Author: admin
ವಿದ್ಯಾರ್ಥಿ ಜೀವನದಲ್ಲಿ ಶಿಸ್ತುಬದ್ಧವಾದ ನಡೆ-ನಡವಳಿಕೆ ಇಟ್ಟುಕೊಂಡವನು ಶೈಕ್ಷಣಿಕ ಕ್ಷೇತ್ರದಲಿ ಸಾಧಕನಾಗಿ ಹೊರಹೊಮ್ಮಲು ಸಾಧ್ಯ. ಇದಕ್ಕೆ ಪೂರಕವಾದ ವಾತವರಣವು ಜ್ಞಾನಸುಧಾದಲ್ಲಿದೆ. ಡಾ.ಸುಧಾಕರ್ ಶೆಟ್ಟಿಯವರ ಮಾರ್ಗದರ್ಶನ ಹಾಗೂ ಜ್ಞಾನಸುಧಾ ಒಟ್ಟು ಕುಟುಂಬವಾಗಿ ದುಡಿಯುತ್ತಿರುವುದರ ಪ್ರತಿಫಲವೇ ಇಂತಹ ಅತ್ಯುತ್ತಮ ಫಲಿತಾಂಶಗಳಾಗಿವೆ ಎಂದು ಕಾರ್ಕಳ ಜ್ಞಾನಸುಧಾದ ಪೂರ್ವ ವಿದ್ಯಾರ್ಥಿ ಕಾಲೇಜಿನ ಪೂರ್ವ ವಿದ್ಯಾರ್ಥಿ, ಶ್ರೀ ಮನ್ವಿತ್ ಪ್ರಭು ನುಡಿದರು. ಅವರು ಕಾರ್ಕಳ ಜ್ಞಾನಸುಧಾದ ಪ್ರಾಂಗಣದಲ್ಲಿ ಜೆಇಇ ಮೈನ್ (ಬಿ.ಟೆಕ್) – 2026ರ ಮೊದಲ ಹಂತದ ಫಲಿತಾಂಶದಲ್ಲಿ ಕಾಲೇಜಿನ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನ ನೆರವೇರಿಸಿ ಮಾತನಾಡಿದರು. ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಮಾತನಾಡುತ್ತಾ, ಪ್ರಾಮಾಣಿಕ ಪರಿಶ್ರಮದಿಂದ ಪಡೆದ ಫಲಿತಾಂಶಕ್ಕೆ ನ್ಯಾಯವನ್ನು ಕೊಡುವ ಜವಾಬ್ದಾರಿ ನಾವು ಮಾಡಿದ್ದೇವೆ ಎಂಬ ತೃಪ್ತಿ ನಮಗಿದೆ. ಎಷ್ಟೇ ಅತ್ಯುತ್ತಮ ಅಂಕ ಗಳಿಸಿಕೊಂಡರು ತಂದೆ ತಾಯಿ ಗುರುಹಿರಿಯರನ್ನು ಗೌರವಿಸಿಕೊಂಡು ಬಾಳಿದರೇ ನಿಜವಾದ ಸಾಧಕನ ವ್ಯಕ್ತಿತ್ವಕ್ಕೆ ಗೌರವ ಬರಲು ಸಾಧ್ಯ ಎಂದರು, ಸಾಧರಿಗೆ ಸನ್ಮಾನ : ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ…
ಮೀರಾ ಭಯಂದರ್ನ ಸಮಾಜ ಸೇವಕ ಹಾಗೂ ಶಿಕ್ಷಣ ಪ್ರೇಮಿ ಡಾ. ಅರುಣೋದಯ ರೈ ಅವರು ಸ್ಥಾಪಿಸಿರುವ ‘ಅರುಣೋದಯ ಎಜುಕೇಶನ್ ಟ್ರಸ್ಟ್’ ಅಡಿಯಲ್ಲಿ ಕಾರ್ಯಾಚರಿಸುತ್ತಿರುವ ಕೈಕಂಬದ ಸ್ಟಾರ್ ಕಿಡ್ಸ್ ಶಾಲೆಯ ವಾರ್ಷಿಕೋತ್ಸವವು ಫೆಬ್ರವರಿ 4 ರಂದು ಬಹಳ ವಿಜೃಂಭಣೆಯಿಂದ ನಡೆಯಿತು. ವಿದ್ಯಾರ್ಥಿಗಳ ಪ್ರತಿಭೆ, ಶಿಸ್ತು ಮತ್ತು ಸೃಜನಶೀಲತೆಯನ್ನು ಅನಾವರಣಗೊಳಿಸಿದ ಈ ಕಾರ್ಯಕ್ರಮವು ಪೋಷಕರು ಹಾಗೂ ಅತಿಥಿಗಳ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದ ಅವರು, ಮಕ್ಕಳಿಗೆ ಬಾಲ್ಯದಲ್ಲಿಯೇ ನೈತಿಕ ಮೌಲ್ಯಗಳು ಹಾಗೂ ಸಂಸ್ಕಾರಗಳನ್ನು ಕಲಿಸುವುದು ಪಾಲಕರ ಜವಾಬ್ದಾರಿಯಾಗಿದೆ. ಪೋಷಕರ ಸರಿಯಾದ ಮಾರ್ಗದರ್ಶನ ಮತ್ತು ಪ್ರೇರಣೆಯಿಂದ ಮಾತ್ರ ವಿದ್ಯಾರ್ಥಿಗಳು ಮುಂದೆ ದೇಶದ ಉತ್ತಮ ಹಾಗೂ ಸಂಸ್ಕಾರವಂತ ಪ್ರಜೆಗಳಾಗಲು ಸಾಧ್ಯ ಎಂದು ತಿಳಿಸಿದರು ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಗಳಾಗಿ ಸೂರ್ಯನಾರಾಯಣ ದೇವಸ್ಥಾನದ ಟ್ರಸ್ಟಿ ರವೀಂದ್ರನಾಥ ಆಳ್ವ ಹಾಗೂ ಮಾಜಿ ಸೈನಿಕರಾದ…
ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಇನ್ನಿತರ ಸಮಾಜಪರ ಕಾರ್ಯಗಳಲ್ಲಿ ತೊಡಗಿ ಅವನ್ನು ತಮ್ಮ ಆದ್ಯ ಕರ್ತವ್ಯ ಎಂದುಕೊಂಡು ವರ್ಷಂಪ್ರತಿ ಹಲವು ಯಕ್ಷಗಾನ ತಾಳಮದ್ದಲೆ, ಯಕ್ಷಗಾನ ಬಯಲಾಟ ಹಾಗೂ ಇನ್ನಿತರ ಸಾಂಸ್ಕೃತಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಮುಂದುವರಿಯುತ್ತಿರುವ ಬಾಂಬೆ ಬಂಟ್ಸ್ ಅಸೋಸಿಯೇಷನ್ ಇದರ ಅಧ್ಯಕ್ಷರಾದ ನ್ಯಾಯವಾದಿ ಡಿ.ಕೆ ಶೆಟ್ಟಿಯವರ ಮುಂದಾಳತ್ವದಲ್ಲಿ ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬೈ ಇವರಿಂದ ಶ್ರೀಮದ್ ರಾಮಾಯಾಣದೊಳಗಣ ತಾಳಮದ್ದಳೆ ಸಪ್ತಾಹದ ಪ್ರಯುಕ್ತ ‘ಶ್ರೀರಾಮ ನಿರ್ಯಾಣ’ ಎಂಬ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮವು ಫೆಬ್ರವರಿ 14 ರಂದು ಸಾಯಂಕಾಲ ಗಂಟೆ 3.30 ಕ್ಕೆ ಸರಿಯಾಗಿ ಬಂಟ್ಸ್ ಸೆಂಟರ್ ಸೆಕ್ಟರ್ 24, ಜೂಯಿನಗರ ನವಿ ಮುಂಬಯಿ ಇಲ್ಲಿ ಬಹಳ ಸಂಭ್ರಮದಿಂದ ನಡೆಯಿತು. ತವರೂರ ಭಾಗವತರಾದ ವಾಸುದೇವ ಭಟ್ ಎರ್ಮಾಳ್ ಇವರ ಇಂಪಾದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಬಾಂಬೆ ಅಸೋಸಿಯೇಷನ್ ಅಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿ ಹಾಗೂ ಎಲ್ಲಾ ಪದಾಧಿಕಾರಿಗಳು ಮತ್ತು ಮಾಜಿ ಅಧ್ಯಕ್ಷರು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಆನಂತರ ಪ್ರಾಸ್ತಾವಿಕವಾಗಿ ಮಾತನಾಡಿದ…
ಶಾಸಕ ಎಂದರೆ ಕೇವಲ ಚುನಾವಣೆಯಲ್ಲಿ ಗೆದ್ದು ಕುರ್ಚಿಯಲ್ಲಿ ಕುಳಿತುಕೊಳ್ಳುವ ವ್ಯಕ್ತಿ ಅಲ್ಲ. ಜನರ ಬದುಕಿಗೆ ದಿಕ್ಕು ನೀಡುವ ನಾಯಕ. ಮತದಾನ ದಿನದಲ್ಲಿ ಜನರು ಬಟನ್ ಒತ್ತುವುದು ವಿಶ್ವಾಸಕ್ಕೆ. ಆ ವಿಶ್ವಾಸವನ್ನು ಕಾಪಾಡುವುದು ಶಾಸಕನ ಕರ್ತವ್ಯ. ಆದ್ದರಿಂದ ಒಬ್ಬ ಉತ್ತಮ ಶಾಸಕನಿಗೆ ಕೆಲವು ಮುಖ್ಯ ಗುಣಗಳು ಅನಿವಾರ್ಯ. ಮೊದಲನೆಯದು ಜನಸೇವೆ ಮನೋಭಾವ. ಅಧಿಕಾರ ಸಿಕ್ಕ ನಂತರ ಜನರನ್ನು ಮರೆಯುವವನು ನಾಯಕನಾಗಲಾರ. ರಸ್ತೆ ಕುಸಿದಾಗ, ಆಸ್ಪತ್ರೆಯಲ್ಲಿ ಔಷಧಿ ಇಲ್ಲದಾಗ, ನೆರೆ ಬಂದಾಗ ಜನರ ಜೊತೆ ನಿಂತು ಸಮಸ್ಯೆ ಪರಿಹರಿಸುವವನೇ ಜನಪ್ರತಿನಿಧಿ. ಕಚೇರಿಯಲ್ಲಿ ಕುಳಿತು ಫೋಟೋ ಹಾಕುವುದರಿಂದ ಸೇವೆ ಆಗುವುದಿಲ್ಲ. ಎರಡನೆಯದು ತಮ್ಮ ಕ್ಷೇತ್ರದ ಅರಿವು. ಯಾವ ಗ್ರಾಮದಲ್ಲಿ ನೀರಿನ ಸಮಸ್ಯೆ ಇದೆ, ಯಾವ ಶಾಲೆಗೆ ಶಿಕ್ಷಕರು ಇಲ್ಲ, ಯಾವ ರೈತರಿಗೆ ಕಾಲುವೆ ಬೇಕು ಇವು ಗೊತ್ತಿಲ್ಲದಿದ್ದರೆ ಶಾಸಕನಾಗಿರುವುದಕ್ಕೆ ಅರ್ಥವೇ ಇಲ್ಲ. ಕ್ಷೇತ್ರದ ನಕ್ಷೆ ಮನಸ್ಸಿನಲ್ಲಿ ಇರಬೇಕು. ಮೂರನೆಯದು ಕಾನೂನು ಮತ್ತು ಆಡಳಿತ ಜ್ಞಾನ. ವಿಧಾನಸಭೆ ಕೂಗಾಟ ಮಾಡುವ ಸ್ಥಳವಲ್ಲ; ಜನರ ಹಕ್ಕುಗಳಿಗಾಗಿ ಮಾತಾಡುವ ವೇದಿಕೆ.…
ಉಳ್ಳಾಲದ ಧೀರ ರಾಣಿ ಅಬ್ಬಕ್ಕ ಚೌಟ ಕರಾವಳಿ ಅರಸರಿಂದ ಕಪ್ಪ ಸಂಗ್ರಹಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಶೂರ ನಾಯಕಿಯಾಗಿ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅವರ ಆದರ್ಶಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಲಿ ಎಂದು ರಾಣಿ ಅಬ್ಬಕ್ಕ ವಂಶಸ್ಥೆ ಅನಿತಾ ಸುರೇಂದ್ರ ಕುಮಾರ್ ಹೇಳಿದರು. ತೊಕ್ಕೊಟ್ಟು ಒಳಪೇಟೆಯ ಅಂಬೇಡ್ಕರ್ ರಂಗಮಂದಿರದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ ಉದ್ಘಾಟಿಸಿ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಮಾತನಾಡಿದರು. ಹಾವೇರಿ ವಿವಿ ವಿಶ್ರಾಂತ ಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಅಭಿನಂದನಾ ಭಾಷಣ ಮಾಡಿದರು. ಆಶಾ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದರು. ನಗರಸಭೆ ಪೌರಾಯುಕ್ತ ಸಂತೋಷ್, ರೈತ ಮುಖಂಡ ಕೃಷ್ಣಪ್ಪ ಸಾಲಿಯಾನ್, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಕೋಟೆಕಾರ್ ಪಪಂ ಅಧ್ಯಕ್ಷೆ ದಿವ್ಯಾ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್, ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್,…
ಆಳ್ವಾಸ್ ತಾಂತ್ರಿಕ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ವತಿಯಿಂದ ಅಟಲ್ ಪ್ರಾಯೋಜಿತ ‘ಡಿಜಿಟಲ್ ಫಾರೆನ್ಸಿಕ್ಸ್ ಇನ್ ಸೈಬರ್ ಸೆಕ್ಯುರಿಟಿ’ ವಿಷಯದಡಿ ಆರು ದಿನಗಳ ಆನ್ಲೈನ್ ಬೋಧಕ ವರ್ಗದ ಕೌಶಲ್ಯಾಭಿವೃದ್ಧಿ ಶಿಬಿರ ನಡೆಯಿತು. ಡೆಲ್ಟಾ ಎಕ್ಸಚೇಂಜ್ ಸಂಸ್ಥೆಯ ವೆಂಕಟೇಶ್ ಎಲ್ ಶರ್ಮಾ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಸೈಬರ್ ಭದ್ರತಾ ತಜ್ಞ ಡಾ. ಮನೋಜ್ ವಿ.ಎನ್, ಅಗಮ್ಯ ಸೈಬರ್ ಟೆಕ್ನ ಮಹೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಡಿಜಿಟಲ್ ಫಾರೆನ್ಸಿಕ್ಸ್, ಸೈಬರ್ ಅಪರಾಧ ತನಿಖೆ, ಡೇಟಾ ಮರು ಪಡೆಯುವ ತಂತ್ರಜ್ಞಾನ, ಸೈಬರ್ ಕಾನೂನು, ಎಥಿಕಲ್ ಹ್ಯಾಕಿಂಗ್ ಮತ್ತು ಸೈಬರ್ ಭದ್ರತಾ ವಿಧಾನಗಳ ಕುರಿತು ತಾಂತ್ರಿಕ ಅಧಿವೇಶನಗಳು ನಡೆದವು. ರಿ ಇನ್ಫೋಸೆಕ್ನ ಸಮರ್ಥ್ ಬಿ ಭಟ್, ಭರತ್ ಕುಮಾರ್ ಎನ್, ವೆಂಕಟೇಶ್ ಎಲ್. ಶರ್ಮಾ, ಸೈಸೆಕ್ನ ಶಿವಲಿಂಗ ಸಾಲಕ್ಕಿ, ಮಹೇಶ್, ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕೌಶಿಕ್ ಜಿ.ಎನ್, ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ| ಮಂಜುನಾಥ್ ಕೊಠಾರಿ ಹಾಗೂ ವಿಭಾಗದ…
ರಾಷ್ಟ್ರಮಟ್ಟದಲ್ಲಿ ಇಂಜಿನಿಯರಿಂಗ್ ಪ್ರವೇಶಕ್ಕಾಗಿ ಎನ್.ಟಿ.ಎ. ನಡೆಸಿದ ಜೆಇಇ ಮೈನ್ಸ್ ಪರೀಕ್ಷೆಯ ಪ್ರಥಮ ಹಂತದ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿಪೂರ್ವ ಕಾಲೇಜಿನ ಪಿಯುಷ್ ಎಚ್ 99.4585176 ಪರ್ಸೇಂಟೈಲ್ ಗಳಿಸಿ ಸಾಧನೆ ಮೆರೆದಿದ್ದಾರೆ. 8 ವಿದ್ಯಾರ್ಥಿಗಳು 98.5 ಪರ್ಸೇಂಟೈಲ್ಗಳಿಗಿಂತ ಅಧಿಕ ಅಂಕ ಪಡೆದು ತೇರ್ಗಡೆ ಹೊಂದಿದ್ದಾರೆ. ಶಶಾಂಕ್ ಬೋರ್ಕರ್ (98.9610456), ಸೃಜನ್ ವಿ (98.7320359), ಮೆಲ್ರೋಯ್ ಕಾಸ್ಟೆಲಿನೋ (98.648776), ಪ್ರಣವ್ ಎನ್. ಪಂಡಿತ್ (98.5677958), ಹರ್ಷವರ್ಧನ ಕೆ.ಪಿ. (98.5552656), ಕ್ಷಮಾ ಅಶೋಕ್ ಹಕಟಿ (98.5177603), ಕ್ಲಾರೆನ್ಸ್ ಡಿಸೋಜ (98.4810184) ಸೇರಿದಂತೆ ಈ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಸಾಧನೆ ಮೆರೆದಿದ್ದಾರೆ. 97 ಪರ್ಸೆಂಟೈಲ್ಗಿಂತ ಅಧಿಕ 22 ವಿದ್ಯಾರ್ಥಿಗಳು, 96 ಪರ್ಸೆಂಟೈಲ್ಗಿಂತ ಅಧಿಕ 38 ವಿದ್ಯಾರ್ಥಿಗಳು ಮತ್ತು 95 ಪರ್ಸೆಂಟೈಲ್ಗಿಂತ ಅಧಿಕ 58 ವಿದ್ಯಾರ್ಥಿಗಳು ಅಂಕ ಪಡೆದಿದ್ದಾರೆ. ಭೌತಶಾಸ್ತ್ರ ವಿಷಯದಲ್ಲಿ 5 ವಿದ್ಯಾರ್ಥಿಗಳು, ರಸಾಯನಶಾಸ್ತ್ರ ವಿಷಯದಲ್ಲಿ 11 ವಿದ್ಯಾರ್ಥಿಗಳು ಮತ್ತು ಗಣಿತದಲ್ಲಿ 3 ವಿದ್ಯಾರ್ಥಿಗಳು 99 ಪರ್ಸೆಂಟೈಲ್ಗಳಿಗಿಂತ ಅಧಿಕ ಅಂಕ ಪಡೆದಿದ್ದಾರೆ. ಸಾಧನೆ ಮೆರೆದ ಈ ಎಲ್ಲಾ…
ಯುವಾವಸ್ಥೆಯಲ್ಲಿ ಗರಿಕೆದರುವ ಬಯಕೆ ಹಕ್ಕಿಗಳು ಸ್ವಚ್ಛಂದವಾಗಿ ಹಾರಾಡಲು ವಿಶಾಲ ಆಕಾಶ ಅರ್ಥಾತ್ ಅವಕಾಶಗಳು ಒದಗಿ ಬರಬೇಕು. ಓರ್ವ ರೂಪದರ್ಶಿಯಾಗಿ ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಸಾಕಷ್ಟು ಯಶಸ್ಸು ಸಂಪಾದಿಸಿದ ಮೇಲೆ ಚಿತ್ರ ಜಗತ್ತಿಗೆ ಪಾದಾರ್ಪಣೆ ಮಾಡಿದ ಬಲು ಪ್ರಸಿದ್ಧಿ ಪಡೆದ ಯುವ ಮಾಡೆಲ್ ಸಂದೀಪ್ ಶೆಟ್ಟಿ. ಬಾಲ್ಯದಿಂದಲೂ ನಟನೆ ಬಗ್ಗೆ ವಿಶೇಷ ಒಲವು ಹೊಂದಿದ್ದ ಸಂದೀಪ್ ಅನೇಕ ಅವಕಾಶಗಳ ಸದುಪಯೋಗ ಪಡಿಸಿಕೊಂಡು ರಂಗ ಭೂಮಿಯಲ್ಲಿ ಈಗಾಗಲೇ ಮಿಂಚಿದ್ದಾರೆ. ಸುಂದರ ಅಂಗಸೌಷ್ಠವ ಹೊಂದಿದ್ದ ಸಂದೀಪ್ ತನಗೆ ಮಾಡೆಲಿಂಗ್ ಕ್ಷೇತ್ರ ಸರಿ ಹೊಂದಬಹುದೆಂಬ ಭಾವ ಬಲಿತ ಪರಿಣಾಮ ಆ ಕ್ಷೇತ್ರದಲ್ಲಿ ಅಪಾರ ಶ್ರದ್ಧೆ, ಶ್ರಮಗಳ ಮೂಲಕ ಯಶಸ್ಸನ್ನು ಸಂಪಾದಿಸಿ ಅನೇಕ ಉತ್ಪನ್ನಗಳ ರೂಪದರ್ಶಿಯಾಗಿ ಗಮನ ಸೆಳೆದಿದ್ದಾರೆ. ಚಿತ್ರದಲ್ಲಿ ಅಭಿನಯಕ್ಕೆ ಮುನ್ನ ಸಾಕಷ್ಟು ಪೂರ್ವ ತಯಾರಿ ಮಾಡಿರುವ ಸಂದೀಪ್ ತಾನು ಆದರ್ಶ್ ಫಿಲ್ಮ್ ಇನ್ಸ್ಟಿಟ್ಯೂಟ್ ನಲ್ಲಿ ನಟನೆ ಕುರಿತ ವಿಶೇಷ ತರಬೇತಿ ಪಡೆಯುವ ಹೊತ್ತಿಗೆ ಕನ್ನಡ ಚಿತ್ರರಂಗದ ಘಟಾನುಘಟಿ ನಿರ್ದೇಶಕರು ಸೆಲೆಬ್ರಿಟಿ ಲೆಕ್ಚರರ್ ಆಗಿ ಬರುತ್ತಿದ್ದಾಗ ಅವರಿಂದ…
ನಿರಂತರ ಅಧ್ಯಯನ, ಉಚ್ಛ ವೈದ್ಯಕೀಯ ಶಿಕ್ಷಣ, ದೀರ್ಘ ಕಾಲೀನ ವೃತ್ತಿಪರ ಅನುಭವ ಮುಪ್ಪುರಿಗೊಂಡು ವಿಜ್ಞಾನದ ಜೀವಶಾಸ್ತ್ರ ಸೇರಿದಂತೆ ಸರ್ವಾಂಗೀಣ ಮಾನವ ಆರೋಗ್ಯ ಜ್ಞಾನದ ಸಮೃದ್ಧ ಅನುಭವ ಹೊಂದಿದ ವೈದ್ಯಭೂಷಣ ನರೇನ್ ಶೆಟ್ಟಿ ವೈದ್ಯಕೀಯ ಕ್ಷೇತ್ರದ ವಿಸ್ಮಯವೇ ಸರಿ. ಇವರ ಜೀವವಿಜ್ಞಾನ ಕುರಿತ ಸಂಶೋಧನೆ ಪ್ರಕಟಣೆಗಳು ಮಾನವ ಜೀವಜಗತ್ತಿಗೆ ಬಹುಮೂಲ್ಯ ಕೊಡುಗೆಗಳಾಗಿವೆ. ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ವಾಸ್ತವ್ಯ ಹೊಂದಿದ ನರೇನ್ ಶೆಟ್ಟಿ ತನ್ನ ಅವಿಶ್ರಾಂತ ಸೇವೆಯ ಮೂಲಕ ವಿಶೇಷ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಸಾಮಾನ್ಯ ಶಸ್ತ್ರಚಿಕಿತ್ಸೆಗಳಿಂದ ಮೊದಲ್ಗೊಂಡು ಮಾನವ ದೇಹದ ವಿವಿಧ ವಿಭಾಗಗಳ ಕಾರ್ಯ ನಿರ್ವಹಣೆ ಮತ್ತವುಗಳಲ್ಲಿನ ತೊಡಕು ಸೋಂಕು ಡ್ಯಾಮೇಜ್ ಕುರಿತ ವಿಶೇಷ ಜ್ಞಾನ ಇರುವ ನರೇನ್ ಶೆಟ್ಟಿ ಪ್ಲಾಸ್ಟಿಕ್ ಸರ್ಜರಿ ಹಾಗೂ ಪುನರ್ ಸ್ಥಾಪನೆ ಕುರಿತ ಸ್ಪೆಷಲಿಸ್ಟ್ ಆಗಿದ್ದಾರೆ. ವೈದ್ಯಕೀಯ ವಿಭಾಗದ ಎಂ.ಬಿ.ಬಿ.ಎಸ್, ಎಂ.ಎಸ್, ಎಂ.ಸಿ.ಎಚ್ ಪದವಿಗಳು ಸೇರಿದಂತೆ ಮಾನವ ದೇಹದ ಅಂಗ ಪ್ರತ್ಯಂಗಗಳ ಕುರಿತ ವಿಶೇಷ ಉಪಪದವಿ ಡಿಪ್ಲೋಮಾ ಗೀಳನ್ನು ಹೊಂದಿದ ಅಪರೂಪದ ವೈದ್ಯಕೀಯ ಕ್ಷೇತ್ರದ ವಿಚಕ್ಷಣ ಮೇಧಾವಿ. ಬೆಂಗಳೂರು,…
ಹಿಂದಿನ ಕಾಲ ಕಳೆದೋಯ್ತು. ಅದರ ಬಗ್ಗೆ ಹೇಳುವುದು, ಬರೆಯುವುದು ವ್ಯರ್ಥ. ಅಂದಿಗೆ ಅದೇ ಸುಖ ಇಂದಿಗೆ ಇದೇ ಸುಖ. ಕಳೆದದ್ದು ಕಳೆದಾಯ್ತು ಉಳಿದುದರ ಬಗ್ಗೆ ಮಾತ್ರ ಚಿಂತಿಸೋಣ. ಇದು ಜೀವನ ಆಗಿರಬಹುದು ಅಥವಾ ಉಳಿದ ಆಯುಷ್ಯ ಆಗಿರಬಹುದು. ಆದರೂ ಕೆಲವರಾದರೂ ಈ ಬಗ್ಗೆ ಉತ್ಸಾಹ ತೋರಿದ ಕಾರಣ ಈ ಲೇಖನಕ್ಕೆ ಮುಂದಾದೆ. ಇಂದಿನ ಹದಿಹರೆಯದ ನವ ಯುವಕರು ಹಾದಿ ತಪ್ಪುತ್ತಿರುವ ಆಲೋಚನೆಗಳ ಬಗೆಗೆ ಈ ಒಂದು ಚಿಂತನೆ. ಹೆಚ್ಚುತ್ತಿರುವ ಆಡಂಬರ, ಶೋಕಿಯ ಜೀವನ ಶೈಲಿ ಇದೊಂದು ಸಾಮಾಜಿಕ ಪಿಡುಗಾಗಿ ಮಾರ್ಪಡುತ್ತಿದೆ. ಸಾಲ ಮಾಡಿ ದುಬಾರಿ ಬೆಲೆಯ ಮೊಬೈಲು, ಕುತ್ತಿಗೆಯ ದಪ್ಪ ಚೈನು (ಅಪ್ಪನಲ್ಲೂ ಇರದ) ಕೈಯ್ಯಲ್ಲಿ ಅಬ್ಬರದ ಕಡ, ಮೂರು ನಾಲ್ಕು ಲಕ್ಷದ ಬೈಕು, ಕಾರು ಸಾಲ ಮಾಡಿ ಇವೆಲ್ಲವೂ ಯಾರನ್ನು ಮೆಚ್ಚಿಸುವುದಕ್ಕಾಗಿ? ಸಾಲ ಮಾಡಿ ಹುಟ್ಟುಹಬ್ಬದ ದಿನ ಗೆಳೆಯರಿಗೆ ಭರ್ಜರಿ ಪಾರ್ಟಿ, ಅದ್ದೂರಿಯಾಗಿ ಬ್ಯಾಚುಲರ್ ಪಾರ್ಟಿ, ಸಂಗೀತ್, ಮೆಹಂದಿ, ಮದುವೆ, ರಿಸೆಪ್ಶನ್ ಅಯ್ಯೋ ನಾಲ್ಕು ನಾಲ್ಕು ದಿನದ ಸಂಭ್ರಮಾಚರಣೆ ಇದೆಲ್ಲಾ…















