Author: admin
ತುಳುನಾಡಿನ ಸಮೃದ್ಧ ಸಂಸ್ಕೃತಿ, ಆರಾಧನಾ ಪರಂಪರೆ ಮತ್ತು ಭಾಷಾ ವೈಭವವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಮಹತ್ವಾಕಾಂಕ್ಷೆಯೊಂದಿಗೆ, ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ‘ರಾಷ್ಟ್ರೀಯ ತುಳು ವಿಚಾರ ಸಂಕಿರಣ’ಕ್ಕೆ ಶುಕ್ರವಾರದಂದು ಪ್ರಮೋದ್ ಸಪ್ರೇ ಇವರ ನಾಡಗೀತೆ ಹಾಡಿನೊಂದಿಗೆ ಅದ್ಧೂರಿ ಚಾಲನೆ ದೊರೆಯಿತು. ತುಳುವರ್ಲ್ಡ್ ಫೌಂಡೇಶನ್ (ಕಟೀಲು- ಮಂಗಳೂರು) ಮತ್ತು ತುಳುವ ಮಹಾಸಭೆ (ಬೆಂಗಳೂರು), ಅಲಯನ್ಸ್ ಯೂನಿವರ್ಸಿಟಿಯ ‘ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಇಂಡಿಯನ್ ನಾಲೆಡ್ಜ್ ಸಿಸ್ಟಮ್ಸ್’ ಹಾಗೂ ‘ಸ್ಕೂಲ್ ಆಫ್ ಪರ್ಫಾರ್ಮಿಂಗ್ ವಿಶುವಲ್ ಅಂಡ್ ಕ್ರಿಯೇಟಿವ್ ಆರ್ಟ್ಸ್’ ಸಹಯೋಗದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಿವೆ. ಕಾರ್ಯಕ್ರಮದ ಸ್ವಾಗತ ಭಾಷಣ ಮಾಡಿದ ಸಿ.ಒ.ಇ.ಐ.ಕೆ.ಎಸ್ ಡೈರೆಕ್ಟರ್ ಡಾ. ಎ.ಎಂ. ಶ್ರೀಧರನ್, “ನಮ್ಮ ಭಾಷೆಯನ್ನು ನಾವು ಪ್ರೀತಿಸಿದಾಗ ಮಾತ್ರ ದೇಶ ಸಮೃದ್ಧವಾಗಿ ಬೆಳೆಯಲು ಸಾಧ್ಯ. ತುಳು ಭಾಷೆಯು ಅತ್ಯಂತ ಪ್ರಾಚೀನ ಹಾಗೂ ಶ್ರೀಮಂತವಾದುದು. ತುಳುವ ಸಮಾಜದ ಆರಾಧನಾ ಪದ್ಧತಿ ಮತ್ತು ಜನಪದ ಪರಂಪರೆಯನ್ನು ಯುವ ಜನಾಂಗಕ್ಕೆ ಪರಿಚಯಿಸುವ ಅವಶ್ಯಕತೆ ಇದೆ,” ಎಂದು ಆಶಯ ವ್ಯಕ್ತಪಡಿಸಿದರು. ಅಲಯನ್ಸ್ ವಿಶ್ವವಿದ್ಯಾಲಯದ…
ಭಾರತೀಯ ಸೇನೆಯಲ್ಲಿ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ (NSG) ಒಂದು ಸ್ಪೆಷಲ್ ಫೋರ್ಸ್. ಇವರನ್ನು ಬ್ಲ್ಯಾಕ್ ಕ್ಯಾಟ್ ಕಮಾಂಡೊ ಎಂದು ಕರೆಯುತ್ತಾರೆ. ಕೆಲವೇ ಆಯ್ದ ಸೈನಿಕರಿಗೆ ಮಾತ್ರ ದೊರೆಯುವ ಅತೀ ಕಠಿಣ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ NSG BLACK CAT COMMANDO ಆಗಿ ಸಚಿನ್ ಶೆಟ್ಟಿ ನೇಮಕಗೊಂಡಿದ್ದಾರೆ. ಸಚಿನ್ ಶೆಟ್ಟಿ ಹೆಬ್ರಿಯ ದಿ. ಜಗದೀಶ್ ಶೆಟ್ಟಿ ಮತ್ತು ಸತ್ಯವತಿ ಶೆಟ್ಟಿ ದಂಪತಿಯ ಪುತ್ರ. 2012ರಲ್ಲಿ ಸೇನೆಗೆ ಸೇರ್ಪಡೆಗೊಂಡ ಇವರು 1 ವರ್ಷ ಮಧ್ಯಪ್ರದೇಶದ ಜಬಲ್ಪುರ್ ನಲ್ಲಿ ತರಬೇತಿ ಪಡೆದು ಬಳಿಕ ರಾಜಸ್ತಾನ್, ಜಮ್ಮು ಕಾಶ್ಮೀರ, ಪಂಜಾಬ್ ಹಾಗೂ ಜಮ್ಮು ರಾಷ್ಟ್ರೀಯ ರೈಪಲ್ಸ್ ನಲ್ಲಿ ಕರ್ತವ್ಯ ಸಲ್ಲಿಸಿದ್ದಾರೆ. ಪ್ರಸ್ತುತ 60 ದಿನಗಳ NSG Commando ತರಬೇತಿ ಮುಗಿಸಿ ದೆಹಲಿಯಲ್ಲಿ ಕರ್ತವ್ಯಕ್ಕೆ ನೇಮಕಗೊಂಡಿದ್ದಾರೆ.
ಸೂರಿಂಜೆ ಮೂಲದ ಉದ್ಯಮಿ ಡಿ.ಕೆ ಶೆಟ್ಟಿ ಮಾಲಕತ್ವದ ಇನ್ನಾ ಹಾಸ್ಪಿಟಾಲಿಟಿ ಸಂಸ್ಥೆ ಮುಂಬೈನಲ್ಲಿ ತನ್ನ ಪ್ರಧಾನ ಕಚೇರಿಯನ್ನು ಹೊಂದಿದ್ದು, ದೇಶದ ವಿವಿಧ ಭಾಗಗಳಲ್ಲಿ ತನ್ನ ಸೇವೆಯನ್ನು ವಿಸ್ತರಿಸುತ್ತಿರುವ ಪ್ರಮುಖ ಹಾಸ್ಪಿಟಾಲಿಟಿ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಪ್ರಸ್ತುತ ಸಂಸ್ಥೆಯಲ್ಲಿ 500ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು, ಗುಣಮಟ್ಟದ ಸೇವೆ ಮತ್ತು ವೃತ್ತಿಪರ ನಿರ್ವಹಣೆಯ ಮೂಲಕ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ವ್ಯವಹಾರ ವಿಸ್ತರಣೆಯ ಉದ್ದೇಶದಿಂದ ಹಾಗೂ ವೇಗವಾಗಿ ಬೆಳೆಯುತ್ತಿರುವ ವ್ಯಾಪಾರ ಕೇಂದ್ರವಾಗಿರುವ ಸುರತ್ಕಲ್ ನಗರದಲ್ಲಿ ಇನ್ನಾ ಹಾಸ್ಪಿಟಾಲಿಟಿ ಸಂಸ್ಥೆಯ ನೂತನ ಶಾಖೆಯನ್ನು ಆರಂಭಿಸಲಾಗಿದೆ. ಇದರ ಅಂಗವಾಗಿ ಜನವರಿ 1, 2026 ಗುರುವಾರ ಸಂಜೆ 4 ಗಂಟೆಗೆ ಸುರತ್ಕಲ್ನ ಅಭಿಷ್ ಬ್ಯುಸಿನೆಸ್ ಸೆಂಟರ್ ಕಟ್ಟಡದಲ್ಲಿ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ನೂತನ ಶಾಖೆಯನ್ನು ವಿಶ್ವಕಪ್ ಮಹಿಳಾ ಕಬಡ್ಡಿ ವಿಜೇತ ತಂಡದ ಸದಸ್ಯೆ ಕುಮಾರಿ ಧನಲಕ್ಷ್ಮಿ ಅವರು ರಿಬ್ಬನ್ ಕತ್ತರಿಸುವ ಮೂಲಕ ಅಧಿಕೃತವಾಗಿ ಉದ್ಘಾಟಿಸಿದರು. ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದ ಯುವ ಪ್ರತಿಭೆಯ ಕೈಯಿಂದ ಶಾಖೆ ಉದ್ಘಾಟನೆಯಾಗಿದ್ದು,…
ಬಂಟ್ಸ್ ಅಸೋಸಿಯೇಷನ್ ಪುಣೆಯ ಸಮಾಜ ಕಲ್ಯಾಣ ಸೇವಾ ಕಾರ್ಯದಂಗವಾಗಿ ಪುಣೆಯ ಸಮಸ್ತ ಬಂಟ ಸಮಾಜ ಬಾಂಧವರಿಗಾಗಿ ಮಲ್ಟಿ ಸ್ಪೆಷಾಲಿಟಿ ಉಚಿತ ಅರೋಗ್ಯ ತಪಾಸಣಾ ಶಿಬಿರವನ್ನು ಜನವರಿ 11 ರವಿವಾರದಂದು ಬೆಳಿಗ್ಗೆ ಗಂಟೆ 9.00 ರಿಂದ ಮಧ್ಯಾಹ್ನ ಗಂಟೆ 12.30 ರವರೆಗೆ ಗುರುನಾನಕ್ ಮೆಡಿಕಲ್ ಫೌಂಡೇಶನ್ ನ ಗುರುನಾನಕ್ ದರ್ಬಾರ್ ಹಾಲ್ (ಹಾಲಿವುಡ್ ಗುರುದ್ವಾರ) ಕ್ಯಾಂಪ್ ಪುಣೆ ಇಲ್ಲಿ ಆಯೋಜಿಸಲಾಗಿದೆ. ಪ್ರತಿ ವರ್ಷದಂತೆ ಪುಣೆ ಬಂಟ್ಸ್ ಅಸೋಸಿಯೇಷನ್ ಅಯೋಜನೆಯಲ್ಲಿ ಗುರುನಾನಕ್ ಮೆಡಿಕಲ್ ಫೌಂಡೇಶನ್ ಸಹಯೋಗದೊಂದಿಗೆ ನಡೆಯಲಿರುವ ಈ ಉಚಿತ ಅರೋಗ್ಯ ತಪಾಸಣಾ ಶಿಬಿರದಲ್ಲಿ ಮಲ್ಟಿ ಸ್ಪೆಷಾಲಿಟಿ ಆರೋಗ್ಯ ತಪಾಸಣೆ, ಸ್ತ್ರೀರೋಗ ಶಾಸ್ತ್ರ, ಮಕ್ಕಳ ರೋಗ ತಪಾಸಣೆ, ಕಣ್ಣು, ಹಲ್ಲು ತಪಾಸಣೆ, ಔಷದಿ ಮತ್ತು ರೋಗಶಾಸ್ತ್ರದ ಬಗ್ಗೆ ಮಾಹಿತಿ, ತುರ್ತು ರೋಗಿಗಳಿಗೆ ಉಚಿತ ECG ಮತ್ತು ಉಚಿತ ಸಕ್ಕರೆ ರೋಗ ತಪಾಸಣೆ ನಡೆಯಲಿದೆ. ಪುಣೆ ಬಂಟ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾದ ರೋಹಿತ್ ಶೆಟ್ಟಿ ನಗ್ರಿಗುತ್ತು ಮತ್ತು ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ, ಯುವ ವಿಭಾಗದವರ…
ಅಡ್ಪಿಲ್ಲ್ ದ ಬರಿತ ಕೋನೆ ಪಡ್ಸಾಲೆ. ಕನ್ನಡೊಡು ಪಡುಕೋಣೆ. ಆಂಡಾ ಅವು ಪಡ್ಸಾಲೆ ಪಂದ್ ದಾಯೆಗ್ ಪುದರ್? ದುಂಬುದ ನಮ್ಮ ತುಲುವೆರೆನ ಇಲ್ಲುಲು ಕೊಂಟು ಮೂಲೆದ (L shaped) ಚಾವಡಿ ಮೂಡಾಯಿ ದಿಕ್ಕ್, ಅಡ್ಪಿಲ್ ಬಡಕಾಯಿ ದಿಕ್ಕ್ಗ್ ಮೋನೆ ಪಾಡ್ದ್ ಇಪ್ಪುಂಡು. ಅಡ್ಪಿಲ್ಲಡ್ದ್ ಬಡಕಾಯಿ ಮುಕುಡ್ದು ತೂನಗ, ದತ್ತ್ಗ್ ಪಡ್ಸಾಲೆ. ದಾಯೆಗ್ ಪಂಡ, ಅಡ್ಪಿಲ್ಲದ ಪಡ್ಡಾಯಿಡ್ ಇಪ್ಪುನ, ಉನರೆ ಕುಲ್ಲುನ ಕೋನೆ. ಎಚ್ಚಾದ್ ಅಡ್ಪಿಲ್ಲಡ್ದ್ ಪಿದಾಯಿಗ್ ಜಪ್ಪುನ ಬಾಕಿಲ್ ಇಜ್ಜಿ. ಅಡ್ಪಿಲ್ಲ್ ಬೊಕ್ಕ ಪಡಸಾಲೆದ ನಡ್ಡೆ ಒಂಜಿ ಮುಂಡು ಗೋಡೆ. ಅಡ್ಪಿಲ್ಲ್ ದ ಮಿತ್ತ್ ಅಟ್ಟ, ಅಟ್ಟೊಗು ಅರಿತ ಮುಡಿ ನೂಕರೆ (ದೀವರೆ) ಸುರುಕು ಇ ಅಡ್ಡಗೋಡೆದ ಮಿತ್ತ್ ಮುಡಿ ದೀದ್, ಬೊಕ್ಕ ಗೋಡೆದ ಮಿತ್ ಪೋದು ಅಲ್ತ್ಡ್ದ್ ದೆರ್ತ್ದ್ ಮೊರಂಪುಡು ದೀದ್, ಅಟ್ಟೊಗು ನೂಕೊಂದು ಇತ್ತೆರ್, ಅರಿತ ಮುಡಿಕ್ ಲೆನ್. ಅಡ್ಪಿಲ್ಲದ ಅಟ್ಟೊಗು ಕುತ್ಯಟ್ಟ ಪನ್ಪೆರ್. ಇ ಮುಂಡು ಗೋಡೆ ತೆನ್ಕಾಯಿ ಮೆಯಿಟ್ ರಡ್ಡ್ ಅಡಿ ಬುಡ್ದು, ಬಡಕಾಯಿ ಗೋಡೆ…
ಬಂಟ್ಸ್ ಫೋರಮ್ ಮೀರಾ ಭಾಯಂದರ್ ವತಿಯಿಂದ ಜನವರಿ 24ರ ಬುಧವಾರದಂದು ಮೀರಾ ರೋಡ್ ಪೂರ್ವದ ಸೆಂಟ್ರಲ್ ಪಾರ್ಕ್ ಲಾನ್ ನಲ್ಲಿ ನಡೆಯಲಿರುವ ಬಂಟ ಕೂಟ -2026 ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಉದಯ ಎಂ ಶೆಟ್ಟಿ ಮಲಾರಬೀಡು, ರಂಗ ನಟ ಜಗದೀಶ ಶೆಟ್ಟಿ ಕೆಂಚನಕೆರೆ, ಪದಾಧಿಕಾರಿಗಳಾದ ದಿವಾಕರ ಶೆಟ್ಟಿ ಶಿರ್ಲಾಲ್, ಹರ್ಷ ಕುಮಾರ ಡಿ ಶೆಟ್ಟಿ ಪಾಂಗಾಳ, ಸಂತೋಷ್ ರೈ ಬೆಳ್ಳಿಪಾಡಿ, ಸತೀಶ್ ಶೆಟ್ಟಿ ಮುಂಡ್ಕೂರು, ಹರೀಶ್ ಶೆಟ್ಟಿ ಕಾಪು, ಸುಖವಾಣಿ ಡಿ ಶೆಟ್ಟಿ, ನವೀನಾ ಜೆ ಭಂಡಾರಿ, ಶರ್ಮಿಳಾ ಕೆ ಶೆಟ್ಟಿ, ಸುಮತಿ ಆರ್ ಶೆಟ್ಟಿ, ಪ್ರತಿಭಾ ಆರ್ ಶೆಟ್ಟಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಕಾತ್ರಾಜ್ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶ್ರೀ ಅಯ್ಯಪ್ಪ ಸ್ವಾಮಿ, ಶಿವ ಹಾಗೂ ಪರಿವಾರ ದೇವರುಗಳ ವಾರ್ಷಿಕ ಉತ್ಸವ, ಮಹಾಪೂಜೆಯು ಸ್ವಸ್ತಿ ಶ್ರೀ ವಿಶ್ವಾವಸುನಾಮ ಸಂವತ್ಸರ ಧನುರ್ಮಾಸ 28, ಜನವರಿ 12 ಸೋಮವಾರದಂದು ಜರಗಲಿದೆ. ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮತ್ತು ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ರಾಘವೇಂದ್ರ ಭಟ್ ರವರ ಸಹಕಾರದೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ವಾರ್ಷಿಕೋತ್ಸವದ ಅಂಗವಾಗಿ ಜನವರಿ 11ರಂದು ರವಿವಾರ ಸಂಜೆ ಗಂಟೆ 7.೦೦ರಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಪ್ರಸಾದ ಶುದ್ಧಿ ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಕಲಶಪೂಜೆ, ವಾಸ್ತು ಬಲಿ, ದುರ್ಗಾ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ಜರಗಲಿದೆ. ದಿನಾಂಕ 12 ರಂದು ಸೋಮವಾರ ಬೆಳಿಗ್ಗೆ ಗಂಟೆ 8.೦೦ ರಿಂದ ಮಹಾಗಣಪತಿ ಹೋಮ, ಕಲಶ ಪೂಜೆ, ನವಗ್ರಹ ಪೂಜೆ, ಅಶ್ಲೇಷಾ ಬಲಿ, ನಾಗದೇವರಿಗೆ ಅಭಿಷೇಕ, ತಂಬಿಲ, ಶ್ರೀ ದುರ್ಗಾ ದೇವಿಗೆ ಕಲಶ ಪೂಜೆ,…
ನೆಮ್ಮದಿಯ ಬದುಕು, ಸುಖ ಸಮೃದ್ದಿಯ ಬದುಕು ನೀಡಿದ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ದಾರ ಸಮಿತಿಗೆ ಅಧ್ಯಕ್ಷರಾಗಿ ಸತ್ವ ಪರೀಕ್ಷೆಯಂತೆ ಬಂದ ಕಾರ್ಯವನ್ನು ಮಾಡುವ ಜವಾಬ್ದಾರಿ ಬಂದಾಗ ಒಂದು ಹೆಜ್ಜೆ ಮುಂದೆ ಇಟ್ಟರೆ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂಬಂತೆ ದೇವಸ್ಥಾನದ ಪುನರ್ ನಿರ್ಮಾಣಕ್ಕೆ ಇಳಿದಿದ್ದೇವೆ. ಎಲ್ಲವೂ ದೇವರ ಅನುಮತಿಯಂತೆ ನಡೆಯುತ್ತದೆ ಎಂಬುದನ್ನು ನಾವು ನಂಬಿದವರು. ಸಣ್ಣ ಪುಟ್ಟ ಅಡೆತಡೆಗಳು ನಿವಾರಣೆಯಾಗಿ ಯಾವುದೇ ಜಾತಿ ಪಂಗಡ ಧರ್ಮ ಇರಲಿ ಅಥವಾ ಯಾವುದೇ ವ್ಯಕ್ತಿ ಕೂಡಾ ಮನಸ್ಸು ಬೇಜಾರು ಮಾಡಿಕೊಳ್ಳದೆ ಒಂದು ಸೇರಿ ನನ್ನ ಬಳಿ ಬಂದಾಗ ಇಲ್ಲ ಎನ್ನದೇ ಮತ್ತು ನನ್ನ ಧರ್ಮಪತ್ನಿಯ ಸಂಕಲ್ಪ ಏನಿದೆಯೋ ಅದರಂತೆ ಇಂದು ದೇವಸ್ಥಾನದ ಕಾರ್ಯಗಳು ನಡೆಯುತ್ತಿವೆ. ನಮ್ಮ ಪಾಲಿಗೆ ದೇವತಾ ಕಾರ್ಯ ಮಾಡುವ ಯೋಗ ಬಂದಿದೆ. ನನ್ನ ವೈಯುಕ್ತಿಕ ಸೇವೆ ಇದ್ದೇ ಇದೆ. ಆದರೆ ಇಲ್ಲಿ ಸೇರಿದ ಮತ್ತು ಪಡುಬಿದ್ರಿ ಮಹಾಲಿಂಗೇಶ್ವರ ಭಕ್ತರ, ಎಲ್ಲರ ತನು ಮನ ಧನದ ಸೇವೆ ಸಲ್ಲಬೇಕು ಎಂಬುದೇ ನಮ್ಮ…
ಸಂಸ್ಕಾರಯುತ ಶಿಕ್ಷಣ ಇಂದಿನ ದಿನಗಳಲ್ಲಿ ಅವಶ್ಯಕವಾಗಿದೆ. ಕಲಿಕೆಯೊಂದಿಗೆ ಪರಿಸರದ ಬಗೆಗಿನ ಕಾಳಜಿಯೂ ಅತೀ ಅಗತ್ಯವಾಗಿದೆ. ಅಮೆರಿಕಾದಂತಹ ದೇಶದಲ್ಲೂ ಉದ್ಯೋಗ ಕ್ಷೇತ್ರದಲ್ಲಿ ಭಾರತೀಯ ಯುವಕರಿಗೆ ಉತ್ತಮ ಅವಕಾಶವಿದೆ. ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಅವರ ಹುಮ್ಮಸ್ಸನ್ನು ಇಮ್ಮಡಿಗೊಳಿಸುವ ಕೆಲಸವನ್ನು ಕಾರ್ಕಳ ರೋಟರಿ ಸಂಸ್ಥೆಯು ಮಾಡುತ್ತಿರುವುದು ಅಭಿನಂದನೀಯ ಎಂದು ಕಾರ್ಕಳ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಸಹ ಸಂಸ್ಥಾಪಕ ಡಾ| ಗಣನಾಥ ಶೆಟ್ಟಿ ಬಿ. ಹೇಳಿದರು. ಅವರು ಕಾರ್ಕಳ ಕಾಬೆಟ್ಟು ಕಟ್ಟೆಮಾರ್ “ನೈವೇದ್ಯ” ಸಭಾ ವೇದಿಕೆಯಲ್ಲಿ ರೋಟರಿ ಸಂಸ್ಥೆಯ ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಣೆಯ “ಸಂಭ್ರಮ ಸಮ್ಮಿಲನ” ಸಮಾರಂಭದಲ್ಲಿ ಭಾಗವಹಿಸಿ ಸಾಧಕರಾದ ಖ್ಯಾತ ಶಿಲ್ಪಿ ಕೆ ಸತೀಶ್ ಆಚಾರ್ಯ ಹಾಗೂ ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಹೆಬ್ರಿ ಇದರ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿಯವರನ್ನು ಗೌರವಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ರೋಟರಿಯ ರೋಟರಿ ಜಿಲ್ಲೆ 3182 ರ ಪ್ರತಿನಿಧಿಯಾಗಿ 2026 – 28ರ ಅವಧಿಗೆ ಆಯ್ಕೆಯಾದ ಕ್ಲಬ್ಬಿನ ಮಾಜಿ ಜಿಲ್ಲಾ ಗವರ್ನರ್…
ಸಹಕಾರ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು ನಿರಂತರ ಸೇವೆ ಮಾಡುತ್ತಾ, ಸಾಮಾಜಿಕ ಸೇವಾ ಸಂಸ್ಥೆ ಸ್ಕೌಟ್ಸ್ ಆಂಡ್ ಗೈಡ್ಸ್ ಮುಖ್ಯ ಆಯುಕ್ತಕರಾದ ಸಹಕಾರ ರತ್ನ ಬಿ. ಜಯಕರ ಶೆಟ್ಟಿ ಇಂದ್ರಾಳಿ ದಂಪತಿಯನ್ನು ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ವತಿಯಿಂದ ವಿಶ್ವ ಗೀತಾ ಪರ್ಯಾಯದ ಪ್ರಯುಕ್ತ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಸಂಸ್ಥಾನದ ಮಠಾಧೀಶರಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದ ನಾಥ ಸ್ವಾಮೀಜಿ, ಪರ್ಯಾಯ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶೀಂದ್ರ ತೀರ್ಥ ಶ್ರೀಪಾದರು ಶ್ರೀ ಮಠದ ವತಿಯಿಂದ “ಶ್ರೀ ಕೃಷ್ಣ ಗೀತಾನುಗ್ರಹ ಪ್ರಶಸ್ತಿ” ಅನುಗ್ರಹಿಸಿ, ಗೌರವಿಸಿದರು.















