Author: admin

ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 163ನೇ ಜಯಂತ್ಯೋತ್ಸವದ ಅಂಗವಾಗಿ ವಿವೇಕ ಕಾಯಕರತ್ನ ಪ್ರಶಸ್ತಿ ಪ್ರಧಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಜನವರಿ 24 ರಂದು ಶನಿವಾರ ಸಂಜೆ 6 ಗಂಟೆಗೆ ಅಳಿಯೂರಿನ ವಿಕಾಸ ನಗರದ ಶ್ರೀ ಶನೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿದೆ. ಕರಿಂಜೆ ಶ್ರೀ ಜಗದ್ಗುರು ರಾಘವೇಂದ್ರ ಪೀಠದ ಶ್ರೀ ಮುಕ್ತಾನಂದ ಶ್ರೀಗಳವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಆಳ್ವಾಸ್ ಎಜುಕೇಷನ್ ಫೌಂಡೇಶನ್ ಅಧ್ಯಕ್ಷರಾದ ಡಾ. ಎಂ ಮೋಹನ್ ಆಳ್ವ ಅವರು ಉದ್ಘಾಟಿಸಲಿದ್ದಾರೆ. ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ನಿಡ್ಡೋಡಿ ಚಾವಡಿಮನೆ ಜಗನ್ನಾಥ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ನ್ಯಾಯವಾದಿ ಚಂದ್ರವರ್ಮ ಜೈನ್ ಅಳಿಯೂರು ಅವರು ವಿವೇಕಾನಂದರ ಸಂದೇಶ ನೀಡಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವಿ ಸಲ್ಲಿಸಿದ ಸದಾನಂದ ಪೂಜಾರಿ, ಅಚ್ಯುತ ಆಚಾರ್ಯ, ರವೀಂದ್ರ ಅಮೀನ್, ಆನಂದ ಸೀತಾರಾಮ ಶೆಟ್ಟಿ, ಸಂತೋಷ ಆಚಾರ್ಯ, ಲೀಲಾ ಮಡಿವಾಳ್ತಿ, ವಸಂತಿ ಶೆಟ್ಟಿ, ಚಂದ್ರಾವತಿ ಪೂಜಾರಿ, ಸುಮನ…

Read More

ಭಾರತ ಸರಕಾರ ಸಾಮ್ಯದ ಇಂಡಿಯನ್ ರೋಡ್ ಕಾಂಗ್ರೆಸ್ ಇದರ ರಸ್ತೆ ವಿಪತ್ತು ನಿರ್ವಹಣಾ ಸಮಿತಿ ತಾಂತ್ರಿಕ ಸಮಿತಿಗೆ ಸದಸ್ಯರಾಗಿ ಮುಂದಿನ ಎರಡು ವರ್ಷಗಳ ಅವಧಿಗೆ ಪುತ್ತೂರು ತಾಲೂಕು ಯುವ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕರಾದ ಡಾ| ಹರ್ಷ ಕುಮಾರ್ ರೈ ಮಾಡಾವು ಇವರನ್ನು ಆಯ್ಕೆ ಮಾಡಲಾಗಿದೆ. ರಸ್ತೆಯ ಗುಣಮಟ್ಟ ಮತ್ತು ಸುರಕ್ಷತೆಯ ಬಗ್ಗೆ ಅನ್ವೇಷಣೆ ನಡೆಸಿ ಹೊಸ ಹೊಸ ತಾಂತ್ರಿಕ ವಿಚಾರಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅನುಷ್ಠಾನಗೊಳಿಸುವಂತೆ ಶಿಫಾರಸ್ಸು ಮಾಡುವ ಏಕೈಕ ಸ್ವತಂತ್ರ ಸಂಸ್ಥೆ ಇಂಡಿಯನ್ ರೋಡ್ ಕಾಂಗ್ರೆಸ್ ಇದೀಗ ರಸ್ತೆಗಳಲ್ಲಿ ಸಂಭವಿಸಬಹುದಾದ ವಿಪತ್ತುಗಳು, ನೆರೆ, ಭೂಕುಸಿತ, ಭೂಕಂಪ, ಅಪಘಾತಗಳು ಇತ್ಯಾದಿಗಳನ್ನು ತಡೆಗಟ್ಟುವ ಬಗ್ಗೆ ಯೋಜನೆಗಳನ್ನು ರೂಪಿಸಿ ವಿನೂತನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಮತ್ತು ಹೊಸ ಮಾರ್ಗಸೂಚಿ ನಿಯಮಾವಳಿಗಳನ್ನು ಜಾರಿಗೆ ತರಲು ಈ ಸಮಿತಿಯನ್ನು ರಚಿಸಲಾಗಿರುತ್ತದೆ.

Read More

ಪುತ್ತಿಗೆ ಮಠದ ಪರ್ಯಾಯ ಸಂದರ್ಭದಲ್ಲಿ ಹೊರೆ ಕಾಣಿಕೆ ಸಮಿತಿ ಸಂಚಾಲಕರಾಗಿ ಬೃಹತ್ ಪ್ರಮಾಣದಲ್ಲಿ ಸಾಮಾಗ್ರಿ ಸಂಗ್ರಹವನ್ನು ಯಶಸ್ವಿಯಾಗಿ ಮಾಡಿ, ಬಳಿಕ ಗೀತೋತ್ಸವ ಹಾಗೂ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮ ಸಮಿತಿಯ ಸಂಚಾಲಕರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ನ್ಯಾಯವಾದಿ ಬೈಕಾಡಿ ಸುಪ್ರಸಾದ್ ಶೆಟ್ಟಿ ಹಾಗೂ ಕ್ಷಮಾ ಸುಪ್ರಸಾದ್ ಶೆಟ್ಟಿ ದಂಪತಿಗಳಿಗೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ ಹಾಗೂ ಶ್ರೀ ಸುಶೀಂದ್ರತೀರ್ಥ ಸ್ವಾಮೀಜಿ ಅವರು ಶ್ರೀ ಕೃಷ್ಣಗೀತಾನುಗ್ರಹ ಪ್ರಶಸ್ತಿ ನೀಡಿ ಗೌರವಿಸಿದರು.

Read More

ಜೇಸಿಐ ಕಾರ್ಕಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜೇಸಿ ಇಂಟರ್ನ್ಯಾಷನಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್ ಕಾರ್ಕಳ ಇಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ವಹಿಸಿದ್ದ ಘಟಕದ 2025ನೇ ಸಾಲಿನ ಅಧ್ಯಕ್ಷೆ ಶ್ವೇತಾ ಎಸ್ ಜೈನ್ ತನ್ನ ಒಂದು ವರ್ಷದ ಸಾಧನೆ ಮತ್ತು ಕಾರ್ಯಕ್ರಮಗಳ ಸಂಕ್ಷಿಪ್ತ ವರದಿಯನ್ನು ಮಂಡಿಸಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು. 2026 ರ ಸಾಲಿನ ನೂತನ ಅಧ್ಯಕ್ಷ ಅವಿನಾಶ್ ಶೆಟ್ಟಿಯವರಿಗೆ ನಿಕಟ ಪೂರ್ವಾಧ್ಯಕ್ಷೆ ಶ್ವೇತಾ ಎಸ್ ಜೈನ್ ಹಾಗೂ ನೂತನ ಸದಸ್ಯರಿಗೆ ಜೇಸಿ ವಲಯ 15ರ ವಲಯ ಅಧ್ಯಕ್ಷ ಸಂತೋಷ್ ಶೆಟ್ಟಿ ಪ್ರತಿಜ್ಞಾ ವಿಧಿ ಬೋಧಿಸಿ ಶುಭ ಹಾರೈಸಿದರು. ಜೇಸಿ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಿತ್ತರಂಜನ್ ಶೆಟ್ಟಿ ಮಾತನಾಡಿ, ನಿಕಟ ಪೂರ್ವಾಧ್ಯಕ್ಷರ ಕಾರ್ಯಕ್ರಮಗಳನ್ನು ಶ್ಲಾಘಿಸಿ, ನೂತನ ಅಧ್ಯಕ್ಷರು ಇನ್ನೂ ಉತ್ತಮ ಕೆಲಸ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದರು. ವಲಯ ಉಪಾಧ್ಯಕ್ಷ ಜಿತೇಶ್ ಪಿರೇರಾ, 2025ರ ಕಾರ್ಯದರ್ಶಿ ಸುಶ್ಮಿತಾ ರಾವ್, ಲೇಡಿ ಜೇಸಿ ಸಂಯೋಜಕಿ ಶಹಿನ್ ರಿಜ್ವಾನ್…

Read More

ನಿರ್ದೇಶಕ ಸಿಂಪಲ್ ಸುನಿ ನಿರ್ದೇಶನದ ‘ಲಂಬೋದರ 2.0’ ಚಿತ್ರಕ್ಕೆ ಮುಹೂರ್ತವಾಗಿದ್ದು, ಈ ಚಿತ್ರದ ಮೂಲಕ ಉದ್ಯಮಿ, ರಾಜಕೀಯ ಮುಖಂಡ, ಸಮಾಜಸೇವಕ ಅನಿಲ್ ಶೆಟ್ಟಿ ನಾಯಕ ನಟನಾಗಿ ಹಾಗೂ ನಿರ್ಮಾಪಕನಾಗಿ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಿದ್ದಾರೆ. ಬಾಲಿವುಡ್ ನಟಿ ಸಾಚಿ ಬಿಂದ್ರಾ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಬರುತ್ತಿದ್ದಾರೆ. ಅನಿಲ್ ಶೆಟ್ಟಿ ಹಾಗೂ ಅಭಿಜಿತ್ ಮಹೇಶ್ ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಈ ತಿಂಗಳ ಕೊನೆಯಲ್ಲಿ ಚಿತ್ರಿಕರಣ ಆರಂಭವಾಗುವ ನೀರಿಕ್ಷೆ ಇದ್ದು ನಿರ್ದೇಶಕ ಸಿಂಪಲ್ ಸುನಿ ತಮ್ಮ ತಂಡದೊಂದಿಗೆ ಪ್ರೀ ಪ್ರೊಡಕ್ಷನ್ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರವು ಎಐ, ಯುವಜನತೆ, ವೇಗವಾಗಿ ರೂಪಾಂತರಗೊಳ್ಳುತ್ತಿರುವ ಡಿಜಿಟಲ್ ಜಗತ್ತು ಸೇರಿದಂತೆ ಸಮಕಾಲೀನ ವಿಷಯಗಳ ಸುತ್ತ ಮೂಡಿ ಬರುತ್ತಿರುವ ಲಂಬೋದರ 2.0 ಸಾಮಾಜಿಕ ಥ್ರಿಲ್ಲರ್ ಜಾನರ್ ಸಿನಿಮಾ. ಅನಿಲ್ ಶೆಟ್ಟಿ ಮಾತನಾಡಿ, ಈ ಚಿತ್ರ ನಾವು ಇಂದು ಬದುಕುತ್ತಿರುವ ಜಗತ್ತನ್ನು ಸ್ಪಷ್ಟವಾಗಿ ತೋರಿಸುತ್ತದೆ. ತಂತ್ರಜ್ಞಾನವು ನಮ್ಮ ಭಾವನೆಗಳು ಮತ್ತು ನಿರ್ಧಾರಗಳನ್ನು ಹೇಗೆ ರೂಪಿಸುತ್ತದೆ ಎಂಬುದನ್ನು ಚಿತ್ರದಲ್ಲಿ ನೋಡಬಹುದು. ಸಿಂಪಲ್…

Read More

ಚೈತನ್ಯ ಕಲಾವಿದೆರ್ ಬೈಲೂರು ಇವರ ‘ರಾಘು ಮಾಸ್ಟ್ರ್’ ನಾಟಕವನ್ನು ವಿಟ್ಲ ಜಾತ್ರೋತ್ಸವ ಪ್ರಯುಕ್ತ ಸಮರ್ಪಣ್ ಎಂಬ ತಂಡ ಅಯೋಜನೆ ಮಾಡಿತ್ತು. ರಂಗಭೂಮಿಯಲ್ಲಿ ಭಾರೀ ಸದ್ದು ಮಾಡುತ್ತಿರುವ ಈ ನಾಟಕ ನೋಡಲೇ ಬೇಕೆನ್ನುವ ಇರಾದೇ ನನ್ನದಾಗಿತ್ತು. ಸುಮಾರು ಎರಡು ಗಂಟೆ ಇಪ್ಪತ್ತು ನಿಮಿಷಗಳ ಈ ನಾಟಕ ಪ್ರತಿ ಪ್ರೇಕ್ಷಕರನ್ನು ಕುಳಿತಲ್ಲಿಂದ ಕದಲದಂತೆ ಮಾಡಿದ್ದು ನಿಜ. ಪ್ರಸ್ತುತ ಸಮಾಜದಲ್ಲಿ ತ್ಯಾಗ, ನೋವು, ಕಷ್ಟ, ತ್ಯಾಗ ಎಲ್ಲವೂ ಹೆಣ್ಣಿಗೆ ಮಾತ್ರ ಎಂಬ ದೊಡ್ಡ ಹಣೆಪಟ್ಟಿ‌ ಇರುವ ಈ ಕಾಲದಲ್ಲಿ ಗಂಡಿಗೂ ಒಂದು ಬದುಕಿದೆ ಅವನಿಗೂ ನೋವು ನಲಿವಿದೆ ತ್ಯಾಗದ ರೂಪವಿದೆ ಎಂಬುದನ್ನು ಅರ್ಥಪೂರ್ಣವಾಗಿ ತಿಳಿಸಿದ್ದಾರೆ. ಗಂಡು ಮಗನಾಗಿ ಜನಿಸಿ, ಕುಟುಂಬದ ಜೊತೆಗಿನ ಸಂಬಂಧ ಜವಾಬ್ದಾರಿಯ ನಂತರ ಮದುವೆಯ ಅನುಬಂಧ ಪ್ರತಿ ಹಂತ ಉದ್ಯೋಗದ ಜೊತೆ ಅವನ ಪ್ರತಿ ‌ಹಂತದಲ್ಲಿಯೂ ಅವನ ಕಷ್ಟ ಅವನಿಗೆ ಮಾತ್ರ ತಿಳಿದಿರುತ್ತದೆ‌ ಎಂಬುದನ್ನು ಜನರಿಗೆ ತಿಳಿಸಿದ ರೀತಿ ಅರ್ಥಪೂರ್ಣವಾಗಿದೆ. ಆರಂಭದಿಂದ ಅಂತ್ಯದ ತನಕ ಇಲ್ಲಿ‌ ಯಾರೂ ಕೂಡ ಜಾನರ್ ನಟರಿಲ್ಲ. ಬದಲಾಗಿ…

Read More

ದಿ ಇನ್ಸ್ಟಿಟ್ಯೂಟ್ ಆಫ್ ಕಂಪೆನಿ ಸೆಕ್ರೆಟರೀಸ್ ಆಫ್ ಇಂಡಿಯಾ ಜನವರಿ ಆವೃತ್ತಿಯಲ್ಲಿ ನಡೆದ ಕಂಪೆನಿ ಸೆಕ್ರಟರೀಸ್ ಎಕ್ಸಿಕ್ಯೂಟಿವ್ ಎಂಟ್ರೆನ್ಸ್ ಟೆಸ್ಟ್ (ಸಿಎಸ್‌ಇಇಟಿ) ಪರೀಕ್ಷೆಯಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ 13 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಪ್ರೀತಂ ಬಸವರಾಜ್ ಪಟ್ಟಣ ಶೆಟ್ಟಿ (121), ದೀಕ್ಷಿತ್ ಕುಮಾರ್ (120), ಸುಜೀತ್ ರಾಘವೇಂದ್ರ ಎ (120), ಯಶವಂತ ರೆಡ್ಡಿ ಎಸ್ (111), ರುಜುಲಾ ಕೆ (110), ದಿಯಾ ಎಸ್ ಶೆಟ್ಟಿ (107), ನಂದನ್ ಗೌಡ ಆರ್ (100), ನಂದಿಕಾ ಶ್ರೀ ಡಿ. ವಿ (100), ಮನೀಶ್ ಗೌಡ ಆರ್ (100), ಶರಣ್ಯ ಯು ಶೆಟ್ಟಿ (100), ಬಸವಪ್ರಸಾದ್ ಎಸ್ ಮಳಗಲಿ (100), ಸುಪ್ರಿಯಾ ಎಂ (100), ಶ್ರೇಯಾ ದಿನೇಶ್ ಕಟಾರಿಯಾ (100) ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು. ವಿದ್ಯಾರ್ಥಿಗಳ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರವರು ಅಭಿನಂದಿಸಿದ್ದಾರೆ.

Read More

ಕುಂದಾಪುರ: ಸಿಎ, ಸಿಎಸ್‍ಇಇಟಿ ವೃತ್ತಿ ಪರ ಕೋರ್ಸ್‍ಗಳಿಗೆ 14 ವರ್ಷಗಳಿಂದ ತರಬೇತಿ ನೀಡುತ್ತಿರುವ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು iಟಿsಣiಣuಣe oಜಿ ಛಿomಠಿಚಿಟಿಥಿ seಛಿಡಿeಣಚಿಡಿies oಜಿ Iಟಿಜiಚಿ ಸಂಸ್ಥೆ ನಡೆಸಿದ ಸಿಎಸ್ ಪರೀಕ್ಷೆಯಲ್ಲಿ ಉನ್ನತ ಸಾಧನೆ ಮಾಡಿದ್ದಾರೆ. ಪರೀಕ್ಷೆಗೆ ಹಾಜರಾದ 24 ವಿದ್ಯಾರ್ಥಿಗಳಲ್ಲಿ 21 ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಸಂಸ್ಥೆಯ ವಿದ್ಯಾರ್ಥಿಗಳಾದ ಜಯಸೂರ್ಯ (176), ಆಕಾಶ್ (173, ಅಂಶಿಕ್ (170), ನೇಹಾ (167), ಶೆಟ್ಟಿ ಶ್ರೇಯಸ್ (166), ಸ್ಪೂರ್ತಿ ಶೆಟ್ಟಿಗಾರ್ (164), ಆರ್ಯ (163), ಸುಮೀತ್ ಮರಾಠಿ (163), ನೀಶಾಲ್ (162), ಸಮೃದ್ದ್ ಶೆಟ್ಟಿ (161), ರಾಹುಲ್ ಪೂಜಾರಿ (160), ಶ್ರೇಯಸ್ ಟಿ (159), ರಶ್ವೀತ್ (156) ಪ್ರಥಮೇಶ್ ದೇವಾಡಿಗ (151), ನೀಶಾಂತ್ (151), ಆಯ್ಯಷ್ (146), ಚರಣ್ (140), ಸಂಚಿತ್ (136), ಯಶಸ್ವಿ ಪಿ ಶೆಟ್ಟಿ (128) ಪ್ರಾಪ್ತಿ ಶೆಟ್ಟಿ (126), ಶ್ರೀಶ್ ಕುಮಾರ್ ಶೆಟ್ಟಿ (122) ಅಂಕಗಳನ್ನು ಪಡೆದು ಉತ್ತೀರ್ಣರಾಗುವ ಮೂಲಕ ಮುಂದಿನ…

Read More

ತುಳುನಾಡಿನ ತಿಂಡಿ ತಿನಿಸುಗಳಿಗೆ ಫಿದಾ ಆಗದವರೇ ಇಲ್ಲ. ಮಂಗಳೂರು, ಉಡುಪಿಯ ಪಾಕ ಚಂದ್ರಲೋಕದಲ್ಲೂ ಫೇಮಸ್ಸು ಅನ್ನುವಷ್ಟರ ಮಟ್ಟಿಗೆ ಇಲ್ಲಿಯ ತಿಂಡಿ ತಿನಿಸುಗಳ ವೈಶಿಷ್ಟತೆ ಪಡೆದುಕೊಂಡಿದೆ. ವೈವಿದ್ಯಮಯ ತಿಂಡಿ ತಿನಿಸುಗಳು ಕರಾವಳಿ ಮಾತ್ರವಲ್ಲದೇ ರಾಜ್ಯ, ದೇಶ, ವಿದೇಶದಲ್ಲೂ ಫೇಮಸ್. ಕರಾವಳಿಯ ತಿಂಡಿ ತಿನಿಸುಗಳಲ್ಲಿ ವೈವಿಧ್ಯತೆಯಲ್ಲಿ ಸಸ್ಯಹಾರದ್ದೇ ಪಾರಮ್ಯ. ಇಂತಹ ನೂರಾರು ಬಗೆಯ ತಿಂಡಿ ತಿನಿಸುಗಳನ್ನು ಒಂದೇ ವೇದಿಕೆಯಲ್ಲಿ ಪ್ರದರ್ಶನ ನೀಡುವ ಮೂಲಕ ವಿಕ ಕರುನಾಡ ಸ್ವಾದ ಮಾದರಿಯಾಗಿದೆ. ಮಂಗಳೂರಿನ ಸುರತ್ಕಲ್ ಬಂಟರ ಭವನದಲ್ಲಿ ನಡೆದ ವಿಕ ಕರುನಾಡ ಸ್ವಾದ ಸ್ಪರ್ಧೆಯ ವೈವಿಧ್ಯತೆ ಇದು. ವಿಜಯ ಕರ್ನಾಟಕ ಸಾರಥ್ಯದಲ್ಲಿ ಬಂಟರ ಸಂಘ ಸುರತ್ಕಲ್ ಸಹಯೋಗದೊಂದಿಗೆ ಫ್ರೀಡಂ ಹೆಲ್ದಿ ಕುಕಿಂಗ್ ಆಯಿಲ್ ಮತ್ತು ಎಕ್ಸೋ ಪ್ರಾಯೋಜಕತ್ವದಲ್ಲಿ ವಿಕ ಕರುನಾಡ ಸ್ವಾದ ಅಡುಗೆ ಸವಿರುಚಿ ಸ್ಪರ್ಧೆ ಆಯೋಜಿಸಲಾಗಿತ್ತು. ನೂರಾರು ಬಗೆಯ ತಿಂಡಿ ತಿನಿಸುಗಳು ಒಂದೇ ತಿಂಡಿಯಲ್ಲಿ ಹತ್ತಾರು ಬಗೆ, ಹತ್ತಾರು ಬಗೆಯ ಚಟ್ನಿಗಳಿದ್ದವು. ಎಲ್ಲವನ್ನೂ ಒಂದಕ್ಕಿಂತ ಒಂದು ವಿಭಿನ್ನ ವಿನ್ಯಾಸ ಅಲಂಕಾರದೊಂದಿಗೆ ಜೋಡಿಸಿಡಲಾಗಿತ್ತು. ತುಳುನಾಡಿನ ತಿಂಡಿಯ ಜೊತೆ…

Read More

ಬಂಟ ಸಮುದಾಯವು ಎಲ್ಲರೊಂದಿಗೆ ಬೆರೆತು ಬದುಕುವ ಸಮುದಾಯವಾಗಿದ್ದು, ಎಲ್ಲಾ ಜಾತಿ ಧರ್ಮಗಳನ್ನು ಗೌರವಿಸುತ್ತದೆ. ಬಂಟ ಸಂಘಟನೆಯು ಕೇವಲ ಜಾತಿಗೆ ಸೀಮಿತವಾಗದೆ ಸಮಾಜಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ ಎಂದು ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ತಿಳಿಸಿದರು. ಬಂಟರ ಸಂಘ ಹಿರೇಬಂಡಾಡಿ ವತಿಯಿಂದ ಮಂಗಳೂರಿನ ಎಜೆ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನ ಸಹಸಹಯೋಗದಲ್ಲಿ ಹಿರೇಬಂಡಾಡಿಯ ಅಂಬೇಡ್ಕರ್ ಭವನದಲ್ಲಿ ನಡೆದ ಬೃಹತ್ ಉಚಿತ ಆರೋಗ್ಯ ತಪಾಸಣಾ ಹಾಗೂ ದಂತ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಂಘಟನೆಗಳು ಸಮಾಜದ ಸ್ವಾಸ್ಥ್ಯ ಕಾಪಾಡಬೇಕು. ಈ ನಿಟ್ಟಿನಲ್ಲಿ ಹಿರೇಬಂಡಾಡಿಯಂತಹ ಗ್ರಾಮಾಂತರ ಪ್ರದೇಶದಲ್ಲಿ ಸಮಾಜದ ಎಲ್ಲರಿಗಾಗಿ ಇಂತಹ ಕಾರ್ಯಕ್ರಮವನ್ನು ಆಯೋಜನೆ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಇಂತಹ ಕಾರ್ಯಕ್ರಮಗಳು ಇನ್ನಷ್ಟು ಮೂಡಿ ಬರಬೇಕು. ಸಮಾಜದ ಎಲ್ಲರಿಗೂ ಅವುಗಳಿಂದ ಪ್ರಯೋಜನ ಸಿಗಬೇಕು ಎಂದರು. ದಂತ ವೈದ್ಯದ ರಾಜಾರಾಮ್ ಕೆ ಬಿ ಮಾತನಾಡಿ, ಆರೋಗ್ಯವಿದ್ದರೆ ಎಲ್ಲಾ ಇದೆ. ಆದ್ದರಿಂದ ಮೊದಲನೆಯದಾಗಿ ನಾವು ಆರೋಗ್ಯದ ಬಗ್ಗೆ ಗಮನ ನೀಡಬೇಕು.…

Read More