Author: admin

ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆಯಲ್ಲಿ ನಿರಂತರ ಕಾರ್ಯಚಟುವಟಿಕೆಗಳನ್ನು ನಡೆಸುವ ಮೂಲಕ ಸಾರ್ವಜನಿಕರಿಂದ ಪ್ರಶಂಸೆಗೆ ಒಳಪಟ್ಟ ತಡಂಬೈಲ್ ನ‌ ವೀರ ಕೇಸರಿ ಸೇವಾಸಂಸ್ಥೆಯನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಗುರುತಿಸಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುವಂತಾಗಲಿ ಎಂದು ಕರ್ನಾಟಕ ಮಾಧ್ಯಮ‌ ಅಕಾಡೆಮಿಯ ಸದಸ್ಯ, ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ತಿಳಿಸಿದರು. ಮಾರಿಗುಡಿ ಶ್ರೀ ಮಹಮ್ಮಾಯಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಮಾರಿಗುಡಿ ಬಳಿ ವೀರ ಕೇಸರಿ ಹಮ್ಮಿಕೊಂಡ ಸಾಂಸ್ಕೃತಿಕ ಕಾರ್ಯಕ್ರಮದ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ವೀರ ಕೇಸರಿ ಸೇವಾ ಸಂಸ್ಥೆ ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ಕ್ರೀಡೆ, ಶೈಕ್ಷಣಿಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ, ಪ್ರತಿಭಾವಂತರನ್ನು ಗುರುತಿಸಿ ಗೌರವಿಸುತ್ತಿದೆ. ಈ ಸಂಸ್ಥೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊರೆಯಲು ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯೆಯರು ಪ್ರಾಮಾಣಿಕ ಪ್ರಯತ್ನ ನಡೆಸಲಿ ಎಂದರು. ಮನಪಾ ಸದಸ್ಯೆ ಶ್ವೇತಾ ಪೂಜಾರಿ ಮಾತನಾಡಿ ವೀರಕೇಸರಿ ಸಂಸ್ಥೆ ಕೋರೊನಾ ಸಂದರ್ಭದಲ್ಲಿ ಬಹಳಷ್ಟು ಕುಟುಂಬಗಳಿಗೆ ಮಾನವೀಯತೆಯ ನೆಲೆಯಲ್ಲಿ…

Read More

ದೆಹಲಿಯಲ್ಲಿ ನಡೆದ ಭಾರತೀಯ ಕುಸ್ತಿ ಸಂಘದ ಚುನಾವಣೆಯಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಕರ್ನಾಟಕದಿಂದ ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿಗಳಾಗಿ ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷರಾದ ಬಿ. ಗುಣರಂಜನ್ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ನಡುಮೊಗರು ಗುತ್ತು ವಿಠಲ ಶೆಟ್ಟಿ ಮತ್ತು ಬೆಳ್ಳಿಪ್ಪಾಡಿ ಉರಮಾಲು ಗುತ್ತು ಪ್ರಫುಲ್ಲ ವಿ.ಶೆಟ್ಟಿ ದಂಪತಿಗಳ ಸುಪುತ್ರ ಹಾಗೂ ಡಾ.ಸಾಯಿ ರಮೇಶ್‌ ಶೆಟ್ಟಿ ಮತ್ತು ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿಯವರ ಸಹೋದರ ಬಿ.ಗುಣರಂಜನ್ ಶೆಟ್ಟಿ ಮೂಲತಃ ಪುತ್ತೂರಿನ ಬೆಳ್ಳಿಪ್ಪಾಡಿ ಮನೆತನದಲ್ಲಿ ಜನಿಸಿ, ಉರಮಾಲು ಗುತ್ತು ನಿವಾಸಿಯಾಗಿರುವ ಇವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ತಮ್ಮ ವಿದ್ಯಾಭ್ಯಾಸವನ್ನು ಬೆಂಗಳೂರಿನಲ್ಲಿ ಮಾಡಿರುವ ಬಿ. ಗುಣರಂಜನ್‌ ಶೆಟ್ಟಿಯವರು ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದಾರೆ. ಶ್ರೀ ಮಹಾಲಿಂಗೇಶ್ವರ ಸೇವಾ ಟ್ರಸ್ಟ್‌ ಬೆಂಗಳೂರು, ಐ ಕ್ಯಾರ್‌ ಬ್ರಿಗೇಡ್‌, ಐ ಕ್ಯಾರ್‌ ಫೌಂಡೇಶನ್‌, ಜಯ ಕರ್ನಾಟಕ ಜನಪರ ವೇದಿಕೆಯ ಸಂಸ್ಥಾಪಕರು ಹಾಗೂ ಬೆಂಗಳೂರು ಕಂಬಳ ಸಮಿತಿಯ ಉಪಾಧ್ಯಕ್ಷರೂ ಆಗಿದ್ದಾರೆ. ಪರಿಸರವಾದಿಗಳು ಆಗಿರುವ ಇವರು ಬೆಂಗಳೂರು…

Read More

ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ನಡೆಯಲಿರುವ ಟ್ರಸ್ಟಿನ ಮಹಾಸಭೆ ಹಾಗೂ ಟ್ರಸ್ಟಿನ ಫಲಾನುಭವಿಗಳಿಗೆ ವಸ್ತ್ರ ವಿತರಣೆ, ಸಮಾವೇಶ ಕಾರ್ಯಕ್ರಮ ನ.13 ರಂದು ಕೊಂಬೆಟ್ಟು ತಾಲೂಕು ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರಕ್ಕೂ ಮಿಕ್ಕಿ ಫಲಾನುಭವಿಗಳು ಭಾಗವಹಿಸುವ ನಿರೀಕ್ಷೆ ಇದ್ದು ಈಗಾಗಲೇ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ ಎಂದು ಟ್ರಸ್ಟಿನ ಅಧ್ಯಕ್ಷ ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಶಾಸಕರ ಸಭಾಭವನದಲ್ಲಿ ನಡೆದ ಟ್ರಸ್ಟಿನ ಪ್ರಮುಖರ ಸಭೆಯಲ್ಲಿ ಈ ಮಾಹಿತಿ ನೀಡಿದರು. ಸಭೆಯಲ್ಲಿ ಭಾಗವಹಿಸುವ ಎಲ್ಲರಿಗೂ ವಸ್ತ್ರ ವಿತರಣೆ ನಡೆಯಲಿದೆ. ಅದರ ಜತೆ ಸಹಭೋಜನವೂ ನಡೆಯಲಿದೆ. ಗ್ರಾಮ ಗ್ರಾಮಗಳಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳು ಭಾಗವಹಿಸುವಂತೆ ಶಾಸಕರು ಮನವಿ ಮಾಡಿದರು. ಸಭೆಯಲ್ಲಿ ಟ್ರಸ್ಟಿನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ, ಪ್ರಮುಖರಾದ ಸುಮಾ ಅಶೋಕ್ ರೈ, ನಿಹಾಲ್ ಶೆಟ್ಟಿ, ರಾಕೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು

Read More

ಇನ್ನಂಜೆ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಲಕ್ಷ್ಮಣ ಕೆ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಇನ್ನಂಜೆ ಎಸ್. ವಿ. ಎಚ್. ಪ.ಪೂ ಕಾಲೇಜಿನ ಸಭಾಭವನದಲ್ಲಿ ನಡೆಯಿತು. 2022-2023 ನೇ ಸಾಲಿನಲ್ಲಿ ಗಳಿಸಿದ ನಿವ್ವಳ ಲಾಭ 4,08,675.72 ರೂ. ಯನ್ನು ವಿಂಗಡಣೆ ಮಾಡಲಾಯಿತು. ಶೇ 15 ಶೇರು ಡಿವಿಡೆಂಟ್ ಘೋಷಿಸಲಾಯಿತು. ಸದ್ರಿ ವರ್ಷದಲ್ಲಿ ಹಾಲು ಸರಬರಾಜು ಮಾಡಿದ ಸದಸ್ಯರಿಗೆ 1,75,721 ರೂ. ಬೋನಸ್ ವಿತರಿಸಲಾಯಿತು. ಶೇ 1 ರಂತೆ 85,784 ರೂ. ಪ್ರೋತ್ಸಾಹ ಧನ ವಿತರಿಸಲಾಯಿತು. ಸಂಘದ ಸಕ್ರಿಯ ಹಿರಿಯ ಸದಸ್ಯರಾದ ವೇದಾವತಿ ಪೂಜಾರ್ತಿ, ಸಂಜೀವಿ ಮತ್ತು ವಿಟ್ಟಲ ಮೂಲ್ಯ ಅವರನ್ನು ಸನ್ಮಾನಿಸಲಾಯಿತು. ಇನ್ನಂಜೆ ಅಂಚೆ ಕಚೇರಿಯಲ್ಲಿ 11 ವರ್ಷ ಸೇವೆ ಸಲ್ಲಿಸಿ ಮುಂಬಡ್ತಿ ಹೊಂದಿರುವ ಪ್ರಕಾಶ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಉತ್ತಮ ಗುಣಮಟ್ಟದ ಹಾಲು ಪೂರೈಸಿದ ಎಲಿಜಬೆತ್ ಡಿ‘ಸೋಜಾ – ಪ್ರಥಮ ಆಶಾ – ದ್ವಿತೀಯ ಮತ್ತು ಜಯಂತಿ ಕೆ. ಶೆಟ್ಟಿ – ತೃತೀಯ ಬಹುಮಾನ ನೀಡಿ…

Read More

ಸೆ. 05 ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ಶಿಕ್ಷಕರ ದಿನಾಚರಣೆಯಂದು ಶಾಲಾ ಆಡಳಿತ ಮಂಡಳಿಯು ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಎಲ್ಲಾ ಪ್ರಧಾನ ಶಿಕ್ಷಕರಿಗೂ ಗ್ರೀಟಿಂಗ್ಸ್ ಕಾರ್ಡ್ ನೀಡುವುದರ ಮೂಲಕ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕಾರ್ಕಳ ಕುಕ್ಕುಜೆ ಸರಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕ, ರಾಷ್ಟ್ರಪ್ರಶಸ್ತಿ ವಿಜೇತ ಶ್ರೀ ಸುರೇಶ್ ಮರಕಾಲ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಅವರು ಮಾತನಾಡಿ ಮಾಜಿ ರಾಷ್ಟ್ರಪತಿ ದಿ. ಡಾ. ಶಂಕರ್ ದಯಾಳ್ ಶರ್ಮಾ ರವರು ತನ್ನ ಶಿಷ್ಯ ಅರಬ್ ದೇಶದ ದೊರೆಯಿಂದ ವಿದೇಶದಲ್ಲಿ ರಾಜ ಮರ್ಯಾದೆಯನ್ನು ಪಡೆದುಕೊಂಡಿದ್ದರು. ಇದು ಗುರು ಮತ್ತು ಶಿಷ್ಯರ ಉತ್ತಮ ಸಂಬಂಧಕ್ಕೆ ಉದಾಹರಣೆಯಾಗಿದೆ. ಜಿ ಎಮ್ ಒಂದು ಅತ್ಯದ್ಭುತ ವಿದ್ಯಾ ಸಂಸ್ಥೆ. ಇಲ್ಲಿರುವ ಎಲ್ಲಾ ವಿದ್ಯಾರ್ಥಿಗಳು, ಶಿಕ್ಷಕರು ಅದೃಷ್ಟವಂತರು. ಇಲ್ಲಿನ ಮಕ್ಕಳ ಶಿಸ್ತು, ಸಂಸ್ಕಾರವನ್ನು ನೋಡುವಾಗ ತುಂಬಾ ಸಂತೋಷವಾಗುತ್ತದೆ ಎಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಪ್ರತಿಯೊಂದು ಮಗುವಿನ ಯಶಸ್ಸಿನ ಹಿಂದೆ ಶಿಕ್ಷಕರು ಇರುತ್ತಾರೆ. ತಂದೆ ತಾಯಿಯರು ನಮ್ಮ…

Read More

ಮುಂಬೈ,ಜು:25: ಧಾರಣೆಗೆ ಯೋಗ್ಯವಾಗಿರುವಂಥದ್ದು ಧರ್ಮ. ಧರ್ಮವಿರುವುದೇ ಅನುಷ್ಠಾನ ಮಾಡವುದಕ್ಕಾಗಿ. ಮನುಷ್ಯ ಮಾನವ ಧರ್ಮವನ್ನು ಬಿಟ್ಟರೆ ದಾನವನಾಗುತ್ತಾನೆ. ಮನುಷ್ಯ ಮಾಡುವ ಸತ್ಕರ್ಮಗಳಿಗೆ ಸತ್ಪಲ ಹಾಗೂ ದುಷ್ಕರ್ಮಗಳಿಗೆ ದುಷ್ಪಲ ಸಿಗುತ್ತದೆ. ಮನುಷ್ಯನ ಜೀವನವೇ ಒಂದು ರಥ. ಆ ರಥಕ್ಕೆ ಒಂದು ಪಥವೆಂದರೆ ಅದು ಧರ್ಮ. ಧರ್ಮ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳು. ಸಂಸ್ಕೃತಿ ಬೆಳೆಯಲು ಧರ್ಮ ಬೇಕು. ಸಂಸ್ಕೃತಿಯನ್ನು ಉಳಿಸಿಕೊಂಡರೆ ಧರ್ಮ ಉಳಿಯುತ್ತದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ನುಡಿದರು. ಅವರು ಜುಲೈ 22 ರಂದು ಕಲಿನಾ ಕ್ಯಾಂಪಸ್, ಜೆ.ಪಿ.ನಾಯಕ್ ಸಭಾಭವನದಲ್ಲಿ ಮುಂಬೈ ವಿಶ್ವವಿದ್ಯಾಲಯ, ಕನ್ನಡ ವಿಭಾಗ ಆಯೋಜಿಸಿದ್ದ “ಸಂಸ್ಕೃತಿ ಚಿಂತನ ಮಂಥನ” ಕಾರ್ಯಕ್ರಮದಲ್ಲಿ “ಧರ್ಮ ಮಾನವ ಧರ್ಮ” ಎಂಬ ವಿಷಯದ ಕುರಿತು ಮಾತನಾಡಿದರು. ತ್ಯಾಗ, ಸೇವೆ ಎನ್ನುವುದು ಭಾರತದ ರಾಷ್ಟ್ರೀಯ ಆದರ್ಶವಾಗಿವೆ. ಮನುಷ್ಯ ಧರ್ಮಯುಕ್ತವಾಗಿ ಗಳಿಸಬೇಕು. ಧರ್ಮಯುಕ್ತವಾಗಿ ಅದನ್ನು ಬಳಸಬೇಕು. ಧರ್ಮಯುಕ್ತವಾಗಿ ಉಳಿಸಬೇಕು. ಆಗ ಯಾವುದೇ ಅಪಾಯವೂ ಬರಲಾರದು. ನಮ್ಮನ್ನು ನಾವು ಅರಿತುಕೊಳ್ಳುವುದಕ್ಕೆ ಬೇಕಾಗಿರುವಂತಹ ಸಾಧನವೇ ಸಾಹಿತ್ಯ.…

Read More

ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ನಂದಳಿಕೆ ಅಯನೋತ್ಸವ, ಸಿರಿಜಾತ್ರಾ ವೈಭವ ಎ. 6ರಂದು ನಡೆಯಲಿದೆ. ಕ್ಷೇತ್ರದ ಉರಿಬ್ರಹ್ಮ, ಗಣಪತಿ, ವೀರಭದ್ರ, ನಂದಿಗೋಣ, ಸಿರಿ ಕುಮಾರ, ಅಬ್ಬಗ-ದಾರಗ, ಖಡ್ಗೇಶ್ವರೀ, ರಕ್ತೇಶ್ವರೀ, ಚಾಮುಂಡಿ, ಅಣ್ಣಪ್ಪ, ಕ್ಷೇತ್ರಪಾಲ, ಭೂತರಾಜ, ಗಜಮಲ್ಲ, ಮಹಾನಾಗ ರಾಜ ಸ್ವಾಮಿ ಸನ್ನಿಧಿಗಳಲ್ಲಿ ಪೂಜೆ ನಡೆಯಲಿದೆ. ಬೆಳಗ್ಗೆ 8ರಿಂದ ಶ್ರೀ ಉರಿಬ್ರಹ್ಮ ದೇವರ ಸ್ವರ್ಣ ಪಾದುಕೆ, ಶ್ರೀ ಅಬ್ಬಗ-ದಾರಗರ ಚೆನ್ನೆಮಣೆಗಳ ಸಾಲಂಕೃತ ಮೆರವಣಿಗೆ ಪ್ರಾಕ್ತನ ಪದ್ಧತಿಯಂತೆ ಪರ್ಯಟಿಸಿ ಮಧ್ಯಾಹ್ನ ಆಲಡೆಯಲ್ಲಿ ಶ್ರೀ ಅಣ್ಣಪ್ಪ ದರ್ಶನ, ಹಸಿರು ಮಡಲು ಚಪ್ಪರ ಕಟ್ಟೆ ಪೂಜಾ ಸೇವೆ, ಶ್ರೀ ದೇವರ ಮಹೋತ್ಸವ ಬಲಿ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1ರಿಂದ ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ರಾತ್ರಿ 9ಕ್ಕೆ ನಂದಳಿಕೆ ಚಾವಡಿ ಆರಮನೆಯಿಂದ ಶ್ರೀ ಹೆಗ್ಡೆಯವರ ಆಗಮನ, ರಾತ್ರಿ 10.30ರಿಂದ ಅಯನೋತ್ಸವ ಬಲಿ, ಕೆರೆ ದೀಪೋತ್ಸವ, ಕೆರೆದೀಪ ಕಟ್ಟೆಪೂಜಾ ಮಹೋತ್ಸವ, ರಾತ್ರಿ 11ರಿಂದ ಶ್ರೀ ಆಲಡೆ ಸನ್ನಿಧಿಯಲ್ಲಿ ಶ್ರೀ ಸಿರಿ ಕುಮಾರ, ಅಬ್ಬಗ ದಾರಗ ದರ್ಶನಾವೇಶಪೂರ್ವಕ ಸೂರ್ಯೋದಯ ಪರ್ಯಂತ…

Read More

ಮಕ್ಕಳ ಆರೋಗ್ಯ  ದ್ರಷ್ಟಿಯಲ್ಲಿ ಇದು ಮಾದರಿ ಸೇವೆಯಾಗಬಹುದು   -ಗಣೇಶ್ ಹೆಗ್ಡೆ ಪುಣ್ಚೂರು  ಪುಣೆ : ಮನುಷ್ಯರಲ್ಲಿ  ಅರೋಗ್ಯ ಎಂಬುದು ಇಂದಿನ ಕಾಲದಲ್ಲಿ ಬಹಳ ಎಚ್ಚರಿಕೆವಹಿಸಬೇಕಾದ ಒಂದು ಮುಖ್ಯ ವಿಚಾರ ,ಅದರಲ್ಲೂ ಮಕ್ಕಳ ಅರೋಗ್ಯ ಕಾಪಾಡುವಲ್ಲಿ ತುಂಬಾ ಮುತುವರ್ಜಿ ವಹಿಸಬೇಕಾಗುತ್ತದೆ ,ಏಳವೆಯಿಂದ ಪ್ರೌಡವಸ್ಥೆಯ ವರೆಗಿನ ಬೆಳವಣಿಗೆಯಲ್ಲಿ  ಮಕ್ಕಳ ಆರೋಗ್ಯದಲ್ಲಿ ಬಗ್ಗೆ ಜಾಗ್ರತಿ ಮೂಡಿಸುವುದು ಒಳ್ಳೆಯದು ,ಈ ರೀತಿಯ ಸೇವೆಯಲ್ಲಿ ನಮ್ಮ  ಬಂಟ್ಸ್ ಅಸೋಸಿಯೇಷನ್  ಮೆಡಿಕಲ್ ವಿಬಾಗದ  ಕಾರ್ಯಾಧ್ಯಕ್ಷರಾದ  ಬೇಬಿ ಫ್ರೆಂಡ್ ಕ್ಲಿನಿಕ್ ನ ಮಾಲಕರಾದ ಡಾ ಸುಧಾಕರ್  ಶೆಟ್ಟಿ ಯವರು ಮಾಡುತ್ತಾ ಬರುತಿದ್ದು ,  ಮಕ್ಕಳ ಅರೋಗ್ಯ ಸೇವೆಯಲ್ಲಿ ಸುಮಾರು 40 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಾ ಬಂದವರು ,ಇವರ ಜೊತೆಯಲ್ಲಿ ಬಹಳ ವರ್ಷಗಳ ಒಡನಾಟ ನನಗೆ ಇದೆ, ಇಂತಹ ಸೇವೆಯ ಬಗ್ಗೆ ನಮ್ಮಲ್ಲಿ ಹಲವಾರು ಬಾರಿ ಮಾತುಕತೆ ನಡೆದಿತ್ತು ,ಸಮಾಜಕೊಸ್ಕರ ಏನಾದರು ಮಾಡಬೇಕು ಎಂಬ ಯೋಚನೆ ನಮ್ಮಲ್ಲಿತ್ತು ,ಈಗ ಡಾ .ಸುಧಾಕರ್ ಶೆಟ್ಟಿ ಯವರ   ಪರಿಕಲ್ಪನೆಯ ಈ ಮಕ್ಕಳ ಆರೋಗ್ಯದ ಕಾರ್ಯಕ್ರಮ ವೈದ್ಯಕೀಯ…

Read More

ತುಳು ಸಿನಿಮಾರಂಗದ ರಾಕ್ ಸ್ಟಾರ್, ಬಿಗ್ ಬಾಸ್ ಒಟಿಟಿ ಹಾಗೂ ಸೀಸನ್ 9ರ ವಿನ್ನರ್ ರೂಪೇಶ್ ಶೆಟ್ಟಿ ನಿರ್ದೇಶನ ಮತ್ತು ಅಭಿನಯದ “ಸರ್ಕಸ್” ತುಳು ಸಿನಿಮಾ ಬಿಡುಗಡೆಗೆ ದಿನ‌ ನಿಗದಿಯಾಗಿದೆ. ಜೂನ್ 23 ರಂದು ಸಿನಿಮಾ ಅದ್ದೂರಿಯಾಗಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾವನ್ನು ಏಕಕಾಲದಲ್ಲಿ ವಿದೇಶದಲ್ಲೂ‌ ಬಿಡುಗಡೆಗೊಳಿಸಲು ಯೋಜನೆ ರೂಪಿಸಿದ್ದಾರೆ. ತುಳು ಸಿನಿಮಾ ರಂಗದಲ್ಲಿ ಅತಿ ದೊಡ್ಡ ಹಿಟ್ ಚಿತ್ರ “ಗಿರಿಗಿಟ್” ಸಿನಿಮಾ ಭರ್ಜರಿ ಯಶಸ್ಸಿನ ಬಳಿಕ ರೂಪೇಶ್ ಶೆಟ್ಟಿ ತುಳು ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟರಾಗಿದ್ದಾರೆ. ರೂಪೇಶ್ ಶೆಟ್ಟಿ ಕನ್ನಡದಲ್ಲಿ ‘ಗೋವಿಂದಾ ಗೋವಿಂದಾ’ ಸಹಿತ ಐದು ಸಿನಿಮಾದಲ್ಲಿ ನಟಿಸಿದ್ದಾರೆ. ಇದೀಗ ರೂಪೇಶ್ ಶೆಟ್ಟಿ ತಂಡ ಸರ್ಕಸ್ ಸಿನಿಮಾ ನಿರ್ಮಾಣ ಮಾಡಿ ಬಿಡುಗಡೆಗಾಗಿ ಜೂನ್ ತಿಂಗಳಿನಲ್ಲಿ ದಿನ ನಿಗದಿಗೊಳಿಸಿದ್ದಾರೆ. ಪ್ರತೀ ಚಿತ್ರದಲ್ಲೂ ಹೊಸತನ ಬಯಸುವ ರೂಪೇಶ್ ಶೆಟ್ಟಿ ಈ ಬಾರಿ ಕೂಡಾ ಒಂದು ಉತ್ತಮ ಕಥೆಯನ್ನು ಆಯ್ಕೆ ಮಾಡಿದ್ದಾರೆ. ಗಿರಿಗಿಟ್, ಗಮ್ಜಾಲ್ ಗೆ ಸಂಭಾಷಣೆ ಬರೆದ ಪ್ರಸನ್ನ ಶೆಟ್ಟಿ ಬೈಲೂರು ಈ ಸಿನಿಮಾಕ್ಕೂ…

Read More

ನ್ಯೂಯಾರ್ಕ್ ನ ಕ್ಲಾರಾಜೆಟಿಕಿನ್ ಎಂಬ ಮಹಿಳೆ ಉದ್ಯೋಗಸ್ಥ ಮಹಿಳೆಯರ ಸಮಾನ ವೇತನ ಹೆರಿಗೆ ಸೌಲಭ್ಯ ಹಾಗೂ ಮಹಿಳೆಯರ ಸಮಸ್ಯೆಯ ಪರಿಹಾರಕ್ಕಾಗಿ ಹೋರಾಟ ನಡೆಸಿ ಗೆಲುವು ಸಾದಿಸಿದ ದಿನವನ್ನು ಮಹಿಳೆಯರಿಗೆ ಅರ್ಪಿಸುತ್ತಾ ಗೆಲುವಿನ ಸ್ಮರಣೆಗಾಗಿ ಸಾಧನೆಯ ಸಂಕೇತವಾಗಿ ಮಾರ್ಚ್ 8 ನ್ನು ವಿಶ್ವ ಮಹಿಳಾ ದಿನವನ್ನಾಗಿ ಆಚರಿಸಲಾರಂಬಿಸಿದರು. ಹೀಗೊಂದು ನಿಗದಿತ ವಿಶ್ವ ಮಹಿಳಾ ದಿನ ಕೇವಲ ಆಚರಣೆಗೆ ಮಾತ್ರ ಸೀಮಿತವಾಗದಿರಲಿ. ಸ್ತ್ರೀ ಪ್ರಕೃತಿಯ ವರದಾನ, ಬದುಕಿನಂಚಿನವರೆಗೂ ಮಹಿಳೆ ಕುಟುಂಬಕ್ಕೆ, ಸಮಾಜಕ್ಕೆ ಅಗಾಧ ಜ್ಞಾನ ಒಲವು ನೆರವು ನೀಡುತ್ತಿರುತ್ತಾಳೆ. ಕೇವಲ ಅಲಂಕಾರಿಕ ವಸ್ತುಗಳಾಗಿ ಉಳಿಯದೆ ಶಿಕ್ಷಣ, ಸಾಹಿತ್ಯ, ಧರ್ಮ, ರಾಜಕೀಯ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ಕಿರುತೆರೆ ಬೆಳ್ಳಿ ತೆರೆ,ಎಲ್ಲದರಲ್ಲೂ ಮಹಿಳೆಯರು ಮಿಂಚುತ್ತಿರುವುದು ಹೆಮ್ಮೆಯ ವಿಷಯ. ಮಹಿಳೆಯರಿಗಿಂದು ತೆರೆದ ಜಗತ್ತು ಎಲ್ಲಾ ‌ಕ್ಷೇತ್ರಗಳಲ್ಲಿ ಅವಕಾಶ ನೀಡುತ್ತಿದೆ. ಆದರೆ ತೆರದ ಜಗತ್ತಿನಲ್ಲೂ ಉಸಿರುಗಟ್ಟಿಸುವ ದೌರ್ಜನ್ಯಕ್ಕೆ ಕೊರತೆ ಇಲ್ಲದಿರುವುದೇ ವಿಪರ್ಯಾಸ. ಸಮಾಜದ ಯಾವುದೇ ಮೂಲೆಯನ್ನು ಅವಲೋಕಿಸಿ ನೋಡಿ, ಹೆಣ್ಣು ಮಗಳೊ ಬ್ಬಳ ರೋಧನ ಇದ್ದೆ ಇರುತ್ತದೆ. ಕಾನೂನಿನ ದುರುಪ…

Read More