Author: admin

ಸುರತ್ಕಲ್ ಬಂಟರ ಸಂಘದ ಕ್ರೀಡೊತ್ಸವ ಸುರತ್ಕಲ್ : ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೇವಾ ಸಂಸ್ಥೆ ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ಸುರತ್ಕಲ್ ಗೋವಿಂದ ದಾಸ ಕಾಲೇಜು ಮೈದಾನದಲ್ಲಿ ಬಂಟರ ಕ್ರೀಡೋತ್ಸವ ನಡೆಯಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಪಥಸಂಚಲನದಲ್ಲಿ ಭಾಗವಹಿಸಿ ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟ ಸಮಾಜ ಸೇವೆಯ ಜೊತೆಗೆ ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಆರ್ಥಿಕವಾಗಿ ಹಿಂದುಳಿದ ಕ್ರೀಡಾಳುಗಳಿಗೆ ಒಕ್ಕೂಟ ನಿರಂತರ ಸಹಾಯ ಮಾಡುತ್ತಿದೆ ಎಂದು ಐಕಳ ಹರೀಶ್ ಶೆಟ್ಟಿ ತಿಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ ವಹಿಸಿದ್ದರು. ಸುರತ್ಕಲ್ ಬಂಟರ ಸಂಘ ನಿರಂತರ ಕಾರ್ಯಚಟುವಟಿಕೆಯಲ್ಲಿ ತೊಡಗಿದ್ದು, ಇದಕ್ಕೆ ಜಾಗತಿಕ ಬಂಟರ ಸಂಘಗಳ…

Read More

ವಿಶ್ವದಲ್ಲೇ ದೊಡ್ಡ ಅನಿವಾಸಿ ಭಾರತೀಯ ಸಾಂಸ್ಕೃತಿಕ ಸಂಘಟನೆ ದುಬಾಯಿಯಲ್ಲಿ ಇರುವ ಇಂಡಿಯನ್ ಸೋಶಿಯಲ್ ಎಂಡ್ ಕಲ್ಚರಲ್ ಸೆಂಟರ್ ಇದರ ಉಪಾಧ್ಯಕ್ಷ ಪದದಲ್ಲಿ ಗಮನೀಯ ಸೇವೆ ಸಲ್ಲಿಸಿದ ತುಳುನಾಡಿನ ಪುತ್ತೂರು ಮೂಲದ ಪ್ರತಿಷ್ಠಿತ ಮಿತ್ರಂಪಾಡಿ ಮನೆತನದ ಶ್ರೀ ಜಯರಾಮ ರೈ ತನ್ನ ಸಂಘಟನಾ ಸಾಮರ್ಥ್ಯ ಜನಸಂಪರ್ಕ ಕಲಾಪ್ರೇಮ ಹಾಗೂ ನಿರ್ವ್ಯಾಜ್ಯ ಪರೋಪಕಾರ ಸ್ವಭಾವಕ್ಕೆ ಹೆಸರಾದವರು. ತುಳುನಾಡಿನ ಪುತ್ತೂರು ಪ್ರಕೃತಿ ಸೌಂದರ್ಯಕ್ಕೆ ಪ್ರ‌ಸಿದ್ಧಿ ಪಡೆದ ಊರಾಗಿದ್ದು ಇಲ್ಲಿ ಜನ್ಮ ತಳೆದ ಅದೆಷ್ಟೋ ಮಂದಿ ತಮ್ಮ ಸಾಂಸ್ಕೃತಿಕ ಸಾಹಿತ್ಯದ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ ನಾಡಿಗೆ ಮಾದರಿಯಾಗಿದ್ದಾರೆ. ಪುತ್ತೂರಿನ ಕೆದಂಬಾಡಿ ಗ್ರಾಮ ಇಲ್ಲಿನ ಎಲ್ಲಾ ಹಿರಿಯರಿಂದ ಕಿರಿಯ ನಾಗರಿಕರು ಅತ್ಯಂತ ಪೂಜ್ಯ ಗೌರವ ಭಾವದಿಂದ ಕಾಣುವ ಹೆಸರಾಂತ ಕೃಷಿ ಪ್ರಧಾನ ಕುಟುಂಬದ ಪ್ರಗತಿ ಪರ ಕೃಷಿಕರಾಗಿದ್ದ ಕೆದಂಬಾಡಿ ಚೆನ್ನಪ್ಪ ರೈ ಹಾಗೂ ಸುಶೀಲೆ ಅನ್ನಪೂರ್ಣೆ ಎಂದೇ ಕರೆಸಿಕೊಳ್ಳುತ್ತಿದ್ದ ದಿವಂಗತ ಡಿಂಬ್ರಿಗುತ್ತು ಶ್ರೀಮತಿ ಸರಸ್ವತಿ ಸಿ ರೈ ದಂಪತಿಯರಿಗೆ ಪುತ್ರರಾಗಿ ಜನಿಸಿದ ರೈ…

Read More

ನ್ಯೂ ಪನ್ವೆಲ್ ನ ಶ್ರೀ ನೃತ್ಯಕಲಾ ಮಂದಿರದ ವತಿಯಿಂದ ನವೆಂಬರ್ 19 ರಂದು ಅಪರಾಹ್ನ 3 ಗಂಟೆಗೆ ಆದ್ಯ ಕ್ರಾಂತಿವೀರ ವಾಸುದೇವ ಬಲವಂತ ಪಡ್ಕೆ ನಾಟ್ಯಗೃಹ ಓಲ್ಡ್ ಪನ್ವೆಲ್ ಇಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನ್ಯೂ ಪನ್ವೆಲ್ ನಗರ ಸೇವಕ, ಜನಪ್ರಿಯ ಸಮಾಜ ಸೇವಕ ಸಂತೋಷ್ ಶೆಟ್ಟಿ ಮತ್ತು ಶ್ವೇತಾ ಸಂತೋಷ್ ಶೆಟ್ಟಿಯವರ ಸುಪುತ್ರಿ ಶ್ಲೋಕಾ ಸಂತೋಷ್ ಶೆಟ್ಟಿಯವರು ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಪನ್ವೆಲ್ ನ ಮಾಜಿ ಸಂಸದ ರಾಮ್ ಸೇಟ್ ಠಾಕೂರ್, ಮಾಜಿ ಕಾರ್ಪೊರೇಟರ್ ಪರೇಶ್ ರಾಮ್ ಸೇಟ್ ಠಾಕೂರ್, ಪನ್ವೆಲ್ ಕರ್ನಾಟಕ ಸಂಘದ ಅಧ್ಯಕ್ಷ ಭಾಸ್ಕರ್ ಶೆಟ್ಟಿ (ಪದ್ಮ) ಆಗಮಿಸಲಿದ್ದು ಶ್ರೀ ನೃತ್ಯಕಲಾ ಮಂದಿರದ ಇತರ ಪ್ರತಿಭೆಗಳು ಭಾಗವಹಿಸಲಿದ್ದಾರೆ. ಶ್ವೇತಾ ಮತ್ತು ಸಂತೋಷ್ ಶೆಟ್ಟಿಯವರ ಸುಪುತ್ರಿ ಶ್ಲೋಕಾ ಸಂತೋಷ್ ಶೆಟ್ಟಿ ನ್ಯೂ ಪನ್ವೆಲ್ ನ ಡಿ. ಎ. ವಿ. ಪಬ್ಲಿಕ್ ಸ್ಕೂಲ್ ನಲ್ಲಿ 8 ನೇ ತರಗತಿಯಲ್ಲಿ ಕಲಿಯುತ್ತಿದ್ದು, ಐದನೇ ವರ್ಷದಲ್ಲಿರುವಾಗ ಗುರು ಪದ್ಮಶ್ರೀ ಲಕ್ಷ್ಮಿನಾರಾಯಣನ್ ಇವರಿಂದ ಭರತನಾಟ್ಯ…

Read More

ಸಮಾಜಕ್ಕೆ ಅರ್ಪಣೆಯಾಗುವ ಸೇವಾ ಕಾರ್ಯ ಪ್ರಶಂಸನೀಯ-ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಪುಣೆ :ಪುಣೆ ಬಂಟರ ಸಂಘದ ಎಡಬಲ ಶಕ್ತಿಗಳಾಗಿ ಕಾರ್ಯ ಗೈಯುತಿರುವ ಉತ್ತರ ವಲಯ ಮತ್ತು ದಕ್ಷಿಣ ವಲಯ ಸಮಿತಿಗಳು ಸಂದರ್ಭಕ್ಕನುಗುಣವಾಗಿ ಉತ್ತಮ ಸಮಾಜ ಸೇವಾ ಕಾರ್ಯ ಮಾಡುತಿವೆ. ಇಂದು ಉತ್ತರ ವಲಯದ ಸಮಿತಿಯ ವತಿಯಿಂದ ರಕ್ತ ದಾನ ಮತ್ತು ಉಚಿತ ಅರೋಗ್ಯ ತಪಾಸಣೆಯ ಸೇವಾ ಕಾರ್ಯ ನಡೆಯುತಿದೆ. ಅರೋಗ್ಯ ತಪಾಸಣೆ ಜೊತೆಯಲ್ಲಿ ಮಣಿಪಾಲ್ ಆಸ್ಪತ್ರೆಯ ವೈದ್ಯರುಗಳು ಹೃದಯ ಸಂಬಂದಿತ ಆರೋಗ್ಯದ ಬಗ್ಗೆ ತಿಳುವಳಿಕೆಯ ವಿಚಾರ ಗೋಷ್ಠಿ ಕೂಡ ನಡೆಸಿಕೊಟ್ಟಿದ್ದಾರೆ. ಈಗಿನ ಕಾಲ ಘಟ್ಟದಲ್ಲಿ ಸಮಾಜ ಮುಖಿಯಾದ ಇಂತಹ ಸೇವಾ ಕಾರ್ಯಗಳು ಎಲ್ಲಾ ರೀತಿಯಲ್ಲೂ ಅಭಿನಂದನೀಯ ಮತ್ತು ಪ್ರಶಂಶೆಗೆ ಪಾತ್ರವಾಗಿರುವಂತಹದು ಉತ್ತರ ವಲಯದ ಈ ಕಾರ್ಯಕ್ರಮಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್  ಬೆಟ್ಟು ಬಾಳಿಕೆ ನುಡಿದರು. ಪುಣೆ ಬಂಟರ ಸಂಘದ ಉತ್ತರ ವಲಯ ಪ್ರಾದೇಶಿಕ ಸಮಿತಿ ವತಿಯಿಂದ ಸಂಘದ ಸಮಾಜ…

Read More

ಮಣಿಪುರ ಕುಂತಳನಗರದ ಸ್ಕಿಲ್ ಡೆವಲೆಪ್ಮೆಂಟ್ ಸೆಂಟರ್ ನಲ್ಲಿ ಡಿಜಿಟಲ್ ಲಿಟರೆಸಿ ಯೋಜನೆಯಡಿ ಆಲ್ ಕಾರ್ಗೋ ವತಿಯಿಂದ ನಡೆದಿದ್ದ ಉಚಿತ ಕಂಪ್ಯೂಟರ್ ತರಬೇತಿ ಕಾರ್ಯಕ್ರಮದ ಸರ್ಟಿಫಿಕೇಟ್ ವಿತರಣೆ ಮತ್ತು ಒರಿಯೆಂಟೇಶನ್ ಸಮಾರಂಭ ನಡೆಯಿತು. ನಿಟ್ಟೆ ಜಸ್ಟಿಸ್ ಕೆ. ಎಸ್. ಹೆಗ್ಡೆ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಇದರ ಪ್ಲೇಸ್ ಮೆಂಟ್ ಅಡ್ಮಿಶನ್ಸ್ ಮುಖ್ಯಸ್ಥರಾದ ಗುರುಪ್ರಶಾಂತ್ ಭಟ್ ಕೆ. ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ ಅವರು ಪ್ರಸ್ತಾವಿಸಿದರು. ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಮುನಿಯಾಲು ಇದರ ಅಧ್ಯಕ್ಷರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ ಶುಭವನ್ನು ಹಾರೈಸಿದರು. ವೇದಿಕೆಯಲ್ಲಿ ಮುಂಬಯಿ ಶಿವಿಕಾ ಪ್ಲಾಸ್ಟಿಕ್ಸ್ ಪ್ರೈ. ಲಿ. ಇದರ ಮ್ಯಾನೇಜಿಂಗ್ ಡೈರೆಕ್ಟರ್ ಮಧುಕರ್ ಶೆಟ್ಟಿ, ಉಡುಪಿ ಗ್ರಾಮೀಣ ಬಂಟರ ಸಂಘದ ಅಧ್ಯಕ್ಷರಾದ ಡಾ. ಎಚ್. ಬಿ. ಶೆಟ್ಟಿ, ಟ್ರಸ್ಟಿಯವರಾದ ಪದ್ಮನಾಭ ಹೆಗ್ಡೆ, ಗೋಪಾಲ ಶೆಟ್ಟಿ, ಹರೀಂದ್ರ ಹೆಗ್ಡೆ, ದಯಾನಂದ ಶೆಟ್ಟಿ ಕಲ್ಮಂಜೆ, ರಂಜಿನಿ ಹೆಗ್ಡೆ, ರಮೇಶ್ ಶೆಟ್ಟಿ…

Read More

ಜೆಸಿಐ ಸುರತ್ಕಲ್ ವತಿಯಿಂದ ಜೆಸಿ ಸಪ್ತಾಹದ ಸಮಾರೋಪ ಸಮಾರಂಭ ಸುರತ್ಕಲ್ ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಮಂಗಳೂರು ಎಸ್ ಎಲ್ ಶೇಟ್ ಅಭರಣ ಮಳಿಗೆಯ ಪಾಲುದಾರರಾದ ಶರತ್ ಶೇಟ್, ಜೆಸಿ ನ್ಯಾಷನಲ್ ಕೋ ಅರ್ಡಿನೇಟರ್ ಲೋಕೇಶ್ ರೈ, ಜೆಸಿ ನಿಕಟಪೂರ್ವಧ್ಯಕ್ಷೆ ರಾಜೇಶ್ವರಿ ಡಿ ಶೆಟ್ಟಿ, ಪೂರ್ವಾಧ್ಯಕ್ಷರಾದ ಗುಣವತಿ ರಮೇಶ್, ಪುಷ್ಪರಾಜ್ ಶೆಟ್ಟಿ, ಪ್ರವೀಣ್ ಶೆಟ್ಟಿ, ಜಯರಾಮ ಶೆಟ್ಟಿ, ವಿನೀತ್ ಶೆಟ್ಟಿ, ಸುಜೀರ್ ಶೆಟ್ಟಿ, ನಿರಂಜನ್ ಬಾಳ, ಜೆಸಿ ಸಪ್ತಾಹದ ಅಧ್ಯಕ್ಷೆ ಜ್ಯೋತಿ ಪಿ ಶೆಟ್ಟಿ ಉಪಾಧ್ಯಕ್ಷೆ ಜ್ಯೋತಿ ಜೆ ಶೆಟ್ಟಿ, ಜೆಜೆಸಿ ಜೀತಿನ್, ಕಾರ್ಯಕ್ರಮ ನಿರ್ದೇಶಕ ರಾಹುಲ್ ಸುವರ್ಣ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಜೆಸಿ ಸುರತ್ಕಲ್ ಅಧ್ಯಕ್ಷ ಜಯರಾಜ್ ಅಚಾರ್ಯ ವಹಿಸಿದ್ದರು. ಕಾರ್ಯ ದರ್ಶಿ ಸಂತೋಷ್ ಕುಮಾರ್ ಧನ್ಯವಾದ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ಸಮಾಜ ಸೇವೆಗಾಗಿ ರತ್ನಾಕರ ಶೆಟ್ಟಿ ಸುರತ್ಕಲ್ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.

Read More

ಬಂಟರ ಯಾನೆ ನಾಡವರ ಸಂಘ ಬೆಳ್ತಂಗಡಿ ಇದರ ಆಶ್ರಯದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು, ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು, ಬಂಟರ ಸಂಘ ಬೆಂಗಳೂರು ಇವುಗಳ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣಾ ಸಮಾರಂಭ ಆ. 6 ರಂದು ಬಂಟರ ಭವನ ಗುರುವಾಯನಕೆರೆಯಲ್ಲಿ ಜರಗಿತು. ಅಧ್ಯಕ್ಷತೆಯನ್ನು ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿ ಮುಂಡಾಡಿ ಗುತ್ತು ವಹಿಸಿದರು. ನಿಕಟಪೂರ್ವ ಲಯನ್ಸ್ ಜಿಲ್ಲಾ ಗವರ್ನರ್ ಸಂಜೀತ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಮಾತನಾಡಿ ಯಾವಾಗಲೂ ಉದ್ಯೋಗಿಗಳಾಗದೆ ಉದ್ಯೋಗ ಕೊಡುವಂತವರು ಆಗಬೇಕು. ಉತ್ತಮ ಸಮಾಜ ನಿರೂಪಿಸಬೇಕು ಎಂದರು. ಈ ಸಂದರ್ಭದಲ್ಲಿ ಮಂಗಳೂರು ಮಾತೃ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ಬೆಳ್ತಂಗಡಿ ಬಂಟರ ಸಂಘದ ಮಾಜಿ ಅಧ್ಯಕ್ಷ ಜಯರಾಮ್ ಭಂಡಾರಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕ ಜಯಂತ್ ಶೆಟ್ಟಿ,…

Read More

ಭಾರತದ ಸಂಸ್ಕೃತಿ ತ್ಯಾಗ ಜೀವನವನ್ನು ಜಗತ್ತಿಗೆ ಬೋಧಿಸಿದೆ. ಯಾವುದನ್ನೂ ಯಾರ ಮೇಲೂ ಹೇರದ ಸಂಸ್ಕೃತಿಯನ್ನು ಹೊಂದಿದ ಭಾರತವನ್ನು ದೈವಿಕ ಶಕ್ತಿ ಕಾಪಾಡುತ್ತಿದೆ. ಅದು ಸಿದ್ಧರು, ಸಾಧುಗಳ ತಪಃ ಶಕ್ತಿಯ ಫ‌ಲ ಎಂದು ಹಿಂಜಾವೇ ಜಿಲ್ಲಾ ಸಮಿತಿ ಸದಸ್ಯ ಶ್ರೀಕಾಂತ್‌ ಶೆಟ್ಟಿ ಕಾರ್ಕಳ ಹೇಳಿದರು. ಶಿವಪಾಡಿ ಶ್ರೀ ಉಮಾಮಹೇಶ್ವರ ದೇಗುಲದಲ್ಲಿ ನಡೆದ ಅತಿರುದ್ರ ಮಹಾಯಾಗದ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು. ಹಣಕ್ಕಿಂತ ಸಾತ್ವಿಕ ಶಕ್ತಿ ಮೇಲು ಎಂಬುದನ್ನು ಪ್ರಪಂಚಕ್ಕೆ ಭಾರತ ತೋರಿಸಿಕೊಟ್ಟಿದೆ. ನಾವು ಬದುಕ ಬೇಕು, ಇನ್ನೊಬ್ಬರನ್ನೂ ಬದುಕಲು ಬಿಡಬೇಕು ಎಂದು ಸಾರಿ ನಡೆಯು ತ್ತಿರುವ ದೇಶವಿದ್ದರೆ ಅದು ಭಾರತ. ಶಿವನ ಅಘೋರ ಮುಖದಿಂದ ದೈವಗಳ ಸಾಕ್ಷಾತ್ಕಾರ ಎಂಬ ಕಲ್ಪನೆ ತುಳು ನಾಡಿನಲ್ಲಿದೆ. ಆಂಗ್ಲ ಪ್ರಣೀತ ಶಿಕ್ಷಣ ಕ್ರಮದಿಂದ ಭಾರತದ ಪ್ರಗತಿ ಎಂದು ಕೆಲವು ಬುದ್ಧಿಜೀವಿಗಳು ಹೇಳಿ ದ್ದರೂ ಅಷ್ಟೊಂದು ಸುಶಿಕ್ಷಿತರಲ್ಲದ ನಮ್ಮ ತುಳುನಾಡಿನ ದೈವನರ್ತಕರು ಬಹಳ ಹಿಂದೆಯೇ ಭವ್ಯ ಭಾರತದ ವಿಸ್ತಾರದ ಅರಿವು ಹೊಂದಿದ್ದರು ಎಂದರು. ಧಾರ್ಮಿಕ ಸಭೆಯನ್ನು ಕೆಎಂಸಿ ಡೀನ್‌ ಡಾ| ಪದ್ಮರಾಜ್‌…

Read More

ಆಶಾ ಪ್ರಕಾಶ್ ಶೆಟ್ಟಿ ಸಹಾಯ ಹಸ್ತ ಕಾರ್ಯಕ್ರಮ ಆದಿತ್ಯವಾರ ಸಂಜೆ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಜರುಗಿತು. ಗುರ್ಮೆ ಸುರೇಶ್ ಶೆಟ್ಟಿ ಅವರು ಪ್ರಾಸ್ತಾವಿಕ ಮಾತನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. “ಆಲದ ಮರದಂತೆ ನೊಂದವರ ಆಶಾಕಿರಣವಾಗಿರುವ ಪ್ರಕಾಶ್ ಶೆಟ್ಟಿ ಅವರು ತಾವು ಕಷ್ಟಪಟ್ಟು ದುಡಿದ ಹಣವನ್ನು ಕೂಡಿಡದೆ ಸಮಾಜಕ್ಕೆ ಇಂತಿಷ್ಟು ಪಾಲು ನೀಡುತ್ತಿದ್ದಾರೆ. ಇದು ಇನ್ನಷ್ಟು ಮಂದಿಗೆ ಸ್ಫೂರ್ತಿಯಾಗಲಿ. ನೊಂದವರು, ಸಂಕಷ್ಟದಲ್ಲಿರುವವರಿಗೆ ನೆರವಾಗುವ ಪ್ರಕಾಶ್ ಶೆಟ್ಟಿಯವರ ಸಂಖ್ಯೆ ಸಾವಿರವಾಗಲಿ. ಪ್ರತೀ ವರ್ಷ ತಮ್ಮ ಹುಟ್ಟುಹಬ್ಬದ ದಿನದಂದು ಸಮಾಜಕ್ಕೆ ನೆರವಿನ ಸಹಾಯಹಸ್ತ ಚಾಚುವ ಅವರ ಗುಣ ಶ್ಲಾಘನೀಯವಾದುದು. ಕಳೆದ ಬಾರಿ ಹೇಳಿದಂತೆ ಈ ಬಾರಿ ಮೂರು ಕೋಟಿ ರೂಪಾಯಿಯನ್ನು ಸಹಾಯಹಸ್ತದ ರೂಪದಲ್ಲಿ ವಿತರಣೆ ಮಾಡುತ್ತಿದ್ದಾರೆ ಅವರಿಗೆ ನಮ್ಮೆಲ್ಲರ ಆಶೀರ್ವಾದವಿರಲಿ” ಎಂದರು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತಾಡಿದ ಎಂಆರ್ ಜಿ ಗ್ರೂಪ್ ಚೇರ್ ಮೆನ್ ಕೆ. ಪ್ರಕಾಶ್ ಶೆಟ್ಟಿ ಅವರು, “ಇಂದಿನ ದಿನ ನನ್ನ ಜೀವನದಲ್ಲಿ ಅತ್ಯಂತ ಸಂತೋಷ…

Read More

ಕಾಯುತಿರುವುದು ಮಾನವ ನಿನಗಾಗಿ ಸಾಧನೆಯ ಪಕ್ಷಿ, ನಿನ್ನ ನಂಬಿಕೆಯೇ ಅದಕ್ಕೆ ಸಾಕ್ಷಿ, ಸದಾ ನಗಲು ಬಯಸ್ಸುವ ಮನಸ್ಸು, ಆ ಮನಸ್ಸಿಗೆಂದು ಪುಟ್ಟ ಕನಸ್ಸು, ನೀ ಯಾರೆಂದು ತೋರಿಸೇ ನಿನ್ನ ಪ್ರಯತ್ನಕ್ಕೆ ಜನರೆನ್ನುವರು ಆಕೆ ಸಾಧಿಸಿದಳೆಂದು. ಚಿಕ್ಕ ಜೀವನದಿಂದ, ಜಗತ್ತೆಂಬ ದೊಡ್ಡ ಸಾಗರದಲ್ಲಿ ನಾನು ಯಾರೆಂದು ತಿಳಿಯಲು ಸಾಧನೆ ಅನ್ನೋ ಮೀನಾಗಿರಬೇಕು. ಹೌದು ಕಲಾಭಿ ತಂಡದ ರತ್ನ, ಜನಮಾನಸದಲ್ಲಿ ನೆಲೆಸಿರೋ ಅರ್ಥಾತ್ ಶಾರದೇ, ನಾಟ್ಯಲೋಕದಲ್ಲಿ ಶಾಕುಂತಲೇ, ನಿರೂಪಣಾ ಕ್ಷೇತ್ರದ ಅಂಬೆಗಾಲ ಮಗು ತೃಷಾ ಶೆಟ್ಟಿ. ದಿನೇಶ್ ಆರ್ ಶೆಟ್ಟಿ ಕೊಟ್ಟಿಂಜ ಮತ್ತು ಚಂಚಲ ಶೆಟ್ಟಿಯವರ ಕುಟುಂಬದ ದೀಪಕ್ಕೆ ಬೆಳಕು ನೀಡಿದ ಮಗಳು ತೃಷಾ ಶೆಟ್ಟಿ. ಪ್ರಾಥಮಿಕ ಶಿಕ್ಷಣವನ್ನು ಹೋಲಿ ಫ್ಯಾಮಿಲಿ ಮೇರಮಜಲು, ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಸೈಂಟ್ ಆಗ್ನೇಸ್ ಬಾಲಕಿಯರ ಕಾಲೇಜು ಬೆಂದೂರ್ ಮಂಗಳೂರಿನಲ್ಲಿ ಕಲಿತ ಇವರು, ಪ್ರಸ್ತುತ ಬಿ ಎ ಇನ್ ಜರ್ನಲಿಸಂ ಅನ್ನು ಸೈಂಟ್ ಆಗ್ನೇಸ್ ಕಾಲೇಜು ಮಂಗಳೂರಿನಲ್ಲಿ ಕಲಿಯುತ್ತಿದ್ದಾರೆ. ಬೆಳೆಯೋ ಚಿಕ್ಕ ಸಸಿಯ ಪೋಷಣೆಯ…

Read More