Author: admin

ಪಡುಬಿದ್ರೆಯ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನಕ್ಕೆ ಸಂಬಂಧಪಟ್ಟ ಪಂಚದೈವಗಳಿಗೆ ಪಡುಬಿದ್ರಿ ಗಣಪತಿ ಪ್ರೌಢಶಾಲಾ ಹಳೆ ವಿದ್ಯಾರ್ಥಿ ಸಂಘದ ಸಹಭಾಗಿತ್ವದಲ್ಲಿ ದೇಗುಲದ ಪುಷ್ಕರಣಿ ತಟದಲ್ಲಿ ನಿರ್ಮಿಸಲ್ಪಡುವ ಅಂದಾಜು 15 ರಿಂದ 20 ಲಕ್ಷ ರೂ ವೆಚ್ಚದ ನೂತನ ಗುಡಿಗಳ ಕಾಮಗಾರಿಯ ಶಿಲಾನ್ಯಾಸವು ಫೆಬ್ರವರಿ 18 ರಂದು ಜರಗಿತು. ಈ ಕುರಿತಾದ ಧಾರ್ಮಿಕ ವಿಧಿ ವಿಧಾನಗಳನ್ನು ದೇವಸ್ಥಾನದ ಅರ್ಚಕರಾದ ಗುರುರಾಜ ಭಟ್ ಎರ್ಮಾಳು ನೆರವೇರಿಸಿದರು. ಶಿಲಾನ್ಯಾಸವನ್ನು ಸಂಘದ ಹಿರಿಯ ಸದಸ್ಯ ಸದಾಶಿವ ಆಚಾರ್ ನೆರವೇರಿಸಿದರು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ ರಾಜಗೋಪಾಲ ಉಪಾಧ್ಯಾಯ, ಅನುವಂಶಿಕ ಮೊಕ್ತೇಸರ ಭವಾನಿಶಂಕರ ಹೆಗ್ಡೆ, ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ರವೀಂದ್ರನಾಥ ಜಿ ಹೆಗ್ಡೆ, ಕಾರ್ಯದರ್ಶಿ ಶ್ರೀನಾಥ್ ಹೆಗ್ಡೆ, ಮುರಳಿನಾಥ್ ಶೆಟ್ಟಿ, ಅನಿಲ್ ಶೆಟ್ಟಿ ಪೇಟೆ ಮನೆ, ನವೀನ್ ಎನ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನವೀನ್ ಚಂದ್ರ ಜೆ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಮಾಕಾಂತ್ ರಾವ್, ಕೋಶಾಧಿಕಾರಿ ಕಸ್ತೂರಿ ರಾಮಚಂದ್ರ, ಸರ್ವಜ್ಞ ಆಚಾರ್, ಪ್ರಕಾಶ್ ಶೆಟ್ಟಿ ಪೇಟೆ ಮನೆ, ಮಾಧವ ಸಿ…

Read More

ಪದವು ಫ್ರೆಂಡ್ಸ್ ಕ್ಲಬ್ ಕಾನಡ್ಕ ಶಕ್ತಿನಗರ ಇದರ 50ನೇ ವಾರ್ಷಿಕೋತ್ಸವ ‘ಸ್ವರ್ಣ ಸಂಭ್ರಮ’ ಸಮಾರಂಭವು ಫೆಬ್ರವರಿ 13 ರಿಂದ 17ರ ವರೆಗೆ ಜರಗಿತು. ನಾಲ್ಕನೇ ದಿನದ ಕಾರ್ಯಕ್ರಮವನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟಿಸಿ, ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಮಾತನಾಡಿ, ‘ಸಂಘ ಸಂಸ್ಥೆಗಳು ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ಸಮಾಜೋಪಯೋಗಿ ಕೆಲಸಗಳಲ್ಲಿಯೂ ತೊಡಗಿಕೊಂಡಾಗ ಅದು ಜನಮಾನಸಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತದೆ. ಪದವು ಫ್ರೆಂಡ್ಸ್ ಕ್ಲಬ್ ಕಳೆದ ಐದು ದಶಕಗಳ ಸಾರ್ಥಕ ಸೇವಾ ಕಾರ್ಯಗಳಿಂದಾಗಿ ತನ್ನ ಪರಿಸರದ ಜನರ ಅಭಿಮಾನ ಗಳಿಸಿಕೊಂಡಿರುವುದು ಸ್ಪಷ್ಟ. ಆ ಕಾರಣದಿಂದಾಗಿ ಅದರ ಸುವರ್ಣ ಸಂಭ್ರಮ ಪ್ರಸ್ತುತ ನಾಡಹಬ್ಬದ ಸ್ವರೂಪ ಪಡೆದಿರುವುದು ಕಂಡು ಬರುತ್ತಿದೆ’ ಎಂದರು. ಸಮಾರಂಭದಲ್ಲಿ ತುಳು ರಂಗಭೂಮಿಯ ಖ್ಯಾತ ನಾಟಕಕಾರರು ಮತ್ತು ಚಲನಚಿತ್ರ ನಿರ್ದೇಶಕರಾದ ಡಾ| ದೇವದಾಸ ಕಾಪಿಕಾಡ್ ಅವರಿಗೆ ‘ತೆಲಿಕೆದ…

Read More

ಕುತ್ತೆತ್ತೂರು ಸೂರಿಂಜೆ ಶಿಬರೂರು ಪಂಜ ಬೊಳ್ಳಾರಗುತ್ತಿನಲ್ಲಿ ನಡೆಯುವ ಬೊಳ್ಳಾರಗೋಳಿ ಪಂಚ ದೈವಗಳ ನೇಮೋತ್ಸವದ ಅಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಸೂರಿಂಜೆ ಪೊನ್ನಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿತು. ದೇವಸ್ಥಾನದ ತಂತ್ರಿ ವಿಜಯದಾಸ ತಂತ್ರಿ, ಹಯವದನ ಭಟ್ ಕೈಯೂರು, ಸುರತ್ಕಲ್ ಠಾಣೆಯ ಠಾಣಾಧಿಕಾರಿ ಪ್ರಮೋದ್ ಕುಮಾರ್, ನೇಮೋತ್ಸವ ಸಮಿತಿ ಗೌರವಾಧ್ಯಕ್ಷರಾದ ಅಶೋಕ ಪೈವ ಹೆಗಡೆ ಮಿತ್ತೋಡಿ ಅರಸುಮನೆ, ಧನಂಜಯ ಶೆಟ್ಟಿ ಬೊಳ್ಳಾರುಗುತ್ತು, ವಿನಯ ಕುಮಾರ್ ಸೂರಿಂಜೆ, ಪ್ರದ್ಯುಮ್ನರಾವ್ ಕೈಯೂರ್, ಅನಿಲ್ ಶೆಟ್ಟಿ ತೇವು ಸೂರಿಂಜೆ, ಉಮೇಶ್ ಶೆಟ್ಟಿ ಗುತ್ತಿನಾರ್ ಶಿಬರೂರು, ಸಮಿತಿ ಅಧ್ಯಕ್ಷರಾದ ರಾಜೇಂದ್ರ ಶೆಟ್ಟಿ ಕುಡ್ತಿಮಾರುಗುತ್ತು ಕಿಲೆಂಜೂರು, ಕಾರ್ಯಾಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಸೂರಿಂಜೆ, ಕೋಶಾಧಿಕಾರಿ ಸುಜೀರ್ ಸೂರಿಂಜೆ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ನಿತಿನ್ ಶೆಟ್ಟಿ ನಾಯರ್ ಕೊಡಿ, ಜಗನ್ನಾಥ ಶೆಟ್ಟಿ ತೇವು, ಡಿ.ಕೆ ಶೆಟ್ಟಿ ಮುಂಬಯಿ, ಗಣೇಶ್ ಶೆಟ್ಟಿ ಕುಲ್ಲಂಗಾಲು ಹೊಸಮನೆ, ಹರೀಶ್ ಮುಡಾಯಿಕೊಡಿ, ಪ್ರತಾಪ್ ಶೆಟ್ಟಿ ಕಲ್ಲಂಜ ಬಾಳಿಕೆ, ಜಯಶೀಲ…

Read More

ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಕಾರ್ಯನಿರ್ವಹಿಸುವ ಬೆಳ್ತಂಗಡಿ ಪ್ರೆಸ್ ಕ್ಲಬ್ ಟ್ರಸ್ಟ್ ಇದರ ನೂತನ ಅಧ್ಯಕ್ಷರಾಗಿ ಪುಷ್ಪರಾಜ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶಿಬಿ ಧರ್ಮಸ್ಥಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬೆಳ್ತಂಗಡಿ ಪತ್ರಕರ್ತರ ಸಂಘದಲ್ಲಿ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ 2026 – 28 ನೇ ಸಾಲಿನ ನೂತನ ಪದಾಧಿಕಾರಿಗಳ‌ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ಪುಷ್ಪರಾಜ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ವಾರ್ತಾಭಾರತಿ ಪತ್ರಿಕೆಯ ವರದಿಗಾರ ಶಿಬಿ ಧರ್ಮಸ್ಥಳ, ಕೋಶಾಧಿಕಾರಿಯಾಗಿ ಪ್ರಜಾವಾಣಿ ಪತ್ರಿಕೆಯ ವರದಿಗಾರ ಗಣೇಶ್ ಬಿ ಶಿರ್ಲಾಲು ಹಾಗೂ ಉಪಾಧ್ಯಕ್ಷರಾಗಿ ಸುದ್ದಿ ಉದಯ ಪತ್ರಿಕೆಯ ವರದಿಗಾರ ಸಂತೋಷ್ ಕೋಟ್ಯಾನ್, ಕಾರ್ಯದರ್ಶಿಯಾಗಿ ಪ್ರತಿನಿಧಿ ಪತ್ರಿಕೆಯ ವರದಿಗಾರ ಭುವನೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಭೆಯಲ್ಲಿ ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ತುಕಾರಾಮ ಬಿ, ಪ್ರಧಾನ ಕಾರ್ಯದರ್ಶಿ ಮನೋಹರ ಬಳಂಜ, ಕಾರ್ಯದರ್ಶಿ ಅರವಿಂದ ಹೆಬ್ಬಾರ್, ಕಾರ್ಯಕಾರಿ ಸಮಿತಿ…

Read More

ಬಂಟರ ಸಮಾಜದ ಉದ್ಯಮಿಗಳ ಒಗ್ಗಟ್ಟಿಗಾಗಿ ಸ್ಥಾಪಿಸಿದಂತಹ ಮುಂಬೈಯ ಪ್ರತಿಷ್ಠಿತ ಸಂಸ್ಥೆ ಇಂಡಿಯನ್ ಬಂಟ್ಸ್ ಛೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಮುಂಬೈಯ ಉದ್ಯಮಿ, ಕೆನರಾ ಟೂರ್ಸ್ ನ ಆಡಳಿತ ನಿರ್ದೇಶಕ ಸುರೇಶ್ ಬಿ ಶೆಟ್ಟಿಯವರ ಆಡಳಿತ ಸಮಿತಿಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಫೆಬ್ರವರಿ 1ರಂದು ಸಾಕಿನಾಕದ ಪೆನನ್ಸುಲಾ ಗ್ರಾಂಡ್ ನಲ್ಲಿ ಜರಗಿತು. ಅಧ್ಯಕ್ಷ ಎಸ್. ಬಿ ಶೆಟ್ಟಿಯವರು ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ಉಪಾಧ್ಯಕ್ಷರಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ವಸುಧಾ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಶ್ರೀನಾಥ್ ಶೆಟ್ಟಿ, ಗೌರವ ಕಾರ್ಯದರ್ಶಿಯಾಗಿ ಸಿಎ ಸದಾಶಿವ ಶೆಟ್ಟಿ, ಕೋಶಾಧಿಕಾರಿಯಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಸಿಎ ಶ್ರೀನಿವಾಸ ಶೆಟ್ಟಿ, ಜತೆ ಕಾರ್ಯದರ್ಶಿಯಾಗಿ ನಿಶಿತ್ ಶೆಟ್ಟಿ, ಜತೆ ಕೋಶಾಧಿಕಾರಿಯಾಗಿ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ಏಳಿಂಜೆ ಅನಿಲ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ತ್ರಿಶಿಕಾ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.…

Read More

ಫೆಬ್ರವರಿ 21 ನ್ “ವಿಶ್ವ ಮಾತೃ ಭಾಷೆ”ದ ದಿನ ಆದ್ ಜಗತ್ತೊರ್ಮೆ ಆಚರಿತೊಂದುಲ್ಲೆರ್. ನಮ್ಮ ದೇಶದ ಸುಮಾರ್ ಭಾಷೆ ಬೊಕ್ಕ ಆ ಭಾಷೆಲೆ ಒಟ್ಟಿಗೆ ಉಪ್ಪುನ ಬೇತೆ ಬೇತೆ ಸಂಸ್ಕೃತಿನ್ ಒರಿಪೊಡ್ ಬೊಕ್ಕ ಐಕ್ ಉಮೇದ್ ತಿಕ್ಕೊಡು ಪನ್ಪಿ ದೃಷ್ಠಿಡ್ 1999 ಡು ಸುರುಕಾದ್ ‘ಯುನೆಸ್ಕೊ ಸಂಸ್ಥೆ’ ಈ ದಿನೊನು ಘೋಷಣೆ ಮಲ್ತ್ ನ್ಡ್. ಇಂದೆತ ಮುಂದುವರಿನ ಭಾಗವಾದ್ ವಿಶ್ವಸಂಸ್ಥೆ 2008 ನು ವಿಶ್ವ ಭಾಷೆಲೆನ ವರ್ಷ ಪಂದ್ ಲಾ ಆಚರಿಪೆರೆ ಸುರು ಮಲ್ತ್ ನ್ಡ್. ಅಂಚ 2000 ಇಸವಿರ್ದ್ ಇನಿವರೆಗ್ಲಾ ಪ್ರತೀ ವರ್ಷ ಈ ದಿನೊನು ಪಂಡ ಫೆಬ್ರವರಿ 21 ನ್ “ವಿಶ್ವ ಮಾತೃ ಭಾಷೆ”ದ ದಿನ ಆದ್ ಆಚರಿತೊಂದು ಉಲ್ಲೆರ್. ಇಂದೆತ್ತ ಪಿನ್ನೆಲೆ ತೆರಿವೊಂದು ಪೊಂಡ ಇಂದೆಟ್ಟ್ ಲಾ ಪಾಕಿಸ್ಥಾನದ ವಿಷಯೋಲು ಉಲ್ಲ!. 1952 ಟ್ಟ್ ಆನಿದ ಪಾಕಿಸ್ತಾನದ ಭಾಗ ಆದಿತ್ತಿ ಬಾಂಗ್ಲಾ ದೇಶದ ಕಾಲೇಜ್ ಕಲ್ಪು ಕಲ್ಪಾರ್ತಿಲು ಬಾಂಗ್ಲಾ ಭಾಷೆನ್ ಅಧಿಕೃತ ಭಾಷೆ ಮಲ್ಪೊಡು ಪಂದ್ ಪಾಕಿಸ್ತಾನ…

Read More

ಮೊನ್ನೆ ಒಂದು ಹೊಸ ಟ್ರೆಂಡ್ ಬಗ್ಗೆ ಕೇಳಿದೆ. ನಿಜಕ್ಕೂ ಒಂದು ಕ್ಷಣ ಶಾಕ್ ಆದೆ. ಈಗೀಗ ಬಂಟರಲ್ಲಿ ಮದುವೆಗೆ ಹುಡುಗಿ ಸಿಗುತ್ತಿಲ್ಲ. ಒಂದು ಕಾಲದಲ್ಲಿ ವರದಕ್ಷಿಣೆ ಎಂದು ಅತಿಯಾಗಿ ಅಹಂಕಾರದಿಂದ ಬೀಗುತ್ತಿದ್ದ ಸಮುದಾಯದ ಗಂಡುಗಳು ಇಂದು ವಧು-ದಕ್ಷಿಣೆ ಕೊಟ್ಟರೂ ಹೆಣ್ಣು ಸಿಗದೆ ಮದುವೆ ಆಗದೆ ಹಾಗೆ ಉಳಿದುಕೊಂಡಿದ್ದಾರೆ. ಸಾಕಷ್ಟು ಹೆಸರು ಮಾಡಿದ ಒಳ್ಳೊಳ್ಳೆ ಮನೆತನವಿದ್ದರೂ ಕೈಯಲ್ಲಿ ಸಂಪಾದಿಸುವ ಉದ್ಯೋಗವಿದ್ದರೂ ಎತ್ತರ ತೂಕ ಸರಿಯಾಗಿದ್ದರೂ ಜಾತಕ ಕೂಡಿದ್ದರೂ ಇತ್ತೀಚೆಗೆ ಹುಡುಗಿಯರ ಬೇರೆ ಬೇರೆ ಡಿಮ್ಯಾಂಡು ಪೂರೈಸಲಾಗದ ನಮ್ಮ ಈ ಸಮಾಜದ ಅದೆಷ್ಟೋ ಗಂಡುಗಳು ಮದುವೆಯಾಗದೆ ಸೂಕ್ತ ಹುಡುಗಿಗಾಗಿ ವರ್ಷ 40 ದಾಟಿದರೂ ಇನ್ನೂ ಕಾಯುತ್ತಲೇ ಇದ್ದಾರೆ. ಸರಕಾರಿ ಉದ್ಯೋಗ ಬೇಡ, ಡ್ರಿಂಕ್ಸ್ ಬೇಡ, ಸ್ಮೋಕ್ ಬೇಡ, ಊರಲ್ಲಿರುವವ ಬೇಡ, ಬೆಂಗಳೂರೇ ಬೇಕು. ಫಾರಿನ್ ಬೇಡ, ದಪ್ಪ ಬೇಡ, ಕುಳ್ಳ ಬೇಡ, ಕುಡಿಯದೇ ಇರುವವ ಕೂಡಾ ಬೇಡ ಎಂದು ಕಾರಣ ಕೊಡುವ ಹೆಣ್ಣುಗಳು, ಇತ್ತೀಚೆಗೆ ಮನೆಯಲ್ಲಿ ಹಳೆಯ ಗುಜರಿ ಬೇಡ (ಅತ್ತೆ ಮಾವ ಇಲ್ಲದ…

Read More

ಫೆಬ್ರವರಿ 18 ರಂದು ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ರಾಷ್ಟ್ರೀಯ ವಕ್ತಾರರಾದ ಸುಧಾಕರ್ ಎಸ್ ಶೆಟ್ಟಿಯವರು ಕಾಫಿ ಬೆಳೆಗಾರರ ಸಮಸ್ಯೆಗಳ ಕುರಿತು ಮಹತ್ವದ ವಿಚಾರಗಳನ್ನು ಮಂಡಿಸಿದರು. ಸರ್ಫೇಸಿ ಕಾಯ್ದೆ ಅಡಿಯಲ್ಲಿ ಕಾಫಿ ತೋಟಗಳನ್ನು ಆನ್‌ಲೈನ್ ಮೂಲಕ ಹರಾಜು ಹಾಕುತ್ತಿದ್ದರಿಂದ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದರು. ಈ ಸಮಸ್ಯೆಯನ್ನು ಮನಗಂಡು ಮಾಜಿ ಪ್ರಧಾನಿಗಳಾದ ಸನ್ಮಾನ್ಯ ಎಚ್ ಡಿ ದೇವೇಗೌಡರವರು ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯರಾದ ಕೋಟಾ ಶ್ರೀನಿವಾಸ ಪೂಜಾರಿಯವರು ಕೇಂದ್ರ ವಿತ್ತ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಪರಿಣಾಮವಾಗಿ ಆನ್‌ಲೈನ್ ಹರಾಜು ಪ್ರಕ್ರಿಯೆಗೆ ತಾತ್ಕಾಲಿಕ ತಡೆ ದೊರೆತಿದೆ ಎಂದು ಹೇಳಿದರು. ಕೇಂದ್ರ ವಿತ್ತ ಸಚಿವೆ ಆರ್‌ಬಿಐ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಹರಾಜು ಪ್ರಕ್ರಿಯೆ ತಡೆಯಲು ಸೂಚನೆ ನೀಡಿರುವುದಾಗಿ ತಿಳಿಸಿದ ಅವರು, ಈ ನಿರ್ಧಾರ ಕಾನೂನು ರೂಪದಲ್ಲಿ ಬರುವಂತೆ ಮಾಡಲು ಮತ್ತೊಮ್ಮೆ ಒತ್ತಾಯಿಸಲಾಗುತ್ತದೆ ಎಂದರು. ಇದರಿಂದ ಹಾಸನ, ಕೊಡಗು, ಚಿಕ್ಕಮಗಳೂರು ಭಾಗದ ಕಾಫಿ ಬೆಳೆಗಾರರಿಗೆ…

Read More

ಪೆರ್ನೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಐದನೇ ಬಾರಿಗೆ ಎಸ್ ತೋಯಜಾಕ್ಷ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಎರಡನೇ ಬಾರಿಗೆ ತನಿಯಪ್ಪ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣೆ ಸಂದರ್ಭ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿದ್ದು, ಈ ಹಿನ್ನಲೆಯಲ್ಲಿ ಚುನಾವಣೆ ನಡೆಯದೆ ಅವಿರೋಧ ಆಯ್ಕೆ ನಡೆಯಿತು. ರಿಟರ್ನಿಂಗ್ ಅಧಿಕಾರಿ ಬಿ. ನಾಗೇಂದ್ರ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಪುಷ್ಪಾ ಡಿ ಸಹಕರಿಸಿದರು.

Read More

ವಿದ್ಯಾರ್ಥಿ ಜೀವನದಲ್ಲಿ ಶಿಸ್ತುಬದ್ಧವಾದ ನಡೆ-ನಡವಳಿಕೆ ಇಟ್ಟುಕೊಂಡವನು ಶೈಕ್ಷಣಿಕ ಕ್ಷೇತ್ರದಲಿ ಸಾಧಕನಾಗಿ ಹೊರಹೊಮ್ಮಲು ಸಾಧ್ಯ. ಇದಕ್ಕೆ ಪೂರಕವಾದ ವಾತವರಣವು ಜ್ಞಾನಸುಧಾದಲ್ಲಿದೆ. ಡಾ.ಸುಧಾಕರ್ ಶೆಟ್ಟಿಯವರ ಮಾರ್ಗದರ್ಶನ ಹಾಗೂ ಜ್ಞಾನಸುಧಾ ಒಟ್ಟು ಕುಟುಂಬವಾಗಿ ದುಡಿಯುತ್ತಿರುವುದರ ಪ್ರತಿಫಲವೇ ಇಂತಹ ಅತ್ಯುತ್ತಮ ಫಲಿತಾಂಶಗಳಾಗಿವೆ ಎಂದು ಕಾರ್ಕಳ ಜ್ಞಾನಸುಧಾದ ಪೂರ್ವ ವಿದ್ಯಾರ್ಥಿ ಕಾಲೇಜಿನ ಪೂರ್ವ ವಿದ್ಯಾರ್ಥಿ, ಶ್ರೀ ಮನ್ವಿತ್ ಪ್ರಭು ನುಡಿದರು. ಅವರು ಕಾರ್ಕಳ ಜ್ಞಾನಸುಧಾದ ಪ್ರಾಂಗಣದಲ್ಲಿ ಜೆಇಇ ಮೈನ್ (ಬಿ.ಟೆಕ್) – 2026ರ ಮೊದಲ ಹಂತದ ಫಲಿತಾಂಶದಲ್ಲಿ ಕಾಲೇಜಿನ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನ ನೆರವೇರಿಸಿ ಮಾತನಾಡಿದರು. ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿಯವರು ಮಾತನಾಡುತ್ತಾ, ಪ್ರಾಮಾಣಿಕ ಪರಿಶ್ರಮದಿಂದ ಪಡೆದ ಫಲಿತಾಂಶಕ್ಕೆ ನ್ಯಾಯವನ್ನು ಕೊಡುವ ಜವಾಬ್ದಾರಿ ನಾವು ಮಾಡಿದ್ದೇವೆ ಎಂಬ ತೃಪ್ತಿ ನಮಗಿದೆ. ಎಷ್ಟೇ ಅತ್ಯುತ್ತಮ ಅಂಕ ಗಳಿಸಿಕೊಂಡರು ತಂದೆ ತಾಯಿ ಗುರುಹಿರಿಯರನ್ನು ಗೌರವಿಸಿಕೊಂಡು ಬಾಳಿದರೇ ನಿಜವಾದ ಸಾಧಕನ ವ್ಯಕ್ತಿತ್ವಕ್ಕೆ ಗೌರವ ಬರಲು ಸಾಧ್ಯ ಎಂದರು, ಸಾಧರಿಗೆ ಸನ್ಮಾನ : ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ…

Read More