Author: admin

ಯುವಕರು ಸಂಘಟಿತರಾಗಿ ಕ್ರೀಡೆ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವ ಮೂಲಕ ಅಶಕ್ತರ ಬಾಳಿಗೆ ನೆರವಾಗಬೇಕು. ಕ್ರೀಡೆ ಮತ್ತು ವಿದ್ಯೆ ಸಮ್ಮಿಲನವಾದರೆ ಸಂಸ್ಕೃತಿ ಸಂಸ್ಕಾರ ಬೆಳೆಯುತ್ತದೆ ಎಂದು ಭೂ ನ್ಯಾಯ ಮಂಡಳಿ ಕುಂದಾಪುರದ ಮಾಜಿ ಸದಸ್ಯ ಚಿತ್ತರಂಜನ್ ಶೆಟ್ಟಿ ಹರ್ಕೂರು ಹೇಳಿದರು. ಅಂಬಾ ಕ್ರಿಕೆಟರ್ಸ್ ಮುಳ್ಳಿಕಟ್ಟಿ ವತಿಯಿಂದ ನಡೆದ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಪ್ರೊ. ಸುರೇಂದ್ರ ಶೆಟ್ಟಿ ಕಮ್ಮಾರಕೋಡ್ಲು, ವಿಶ್ವನಾಥ ಶೆಟ್ಟಿ, ರಾಘವೇಂದ್ರ ಶೆಟ್ಟಿ, ರಕ್ಷಿತ್ ಶೆಟ್ಟಿ, ಮಹೇಶ್ ದೇವಾಡಿಗ, ಪ್ರಮೋದ್ ಆಚಾರ್ಯ, ನರಸಿಂಹ ಶೆಟ್ಟಿ, ಮಂಜುನಾಥ ಶೆಟ್ಟಿ, ಸತೀಶ್ ಶೆಟ್ಟಿ, ನಿತಿನ್ ಶೆಟ್ಟಿ, ಪ್ರವೀಣ್ ಪೂಜಾರಿ, ಪ್ರಣಯ್ ಶೆಟ್ಟಿ, ಗುರುಕಿರಣ್ ಶೆಟ್ಟಿ ಉಪಸ್ಥಿತರಿದ್ದರು. ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

Read More

ಫೆಬ್ರವರಿ 7 ಮತ್ತು 8 ರಂದು ನಡೆಯಲಿರುವ ಸವಣೂರು ಶ್ರೀ ವಿಷ್ಣುಮೂರ್ತಿ ದೇವಾಲಯದ ಜಾತ್ರೋತ್ಸವದ ಅಮಂತ್ರಣ ಪತ್ರವನ್ನು ಮಾಜಿ ಸಂಸದ ಹಾಗೂ ಕರ್ನಾಟಕ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರಿಗೆ ಜನವರಿ 29 ರಂದು ಅವರ ಕುಂಜಾಡಿ ಮನೆಯಲ್ಲಿ ನೀಡಿ, ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ಸವಣೂರುಗುತ್ತು ವೆಂಕಪ್ಪ ಶೆಟ್ಟಿ, ಪ್ರಮುಖರಾದ ಚೇತನ್ ಕುಮಾರ್ ಕೋಡಿಬೈಲು, ಉಮಾಪ್ರಸಾದ್ ರೈ ನಡುಬೈಲು, ಸತೀಶ್ ಬಲ್ಯಾಯ ಕನ್ನಡಕುಮೇರು, ಸುರೇಶ್ ರೈ ಸೂಡಿಮುಳ್ಳು, ಸುಪ್ರೀತ್ ರೈ ಖಂಡಿಗ, ಕೀರ್ತನ್ ಕುಮಾರ್ ಕೋಡಿಬೈಲು, ರಾಮಕೃಷ್ಣ ಪ್ರಭು ಸವಣೂರು, ಕುಲಪ್ರಕಾಶ್ ಮೆದು ಹಾಗೂ ಸಂತೋಷ್ ರೈ ಕಲಾಯಿ ಉಪಸ್ಥಿತರಿದ್ದರು. ಚಿತ್ರ, ವರದಿ : ಉಮಾಪ್ರಸಾದ್ ರೈ ನಡುಬೈಲು

Read More

ಸವಣೂರು ಯುವಕ ಮಂಡಲದ ಮಾರ್ಗದರ್ಶಕ, ಸವಣೂರು ಗ್ರಾ. ಪಂ. ಸದಸ್ಯ ಗಿರಿಶಂಕರ ಸುಲಾಯ ಅವರು 2026 ನೇ ಸಾಲಿನಿ ಸ್ವಾಮಿ ವಿವೇಕಾನಂದ ರಾಜ್ಯ ಸದ್ಭಾವನಾ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು, ವಿಜಯಪುರ ಜಿಲ್ಲಾ ಘಟಕ, ಮುದ್ದೇಬಿಹಾಳ ವಿ.ಬಿ.ಸಿ. ಪ್ರೌಢಶಾಲೆಯ ಮೈದಾನದಲ್ಲಿ ಜ. 31 ರಂದು ನಡೆಯಲಿರುವ ರಾಷ್ಟೀಯ ಯುವ ವೈಭವ 2026 ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ನಡೆಯಲಿದೆ. ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಆಂಗ್ಲ ಮಾಧ್ಯಮ ವಿಭಾಗದಲ್ಲಿ ಮುಖ್ಯ ಶಿಕ್ಷಕರಾಗಿ ಸ್ವಯಂ ನಿವೃತ್ತಿ ಪಡೆದಿರುವ ಗಿರಿಶಂಕರ ಸುಲಾಯ ಸವಣೂರು ಗ್ರಾಮ ಪಂಚಾಯಿತಿಯ ಸದಸ್ಯರಾಗಿ ರಾಜ್ಯದಲ್ಲಿ ಅತೀ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದ ಹೆಗ್ಗಳಿಕೆ ಹೊಂದಿದ್ದಾರೆ. ಧಾರ್ಮಿಕ ಸಾಮಾಜಿಕ ರಂಗದಲ್ಲಿ ಸಕ್ರಿಯರಾಗಿರುವ ಗಿರಿಶಂಕರ ಸುಲಾಯ ಅವರು ಸವಣೂರು ಕಾಣಿಯೂರು ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷರು, ಸಮರ್ಥ ಜನಸೇವಾ ಟ್ರಸ್ಟ್ ಪುಣ್ಚಪಾಡಿ ಇದರ ಅಧ್ಯಕ್ಷರಾಗಿ, ಧಾರ್ಮಿಕ ಶಿಕ್ಷಣ ಸಮಿತಿಯ ತಾಲೂಕು ಸಮಿತಿ ಪ್ರಮುಖರಾಗಿ, ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲದ ಪ್ರಶಿಕ್ಷಣ,…

Read More

ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಅಭಿನಯ ಮತ್ತು ನಿರ್ದೇಶನದ ‘ಜೈ’ ಸಿನಿಮಾ 17 ನೇ ಬೆಂಗಳೂರು ಅಂತಾರಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಕನ್ನಡ ಸೂಪರ್ ಹಿಟ್ ಚಿತ್ರಗಳ ಜತೆ ಪಾಪ್ಯುಲರ್ ಎಂಟರ್ಟೈನ್ಮೆಂಟ್ ವಿಭಾಗದಲ್ಲಿ ‘ಜೈ’ ತುಳು ಸಿನಿಮಾ ಆಯ್ಕೆಯಾಗಿದೆ. ಜೈ ಸಿನಿಮಾ ಟಿವಿ, ಓಟಿಟಿ ಹಾಗೂ ಎಲ್ಲಾ ಭಾಷೆಯ ಡಬ್ಬಿಂಗ್ ಹಕ್ಕುಗಳನ್ನು ಭಾರತದ ಪ್ರಖ್ಯಾತ ಸಂಸ್ಥೆ ಬಹು ದೊಡ್ಡ ಮೊತ್ತಕ್ಕೆ ಖರೀದಿಸಿದೆ. ಸಿನಿಮಾ 75 ದಿನಗಳನ್ನು ಪೂರೈಸಿದ್ದು, ಶೀಘ್ರದಲ್ಲೇ ಸಿನಿಮಾ 100 ದಿನಗಳನ್ನು ಪೂರೈಸಲಿದೆ. ಸಿನಿಮಾದ 100 ದಿನಗಳ ಸಂಭ್ರಮಾಚರಣೆಯ ವೇಳೆ ಹೊಸ ಸಿನಿಮಾದ ಘೋಷಣೆಯನ್ನು ಮಾಡಲಾಗುವುದು ಎಂದು ರೂಪೇಶ್ ಶೆಟ್ಟಿ ತಿಳಿಸಿದ್ದಾರೆ. ಮುಂಬೈಯಲ್ಲಿ ಇತಿಹಾಸದಲ್ಲೇ ಅತೀ ದೊಡ್ಡ ತುಳು ಪ್ರೀಮಿಯರ್ ಒಂದೇ ದಿನ 9 ಟಾಕೀಸ್ ಗಳಲ್ಲಿ 25 ಕ್ಕೂ ಹೆಚ್ಚು ಶೋ ನಡೆದು ದಾಖಲೆ ಬರೆದಿದೆ. ‘ಜೈ’ ತುಳು ಸಿನಿಮಾ ರಂಗದ ಇತಿಹಾಸದಲ್ಲೇ ಪ್ರಥಮ ದಿನದಲ್ಲೇ 1020 ಪ್ರದರ್ಶನಗಳನ್ನು ಕಂಡು ದಾಖಲೆ ನಿರ್ಮಿಸಿದೆ. ಈಗಾಗಲೇ ಸಿನಿಮಾ ತೆರೆಕಂಡ ಎಲ್ಲಾ…

Read More

ಆಕೆಗೆ ಮಧ್ಯ ವಯಸ್ಸು. ಬಂದದ್ದು ಸೊಂಟ ನೋವಿನ ಸಮಸ್ಯೆ ಪರಿಹಾರಕ್ಕೆ. ಆದರೆ ಜೀವನದ ಹಲವು ತಿರುವುಗಳನ್ನು ಅನುಭವಗಳನ್ನು ಆಕೆ ಹಂಚಿಕೊಂಡಾಗ ದಿಗ್ಭ್ರಮೆಯಾದದ್ದೇ ಅಲ್ಲ ಆಕೆಯ ಬಗೆಗೆ ಗೌರವದ ಭಾವನೆಯೂ ಬಂತು. ಇದ್ದ ಎರಡು ಮಕ್ಕಳು ತಮ್ಮ ಹದಿ ಹರೆಯದಲ್ಲೇ ಇಹಲೋಕ ತ್ಯಜಿಸಿದರು. ಗುಣವಾದ ಖಾಯಿಲೆ ವರ್ಷಗಳವರೆಗೆ ತಪಸ್ಸಿನಂತೆ ನೋಡಿಕೊಂಡ ದಂಪತಿ. ಈಗ ಆಕೆ ಮಕ್ಕಳಿಗೆ ಕಲಿಸುವ ಶಿಕ್ಷಕಿ. ಇದನ್ನೆಲ್ಲಾ ಹೇಳುವಾಗ ಆ ಮುಖದಲ್ಲಿ ಏನೋ ಒಂದು ದೃಢ ನಿಶ್ಚಯವಿತ್ತು. ಕೆಲವು ಒಳ್ಳೆಯ ವಿಷಯಗಳನ್ನು ಮಕ್ಕಳಿಗೆ ಕಲಿಸುವುದೇ ನನ್ನ ಗುರಿ ನನ್ನ ಮಕ್ಕಳೂ ಅದನ್ನೇ ಬಯಸಿದ್ದರು ಎಂದು ಆಕೆ ಹೇಳಿದರು. ದುಃಖವನ್ನು ಗೆದ್ದ ಬದುಕಿಗೊಂದು ಅರ್ಥ ಹುಡುಕಿಕೊಂಡಿರುವ ಆಕೆಗೆ ಪ್ರಣಾಮಗಳು. ಇನ್ನೊಂದು ದಿನ ಬಂದ 40ರ ಆಸುಪಾಸಿನ ಮಹಿಳೆ ನೋವುಗಳನ್ನು ಉಂಡವಳೇ. ಖಿನ್ನತೆ ಮತ್ತು ಬೊಜ್ಜು ಸಮಸ್ಯೆಯಿಂದ ಬಳಲುತ್ತಿದ್ದ ಈ ಮಹಿಳೆ ಹೊರಬಂದದ್ದು ತನ್ನಲ್ಲಿರುವ ಮೊಬೈಲಿನ ಸಹಾಯದಿಂದ. ಮೊಬೈಲ್ ನಿಂದ ಯುವ ಜನಾಂಗವೇ ದಾರಿ ತಪ್ಪುತ್ತಿದೆ ಎಂದು ಎಲ್ಲರೂ ಹೇಳುತ್ತಿದ್ದು, ಆದರೆ ಆಕೆ…

Read More

ಈ ಜಗತ್ತೇ ನಿಂತಿರುವುದು ನಂಬಿಕೆ ಮತ್ತು ವಿಶ್ವಾಸ ಎಂಬ ಎರಡು ಮಹತ್ವಪೂರ್ಣವಾದ ವಿಚಾರಗಳಲ್ಲಿ. ನಂಬಿಕೆ ಇದ್ದಲ್ಲಿ ಮಾತ್ರ ಶಿಲೆಯಲ್ಲಿ ಶಂಕರನನ್ನು ಕಾಣಲು ಸಾಧ್ಯ. ಅದೇ ರೀತಿ ತಾಯಿ ತೋರಿಸಿದವನ ಮೇಲೆ ಆತ ನಮ್ಮ ತಂದೆ ಎಂಬ ವಿಶ್ವಾಸ ಮೂಡಲು ಸಾಧ್ಯ!. ಇವುಗಳಿಗೆ ಸಾಕ್ಷಿ ಆಧಾರಗಳ ಅಗತ್ಯವಿಲ್ಲ. ಈ ವಿಚಾರವನ್ನೇ ಆಧರಿಸಿ ತಯಾರಿಸಿದ ಹೊಸ ಚಿತ್ರ ಮೊನ್ನೆ ತಾನೇ ತೆರೆಕಂಡ ‘ಕಟ್ಟೆಮಾರ್’ ಎಂಬ ತುಳು ಚಿತ್ರ. ‘ಕಟ್ಟೆಮಾರ್’ ಚಿತ್ರದಲ್ಲಿ ‘ಸು ಫ್ರಮ್ ಸೋ’ ಖ್ಯಾತಿಯ ಜೆಪಿ ತುಮಿನಾಡು ಹಾಗೂ ‘ಕಾಂತಾರ’ದಲ್ಲಿ ಗುರುವ ಪಾತ್ರ ಮಾಡಿದ ಸ್ವರಾಜ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪ್ರೇಮಕಥೆ, ಸಸ್ಪೆನ್ಸ್ ವಿಷಯಗಳು ಕೂಡಾ ಇವೆ. ಎಲ್ಲವನ್ನು ಹದವಾಗಿ ಬೆರೆಸಿ, ಸಿನಿಮಾ ಸಿದ್ಧಪಡಿಸಲಾಗಿದೆ. ಈ ಚಿತ್ರವನ್ನು ರಕ್ಷಿತ್ ಗಾಣಿಗ ಹಾಗೂ ಸಚಿನ್ ಕಟ್ಲ ನಿರ್ದೇಶನ ಮಾಡಿದ್ದಾರೆ. ಇದು ಈಗಾಗಲೇ ಕನ್ನಡದಲ್ಲಿ ಡಬ್ ಆಗಿದ್ದು, ಮುಂದಿನ ದಿನಗಳಲ್ಲಿ ಬಿಡುಗಡೆ ಕಾಣಲಿದೆ. ಸಂತೋಷ್ ಆಚಾರ್ಯ ಛಾಯಾಗ್ರಹಣ, ಗಣೇಶ್ ನಿರ್ಚಾಲ್ ಸಂಕಲನ…

Read More

ಸುರತ್ಕಲ್ ನ ಸುಭಾಷಿತನಗರ ಅಸೋಸಿಯೇಷನ್ ಕಛೇರಿಯಲ್ಲಿ ನಾಗರೀಕ ಸುರಕ್ಷತೆಯ ಪಾಲನೆ, ಸೈಬರ್ ಕ್ರೈಮ್ ಹಾಗೂ ಮಾದಕ ವಸ್ತು ನಿಷೇದ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು. ಸುರತ್ಕಲ್ ಆರಕ್ಷಕ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಪ್ರಮೋದ್ ಕುಮಾರ್, ಸಬ್ ಇನ್ಸ್ ಪೆಕ್ಟರ್ ರಘು ನಾಯ್ಕ್ ಹಾಗೂ ಇಲಾಖಾ ಸಿಬ್ಬಂದಿಗಳ ಸಹಯೋಗದೊಂದಿಗೆ ಮಾದಕ ದ್ರವ್ಯ, ಸೈಬರ್ ಕ್ರೈಮ್ ಅಪರಾಧ ತಡೆಗಳ ಬಗ್ಗೆ ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ಶಿಬಿರ ಹಾಗೂ ಪೊಲೀಸ್ ಇಲಾಖೆಯಿಂದ ಮನೆ ಮನೆ ಸಂಪರ್ಕ ಕಾರ್ಯಕ್ರಮದ ವಿವರವನ್ನು ಇಲಾಖಾ ವತಿಯಿಂದ ನೀಡಲಾಯಿತು ಹಾಗೂ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸೂಕ್ತ ಪರಿಹಾರ ಮಾಹಿತಿಯನ್ನು ನೀಡಲಾಯಿತು. ಯಾವುದೇ ಸೈಬರ್ ಅಪರಾಧ ವಂಚನೆಗೆ ಒಳಗಾದಲ್ಲಿ ದೂರವಾಣಿ ಸಂಖ್ಯೆ1930 ಮತ್ತು 112ಕ್ಕೆ ಕರೆ ಮಾಡಿ ಸಮಸ್ಯೆ ಪರಿಹರಿಸಲು ಸೂಚಿಸಿದರು. ಸುಭಾಷಿತ ನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಲಾದ ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಾರ್ವಜನಿಕರು ಭಾಗವಹಿಸಿದರು. ಅಸೋಸಿಯೇಷನ್ ನ ಅಧ್ಯಕ್ಷರಾದ ರಮೇಶ್ ಶೆಟ್ಟಿ ಹಾಗೂ ಪದಾಧಿಕಾರಿಗಳು ಭಾಗವಹಿಸಿ ಕಾರ್ಯಕ್ರಮ…

Read More

ನಮ್ಮ ಸಮಾಜ, ಸಮುದಾಯ, ಸಂಸ್ಕ್ರತಿ, ಸಮಾಜಮುಖಿ ಚಿಂತನೆ ಮತ್ತು ನಾಯಕತ್ವದ ಮೂಲಕ ಬಾಂಧವರ ಒಗ್ಗೂಡುವಿಕೆಯಲ್ಲಿ ಸೃಷ್ಟಿಯಾದ ಸಂಘಟನೆ ವರ್ಷದಿಂದ ವರ್ಷಕ್ಕೆ ಬಲಯುತವಾಗಿ ಸಾಗುತ್ತಿದೆ. ನಮ್ಮ ಬಂಟ್ಸ್ ಅಸೋಸಿಯೇಷನ್ ಕೂಡಾ ಅದೇ ಉದ್ದೇಶದೊಂದಿಗೆ ಸ್ಥಾಪನೆಯಾಗಿ 14 ವರ್ಷಗಳ ತನಕ ಬಂದು, ಸಂಘದ ಮಾಜಿ ಅಧ್ಯಕ್ಷರುಗಳು, ದಾನಿಗಳು, ಸಮಾಜ ಬಾಂಧವರ ಸಹಕಾರದಿಂದ ಹಲವಾರು ಕಾರ್ಯ ಯೋಜನೆಗಳ ಮೂಲಕ, ಸಂಘಟನಾತ್ಮಕವಾಗಿ ಒಗ್ಗೂಡಿಸಿಕೊಂಡು ಬಂದ ನಮ್ಮೆಲ್ಲರ ಶ್ರಮಕ್ಕೆ ಸಿಕ್ಕಿದ ಯಶಸ್ಸು ಇದಾಗಿದೆ. ಮುಂದೆಯೂ ಸಂಘ ಬೆಳೆಯಬೇಕು ಮತ್ತಷ್ಟು ಬಾಂಧವರು ಸಂಘವನ್ನು ನಡೆಸುವ ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಸಂಘದ ಪ್ರೌಢಾವಸ್ಥೆಯ ಈ ಕಾಲಘಟ್ಟದ ಸಂಭ್ರಮದಲ್ಲಿ ಹದಿನಾಲ್ಕನೇ ವಾರ್ಷಿಕೋತ್ಸವಕ್ಕೆ ಕಾಲಿಟ್ಟಿದ್ದೇವೆ. ಇದು ನಮ್ಮ ಮನೆಯ ಕಾರ್ಯಕ್ರಮ. ಎಲ್ಲರೂ ಒಂದಾಗಿ ಶಿಸ್ತು ಬದ್ದವಾಗಿ ಸಮಾರಂಭ ನಡೆಸುವ ಜವಾಬ್ದಾರಿ ಎಲ್ಲರಿಗೂ ಇದೆ. ಸಮಾಜ ಬಾಂಧವರನ್ನು ಒಗ್ಗೂಡಿಕೊಂಡು ಸರ್ವರ ಸಹಕಾರದಿಂದ ಈ ವಾರ್ಷಿಕೋತ್ಸವವನ್ನು ಸ್ಮರಣೀಯವಾಗಿಸುವ. ತಮ್ಮೆಲ್ಲರ ಸಹಕಾರದಿಂದ ಇದು ಸಾಧ್ಯ ಎಂದು ಪುಣೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷರಾದ ರೋಹಿತ್ ಶೆಟ್ಟಿಯವರು ತಿಳಿಸಿದರು. ಪುಣೆ ಬಂಟ್ಸ್…

Read More

ಅವಿಭಜಿತ ದಕ್ಷಿಣ ಕನ್ನಡ, ಕರ್ನಾಟಕದಲ್ಲೇ ಎಲ್ಲೂ ಇಲ್ಲದ ನಮ್ಮ ಕಾಪು ಮಾರಿಯಮ್ಮ ದೇವಾಲಯ ನಿರ್ಮಾಣ ಮಾಡುವ ಭಾಗ್ಯ ನಮಗೆ ಒದಗಿ ಬಂತು. ಸಿಕ್ಕಿದ ಭಾಗ್ಯ ಎಂದು ತಿಳಿದು ಕಾಪು ಅಮ್ಮನ ಪ್ರೇರಣೆಯಂತೆ ನಡೆದಿದ್ದೇವೆ. ಕಾಪು ಮಾರಿಯಮ್ಮನ ಸೇವೆಯಲ್ಲಿ ಪುಣೆಯ ಬಹಳಷ್ಟು ದಾನಿಗಳ ಪಾತ್ರವಿದೆ. ಪವಾಡ ಕ್ಷೇತ್ರ ಕಾಪು ಮಾರಿಯಮ್ಮನ ಅನುಗ್ರಹ ತಮಗೆಲ್ಲರಿಗೂ ಸದಾ ಇರಲಿ. ನಾವು ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಸೇವೆಯಲ್ಲಿ ಇದ್ದೇವೆ. ಆದರೆ ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಮಾಡುವಾಗ ಧಾರ್ಮಿಕ ವಿಚಾರಗಳಿಗೆ ಮಾತ್ರ ಒತ್ತು ನೀಡುತ್ತೇವೆ. ಅದೇ ರೀತಿ ಸಮಾಜದ, ಸಂಘದ ಕಾರ್ಯದಲ್ಲಿ ಸಮಾಜಮುಖಿ ಕಾರ್ಯಗಳಿಗೆ ಒತ್ತು ನೀಡಿ ನಡೆಯುತ್ತೇವೆ. ಇದೇ ನಮ್ಮ ಧರ್ಮವಾಗಿದೆ. 51 ವರ್ಷಗಳ ಹಿಂದೆ ಸ್ಥಾಪನೆ ಮಾಡಿದ ಪುಣೆ ಬಂಟರ ಸಂಘದ ಸ್ಥಾಪಕರಲ್ಲಿ ಸಮಾಜದ ಮೇಲಿನ ಪ್ರೀತಿ, ಭಕ್ತಿ ಭಾವ, ಸಮಾಜ ಅಭಿವೃದ್ದಿ ಹೊಂದಬೇಕು ಎಂಬ ತುಡಿತ ಇತ್ತು. ಅದ್ದರಿಂದ ಸಂಘ ಸ್ಥಾಪನೆ ಆಗಿದೆ. ಅದೇ ರೀತಿ ಸ್ಥಾಪನೆಯಾದ ಸಂಘವನ್ನು ಉತ್ತರೋತ್ತರ ಅಭಿವೃದ್ದಿ ಪಥದಲ್ಲಿ ನಡೆಸಿಕೊಂಡು…

Read More

ಯಾವುದೇ ಕಲಾ ಪ್ರಕಾರವಿರಲಿ, ಅಲ್ಲಿ ಮೂಲ ನಂಬಿಕೆಗಳಿಗೆ ಧಕ್ಕೆಯಾಗಬಾರದು. ಸಿನಿಮಾ, ನಾಟಕ, ಯಕ್ಷಗಾನ ಅಥವಾ ಜನರನ್ನು ತಲುಪುವ ಯಾವುದೇ ಮಾಧ್ಯಮಗಳಲ್ಲಿ ಯಾವುದೇ ಮೂಲ ನಂಬಿಕೆಗಳನ್ನು ಸಮಾಜಕ್ಕೆ ತಲುಪಿಸುವ ಹಾದಿಯಲ್ಲಿ ಕೊಂಚ ಎಡವಟ್ಟಾದರೂ ಪರ-ವಿರೋಧದ ಚರ್ಚೆಗಳ ಜೊತೆಗೆ ಆಕ್ರೋಶ, ಅಸಮಾಧಾನ ಹಾಗೂ ಅಪಸ್ವರಗಳಿಗೆ ತುತ್ತಾಗಬೇಕಾಗುತ್ತದೆ. ಕೆಲವರಿಗೆ ನಂಬಿಕೆಗಳು ಗಟ್ಟಿಯಾದ ಅನುಭವವಾದರೆ ಮತ್ತೆ ಕೆಲವರಿಗೆ ನಂಬಿಕೆಗೆ ಧಕ್ಕೆಯಾದ ಅನುಭವ. ಇದು ಸಹಜವಾಗಿಯೇ ಸಮಾಜದಲ್ಲಿ ಸಂಘರ್ಷದ ಸನ್ನಿವೇಶ ಸೃಷ್ಟಿಸುತ್ತದೆ. ದೈವಾರಾಧನೆಯನ್ನೇ ಮುಂದಿಟ್ಟುಕೊಂಡು ಬಂದ ಇತ್ತೀಚಿನ ಕೆಲ ಸಿನಿಮಾಗಳು ಕಮರ್ಷಿಯಲ್ ಹಿಟ್ ಅನಿಸಿಕೊಂಡಿದ್ದರ ಜೊತೆಗೆ ಸೃಷ್ಟಿಸಿದ ಅನಾಹುತಗಳು ಕೂಡಾ ಅಷ್ಟೇ ದೊಡ್ಡದು.‌ ಇದೇ ಕಾರಣಕ್ಕೆ ದೈವಾರಾಧನೆಯನ್ನೇ ಕಥಾ ವಸ್ತುವಾಗಿ ಇಟ್ಟುಕೊಂಡು ಬರೋ ಸಿನಿಮಾಗಳ ಗೆಲುವು ಕೂಡ ಈ ಮಣ್ಣಿನ ಅಸ್ಮಿತೆಯಂತಿರೋ ದೈವ ನಂಬಿಕೆಗೆ ಭಾರೀ ಅಪಾಯ ತಂದೊಡ್ಡಬಹುದು ಅನ್ನೋ ಆತಂಕವಿದೆ‌‌. ಆದರೆ ತುಳು ಸಿನಿಮಾ ರಂಗದಲ್ಲಿ ಇತ್ತೀಚೆಗಷ್ಟೇ ತೆರೆಗೆ ಬಂದ ಸ್ವರಾಜ್ ಶೆಟ್ಟಿ, ಜೆ.ಪಿ ತೂಮಿನಾಡು, ಕೆ ಎಸ್ ಲಂಚುಲಾಲ್ ಅಭಿನಯದ ‘ಕಟ್ಟೆಮಾರ್’ ಎನ್ನುವ ಸಿನಿಮಾ ಈ…

Read More