Author: admin

ರೋಟರಿ ಹಾಗೂ ರೋಟರಿ ಆನ್ಸ್ ಕ್ಲಬ್ ಕಾರ್ಕಳವು ಅರುಣೋದಯ ಸ್ಪೆಷಲ್ ಸ್ಕೂಲ್ ಕಾರ್ಕಳದಲ್ಲಿ “ದೇವರ ಮಕ್ಕಳೊಂದಿಗೆ ನಮ್ಮ ಸಮಯ” ಎಂಬ ವಿಶೇಷ ಸೇವಾ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಂಡಿತ್ತು. ಪ್ರಿಸಿಲ್ಲಾ ಪೆರೇರಾ ಅವರು ಸ್ನೇಹಭಾವದ ಸ್ವಾಗತ ಭಾಷಣದೊಂದಿಗೆ ಆರಂಭಿಸಿದರು. ಕಾರ್ಯಕ್ರಮವನ್ನು ಶಾಲೆಯ ಶಿಕ್ಷಕಿ ಶ್ರೀಮತಿ ಕಾಂತಮ್ಮ ಅವರು ಮನೋಹರವಾಗಿ ನಿರೂಪಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ರೋಟೇರಿಯನ್ ರೇಖಾ ಉಪಾಧ್ಯಾಯ ಅವರು ಆಗಮಿಸಿ ಮಕ್ಕಳಿಗೆ ಪ್ರೋತ್ಸಾಹದ ಸಂದೇಶ ನೀಡಿ, ಸಮಾಜದಲ್ಲಿ ವಿಶೇಷ ಮಕ್ಕಳ ಅಭಿವೃದ್ದಿಗೆ ಅಗತ್ಯವಿರುವ ಸಂವೇದನೆ ಮತ್ತು ಸಹಕಾರದ ಮಹತ್ವವನ್ನು ವಿವರಿಸಿದರು. ಮುಖ್ಯ ಅತಿಥಿಗಳ ಪರಿಚಯವನ್ನು ಆನ್. ಜ್ಯೋತಿ ಚೇತನ್ ಅವರು ಮನೋಜ್ಞವಾಗಿ ಮಂಡಿಸಿದರು. ಆನ್ಸ್ ಅಧ್ಯಕ್ಷೆ ಜಯಂತಿ ಆನಂದ್ ನಾಯಕ್ ರವರು ಮಕ್ಕಳ ಬಗ್ಗೆ ಪ್ರೋತ್ಸಾಹದ ಮಾತುಗಳನ್ನಾಡಿ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷರಾದ ಕೆ. ನವೀನ್ ಚಂದ್ರ ಶೆಟ್ಟಿ ಅವರು ಮಕ್ಕಳೊಂದಿಗೆ ಸಂವಾದಿಸಿ, ಅವರ ಪ್ರತಿಭೆಯನ್ನು ಶ್ಲಾಘಿಸಿ, ಪ್ರೋತ್ಸಾಹದ ಮಾತು ಹೇಳಿದರು. ಸಮಾರಂಭದಲ್ಲಿ ಅಗತ್ಯ ವಸ್ತುಗಳನ್ನು ಮಕ್ಕಳಿಗೆ…

Read More

ಮುಂಬೈ: ಮುಂಬೈ ಒಂದು ಬಹುಭಾಷಿಕ ನಗರ. ಇದು ಸ್ವಾತಂತ್ರ್ಯದ ಅನುಭವ ನೀಡುವ ನಗರವೂ ಹೌದು. ಬಲ್ಲಾಳರ ಕತೆ, ಕಾದಂಬರಿಗಳ ಮೂಲಕ ಮುಂಬೈಗೆ ಕಾಲಿಡುವ ಮುನ್ನವೇ ಪ್ರವೇಶಿಸಿದ್ದೇನೆ. ಎಪ್ಪತ್ತರ ದಶಕದಲ್ಲಿ ಹದಿನೆಂಟು ಕನ್ನಡ ಮಾಧ್ಯಮ ರಾತ್ರಿಶಾಲೆಗಳಿದ್ದವು. ಇಲ್ಲಿ ಕಲೆಕ್ಟಿವ್ ಪೇರೆಂಟಿಂಗಿನ ( ಸಾಮೂಹಿಕ ಪಾಲನೆಯ) ಅನುಭವವಾಗುತ್ತದೆ. ಇಲ್ಲಿ ಹುಟ್ಟಿದವರಿಗೆ ಗೊತ್ತಿರದ ಅನುಭವ ಹೊರಗಿನಿಂದ ವಲಸೆ ಬಂದವರಿಗೆ ಗೊತ್ತಿರುತ್ತದೆ. ಮುಂಬೈ ಕನ್ನಡ ಕುಟುಂಬ ಸಾಮಾಜಿಕ ಋಣದ ಕುಟುಂಬ. ಹಿರಿಯರ ಋಣದಲ್ಲಿ ನಾವು ಬೆಳೆದಿದ್ದೇವೆ.‌ ಇಂದು ನಾವು ಅನೇಕ ಬರಹಗಾರರ ಶತಮಾನೋತ್ಸವವನ್ನು ಆಚರಿಸುತ್ತಿದ್ದೇವೆ.  ದಿನಕರ ದೇಸಾಯಿ, ವಿ.ಜಿ. ಭಟ್ಟ ಅವರು ಮೊದಲ ಬಂಡಾಯ ಕವಿಗಳು. ಬಲ್ಲಾಳ, ಚಿತ್ತಾಲ, ಕಟ್ಟೀಮನಿ, ನಿರಂಜನ ಮೊದಲಾದವರದು ಸಮಾಜಶೀಲ ಬರೆವಣಿಗೆ. ಮಿತ್ರಾ ವೆಂಕಟ್ರಾಜ್ ಅವರಿಗೆ ಬಲ್ಲಾಳ ಪ್ರಶಸ್ತಿ ಸಂದಿರುವುದು ಮತ್ತು ಅವರ ಉಪಸ್ಥಿತಿ ಇರುವುದು ಸಂತಸದ ಸಂಗತಿ ಎಂದು ಹಿರಿಯ ಕವಿ, ಲೇಖಕ ಜಯಂತ ಕಾಯ್ಕಿಣಿ ನುಡಿದರು. ಅವರು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮತ್ತು ವ್ಯಾಸರಾಯ ಬಲ್ಲಾಳ ಪ್ರತಿಷ್ಠಾನ ಮುಂಬೈ…

Read More

ಬಂಟ್ಸ್ ಅಸೋಸಿಯೇಷನ್ ಪುಣೆಯ 13ನೇ ವಾರ್ಷಿಕ ಕ್ರೀಡೋತ್ಸವವು ಡಿಸೆಂಬರ್ 7ರಂದು ಪುಣೆಯ ಸಾಳುಂಕೆ ವಿಹಾರ್ ರೋಡ್‍ನ ಬ್ಯಾಂಕ್ ಆಫ್ ಮಹಾರಾಷ್ಟ್ರಲೇನ್, ವಾನ್ವೋರಿಯರೇಸ್ ಸ್ಪೋಟ್ಸ್ ಕ್ರೀಡಾ ಸಂಕುಲದಲ್ಲಿ ವೈವಿಧ್ಯಮಯ ಕ್ರೀಡಾ ಸ್ಪರ್ಧೆಗಳೊಂದಿಗೆ ಜರಗಲಿದೆ. ಪುಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ರೋಹಿತ್ ಶೆಟ್ಟಿ ನಗ್ರಿಗುತ್ತು ಅಧ್ಯಕ್ಷತೆಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಹಡಪ್ಸರ್ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮಹಾದೇವ ಅಣ್ಣಾ ಬಾಬರ್, ಗೌರವ ಅತಿಥಿಯಾಗಿ ಪುಣೆ ಬಂಟರ ಸಂಘದ ಮ್ಯಾರೇಜ್ ಬ್ಯುರೋ ಸಮಿತಿಯ ಕಾರ್ಯಾಧ್ಯಕ್ಷ, ಪುಣೆ ತುಳುಕೂಟದ ಉಪಾಧ್ಯಕ್ಷ, ಸಮಾಜಸೇವಕ ಮಾಧವ ಆರ್. ಶೆಟ್ಟಿ ಭಾಗವಹಿಸಲಿದ್ದಾರೆ. ಅಸೋಸಿಯೇಷನ್ ನ ಕ್ರೀಡಾ ಕಾರ್ಯಾಧ್ಯಕ್ಷ ರಕ್ಷಿತ್ ಶೆಟ್ಟಿಯವರ ನೇತೃತ್ವದಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ಅಸೋಸಿಯೇಷನ್ ನ ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಸರ್ವ ಸಮಿತಿ ಪದಾಧಿಕಾರಿಗಳ ಸಹಕಾರದೊಂದಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಸಂದರ್ಭ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್‍ನಲ್ಲಿ ಚಿನ್ನದ ಪದಕ…

Read More

ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ಡಿಸೆಂಬರ್ 19, 20 ಮತ್ತು 21 ರಂದು ಸುರತ್ಕಲ್ ಬಂಟರ ಭವನದ ಆವರಣದಲ್ಲಿ “ಪರ್ವ -2025” ಸೀರೆ ಮೇಳ, ಲೈಫ್ ಸ್ಟೈಲ್ ಮತ್ತು ಫುಢ್ ಫೆಸ್ಟಿವೆಲ್ ನಡೆಯಲಿದೆ. ಡಿಸೆಂಬರ್ 20 ರಂದು ಶನಿವಾರ ಸಂಜೆ 7 ಕ್ಕೆ ಚಂದ್ರಕಲಾ ಸದಾನಂದ ರೈ ಸಾರಥ್ಯದ ಪೆರ್ಮೆದ ಕಲಾವಿದೆರ್ ಚೇಳಾರ್ ತಂಡದಿಂದ ರಾಮಚಂದ್ರ ಶೆಟ್ಟಿ ತಡಂಬೈಲ್ ರವರ ಕಥೆ, ಸುಕೇಶ್ ಶೆಟ್ಟಿ ಖಂಡಿಗೆ ನಿರ್ದೇಶನದ “ಎನ್ನಿಲೆಕ್ಕ ಇಜ್ಜೆರ್” ತುಳು ಹಾಸ್ಯ ನಾಟಕ ಪ್ರದರ್ಶನಗೊಳ್ಳಲಿದೆ. ಡಿಸೆಂಬರ್ 21 ರಂದು ಸಂಜೆ 6 ಗಂಟೆಗೆ ವಿಶ್ವಾಸ್ ಮ್ಯೂಸಿಕಲ್ ಮಂಗಳೂರು ತಂಡದಿಂದ “ಸಂಗೀತ ರಸ ಮಂಜರಿ”, ಬಳಿಕ 7 ಗಂಟೆಗೆ ಉಮೇಶ್ ಮಿಜಾರ್ ಸಾರಥ್ಯದ ನಮ್ಮ ಕಲಾವಿದೆರ್ ಬೆದ್ರ ತಂಡದಿಂದ ಈ ವರ್ಷದ ಸೂಪರ್ ಹಿಟ್ ಹಾಸ್ಯ ನಾಟಕ “ವೈರಲ್ ವೈಶಾಲಿ” ಪ್ರದರ್ಶನಗೊಳ್ಳಲಿದೆ. ಡಿ. 20 ಮತ್ತು 21 ರಂದು ಸಂಜೆ ನಾಲ್ಕು ಗಂಟೆಯಿಂದ ರಾತ್ರಿ ಹತ್ತರ ತನಕ…

Read More

ವಾಮದಪದವು ವಲಯ ಬಂಟರ ಸಂಘದ ಯುವ ಬಂಟರ ಸಂಘದ ವತಿಯಿಂದ ಡಿಸೆಂಬರ್ 20 ರಂದು ನಡೆಯುವ ಯುವ ಬಂಟ ವೈಭವ- 2025 ರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಸಂಘದ ಆಲದ ಪದವಿನ ನಿವೇಶನದಲ್ಲಿ ನಡೆಯಿತು. ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ, ಬಂಟ್ವಾಳ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಗೋಕುಲ್ ಭಂಡಾರಿ, ವಾಮದಪದವು ವಲಯದ ಅಧ್ಯಕ್ಷ ವಸಂತ್ ಶೆಟ್ಟಿ ಕೇದಗೆ, ಸಿದ್ದಕಟ್ಟೆ ವಲಯ ಬಂಟರ ಸಂಘದ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ಮತ್ತು ಕಿಶೋರ್ ಕುಮಾರ್ ಭಂಡಾರಿ ಬೆಳ್ಳೂರು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಯಶ್ವಿನ್ ಡಿ ಶೆಟ್ಟಿ ಕಡ್ತಲಬೆಟ್ಟು ಗುತ್ತು, ಭಾಸ್ಕರ್ ಶೆಟ್ಟಿ ಗಂಟಾರಬೆಟ್ಟು,ಕೊಡಂಗೆ ಕಂಬಳ ಸಮಿತಿಯ ಕಾರ್ಯದರ್ಶಿ ಶಶಿಧರ್ ಶೆಟ್ಟಿ ಕಲ್ಲಾಪು, ಸಂಪತ್ ಶೆಟ್ಟಿ ಪಣಕಜೆ ಭಾಗವಹಿಸಿದ್ದರು. ವಲಯ ಸಮಿತಿ ಉಪಾಧ್ಯಕ್ಷರಾದ ಯಶೋಧರ ಶೆಟ್ಟಿ ದಂಡೆ, ರಮೇಶ್ ಶೆಟ್ಟಿ ವಾಮದಪದವು ಪ್ರದಾನ ಕಾರ್ಯದರ್ಶಿ ಗಂಗಾಧರ ಶೆಟ್ಟಿ,ಕೋಡ್ಯೇಲು ಬಾಳಿಕೆ, ಕೋಶಾಧಿಕಾರಿ ವಸಂತ್ ಶೆಟ್ಟಿ ಪಿಂಗಾರ ಫಾರ್ಮ್, ವಾಮದಪದವು ವಲಯದ ಮಹಿಳಾ…

Read More

ಮನುಷ್ಯನ ಜೀವನ ಪಯಣವನ್ನು ಸುಲಭ ಸೂಕ್ಷ್ಮವಾಗಿ ತಿಳಿಸುವ ತತ್ವ ಸತ್ವದ ವಿ ಮನೋಹರ್ ಸಾಹಿತ್ಯವನ್ನು ಅವರೇ ಸಂಗೀತಕ್ಕೆ ಅಳವಡಿಸಿದ ಹಾಡನ್ನು ಐಲೇಸಾ ಇದೇ ಭಾನುವಾರ ಸಂಜೆ 7:30 ಗಂಟೆಗೆ ಜೂಮ್ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ಹಾಡನ್ನು ಐಲೆಸಾದ ಯುವ ಗಾಯಕ ಆತ್ಮರಾಮ್ ಆಳ್ವ ಮಧುರವಾಗಿ ಹಾಡಿದ್ದಾರೆ. ತುಳುವನಾಡಿನ ಸಾಹಸಿ ಮೊಗವೀರರ ಜೀವನ ಶೈಲಿಯ ಪರಿಭಾಷೆಯಲ್ಲಿ ಜೀವನ ದೃಷ್ಟಿಯನ್ನು ಹೇಳುತ್ತಾ ಸಾಗುವ ಹಾಡು ನಿರಾಯಾಸದ ಸೀದಾ ಸಾದಾ ಜೀವನ ನಡೆಸಬೇಕು ಮತ್ತು ಭೇದವಿಲ್ಲದೆ ನಮ್ಮನ್ನು ಸಲಹುವ ಪ್ರಕೃತಿಯನ್ನು, ನದಿಗಳನ್ನು ತಾಯಿಯಂತೆ ಪ್ರೀತಿಸಬೇಕು ಎನ್ನುವ ಸಂದೇಶದೊಂದಿಗೆ ಕೊನೆಗೊಳ್ಳುತ್ತದೆ. ಸದಾ ಐಲೇಸಾದ ಕೆಲಸಗಳನ್ನು ಪ್ರೀತಿಯಿಂದ ಮತ್ತು ಅಭಿಮಾನದಿಂದ ಪ್ರೋತ್ಸಾಹಿಸುತ್ತಾ ಬಂದಿರುವ ಸೌದಿಯ ನರೇಂದ್ರ ಶೆಟ್ಟಿ ಮತ್ತು ಸುಮನಾ ನರೇಂದ್ರ ಶೆಟ್ಟಿ ದಂಪತಿಗಳು ಹಾಡನ್ನು ಪ್ರಾಯೋಜಿಸಿದ್ದು, ಬಹರೈನ್ ಮೊಗವೀರ ಸಂಘದ ಅಧ್ಯಕ್ಷೆ ಶಿಲ್ಪಾ ಶಮೀತ್ ಕುಂದರ್ ಬಿಡುಗಡೆಗೊಳಿಸಿ ಮುಖ್ಯ ಅತಿಥಿಯಾಗಿ ಮಾತಾಡಲಿದ್ದಾರೆ. ಹಾಡಿನ ಕರೋಕೆಯನ್ನು ಮತ್ತೊಬ್ಬ ಅತಿಥಿ ಬಹರೈನ್ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ ಬಿಡುಗಡೆ ಮಾಡುತ್ತಾರೆ.…

Read More

ಅದು 1919 ರ ಎಪ್ರಿಲ್ 13. ಪಂಜಾಬಿನ ನೆತ್ತಿಯ ಮೇಲೆ ಸುಡು ಬಿಸಿಲು. ಆದರೆ ಜಲಿಯನ್ ವಾಲಾಬಾಗ್ ಮೈದಾನದಲ್ಲಿ ಬ್ರಿಟಿಷ್ ದಬ್ಬಾಳಿಕೆಯ ವಿರುದ್ದ ಪ್ರತಿಭಟನೆ ನಡೆಸುತ್ತಿದ್ದವರಿಗೆ ಬಿಸಿಲ ಬೇಗೆಗಿಂತಲೂ ದೇಶ ಪ್ರೇಮದ ಕಿಚ್ಚು ಉಕ್ಕಿ ಹರಿಯುತ್ತಿತ್ತು. ಜನರಲ್ ಡಯರ್ ಶಾಂತಿಯುತವಾಗಿ ನಡೆಸುತ್ತಿದ್ದ ಪ್ರತಿಭಟನೆಗೆ ದೊಡ್ಡ ಸೈನ್ಯವನ್ನು ತಂದು ಮನಸೋ ಇಚ್ಚೆ ಗುಂಡಿನ ಮಳೆಯನ್ನೇ ಗೆರೆದು, ಭಾರತಾಂಬೆಯ ಸಹಸ್ರಾರು ಮಕ್ಕಳ ಪ್ರಾಣಪಕ್ಷಿಯನ್ನು ಕಿತ್ತುಕೊಂಡನು. ಪ್ರಿಯ ಓದುಗ ಮಿತ್ರರೇ, ವಕೀಲ ದಿನಾಚರಣೆಯ ಈ ಶುಭವಸರಕ್ಕೂ, ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ…? ಈ ಲೇಖನವನ್ನು ಸಂಪೂರ್ಣವಾಗಿ ಓದಿ ಮುಗಿಸುವ ವೇಳೆಗೆ ನ್ಯಾಯವಾದಿಗಳಾಗಿ ರಾಷ್ಟ್ರಭಕ್ತಿ ಇರದೇ ಇದ್ದಲ್ಲಿ ಏನೆಲ್ಲಾ ಅನಾಹುತಗಳಾಗುತ್ತವೇ ಎಂಬುದು ನಿಮಗೆ ತಿಳಿಯಲಿದೆ. ಇತ್ತೀಚೆಗೆ ತೆರೆಕಂಡ “ಕೇಸರಿ – 2” ಜಲಿಯನ್‍ವಾಲಾ ಬಾಗ್ ಅಥವಾ ಅಮೃತಸರ ಹತ್ಯಾಕಾಂಡ ಕೇಸರಿ ಚಾಪ್ಟರ್ 2’ನ ಮೂಲ. ಬ್ರಿಟಿಷರ ವಿರುದ್ಧ ಶಾಂತಿಯುತ ಹೋರಾಟ ಮಾಡುವುದಕ್ಕೆ ಜಲಿಯನ್‌ವಾಲಾ ಬಾಗ್‌ನಲ್ಲಿ ಜನರು ಸೇರಿರುತ್ತಾರೆ. ಕರ್ಫ್ಯೂ ವಿಧಿಸಿದ್ದ ಕಾರಣ ಬ್ರಿಟಿಷರ…

Read More

ಕರ್ನಾಟಕದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಭೂಮಿಕೆಯನ್ನು ಶ್ರೀಮಂತಗೊಳಿಸುತ್ತಿರುವ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಮಹೋತ್ಸವ ‘ಕ್ರಿಯೇಟಿವ್ ಆವಿರ್ಭವ – 2025’ ಡಿಸೆಂಬರ್ 4, 5 ಮತ್ತು 6, 2025 ರಂದು ವೈಭವದೊಂದಿಗೆ ನಡೆಯಲಿದೆ. ಈ ಮೂರು ದಿನಗಳ ಸಂಭ್ರಮವು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಕ್ಯಾಂಪಸ್‌ನಲ್ಲಿ ವಿವಿಧ ಸಾಂಸ್ಕೃತಿಕ, ವಿದ್ಯಾಭ್ಯಾಸಿಕ ಮತ್ತು ಮನರಂಜನಾ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗಲಿದೆ. ಡಿಸೆಂಬರ್ 4 ರಂದು ಸಂಜೆ 6.00 ಗಂಟೆಗೆ ಕಾರ್ಯಕ್ರಮಕ್ಕೆ ಭವ್ಯ ಚಾಲನೆ ನೀಡಲಿದ್ದು, ಸಾಂಸ್ಕೃತಿಕ ಸಂಭ್ರಮದ ಉದ್ಘಾಟನೆ ನಡೆಯಲಿದೆ. ಕರಾವಳಿಯ ಸಾಂಪ್ರದಾಯಿಕ ಕಲಾ ವೈಭವ, ಯಕ್ಷಗಾನ, ನೃತ್ಯ, ನಾಟಕ ಹಾಗೂ ಜಾನಪದ ಕಲಾಪ್ರದರ್ಶನಗಳು ಮುಖ್ಯ ಆಕರ್ಷಣೆಯಾಗಿವೆ. ಡಿಸೆಂಬರ್ 5 ರಂದು ಮಧ್ಯಾಹ್ನ 2.30 ರಿಂದ ವಿವಿಧ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಸಂಜೆ ಹಾಗೂ ವಿಶೇಷ ಅತಿಥಿ ಉಪನ್ಯಾಸಗಳು ನಡೆಯಲಿವೆ. ಡಿಸೆಂಬರ್ 6 ರಂದು ಬೆಳಗ್ಗೆ 10.30 ಕ್ಕೆ ಸಾಧಕರಿಗೆ ಗೌರವ…

Read More

ಬ್ರಹ್ಮಾವರ: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‍ನಲ್ಲಿ ಉಡುಪಿ ಹಾಗೂ ಮಂಗಳೂರು ಜಿಲ್ಲೆಗಳ ಸಿಬಿಎಸ್‍ಇ ಮತ್ತು ಐಸಿಎಸ್‍ಇ ಶಾಲೆಗಳ ಪ್ರಾಂಶುಪಾಲರಿಗೆ “ಭವಿಷ್ಯದ ಶಾಲೆಗಳಲ್ಲಿ-ಮಕ್ಕಳಲ್ಲಿ ಮೌಲ್ಯಾಧಾರಿತ ಕೌಶಲ್ಯಗಳನ್ನು ಪೆÇೀಷಿಸುವುದು” ವಿಷಯದ ಕುರಿತು ಐಕ್ಸ್ ವಾರ್ಷಿಕ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಬ್ರಹ್ಮಾವರದ ಲಿಟ್ಲ್‍ರಾಕ್ ಇಂಡಿಯನ್ ಸ್ಕೂಲ್‍ನ ನಿರ್ದೇಶಕ ಫೆÇ್ರೀ. ಮ್ಯಾಥಿವ್ ಸಿ ನೈನನ್ ದೀಪ ಬೆಳಗಿ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಿಗೆ ಕೇವಲ ಬೋಧನೆಯ ಮೂಲಕ ಮೌಲ್ಯಗಳನ್ನು ಕಲಿಸಲು ಸಾಧ್ಯವಿಲ್ಲ. ಇಂದಿನ ಮಕ್ಕಳು ಅರ್ಥ ರಹಿತವಾದ ಕೆಟ್ಟ ಪದಗಳ ಬಳಕೆಯನ್ನು ಮಾಡುತ್ತಿದ್ದಾರೆ. ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನವನ್ನು ನೀಡುವ ಮಹತ್ತರ ಜವಾಬ್ದಾರಿಯನ್ನು ಪ್ರಾಂಶುಪಾಲರು ನಿರ್ವಹಿಸಬೇಕು. ಎಲ್ಲರೂ ಮಕ್ಕಳಲ್ಲಿ ಸಹಾನುಭೂತಿಯ ಪ್ರಜ್ಞೆಯನ್ನು ಸೃಷ್ಟಿಸಬೇಕೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಮಕ್ಕಳ ಕಲಿಕಾ ವಾತಾವರಣವು ಅತ್ಯುತ್ತಮ ಶಿಕ್ಷಣದ ಜೊತೆಗೆ ಶ್ರೇಷ್ಠ ವ್ಯಕ್ತಿತ್ವವನ್ನು ರೂಪಿಸುವಂತಿರಬೇಕು. ಉತ್ತಮ ಮೌಲ್ಯಗಳನ್ನು ನೀಡಿ ಮಕ್ಕಳ ಭವಿಷ್ಯವನ್ನು ಕಟ್ಟಬೇಕೆಂದರು. ಐಕ್ಸ್ ಅಧ್ಯಕ್ಷೆ ಅಭಿಲಾಷ ಎಸ್ ಮಾತನಾಡಿ ಸುಖದ…

Read More

ಯುಎಇ ಬಂಟ್ಸ್ ನ 48 ನೇ ವರ್ಷದ “ಭಾವೈಕ್ಯ” ಬಂಟರ ಮಹಾ ಸಮಾಗಮವು ಡಿಸೆಂಬರ್ 14ರಂದು ನಗರದ ಶೇಖ್ ಝಯೀದ್ ರಸ್ತೆಯ ಮಿಲೆನಿಯಂ ಪ್ಲಾಜಾ ಹೋಟೆಲ್ ಡೌನ್ ಟೌನ್ ಹೋಟೆಲ್ (ಹಳೆಯ ಕ್ರೌನ್ ಪ್ಲಾಜಾ) ಸಭಾಂಗಣದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಯುಎಇ ಬಂಟರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ “ಬಂಟ ವಿಭೂಷಣ ಪ್ರಶಸ್ತಿ” ಪ್ರದಾನ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ಯುಎಇ ಬಂಟ ಬಾಂಧವರಿಂದ ತುಳುನಾಡ ಮಣ್ಣ್ ದ ಮಹಿಮೆ, ಭಾರತದ‌ ಸಂಸ್ಕೃತಿಯ ಪಯಣ, ಬಂಟೆರ್ನ ಐಸಿರ, ಕಿರುಚಿತ್ರ ಸ್ಪರ್ಧೆ ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ. ಬಂಟ ವಿಭೂಷಣ ಪ್ರಶಸ್ತಿ ಪ್ರದಾನ : ವರ್ಷಂಪ್ರತಿ ಕೊಡಮಾಡುವ ಯುಎಇ ಬಂಟರ ಪ್ರತಿಷ್ಠಿತ ಬಂಟ ವಿಭೂಷಣ ಪ್ರಶಸ್ತಿಯನ್ನು ಮಂಗಳೂರು ಕಂಬಳದ ರೂವಾರಿ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರಿಗೆ ನೀಡಿ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಚಿತ್ರರಂಗದ ನಟ ಡಿವೈನ್ ಸ್ಟಾರ್ ರಿಷಭ್ ಶೆಟ್ಟಿ, ಬಾಲಿವುಡ್…

Read More