Author: admin
” ಸದೃಢ ಜೀವಸತ್ವಗಳ ಪೂರೈಕೆ, ಬಿಳಿ ರಕ್ತ ಕಣಗಳ ಉತ್ಪಾದನೆಗೆ ಸೊಪ್ಪು ಸೇವನೆ ಅತ್ಯಗತ್ಯ…!” ಪ್ರೋಟಿನ್ ಗಳ ಪೌಷ್ಟಿಕಾಂಶವನ್ನು ವೃದ್ಧಿಸುವ ಸೊಪ್ಪು , ದೈನಂದಿನ ರಕ್ತ ಪರಿಚಲನೆಯ ರತ್ನಕೋಶ…..!” – ಕೆ.ಸಂತೋಷ ಶೆಟ್ಟಿ, ಮೊಳಹಳ್ಳಿ,ಕುಂದಾಪುರ .ಉಡುಪಿ ಜಿಲ್ಲೆ .(ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು) e-mail:-santhoshmolahalli@gmail.com ” ಪ್ರತಿದಿನ ದೇಹಕ್ಕೆ ಸೊಪ್ಪು ಸೇವನೆ ಬಲು ತಂಪು ಹರಿವೇ ಮತ್ತು ಬಸಳೆ ಹಾಗೂ ಇನ್ನಿತರ ಸೊಪ್ಪುಗಳನ್ನ ಎಚ್ಚೆತವಾಗಿ ತಿನ್ನುವುದರಿಂದ ಜೀವ ಸತ್ವ ಕೊರತೆಗಳ ನೀಗಿಸುವುದರೊಂದಿಗೆ ದೇಹದಲ್ಲಿನ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ ಮತ್ತು ದಯಕ ಬೇಕಾಗಿರುವಂತಹ ಪ್ರೋಟೀನ್ ಮುಕ್ತ ಪದಾರ್ಥಗಳನ್ನು ನೇರವಾಗಿ ನಮ್ಮ ದೇಹಕ್ಕೆ ರವಾನೆ ಮಾಡುತ್ತದೆ ಅದಲ್ಲದೆ ಸೊಪ್ಪು ತರಕಾರಿಗಳನ್ನು ಎಚ್ಚೆತ್ತುವಾಗಿ ತಿನ್ನುವುದರಿಂದ ಜೀವ ಸತ್ವಗಳ ರಕ್ಷಣೆ ಮತ್ತು ಉತ್ಪಾದನೆಗೆ ಇದು ಸಹಕಾರಿಯಾಗುತ್ತದೆ”. ಸೊಪ್ಪು ಪಧಾರ್ಥಗಳನ್ನು ಸೇವಿಸುವುದರಿಂದ ದೇಯಕಾಗುವ ವಿಶೇಷ ರೀತಿಯ ಪ್ರಯೋಜನಗಳನ್ನ ನಾವು ತಿಳಿದುಕೊಳ್ಳಬೇಕಾದ ಅಂಶಗಳು ಇವತ್ತಿನ ಬರಹದಲ್ಲಿ ಅಡಗಿದೆ. ಏಕೆಂದರೆ ಸೊಪ್ಪು ದೇಹದ ಜೀರ್ಣಶಕ್ತಿ ಹಾಗೂ ಜಠರ, ದೊಡ್ಡ ಕರುಳು, ಸಣ್ಣ…
ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಆಶ್ರಯದಲ್ಲಿ ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಗೌರವ ಸನ್ಮಾನ ಕಾರ್ಯಕ್ರಮವು ಪಟ್ಲ ಫೌಂಡೇಶನ್ ಟ್ರಸ್ಟ್ ನ ಸಹಯೋಗದೊಂದಿಗೆ ಡಿಸೆಂಬರ್ 4 ರಂದು ಭಾನುವಾರ ಸಂಜೆ 4 ಗಂಟೆಗೆ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿಯ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಚಲನ ಚಿತ್ರ ನಿರ್ದೇಶಕ, ನಟ ರಿಷಬ್ ಶೆಟ್ಟಿ ಮತ್ತು ಕಾಂತಾರ ಚಿತ್ರ ತಂಡ ಭಾಗವಹಿಸಲಿದೆ. ಸಮಾರಂಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮವನ್ನು ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ ಶೆಟ್ಟಿ ವಹಿಸಲಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಲಕ್ಷ್ಮೀ ನಾರಾಯಣ ಅಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ಸಮಾರಂಭದಲ್ಲಿ ಸಮಾಜ ಕಲ್ಯಾಣ ಯೋಜನೆಯಡಿಯಲ್ಲಿ ಶಿಕ್ಷಣ, ಮದುವೆ, ಮನೆ ನಿರ್ಮಾಣ, ಕ್ರೀಡೆ, ವೈದ್ಯಕೀಯ…
ತುಳುನಾಡ್ ನಾಗೆ, ಬಿರ್ಮೆರ್, ದೈವೊ, ದೇಬೆರ್, ಸಿರಿ ಕುಮಾರೆರ್, ಬೀರ ಪುರ್ಸೆರೆ ಕಾರ್ನಿಕೊದ ಬೂಡು. ಮುಲ್ಪ ಕಾಪುನ ದೇವೆರೆನೊಟ್ಟುಗು ಬಗಳೆ ಕಲೆದ್, ಅಪ್ಪೆಯಾದ್ ಆದರಿಪುನ, ತಮ್ಮಲೆಯಾದ್ ಬಾಮ್ಯುನ ಆದೆರ್ಪುದ ದೆಯ್ಯೊಲು ತುಳುವ ಸೀಮೆನ್ ಕಲೆ ಕಾರ್ನಿಕೊಡು ಮೆರೆಪಾವೊಂದುಪ್ಪುನ ಕಣ್ಣ್ ದಾಂತಿನಾಯಗ್ಲಾ ನೆಗತ್ ತೋಜುನ ಸತ್ಯೊ. ನಾಗನಡೆ, ನಾಗನಿಧಿ, ನಾಗಬೀದಿ ಪಂದ್ ನೀರ್ ಪರಿಪುದ ಒಸರ್ನ್ ಲೆತ್ತ್ ಬಾಮಿಂಡಲಾ, ಕೂಲಿಡ್ ಇಸೊ ದಿಂಜಾದ್, ಪರಿಪು ಮರಿಕ್ಕ್ ದೇಬೆರೆ ತಾನೊ ಕೊರ್ದ್ ನಾಗದೇವೆರ್ ಪಂದ್ ಬಾಮಿದ್, ತನು ತಂಬಿಲೊ ಸೇವೆ ಸಂದಾದ್ ಅಮುರ್ತೊದ ಸಬಿ ಆಸ್ರಾದೊ ಪಡೆಪುನಕ್ಲ್ ತುಳುವೆರ್. ಮಣೆ, ಮಂಚಾವು, ಕಾಟ್ ಕಲ್ಲ್, ಕಲ್ಲ್, ಬನೊ, ಸಾನೊ, ಮಾಡೊ, ಗುಂಡೊ, ಆಲಡೆ ಪಂದ್ ದೈವೊಗೊಂಜಿ ದೈವನಿಲೆ ಮಲ್ತ್ ಅಯಿಕ್ಕೊಂಜೊಂಜಿ ರೀತಿ, ನೀತಿ ಉಂಡು ಮಲ್ತ್, ಅವೆನ್ನವೇ ನಿಯಮೊ ಬಾಮಿದ್ ಅಯಿನ್ನ ಪಿರ್ಕಾರೊ ನಡಪಾವೊಂದು ಬತ್ತ್ ಕಾಡ ಬರಿಡ್ದ್, ಕಡಲ ಕರೆಮುಟ್ಟ ನ್ಯಾಯ ನೀತಿ, ಸತ್ಯ ನಂಬುಗೆಡ್ ಬದ್ಕ್ ಕರಿತೊಂದುಲ್ಲೆರ್. ಅಪಗ ಉಂದು ಮಾತ…
ಆಷಾಡ, ಶ್ರಾವಣ ಮಾಸ ಬಂತೆಂದರೆ ಹೆಚ್ಚಿನ ಮನೆಗಳಲ್ಲಿ ಸಾಮಾನ್ಯವಾಗಿ ಪತ್ರೊಡೆ ತಿಂಡಿ ಮಾಡುವ ರೂಢಿ ಇಂದಿಗೂ ಇದೆ. ಅದರಲ್ಲೂ ಇತ್ತೀಚೆಗೆ ಹಳ್ಳಿಗಳಿಗಿಂತ ನಗರ ವಾಸಿಗಳೇ ಕೆಸವಿನ ಎಲೆಗಳನ್ನು ಹೆಚ್ಚು ಆಹಾರದಲ್ಲಿ ಬಳಸುತ್ತಾರೆ ಎಂಬ ವಿಚಾರ ಆಶ್ಚರ್ಯವಾದರೂ ಸತ್ಯ. ಮೂಲತಃ ದಕ್ಷಿಣ ಕನ್ನಡ, ಉತ್ತರಕನ್ನಡ, ಶಿವಮೊಗ್ಗಗಳಲ್ಲಿನ ನಿವಾಸಿಗಳು ಮಹಾರಾಷ್ಟ್ರ, ಮುಂಬಯಿ, ಬೆಂಗಳೂರು ನಗರ ಪ್ರದೇಶಗಳಲ್ಲಿ ವಾಸಿಸುವವರು ಹೆಚ್ಚು ಬಳಸುತ್ತಾರೆ. ಆಹಾರದಲ್ಲಿ ನೈಸರ್ಗಿಕವಾಗಿ ಋತುಮಾನದಲ್ಲಿ ಸಿಗುವ ಕೆಸು ಆರೋಗ್ಯಕ್ಕೆ ವಿಶೇಷ ರಕ್ಷಣೆ ನೀಡುತ್ತದೆ ಎಂದು ಕೆಸುವಿನ ಎಲೆಯಲ್ಲಿ ಮಾಡುವ ಖಾದ್ಯವನ್ನು ಕೇಂದ್ರ ಆಯಷ್ ಸಚಿವಾಲಯದ ಆಯುಷ್ ವೈದ್ಯ ಪದ್ದತಿಯು ಸಾಂಪ್ರದಾಯಕ ಆಹಾರ ಎಂಬ ಹೆಗ್ಗಳಿಕೆ ನೀಡಿದೆ. ಸಚಿವಾಲಯ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದ 26 ಸಂಪ್ರದಾಯಿಕ ಆಹಾರಗಳಲ್ಲಿ ಪತ್ರೊಡೆಯೂ ಸೇರಿದೆ. ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ಉಪಯೋಗಿಸುವುದು ಮಾತ್ರವಲ್ಲ ಹೆಚ್ಚಿನ ಸಸ್ಯಹಾರ ಹೋಟೆಲ್ ಗಳಲ್ಲಿ, ಆಷಾಢ ಕೂಟಗಳಲ್ಲಿ ಪತ್ರೊಡೆ ಮೆನುಗಳಲ್ಲಿ ಕಾಣಸಿಗುತ್ತದೆ. ಮಳೆ ಬಂತೆಂದರೆ ಹಿತ್ತಲು, ಗದ್ದೆ, ತೋಟದಲ್ಲಿ ಹೆಚ್ಚು ನೀರು ನಿಲ್ಲುವ ಸ್ಥಳ,…
ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ತುಳುನಾಡಿನ ಮಣ್ಣಿನ ಆಚರಣೆ ನಡೆದಿದೆ. ಆಟಿ ಅಮಾವಾಸ್ಯೆಯ ದಿನವಾದ ಸೋಮವಾರ ಮುಂಜಾನೆ 6 ರಿಂದ 8 ವರೆಗೆ ದೆಹಲಿಯ ಕರ್ನಾಟಕ ಸಂಘದ ಬಳಿಯ ಹಾಳೆ ಮರದ ತೊಗಟೆಯ ಕಷಾಯ ಮತ್ತು ಮೆಂತ್ಯೆ ಗಂಜಿಯ ವ್ಯವಸ್ಥೆನ್ನು ಮಾಡಲಾಗಿತ್ತು. ನೆರೆದ ನೂರಾರು ಮಂದಿ ಈ ಕಾರ್ಯಕ್ರಮದಲ್ಲಿ ಮದ್ದು ಸೇವಿಸಿ ತಮ್ಮ ಆರೋಗ್ಯವರ್ಧನೆಯನ್ನು ಮಾಡಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕಷಾಯ ಸೇವಿಸುವ ಮೂಲಕ ಮಾಡಿದ ಪೋರ್ಟೀಸ್ ಆಸ್ಪತ್ರೆಯ ಆಂಕಾಲಜೀ ವಿಭಾಜದ ಮುಖ್ಯಸ್ಥರು, ಕ್ಯಾನ್ಸರ್ ಸರ್ಜನ್ ಡಾ. ಬಿ. ನಿರಂಜನ್ ನಾಯ್ಕ್ ಅವರು ಮಾತನಾಡಿ ಆಟಿ ಅಮವಾಸ್ಯೆಯ ದಿನ ಹಾಳೆ ಮರದ ಕಷಾಯದಿಂದ ಆಗುವ ಉಪಯೋಗಗಳನ್ನು ನೆರೆದವರಿಗೆ ತಿಳಿಸಿ ಇಂತಹ ಸದುಪಯೋಗವನ್ನು ದೆಹಲಿಯಲ್ಲಿದ್ದೂ ಆಚರಿಸಲು ಅನುವು ಮಾಡಿದ ಆಯೋಜಕರನ್ನು ಪ್ರಶಂಸಿಸಿದರು. ಈ ಹಾಳೆ ಮರದ ತೊಗಟಿನ ಕಷಾಯ ಮತ್ತು ಮೆಂತ್ಯೆ ಗಂಜಿಯ ವ್ಯವಸ್ಥೆಯನ್ನು ಮಂಗಳೂರು ಮೂಲದ ಪ್ರಕಾಶ್ ಶೆಟ್ಟಿ ಉಳೆಪಾಡಿ ಅವರು ಉಚಿತವಾಗಿ ಹಂಚುವ ಮೂಲಕ ತಮ್ಮ ತಾಯ್ನಾಡಿನ ಆಚರಣೆಯನ್ನು ದೆಹಲಿಯಲ್ಲಿ ಪರಿಚಯಿಸಿದರು. ಕಾರ್ಯಕ್ರಮದಲ್ಲಿ…
ಕುಂದಾಪುರದ ಕೊರವಡಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ದಿನಾಂಕ 12 ಜುಲೈ, 2023 ರಂದು ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ನ ಛೇರ್ಮನ್ ಹಾಗೂ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ ಅಧ್ಯಕ್ಷರಾಗಿರುವ ಶ್ರೀಯುತ ಗೌತಮ್ ಶೆಟ್ಟಿಯವರ ಮೂಲಕ ಸರಳ ಇಂಗ್ಲಿಷ್ ಕಲಿಕೆಗೆ ಪೂರಕವಾಗಿರುವ ಚಟುವಟಿಕೆ ಆಧಾರಿತ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು. ”ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣವು ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಶಿಕ್ಷಿತ ಮಗು ರಾಷ್ಟ್ರವನ್ನು ನಿರ್ಮಿಸುತ್ತದೆ” ಎಂಬ ಚಿಂತನೆಯನ್ನು ದಾನಿಗಳಾದ ಗೌತಮ್ ಶೆಟ್ಟಿಯವರು ಹೊಂದಿದ್ದು ಅವರ ಬೆಂಬಲದೊಂದಿಗೆ ಮಕ್ಕಳ ಶಿಕ್ಷಣದ ಅಭಿವೃದ್ಧಿಗಾಗಿ ಶಾಲಾ ಮಕ್ಕಳಿಗೆ ಉಪಯೋಗವಾಗುವ ಪುಸ್ತಕಗಳನ್ನು ಅವರು ಪ್ರಾಯೋಜಿಸಿದ್ದಾರೆ. ಇದು ಗೌತಮ್ ಶೆಟ್ಟಿಯವರ ಒಂದು ಸೂಕ್ಷ್ಮ ಯೋಜನೆ. ಬಡ ಶಾಲಾ ಮಕ್ಕಳು ಈ ಶಾಲಾ ಶಿಕ್ಷಣ ಪುಸ್ತಕಗಳಿಂದ ಪ್ರಯೋಜನ ಪಡೆಯಲಿದ್ದಾರೆ. ಬಡ ವಂಚಿತ ಮಕ್ಕಳಿಗೆ ಅವರ ಅಧ್ಯಯನದ ಸಮಯದಲ್ಲಿ ಯಾವುದೇ ರೀತಿಯ ಅನಾನುಕೂಲತೆ ಉಂಟಾಗದಂತೆ ಶಿಕ್ಷಣದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಯೋಜನೆಯ ಮೂಲಕ, ಶಿಕ್ಷಣದ ಅಭಿವೃದ್ಧಿಗೆ ಸ್ವಲ್ಪ ಪ್ರಯತ್ನ ಮಾಡಿದರೆ ವಂಚಿತ…
ಒಂಜಿ ಪೆರಿಯೆರ್ನ ಬಾಯಿಡ್ ಕೇಂಡಿನ ಸಾಧಾರಣ ಸೊನ್ಪ ಸೊನ್ಪತ್ತೈನ್ ವರ್ಸೊರ್ದುಲ ದುಂಬು ನಡತಿನ ಕತೆ. ತುಲುನಾಡ್ಡ್ ಅವ್ವೊಂಜಿ ಕಾಲೊಡು ಸತ್ಯದ ಜೂವೊಲು ಧರ್ಮದ ನರಮಾನಿಲು ಬದ್ಕ್ ಬಾರೊಂದು ಇತ್ತಿನ ಕಾಲೊಗೆ.. ಆನಿದ ಕಾಲೊಡು ಧರ್ಮ ಮೀರಿನಾಯಗ್ ಮೂಜಿ ದಿನೊತ ಔಸ ಧರ್ಮೊಡ್ ನಡತಿನಾಯಗ್ ಸಾರ ದಿನೊತ ಔಸಗೆ.. ಆ ಕಾಲೊಡು ತುಲುನಾಡ ಮಣ್ಣ ಸತ್ಯ ಎಂಚ ಇತ್ತುಂಡು ಪಂಡ ಕಾಂಡೆ ಪಂಡಿನವು ಮಧ್ಯಾಹ್ನದ ದೊಂಬು ನೆತ್ತಿಗ್ ಬೂರೊಡ್ಡ ದುಂಬು ಪಂಡಿ ನಾಲಯಿ ದೊಂಡೆಡ್ ಕುಲ್ಲೊಡ್ಡ ದುಂಬು ಪಲಿತ್ ಬರೊಂದು ಇತ್ತುಂಡುಗೆ.. ಅಂಚಿನ ಒಂಜಿ ಕಾಲೊಡು ಒಂಜಿ ಪೊರ್ತುದ ಬಂಜಿ ದಿಂಜೊಡಾಂಡ ಕೋಲು ಕಾರ್ ಮುರ್ಕುನ ಕೆಸರ್ ದಿಂಜಿನ ತಾರುನ ಕಂಡೊಗು ಜಪ್ಪೊಡುಗೆ.. ಕಾಯುನ ದೊಂಬುಡು ನುಂಗೊಂದು ಬೂರುನ ಬರ್ಸೊಡು ಬೊದುಲೊಡುಗೆ.. ಅಲ್ಪ ನೆತ್ತೆರ್ ಬೆಗರ್ ಆವೊಡುಗೆ.. ಬೆಗರ್ ಬಾರ್ ಆವೊಡುಗೆ.. ಬಾರ್ ಬೆಯಿತ್ ಬೆಯಿತಿನೆ ಬರಕಲೊಡು ಉಜ್ಜೆರ್ಡ್ ಗುದು ಗುದುದು ಮಡಿ ಆದ್ ಅರಿ ಆವೊಡುಗೆ.. ಅರಿ ಮಣ್ಣ ಕರೊಟು ಅರ್ಲುನ…
ಉಡುಪಿ ಜಿಲ್ಲೆಯ ಬ್ರಹ್ಮಾವರದಿಂದ ಬಾರಕೂರಿಗೆ ಹೋಗುವ ಮುಖ್ಯರಸ್ತೆಯಲ್ಲಿ ದೊಡ್ಡ ಸೇತುವೆಗಿಂತ ಮುನ್ನ ಸಿಗುವ ಸಣ್ಣ ಸೇತುವೆಯ ಪೂರ್ವಕ್ಕೆ ಮಟಪಾಡಿ ಶೆಟ್ಟರ ಕುದ್ರುವಿನ ಗದ್ದೆ ಮಧ್ಯದಲ್ಲಿ ಬೊಬ್ಬರ್ಯನ ಸನ್ನಿಧಾನವಿದೆ. ಶೆಟ್ಟರಕುದ್ರಿನಲ್ಲಿ ಒಂದಿಷ್ಟು ಬಂಟರ ಮನೆಗಳಿದ್ದು ಅವರೇ ಆಡಳಿತೆದಾರರು. ನೂರು ವರ್ಷಗಳ ಹಿಂದೆ ಶೆಟ್ಟರು ಬ್ರಹ್ಮಾವರಕ್ಕೆ ಹೋಗುವುದು ಗದ್ದೆಯ ಅಂಚುಕಟ್ಟಿನಲ್ಲಿ ನಡೆದುಕೊಂಡು. ವಾಪಸು ಬರುವಾಗ ಕತ್ತಲೆಯಾದರೆ ನೆನಪಾಗುವುದು ಬೊಬ್ಬರ್ಯ. “ಓ ಬೊಬ್ಬರ್ಯ, ಮನೆಗೆ ಹೋಯ್ಕಲೆ ಮಾರಾಯ” ಎನ್ನುತ್ತಿದ್ದರಂತೆ. ಬೊಬ್ಬರ್ಯ ಎರಡು ಸೂಡಿ (ದೊಂದಿ- ಸೂಟೆ)ಗಳನ್ನು ಕಳುಹಿಸುತ್ತಿದ್ದನೋ, ಆತನೇ ಸೂಡಿಯಾಗಿ ಬರುತ್ತಿದ್ದನೋ ನಮ್ಮ ಮಂದಬುದ್ಧಿಗೆ ಅರ್ಥ ವಾಗದ್ದು. ಶೆಟ್ಟರು ಮನೆ ಸೇರುತ್ತಿದ್ದರು. ಇದನ್ನು ತಮ್ಮ ಸೋದರಮಾವ ದಿ| ಶೀನಪ್ಪ ಶೆಟ್ಟಿಯವರು ಹೇಳಿರುವು ದನ್ನು ಹಿರಿಯರಾದ ಕರುಣಾಕರ ಶೆಟ್ಟಿಯವರೂ, ತಾಯಿ ದಿ| ರತ್ನಾವತಿ ಶೆಟ್ಟಿಯವರು ಹೇಳುತ್ತಿದ್ದುದನ್ನು ಬ್ರಹ್ಮಾವರ ತಾ.ಪಂ. ಮಾಜಿ ಉಪಾಧ್ಯಕ್ಷ ಸುಧೀರ್ಕುಮಾರ್ ಶೆಟ್ಟಿಯವರೂ ನೆನಪು ಮಾಡುತ್ತಾರೆ. ಜೀವಂತ ಸಾಕ್ಷಿಗಳು 50 ವರ್ಷಗಳ ಹಿಂದಿನ ಘಟನೆ. ಮಾರ್ಟಿನ್ ಲೋಬೋ ಬೊಬ್ಬರ್ಯ ಕಟ್ಟೆ ಪಕ್ಕದಲ್ಲಿದ್ದ ಬಾವಿಯಿಂದ ನೀರು ತರು…
ಸಹಸ್ರಾರು ಸಂಖ್ಯೆಯ ಅಭಿಮಾನಿಗಳು, ಕಾರ್ಯಕರ್ತರು, ಬೆಂಬಲಿಗರ ಜಯಘೋಷದೊಂದಿಗೆ ಮೂಡುಬಿದಿರೆ ಪೇಟೆಯಲ್ಲಿ ಮೆರವಣಿಗೆ ನಡೆಸಿದ ಕಾಂಗ್ರೆಸ್ ಮುಖಂಡ ಮಿಥುನ್ ಎಂ. ರೈ ಅವರು ಸೋಮವಾರ ಮೂಡುಬಿದಿರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಸ್ವರಾಜ್ ಮೈದಾನದಲ್ಲಿ ನಡೆದ ಬಹಿರಂಗ ಸಮಾವೇಶದ ಬಳಿಕ ಮಿಥುನ್ ಅವರು ತೆರೆದ ವಾಹನದಲ್ಲಿ ಕಾರ್ಯಕರ್ತರತ್ತ ಕೈ ಬೀಸುತ್ತಾ, ನಮಸ್ಕರಿಸುತ್ತಾ ಮೆರವಣಿಗೆಯಲ್ಲಿ ಸಾಗಿದರು. ಮಿಥುನ್ ಅವರ ಅಚ್ಚುಮೆಚ್ಚಿನ ಪಿಲಿ ನಲಿಕೆ ತಂಡಗಳು ಮತ್ತು ಚೆಂಡೆ ಬಳಗ ಜತೆಯಾಗಿದ್ದು, ಮೆರವಣಿಗೆಯ ರಂಗು ಹೆಚ್ಚಿಸಿತು. ಬಾವುಟಗಳನ್ನು ಬೀಸುತ್ತಾ ಸಾಗಿದ ಕಾರ್ಯತರ್ಕರ ಉದ್ಘೋಷ ಮುಗಿಲು ಮುಟ್ಟಿತ್ತು. ಪೇಟೆಯ ನಿಶ್ಮಿತಾ ಟವರ್ಸ್ ವರೆಗೆ ಸಾಗಿದ ಮೆರವಣಿಗೆ ವಾಪಸು ಆಡಳಿತ ಸೌಧದವರೆಗೆ ಬಂತು. ಇದಕ್ಕೂ ಮುನ್ನ ಕ್ಷೇತ್ರ ವ್ಯಾಪ್ತಿಯ ಕಟೀಲು ದುರ್ಗಾಪರಮೇಶ್ವರಿರೀ ದೇವಸ್ಥಾನ, ಬಪ್ಪನಾಡು ದುರ್ಗಾಪರಮೇಶ್ವರೀ ದೇವಸ್ಥಾನ, ಅಲಂಗಾರು ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ, ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡಿ ದೇವರ ದರ್ಶನ ಮಾಡಿದರು. ಬಹಿರಂಗ ಸಭೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್…
ಹೊಸದುರ್ಗ-ರಂಗ ಸುಹಾಸ ಟ್ರಸ್ಟ್ (ರಿ)ಸಾಣೇಹಳ್ಳಿ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ತರಬೇತಿ 1995-96 ನೆ ಸಾಲಿನ ವಿದ್ಯಾರ್ಥಿಗಳ ಗುರುವಂದನೆ ಹಾಗೂ ಅಭಿನಂದನಾ ಪುರಸ್ಕಾರ ಕಾರ್ಯಕ್ರಮ ಹಿರೇಮಗಳೂರಿನ ಎಲ್.ಜೆ.ಎಂ ಸಭಾಂಗಣದಲ್ಲಿ ಜರುಗಿತು. 1995-96 ನೇ ಸಾಲಿನ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಶಿಕ್ಷಕರ ತರಬೇತಿ ಪಡೆದು ಪ್ರತಿಷ್ಠಿತ ಎಂ.ಆರ್.ಪಿ.ಎಲ್ ಶಾಲೆಯ ಕ್ರೀಡಾ ತರಬೇತುದಾರರಾಗಿ ಸುಮಾರು 20 ವರ್ಷಗಳ ಸೇವೆ ಸಲ್ಲಿಸಿ,1987 ರಲ್ಲಿ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಸ್ಥಾಪಿಸಿ ಹಲವಾರು ಕ್ರೀಡಾಕೂಟಗಳನ್ನು ಸಂಘಟಿಸಿ,ಅನೇಕ ಕ್ರೀಡಾಪಟುಗಳ ಬದುಕನ್ನು ರೂಪಿಸಿ,ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುತ್ತಿರುವ ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್ ಛೇರ್ಮನ್ ಮತ್ತು ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಗೌತಮ್ ಶೆಟ್ಟಿ ಕುಂದಾಪುರ ಇವರಿಗೆ “ಸಾರ್ಥಕ ಹೆಜ್ಜೆ ಗುರುತು ಅಭಿನಂದನಾ ಪುರಸ್ಕಾರ” ನೀಡಿ ಗೌರವಿಸಲಾಯಿತು. ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದ ಗೌತಮ್ ಶೆಟ್ಟಿ “ಕ್ರೀಡೆ ಜೀವನದ ಅಮೂಲ್ಯ ಆಸ್ತಿ. ಕ್ರೀಡೆಯಿಂದ ಜೀವನ ಕೌಶಲ್ಯವನ್ನು ಕಲಿಯುತ್ತೇವೆ.ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳುತ್ತೇವೆ ಎಂದರು…