Author: admin

ಕರ್ನಾಟಕದ ಸುಂದರ ಕರಾವಳಿ ಪ್ರದೇಶವಾದ ಕಾರ್ಕಳವು ಸಾಂಸ್ಕೃತಿಕ ವೈಭವ, ಪ್ರಕೃತಿ ಸೌಂದರ್ಯ ಮತ್ತು ಶಾಂತ ವಾತಾವರಣಕ್ಕೆ ಪ್ರಸಿದ್ಧಿ. ಇದೇ ಊರಲ್ಲಿ ರಹಸ್ಯ ಸಂಚು ಮತ್ತು ಸತ್ಯದ ಹುಡುಕಾಟದಿಂದ ತುಂಬಿರುವ ಒಂದು ವಿಭಿನ್ನ ಕಥೆ ಮೂಡಿ ಬರುತ್ತದೆ. ಅದೇ ಅಮೃತ್ ರೈ ಮತ್ತು ಸುನೀಲ್ ಶೆಟ್ಟಿ ನಿರ್ಮಾಣದ ‘ಡಿಟೆಕ್ಟಿವ್ ದಿವಾಕರ್’. ಈ ತುಳು ಚಲನಚಿತ್ರದ ಟೀಸರ್ ಲಾಂಚ್ ಮತ್ತು ಎರಡನೇ ಪೋಸ್ಟರ್ ಬಿಡುಗಡೆ ಸಮಾರಂಭವು ಕ್ರಿಯೇಟಿವ್ ಕಾಲೇಜು ಕಾರ್ಕಳದಲ್ಲಿ ಮಾರ್ಚ್ 28 ರಂದು ಶನಿವಾರ ನೆರವೇರಿತು. ಕಾರ್ಯಕ್ರಮ ಅತಿಥಿಗಳಿಂದ ಜ್ಯೋತಿ ಬೆಳಗುವುದರ ಮುಖೇನ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಅತಿಥಿಗಳಲ್ಲಿ ಓರ್ವರಾದ ಡಾ| ರವೀಂದ್ರ ಶೆಟ್ಟಿ ಬಜಗೋಳಿಯವರು, ನಮ್ಮ ನೆಲದ ಕಥೆಯನ್ನು ಹೇಳುವ ಈ ಚಲನಚಿತ್ರವು ಮುಂದಿನ ತಲೆಮಾರಿಗೆ ಒಂದು ಉತ್ತಮ ಸಂದೇಶವನ್ನು ನೀಡಲಿದೆ ಎಂದು ತಿಳಿಸುತ್ತಾ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು. ಚಲನಚಿತ್ರದ ಸಹ ನಿರ್ಮಾಪಕರಾದ ವಿಭಾ ಪ್ರೊಡಕ್ಷನ್ ನ ಅಶ್ವತ್ ಎಸ್.ಎಲ್ ರವರು, ಈ ಚಲನಚಿತ್ರವು ಒಂದು ಹೊಸ ಕಥಾಹಂದರವನಿಟ್ಟುಕೊಂಡು…

Read More

ಪ್ರಸ್ತುತ ದಿನಮಾನದಲ್ಲಿ ರಜಾ ಸಮಯವನ್ನು ಮಕ್ಕಳು ಕೇವಲ ಮೊಬೈಲ್ ಗೆ ದಾಸರಾಗಿ ದೈಹಿಕ ಮತ್ತು ಮಾನಸಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೆ ತಮ್ಮ ಅಮೂಲ್ಯ ಬಾಲ್ಯದ ಕ್ಷಣಗಳನ್ನು ವ್ಯರ್ಥವಾಗಿ ಕಳೆಯುತ್ತಿದ್ದಾರೆ. ಇದು ಪ್ರಸ್ತುತ ಹೆತ್ತ ತಂದೆ ತಾಯಿಯರಿಗೂ ಮಕ್ಕಳ ಈ ವರ್ತನೆ ನುಂಗಲಾರದ, ಅರಗಿಸಿಕೊಳ್ಳಲಾಗದ ನೋವಿನ ಕ್ಷಣಗಳು ಹೌದು. ಈ ನಿಟ್ಟಿನಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆರಂಭಗೊಳ್ಳಲಿರುವ ಕ್ರಿಯೇಟಿವ್ ಗ್ಲೋಬಲ್ ಸ್ಕೂಲ್ ನಲ್ಲಿ ಮಕ್ಕಳು ತಮ್ಮ ರಜಾ ದಿನಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂಬ ಧ್ಯೇಯವನ್ನು ಇಟ್ಟುಕೊಂಡು ಇದೇ ಬರುವ ಏಪ್ರಿಲ್ 2,3,4 2026 ರಂದು ಮಕ್ಕಳ ವಿಶೇಷ ಶಿಬಿರ ಚಿಲಿಪಿಲಿ -2026 ನಡೆಯಲಿದೆ. ಇಂದಿನ ಸ್ಕ್ರೀನ್ ಟೈಮ್ ಯುಗದಲ್ಲಿ ಮಕ್ಕಳು ತಮ್ಮ ಬಾಲ್ಯವನ್ನು ವ್ಯರ್ಥ ಮಾಡಿಕೊಳ್ಳುತ್ತಿರುವಾಗ ಈ ಶಿಬಿರವು ನೆನಪುಗಳನ್ನು ಸೃಷ್ಟಿಸಲು, ಸೃಜನಶೀಲತೆಯನ್ನು ಹೆಚ್ಚಿಸಲು, ಸ್ನೇಹಿತರನ್ನು ಮಾಡಿಕೊಳ್ಳಲು, ಹೊಸ ಆಸಕ್ತಿಗಳನ್ನು ಕಂಡುಕೊಳ್ಳಲು ಒಟ್ಟಾರೆಯಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಈ ಶಿಬಿರವು ಮಕ್ಕಳಿಗೆ ಅತ್ಯಂತ ಮಹತ್ವವುಳ್ಳದ್ದಾಗಿದೆ. ಮಾತ್ರವಲ್ಲದೇ 90 ರ ದಶಕದ ಜೀವನ…

Read More

ಗೋವಾ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಹೋಟೆಲು ಉದ್ಯಮಿ, ಪಟ್ಲ ಫೌಂಡೇಶನ್ ಗೋವಾ ಘಟಕದ ಉಪಾಧ್ಯಕ್ಷ, ತುಳುಕೂಟ ಗೋವಾದ ಉಪಾಧ್ಯಕ್ಷ, ಸಮಾಜಸೇವಕ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾದ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ಕೊಡೆಂಕಿರಿ ಶಶಿಧರ ರೈಯವರು ಆಯ್ಕೆಯಾಗಿದ್ದಾರೆ. ದಿವಂಗತ ಬೆಳಿಯೂರು ಬೀಡು ಕಿಟ್ಟಣ್ಣ ರೈ ಹಾಗೂ ಡಿಂಬ್ರಿ ಗುತ್ತು ದುಗ್ಗಮ್ಮ ರೈಯವರ ಸುಪುತ್ರ ಕೆ ಶಶಿಧರ್ ರೈಯವರು ಹಲವಾರು ವರ್ಷಗಳಿಂದ ಶೆಟ್ಟಿ ಕೇಟರಿಂಗ್ ಸರ್ವಿಸಸ್ ಎಂಬ ಕೇಟರಿಂಗ್ ಉದ್ಯಮವನ್ನು ನಿರ್ವಹಿಸಿಕೊಂಡು ಬರುತ್ತಿದ್ದು, ಹುಟ್ಟೂರಿನ ಬಡ ವಿದ್ಯಾರ್ಥಿಗಳಿಗೆ ಹಲವಾರು ವರ್ಷಗಳಿಂದ ವಿದ್ಯಾರ್ಜನೆಗೆ ಸಹಕಾರ ನೀಡುತ್ತಿದ್ದಾರೆ. ಗೋವಾದ ತುಳು ಕನ್ನಡಿಗರಲ್ಲಿ ಉತ್ತಮ ಬಾಂಧವ್ಯ ಹೊಂದಿದ್ದು ಹಲವಾರು ಸಂಘ ಸಂಸ್ಥೆಗಳಲ್ಲಿ ಕೈ ಜೋಡಿಸಿಕೊಂಡು, ಗೋವಾ ಬಂಟರ ಸಂಘದಲ್ಲಿಯೂ ಸಿಕ್ಕಿದ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಓರ್ವ ಯಶಸ್ವೀ ಉದ್ಯಮಿಯಾಗಿ, ಸಂಘಟಕರಾಗಿ, ಸಮಾಜ ಸೇವಕರಾಗಿ ಹೊರಹೊಮ್ಮಿದ್ದು, ಇಂದು ಉದಾರ ಹೃದಯಿ ದಾನಿಯಾಗಿ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ಇದೀಗ ಇವರ ಕೀರ್ತಿ ಕಿರೀಟಕ್ಕೆ ಮುತ್ತಿನ ಮಣಿ ಸೇರಿಕೊಂಡಂತೆ ಗೋವಾ…

Read More

ನಾವು ಎಲ್ಲೇ ಇದ್ದರೂ, ಎಷ್ಟೇ ವಿದ್ಯಾವಂತರಾದರೂ ನಮ್ಮ ನಾಡಿನ ಆಚಾರ, ವಿಚಾರ, ಸಂಸ್ಕಾರ, ಸಂಸ್ಕೃತಿಯನ್ನು ಮರೆಯದೇ ಮಕ್ಕಳಿಗೆ ತಿಳಿಸಬೇಕು. ಮಕ್ಕಳು ಉದ್ಯೋಗ ನಿಮಿತ್ತ ಹೊರದೇಶಕ್ಕೆ ಹೋದರೂ ತಂದೆ ತಾಯಿಯ ಸೇವೆ ಮಾಡುತ್ತಿರಬೇಕು. ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿ ನಮ್ಮ ಹೃದಯ ಮನಸ್ಸನ್ನು ತೊಡಗಿಸಿಕೊಳ್ಳಬೇಕು. ಇಷ್ಟೊಂದು ಸಂಖ್ಯೆಯಲ್ಲಿ ಸಮಾಜ ಬಾಂಧವರು ಒಗ್ಗಟ್ಟಿನಿಂದ ಸೇರಿ ಸಂಘಟನೆ ಬಲವರ್ಧನೆಗೆ ಶ್ರಮಿಸುತ್ತಿರುವುದು ಸ್ತುತ್ಯಾರ್ಹ. ಮನುಷ್ಯ ಮನುಷ್ಯನ ನಡುವಿನ ಈ ಅನ್ಯೋನ್ಯ ಪ್ರೀತಿಯೇ ಮಾನವೀಯ ಸಂಬಂಧ. ನಾನು ನಿಮ್ಮವನು ನೀವೆಲ್ಲಾ ನಮ್ಮವರು ಎಂಬ ಭಾವನೆ ನಮ್ಮ ಬಳಿ ಇರಬೇಕು. ಈ ಪ್ರೀತಿಯೇ ಸೌಹಾರ್ದತೆಯ ಮೂಲ ಮಂತ್ರ ಎಂದು ಬೋಂಬೆ ಬಂಟ್ಸ್ ಅಸೋಸಿಯೇಷನ್ ನ ನಿಕಟಪೂರ್ವ ಅಧ್ಯಕ್ಷ ಸಿ.ಎ ಸುರೇಂದ್ರ ಕೆ ಶೆಟ್ಟಿ ಹೇಳಿದರು. ನಾಸಿಕ್ ನ ಹೋಟೆಲ್ ಮಸಾಲ ಜೋನ್ ಸಭಾಭವನದಲ್ಲಿ ನಡೆದ ನಾಸಿಕ್ ಬಂಟರ ಸಂಘದ 20ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನಾಸಿಕ್ ಬಂಟರ ಸಂಘದ…

Read More

ಬೆಂಗಳೂರು ಬಂಟರ ಸಂಘದ ಉಪಾಧ್ಯಕ್ಷೆ, ಉದ್ಯಮಿ ಹಾಗೂ ಸಮಾಜಸೇವಕಿ, ಬಿಜೆಪಿ ವಕ್ತಾರೆ ಶ್ರೀಮತಿ ಕಾಂತಿ ಶೆಟ್ಟಿಯವರಿಗೆ ‘ಉದ್ಯೋಗ ಯೋಗದಾನ ಪುರಸ್ಕಾರ – 2026’ ಪ್ರಶಸ್ತಿ ಲಭಿಸಿದೆ. ಶ್ರೀಮತಿ ಕಾಂತಿ ಶೆಟ್ಟಿಯವರು Aircom Solutions Private Limited ಹಾಗೂ ‘ನಮ್ಮ ಕುಟೀರ’ ಸಂಸ್ಥೆಗಳ ಮೂಲಕ ಉದ್ಯಮ ಮತ್ತು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. Case No. 18/9 ಎಂಬ ಯಶಸ್ವೀ ಕನ್ನಡ ಚಿತ್ರವನ್ನು ಸಹ ನಿರ್ಮಾಪಕಿಯಾಗಿ, ಚೆಲುವಿ ಕನ್ನಡ ಧಾರವಾಹಿಯನ್ನು ನಿರ್ಮಿಸಿರುವ ಶ್ರೀಮತಿ ಕಾಂತಿ ಶೆಟ್ಟಿಯವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜಸೇವೆಗಾಗಿ ಇವರಿಗೆ ಈ ಗೌರವ ಪ್ರದಾನಿಸಲಾಯಿತು. ಪ್ರಶಸ್ತಿಯನ್ನು ಚಿತ್ರನಟಿ ಶಿಲ್ಪಾ ಶೆಟ್ಟಿ ಅವರು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಿದರು.

Read More

ಹೆಬ್ರಿ ಬಂಟರ ಸಂಘ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್, ಮಣಿಪಾಲ ಕೆಎಂಸಿ ಆಸ್ಪತ್ರೆ, ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ 50 ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಹೆಬ್ರಿಯ ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ನೇತೃತ್ವದಲ್ಲಿ ಹೆಬ್ರಿ ಬಂಟರ ಭವನದಲ್ಲಿ ಬೃಹತ್ ಉಚಿತ ಆರೋಗ್ಯ ಮೇಳ ನಡೆಯಿತು. ಈ ಸಂಧರ್ಭ ಹೆಬ್ರಿ ಬಂಟರ ಸಂಘದ ಅಧ್ಯಕ್ಷ ಹರ್ಷ ಶೆಟ್ಟಿ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮುನಿಯಾಲು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಸಾರ್ವಜನಿಕರು, ಸಮಾಜ ಬಾಂಧವರು ಈ ಉಚಿತ ಆರೋಗ್ಯ ಮೇಳದ ಸದುಪಯೋಗವನ್ನು ಪಡೆದುಕೊಂಡರು.

Read More

ನನ್ನ ಮನೆಯಲ್ಲಿರುವ ಇಷ್ಟೊಂದು ಪುಸ್ತಕಗಳನ್ನು ಮುಂದೆ ನಾನೇನು ಮಾಡಲಿ? ಆ ಹಿರಿಯರ ಇದೊಂದು ಪ್ರಶ್ನೆ ಮೊನ್ನೆಯಿಂದ ನನ್ನನ್ನು ಕಾಡುತ್ತಲೇ ಇದೆ. ಅದು ಬರೀ ಅವರೊಬ್ಬರ ಏಕಾಂಗಿ ಕಳವಳವಲ್ಲ. ಆ ಆತಂಕ ಅವರ ಬಾಯಿಂದ ಬಂದದ್ದಾದರೂ, ಅದರ ಕರಿನೆರಳು ಹಲವರ ಮನೆಯಲ್ಲೂ ಹಬ್ಬಿಕೊಂಡಿದೆ. ಕಳೆದ ಒಂದು ವರ್ಷದಲ್ಲಿ ಆರೇಳು ಮಂದಿ ಹಿರಿಯ ಬರಹಗಾರರು, ಓದುಗರು, ವಿಮರ್ಶಕರು, ಪತ್ರಕರ್ತರು, ಸಾಹಿತಿಗಳು, ಪ್ರಾಧ್ಯಾಪಕರು ಬೇರೆ ಬೇರೆ ಸಂದರ್ಭಗಳಲ್ಲಿ, ಬೇರೆ ಬೇರೆ ಶಬ್ದಗಳಲ್ಲಿ ಇದೇ ಅರ್ಥದ ಪ್ರಶ್ನೆಯನ್ನು ಮುಂದೆ ಇಟ್ಟಿದ್ದಾರೆ. ಹೌದು, ಕೆಲವರ ಮನೆಗಳಲ್ಲಿ ಪುಸ್ತಕಗಳು ರಾಶಿ ರಾಶಿಯಾಗಿ ಬಿದ್ದಿವೆ. ಓದಿ ಮುಗಿಸಿದ ಕೃತಿಗಳು, ಮನೆಯ ಬಹು ಜಾಗ ಹಿಡಿದಿರುವ ಡೈಜೆಸ್ಟ್‌ಗಳು, ಯಾವುದೋ ಕಾಲದಿಂದ ಅವರಿಗೆ ಬಂದ ಗೌರವ ಪ್ರತಿಗಳು, ಕಾಲದ ವಾಸನೆ ಹೊತ್ತ ನಿಯತಕಾಲಿಕಗಳು, ಮಡಚಿ ಇಟ್ಟ ದಿನಪತ್ರಿಕೆಗಳು, ಮಣಬಾರದ ಗಂಭೀರ ಸಂಶೋಧನಾ ಗ್ರಂಥಗಳು, ಅಟ್ಟದಲ್ಲಿ, ಕಿಟಕಿಯ ಅಂಚಿನಲ್ಲಿ, ಊಟದ ಟೇಬಲ್ ನಲ್ಲಿ, ಎಲ್ಲೆಲ್ಲಿ ಜಾಗ ಉಂಟು ಅಲ್ಲೆಲ್ಲಾ ಹರಡಿಕೊಂಡ ಇವೆಲ್ಲವೂ ಒಟ್ಟಿಗೆ ಮನೆ ತುಂಬಾ…

Read More

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನ ದ.ಕ ಜಿಲ್ಲಾ ಘಟಕದ ಅಧ್ಯಕ್ಷೆಯಾಗಿ ಸಾಹಿತಿ ವೀಣಾ ಟಿ ಶೆಟ್ಟಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಲತೇಶ ಬಾಕ್ರಬೈಲ್, ಜತೆ ಕಾರ್ಯದರ್ಶಿಗಳಾಗಿ ಗೀತಾ ಲಕ್ಷ್ಮೀಶ, ಶ್ರೀಲಕ್ಷ್ಮೀ ಮಠದಮೂಲೆ, ಕೋಶಾಧಿಕಾರಿಯಾಗಿ ರತ್ನಾವತಿ ಬೈಕಾಡಿ, ಮಾಧ್ಯಮ ಪ್ರಮುಖರಾಗಿ ಚಂದ್ರಶೇಖರ ಕುಳವರ್ಮ, ಮಹಿಳಾ ಪ್ರಕಾರ ಪ್ರಮುಖರಾಗಿ ಸುಮಂಗಲ ರತ್ನಾಕರ, ಮಕ್ಕಳ ಪ್ರಕಾರ ಪ್ರಮುಖರಾಗಿ ರಮೇಶ ಮಯ್ಯ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪಿ.ಬಿ ಹರೀಶ್ ರೈ, ಡಾ. ಸುರೇಶ ನೆಗಳಗುಳಿ, ಪ್ರಕಾಶ ನಾರಾಯಣ ಚಾರ್ಮಾಡಿ, ರವೀಂದ್ರ ಶೆಟ್ಟಿ ಆಯ್ಕೆಯಾಗಿದ್ದಾರೆ.

Read More

ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಗೀತಾ ದಂಪತಿ ಸಮ್ಮುಖದಲ್ಲಿ ಸಮಗ್ರ ಭಾರತದ ಸಾಂಸ್ಕೃತಿಕ ಚಿತ್ರಣವು ಜೀವ ಪಡೆದಂತೆ ಕಂಗೊಳಿಸಿದರೆ, ಅಷ್ಟೇ ವಿನೀತರಾದ ಶಿವರಾಜ್ ಕುಮಾರ್ ದಂಪತಿ ವಿನಮ್ರತೆ ತೋರಿದರು. ಇದು ವಿದ್ಯಾಗಿರಿಯ ಕೃಷಿ ಸಿರಿ ಆವರಣದ ಮುಂಡ್ರೆದಗುತ್ತು ಕೆ. ಅಮರನಾಥ ಶೆಟ್ಟಿ ಸಭಾಂಗಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘ಆಳ್ವಾಸ್ ಸಂಪ್ರದಾಯ ದಿನ -2026’ ರ ಝೋಷ್ಇದರಿಂದ ಪುಳಕಿತರಾದ ಶಿವರಾಜ್ ಕುಮಾರ್ ತಾಳ ಹಿಡಿದು, ‘ಕೋಲು ಮಂಡೆ ಜಂಗಮ ದೇವರು…..’ ಹಾಡಿ ಹೆಜ್ಜೆ ಹಾಕಿದರು. ತಮ್ಮ ಆರಂಭಿಕ ‘ಆನಂದ್’ ಸಿನಿಮಾದ ‘ಟುವ್ವಿ ಟುವ್ವಿ’ ಹಾಡಿನಿಂದ ಹಿಡಿದು ಪುನೀತ್ ರಾಜ್ ಕುಮಾರ್ ಅವರ ‘ಬೊಂಬೆ ಹೇಳುತೈತೆ… ನೀನೆ ರಾಜಕುಮಾರ…’ ವರೆಗಿನ ಹಾಡುಗಳನ್ನು ಹಾಡಿದರು. ಕಿಕ್ಕಿರಿದ ವಿದ್ಯಾರ್ಥಿ ಸಾಗರವು ಪುನೀತವಾಯಿತು. ಸಾಕ್ಷಾತ್ಕರಿಸಿದ ಡಾ. ಎಂ ಮೋಹನ ಆಳ್ವ ಖುಷಿ ಪಟ್ಟು ನಸುನಕ್ಕರು. ಇದಕ್ಕೂ ಮೊದಲು ದೀಪ ಬೆಳಗಿ, ಚೆಂಡೆ ಪರಿಕರ ಬಡಿದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಿವರಾಜ್ ಕುಮಾರ್ ಅವರು, ‘ಏನನ್ನೇ…

Read More

ಜಗತ್ತಿನಲ್ಲಿ ಭಾರತೀಯ ಕುಟುಂಬ ವ್ಯವಸ್ಥೆ ಹಾಗೂ ಸಂಸ್ಕ್ರತಿಗೆ ವಿಶೇಷ ಸ್ಥಾನಮಾನಗಳಿವೆ. ಭಾರತದ ತಳಹದಿಯೇ ಕುಟುಂಬ ವ್ಯವಸ್ಥೆ. ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಭಾವನಾತ್ಮಕ ಸಂಬಂಧ, ಸಂಸ್ಕಾರದ ಹಾದಿ, ವಿಶೇಷವಾಗಿ ಮಾನವೀಯ ಗುಣಗಳು ಅಡಕವಾಗಿವೆ. ಬಹುಮುಖ್ಯವಾಗಿ ಸ್ತ್ರೀಯರನ್ನು, ಮಾತೆಯರನ್ನು ಪೂಜನೀಯ ಭಾವದಲ್ಲಿ ಕಂಡ ದೇಶ ಭಾರತ. ಜಗತ್ತಿನಲ್ಲಿ ಭಾರತೀಯ ಸಂಸ್ಕೃತಿಗೆ ಮಾರುಹೋಗದ ದೇಶಗಳೇ ಕಾಣಸಿಗುವುದು ಅಪರೂಪ. ಇಂತಹದ್ದೊಂದು ನಡೆಗೆ ಹಾದಿ ತೋರಿಸಿಕೊಟ್ಟವರು ನಮ್ಮ ಹಿರಿಯರು, ಪೂರ್ವಜರು, ಗತಿಸಿ ಹೋದ ಹಲವಾರು ತಲೆಮಾರುಗಳೆಂದರೂ ತಪ್ಪಾಗಲಾರದು. ಆ ಕಾರಣಕ್ಕಾಗಿ ಭಾರತೀಯ ಕೌಟುಂಬಿಕ ಪದ್ದತಿ, ಸಂಬಂಧಗಳು, ಆಚಾರ ವಿಚಾರ, ಸಂಪ್ರದಾಯಗಳು ಇಂದಿಗೂ ಜೀವಂತವಾಗಿ ಉಳಿದಿದೆಯೆಂದರೆ ಅತಿಶಯೋಕ್ತಿಯಾಗಲಾರದು. ವರ್ಷಗಳು ಉರುಳಿದಂತೆ ನಮ್ಮ ಹಿರಿಯರು ಹಾಕಿ ಕೊಟ್ಟ ಸಂಪ್ರದಾಯ, ಮಾನವೀಯ ಸಂಬಂಧ ಹಾಗೂ ಸಂಬಂಧಗಳ ಭದ್ರ ಬುನಾದಿ ಎಂಬುವುದೊಂದಿದೆಯಲ್ಲ ಅದು ತದ್ವಿರುದ್ಧ ಹಾದಿಯಲ್ಲಿ ಸಾಗುತ್ತಿರುವುದು ಭವಿಷ್ಯದ ಸಂಬಂಧ, ಕೌಟುಂಬಿಕ ಜೀವನ, ಬದುಕುವ ಪದ್ಧತಿ ಎಲ್ಲವೂ ಪಾಶ್ಚಾತ್ಯ ಶೈಲಿ. ವ್ಯಾಪಾರ, ವ್ಯವಹಾರಿಕ ದಿಕ್ಕಿನಲ್ಲಿ ಸಾಗಿ ಮನುಷ್ಯ ಸಂಬಂಧಗಳೆಂಬುವುದು ನಗಣ್ಯ ಹಾಗೂ ಅರ್ಥ ಕಳೆದುಕೊಳ್ಳುವತ್ತ…

Read More