Author: admin
ರೋಟರಿ ಕ್ಲಬ್ ಕಾರ್ಕಳ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಮಕ್ಕಳಿಗೆ ಪಲ್ಸ್ ಪೋಲಿಯೋ ಹನಿ ನೀಡುವ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ ಸರಕಾರಿ ಸಾರ್ವಜನಿಕ ಆಸ್ಪತ್ರೆ ಕಾರ್ಕಳ ಇಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕಾರ್ಕಳದ ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆಯ ಮಕ್ಕಳ ತಜ್ಞೆ ಆಶಾ ಪಿ. ಹೆಗ್ಡೆ ಮಾತನಾಡಿ, ಪೋಲಿಯೋ ಕಾಯಿಲೆಯನ್ನು ನಿರ್ಮೂಲನೆ ಮಾಡುವಲ್ಲಿ ರೋಟರಿಯು ಮಹತ್ತರ ಪಾತ್ರ ವಹಿಸಿದೆ. ಆರೋಗ್ಯ ಇಲಾಖೆಯ ಪರಿಶ್ರಮ ಪ್ರಶಂಸನೀಯ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಆರೋಗ್ಯ ಅಧಿಕಾರಿ ಡಾ. ಸಂದೀಪ್ ಕುಡ್ವ ಪೋಲಿಯೋ ಲಸಿಕೆ ಅಭಿಯಾನದ ಇತಿಹಾಸವನ್ನು ವಿವರಿಸುತ್ತಾ ಇನ್ನೂ ಕೆಲವು ದೇಶಗಳಲ್ಲಿ ಪೋಲಿಯೋ ಸಕ್ರಿಯವಾಗಿರುವುದರಿಂದ ನಾವು ಇನ್ನೂ ಜಾಗೃತರಾಗಿ ಇರಬೇಕಾಗಿದೆ ಎಂದರು. ಈ ಸಂದರ್ಭದಲ್ಲಿ ಡಾ. ಶಶಿಕಲಾ ಆಡಳಿತ ವೈದ್ಯಾಧಿಕಾರಿ ಸಾರ್ವಜನಿಕ ಆಸ್ಪತ್ರೆ ಕಾರ್ಕಳ, ಡಾ. ಸೌಜನ್ಯ ಮಕ್ಕಳ ತಜ್ಞರು, ಡಾ. ಉದಯ ಕುಮಾರ್ ಶಸ್ತ್ರಚಿಕಿತ್ಸಾ ತಜ್ಞರು, ಆಯುಷ್ ವೈದ್ಯಾಧಿಕಾರಿಗಳಾದ ಡಾ. ಸುಜಾತ ಮತ್ತು ಡಾ. ರೇಷ್ಮಾ ಪೈ, ಹಿರಿಯ ಪ್ರಾಥಮಿಕ…
ಮಹಿಳಾ ವೇದಿಕೆ ಬಂಟರ ಸಂಘ ಸುರತ್ಕಲ್ ಇದರ ಆಶ್ರಯದಲ್ಲಿ ಡಿಸೆಂಬರ್ 19, 20 ಮತ್ತು 21 ರಂದು ಸುರತ್ಕಲ್ ಬಂಟರ ಭವನದ ಆವರಣದಲ್ಲಿ “ಪರ್ವ -2025” ಸೀರೆ ಮೇಳ, ಲೈಫ್ ಸ್ಟೈಲ್ ಮತ್ತು ಫುಡ್ ಫೆಸ್ಟಿವೆಲ್ ನಡೆಯಲಿದ್ದು, ಕಾರ್ಯಕ್ರಮವನ್ನು ಮನಪಾ ಸುರತ್ಕಲ್ ವಲಯ ಕಛೇರಿಯ ಆಯುಕ್ತರಾದ ವಾಣಿ ಆಳ್ವ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸುರತ್ಕಲ್ ಬಂಟರ ಸಂಘದಲ್ಲಿ ಮಹಿಳಾ ವೇದಿಕೆ ನಿರಂತರ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಒಳ್ಳೆಯ ಹೆಸರನ್ನು ಗಳಿಸಿದೆ. ಸಾಂಸ್ಕೃತಿಕ, ಕ್ರೀಡೆ ಸಹಿತ ಎಲ್ಲಾ ವಿಭಾಗಗಳಲ್ಲೂ ಮಹಿಳಾ ವೇದಿಕೆ ಮುಂಚೂಣಿಯಲ್ಲಿದೆ ಎಂದರು. ಮುಖ್ಯ ಅತಿಥಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಕಾಟಿಪಳ್ಳ ಶಾಖೆಯ ಶಾಖಾ ವ್ಯವಸ್ಥಾಪಕರಾದ ಕೇಸರಿ ಶೆಟ್ಟಿ ಶುಭ ಹಾರೈಸಿದರು. ಮಹಿಳಾ ವೇದಿಕೆಯ ಅಧ್ಯಕ್ಷೆ ಸರೋಜ ಟಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಬಾಳ ಜಗನ್ನಾಥ ಶೆಟ್ಟಿ, ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಜಯಂತಿ ಟಿ ರೈ, ಪ್ರಧಾನ ಕಾರ್ಯದರ್ಶಿ ರಾಜೇಶ್ವರಿ ಡಿ…
ಬ್ರಹ್ಮಾವರ: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಮಕ್ಕಳಿಗೆ, ಸಮಾಜದಲ್ಲಿ ವ್ಯಾಪಾರ ಮತ್ತು ವಹಿವಾಟುವಿನ ಅನುಭವವನ್ನು ನೀಡುವ ಉದ್ದೇಶದಿಂದ ಚಿಣ್ಣರ ಸಂತೆಯನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ಆಡಳಿತ ಮಂಡಳಿಯ ಸದಸ್ಯೆ ತಾರಾ ಪ್ರಕಾಶ್ಚಂದ್ರ ಶೆಟ್ಟಿಯವರು ದೀಪ ಬೆಳಗಿ ಚಿಣ್ಣರ ಸಂತೆಯನ್ನು ಉದ್ಘಾಟಿಸಿ ಮಾತನಾಡಿ ಇಂದು ವ್ಯವಹಾರದಲ್ಲಿ ಮೋಸ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮಕ್ಕಳಿಗೆ ಕೊಡು- ಕೊಳ್ಳುವುದರ ಪರಿಜ್ಞಾನವಿರಬೇಕು. ಆ ನಿಟ್ಟಿನಲ್ಲಿ ಮಕ್ಕಳು ಎಳೆಯ ವಯಸ್ಸಿನಲ್ಲೆ ವ್ಯಾವಹಾರಿಕ ಜ್ಞಾನವನ್ನು ಮೈಗೂಡಿಸಿಕೊಳ್ಳುವಂತೆ ಪೆÇೀಷಕರು ಮುತುವರ್ಜಿ ವಹಿಸಬೇಕೆಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ರವರು ಮಾತನಾಡಿ ಹಣವು ದಿನನಿತ್ಯದ ಜೀವನಕ್ಕೆ ಅಗತ್ಯ, ಮಕ್ಕಳಿಗೆ ಹಣ ಸಂಪಾದನೆಯ ಜೊತೆಗೆ ಅದನ್ನು ಸೂಕ್ತ ರೀತಿಯಲ್ಲಿ ವಿನಿಯೋಗಿಸುವ ಅರಿವಿರಬೇಕು ಅದೇ ರೀತಿ ವ್ಯವಹಾರಕ್ಕೆ ಕೌಶಲ್ಯತೆ ಮತ್ತು ಉತ್ತಮ ಸೇವೆ ಅತ್ಯಗತ್ಯ. ಗ್ರಾಹಕರು ಸಂತೃಪ್ತಿಯಿಂದ ವ್ಯಾಪಾರ ಮಾಡಿದಾಗ ವ್ಯವಹಾರದಲ್ಲಿ ಯಶಸ್ಸನ್ನು ಕಾಣಬಹುದೆಂದು ತಿಳಿಸಿದರು. ಶಾಲೆಯ ಪ್ರಿ ನರ್ಸರಿ, ಎಲ್.ಕೆ.ಜಿ, ಯು.ಕೆ.ಜಿ ವಿದ್ಯಾರ್ಥಿಗಳು ತಾವೇ ತಯಾರಿಸಿದ ವಸ್ತುಗಳ ಪ್ರದರ್ಶನ ಮಾಡಿದರು ಮತ್ತು ತಮ್ಮ ಪೆÇೀಷಕರ…
ಗಣಿತನಗರ: ಬದುಕಿಗೆ ಆಸೆಗಳೇ ಇಂಧನ. ನಮ್ಮ ಸಾಮಥ್ರ್ಯದ ಅರಿವು ನಮಗಿರ ಬೇಕು. ನಮ್ಮ ಗೌರವದ ಸ್ಥಾನಮಾನಗಳು ಸಾವಿರ ಮಂದಿಗೆ ಕನಸಿನ ತಾಣವಾಗಿರುವಂತೆ ಬೆಳೆಯಬೇಕು. ಅತಿಯಾಸೆ ಇರುವವನು ಬಡವ, ಮಹತ್ತರವಾದ ಕನಸುಗಳನ್ನು ಕಾಣುವವನು ಶ್ರೀಮಂತ ಎಂದು ಮೈಸೂರಿನ ಸುತ್ತೂರು ಜೆ.ಎಸ್.ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ, ಲೇಖಕರು ಮತ್ತು ವಾಗ್ಮಿಯಾಗಿರುವ ಶ್ರೀ ಜಿ.ಎಲ್ ತ್ರಿಪುರಾಂತಕ ನುಡಿದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ನಡೆಯುತ್ತಿರುವ ಮೌಲ್ಯಸುಧಾ ಮಾಲಿಕೆ-43ರಲ್ಲಿ ‘ಆಕಾಂಕ್ಷೆಗಳು ಮತ್ತು ಕನಸುಗಳು’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದರು. ಬೆಲೆಬಾಳುವ ಒಂದು ವಜ್ರ ದಕ್ಕಿದ ಮೇಲೆ ಎಷ್ಟಾದರೂ ಕಲ್ಲುಗಳನ್ನು ಕಲೆಹಾಕಬಹುದು. ಹೆತ್ತವರು ನಮ್ಮ ಆಸೆಗಳನ್ನು ಈಡೇರಿಸಬಹುದು. ಆದರೆ ನಮ್ಮ ಕನಸುಗಳನ್ನು ನನಸು ಮಾಡುವ ಹೊಣೆ ನಮ್ಮದೇ ಎಂದರು. ಕಾರ್ಯಕ್ರಮದಲ್ಲಿ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಟ್ರಸ್ಟಿ ಶ್ರೀ ಅನಿಲ್ ಕುಮಾರ್ ಜೈನ್, ಸಿ.ಇ.ಒ ಹಾಗೂ ಪ್ರಾಂಶುಪಾಲರಾದ ಶ್ರೀ ದಿನೇಶ್ ಎಂ ಕೊಡವೂರ್,…
ದಕ್ಷಿಣ ಭಾರತದಲ್ಲೇ ಪ್ರಸಿದ್ಧಿ ಪಡೆದ ಸಿದ್ವಿನ್ ಇಂಡಸ್ಟ್ರೀಸ್ ಸ್ಥಾಪಕ ಸನತ್ ಶೆಟ್ಟಿ ಅವರು ತುಳುನಾಡಿನ ಸಮೃದ್ಧ ಸಂಸ್ಕ್ರತಿ ಸಂಪ್ರದಾಯಗಳನ್ನು ಮೈಗೂಡಿಸಿಕೊಂಡು ಬೆಳೆದ ಪ್ರತಿಷ್ಠಿತ ಬೈಲುಮೇಗಿನ ಮನೆ ಬಂಟ ಮನೆತನದಿಂದ ಬಂದವರು. ಸಿದ್ವಿನ್ ಇಂಡಸ್ಟ್ರೀಸ್ ಆತಿಥ್ಯ, ಆರೋಗ್ಯ ಕಾಳಜಿ, ಸ್ವಚ್ಛತಾ ಕಾಳಜಿ, ಸ್ವಚ್ಛತಾ ಸಾಧನ ಕರವಸ್ತ್ರಗಳಿಗೆ ಪರ್ಯಾಯವಾಗಿ ಉಪಯೋಗಿಸುವ ಟಿಶ್ಯೂ ಕಾಗದ, ಇತ್ಯಾದಿಗಳ ತಯಾರಿ ಪೂರೈಕೆಗೆ ಹೆಸರಾದ ವ್ಯಾವಹಾರಿಕ ಸಂಸ್ಥೆ ಎಂದು ಈಗಾಗಲೆ ಪ್ರಸಿದ್ಧಿ ಪಡೆದಿದೆ. ಸನತ್ ಇವರದ್ದು ಹಣ ಸಂಪಾದನೆಯೊಂದೇ ಉದ್ದೇಶವಾಗಿರದೆ ಒಂದು ಆರೋಗ್ಯಕರ ಸಮಾಜ, ಅದರ ಪ್ರಗತಿ, ನವೀಕರಣ ಇತ್ಯಾದಿ ಕುರಿತ ಚಿಂತನೆಗಳಿಂದಲೂ ಗುರುತಿಸಿ ಕೊಂಡಿರುತ್ತದೆ. ತನ್ನ ಧರ್ಮಪತ್ನಿ ಅಖಿಲಾ ವಸಿಷ್ಠ ಶೆಟ್ಟಿ ಅವರ ಜೊತೆಗೂಡಿ ಆರಂಭಿಸಿದ ಮೈ ಸ್ಪೇಸ್ ಎಂಬ ಹಬ್ ಸಮೂಹಗಳು ಸನತ್ ದಂಪತಿಯರ ವ್ಯಾವಹಾರಿಕ ದೂರದೃಷ್ಟಿಗೆ ಉತ್ತಮ ಉದಾಹರಣೆಯಾಗಿದೆ. ಒಂದರ್ಥದಲ್ಲಿ ಒಂದು ಬಹೂದ್ಧೇಶ ಕೈಗಾರಿಕಾ ಸಮೂಹದಂತಿರುವ ಸಿದ್ವಿನ್ ಇಂಡಸ್ಟ್ರೀಸ್ ಸಮಾಜದ ವಿವಿಧ ವರ್ಗಗಳ ವಿವಿಧ ವ್ಯವಹಾರಗಳಿಗೆ ಸ್ಪಂದಿಸಬಲ್ಲ ಬಲು ಅಪರೂಪದ ಸಂಸ್ಥೆ ಎನಿಸಿದ್ದಷ್ಟೇ ಅಲ್ಲದೇ ಒಂದು…
ಒಂದು ಕಾಲದಲ್ಲಿ ಮಾಸ್ ಫಿಲಂ, ಲಾಂಗು ಮಚ್ಚಿಗೆ ಮಣೆ ಹಾಕ್ತಿದ್ದ ಸಿನಿಮಾಗೆ ಜೈಕಾರ ಹಾಕ್ತಿದ್ದಾಗ, ಎಮೋಷನ್ಸ್ ಇರುವ ಅದರಲ್ಲೂ ಕರಾವಳಿ ಭಾಗದ ಭಾಷೆಯನ್ನ ಇಡೀ ವಿಶ್ವಕ್ಕೆ ಪರಿಚಯಿಸಿ ಅದರಲ್ಲೂ ವಿಭಿನ್ನವಾಗಿ ಕಥೆಯಿದೆ ಅಂತ ತೋರಿಸಿದ ಹೆಗ್ಗಳಿಕೆ ನಮ್ಮ ಶೆಟ್ಟಿ ಗ್ಯಾಂಗ್ ಗೆ ಸೇರಬೇಕು. ಶಿವಣ್ಣ, ರವಿಚಂದ್ರನ್, ಕಿಚ್ಚ ಸುದೀಪ್, ದರ್ಶನ್ ಇವರೆನ್ನೆಲ್ಲಾ ಇಂತದ್ದೇ ವರ್ಗದವರು ಐ ಮೀನ್ ಈ ಜಿಲ್ಲೆಯವರು ಅಂತ ಹೆಸರಿಸೋಕೆ ಆಗಲ್ಲ ಕಾರಣ ಅವರು ಎಲ್ಲಾ ಕಡೆಯೂ ಸಲ್ಲುವಂಥವರು. ಇತ್ತೀಚೆಗೆ ಇವರನ್ನೆಲ್ಲಾ ಬೀಟ್ ಮಾಡಿ ಮುಂದೆ ಹೆಜ್ಜೆ ಇಟ್ಟಿದ್ದು ಇದೇ RRR ಎಂದೇ ಪ್ರಸಿದ್ಧಿ ಪಡೆದ ಶೆಟ್ಟಿ ಗ್ಯಾಂಗ್. ಒಬ್ಬರಿಗಿಂತ ಒಬ್ಬೊರು ಮೇಲು ಎನ್ನುವ ಹಾಗೆ ಕಥೆ ಬರೆದು ಅದನ್ನ ಅಚ್ಚು ಕಟ್ಟಾಗಿ ಮಾರ್ಕೆಟಿಂಗ್ ಮಾಡಿ ಜನರಿಗೆ ತಲುಪಿಸ್ತಿದ್ದ ಆ ಗ್ಯಾಂಗ್ ಈಗ ಕಾಣೆಯಾಗಿದೆ. ಒಬ್ಬೊರಿಗೊಬ್ಬರ ಸಿನಿಮಾ ಬಂದಾಗ ತಮ್ಮ ಮನೆಯವರ ಸಿನಿಮಾ ಎನ್ನುವಂತೆ ಪೋಸ್ಟ್ ಮಾಡಿ, ಪ್ರೀಮಿಯರ್ ಶೋ ಅಥವಾ ಫಸ್ಟ್ ಡೇ ಫಸ್ಟ್ ಶೋ ನೋಡಿ…
ಆಳ್ವಾಸ್ ಸ್ವಾಯತ್ತಾ ಕಾಲೇಜಿನ ಮಾನವಿಕ ವಿಭಾಗದ ಆಶ್ರಯದಲ್ಲಿ ಸಂವಿಧಾನ ದಿನಾಚರಣೆ ಅಂಗವಾಗಿ ಕುವೆಂಪು ಸಭಾಂಗಣದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ| ಕುರಿಯನ್, ವಿದ್ಯಾರ್ಥಿಗಳು ಸಂವಿಧಾನದ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಿನ್ನೆ ಪಡೆದ ಅನುಭವಗಳನ್ನು ಮಾರ್ಗದರ್ಶಿಯಾಗಿ ತೆಗೆದುಕೊಂಡು, ನಾಳೆಯ ಸವಾಲುಗಳನ್ನು ಸ್ವೀಕರಿಸಿ, ಜವಾಬ್ದಾರಿಯುತ ನಾಗರೀಕರಾಗಿ ರೂಪುಗೊಳ್ಳಬೇಕು ಎಂದರು. ಸ್ಪರ್ಧೆಗಳು, ಚರ್ಚೆಗಳು ಮತ್ತು ಸಂವಾದಗಳ ಮೂಲಕ ಸಂವಿಧಾನಾತ್ಮಕ ಚಿಂತನೆ ಬೆಳೆಸಿಕೊಳ್ಳಬೇಕು. ಸಂವಿಧಾನದ ಮೌಲ್ಯಗಳನ್ನು ಗೌರವಿಸಿ, ಪಾಲಿಸಿ, ಮುಂದಿನ ಪೀಳಿಗೆಗೆ ಬಲಿಷ್ಠ ಭಾರತವನ್ನು ನಿರ್ಮಿಸುವ ಸಂಕಲ್ಪವನ್ನು ಎಲ್ಲರೂ ಸೇರಿ ಕೈಗೊಳ್ಳೋಣ ಎಂದರು. ಸಂವಿಧಾನವು ಎಲ್ಲವನ್ನೂ ನೀಡಿದ್ದರೂ, ನಾವು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರಲ್ಲಿ ಎಡವಿದ್ದೇವೆ. ಸಮಾಜದಲ್ಲಿ ಇನ್ನೂ ಅಸಮಾನತೆ, ಬಡತನ ಮತ್ತು ಅನ್ಯಾಯಗಳು ನಡೆಯುತ್ತಿವೆ. ಕೆಲವರಲ್ಲಿ ಸಂಪತ್ತಿನ ಅತಿಯಾದ ಸಂಗ್ರಹಣೆಯಾದರೆ, ಇನ್ನೂ ಹಲವರು ಮೂಲಭೂತ ಅಗತ್ಯಗಳಿಗೂ ಹೋರಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಂವಿಧಾನದ ಆಶಯಗಳನ್ನು ನೆನಪಿಸಿಕೊಳ್ಳುವುದು ಅಗತ್ಯ ಎಂದರು. ಸಂವಿಧಾನ ದಿನಾಚರಣೆಯ ಅಂಗವಾಗಿ ಟ್ರೇಷರ್ ಹಂಟ್, ಕ್ವಿಜ್, ರೀಲ್ಸ್ ಮೇಕಿಂಗ್,…
ಬಂಟರ ಯಾನೆ ನಾಡವರ ಮಾತೃ ಸಂಘ ದ.ಕ. ಮಂಗಳೂರು ಇದರ ವತಿಯಿಂದ ನಡೆಸಲ್ಪಡುವ ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ ವಾರ್ಷಿಕೋತ್ಸವ ಡಿಸೆಂಬರ್ 20 ರಂದು ಜರಗಲಿದೆ. ಸಂಜೆ 4 ಗಂಟೆಗೆ ಮಕ್ಕಳ ನೃತ್ಯೋತ್ಸವ ಆರಂಭವಾಗಲಿದೆ. ಸಂಜೆ 6 ಗಂಟೆಗೆ ಸಭಾ ಕಾರ್ಯಕ್ರಮ ಆರಂಭವಾಗಲಿದ್ದು, ಸಂಸ್ಥೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಉಪವಿಭಾಗದ ಎ.ಸಿ ಸ್ಟೆಲ್ಲಾ ವರ್ಗೀಸ್ ಕಾರ್ಯಕ್ರಮವನ್ನು ಉದ್ಘಾಟನೆ ನೇರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಗಾಗಿ ಸುಳ್ಯ ಶಾರದಾ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಸ್ಪರ್ಣಕಲಾ, ಬಂಟರ ಯಾನೆ ನಾಡವರ ಮಾತೃ ಸಂಘ ತಾಲೂಕು ಸಮಿತಿ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈ, ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್, ಶ್ರೀ ರಾಮಕೃಷ್ಣ ಪ್ರೌಢಶಾಲೆಯ ವಿಶ್ರಾಂತ ಮುಖ್ಯ ಶಿಕ್ಷಕಿ ಜಯಲಕ್ಷ್ಮಿ, ಹಿರಿಯ ವಿದ್ಯಾರ್ಥಿನಿ ಶ್ರೀಲಕ್ಷ್ಮಿ ಪೈ ಹಾಗೂ ದತ್ತಿನಿಧಿ ಪ್ರಾಯೋಜಕರಾದ ಸಂಜೀವ ಆಳ್ವ ಮಾಲಕರು ಮೂಕಾಂಬಿಕ ಗ್ಯಾಸ್ ಏಜೆನ್ಸಿಸ್ ಪುತ್ತೂರು, ಮನೋಹರ ರೈ ಎನ್ (ವಿಶ್ರಾಂತ…
ಒಡಿಯೂರು ಶ್ರೀ ಸಂಸ್ಥಾನದಲ್ಲಿ ಶ್ರೀ ದತ್ತ ಜಯಂತ್ಯುತ್ಸವ, ಶ್ರೀ ದತ್ತ ಮಹಾಯಾಗ ಸಪ್ತಾಹ, ಶ್ರೀ ದತ್ತ ಕೋಟಿ ನಾಮಜಪಯಜ್ಞ ಸಮಾಪ್ತಿ
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಅನುಗ್ರಹ ಸಂದೇಶ ನೀಡುತ್ತಾ, “ಭಗವಂತನನ್ನು ನೆನೆಯುವುದೇ ಜಪ. ಜಪ ಆಧ್ಯಾತ್ಮದ ಜೀವಾಳ. ದತ್ತ ಎಂದರೆ ಕೊಡಲ್ಪಟ್ಟದ್ದು ಎಂದರ್ಥ. ಭಗವಾನ್ ದತ್ತಾತ್ರೇಯರು ವಿಶ್ವವನ್ನೇ ವಿದ್ಯಾಲಯವಾಗಿಸಿದವರು. ಭಗವಂತನ ಅವತಾರ ಸಮರಸ ತತ್ವದ ಅವತಾರ. ದತ್ತಾವತಾರ ಜ್ಞಾನದ ಅವತಾರ. ಅಂತರಂಗದ ಅಂಧಕಾರ ದೂರವಾಗಲು ಜ್ಞಾನದ ಬೆಳಕು ಅವಶ್ಯ. ಧ್ಯಾನ, ಜ್ಞಾನ ಮತ್ತು ಮಾನವನ್ನು ಗೌರವಿಸುವುದು ಶ್ರೇಷ್ಠತೆ. ಮಮಕಾರ ಮತ್ತು ಅಹಂಕಾರವನ್ನು ದೂರಗೊಳಿಸಲು ಜ್ಞಾನ ಸಹಕಾರಿ. ನಮ್ಮೊಳಗಿನ ಅಂತರಂಗದ ಕತ್ತಲೆ ದೂರಮಾಡಲು ದೀಪಾವಳಿಯ ಆಚರಣೆ” ಎಂದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಡೆದ ಶ್ರೀ ದತ್ತ ಜಯಂತಿ ಮಹೋತ್ಸವ, ಶ್ರೀ ದತ್ತ ಮಹಾಯಾಗ ಸಪ್ತಾಹ, ಶ್ರೀ ದತ್ತ ಕೋಟಿ ನಾಮಜಪಯಜ್ಞದ ಸಮಾಪ್ತಿ ಹಾಗೂ ಶ್ರೀ ಗುರುದೇವದತ್ತ ಲಕ್ಷದೀಪಾವಳಿಯ ಸಮಾರಂಭದಲ್ಲಿ ದಿವ್ಯ ಉಪಸ್ಥಿತಿ ನೀಡಿ ಆಶೀರ್ವಚನವಿತ್ತ ಪೂಜ್ಯ ಶ್ರೀಗಳವರು, “ಸಮಾಜದ ಹಿತ ಕಾಪಾಡುವವರು ಸಂತರು. ಸಂತ ಮತ್ತು ಸಮಾಜ ಬದುಕಿನ ಎರಡು ಮುಖಗಳಿದ್ದಂತೆ. ವಿಶ್ವವನ್ನೇ ತನ್ನದೆನ್ನುವವನು ಗುರು.…
ಕ್ಲಾಟ್ ಒಕ್ಕೂಟವು ಡಿಸೆಂಬರ್ 7ರಂದು ನಡೆಸಿದ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಕ್ಲಾಟ್) 2025 ರಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ 11 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆಳ್ವಾಸ್ನ ದರ್ಶನ್ ಹೆಚ್.ಜೆ, ಮಧು, ರಕ್ಷಾ ಕೆ, ರಾಜ್ದೀಪ್ ಎಸ್ ನಾಯಕ್, ಕುಂದನಿಕ ಗೌಡ, ಭೂಮಿ, ಗೌರಿ ಎಸ್ ಪಾಟೀಲ್, ಅರ್ವಿನ್, ಅನನ್ಯ ಡಿ, ಅನ್ನಾ ಲಹರಿ, ಮಿಥಾಲಿ ನಾಯ್ಕ ಕ್ಲಾಟ್ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಪ್ರಾಚಾರ್ಯ ಮಹಮ್ಮದ್ ಸದಾಕತ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಮ್.ಡಿ ಅಭಿನಂದಿಸಿದ್ದಾರೆ.















