Author: admin
ಸಂಘಟನೆಯೆನ್ನುವುದು ಒಂದು ರಥದಂತೆ. ಆ ರಥವನ್ನು ಒಬ್ಬರೋ ಇಬ್ಬರೋ ಎಳೆಯಲು ಸಾಧ್ಯವಿಲ್ಲ. ಸಮಾಜದ ಎಲ್ಲರೂ ಒಂದಾಗಿ ಆ ರಥವನ್ನು ಎಳೆದಾಗ ಆ ರಥ ಸರಾಗವಾಗಿ ಸಾಗಿ ರಥೋತ್ಸವ ಯಶಸ್ವಿಯಾಗುತ್ತದೆ ಎಂದು ಬಹರೈನ್ ದ್ವೀಪದ ಅನಿವಾಸಿ ಬಂಟರ ಸಂಘಟನೆಯ ಇಪ್ಪತ್ತನೇ ವಾರ್ಷಿಕೋತ್ಸವದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕಾಪು ವಿಧಾನಸಭಾ ಕ್ಷೇತ್ರದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಸಮ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಕಳೆದ ಇಪ್ಪತ್ತು ವರುಷಗಳಿಂದ ಸಮಾಜದ ನೋವು ನಲಿವುಗಳಿಗೆ ಸ್ಪಂದಿಸುತ್ತಾ ದ್ವೀಪದ ಬಂಟ ಬಾಂಧವರನ್ನು ತನ್ನ ಮುಖ್ಯವಾಹಿನಿಯಲ್ಲಿ ಸೇರಿಸಿಕೊಂಡು ಕಾರ್ಯ ನಿರ್ವಹಿಸುತ್ತಾ ಬಂದಿರುವ ಬಂಟ್ಸ್ ಬಹರೈನ್ ಸಂಘಟನೆಯ ಪ್ರಸಕ್ತ ಅಧ್ಯಕ್ಷರಾಗಿರುವ ಸೌಕೂರು ಅರುಣ್ ಶೆಟ್ಟಿಯವರ ಸಾರಥ್ಯದಲ್ಲಿ ಇಲ್ಲಿನ ಪಂಚತಾರಾ ಹೊಟೇಲ್ ಕ್ರೌನ್ ಪ್ಲಾಜಾದ ಸಭಾಂಗಣದಲ್ಲಿ ಇಪ್ಪತ್ತನೆಯ ವಾರ್ಷಿಕೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಬಂಟ ಸಮುದಾಯದ ಸಾಧಕರಾದ ಸಮಾಜ ಸೇವಕರೂ, ಕಾಪು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರೂ ಆಗಿರುವ ಗುರ್ಮೆ ಸುರೇಶ್ ಶೆಟ್ಟಿ, ತುಳು, ಕನ್ನಡ ಚಲನಚಿತ್ರ ರಂಗದ ಖ್ಯಾತ…
ಮೂಲತಃ ಕರ್ನಾಟಕದಿಂದ ಬಂದು ಕರ್ಮ ಭೂಮಿಯಾದ ಈ ಮಹಾರಾಷ್ಟ್ರದಲ್ಲಿ ತನ್ನ ಅಚಲ ಪರಿಶ್ರಮದೊಂದಿಗೆ ಒರ್ವ ಯಶಸ್ವೀ ಉದ್ಯಮಿಯಾಗಿ, ರಾಜಕೀಯ ನೇತಾರನಾಗಿ, ಜನರ ಸುಖ-ದುಖಃಗಳಲ್ಲಿ ಭಾಗಿಯಾಗಿ ಸಮಾಜ ಸೇವೆ ಮಾಡುತ್ತಿರುವ ಅರವಿಂದ್ ಶೆಟ್ಟಿಯವರ ಜೀವನದ ನಡೆ ನುಡಿಯ ಹಾದಿ ಶ್ಲಾಘನೀಯ. ಪರಿವಾರದ ಸದಾ ಪ್ರೋತ್ಸಾಹದಿಂದ ಅರವಿಂದ ಶೆಟ್ಟಿಯವರು ಇಂದು ಯಶಸ್ವೀ ರಾಜಕೀಯ ನೇತಾರನಾಗಿ ಮುಂದುವರಿಯುತ್ತಿರುವುದು ಸಂತೋಷದಾಯಕವಾಗಿದೆ. ದೇವರ ಅನುಗ್ರಹದ ಸಾಕಾರದಿಂದ ಅರವಿಂದ ಶೆಟ್ಟಿಯವರು ಇಂದು ಉನ್ನತ ಸ್ಥಾನಮಾನವನ್ನು ಪಡೆದಿದ್ದಾರೆ. ಅರವಿಂದ ಶೆಟ್ಟಿಯವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದಲ್ಲಿ ಮಹಾದಾನಿಯಾಗಿದ್ದು ದಾನರೂಪದ ಹಣದಿಂದ ಸಮಾಜದ ಒಳಿತಿಗಾಗಿ ವಿನಿಯೋಗಿಸಲಾಗುತ್ತಿದೆ. ಹೀಗೆ ಉಳ್ಳವರ ಮಹಾದಾನದಿಂದ ಹಿಂದುಳಿದ ವರ್ಗದ ಜನತೆಯ ಶ್ರೇಯೋಭಿವೃದ್ದಿಗಾಗಿ ವಿನಿಯೋಗಿಸಲಾಗುತ್ತಿದೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ನುಡಿದರು. ಅವರು ಇಲ್ಲಿನ ಕನಕಿಯ ರೋಡ್ ನಲ್ಲಿರುವ ಶೆಹಣಾಯಿ ಸಭಾಗೃಹದಲ್ಲಿ ಮೀರಾ ಭಯಂದರ್ ದಕ್ಷಿಣ ಭಾರತೀಯ ಬಿಜೆಪಿ ಘಟಕ ಮತ್ತು ಸ್ಥಳೀಯ ಸಂಘ ಸಂಸ್ಥೆಗಳು ಆಯೋಜಿಸಿದ ಉದ್ಯಮಿ ಹಾಗೂ ರಾಜಕೀಯ ನೇತಾರ…
ಟಿವಿ ವರದಿಗಾರರಿಗೆ ಮೂರು ‘ಸಿ’ ಮುಖ್ಯ: ಪ್ರಕಾಶ್ ಡಿ. ರಾಂಪುರ ವಿದ್ಯಾಗಿರಿ: ‘ಯಶಸ್ವಿ ಟಿವಿ ವರದಿಗಾರರಾಗಲು ಮೂರು ‘ಸಿ’ ಬಹುಮುಖ್ಯ. ವಿಷಯ (ಕಂಟೆಂಟ್), ಸಂಪರ್ಕ (ಕಾನ್ಟ್ಯಾಕ್ಟ್ಸ್) ಹಾಗೂ ಸಂವಹನ (ಕಮ್ಯುನಿಕೇಷನ್)ದಿಂದ ಉತ್ತಮ ವರದಿ ನೀಡಬಹುದು’ ಎಂದು ಪಬ್ಲಿಕ್ ಟಿವಿ ವರದಿಗಾರ ಪ್ರಕಾಶ್.ಡಿ.ರಾಂಪುರ ಅಭಿಪ್ರಾಯ ವ್ಯಕ್ತಪಡಿಸಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಅಭಿವ್ಯಕ್ತಿ ವೇದಿಕೆ ಶುಕ್ರವಾರ ಹಮ್ಮಿಕೊಂಡ ‘ಹಿರಿಯ ವಿದ್ಯಾರ್ಥಿ ಜೊತೆ ಸಂವಾದ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ವಿದ್ಯಾರ್ಥಿ ದೆಸೆಯಲ್ಲಿ ಪತ್ರಿಕೋದ್ಯಮದ ವಿವಿಧ ಕೌಶಲಗಳನ್ನು ಕರಗತ ಮಾಡಿಕೊಳ್ಳಬೇಕು. ಒಂದು ಕೌಶಲಕ್ಕೆ ಸೀಮಿತವಾಗಬೇಡಿ. ಎಲ್ಲವನ್ನು ಕಲಿತಾಗ ಒಂದರಲ್ಲಿ ಯಶಸ್ಸು ಸಾಧಿಸಲು ಸಾಧ್ಯ’ ಎಂದರು. ‘ವೃತ್ತಿಯಲ್ಲಿ ಆತ್ಮವಿಶ್ವಾಸ ಮುಖ್ಯ. ಪತ್ರಿಕೋದ್ಯಮದಲ್ಲಿ ಕೆಲವೊಮ್ಮೆ ಭಂಡ ಧೈರ್ಯ ಬೇಕಾಗುತ್ತದೆ. ಛಲದಿಂದ ಮುಂದಡಿ ಇಡಬೇಕು’ ಎಂದು ಅವರು ತಮ್ಮ ಅನುಭವಗಳನ್ನು ಬಿಚ್ಚಿಟ್ಟರು. ರಕ್ಷಣಾ ಸಚಿವಾಲಯದಿಂದ ಅಧಿಕೃತವಾಗಿ ಯುದ್ಧ ವರದಿಗಾರಿಕೆಗೆ ತರಬೇತಿ ಪಡೆದ ಕುರಿತು ವಿವರಿಸಿದ ಅವರು, ‘ಭಾರತೀಯ ರಕ್ಷಣಾ ಮಂತ್ರಾಲಯವು ಯುದ್ಧ ವರದಿಗಾರಿಕೆ ಸಂದರ್ಭದಲ್ಲಿ…
ಕೃಷ್ಣಾಪುರ–ಕಾಟಿಪಳ್ಳ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ 45ನೇ ಗಣೇಶೋತ್ಸವದ ಪ್ರಯುಕ್ತ ಕೃಷ್ಣಾಪುರ ಯುವಕ ಮಂಡಲವು ಕೇಂದ್ರ ಮೈದಾನದಲ್ಲಿ ಯಕ್ಷಗಾನ ಸ್ಪರ್ಧೆಯನ್ನು ಏರ್ಪಡಿಸಿತ್ತು. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಆಹ್ವಾನಿತ ಕಾಲೇಜು ಯಕ್ಷತಂಡಗಳ ಅಂತರ್ ಜಿಲ್ಲಾ, ಅಂತರ್ ಕಾಲೇಜು ತೆಂಕುತಿಟ್ಟಿನ ಯಕ್ಷಗಾನ ಸ್ಪರ್ಧೆಯು ದಿನಾಂಕ 10-09-2023ರಂದು ಜರಗಿತು. ಈ ಕಾರ್ಯಕ್ರಮವನ್ನು ಪಟ್ಲ ಫೌಂಡೇಶನ್ ಯಕ್ಷಧ್ರುವ ಯಕ್ಷ ಶಿಕ್ಷಣದ ಪ್ರಧಾನ ಸಂಚಾಲಕರಾದ ಪಣಂಬೂರು ವಾಸುದೇವ ಐತಾಳ್ ಉದ್ಘಾಟಿಸಿ ಮಾತನಾಡುತ್ತಾ “ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಕಲೆಗಳ ಅಧ್ಯಯನ ಹಾಗೂ ಕಾರ್ಯ ವಿಸ್ತಾರಕ್ಕೆ ಮಹತ್ವ ನೀಡಲಾಗಿದ್ದು, ಯಕ್ಷ ಶಿಕ್ಷಣ ಪರಿಗಣನೆಗೆ ಸೂಕ್ತವಾಗಿದೆ. ಯಕ್ಷಗಾನ ಸರ್ವಾಂಗ ಸುಂದರ ಕಲೆ, ಕಲಾ ಪೋಷಣೆಗೆ ಪ್ರೇಕ್ಷಕರ ಪ್ರೋತ್ಸಾಹವು ಅಗತ್ಯ. ಪಟ್ಲ ಫೌಂಡೇಶನ್ ವತಿಯಿಂದ 37 ಶಾಲೆಗಳಲ್ಲಿ ಉಚಿತ ಯಕ್ಷ ಶಿಕ್ಷಣ ಪ್ರಾರಂಭಗೊಂಡಿದ್ದು, ಮುಂದಿನ 10 ವರ್ಷಗಳಲ್ಲಿ 15,000 ವಿದ್ಯಾರ್ಥಿಗಳಿಗೆ ಯಕ್ಷಗಾನವನ್ನು ಕಲಿಸುವ ಗುರಿಯಿದೆ” ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ…
ಕಡಲು ಅಲೆಗಳ ಅಬ್ಬರದ ಹಿಮ್ಮೆಳದ ತೆಂಗಿನ ಮರಗಳ ಸಾಲು ಸಾಲು, ಭತ್ತದ ಪೈರಿನಿಂದ ನಳ ನಳಿಸುವ ಗದ್ದೆ , ಪಶ್ಚಿಮ ಘಟ್ಟದ ಗುಡ್ಡ ಕಾಡುಗಳಿಂದ ಆವೃತವಾದ ಹಸಿರು ಸಿರಿಯ ಕಡಲು ನದಿಗಳ ಸುಂದರ ಸಂಗಮದ ಕುಂದಾಪುರದ ಆಸುಪಾಸಿನ ಊರುಗಳ ಮನೆಯಲ್ಲಿ ಶ್ರಾವಣ ತಿಂಗಳಲ್ಲಿ ಹೊಸ್ತಿಲು ಪೂಜಿಸುವ ವಿಶೇಷ ಸಂಪ್ರದಾಯದೊಂದಿಗೆ ಹೊಸ್ಲಜ್ಜಿ ಓಡಿಸುವ ಜನಪದ ಹಿನ್ನಲೆಯ ವಿಶಿಷ್ಟ ಆಚರಣೆಯೊಂದು ತನ್ನ ಅಸ್ತಿತ್ವ ಕಳೆದುಕೊಳ್ಳದೆ ಇಂದಿಗೂ ಸರಳ ಶೈಲಿಯಲ್ಲಿ ಆಚರಣೆಯಲ್ಲಿದೆ. ಶ್ರಾವಣ ಸಂಕ್ರಮಣದಿಂದ ತಿಂಗಳಿಡಿ ಮನೆಯಲ್ಲಿ ಹೊಸ್ತಿಲು ಪೂಜೆ ಮಾಡಿ ಅಜ್ಜಿಯನ್ನು ಆಹ್ವಾನಿಸಲಾಗುತ್ತದೆ. ಹೊಸ್ತಿಲಿಗೆ ಸೇಡಿ ಬರೆದು ಅಂದರೆ ರಂಗೋಲಿ ಹಾಕಿ ಸೋಣೆ ಹೂ ಹಾಗೂ ಅಜ್ಜಿ ಹೂ ಒಳ ಮುಖವಾಗಿರಿಸಿ, ಹಲಸಿನ ಎಲೆಯಲ್ಲಿ ಅರಶಿನ, ಶ್ರೀ ಗಂಧ ತೇಯ್ದುದನ್ನು ಹೊಸ್ತಿಲಿಗೆ ಇಟ್ಟು, ಹೊಸ್ತಿಲಿಗೆ ನಮಿಸಿ ದೀಪ ದೂಪ ಹಾಕಿ ಅಜ್ಜಿಯನ್ನು ಮನೆ ಒಳಗೆ ಬರ ಮಾಡಿಕೊಳ್ಳವುದು ವಾಡಿಕೆ. ಅಜ್ಜಿಯೇ ಚಿನ್ನದ ಬಟ್ಟಲನ್ನು ಬೆಳ್ಳಿಯ ಕೋಲಿನಲ್ಲಿ ಬಾರಿಸುತ್ತಾ ಗಂಟೆ ನಿನಾದದೊಂದಿಗೆ ಬಾ.. ಎಂದು ಅಜ್ಜಿಯನ್ನು…
‘ಅನುಭವ ಪಾಠಕ್ಕೆ ಜಾಂಬೂರಿ ಅತ್ಯುತ್ತಮ ಅವಕಾಶ’ ಮಂಗಳೂರು: ‘ವಿದ್ಯಾರ್ಥಿಗಳು ಅನುಭವದ ಮೂಲಕ ಜೀವನದ ಉತ್ತಮ ಪಾಠ ಕಲಿಯಬೇಕಿದ್ದು, ಜಾಂಬೂರಿ ಅತ್ಯುನ್ನತ ಅವಕಾಶ’ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು. ದಕ್ಷಿಣ ಕೊರಿಯಾದಲ್ಲಿ ಆಗಸ್ಟ್ 1ರಿಂದ 12ರ ವರೆಗೆ ನಡೆಯಲಿರುವ ವಿಶ್ವ ಜಾಂಬೂರಿಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಮಂಗಳೂರಿನ ಜಿಲ್ಲಾ ಸ್ಕೌಟ್ಸ್ ವiತ್ತು ಗೈಡ್ಸ್ ಭವನದಲ್ಲಿ ಸೋಮವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ಕ ಕರ್ನಾಟಕ ಸಂಸ್ಥೆ ಹಾಗೂ ಜಿಲ್ಲಾ ಸಂಸ್ಥೆ ಹಮ್ಮಿಕೊಂಡ ‘ಬೀಳ್ಕೊಡುಗೆ ಸಮಾರಂಭ’ದಲ್ಲಿ ಅವರು ಸೋಮವಾರ ಮಾತನಾಡಿದರು. ಜಾಂಬೂರಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರವನ್ನು ಪ್ರತಿನಿಧಿಸುತ್ತಿದ್ದು ತಮ್ಮ ಅನುಭವದಿಂದ ಉತ್ತಮ ಪಾಠ ಕಲಿಯಬೇಕಿದೆ ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಶಿಸ್ತು, ಸೇವಾ ಮನೋಭಾವ ಹಾಗೂ ಸ್ನೇಹ ಸೌಹಾರ್ದತೆ ಮೈಗೂಡಿಸಿಕೊಳ್ಳಬೇಕು. ಕಠಿಣ ಪರಿಸ್ಥಿತಿಯನ್ನು ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಹಿತವಚನ…
ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಸಿರಿಧಾನ್ಯಗಳು ಬಳಕೆಯಲ್ಲಿದ್ದವು. ವೇದಗಳಲ್ಲಿ ಕೆಲವು ಸಿರಿಧಾನ್ಯಗಳ ಬಗ್ಗೆ ಉಲ್ಲೇಖಗಳು ಕಾಣಸಿಗುತ್ತವೆ. ವಿವಿಧ ನಾಗರಿಕತೆಗಳಲ್ಲಿ, ಭಾರತಕ್ಕೆ ಪ್ರವಾಸ ಬಂದ ಹೊರ ದೇಶಗಳ ಯಾತ್ರಿಗಳ ಕಥನಗಳಲ್ಲಿ ನಮ್ಮಲ್ಲಿ ಸಿರಿಧಾನ್ಯಗಳನ್ನು ಬಳಸುತ್ತಿದ್ದ ಬಗ್ಗೆ ಉಲ್ಲೇಖಗಳು ಇವೆ. ಸಮೃದ್ಧ ಪೋಷಕಾಂಶಗಳನ್ನು ಹೊಂದಿರುವ ಸಿರಿಧಾನ್ಯಗಳ ಸೇವನೆ ಆರೋಗ್ಯಕರವಾಗಿದ್ದು ವಿವಿಧ ರೋಗಗಳಿಂದ ನಮಗೆ ರಕ್ಷಣೆ ದೊರಕಿಸಿಕೊಡುವುದರ ಜತೆಯಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ. ಇತರ ಬೆಳೆಗಳಿಗೆ ಹೋಲಿಸಿದಲ್ಲಿ ಸಿರಿಧಾನ್ಯಗಳ ಬೆಳೆಗಳಿಗೆ ಕಡಿಮೆ ಪ್ರಮಾಣದ ನೀರು ಸಾಕು. ಕೀಟ ಬಾಧೆ ಮತ್ತು ಹವಾಮಾನ ವೈಪರೀತ್ಯದ ಸವಾಲನ್ನೂ ಎದುರಿಸುವ ಸಾಮರ್ಥ್ಯವನ್ನು ಸಿರಿಧಾನ್ಯಗಳ ಸಸಿಗಳು ಹೊಂದಿವೆ. ಸಿರಿಧಾನ್ಯಗಳನ್ನು ಬೆಳೆಯುವುದು ಇತರೆಲ್ಲ ಧಾನ್ಯಗಳ ಬೆಳೆಗಳಿಗಿಂತ ಹೆಚ್ಚು ಪರಿಸರಸ್ನೇಹಿಯಾಗಿದೆ. ಸರಕಾರದ ಪ್ರೇರಣೆಯಿಂದ ಸಿರಿಧಾನ್ಯಗಳಿಗೆ ಈಗ ಕೇವಲ ದೇಶ ಮಾತ್ರವಲ್ಲ ವಿಶ್ವಾದ್ಯಂತ ಬೇಡಿಕೆ ಲಭಿಸತೊಡಗಿದ್ದು ಕೃಷಿಕರು ಮತ್ತೆ ಇವುಗಳನ್ನು ಬೆಳೆಯಲು ಮನಸ್ಸು ಮಾಡಬೇಕಿದೆ. ದೇಶದ ಜನತೆ ಈ ಸಿರಿಧಾನ್ಯಗಳನ್ನು ಸೇವಿಸುವ ಪರಿಪಾಠವನ್ನು ಆರಂಭಿಸುವ ಮೂಲಕ ಸಿರಿಧಾನ್ಯಗಳನ್ನು ಮುಂದಿನ ಪೀಳಿಗೆಗೆ ಕಾಪಿಡುವ ಕಾರ್ಯ ಮಾಡಬೇಕಿದೆ.…
ಗ್ಯಾಸ್ ಸಿಲಿಂಡರ್ ತಂದುಕೊಡುವ ವ್ಯಕ್ತಿಗೆ ಎಕ್ಸ್ಟ್ರಾ ಭಕ್ಷೀಸು ಕೊಡಲೇಬೇಕು. ಇಲ್ಲದಿದ್ದರೆ ಅವರು ನೀವೇ ಬಂದು ಹೊತ್ಕೊಂಡು ಹೋಗಿ ಅನ್ನುತ್ತಾರೆ ಅನ್ನುವ ಮಾತುಗಳು “ಸಾಮಾನ್ಯ’ವಾಗಿರುವ ದಿನಗಳಿವು. ಹೀಗಿರುವಾಗ ಮೊನ್ನೆ ಸಿಲಿಂಡರ್ ತಂದುಕೊಟ್ಟ ವ್ಯಕ್ತಿ, ಭಕ್ಷೀಸಿನ ಹಣವನ್ನು ವಾಪಸ್ ಕೊಟ್ಟದ್ದು ಮಾತ್ರವಲ್ಲ, ನಮ್ಮ ಏಜೆನ್ಸಿಯಲ್ಲಿ ಎಕ್ಸ್ಟ್ರಾ ದುಡ್ಡು ತಗೋಳಲ್ಲ ಅಂದುಬಿಟ್ಟರು. ಕುತೂಹಲದಿಂದ ವಿಚಾರಿಸಿದರೆ, ಅದು ನಮ್ಮ ಮಾಲಕರ ಆದೇಶ ಎಂದರು! ಜನ ಹೀಗೂ ಇರ್ತಾರಾ ಎಂಬ ಅಚ್ಚರಿಯೊಂದಿಗೇ ಆ ಏಜೆನ್ಸಿಯ ಮಾಲಕರ ಪರಿಚಯ ಮಾಡಿಕೊಂಡು, ಗೆಳೆತನ ಬೆಳೆಸಿಕೊಂಡು, ಸಲುಗೆ ಹೆಚ್ಚಿದಾಗ-ಸರ್ ನಿಮ್ಮ ಹಿನ್ನೆಲೆ ಹೇಳ್ತೀರಾ ಅಂದರೆ- “ಹೀಗೂ ಉಂಟೇ?’ ಎಂದು ಉದ್ಗರಿಸುವಂಥ ಕಥೆಯನ್ನೇ ಅವರು ಹೇಳಿಬಿಟ್ಟರು. ಅದು ಹೀಗೆ: 80ರ ದಶಕದಲ್ಲಿದ್ದ ರೌಡಿಸಂ ಅಂತ ಓದಿರ್ತೀರಲ್ಲ, ಆ ಜಮಾನಾ ನಮು. ಒಂದೇ ವ್ಯತ್ಯಾಸ ಅಂದ್ರೆ, ಆ ಕಾಲದ ರೌಡಿ ಗಳು ದೊಡ್ಡ ಹೆಸರು ಮಾಡಿದ್ರು. ಕೆಲವ್ರು ಚೆನ್ನಾಗಿ ಆಸ್ತಿ ಮಾಡಿ ದ್ರು. ಐದತ್ತು ವರ್ಷ ಡಾನ್ಗಳಾಗಿ ಮೆರೆದ್ರು. ನಾನು, ನನ್ನಂಥ ಅದೆಷ್ಟೋ ಜನ, ಅಂಥಾ…
ಮೈಸೂರ್ ಪಾಕ್ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಸಿಹಿಯಾದ ತಿಂಡಿ. ಇದರ ಹಿಂದಿನ ಕಥೆ ರೋಚಕವಾಗಿದ್ದು. ಮೈಸೂರು ಅರಮನೆಯ ಪಾಕ ಶಾಲೆಯಲ್ಲಿ ಜನ್ಮ ತಳೆದ ತಿಂಡಿ ಇದು. ಮಹರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯಚಾಮರಾಜ ಒಡೆಯರ್ ಆಡಳಿತಾವದಿಯಲ್ಲಿ ಅರಮನೆಯಲ್ಲಿದ್ದ ಕುಟುಂಬಕ್ಕೆ ಬೇಕಾದ ಸಿಹಿ ಖಾರದ ತಿನಿಸು ತಯಾರಿಸುವುದರಲ್ಲಿ ಜಾಣ್ಮೆ ಹೊಂದಿದ್ದ ಅರಮನೆಯ ಪಾಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಕಾಕಾಸುರ ಮಾದಪ್ಫನವರಲ್ಲಿ ಒಮ್ಮೆ ಮಹಾರಾಜರು ಯಾವುದಾದರೊಂದು ತಿಂಡಿ ತಯಾರಿಸುವಂತೆ ಹೇಳಿದಾಗ ಕಡಲೆ ಹಿಟ್ಟು ಸಕ್ಕರೆ, ತುಪ್ಪ, ಎಣ್ಣೆ ಸೇರಿಸಿ ತಿಂಡಿಯೊಂದನ್ನು ಮಾಡಿ ಅದನ್ನು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ತಿನ್ನಲು ಕೊಟ್ಟರು. ಇದರ ರುಚಿ ನೋಡಿದ ಮಾಹಾರಾಜರಿಗೆ ತುಂಬಾ ಖುಷಿಯಾಗಿ ಮಾದಪ್ಫನವರಿಗೆ ಪ್ರೋತ್ಸಾಹ ನೀಡಿ ಪ್ರಶಂಸಿಸುತ್ತಾ, ಇದು ಯಾವ ತಿಂಡಿ? ಚೆನ್ನಾಗಿದೆ, ತಿಂಡಿಯ ಹೆಸರೇನು? ಎಂದು ಕೇಳಿದ ಮಹಾರಾಜರಿಗೆ ತಬ್ಬಿಬ್ಬಾದ ಮಾದಪ್ಪನವರು ಗಡಿ ಬಿಡಿಯಲ್ಲಿ ಮೈಸೂರು ಪಾಕ್ ಎಂದರಂತೆ. ಇದು ಮೈಸೂರು ಅರಮನೆಯಲ್ಲಿ ಮೊದಲ ಬಾರಿಗೆ ತಯಾರಾಗಿದ್ದರಿಂದ ಇದಕ್ಕೆ ಮೈಸೂರು ಪಾಕ್ ಎಂದು…
ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕರಾವಳಿಯಲ್ಲಿ ಕೋವಿಡ್ ಕೂಡ ಏರಿಕೆ ಕಾಣುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಒಂದೆಡೆ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಅಧಿಕಾರಿಗಳ ತಂಡ ನಿಗಾ ವಹಿಸಿದರೆ ಇನ್ನೊಂದೆಡೆ ಚುನಾವಣೆ ಸಮಯ ಕೊರೊನಾ ಏರಿಕೆಯಾಗದಂತೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ. ಒಮಿಕ್ರಾನ್ ರೂಪಾಂತರಿ ಎಕ್ಸ್ಬಿಬಿ 1.16 ತಳಿಯ ಪರಿಣಾಮ ಜಿಲ್ಲೆಯಲ್ಲಿ ಸೌಮ್ಯ ಕೋವಿಡ್ ಪ್ರಕರಣ (ಎ ಸಿಂಪ್ಟಮ್ಯಾಟಿಕ್) ಹೆಚ್ಚಾಗಿ ದೃಢಪಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 14 ದಿನಗಳಲ್ಲಿ 38 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ. ಅದಕ್ಕೆ ತಕ್ಕಂತೆ ಜಿಲ್ಲೆಯಲ್ಲಿ ಕೋವಿಡ್ ತಪಾಸಣೆ ಕೂಡ ಹೆಚ್ಚಳ ಮಾಡಲಾಗಿದೆ. ಸದ್ಯ ದಿನಂಪ್ರತಿ ಸುಮಾರು 400ಕ್ಕೂ ಹೆಚ್ಚಿನ ಮಂದಿಯನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಹೆಚ್ಚಾಗಿ ಹಿರಿಯ ನಾಗರಿಕರಲ್ಲಿ ಕೋವಿಡ್ ದೃಢಪಡುತ್ತಿದ್ದು, ಮುಖ್ಯವಾಗಿ ಜ್ವರ, ಭೇದಿ ಸಹಿತ ಹಾಸಿಗೆ ಹಿಡಿದವರು, ದೀರ್ಘಕಾಲದ ರೋಗಿಗಳನ್ನು, ಹಿರಿಯರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ದೇಶಾದ್ಯಂತ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಪರಿಶೀಲನ ಸಭೆ ಕೆಲ ವಾರದ ಹಿಂದೆಯಷ್ಟೇ ನಡೆದಿದೆ. ರಾಜ್ಯಗಳು ಜಾಗರೂಕರಾಗಿ, ನಿರ್ವಹಣೆಗೆ…