Author: admin

ಮೂಡುಬಿದಿರೆ: ಮಂಗಳೂರು ವಿ.ವಿ ಮತ್ತು ಭುವನೇಂದ್ರ ಕಾಲೇಜು ಕಾರ್ಕಳ ಇದರ ಆಶ್ರಯದಲ್ಲಿ ನಡೆದ ಮಂಗಳೂರು ವಿ.ವಿ. ಅಂತರ ಕಾಲೇಜು ಪುರುಷರ ಮತ್ತು ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಆಳ್ವಾಸ್‌ನ ಪುರುಷ ಮತ್ತು ಮಹಿಳೆಯರ ಬಾಲ್ ಬ್ಯಾಡ್ಮಿಂಟನ್ ತಂಡವು ಸತತ 20ನೇ ಬಾರಿ ಅವಳಿ ಪ್ರಶಸ್ತಿಯನ್ನು ಪಡೆÀದುಕೊಂಡಿದೆ. ಫೈನಲ್ ಪಂದ್ಯಾಟದಲ್ಲಿ ಪುರುಷರ ತಂಡವು ಶ್ರೀ ಭುವನೇಂದ್ರ ಕಾಲೇಜು ತಂಡವನ್ನು ಸೋಲಿಸಿ ಶ್ರೀ ಎಂ.ಕೆ ಅನಂತರಾಜ್ ಮೆಮೋರಿಯಲ್ ರೋಲಿಂಗ್ ಟ್ರೋಫಿಯನ್ನು ಪಡೆದುಕೊಂಡಿದೆ. ಮಹಿಳೆಯರ ತಂಡವು ಎಸ್.ವಿ.ಟಿ ಮಹಿಳಾ ಕಾಲೇಜು ತಂಡವನ್ನು ಸೋಲಿಸಿ ಫೇಬಿಯನ್ ಬಿ ಎನ್ ಕುಲೊಸೊ ಮೆಮೋರಿಯಲ್ ರೋಲಿಂಗ್ ಟ್ರೋಫಿಯನ್ನು ಪಡೆದುಕೊಂಡಿದೆ. ಪುರುಷರ ವಿಭಾಗದಲ್ಲಿ ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿಯನ್ನು ಆಳ್ವಾಸ್‌ನ ಪ್ರಜ್ವಲ್ ಹಾಗೂ ಬೆಸ್ಟ್ ರಿಸಿವರ್ ಪ್ರಶಸ್ತಿಯನ್ನು ಶ್ರೀನಿವಾಸ್ ಪಡೆದುಕೊಂಡರು. ಮಹಿಳೆಯರ ವಿಭಾಗದಲ್ಲಿ ಬೆಸ್ಟ್ ಆಲ್‌ರೌಂಡರ್ ಪ್ರಶಸ್ತಿಯನ್ನು ಆಳ್ವಾಸ್‌ನ ಸಹನಾ ಹಾಗೂ ಬೆಸ್ಟ್ ರಿಸಿವರ್ ಪ್ರಶಸ್ತಿಯನ್ನು ವೇದಾ ಪಡೆದುಕೊಂಡರು. ವಿಜೇತ ಕ್ರೀಡಾಪಟುಗಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ…

Read More

ಕಲಾವಿದರ ಸಂಕಷ್ಟಕ್ಕೆ ಬದ್ದರಾಗಿ ನಿಂತ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿಯವರ ಕಾರ್ಯವೈಖರಿಗೆ ಗುಜರಾತ್ ನ ಕಲಾಭಿಮಾನಿ ಬಂಧುಗಳು ಶಂಕರ್ ಶೆಟ್ಟಿ, ರವಿನಾಥ್ ಶೆಟ್ಟಿ, ಅಜಿತ್ ಶೆಟ್ಟಿ ಹಾಗೂ ರಾಮಚಂದ್ರ ಶೆಟ್ಟಿಯವರ ನೇತೃತ್ವದಲ್ಲಿ ಅನೇಕ ದಾನಿಗಳು ಮುಂದೆ ಬಂದು ಪಟ್ಲ ದಶಮ ಸಂಭ್ರಮಕ್ಕೆ 50 ಲಕ್ಷ ರೂಪಾಯಿ ದೇಣಿಗೆಯನ್ನು ಘೋಷಿಸಿದ್ದಾರೆ. ಯಕ್ಷಧ್ರುವ ದಶಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಬರೋಡ ಶಶಿಧರ ಶೆಟ್ಟಿ ಅವರ ವಿಶೇಷ ಮನವಿಗೆ ಸ್ಪಂದಿಸಿದ ಗುಜರಾತ್ ನ ದಾನಿಗಳಿಗೆ ಪಟ್ಲ ಫೌಂಡೇಶನ್ ಟ್ರಸ್ಟ್ ಯಾವತ್ತೂ ಚಿರಋಣಿಯಾಗಿದೆ ಎಂದು ಕೇಂದ್ರ ಸಮಿತಿಯ ಗೌರವಾಧ್ಯಕ್ಷ ಡಾ| ಕನ್ಯಾನ ಸದಾಶಿವ ಶೆಟ್ಟಿ, ಡಾ| ಪ್ರಕಾಶ್ ಶೆಟ್ಟಿ, ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಬರೋಡ ಶಶಿಧರ ಶೆಟ್ಟಿ ಹಾಗೂ ಪಟ್ಲ ಫೌಂಡೇಶನ್ ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.

Read More

ದೈವ ನೇಮದ ಹದಿನಾರು ಕಟ್ಟು ಕಟ್ಟಲೆಗಳನ್ನು ವಿವರಿಸುವ ಭಕ್ತಿ ಭಾವಪೂರ್ಣ ವಿಶಿಷ್ಠ ಹಾಡೊಂದನ್ನು ಐಲೇಸಾ ದಿ ವಾಯ್ಸ್ ಆಫ್‌ ಓಷನ್‌ [ರಿ] ಸಂಸ್ಥೆ ಧ್ವನಿ ಮುದ್ರಿಸಿ ಚಿತ್ರೀಕರಿಸಿದ್ದು, ಇದೇ ಮೇ 18 ಭಾನುವಾರದಂದು ಬಿಡುಗಡೆ ಮಾಡಲಿದೆ. ಖ್ಯಾತ ಸಾಹಿತಿ, ಮಂಗಳೂರು ವಿಶ್ವ ವಿದ್ಯಾಲಯದ ಮಾಜಿ ಕುಲಸಚಿವ, ಕರ್ನಾಟಕ ಜಾನಪದ ವಿಶ್ವ ವಿದ್ಯಾಲಯದ ಕುಲಪತಿಯಾಗಿದ್ದ ಡಾ. ಚಿನ್ನಪ್ಪ ಗೌಡ ಇವರ ಸಾಹಿತ್ಯವನ್ನು ಖ್ಯಾತ ಸಂಗೀತ ನಿರ್ದೇಶಕ ವಿ ಮನೋಹರ್ ಅವರು ಸಂಗೀತಕ್ಕೆ ಅಳವಡಿಸಿದ್ದು ಮಂಗಳೂರಿನ ಉದಯೋನ್ಮುಖ ಗಾಯಕ ಹರಿಪ್ರಸಾದ್ ಅದ್ಭುತವಾಗಿ ಹಾಡಿದ್ದಾರೆ. ಮುಂಬೈಯ ಸಮಾಜಮುಖಿ ಸೇವಾ ಸಂಸ್ಥೆ ಶಿವಾಯ ಫೌಂಡೇಶನ್ ಈ ಹಾಡನ್ನು ಪ್ರಾಯೋಜಿಸಿ ತುಳು ಜಾನಪದ ಲೋಕಕ್ಕೊಂದು ಭಕ್ತಿಪೂರ್ಣ ಭಾವಗೀತೆಯೊಂದನ್ನು ಕೊಡುಗೆಯಾಗಿ ನೀಡಲಿದ್ದಾರೆ. ಹಾಡು ದೈವ ಆರಾಧನೆಯ ವಿವಿಧ ಕಟ್ಟು ಕಟ್ಟಲೆಗಳನ್ನು ವಿವರಿಸುತ್ತಾ ಲೋಕದ ತುಂಬೆಲ್ಲಾ ಸತ್ಯವನ್ನು ಉಳಿಸು ಎನ್ನುವ ಪ್ರಾಮಾಣಿಕ ಪ್ರಾರ್ಥನೆಯೊಂದಿಗೆ ಸಂಪನ್ನಗೊಳ್ಳುತ್ತದೆ. ನಿಟ್ಟೆ ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಪತಿಗಳಾದ ಡಾ. ಸತೀಶ್ ಕುಮಾರ್ ಭಂಡಾರಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಹಾಡನ್ನು…

Read More

ಈ ಬಾರಿಯ ಮಹಾರಾಷ್ಟ್ರ ಎಸ್ ಎಸ್ ಸಿ ಬೋರ್ಡ್ ಪರೀಕ್ಷೆಯಲ್ಲಿ ಹೊರನಾಡ ಕನ್ನಡಿಗರ ಹೆಮ್ಮೆಯ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಕರ್ನಾಟಕ ಸಂಘ ಡೊಂಬಿವಲಿ ಸಂಚಾಲಿತ ಮಂಜುನಾಥ ವಿದ್ಯಾಲಯ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆಗಳಿಗೆ ಉತ್ತಮ ಫಲಿತಾಂಶ ಬಂದಿದೆ. ಕನ್ನಡ ಮಾಧ್ಯಮದಲ್ಲಿ ಒಟ್ಟು 20 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಶೇ.100 ಪ್ರತಿಶತ ಫಲಿತಾಂಶ ತಂದಿರುತ್ತಾರೆ. ಅವರಲ್ಲಿ 4 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, 8 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 8 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಶೇ. 92 ಅಂಕಗಳೊಂದಿಗೆ ಸ್ನೇಹ ರಾಜು ಭಂಡಾರೆ ಪ್ರಥಮ, ಜಯಂತಿ ತಾರಾಸಿಂಗ್ ಚವ್ಹಾನ್ ಶೇ. 81.40 ಅಂಕಗಳೊಂದಿಗೆ ದ್ವಿತೀಯ, ಅರ್ಜುನ್ ಸುನೀಲ್ ರಾಠೋಡ್ ಶೇ. 79 ಅಂಕಗಳೊಂದಿಗೆ ತೃತೀಯ ಸ್ಥಾನ ಗಳಿಸಿದ್ದಾರೆ.ಆಂಗ್ಲ ಮಾಧ್ಯಮದಲ್ಲಿ ಒಟ್ಟು 139 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 74 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, 54 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಹಾಗೂ 11 ವಿದ್ಯಾರ್ಥಿಗಳು ದ್ವಿತೀಯ…

Read More

ಭಾರತೀಯ ರಕ್ಷಣಾ ಪಡೆಗಳಿಗೆ ಸೇರಿ ದೇಶ ಸೇವೆ ಮಾಡ ಬಯಸುವ ನಾಗರಿಕರಿಗೆ ಅನುಕೂವಾಗುವ ನಿಟ್ಟಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರತಿಷ್ಠಿತ ತರಬೇತಿ ಸಂಸ್ಥೆಯಾಗಿರುವ ವಿದ್ಯಾಮಾತಾ ಅಕಾಡೆಮಿಯಲ್ಲಿ ಪ್ರಾದೇಶಿಕ ಸೇನಾ ನೇಮಕಾತಿ(TA) ಪರೀಕ್ಷೆಗಳಿಗೆ ಪೂರ್ವ ಸಿದ್ದತಾ ತರಬೇತಿ ಪ್ರಾರಂಭವಾಗಿದ್ದು, ದಾಖಲಾತಿ ಪ್ರಕ್ರಿಯೆ ಮುಂದುವರೆದಿದೆ. ಈಗಾಗಲೇ ರಕ್ಷಣಾ ಪಡೆಗಳ ನೇಮಕಾತಿಗಳಲ್ಲಿ ಭರ್ಜರಿ ಯಶಸ್ಸನ್ನು ಪಡೆದು ಮುನ್ನಡೆಯುತ್ತಿರುವ ವಿ. ಅಕಾಡೆಮಿಯಲ್ಲಿ ಪ್ರಾದೇಶಿಕ ಸೇನಾ ನೇಮಕಾತಿ (Teritorial Army)ಯ ಪೂರ್ವ ಸಿದ್ದತಾ ತರಬೇತಿ ಪ್ರಾರಂಭವಾಗಿದ್ದು, ತರಬೇತಿಯು ಲಿಖಿತ ಪರೀಕ್ಷೆ ಮತ್ತು ಮೈದಾನ ತರಬೇತಿಯನ್ನು ಒಳಗೊಂಡಿದ್ದು ಲಿಖಿತ ಪರೀಕ್ಷೆಯ ತರಬೇತಿಯು ನೇರ ತರಗತಿ/ಆನ್ಲೈನ್ ತರಗತಿಯ ಮೂಲಕ ನಡೆಯಲಿದೆ. ಮೈದಾನ ತರಬೇತಿಯು ನೇರ ತರಗತಿಯ ಮೂಲಕ ಮಾತ್ರ ನಡೆಯುತ್ತದೆ (ಈ ಕುರಿತಂತೆ ಹೆಚ್ಚಿನ ಮಾಹಿತಿಯನ್ನು ದಾಖಲಾತಿ ಪ್ರಕ್ರಿಯೆಯ ಸಂದರ್ಭದಲ್ಲಿ ತಿಳಿಸಲಾಗುತ್ತದೆ). ಈ ನೇಮಕಾತಿಗೆ ಸಂಬಂದಿಸಿದ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದ್ದು,T A ನೇಮಕಾತಿಗಳಲ್ಲಿ ವಿವಿಧ ಹಂತಗಳಿದ್ದು, SSLC, PUC, DEGREE ವಿದ್ಯಾರ್ಹತೆಗಳಿಗೆ ಸಂಬಂಧಿಸಿದಂತೆ ನೇಮಕಾತಿ ನಡೆಯಲಿದ್ದು ಈ ಎಲ್ಲಾ ವಿದ್ಯಾರ್ಹತೆಗೆ…

Read More

ಯಕ್ಷಗಾನ ಕ್ಷೇತ್ರದ ಚರಿತ್ರ ನಟ, ರಾಜ್ಯ- ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಮೇರು ಕಲಾವಿದ ದಿ| ಅಳಿಕೆ ರಾಮಯ್ಯ ರೈ ಅವರ ಹೆಸರಿನಲ್ಲಿ ಬೆಂಗಳೂರಿನ ಅಳಿಕೆ ರಾಮಯ್ಯ ರೈ ಸ್ಮಾರಕ ಟ್ರಸ್ಟ್ ಪ್ರತಿ ವರ್ಷ ನೀಡುವ ಅಳಿಕೆ ಯಕ್ಷ ಸಹಾಯ ನಿಧಿಗೆ 2024 – 25 ನೇ ಸಾಲಿಗೆ ಹಿರಿಯ ಯಕ್ಷಗಾನ ಕಲಾವಿದ, ತೆಂಕುತಿಟ್ಟಿನ ಬಣ್ಣದ ವೇಷಧಾರಿ ಸಿದ್ಧಕಟ್ಟೆ ಸದಾಶಿವ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ. ಯಕ್ಷಗಾನ ವಿದ್ವಾಂಸರಾದ ಡಾ. ಎಂ.ಪ್ರಭಾಕರ ಜೋಶಿ, ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮತ್ತು ಹಿರಿಯ ಕಲಾವಿದ ಉಬರಡ್ಕ ಉಮೇಶ ಶೆಟ್ಟಿ ಅವರನ್ನೊಳಗೊಂಡ ಸಲಹಾ ಸಮಿತಿಯ ಸೂಚನೆಯಂತೆ ಸಂಕಷ್ಟದಲ್ಲಿರುವ ಯಕ್ಷಗಾನ ಕಲಾವಿದ ಸದಾಶಿವ ಶೆಟ್ಟಿಗಾರ್ ಅವರಿಗೆ ಸಹಾಯ ನಿಧಿ ನೀಡಲಾಗುವುದು ಎಂದು ಅಳಿಕೆ ರಾಮಯ್ಯ ರೈ ಪುತ್ರ ಹಾಗೂ ಟ್ರಸ್ಟ್ ಸಂಚಾಲಕ ಅಳಿಕೆ ದುರ್ಗಾ ಪ್ರಸಾದ್ ರೈ ಅವರು ಮೇ 15 ರಂದು ನಗರದ ಪತ್ರಿಕಾ ಭವನದಲ್ಲಿ ಜರಗಿದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ. ಟ್ರಸ್ಟ್ ಸಲಹಾ ಸಮಿತಿ ಸಂಚಾಲಕ ಪ್ರೊ.…

Read More

ಖೇಲೋ ಇಂಡಿಯಾ 2025 ರಲ್ಲಿ ಭಾಗವಹಿಸಿದ ಮಂಗಳೂರು ಬಂಟ್ಸ್‌ ಹಾಸ್ಟೆಲ್‌ ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಚಿಂತನ್ ಎಸ್. ಶೆಟ್ಟಿ ಈಜು ಚಾಂಪಿಯನ್‌ಶಿಪ್‌ನಲ್ಲಿ 2 ಚಿನ್ನ ಮತ್ತು 4 ಬೆಳ್ಳಿ ಪದಕಗಳನ್ನು ಗೆದ್ದು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾರೆ.ಮೇ 5 ರಿಂದ ಮೇ 9 ರವರೆಗೆ ಬಿಹಾರದ ಗಯಾದಲ್ಲಿ ಖೇಲೋ ಇಂಡಿಯಾ 2025 ನಡೆದಿದ್ದು, ಅದರಲ್ಲಿನ ಈಜು ಚಾಂಪಿಯನ್‌ಶಿಪ್‌ನಲ್ಲಿ ಚಿಂತನ್ ಎಸ್. ಶೆಟ್ಟಿ ಸ್ಪರ್ಧಿಸಿ 2 ಚಿನ್ನ ಮತ್ತು 4 ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಬೆಂಗಳೂರಿನ ಸರ್ಜಾಪುರದ ಲಕ್ಷ್ಯನ್ ಅಕಾಡೆಮಿ ಆಫ್ ಸ್ಪೋರ್ಟ್ಸ್ ನ ಕೋಚ್, ನಿರೂಪ್ ಮತ್ತು ರೋಹಿತ್ ಅವರಿಂದ ತರಬೇತಿ ಪಡೆಯುತ್ತಿರುವ ಚಿಂತನ್‌ ಶೆಟ್ಟಿ ಶಶಿಧರ್ ಶೆಟ್ಟಿ ಮತ್ತು ಹರಿಣಾಕ್ಷಿ ಶೆಟ್ಟಿ ಅವರ ಪುತ್ರ.

Read More

ಬೊಳ್ಳಿ ಮೂವೀಸ್ ಮತ್ತು ಅವಿಕಾ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗುತ್ತಿರುವ “ಟಾಸ್” ತುಳು ಮತ್ತು ಕನ್ನಡ ಚಲನಚಿತ್ರದ ಮುಹೂರ್ತ ಸಮಾರಂಭ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಜರಗಿತು. ಶರವು ಶ್ರೀ ಮಹಾಗಣಪತಿ ದೇವಸ್ಥಾದ ಪ್ರಧಾನ ಅರ್ಚಕರಾದ ರಾಘವೇಂದ್ರ ಶಾಸ್ತ್ರಿ ಆಶೀರ್ವಚನ ನೀಡಿದರು. ಡಾ| ದೇವದಾಸ ಕಾಪಿಕಾಡ್, ವಿಜಯಕುಮಾರ್ ಕೊಡಿಯಾಲ್ ಬೈಲ್, ಸುತ್ತೇಜ್ ಶೆಟ್ಟಿ, ಕ್ಯಾಟ್ಕಾದ ಅಧ್ಯಕ್ಷ ಲಂಚೂಲಾಲ್, ಶರ್ಮಿಳಾ ಕಾಪಿಕಾಡ್, ಶೋಭರಾಜ್ ಪಾವೂರು, ಬಾಳ ಜಗನ್ನಾಥ ಶೆಟ್ಟಿ, ಮಣಿಕಾಂತ್ ಕದ್ರಿ, ಅನೂಪ್ ಸಾಗರ್, ಯತೀಶ್ ಪೂಜಾರಿ, ನಿತೇಶ್ ಸುವರ್ಣ, ಕೃತಿ ಶೆಟ್ಟಿ, ಚೈತ್ರ ಶೆಟ್ಟಿ ಉಪಸ್ಥಿತರಿದ್ದರು.ರಾಜ್ಯ ಪ್ರಶಸ್ತಿ ಪುರಸ್ಜೃತ ತೆಲಿಕೆದ ಬೊಳ್ಳಿ ಡಾ| ದೇವದಾಸ್ ಕಾಪಿಕಾಡ್ ರಚನೆ ಸಂಭಾಷಣೆ, ಅರ್ಜುನ್ ಕಾಪಿಕಾಡ್ ನಿರ್ದೇಶನ ಮತ್ತು ಅಭಿನಯದ ಟಾಸ್ ಸಿನಿಮಾದ ಚಿತ್ರೀಕರಣ ಎರಡು ಹಂತಗಳಲ್ಲಿ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ. ತಾರಾಗಣದಲ್ಲಿ ಡಾ| ದೇವದಾಸ್ ಕಾಪಿಕಾಡ್, ಅರ್ಜುನ್ ಕಾಪಿಕಾಡ್, ನವೀನ್ ಡಿ ಪಡೀಲ್, ಭೋಜರಾಜ್ ವಾಮಂಜೂರ್, ಅರವಿಂದ್…

Read More

ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರಿ ಆಫ್ ಇಂಡಿಯಾ (ಅSಇಇಖಿ) ರವರು 03 ಮೇ, 2025 ರಲ್ಲಿ ನಡೆಸಿದ ಅSಇಇಖಿ ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಮಿಥುನಶ್ರೀ 164 ಮತ್ತು ಸುವರ್ಣ ಹರ್ಷಲ್ ವೈ 162 ಅಂಕಗಳೊಂದಿಗೆ ವಿಶಿಷ್ಟ ಸಾಧನೆಗೈದಿದ್ದಾರೆ. ವಿದ್ಯಾರ್ಥಿಗಳಾದ ಹಾರಿಕ ಗೌಡ ಆರ್. ಬಿ.(153), ಇಯಾನ್ ಪೌಲ್(147), ಬಸವ ಪ್ರಸಾದ್ ಕಾಜಿ(142), ಪೂರ್ಣ ಭಟ್ ಕೆ.ಎಲ್(141), ಸೃಜನ್ ಎಸ್.ಭಟ್(140), ಲಿಖಿತ್ ರೆಡ್ಡಿ ಎಚ್.ಎಂ(140), ರಕ್ಷಿತಾ ಆರ್.ಕಾಮತ್(135), ರೇಷ್ಮಾ ಜಿ.ಕೆ.(135) ಅಭಿಷೇಕ್ ಉಮಾದಿ(131), ಕೀರ್ತಿ ಪೈ(129), ಶ್ರದ್ಧಾ ಪಿ.ಅಂಗಡಿ(125), ಎಚ್.ಎ ಅದನ್ ಬೆಳ್ಳಿಯಪ್ಪ(125), ಪ್ರಭವ್ ಜಿ. ಶೆಟ್ಟಿ(121), ಆರ್ಯ ಬಿ.ವಿ(120), ಅಪ್ಸರ್ ಪಾಹಿಮ್(120), ಧನ್ಯಶ್ರೀ ಶೆಟ್ಟಿ(119), ಸೌರವ್ ರವಿ ಶೇಟ್(116), ಪೃಥ್ವಿ ಜಾಜಿ(115), ಸಾತ್ವಿಕ್ ಯು.ಆರ್(114), ಕನಿಷ್ಕ ಸೇನ್ ಎಸ್(113), ಸಪಲಿಗ ಸ್ವಾತಿ ತಿಮ್ಮಪ್ಪ(111), ಶ್ರೀಕಾರ್ ದುಬೀರ(111), ವಜ್ರ ಗೌಡ(110), ಶ್ರೇಯಸ್ ವಿ.ರೆಡ್ಡಿ(110), ಅನನ್ಯ ರಾಜೇಶ್(109, ಬಿಪಿನ್ ಗೌಡ(108), ಎಸ್. ನಂದನ್(106), ವಿ.ಎಸ್. ವೈಭವ್(105), ಕೆ.ವೈ ದಿಲೀಪ್(103),…

Read More

ಪಟ್ಲ ಸತೀಶ್ ಶೆಟ್ಟಿಯವರ ಮೇಲಿನ ಅಭಿಮಾನದಿಂದ ಮತ್ತು ನಿರಂತರ ಅವರು ಮಾಡುತ್ತಿರುವ ಸಮಾಜ ಸೇವೆಯನ್ನು ನೋಡಿ ಭಾವುಕರಾಗಿ ಮುಂಬೈ ಉದ್ಯಮಿ, ಸಮಾಜ ಸೇವಕ ಕುಸುಮೋದರ ಡಿ. ಶೆಟ್ಟಿಯವರು 1 ಕೋಟಿ ರೂಪಾಯಿಗಳ ಬೃಹತ್ ದೇಣಿಗೆಯನ್ನು ಘೋಷಿಸಿ ಫೌಂಡೇಶನ್ ನ ಮಹಾದಾನಿಗಳಲ್ಲೊರ್ವರಾಗಿ ಕಲೆ, ಕಲಾವಿದರ ಆಶೋತ್ತರಗಳಿಗೆ ಸ್ಪಂದಿಸುವಲ್ಲಿ ಮುಂದಾಗಿದ್ದಾರೆ. ಸ್ನೇಹಪರ ಧೋರಣೆ, ಔಧಾರ್ಯತೆ, ಸಾಮಾಜಿಕ ಕಳಕಳಿ ಎಲ್ಲದಕ್ಕೂ ಮಿಗಿಲಾಗಿ ನಿರಾಡಂಬರದ ಸರಳ, ಸಜ್ಜನಿಕೆಯ, ನೇರ ನಡೆನುಡಿಯ ಸಹೃದಯಿ ವ್ಯಕ್ತಿಯಾಗಿ, ಛಲಗಾರರಾಗಿ ತಮ್ಮ ಪ್ರಾಮಾಣಿಕ ನಿಲುವುಗಳಿಂದ ಸಮಾಜಕ್ಕೆ ಮಾದರಿಯಾಗಿ ಬದುಕುತ್ತಿರುವ ಕರ್ನಾಟಕ ರಾಜ್ಯೋತ್ಸವ ಪುರಸ್ಕೃತರಾದ ಕುಸುಮೋದರ ಶೆಟ್ಟಿಯವರು ತಮ್ಮ ಬದುಕನ್ನೇ ಸಮಾಜ ಸೇವೆಗಾಗಿ ಮೀಸಲಿಟ್ಟವರು. ಜನ ಸಾಮಾನ್ಯರ ಕಲ್ಯಾಣಕ್ಕಾಗಿ ತಮ್ಮ ತಾಯಿಯ ಹೆಸರಿನಲ್ಲಿ ಭವಾನಿ ಫೌಂಡೇಶನ್ ಟ್ರಸ್ಟ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಅದರ ಮೂಲಕ ಸಾವಿರಾರು ಮಂದಿ ಅಶಕ್ತ ಕುಟುಂಬದ ಬಾಳಿಗೆ ಬೆಳಕಾದವರು. ವೈದ್ಯಕೀಯ ನೆರವು, ವಿಧವಾ ವೇತನ, ಬಡ ಹೆಣ್ಮಕ್ಕಳ ಮದುವೆಗೆ ನೆರವು, ಶೈಕ್ಷಣಿಕ ನೆರವು, ಅಶಕ್ತರ ಮನೆ ನಿರ್ಮಾಣಕ್ಕೆ ನೆರವು ಸೇರಿದಂತೆ…

Read More