Author: admin
ಮನುಷ್ಯನ ಜೀವನದಲ್ಲಿ ಹಲವು ಸವಾಲುಗಳಿರುತ್ತದೆ. ಅದನ್ನು ಮೆಟ್ಟಿ ನಿಲ್ಲುವ ತಾಕತ್ತು ನಮ್ಮಲ್ಲಿರಬೇಕು. ಧರ್ಮ, ಆರಾಧನೆ ಜತೆಗೆ ಕುಟುಂಬ ಸ್ನೇಹ ನಮ್ಮಲಿರಬೇಕು ಎಂದು ಮುಂಬಯಿ ಉದ್ಯಮಿ ಮೋಹನ್ ಚೌಟ ಮಧ್ಯ ನುಡಿದರು. ಅವರು ಮಧ್ಯ ಶ್ರೀ ಖಡ್ಗೇಶ್ವರ ಖಡ್ಗೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆದ ಗ್ರಾಮ ಸೇವಾ ಸಂಘ ಮಧ್ಯ ಇವರ 53 ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಅಭಿವೃದ್ದಿ ನಮ್ಮ ಗುರಿಯಾಗಬೇಕು : ಅನಿಲ್ ಶೆಟ್ಟಿ ಸೂರಿಂಜೆ ಮುಖ್ಯ ಅತಿಥಿಯಾಗಿ ಬಾಗವಹಿಸಿದ್ದ ಮುಂಬಯಿ ಉದ್ಯಮಿ ಅನಿಲ್ ಶೆಟ್ಟಿ ತೇವು ಸೂರಿಂಜೆ ಮಾತನಾಡಿ, ಮನುಷ್ಯ ತನ್ನ ಜೀವನದಲ್ಲಿ ಉತ್ತಮ ಕಾರ್ಯ ಆಯೋಜಿಸಬೇಕು. ಮಾನವ ಅಭಿವೃದ್ಧಿಗೆ ಪೂರಕವಾದ ಕಾರ್ಯ ಚಟುವಟಿಕೆ ನಾವು ಮಾಡಬೇಕು. ಅಭಿವೃದ್ಧಿ ನಮ್ಮ ಗುರಿಯಾಗಬೇಕು ಎಂದರು. ಮುಂಬಯಿ ವಕೀಲರಾದ ದಿನಕರ ಕೆ ಶೆಟ್ಟಿ ಮಧ್ಯ, ಚೇಳ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ, ಮುಂಬಯಿ ಉದ್ಯಮಿ ರಮೇಶ್ ಶೆಟ್ಟಿ ಸಾಣೂರು ಮಧ್ಯ, ಮುಂಬಯಿ ಉದ್ಯಮಿ ಕುಟ್ಟಿ ಶೆಟ್ಟಿ ಬಗ್ಗಣ್ಣಮನೆ…
ಮುಂಬಯಿ ವಿಶ್ವವಿದ್ಯಾಲಯ, ಪ್ರಸಕ್ತ ಸಾಲಿನ ಕನ್ನಡ ಎಂ.ಎ, ತರಗತಿಯ ಪ್ರವೇಶಕ್ಕೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯವು ಕನ್ನಡ ಎಂ.ಎ (ಸೆಮಿಸ್ಟರ್, ರೆಗ್ಯೂಲರ್) ಪ್ರಥಮ ವರ್ಷದ ತರಗತಿ (2025-2026ನೆಯ ಸಾಲಿನ) ಅಧ್ಯಯನಕ್ಕೆ ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬಿ.ಎ, ಬಿ.ಕಾಂ, ಬಿ.ಎಸ್ಸಿ,ಬಿ. ಟೆಕ್ ಮೊದಲಾದ ಪದವಿ ಪಡೆದವರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ತರಗತಿಗೆ ಹಾಜರಾತಿ ಕಡ್ಡಾಯವಿರುತ್ತದೆ. ಅಧ್ಯಯನ, ಪ್ರವೇಶಕ್ಕೆ ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ. ಸರ್ವ ಪ್ರಥಮರಾದ ವಿದ್ಯಾರ್ಥಿಯೊಬ್ಬರಿಗೆ ಎಂ.ಬಿ ಕುಕ್ಯಾನ್ ಚಿನ್ನದ ಪದಕವನ್ನು ಸಹ ವಿಶ್ವವಿದ್ಯಾಲಯದಿಂದ ನೀಡಲಾಗುತ್ತದೆ. ಆನ್ಲೈನ್ ಮೂಲಕ ಪ್ರವೇಶದ ಅರ್ಜಿಗಳನ್ನು ತುಂಬುವುದು ಅನಿವಾರ್ಯ. ಆಸಕ್ತ ಅರ್ಹ ಅಭ್ಯರ್ಥಿಗಳು ಸ್ವಲಿಖಿತ ಅರ್ಜಿಯನ್ನು ಹಾಗೂ ಎಲ್ಲಾ ದಾಖಲೆಗಳ ಪ್ರತಿಯನ್ನು Dr. G. N. Upadhya, Head, Department of Kannada, University of Mumbai, Ranade Bhavan, Vidyanagari, Santacruz(East), Mumbai 400 098 Email: kannadadepartment@gmail.com ವಿಳಾಸಕ್ಕೆ ಜೂನ್ 3ರೊಳಗೆ ಕಳುಹಿಸಬಹುದು. https://mu.samarth.edu.in/index.php/site/login…
‘ತುಳುನಾಡಿನ ಗುತ್ತು ಬಾಳಿಕೆಗಳು ತಮ್ಮ ಶಿಷ್ಟಾಚಾರವನ್ನು ಮೀರದೆ ಪರಂಪರಾಗತವಾದ ಆಚಾರ ವಿಚಾರಗಳನ್ನು ಗೌರವಿಸುತ್ತಿರುವುದು ಒಂದು ಉತ್ತಮ ಲಕ್ಷಣ. ದೈವಗಳ ಚಾವಡಿ, ನಾಗ ಸಾನಿಧ್ಯ, ತರವಾಡು ಮನೆಗಳನ್ನು ಪುನರ್ ನಿರ್ಮಿಸಿ ತಮ್ಮವರೆಲ್ಲರನ್ನೂ ಒಂದೆಡೆ ಸೇರಿಸಲು ಉಪಕ್ರಮಿಸಿರುವುದು ಇತ್ತೀಚೆಗೆ ಹೆಚ್ಚಾಗಿ ಕಂಡು ಬರುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಹಬ್ಬ ಹರಿದಿನಗಳನ್ನು ಒಂದೇ ಕಡೆ ಎಲ್ಲರೂ ಒಟ್ಟಾಗಿ ಆಚರಿಸುತ್ತಿರುವುದು ಕೌಟುಂಬಿಕ ಏಕತೆಯನ್ನು ಬಲಪಡಿಸಿದೆ’ ಎಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಂ ಕ್ಷೇತ್ರದ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ. ಕಾಸರಗೋಡಿನ ಪಾರಕಟ್ಟೆಯಲ್ಲಿ ಚೆಂಗಳ ಗುತ್ತು ಶ್ರೀ ವಿಷ್ಣುಮೂರ್ತಿ ಧೂಮಾವತಿ ಹಾಗೂ ಪರಿವಾರದೈವಗಳ ಪ್ರತಿಷ್ಠೆ, ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕಳಶದ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.’ಚೆಂಗಳ ಗುತ್ತು ಕುಟುಂಬಕ್ಕೆ ಸೇರಿದ 400ಕ್ಕೂ ಮಿಕ್ಕಿದ ಸದಸ್ಯರು ಒಟ್ಟುಗೂಡಿ ನಿರ್ಮಿಸಿದ ನೂತನ ತರವಾಡು ಮನೆ ಮತ್ತು ದೈವಾಲಯಗಳು ಅವರ ಶ್ರದ್ಧಾಭಕ್ತಿಯ ಪ್ರತೀಕ’ ಎಂದವರು ನುಡಿದರು. ಇದೇ ಸಂದರ್ಭದಲ್ಲಿ ಉಮೇಶ್ ಶೆಟ್ಟಿ ಮನ್ನಿಪ್ಪಾಡಿ ಸಂಪಾದಿಸಿದ ‘ಜೀಟಿಗೆ’ ಸ್ಮರಣ ಸಂಚಿಕೆಯನ್ನು…
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ದಶಮಾನೋತ್ಸವ ಕಾರ್ಯಕ್ರಮವು ಜೂನ್ ಒಂದರಂದು ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ಜರಗಲಿರುವ ಆಮಂತ್ರಣ ಪತ್ರಿಕೆಯನ್ನು ದುಬೈನಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು. ಯಕ್ಷಗಾನ ಅಭ್ಯಾಸ ಕೇಂದ್ರ ಮತ್ತು ಯಕ್ಷಧ್ರುವ ಪಟ್ಲ ಫೌಂಡೇಶನ್ ಯುಎಇ ಘಟಕ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ಯುಎಇಯ ಕನ್ನಡ ತುಳು ಸಂಘ ಸಂಸ್ಥೆಗಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಯಿತು.ಯುಎಇ ಘಟಕದ ಸಂಚಾಲಕರಾದ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿ, ಕಳೆದ ಒಂಬತ್ತು ವರ್ಷಗಳಿಂದ ಹದಿನೆಂಟು ಕೋಟಿ ರೂಪಾಯಿಗಳಷ್ಟು ಮಿಕ್ಕಿ ಅಶಕ್ತ ಕಲಾವಿದರಿಗೆ ವಿದ್ಯಾಭ್ಯಾಸ, ಆರೋಗ್ಯ, ಮನೆ ನಿರ್ಮಾಣ, ಮನೆ ರಿಪೇರಿ, ಇನ್ಸ್ಯೂರೆನ್ಸ್ ಗಳನ್ನು ನೀಡಿ ಒಳ್ಳೆಯ ಕಾರ್ಯಕ್ರಮಗಳನ್ನು ನೀಡುತ್ತ ಬಂದಿದೆ. ದಶಮಾನೋತ್ಸವ ಸಂಭ್ರಮದಲ್ಲಿರುವ ಟ್ರಸ್ಟ್ ಹತ್ತು ಕೋಟಿ ರೂಪಾಯಿ ಸಂಗ್ರಹ ಮಾಡುವ ಉತ್ತಮವಾದ ಯೋಜನೆಗೆ ಕೈ ಹಾಕಿದೆ. ಯುಎಇಯಲ್ಲಿ ಇರುವ ಎಲ್ಲರೂ ಈ ಯೋಜನೆಗೆ ಕೈ ಜೋಡಿಸಬೇಕೆಂದು ವಿನಂತಿಸುತ್ತ ಜೂನ್ ಒಂದರಂದು ದಿನಂಪೂರ್ತಿ ನಡೆಯಲಿರುವ ಕಾರ್ಯಕ್ರಮದಲ್ಲಿ ತಾವೆಲ್ಲರೂ ಬಾಗವಹಿಸಬೇಕಾಗಿ…
ಆಳ್ವಾಸ್ ಸಿಬಿಎಸ್ಇ ಫಲಿತಾಂಶ: ಆಳ್ವಾಸ್ನ 29 ವಿದ್ಯಾರ್ಥಿಗಳು 95% ಕ್ಕೂ ಹೆಚ್ಚು, 114 ವಿದ್ಯಾರ್ಥಿಗಳು 90% ಕ್ಕಿಂತ ಅಧಿಕ ಅಂಕದ ಸಾಧನೆ
ಮೂಡುಬಿದಿರೆ: ಸಿಬಿಎಸ್ಇ ಈ ಬಾರಿಯ ಹತ್ತನೆ ತರಗತಿಯ ಫಲಿತಾಂಶ ಪ್ರಕಟಿಸಿದ್ದು ಸತತ ಐದನೇ ವರ್ಷ ಆಳ್ವಾಸ್ ಶಾಲೆಯು 100% ಫಲಿತಾಂಶ ದಾಖಲಿಸಿದೆ. ಆಳ್ವಾಸ್ ಶಾಲೆಯ 29 ವಿದ್ಯಾರ್ಥಿಗಳು 95%ಕ್ಕಿಂತ ಹೆಚ್ಚು ಅಂಕ ಪಡೆಯುವ ಮೂಲಕ ಶ್ರೇಷ್ಠ ಸಾಧನೆ ಮೆರೆದಿದ್ದಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಒಂದು ಶಾಲೆಯಿಂದ 95 ಶೇಕಡಾಕ್ಕಿಂತ ಹೆಚ್ಚು ಅಂಕ ಪಡೆದವರ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆಳ್ವಾಸ್ ಪ್ರಥಮ ಸ್ಥಾನ ಪಡೆದಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಮಾತಾಡಿದ ಅವರು, ಅಮೋಘ್ ಬಿಲ್ಲೂರ್, ದೀಕ್ಷಾ ಹೆಚ್ ಕೆ (98%), ಹರ್ಷಿತಾ ಎಸ್ ಪಾಟೀಲ್, ಪ್ರಜ್ವಲ್ ಕುಮಾರ್ ಬಿರಾದರ್, ಅದಿತಿ ಭಟ್, ಸಂದೀಪ್, ಶಿವನಂದ (97%), ಮನಸ್ವಿ, ದರ್ಶ ಧಾರ್ಮಿಕ್, ಚೇತನ್ ಎಸ್, ಚಿನ್ಮಯಿ ಎಂ, ನಿಸರ್ಗ ಎಸ್, ಅನ್ವಿತ್ ಆರ್, ಸಮರ್ಥ ಜೋಷಿ, ತುನುಶ್ರೀ ಜಿ ಆರ್, ಪೂನಮ್ ಸಾತಿ, ಅನುಷಾ ರಾಜೇಂದ್ರ (96%), ಕಿರಣ್ ಸಾರ್ವಿ, ಕಾರ್ತಿಕ್ ಎಸ್, ಅಭಿಜ್ಞಾ ರಾವ್,…
2024-25 ನೇ ಸಾಲಿನ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಶನ್ (ಸಿಬಿಎಸ್ಇ) 10ನೇ ತರಗತಿಯ ಪಲಿತಾಂಶ ಪ್ರಕಟಗೊಂಡಿದ್ದು, ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಿಂದ ಒಟ್ಟು 284 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅತ್ಯುತ್ತಮ ಫಲಿತಾಂಶದೊಂದಿಗೆ ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಅತ್ಯುತ್ತಮ ಫಲಿತಾಂಶ ಪಡೆದ ಶಾಲಾ ವಿದ್ಯಾರ್ಥಿಗಳ ವಿವರ ಈ ಕೆಳಗಿನಂತಿರುತ್ತದೆ. ಶಾಲೆಯ ಈ ಶೈಕ್ಷಣಿಕ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ, ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್, ಆಡಳಿತ ಮಂಡಳಿಯ ಸದಸ್ಯರು, ಶೈಕ್ಷಣಿಕ ನಿರ್ದೇಶಕರು ಸಾಧನೆಗೈದ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕರು ಮತ್ತು ಪೋಷಕರನ್ನು ಅಭಿನಂದಿಸಿದರು. ಪ್ರಾಂಶುಪಾಲರು
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಅಭೂತಪೂರ್ವ ಕಾರ್ಯವೈಖರಿಯನ್ನು ಮೆಚ್ಚಿ ಫೌಂಡೇಶನ್ ನ ಗೌರವಾಧ್ಯಕ್ಷರಾದ ಮಹಾದಾನಿ, ಗೌರವಾನ್ವಿತ ಡಾ| ಕೆ ಸದಾಶಿವ ಶೆಟ್ಟಿಯವರು ಫೌಂಡೇಶನ್ ಟ್ರಸ್ಟ್ ಗೆ ಮೂರು ಕೋಟಿ ರೂಪಾಯಿಗಳ ದೊಡ್ಡ ದೇಣಿಗೆಯನ್ನು ಘೋಷಿಸಿದ್ದಾರೆ. ಕನ್ಯಾನ ಸದಾಶಿವ ಶೆಟ್ಟಿಯವರು ಪಟ್ಲ ಫೌಂಡೇಶನ್ ನ ಗೌರವಾಧ್ಯಕ್ಷರಾದ ನಂತರ ಟ್ರಸ್ಟಿನ ಕಾರ್ಯ ಯೋಜನೆಗಳು ನಾಗಾಲೋಟದಲ್ಲಿ ಮುಂದುವರಿಯುತ್ತಿದ್ದು ಕಲಾಭಿಮಾನಿಗಳ ಹಾಗೂ ಸಂಘಟಕರಿಂದ ಪ್ರಶಂಸೆಯ ಸುರಿಮಳೆ ಹರಿದು ಬರುತ್ತಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ಗೋಲ್ಡ್ ಪಿಂಚ್ ಹೋಟೆಲ್ ನಲ್ಲಿ “ಪಟ್ಲ ದಶಮ” ಸಂಭ್ರಮದ ಸಮಾಲೋಚನಾ ಸಭೆಯ ದಿನದಂದು ಫೌಂಡೇಶನ್ ನ ಎಲ್ಲಾ ಮಹಾದಾನಿಗಳು ಮತ್ತು ಫೌಂಡೇಶನ್ ನ ಪದಾಧಿಕಾರಿಗಳ ಸಮ್ಮುಖದಲ್ಲಿ ಪಟ್ಲ ಫೌಂಡೇಶನ್ ನ ದಶಮಾನೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ಎಂಆರ್ ಜಿ ಗ್ರೂಪ್ ನ ಅಧ್ಯಕ್ಷ ಡಾ| ಕೆ. ಪ್ರಕಾಶ್ ಶೆಟ್ಟಿ ಮತ್ತು ಅಧ್ಯಕ್ಷರಾಗಿ ಬರೋಡ ಶಶಿಧರ ಶೆಟ್ಟಿ ಅವರು ಜವಾಬ್ದಾರಿಯನ್ನು ಬಹಳ ಪ್ರೀತಿಯಿಂದ ವಹಿಸಿಕೊಂಡಿದ್ದರು. ದಶಮಾನೋತ್ಸವದ ಮುಖ್ಯ ಧ್ಯೇಯವಾಗಿ ಕನಿಷ್ಠ 10 ಕೋಟಿ ರೂಪಾಯಿ…
ನಾನು ಮದುವೆಗೆ ಹೋದಾಗ ವಧು-ವರರಿಗೆ ಅಕ್ಷತೆ ಹಾಕುವುದಿಲ್ಲ. ನನ್ನ ಗೆಳೆಯರಿಗೂ ಗೊತ್ತಿದೆ. ನಾನು ಇತ್ತೀಚೆಗಿನ ವರ್ಷದಲ್ಲಿ ಮೆಹಂದಿ ಕಾರ್ಯಕ್ರಮಕ್ಕೂ ಹೋಗುವುದಿಲ್ಲ. ತೀರಾ ಬೇಕಾದವರು, ಅವರ ಮದುವೆಯ ದಿವಸ ನಾನು ಊರಲ್ಲಿ ಇಲ್ಲ ಅಂತಾದರೆ ಹೋಗಿ ಶುಭಾಶಯ ಹೇಳಿ ಬರುತ್ತೇನೆ. ಮದುವೆಯ ದಿವಸ ಅಕ್ಷತೆಯನ್ನ ಎಂದೂ ಹಾಕುವುದಿಲ್ಲ. ಅಷ್ಟೇ ಅಲ್ಲದೆ ಆ ಎಡಂತರ ಬಂದ ಕೆಟ್ಟ ಸಂಪ್ರದಾಯವನ್ನ ನಿಲ್ಲಿಸುವ ಪಣ ತೊಟ್ಟಿದ್ದೇನೆ. ಮದುವೆಯಲ್ಲಿ ಅಕ್ಷತೆ ಹಾಕುವ ಸಂಪ್ರದಾಯ ನಿಜಕ್ಕೂ ಹಿಂದಿನಿಂದಲೂ ಬಂದದ್ದಾ? ಕೇಳಿದರೆ ಖಂಡಿತ ಇಲ್ಲ ಎನ್ನುವುದನ್ನ ಹಲವು ಹಿರಿಯರನ್ನ, ಶಾಸ್ತ್ರ ಬಲ್ಲವರನ್ನ ಕೇಳಿಯೇ ನಾನಿಲ್ಲಿ ದಾಖಲಿಸುತ್ತಿದ್ದೇನೆ. ಚಪ್ಪಲಿಯಡಿ ಅಕ್ಕಿ ಕಾಳುಗಳು ನಾವು ಅನ್ನ ಮತ್ತು ಅಕ್ಕಿಯನ್ನ ದೇವರು ಅಂತಲೇ ಪೂಜಿಸಿದವರು, ಅನ್ನ ಬ್ರಹ್ಮ ಎನ್ನುತ್ತೇವೆ. ನಾವೆಲ್ಲವೂ ಅನ್ನಮೂಲದಿಂದಲೇ ಬಂದವರು. ಭಗವದ್ಗೀತೆ ಓದಿದವರಿಗೆ ಅನ್ನದ ಮಹತ್ವ ಅರ್ಥವಾದೀತು.ಇರಲಿ. ಮದುವೆಯಲ್ಲಿ ತಾಳಿ ಕಟ್ಟುವ ವೇಳೆಯಲ್ಲಿ ಪುರೋಹಿತರ ಸಮೇತ ಕುಟುಂಬ ವರ್ಗ ಅಕ್ಷತೆ ಹಾಕುವ ಸಂಪ್ರದಾಯವಿತ್ತು. ಈಗಲೂ ಇದೆ. ಅದು ಸರಿಯೂ ಹೌದು. ಅದು ಅಲ್ಲಿಗೇ…
ಶಿರ್ವ ಮಾರಿಗುಡಿ ಶ್ರೀ ಮಹಮ್ಮಾಯಿ ಅಮ್ಮನವರ ಸಾನಿದ್ಯದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಕಾಣಿಯೂರು ಮಠದ ಶ್ರೀ ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನಡೆಯಿತು.ಈ ಸಂದರ್ಭದಲ್ಲಿ ಎಂ.ಆರ್.ಜಿ ಗ್ರೂಪ್ ನ ಸಿಎಂಡಿ ಡಾ| ಕೆ ಪ್ರಕಾಶ್ ಶೆಟ್ಟಿ, ಹೆರಂಭ ಕೆಮಿಕಲ್ಸ್ ನ ಸಿಎಂಡಿ ಡಾ| ಸದಾಶಿವ ಶೆಟ್ಟಿ ಕನ್ಯಾನ, ಉದಯ ಸುಂದರ ಶೆಟ್ಟಿ, ವೆಜ್ ಟ್ರೀಟ್ ಹೊಟೇಲ್ಸ್ ನ ಸಿಎಂಡಿ ರವಿ ಸಾಧು ಶೆಟ್ಟಿ, ಉದ್ಯಮಿ ನಿತ್ಯಾನಂದ ಹೆಗ್ಡೆ, ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಶೆಟ್ಟಿ ಮುನಿಯಾಲ್, ಬೆಂಗಳೂರು ಬಂಟರ ಸಂಘದ ಶ್ರೀಮತಿ ಕಾಂತಿ ಶೆಟ್ಟಿ, ಸಂಗೀತಾ ಮುಂತಾದ ಅತಿಥಿ ಗಣ್ಯರು ಉಪಸ್ಥಿತರಿದ್ದರು. ವಿವಿಧ ಕ್ಷೇತ್ರದ ಸಾಧಕರನ್ನು ಈ ಸಂಧರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ವಿದ್ಯಾಗಿರಿ: ಸಂಶೋಧನಾ ಪ್ರಸ್ತಾವನೆಯನ್ನು ಬರೆಯುವ ಮುನ್ನ ಬಾಹ್ಯ ನಿಧಿಯ ಕುರಿತು ಅರಿತುಕೊಳ್ಳುವುದು ಹೆಚ್ಚು ಅವಶ್ಯ ಎಂದು ಕೋಟ ಜನತಾ ಫಿಶ್ ಮಿಲ್ ಮತ್ತು ಆಯಿಲ್ ಉತ್ಪನ್ನಗಳ ವಿಭಾಗದ ಹಿರಿಯ ವ್ಯವಸ್ಥಾಪಕ ಡಾ ಚಂದ್ರ ಎಂ ವಿ ಹೇಳಿದರು. ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಸ್ನಾತಕೋತ್ತರ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ವತಿಯಿಂದ ರಾಷ್ಟೀಯ ತಂತ್ರಜ್ಞಾನ ದಿನದ ಅಂಗವಾಗಿ ಮಂಗಳವಾರ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡ ‘ನ್ಯೂಟ್ರಿಗೇಟ್: ವೈದ್ಯಕೀಯ ಒಳನೋಟಗಳು ಮತ್ತು ಉತ್ಪನ್ನ ನಾವೀನ್ಯತೆಗಳ ಪ್ರದರ್ಶನ ಕುರಿತು ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಶೋಧನೆಯ ಮೊದಲ ಹಂತವಾಗಿ ಸೂಕ್ತ ಫಂಡಿಂಗ್ ಏಜೆನ್ಸಿಯನ್ನು ಗುರುತಿಸಿ, ಯೋಜನಾ ಅಭಿವೃದ್ಧಿ ಮತ್ತು ಪ್ರಾಯೋಜಕ ವ್ಯವಸ್ಥೆಯ ಮುಖ್ಯ ಕೌಶಲ್ಯಗಳನ್ನು ಅರ್ಥ ಮಾಡಿಕೊಂಡು, ಬಳಿಕ ಸಂಶೋಧನಾ ಪ್ರಸ್ತಾವನೆಯನ್ನು ಬರೆಯಲು ಮುಂದಾಗಬೇಕು ಎಂದು ತಿಳಿಸಿದರು. ಬಹುಮುಖ್ಯವಾಗಿ ಸಂಶೋಧನಾ ಪ್ರಸ್ತಾವನೆಯ ಆರಂಭಿಕ ಹಂತದಲ್ಲಿಯೇ ನಿರ್ವಹಣಾ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕು.ಸಂಶೋಧನೆಯಲ್ಲಿ ಸಾಹಿತ್ಯ ವಿಮರ್ಶಿಸುವ ಸಂದರ್ಭದಲ್ಲಿ ಭಾರತೀಯ ವಿಜ್ಞಾನಿಗಳಿಗೆ ಮೊದಲ ಆದ್ಯತೆ ಇರಲಿ…