Author: admin

ಅರಬ್ ಸಂಯುಕ್ತ ಸಂಸ್ಥಾನ ವಾಣಿಜ್ಯ ನಗರಿ ದುಬಾಯಿಯಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಆಶ್ರಯದಲ್ಲಿ 24ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಫೆಬ್ರವರಿ 1 ರಂದು ದುಬಾಯಿ ಅಲ್ ಸಫಾದಲ್ಲಿರುವ ಜೆ.ಎಸ್.ಎಸ್ ಪ್ರೈವೈಟ್ ಸ್ಕೂಲ್ ಸಭಾಂಗಣದಲ್ಲಿ ಸಂಜೆ ಸಂಕಲ್ಪ ಹಾಗೂ ಸುಮಂಗಲೆಯರಿಂದ ಜ್ಯೋತಿ ಬೆಳಗುವುದರರೊಂದಿಗೆ ಪ್ರಾರಂಭವಾಯಿತು. ಪುರೋಹಿತ ಶ್ರೀ ರಘು ಭಟ್ ರವರ ಪೌರೋಹಿತ್ಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಾರ್ಥನೆ, ಸಂಕಲ್ಪ, ಗುರುಗಣಪತಿ ಪೂಜೆ, ಕಳಸ ಪೂಜೆ, ನವಗ್ರಹ ಪೂಜೆ, ವೃತಕ ಲೋಕ್ತ ಪೂಜೆ, ಕಥಾಸಾರ, ಮಹಾನೈವೇದ್ಯ, ಮಂಗಳಾರತಿ, ಬ್ರಾಹ್ಮಣರಾಧನೆ, ಸುವಾಸಿನಿ ಪೂಜೆ, ಕನ್ನಿಕಾರಾಧನೆ ತೀರ್ಥ ಪ್ರಸಾದ ಮತ್ತು ಮಹಾಪ್ರಸಾದ ವಿತರಣೆ ಮಾಡಲಾಯಿತು. ಪೂಜೆಯಲ್ಲಿ ಸಾರ್ವಜನಿಕರ ಪರವಾಗಿ ಶ್ರೀಮತಿ ಅಂಜಲಿ ಕೌಶಿಕ್ ದಂಪತಿ, ಕಾರ್ಯಕಾರಿ ಸಮಿತಿಯ ಪರವಾಗಿ ಶ್ರೀಮತಿ ವೀಣಾ ಸುದರ್ಶನ್ ಹೆಗ್ಡೆ ಕಾರ್ಕಳ ದಂಪತಿಗಳು ಪೂಜೆಯಲ್ಲಿ ಕುಳಿತು ಪೂಜಾ ಕಾರ್ಯದಲ್ಲಿ ಭಾಗಿಗಳಾಗಿದ್ದರು. ದುಬಾಯಿಯಲ್ಲಿ ನೆಲೆಸಿ ಕಾರ್ಯೋನ್ಮುಖವಾಗಿರುವ ಸಂಘ ಸಂಸ್ಥೆಗಳಾದ ಯು.ಎ.ಇ ಬಂಟ್ಸ್, ಬಿಲ್ಲವಾಸ್ ಫ್ಯಾಮಿಲಿ ದುಬಾಯಿ,…

Read More

ಸೌರಾಷ್ಟ್ರ (ಗುಜರಾತ್) ರಾಜ್ಯ ಮಹಿಳಾ ಕ್ರಿಕೆಟ್ ತಂಡಕ್ಕೆ ಮುನಿಯಾಲು ಮೂಲದ ನಿತ್ಯಾ ಶೆಟ್ಟಿ ಆಯ್ಕೆಯಾಗಿದ್ದಾರೆ. 21 ವರ್ಷದ ನಿತ್ಯಾ ಶೆಟ್ಟಿ ಫೆಬ್ರವರಿ 6 ರಂದು ರಾಂಚಿಯಲ್ಲಿ ನಡೆಯಲಿರುವ ಅಂಡರ್ 23 ವುಮೆನ್ಸ್ ಬಿ.ಸಿ.ಸಿ.ಐ ಟೂರ್ನಮೆಂಟ್ ನಲ್ಲಿ ಸೌರಾಷ್ಟ್ರ ತಂಡದಲ್ಲಿ ಅಗ್ರ ಕ್ರಮಾಂಕದ ಆಟಗಾರ್ತಿ ಹಾಗೂ ಮಧ್ಯಮ ವೇಗದ ಬೌಲರ್ ಆಗಿ ಆಡಲಿದ್ದಾರೆ. ಇವರು ಮೂಲತಃ ಮುನಿಯಾಲು ಬೈಲಿನವರಾದ ಆರತಿ ಶೆಟ್ಟಿ ಮತ್ತು ಗುಜರಾತ್ ನ ವಿಪುಲ್ ಪಾಂಚಲ್ ದಂಪತಿಯ ಪುತ್ರಿ.

Read More

ಇಡೀ ಜಗತ್ತೇ ದಾವಂತದಲ್ಲಿ ಮುಂದೆ ಹೋಗುತ್ತಾ ಇದೆ. ಅಗತ್ಯತೆಯನ್ನು ಪೂರೈಸಲು ಅನಿವಾರ್ಯವಾಗಿ ಎಲ್ಲರೂ ದುಡ್ಡಿನ ಹಿಂದೆ ಓಡುವವರೆ!! ಅದರ ಜೊತೆ ದೈವ ದೇವರು ಎಂಬ ಭಯ ಭಕ್ತಿ ಈಗೀಗ ಸ್ವಲ್ಪ ಹೆಚ್ಚೇ ಆಗಿದೆ. ಇದು ಕಾಂತರ ಚಿತ್ರದ ಎಫೆಕ್ಟ್ ಅಂದರೆ ಹೆಚ್ಚಾಗದು. ಪ್ರಸ್ತುತ ಸಂಬಂಧದೊಳಗೂ ಮನುಷ್ಯ ಮನುಷ್ಯರ ನಡುವಿನ ಆಪ್ತತೆಗಿಂತ ದೈವದೇವರಲ್ಲಿ ಮಾತಾಡುವುದು ಹೆಚ್ಚಾಗಿದೆ. ಅವ್ಯಕ್ತ ಶಕ್ತಿಯಲ್ಲಿ ವಿಶ್ವಾಸ ಗಾಢವಾಗುತ್ತಿದೆ. ಒಂದು ಕಾಲದಲ್ಲಿ ವಿದ್ಯಾಭ್ಯಾಸವಿರದ ಹಳ್ಳಿಯ ಮಂದಿ ಮಾತ್ರ ನಂಬುತ್ತಿದ್ದ ಕೆಲವರು ಬರೀ ಮೂಢನಂಬಿಕೆ ಎಂದು ಮೂಗು ಮುರಿದಿದ್ದ ಸತ್ಯ ಈಗ ವಿದ್ಯಾವಂತರ ಮೂಲ ನಂಬಿಕೆಯಾಗಿ ಬೆಳೆದಿದೆ. ಇದು ನಿಜಕ್ಕೂ ಸಂತೋಷದಾಯಕ ಬೆಳವಣಿಗೆ. ನಾನು ಮಂಗಳೂರಿಗೆ ಬಂದವ ಒಂದು ತಿಂಗಳು ಇದ್ದು ಮತ್ತೆ ವಾಪಾಸ್ ನೈಜೀರಿಯಾಕ್ಕೆ ಬಂದೆ. ಒಂದು ತಿಂಗಳಲ್ಲಿ ಶರವು ಶ್ರೀ ಮಹಾಗಣಪತಿ, ಕದ್ರಿ ಶ್ರೀ ಮಂಜುನಾಥ, ಶ್ರೀ ಮಂಗಳಾದೇವಿ, ಪೊಳಲಿ ಶ್ರೀ ರಾಜರಾಜೇಶ್ವರಿ, ಕಟೀಲು ಶ್ರೀ ಉಳ್ಳಾಲ್ತಿ, ಕುಡುಪು ಶ್ರೀ ಅನಂತ ಪದ್ಮನಾಭ, ವಾಮಂಜೂರು ಶ್ರೀ ಅಮೃತೇಶ್ವರ, ತಿರುವೈಲು…

Read More

ಬಂಟ ಸಮಾಜದ ವಿದ್ಯಾವಂತ ಯುವಕರು ಹಣಕಾಸು ಮತ್ತು ಮಾರ್ಕೆಟಿಂಗ್ ವಿಭಾಗದಲ್ಲಿ ಅದ್ಭುತ ಸಾಧನೆಗೈದ ವಿಚಾರ ನಮಗೆಲ್ಲರಿಗೂ ಗೊತ್ತೇ ಇದೆ. ಇಲ್ಲಿ ನಾವು ಪರಿಚಯಿಸಲು ಬಯಸುತ್ತಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಬಲು ಪ್ರತಿಷ್ಠಿತ ಬೆಳ್ಳಿಪ್ಪಾಡಿ ಸಂಜಾತ ಬಹುಮುಖ ಪ್ರತಿಭೆಯ ಹತ್ತಾರು ಕ್ಷೇತ್ರಗಳಲ್ಲಿ ಪ್ರಾವೀಣ್ಯತೆ ಸಾಧಿಸಿದ ಶ್ರೀ ಅಮೋಘ್ ಜೆ ರೈ ಅವರನ್ನು. ಪ್ರಸ್ತುತ ಪ್ರವೀಣ್ ಕ್ಯಾಪಿಟಲ್ ಸರ್ವಿಸಸ್ ಪ್ರೈ.ಲಿ. ಇಲ್ಲಿ ಮುಖ್ಯ ಕಾರ್ಯನಿರ್ವಾಹಕರಾಗಿರುವ ಅಮೋಘ್ ಅವರ ನೊಂದಾಯಿತ ಕಛೇರಿ ಮಂಗಳೂರಿನಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ತೀವ್ರ ಪ್ರಗತಿ ಕಂಡ ಹಣಕಾಸು ಉದ್ಯಮ ರಾಜ್ಯದ ವಿವಿಧ ಪ್ರದೇಶಗಳಲ್ಲಿ ಒಟ್ಟು ಇಪ್ಪತ್ತು ಶಾಖೆಗಳನ್ನು ಹೊಂದಿದೆ. ತನ್ನ ವೃತ್ತಿಪರ ಜೀವನ ಹಾಗೂ ಸಂಕ್ಷಿಪ್ತ ಭಾರತ ನಾನ್ ಬ್ಯಾಂಕಿಂಗ್ ಫೈನಾನ್ಸ್ ಕ್ಷೇತ್ರದಲ್ಲಿ ಎರಡೂವರೆ ದಶಕ ಕಾಲದ ದೀರ್ಘಾನುಭವ ಹೊಂದಿರುತ್ತಾರೆ. ಮೈಸೂರಿನ ಎಸ್.ಡಿ.ಎಂ.ಐಎಮ್.ಡಿ ಯಿಂದ ಆಡಳಿತ ವ್ಯವಹಾರ ಕುಶಲತೆ ಕುರಿತಂತೆ ಸ್ನಾತಕೋತ್ತರ ಡಿಪ್ಲೊಮಾ ಪಡೆದ ಪ್ರತಿಭಾವಂತ. ಪ್ರವೀಣ್ ಕ್ಯಾಪಿಟಲ್ ಇಂದು ಜೀರಾ ಮತ್ತು ಇತರ ತಂಪು ಪಾನೀಯಗಳಿಗೆ ಪ್ರಸಿದ್ಧಿ ಪಡೆದ ಎಸ್…

Read More

ಪಾವೂರು ಬಂಟರ ಸಂಘದ ಆಶ್ರಯದಲ್ಲಿ ನಡೆದ ಹಗ್ಗ ಜಗ್ಗಾಟ ಸ್ಫರ್ಧೆಯಲ್ಲಿ ಸುರತ್ಕಲ್ ಬಂಟರ ಸಂಘದ ಮಹಿಳೆಯರ ತಂಡ 490 ಕೆ.ಜಿ ವಿಭಾಗದಲ್ಲಿ ಪ್ರಥಮ‌ ಮತ್ತು ದ್ವಿತೀಯ ಪ್ರಶಸ್ತಿ ಹಾಗೂ ಮುಕ್ತ ವಿಭಾಗದಲ್ಲೂ ಪ್ರಥಮ ಮತ್ತು ದ್ವಿತೀಯ ಪ್ರಶಸ್ತಿ ಪಡೆದುಕೊಂಡಿದೆ. ಕೆ.ಜಿ ವಿಭಾಗದಲ್ಲಿ ಬೆಸ್ಟ್ ಲಾಕರ್ ಪ್ರಶಸ್ತಿಯನ್ನು ಚಂದ್ರಕಲಾ ಶೆಟ್ಟಿ, ಮುಕ್ತ ವಿಭಾಗದಲ್ಲಿ ಬೆಸ್ಟ್ ಲಾಕರ್ ಪ್ರಶಸ್ತಿಯನ್ನು ಪ್ರವ್ಯ ಹೆಗ್ಡೆ ಹಾಗೂ ಬೆಸ್ಟ್ ಓಲ್ಡರ್ ಪ್ರಶಸ್ತಿಯನ್ನು ತಂಡದ ನಾಯಕಿ ಬಬಿತಾ ಶೆಟ್ಟಿ ಪಡೆದರು. ತರಬೇತುದಾರರಾದ ಆದರ್ಶ್ ಶೆಟ್ಟಿ, ನವೀಶ್ ಶೆಟ್ಟಿ ಪಡ್ರೆ, ನಿನಾದ್ ಜಯರಾಮ ಶೆಟ್ಟಿ, ರೋಹಿತ್ ಶೆಟ್ಟಿ ಉಪಸ್ಥಿತರಿದ್ದರು.

Read More

ಭಾರತೀಯ ಮಾಸ್ಟರ್ಸ್ ವೇಟ್‌ಲಿಫ್ಟಿಂಗ್ ತಂಡವು ಉದಯ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಜನವರಿ 30 ರಿಂದ ಫೆಬ್ರವರಿ 1ರವರೆಗೆ ಜರ್ಮನಿಯಲ್ಲಿ ನಡೆದ ಓಪನ್ ವರ್ಲ್ಡ್ ಚಾಂಪಿಯನ್‌ ಶಿಪ್‌ನಲ್ಲಿ ಭಾಗವಹಿಸಿ 3 ಚಿನ್ನ, 4 ಬೆಳ್ಳಿ ಹಾಗೂ 2 ಕಂಚಿನ ಪದಕಗಳನ್ನು ತನ್ನದಾಗಿಸಿ ದ್ವಿತೀಯ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಯಿತು. ತಂಡವು ಹೆಚ್ಚಿನ ಆತ್ಮವಿಶ್ವಾಸದಿಂದ ಚಾಂಪಿಯನ್‌ ಶಿಪ್‌ಗೆ ಪ್ರವೇಶಿಸಿತ್ತು. ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಇಂಡಿಯನ್ ಮಾಸ್ಟರ್ಸ್ ಫೆಡರೇಶನ್‌ನ ಅಧ್ಯಕ್ಷ, ಮಾಜಿ ರಾಷ್ಟ್ರೀಯ ಚಾಂಪಿಯನ್, ಅಂತರರಾಷ್ಟ್ರೀಯ ರೆಫರಿ, ಶಿವ ಛತ್ರಪತಿ ಪ್ರಶಸ್ತಿ ಪುರಸ್ಕೃತ ಮತ್ತು ಇಂಡಿಯನ್ ಮಾಸ್ಟರ್ಸ್ ಫೆಡರೇಷನ್ ನ ಪ್ರಧಾನ ಕಾರ್ಯದರ್ಶಿಯಾದ ಉದಯ್ ಎಸ್ ಶೆಟ್ಟಿ ನೇತೃತ್ವದಲ್ಲಿ ಭಾಗವಹಿಸಿದ್ದ 9 ಸದಸ್ಯರೂ ಕೂಡಾ ಪದಕ ಗೆದ್ದದ್ದು ವಿಶೇಷ. ಕ್ರೀಡಾ ಮಂತ್ರಿ ಡಾ. ಮನ್ಸುಖ್ ಲಕ್ಷ್ಮಣಭಾಯ್ ಮಾಂಡವಿಯಾ ಗೆದ್ದ ಎಲ್ಲಾ ಸದಸ್ಯರಿಗೂ ಅಭಿನಂದನೆಗಳನ್ನು ತಿಳಿಸಿದ್ದಾರೆ.

Read More

ಕರಿಕಾಡ ಸಿನಿಮಾವನ್ನು ಫೆಬ್ರವರಿ 6 ರಂದು ಕರ್ನಾಟಕ ರಾಜ್ಯದಾದ್ಯಂತ ನೂರು ಥಿಯೇಟರ್ ಗಳಲ್ಲಿ ರಿಲೀಸ್ ಮಾಡ್ತಾ ಇದ್ದೇವೆ. ನಾಯಕ ನಟನಾಗಿ ನಾನೇ ಅಭಿನಯಿಸಿದ್ದು. ನಾಯಕಿಯಾಗಿ ತುಳು ಸಿನಿಮಾಗಳಲ್ಲಿ ನಟಿಸಿರುವ ನಿರೀಕ್ಷಾ ಶೆಟ್ಟಿ ನಟಿಸಿದ್ದಾರೆ. ಯಶ್ ಶೆಟ್ಟಿ, ರಾಜು ಬೆಳವಾಡಿ, ದಿ. ರಾಕೇಶ್ ಪೂಜಾರಿ, ಚಂದ್ರಪ್ರಭಾ ಮತ್ತಿತರರು ನಟಿಸಿದ್ದಾರೆ ಎಂದು ಚಿತ್ರದ ನಟ ಕಾಡ ನಟರಾಜ್ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ಕಳಸ, ಕುದ್ರೆಮುಖ, ಚಿಕ್ಕಮಗಳೂರು, ಮಂಡ್ಯ, ಮೈಸೂರು, ಚನ್ನಪಟ್ಟಣದಲ್ಲಿ ಸಿನಿಮಾ ಚಿತ್ರೀಕರಣ ನಡೆಸಲಾಗಿದೆ. ಕರಿ ಅಂದ್ರೆ ಆನೆ, ಕಾಡ ಅಂದ್ರೆ ನಾಯಕನ ಹೆಸರು ಎಂದು ಮಾಹಿತಿ ನೀಡಿದರು. ಚಿತ್ರದ ನಿರ್ಮಾಪಕಿ ದೀಪ್ತಿ ದಾಮೋದರ್ ಮಾತಾಡಿ, ಸಿನಿಮಾದಲ್ಲಿ ಎಲ್ಲರೂ ಕಷ್ಟಪಟ್ಟು ನಟಿಸಿದ್ದಾರೆ. ನಾವೆಲ್ಲರೂ ಸಿನಿಮಾ ನೋಡಲು ಉತ್ಸುಕರಾಗಿದ್ದೇವೆ. ಎಲ್ಲರೂ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದರು. ಚಿತ್ರಕ್ಕೆ ಸಂಭಾಷಣೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಕೆ. ವೆಂಕಟೇಶ್ ಮಾತಾಡಿ, ಸಿನಿಮಾದಲ್ಲಿ ಒಟ್ಟು 7 ಹಾಡುಗಳಿದ್ದು, 6 ಹಾಡುಗಳನ್ನು ನಾನೇ ಬರೆದಿದ್ದೇನೆ. ಎಲ್ಲಾ ಹಾಡುಗಳು ಕೂಡ ಚೆನ್ನಾಗಿ…

Read More

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎನ್‌ಸಿಸಿ ಸಾಧಕರನ್ನು ಗೌರವಿಸುವ ಸಮಾರಂಭವು ಸೋಮವಾರ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎನ್‌ಸಿಸಿಯ ಸೇನಾ, ನೌಕಾ ಹಾಗೂ ವಾಯುಪಡೆ ಘಟಕಗಳು ಜಂಟಿಯಾಗಿ ಕಾರ‍್ಯಕ್ರಮ ಆಯೋಜಿಸಿದ್ದವು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ವಲಯದ ಸೇನಾ ನೇಮಕಾತಿ ಎಡಿಜಿ ಮೇಜರ್ ಜನರಲ್ ಬ್ರೂಸ್ ಫರ್ನಾಂಡಿಸ್, ಎನ್‌ಸಿಸಿ ಯುವ ಜನತೆಯನ್ನು ಶಿಸ್ತು, ಸೇವಾ ಮನೋಭಾವ ಮತ್ತು ರಾಷ್ಟ್ರಪ್ರೇಮದೊಂದಿಗೆ ರೂಪಿಸುವ ಮಹತ್ವದ ಸಂಘಟನೆಯಾಗಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ತಂಡ ಭಾವನೆ ಮತ್ತು ಜವಾಬ್ದಾರಿಯುತ ನಾಗರೀಕತ್ವವನ್ನು ಬೆಳೆಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ತಮ್ಮದೇ ಎನ್‌ಸಿಸಿ ಅನುಭವಗಳನ್ನು ನೆನಪಿಸಿಕೊಂಡ ಅವರು, ತರಬೇತಿ ಜೀವನದ ಸವಾಲುಗಳನ್ನು ಎದುರಿಸಲು ಧೈರ್ಯ ಮತ್ತು ಹೋರಾಟದ ಮನೋಭಾವವನ್ನು ಹೊಂದಿರಬೇಕು ಎಂದು ಹೇಳಿದರು. ವ್ಯಕ್ತಿಯ ಯಶಸ್ಸು, ಸಮಾಜದ ಶಾಂತಿ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಶಿಸ್ತು ಅಗತ್ಯವಾದ ಅಡಿಪಾಯವಾಗಿದೆ. ಆದ್ದರಿಂದ ಶಿಸ್ತು ಪ್ರತಿಯೊಬ್ಬ ನಾಗರಿಕನ ಜೀವನಶೈಲಿಯಾಗಬೇಕು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಒಂದೇ ಕ್ಯಾಂಪಸ್‌ನಲ್ಲಿ ಗುಣಮಟ್ಟದ ಶಿಕ್ಷಣವನ್ನು ಒದಗಿಸುತ್ತಿರುವುದನ್ನು…

Read More

ಬ್ರಹ್ಮಾವರ : ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‍ನಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಅದ್ಧೂರಿಯ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶಿರೂರು ಮಠದ ದಿವಾನರು ಹಾಗೂ ಖ್ಯಾತ ಸಂಸ್ಕೃತ ಪಂಡಿತರು ಮತ್ತು ಪ್ರಸ್ತುತ ಪರ್ಯಾಯ ಸ್ವಾಮೀಜಿಯವರ ತಂದೆ ಡಾ| ಉದಯಕುಮಾರ್ ಸರಳತ್ತಾಯರವರು ಆಗಮಿಸಿ ಮಾತನಾಡಿ ದೀಪದಿಂದ ದೀಪವನ್ನು ಹಚ್ಚಿದಾಗ ಆ ಬೆಳಕು ನಿರಂತರವಾಗಿ ಪ್ರಜ್ವಲಿಸಿ ಕತ್ತಲಿಗೆ ಹೇಗೆ ಅವಕಾಶ ನೀಡುವುದಿಲ್ಲವೋ ಹಾಗೆಯೇ ವಿದ್ಯಾರ್ಥಿಗಳಾದ ನಿಮಗೆ ಈ ಜಿ ಎಮ್ ಸಂಸ್ಥೆ ನಿರಂತರವಾಗಿ ಪ್ರಜ್ವಲಿಸಲು ಬೇಕಾದಂತಹ ಜ್ಞಾನವನ್ನು, ಸಂಸ್ಕಾರವನ್ನು, ಜೀವನ ಮೌಲ್ಯಗಳನ್ನು ನೀಡಿದೆ. ಈ ಮೌಲ್ಯಯುತ ಜ್ಞಾನವನ್ನು ಬಳಸಿಕೊಂಡು ಸ್ವಸ್ಥ ರಾಷ್ಟ್ರವನ್ನು ನಿರ್ಮಿಸುವಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಬೇಕೆಂಬ ಸಂದೇಶವನ್ನು ನೀಡಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಶುಭ ಹಾರೈಸಿ ಎಲ್ಲರೂ ತಮ್ಮ ಪೆÇೀಷಕರ ಮುಖದಲ್ಲಿ ನಗುವನ್ನು, ಅವರು ಹೆಮ್ಮೆ ಪಡುವಂತಹ ಕೆಲಸವನ್ನು ಮಾಡಬೇಕು. ಹಾಗೆಯೇ ಭವಿಷ್ಯದಲ್ಲಿ ನಿಮ್ಮ ಸಾಧನೆಗಳನ್ನು ನಮ್ಮೊಂದಿಗೆ ಹಂಚಿಕೊಂಡಾಗ ಸಾರ್ಥಕತೆಯ ಭಾವನೆ…

Read More

ಕುವೈಟ್ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಶೋಧನ್ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿಮ್ಮ ನೇತೃತ್ವದಲ್ಲಿ ಸಂಘವು ಇನ್ನಷ್ಟು ಬೆಳೆಯಲಿ, ಸಮಾಜ ಸೇವೆಯಲ್ಲಿ ಹೊಸ ಮೈಲುಗಲ್ಲುಗಳನ್ನು ಸಾಧಿಸಲಿ ಎಂಬುದು ನಮ್ಮ ಹಾರೈಕೆ. ನಿಮ್ಮ ಮುಂದಿನ ಕಾರ್ಯಯಾತ್ರೆಗೆ ಹಾರ್ದಿಕ ಶುಭಾಶಯಗಳು.

Read More