Author: admin

ಮುಂಬಯಿ (ಆರ್ ಬಿ ಐ), ಡಿ.25: ಮಂಗಳೂರು ಅಲ್ಲಿನ ಕರ್ನಾಟಕ ಪಾಲಿಟೆಕ್ನಿಕ್‍ಗೆ (ಕೆಪಿಟಿ) ಇತ್ತೀಚಿಗೆ ಉತ್ತರ ಮುಂಬಯಿ ಬಿಜೆಪಿ ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ ಭೇಟಿ ನೀಡಿ ಕೆಲವೊಂದು ಉಪಕರಣ, ಕಟ್ಟಡ ನವೀಕರಣ ಮತ್ತು ಸರಕಾರದ ಸವಲತ್ತುಗಳು ಅಲಭ್ಯವಾಗುತ್ತಿರುವುದರ ಬಗ್ಗೆ ಮಾಹಿತಿ ಪಡೆದಿದ್ದರು. ಕೆಪಿಟಿ ಪ್ರಾಂಶುಪಾಲ ಹರೀಶ್ ಶೆಟ್ಟಿ (ಬಿಇ) ಇವರನ್ನು ಭೇಟಿಯಾದ ಎರ್ಮಾಳ್ ಹರೀಶ್ ಅಲ್ಲಿನ ಕುಂದು ಕೊರತೆಗಳನ್ನು ಗಮನಿಸಿದ್ದು ಬಳಿಕ ಬಿಜೆಪಿ ಕರ್ನಾಟಕ ರಾಜ್ಯಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿ ವಿಷಯವನ್ನು ಮನವರಿಸಿದ್ದರು. ಶೀಘ್ರಗತಿಯಲ್ಲಿ ಗಮನ ಸೆಳೆದು ಕೆಪಿಟಿ ಸವಲತ್ತುಗಳ ಬಗ್ಗೆ ತಿಳಿದು ಸ್ಪಂದಿಸಿದ ಮಂಗಳೂರು ಸಂಸದರೂ, ರಾಜ್ಯಾಧ್ಯಕ್ಷರಾದ ಕಟೀಲ್ ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರಕಾರದ ಗಮನ ಸೆಳೆದು ತಕ್ಷಣವೇ ಹಣ ಬಿಡುಗಡೆ ಮಾಡಿಸಿದ್ದರು. ಈ ಬಗ್ಗೆ ಕಾರ್ಯಪ್ರವೃತ್ತರಾದ ಎರ್ಮಾಳು ಹರೀಶ್ ಪ್ರಯತ್ನಕ್ಕೆ ಪ್ರಾಂಶುಪಾಲ ಹರೀಶ್ ಅಭಿವಂದಿಸಿದ್ದು ಈ ಮೂಲಕ ಕೆಪಿಟಿ ಅಭಿವೃದ್ಧಿಯ ಕನಸು ನೆರವೇರಿದಂತಾಗಿದೆ ಎಂದರು. ನಿಯೋಗದಲ್ಲಿ ಕರುಣಾಕರ್ ಶೆಟ್ಟಿ ಮಾಳ ಮತ್ತಿತರರು ಉಪಸ್ಥಿತರಿದ್ದರು.

Read More

ಕೃಷಿ ಪ್ರಧಾನ ತೌಳವ ಸಂಸ್ಕೃತಿಯ, ಧಾರ್ಮಿಕ ಐಸಿರಿಯ, ಧರ್ಮದೇವತೆಗಳ ಆಡುಂಬೊಲದ ತುಳುನಾಡಿನಲ್ಲಿ (ಕರಾವಳಿ ಪ್ರದೇಶ) ‘ಪರತ್ ನಿಗಿಪೆರೆ ಬುಡಯ’ (ಹಳೆಯದನ್ನು ಹೊಸಕಿ ಹಾಕಲು ಬಿಡೆವು) ಎಂಬ ದೈವಗಳ ಅಭಯದ ನುಡಿಯೊಂದಿದೆ. ಆರ್ಥಿಕ ಸಂಕಷ್ಟಗಳು ಎಷ್ಟೇ ಬರಲಿ, ಹೇಗೇ ಇರಲಿ ಅವೆಲ್ಲವನ್ನೂ ಮೀರಿ ಶ್ರದ್ಧೆ, ಭಕ್ತಿ, ನಿಷ್ಠೆಯ ಮೂಲ ಮಂತ್ರವಾಗಿ ಮನೆತನದ ಪೂರ್ವಜರಿಂದ ಅನೂಚಾನವಾಗಿ ನಡೆದು ಬಂದಿರುವ ಅನನ್ಯ ಹಿನ್ನೆಲೆಯ ಸಾಂಪ್ರದಾಯಿಕ ಕಂಬಳಗಳನ್ನು ದೈವ-ದೇವತೆಗಳ ಕಟ್ಟುಕಟ್ಟಳೆಯ ಆರಾಧನೆಯೊಂದಿಗೆ, ಗೌಜಿ, ಗದ್ದಲವಿಲ್ಲದ ಧಾರ್ಮಿಕ ಆಚರಣೆಗಳೊಂದಿಗೆ ಈಗಲೂ ಸರಳವಾಗಿ ಆಚರಿಸುತ್ತ ಬಂದಿರುವುದು ದಕ್ಷಿಣದ ಈ ಸಿರಿನಾಡಿನ ಸಾಂಸ್ಕೃತಿಕ ಹಿರಿಮೆ, ದೈವಗಳ ಮಹಿಮೆ, ಜನಪದರ ಭಕ್ತಿಪಂಥದ ಗರಿಮೆ. ರೈತನೆಂದರೆ ‘ಅನ್ನಬ್ರಹ್ಮ’. ಅನ್ನ ಕೊಡುವ ಭೂಮಿಯನ್ನು ಹಸನುಗೊಳಿಸುವ ಕೋಣಗಳೇ ಅವನ ಬದುಕಿನ ಜೀವಾಳ. ವರ್ಷವಿಡೀ ಗದ್ದೆಯ ನಂಟಿಗೆ ಅಂಟಿಕೊಂಡಿರುವ ಆತನ ಆನಂದ, ಉಲ್ಲಾಸಕ್ಕೆ ಹುಟ್ಟಿಕೊಂಡ ಕಂಬಳ ಉತ್ಸವದ ಸುತ್ತ ಈ ಮಣ್ಣಿನ ಜೀವನಾಡಿಯಂತಿರುವ ಜನಪದ ನಂಬಿಕೆಗಳ ದಟ್ಟಐತಿಹ್ಯಗಳಿವೆ. ಮಾನವ ಸಂತಾನ ಪ್ರಕ್ರಿಯೆಯ ಮೇಲೆ ಫಲ ಬೀರುವ ಪ್ರಾಕೃತಿಕ ನಿಷೇಧಗಳಿವೆ.…

Read More

ಪಠ್ಯ ಚಟುವಟಿಕೆಗಳೊಂದಿಗೆ, ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಲು ಪ್ರೇರೇಪಿಸುವಲ್ಲಿ ಭಾರತ್ ಸ್ಕೌಟ್ಸ್ – ಗೈಡ್ಸ್ ನ ರೋವರ್ ಮತ್ತು ರೇಂಜರ್ ವಿಭಾಗ ಅವಕಾಶ ಕಲ್ಪಿಸುತ್ತದೆ. ಆದ ಕಾರಣ ತಾವೆಲ್ಲರೂ ತಮ್ಮ ವಿದ್ಯಾರ್ಥಿಗಳನ್ನು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕೆಂದು ಭಾರತ್ ಸ್ಕೌಟ್ಸ್ – ಗೈಡ್ಸ್ ನ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯ ಅವರು ಕರೆ ನೀಡಿದರು. ಅವರು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) , ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ಸಹಭಾಗಿತ್ವದಲ್ಲಿ ಲಾಲ್ ಬಾಗ್ ನಲ್ಲಿರುವ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಜಿಲ್ಲೆಯ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ, ಉಪನ್ಯಾಸಕಿಯರುಗಳ ರೋವರ್ ಮತ್ತು ರೇಂಜರ್ ಮಾಹಿತಿ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ ಉದ್ಘಾಟಿಸಿದರು. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಡಿ ಜಯಣ್ಣ,…

Read More

ಭಾರತಿಯ ಜ್ಯೋತಿಷ್ಯ ಶಾಸ್ತ್ರದಲ್ಲಿ ‌ಮೂರು ವರ್ಷಗಳಿಗೊಮ್ಮೆ ಬರುವ ಅಧಿಕ ಮಾಸದ ಶ್ರಾವಣದಲ್ಲಿ ಮಾತ್ರ ಬಾಗಿಲು ತೆಗೆದು ಪೂಜೆ ಸಲ್ಲಿಸುವ ದೇವಾಲವೊಂದಿದೆ. ಮುಂಬಯಿಯ ವಿಲೇಪಾರ್ಲೆಯಲ್ಲಿನ ಪುರುಷೋತ್ತಮ ದೇವಾಲಯವಿದು. ಮತ್ತೆ ಈ ದೇವಾಲಯದ ‌ಬಾಗಿಲು ತೆರೆಯುವುದು ‌ಮುಂದಿನ ಮೂರು ವರ್ಷಗಳ ‌ನಂತರ. ಈ ಸಲ ಜುಲೈ18 ರಿಂದ ಅಗಸ್ಟ್ 16 ರವರೆಗೆ ಇಲ್ಲಿ ದೇವರಿಗೆ ಅಧಿಕ ಮಾಸದ ಶ್ರಾವಣ ತಿಂಗಳಲ್ಲಿ ‌ಪೂಜೆ, ಅಭಿಷೇಕ, ಹಾಗೂ ಭಕ್ತರಿಗೆ ದರ್ಶನ ಸಿಗುತ್ತದೆ. ಪುರುಷೋತ್ತಮ ಮಾಸವು ಎಲ್ಲಾ ತಿಂಗಳುಗಳಿಗಿಂತ ಭಿನ್ನವಾಗಿರುತ್ತದೆ. ಏಕೆಂದರೆ ಇದು ಪ್ರತಿ ವರ್ಷ ಬರುವುದಿಲ್ಲ. ಮೂರು ವರ್ಷಕ್ಕೊಮ್ಮೆ ಮಾತ್ರ ಬರುವುದರಿಂದ ಈ ಮಾಸದಲ್ಲಿ ವಿಶೇಷವಾಗಿ ವಿಷ್ಣು, ಸೂರ್ಯ ಮತ್ತು ಶಿವ ಈ ಮೂರು ದೇವರನ್ನು ಹೆಚ್ಚಾಗಿ ಪೂಜಿಸಲಾಗುತ್ತದೆ. ಪುರುಷೋತ್ತಮ ಮಂದಿರ್ ಜಾನಾ ಹೇ ಅಂತ ನಮ್ಮ ಬಿಲ್ಡಿಂಗ್ ಮಹಿಳಾ ಮಣಿಗಳು ತಮ್ಮ ತಮ್ಮೊಳಗೆ ‌ಮಾತಾಡಿಕೊಳ್ಳುವುದನ್ನು ಕೇಳಿಸಿಕೊಂಡ ನಾನು ಎಲ್ಲಿ ಏನು ಅಂತ ವಿಚಾರಿಸಿದಾಗ ಮುಂಬಯಿಯ ವಿಲೆಪಾರ್ಲೆ ಪಶ್ಚಿಮದಲ್ಲಿ ರೈಲು ನಿಲ್ದಾಣದಿಂದ ‌ಕೇವಲ 40 ನಿಮಿಷಗಳ ಅಂತರದಲ್ಲಿ…

Read More

“ಸೃಜನಾ” ಈ ಹೆಸರು ಸಂಸ್ಥೆಗೆ ನಿಜವಾಗಿಯೂ ಸಾರ್ಥಕ. ಸೃಷ್ಟಿಯಲ್ಲಿ ಸ್ತ್ರೀ ಇಲ್ಲದಿದ್ದರೆ ಸೃಷ್ಟಿ ಸಾಧ್ಯವಾಗುವುದಿಲ್ಲ. ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀ, ಪುರುಷರಿಬ್ಬರ ರಚನೆ ಬೇರೆ, ಆನುವಾದಕ ಬೇರೆ, ಆದರೆ ಅದರಲ್ಲಿ ಸಾಮರಸ್ಯವಿದೆ. ಹೆಣ್ಣು ಮಕ್ಕಳಿಗೆ ಶಾಸ್ತ್ರದಲ್ಲಿ ಕೊಟ್ಟ ಸ್ಥಾನ ಮೊದಲಾಗಿದೆ. ಅದು ಮಾತೃಭಾವವೂ ಹೌದು. ನಮ್ಮ ವೇದ ಪುರಾಣದಲ್ಲಿ ಕೂಡಾ ಸ್ತ್ರೀ ಪುರುಷರ ಬಗ್ಗೆ ಚಿಂತನೆ ಮಾಡಿದೆ ಹೊರತು ಬರೇ ಪುರುಷರ ಚಿಂತೆ ಮಾಡಿಲ್ಲ. ಸ್ತ್ರಿ ಇಲ್ಲದಿದ್ದರೆ ಪುರುಷ ಅರ್ಧ, ಹಾಗೆನೇ ಪುರುಷ ಇಲ್ಲದಿದ್ದರೆ ಸ್ತ್ರೀ ಅರ್ಧ. ಇದು ನಮ್ಮ ಭಾರತೀಯ ಸಂಸ್ಕೃತಿಯ ವೈಶಿಷ್ಟ್ಯ ಎಂದು ಬಹುಭಾಷಾ ಪಂಡಿತ ನಾಗರಹಳ್ಳಿ ಪ್ರಹ್ಲಾದಾಚಾರ್ಯ ತಿಳಿಸಿದರು. ಜೂನ್‌ 10 ರ ಶನಿವಾರ ಸಂಜೆ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ ಮುಂಬಯಿ ಇದರ ಮೊದಲ ಮಹಡಿಯ ಕಿರು ಸಭಾಗೃಹದಲ್ಲಿ ಮುಂಬಯಿ ಕನ್ನಡ ಲೇಖಕಿಯರ ಬಳಗ ಸೃಜನಾ ಆಯೋಜಿಸಿದ್ದ ವಿಚಾರಗೋಷ್ಠಿಯಲ್ಲಿ ಮುಖ್ಯ ಅತಿಥಿಯಾಗಿ ಗೋಷ್ಠಿಯನ್ನು ಉದ್ಘಾಟಿಸಿ ಪ್ರಹ್ಲಾದಾಚಾರ್ಯ ಮಾತನಾಡಿದರು. ಸೃಜನಾ ಸಂಚಾಲಕಿ ಪದ್ಮಜಾ ಮಣ್ಣೂರ ಮಾರ್ಗದರ್ಶನದಲ್ಲಿ…

Read More

ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯಲ್ಲಿ ಆಡಲು ಪುಣೆಗೆ ಆಗಮಿಸಿರುವ ಕರ್ನಾಟಕದ ರಾಜ್ಯ ಬ್ಯಾಡ್ಮಿಂಟನ್ ತಂಡ ಪುಣೆ ಬಂಟರ ಭವನಕ್ಕೆ ಭೇಟಿ ನೀಡಿತು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಅಜಿತ್ ಹೆಗ್ಡೆ ನೇತೃತ್ವದ ಆಡಳಿತ ಸಮಿತಿಯು ನಮ್ಮ ತಾಯ್ನಾಡಿನ ಕ್ರೀಡಾ ತಾರೆಯರನ್ನು ಶಾಲು ಹೊದಿಸಿ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಿದರು. ಈ ಸಂಧರ್ಭ ಸಂಘದ ಉಪಾಧ್ಯಕ್ಷರಾದ ಪ್ರವೀಣ್ ಶೆಟ್ಟಿ ಪುತ್ತೂರು, ಕಲ್ಪವೃಕ್ಷ ಸಮಾಜ ಕಲ್ಯಾಣ ಯೋಜನೆಯ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ, ಪದಾಧಿಕಾರಿಗಳಾದ ರವಿ ಕೆ ಶೆಟ್ಟಿ ಕಾಪು, ಕಿಶೋರ್ ಹೆಗ್ಡೆ, ದಕ್ಷಿಣ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಶೇಖರ ಸಿ ಶೆಟ್ಟಿ, ಉತ್ತರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಣೇಶ್ ಪೂಂಜಾ, ಯುವ ವಿಭಾಗದ ಕಾರ್ಯಾಧ್ಯಕ್ಷ ಉದಯ್ ಶೆಟ್ಟಿ ಮತ್ತಿತರರು ಉಪಸ್ತಿತರಿದ್ದರು.

Read More

ಮುಂಬಯಿ:- ಚಿಣ್ಣರಬಿಂಬದ ಇಪ್ಪತ್ತನೆಯ ವರ್ಷದ ಮಕ್ಕಳ ಉತ್ಸವವು ದಿನಾಂಕ 19/2/2023ರ ಭಾನುವಾರದಂದು ಬೆಳಿಗ್ಗೆ 10ರಿಂದ ಕುರ್ಲಾ ಪೂರ್ವದ ಬಂಟರ ಭವನದ ರಾಧಾಬಾಯಿ.ಟಿ.ಭಂಡಾರಿ ಸಭಾಂಗಣದಲ್ಲಿ ಚಿಣ್ಣರ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಕ್ಕಳ ಉತ್ಸವವನ್ನು ಶ್ರೀ ಸಿ.ಟಿ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ದೀಪ ಪ್ರಜ್ವಲಿಸಿ ಉದ್ಘಾಟಿಸಲಿದ್ದಾರೆ ಮುಂಬಯಿ ಸಂಸದರಾದ ಮಾನ್ಯ ಶ್ರೀ ಗೋಪಾಲ ಶೆಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಎಂ.ಆರ್.ಜಿ ಗ್ರೂಪ್ ಇದರ ಸಂಸ್ಥಾಪಕ ಕಾರ್ಯಾಧ್ಯಕ್ಷರಾಗಿರುವ ಶ್ರೀ ಕೆ. ಪ್ರಕಾಶ್ ಶೆಟ್ಟಿ ಇವರು ಆಗಮಿಸಲಿದ್ದಾರೆ. ಜಾಗತಿಕ ಬಂಟರ ಸಂಘಗಳ ಅಧ್ಯಕ್ಷರಾಗಿರುವ ಶ್ರೀ ಐಕಳ ಹರೀಶ್ ಶೆಟ್ಟಿ, ವಿ.ಕೆ ಗ್ರೂಪ್‍ನ ಆಡಳಿತ ನಿರ್ದೇಶಕರಾಗಿರುವ ಕೆ.ಎಂ.ಶೆಟ್ಟಿ, ರಾಕ್ಷಿ ಡೆವಲಪರ್ಸ್ ಪ್ರೈ.ಲಿ ಇದರ ನಿದೇಶಕರಾಗಿರುವ ಶ್ರೀ ರಾಜೇಶ್ ಶೆಟ್ಟಿ, ಜಾಗತಿಕ ಬಂಟರ ಸಂಘದ ನಿರ್ದೇಶಕರಾಗಿರುವ ಪ್ರವೀಣ್ ಭೋಜ ಶೆಟ್ಟಿ, ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಇದರ ಆಡಳಿತ ನಿರ್ದೇಶಕರಾಗಿರುವ ಶ್ರೀ ಆನಂದ ಶೆಟ್ಟಿ, ಬಿಲ್ಲವರ ಅಸೋಸಿಯೇಶನ್ನಿನ…

Read More

ದಿನಾಂಕ:04/06/1960ರಂದು ಇವರ ಜನನವಾಯಿತು. ಇವರು ಬಾಲ್ಯದಲ್ಲಿಯೇ ಹೆಚ್ಚಾಗಿ ಯಕ್ಷಗಾನದ ಬಗ್ಗೆ ಆಸಕ್ತಿಯುಳ್ಳವರಿಗಿದ್ದು, ನಂತರ ಮಧುರಾದಿ ರಸಗಳ ಸಮಾಪಾಕವಾಗಿ ಸೌಂದರ್ಯ ಶ್ರೀಮಂತಿಗೆಯಿಂದ ಸುಶೋಭಿತವಾಗಿ ಯಕ್ಷಗಾನದ ಯಾರ ಅನೂಕರಾಣೆಯು ಇಲ್ಲದೆ ತನ್ನದೇ ಶೈಲಿಯಿಂದ ಯಕ್ಷಗಾನಕ್ಕೆ ತನ್ನದ್ದೆ ಆದ ಕೊಡುಗೆಯನಿತ್ತವರು. ಮೇಳವನ್ನು ಸೇರುವ ಮೊದಲು ಇವರಿಂದಲೇ ಸ್ಥಾಪಿತವಾದ “ಶ್ರೀ ವೀರಭದ್ರೇಶ್ವರ ಕಲಾ ಸಂಘ” ಇದು ಅವರ ನಿರ್ದೇಶನದಲ್ಲಿ ಯಶಸ್ವಿ ಕಂಡಿತ್ತು. ನಂತರ ಬದುಕನ್ನು ಕಟ್ಟಿಕೊಳ್ಳುದಕ್ಕಾಗಿ ಆಯ್ಕೆಮಾಡಿಕೊಂದದ್ದು ಯಕ್ಷಗಾನ ಮೇಳ. ಯಕ್ಷರಂಗದ ಬೀಷ್ಮನೆಂದೇ ಖ್ಯಾತರಾದ ಎಂ. ಎಂ. ಹೆಗ್ಡೆಯವರ ಸಂಚಾಲಕತ್ವದ ಮಾರಣಕಟ್ಟೆ ಮೇಳವನ್ನು ಸೇರಿಕೊಂಡರು ಇವರು ಮಾರಣಕಟ್ಟೆ ಮೇಳದಲ್ಲಿ ಹೆಸರಾಂತ ಆಗ್ರಾಮನ್ಯ ಕಲಾವಿದರಾದ ಐರಬೈಲು ಆನಂದ ಶೆಟ್ಟಿ, ನಾಗೂರು ಶ್ರೀನಿವಾಸ, ದೇವಾಡಿಗ, ಮೊಳಹಳ್ಳಿ ದಿ||ಹೆರಿಯ ನಾಯ್ಕ, ಏಳಬೇರು ಶೇಖರ್ ಶೆಟ್ಟಿ ಮುಂತಾದವರೊಂದಿಗೆ ರಂಗವನ್ನು ಹಂಚಿಕೊಂಡಿದ್ದಾರೆ. ಇವರು “ಕೌರವ”,”ದ್ರೋಣ”, ವಿಕ್ರಮ”, “ಕೋಲಮುನಿ”, “ಕಮಲಭೂಪ” ಮುಂತಾದ ಪಾತ್ರಗಳನ್ನು ಪಾರಂಪರಿಕ ಪರಿದಿಯಲ್ಲಿ ಪ್ರಸ್ತುತ ಪಡಿಸುವ ರಂಗ ತಾದ್ಯಾತ್ಮ ಶ್ಲಾಘನೀಯವಾದದ್ದು. ಇವರು ಬಾಳಸಂಗಾತಿಯಾಗಿ ಪಾರ್ವತಿ ಎನ್ನುವವರ ಕೈಹಿಡಿದು ಇವರ ದಾಂಪತ್ಯದ ಪ್ರತೀಕವಾಗಿ ಪ್ರತ್ವಿರಾಜ್,…

Read More

ರಥಸಪ್ತಮಿ ಭೂಮಿಯ ಸಕಲ ಜೀವರಾಶಿಗಳ ಚಟುವಟಿಕೆಗೆ ಕಾರಣನಾದ ‌ಪ್ರತ್ಯಕ್ಷವಾಗಿ ಕಾಣುವ‌‌ ಸೂರ್ಯದೇವರ‌ ಹಬ್ಬ. ಭಾರತೀಯ ‌ಪಂಚಾಗ‌ ಪ್ರಕಾರ ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು. ಇದೆ ಫೆಬ್ರವರಿ 7ರಂದು ಸೂರ್ಯನು ತನ್ನ ಹಳೆಯ‌ರಥವನ್ನು ಬಿಟ್ಟು ಹೊಸರಥ ಹತ್ತುವ ದಿನ. ರಥ ಸಪ್ತಮಿಯ‌ ದಿನ ಸೂರ್ಯೊದಯದ ಸಮಯದಲ್ಲಿ ನದಿ, ಸಮುದ್ರದಲ್ಲಿ ‌ಸ್ನಾನ ಮಾಡಿ ಸೂರ್ಯನಿಗೆ ಅರ್ಘ ನೀಡಿದರೆ ಸಕಲಪಾಪ ಹಾಗೂ ದುಃಖ ನಿವಾರಣೆಯಾಗುತ್ತದೆ‌ ಎಂಬ ನಂಬಿಕೆ ಇದೆ. ರಥ ಸಪ್ತಮಿಯ ಆಚರಣೆಯ ಹಿಂದೆ ಬಲವಾದ ವೈಜ್ಞಾನಿಕ ಕಾರಣವಿದೆ.ಆರೋಗ್ಯಕ್ಕೆ ಸೂರ್ಯನ ಶಾಖ ಹಾಗೂ ಜೀವಿಗಳಲ್ಲಿ ‌ಹೊಸತನ ಮೂಡಲು ಸಹಾಯಕವಾಗುವ ಸೂರ್ಯ ಕಿರಣಗಳಲ್ಲಿ ಹೇರಳ ವಿಟಮಿನ್ ಡಿ ಇದೆ. ಯೋಗಾಸಗಳಲ್ಲಿ ಮೊದಲ ಪ್ರಾಶಸ್ತ್ಯ ವೂ ಸೂರ್ಯ ನಮಸ್ಕಾರಕ್ಕೆ. ಆದಿತ್ಯ ಹೃದಯ ಸೋತ್ರಪಾರಾಯಣ ಇಂದಿಗೂ ನಂಬಿದವರಿಗೆ ಇಂಬು ನೀಡುವಂತಹದ್ದು. ಸೂರ್ಯ ಉಪಾಸನೆಯಿಂದ ಸಾಂಬ ಎಂಬವ ತನ್ನ ಕುಷ್ಠರೋಗವನ್ನು ಗುಣ ಮಾಡಿಕೊಂಡು ಇಲ್ಲಿ ಸೂರ್ಯ ನು ಸಾಂಬನಿಗೆ ಪ್ರತ್ಯಕ್ಷನಾಗಿದ್ದ ದಿನವೆ ರಥ ಸಪ್ತಮಿ‌. ದಕ್ಷಿಣಾಯಣ‌ ಮುಗಿದು ಸೂರ್ಯ…

Read More

ವೃತ್ತಿಪರ ಶ್ರೇಷ್ಠತೆ ಉತ್ತೇಜಿಸಲು ಐಬಿಸಿಸಿಐ ಶ್ರಮಿಸುತ್ತಿದೆ : ಕೆ.ಸಿ.ಶೆಟ್ಟಿ (ಚಿತ್ರ  /  ವರದಿ : ರೋನ್ಸ್ ಬಂಟ್ವಾಳ್) ಮುಂಬಯಿ, ನ.23: ಉದ್ಯಮವನ್ನು ಪ್ರಾರಂಭಿಸುವ ಮೊದಲು ಕೆಲವು ವ್ಯವಹಾರ ಅನುಭವ ಪಡೆದು ಉದ್ಯಮದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದು ಇಂದಿನ ಅಗತ್ಯವಾಗಿದ್ಯೆ. ಉದ್ಯಮಶೀಲತೆ ಮತ್ತು ವೃತ್ತಿಪರ ಶ್ರೇಷ್ಠತೆಯನ್ನು ಉತ್ತೇಜಿಸಲು ಐಬಿಸಿಸಿಐ ಗಮನಾರ್ಹ ಪಾತ್ರ ವಹಿಸುತ್ತದೆ. ನಮ್ಮಲ್ಲಿನ ಉದ್ಯಮಶೀಲರ ಸಮಸ್ಯೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಸ್ವಂತಕ್ಕೆ ಲಾಭೋದ್ದೇಶವಿಲ್ಲದ ಐಬಿಸಿಸಿಐ ಉದ್ಯಮಶೀಲರ ಸರ್ಕಾರೇತರ ಸಂಸ್ಥೆ ಇದಾಗಿದೆ. ಉದ್ಯಮಿಗಳು ಮತ್ತು ಉದ್ಯಮ, ವ್ಯಾಪಾರ, ವ್ಯವಹಾರಗಳ ಸಮನ್ವಯಕವಾಗಿ ಇದು ಶ್ರಮಿಸುತ್ತಿದ್ದು, ಯುವ ಉದ್ಯಮಿಗಳಲ್ಲಿ ವ್ಯವಹಾರ ಸಾಮರ್ಥ್ಯ ನಿರ್ಮಾಣ ಮತ್ತು ಉದ್ಯಮಗಳ ವೇಗವರ್ಧಕಗಳೊಂದಿಗೆ ಅವಕಾಶ ಸಂಪರ್ಕಿಸಲು ಮಾರ್ಗದರ್ಶನ ನೀಡುತ್ತದೆ ಎಂದು ಇಂಡಿಯನ್ ಬಂಟ್ಸ್ ಚೇಂಬರ್ ಆಫ್ ಕಾಮರ್ಸ್ ಎಂಡ್ ಇಂಡಸ್ಟ್ರಿ (ಐಬಿಸಿಸಿಐ) ಸಂಸ್ಥೆಯ ಕಾರ್ಯಾಧ್ಯಕ್ಷ ಕೆ.ಸಿ.ಶೆಟ್ಟಿ (ಕುತ್ಪಾಡಿ ಚಂದ್ರ ಶೆಟ್ಟಿ) ತಿಳಿಸಿದರು. ಕಳೆದ ಬುಧವಾರ ಸಂಜೆ ಅಂಧೇರಿ ಪೂರ್ವದಲ್ಲಿನ ಸಾಕಿನಾಕಾದ ಹೋಟೆಲ್ ಪೆನಿನ್ಸುಲಾ ಗ್ರ್ಯಾಂಡ್‍ನ ಸಭಾಗೃಹದಲ್ಲಿ ಐಬಿಸಿಸಿಐ ಸಂಸ್ಥೆ ಆಯೋಜಿಸಿದ್ದ ಜ್ಞಾನ ಶೃಂಗಸಭೆ-2ರ ಅಧ್ಯಕ್ಷತೆ ವಹಿಸಿ…

Read More