Author: admin
ಶಿವರಾಮ ಕಾರಂತರ ಪುಸ್ತಕ ಓದುವಿಕೆ, ಪ್ರವಾಸ, ಅವರ ಸೂಕ್ಷ್ಮಗ್ರಹಣ ಶಕ್ತಿಗಳು ಅವರನ್ನು ಉತ್ತುಂಗಕ್ಕೆ ಏರಿಸಿತ್ತು. ಅವರ ಬದುಕು ಅನುಭವಗಳು ನಮಗೆಲ್ಲರಿಗೂ ದಾರಿ ದೀಪವಾಗಿವೆ ಎಂದು ವಿಶ್ರಾಂತ ಕುಲಪತಿಗಳು ಜಾನಪದ ವಿದ್ವಾಂಸರಾದ ಪ್ರೊ. ಬಿ ಎ ವಿವೇಕ ರೈ ಅವರು ಹೇಳಿದರು. ಅವರು ಮಂಗಳೂರು ವಿವಿ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ನೂತನ ಸಭಾಂಗಣದ ಉದ್ಘಾಟನೆ ಮತ್ತು ಡಾ| ಕೆ ಶಿವರಾಮ ಕಾರಂತ ಜನ್ಮ ದಿನಾಚರಣೆ, ಕಾರಂತರ ನೆನಪು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬಾಲ್ಯದಲ್ಲಿ ಕಾರಂತರ ಮೇಲೆ ಗಾಂಧಿ ತತ್ವವು ಮಹತ್ವದ ಪ್ರಭಾವವನ್ನು ಬೀರಿತ್ತು. ಗಾಂಧಿ ತತ್ವದ ಪ್ರಚಾರಕ್ಕಾಗಿ ಅವರು ದಲಿತ ಕೇರಿಗಳಿಗೆ ಹೋಗಿ ನಾಟಕ ಆಡಿ ಸ್ವಾತಂತ್ರ್ಯ ಕಲ್ಪನೆಯನ್ನು ಬಿತ್ತುತ್ತಿದ್ದರು. ಆಗ ದಲಿತ ಬದುಕನ್ನು ಹತ್ತಿರದಿಂದ ಕಂಡಿರುವುದು ಚೋಮನ ದುಡಿ ಕಾದಂಬರಿಗೆ ಪ್ರೇರಣೆಯಾಯಿತು ಎಂದು ಹೇಳಿದರು. ಶಿಕ್ಷಣ ಸಂಸ್ಥೆಗಳು ಎಂದಿಗೂ ಗೋಡೆಗಳಾಗದೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿರಬೇಕು ಎಂದರು. ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್ ಧರ್ಮ ಅವರು…
ಬೆಳ್ತಂಗಡಿ ತಾಲೂಕು ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ನ 2025-27 ಸಾಲಿನ ಪದಪ್ರದಾನ ಸಮಾರಂಭ ಉಜಿರೆ ಓಶಿಯನ್ ಪರ್ಲ್ ಸಭಾಂಗಣದಲ್ಲಿ ಆ. 7ರಂದು ನಡೆಯಿತು. ಮುಖ್ಯ ಅತಿಥಿಗಳಾಗಿ ಮುಲ್ಕಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಮುಲ್ಕಿ ಜೀವನ್ ಕೆ ಶೆಟ್ಟಿ ಮಾತನಾಡಿ, “ಬೆಳ್ತಂಗಡಿ ಇಂಜಿನಿಯರ್ ಅಸೋಸಿಯೇಷನ್ ಸಾಮಾಜಿಕ ಕಾರ್ಯಕ್ರಮಗಳ ಜೊತೆಗೆ ಶೈಕ್ಷಣಿಕ ಸಹಾಯ ಹಸ್ತದ ಮೂಲಕ ಉತ್ತಮ ಸಾಧನೆ ಮಾಡಿದೆ. ಜಿಲ್ಲೆಯ ಪ್ರತಿ ತಾಲೂಕಿನಲ್ಲಿ ಸಿವಿಲ್ ಅಸೋಸಿಯೇಷನ್ ಸೆಂಟರ್ ಇದೆ. ವಿದ್ಯೆಯ ಜೊತೆಗೆ ಸಾಮಾಜಿಕ ಜವಾಬ್ದಾರಿ, ಸಮಾಜಕ್ಕೆ ಕೊಡಬೇಕಾದ ಕೊಡುಗೆಯನ್ನು ನೀಡುತ್ತಾ ಬಂದರೆ ನಮ್ಮ ವಿದ್ಯೆಗೆ ಗೌರವ ಕೊಟ್ಟಂತಾಗುತ್ತದೆ. ಅಸೋಸಿಯೇಷನ್ ಸದಸ್ಯರು ಒಗ್ಗಟ್ಟಾದರೆ ಮಾತ್ರ ಸರ್ಕಾರದಿಂದ ಸಿಗುವ ಸವಲತ್ತುಗಳು ಸಿಗಲು ಸಾಧ್ಯ. ಅಸೋಸಿಯೇಷನ್ ಸದಸ್ಯರು ಸುರೇಶ್ ಬಂಗೇರ ಅಧ್ಯಕ್ಷತೆಯಲ್ಲಿ ಉತ್ತಮ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ನ ವತಿಯಿಂದ ಮುಲ್ಕಿ ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಶಾರದಾ ಅಸೋಸಿಯೇಟ್ಸ್ ನ…
ಅಡುಗೆ ಕೇವಲ ಮನೆಯ ಕೆಲಸವಲ್ಲ. ಅದು ಕುಟುಂಬಗಳನ್ನು ಬೆಸೆಯುವ ಅದೃಶ್ಯ ದಾರ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? 1980 ರಲ್ಲಿ ಅಮೆರಿಕನ್ ಮನೆಗಳು ಅಡುಗೆ ಮಾಡುವುದನ್ನು ನಿಲ್ಲಿಸಿ, ಹೊರಗಿನಿಂದ ಆಹಾರ ತರಿಸುವುದು ಮತ್ತು ರೆಸ್ಟೋರೆಂಟ್ಗಳಿಗೆ ಹೆಚ್ಚು ಒಲವು ತೋರಲು ಶುರು ಮಾಡಿದಾಗ, ಕೆಲವು ಅರ್ಥಶಾಸ್ತ್ರಜ್ಞರು ಒಂದು ಎಚ್ಚರಿಕೆ ನೀಡಿದ್ದರು. “ಸರ್ಕಾರವು ಮಕ್ಕಳು ಮತ್ತು ವೃದ್ಧರ ಜವಾಬ್ದಾರಿ ವಹಿಸಿಕೊಂಡರೆ ಮತ್ತು ಖಾಸಗಿ ಸಂಸ್ಥೆಗಳು ಆಹಾರ ಒದಗಿಸಿದರೆ, ಕುಟುಂಬದ ಮೂಲಭೂತ ಅಡಿಪಾಯವೇ ದುರ್ಬಲಗೊಳ್ಳುತ್ತದೆ”. ಆ ಸಮಯದಲ್ಲಿ, ಇದನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ, ಆದರೆ ಇಂದಿನ ಅಂಕಿ ಅಂಶಗಳು ವಾಸ್ತವವನ್ನು ತಿಳಿಸುತ್ತವೆ. 1971ರಲ್ಲಿ, 71% ಅಮೆರಿಕನ್ ಕುಟುಂಬಗಳು ಪಾರಂಪರಿಕ ಕುಟುಂಬಗಳಾಗಿದ್ದವು. ಗಂಡ, ಹೆಂಡತಿ ಮತ್ತು ಮಕ್ಕಳು ಒಟ್ಟಾಗಿ ವಾಸಿಸುತ್ತಿದ್ದರು. ಇಂದು, ಆ ಸಂಖ್ಯೆ ಕೇವಲ 20%ಕ್ಕೆ ಇಳಿದಿದೆ. ಉಳಿದವರು ಎಲ್ಲಿ ಹೋದರು? ವೃದ್ಧಾಶ್ರಮಗಳು, ಬಾಡಿಗೆ ಅಪಾರ್ಟ್ಮೆಂಟ್ಗಳು ಮತ್ತು ಛಿದ್ರಗೊಂಡ ಬದುಕುಗಳು. ಈಗ 15% ಮಹಿಳೆಯರು ಏಕಾಂಗಿಯಾಗಿ ವಾಸಿಸುತ್ತಿದ್ದಾರೆ, 12% ಪುರುಷರು ಕುಟುಂಬದೊಂದಿಗೆ ಇದ್ದರೂ ಪ್ರತ್ಯೇಕವಾಗಿ ಬದುಕುತ್ತಿದ್ದಾರೆ,…
ರಾಜ್ಯ ಮಟ್ಟದ ಬಾಲಕ ಬಾಲಕಿಯರ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆ 2025-26 : ಆಳ್ವಾಸ್ ಶಾಲೆಯ ಐವರು ಕ್ರೀಡಾಪಟುಗಳು ರಾಷ್ಟ್ರಮಟ್ಟಕ್ಕೆ
ಹುಬ್ಬಳ್ಳಿಯ ಸೇಂಟ್ ಪೌಲ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ರಾಜ್ಯ ಮಟ್ಟದ 17 ವಯೋಮಿತಿಯ ಬಾಲಕ ಬಾಲಕಿಯರ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಆಳ್ವಾಸ್ ಶಾಲೆಯ ಕ್ರೀಡಾಪಟುಗಳು ಐದು ಚಿನ್ನ ಹಾಗೂ ಒಂದು ಬೆಳ್ಳಿ ಪದಕದೊಂದಿಗೆ ಒಟ್ಟು ಆರು ಪದಕಗಳನ್ನು ಪಡೆದು ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿಯನ್ನು ಪಡೆಯುವಲ್ಲಿ ಮಹತ್ವದ ಕೊಡುಗೆ ನೀಡಿದರು. ಫಲಿತಾಂಶ : 58 ಕೆಜಿ ವಿಭಾಗದಲ್ಲಿ – ಸ್ಪೂರ್ತಿ (ದ್ವಿತೀಯ), 77 ಕೆಜಿ ವಿಭಾಗದಲ್ಲಿ – ಪಾವನಿ ಜೆ ಆರ್ (ಪ್ರಥಮ) 56 ಕೆಜಿ ವಿಭಾಗದಲ್ಲಿ – ಪೃಥ್ವಿಕ್ (ಪ್ರಥಮ), 60 ಕೆಜಿ ವಿಭಾಗದಲ್ಲಿ – ಸುರೇಶ್ ವೈ ಎಮ್ (ಪ್ರಥಮ), 65 ಕೆಜಿ ವಿಭಾಗದಲ್ಲಿ – ಹಜರೇಸಾಬ್ – (ಪ್ರಥಮ), 71 ಕೆಜಿ ವಿಭಾಗದಲ್ಲಿ – ಪ್ರಫುಲ್ ರಾಜೇಶ್ (ಪ್ರಥಮ) ಸ್ಥಾನ ಪಡೆದರು. ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರ ಮಟ್ಟದ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಆಳ್ವಾಸ್ನ ಐವರು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ವಿಜೇತ ಕ್ರೀಡಾಪಟುಗಳನ್ನು ಸಂಸ್ಥೆಯ ಅಧ್ಯಕ್ಷ…
ನವರಾತ್ರಿಯು ನವದೇವಿಯರನ್ನು ಆರಾಧಿಸುವ ಹಬ್ಬವಾಗಿದೆ. ನವರಾತ್ರಿಯ ನಿಮಿತ್ತ ವರ್ಷಂಪ್ರತಿ ಪರಿಸರದ ಕನ್ನಡಿಗರನ್ನು ಒಗ್ಗಟ್ಟು ಮಾಡಿ ಮಹಿಳಾ ವಿಭಾಗದ ಸದಸ್ಯೆಯರು ಶಾರದಾ ಪೂಜೆಯನ್ನು ಹಮ್ಮಿಕೊಳ್ಳುತ್ತಾ, ಈ ವರ್ಷ ಉಷಾ ಶ್ರೀಧರ್ ಶೆಟ್ಟಿಯವರ ನೇತೃತ್ವದಲ್ಲಿ ಇದನ್ನು ವಿಭಿನ್ನವಾಗಿ ಆಯೋಜಿಸಿ ಬಾರೀ ಸಂಖ್ಯೆಯಲ್ಲಿ ಮಹಿಳೆಯರನ್ನು ಒಂದುಗೂಡಿಸಿದ್ದಾರೆ. ಅದರೊಂದಿಗೆ ಮಹಿಳೆಯರ ಭಜನೆ, ಮಕ್ಕಳ ಕುಣಿತ ಭಜನೆ, ವಿಜಯ ಶೆಟ್ಟಿ ಮೂಡುಬೆಳ್ಳೆಯವರ ಭಕ್ತಿ ರಸಮಂಜರಿಯೊಂದಿಗೆ ಸಂಪನ್ನಗೊಂಡ ಈ ವಿಶಿಷ್ಟ ಕಾರ್ಯಕ್ರಮ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರತೀಕವಾಗಿದೆ ಎಂದು ವಸಾಯಿ ಕರ್ನಾಟಕ ಸಂಘ ಅಧ್ಯಕ್ಷರಾದ ದೇವೇಂದ್ರ ಬಿ ಬುನ್ನನ್ ನುಡಿದರು. ಅವರು ಸೆಪ್ಟೆಂಬರ್ 28ರ ರವಿವಾರದಂದು ವಸಾಯಿ ಪಶ್ಚಿಮದ ಪಾರ್ವತಿ ಸಿನೆಮಾ ಹತ್ತಿರ, ಸ್ವಾಮಿ ನಾರಾಯಣ ಮಂದಿರ ಸಭಾಗೃಹದ ಮೊದಲನೇ ಮಹಾಡಿಯಲ್ಲಿ ನಡೆದ ವಸಾಯಿ ಕರ್ನಾಟಕ ಸಂಘದ ಮಹಿಳಾ ವಿಭಾಗದ ವತಿಯಿಂದ ನವರಾತ್ರಿ ಉತ್ಸವದ ವಿವಿಧ ಧಾರ್ಮಿಕ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಉಪಾಧ್ಯಕ್ಷ ಕರ್ನೂರು ಶಂಕರ್ ಆಳ್ವ ಮಾತನಾಡುತ್ತಾ, ನವರಾತ್ರಿಯ ದಿನಗಳು ನವದುರ್ಗೆಯರು ಧರ್ಮದ ರಕ್ಷಣೆಯ ಶಕ್ತಿಯ…
ನವಿ ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಕೇವಲ ಯೋಜನೆಯಲ್ಲ. ಇದು “ನವ ಭಾರತದ ನವ ಅಭಿವೃದ್ಧಿ”ಯ ಕನಸಿನ ವಾಸ್ತವ – ಸಂತೋಷ್ ಜಿ ಶೆಟ್ಟಿ
ಜಾಗತಿಕ ಭೂಪಟದಲ್ಲಿ ಭಾರತವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಮಹಾರಾಷ್ಟ್ರದ ಹೊಸ ಯುಗದ ಆರಂಭ ಎನ್ನುವಂತೆ ಅಕ್ಟೋಬರ್ 8 ರಂದು ನವಿ ಮುಂಬೈಯಲ್ಲಿ “ಡಿ. ಪಾಟೀಲ್” ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಭವ್ಯ ಉದ್ಘಾಟನೆಯನ್ನು ದೇಶದ ಉನ್ನತ ನಾಯಕ ಭಾರತದ ಪ್ರಧಾನಿ ಗೌರವಾನ್ವಿತ ನರೇಂದ್ರ ಮೋದಿಜಿಯವರು ನೆರವೇರಿಸಿದರು. ಈ ಐತಿಹಾಸಿಕ ಕ್ಷಣದಲ್ಲಿ ಪಾಲ್ಗೊಂಡಿದ್ದ ನವಿ ಮುಂಬೈಯ ನ್ಯೂ ಪನ್ವೇಲ್ ನ ಮಾಜಿ ಕಾರ್ಪೊರೇಟರ್, ಹೋಟೆಲ್ ಉದ್ಯಮಿ ಸಂತೋಷ್ ಜಿ ಶೆಟ್ಟಿ ಪಾಲ್ಗೊಂಡು ಪ್ರಧಾನಿಯವರಿಗೆ ಗೌರವ ನಮನ ಸಲ್ಲಿಸಿದರು. ಪ್ರಧಾನಿಯವರ ವಿಮಾನ ನಿಲ್ದಾನದ ಉದ್ಘಾಟನೆಯ ಪೂರ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂತೋಷ್ ಜಿ ಶೆಟ್ಟಿ ಅವರು ಇದು ನನಗೆ ಹೆಮ್ಮೆ ಮತ್ತು ಹೃದಯ ಸ್ಪರ್ಶಿಸುವ ಘಟನೆಯಾಗಿದೆ. ಆ ಸ್ಥಳಕ್ಕೆ ಹಾಜರಾಗುವುದು ನವ ಭಾರತದ ಪ್ರಗತಿಯ ಪ್ರತಿಜ್ಞೆಯನ್ನು ಅನುಭವಿಸಿದ ಕ್ಷಣವಾಗಿದೆ ಎಂದು ತಿಳಿಸಿದ್ದಾರೆ. ಕಾರ್ಯಕ್ರಮದ ಸಮಯದಲ್ಲಿ ಮೋದಿಜಿಯವರನ್ನು ವೈಯಕ್ತಿಕವಾಗಿ ಭೇಟಿಯಾಗುವ ಅವಕಾಶ ಸಿಕ್ಕಿತು. ಅದನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಕಷ್ಟ. ಅವರ ಉಪಸ್ಥಿತಿಯಲ್ಲಿನ ಹೊಳಪು, ಅವರ ಕಣ್ಣುಗಳಲ್ಲಿ ವಿಶ್ವಾಸ ಮತ್ತು…
LG ಇಲೆಕ್ಟ್ರಾನಿಕ್ಸ್ ಐಪಿಓ ಬಗ್ಗೆ ನಿಮಗೆ ಈಗಾಗಲೇ ತಿಳಿದಿರಬೇಕು. 11,000+ ಕೋಟಿ ರೂಪಾಯಿಗಳನ್ನು ಐಪಿಓ ಮೂಲಕ ಸಂಗ್ರಹಿಸಲಿದ್ದಾರೆ. ಅಷ್ಟೂ ಹಣ ದಕ್ಷಿಣ ಕೋರಿಯಾದಲ್ಲಿರುವ ಅದರ ಮಾತೃ ಸಂಸ್ಥೆಯಾದ LG ಕೋರ್ಪ್ಗೆ ಸಂದಾಯವಾಗಲಿದೆ!!! ಲಿಸ್ಟಿಂಗ್ ಆದ ನಂತರವೂ ಅದು ಭಾರತದಲ್ಲಿ 85% ಪಾಲನ್ನು ತನ್ನಲ್ಲೇ ಇಟ್ಟುಕೊಳ್ಳಲಿದೆ. ಸೆಬಿಯ ನಿಯಮದ ಪ್ರಕಾರ ಕೆಲವು ಸಮಯದ ನಂತರ ಅದು 75% ಕ್ಕೆ ಇಳಿಯಬೇಕು. ಆಗ ಮತ್ತೆ ಅವರು ಇನ್ನಷ್ಟು ಹಣವನ್ನು ಸಂಗ್ರಹಿಸಲಿದ್ದಾರೆ. ಅದೂ ಬಹುಶಃ ದಕ್ಷಿಣ ಕೋರಿಯಾಕ್ಕೆ ಹೋಗಲಿದೆ. ಭಾರತದಲ್ಲಿ ಎಷ್ಟು ವ್ಯಾಪಾರ ಮಾಡುತ್ತಾರೋ ಅದರ 3% ಅವರು ದಕ್ಷಿಣ ಕೋರಿಯಾದ ಮಾತೃ ಸಂಸ್ಥೆಗೆ ಕೊಡಬೇಕು. ಕಳೆದ ವರ್ಷ 350 ಕೋಟಿ ರೂಪಾಯಿಗಳನ್ನು ರಾಯಲಿಟಿ ರೂಪದಲ್ಲಿ ನೀಡಿದ್ದಾರೆ. ಇಷ್ಟೇ ಅಲ್ಲ ತಾನು ಮಾಡಿದ ಲಾಭದಲ್ಲಿ ಡಿವಿಡೆಂಡ್ ಕೂಡ ತನ್ನ ಮಾತೃ ಸಂಸ್ಥೆಗೆ ನೀಡಬೇಕು. ಪ್ರತಿ ವರ್ಷವೂ ಸುಮಾರು 2,000 ಕೋಟಿ ರೂಪಾಯಿಗಳು ಡೆವಿಡೆಂಡ್ ಹೆಸರಲ್ಲಿ ಭಾರತದಿಂದ ದಕ್ಷಿಣ ಕೋರಿಯಾಕ್ಕೆ ಹೋಗುತ್ತದೆ. ಮತ್ತೊಂದು ಮುಖ್ಯವಾದ ವಿಷಯವೆಂದರೆ, ಎಲ್ಜಿ…
‘ಸಹಕಾರ ಮಾಣಿಕ್ಯ’ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಅರ್ಧ ವರ್ಷಾಂತ್ಯ 30.09.2025ಕ್ಕೆ ಉತ್ತಮ ಪ್ರಗತಿ
ರಾಜ್ಯದ ಪ್ರತಿಷ್ಠಿತ ಕ್ರೆಡಿಟ್ ಸಹಕಾರ ಸಂಸ್ಥೆಗಳಲ್ಲೊಂದಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಸಹಕಾರ ಮಾಣಿಕ್ಯ ಪ್ರಶಸ್ತಿ ವಿಜೇತ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯು 2025-26ನೇ ಸಾಲಿನ ವಿತ್ತೀಯ ವರ್ಷದ ಅರ್ಧ ವಾರ್ಷಿಕ ಅವಧಿ ದಿನಾಂಕ 30.09.2025ಕ್ಕೆ ರೂ.638 ಕೋಟಿ ಠೇವಣಿ, ರೂ.548 ಕೋಟಿ ಸಾಲ, ರೂ.1186 ಕೋಟಿ (ಠೇವಣಿ ಮತ್ತು ಸಾಲ) ವ್ಯವಹಾರವನ್ನು ಹೊಂದಿದೆ. 2024ನೇ ಸಪ್ಟೆಂಬರ್ 30ಕ್ಕೆ ಹೋಲಿಸುವಾಗ ಠೇವಣಾತಿಯಲ್ಲಿ ರೂ.90 ಕೋಟಿ, ಹೊರಬಾಕಿ ಸಾಲದಲ್ಲಿ ರೂ.66ಕೋಟಿ ಹೆಚ್ಚಳದೊಂದಿಗೆ, ಒಟ್ಟು ವ್ಯವಹಾರದಲ್ಲಿ ರೂ.156 ಕೋಟಿ ವೃದ್ಧಿಯನ್ನು ದಾಖಲಿಸಿದೆ. 30.09.2025ಕ್ಕೆ ನಿವ್ವಳ ಲಾಭವು ರೂ.5.76 ಕೋಟಿ ದಾಖಲಿಸಿದ್ದು, ಇದು ಕಳೆದ ವರ್ಷಕ್ಕಿಂತ ರೂ.88 ಲಕ್ಷ ಹೆಚ್ಚಳವಾಗಿ 18% ವೃದ್ಧಿಯಾಗಿರುತ್ತದೆ. ಸ್ಥಾಪನೆಯಾದನಿಂದ ನಿರಂತರ ಡಿವಿಡೆಂಡನ್ನು ನೀಡುತ್ತಾ ಬಂದ ಸೊಸೈಟಿ, 2024-25ನೇ ಸಾಲಿಗೆ ಶೇ.25 ಡಿವಿಡೆಂಡನ್ನು ನೀಡಿದ್ದು, ಕಳೆದ ಏಳು ವರ್ಷಗಳಿಂದ ಗರಿಷ್ಟ 25% ಡಿವಿಡೆಂಡನ್ನು ನೀಡುತ್ತಿದೆ. ಸಂಘದ ನಿವ್ವಳ ಅನುತ್ಪಾದಕ ಆಸ್ತಿಯು ಕಳೆದ 18 ವರ್ಷಗಳಿಂದ ಶೂನ್ಯ…
ಗಣಿತನಗರ : ದೇಶದ ರಕ್ಷಣಾ ಕ್ಷೇತ್ರದಲ್ಲಿ ಜಲಸೇನೆಯ ಕೊಡುಗೆ ಗಣನೀಯವಾದದ್ದು. ಸೇನೆಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಶಿಸ್ತು, ಸಂಯಮವನ್ನು ಬೆಳೆಸಿ ನಾಯಕತ್ವದ ಗುಣವನ್ನು ಉದ್ದೀಪನಗೊಳಿಸುವ ಎನ್.ಸಿ.ಸಿಯ ಕಾರ್ಯ ಮಹತ್ತರವಾದದ್ದು ಎಂದು ಉಡುಪಿಯ ಎನ್.ಸಿ.ಸಿ ನೇವಲ್ ವಿಭಾಗದ ಕಮಾಂಡರ್ ಅಶ್ವಿನ್ ಎಂ ರಾವ್ ಹೇಳಿದರು. ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನಲ್ಲಿ ನೂತನವಾಗಿ ಪ್ರಾರಂಭಗೊಂಡ ಎನ್.ಸಿ.ಸಿ ನೇವಲ್ ಘಟಕವನ್ನು ಸಂಸ್ಥೆಯ ಪ್ರಾಂಶುಪಾಲ ಹಾಗೂ ಎನ್.ಸಿ.ಸಿ ಕ್ಷೇಮಪಾಲನಾಧಿಕಾರಿಗೆ ಎನ್.ಸಿ.ಸಿ. ಧ್ವಜವನ್ನು ಹಸ್ತಾಂತರಿಸಿ ಮಾತನಾಡಿದರು. ಇದೇ ಸಂದರ್ಭ ಎನ್.ಸಿ.ಸಿಯ ಧ್ವಜದ ಮಹತ್ವವನ್ನು, ಧ್ಯೇಯೋದ್ದೇಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಮಾತನಾಡಿ ಸಂಸ್ಥೆಯಲ್ಲಿ ಓದಿದ ಎನ್.ಸಿ.ಸಿ. ಘಟಕದ ವಿದ್ಯಾರ್ಥಿಯು ಎನ್.ಸಿ.ಸಿ. ಕೋಟದಡಿಯಲ್ಲಿ ತನ್ನ ಮೊದಲ ಪ್ರಯತ್ನದಲ್ಲಿಯೇ ಎಂ.ಬಿ.ಬಿ.ಎಸ್ ಪ್ರವೇಶಾತಿ ಪಡೆದಲ್ಲಿ ಸಂಸ್ಥೆಯ ವತಿಯಿಂದ ಭಾರತೀಯ ಸೇನೆಗೆ ರೂ.10ಸಾವಿರವನ್ನು ಕೊಡುಗೆಯಾಗಿ ನೀಡಲಾಗುವುದು ಎಂದು ಘೋಷಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲರಾದ ಶ್ರೀ ದಿನೇಶ್ ಎಂ ಕೊಡವೂರ್…
ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಯುನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ನ ವಿದ್ಯಾರ್ಥಿಗಳು ಅತ್ಯುತ್ತಮ ರ್ಯಾಂಕ್ ಮತ್ತು ನಗದು ಬಹುಮಾನಗಳನ್ನು ಪಡೆದರು. ಬಿಎ ವಿಭಾಗದಲ್ಲಿ ಕೆ ಎಸ್ ವಿಷ್ಣುಕುಮಾರ್ ಜಾನ್ ಎಫ್ ಕೆನಡಿ ಸ್ಮಾರಕ ಚಿನ್ನದ ಪದಕ, ಎನ್ ಅನಂತಾಚಾರ್ ಸ್ಮಾರಕ ಚಿನ್ನದ ಪದಕ, ಎಂಇಎಸ್ ಕಾಲೇಜು ರಜತ ಮಹೋತ್ಸವ ಬಹುಮಾನ ಪಡೆದರು. ಪಲ್ನಾಟಿ ಕಾವ್ಯ ಅವರು ಎಂ ಶ್ರೀನಿವಾಸ ಅಯ್ಯಂಗಾರ್ ಮತ್ತು ದೊರೆಸಾಲಮ್ಮ ಸ್ಮಾರಕ ಚಿನ್ನದ ಪದಕ, ಕೆನರಾ ಬ್ಯಾಂಕ್ ವಜ್ರ ಮಹೋತ್ಸವ ಸ್ಮಾರಕ ಬಹುಮಾನ, ಟಿ ಶಿವಣ್ಣ ಅಭಿನಂದನಾ ಸಮಿತಿ ಚಿನ್ನದ ಪದಕ ಪಡೆದರು. ಧನ್ಯರೆಡ್ಡಿ ಎಸ್ ಅವರು ಮಿಸಸ್ ಮೇರಿ ಕೋದಂಡ ರಾವ್ ಬಹುಮಾನ ಸ್ವೀಕರಿಸಿದರೆ, ಸಾರ್ವೀನ ಪಿ ಅವರು ಕೆನರಾ ಬ್ಯಾಂಕ್ ವಜ್ರ ಮಹೋತ್ಸವ ಬಹುಮಾನ ಗಳಿಸಿದರು ಎಂದು ಯುನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ಕಾಲೇಜಿನ ಚೇರ್ಮನ್ ಆರ್ ಉಪೇಂದ್ರ ಶೆಟ್ಟಿ ತಿಳಿಸಿದರು.