Author: admin

ಬಂಟ ಸಮಾಜ ಬಾಂಧವರ ಐಕ್ಯಮತ ಒಗ್ಗಟ್ಟಿನಿಂದ ಪುಣೆಯಲ್ಲಿ ಸುಮಾರು ಐವತ್ತು ವರ್ಷಗಳ ಹಿಂದೆ ಬಂಟರ ಸಂಘದ ಸ್ಥಾಪನೆಯಾಗಿ ಸಂಘದ ಸ್ಥಾಪಕರಿಂದ ಹಿಡಿದು ಸಮಾಜದ ಹಿರಿಯರು, ದಾನಿಗಳು, ಸೇವಾಕರ್ತರು, ಪ್ರೋತ್ಸಾಹಕರು, ಮಹಿಳೆಯರು, ಯುವ ಸಂಘಟನೆಯ ಸಹಕಾರದಿಂದ ಬೆಳೆದು ಬಂದು ಇದೀಗ ಸುವರ್ಣ ಮಹೋತ್ಸವದ ಹೊಸ್ತಿಲಲ್ಲಿ ಬಂದು ನಿಂತಿದೆ. ಸಂಸ್ಥೆಯ ಬೆನ್ನೆಲುಬಾಗಿ ನಿಂತು ಸಮಾಜದ ಅಭಿವೃದ್ದಿಗಾಗಿ, ಸಂಘಟನೆಗಾಗಿ ದುಡಿದವರು ಬಹಳಷ್ಟು ನಮ್ಮ ಹಿರಿಯರಿದ್ದಾರೆ. ಪರಿಶ್ರಮದಿಂದ ಫಲ ಪ್ರಾಪ್ತಿ ಎಂಬಂತೆ ಕೆಲವು ವರ್ಷಗಳ ಹಿಂದೆ ನಮ್ಮ ನೇತೃತ್ವದಲ್ಲಿ ಹೆಮ್ಮೆಯ ಭವ್ಯ ಬಂಟರ ಭವನ ನಿರ್ಮಾಣ ಆಗಿ, ಇದೀಗ ಇದೇ ಭವನದಲ್ಲಿ ಸುವರ್ಣ ಮಹೋತ್ಸವವನ್ನು ಅದ್ದೂರಿಯಾಗಿ ಅರ್ಥಪೂರ್ಣವಾಗಿ ಆಚರಿಸುವ ಭಾಗ್ಯ ನಮಗೆ ಒದಗಿ ಬಂದಿದೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ನುಡಿದರು. ಡಿ 5ರಂದು ಪುಣೆ ಬಂಟರ ಭವನದ ಪ್ರತಿಭಾ ದಯಾಶಂಕರ್ ಶೆಟ್ಟಿ ಕಾನ್ಫರೆನ್ಸ್ ಹಾಲ್ ನಲ್ಲಿ ಜರಗಿದ ಬಂಟರ ಸಂಘದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ…

Read More

ಹಸಿರು ಸಿರಿಯ ನಿಸರ್ಗ ಸೌಂದರ್ಯಕ್ಕೆ ಹೆಸರು ಪಡೆದ ಪ್ರಾಕೃತಿಕ ಆಕರ್ಷಣೆಗಳಿಂದ ಜನಮನ ಸೂರೆಗೊಳ್ಳುವ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಪುಟ್ಟ ಹಳ್ಳಿಯಲ್ಲಿ ದಿನಾಂಕ 6..2..1975 ರಂದು ಹಳ್ನಾಡು ಕೆಳಮನೆ ನಾರಾಯಣ್ ಶೆಟ್ಟಿ ಹಾಗೂ ಕನಕ ನಾರಾಯಣ ಶೆಟ್ಟಿ ದಂಪತಿಗಳಿಗೆ ಮುದ್ದು ಮಗನಾಗಿ ಜನಿಸಿದ ಮಂಜುನಾಥ್ ಶೆಟ್ಟರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ತನ್ನ ಹುಟ್ಟೂರಲ್ಲೇ ಪೂರೈಸಿ, ಭವಿಷ್ಯ ಜೀವನಕ್ಕೊಂದು ಭದ್ರ ನೆಲೆಯ ಹುಡುಕಾಟದಲ್ಲಿ 1994 ರಲ್ಲಿ ಮಾಯಾನಗರಿ ಮುಂಬಯಿಗೆ ಬಂದು ಅಂಧೇರಿಯ ಟಿ.ಸಿ.ಎಸ್ ಕ್ಯಾಂಟೀನ್ ನಲ್ಲಿ ದುಡಿಯುತ್ತಲೇ ತಮ್ಮ ಶಿಕ್ಷಣವನ್ನೂ ಮುಂದುವರಿಸಿದರು. ಮುಂಬಯಿ ನಗರದ ಪ್ರತಿಷ್ಠಿತ ಸಿದ್ಧಾರ್ಥ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮುಗಿಸಿದ ಶ್ರೀಯುತರು ಫಾಸ್ಟ್ ಟ್ರ್ಯಾಕ್ ವರ್ಲ್ಡ್ ವೈಡ್ ಪ್ರೈವೇಟ್ ಲಿಮಿಟೆಡ್ ಎಂಬ ತನ್ನದೇ ಆದ ಉದ್ಯಮ ಸಂಸ್ಥೆಯನ್ನು ಸ್ಥಾಪಿಸಿದರು. ಪ್ರತಿಷ್ಠಿತ ಡಿ.ಟಿ.ಡಿ.ಸಿ ಕೊರಿಯರ್ ಸಂಸ್ಥೆಯ ಮೂಲಕ ಮುಂಬಯಿಯ ಹಲವಾರು ಕಡೆ ತಮ್ಮ ಸಂಸ್ಥೆಯ ಶಾಖೆಗಳನ್ನು ತೆರೆಯುವ ಮೂಲಕ ತನ್ನ ವ್ಯವಹಾರ ಕ್ಷೇತ್ರವನ್ನು ವಿಸ್ತರಿಸಿದರು. ಉದ್ಯಮದಲ್ಲಿ ಯಶಸ್ಸು ಸಂಪಾದಿಸಿ…

Read More

ಡಾಕ್ಟ್ರೆ ಮಗುವಿಗೆ ಜ್ವರ.. ತುಂಬಾ ಸುಡ್ತಾ ಇದಾನೆ… ಇದು ನಾವು ದಿನನಿತ್ಯ ಹಲವಾರು ಬಾರಿ ಕೇಳುವಂತಹ ವಾಕ್ಯ. ಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೆ ಎಲ್ಲರೂ ಜ್ವರದಿಂದ ಬಳಲಿದವರೇ. ಆದರೆ ಕಾರಣ ಒಬ್ಬೊಬ್ಬರಲ್ಲೂ ಬೇರೆಯೇ. ಜ್ವರ ಎಂಬುದೊಂದು ರೋಗವಲ್ಲ. ಅದೊಂದು ರೋಗ ಲಕ್ಷಣ. ದೇಹದಲ್ಲಿ ಎಲ್ಲವೂ ಸರಿಯಿಲ್ಲ ಎಂದು ನಮಗೆ ತಿಳಿಸುವ ರಕ್ಷಣ ವಿಧಾನ. ಮನುಷ್ಯನ ದೇಹ ಸೋಂಕಿನಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ನಡೆಸುವ ಹೋರಾಟದ ಸಂಕೇತ. ಸಾಧಾರಣವಾದ ವೈರಲ್‌ ಜ್ವರದಿಂದ ಹಿಡಿದು, ಯಾವ ಪರೀಕ್ಷೆಗಳಲ್ಲೂ ಸುಳಿವು ಕೊಡದ, ಯಾವ ಚಿಕಿತ್ಸೆಗೂ ಬಗ್ಗದ ಜ್ವರಗಳು ಕೂಡ ಇವೆ. ಮಕ್ಕಳಲ್ಲಿ ಜ್ವರ ಸರ್ವೇ ಸಾಮಾನ್ಯ. ಕಾರಣಗಳು ಹಲವಾರು. ಕೆಲವು ಮುಖ್ಯ ಕಾರಣಗಳೆಂದರೆ, 1. ವೈರಸ್‌ ಜ್ವರ 2. ಡೆಂಗ್ಯೂ 3. ಟೈಫಾಯ್ಡ 4. ಮಲೇರಿಯಾ 5. ಮೂತ್ರದ ಸೋಂಕು 6. ನ್ಯುಮೋನಿಯ ಶಾಲೆಗೆ ಹೋಗುವ ಮಕ್ಕಳಲ್ಲಿ ತುಂಬಾ ಸಾಮಾನ್ಯವಾಗಿ ಬರುವಂಥದ್ದು ವೈರಲ್‌ ಫೀವರ್‌. ಶೀತ, ಕೆಮ್ಮು, ವಾಂತಿ, ಭೇದಿಗಳಿಂದ ಪ್ರಾರಂಭ­ವಾಗಿ, ಜ್ವರವಾಗಿ 3-4 ದಿನ…

Read More

ಈ ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವಿಗೂ ಅದು ಮಾನವನಾಗಲೀ ಮೃಗ ಪಕ್ಷಿಗಳಾಗಲೀ, ಸರೀಸೃಪವಾಗಲೀ ಇಲ್ಲವೇ ಮತ್ಸ್ಯವಾಗಲೀ ಪ್ರತಿಯೊಂದಕ್ಕೂ ಹಸಿವು ಇದ್ದೇ ಇದೆ. ಹಸಿವು ಇಲ್ಲದ ಜೀವಿಯೇ ಇಲ್ಲ. ಹಸಿವು ಇಲ್ಲದೇ ಇರುತ್ತಿದ್ದರೆ ಈ ಪ್ರಪಂಚವೇ ಇರುತ್ತಿರಲಿಲ್ಲ. ಕಾರಣ ಶರೀರ ಬದುಕಿರಲು ಶಕ್ತಿ ಬೇಕು. ಶಕ್ತಿಯನ್ನು ಪೂರೈಸಲು ಆಹಾರ ಬೇಕು. ಆಹಾರ ಬೇಕಾದರೆ ಹಸಿವು ಆಗಬೇಕು. ಆದ್ದರಿಂದಲೇ ಪ್ರತಿಯೊಂದು ಜೀವಿಗೂ ಪರಮಾತ್ಮನು ಹಸಿವನ್ನು ಕರುಣಿಸಿದ್ದಾನೆ. ಹಸಿವು ಪುಟ್ಟ ಮಗುವಿನಿಂದ ಹಿಡಿದು ಮುದಿತನದ ತನಕ ಇದ್ದೇ ಇರುತ್ತದೆ. ಹಸಿವನ್ನು ನೀಗಿಸುವ ಆಹಾರಕ್ಕಾಗಿ ಹೋರಾಟ ಮಾಡಲೇ ಬೇಕಾಗುತ್ತದೆ. ಹಸಿವಿನ ಬೇಗೆಯನ್ನು ಅನುಭವಿಸಿದವರೇ ಬಲ್ಲರು. ಫೋಟೋದಲ್ಲಿ ಹಸಿವಿನಿಂದ ಬಳಲುವ ಪುಟ್ಟ ಮಗುವು ನನ್ನ ಕೈಯಿಂದ ಯಾರಾದರೂ ಆಹಾರವನ್ನು ಕಿತ್ತುಕೊಳ್ಳುವರೋ ಎಂಬ ಗಾಬರಿಯಿಂದ ಆಹಾರದ ಬಟ್ಟಲನ್ನು ಹಿಡಿದುಕೊಂಡು ಓಡುತ್ತಿದೆ. ಆ ದೃಶ್ಯವನ್ನು ನೋಡುವಾಗ ನಮ್ಮ ಮನ ಕರಗುತ್ತದೆ. ಆ ಪುಟ್ಟ ಮಗುವಿನ ಕೈಯಿಂದ ಆಹಾರದ ಬಟ್ಟಲನ್ನು ಕಿತ್ತುಕೊಳ್ಳಲು ಕರಿಯ ಟೊಣಪನೊಬ್ಬನು ಬೆನ್ನಟ್ಟುತ್ತಿದ್ದಾನೆ. ಆ ಟೊಣಪನ ಮೇಲೆ ನನ್ನ ಹೊರತು!!! ಹೆಚ್ಚಿನವರಿಗೆ…

Read More

ಈ ಆದುನಿಕ ಯುಗದಲ್ಲಿ ಬದಲಾಗುತ್ತಿರುವ ದಿನಮಾನಗಳಲ್ಲಿ ನಮ್ಮ ಸಂಪ್ರದಾಯಗಳು ಮೂಲೆ ಸೇರಿ ನವ ನಾಗರೀಕತೆ ತ್ವರಿತ ಗತಿಯಲ್ಲಿ ಬೆಳೆಯುತ್ತಿರುವ ಮಧ್ಯೆಯೂ ನಮ್ಮ ಕೌಟುಂಬಿಕ ಸಮಾರಂಭಗಳು ದಿಕ್ಕು ತಪ್ಪದಂತೆ ಎಚ್ಚರಿಕೆ ವಹಿಸುತ್ತಲೇ ತಮ್ಮ ಮಕ್ಕಳ ನಿಶ್ಚಿತಾರ್ಥ, ಮೆಹೆಂದಿ, ವಿವಾಹ, ಅತಿಥಿ ಭೋಜನ ಸಮ್ಮಿಲನಗಳ ಪಾವಿತ್ರ್ಯ ಮಹತ್ವ ಕೆಡದಂತೆ ಆಚರಿಸಿಕೊಳ್ಳುತ್ತಾರೆ ಎಂಬುವುದಕ್ಕೆ ಮಹಾನಗರಿ ಮುಂಬಯಿಯಲ್ಲಿ ನಡೆದ ಮೆಹೆಂದಿ ಕಾರ್ಯಕ್ರಮ ಸಾಕ್ಷಿಯಾಗಿದೆ. ಮಹಾನಗರಿಯ ಬಂಟ ಕುಟುಂಬವೊಂದು ತಮ್ಮ ಮಗನ ಮೆಹೆಂದಿ ಕಾರ್ಯಕ್ರಮದಲ್ಲಿ ಮುಂಬಯಿಯ ಜನಪ್ರಿಯ ಗಾಯಕ ಶ್ರೀ ವಿಜಯ್ ಶೆಟ್ಟಿ ಮೂಡುಬೆಳ್ಳೆ ತಂಡದವರಿಂದ ಭಜನಾ ಕಾರ್ಯಕ್ರಮ ಆಯೋಜಿಸಿದ್ದು, ಜಾತಿ ಬಾಂಧವರ ಮುಕ್ತ ಕಂಠದ ಶ್ಲಾಘನೆಗೆ ಪಾತ್ರವಾಯಿತು. ವಿಜಯ್ ಶೆಟ್ಟಿ ಅವರ ಭಕ್ತಿ ಪ್ರಧಾನ ಹಾಡುಗಳು ಆಗಮಿಸಿದ್ದ ಬಂಧುಮಿತ್ರರ ಹರ್ಷೋದ್ಗಾರಗಳ ಮೂಲಕ ಪ್ರಸ್ತುತಗೊಂಡು ಅಲ್ಲಿ ಸೇರಿದ್ದ ಗಣ್ಯರು ಈ ಕಾರ್ಯಕ್ರಮ ಆಯೋಜಿಸಿದ ಕುಟುಂಬದ ಕುರಿತು ಮೆಚ್ಚುಗೆ ನುಡಿಗಳನ್ನಾಡಿದರು. ಇಂಥಹ ಆರೋಗ್ಯಕರ ಬೆಳವಣಿಗೆ ಮುಂದಿನ ದಿನಗಳಲ್ಲಿ ಇತರರಿಗೂ ಪ್ರೇರಣೆಯಾಗಲಿ ಎಂದು ಹಾರೈಸಿದರು. ಒಟ್ಟಿನಲ್ಲಿ ಇದೊಂದು ಮಾದರಿ ಮೆಹೆಂದಿ ಕಾರ್ಯಕ್ರಮ…

Read More

“ಹೋಮಕ್ಕೆ ಹಾಕಲು ಕಡಿಮೆ ದರದ ತುಪ್ಪ ಕೊಡಿ ” ಯಾವುದೇ ಅಂಗಡಿಯಲ್ಲೂ ಕೇಳಿ ಬರುವ ಮಾತಿದು. ದೇವರ ದೀಪಕ್ಕೂ ಇದೇ ತುಪ್ಪ. ದೇವರಿಗೆ ಈ ತುಪ್ಪ ನಡೆಯುತ್ತಾ? ಹೌದು, ದೇವರಿಗೆ ಭಕ್ತಿಯಿಂದ ಏನೇ ಸಮರ್ಪಿಸಿದರೂ ಆತ ಸ್ವೀಕರಿಸುತ್ತಾನೆ. ಕಣ್ಣಪ್ಪನ ಮಾಂಸ ಸ್ವೀಕರಿಸಿದ್ದ ಆತ. ಹಲವಾರು ಕಡೆ ಮದ್ಯ ಮಾಂಸ ಸಿಗರೇಟಿನ ನೈವೇದ್ಯ ಪದ್ಧತಿ ಕೂಡ ಇವೆ. ಆದರೆ ಹಾಗಂತ ತೀರಾ ದನದ ಮಾಂಸದ ತುಪ್ಪ ಕೊಟ್ಟರೆ? ಗೊತ್ತಿಲ್ಲದೇ ಕೊಟ್ಟರೆ ಏನೂ ತೊಂದರೆ ಇಲ್ಲ ಅಂದುಕೊಂಡು ನಮ್ಮ ಮನಸ್ಸಿಗೆ ನಾವೇ ಸಮಾಧಾನ ಮಾಡಿಕೊಳ್ಳುತ್ತೇವೆ. ಆದರೆ ಒಳಗಿಂದೊಳಗೆ ನಮಗೆ ಗೊತ್ತಿಲ್ಲದೇ ಇಲ್ಲ. ತುಪ್ಪದ ದರ ಹೊರಗೆ ಐನೂರು ರೂಪಾಯಿ ತನಕ ಇದೆ. ಆದರೆ ದೇವರಿಗೆ ಅರ್ಪಿಸುವ ತುಪ್ಪ 125 ರಿಂದ 200 ರೂಪಾಯಿ ಕೇಜಿ. ಸ್ವಾಮಿ ಅಯ್ಯಪ್ಪ ಇರುಮುಡಿ ಸಲುವಾಗಿ ಲಕ್ಷಾಂತರ ಕೇಜಿ ತುಪ್ಪ ನವೆಂಬರ್ ನಿಂದ ಜನವರಿ ತನಕ ಬರುತ್ತದೆ. ಇದರಲ್ಲಿ ಇರುವುದು ದನದ ಕೊಬ್ಬು. ಎಲುಬು ಮತ್ತು ವನಸ್ಪತಿ. ಸುವಾಸನೆ ಬರಲು…

Read More

ವಿದ್ಯಾಗಿರಿ (ಮೂಡುಬಿದಿರೆ): ಜ್ಞಾನದ ವೃದ್ಧಿಯಲ್ಲಿ ಗ್ರಂಥಾಲಯದ ಪಾತ್ರ ಬಹಳ ಮಹತ್ತರ ಎಂದು ಮಂಗಳೂರು ವಿಶ್ವವಿದ್ಯಾಲಯದ ಗ್ರಂಥಾಲಯಮತ್ತು ಮಾಹಿತಿ ವಿಜ್ಞಾನ ವಿಭಾಗದ ಸಹ ಪ್ರಾಧ್ಯಾಪಕ ಡಾ ಉಮೇಶ್ ನಾಯ್ಕ್ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿ ಮತ್ತು ಉಪನ್ಯಾಸಕರಿಕರಿಗೆ ‘ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ’ ವಿಭಾಗ ಆಯೋಜಿಸಿರುವ ‘ಓಪನ್  ಅಕ್ಸೆಸ್ಸ್ ಇ – ರಿಸೋರ್ಸ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು . ‘ಹಲವಾರು ಮಾಹಿತಿಗಳನ್ನು ನಾವು ಗ್ರಂಥಾಲಯದ ಮುಖಾಂತರ ಪಡೆದುಕೊಳ್ಳುತ್ತೇವೆ. ಕೆಲವು ಸಂದರ್ಭದಲ್ಲಿ ಮಾಹಿತಿ ಪಡೆಯಲು ಹಲವಾರು ಗ್ರಂಥಾಲಯಗಳಿದ್ದರೂ, ಎಲ್ಲಾ ಮಾಹಿತಿಗಳು ಲಭ್ಯವಾಗದೆ ಇರಬಹುದು. ಅಂತಹ ಸಮಯದಲ್ಲಿ ಇ-ಗ್ರಂಥಾಲಯ ಸಹಾಯಕ’ ಎಂದರು. ‘ಸಂಶೋಧನೆ ಮತ್ತು ಪ್ರಾಜೆಕ್ಟ್ ಮಾಹಿತಿಗಳಿಗಾಗಿ ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಹೆಚ್ಚು ಅವಲಂಬಿತರಾಗಿದ್ದಾರೆ. ಪ್ರಸ್ತುತ ಕಾಲಘಟ್ಟದಲ್ಲಿ ಎಲ್ಲ ಮಾಹಿತಿ ಗ್ರಂಥಾಲಯದಿಂದ ಸಿಗದೇ ಇರಬಹುದು. ಅಂತಹ ಸಂದರ್ಭದಲ್ಲಿ ಓಪನ್‍ಆ್ಯಕ್ಸಸ್ ಇ ಲೈಬ್ರೆರಿ (ಮುಕ್ತ ಇ – ಗ್ರಂಥಾಲಯ) ಸಹಕಾರಿಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ ‘ನಿಮ್ಮ ಗುರಿಯ…

Read More

ಹಣಕಾಸು ಕ್ಷೇತ್ರದಲ್ಲಿ ಇಡೀ ವಿಶ್ವ ಕುತೂಹಲದಿಂದ ಗಮನಿಸುತ್ತಿರುವ ವ್ಯಕ್ತಿ ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಡಾ. ಆರ್ ಕೆ ಶೆಟ್ಟಿಯವರು ಜೀವವಿಮಾ ಕ್ಷೇತ್ರದ ಸಲಹೆಗಾರರಾಗಿ ಮುಂಬಯಿ ನಗರ ಮಾತ್ರವಲ್ಲದೇ ವಿಶ್ವದ ನಲವತ್ತೆರಡು ರಾಷ್ಟ್ರಗಳಲ್ಲಿ ಪರಿಚಿತರಿರುವ ಪ್ರಪ್ರಥಮ ಭಾರತೀಯ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾದ ಬಂಟ ಜನಾಂಗದ ಹೆಮ್ಮೆಯ ಪುತ್ರ. ಘನ ಮಹಾರಾಷ್ಟ್ರ ಸರಕಾರದ ಮಾನ್ಯ ರಾಜ್ಯಪಾಲರಾದ ಶ್ರೀ ಭಗತ್ ಸಿಂಗ್ ಕಿಶ್ಯಾರಿ ಅವರು ರಾಜಭವನದಲ್ಲಿ ಆರ್ ಕೆ ಶೆಟ್ಟಿಯವರನ್ನು ಗೌರವಿಸಿದ್ದಾರೆ ಎಂದಾದರೆ ಅವರ ಘನತೆ ಪ್ರಸಿದ್ಧಿಗೆ ಬೇರೆ ಸಾಕ್ಷಿ ಬೇಕೆ?!. ಮಾನ್ಯ ಆರ್ ಕೆ ಶೆಟ್ಟರು ವಿಶ್ವ ಮಟ್ಟದ ಪ್ರತಿಷ್ಠಿತ ಎಂ.ಡಿ.ಆರ್.ಟಿ. ಇದರ ಸದಸ್ಯತನ ಪಡೆದುದನ್ನು ಗಮನಿಸಿದರೆ ಜೀವವಿಮಾ ಕ್ಷೇತ್ರದ ಅವರ ಅಪ್ರತಿಮ ಸಾಧನೆ ಕುರಿತು ಯೋಚಿಸಬಹುದು. ವಿಶ್ವ ಪ್ರಸಿದ್ಧ ಎಂ.ಡಿ.ಆರ್.ಟಿ ಸಂಸ್ಥೆಯ ರೀಜನಲ್ ಛೇರ್ಮನ್ ಹುದ್ದೆಗೇರಿರುವ ಪ್ರಥಮ ಭಾರತೀಯ ಹಾಗೂ ಎಂಬತ್ತೆರಡು ವರ್ಷಗಳ ಇತಿಹಾಸದಲ್ಲೇ ಮೊದಲಿಗ. ಈ ಅಧಿಕಾರ ವಿಶ್ವದ ನಲವತ್ತೆರಡು…

Read More

ಮಾನವ ಸಂಘ ಜೀವಿಯಾಗಿದ್ದು, ಒಂದಲ್ಲ ಒಂದು ಬಗೆಯ ಸಂಘಟನೆ ಮೂಲಕ ಸಮಾಜಕ್ಕೆ ಸೇವಾ ಕಾರ್ಯ ಮಾಡುವ ಸಂಕಲ್ಪದೊಂದಿಗೆ ಪ್ರಸಿದ್ದಿಗೆ ಬರುತ್ತಾನೆ. ಸಂಘಟನೆ ಮೂಲಕ ಸಮಾಜಕ್ಕೆ ಮತ್ತು ದೇಶಕ್ಕಾಗಿ ಸೇವಾ ಕಾರ್ಯ ಮಾಡುವ ಅರ್ಪಣಾ ಭಾವನೆ ನಮ್ಮಲ್ಲಿರಬೇಕು. ರಚನಾತ್ಮಕ ಸಂಬಂಧಗಳನ್ನು ಕೂಡಿಕೊಂಡು ಪರಸ್ಪರ ವ್ಯಕ್ತಿಗತ ಪರಿಚಯ ಮತ್ತು ಸಂಬಂಧಗಳನ್ನು ಗಟ್ಟಿಗೊಳಿಸುವಲ್ಲಿ ಸಂಘ ಸಂಸ್ಥೆಗಳ ಮಹತ್ವ ಬಹಳಷ್ಟಿದೆ. ಇದಕ್ಕೆ ಮಾದರಿ ಎಂಬಂತೆ ಪುಣೆ ಬಂಟ್ಸ್ ಅಸೋಸಿಯೇಷನ್ ನ ಸಂಘಟನಾ ಸಾಮರ್ಥ್ಯ ತೋರಿ ಬರುತ್ತದೆ. ಸಮಾಜ ಬಾಂಧವರನ್ನು ಮತ್ತು ಯುವ ಶಕ್ತಿಯನ್ನು ಕೂಡಿಕೊಂಡು ಬಂಟ ಸಮಾಜ ಮಾಡುವ ಯಾವುದೇ ಕಾರ್ಯ ಕ್ಷೇತ್ರದ ಸಾಧನೆ ಮತ್ತು ಉದ್ಯಮ ಕ್ಷೇತ್ರದ ಸಾಧನೆ ಮೆಚ್ಚುವಂತಹದು. ಮಕ್ಕಳಿಗೆ ವಿದ್ಯೆಯ ಜೊತೆಯಲ್ಲಿ ಕ್ರೀಡೆ, ಕಲೆ ಮತ್ತು ಇತರೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡುವ ಕರ್ತವ್ಯ ಪಾಲಕರದ್ದು. ಇದರಿಂದ ವ್ಯಕ್ತಿತ್ವ ವಿಕಸನಗೊಂಡು, ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ ಸಮಾಜಕ್ಕೆ ಮತ್ತು ದೇಶ ಸೇವೆಯಲ್ಲಿ ಭಾಗಿಗಳಾಗುವಂತೆ ಮಾಡಬೇಕಾಗಿದೆ. ಬಂಟ್ಸ್ ಅಸೋಸಿಯೇಷನ್ ತಮ್ಮ ಸಮಾಜದ ಸೇವಾ ಕಾರ್ಯಗಳಿಗೆ ಮತ್ತು…

Read More

ಯಾವುದೇ ಸಮಾಜ ಪರ ಸೇವಾ ಕಾರ್ಯಗಳಿಗೆ ನಾನು ನಿರಂತರ ಸಹಾಯ, ಸಹಕಾರವನ್ನು ನೀಡುತ್ತಾ ಬಂದಿದ್ದೇನೆ. ಮುಂದೆಯೂ ನನ್ನ ಸಹಕಾರ ಸದಾ ಇರುತ್ತದೆ. ಘಾಟ್ಕೋಪರ್ ಕನ್ನಡ ವೆಲ್ಫೇರ್ ಸೊಸೈಟಿಯೊಂದಿಗೆ ನನ್ನ ಆತ್ಮೀಯ ಒಡನಾಟವಿದೆ. ಹಾಗೆಯೇ ಈ ಸಂಸ್ಥೆಯ ಎಲ್ಲಾ ಸದಸ್ಯರು ನನ್ನ ಆತ್ಮೀಯರಾಗಿದ್ದಾರೆ. ಇಂದು ವಿಶೇಷವಾಗಿ ಈ ಸಂಸ್ಥೆಯ ಸದಸ್ಯರು ಸೇರಿದಂತೆ ನನ್ನೆಲ್ಲಾ ಹಿತೈಷಿ ಸಮಾಜ ಬಾಂಧವರ ಆಶೀರ್ವಾದದಿಂದಾಗಿ ನಾನು ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷನಾಗಿ ಆಯ್ಕೆಗೊಂಡಿದ್ದೇನೆ ಎನ್ನಲು ಹೆಮ್ಮೆ ಪಡುತ್ತೇನೆ. ಇನ್ನು ಮುಂದೆಯೂ ಬಂಟರ ಸಂಘದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಿಗೆ ತಮ್ಮೆಲ್ಲರ ತುಂಬು ಹೃದಯದ ಸಹಕಾರ ಬೇಕಾಗಿದೆ. ಕನ್ನಡ ವೆಲ್ಫೇರ್ ಸೊಸೈಟಿ ಅಧ್ಯಕ್ಷ ನವೀನ್ ಶೆಟ್ಟಿ ಇನ್ನ ಬಾಳಿಕೆ ಅವರಂತಹ ಸಂಘಟಕರು ನಮ್ಮೊಂದಿಗಿದ್ದರೆ ಯಾವುದೇ ಕಾರ್ಯವನ್ನು ಮಾಡಲು ಅಸಾಧ್ಯವಾಗದು ಎನ್ನುವ ಭರವಸೆಯೂ ನನ್ನಲ್ಲಿದೆ ಎಂದು ಮುಂಬಯಿ ಬಂಟರ ಸಂಘದ ನೂತನ ಉಪಾಧ್ಯಕ್ಷರಾಗಿ ನೇಮಕಗೊಂಡ ಮಹೇಶ್ ಎಸ್. ಶೆಟ್ಟಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಅವರು ಡಿ.3 ರ ಆದಿತ್ಯವಾರದಂದು ಘಾಟ್ಕೋಪರ್ ಪೂರ್ವದ ಕನ್ನಡ…

Read More