Author: admin
ಬಂಟರ ಸಂಘ (ರಿ) ಬಜಪೆ ವಲಯದ ಮುಂದಿನ 3 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಸಮಾಜ ಮುಖಿ ಸೇವಾ ಮನೋಭಾವದ ಸರಳ ವ್ಯಕ್ತಿತ್ವದ ವೇಣುಗೋಪಾಲ್ ಶೆಟ್ಟಿ ಕರಂಬಾರು ಪಡುಮನೆ ಆಯ್ಕೆಯಾಗಿದ್ದಾರೆ. ಹೋಟೆಲು ಉದ್ಯಮಿಯಾಗಿರುವ ವೇಣುಗೋಪಾಲ್ ಎಲ್ ಶೆಟ್ಟಿಯವರು ಮುಂಬಯಿ ಥಾಣೆ ಬಂಟ್ಸ್ ಅಸೋಸಿಯೇಶನ್ ಸಂಘದ ಅಧ್ಯಕ್ಷರಾಗಿ ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರಾಗಿ, ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ತಿರುಪತಿ ತಿಮ್ಮಪ್ಪನ ಪರಮ ಭಕ್ತರಾಗಿರುವ ವೇಣುಗೋಪಾಲ್ ಶೆಟ್ಟಿಯವರು ಸಮಾಜ ಸೇವೆಯೊಂದಿಗೆ ಧಾರ್ಮಿಕ, ಶೈಕ್ಷಣಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ.
ಹಿಂದೂ ಧರ್ಮದ ಪ್ರಕಾರ ಕೆಲವೊಂದು ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡುವುದರಿಂದ ವ್ಯಕ್ತಿಯು ತನ್ನೆಲ್ಲಾ ಸಂಕಷ್ಟಗಳಿಂದ ಮುಕ್ತನಾಗಿ ಮೋಕ್ಷವನ್ನು ಪಡೆದುಕೊಳ್ಳುತ್ತಾನೆ ಎಂಬ ನಂಬಿಕೆ ಅನಾದಿ ಕಾಲದಿಂದಲೂ ನಡೆದು ಬಂದಿದೆ. ಅದಲ್ಲದೇ ತೀರ್ಥಯಾತ್ರೆ ಭಾರತೀಯ ಸನಾತನ ಹಿಂದೂ ಸಂಸ್ಕ್ರತಿಯ ಅವಿಭಾಜ್ಯ ಅಂಗವಾಗಿದೆ. ಅದೇ ಧಾರ್ಮಿಕ ಭಾವನೆಯನ್ನು ಮನವರಿಸಿಕೊಂಡು ಬಾಂಬೆ ಬಂಟ್ಸ್ ಅಸೋಸಿಯೇಶನ್ನ ಅಧ್ಯಕ್ಷ ಅಡ್ವೋಕೇಟ್ ಡಿ.ಕೆ ಶೆಟ್ಟಿ, ಉಪಾಧ್ಯಕ್ಷ ಐಕಳ ಕಿಶೋರ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ನ್ಯಾ. ಶೇಖರ್ ಆರ್ ಶೆಟ್ಟಿ ಹಾಗೂ ಇನ್ನಿತರನ್ನೊಳಗೊಂಡ 57 ಸದಸ್ಯರ ತಂಡ, ಆಡಳಿತ ಮಂಡಳಿಯ ಸದಸ್ಯರುಗಳಾದ ಜಯ ಸಿ ಶೆಟ್ಟಿ ಮತ್ತು ಶಶಿಧರ ಶೆಟ್ಟಿ ಅವರ ಮುಂದಾಳತ್ವದಲ್ಲಿ, ಶ್ರೀ ಸಂತೋಷ್ ಶೆಟ್ಟಿ ಗುರುಸ್ವಾಮಿಯವರ ಮಾರ್ಗದರ್ಶನದಲ್ಲಿ ಸೆಪ್ಟೆಂಬರ್ 21 ರಿಂದ 24 ರ ತನಕ ಉತ್ತರ ಪ್ರದೇಶದ ಪುಣ್ಯ ಕ್ಷೇತ್ರಗಳಾದ ಪ್ರಯಾಗ್ ರಾಜ್, ತ್ರಿವೇಣಿ ಸಂಗಮ, ಅಯೋಧ್ಯೆ ರಾಮಮಂದಿರ, ಕಾಶಿ ವಿಶ್ವನಾಥ ಹಾಗೂ ಇನ್ನುಳಿದ ಹಲವಾರು ಕ್ಷೇತ್ರಗಳ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದರು. ಹೆಚ್ಚಿನ ಯಾತ್ರಿಗಳು 60 ವರ್ಷಗಳಿಗಿಂತ ಮೇಲ್ಪಟ್ಟವರಾದರೂ…
ಬೈಂದೂರು ಬಂಟರ ಯಾನೆ ನಾಡವರ ಸಂಘದ 30 ರ ಸಂಭ್ರಮದ ಅತ್ಯುನ್ನತ ಸಾಧಕಿ ಪ್ರಶಸ್ತಿಯನ್ನು ಹೇರoಜಲು ಡಾ. ಸಿಂಚನಾ ಎಸ್ ಶೆಟ್ಟಿಯವರಿಗೆ ಅವರ ಸ್ವಗೃಹದಲ್ಲಿ 30 ರ ಸಂಭ್ರಮದ ಅಧ್ಯಕ್ಷ ಶಶಿಧರ ಶೆಟ್ಟಿ ಸಾಲ್ಗದ್ದೆಯವರು ನೀಡಿ ಸನ್ಮಾನಿಸಿದರು. ಈ ಸಂಧರ್ಭ ಹಿರಿಯರಾದ ಗಂಟೆಹೊಳೆ ನಾರಾಯಣ ಶೆಟ್ಟಿ, ಜಯಶೀಲಾ ಶೆಟ್ಟಿ, ಶ್ರೀಮತಿ ಶಶಿಕಲಾ ಶೆಟ್ಟಿ, ಮಂಜುನಾಥ್ ಶೆಟ್ಟಿ ಹೇರಂಜಲು, ಸದಾಶಿವ ಶೆಟ್ಟಿ ಕಾಲ್ತೋಡು, ಸೀತಾರಾಮ್ ಶೆಟ್ಟಿ ಕಾಲ್ತೋಡು, ಸತ್ಯರoಜನ್ ಶೆಟ್ಟಿ, ಶ್ರೀಮತಿ ಬೇಬಿ ಶೆಟ್ಟಿ, ಡಾ. ಸಿಂಚನ ಶೆಟ್ಟಿಯವರ ತಂದೆ ಶರತ್ ಶೆಟ್ಟಿ ಗುಲ್ವಾಡಿ, ತಾಯಿ ಶ್ರೀಮತಿ ನಾಗರತ್ನ ಶೆಟ್ಟಿ ಹಾಗೂ ಅನೇಕ ಸಮಾಜ ಬಾಂಧವರು ಉಪಸ್ಥಿತರಿದ್ದು ಸಾಧಕಿಯನ್ನು ಆಶೀರ್ವದಿಸಿದರು. ಶಶಿಧರ್ ಶೆಟ್ಟಿ ಸಾಲ್ಗದ್ದೆಯವರು ಡಾ. ಸಿಂಚನ ಅವರನ್ನು ಸನ್ಮಾನಿಸಿ ಮಾತನಾಡಿ, ಸಿಂಚನ ಅವರು ಈವಾಗಲೇ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ಪಡೆದಿದ್ದಾರೆ. ಇನ್ನೂ ಉನ್ನತ ಮಟ್ಟದ ಸಾಧನೆ ಮಾಡಲಿ ಇವರಿಗೆ ದೇವರು ಹೆಚ್ಚಿನ ಶಕ್ತಿ ಕೊಟ್ಟು ಬೈಂದೂರು ಬಂಟರ ಸಂಘಕ್ಕೆ ಹಾಗೂ ಸಮಾಜಕ್ಕೆ…
ತುಳುಕೂಟ ಪುಣೆ ಇದರ ವತಿಯಿಂದ ಪ್ರಯಾಗ್ ರಾಜ್, ತ್ರಿವೇಣಿ ಸಂಗಮ, ಕಾಶಿ ಪುಣ್ಯ ಕ್ಷೇತ್ರಗಳ ದರ್ಶನದ ತೀರ್ಥಯಾತ್ರೆ ಜರಗಿತು. ಪುಣೆ ತುಳುಕೂಟದ ಅದ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರುರವರ ನೇತೃತ್ವದಲ್ಲಿ ಸುಮಾರು 43 ಜನ ಯಾತ್ರಾರ್ಥಿಗಳು 5 ದಿನಗಳ ಈ ಯಾತ್ರೆಯಲ್ಲಿ ಪಾಲ್ಗೊಂಡರು. ಪವಿತ್ರ ನದಿಗಳಾದ ಗಂಗಾ, ಯಮುನಾ, ಸರಸ್ವತಿ ನದಿಗಳ ತ್ರಿವೇಣಿ ಸಂಗಮ ಪ್ರಯಾಗ್ ರಾಜ್ ನಲ್ಲಿ ಪವಿತ್ರ ಸ್ಥಾನ ಮಾಡಿ, ನಂತರ ಭಾರತದ ಪವಿತ್ರ ಹನ್ನೆರಡು ಜ್ಯೋತಿರ್ಲಿಂಗಳಲ್ಲಿ ಒಂದಾದ ಗಂಗಾ ನದಿ ತಪ್ಪಲಿನಲ್ಲಿರುವ ಕಾಶಿ ಶ್ರೀ ವಿಶ್ವನಾಥೇಶ್ವರ, ವಿಶಾಲಕ್ಷಿ ದೇವಸ್ಥಾನ ದರ್ಶನ ಮಾಡಿ ನಂತರ ಶ್ರೀ ರಾಮ ಲಲ್ಲಾ ಮಂದಿರ ಅಯೋಧ್ಯೆ ಶ್ರೀ ರಾಮಚಂದ್ರ ದೇವಾಲಯ ಮತ್ತು ಪ್ರದೇಶದ ಹಲವು ದೇವಸ್ಥಾನಗಳ ದರ್ಶನ ಪಡೆದರು. ಪುಣೆ ತುಳುಕೂಟದ ವತಿಯಿಂದ ಪ್ರಥಮ ಬಾರಿಗೆ ಜರಗಿದ ಈ ತೀರ್ಥಯಾತ್ರೆಯಲ್ಲಿ ಸಂಘದ ಸದಸ್ಯರು, ಪುಣೆಯ ತುಳು ಕನ್ನಡಿಗ ಬಾಂಧವರು, ಹಿರಿಯರು, ಮಹಿಳೆಯರು, ದಂಪತಿಗಳು ಪಾಲ್ಗೊಂಡರು. ತುಳುಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರು, ಕಾರ್ಯದರ್ಶಿ ರಾಜಾರಾಮ್…
ಅರಣ್ಯಗಳತ್ತ ನಮ್ಮ ನಿಲುವು ಸದಾ ವಿವೇಚನೆಯಿಂದ ಕೂಡಿರಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ನುಡಿದರು. ಅವರು ಆಳ್ವಾಸ್ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ವತಿಯಿಂದ, ಹಳೆ ವಿದ್ಯಾರ್ಥಿಗಳ ಸಂಘದ ಪ್ರಾಯೋಜಕತ್ವದಲ್ಲಿ ನಡೆದ ಒಂದು ದಿನದ ಜೀವ ವೈವಿಧ್ಯತೆಯ ಕುರಿತು ಕಾರ್ಯಾಗಾರದಲ್ಲಿ ಮಾತನಾಡಿದರು. ಪ್ರಕೃತಿಯನ್ನು ಅವಲೋಕಿಸುವುದು ಬಹಳ ಮುಖ್ಯ. ಪ್ರಕೃತಿಯ ಪ್ರತಿಯೊಂದು ಅಂಶವೂ ನಮಗೆ ಬದುಕಿಗೆ ಪಾಠವನ್ನು ಕಲಿಸುತ್ತದೆ. ಪ್ರಕೃತಿ ಕೇವಲ ಸಂಪನ್ಮೂಲವಲ್ಲ, ಅದು ಸುಖ ಶಾಂತಿಯ ಅಮೂಲ್ಯ ಸಂಪತ್ತು. ಅದನ್ನು ಕಾಪಾಡುವುದು ನಮ್ಮ ನೈತಿಕ ಕರ್ತವ್ಯ ಮಾತ್ರವಲ್ಲ ಭವಿಷ್ಯದ ಪೀಳಿಗೆಗಾಗಿ ಜೀವ ಸಂಪತ್ತನ್ನು ಉಳಿಸುವ ಅಗತ್ಯವೂ ನಮ್ಮದಾಗಿದೆ. ನಾವು ಪ್ರಕೃತಿಯೊಂದಿಗೆ ಸೌಹಾರ್ದತೆಯಿಂದ ಬದುಕಿದರೆ ಮಾತ್ರ ಸುಖ ಮತ್ತು ಶಾಂತಿಯಿಂದ ಬದುಕಲು ಸಾಧ್ಯ. ನಾವು ವಾಸಿಸುತ್ತಿರುವ ಪ್ರದೇಶ ಜೀವ ವೈವಿಧ್ಯತೆಯ ಹಾಟ್ ಸ್ಪಾಟ್. ಜಗತ್ತಿನಲ್ಲಿ ಕೇವಲ ೨ ರಿಂದ ೩ ಶೇಕಡಾದಷ್ಟು ಪ್ರದೇಶವಷ್ಟೇ ಜೀವ ವೈವಿಧ್ಯ ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ. ಆದ್ದರಿಂದ ಜನರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು…
ಭೂಮಂಡಲದಲ್ಲಿ ನಮ್ಮಮಾನವ ಜನ್ಮದ ಸೃಷ್ಟಿಯಲ್ಲಿ ನಮ್ಮ ಹಿರಿಯರು ಅಳವಡಿಸಿಕೊಂಡಿರುವ ಮೂಲ ನಂಬಿಕೆಗಳು, ಆಚರಣೆಗಳು, ಸಂಪ್ರದಾಯಗಳು, ಭಕ್ತಿ ಭಾವ ಯುಗ ಯುಗಾಂತರಗಳಿಂದ ನಡೆದುಕೊಂಡು ಬಂದಿರುವಂತಹದ್ದು. ಇದು ಭಾರತದ ಸನಾತನ ಹಿಂದೂ ಸಂಸ್ಕ್ರತಿಯ ಪ್ರತೀಕ. ದುರ್ಗಾ ದೇವಿಯನ್ನು ಜಗನ್ಮಾತೆಯಾಗಿ ಪೂಜಿಸುವ ನಾವು ನವರಾತ್ರಿಯಲ್ಲಿ ಒಂಬತ್ತು ದಿನಗಳ ಕಾಲ ಅರಾದಿಸುವ ಜೊತೆಯಲ್ಲಿ ನಮಗೆ ಪ್ರಕೃತಿದತ್ತವಾಗಿ ಬಂದಂತಹ ಸಂಪ್ರದಾಯ ಆಚರಣೆಗಳ ತೆನೆಹಬ್ಬ ಆಚರಣೆ ಕೂಡಾ ನಡೆಯುತ್ತದೆ. ಇದು ಮನೆ ತುಂಬುವ ಕಾರ್ಯ ಎಂದು ಕೂಡಾ ಕರೆಯುತ್ತೇವೆ. ತುಳುನಾಡಿನಲ್ಲಿ ಮನೆ ಮನೆಯಲ್ಲೂ ನಡೆಯುವ ಈ ತೆನೆ ಹಬ್ಬ ಹೊರ ರಾಜ್ಯದಲ್ಲಿರುವ ನಾವು ಸಮಾಜದ ಎಲ್ಲರನ್ನೂ ಕೂಡಿಕೊಂಡು ಸಾರ್ವಜನಿಕವಾಗಿ ನಡೆಸುತಿದ್ದೇವೆ. ಬಂಟ್ಸ್ ಅಸೋಸಿಯೇಷನ್ ಇಂತಹ ಸಂಪ್ರದಾಯದ ಹಬ್ಬ ನವರಾತ್ರಿ ಉತ್ಸವ, ತೆನೆ ಹಬ್ಬವನ್ನು ಭಕ್ತಿ ಶ್ರದ್ದೆಯೊಂದಿಗೆ ಪೂಜನೀಯವಾಗಿ ನಡೆಸಿಕೊಂಡು ಬರುತ್ತಿದೆ. ಇದು ನಮ್ಮ ಏಕತೆ ಮತ್ತು ಸಂಘಟನೆಯ ಬಲವೃದ್ದಿಗೂ ಪೂರಕವಾಗಿದೆ. ಅಲ್ಲದೇ ನಮ್ಮ ಯುವ ಪೀಳಿಗೆಗೆ ತಿಳಿಸುವಲ್ಲಿ ಬಹು ಮುಖ್ಯ ಪಾತ್ರ ಹಾಗೂ ಸಕಾರತ್ಮಕ ಚಿಂತನೆಗೆ ಪ್ರೇರಣೆಯಾಗುತ್ತದೆ ಎಂದು ಪುಣೆ…
ಬಂಟರ ಸಂಘ ಮುಂಬಯಿ ಮೀರಾ ಭಯಂದರ್ ಪ್ರಾದೇಶಿಕ ಸಮಿತಿ : ಮಹಿಳಾ ವಿಭಾಗದ ವತಿಯಿಂದ ಹರಸಿನ ಕುಂಕುಮ ಮತ್ತು ಮಾತಾ ಕೀ ಚೌಕಿ
ಬಂಟರ ಸಂಘ ಇದರ ಮುಂಬಯಿ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಹರಸಿನ ಕುಂಕುಮ ಮತ್ತು ಮಾತಾ ಕೀ ಚೌಕಿ ಕಾರ್ಯಕ್ರಮವು ಸೆಪ್ಟೆಂಬರ್ 25 ರಂದು ಮೀರಾರೋಡ್ ಸಾಯಿ ಬಾಬಾ ನಗರದ ಸೈಂಟ್ ಥೋಮಸ್ ಕೆಥೋಲಿಕ್ ಚರ್ಚ್ ಹಾಲ್ ನಲ್ಲಿ ನಡೆಯಿತು. ಸಭಾ ಕಾರ್ಯಕ್ರಮವನ್ನು ಗಣ್ಯರು ಸೇರಿ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಸಭೆಯನ್ನು ಉದ್ದೇಶಿಸಿ ಮಾತಾಡಿದ ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರು, ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಇಂತಹ ಭಕ್ತಿ ಪ್ರಧಾನವಾದ ಕಾರ್ಯಕ್ರಮ ಅತ್ಯುತ್ತಮವಾಗಿ ಮೂಡಿಬಂದಿದೆ. ನಮ್ಮ ಮೀರಾ ಭಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಕೊಟ್ರಪಾಡಿಯವರ ನೇತೃತ್ವದಲ್ಲಿ ಹಾಗೂ ಸದಾ ಹಸನ್ಮುಖಿಯಾಗಿ ಎಲ್ಲರನ್ನೂ ಪ್ರೀತಿಯಿಂದ ಆದರಿಸುವ ಕಾರ್ಯಾಧ್ಯಕ್ಷೆ ವಸಂತಿ ಎಸ್. ಶೆಟ್ಟಿಯವರ ಮುತುವರ್ಜಿಯಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯ. ಬಂಟರ ಸಂಘದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಒಂದಾದ ಈ ಪ್ರಾದೇಶಿಕ ಸಮಿತಿಯ ಈ ಧಾರ್ಮಿಕ ಚಿಂತನೆಯ ಕಾರ್ಯಕ್ರಮವು ನೆರೆದ ಭಕ್ತರಿಗೆ…
ದಸರಾ ಹಬ್ಬಕ್ಕೆ ಸಾಹಿತ್ಯ ಸಂಸ್ಕೃತಿಯ ಮೆರುಗು : ಮಂಗಳಾದೇವಿ ಬಹುಭಾಷಾ ಕವಿಗೋಷ್ಠಿಯಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ
‘ದಸರಾ ಕನ್ನಡಿಗರ ನಾಡಹಬ್ಬ. ವಿಜಯನಗರ ಅರಸರ ಕಾಲದಿಂದಲೂ ಅದು ಕೇವಲ ಧಾರ್ಮಿಕ ಆಚರಣೆಯಾಗಿರದೆ ಅದರಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುತ್ತಿತ್ತು. ಆಧುನಿಕ ಸಮಾಜದ ಸಂಭ್ರಮೋಲ್ಲಾಸ ಏನೇ ಇದ್ದರೂ ಈ ಉತ್ಸವ ನಡೆವಲ್ಲಿ ನಮ್ಮ ಸಾಹಿತ್ಯ ಸಂಸ್ಕೃತಿಯ ಮೆರುಗು ನೀಡಿ ದಸರಾವನ್ನು ಅರ್ಥಪೂರ್ಣವಾಗಿ ಆಚರಿಸುವ ಅಗತ್ಯವಿದೆ’ ಎಂದು ಕವಿ, ಸಾಹಿತಿ ಮತ್ತು ಮಾಧ್ಯಮ ತಜ್ಞ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. ಶರನ್ನವರಾತ್ರಿ ಪ್ರಯುಕ್ತ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಅಕ್ಟೋಬರ್ 2ರಂದು ಜರಗಿದ ‘ದಸರಾ ಕವಿಗೋಷ್ಠಿ – 2025’ ನವರಸ ರಂಜನೆಯ ಬಹುಭಾಷಾ ಕವಿಮೇಳದ ಅಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು. ‘ನವರಾತ್ರಿ ಧಾರ್ಮಿಕ ಹಬ್ಬ. ಹಬ್ಬಗಳಲ್ಲಿ ರಾಷ್ಟ್ರೀಯ, ನಾಡ ಹಬ್ಬ, ಜಾತಿ-ಧರ್ಮಗಳಿಗೆ ಸಂಬಂಧಿಸಿದವುಗಳಿವೆ. ಹಿಂದಿನ ಕಾಲದಲ್ಲೂ ಹಬ್ಬಗಳಿದ್ದವು. ಆಗ ಮಾಧ್ಯಮಗಳ ಸೌಕರ್ಯ ಈಗಿನಷ್ಟು ಇರಲಿಲ್ಲ. ಇಚ್ಛಾಶಕ್ತಿಯಿಂದ ನೈತಿಕ ನೆಲೆಯಲ್ಲಿ ಆಚರಣೆ ಇತ್ತು’ ಎಂದ ಅವರು ‘ಹಬ್ಬ ಎನ್ನುವುದು ಮನುಕುಲವನ್ನು ಬೆಸೆಯುವ ಆಚರಣೆಯಾಗಬೇಕು. ಈ ಆಚರಣೆಗಳು ವಿಘಟನೆಯನ್ನು ಮಾಡುವುದಾಗಬಾರದು ಎಂಬ…
ತುಳುವರು ಪ್ರತಿಯೊಂದನ್ನು ವಿಚಾರವನ್ನು ಆರಾಧಿಸುವ ಗುಣವುಳ್ಳವರು, ಯಾವುದನ್ನು ಬೇಕಾದರೂ ಬಿಟ್ಟುಕೊಟ್ಟರು ಆದರೆ ನಂಬಿಕೆ ಆರಾಧನೆಯನ್ನಲ್ಲ ಎಂಬುದು ಕಟು ಸತ್ಯ. ತೌಳವ ನಾಡಿನಲ್ಲಿ ಪ್ರತಿ ಆರಾಧನೆಗೆ ಅದರದ್ದೆಯಾದ ನಂಬಿಕೆ, ಕಟ್ಟುಪಾಡುಗಳಿವೆ. ಇಂತಹ ಒಂದು ಆರಾಧನೆಯ ಭಾಗವೇ ಪಿಲಿವೇಷ. ಮಾರ್ನೆಮಿ (ನವರಾತ್ರಿ)ಯಲ್ಲಿ ಮನೆ ಮನೆಗೆ, ಪೇಟೆಯಲ್ಲಿ ಸುತ್ತುತ್ತಿದ್ದ ಪಿಲಿವೇಷ ಇಂದು ವ್ಯವಸ್ಥೆಯ ರೀತಿಯಲ್ಲಿ ಅಚ್ಚುಕಟ್ಟಾಗಿ ಸ್ಪರ್ಧಾತ್ಮಕ ರೀತಿಯಲ್ಲಿ ನಡೆಯುತ್ತಿದೆ ಎಂದರೆ ಅದಕ್ಕೆ ಹಲವು ಕಾರಣವಿದ್ದರೂ ಮುಖ್ಯವಾಗಿ ಕಾಣ ಸಿಗುವುದು ಯುವ ನಾಯಕ ಮಿಥುನ್ ರೈ. ಸುಮಾರು ಹತ್ತು ವರ್ಷದ ಹಿಂದೆ ಪಿಲಿವೇಷ ಪ್ರತಿಷ್ಠಾನ (ರಿ) ಎಂಬ ಸಂಘಟನೆಯನ್ನು ಕಟ್ಟಿಕೊಂಡು ನಮ್ಮ ಟಿವಿ (ಚಾನೆಲ್) ಜೊತೆ ಸೇರಿ ಒಂದೊಳ್ಳೆಯ ವೇದಿಕೆ ನಿರ್ಮಿಸಿ ಲಕ್ಷ-ಲಕ್ಷ ಬಹುಮಾನವನ್ನು ಘೋಷಿಸಿ ಪಿಲಿವೇಷದಲ್ಲಿ ಪ್ರಾಮಖ್ಯವಾಗಿರುವ ಧರಣಿ ಮಂಡಲ, ಅಟ್ಟೆ, ಪೌಲ, ಜಂಡೆ ಬೀಸುವುದು, ಬಣ್ಣಗಾರಿಕೆ, ಅಕ್ಕಿಮುಡಿ, ಬ್ಲಾಕ್ ಟೈಗರ್, ಅಪ್ಪೆ ಪಿಲಿ, ಟ್ರಂಪೆಟ್, ದೋಲು, ತಾಸೆ, ಮೂಲಕ ವ್ಯವಸ್ಥಿತ ರೀತಿಯಲ್ಲಿ ಪಿಲಿವೇಷಕ್ಕೆ ಸ್ಟಾರ್ ಟಚ್ ನೀಡಿದ ಕೀರ್ತಿ ರೈ ಅವರಿಗೆ ಸಲ್ಲುತ್ತದೆ.…
ಭಾರತೀಯ ಜನತಾ ಪಾರ್ಟಿ ಉಡುಪಿ ಜಿಲ್ಲೆ ಇದರ ಜಿಲ್ಲಾ ಕಚೇರಿಯ ನೂತನ ಕಟ್ಟಡದ ಶಿಲಾನ್ಯಾಸ ಸಮಾರಂಭ ಹಾಗೂ ಕಾರ್ಯಕರ್ತರ ಸಮಾವೇಶವು ಅಕ್ಟೋಬರ್ 03 ರಂದು ನಡೆಯಿತು. ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಲ್ ಸಂತೋಷ್ ಅವರು ಕಟ್ಟಡ ಶಿಲಾನ್ಯಾಸ ನೆರವೇರಿಸಿದರು. ಆ ನಂತರ ಕಾರ್ಯಕರ್ತರ ಸಮಾವೇಶ ನಡೆಯಿತು. ಈ ಸಂದರ್ಭದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುತ್ಯಾರು ನವೀನ್ ಶೆಟ್ಟಿ, ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ ಸುನಿಲ್ ಕುಮಾರ್, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶ್ ಪಾಲ್ ಸುವರ್ಣ, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕಿರಣ್ ಕುಮಾರ್ ಕೊಡ್ಗಿ, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರುರಾಜ್ ಶೆಟ್ಟಿ ಗಂಟಿಹೊಳೆ, ಉಡುಪಿ ಮಂಗಳೂರು ವಿಭಾಗ ಪ್ರಭಾರಿಗಳಾದ ಉದಯ ಕುಮಾರ್ ಶೆಟ್ಟಿ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಮಾಜಿ…