Author: admin
ರಾಮ ಮಾಮನ ಮಗಲ್ ಸೀತಕ್ಕೆನ್ ತೂವರೆ ಆನ ಕಡೆತಗುಲು ಬತ್ತ್ ಇತ್ತೆರ್. ಇಲ್ಲಡ್ ರಾಮ ಮಾಮ ಒರಿಯೇ ಅಂಜೋವು. ಅರುವದೆ ಎಲ್ಯಾಯೆ. ರಾಮ ಮಾಮನ ಬುಡೆದಿ ತೀರ್ದ್ ಇತ್ತೆರ್. ಅಗಲೆಗ್ ಮೂಜಿ ಪೊನ್ನುಲೆ. ರಾಮ ಮಾಮನ ತಂಗಡಿಗ್ಲಾ ಕಡೀರ್ದ ಪೊನ್ನು. ಅಂಚ ಎನನ್ ಒಂಜಿ ಗಲಿಗೆ ಬರಿಯೆರೆ ಪಂದ್ ಇತ್ತೆರ್. ಆನ ಕಡೆತಗುಲು (ಆನನ ಬಾವೆ ಬೊಕ್ಕ ಒರಿ ಅಗಲೆನ ಸಂಬಂದದಾರ್) ಬತ್ತೆರ್. ಪೊನ್ನು ತೂಯೆರ್. ಪಿರಯ ಏತ್ ಆಂಡ್ ಕೇಂಡೆರ್. ಆ ಕಾಲೊಡು ಪೊನ್ನಗ್ ಇರ್ವ ವರ್ಸ ಕರಿಂಡ ಪೊನ್ನು ಬುಲೆದ್ ಪನೊಂದು ಇತ್ತೆರ್. ಬುಲೆದ್ ಪಂಡ ಪೊನ್ನಗ್ ಪಿರಯ ಆತ್ಂಡ್ ಪಂದ್ ಅರ್ತ. ಆನಗ್ ಏತ್ ಪಿರಯ ಪಂದ್ ಕೇನೊಂದು ಇತ್ತುಜೆರ್. ಪೊನ್ನು ಮಾತ್ರ ಲತ್ತ್ ಲತ್ತ್ ಆವೊಡು. ಅಂಚ ಯಾನ್ ಸೀತಕ್ಕೆನ ಪಿರಯ ಐನ್ ವರ್ಸ ಕಡಿಮೆ ಮಲ್ತ್ ಪಂಡೆ. ಈ ರಾಮ ಮಾಮ ಮನಿಪಂದೆ ಕುಲ್ಲುವೆರಾ? ಆಲೆನ ಜಾತಕ ಉಂಡು ಪಂಡಿನಾರ್, ಪಟ್ಯೊಡು ದೀತಿ ಪೆಟ್ಟಿಗೆ…
ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಅವರು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಂಡು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಹರೀಶ್ ಶೆಟ್ಟಿ ಅವರು ತಿಳಿಸಿದ್ದಾರೆ. ದಕ್ಷ ಅಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರನ್ನು ಭೇಟಿ ಮಾಡಿ ಅಭಿನಂದಿಸಿದರು.
ಬಂಟ ಸಮಾಜಕ್ಕೆ ಎಲ್ಲಾ ರೀತಿಯಲ್ಲಿಯೂ ಸಕಲ ವಿದ್ಯೆ, ಬುದ್ದಿ, ಸಂಸ್ಕಾರ, ಧನ ಸಂಪತ್ತು ಸಿಕ್ಕಿದೆ. ಸಮಾಜ ಸೇವೆ ಮಾಡುವಂತಹ ಶಕ್ತಿ ಕೂಡಾ ದೇವರು ಕರುಣಿಸಿದ್ದಾರೆ. ಸಮಾಜದಲ್ಲಿ ಬೆಳೆದು ನೆಲೆ ನಿಂತು ಗಣ್ಯ ವ್ಯಕ್ತಿಯಾಗಿ ರೂಪಿಸುವಲ್ಲಿ ಸಹಾಯ ಮಾಡಿದ ವ್ಯಕ್ತಿ, ಸಂಘ ಅಥವಾ ಸಮಾಜದ ಋಣವನ್ನು ಸಂದಾಯ ಮಾಡುವ ಧರ್ಮಪಾಲನೆ ನಮ್ಮದು ಎಂದು ಅರಿಯಬೇಕು. ನಾವು ಮಾಡುವ ಸಮಾಜ ಸೇವೆಯಿಂದ ಸಮಾಜದಲ್ಲಿ ಸುಖ ಕಾಣುವ ಕುಟುಂಬಗಳ ಖುಷಿಯೇ ನಮಗೆ ಸಂತೃಪ್ತಿ ಎಂದರಿಯಬೇಕು. ನಾವು ಬಂಟರು ಎಲ್ಲರೂ ಕೂಡಾ ಒಬ್ಬರಿಗೊಬ್ಬರು ಸಂಬಂಧಿಕರು. ಒಂದಲ್ಲ ಒಂದು ರೀತಿಯಲ್ಲಿ ಕುಟುಂಬದ ಸಂಬಂಧಗಳನ್ನು ಹೊಂದಿರುವ ಅಥವಾ ಸೇವಾ ಕಾರ್ಯಗಳಲ್ಲಿ ಸಂಬಂಧ ಹೊಂದಿರುವ ನಾವು ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಆಗಿರಬಹುದು. ಸಂತೋಷ್ ಶೆಟ್ಟಿಯಾವರಂತಹ ಸಂಘಟಕ, ನಾಯಕತ್ವ, ದೂರಾಲೋಚನೆಯ ದೃಷ್ಟಿ ಇಟ್ಟುಕೊಂಡು ಸಮಾಜ ಸೇವೆ ಮಾಡುವ ನಮ್ಮ ಬಂಟ ಸಮಾಜದ ಬಂಧುಗಳು ಇದ್ದರೆ ಸಾಕು, ಆಗ ನಾವು ಮಾಡಿದ ಸಾಧನೆಗಿಂತ ಇನ್ನಷ್ಟು ಎತ್ತರಕ್ಕೆ ನಮ್ಮ ಸಮಾಜ ಏರುತ್ತದೆ. ದೇವರು ನಮಗೆ…
ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರಿಗೆ ದೆಹಲಿ ಕರ್ನಾಟಕ ಸಂಘದ ವತಿಯಿಂದ ಡಾ| ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ| ಹಂಪ ನಾಗರಾಜಯ್ಯ ವಹಿಸಿದ್ದರು. ವೇದಿಕೆಯಲ್ಲಿ ಸಾಹಿತಿಗಳಾದ ಪ್ರಧಾನ ಗುರುದತ್ತ, ಬಿ.ಆರ್ ಲಕ್ಷ್ಮಣರಾವ್, ಡಾ| ಲತಾ ರಾಜಶೇಖರ್, ಚಲನಚಿತ್ರ ನಿರ್ದೇಶಕ ಡಾ| ಟಿ.ಎಸ್ ನಾಗಾಭರಣ, ಚಲನಚಿತ್ರ ನಟ ಚರಣ್ ರಾಜ್, ಸಂಪಾದಕ ವಿಶ್ವೇಶರ ಭಟ್, ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಯಂ ನಾಗರಾಜ್, ಉಪಾಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ, ಉಪಾಧ್ಯಕ್ಷೆ ಪೂಜಾ ರಾವ್, ಕಾರ್ಯದರ್ಶಿ ರಾಧಾಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ಅರಬ್ ಸಂಯುಕ್ತ ಸಂಸ್ಥಾನದ ವಾಣಿಜ್ಯ ನಗರಿ ದುಬಾಯಿಯಲ್ಲಿ ಯು.ಎ.ಇ ಬಂಟ್ಸ್ ಮತ್ತು ಯು.ಎ.ಇ ಯಲ್ಲಿರುವ ಕರ್ನಾಟಕ ಪರ ಸಂಘಟನೆಗಳ ಆಶ್ರಯದಲ್ಲಿ ಫೆಬ್ರವರಿ 8 ರಂದು ತುಳುನಾಡ ಸಂಸ್ಕೃತಿಯ ಅನಾವರಣ ಉಪನ್ಯಾಸ ಕಾರ್ಯಕ್ರಮ ಫಾರ್ಚೂನ್ ಪ್ಲಾಝಾ ಹೋಟೆಲ್ ಸಭಾಂಗಣದಲ್ಲಿ ನಡೆಯಿತು. ಶ್ರೀ ಬಾರ್ಕೂರು ಮಹಾ ಸಂಸ್ಥಾನ (ಭಾರ್ಗವಬೀಡು ಬಾರ್ಕೂರು) ಪೀಠಾಧಿಪತಿ ಶ್ರೀ ಶ್ರೀ ಶ್ರೀ ಡಾ. ವಿದ್ಯಾವಾಚಾಸ್ಪತಿ ವಿಶ್ವಸಂತೋಷ ಭಾರತಿ ಶ್ರೀಪಾದರು ಪ್ರವಚನ ಹಾಗೂ ತುಳುನಾಡಿನ ಆಚಾರ ವಿಚಾರ ಸಂಸ್ಕೃತಿ ಸಂಪ್ರದಾಯಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಸುಮಂಗಲೆಯರ ಪೂರ್ಣ ಕುಂಭ ಹಾಗೂ ಚೆಂಡೆ ವಾದನದೊಂದಿಗೆ ಪರಮ ಪೂಜ್ಯ ಸ್ವಾಮಿಜಿಯವರನ್ನು ಬರಮಾಡಿಕೊಂಡು ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಬುಧಾಭಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಸ್ವಾಗತ ಮತ್ತು ಪರಿಚಯ, ಯು.ಎ.ಇ ಬಂಟ್ಸ್ ನ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಶೆಟ್ಟಿಯವರಿಂದ ಪ್ರಾಸ್ಥಾವಿಕ ಭಾಷಣದಲ್ಲಿ ಬಾರ್ಕೂರು ಮಹಾ ಸಂಸ್ಥಾನದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಶ್ರೀ ಶ್ರೀ ಶ್ರೀ ಡಾ. ವಿದ್ಯಾವಾಚಾಸ್ಪತಿ ವಿಶ್ವಸಂತೋಷ…
ರೋಟರಿ ಜಿಲ್ಲಾ ಆರ್.ಸಿ.ಸಿ (ರೋಟರಿ ಗ್ರಾಮೀಣ ಸಮುದಾಯ ದಳ) ಜಿಲ್ಲಾ ಸಮ್ಮೇಳನ ‘ಸಾಂಗತ್ಯ’ವು ಕಾರ್ಕಳದ ಭುವನೇಂದ್ರ ಕಾಲೇಜಿನಲ್ಲಿ ಅತ್ಯಂತ ಯಶಸ್ವಿಯಾಗಿ ವಿಜೃಂಭಣೆಯಿಂದ ಜರಗಿತು. ತುಳುನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕಲ್ಪವೃಕ್ಷದ ಹೂವನ್ನು ಅರಳಿಸುವ ಮೂಲಕ ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ಗವರ್ನರ್ ಕೆ. ಪಾಲಕ್ಷ ರವರು ಉದ್ಘಾಟಿಸಿದರು. ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷ ಕೆ. ನವೀನ್ ಚಂದ್ರ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾದ ಭುವನೇಂದ್ರ ಕಾಲೇಜಿನ ಪ್ರಾಂಶುಪಾಲ ಡಾ| ಮಂಜುನಾಥ್ ಕೋಟ್ಯಾನ್, ಆರ್. ಸಿ.ಸಿ ಜಿಲ್ಲಾ ಚೇರ್ಮನ್ ಎಲೆನ್ ವಿನಯ್ ಲೂಯಿಸ್, ಮಾಜಿ ಜಿಲ್ಲಾ ಗವರ್ನರ್ ದೇವಾನಂದ್, ಗವರ್ನರ್ ಎಲೆಕ್ಟ್ ಬಿ.ಎಂ ಭಟ್, ಸಹಾಯಕ ಗವರ್ನರ್ ವಿಘ್ನೇಶ್ ಶೆಣೈ, ವಲಯ ಸೇನಾನಿ ಜಾನ್ ಆರ್ ಡಿಸಿಲ್ವ, ರೋಟ್ರಾಕ್ಟ್ ಜಿಲ್ಲಾ ಪ್ರತಿನಿಧಿ ಜಯರಾಮ್ ಶೆಟ್ಟಿಗಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಿಲ್ಲೆಯ ವಿವಿಧ ಕ್ಲಬ್ ಗಳ ವತಿಯಿಂದ ಸಾಂಸ್ಕೃತಿಕ ಸ್ಪರ್ಧೆಗಳು ನಡೆದು ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಸಮ್ಮೇಳನದ ಸಭಾಪತಿ ಶೇಖರ್,…
ಫೆಬ್ರವರಿ 7 ಮತ್ತು 8 ರಂದು ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಅನ್ವಿತಾ ಬಿ ಹಿಂದಿ ಭಾಷಣದಲ್ಲಿ ಪ್ರಥಮ ಸ್ಥಾನ ಮತ್ತು ಆಳ್ವಾಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಸ್ನೇಹ ಪರಪ್ಪ ಸಮಾಯಿ ಕನ್ನಡ ಆಶು ಭಾಷಣದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡರು. ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವರವರು ಅಭಿನಂದಿಸಿದ್ದಾರೆ.
ಕುರ್ಪಾಡಿ ಸಂಜೀವ ನಾರಾಯಣ ಶೆಟ್ಟಿ ಸ್ಮರಣಾರ್ಥವಾಗಿ ಅವರ ಪುತ್ರರಾದ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಉದ್ಯಮಿ, ಸಮಾಜಸೇವಕ ಹರೀಶ್ ಶೆಟ್ಟಿಯವರು ಪಡುಕುಡೂರುವಿನಲ್ಲಿ ‘ಗೋಕಟ್ಟೆ’ಯನ್ನು ನಿರ್ಮಿಸಿದ್ದಾರೆ. ಶ್ರೀ ಶ್ರೀ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿಯವರು ಉದ್ಘಾಟನಾ ಸಮಾರಂಭದಲ್ಲಿ ದಿವ್ಯ ಸಾನಿದ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಸಹಿತ ಸ್ಥಳೀಯರು, ಗ್ರಾಮಸ್ಥರು, ಕುಟುಂಬಸ್ಥರು ಉಪಸ್ಥಿತರಿದ್ದರು.
ಕಳೆದ 28 ವರ್ಷಗಳ ಹಿಂದೆ ಅಂದೇರಿ ಪರಿಸರದ ಸಮಾನ ಮನಸ್ಕ ಬಂಟರು ದೂರದರ್ಶಿತ್ವದ ಯೋಚನೆ, ಯೋಜನೆಗಳೊಂದಿಗೆ ಸ್ಥಾಪಿಸಿದಂತಹ ಜವಾಬ್ ಸಂಸ್ಥೆಯನ್ನು ಇಷ್ಟರವರೆಗೆ ನಡೆಸಿಕೊಂಡು ಬಂದವರೆಲ್ಲರೂ ಸದಾ ಪ್ರಾತಸ್ಮರಣೀಯರು. ಜವಾಬ್ ನಮಗೆ ಒಂದು ಕುಟುಂಬ ಇದ್ದಂತೆ. ಕುಟುಂಬ ಬಾಂಧವರ ಪ್ರೀತಿ, ವಿಶ್ವಾಸ, ಕಾರ್ಯಕ್ಷಮತೆಯೊಂದಿಗೆ ಜವಾಬ್ ಎತ್ತರಕ್ಕೆ ಬೆಳೆಯುತ್ತಿದೆ ಎಂದರೆ ತಪ್ಪಾಗದು. ಇದಕ್ಕಾಗಿ ಸಮಾಜ ಬಾಂಧವರೆಲ್ಲರಿಗೂ ಅಭಿನಂದನೆಗಳು. ಕೊಡುಗೈ ದಾನಿಗಳೇ ಜವಾಬ್ ನ ಅಡಿಪಾಯ. ಜವಾಬ್ ನ ಸ್ಥಿರತೆಗೆ ಹಮ್ಮಿಕೊಂಡ ಯೋಜನೆಗೆ ಎಲ್ಲರ ಸಹಕಾರ ಇರಲಿ ಎಂದು ಜವಾಬ್ ನ ಅಧ್ಯಕ್ಷ ತಾಳಿಪಾಡಿ ಗುತ್ತು ವಿಶ್ವನಾಥ್ ಶೆಟ್ಟಿ ಅವರು ಅಭಿಪ್ರಾಯಪಟ್ಟರು. ಫೆಬ್ರವರಿ 28ರಂದು ಅಂಧೇರಿ ಪಶ್ಚಿಮ ಸಮರ್ಥನಗರ್ ಲೋಖಂಡವಾಲ ಕಾಂಪ್ಲೆಕ್ಸ್ ರೆಸಿಡೆಂಟ್ಸ್ ಅಸೋಸಿಯೇಷನ್ ಗ್ರೌಂಡ್ ನಲ್ಲಿ ಜರಗಿದ ಜವಾಬ್ ನ 28 ನೇಯ ವಾರ್ಷಿಕ ಸ್ನೇಹ ಸಮ್ಮಿಲನದ ಸಭಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ ಹಾಗೂ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ನ ಮಾಜಿ ಕಾರ್ಯದರ್ಶಿ, ಉದ್ಯಮಿ, ಕರ್ನಾಟಕ…
ಕನ್ನಡ ಸಂಘ ಬಹರೈನ್ ವತಿಯಿಂದ ಜನವರಿ 30 ರಂದು ಜರುಗಿದ ಸದಸ್ಯರ ವಾರ್ಷಿಕ ದಿನಾಚರಣೆಯಂದು ಹಿರಿಯ ಸದಸ್ಯ ರಾಜೇಂದ್ರ ಹೆಗ್ಡೆಯವರಿಗೆ ಸಂಘಕ್ಕೆ ನೀಡಿದ ದೀರ್ಘಕಾಲದ ಸೇವೆಯನ್ನು ಸ್ಮರಿಸಿ ಬೀಳ್ಕೊಡುಗೆ ಸಮಾರಂಭ ನೆರವೇರಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಮುಖ್ಯ ಅತಿಥಿಗಳಾದ ಜಯಶಂಕರ್ ವಿಶ್ವನಾಥನ್ (COO, Uneeco Bahrain), ಹಾಜಿ ಅಬ್ದುಲ್ ರಜಾಕ್ ಹೆಜಮಾಡಿ (Metalco Group), ಪ್ರಕಾಶ್ ಶೆಟ್ಟಿ (ಮಾಲಕರು, Central Cafe) ಹಾಗೂ ಸಂಘದ ಮಾಜಿ ಅಧ್ಯಕ್ಷರುಗಳಾದ ಪ್ರದೀಪ್ ಕುಮಾರ್ ಶೆಟ್ಟಿ, ಅಮರನಾಥ್ ರೈ, ಬಿಲ್ಲವಾಸ್ ಬಹರೈನ್ ಮಾಜಿ ಅಧ್ಯಕ್ಷ ಹರೀಶ್ ಪೂಜಾರಿ, ಸಂಘದ ಅಧ್ಯಕ್ಷ ಅಜಿತ್ ಬಂಗೇರ, ಉಪಾಧ್ಯಕ್ಷ ನಿತಿನ್ ಶೆಟ್ಟಿ ಮತ್ತು ಪದಾಧಿಕಾರಿಗಳು ರಾಜೇಂದ್ರ ಹೆಗ್ಡೆಯವರನ್ನು ಸನ್ಮಾನಿಸಿ ಅಭಿನಂದಿಸಿದರು. ಅತಿಥಿಗಳು ಮತ್ತು ಅಧ್ಯಕ್ಷರು ರಾಜೇಂದ್ರ ಹೆಗ್ಡೆ, ಶ್ರೀಮತಿ ಚೇತನಾ ರಾಜೇಂದ್ರ ಹೆಗ್ಡೆ ಮತ್ತು ಅವರ ಮಕ್ಕಳು ಸಂಘಕ್ಕೆ ಕಳೆದ ಮೂರು ದಶಕಗಳಿಂದ ನೀಡಿದ ಗಣನೀಯ ಕೊಡುಗೆಯನ್ನು ಗೌರವಿಸಿ ಮಾತನಾಡಿದರು. ಸನ್ಮಾನಿತರಾದ ರಾಜೇಂದ್ರ ಹೆಗ್ಡೆ ತಮ್ಮ ಅನುಭವಗಳನ್ನು ಹಂಚಿಕೊಂಡು ಸಂಘದ ಮುಂದಿನ…















