Author: admin

ಹರಿಯಾಣ ರಾಜ್ಯದ ಲೋಹಾರು ನಗರದಲ್ಲಿ ನಡೆದ 5ನೇ ಮಾಸ್ಟರ್ಸ್ ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್ ಯಶಸ್ವಿಯಾಗಿ ನಡೆಯಿತು. ಇಂಡಿಯನ್ ಮಾಸ್ಟರ್ಸ್ ವೈಟ್ ಲಿಫ್ಟಿಂಗ್ ನ ಪ್ರಧಾನ ಕಾರ್ಯದರ್ಶಿ ಉದಯ ಶೆಟ್ಟಿ ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದು, ದೇಶದ ವಿವಿಧ ಭಾಗಗಳಿಂದ ಬಂದ ಸುಮಾರು 200ಕ್ಕೂ ಹೆಚ್ಚು ಪುರುಷ ಮತ್ತು ಮಹಿಳಾ ವೇಟ್‌ಲಿಫ್ಟರ್‌ಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಸ್ಪರ್ಧಾರ್ಥಿಗಳಿಗೆ ಸರಿಯಾದ ವಸತಿ ಮತ್ತು ಆಹಾರದ ವ್ಯವಸ್ಥೆಯನ್ನು ಒದಗಿಸಲಾಗಿದ್ದು, ಕಾರ್ಯಕ್ರಮವು ಅತ್ಯುತ್ತಮವಾಗಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಲೋಹಾರು ನಗರದ ಮಹಾಪೌರರು ನೆರವೇರಿಸಿದರೆ, ಸಮಾರೋಪ ಸಮಾರಂಭದಲ್ಲಿ ಉದಯ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಗ್ರೀಸ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್ ಹಾಗೂ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಚಾಂಪಿಯನ್‌ಶಿಪ್‌ಗಾಗಿ ಆಟಗಾರರ ಆಯ್ಕೆ ಪ್ರಕ್ರಿಯೆಯನ್ನು ಆಯ್ಕೆ ಸಮಿತಿಯೊಂದಿಗೆ ಪ್ರಧಾನ ಕಾರ್ಯದರ್ಶಿ ಉದಯ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ನಡೆಸಲಾಯಿತು. ಒಟ್ಟು ಪುರುಷರ ವಿಭಾಗದ ಚಾಂಪಿಯನ್‌ಶಿಪ್ ಪಟ್ಟವನ್ನು 6 ಚಿನ್ನದ ಪದಕಗಳನ್ನು ಗೆದ್ದ ಪಂಜಾಬ್ ತಂಡ ಪಡೆದರೆ, ಮಹಿಳಾ ವಿಭಾಗದ ಚಾಂಪಿಯನ್‌ಶಿಪ್…

Read More

ಅಂದ್, ನಮ್ಮ ಪಡ್ಡಾಯಿ ಕರೆಬರಿತ ತುಲುನಾಡ್‌ಡ್ ರಡ್ಡ್ ಇಗಾದಿಲು. ನೂಲು (ಜನಿವಾರ) ಪಾಡುನ, ಮಕ್ಲ್ ಕಟ್ಟ್‌ದಗಲೆಗ್ ಚಂದ್ರ ಯುಗಾದಿ, ಬಾಕಿದ ಅಲಿ ಕಟ್ಟ್‌ದ ತುಲುವೆರೆಗ್ ಸೌರ ಇಗಾದಿ. ತೆನ್ಕಾಯಿಡ್ ಸೌರ ಇಗಾದಿನ್ ‘ಬಿಸು’ ಪರ್ಬ ಪನ್ಪೆರ್. ಉಡುಪಿದಂಚಿದ ಶಿವಳ್ಳಿ ಬ್ರಾನೆರ್ ಸೌರ ಇಗಾದಿ ಆಚರನೆ ಮಲ್ಪುವೆರ್‌ಗೆ, ಅಂಚೆನೆ ಕಾರ್ಲದ ಕಯಿತಲ್‌ದ ಕೆಲವು ಊರುಲೆಡ್ ತುಲು ಜಾತಿದಗುಲುಲಾ ಚಂದ್ರಮಾನ ಇಗಾದಿ ಆಚರಿಪುನುಗೆ. ಯುಗಾದಿ ಪಂಡ ಯುಗತ ಆದಿ (ಸುರು) ಪಂದ್ ಮಾತ್ರ ಅರ್ತ ಅತ್ತ್, ವೊಡುತ (ವರ್ಸದ) ಸುರುತ ದಿನ ಪಂದ್‌ಲಾ ಅರ್ತ ಉಂಡು. ಚಂದ್ರ ಯುಗಾದಿ ಚ್ರೈತ್ರ ತಿಂಗೊಲ್‌ದ ಸುರುತ ದಿನ, ಫಾಲ್ಗುಣ ಆಮಾಸೆದ ಮರ್‌ದಿನ (ಪಾಡ್ಯ). ಆಂಡ್ಡಾ ಇವೊಡು 19/03/2026, ಅಮಾಸದಾನಿಯೆ ಇಗಾದಿ. ಅವು ದಾಯೆಗ್ ಪಂಡ, ಆನಿ ಕಾಂಡೆ ಬೇಗ 06:53 ಗ್ ಅಮಾಸೆ ಮುಗ್ಯುಂಡು, ಪೊರ್ತು ಮೂಡುದು ಏಲೇ ನಿಮಿಸ ಅಮಾಸೆ ಇಪ್ಪುನು. ತುಲುವ/ ತಮಿಳ್ ಸೌರ ಇಗಾದಿ, ಪಗ್ಗು (ಮೇಷ)ದ ತಿಂಗೊಡೆ (ಸಂಕ್ರಾಂದಿದ ಮಗರ್ನೆ ದಿನ).…

Read More

ಮಾರ್ಚ್ 20 ರಂದು ತುಳು ಪರಿಷತ್ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಜಂಟಿಯಾಗಿ ಆಯೋಜಿಸಲಿರುವ 3ನೇ ವಿದ್ಯಾರ್ಥಿ ತುಳು ಸಮ್ಮೇಳನದ ಲಾಂಛನವನ್ನು ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ, ಶ್ರೀದೇವಿ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಡಾ| ಎ. ಸದಾನಂದ ಶೆಟ್ಟಿಯವರು ಬಿಡುಗಡೆ ಮಾಡಿದರು. ಈ ಲಾಂಛನವನ್ನು ಐ.ಎಮ್.ಜೆ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ ಆಂಡ್ ಕಾಮರ್ಸ್ ಮೂಡ್ಲುಕಟ್ಟೆ ಕುಂದಾಪುರದ ಪ್ರಥಮ ಬಿ.ಬಿ.ಎ ವಿದ್ಯಾರ್ಥಿ ಶ್ರೇಯಸ್ ಶೆಟ್ಟಿಯವರು ರಚಿಸಿದ್ದಾರೆ. ಲಾಂಛನ ಬಿಡುಗಡೆಯ ಸಂದರ್ಭದಲ್ಲಿ ತುಳು ಪರಿಷತ್ ಅಧ್ಯಕ್ಷರಾದ ಶುಭೋದಯ ಆಳ್ವ ಕಂಚಿಲ, ಉದ್ಯಮಿ ಹರಿಕಿಶನ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಬೆನೆಟ್ ಅಮ್ಮನ್ನ, ಕಾರ್ಯದರ್ಶಿ ಶ್ರೀಮತಿ ಅಮಿತಾ ಅಶ್ವಿನ್, ಕೋಶಾಧಿಕಾರಿ ಶ್ರೀಮತಿ ಸುಮತಿ ಹೆಗ್ಡೆ, ಸ್ಪರ್ಧಾ ಸಂಚಾಲಕರಾದ ದುರ್ಗಾಪ್ರಸಾದ್ ಮತ್ತು ಶ್ರೀಮತಿ ಚಂದ್ರಕಲಾ ರಾವ್ ಉಪಸ್ಥಿತರಿದ್ದರು.

Read More

ಹಿಂದಿನ ಕೂಡು ಕುಟುಂಬದ ಶಕ್ತಿಯೇ ನಮ್ಮ ಬಂಟ ಸಮಾಜದ ಶಕ್ತಿಯಾಗಿತ್ತು. ಅಂತಹ ಕೂಡು ಕುಟುಂಬದ ಬಾಂಧವ್ಯ ಇರುವುದರಿಂದ ಶಕ್ತಿಯುತವಾಗಿ ಬೆಳೆದು ನಿಂತವರು ನಾವುಗಳು. ನಮ್ಮ ಸಂಸ್ಕಾರ ಸಂಸ್ಕ್ರತಿಯನ್ನು ಎಲ್ಲಿಯೂ ಬಿಟ್ಟು ಕೊಡದೆ ಸ್ವ ಸಾಮರ್ಥ್ಯದಿಂದ ಸಮಾಜದಲ್ಲಿ ಶಕ್ತಿಯನ್ನು ತೋರಿಸಿದ ನಮಗೆ ನಾವೇ ಸಾಟಿ. ತ್ಯಾಗ ಮತ್ತು ಸೇವೆ ಎಂಬ ಆದರ್ಶಗಳನ್ನು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಅನುಗುಣವಾಗಿ ಎಲ್ಲಾ ಸಮಾಜದ ಜೊತೆ ಉತ್ತಮ ಬಾಂಧವ್ಯವನ್ನು ಪಾಲಿಸಿಕೊಂಡು ಸಮಾಜದ ಒಳಿತಿಗಾಗಿ ಸೇವೆಯಲ್ಲಿರುವವರು ನಾವು. ಸಾಮರ್ಥ್ಯಕ್ಕೆ ಅನುಗುಣವಾಗಿ ನಮ್ಮಲ್ಲಿರುವ ದೊಡ್ಡ ಮನಸ್ಸು, ವ್ಯಕ್ತಿತ್ವ, ಸೇವಾ ಮನೋಭಾವನೆ ಇರುವುದರಿಂದ ನಾವು ಇಂದು ಮೇಲ್ದರ್ಜೆಗೆ ಏರಿದವರು. ಸಮಾಜದಲ್ಲಿ ಶಾಂತಿ ಸೌಹಾರ್ದತೆಯಿಂದ ಮನುಷ್ಯತ್ವ ಎಂಬ ಪದಕ್ಕೆ ಅನುಗುಣವಾಗಿ ಬದುಕಿ ನಾವು ಸಮಾಜಕ್ಕೆ ಮಾದರಿಯಾಬೇಕು. ಜೀವನದಲ್ಲಿ ತೃಪ್ತಿ ಎಂಬುದು ಇದ್ದರೆ ದುರಾಸೆ ಬರುವುದಿಲ್ಲ ಹಾಗೂ ಜೀವನ ಸಮಾಧಾನಕರವಾಗಿರುತ್ತದೆ. ವ್ಯಕ್ತಿಯ ಮೌಲ್ಯಮಾಪನ ಅವನ ಚಹರೆ ಅಥವಾ ವಸ್ತ್ರದಿಂದ ಕಾಣುವುದಿಲ್ಲ. ಮನಸ್ಸು ಮತ್ತು ಅವನ ಸೇವಾ ಕಾರ್ಯ, ಧರ್ಮ ಕಾರ್ಯದಲ್ಲಿ ಕಾಣಬೇಕು. ಧನಾತ್ಮಕ ಚಿಂತನೆಯನ್ನು ಬೆಳೆಸಿಕೊಂಡಾಗ…

Read More

ಕಳೆದ ಎಂಟು ವರ್ಷಗಳಿಂದ ಮುಂಬಯಿ ಅಲ್ಲದೇ ನಮ್ಮ ಊರಿನಲ್ಲಿ ಸಾಮಾಜಿಕವಾಗಿ ಬಡ ಜನರಿಗೆ ವಿವಿಧ ರೀತಿಯ ಸೇವೆಯನ್ನು ಶಿವಾಯ ಫೌಂಡೇಶನ್ ಮಾಡುತ್ತಾ ಬಂದಿದೆ. ಬಡವರ ಕಣ್ಣೀರು ಒರೆಸುವ ಕಾಯಕವನ್ನು ಶಿವಾಯ ಫೌಂಡೇಶನ್ ಮಾಡುತ್ತಿರುವುದು ಅಭಿನಂದನೀಯ. ಇದೊಂದು ಮಾನವೀಯ ಮಾದರಿ ಸೇವೆಯಾಗಿದೆ. ಈ ಸಂಸ್ಥೆಯ ಎಲ್ಲಾ ಸದಸ್ಯರಿಗೆ ಮತ್ತಷ್ಟು ಸಾಮಾಜಿಕ ಸೇವೆಯನ್ನು ಮಾಡುವ ಶಕ್ತಿಯನ್ನು, ಯೋಗಾ ಭಾಗ್ಯವನ್ನು ದೇವರು ಅನುಗ್ರಹಿಸಲಿ ಎಂದು ಬೋಂಬೆ ಬಂಟ್ಸ್ ಅಸೋಸಿಯೇಷನ್ ಇದರ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶಾರದಾ ಶ್ಯಾಮ ಶೆಟ್ಟಿ ನುಡಿದರು. ಅವರು ಮಾರ್ಚ್ 15 ರಂದು ನವಿಮುಂಬಯಿ ಜೂಹಿನಗರ ಇಲ್ಲಿನ ಬಂಟ್ಸ್ ಸೆಂಟರ್ ಬೋಂಬೆ ಬಂಟ್ಸ್ ಅಸೋಸಿಯೇಷನ್ ಇದರ ಸಭಾಗೃಹದಲ್ಲಿ ನಿರ್ಮಿತ ಶ್ಯಾಮ ಎನ್ ಶೆಟ್ಟಿ ಮತ್ತು ಶಾರದಾ ಎಸ್ ಶೆಟ್ಟಿ ವೇದಿಕೆಯಲ್ಲಿ ಜರಗಿದ ಶಿವಾಯ ಫೌಂಡೇಶನ್ ಮುಂಬಯಿ ಇದರ ಎಂಟನೇ ವಾರ್ಷಿಕೋತ್ಸವ, ಶಿವಾಯ ಪ್ರೇರಣಾ ಪ್ರಶಸ್ತಿ ಪ್ರಧಾನ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿ ಬೋಂಬೆ…

Read More

ತಲಪಾಡಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ ಪ್ರಯುಕ್ತ ಧರ್ಮ ಶಿಕ್ಷಣ ಜ್ಞಾನಯಜ್ಞ ಸಲುವಾಗಿ ಶ್ರೀದೇವಿ ಸನ್ನಿಧಿಯಲ್ಲಿ ಪೂರ್ಣ ಹಗಲಿನ ಯಕ್ಷಗಾನ ತಾಳಮದ್ದಳೆ ಇತ್ತೀಚೆಗೆ ಜರಗಿತು. ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 7ರವರೆಗೆ ಸತತ 10 ಗಂಟೆ ನಡೆದ ತಾಳಮದ್ದಳೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಸಿದ್ಧ ಹವ್ಯಾಸಿ ಕಲಾವಿದರು ಭಾಗವಹಿಸಿದರು. ಯಕ್ಷಧ್ರುವ ಹವ್ಯಾಸಿ ಘಟಕವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಬೆಳಿಗ್ಗೆ ಉದ್ಘಾಟನಾ ಸಮಾರಂಭದಲ್ಲಿ ದೇವಳದ ಆಡಳಿತ ಸಮಿತಿ ಹಿರಿಯ ಸದಸ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಜೆಯ ಸಮಾರೋಪ ಸಮಾರಂಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಭಾಗವತ ಸತೀಶ್ ಶೆಟ್ಟಿ ಪಟ್ಲ ಅವರನ್ನು ಗೌರವಿಸಲಾಯಿತು‌. ಹವ್ಯಾಸಿ ಘಟಕದ ಅಧ್ಯಕ್ಷ ರಾಜಾರಾಮ ಹೊಳ್ಳ ಕೈರಂಗಳ ಸ್ವಾಗತಿಸಿದರು. ಸಂಚಾಲಕ ಸದಾಶಿವ ಆಳ್ವ ತಲಪಾಡಿ ಕಾರ್ಯಕ್ರಮ ನಿರೂಪಿಸಿ, ಗಣೇಶ ಕುಂಜತ್ತೂರು ವಂದಿಸಿದರು. ದಿನವಿಡೀ ನಡೆದ ತಾಳಮದ್ದಳೆ ಜ್ಞಾನಯಜ್ಞದಲ್ಲಿ ಜನಪ್ರಿಯ ನಾಲ್ಕು ಪೌರಾಣಿಕ ಪ್ರಸಂಗಗಳನ್ನು ಆಯ್ದುಕೊಳ್ಳಲಾಗಿತ್ತು. ವಿಭೀಷಣನೀತಿ, ಅಂಗದ ಸಂಧಾನ, ಶಲ್ಯ ಸಾರಥ್ಯ ಮತ್ತು ಕರ್ಣ…

Read More

ತುಳುನಾಡ ಸೇವಾ ಸಮಾಜ ಮೀರಾ ಭಯಂದರ್ ಇದರ ಸ್ಥಾಪಕ ದಿನಾಚರಣೆ, ಮಹಿಳಾ ದಿನಾಚರಣೆ ಹಾಗೂ ಹಳದಿ ಕುಂಕುಮ ಕಾರ್ಯಕ್ರಮದ ನಿಮಿತ್ತ ಮಾರ್ಚ್ 15 ರಂದು ನಡೆದ ಕಾರ್ಯಕ್ರಮದಲ್ಲಿ ಶ್ರೀ ಶಕ್ತಿ ಫೌಂಡೇಶನ್ ನ ಸ್ಥಾಪಕಾಧ್ಯಕ್ಷೆ ಶ್ರೀಮತಿ ಸಚ್ಚೇರಿಗುತ್ತು ಶಾಲಿನಿ ಎಸ್ ಶೆಟ್ಟಿಯವರಿಗೆ ‘ಸಂಘಟನಾ ಐಸಿರಿ’ ಎಂಬ ಬಿರುದನ್ನು ಪ್ರದಾನಿಸಿ ಸನ್ಮಾನಿಸಿದರು. ಈ ಸಂಧರ್ಭ ಸುರೇಂದ್ರ ಹೆಗ್ಗಡೆ, ಯೋಗೀಶ್ ಗಾಣಿಗ, ಸಂಪತ್ ಶೆಟ್ಟಿ ಪಂಜದಗುತ್ತು, ರವೀಂದ್ರ ಶೆಟ್ಟಿ ಕೊಟ್ರಪಾಡಿ, ನರೇಶ್ ಕೆ ಪೂಜಾರಿ, ಡಾ| ಕೆ.ಟಿ ಶಂಕರ್ ಶೆಟ್ಟಿ, ಶಂಭು ಕೆ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Read More

ಯಾವುದೇ ರೀತಿಯ ಸಂಕಷ್ಟ ಎದುರಾದರೂ ಕನ್ನಡಿಗರು ಜಾತಿ, ಧರ್ಮವನ್ನು ಬದಿಗಿಟ್ಟು ನಾವು ಒಂದಾಗಿ ಎದುರಿಸೋಣ. ಅದಕ್ಕೆ ಬೇಕಾದ ಎಲ್ಲಾ ರೀತಿಯ, ಸಹಾಯ, ಸಹಕಾರ ನೀಡಗಳಾಗುವುದೆಂದು ಖ್ಯಾತ ಆನಿವಾಸಿ ಉದ್ಯಮಿ ಡಾ| ರೋನಾಲ್ಡ್ ಕೊಲಾಸೊ ಹೇಳಿದ್ದಾರೆ. ದುಬೈಯಲ್ಲಿರುವ ಅವರ ನಿವಾಸದಲ್ಲಿ ಕನ್ನಡಿಗಾಸ್ ಹೆಲ್ಪ್ ಲೈನ್ ಗಾಗಿ ಕೂಟದಲ್ಲಿ ಆಯೋಜಿಸಲಾಗಿದ್ದ ‘ಸೌಹಾರ್ದ ಇಫ್ತಾರ್’ ಕೂಟದಲ್ಲಿ ಅವರು ಮಾತನಾಡುತ್ತಿದ್ದರು. ನಾವು ಸಂಕಷ್ಟದ ವೇಳೆ ಮಾತ್ರವಲ್ಲ, ಬದಲಾಗಿ ಎಲ್ಲಾ ಸಂದರ್ಭಗಳಲ್ಲೂ ಒಟ್ಟಾಗಿ ಸೌಹಾರ್ದತೆ, ಒಗ್ಗಟ್ಟಿನಿಂದ ಇಲ್ಲಿ ಜೀವಿಸೋಣ ಎಂದು ಡಾ| ಕೊಲಾಸೊ ಕರೆ ನೀಡಿದರು. ಸಂಕಷ್ಟದಲ್ಲಿದ್ದ ಪ್ರವಾಸಿ ಕನ್ನಡಿಗರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿಸಲು ನೀವೆಲ್ಲರೂ ಸಂಯೋಜಕರಾಗಿ ಕೆಲಸ ಮಾಡುವ ಮೂಲಕ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದೀರಿ. ‘ಕನ್ನಡಿಗಾಸ್ ಹೆಲ್ಪ್ ಲೈನ್’ನ ಈ ಯಶಸ್ಸು ನಿಮಗೆ ಸಲ್ಲಬೇಕಾದದ್ದು. ಇಲ್ಲಿರುವ ಪ್ರತಿಯೊಬ್ಬರಿಗೂ ಸಲ್ಲಬೇಕಾಗಿರುವಂತದ್ದು ಎಂದ ಕೊಲಾಸೊ, ಈ ಹಿಂದೆ ಇಲ್ಲಿ ಪ್ರವಾಹ ಬಂದಾಗ, ಕರೋನ ಸಂಕಷ್ಟ ಎದುರಾದಾಗ ಮಾಡಿದ ರೀತಿಯಲ್ಲಿಯೇ ಈ ಬಾರಿಯೂ ‘ಕನ್ನಡಿಗಾಸ್ ಹೆಲ್ಪ್ ಲೈನ್’ ಕಾರ್ಯವೆಸಗಿದ್ದು ಇದು ನಮ್ಮನ್ನು…

Read More

ಪುತ್ತೂರು ತಾಲೂಕು ಬಂಟರ ಸಂಘದ ನೂತನ ನಿರ್ದೇಶಕರಾಗಿ ದಯಾನಂದ ರೈ ಕೋರ್ಮಂಡರವರು ಆಯ್ಕೆಯಾಗಿದ್ದಾರೆ. ಸಂಘದ ಹಾಲಿ ನಿರ್ದೇಶಕರಾಗಿದ್ದ ಉದ್ಯಮಿ ಸತೀಶ್ ರೈ ಕಟ್ಟಾವು ಅವರ ರಾಜೀನಾಮೆಯಿಂದ ತೆರವಾಗಿದ್ದ ನಿರ್ದೇಶಕ ಸ್ಥಾನಕ್ಕೆ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ದಯಾನಂದ ರೈ ಕೋರ್ಮಂಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತಿಳಿಸಿದ್ದಾರೆ.

Read More

ನಮ್ಮ ಮಹಿಳಾ ವಿಭಾಗದ ವತಿಯಿಂದ ನಡೆದ ಶನಿ ಪೂಜೆಯಿಂದ ದೇವರ ಅನುಗ್ರಹ ಎಲ್ಲರಿಗೂ ಲಭಿಸಲಿ ಎಂದು ಬಯಸುತ್ತೇನೆ. ಕಂಕಣ ಭಾಗ್ಯ ಈ ಯೋಜನೆಯ ಹೆಸರೇ ಸೂಚಿಸುವಂತೆ ನಮ್ಮ ಮುಖ್ಯ ಉದ್ದೇಶ ಅರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬದ ಹೆಣ್ಣು ಮಕ್ಕಳ ಮದುವೆಯ ಸಮಯದಲ್ಲಿ ಸಹಕಾರ ನೀಡಿ ಮದುವೆ ಎಂಬ ಪುಣ್ಯ ಕಾರ್ಯ ಯಾವುದೇ ತೊಂದರೆ ಇಲ್ಲದೇ ಸಾಂಗವಾಗಿ ನಡೆಯಬೇಕು ಎಂಬುದೇ ನಮ್ಮ ದ್ಯೆಯವಾಗಿದೆ. ನಮ್ಮ ಮಹಿಳಾ ವಿಭಾಗದ ಸದಸ್ಯರ ಮನಸ್ಸಿನ ಹಾರೈಕೆ ಕೂಡಾ ಇದೇ ಆಗಿದೆ. ನಮ್ಮ ಈ ಯೋಜನೆ ರೂಪುಗೊಂಡು ಸಮಾಜದ ಗಣ್ಯರಲ್ಲಿ ತಿಳಿಸಿದಾಗ ಬಹಳ ಉತ್ಸಾಹದಿಂದ ಬಾರಿ ಒಳ್ಳೆಯ ಕಾರ್ಯ ಮಾಡುತ್ತಿದ್ದೀರಿ. ನಮ್ಮ ಸಹಕಾರ ಸದಾ ಇದೇ ಎಂದು ಉತ್ತಮ ಧನಸಹಾಯ ನೀಡಿ ಸಹಕರಿಸಿದ್ದಾರೆ. ನಮ್ಮ ಸಂಘದ ಗೌರವಾಧ್ಯಕ್ಷರಾದ ಸಂತೋಷ್ ಶೆಟ್ಟಿಯವರು, ಅಧ್ಯಕ್ಷರಾದ ಅಜಿತ್ ಹೆಗ್ಡೆಯವರು ಉತ್ತಮ ಮಾರ್ಗದರ್ಶನ ಮತ್ತು ಯೋಜನೆಗೆ ಪ್ರೋತ್ಸಾಹ ನೀಡಿದ್ದಾರೆ. ಯೋಜನೆಗೆ ಮೊದಲಾಗಿ ಮಾಜಿ ಅಧ್ಯಕ್ಷರಾದ ಸದಾನಂದ ಕೆ ಶೆಟ್ಟಿಯವರು ತನ್ನ ಧರ್ಮಪತ್ನಿ ಇಂದಿರಾ ಎಸ್ ಶೆಟ್ಟಿಯವರ…

Read More