Author: admin
ಆಳ್ವಾಸ್ ಕಾಲೇಜಿನ ಹಿರಿಯ ವಿದ್ಯಾರ್ಥಿ ಗೌರವ್ ಹೆಗ್ಡೆ ನಿರ್ದೇಶನದ ಕಿರುಚಿತ್ರ ‘ಮಾಯಾಚಕ್ರ’ದ ಪ್ರೀಮಿಯರ್ ಷೋ ಆಳ್ವಾಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಹಯೋಗದಲ್ಲಿ ಕಾಲೇಜಿನ ಆಡಿಯೋ ವೀಡಿಯೋ ಥಿಯೇಟರ್ನಲ್ಲಿ ನಡೆಯಿತು. ಕಿರುಚಿತ್ರ ವೀಕ್ಷಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜ್ಮೆಂಟ್ ಟ್ರಸ್ಟಿ ವಿವೇಕ್ ಆಳ್ವ, ಗೌರವ್ ಹೆಗ್ಡೆ ಮತ್ತು ಅವರ ತಂಡದ ಚೊಚ್ಚಲ ಪ್ರಯತ್ನವನ್ನು ಶ್ಲಾಘಿಸಿದರು. ಎಳವೆಯಲ್ಲಿಯೇ ಇಂತಹ ಸೃಜನಾತ್ಮಕ ಕಾರ್ಯಗಳನ್ನು ಕೈಗೊಳ್ಳುವುದು ಸಮಾಜಕ್ಕೆ ಪ್ರೇರಣಾದಾಯಕ. ತನಿಖಾ ಪತ್ರಿಕೋದ್ಯಮದ ಕಥಾಹಂದರ ಹೊಂದಿರುವ ಈ ಕಿರುಚಿತ್ರವು, ಪತ್ರಕರ್ತರು ವೃತ್ತಿಜೀವನದಲ್ಲಿ ಎದುರಿಸಬೇಕಾಗುವ ತೊಂದರೆಗಳು, ಸವಾಲುಗಳು ಮತ್ತು ಸಮಾಜದ ಒತ್ತಡಗಳ ನೈಜ ಚಿತ್ರಣವನ್ನು ನೀಡುತ್ತದೆ. ‘ಮಾಯಾಚಕ್ರ’ದ ಇನ್ನೊಂದು ವಿಶೇಷತೆ, ಚಿತ್ರದಲ್ಲಿ ಸ್ಥಳೀಯ ಸ್ಥಳಗಳು ಮತ್ತು ಪ್ರತಿಭೆಗಳನ್ನು ಬಳಸಿರುವುದು. ಈ ಮೂಲಕ ಗ್ರಾಮೀಣ ಸೌಂದರ್ಯವನ್ನು ಕಣ್ತುಂಬಿಕೊಳ್ಳುವುದರ ಜೊತೆಗೆ, ಪ್ರತಿಭಾವಂತರಿಗೆ ತಮ್ಮ ನಟನಾಕೌಶಲ್ಯವನ್ನು ತೋರಿಸಲು ವೇದಿಕೆ ಒದಗಿಸಲಾಗಿದೆ ಎಂದರು.ಸಿನಿಮಾದ ನಿರ್ದೇಶಕ ಗೌರವ್ ಹೆಗ್ಡೆ ಮಾತನಾಡಿ, “ಈಗಿನ ರೀಲ್ಸ್ ಜಮಾನದಲ್ಲಿ ದೀರ್ಘ ಅವಧಿಯ ಕಿರುಚಿತ್ರಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುವುದು ಒಂದು…
ತಂದೆ ತಾಯಿ ನೀಡಿದ ಸಂಸ್ಕಾರ, ಗುರು ನೀಡಿದ ವಿದ್ಯೆ, ಕಲಿಕೆಯಲ್ಲಿ ಸಮರ್ಪಣೆ ಇದ್ದಾಗ ವಿದ್ಯಾರ್ಥಿಗಳು ಕಲೆಯಲ್ಲಿ ಔನ್ನತ್ಯವನ್ನು ತಲುಪಲು ಸಾಧ್ಯ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕ ವಿದ್ಯಾವತಿ ಭಜಂತ್ರಿ ಅಭಿಪ್ರಾಯ ಪಟ್ಟರು. ಬೆಳಗಾವಿಯ ಕೆ.ಎಲ್.ಇ ಸಂಸ್ಥೆಯ ಬಿಎಸ್ ಜೀರಗೆ ಸಭಾಂಗಣದಲ್ಲಿ ನಡೆದ ಅಭಿನಯ ಕಲಾಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭರತನಾಟ್ಯ ಕಲೆ ಅಷ್ಟು ಸುಲಭದಲ್ಲಿ ಒಳಿದು ಬರುವ ಕಲೆಯಲ್ಲ. ಅತ್ಯಂತ ಪರಿಶ್ರಮದಿಂದ ಪಡೆದುಕೊಳ್ಳಬೇಕು. ಈ ಕಲೆಯಲ್ಲಿ ಶ್ರದ್ದೆ, ಏಕಾಗ್ರತೆ ತುಂಬಾ ಮುಖ್ಯ. ಇದು ಕಲೆಯಲ್ಲಿ ಅಸಾಮಾನ್ಯವಾದದು, ಅಗ್ರಮಾನ್ಯವಾದದು. ದೇಶದಲ್ಲಿ ಅಷ್ಟೇ ಅಲ್ಲ ವಿದೇಶದಲ್ಲಿಯೂ ಅದರ ವೈಭವವನ್ನು ಕಾಣುತ್ತೇವೆ ಎಂದರು. ಅಭಿನಯ ಕಲಾ ಸಂಸ್ಥೆಯನ್ನು ಸ್ಥಾಪಿಸಿದ ವಿದುಷಿ ಡಾ| ದೀಪ್ತಿ ಶೆಟ್ಟಿ ಮತ್ತು ವಿದುಷಿ ಧನ್ಯ ಶೆಟ್ಟಿ ಅವರು ಅಭಿನಂದನಾರ್ಹರು. ಭರತನಾಟ್ಯ ಸಂಸ್ಥೆಯನ್ನು ಬೆಳಗಾವಿಯಲ್ಲಿ ಸ್ಥಾಪಿಸಿ ಆ ಮೂಲಕ ಮಕ್ಕಳಿಗೆ ಕಲಾ ಸಂಸ್ಕಾರ ನೀಡುವ ಅವರ ಕಾರ್ಯ ಶ್ಲಾಘನೀಯವಾದುದು. ಬೆಳಗಾವಿಯ ರವಿ ನೃತ್ಯ ಕಲಾಮಂದಿರದ ಮುಖ್ಯಸ್ಥ…
ನಮ್ಮ ದೇಶದ ಸಾರ್ವಜನಿಕ ವಲಯದ ದೈತ್ಯ BSNL ಒಂದು ಕಾಲದಲ್ಲಿ ದೇಶದ ದೂರಸಂಪರ್ಕ ಕ್ಷೇತ್ರದ ಹೆಮ್ಮೆಯಾಗಿತ್ತು. ಆದರೆ ಇಂದು ಖಾಸಗಿ ಕಂಪನಿಗಳ ಜೊತೆಗಿನ ಸ್ಪರ್ಧೆಯಲ್ಲಿ BSNL ಕುಸಿಯುತ್ತಿರುವುದು ಎಲ್ಲರಿಗೂ ಗೊತ್ತಿರುವ ಸತ್ಯ. ಈ ಕಥೆಯ ಹಿಂದಿನ ಕೆಲವು ಆಘಾತಕಾರಿ ಸಂಗತಿಗಳು ಜನತೆಯ ಗಮನಕ್ಕೆ ಬರಬೇಕಿದೆ. BSNL ತನ್ನ ಟವರ್ಗಳು ಮತ್ತು ಉಪಕರಣಗಳನ್ನು ಜಿಯೋಗೆ ಬಾಡಿಗೆಗೆ ಕೊಟ್ಟಿತ್ತು. ಆದರೆ ಆಶ್ಚರ್ಯಕರವಾಗಿ 10 ವರ್ಷಗಳ ಕಾಲ ಆ ಬಾಡಿಗೆಯ ಹಣವನ್ನೇ ವಸೂಲಿ ಮಾಡಲಿಲ್ಲ. ಒಂದು ಖಾಸಗಿ ಕಂಪನಿಯಾದರೆ ಒಂದು ತಿಂಗಳ ಬಾಡಿಗೆ ತಡವಾದರೂ ಕಾನೂನು ಕ್ರಮ ಕೈಗೊಳ್ಳುತ್ತಿತ್ತು. ಆದರೆ ಜನರ ಆಸ್ತಿಯಾದ BSNL ಈ ವಿಷಯದಲ್ಲಿ ಯಾಕೆ ಮೌನವಾಗಿತ್ತು? ಇದು ಕೇವಲ ಉದಾಸೀನವೋ ಅಥವಾ ಉದ್ದೇಶಪೂರ್ವಕವಾಗಿ ಜಿಯೋಗೆ ಒಲವು ತೋರಿಸಿದ್ದೋ?2013ರಲ್ಲಿ BSNL 3G ಸೇವೆಯನ್ನು ಯಶಸ್ವಿಯಾಗಿ ಆರಂಭಿಸಿತ್ತು. ಆದರೆ 4G ಸೇವೆಗೆ ಸರ್ಕಾರದಿಂದ ಅನುಮತಿ ವಿಳಂಬವಾಯಿತು. 2020ಕ್ಕೆ ತಳ್ಳಲ್ಪಟ್ಟ ಈ ಸೇವೆ ಇಂದಿಗೂ ಸಂಪೂರ್ಣವಾಗಿ ಜಾರಿಯಾಗಿಲ್ಲ. ಇದರ ಜೊತೆಗೆ, 2025 ಬಂದರೂ BSNL 5G…
ತುಳುನಾಡಿನ ಸಾಹಿತ್ಯ ಸಂಸ್ಕೃತಿ ಗಳನ್ನು ವಿದ್ಯಾರ್ಥಿ ಸಮುದಾಯಕ್ಕೆ ತಲುಪಿಸುವ ಮಹತ್ವದ ಹೊಣೆಗಾರಿಕೆ ಹಿರಿಯ ತಲೆಮಾರಿನ್ನಾದ್ದಾಗಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಈ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ರೂಪಿಸಿ ಯಶ್ವಸಿಯಾಗಿ ಅನುಷ್ಠಾನಗೊಳಿಸುತ್ತಿದೆ. ತುಳು ಭಾಷೆಯನ್ನು ರಾಜ್ಯದ ದ್ವಿತೀಯ ಅಧಿಕೃತ ಭಾಷೆಯನ್ನಾಗಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರವೇ ಅನುಷ್ಠಾನಗೊಳ್ಳುವ ಸಾಧ್ಯತೆಗಳಿವೆ. ಯುವ ತಲೆಮಾರು ಇಂದು ತುಳು ಸಾಹಿತ್ಯ, ಇತಿಹಾಸ ಮತ್ತು ಜಾನಪದದ ಕುರಿತು ಆಕರ್ಷಿತರಾಗುತ್ತಿದ್ದಾರೆ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ನುಡಿದರು. ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಸಿಂಗಾರ ಸುರತ್ಕಲ್ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಚೇಳ್ಯಾರು ಸಹಭಾಗಿತ್ವದಲ್ಲಿ ನಡೆಯುವ ನಲ್ಮೆ ಬಲ್ಮೆ ವಿದ್ಯಾರ್ಥಿಗಳಿಗೆ ಮೂರು ದಿನಗಳ ರಂಗ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಉದ್ಘಾಟನೆ ನೆರವೇರಿಸಿ ಮಾತನಾಡಿದ ಹಿರಿಯ ಚಲನಚಿತ್ರ ಹಾಗೂ ರಂಗ ಕಲಾವಿದೆ ಗೀತಾ ಸುರತ್ಕಲ್ ಅವರು ರಂಗಭೂಮಿ ಆತ್ಮ ವಿಶ್ವಾಸ ಮತ್ತು ಮಾನವೀಯ ಮೌಲ್ಯ ತಿಳಿಸಿ ಕೊಡುತ್ತದೆ. ಸಿಂಗಾರ…
ಮಹಿಷ ಮರ್ದಿನಿ ದೇವಾಲಯ ಮೈದಾಳಿ ನಿಲ್ಲಬೇಕಿದ್ದರೆ ಕಡಿಯಾಳಿಯ ಊರು ಕನಿಷ್ಠ ಒಂದು ತಿಂಗಳು ಇದಕ್ಕಾಗಿ ತನ್ನ ನಿದ್ದೆ ಸುಟ್ಟುಕೊಂಡಿದೆ. ಪ್ರತಿನಿತ್ಯ ಸಾವಿರ ಸಾವಿರ ಭಕ್ತರ ಧಾರೆ ದೇಗುಲಕ್ಕೆ ಹರಿದು ಬಂದರೂ ಅಲ್ಲಿನ ಗ್ರಾಮದ ಸ್ವಯಂಸೇವಕರು ಮಾತ್ರ ತೇಲುಗಣ್ಣಿನಲ್ಲಿ ತೇಲಾಡುತ್ತಲೇ ದುಡಿಯುತ್ತಿದ್ದಾರೆ. ತಾಯ ವೈಭವಕ್ಕೆ ಎಳ್ಳಷ್ಟೂ ಕುಂದಾಗಬಾರದು ಎಂಬ ಭಕ್ತಿ ಅವರದಾದರೆ, ಜನ್ಮಜನ್ಮಾಂತರದ ಮಾತೃ ಋಣವನ್ನು ಮಕ್ಕಳು ಈ ಜನ್ಮದಲ್ಲೇ ಕಳೆದು ಪುಣ್ಯ ಭಾಜನರಾಗಲಿ ಎಂಬ ಸಂಕಲ್ಪ ತಾಯಿ ಮಹಿಷಮರ್ದಿನಿಯದ್ದು. ಜೂನ್ ಒಂದನೇ ತಾರೀಕು ದೇಗುಲದ ಸುತ್ತು ಪೌಳಿ ಸಮರ್ಪಣೆಗೆ ಮುಖ್ಯಮಂತ್ರಿ ಆಗಮಿಸಿದ್ದರು. ಅದರ ಹಿಂದಿನ ರಾತ್ರಿ ಎರಡು ಗಂಟೆಯವರೆಗೂ ತಾಮ್ರದ ಮುಚ್ಚಿಗೆ ಹಾಸುವ ಕೆಲಸ ಸಮರೋಪಾದಿಯಲ್ಲಿ ನಡೆಯುತ್ತಿತ್ತು. ಆದರೆ ಇನ್ನೂ 25% ಕೆಲಸ ಬಾಕಿ ಇದ್ದಿದ್ದನ್ನು ನಾನು ಕಂಡಿದ್ದೆ. ದೇವಸ್ಥಾನದ ಮುಂಭಾಗದ ಪ್ರಾಂಗಣದಲ್ಲಿ ಮರಮಟ್ಟುಗಳು ಕಾಂಕ್ರೀಟ್ ಯಂತ್ರಗಳು 10 ಲೋಡಿಗೆ ಆಗುವಷ್ಟು ಸರಕುಗಳು ಅಡ್ಡಾದಿಡ್ಡಿ ಬಿದ್ದಿದ್ದವು. ಶುಚಿತ್ವದ ಕೆಲಸ ಭರದಿಂದ ಸಾಗುತ್ತಿತ್ತು. ಮುಂಜಾನೆಯವರೆಗೂ ಅಕ್ಕಪಕ್ಕದ ಮನೆಯವರಿಗೆ ತಗಡು ಬಡಿಯುವ ಸದ್ದು ಕೇಳಿದೆ.…
ಕಾಡ ಪೂ ತೋಡ ನೀರ್, ಅಂದರೆ ಕಾಡಿನ ಹೂ ಮತ್ತು ತೋಡಿನ ನೀರಿನಿಂದ ನನ್ನನ್ನು ಪೂಜಿಸಿದರೆ ಸಾಕು ನಾನು ಒಲಿಯುತ್ತೇನೆ ಎಂದು ದೈವಗಳು ತಮ್ಮನ್ನು ನಂಬಿದವರಿಗೆ ಅಭಯವನ್ನು ನೀಡಿದ್ದು ಪಾಡ್ದನ ಮೂಲಗಳಲ್ಲಿ ತಿಳಿದು ಬರುತ್ತದೆ. ಅಂದಿನ ಕಾಲದಲ್ಲಿ ಕಾಡ ಹೂ ಮತ್ತು ತೋಡ ನೀರ್ ಅಷ್ಟು ಶುದ್ದ, ಪವಿತ್ರವಾಗಿತ್ತು. ತುಳುನಾಡಿನ ಪ್ರತಿಯೊಂದು ದೈವವು ಅಷ್ಟೇ ಸರಳವಾದ ಪೂಜೆ ಉನ್ನತವಾದ ಭಕ್ತಿಗೆ ಒಲಿಯುತ್ತದೆ ಎಂಬುದು ಪ್ರತೀತಿ. ಆರಂಭದಲ್ಲಿ ಹೊಳೆ, ಕೆರೆಬದಿಯಲ್ಲಿ ಕಾಟು ಕಲ್ಲಿನ ಮೂಲಕವೇ ದೈವಗಳನ್ನು ಆರಾಧಿಸಲಾಯಿತು. ಆದರೆ ಇಂದು ದೈವಗಳಿಗೆ ಖರ್ಚು ಮಾಡುವ ದುಡ್ಡನ್ನು ಲೆಕ್ಕ ಹಾಕಿದಾಗ ಈ ರೀತಿಯ ಆರಾಧನೆ ಬೇಕೆ? ಎಂಬ ಜಿಜ್ಞಾಸೆಯು ಮನಸ್ಸಿನಲ್ಲಿ ಮೂಡಿದರೆ ಅಚ್ಚರಿಯೆನಲ್ಲ. ನನ್ನ ಓರ್ವ ಮಿತ್ರರು ಸಂಕ್ರಮಣದ ಮುಂಚಿನ ದಿನ ಒಂದಷ್ಟು ಹೂಗಳನ್ನು ಹಿಡಿದುಕ್ಕೊಂಡು ಹೋಗುತ್ತಿರುವಾಗ ಹೂ ಯಾಕೆ ? ಎಂದು ಕೇಳಿದೆ. ಅದಕ್ಕೆ ಅವರು ನಾಳೆ ಸಂಕ್ರಮಣ ದೈವಕ್ಕೆ ಹಾಕುವುದಕ್ಕೆ ಹೂ ಬೇಕು ಎಂದರು. ದೈವಕ್ಕೆ ದುಡ್ಡುಕೊಟ್ಟು ಹೂ ಹಾಕುವುದು ಸರಿಯೇ…
ಯುಎಇ ಬಂಟ್ಸ್ ವತಿಯಿಂದ ಬ್ಯಾಡ್ಮಿಂಟನ್ ಮತ್ತು ವಾಲಿಬಾಲ್ ಪಂದ್ಯಾವಳಿಗಳು ಸೆಪ್ಟೆಂಬರ್ 21 ರಂದು ದುಬೈಯ ಅಲ್ ಇತಿಯಾದ್ ಪ್ರೈವೇಟ್ ಶಾಲೆ ಮಮ್ಜಾರ್ ನಲ್ಲಿ ಯಶಸ್ವಿಯಾಗಿ ನಡೆಯಿತು. ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಯುಎಇ ಬಂಟ್ಸ್ ನ ಪೋಷಕರಾದ ಸರ್ವೋತ್ತಮ ಶೆಟ್ಟಿ ಮತ್ತು ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿ ವಕ್ವಾಡಿ ದೀಪವನ್ನು ಬೆಳಗಿಸುವ ಮೂಲಕ ಕ್ರೀಡಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಯುಎಇ ಬಂಟ್ಸ್ ನ ಪದಾಧಿಕಾರಿಗಳಾದ ಪ್ರೇಮನಾಥ್ ಶೆಟ್ಟಿ, ದಿನೇಶ್ ಶೆಟ್ಟಿ ಕೊಟ್ಟಿಂಜ, ರವಿರಾಜ್ ಶೆಟ್ಟಿ, ವಾಸು ಶೆಟ್ಟಿ, ಗುಣಶೀಲ್ ಶೆಟ್ಟಿ, ಕ್ರೀಡಾ ಕಾರ್ಯಕ್ರಮದ ಸಂಘಟಕರಾದ ಸುಪ್ರಜ್ ಶೆಟ್ಟಿ ಉಪಸ್ಥಿತರಿದ್ದರು. ಬೆಳಿಗ್ಗೆಯಿಂದ ರಾತ್ರಿ ಎಂಟು ಗಂಟೆಯವರೆಗೆ ನಡೆದ ಬ್ಯಾಡ್ಮಿಂಟನ್ ಮತ್ತು ವಾಲಿಬಾಲ್ ಪಂದ್ಯಾಟದಲ್ಲಿ ಹದಿನೈದು ವರ್ಷ ಒಳಗಿನ ಹೆಣ್ಮಕ್ಕಳ ಸಿಂಗಲ್ ಪಂದ್ಯಾಟದಲ್ಲಿ ಸಾಂಚಿ ದಯಾಕರ ಶೆಟ್ಟಿ ವಿನ್ನರ್, ಅನ್ನಿ ಶೆಟ್ಟಿ ರನ್ನರ್ ಅಪ್, ಗಂಡಸರ ಸಿಂಗಲ್ ಪಂದ್ಯಾಟದಲ್ಲಿ ಯತಾರ್ಥ್ ಶೆಟ್ಟಿ ವಿನ್ನರ್, ಆಯುಷ್ ಶೆಟ್ಟಿ ರನ್ನರ್ ಅಪ್, ಹದಿನೈದು ವರ್ಷದಿಂದ ಐವತ್ತು…
ನಿಮ್ಮ ಹೃದಯವೇ ನಿಮ್ಮ ಜೀವನ. ಅದನ್ನು ಆರೋಗ್ಯಕರವಾಗಿ ಕಾಯ್ದುಕೊಳ್ಳಲು ತಪಾಸಣೆ ಮತ್ತು ಸರಿಯಾದ ಜೀವನ ಶೈಲಿ ಬಹಳ ಮುಖ್ಯ. ಈ ಶಿಬಿರದ ಮೂಲಕ ನಾವು ಪುತ್ತೂರು ಜನತೆಗೆ ಹೃದಯ ಆರೋಗ್ಯ ಜಾಗೃತಿ ಮೂಡಿಸಲು ಬದ್ಧರಾಗಿದ್ದೇವೆ. ಪ್ರತಿ ವರ್ಷ ಸೆಪ್ಟೆಂಬರ್ 29ರಂದು ಆಚರಿಸಲಾಗುವ ವಿಶ್ವ ಹೃದಯ ದಿನದ ಅಂಗವಾಗಿ ಡಾ. ರೈ ಹೋಮಿಯೋಪಥಿ ಸೆಂಟರ್ ನ ತಜ್ಞ ವೈದ್ಯರು ವಿಶೇಷ ಹೃದಯ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಿದ್ದಾರೆ. ಈ ಶಿಬಿರವು ಸೆಪ್ಟೆಂಬರ್ 27 ರಂದು ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ನಡೆಯಲಿದೆ. ಶಿಬಿರದ ವಿಶೇಷತೆಗಳು: ಉಚಿತ ಬಿ.ಪಿ ತಪಾಸಣೆ, ಉಚಿತ ಹೋಮಿಯೋಪಥಿಕ್ ಸಲಹೆ ಮತ್ತು ಮಾರ್ಗದರ್ಶನ, ರಿಯಾಯಿತಿ ದರದಲ್ಲಿ ಹೋಮಿಯೋಪಥಿಕ್ ಔಷಧಿ ಲಭ್ಯತೆ. ರಕ್ತದೊತ್ತಡ, ಹೆಚ್ಚಿದ ಕೊಲೆಸ್ಟ್ರಾಲ್, ಮಕ್ಕಳ ಆನುವಂಶಿಕ ಹೃದಯ ಕಾಯಿಲೆಗಳು, ಬೊಜ್ಜುತನ, ಉಸಿರಾಟದ ತೊಂದರೆ, ಹೃದಯಾಘಾತ ತಡೆಗಟ್ಟುವ ಮಾರ್ಗಗಳು ಇತ್ಯಾದಿಗಳ ಬಗ್ಗೆ ವಿಶೇಷ ಪ್ರಾಮುಖ್ಯತೆಯನ್ನು ಈ ಶಿಬಿರದಲ್ಲಿ ನೀಡಲಾಗುವುದು ಎಂದು ಪತ್ರಿಕಾ…
ಆಳ್ವಾಸ್ ಪಿಯು ಕಾಲೇಜಿನಲ್ಲಿ ನಡೆದ ನಾಟಾ ಪರೀಕ್ಷೆಯ ಓರಿಯೆಂಟೇಷನ್ ಕಾರ್ಯಕ್ರಮದಲ್ಲಿ ವಾಸ್ತುಶಿಲ್ಪ ಕ್ಷೇತ್ರದ ಭವಿಷ್ಯ ಹಾಗೂ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ಸಮಗ್ರ ಮಾಹಿತಿ ನೀಡಲಾಯಿತು. ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್ನ ನಿರ್ದೇಶಕ ವಿನೋದ್ ರ್ಹಾನ ಮಾತನಾಡಿ, ವಾಸ್ತುಶಿಲ್ಪದಲ್ಲಿ ತಾಂತ್ರಿಕ ಜ್ಞಾನ, ಸೃಜನಶೀಲತೆ ಹಾಗೂ ಕಲಾತ್ಮಕ ಚಿಂತನೆಯ ಸಮನ್ವಯ ಅಗತ್ಯ. ಪಿಯುಸಿ ನಂತರ ವಾಸ್ತುಶಿಲ್ಪ ಪದವಿಗೆ ಪ್ರವೇಶ ಪಡೆಯಲು ದೇಶದಾದ್ಯಂತ ನಡೆಯುವ ನಾಟಾ (NATA) ಹಾಗೂ ಜೆಇಇ ಬಿಆರ್ಕ್ (JEE B.Arch) ಪರೀಕ್ಷೆಗಳ ಮಹತ್ವವನ್ನು ವಿವರಿಸಿದರು. ನಾಟಾ ಪರೀಕ್ಷೆಯಲ್ಲಿ ಗಣಿತ, ರೇಖಾಚಿತ್ರ ದೃಶ್ಯಗ್ರಹಣ ಹಾಗೂ ತಾರ್ಕಿಕ ಚಿಂತನೆಗೆ ಸಂಬಂಧಿಸಿದ ಪ್ರಶ್ನೆಗಳು ಇರಲಿದ್ದು, ವಿದ್ಯಾರ್ಥಿಗಳಿಗೆ ಸಿದ್ಧತೆಗಾಗಿ ಸೂಕ್ತ ಮಾರ್ಗದರ್ಶನ ಒದಗಿಸಿದರು. ಬಿ.ಆರ್ಕ್ ಪದವಿಯ ಕುರಿತು ಮಾತನಾಡಿ, ಈ ಐದು ವರ್ಷದ ಕೋರ್ಸ್ ನಲ್ಲಿ ವಾಸ್ತು ವಿನ್ಯಾಸ, ನಗರ ಯೋಜನೆ, ಪರಿಸರ ಸ್ನೇಹಿ ನಿರ್ಮಾಣ ಮುಂತಾದ ಹಲವು ವಿಷಯಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ. ಬಿ.ಆರ್ಕ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ವಾಸ್ತುಶಿಲ್ಪಿ, ಒಳಾಂಗಣ ವಿನ್ಯಾಸಕರ, ನಗರ ಯೋಜನೆ ಮುಂತಾದ…
ದೇಶ ಕಟ್ಟುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಪಕ್ಷದ ಸಂಘಟನೆಯಲ್ಲಿ ಕಾರ್ಯಕರ್ತರು ಸಕ್ರೀಯವಾಗಿರಬೇಕು. ಭಾ.ಜ.ಪ ಕೇವಲ ರಾಜಕೀಯ ಪಕ್ಷವಾಗಿರದೆ ತತ್ವ ಸಿದ್ದಾಂತದ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಸಕ್ರೀಯವಾಗಿದೆ. 20 ಕೋಟಿಗಿಂತಲೂ ಹೆಚ್ಚು ಸದಸ್ಯರನ್ನು ಹೊಂದಿರುವ ಬಿಜೆಪಿಯು ಜಗತ್ತಿನ ಅತೀ ದೊಡ್ಡ ಸಂಘಟಿತ ರಾಜಕೀಯ ಪಕ್ಷವಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಹೇಳಿದರು. ಅವರು ಮಾಣಿ ಮಹಾಶಕ್ತಿ ಕೇಂದ್ರದ ಅಭ್ಯಾಸ ವರ್ಗ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಶಕ್ತಿ ಕೇಂದ್ರದ ಪ್ರಮುಖ ಹರೀಶ್ ಕುಲಾಲ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಬಂಟ್ವಾಳ ಮಂಡಲ ಕಾರ್ಯದರ್ಶಿ ಸುದರ್ಶನ್ ಬಜ, ಮಾಣಿ ಶಕ್ತಿ ಕೇಂದ್ರದ ಅಧ್ಯಕ್ಷ ಅರವಿಂದ ರೈ, ಪ್ರಧಾನ ಕಾರ್ಯದರ್ಶಿ ನಾಗೇಶ ಭಂಡಾರಿ, ಮಹಿಳಾ ಮೋರ್ಚಾ ಜಿಲ್ಲಾ ಸಮಿತಿ ಸದಸ್ಯೆ ಭವಾನಿ ಶೆಟ್ಟಿ ಉಪಸ್ಥಿತರಿದ್ದರು. ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಪ್ಪ ಪೂಜಾರಿ, ವಿಕಾಸ್ ಪುತ್ತೂರು ಸಂಘಟನೆಯ ಬಗ್ಗೆ ಮಾರ್ಗದರ್ಶನ ನೀಡಿ ವಿಷಯ…