Author: admin
ಆಳ್ವಾಸ್ ಫಿಸಿಯೋಥೆರಪಿ ಕಾಲೇಜಿನ ಆಶ್ರಯದಲ್ಲಿ ನಡೆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಮಂಗಳೂರು ವಲಯ ವಾಲಿಬಾಲ್ ಟೂರ್ನಮೆಂಟ್ನ ಪುರುಷರ ವಿಭಾಗದಲ್ಲಿ ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ಚಾಂಪಿಯನ್ಸ್ ಆದರೆ, ಮಹಿಳೆಯರ ವಿಭಾಗದಲ್ಲಿ ಮಂಗಳೂರಿನ ಫಾದರ್ ಮುಲ್ರ್ಸ್ ನರ್ಸಿಂಗ್ ಕಾಲೇಜು ಚಾಂಪಿಯನ್ಸ್ ಪಟ್ಟ ಅಲಂಕರಿಸಿತು. ಪುರುಷ ವಿಭಾಗ ವಿಜೇತರು: ಆಳ್ವಾಸ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್, ಮೂಡುಬಿದಿರೆ. ರನ್ನರ್ : ಆಳ್ವಾಸ್ ಫಿಸಿಯೋಥೆರಪಿ ಕಾಲೇಜು, ಮೂಡುಬಿದಿರೆ. ಮೊದಲ ರನ್ನರ್- ಅಪ್ : ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜು, ಮೂಡುಬಿದಿರೆ. ಎರಡನೇ ರನ್ನರ್-ಅಪ್: ಕೆ.ವಿ.ಜಿ ಮೆಡಿಕಲ್ ಕಾಲೇಜು, ಸುಳ್ಯ ಮಹಿಳಾ ವಿಭಾಗ, ವಿಜೇತರು : ಫಾದರ್ ಮುಲ್ಲರ್ಸ್ ನರ್ಸಿಂಗ್ ಕಾಲೇಜು, ಮಂಗಳೂರು. ರನ್ನರ್ : ಆಳ್ವಾಸ್ ನ್ಯಾಚುರೋಪತಿ ಮತ್ತು ಯೋಗಿಕ್ ಸೈನ್ಸ್ ಕಾಲೇಜು, ಮೂಡುಬಿದಿರೆ. ಮೊದಲ ರನ್ನರ್- ಅಪ್ : ಎಂ.ವಿ ಶೆಟ್ಟಿ ಫಿಸಿಯೋಥೆರಪಿ ಕಾಲೇಜು, ಮಂಗಳೂರು. ಎರಡನೇ ರನ್ನರ್- ಅಪ್ : ಕೊಡಗು ಮೆಡಿಕಲ್ ಕಾಲೇಜು, ಮಡಿಕೇರಿ.…
ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ ನ (ಎನ್ಸಿಸಿ) 18 ಕರ್ನಾಟಕ ಬೆಟಾಲಿಯಾನ್ನಿಂದ ಆಳ್ವಾಸ್ನ ವಿದ್ಯಾಗಿರಿಯ ಆವರಣದಲ್ಲಿ 10 ದಿನಗಳ ಸಂಯೋಜಿತ ವಾರ್ಷಿಕ ತರಬೇತಿ ಶಿಬಿರ ನಡೆಯಿತು. ಮಂಗಳೂರಿನ ಎನ್ಸಿಸಿ ಸಮೂಹದ ಮುಖ್ಯ ಕಛೇರಿಯ ವ್ಯಾಪ್ತಿಗೊಳಪಟ್ಟ ವಿವಿಧ ಬ್ಯಾಟಾಲಿಯನ್ಗಳಿಂದ 600 ಎನ್ಸಿಸಿ ಕೆಡೆಟ್ಗಳು ಭಾಗವಹಿಸಿದ್ದರು. ಕೆಡೆಟ್ಗಳಿಗೆ ಫೈರಿಂಗ್, ಬ್ಯಾಟಲ್ ಕ್ರಾಫ್ಟ್, ಡ್ರಿಲ್, ನಕ್ಷೆ ಓದುವಿಕೆ, ರೈಫಲ್ನ ನಿರ್ವಹಣೆ, ಫೀಲ್ಡ್ ಕ್ರಾಫ್ಟ್ ಮತ್ತು ಮಿಲಿಟರಿ ವಿಷಯಗಳಲ್ಲಿ ತರಬೇತಿ ನೀಡಲಾಯಿತು. ಮಂಗಳೂರಿನ ಎನ್ಸಿಸಿ ಸಮೂಹದ ಮುಖ್ಯ ಕಛೇರಿಯಿಂದ ಒಟ್ಟು 80 ಕೆಡೆಟ್ಗಳು ಬೆಂಗಳೂರಿನಲ್ಲಿ ನಡೆಯುವ ಐಜಿಸಿ- ಆರ್ಡಿಸಿ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಕಮಾಂಡಿಂಗ್ ಆಫೀಸರ್ ಲೆಫ್ಟಿನೆಂಟ್ ಕರ್ನಲ್ ರೋಹಿತ್ ರೈ ಮಾತನಾಡಿ, ಇಷ್ಟು ದೊಡ್ಡ ಸಂಖ್ಯೆಯ ಕ್ಯಾಂಪ್ ಒಂದೇ ಆವರಣದಲ್ಲಿ ಬಹಳ ವ್ಯವಸ್ಥಿತವಾಗಿ ನೆರವೇರಲು ಸಹಾಯ ಮಾಡಿದ ಆಳ್ವಾಸ್ ಸಂಸ್ಥೆಯ ಅಧ್ಯಕ್ಷರು, ಟ್ರಸ್ಟಿ ಹಾಗೂ ಸಹಕರಿಸಿದ ಸರ್ವರನ್ನು ಸ್ಮರಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಇಂತಹ ಶಿಬಿರಗಳು ಯುವಕರಲ್ಲಿ ದೇಶಭಕ್ತಿ, ಶಿಸ್ತು ಮತ್ತು ಸೇವಾಭಾವವನ್ನು…
ಶ್ರೀ ಬಾರ್ಕೂರು ಮಹಾಸಂಸ್ಥಾನ ಭಾರ್ಗವ ಬೀಡು ಶ್ರೀ ಸಂಸ್ಥಾನದ ದಶಮ ಸಂಭ್ರಮದ ಸಂಕಲ್ಪ ‘ಬಂಟ ಸಂಸ್ಕೃತಿ ಪರಂಪರೆ ಅನಾವರಣ’ ದಕ್ಷಿಣ ಕನ್ನಡ ಜಿಲ್ಲಾ ಮಹಾಮಂಡಲದ ಪದಗ್ರಹಣ ಸಮಾರಂಭ ಅಕ್ಟೋಬರ್ 19ರಂದು ಭಾನುವಾರ ಸಂಜೆ 3 ಗಂಟೆಗೆ ಅಡ್ಯಾರ್ ಗಾರ್ಡನ್ ನಲ್ಲಿರುವ ವಿ.ಕೆ ಶೆಟ್ಟಿ ಸಭಾಂಗಣದಲ್ಲಿ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಬಂಟ್ಸ್ ಹಾಸ್ಟೆಲ್ ನಲ್ಲಿರುವ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ನಡೆಯಿತು. ಶ್ರೀ ಬಾರ್ಕೂರು ಮಹಾಸಂಸ್ಥಾನ ಟ್ರಸ್ಟಿನ ಕಾರ್ಯಾಧ್ಯಕ್ಷ ಡಾ. ಎಂ ಮೋಹನ್ ಆಳ್ವ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಜಿಲ್ಲಾ ಮಹಾಮಂಡಲ, ತಾಲೂಕು ಮಂಡಲ ಸಹಿತ ಎಂಟು ಮಂಡಲಗಳ ಪದಗ್ರಹಣ ನಡೆಯಲಿದ್ದು, ಜವಾಬ್ದಾರಿಗಳನ್ನು ಹಂಚಿಕೊಡಲಾಯಿತು. ಜಿಲ್ಲಾ ಮಹಾಮಂಡಲದ ಗೌರವಾಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ದ.ಕ ಮಹಾಮಂಡಳ ಅಧ್ಯಕ್ಷ ಆನಂದ ಶೆಟ್ಟಿ ಅಡ್ಯಾರ್, ಜೆಪ್ಪು ಬಂಟರ ಸಂಘದ ಅಧ್ಯಕ್ಷ ವಸಂತ ಶೆಟ್ಟಿ, ಉದ್ಯಮಿ ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಬಂಟ್ವಾಳ ಬಂಟರ ಸಂಘದ ಕೋಶಾಧಿಕಾರಿ ಲೋಕೇಶ್ ಶೆಟ್ಟಿ, ಉಮೇಶ್ ರೈ ಮೇಗಿನಮನೆ,…
ಮಾಜಿ ಯೋಧ ಗರೋಡಿ ತಿಮ್ಮಪ್ಪ ಆಳ್ವ ಅವರು ಗುರುವಾರ ಸಂಜೆ ಮಂಗಳೂರಿನ ಕುಂಟಿಕಾನ ಬಳಿಯ ಲೋಹಿತ್ ನಗರದ ಸ್ವಗೃಹದಲ್ಲಿ ನಿಧನರಾದರು. ಅವರು ಪತ್ನಿ ಪುತ್ರಿಯನ್ನು ಅಗಲಿದ್ದಾರೆ. ಅವರ ಇಚ್ಛೆಯಂತೆ ದೇಹವನ್ನು ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ದಾನ ನೀಡಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆವರು ಭೂಸೇನೆಯಲ್ಲಿ ಸೇವೆ ಸಲ್ಲಿಸಿದ್ದು, 1971 ರ ಭಾರತ ಪಾಕ್ ಯುದ್ಧ ಸಂದರ್ಭ ಹೆಲಿಕಾಪ್ಟರ್ ನಲ್ಲಿ ಯುದ್ಧ ಶಿಬಿರಕ್ಕೆ ಪ್ರಯಾಣಿಸುವ ವೇಳೆ ಪಾಕ್ ಫಿರಂಗಿ ದಾಳಿಗೆ ತುತ್ತಾಗಿ ಚಿತ್ತಗಾಂಗ್ ಪ್ರದೇಶದ ಕಾಡಿನಲ್ಲಿ ಬಿದ್ದು ಜೀವನ್ಮರಣ ಹೋರಾಟ ನಡೆಸಿ ಬದುಕಿದ್ದರು. ಬಳಿಕ 10 ವರ್ಷ ಕಾಲ ದೇಶ ಸೇವೆಯಲ್ಲಿ ತೊಡಗಿದ್ದರು. ಸೇನೆಯಿಂದ ಸ್ವಯಂ ನಿವೃತ್ತರಾಗಿ ಮಂಗಳೂರಿನಲ್ಲಿ ಫುಡ್ ಇನ್ಸ್ ಪೆಕ್ಟರ್ ಆಗಿದ್ದರು. ಬೆಳ್ತಂಗಡಿ, ಬಂಟ್ವಾಳದಲ್ಲಿ ಕರ್ತವ್ಯ ನಿರ್ವಹಿಸಿ 2000 ರಲ್ಲಿ ನಿವೃತ್ತರಾಗಿದ್ದರು. ಇತ್ತೀಚೆಗೆ ಅವರ ಅನುಭವ ಕಥನ ‘ಗರೋಡಿ ಮನೆಯಿಂದ ಸೇನಾ ಗರಡಿಗೆ’ ಪ್ರಕಟವಾಗಿತ್ತು. ಪಾಕ್ ವಿರುದ್ಧದ ಮೂರೂ ಯುದ್ಧದಲ್ಲಿ ಭಾಗವಹಿಸಿದ್ದ ಹಿರಿಮೆ ಜಿ.ಟಿ ಆಳ್ವ ಅವರದ್ದು. ಡೆಹ್ರಾಡೂನ್,…
ಇದೊಂದು ಚೋಟುದ್ದದ, ರುಚಿಕರ ಪಚ್ಚೆ ಬಾಳೆಹಣ್ಣಿನ ಕತೆ. ಆಗಸ್ಟ್ 17 ರಂದು ಗುರುವಾಯೂರಿನ ಶ್ರೀಕೃಷ್ಣನ ದರ್ಶನಕಾಂಕ್ಷಿಯಾಗಿ, ಮಗ, ಮಡದಿಯೊಂದಿಗೆ ಹೋಗಿದ್ದೆ. ಬೆಳಿಗ್ಗೆ ಬೇಗ ನಾಲ್ಕರಿಂದ ಆರೂವರೆವರೆಗೆ ಹಿರಿಯ ನಾಗರಿಕರಿಗೆ ಹಾಗೂ ಅವರ ಜೊತೆಗಾರರಿಬ್ಬರಿಗೆ ನೇರ ಪ್ರವೇಶ ಎಂದು ಬರೆದಿತ್ತು ಜಾಲತಾಣದಲ್ಲಿ. ಹಾಗಾಗಿ ಬೇಗ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ನಾನಾದಿ ಆಹ್ನಿಕಗಳನ್ನು ತೀರಿಸಿ, ಮಡಿಯುಟ್ಟು ಮೂವರೂ ದೇವಸ್ಥಾನಕ್ಕೆ ಧಾವಿಸಿದೆವು. ಅಲ್ಲಿ ಹೋದರೆ, ಜಯ ವಿಜಯರು ತಡೆದು, ಆದಿತ್ಯವಾರ ಈ ವಿಶೇಷ ಸವಲತ್ತು ಹಿರಿಯ ನಾಗರಿಕರಿಗೆ ಇಲ್ಲ ಎಂದು ಹಿಂದೆ ಕಳುಹಿಸಿದರು. ಸಾಮಾನ್ಯ ದರ್ಶನ ಆಕಾಂಕ್ಷಿಗಳ ಏಳು ಸುತ್ತಿನ ಸಾಲು ನೋಡಿದರೆ, ಆ ದಿನ ದೇವಸ್ಥಾನದ ಗರ್ಭಗುಡಿಯ ತನಕ ಹೋಗಲು ನಾಲ್ಕಾರು ತಾಸು ಬೇಕು. ಅಳೆದೂ, ಸುರಿದೂ ಅರ್ಧ ಗಂಟೆ ಸರತಿ ಸಾಲಿನಲ್ಲಿ ನಿಂತು, ಪ್ರತಿಯೊಬ್ಬರೂ ಸಾವಿರ ರೂಪಾಯಿಯ ಪೂಜೆಯ ರಸೀತಿ ಪಡೆದು, ಇನ್ನೇನು ಒಳ ಹೋಗಬೇಕು ಎನ್ನುವಾಗ ಬಲಿ (ದೇವಸ್ಥಾನಕ್ಕೆ ಪ್ರದಕ್ಷಿಣೆ) ಆರಂಭವಾಯಿತು. ಕುಂಜರದ ಮೇಲೆ ಉತ್ಸವ ಮೂರ್ತಿಯನ್ನು ಹಿಡಿದುಕೊಂಡು, ಸಕಲ ವಾದ್ಯ…
ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ನಡೆದ ಮಂಗಳೂರು ವಿ.ವಿ ಅಂತರ್ ಕಾಲೇಜು ಅಂತರ್ ವಲಯ ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ಪುರುಷರ ವಾಲಿಬಾಲ್ ತಂಡವು 17ನೇ ಬಾರಿ ಪ್ರಶಸ್ತಿಯನ್ನು ಪಡೆದು, ಶ್ರೀ ಪಾಟೀಲ್ ಸಾಹುಕಾರ್ ಅಂತಯ್ಯ ಶೆಟ್ಟಿ ಮೆಮೋರಿಯಲ್ ರೋಲಿಂಗ್ ಟ್ರೋಫಿಯನ್ನು ಪಡೆದುಕೊಂಡಿದೆ. ಫೈನಲ್ ಪಂದ್ಯಾಟದಲ್ಲಿ ಪುರುಷರ ತಂಡವು ಎಸ್.ಡಿ.ಎಂ. ತಂಡವನ್ನು 3-1 ಸೆಟ್ಗಳ ಅಂತರದಿಂದ ಗೆದ್ದು ಚಾಂಪಿಯನ್ ಪಟ್ಟವನ್ನು ಪಡೆಯಿತು. ವೈಯಕ್ತಿಕ ವಿಭಾಗದಲ್ಲಿ ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಯನ್ನು ಆಳ್ವಾಸ್ನ ರಾಹುಲ್, ಬೆಸ್ಟ್ ಸೆಟ್ಟರ್ ಪ್ರಶಸ್ತಿಯನ್ನು ಆಳ್ವಾಸ್ನ ಪುನೀತ್ ಹಾಗೂ ಬೆಸ್ಟ್ ಲಿಬ್ರೊ ಪ್ರಶಸ್ತಿಯನ್ನು ಆಳ್ವಾಸ್ನ ಮಂಜುನಾಥ್ ಪಡೆದರು. ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿನಂದಿಸಿದ್ದಾರೆ.
ಕೊಡಗಿನ ಚಿತ್ರಶಿಲ್ಪ ಕಲಾವಿದ ಶ್ರೀ ಬಿ. ಕೆ. ಗಣೇಶ್ ರೈಯವರು ರಚಿಸಿರುವ ಶ್ರೀ ಕಾವೇರಿ ಮಾತೆಯ ಪುಣ್ಯಪ್ರದವಾದ ಪುರಾಣ ಚಿತ್ರ ಕಥೆ ಪುಸ್ತಕ ಕಾವೇರಿ ನದಿಯ ಉಗಮ ಸ್ಥಾನ ಪವಿತ್ರ ತೀರ್ಥ ಕ್ಷೇತ್ರ ತಲಕಾವೇರಿಯ ಸನ್ನಿಧಿಯಲ್ಲಿ 2025 ಅಕ್ಟೋಬರ್ ತುಲಾ ಮಾಸದ ೧೫ನೇ ತಾರೀಕಿನಂದು ಪೂರ್ವಾಹ್ನ ಶುಭ ಗಳಿಗೆಯಲ್ಲಿ ಸಕಲ ಪೂಜಾವಿಧಿ ವಿಧಾನಗಳೊಂದಿಗೆ ಲೋಕಾರ್ಪಣೆಯಾಯಿತು. ಮಡಿಕೇರಿ ಐಶ್ವರ್ಯ ಕ್ರಿಯೇಶನ್ಸ್ ನ ದ್ವಿತೀಯ ಪ್ರಕಟಣೆಯಾಗಿರುವ ಶ್ರೀ ಕಾವೇರಿ ಮಾತೆಯ ಪುಣ್ಯಪ್ರದವಾದ ಪುರಾಣ ಚಿತ್ರ ಕಥೆ ಪುಸ್ತಕ 1995 ರಲ್ಲಿ ಕನ್ನಡ, ಕೊಡವ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಜಲವರ್ಣ ಕಲಾಕೃತಿಯೊಂದಿಗೆ ನಿರ್ಮಾಣವಾಗಿದ್ದ ಚಿತ್ರಕಥೆ ಪುಸ್ತಕ ಇದೀಗ ದ್ವಿತೀಯ ಮುದ್ರಣ ಹಾಗೂ ಪ್ರಕಟಣೆ ನವ್ಯ ತಂತ್ರಜ್ಞಾನದೊಂದಿಗೆ ಡಿಜಿಟಲ್ ಗ್ರಾಫಿಕ್ಸ್ ನಲ್ಲಿ ಅತ್ಯಂತ ಸುಂದರವಾಗಿ ಚಿತ್ರಕಥೆ ಮೂಡಿಬಂದಿದೆ. ಈ ಬಾರಿ ಕನ್ನಡ, ಅರೆಭಾಷೆ, ಇಂಗ್ಲೀಷ್ ಮತ್ತು ತಮಿಳು ಭಾಷೆಯಲ್ಲಿ ಮುದ್ರಣವಾಗಿದೆ. ವಿವಿಧ ಭಾಷಿಗರಿಗೆ ಶ್ರೀ ಕಾವೇರಿ ಮಾತೆಯ ಪುರಾಣ ಚಿತ್ರಕಥೆ ಮಕ್ಕಳಿಂದ , ವಯೋ ವೃದ್ದರವರೆಗೂ…
ಕಾರ್ಕಳ ಸಾಣೂರಿನ ರಾಜೇಶ್ವರಿ ನ್ಯಾಶನಲ್ ಸ್ಕೂಲ್ನಲ್ಲಿ ನಡೆದ ಮೈಸೂರು ವಿಭಾಗ ಮಟ್ಟದ 14 ಮತ್ತು 17 ವರ್ಷ ವಯೋಮಾನದ ಬಾಲಕ ಬಾಲಕಿಯರ ಯೋಗಾಸನ ಸ್ಪರ್ಧೆಯಲ್ಲಿ ಆಳ್ವಾಸ್ ಶಾಲೆಯ 04 ಜನ ಬಾಲಕಿಯರು ಹಾಗೂ 08 ಜನ ಬಾಲಕರು ಒಟ್ಟು 12 ಕ್ರೀಡಾಪಟುಗಳು ಪ್ರಥಮ ಸ್ಥಾನ ಪಡೆದುಕೊಂದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಒಂದೇ ಶಾಲೆಯಿಂದ 12 ಜನ ಕ್ರೀಡಾಪಟುಗಳು ಆಯ್ಕೆಯಾಗಿರುವುದು ಆಳ್ವಾಸ್ ಕನ್ನಡ ಮಾಧ್ಯಮ ಶಾಲೆಗೆ ಹೆಮ್ಮೆಯ ವಿಚಾರವಾಗಿರುತ್ತದೆ. 14 ವರ್ಷ ವಯೋಮಿತಿ ವಿಭಾಗ :- ಅರ್ಟಿಸ್ಟಿಕ್ ಯೋಗ ಪೇರ್ : ಶ್ಯಾಮ್ ಹಾಗೂ ಶಶಿಕುಮಾರ್ – ಪ್ರಥಮ, ರಿದಮಿಕ್ ಯೋಗ ಪೇರ್ : ಆದರ್ಶ್ ಹಾಗೂ ಶಶಾಂಕ್ – ಪ್ರಥಮ, ಅರ್ಟಿಸ್ಟಿಕ್ ಸಿಂಗಲ್ : ಆದರ್ಶ್ ಕೆ ಎಸ್ – ಪ್ರಥಮ, ಟ್ರೆಡಿಶನಲ್ ಸಿಂಗಲ್ – ಶಶಿಕುಮಾರ್ ವಿ ಜಿ – ಪ್ರಥಮ, 17 ವರ್ಷ ವಯೋಮಿತಿಯ ಬಾಲಕರ ವಿಭಾಗ, ಅರ್ಟಿಸ್ಟಿಕ್ ಯೋಗ ಪೇರ್ : ಕಾರ್ತಿಕ್ ಹಾಗೂ ಪ್ರಜ್ವಲ್ – ಪ್ರಥಮ,…
ಕನ್ನಡ ಸಾಂಸ್ಕೃತಿಕ ಕೇಂದ್ರ ಕಲ್ಯಾಣ್ : ಶಿಸ್ತುಬದ್ಧ ಕವಿಗೋಷ್ಠಿಯಿಂದ ನಮ್ಮೆಲ್ಲರ ಸ್ಪೂರ್ತಿ ಹೆಚ್ಚಾಗಿದೆ – ಪ್ರಮೋದಾ ಮಾಡ
ಕನ್ನಡ ಸಾಂಸ್ಕೃತಿಕ ಕೇಂದ್ರ ಈ ಸಂಸ್ಥೆಯು ಮುಂಬೈ ಮತ್ತು ನಗರದ ಗ್ರಾಮೀಣ ಪರಿಸರದ ಬರಹಗಾರರ ಬೆನ್ನು ತಟ್ಟಿ ಈ ಬರಹಗಾರರು ಇನ್ನಷ್ಟು ಬೆಳೆಯಬೇಕು ಎಂಬ ನಿಟ್ಟಿನಲ್ಲಿ ಅವರಿಗೆ ಬಹಳ ಪ್ರೋತ್ಸಾಹ ನೀಡುತ್ತಾ ಬಂದ ಸಮಾಜಪರ ಸಾಹಿತ್ಯಪರ ಸಂಸ್ಥೆ ಆಗಿದೆ ಎಂದರೆ ಅತಿಶಯೋಕ್ತಿಯ ಮಾತಾಗದು. ಈ ವರ್ಷ ಸಂಸ್ಥೆ ನೀಡಿದ ಎಂಟು ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಇಲ್ಲಿ ಅನೇಕ ಹೊಸಬರು ಮತ್ತು ಬಹಳಷ್ಟು ಕಡೆ ಕವಿತೆಗಳನ್ನು ಸಾದರಪಡಿಸಿ ಅನುಭವ ಉಳ್ಳವರು. ಒಟ್ಟು ಈ 10 ಮಂದಿ ಕವಿಗಳು ಕೂಡಾ ತಮ್ಮ ತಮ್ಮ ಕವಿತೆಗಳನ್ನು ಬಹಳ ಸುಂದರವಾಗಿ ಪ್ರಸ್ತುತಪಡಿಸಿದ್ದಾರೆ. ಎಲ್ಲಾ ಕವಿಗಳು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಅರ್ಥಪೂರ್ಣವಾದ ಕವಿತೆಗಳನ್ನು ರಚಿಸಿ ಸಾಹಿತ್ಯಾಸಕ್ತರ ಮುಂದೆ ಸಾದರಪಡಿಸಿದ್ದಾರೆ. ಎಲ್ಲರೂ ನಿಜವಾಗಿಯೂ ಅಭಿನಂದನಾರ್ಹರು ಮಾತ್ರವಲ್ಲ ಎಲ್ಲರಿಗೂ ಸಾಹಿತ್ಯ ಕ್ಷೇತ್ರದಲ್ಲಿ ಉಜ್ವಲವಾದ ಭವಿಷ್ಯವಿದೆ ಎಂದು ನಾನು ಭಾವಿಸುತ್ತೇನೆ. ಇಂತಹ ಶಿಕ್ಷಕರ ದಿನಾಚರಣೆ ಮತ್ತು ನವರಾತ್ರಿ ಶುಭ ಸಂದರ್ಭದಲ್ಲಿ ಕವಿಗೋಷ್ಠಿಯನ್ನು ಏರ್ಪಾಡು ಮಾಡಿದ ಎರಡು ದಶಕಗಳ ಇತಿಹಾಸ ಇರುವ ಪ್ರತಿಷ್ಠಿತ ಸಂಸ್ಥೆ…
ಹಸಿವಿಗೆ ಅನ್ನದ ಹೊರತು ಚಿನ್ನ ತಿನ್ನಲು ಸಾಧ್ಯವೇ? ಹೌದಲ್ವಾ? ಉದರ ಹಸಿವಿಗೆ ಆ ಕ್ಷಣ ಅನ್ನ ನೀಡಿ ಸಹಕರಿಸುವವನೇ ಪರಮಾತ್ಮನಿಗೆ ಸಮ. ಹಸಿದವನ ಕರೆದು ಒಂದು ತುತ್ತು ಅನ್ನ ನೀಡಿ ಸಹಕರಿಸಿದರೆ ಕೋಟಿ ಪುಣ್ಯವಂತೆ. ಉಂಡವನ ಮೊಗದ ತೃಪ್ತಿ, ಬಡಿಸಿದವನ ಮುಖದಲ್ಲಿ ಸಂತೃಪ್ತಿಯ ಭಾವ. ನಾವು ಎಷ್ಟೋ ಸಾರ್ವಜನಿಕ ಸಮಾರಂಭಗಳು, ಮನೆಯ ಕಾರ್ಯಕ್ರಮಗಳಲ್ಲಿ ನೋಡುತ್ತೇವೆ. ಹಾಕಿಸಿಕೊಂಡು, ಅರ್ಧಂಬರ್ಧ ತಿಂದು ಉಣುವ ಎಲೆಯಲ್ಲೋ, ತಟ್ಟೆಯಲ್ಲೋ ಬಿಟ್ಟು ಏಳುತ್ತೇವೆ. ತಿನ್ನುವ ಆಹಾರವನ್ನು ಪೋಲು ಮಾಡಬಾರದು. ಲೋಕದಲ್ಲಿ ಹಸಿವಿನಿಂದಾಗಿ ಸಾಯುವವರೂ ಇದ್ದಾರೆ. ಮಕ್ಕಳಿಗೆ ರೈತನ ಬೆವರಿನ ಬೆಲೆಯನ್ನು ಬಾಲ್ಯದಿಂದಲೇ ಕಲಿಸಬೇಕು. ಅಕ್ಕಿ ಹೇಗೆ ಆಗುತ್ತದೆಂಬ ಅರಿವು ಮಕ್ಕಳಿಗಿರಲಿ. ‘ಅಕ್ಕಿ ಅಂಗಡಿಯಲ್ಲಿ ಬೆಳೆಯುತ್ತದೆ ಎನ್ನುವ ದಿನ ದೂರವಿಲ್ಲ. ಕೃಷಿ ಕೆಲಸ ಕಾರ್ಯಗಳು, ಅನ್ನದಾತರ ಪರಿಶ್ರಮದ, ಅವರ ಬೇನೆ ಬೇಸರಿಕೆ ಎಲ್ಲದರ ಮಾಹಿತಿ ಮಕ್ಕಳಿಗೆ ತಿಳಿದಿರಬೇಕು. ಒಂದು ಅಗುಳು ಅನ್ನವನ್ನು ಸಹ ಬಿಸಾಡಬಾರದೆಂಬ ಅರಿವಿರಲಿ. ನಾವು ಸಹ ಉಣ್ಣುವ ಆಹಾರವನ್ನು ಹಾಳು ಮಾಡಬಾರದು. ಕೊರೋನಾ ಕಾಲದಲ್ಲಿ ಆಹಾರದ ಅಗತ್ಯ…