Author: admin
ಹಾವು ಕಡಿತಕ್ಕೊಳಗಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಬಡ ಮಹಿಳೆಗೆ ತುರ್ತಾಗಿ ರಕ್ತದ ವ್ಯವಸ್ಥೆ ಮಾಡುವ ಮೂಲಕ ಬಂಟ್ವಾಳದ ದಿನೇಶ್ ಶೆಟ್ಟಿ ದಂಬೆದಾರು ಹಾಗೂ ಅವರ ತಂಡವು ಮಾನವೀಯತೆ ಮೆರೆದಿದೆ. ಅನಂತಾಡಿ ಗ್ರಾಮದ ಗೋಳಿಕಟ್ಟೆ ನಿವಾಸಿ ಭವಾನಿ ಅವರಿಗೆ ವಿಷಕಾರಿ ಹಾವು ಕಚ್ಚಿದ್ದು, ಮೊದಲು ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಸೂಕ್ತ ಚಿಕಿತ್ಸೆ ದೊರೆಯದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ICU) ದಾಖಲಿಸಲಾಯಿತು. ಚಿಕಿತ್ಸೆ ಸಮಯದಲ್ಲಿ ಮಹಿಳೆಗೆ ತುರ್ತಾಗಿ ರಕ್ತದ ಅವಶ್ಯಕತೆ ಇತ್ತು. ಆದರೆ ಮಂಗಳೂರಿನ ಆಸ್ಪತ್ರೆಗಳಲ್ಲಿ ರಕ್ತದ ಅಭಾವವಿದ್ದ ಕಾರಣ ಕುಟುಂಬದವರು ಆತಂಕಕ್ಕೊಳಗಾಗಿದ್ದರು. ಈ ಸಂದರ್ಭದಲ್ಲಿ ಬಂಟ್ವಾಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ದಿನೇಶ್ ಶೆಟ್ಟಿ ದಂಬೆದಾರು ಅವರನ್ನು ಸಂಪರ್ಕಿಸಿ ಸಹಾಯ ಕೋರಲಾಯಿತು. ವಿಷಯ ತಿಳಿದ ಕೂಡಲೇ ಕಾರ್ಯಪ್ರವೃತ್ತರಾದ ದಿನೇಶ್ ದಂಬೆದಾರು ಅವರು ತಾವೂ ಕೂಡ ಆಸ್ಪತ್ರೆಗೆ ಧಾವಿಸಿ ರಕ್ತದಾನಿ ಯುವಕರ ತಂಡವನ್ನು ಸಂಘಟಿಸಿದರು. ಮಹಿಳೆಯ ಜೀವ ಉಳಿಸಲು…
ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳು ಡಿಜಿಟಲ್ ಲೋಕದಿಂದ ಹೊರಬಂದು, ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಸುಜ್ಞಾನ ಎಜುಕೇಷನಲ್ ಟ್ರಸ್ಟ್ ಆಯೋಜಿಸಿರುವ ‘ಮಂಥನ’ ಬೇಸಿಗೆ ಶಿಬಿರವು ಮಕ್ಕಳ ಬದುಕಿಗೆ ಹೊಸ ದಾರಿದೀಪವಾಗಲಿದೆ ಎಂದು ಸುಣ್ಣಾರಿಯ ವಿವೇಕೋದಯ ಇಂಗ್ಲಿಷ್ ಮಾಧ್ಯಮ ಶಾಲೆಯ ಅಧ್ಯಕ್ಷ ಕಿಶೋರ್ ಕುಮಾರ್ ಶೆಟ್ಟಿ ತಿಳಿಸಿದರು. ಅವರು ಸುಜ್ಞಾನ ಎಜುಕೇಷನಲ್ ಟ್ರಸ್ಟ್ ಆಶ್ರಯದಲ್ಲಿ ನಡೆಯುತ್ತಿರುವ ‘ಮಂಥನ’ ಬೇಸಿಗೆ ಶಿಬಿರದ ನಾಲ್ಕನೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಿಬಿರದ ನಾಲ್ಕನೇ ದಿನವು ವೈವಿಧ್ಯಮಯ ಚಟುವಟಿಕೆಗಳಿಂದ ಕೂಡಿದ್ದು, ಶಿಬಿರಾರ್ಥಿಗಳಲ್ಲಿ ಹೊಸ ಉತ್ಸಾಹ ತುಂಬಿತು. ಪಾಕತಜ್ಞ ಸುಜನ್ ಕುಂದಾಪುರ ಅವರಿಂದ ಮಕ್ಕಳು ‘ಓರಿಯೊ ಸೀಸರ್ ರೋಲ್’ ತಯಾರಿಕೆಯನ್ನು ಕಲಿತರು. ತಾವೇ ತಯಾರಿಸಿದ ಸಿಹಿತಿಂಡಿಯನ್ನು ಸವಿದು ಮಕ್ಕಳು ಸಂಭ್ರಮಿಸಿದರು. ಶಾಂಭವಿ ರಂಜಿತ್ ಅವರು ಮಕ್ಕಳಿಗೆ ‘ಲೀಫ್ ಆರ್ಟ್’ (ಎಲೆಗಳ ಕಲೆ) ಹಾಗೂ ಆಕ್ಷನ್ ಸಾಂಗ್ ಮೂಲಕ ರಂಜಿಸಿದರು. ಝುಂಬಾ ತಜ್ಞೆ ಸಹನಾ ಜಗನ್ನಾಥ್ ಮತ್ತು ಆಝಾದ್ ಮೊಹಮ್ಮದ್ ಅವರು ಝುಂಬಾ ಹಾಗೂ ಏರೋಬಿಕ್ಸ್ ತರಬೇತಿ…
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಡಾ| ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ದಾನಿಗಳ ಸಹಕಾರದಿಂದ ನಿರ್ಮಾಣ ಹಂತದಲ್ಲಿರುವ ಹವಾನಿಯಂತ್ರಿತ ಸಭಾಭವನದ ಕಾಮಗಾರಿ ವೀಕ್ಷಣೆಯನ್ನು ಖ್ಯಾತ ಉದ್ಯಮಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹಾ ನಿರ್ದೇಶಕರಾದ ಮೆರಿಟ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಸಿಎಂಡಿ ಅಶೋಕ್ ಶೆಟ್ಟಿ ಬೆಳ್ಳಾಡಿ ಅವರು ಭೇಟಿ ನೀಡಿ ಕಾಮಗಾರಿಯ ಪರಿಶೀಲನೆ ನಡೆಸಿದರು. ನಂತರ ಒಕ್ಕೂಟದ ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಚೇರಿಯಲ್ಲಿ ಶ್ರೀಯುತರನ್ನು ಸ್ವಾಗತಿಸಿ ಒಕ್ಕೂಟದ ಅಧ್ಯಕ್ಷರು ಅಭಿನಂದಿಸಿದರು. ಈ ಸಂದರ್ಭ ಸಂಚಾಲಕರಾದ ಕೊಲ್ಲಾಡಿ ಬಾಲಕೃಷ್ಣ ರೈ, ಉದ್ಯಮಿ ಸುರೇಶ್ ಶೆಟ್ಟಿ ಶಿಬರೂರು, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ, ಸಿವಿಲ್ ಗುತ್ತಿಗೆದಾರ ಶಿವಪ್ರಸಾದ್ ರೈ ಉಪಸ್ಥಿತರಿದ್ದರು.
ಒಬ್ಬನೇ ವ್ಯಕ್ತಿ ತನ್ನ ಸತತ ಸಾಧನೆಗಳ ಮೂಲಕ ಎಷ್ಟೆಲ್ಲಾ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಬಲ್ಲ ಎನ್ನುವುದಕ್ಕೊಂದು ಉತ್ತಮ ಉದಾಹರಣೆಯಾದ ಸತೀಶ್ ಆನಂದ ಶೆಟ್ಟಿಯವರು ಉಡುಪಿಯ ಹಿರಿಯಡ್ಕ ಪೆರ್ಣಂಕಿಲ ಪಡುಬೆಟ್ಟು ಆನಂದ ಮದನ್ ಶೆಟ್ಟಿ ಹಾಗೂ ಉಡುಪಿ ಜಿಲ್ಲೆಯ ಮಂದಾರ್ತಿ ಹೆಗ್ಗುಂಜೆ ಹೆಬ್ಬಾಡಿ ಪಾರ್ವತಿ ಆನಂದ ಶೆಟ್ಟಿ ದಂಪತಿಯರ ಸುಪುತ್ರರಾಗಿ ಜನಿಸಿದರು. ಸತೀಶ್ ವಾಣಿಜ್ಯ ಪದವಿಧರರು ಹಾಗೂ ಎಂ.ಬಿ.ಎ ಸ್ನಾತಕೋತ್ತರ ಉಚ್ಛ ಶಿಕ್ಷಣ ಪಡೆದ ಧೀಮಂತರು. ಇವರು ಬಹುಭಾಷಾ ಜ್ಞಾನಿ ಅಷ್ಟೇ ಅಲ್ಲದೆ ಹಲವಾರು ಕ್ರೀಡೆಗಳ ಅಭ್ಯಾಸ ಮಾಡಿದ ಕ್ರೀಡಾಪಟು ಕೂಡಾ. ಸಾಮಾಜಿಕ ಚಿಂತನೆ ಉಳ್ಳವರಾದ ಸತೀಶ್ ಶೆಟ್ಟಿಯವರು ಬಡ ಮಕ್ಕಳ ಶಿಕ್ಷಣಕ್ಕೆ ಬೇಕು ಬೇಕಾದ ಪಠ್ಯ ಪುಸ್ತಕ ಹಾಗೂ ಇತರ ವಸ್ತುಗಳನ್ನು ಕೊಡಮಾಡುತ್ತಾ ಬಂದವರು. ಬಡಬಗ್ಗರ ಕುರಿತು ಕರುಣೆ ತೋರುತ್ತಾ ತನ್ನ ಕೈಲಾದ ಸಹಾಯ ಮಾಡುವವರು. ಸಮಾಜಕ್ಕೆ ತೀರಾ ಅವಶ್ಯಕ ಉತ್ಪನ್ನ ಹಾಗೂ ಸೇವೆಗಳನ್ನು ನೀಡಬಹುದಾದ ಕೆಲವು ಕಿರು ಕೈಗಾರಿಕೆಗಳನ್ನು ಹುಟ್ಟು ಹಾಕಿ ಓರ್ವ ಕೈಗಾರಿಕೋದ್ಯಮಿಯಾಗಿಯೂ ಗುರುತಿಸಿ ಕೊಂಡಿದ್ದು, ಸಮಾಜ ಸೇವಾ ಭಾವನೆಯಿಂದ ತನ್ನ…
ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಐಸಿಸಿಯ ಸಹವರ್ತಿ ಸಂಘಗಳಲ್ಲಿ ಒಂದಾದ ಬಂಟ್ಸ್ ಕತಾರ್ 2011 ರಲ್ಲಿ ಸ್ಥಾಪನೆಯಾದಾಗಿನಿಂದ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಅದರ ಪ್ರಾಥಮಿಕ ಉದ್ದೇಶವು ತನ್ನ ಸದಸ್ಯರಿಗೆ ವೇದಿಕೆಯನ್ನು ಒದಗಿಸುವುದು ಮತ್ತು ಸ್ಥಳೀಯ ಸಂಸ್ಕೃತಿಯನ್ನು ಯುವ ಪೀಳಿಗೆಗೆ ರವಾನಿಸುವುದಾಗಿದೆ. ಫೆಬ್ರವರಿ 20 ರಂದು ನಡೆದ ವಾರ್ಷಿಕ ಸಭೆಯಲ್ಲಿ ಬಂಟ್ಸ್ ಕತಾರ್ 2026-28 ಅವಧಿಗೆ ತನ್ನ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಿತು ಮತ್ತು ಸುಖರಾಮ್ ಶೆಟ್ಟಿ ಸೌಕೂರು ಅವರನ್ನು ಸರ್ವಾನುಮತದಿಂದ ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. ಉಡುಪಿ ಜಿಲ್ಲೆಯ ಕುಂದಾಪುರ ಸಮೀಪದ ಸೌಕೂರು ಸುಕಾರಾಮ್ ಶೆಟ್ಟಿಯವರು ಕತಾರ್ ನ ವಿವಿಧ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಮತ್ತು ಗಮನಾರ್ಹವಾಗಿ ಅಲ್ಪಾವಧಿಯಲ್ಲಿ ಸಮಾಜದಲ್ಲಿ ಪ್ರಸಿದ್ಧರಾಗಿದ್ದಾರೆ. ಅವರ ನೈಸರ್ಗಿಕ ಮೋಡಿ ಮತ್ತು ಸ್ವಯಂಪ್ರೇರಿತ ಸೇವೆಗೆ ಸಮರ್ಪಣೆಯ ಮೂಲಕ ನಾಯಕತ್ವಕ್ಕೆ ಏರುತ್ತಿರುವ ಅವರು ಕತಾರ್ ಮತ್ತು ದುಬೈನಾದ್ಯಂತ ಅನೇಕ ಸಂಘಗಳಿಗೆ ಸೇವೆ ಸಲ್ಲಿಸಿದ್ದಾರೆ. ಸೇವೆ, ಏಕತೆ ಮತ್ತು ಸಹಯೋಗವನ್ನು ಗೌರವಿಸುವ…
ಮಂಗಳೂರಿನ ಅಡ್ಯಾರ್ ಗಾರ್ಡನ್ ನಲ್ಲಿ ಮೇ 30 ಶನಿವಾರದಂದು ನಡೆಯಲಿರುವ ಪಟ್ಲ ಸಂಭ್ರಮ- 2026 ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ (SSLC) ಮತ್ತು ಪಿಯುಸಿ (2nd PUC) ವಿಭಾಗದಲ್ಲಿ ಶೇಕಡ 90ಕ್ಕಿಂತ ಮೇಲ್ಪಟ್ಟು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ವತಿಯಿಂದ ವಿದ್ಯಾರ್ಥಿ ವೇತನವನ್ನು ನೀಡಲಾಗುವುದು. ಈ ಯೋಜನೆಯ ಫಲಾನುಭವಿಗಳು ತಮ್ಮ ಭಾವಚಿತ್ರ, ಬಿಪಿಎಲ್ ಕಾರ್ಡ್ ಪ್ರತಿ ಹಾಗೂ ಅಂಕಪಟ್ಟಿಯೊಂದಿಗೆ ಮೇ 15 ರ ಮುಂಚಿತವಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು. ವಿದ್ಯಾರ್ಥಿ ವೇತನವನ್ನು ಸ್ವೀಕರಿಸುವ ವಿದ್ಯಾರ್ಥಿಗಳು ಸಮಾರಂಭದಂದು ಬೆಳಿಗ್ಗೆ ಗಂಟೆ 9 ಕ್ಕೆ ಸರಿಯಾಗಿ ಕಡ್ಡಾಯವಾಗಿ ಹಾಜರಿರಬೇಕು. ವಿದ್ಯಾರ್ಥಿಗಳು ಸ್ವಯಂ ಬಾರದೇ ಇದ್ದಲ್ಲಿ ಆ ಅರ್ಜಿಯನ್ನು ಮಾನ್ಯ ಮಾಡಲಾಗುವುದಿಲ್ಲ. ದಾಖಲೆಗಳೊಂದಿಗೆ ಅರ್ಜಿಗಳನ್ನು ಕಳುಹಿಸಬೇಕಾದ ವಿಳಾಸ : ಸಿಎ ಸುದೇಶ್ ಕುಮಾರ್ ರೈಶಾಪ್ ನಂ. 16 ಮತ್ತು 17ಎರಡನೇ ಮಹಡಿ, ಎಂಪೈರ್ ಮಾಲ್ಎಂ.ಜಿ ರಸ್ತೆ, ಮಂಗಳೂರು- 575003ಸಂಪರ್ಕ ಸಂಖ್ಯೆ 9448623375
ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳಲ್ಲೇ ಮುಳುಗಿರುವ ಮಕ್ಕಳಿಗೆ ತುಳುನಾಡಿನ ವೀರ ಕ್ರೀಡೆ ‘ಕಂಬಳ’ ಹಾಗೂ ಕೃಷಿ ಸಂಸ್ಕೃತಿಯನ್ನು ಪರಿಚಯಿಸುವ ಅಪೂರ್ವ ಪ್ರಯತ್ನವೊಂದು ಯಡಾಡಿ ಮತ್ಯಾಡಿಯಲ್ಲಿ ಜರುಗಿತು. ಇಲ್ಲಿನ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ‘ಮಂಥನ’ ಬೇಸಿಗೆ ಶಿಬಿರದ ಎರಡನೇ ದಿನದ ಅಂಗವಾಗಿ ವಿದ್ಯಾರ್ಥಿಗಳಿಗಾಗಿ ಸಾಂಕೇತಿಕವಾಗಿ ಆಯೋಜಿಸಲಾಗಿದ್ದ ‘ಕಂಬಳ ಪ್ರದರ್ಶನ’ವು ಅತ್ಯಂತ ವೈಭವದಿಂದ ನಡೆಯಿತು. ಉಡುಪಿ ಜಿಲ್ಲಾ ಕಂಬಳ ಸಮಿತಿಯ ಸಂಚಾಲಕರಾದ ಶಾಂತರಾಮ ಶೆಟ್ಟಿ ಅವರು ಹೂವಿನ ಹೊಂಬಾಳೆಯನ್ನು ಬಿಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ಮಕ್ಕಳಿಗೆ ನಮ್ಮ ನೆಲದ ಕಲೆ, ಆಚಾರ ವಿಚಾರ ಹಾಗೂ ಸಂಪ್ರದಾಯಗಳ ಬಗ್ಗೆ ಅರಿವು ಕಡಿಮೆಯಾಗುತ್ತಿದೆ. ಕಂಬಳದಂತಹ ಕ್ರೀಡೆಯನ್ನು ಪರಿಚಯಿಸುವ ಮೂಲಕ ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಮಕ್ಕಳಲ್ಲಿ ಮಣ್ಣಿನ ಸಂಸ್ಕೃತಿಯ ಬಗ್ಗೆ ಅಭಿಮಾನ ಮೂಡಿಸುವ ಮಹತ್ತರ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು. ಕ್ಯಾಶ್ಯೂ ಉದ್ಯಮಿ ಸತೀಶ್ ಕೆದ್ಲಾಯಿ ಅವರ ಕೃಷಿ ಭೂಮಿಯಲ್ಲಿ ಈ ಕಂಬಳ ಪ್ರದರ್ಶನ…
ಬಂಟರ ಸಂಘ ಪೂರ್ವ ಆಫ್ರಿಕಾ ನೈರೋಬಿ (ಕೀನ್ಯಾ) ಇದರ ವತಿಯಿಂದ ದಿನಾಂಕ ಏಪ್ರಿಲ್ 19 ರಂದು ನೈರೋಬಿ ವೆಸ್ಟ್ ಲ್ಯಾಂಡ್ ಚೌಪಾಟಿ ಹೋಟೆಲ್ನ ಸಭಾಭವನದಲ್ಲಿ ಬಿಸು ಪರ್ಬದ ಆಚರಣೆ ಬಹಳ ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮವನ್ನು ದೇವರ ಪ್ರಾರ್ಥನೆಯೊಂದಿಗೆ ದೀಪ ಬೆಳಗಿಸುವ ಮೂಲಕ ಪ್ರಾರಂಭಿಸಲಾಯಿತು. ಪ್ರಾರ್ಥನೆಯನ್ನು ಉಷಾ ಪ್ರದೀಪ್ ಶೆಟ್ಟಿ ಮತ್ತು ಶಿವರಂಜನ್ ಶೆಟ್ಟಿ ನೆರವೇರಿಸಿದರು. ಭಾಸ್ಕರ್ ಶೆಟ್ಟಿ, ರವಿ ಶೆಟ್ಟಿ, ಸುರೇಶ್ ಶೆಟ್ಟಿ, ನವೀನ್ ಶೆಟ್ಟಿ ಹಾಗೂ ನಿತಿನ್ ಶೆಟ್ಟಿ ದೀಪ ಬೆಳಗಿಸಿದರು. ಸಂಘದ ಅಧ್ಯಕ್ಷರಾದ ಯಶವಂತ್ ಶೆಟ್ಟಿ ಸ್ವಾಗತ ಭಾಷಣ ಮಾಡಿದರು. ಬಿಸು ಆಚರಣೆಯ ಮಹತ್ವವನ್ನು ಸಂಘದ ಉಪಾಧ್ಯಕ್ಷರಾದ ಸಂದೀಪ್ ಸಾಮಾನಿ ಅವರು ವಿವರಿಸಿದರು. ಸಂಘದ ಪುಟಾಣಿ ಮಕ್ಕಳಿಂದ ನೃತ್ಯ, ಪ್ರಹಸನ ಹಾಗೂ ಮಹಿಳಾ ಸದಸ್ಯರಿಂದ ನೃತ್ಯ ಕಾರ್ಯಕ್ರಮಗಳು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.
ರಾಷ್ಟ್ರೀಯ ದಂತ ಆಯೋಗ ಅಧಿನಿಯಮ 2023 ರ ಕಲಂ 11 ರ ಅನ್ವಯ ಕೇಂದ್ರ ಸರ್ಕಾರವು ದಂತ ಸಲಹಾ ಮಂಡಳಿ ರಚಿಸಿ ಆದೇಶ ಹೊರಡಿಸಿದ್ದು, ಇದರಲ್ಲಿ ಕರ್ನಾಟಕ ರಾಜ್ಯದ ಪ್ರತಿನಿಧಿಯಾಗಿ ಡಾ. ಶಿವಶರಣ್ ಶೆಟ್ಟಿಯವರನ್ನು ನೇಮಕ ಮಾಡಿದೆ. ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ದಂತ ಶಿಕ್ಷಣ ವಿಭಾಗದಿಂದ ಈ ಕುರಿತು ಆದೇಶ ಹೊರಡಿಸಲಾಗಿದೆ. ಈ ಮಂಡಳಿಗೆ ರಾಷ್ಟ್ರೀಯ ದಂತ ಆಯೋಗದ ಅಧ್ಯಕ್ಷರು ಹುದ್ದೆಯನ್ವಯ ಅಧ್ಯಕ್ಷರಾಗಿದ್ದು, ಆಯೋಗದ ಜೊತೆ ರಾಜ್ಯಗಳ ಪ್ರತಿನಿಧಿಗಳನ್ನು ಮಂಡಳಿಯಲ್ಲಿ ಆಯ್ಕೆ ಮಾಡಲಾಗುತ್ತದೆ ಎಂದು ಹೆಚ್ಚುವರಿ ಕಾರ್ಯದರ್ಶಿ ಡಾ. ವಿನೋದ್ ಕೋಟ್ವಾಲ್ ಆದೇಶ ಹೊರಡಿಸಿದ್ದಾರೆ.
ಬಂಟರ ಯಾನೆ ನಾಡವರ ಮಾತೃ ಸಂಘ : ಪುತ್ತೂರು ತಾಲೂಕಿನಿಂದ ಕಾರ್ಯಕಾರಿ ಸಮಿತಿ ಸದಸ್ಯರಾಗಿ 8 ಮಂದಿ ಅವಿರೋಧ ಆಯ್ಕೆ
ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು (ರಿ) ಇಲ್ಲಿಗೆ ಪುತ್ತೂರು ತಾಲೂಕಿನಿಂದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ, ಮಾಜಿ ಅಧ್ಯಕ್ಷ ದಯಾನಂದ ರೈ ಮನವಳಿಕೆ, ಸಮಾಜಸೇವಕ ದಂಬೆಕ್ಕಾನ ಸದಾಶಿವ ರೈ, ಉದ್ಯಮಿ ಸಾಜ ರಾಧಾಕೃಷ್ಣ ಆಳ್ವ, ನೂಜಿಬೈಲ್ ಜಯಪ್ರಕಾಶ್ ರೈ, ನಿತ್ಯಾನಂದ ಶೆಟ್ಟಿ ಮನವಳಿಕೆ, ಉದ್ಯಮಿ ಪ್ರಸನ್ನ ಕುಮಾರ್ ಶೆಟ್ಟಿ ಸಾಮೆತ್ತಡ್ಕ ಹಾಗೂ ಮಹಿಳಾ ಕ್ಷೇತ್ರದಿಂದ ವತ್ಸಲಾ ಪಿ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪುತ್ತೂರು ತಾಲೂಕು ಬಂಟರ ಸಂಘದ ಮಾಜಿ ಅಧ್ಯಕ್ಷ ಸೀತಾರಾಮ ರೈ ಸವಣೂರು ಹಾಗೂ ರವಿಪ್ರಸಾದ್ ಶೆಟ್ಟಿ ನಾಮಪತ್ರ ಹಿಂತೆಗೆದ ಕಾರಣ ಅವಿರೋಧ ಆಯ್ಕೆ ನಡೆಯಿತು ಎಂದು ಮಾತೃ ಸಂಘದ ಪ್ರಕಟಣೆ ತಿಳಿಸಿದೆ.















