Author: admin
ಅಮಲು ಪದಾರ್ಥಗಳ ವ್ಯಸನವು ಸಾಮಾನ್ಯ ಸಾಮಾಜಿಕ ಪಿಡುಗಾಗಿದ್ದು, ಇದು ಕೇವಲ ದೈಹಿಕ ಸಮಸ್ಯೆಯಷ್ಟೇ ಅಲ್ಲದೇ ಮಾನಸಿಕ ಹಾಗೂ ಸಾಮಾಜಿಕ ಕಾಯಿಲೆಯೂ ಆಗಿದೆ ಎಂದು ಜಸ್ಟಿಸ್ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಪ್ರಾಧ್ಯಾಪಕರಾದ ಡಾ. ಸತೀಶ್ ರಾವ್ ಹೇಳಿದರು. ಅವರು ಆಳ್ವಾಸ್ ಪುನರ್ಜನ್ಮ ಸಮಗ್ರ ವೈದ್ಯಕೀಯ ಚಿಕಿತ್ಸೆಯ ದುಶ್ಚಟ ನಿವಾರಣಾ ಕೇಂದ್ರದ ಆರನೇ ವರ್ಷದ ವಾರ್ಷಿಕೋತ್ಸವ ಹಾಗೂ ಕುಟುಂಬ ಸಮ್ಮಿಲನ ಕಾರ್ಯಕ್ರಮವನ್ನು ಆಳ್ವಾಸ್ ಪುನರ್ಜನ್ಮ ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು. ಅಮಲು ಪದಾರ್ಥಗಳ ವ್ಯಸನದಿಂದ ವ್ಯಕ್ತಿಯ ಜೀವನದಲ್ಲಿ ಆರ್ಥಿಕ ಹಾಗೂ ಕೌಟುಂಬಿಕ ಸಂಕಷ್ಟಗಳು ಉಂಟಾಗುತ್ತವೆ. ಸಮಾಜ ಆರೋಗ್ಯಕರವಾಗಿರಬೇಕಾದರೆ ಇಂತಹ ದುಶ್ಚಟಗಳು ಇರಬಾರದು. ದುರದೃಷ್ಟವಶಾತ್ ಇಂದಿಗೂ ಸಮಾಜದಲ್ಲಿ ಈ ಸಮಸ್ಯೆ ಮುಂದುವರಿದಿರುವುದು ಆತಂಕಕಾರಿ ಸಂಗತಿ. ಸಾಮಾನ್ಯವಾಗಿ ಯುವಕರು ಸುಮಾರು ಇಪ್ಪತ್ತು ವರ್ಷದ ವಯಸ್ಸಿನಲ್ಲಿ ಕುತೂಹಲ, ಸ್ನೇಹಿತರ ಒತ್ತಡ (ಪೀರ್ ಪ್ರೆಷರ್) ಮುಂತಾದ ಕಾರಣಗಳಿಂದ ಅಮಲು ಪದಾರ್ಥಗಳತ್ತ ಆಕರ್ಷಿತರಾಗುತ್ತಾರೆ. ಆರಂಭದಲ್ಲಿ ನಾವು ಅದನ್ನು ಸೇವಿಸುತ್ತೇವೆ. ನಂತರ ಅದು ನಮ್ಮನ್ನೇ ಆಳುತ್ತದೆ ಮತ್ತು ಕೊನೆಗೆ ನಾವು ಅದರ…
ಪ್ರಸ್ತುತ ಕಾಲದಲ್ಲಿ ಜನಪ್ರತಿನಿಧಿಯೆಂದರೇ ಏನೋ ರಾಜ ಎಂಬಂತೆ ಭಾಸವಾಗುತ್ತದೆ. ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಜನರ ಸೇವೆ ಮಾಡುವುದಕ್ಕಾಗಿ ಎಂಬುದನ್ನು ಮರೆತಂತಿದೆ. ಕಾರಿನಲ್ಲಿ ನಾಲ್ಕು ಜನರೊಂದಿಗೆ ಬಂದು ಇಳಿದು ಅದನ್ನು ನಮ್ಮೂರ ಕಾಯೋ ದೊರೆಯೇ ಎಂಬ ಹಾಡಿಗೆ ವಿಡಿಯೋ ಮಾಡಿ ಹಾಕಿದರೇ ಆಗಲಿಲ್ಲ. ಎಷ್ಟೇ ದೊಡ್ಡ ಜನಪ್ರತಿನಿಧಿಯಾಗಲಿ ಜನಸಾಮಾನ್ಯ ಕರೆ ಮಾಡಿದರೆ ಸ್ವೀಕರಿಸುವ ಸೌಜನ್ಯತೆ ಇರಬೇಕು. ಒಂದೊಮ್ಮೆ ಕಾರ್ಯಕ್ರಮದಲ್ಲೋ, ಸಭೆಯಲ್ಲೋ ಇದ್ದರೆ ಮಿಸ್ ಕಾಲ್ ನೋಡಿ ವಾಪಾಸು ಕರೆ ಮಾಡುವ ಪರಿಜ್ಞಾನ ಇರಬೇಕು. ಜನರ ತೆರಿಗೆಯ ಹಣದಿಂದ ಓಡಾಡಲು ಕಾರು, ಪೋನ್ ಬಿಲ್, ಸಂಬಳ ತಿನ್ನುವ ನೀವುಗಳು ಜನರ ಸಮಸ್ಯೆ ಅಥವಾ ನೋವಿಗೆ ಸ್ಪಂದಿಸುವ ಗುಣ, ಯೋಚನೆ ನಿಮ್ಮಲ್ಲಿ ಇಲ್ಲದಿದ್ದರೆ ನೀವು ಯಾವ ಕೆಲಸ ಮಾಡಿದರೂ, ಎಷ್ಟೇ ದೊಡ್ಡ ವ್ಯಕ್ತಿಯಾದರೂ ನಗಣ್ಯವೇ. ಗೆದ್ದು ಶಾಸಕರಾಗಿ, ಸಂಸದರಾಗಿ, ಪರಿಷತ್ ನ ಹುದ್ದೆಯನ್ನು ಪಡೆದ ನಂತರ ಜನಸಾಮಾನ್ಯರ ಜೊತೆ ಬೆರೆಯುವುದನ್ನು ಕಳಿಯಿರಿ. ಗೆದ್ದ ನಂತರ ನೀವು ಒಂದು ಪಕ್ಷದ ವ್ಯಕ್ತಿಯಲ್ಲ ಆಯಾ ಕ್ಷೇತ್ರದ ಜನಪ್ರತಿನಿಧಿಯಾಗಿರುತ್ತೀರಿ ನೆನಪಿಡಿ.…
ದುಂಬುದ ಎಚ್ಚಿನ ಮಾಮಿಯಲ್ಲು ಬಾರಿ ಜೋರುದಗುಲು. ಅಪಗಾಂಡ ಇತ್ತೆದ ‘ಮರ್ಮಲಲ್ಲು’ ಜೋರಾ? ಪಂದ್ ಕೇನಡೆ. ಈ ಜೋರ್ದ ಮಾಮಿಯಲ್ಲೆನ ಮಾಮಿಯಲ್ಲುಲಾ ಜೋರ್ ಇತ್ತೆರ್, ಅಂಚ ಪರಪೋಕು (ಪರಂಪರೆ) ಮುಂದ್ರ್ತೊಂದು ಇತ್ತೆರ್. ಮಾಮಿಯಾಯಿನಾಲ್ ತಾನ್ಲಾ ಮರ್ಮಲ್ ಆದ್ ಇತ್ತೆ ಪನ್ಪಿನವ್ವೆನ್ ಮದಪುವೊಲು. ಮಗಕ್ ಮದಿಮೆ ಆದ್ ಮರ್ಮಲ್ ಬರೆ ಆನಗ, ಮಾಮಿಯಲ್ಲೆಗ್ ಇಸತ ಎಂಚಿನವ ಮೂಡುಂಡುಗೆ. ‘ಮಗೆ ಸೈತೆಡಲಾ ಮಲ್ಲೆತ್ತ್, ಮರ್ಮಲ್ ಮುಂಡೆ ಮುಚ್ಚುನ ಪೊರ್ಲು ತೂವೊಡು’ ಪಂತೊಲುಗೆ ದುಂಬೊರ್ತಿ ಜೋರುದ ಮಾಮಿ. ಅಂಚ ಒರ್ತಿ ಪೊಸ ಮರ್ಮಲ್ ಬತ್ತೊಲು ಇಲ್ಲಗ್. ಮಾಮಿ ದಿನಾಲ ಮಯಿಪು ಸೂಡಿಡ್ ರಡ್ಡ್ ರಡ್ಡ್ ಬೆರಿಕ್ ನೋತೊಂದು ಇತ್ತೊಲುಗೆ. ಬೊಕ್ಕ ಅಂಚ ಕೆಲವು ತಿಂಗೊಲು ಕರಿದ್, ಬವುಸ ಆಟಿ ಕುಲ್ಲರೆ ಲೆಸೊಂದು ಪೋವರೆ ಮೆಗ್ಯೆ ಬತ್ತೆಗೆ. ಬತ್ತಿನ ಮರ್ಮಲೆನ ಮೆಗ್ಯೆ ರಡ್ಡ್ ಉಂಡಿಯೆ, ಮರ್ಮಲ್ಲಾ ಉಂಡೊಲು. ಆಲ್ ಕಯಿ ಕಾರ್ ಮೋನೆ ಗರಕ್ಕನೆ ದೆಕ್ದ್, ತರೆನ್ ಬಾರಿದ್ ಸೂಡಿ ಪಾಡ್ದ್, ಇತ್ತಿನ ಒಂಜಿ ಪಿದಾಯಿ ಪೋನಗ ತುತ್ತುನ…
ಸುಂದರ ರಾಮ ಶೆಟ್ಟಿಯವರಿಂದ ಇಂದಿಗೂ ಸಮಾಜದ ಅದೆಷ್ಟೋ ಮನೆಗಳಲ್ಲಿ ದೀಪ ಬೆಳಗುತ್ತಿದೆ -ಡಾ| ಕೆ. ಪ್ರಕಾಶ್ ಶೆಟ್ಟಿ
ಮುಲ್ಕಿ ಸುಂದರ ರಾಮ ಶೆಟ್ಟಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಸಹಾಯ ಹಸ್ತ ಪ್ರದಾನ ಸಮಾರಂಭ ಶನಿವಾರ ಮುಲ್ಕಿ ಸುಂದರ ರಾಮ ಶೆಟ್ಟಿ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಮುಲ್ಕಿ ಸುಂದರ ರಾಮ ಶೆಟ್ಟಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಇದರ ಅಧ್ಯಕ್ಷ ಡಾ| ಕೆ.ಪ್ರಕಾಶ್ ಶೆಟ್ಟಿ ಅವರು, ನಮ್ಮ ಸಮಾಜದ ಓರ್ವ ಕಣ್ಮಣಿ, ಮುಲ್ಕಿ ಕಂಡಂತಹ ಧೀಮಂತ ವ್ಯಕ್ತಿ ಮುಲ್ಕಿ ಸುಂದರ ರಾಮ ಶೆಟ್ಟಿ ಅವರ ಹೆಸರಿನಲ್ಲಿ ಟ್ರಸ್ಟ್ ಅಧ್ಯಕ್ಷನಾಗಿ ಇಂತಹ ಕಾರ್ಯಕ್ರಮ ಆಯೋಜಿಸುತ್ತಿರುವುದು ನನ್ನ ಸೌಭಾಗ್ಯ. ಸುಂದರ ರಾಮ ಶೆಟ್ಟಿಯವರ ಸ್ಮರಣಾರ್ಥ ಭವನವನ್ನು ನಿರ್ಮಿಸಲು ನನ್ನನ್ನು ಸಂಚಾಲಕನನ್ನಾಗಿ ಆಯ್ಕೆ ಮಾಡಿದ್ರು. ಆಗ ಅದನ್ನು ಅತ್ಯಂತ ಪ್ರೀತಿಯಿಂದ ಕೈಗೆತ್ತಿಕೊಂಡವನು ನಾನು. ನಂತರ ನಾಲ್ಕು ವರ್ಷಗಳ ಹಿಂದೆ ಮುಲ್ಕಿಯಲ್ಲಿ 34 ಕೋಟಿ ರೂ. ವೆಚ್ಚದಲ್ಲಿ ಭವ್ಯವಾದ ಭವನವನ್ನು ನಿರ್ಮಾಣ ಮಾಡಲಾಯಿತು. ಸುಂದರ ರಾಮ ಶೆಟ್ಟಿಯವರಿಂದ ಇಂದಿಗೂ ಸಮಾಜದ ಅದೆಷ್ಟೋ ಮನೆಗಳಲ್ಲಿ ದೀಪ ಬೆಳಗುತ್ತಿದೆ.…
ಕಳೆದ 8 ವರ್ಷಗಳ ಹಿಂದೆ 11 ಮಂದಿ ಸಮಾನ ಮನಸ್ಕ ಯುವಕ ಯುವತಿಯರು ಸೇರಿಕೊಂಡು ತಾವು ದುಡಿದ ಒಂದಂಶವನ್ನು ಈ ಸಮಾಜದ ನೆರವಿಗಾಗಿ ಅರ್ಪಿಸಬೇಕೆನ್ನುವ ಉದ್ದೇಶದಿಂದ ತನ್ನ ದಿಟ್ಟ ಸಂದೇಶಗಳಿಂದ ಜನಮನವನ್ನು ತಟ್ಟಿದ ಸ್ವಾಮಿ ವಿವೇಕಾನಂದರ ಜನ್ಮ ಜಯಂತಿಯಂದು ದೇಶ ವಿದೇಶದ ಕ್ಯಾನ್ಸರ್ ರೋಗಿಗಳಿಗೆ ಆಶ್ರಯವನ್ನು ನೀಡುತ್ತಿರುವ ಮುಂಬಯಿ ಮಹಾನಗರದ ದಾದರ್ ನಲ್ಲಿರುವ ಸಂತ ಘಾಡ್ಗೆ ಮಹಾರಾಜ್ ಧರ್ಮಶಾಲೆಯಲ್ಲಿ ಶಿವಾಯ ಫೌಂಡೇಶನ್ ಸಂಸ್ಥೆಯ ಉದ್ದೀಪನವಾಯಿತು. ನಂತರ ಈ ಸಂಸ್ಥೆಯ ಕೆಲಸ, ಕಾರ್ಯ ಚಟುವಟಿಕೆಗಳು ಆಶಕ್ತರ ಸೇವೆಗೆ ಮುಡಿಪಾಗಿಟ್ಟ ಪರಿ ನಿಜವಾಗಿಯೂ ಜನಮನ ತಟ್ಟುವಂತಹುದು. ವೈದ್ಯಕೀಯ ನೆರವಿನೊಂದಿಗೆ ಆರಂಭವಾದ ಶಿವಾಯ ಸಂಸ್ಥೆಯ ಕಾರ್ಯ ಚಟುವಟಿಕೆಗಳು ಮತ್ತಷ್ಟು ವಿಸ್ತಾರಗೊಳ್ಳುತ್ತಾ ಹೋಯಿತು. ಮುಂದೆ ಸಂಸ್ಥೆಯು ಪ್ರತಿ ತಿಂಗಳು ವೈದ್ಯಕೀಯ ನೆರವು, ಶೈಕ್ಷಣಿಕ ಸಹಾಯ, ಪ್ರತಿಭಾವಂತ ಸರಕಾರಿ ಶಾಲಾ, ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೆ.ಇ.ಎಮ್ ಮುನ್ಸಿಪಲ್ ಆಸ್ಪತ್ರೆ ಮುಂಬಯಿಯ ಟಾಟಾ ಕ್ಯಾನ್ಸರ್ ಆಸ್ಪತ್ರೆಯ ರೋಗಿಗಳು ಮತ್ತು ರೋಗಿಗಳ ಸಂಬಂಧಿಕರಿಗೆ, ಬೀದಿಬದಿ ನಿರಾಶ್ರಿತರಿಗೆ ಪ್ರತಿ ರವಿವಾರ…
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮಂಗಳೂರು ವಿಶ್ವವಿದ್ಯಾಲಯ, ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿ, ಕರ್ನಾಟಕ ಕಾನೂನು ವಿವಿ, ಕೆಳದಿ ಶಿವಪ್ಪ ನಾಯಕ ಕೃಷಿ ವಿವಿ ಹಾಗೂ ಆಳ್ವಾಸ್ ಸ್ವಾಯತ್ತ ಕಾಲೇಜುಗಳ ವಾರ್ಷಿಕ ಕ್ರೀಡಾಕೂಟ -2026 ಸ್ವರಾಜ್ಯ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಮಂಗಳೂರು ಕಸ್ಟಮ್ಸ್ ಇಲಾಖೆಯ ನಿವೃತ್ತ ಅಧೀಕ್ಷಕ ದಿನೇಶ್ ಕುಂದರ್, ಆಳ್ವಾಸ್ ಸಂಸ್ಥೆ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಅವಕಾಶಗಳನ್ನು ಒದಗಿಸುತ್ತಿರುವುದು ಪ್ರಶಂಸನೀಯ. ಡಾ. ಎಂ. ಮೋಹನ್ ಆಳ್ವರು ಕರ್ನಾಟಕದ ಶಿಕ್ಷಣ ಕ್ಷೇತ್ರದ ಅನರ್ಘ್ಯ ರತ್ನ. ಆಳ್ವಾಸ್ ಕ್ರೀಡಾ ದತ್ತು ಸ್ವೀಕಾರ ಯೋಜನೆಯಡಿ ದೇಶದ ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರೀಡೆಯಲ್ಲಿ ತರಬೇತಿ ಪಡೆದು ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮೆರೆಯುತ್ತಿರುವುದು ಸಂಸ್ಥೆಯು ಕ್ರೀಡೆಗೆ ನೀಡುತ್ತಿರುವ ಬದ್ಧತೆಯನ್ನು ತೋರಿಸುತ್ತದೆ ಎಂದರು. ಪ್ರತಿದಿನ ಕನಿಷ್ಠ ಒಂದು ದೈಹಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದು ಗಮನ, ಏಕಾಗ್ರತೆ ಹಾಗೂ ಶಾರೀರಿಕ ಕ್ಷಮತೆಯನ್ನು ಹೆಚ್ಚಿಸುತ್ತದೆ.…
‘ಚಿಗುರಿನ ನಗುವಿನಲ್ಲಿ ಫಲದ ಸಿಹಿ ಅಡಗಿದೆ’ ಎನ್ನುವುದು ಬಲ್ಲವರ ಕಾವ್ಯಾತ್ಮಕ ನುಡಿ. ದೇಶ ವಿದೇಶಗಳಲ್ಲಿ ಶಾಸ್ತ್ರೀಯ, ಭಾವಪೂರಿತ, ಜಾನಪದ, ಭಕ್ತಿಪೂರ್ವಕ ಗಾಯನ ತಂಡ “ಸ್ವರಸಮರ್ಪಣೆ” ಇಂದು ಕಿರಿಯ, ಯುವ, ಹರೆಯದ ಮನಗಳಿಗೆ ಇಂಪಿನ ತಂಪು ಕೊಡುತ್ತಿದೆ. ದಿವ್ಯನಿಧಿಯವರ ಒಟ್ಟು ಐದಾರು ಜನರಿರುವ ಸ್ವಚ್ಛ ತಂಡ ಪ್ರೇಕ್ಷಕರ ಅಭಿರುಚಿಗೆ ಅನುಗುಣವಾಗಿ ಸಂಗೀತದ ಸಿಂಚನ ನೀಡುತ್ತಿರುವುದು ನಿಜವಾಗಲೂ ಅಭಿನಂದನಾರ್ಹ. ತನ್ನ ಎಳವೆಯಲ್ಲೇ ಬಹರೈನ್, ದುಬೈ, ಆಫ್ರಿಕಾ, ಕೀನ್ಯಾ, ಕತಾರ್ ಹೀಗೆ ಸಪ್ತಸಾಗರ ದಾಟಿ ಸ್ವರ ಕೊಟ್ಟ ಪ್ರಶಂಸಾರ್ಹ ಬಳಗವಿದು. ಭಜನೆಯ ಮೂಲದಿಂದ ಇಂದು ನುರಿತ ಕಲಾವಿದರ ನಡುವೆಯೂ ಪ್ರೋತ್ಸಾಹ ಗಿಟ್ಟಿಸಿದ ಅದ್ಭುತ ಗಾಯಕಿ. ವಿದ್ಯಾಸಂಸ್ಥೆಗಳು, ಸಾಂಸ್ಕೃತಿಕ ರಂಗವೇದಿಕೆಯ ಕಾರ್ಯಕ್ರಮಗಳು, ಮನೆಯ ಕಾರ್ಯಕ್ರಮಗಳಲ್ಲಿ ಸಮರ್ಪಣೆಯ ಮನೋಭಾವವುಳ್ಳ ಈಕೆಯ ಶ್ರಮಕ್ಕೆ ನಾವೆಲ್ಲಾ ಸಲ್ಯೂಟ್ ಹೇಳಲೇಬೇಕು. ನುಗುಮೊಗದ ಸ್ವರ, ಸ್ಪಷ್ಟ ಸಾಹಿತ್ಯ, ಶುದ್ಧ ಹಿಮ್ಮೇಳಗಳು ಇಂದು ಅಪರಿಮಿತ ಕೇಳುಗರ ಮನ ತಟ್ಟಿದೆ ಎಂಬ ಹೆಮ್ಮೆ ಈಕೆಗಿದೆ. ಗ್ರಾಮೀಣ ಪ್ರದೇಶದಲ್ಲಿ ಬೆಳೆದ ಈ ಸ್ವಚ್ಛ ಮನಕ್ಕೆ ಇನ್ನಷ್ಟು ಸ್ವರ ಸಂಗೀತದ…
ಅಖಿಲ ಭಾರತ ಪೊಲೀಸ್ ಅಥ್ಲೆಟಿಕ್ಸ್ ಕ್ಲಸ್ಟರ್ ಪುರುಷರ ಡೆಕಾಥ್ಲಾನ್ ಸ್ಪರ್ಧೆ : ಅಭಿಷೇಕ್ ಶೆಟ್ಟಿಯವರಿಗೆ ಚಿನ್ನದ ಪದಕ
ಪಂಜಾಬ್ ನ ಜಲಂಧರ್ ನಲ್ಲಿ ಮಾರ್ಚ್ 7ರಿಂದ 12ರವರೆಗೆ ನಡೆದ 74ನೇ ಅಖಿಲ ಭಾರತ ಪೊಲೀಸ್ ಅಥ್ಲೆಟಿಕ್ಸ್ ಕ್ಲಸ್ಟರ್ ಪುರುಷರ ಡೆಕಾಥ್ಲಾನ್ ಸ್ಪರ್ಧೆಯಲ್ಲಿ ಕರ್ನಾಟಕದ ಇನ್ಸ್ ಪೆಕ್ಟರ್ ಅಭಿಷೇಕ್ ಶೆಟ್ಟಿ ಮೊದಲ ಸ್ಥಾನದೊಂದಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಕರ್ನಾಟಕ ಪೊಲೀಸ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಅಥ್ಲೀಟ್ ಎಂಬ ಹಿರಿಮೆಗೆ ಅಭಿಷೇಕ್ ಶೆಟ್ಟಿ ಭಾಜನರಾಗಿದ್ದಾರೆ. 10 ಕ್ರೀಡೆಗಳನ್ನು ಒಳಗೊಂಡ ಈ ಸ್ಪರ್ಧೆಯಲ್ಲಿ ಒಟ್ಟಾರೆ 6,709 ಅಂಕಗಳನ್ನು ಕಲೆ ಹಾಕಿ ಮೊದಲ ಸ್ಥಾನ ಗಳಿಸಿದ ಅಭಿಷೇಕ್ ಅವರು ಕಡಬ ಕಡಬ ತಾಲೂಕಿನ ಸವಣೂರು ನಡುಬೈಲು ಜಗನ್ನಾಥ ಶೆಟ್ಟಿ ಹಾಗೂ ತುಳಸಿನಿ ಶೆಟ್ಟಿ ಮನವಳಿಕೆಗುತ್ತು ದಂಪತಿಗಳ ಸುಪುತ್ರ.
ಅಯೋಧ್ಯೆಯಲ್ಲಿ ಪೂಜ್ಯ ಶ್ರೀ ಬಾಲಯೋಗಿ ಸದಾನಂದ ಸ್ವಾಮಿ ತುಂಗಾರೇಶ್ವರ ನೇತೃತ್ವದಲ್ಲಿ ದೀಪೋತ್ಸವ : ತೋನ್ಸೆ ನವೀನ್ ಶೆಟ್ಟಿಯವರಿಗೆ ಗೌರವ
ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪವಿತ್ರ ಅಂಗಳದಲ್ಲಿ ಇತ್ತೀಚೆಗೆ ಭಕ್ತಿ ಮತ್ತು ಆಧ್ಯಾತ್ಮದ ಅಲೆ ಎದ್ದಿತು. ಗಣೇಶಪುರಿಯ ಪರಮ ಪೂಜ್ಯ ಶ್ರೀ ಬಾಲಯೋಗಿ ಸದಾನಂದ ಸ್ವಾಮಿ ತುಂಗಾರೇಶ್ವರ ಅವರ ದಿವ್ಯ ನೇತೃತ್ವದಲ್ಲಿ ನಡೆದ ಪಾರಾಯಣ ಮತ್ತು ದೀಪೋತ್ಸವ ಕಾರ್ಯಕ್ರಮವು ನೆರೆದಿದ್ದ ಸಾವಿರಾರು ಭಕ್ತರ ಕಣ್ಮನ ಸೆಳೆಯಿತು. ಮಂದಿರದ ಪ್ರಾಂಗಣವು ಮಂತ್ರಘೋಷಗಳಿಂದ ಮೊಳಗುತ್ತಿದ್ದರೆ, ಸಾಲು ಸಾಲಾಗಿ ಬೆಳಗಿದ ಹಣತೆಗಳು ಅಯೋಧ್ಯೆಯ ಧರ್ಮದೀಪ್ತಿಯನ್ನು ಜಗತ್ತಿಗೆ ಸಾರುವಂತಿದ್ದವು. ಈ ಶುಭ ಸಂದರ್ಭದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಮುಲುಂಡ್ ನಿವಾಸಿ, ಖ್ಯಾತ ಉದ್ಯಮಿ ನವೀನ್ ಶೆಟ್ಟಿ ತೋನ್ಸೆ ಅವರ ಸೇವೆಯನ್ನು ಗುರುತಿಸಿ ಗೌರವಿಸಲಾಯಿತು. ಶ್ರೀ ಬಾಲಯೋಗಿ ಸದಾನಂದ ಸ್ವಾಮೀಜಿಯವರು ನವೀನ್ ಶೆಟ್ಟಿ ಅವರನ್ನು ಸನ್ಮಾನಿಸಿ ಆಶೀರ್ವದಿಸಿದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಿ ರಾಮ ಮಂದಿರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿಗಳಾದ ಚಂಪತ್ ರಾಯ್ ಜಿ ಅವರು ಉಪಸ್ಥಿತರಿದ್ದು, ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದರು. ಭಕ್ತರ ಸಮ್ಮುಖದಲ್ಲಿ ನಡೆದ ಈ…
ನಾಳೆ ಮಗಳ ಹತ್ತನೇ ವರ್ಷದ ಹುಟ್ಟುಹಬ್ಬದ ಸಂಭ್ರಮಕ್ಕೆ ಸಿದ್ಧತೆ ನಡೆಯಬೇಕಿದ್ದ ಮನೆಯಲ್ಲಿ, ಇಂದು ತಂದೆಯ ಶವದ ಮುಂದೆ ಆಕ್ರಂದನ ಮುಗಿಲು ಮುಟ್ಟಿದೆ. ಬಂಟ್ವಾಳದ ಪ್ರತಿಭಾವಂತ ಛಾಯಾಗ್ರಾಹಕ ರಕ್ಷಿತ್ ಶೆಟ್ಟಿ (43) ಇನ್ನಿಲ್ಲ. ರಾತ್ರಿ ಸಂಭವಿಸಿದ ಆ ಒಂದು ಭೀಕರ ಅಪಘಾತ, ಒಂದು ಸುಂದರ ಸಂಸಾರವನ್ನು ಅನಾಥವಾಗಿಸಿದೆ. ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಕ್ಷಿತ್ ಇಂದು (ಮಾರ್ಚ್ 14) ಕೊನೆಯುಸಿರೆಳೆದಿದ್ದಾರೆ. ಸಂಭ್ರಮದ ಹೊಸ್ತಿಲಲ್ಲಿ ಸೂತಕ ನಾಳೆ ಮಾರ್ಚ್ 15. ಮಗಳ ಸಂಭ್ರಮದ ದಿನಕ್ಕಾಗಿ ತಂದೆ ಎಷ್ಟೋ ಕನಸು ಕಂಡಿದ್ದರು. ಆದರೆ ಆ ಸಂಭ್ರಮದ ಕ್ಷಣಗಳು ಹತ್ತಿರ ಬರುವ ಮೊದಲೇ ಸಾವು ಇವರನ್ನು ಹಿಂಬಾಲಿಸಿ ಬಂದಿದೆ. ಮಗಳ ಬದುಕಿನಲ್ಲಿ ಬೆಳಕು ತುಂಬಬೇಕಿದ್ದ ತಂದೆ ಇಂದು ಕತ್ತಲಲ್ಲಿ ತಳ್ಳಿ ಮರೆಯಾಗಿದ್ದಾರೆ. ರಕ್ಷಿತ್ ಅವರ ಕುಟುಂಬಕ್ಕೆ ಹಣೆಬರಹದ ಹೊಡೆತ ಇದೇ ಮೊದಲಲ್ಲ. ಈಗಾಗಲೇ ಇವರ ಸಹೋದರ ರಂಜಿತ್ ಅವರು ಅಪಘಾತಕ್ಕೀಡಾಗಿ ಹಾಸಿಗೆ ಹಿಡಿದಿದ್ದಾರೆ. ಈಗ ಇಡೀ ಮನೆಯ ಆಧಾರಸ್ತಂಭವಾಗಿದ್ದ ರಕ್ಷಿತ್ ಅವರೇ ಇಹಲೋಕ ತ್ಯಜಿಸಿರುವುದು ಆ…















