎಂದು ಭಾವುಕರಾದರು.…

Read More

ಇದು ಟ್ಯಾಕ್ಸಿ ಡ್ರೈವರ್‌ನೊಬ್ಬ ತನ್ನ ಡೈರಿಯಲ್ಲಿ ಬರೆದುಕೊಂಡ ಘಟನೆ. ಅವತ್ತು ಆಗಲೇ ಸಂಜೆಗತ್ತಲು ಕವಿದಿತ್ತು. ಬೆಳಗ್ಗೆಯಿಂದ ಡ್ರೈವ್ ಮಾಡಿ, ಬೇರೆ ಬೇರೆ ರೀತಿಯ ಜನರೊಂದಿಗೆ ವ್ಯವಹರಿಸಿ ದೇಹಕ್ಕೆ, ಮನಸ್ಸಿಗೆ ದಣಿವಾಗಿತ್ತು. ಇನ್ನೇನು ಮನೆಗೆ ಹೊರಡಬೇಕು ಅನ್ನುವಷ್ಟರಲ್ಲಿ ಯಾರೋ ಫೋನ್ ಮಾಡಿ ಬರ ಹೇಳಿದರು. ‘ಇಲ್ಲ ಬೇರೆ ಟ್ಯಾಕ್ಸಿಗೆ ಹೇಳಿ. ಇವತ್ತಿನ ಟ್ರಿಪ್ ಮುಗಿದಿದೆ’ ಎಂದು ಹೇಳಬೇಕೆನಿಸಿದರೂ ಯಾಕೋ ಹೇಳಲಿಲ್ಲ. ಅವರು ಹೇಳಿದ ಅಡ್ರೆಸ್‌ಗೆ ಹೋದೆ. ಅದೊಂದು ಹಳೆಯ ಮನೆ. ಅಲ್ಲಿ ಜನವಾಸವಿದೆ ಎಂದು ಹೇಳಿದರೆ ನಂಬುವುದೇ ಕಷ್ಟ. ನಾನು ಕಾರ್ ನಿಲ್ಲಿಸಿ ಒಂದೆರಡು ಬಾರಿ ಹಾರ್ನ್ ಮಾಡಿದೆ. ಯಾರೂ ಬಾಗಿಲು ತೆರೆಯಲಿಲ್ಲ. ಇದು ತಪ್ಪು ಅಡ್ರೆಸ್ ಇರಬಹುದೇ, ವಾಪಸ್ ಹೋಗಿ ಬಿಡೋಣವೇ ಅನಿಸಿತು. ಏನಾದರಾಗಲಿ ನೋಡೋಣ ಎಂದು ಕಾರಿನಿಂದಿಳಿದು ಮನೆ ಬಾಗಿಲು ತಟ್ಟಿದೆ. ಒಳಗಿನಿಂದ ಯಾರೋ ಕ್ಷೀಣ ದನಿಯಲ್ಲಿ ‘ಒಂದು ನಿಮಿಷ’ ಎಂದರು. ಒಳಗಿನಿಂದ ಅಸ್ಪಷ್ಟವಾಗಿ ಸದ್ದು ಕೇಳಿ ಬರುತ್ತಿತ್ತು. ಕೆಲ ಕ್ಷಣಗಳ ಮೌನದ ನಂತರ 90-95 ವರ್ಷದ ಮುದುಕಿಯೊಬ್ಬರು ನಿಧಾನವಾಗಿ…

Read More

ಮೂಡುಬಿದಿರೆ: 2024 ಡಿಸೆಂಬರ್‌ನಲ್ಲಿ ನಡೆದ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಿ.ಕಾಂ. ವಿದ್ಯಾರ್ಥಿಯಾದ ಪ್ರೀಮಾ (250), ಮಹೇಶ್ (235), ಕೃತಿ ಎಮ್ (233), ಶ್ರೇಯಾ (223), ಚೇತನ್(223), ಶೆಟ್ಟಿ ತ್ರಿಶಾ(223), ಪ್ರಗತಿ(219), ಅಜ್‌ವೀನ್(218), ಸ್ವಾತಿ(218), ಜ್ಯೋತಿ(210), ಶ್ರೇಯಾ ಶೆಟ್ಟಿ (200),ಸುರಕ್ಷಾ (200) ಹಾಗೂ ಸಾಯಿ ಪ್ರಸಾದ್(200) ಇವರು ಉತ್ತಮ ಫಲಿತಾಂಶದೊAದಿಗೆ ಉತ್ತೀರ್ಣರಾಗಿದ್ದಾರೆ. ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಪ್ರಾಂಶುಪಾಲ ಡಾ.ಕುರಿಯನ್, ವೃತ್ತಿಪರ ವಾಣಿಜ್ಯ ವಿಭಾಗದ ಸಂಯೋಜಕ ಅಶೋಕ ಕೆ. ಜಿ., ಆಳ್ವಾಸ್ ಪದವಿ ಪೂರ್ವ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ. ಡಿ. ಹಾಗೂ ಸಿ.ಎ. ಸಂಯೋಜಕರು ಅಭಿನಂದಿಸಿದ್ದಾರೆ.

Read More

ವಿದ್ಯಾಗಿರಿ: ಆಳ್ವಾಸ್ ಪದವಿ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಸಹಯೋಗದ ‘ಆಳ್ವಾಸ್ ದೂರ ಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರ’ವು 2024-2025ರ ಜನವರಿ ಆವೃತ್ತಿಯ ಪ್ರಥಮ ವರ್ಷದ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ. ಈ ಕೇಂದ್ರದ ಮೂಲಕ ವಿದ್ಯಾರ್ಥಿಗಳು ಸ್ನಾತಕ (ಯುಜಿ)ದ ಬಿ.ಎ, ಬಿ.ಕಾಂ, ಬಿ.ಲಿಬ್.ಐ.ಎಸ್.ಸಿ, ಬಿ.ಬಿ.ಎ, ಬಿ.ಎಸ್.ಡಬ್ಲೂ, ಬಿ.ಎಸ್ಸಿ (ಸಂಯೋಜನೆಗಳು), ಬಿ.ಎಸ್‌ಸಿ ಹೋಮ್ – ಇನ್ಫಾರ್ಮೇಷನ್ ಟೆಕ್ನಾಲಜಿ, ಬಿ.ಸಿ.ಎ (ಬ್ಯಾಚುರಲ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್) ಪದವಿಗಳನ್ನು ಮಾಡಬಹುದಾಗಿದೆ. ಸ್ನಾತಕೋತ್ತರ ವಿಭಾಗದಲ್ಲಿ ಎಂ.ಎ- ಶಿಕ್ಷಣ, ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ಇತಿಹಾಸ, ರಾಜ್ಯಶಾಸ್ತ, ಸಾರ್ವಜನಿಕ ಆಡಳಿತ, ಉರ್ದು, ಸಂಸ್ಕೃತ, ಸಮಾಜಶಾಸ್ತ, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಹಾಗೂ ಎಂ.ಎಸ್.ಡಬ್ಲೂ, ಎಂ.ಬಿ.ಎ-ಆನ್‌ಲೈನ್ ಪ್ರವೇಶ ಪರೀಕ್ಷೆ ಮೂಲಕ (ಫೈನಾನ್ಸ್, ಮಾರ್ಕೆಟಿಂಗ್, ಎಚ್.ಆರ್. ಆಪರೇಷನ್. ಟೂರಿಸಂ ಕಾಪ್ರೊರೇಟ್ ಲಾ, ಇನ್‌ಫರ್ಮನೇಷನ್ ಟೆಕ್ನಾಲಜಿ, ಆಸ್ಪತ್ರೆ ಮತ್ತುಆರೋಗ್ಯ ಕಾಳಜಿ ನಿರ್ವಹಣೆ.), ಎಂ.ಕಾA ಡ್ಯುಯೆಲ್ ಸ್ಪೆಷಲೈಜೇಷನ್ (ಅಕೌಂಟಿAಗ್ ಮತ್ತು ಫೈನಾನ್ಸ್ /…

Read More