Author: admin
ಜೈನ್ ಟ್ಯೂಬ್ಸ್ ಉದ್ದಿಮೆ ಕರಾವಳಿಯಲ್ಲಿ ಉತ್ತಮ ವ್ಯವಹಾರ ನಡೆಸಿ ಅಭಿವೃದ್ಧಿ ಹೊಂದಲಿ ಎಂದು ಸಿಎ ನಿತಿನ್ ಶೆಟ್ಟಿ ಹಾರೈಸಿದರು. ಅವರು ಮಾ.30 ರಂದು ಪಡುಬಿದ್ರಿ ಹೆಜಮಾಡಿ ಭಾಗದಲ್ಲಿ ನೂತನವಾಗಿ ಆರಂಭವಾಗಿರುವ ಜೈನ್ ಟ್ಯೂಬ್ಸ್ ಉದ್ದಿಮೆಯ ಮೊದಲನೇ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಜೈನ್ ಗ್ರೂಪ್ ಆಫ್ ಕಂಪನೀಸ್ ನ ಸಂಸ್ಥಾಪಕ ಮಹೇಂದ್ರ ಕುಮಾರ್ ಜೈನ್ ಮಾತನಾಡಿ, ಎಲ್ಲರ ಮಾರ್ಗದರ್ಶನ, ದೂರದರ್ಶಿತ್ವ, ಸಲಹೆ ಹಾಗೂ ವಿಚಾರಗಳಿಂದಲೇ ನಾವು ಬೆಳೆದಿದ್ದೇವೆ. ನಿಮ್ಮೆಲ್ಲರ ಸಹಕಾರ ಜೈನ್ ಗ್ರೂಪ್ ನೊಂದಿಗಿರಲಿ ಎಂದರು. ಜೈ ಹಿಂದ್ ಗ್ರೂಪ್ ನ ಚೇರ್ಮನ್ ಹಾಗೂ ಆಡಳಿತ ನಿರ್ದೇಶಕ ದಿವ್ಯ ಕುಮಾರ್ ಜೈನ್ ಮಾತನಾಡಿ, ಯಾವುದೇ ಉತ್ಪಾದನ ಘಟಕ ಸ್ಥಾಪನೆಗೆ ಉಡುಪಿ ಜಿಲ್ಲೆಯ ಜನರ ಮನೋಭಾವನೆ ಮತ್ತು ಜೈವಿಕ ಪರಿಸರ ವ್ಯವಸ್ಥೆ ಪೂರಕವಾಗಿವೆ. ಭಾರತ ವಿಶ್ವದ ಅಗ್ರಮಾನ್ಯ ಉತ್ಪಾದನ ಹಬ್ ಎನಿಸಲಿದೆ. ಜೈ ಹಿಂದ್ ಗ್ರೂಪ್ ಕೂಡ ನಿಮ್ಮೆಲ್ಲರ ಸಹಕಾರದೊಂದಿಗೆ ಅಗ್ರಪಂಕ್ತಿಯಲ್ಲಿ ಮುಂದುವರಿಯಲಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಆಸ್ಪೆನ್ ಇನ್ಫ್ರಾ ಎಸ್ಇಝೆಡ್ ನ ಹಿರಿಯ…
ಕರಾವಳಿ ಭಾಗದಲ್ಲಿ ಮತ್ತೆ ಉಷ್ಣ ಅಲೆಯ ಎಚ್ಚರಿಕೆಯ ಸಂದೇಶವನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದೆ. ಮುನ್ಸೂಚನೆಯಂತೆ ಮಾ. 10ರಂದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಉಷ್ಣ ಅಲೆ ಬೀಸಲಿದ್ದು, ಗರಿಷ್ಠ ಉಷ್ಣಾಂಶ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಕಳೆದ ವಾರ ಮಾ. 4ರಂದು ಉಷ್ಣ ಅಲೆ ಮತ್ತು ಮಾ. 8ರಂದು ಕಡಲಿನ ಅಬ್ಬರದ ಎಚ್ಚರಿಕೆಯನ್ನು ಐಎಂಡಿ ನೀಡಿತ್ತು. ಅದರಂತೆ ಕರಾವಳಿಯ ಹಲವು ಕಡೆಗಳಲ್ಲಿ ಉರಿ ಸೆಕೆ ಮತ್ತು ಉಷ್ಣತೆಯಿಂದ ಕೂಡಿದ ಗಾಳಿ ಬೀಸಿತ್ತು. ಈಗ ಮತ್ತೆ ಎಚ್ಚರಿಕೆ ನೀಡಲಾಗಿದ್ದು, ಸಾರ್ವಜನಿಕರು ಎಚ್ಚರಿಕೆಯಿಂದ ಇರುವ ಅಗತ್ಯ ಇದೆ. ಮಾರ್ಚ್ನಲ್ಲಿ ಅತ್ಯಧಿಕ ತಾಪಮಾನ : ಭಾರತೀಯ ಹವಾಮಾನ ಇಲಾಖೆ ಅಧಿಕಾರಿ ಪ್ರತಿಕ್ರಿಯಿಸಿ, ಸಾಮಾನ್ಯವಾಗಿ ಮಾರ್ಚ್ ತಿಂಗಳಿನಲ್ಲಿ ಉಷ್ಣ ಅಲೆ ಬರುವುದಿಲ್ಲ. ಈ ವರ್ಷ ಉತ್ತರ ಭಾರತದ ಹಲವು ಕಡೆಗಳಲ್ಲಿ ಫೆಬ್ರವರಿಯಲ್ಲಿ ಗರಿಷ್ಠ ತಾಪಮಾನ ಹೆಚ್ಚು ಇತ್ತು. ಉತ್ತರ ದಿಕ್ಕಿನಿಂದ ಸುಳಿಗಾಳಿ ಬೀಸುತ್ತಿದ್ದು, ಉಷ್ಣ ಅಲೆಯನ್ನು ತರುತ್ತಿದೆ. ಪರಿಣಾಮವಾಗಿ ಕರಾವಳಿಯಲ್ಲಿ ಈಗಿರುವ ಉಷ್ಣಾಂಶ ಮತ್ತಷ್ಟು…
ಮುಂಬಯಿಯಲ್ಲಿ ನಗರದ ಹೃದಯ ಭಾಗವಾಗಿರುವ ವರ್ಲಿಯಲ್ಲಿ ಮಧುಸೂದನ್ ಮಿಲ್ ಕಂಪೌಂಡಿನಲ್ಲಿ ಇರುವ ಅಪ್ಪಾಜಿ ಬೀಡು ಫೌಂಡೇಶನ್[ರಿ] ಮತ್ತು ಐ ಲೇಸಾ ದಿ ವಾಯ್ಸ್ ಆಫ್ ಓಷನ್ [ರಿ] ಸಂಸ್ಥೆಯು ಜಂಟಿಯಾಗಿ ಕಲಾವಿದ ಸೂರಿ ಮಾರ್ನಾಡ್ ಸಾಹಿತ್ಯದ ಹಸಿರು ಬೆಟ್ಟದ ಒಡೆಯ ಭಕ್ತಿಗೀತೆಯನ್ನು ಲೋಕಾರ್ಪಣೆ ಮಾಡಲಾಯಿತು. ಮುಖ್ಯ ಅತಿಥಿಯಾಗಿ ಟೀಂ ಐಲೇಸಾದ ಕವಿ ಸಾಹಿತಿ ಶಾಂತರಾಮ ಶೆಟ್ಟಿಯವರು ಮಾತನಾಡುತ್ತಾ ಕೊರೋನ ಸಂದರ್ಭದಲ್ಲಿ ಕವಿತೆ ಒಂದನ್ನು ಬರೆದಿದ್ದೆ ಅದನ್ನು ಕಂಡು ನನ್ನ ಆತ್ಮೀಯರಾಗಿದ್ದ ಕೆಲವರು ಅದಕ್ಕೊಂದು ಗಟ್ಟಿತನದ ಶಕ್ತಿ ನೀಡಿದರು, ವಿದೇಶದ ಗೆಳೆಯರು ಕೂಡ ಅದಕ್ಕೆ ಸಹಕಾರ ಆ ಶಕ್ತಿಯೇ ಐ ಲೇಸಾ ತಂಡವಾಗಿ ಬೆಳೆದು ಬಂತು. ಸೂರಿ ಮಾರ್ನಾಡ್ ಓರ್ವ ಅದ್ಭುತ ಕಲಾವಿದ ಅಯ್ಯಪ್ಪ ಸ್ವಾಮಿ ಭಕ್ತರಾಗಿರುವ ಅವರು ಭಕ್ತಿಯ ಅನುಭವಗಳನ್ನು ಸಾಹಿತ್ಯದಲ್ಲಿ ಹಂಚಿಕೊಂಡಿದ್ದಾರೆ. ಭಕ್ತಿಗೀತೆ ಜನಸಾಮಾನ್ಯರಿಗೆ ತಲುಪುವ ಕೆಲಸ ನಮ್ಮೆಲ್ಲರಿಗೂ ಆಗಿದೆ ಅದು ಅವರಿಗೆ ನೀಡುವ ಕೊಡುಗೆಯಾಗಿದೆ ಎಂದು ನುಡಿದರು. ಅಂದೇರಿ ಅಯ್ಯಪ್ಪ ಭಕ್ತಬಂಧದ ಸಂಸ್ಥಾಪಕ ಚಂದ್ರಹಾಸ್ ಗುರುಸ್ವಾಮಿ ಇನ್ನಂಜೆ ಆಶೀರ್ವಚನ…
ಮುಂಬಯಿ (ಆರ್ಬಿಐ), ಜ.25: ಬೃಹನ್ಮುಂಬಯಿ ಚೆಂಬೂರು ಛೆಡ್ಡಾ ನಗರದಲ್ಲಿನ ಶ್ರೀನಾಗ ಸುಬ್ರಹ್ಮಣ್ಯ ಪ್ರತಿಷ್ಠಾಪಿತ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಜರುಗುತ್ತಿರುವ ಬ್ರಹ್ಮಕಲಶಾಭಿಷೇಕ ಸಮಾರಂಭದಲ್ಲಿ ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನವಾದ ಶ್ರೀ ಸಂಪುಟ ನರಸಿಂಹಸ್ವಾಮೀ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದ ಪೀಠಾಧಿಪತಿ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅವರು ಗೋಪಾಲ್ ಶೆಟ್ಟಿ ಮತ್ತು ಉಷಾ ಜಿ.ಶೆಟ್ಟಿ ದಂಪತಿ ಹಾಗೂ ಅತಿಥಿüಯಾಗಿದ್ದ ಶ್ರೀ ಗೋಪಾಲ್ ಸಿ.ಶೆಟ್ಟಿ (ಸಂಸದ) ತುಳು ಕನ್ನಡಿಗರ ಅಭಿಮಾನಿ ಬಳಗದ ಸಂಚಾಲಕ, ಮಹಾನಗರದಲ್ಲಿನ ಹೆಸರಾಂತ ಸಂಘಟಕ ಎರ್ಮಾಳ್ ಹರೀಶ್ ಶೆಟ್ಟಿ, ಕನ್ನಡ ಸಂಘ ಸಾಂತಾಕ್ರೂಜ್ ಅಧ್ಯಕ್ಷೆ ಸುಜತಾ ಆರ್.ಶೆಟ್ಟಿ ಉಪಸ್ಥಿತರಿದ್ದು ಗಣ್ಯರನ್ನು ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆಗಳನ್ನೀಡಿ ಸನ್ಮಾನಿಸಿ ಶುಭಾರೈಸಿ ಮಂತ್ರಾಕ್ಷತೆಯನ್ನಿತ್ತು ಅನುಗ್ರಹಿಸಿದರು. ಅರುಣಾ ನಾಗೇಂದ್ರ ಆಚಾರ್ಯ ದಂಪತಿ ಸಂಸದರನ್ನು ಬರಮಾಡಿ ಕೊಂಡರು. ವಿದ್ವಾನ್ ಹೆರ್ಗ ರವೀಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ಶ್ರೀಪ್ರಸಾದ್ ಭಟ್ ಉಪಸ್ಥಿತರಿದ್ದು ಸುಬ್ರಹ್ಮಣ್ಯ ಮಠ ಮುಂಬಯಿ ಶಾಖೆಯ…
ಆಡು ಮುಟ್ಟದ ಸೊಪ್ಪಿಲ್ಲ ಅನ್ನುವ ಮಾತಿನಂತೆ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ತತ್ವದಡಿ ಕಳೆದ 40 ವರ್ಷಗಳಿಂದ ಸರ್ವ ಕ್ಷೇತ್ರಗಳಲ್ಲಿ ತೊಡಗಿ ಸಮಾಜ ಸೇವೆಯಲ್ಲಿ ಎ.ಹೇಮನಾಥ ಶೆಟ್ಟಿ ಕಾವುರವರು ನಿರತರಾಗಿದ್ದಾರೆ. ಸುದೀರ್ಘ ಕಾಲದಿಂದ ಕೃಷಿ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಶಿಕ್ಷಣ, ಉದ್ಯಮ, ಧಾರ್ಮಿಕ ಕ್ಷೇತ್ರದಲ್ಲಿ ದುಡಿಯುತ್ತಿರುವ ಹೇಮನಾಥ ಶೆಟ್ಟಿ ಅವರು ಬಂಟ ಸಮುದಾಯದ ಜತೆಗೆ ಸರ್ವ ಸಮುದಾಯದ ಪ್ರೀತಿ ಗಳಿಸಿದ ವ್ಯಕ್ತಿ. ನೊಂದವರಿಗೆ, ಅಶಕ್ತರ ಆಶಾಕಿರಣರಾಗಿರುವ ಇವರು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ನಿರೀಕ್ಷೆಗಳಿಗೆ ಸ್ವಂದಿಸುವ ಧಣಿವರಿಯದ ನಾಯಕ ಅನ್ನುವ ಅಭಿಮಾನಕ್ಕೆ ಪಾತ್ರರಾದವರು. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬೆಟ್ಟಗೇರಿ ಬನ್ನೂರು ಗುತ್ತು ಮನೆಯಲ್ಲಿ ಡಿಸೆಂಬರ್ 21-1964 ರಲ್ಲಿ ಕಾವು ಅಂತಪ್ಪ ಶೆಟ್ಟಿ ಮತ್ತು ಬನ್ನೂರು ಗುತ್ತು ತಾರಾ ಅಂತಪ್ಪ ಶೆಟ್ಟಿ ದಂಪತಿಗಳ ತೃತೀಯ ಪುತ್ರನಾಗಿ ಜನಿಸಿದರು. ಮಡಿಕೇರಿ ಸೈಂಟ್ ಮೈಕೆಲ್, ಮಾಡ್ನೂರು ಕಾವು ಪ್ರಾಥಮಿಕ ಶಾಲೆಯಲ್ಲಿ ಹಾಗೂ ಪೆರ್ನಾಜೆ ಸೀತಾ ರಾಘವ ಪ್ರೌಢಶಾಲೆ ಮತ್ತು ಕಾವು ಸರಕಾರಿ ಪ್ರಾಥಮಿಕ…
ಮನೆಯಿಂದ ವಧು – ವರರು ಹೊರಡುವ ಮುನ್ನ ಮನೆ ದೇವರಿಗೆ, ದೈವಗಳಿಗೆ ಮತ್ತು ನಾಗದೇವರ ಚಾವಡಿಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಹೊರಡಬೇಕು. ಎಲ್ಲಾ ಹಿರಿಯರು ಮುಂಡಾಸು ಕಟ್ಟಿಕೊಳ್ಳುವುದು ಸಂಸ್ಕೃತಿ. ಮದುವೆ ಸಭಾಭವನದ ಮುಖ್ಯ ದ್ವಾರದಲ್ಲಿ ಸ್ವಾಗತಿಸುವ ಸಂದರ್ಭ ಕಾಲಿಗೆ ನೀರು ಹಾಕುವುದು ಚಿಕ್ಕಮ್ಮ ಅಥವಾ ಸೋದರ ಅತ್ತೆ. ಕೈ ಹಿಡಿಯುವುದು ಗಂಡಿನ ಸಹೋದರಿ ಮತ್ತು ಭಾವ. ಆರತಿ ಬೆಳಗುವುದು ಹೆಣ್ಣಿಗೆ ಮುತೈದೆ ಹೆಂಗಸರಿಂದ. ವೇದಿಕೆಯಲ್ಲಿ ಕಾಲುದೀಪವನ್ನು ವಧು – ವರರ ಮಾತಾ ಪಿತೃಗಳು ಬಂಟ ಗುರಿಕಾರನ ನೇತ್ರತ್ವದಲ್ಲಿ ಎಲ್ಲಾ ದೈವ – ದೇವರುಗಳನ್ನು ಪ್ರಾರ್ಥಿಸಿ ಬೆಳಗಿಸಬೇಕು. ಅಲ್ಲಿಯೇ ಗಣಪತಿಗೆ ಸುತ್ಯೆ ಇಟ್ಟು ಪ್ರಾರ್ಥಸುವುದು. ಹಿರಿಯರು ಮುಂಡಾಸು ಧರಿಸರಬೇಕು. ವಧು – ವರರನ್ನು ಒಟ್ಟಾಗಿಯೂ ಅಥವಾ ಬೇರೆ ಬೇರೆಯಾಗಿಯೂ ವೇದಿಕೆಗೆ ಕರೆದುಕೊಂಡು ಹೋಗಬಹುದು. ಮುಖ್ಯ ದ್ವಾರದಲ್ಲಿ ಆರತಿ ಮಾತ್ರ ಪ್ರತ್ಯೇಕ ಆಗತಕ್ಕದು. ವರನು ವೇದಿಕೆಯ ಬಲಭಾಗದಲ್ಲಿಯೂ, ವಧುವು ಎಡಭಾಗದಲ್ಲಿಯೂ ಕುಳಿತುಕೊಳ್ಳತಕ್ಕದ್ದು. ಅಲ್ಲಿ ವಧುವಿಗೆ ವರನ ಕಡೆಯಿಂದ ಉಡುಗೊರೆ ಕೊಟ್ಟು ಸತ್ಕರಿಸಬಹುದು. ಆಮೇಲೆ ಎರಡು ಕಡೆಯ…
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’- ಸದ್ಯ ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳ ಸಾಲಿನಲ್ಲಿ ಕೇಳಿ ಬರುವ ಹೆಸರು. ಆರಂಭದಿಂದಲೂ ವಿಭಿನ್ನ ಪ್ರಚಾರ ತಂತ್ರದ ಮೂಲಕ ಗಮನ ಸೆಳೆದಿರುವ ಈ ತಂಡ ಈಗ ಟ್ರೇಲರ್ ಬಿಡುಗಡೆ ಮಾಡಿದೆ. ಬೆಂಗಳೂರಿನ ನಂದಿ ಲಿಂಕ್ಸ್ ಗ್ರೌಂಡ್ನಲ್ಲಿ ಅದ್ಧೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ಕುಮಾರ್, ರಿಷಭ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಧ್ರುವ ಸರ್ಜಾ ಸೇರಿದಂತೆ ಸ್ಯಾಂಡಲ್ವುಡ್ ತಾರೆಯರು ಕಾರ್ಯಕ್ರಮಕ್ಕೆ ಆಗಮಿಸಿ ತಂಡಕ್ಕೆ ಶುಭ ಹಾರೈಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಿಷಭ್ ಶೆಟ್ಟಿ, “ನನ್ನ ಶಿಷ್ಯಂದಿರೇ ಸೇರಿ ಮಾಡಿರುವ ಸಿನಿಮಾ. ಅರವಿಂದ್, ಪ್ರಜ್ವಲ್ ಇವರೆಲ್ಲರನ್ನೂ ಲೂಸಿಯಾ ಸಮಯದಿಂದಲೂ ನೋಡಿಕೊಂಡು ಬರುತ್ತಿದ್ದೇನೆ. ತುಂಬಾ ಅದ್ಭುತ ಟೆಕ್ನಿಷಿಯನ್ಸ್. ಒಂದು ಸಿನಿಮಾದ ಕಥೆ ಇದೆ ಗೆಸ್ಟ್ ಅಪಿಯರೆನ್ಸ್ ಮಾಡ್ತೀರಾ ಅಂತಾ ಕೇಳಿದರು. ಕಥೆ ಏನೂ ಕೇಳಿಲ್ಲ. ಒಂದು ರಾತ್ರಿಯಷ್ಟೇ ಪಾತ್ರವನ್ನು ಚಿತ್ರೀಕರಿಸಲಾಯಿತು. ಪವನ್ ಇದ್ದರು. ಶೈನ್ ಶೆಟ್ಟಿ ಇದ್ದರು. ಬಹಳ ಅದ್ಭುತವಾಗಿ ಶೂಟಿಂಗ್ ಅನುಭವ. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಒಂದು ಅದ್ಭುತ…
ನಮ್ಮ ದೇಶದಲ್ಲಿರುವ ವಿಪುಲ ಜನಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ದೇಶದಲ್ಲಿ ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸುವ, ಪ್ರೋತ್ಸಾಹಿಸುವ ಅನೇಕ ಅವಕಾಶಗಳು ಲಭ್ಯವಿದೆ. ಭಾರತದಂತಹ ಆಗಾಧ ಜನಸಂಖ್ಯೆ ಮತ್ತು ವಿಸ್ತಾರವನ್ನು ಹೊಂದಿರುವ ದೇಶದಲ್ಲಿ ಅದನ್ನು ಜನರಿಗೆ ಮುಟ್ಟಿಸುವಲ್ಲಿ ತೊಡಕುಗಳಿದ್ದು, ಗ್ರಾಮೀಣ ಬಂಟರ ಸಂಘದಂತಹ ಸಂಸ್ಥೆಗಳು ಈ ಬಗ್ಗೆ ಆಸಕ್ತಿ ವಹಿಸಿ ಮುಂದೆ ಬರಬೇಕಾಗಿದೆ ಎಂದು ಮಣಿಪಾಲ್ ಸೆಂಟರ್ ಫಾರ್ ಯುರೋಪಿಯನ್ ಸ್ಟಡೀಸ್ ನ ಮುಖ್ಯಸ್ಥೆ ಡಾ. ನೀತಾ ಇನಾಂದರ್ ಹೇಳಿದರು. ಕುಂತಳನಗರ ಉಡುಪಿ ಗ್ರಾಮೀಣ ಬಂಟರ ಸಂಘದ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಸಂಘದ ಸಿಲ್ಕ್ ಡೆವಲಪ್ ಮೆಂಟ್ ಸೆಂಟರ್ ನಲ್ಲಿ ನಡೆದ ಕಂಪ್ಯೂಟರ್ ಸಾಕ್ಷರತಾ ತರಬೇತಿ ಕಾರ್ಯಕ್ರಮದ 7 ಮತ್ತು 8 ನೇ ಬ್ಯಾಚ್ ನ ವಿದ್ಯಾರ್ಥಿ ಗಳಿಗೆ ಪ್ರಮಾಣ ಪತ್ರ ವಿತರಣೆ ಹಾಗೂ 9 ನೇ ಬ್ಯಾಚ್ ನ ವಿದ್ಯಾರ್ಥಿಗಳ ಒರಿಯಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದ ತರಬೇತಿಯ ಪ್ರಯೋಜಕ ಸಂಸ್ಥೆ ಆಲ್ ಕಾರ್ಗೋ ಲಾಜಿಸ್ಟಿಕ್ ಸಿಎಸ್ಆರ್ ಎಕ್ಸಿಕ್ಯೂಟಿವ್ ಸವಿಸ್ತಾರ್…
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಜೇನು ತುಪ್ಪವೆಂದರೆ ಜೇನು ನೊಣಗಳಿಂದ ಉತ್ಪಾದನೆಯಾಗಿರುವ ನೈಸರ್ಗಿಕ ಸಿಹಿ ಪದಾರ್ಥ. ಇದು ಜೇನು ನೊಣಗಳ ಶ್ರಮದ ಫಲ. ಆದರೆ ಅದೇ ಜೇನು ಬಿಡಿಸಲು ಅಂದರೆ ಜೇನು ತಟ್ಟಿಯಿಂದ ಜೇನು ತುಪ್ಪ ಸಂಗ್ರಹಿಸಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಮಾನವ ಜೇನುಗಳಿಗೆ ವಿಷ ಸಿಂಪಡಿಸಿ ಅವುಗಳನ್ನು ನಿರ್ನಾಮ ಮಾಡುವ ವಿಕೃತ ಮನಸ್ಥಿತಿಯ ಸಂಪೂರ್ಣ ನೋಟ ಬೆಳಕಿಗೆ ಬಂದಿದೆ. ಕಾಡು ಹೆಜ್ಜೇನುಗಳು ದಾರಾಳವಾಗಿ ಜೇನುತುಪ್ಪ ಸಂಗ್ರಹಿಸುತ್ತದೆ. ಜೇನಿನ ಆಸೆಗೆ ವಿಷ ಸಿಂಪಡಿಸಿ ಅವುಗಳ ಕೊಲ್ಲುವುದು ಅಕ್ಷಮ್ಯ ಅಪರಾಧ. ವಿದ್ಯಾವಂತ ಬುದ್ದಿವಂತ ಮಾನವನ ಬುದ್ದಿ ಎತ್ತ ಕ್ಷೀಣಿಸುತ್ತಿದೆ. ವನ್ಯಜೀವಿ ಕಾನೂನಿನ ಪ್ರಕಾರವು ಅಪರಾಧ ವಿದು. ಆದರೂ ಪರಿಸರ ಸಂರಕ್ಷಣೆ ಇನ್ನಷ್ಟು ಕಠಿಣ ಕಾನೂನು ಬಾರಿಗೆ ತರುವ ಅಗತ್ಯವಿದೆ. ಪ್ರತಿ ವರ್ಷ ಕರ್ನಾಟಕ ವಿದ್ಯುತ್ ನಿಗಮದಿಂದ ಕಾಳಿ ಹುಲಿ ಸಂರಕ್ಷಿತ ಪ್ರದೇಶ, ಜೊಯಿಡಾ, ಕಾರವಾರ, ಹಾರ್ನ್ ಬಿಲ್ ಸಂರಕ್ಷಿತ ಪ್ರದೇಶ, ಕಾಳಿ ಜಲ ವಿದ್ಯುತ್ ಯೋಜನೆಯ ಅಧಿಕಾರಿಗಳು ಸುಪಾ ಜಲಾಶಯ, ಪವರ್ ಹೌಸ್,…
ಡಾ|| ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡಮಾಡುವ ದಿ.ಕೋಟ ವೈಕುಂಠ ದತ್ತಿ ಪುರಸ್ಕಾರಕ್ಕೆ ಯಕ್ಷಗಾನ ನಿರ್ದೇಶಕ ಕೊೈಕೂರು ಸೀತಾರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ.ವೃತ್ತಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ, ಸ್ತ್ರೀ-ಪುರುಷ ಯಕ್ಷಗಾನ ವೇಷಗಳ ಮೂಲಕ ಪ್ರಸಿದ್ಧಿ ಪಡೆದು ಹಲವಾರು ಸಂಘ ಸಂಸ್ಥೆಗಳ ಮೂಲಕ ಯಕ್ಷಗಾನವನ್ನು ನಿರ್ದೇಶಿಸಿ ಹಲವಾರು ಶಿಷ್ಯರಿಗೆ ಯಕ್ಷಗಾನ ಕಲಿಸಿ, ಬಹುಮುಖ ಕಲಾವಿದರಾಗಿರುವ ಕೊೈಕೂರು ಸೀತಾರಾಮ ಶೆಟ್ಟಿ ಅವರನ್ನು ದಿ.ಕೋಟ ವೈಕುಂಠ ದತ್ತಿ ಪುರಸ್ಕಾರ ಆಯ್ಕೆ ಮಾಡಲಾಗಿದ್ದು ಫೆ. 25 ರಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು, ನಂತರ ನೆಗಿ ನಾಗಣ್ಣ ಖ್ಯಾತಿಯ ನಾಗರಾಜ್ ತೆಕ್ಕಟ್ಟೆ ಅವರಿಂದ ನಗೆ ಹಲವು ಬಗೆ ಹಾಸ್ಯ ಕಾರ್ಯಕ್ರಮ ನಡೆಯಲಿದೆ ಎಂದು ಡಾ|| ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕೆ ಅಶ್ವಿನಿ ದಿನೇಶ್, ಉಡುಪಿ ಜಿಲ್ಲೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ…