Author: admin
ಕುಂಬಳೆ ಸಮೀಪದ ಪುತ್ತಿಗೆಯ ಪಂಜಳ ನಿವಾಸಿ, ನಿವೃತ್ತ ಮುಖ್ಯೋಪಾಧ್ಯಾಯ, ಹಿರಿಯ ರಂಗಕರ್ಮಿ ಬಾಯಾರುಗುತ್ತು ಮಂಜುನಾಥ ಭಂಡಾರಿ (83) ಅವರು ಜ. 26ರಂದು ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಬಿಪಿಎಂ ಭಂಡಾರಿ ಎಂದೇ ಖ್ಯಾತರಾಗಿದ್ದ ಇವರು 26 ವರ್ಷಗಳ ಕಾಲ ಕಳತ್ತೂರಿನ ಎಎಸ್ಬಿಎಸ್ ಇಚ್ಲಂಪಾಡಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, 1995ರಲ್ಲಿ ಮುಖ್ಯೋಪಾಧ್ಯಾಯರಾಗಿ ನಿವೃತ್ತಿ ಹೊಂದಿದ್ದರು. ಕರ್ನಾಟಕ ನಾಟಕ ಅಕಾಡೆಮಿ ನೇತೃತ್ವದಲ್ಲಿ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ನಡೆದಿದ್ದ ಅದ್ದೂರಿ ಕಾರ್ಯಕ್ರಮವೊಂದರಲ್ಲಿ ಇವರನ್ನು ರಂಗಸೇವೆಗಾಗಿ ಸಮ್ಮಾನಿಸಲಾಗಿತ್ತು. ಪ್ರಸ್ತುತ ಸುವರ್ಣ ಸಂಭ್ರಮದಲ್ಲಿರುವ ಪುತ್ತಿಗೆಯ ಎಸ್ಕೆಎಸ್ ಆರ್ಟ್ಸ್ ಆ್ಯಂಡ್ ನ್ಪೋರ್ಟ್ಸ್ ಕ್ಲಬ್ನ ಸ್ಥಾಪಕ ಸದಸ್ಯರಾಗಿದ್ದರು. ಬಂಟರ ಸಂಘದ ಪುತ್ತಿಗೆ ಪಂಚಾಯತ್ ಘಟಕದ ಅಧ್ಯಕ್ಷರಾಗಿ, ಕಾಸರಗೋಡು ಜಿಲ್ಲಾ ಬ್ಯಾಂಕಿನ ನಿರ್ದೇಶಕರಾಗಿ, ಅಂಗಡಿಮೊಗರು ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ, ಪುತ್ತಿಗೆ ಶ್ರೀ ಸುಬ್ರಾಯ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶ ಸಮಿತಿಯ ಕಾರ್ಯಾಧ್ಯಕ್ಷರಾಗಿದ್ದ ಇವರು ತಾಳಿಪ್ಪಾಡಿ ಶ್ರೀ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರದ ನೇತೃತ್ವ…
ಯೋಗ ಇದ್ದವರಿಗೆಲ್ಲಾ ಒಂದು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸಲು ಯೋಗ್ಯತೆ ಇರಬೇಕೆಂದಿಲ್ಲ. ಹಾಗೇ ಯೋಗ್ಯತೆ ಇದ್ದವರಿಗೆಲ್ಲಾ ಅಂತಾ ಹುದ್ದೆಯನ್ನು ನಿಭಾಯಿಸುವ ಯೋಗ ಕೂಡಿ ಬರಬೇಕೆಂದೂ ಇಲ್ಲ. ಆದರೆ ಯೋಗ್ಯತೆ ಇದ್ದು ಯೋಗವೂ ಕೂಡಿ ಬಂದಾಗ ಒಬ್ಬ ವ್ಯಕ್ತಿ ಅಸಾಮಾನ್ಯನಾಗುತ್ತಾನೆ. ಜನರ ಕಣ್ಮಣಿಯಾಗುತ್ತಾನೆ, ಜನನಾಯಕನಾಗುತ್ತಾನೆ, ಲೋಕ ಮಾನ್ಯನಾಗುತ್ತಾನೆ, ಆತನಿಗೆ ಪಟ್ಟ ಬೇಕಾಗಿಲ್ಲ. ಜನರೇ ಆತನನ್ನು ರತಗನ ಸಿಂಹಾಸನದಲ್ಲಿ ಕೂರಿಸಿ ಮೆರೆಸುತ್ತಾರೆ. ಇಂತಾ ಯೋಗ್ಯತೆ ಯೋಗ ಅದರೊಂದಿಗೆ ಮುಗ್ದತೆ ಮತ್ತು ಸಾಧನೆಯಿಂದ ಅಸಾಧ್ಯವನ್ನು ಸಾಧಿಸಿದ ಮಹಾ ಸಾಧಕ ಜಾಗತಿಕ ಬಂಟರ ಸಂಘದ ಅಧ್ಯಕ್ಷರಾದ ಮಾನ್ಯ ಐಕಳ ಹರೀಶಣ್ಣ. ಅಂದು ಆ ಒಂದು ಶುಭ ಘಳಿಗೆಯಲ್ಲಿ ಬಂಟರ ಕುಲದಾಗಸದಲ್ಲಿ ದ್ರುವ ತಾರೆಯೊಂದರ ಉದಯವಾಯಿತು. ಎಳತ್ತೂರು ಗುತ್ತು ಪಡುಮನೆ ರಾಮಣ್ಣ ಶೆಟ್ಟಿ, ಐಕಳ ಕುಂರ್ಬಿಲ್ ಗುತ್ತು ದೇವಕಿ ಶೆಟ್ಟಿ ದಂಪತಿಗಳ ಮುದ್ದಿನ ಮಗನಾಗಿ ಎಪ್ರಿಲ್ ಹತ್ತೊಂಬತ್ತು 1961 ರಂದು ಜಗದ ಬೆಳಕನ್ನು ಕಂಡ ಆ ದ್ರುವ ತಾರೆಯೇ ನಮ್ಮ ಐಕಳ ಹರೀಶಣ್ಣ. ತಂದೆ ರಾಮಣ್ಣ ಶೆಟ್ಟರು ವಿದ್ಯಾವಂತರು, ಧಾರ್ಮಿಕ…
ಎನ್.ಎನ್.ಎಮ್ ಪ್ರೊಡಕ್ಷನ್ ಲಾಂಛನದಲ್ಲಿ ಆತ್ಮಾನಂದ ರೈ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ತುಳು ಚಿತ್ರ “ಪಿಲಿ”. ತೆರೆಗೆ ಬರಲು ಸಿದ್ದವಾಗಿದೆ ಎಂದು ಸಿನಿಮಾದ ನಿರ್ದೇಶಕ ಮಯೂರ್ ಆರ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪಿಲಿ ಸಿನಿಮಾವನ್ನು ಸೆನ್ಸಾರ್ ಗೆ ಕಳುಹಿಸಿ ಕೊಡಲಾಗಿದೆ. ಭರತ್ ರಾಮ್ ರೈ ಸಹ ನಿರ್ಮಾಕರಾಗಿರುವ ಈ ಸಿನಿಮಾಕ್ಕೆ ಭರವಸೆಯ ಯುವ ನಟ ಭರತ್ ಭಂಡಾರಿಯವರು ಕಥೆ ಬರೆದು, ಮೊದಲ ಬಾರಿಗೆ ನಾಯಕ ನಟನಾಗಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಚಿತ್ರ ಇದಾಗಿದ್ದು ಈ ಚಿತ್ರದ ಛಾಯಾಗ್ರಹಣ ಮತ್ತು ನಿರ್ದೇಶನದ ಹೊಣೆಯನ್ನು ಹೊತ್ತಿರುವವರು ‘ಮೈನೇಮ್ ಈಸ್ ಅಣ್ಣಪ್ಪ’ ಚಿತ್ರದ ನಿರ್ದೇಶಕ, ಮಯೂರ್.ಆರ್.ಶೆಟ್ಟಿ. ಇವರು ಎಕ್ಕಸಕ, ಪಿಲಿಬೈಲ್ ಯಮುನಕ್ಕ ಸೇರಿದಂತೆ ಹಲವಾರು ತುಳು ಕನ್ನಡ ಚಿತ್ರಗಳಿಗೆ ಸಹನಿರ್ದೇಶಕರಾಗಿ, ಛಾಯಾಗ್ರಾಹಕರಾಗಿ, ಚಿತ್ರ ಸಾಹಿತಿಯಾಗಿ ಹೆಸರ ಮಾಡಿರುತ್ತಾರೆ. ತುಳುನಾಡಿನ ಸಂಸ್ಕೃತಿ, ಆಚರಣೆ ಮತ್ತು ನಂಬಿಕೆಗಳಲ್ಲಿ ಒಂದಾಗಿರುವ ಹುಲಿ ಕುಣಿತದ ಕಥಾವಸ್ತುವನ್ನು ಹೊಂದಿರುವಂತಹ ಚಿತ್ರ ‘ಪಿಲಿ’. ತುಳುನಾಡಿನಲ್ಲಿ ಹುಲಿಕುಣಿತಕ್ಕೆ ಅದರದ್ದೇ ಆದ ಗೌರವ ಮತ್ತು ಇತಿಹಾಸ ಇದೆ. ಆ…
ಮೂಡಬಿದಿರೆ ಆಳ್ಚಾಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ ಸುಧಾರಾಣಿ ಶೆಟ್ಟಿ ಅವರ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿ.ಎಚ್.ಡಿ ಪದವಿ ನೀಡಿದೆ
ಮೂಡಬಿದಿರೆ ಆಳ್ಚಾಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕಿ, ಕಟ್ಲ ದಾಮೋದರ ಶೆಟ್ಟಿ ಮತ್ತು ಸುಶೀಲಾ ಶೆಟ್ಟಿ ದಂಪತಿಯ ಪುತ್ರಿಯಾದ ಸುಧಾರಾಣಿ ಶೆಟ್ಟಿ ಅವರ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿ.ಎಚ್.ಡಿ ಪದವಿ ನೀಡಿದೆ. ಮಂಗಳೂರು ವಿ.ವಿ ಎಸ್.ವಿ.ಪಿ. ಅಧ್ಯಯನ ಸಂಸ್ಥೆಯ ಸಹ ಪ್ರಾಧ್ಯಾಪಕ ಹಾಗೂ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಂಯೋಜಕ ಡಾ. ನಾಗಪ್ಪ ಗೌಡ ಅವರ ಮಾರ್ಗದರ್ಶನದಲ್ಲಿ ಇವರು ತುಳು ಅನುವಾದ ವಾಙ್ಮಯ ಸಾಂಸ್ಕೃತಿಕ ಅನುಸಂಧಾನದ ನೆಲೆಗಳು ಎಂಬ ಸಂಶೋಧನಾ ಮಹಾಪ್ರಬಂಧ ಮಂಡಿಸಿದ್ದರು. ಸುರತ್ಕಲ್ ಗೋವಿಂದ ದಾಸ ಕಾಲೇಜ್ ನ ಹಳೇ ವಿದ್ಯಾರ್ಥಿಯಾದ ಸುಧಾರಾಣಿ ಶೆಟ್ಟಿಯವರಿಗೆ ಸಮಸ್ತ ಬಂಟ ಸಮಾಜದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.
ಜ್ಞಾನ ಸರೋವರ ಅಂತರಾಷ್ಟ್ರೀಯ ವಸತಿ ಶಾಲೆಯಲ್ಲಿ ದಿನಾಂಕ 1.11.2023 ರಂದು 68ನೇ ಕರ್ನಾಟಕ ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲಾಯಿತು. ಮೈಸೂರು ರಾಜ್ಯವು (ಈಗಿನ ಕರ್ನಾಟಕ) ೧೯೫೬ರ ನವೆಂಬರ್ ೧ ರಂದು ನಿರ್ಮಾಣವಾದುದರ ಸಂಕೇತವಾಗಿ ಈ ರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಎಲ್ಲಾ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಿದ ಈ ದಿನವನ್ನು ಕನ್ನಡಿಗರು ನಾಡ ಹಬ್ಬವನ್ನಾಗಿ ಆಚರಿಸುತ್ತಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಧ್ವಜಾರೋಹಣವನ್ನು ನೆರವೇರಿಸಿ ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸುವುದರ ಮುಖಾಂತರ ಶಾಲೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸುಧಾಕರ ಎಸ್ ಶೆಟ್ಟಿಯವರು ಕರ್ನಾಟಕ ರಾಜ್ಯೋತ್ಸವವನ್ನು ಕುರಿತು ಮಾತನಾಡಿದರು. ಸ್ವತಃ ಹೆತ್ತ ತಾಯಿ ಮತ್ತು ನಾಡಿನ ಬಗ್ಗೆ ಅಪಾರವಾದ ಅಭಿಮಾನವನ್ನು ಹೊಂದಿರುವ ಸುಧಾಕರ ಶೆಟ್ಟಿ ಅವರು ಕನ್ನಡ ನಾಡು, ನುಡಿ, ಆಚಾರ, ವಿಚಾರಗಳ ಬಗ್ಗೆ ಮಾತನಾಡುತ್ತಾ ರಾಷ್ಟ್ರವನ್ನು ಮೊದಲು ಆಳ್ವಿಕೆ ಮಾಡಿದ ಮನೆತನದ ಬಗ್ಗೆ ತಿಳಿಸುತ್ತಾ, ಪ್ರತಿಯೊಬ್ಬ ಕನ್ನಡಿಗನು ನಮ್ಮ ನಾಡು, ನುಡಿಯ ಬಗ್ಗೆ ಹೆಮ್ಮೆ ಮತ್ತು ಪ್ರೀತಿಯನ್ನು ಹೊಂದಿರಬೇಕು ಎಂದು…
ದಕ್ಷಿಣ ಕನ್ನಡ ರೋಲರ್ ಸ್ಪೋರ್ಟ್ಸ್ ಅಸೋಸಿಯೇಶನ್ ಹೊಯ್ಗೆಬೈಲ್ ಬಳಿಯ ಸ್ಕೇಟಿಂಗ್ ಮೈದಾನದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ಸ್ಪೀಡ್ ರೋಲರ್ ಸ್ಕೇಟಿಂಗ್ ನಲ್ಲಿ ಕುಳಾಯಿ ರಯಾನ್ ಸ್ಕೂಲ್ ನ ವಿದ್ಯಾರ್ಥಿ ಅಕ್ಷರ್ ಜೆ ಶೆಟ್ಟಿ ಸುರತ್ಕಲ್ ಕ್ವಾಡ್ 1 ಲ್ಯಾಪ್ ರೋಡ್ ರೇಸ್ ನಲ್ಲಿ ಚಿನ್ನದ ಪದಕ ಗಳಿಸಿ, ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾನೆ. ಅಕ್ಷರ್ ಜೆ ಶೆಟ್ಟಿ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಮತ್ತು ಹೆಚ್ ಪಿಸಿಎಲ್ ಉದ್ಯೋಗಿ ಚಿತ್ರಾ ಜೆ ಶೆಟ್ಟಿಯವರ ಪುತ್ರ. ಈತ ಅನಘ ಸ್ಕೇಟಿಂಗ್ ಅಕಾಡೆಮಿಯ ವಿದ್ಯಾರ್ಥಿಯಾಗಿದ್ದು, ದೀಪಾಂಶು ಅವರಿಂದ ತರಬೇತಿ ಪಡೆಯುತ್ತಿದ್ದಾನೆ. ಸಾಧಕ ಸ್ಕೇಟಿಂಗ್ ಪಟುಗಳಿಗೆ ಮೇಯರ್ ಸುಧೀರ್ ಶೆಟ್ಟಿ ಪ್ರಶಸ್ತಿ ವಿತರಿಸಿದರು. ಕಾರ್ಪೋರೇಟರ್ ಗಣೇಶ್ ಕುಲಾಲ್, ದ.ಕ. ರೋಲರ್ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ಫ್ರಾನ್ಸಿಸ್ ಕೊನ್ಸೆಸೋ, ಕಾರ್ಯದರ್ಶಿ ಮಹೇಶ್ ಕುಮಾರ್, ಪ್ರವೀಣ್ ಕುಮಾರ್, ಸಂತೋಷ್ ಶೆಟ್ಟಿ, ಜಯರಾಜ್, ಲೆಸ್ಟರ್ ಡಿ ಸೋಜ, ಉಮೇಶ್ ಗಟ್ಟಿ, ಅರ್ಶದ್ ಮತ್ತು ಮುಖ್ಯ ತೀರ್ಪುಗಾರ ಅಂತೋಣಿ ಜೇಮ್ಸ್ ಉಪಸ್ಥಿತರಿದ್ದರು.
“ಬಂಟ ಸಮಾಜ ಒಗ್ಗಟ್ಟಿನಿಂದಿರುವುದು ಅನಿವಾರ್ಯ” – ಕನ್ಯಾನ ಸದಾಶಿವ ಶೆಟ್ಟಿ ಗುರುಪುರ ಬಂಟರ ಮಾತೃಸಂಘದ “ದಶಮಾನೋತ್ಸವ ಸಮಾರಂಭ”ವು ವಾಮಂಜೂರಿನ ‘ಚರ್ಚ್ ಸಭಾಂಗಣ’ದಲ್ಲಿ ದಿನಾಂಕ 16-07-2023ನೇ ಆದಿತ್ಯವಾರದಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.), ಮಂಗಳೂರು, ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಮಂಗಳೂರು, ಬೆಂಗಳೂರು ಬಂಟರ ಸಂಘ (ರಿ.), ಹಾಗೂ ಇಂಟರ್ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ಮಂಗಳೂರು ಇದರ ಸಹಯೋಗದೊಂದಿಗೆ ಬಹಳ ವಿಜೃಂಭಣೆಯಿಂದ ನೆರವೇರಿತು. ಈ ಸಮಾರಂಭದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ಯಾನ ಸದಾಶಿವ ಶೆಟ್ಟಿಯವರು “ಬಂಟ ಸಮಾಜ ಒಗ್ಗಟ್ಟಿನಿಂದ ಇರಬೇಕು. ಮಂಗಳೂರಿನ ಬಂಟರ ಯಾನೆ ನಾಡವರ ಮಾತೃ ಸಂಘದಲ್ಲಿ ಸುಸಜ್ಜಿತವಾದ ಬಂಟರ ಭವನ ನಿರ್ಮಾಣ ಆಗಬೇಕು. ಇದಕ್ಕಾಗಿ ನಾನು ಸಮಾಜದ ಪ್ರಮುಖರನ್ನು ಸೇರಿಸಿ ಅತೀ ಶೀಘ್ರದಲ್ಲಿ ಒಂದು ಸಭೆಯನ್ನು ಕರೆದು ದೊಡ್ಡ ಮಟ್ಟದ ಸಮಾಲೋಚನೆಯನ್ನು ಮಾಡಿ ಈ ಬಗ್ಗೆ ತೀರ್ಮಾನವನ್ನು ಕೈಗೊಳ್ಳುತ್ತೇನೆ” ಎಂಬ ಭರವಸೆಯನ್ನು ನೀಡಿದರು. “ಗುರುಪುರ ಬಂಟರ ಮಾತೃಸಂಘದ ದಶಮಾನೋತ್ಸವ ಸಮಾರಂಭವು ಅತ್ಯಂತ…
“ಮಳೆ ಇದ್ದರೆ ಇಳೆ, ಇಳೆ ಇದ್ದರೆ ಬೆಳೆ’ ಎನ್ನುವ ಧ್ಯೇಯ ವಾಕ್ಯದಂತೆ ಮಳೆ ನೀರಿನ ಮಹತ್ವವನ್ನು ಚೆನ್ನಾಗಿಯೇ ಅರಿತಿರುವ ವಕ್ವಾಡಿಯ ಗುರುಕುಲ ಶಿಕ್ಷಣ ಸಂಸ್ಥೆಯು ತನ್ನ 42 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಮಳೆ ನೀರನ್ನು ಸಂಗ್ರಹಿಸಿಡುವ ಮಹತ್ಕಾರ್ಯ ಮಾಡುತ್ತಿದ್ದು, ಆ ಮೂಲಕ ಮಕ್ಕಳಿಗೂ ಜಲ ಸಾಕ್ಷರತೆಯ ಪಾಠವನ್ನು ಮಾಡುತ್ತಿದೆ. ಗುರುಕುಲ ಶಿಕ್ಷಣ ಸಂಸ್ಥೆಯು ನಮ್ಮ ಸಂಸ್ಕೃತಿ, ದೇಶಿಯ ಚಿಂತನೆಗಳು, ಪ್ರಾಚೀನ ಶಿಕ್ಷಣ ಪದ್ಧತಿಗೆ ಆದ್ಯತೆ ನೀಡಿರುವುದು ಮಾತ್ರವಲ್ಲದೆ, ಪರಿಸರಕ್ಕೆ ಪೂರಕವಾದ ಹತ್ತಾರ ಮಾರ್ಗೋಪಾಯಗಳನ್ನು ಕೈಗೊಳ್ಳುವ ಮೂಲಕವು ಮಹತ್ತರವಾದ ಕೊಡುಗೆಯನ್ನು ನೀಡುತ್ತಿದೆ. ಫಲ ಕೊಟ್ಟ ಇಂಗುಗುಂಡಿ ಶಾಲಾ ಕಟ್ಟಡ, ಕಚೇರಿ ಕಟ್ಟಡ, ಹಾಸ್ಟೆಲ್ ಕಟ್ಟಡಗಳಿಂದ ಬೀಳುವ ಮಳೆ ನೀರನ್ನು 4 ಕಡೆಗಳಲ್ಲಿ ಇಂಗು ಗುಂಡಿ ಹಾಗೂ 2 ಕಡೆಗಳಲ್ಲಿ ಬೃಹತ್ತಾದ ಇಂಗು ಬಾವಿಗಳಿಗೆ ಬಿಡುವ ವ್ಯವಸ್ಥೆಯನ್ನು ಮಾಡಿದ್ದು, ಇದರಿಂದ ಬೇಸಗೆಯಲ್ಲಿ ಇಲ್ಲಿರುವ ಬಾವಿಗಳು, ಬೋರ್ವೆಲ್ಗಳಲ್ಲಿ ನೀರಿನ ಮಟ್ಟವು ಉತ್ತಮವಾಗಿದೆ. ಇಲ್ಲಿ ನೀರಿನ ಸಮಸ್ಯೆಯೇ ಎದುರಾಗಿಲ್ಲ. ತ್ಯಾಜ್ಯ ನೀರು ಶುದ್ಧಿಕರಿಸಿ ಬಳಕೆ ಇನ್ನು ಹಾಸ್ಟೆಲ್ಗಳಲ್ಲಿನ…
ಜಾನಪದ ಜನಜೀವನದ ಜೀವಾಳವಾಗಿದೆ : ಚಂದ್ರಹಾಸ ಕೆ.ಶೆಟ್ಟಿ (ಚಿತ್ರ / ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ, ಎ.16: ಜನಜೀವನದಲ್ಲಿ ಜಾನಪದ ಜೀವಾಳವಾಗಿದೆ. ಜಾನಪದದ ವಿಶೇಷತೆ ಸಾಂಸ್ಕೃತಿಕವಾಗಿ ರೂಪುಗೊಂಡಿದೆ. ಜಾನಪದ ಅನ್ನೋದು ಮನುಕುಲದ ಜೀವನವಾಗಿದೆ. ಆದರೆ ಕಾಲಕ್ರಮೇಣ ಇದರ ಅರಿವು ಕ್ಷಿಣಿಸುತ್ತಿರುವುದು ಸಮಂಜಸವಲ್ಲ. ಇಂತಹ ಸಮಯದಲ್ಲಿ ಈ ಜಾನಪದ ಪರಿಷತ್ತು ಜನರೆಲ್ಲರನ್ನೂ ಒಗ್ಗೂಡಿಸಿ ಜಾನಪದ ಸೊಡಗನ್ನು ನವಜನಾಂಗಕ್ಕೆ ಪರಿಚಯಿಸಿ ಬೆಳೆಸುತ್ತಿರುವ ಕಾಯಕ ಶ್ಲಾಘನೀಯವಾಗಿದೆ. ಇದೊಂದು ಉತ್ತಮ ಸೇವೆಯಾಗಿದೆ ಎಂದು ಬಂಟ್ಸ್ ಸಂಘ ಮುಂಬಯಿ ಅಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ತಿಳಿಸಿದರು. ಕರ್ನಾಟಕ ಜಾನಪದ ಪರಿಷತ್ತು (ರಿ.) ಬೆಂಗಳೂರು ಇದರ ಮಹಾರಾಷ್ಟ್ರ ಘಟಕವು ಇಂದಿಲ್ಲಿ ಭಾನುವಾರ ಅಪರಾಹ್ನ ಕುರ್ಲಾ ಪೂರ್ವದಲ್ಲಿನ ಬಂಟರ ಭವನದ ಶ್ರೀಮತಿ ರಾಧಾಬಾಯಿ ತಿಮ್ಮಪ್ಪ ಭಂಡಾರಿ ಸಭಾಗೃಹದ ಕಂಬಿಹಳ್ಳಿ ಶ್ರೀಮತಿ ಅಪ್ಪಿ ಕೃಷ್ಣ ಶೆಟ್ಟಿ ವೇದಿಕೆಯಲ್ಲಿ ಸುವರ್ಣ ಕರುನಾಡ ಸನಾತನ ಸಂಸ್ಕೃತಿಯ ಮೇರು ಕಲಾಪ್ರಕಾರಗಳ ಚಿಂತನ-ಮಂಥನ-ಗಾಯನ-ನರ್ತನ-ಸಮಗ್ರ ಸಂಗಮಗಳ ಜಾನಪದ ಕಲಾ ಮಹೋತ್ಸವ ಸಂಭ್ರಮಿಸಿದ್ದು ದೀಪ ಬೆಳಗಿಸಿ ಮಹೋತ್ಸವಕ್ಕೆ ಚಾಲನೆಯನ್ನಿತ್ತು ಚಂದ್ರಹಾಸ ಶೆಟ್ಟಿ…
ಸಾಮಾನ್ಯವಾಗಿ ಮಕ್ಕಳು ಉದ್ಯೋಗ ಪಡೆದು ಉನ್ನತ ಮಟ್ಟದಲ್ಲಿ ಇರಬೇಕೆಂಬುದು ಸಾಧರಣ ಎಲ್ಲಾ ತಂದೆ ತಾಯಂದಿರ ಬಯಕೆ. ಅನಿವಾಸಿ ಭಾರತೀಯರಿಗೆ ತಂದೆ ತಾಯಿ ಕುಟುಂಬ ಬಂಧು ಮಿತ್ರರೊಂದಿಗೆ ಕೂಡಲು ಸಮಯ ಸಿಗುವುದೇ ವಿರಳ. ಹಾಗೆಂದು ಮಕ್ಕಳನ್ನು ಕಾಣಲು- ಕೂಡಲು ಸ್ವತಃ ತಂದೆ ತಾಯಂದಿರು ವಿದೇಶಕ್ಕೆ ಹೋಗಿ ಬರುವುದಿದೆ. ಅಂತಹ ಒಂದು ಸಮಯವನ್ನು ಅವಿಸ್ಮರಣೀಯನ್ನಾಗಿಸಿದ ವಿಶಿಷ್ಟ ಕಾರ್ಯಕ್ರಮವೊಂದು ಬರ್ ದುಬೈಯಲ್ಲಿ ನಡೆಯಿತು. ಮಗಳನ್ನು ಕಾಣಲೆಂದು ಊರಿಂದ ಬಂದ ತಂದೆ ಈ ಸಂಸಾರದ ಹಾಗೂ ನಾಡಿನ ಅಂದ ಚಂದ ನೋಡಿ ಮೈಮರೆಯುವುದರೊಳಗೆ ತನ್ನ ತಂದೆಗೆ ಗೊತ್ತಿಲ್ಲದಂತೆ ಬಂಧು ಮಿತ್ರರನ್ನು ಒಂದೆಡೆ ಸೇರಿಸಿಕೊಂಡು ಆಪ್ತ ಸನ್ಮಾನ ಏರ್ಪಡಿಸಿದ ವಿಶೇಷ ಕಾರ್ಯಕ್ರಮವೊಂದು ಇತ್ತೀಚೆಗೆ ಜರಗಿ ವೈಶಿಷ್ಟತೆ ಮೆರೆಯಿತು. ನಗರದ ಬರ್ ದುಬೈನಲ್ಲಿ ನೆಲೆಸಿರುವ ಶ್ರೀಮತಿ ಅಶ್ವಿನಿ ಪುರಂದರ ಶೆಟ್ಟಿಯವರು ತನ್ನ ಏಳಿಗೆಗೆ ಕಾರಣೀಭೂತರಾದ ತಂದೆಗೆ ಅಚಾನಕ್ ಒಂದು ಗೌರವಾರ್ಪಣೆ ಏರ್ಪಡಿಸಿದ ಕಾರ್ಯಕ್ರಮಕ್ಕೆ ಹಲವಾರು ಬಂಧು ಬಾಂಧವರು ಸಾಕ್ಷಿಯಾದರು. ಕಳೆದ 34 ವರ್ಷಗಳಿಂದ ಬೆಳಗಾಂ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಅಶ್ವಿನಿ…