Author: admin

ಮುಂಬಯಿ, (ಆರ್‍ಬಿಐ) ಫೆ.28 :ಗುರುಪುರ ಗೋಳಿದಡಿಗುತ್ತಿಗೆ ಹತ್ತಿರದ ಫಲ್ಗುಣಿ ನದಿ ತಟದಲ್ಲಿ ನಿರ್ಮಾಣಗೊಳ್ಳಲಿರುವ ದಕ್ಷಿಣ ಭಾರತದಲ್ಲೇ ಪ್ರಪ್ರಥಮವೆನ್ನಲಾದ ಶ್ರೀ ಗುರು ಮಹಾಕಾಲೇಶ್ವರ ದೇವರ ಏಕಶಿಲಾ ಮೂರ್ತಿಯ ಕೆತ್ತನೆ ಕಾರ್ಯಕ್ಕೆ ಭಾನುವಾರ(ಫೆ. 26) ಚಾಲನೆ ನೀಡಲಾಯಿತು. ಗೋಳಿದಡಿಗುತ್ತಿನ ಗಡಿಕಾರ ವರ್ಧಮಾನ ದುರ್ಗಾಪ್ರಸಾದ ಶೆಟ್ಟಿ, ಪತ್ನಿ ಉಷಾ ಹಾಗೂ ಮಕ್ಕಳ ಸಮಕ್ಷಮದಲ್ಲಿ, ಪಾವಂಜೆಯ ಶ್ರೀ ನಿರಂಜನ್ ಭಟ್ ಮತ್ತು ಅಮೆರೇಶ್ ಭಟ್ ಅವರ ಪೌರೋಹಿತ್ಯದಲ್ಲಿ ನಡೆದ ವಿಶೇಷ ಪೂಜಾ ಕಾರ್ಯಕ್ರಮದ ಬಳಿಕ ಬೆಳ್ತಂಗಡಿಯ ಶಿಲ್ಪಿ ವೆಂಕಟೇಶ್ ಆಚಾರ್ಯ ಅವರಿಗೆ ಕಾಲಭೈರವನ ಏಕಶಿಲಾಮೂರ್ತಿ ಕೆತ್ತನೆ ಕೆಲಸ ವಹಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ(ಎಸಿ) ಗುರುಪ್ರಸಾದ್, ಗುತ್ತು ಮನೆತನದ ಯಜಮಾನರು, ಗಡಿಕಾರರು, ಗಣ್ಯರು, ಸ್ಥಳೀಯರು ಉಪಸ್ಥಿತರಿದ್ದರು. ಮೂರ್ತಿ ವಿಶೇಷ : ತಳಪಾಯದಿಂದ 5 ಹಂತದಲ್ಲಿ ಒಟ್ಟು 20 ಅಡಿ ಎತ್ತರದಲ್ಲಿ ಶಿಲಾಪೀಠ ನಿರ್ಮಾಣಗೊಳ್ಳಲಿದ್ದು, ಈ ಪೀಠದ ಮೇಲೆ 22 ಅಡಿ ಎತ್ತರದ ಆರು ಕೈಗಳ ಮಹಾಕಾಲೇಶ್ವರನ ಭವ್ಯ ಏಕಶಿಲಾ ಮೂರ್ತಿ ಸ್ಥಾಪನೆಯಾಗಲಿದೆ. ಬಯಲು…

Read More

ಬಂಟರ ಸಂಘ ಉಡುಪಿ ವತಿಯಿಂದ ಮಿಸ್ ಇಂಡಿಯಾ ಗೆದ್ದ ಸಿನಿ ಶೆಟ್ಟಿ ಅವರಿಗೆ ಅಮ್ಮಣ್ಣಿ ರಾಮಣ್ಣ ಆಡಿಟೋರಿಯಂ ಉಡುಪಿಯಲ್ಲಿ ಸನ್ಮಾನ ಕಾರ್ಯಕ್ರಮ ನೆರೆದ ಜನಸ್ತೋಮದೊಂದಿಗೆ ಬಹಳ ವಿಜೃಂಭನೆಯಿಂದ ನಡೆಯಿತು. ಉಡುಪಿ ಜಿಲ್ಲೆಯ ಬೆಳ್ಳಂಪಳ್ಳಿ ಮೂಲದ ಇನ್ನಂಜೆ ಸದಾನಂದ ಶೆಟ್ಟಿ ಅವರ ಸುಪುತ್ರಿ ಸಿನಿ ಶೆಟ್ಟಿ ಮಿಸ್ ಇಂಡಿಯ ಆಗಿ ಆಯ್ಕೆಯಾದ ಬಳಿಕ ಪ್ರಥಮ ಬಾರಿಗೆ ತವರಿಗೆ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಅವರು ವಹಿಸಿದ್ದರು. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಶೆಟ್ಟಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿನಿ ಶೆಟ್ಟಿ ಅವರು, “ಇವತ್ತು ಎಲ್ಲರೂ ನನ್ನನ್ನು ಗುರುತಿಸಿರುವ ಬಗ್ಗೆ ತುಂಬಾ ಖುಷಿಯಾಗಿದೆ. ಊರಿನಲ್ಲಿ ನನಗೆ ಸಿಕ್ಕಿರುವ ಸ್ವಾಗತಕ್ಕೆ ನನಗೆ ಸಂತೋಷವಾಗಿದೆ. ಎಲ್ಲರ ಆಶೀರ್ವಾದದಿಂದ ನಾನು ಈ ಸಾಧನೆ ಮಾಡಿದ್ದೇನೆ ಎಂದು ಹೇಳಿದರು. ಉಡುಪಿ ಬಂಟರ ಸಂಘದ ಸಂಚಾಲಕ ಜಯರಾಜ್ ಹೆಗ್ಡೆ, ಇಂದ್ರಾಳಿ ಜಯಕರ್ ಶೆಟ್ಟಿ, ಉದ್ಯಮಿ,…

Read More

ಬಂಟರ ಸಂಘ ( ರಿ ) ಸುರತ್ಕಲ್ ಇದರ ವತಿಯಿಂದ ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ ಹಾಗೂ ಹೈನುಗಾರಿಕೆ ಇಲಾಖೆಯ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಕೃಷಿಕರಿಗೆ ದೊರಕುವ ವಿವಿಧ ಯೋಜನೆ ಮತ್ತು ಸವಲತ್ತುಗಳ ಬಗ್ಗೆ ಮಾಹಿತಿ ಶಿಬಿರ ಫೆಬ್ರವರಿ 20ರಂದು ಭಾನುವಾರ ಸಂಜೆ 4 ಗಂಟೆಗೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ. ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಪೂಂಜ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಹಿತಿ ಶಿಬಿರವನ್ನು ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಶಾಸಕರಾದ ಉಮಾನಾಥ ಎ. ಕೋಟ್ಯಾನ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಅಶೋಕ ಶೆಟ್ಟಿ ಸುರತ್ಕಲ್, ಎಕ್ಕಾರ್ ರೈತ ಸಂಘದ ಅಧ್ಯಕ್ಷ ಸದಾಶಿವ ಶೆಟ್ಟಿ ಎಕ್ಕಾರ್ ಭಾಗವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಗಳಾಗಿ ಅಬ್ದುಲ್ ಬಸೀರ್ ( ಕೃಷಿ ಅಧಿಕಾರಿ ಸುರತ್ಕಲ್) ಯುಗೇಂದ್ರ ( ಸಹಾಯಕ ತೋಟಗಾರಿಕ ಅಧಿಕಾರಿ ಸುರತ್ಕಲ್) ಡಾ! ಸುರೇಶ್ ( ಸಹಾಯಕ ನಿರ್ದೇಶಕರು ಪಶುಇಲಾಖೆ ಸುರತ್ಕಲ್) ಇವರು ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ಕೃಷಿ,…

Read More

ಮೂಡುಬಿದಿರೆ: ‘ಸಾರ್ವಜನಿಕ ಒಳಿತಿನೊಂದಿಗೆ ಖಾಸಗಿ ಲಾಭವನ್ನು ಬಯಸಿದಾಗ ಸಮಾಜದ ಅಭ್ಯುದಯ ಸಾಧ್ಯ’ ಎಂದು ಕೇಂದ್ರದ ಸಾಮಥ್ರ್ಯ ನಿರ್ಮಾಣ ಆಯೋಗ(ಮಾನವ ಸಂಪನ್ಮೂಲ)ದ ಸದಸ್ಯ ಡಾ. ಆರ್. ಬಾಲಸುಬ್ರಹ್ಮಣ್ಯಂ ಅಭಿಪ್ರಾಯ ಪಟ್ಟರು. ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ‘ರೋಸ್ಟ್ರಮ್ – ದಿ ಸ್ಪೀಕರ್ಸ್ ಕ್ಲಬ್  ಸೋಮವಾರ ಹಮ್ಮಿಕೊಂಡ ‘ಟೀಮ್ ಇಂಡಿಯಾ ಫಾರ್ ಎ ನ್ಯೂ ಇಂಡಿಯಾ ವಿಶೇಷ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ನಾವು ಪ್ರಮುಖವಾಗಿ ಮೂರು ಬಿಕಟ್ಟನ್ನು ಎದುರಿಸುತ್ತಿದ್ದೇವೆ. ಅಗತ್ಯಕ್ಕಿಂತ ಹೆಚ್ಚು ಬಳಕೆಯ ಕಾರಣ ಪರಿಸರದ ಮೇಲಿನ ದುಷ್ಪರಿಣಾಮ, ಹೆಚ್ಚಾಗುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಅಸಮಾನತೆ ಹಾಗೂ ಪ್ರಚಾರ ಪ್ರಿಯತೆಯ ಪರಿಣಾಮದ ಸ್ವಯಂ ಬಿಕ್ಕಟ್ಟು. ಇವುಗಳನ್ನು ಎಚ್ಚರಿಕೆಯಿಂದ ಪರಿಹರಿಸಿಕೊಳ್ಳಬೇಕಾಗಿದೆ’ ಎಂದು ಅವರು ವಿವರಿಸಿದರು. ‘ಅಭಿವೃದ್ಧಿಯನ್ನು ಕೇವಲ ವಿಜ್ಞಾನ, ತಂತ್ರಜ್ಞಾನ ಹಾಗೂ ಆರ್ಥಿಕತೆಯ ಪರಿಭಾಷೆಯಲ್ಲಿ ವಿಶ್ಲೇಷಿಸಬೇಡಿ. ಅಭಿವೃದ್ಧಿಯಲ್ಲಿ ಮಾನವ ಸಂಪನ್ಮೂಲದ ಪಾತ್ರ ಮಹತ್ತರ. ಒಬ್ಬ ಉತ್ತಮ ಉದ್ಯೋಗಿ ಮತ್ತು ಸಂಸ್ಥೆ ನಡುವಣ ಹಣ, ಬಾಂಧವ್ಯ, ಕಲಿಕೆ ಹಾಗೂ ಹೆಮ್ಮೆಯ ಸಂಬಂಧ ಬಹುಮುಖ್ಯ…

Read More

ಮುಂಬಯಿಯ ಹೆಸರಾಂತ ತೆರಿಗೆ ಸಲಹೆಗಾರ, ಜನಪ್ರಿಯ ಸಂಘಟಕ, ಸಾಮಾಜಿಕ ಚಿಂತಕ, ಸಾಹಿತ್ಯ ಪ್ರೇಮಿ, ಕಲಾಪೋಷಕ, ಮಹಾದಾನಿ ಮುಂಬಯಿ ಬಂಟರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋದವಾಗಿ ಆಯ್ಕೆಯಾದ ಶ್ರೀ ಪ್ರವೀಣ್ ಭೋಜ ಶೆಟ್ಟಿಯವರು ಯಶಸ್ಸಿನ ಹಾದಿಯಲ್ಲಿ ನಡೆದು ಬಂದ ಹಾದಿಯ ಹೆಜ್ಜೆ ಗುರುತುಗಳನ್ನು ಸಮಸ್ತ ಬಂಟ ಸಮಾಜದ ಮುಂದೆ ಇಡಲು ಇಚ್ಛಿಸುತ್ತಿದ್ದೇವೆ. ಇತಿಹಾಸ ಪ್ರಸಿದ್ಧ ಎಲ್ಲೂರು ಕ್ಷೇತ್ರ ಶ್ರೀಮಹತೋಭಾರ ವಿಶ್ವೇಶ್ವರ ದೇವರು ನೆಲೆನಿಂತ ಪುಣ್ಯ ಸ್ಥಳ. ಇಲ್ಲಿನ ಮಲ್ಲಬೆಟ್ಟು ಪರಾರಿ ಭೋಜ ಶೆಟ್ಟಿ ಹಾಗೂ ಅಜೆಕಾರು ಮೂಲದ ಪ್ರತಿಷ್ಠಿತ ಮನೆತನದ ಶ್ರೀಮತಿ ನಳಿನಾ ಶೆಟ್ಟಿ ದಂಪತಿಗೆ ಮುದ್ದಿನ ಮಗನಾಗಿ ಜನಿಸಿದ ಪ್ರವೀಣ್ ಶೆಟ್ಟಿ ತನ್ನ ಬಾಲ್ಯದ ದಿನಗಳಿಂದಲೇ ಪ್ರತಿಭಾವಂತರು. ಕನ್ನಡ ಸಾಹಿತ್ಯ, ಯಕ್ಷಗಾನ ಅವರ ಆಸಕ್ತಿಯ ವಿಷಯಗಳು. ಪ್ರವೀಣ್ ಶೆಟ್ಟಿ ಅವರ ತೀರ್ಥರೂಪರು ಇರಂದಾಡಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಓರ್ವ ಆದರ್ಶ ಶಿಕ್ಷಕರಾಗಿ ಪರಿಶ್ರಮಿ ಕೃಷಿಕರಾಗಿದ್ದ ಭೋಜ ಶೆಟ್ಟಿಯವರು ತನ್ನ ಶಿಸ್ತು, ಸಿದ್ಧಾಂತ ಬದ್ಧ ಜೀವನ ಶೈಲಿ, ತನ್ನ ದಿಟ್ಟ ನೇರ ನಡೆ ನುಡಿಗಳಿಂದ…

Read More

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅಕ್ಟೋಬರ್ ದಿನಾಂಕ 28 ಮತ್ತು 29 ರಂದು ಉಡುಪಿಯ ಅಜ್ಜರಕಾಡು ಮೈದಾನದಲ್ಲಿ ವಿಶ್ವ ಬಂಟರ ಸಮ್ಮಿಲನ‌ದ ಪ್ರಯುಕ್ತ ನಡೆಯಲಿರುವ ವಿಶ್ವ ಬಂಟರ ಕ್ರೀಡಾಕೂಟ ಹಾಗೂ ವಿಶ್ವ ಬಂಟರ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಕರಪತ್ರವನ್ನು ದಿನಾಂಕ 15/09/2023ರಂದು ಬೆಂಗಳೂರಿನ ಬಂಟರ ಸಂಘದಲ್ಲಿ ಅಧ್ಯಕ್ಷರಾದ ಶ್ರೀಯುತ ಎಂ ಮುರಲೀಧರ ಹೆಗ್ಡೆಯವರು ಬಿಡುಗಡೆ ಮಾಡಿದರು. ಜಾಗತಿಕ ಸಂಘಗಳ ಒಕ್ಕೂಟದ ಅದ್ಯಕ್ಷರಾದ ಶ್ರೀ ಐಕಳ ಹರೀಶ ಶೆಟ್ಟಿಯವರು ಕಾರ್ಯಕ್ರಮದ ವಿವರ ನೀಡಿ ಬೆಂಗಳೂರಿನ ಸಮಸ್ತ ಬಂಟರನ್ನು ಕಾರ್ಯಕ್ರಮಕ್ಕೆ ಪ್ರಿತಿಪೂರ್ವಕವಾಗಿ ಆಹ್ವಾನಿಸಿದರು. ಶ್ರೀ ಅಜಿತ್ ಶೆಟ್ಟಿ ಉಳ್ತೂರು ಇವರು ಕಾರ್ಯಕ್ರಮ ನಿರ್ವಹಿಸಿದರು. ಕ್ರೀಡಾ ಸಮಿತಿ ಸಂಚಾಲಕರಾದ ಶ್ರೀ ಗಿರೀಶ್ ಶೆಟ್ಟಿ ತೆಳ್ಳಾರ್ ಮತ್ತು ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಶ್ರೀ ಚಂದ್ರಹಾಸ ಶೆಟ್ಟಿ ರಂಗೋಲಿಯವರು ಕಾರ್ಯಕ್ರಮದ ರೂಪುರೇಷೆ, ನಿಯಮಗಳ ಬಗ್ಗೆ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಐಕಳ ಹರೀಶ್ ಶೆಟ್ಟಿಯವರನ್ನು ಬೆಂಗಳೂರು ಬಂಟರ ಸಂಘದ ವತಿಯಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ನಿರ್ದೇಶಕರಾದ…

Read More

ಮೂಲ್ಕಿ ಬಂಟರ ಸಂಘದ ವತಿಯಿಂದ ಮೂಲ್ಕಿ ಬಂಟರ ಭವನದಲ್ಲಿ ನಡೆದ ಪ್ರಶಸ್ತಿ ಪ್ರಧಾನ, ಸಾಧಕರಿಗೆ ಸನ್ಮಾನ, ಆಟಿದ ತಮ್ಮನ ಅದ್ದೂರಿ ಕಾರ್ಯಕ್ರಮದಲ್ಲಿ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಅಧ್ಯಕ್ಷ, ಮಂಗಳೂರು ಶ್ರೀದೇವಿ ಎಜ್ಯುಕೇಶನ್ ಟ್ರಸ್ಟ್ ಆಡಳಿತ ನಿರ್ದೇಶಕ ಡಾ ಎ. ಸದಾನಂದ ಶೆಟ್ಟಿಯವರಿಗೆ 2023-24 ನೇ ಸಾಲಿನ ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ಪ್ರಧಾನಿಸಿ ಗೌರವಿಸಲಾಯಿತು. ಮೂಲ್ಕಿ ಬಂಟರ ಸಂಘದ 2022-24ನೇ ಸಾಲಿನ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ, ಮೂಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ಪ್ರಧಾನ, ಸಾಧಕರಿಗೆ ಸನ್ಮಾನ ಹಾಗೂ ಆಟಿದ ತಮ್ಮನದ ಕಾರ್ಯಕ್ರಮವನ್ನು ಜಾಗತಿಕ ಬಂಟರ ಸಂಘದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಉದ್ಘಾಟಿಸಿದರು. ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಕೆ. ಪುರುಷೋತ್ತಮ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಾಧಕರ ನೆಲೆಯಲ್ಲಿ ಕರುಣಾಕರ ಶೆಟ್ಟಿ ಉಳೆಪಾಡಿ ಮುಗೇರಬೆಟ್ಟು ( ಕೃಷಿ ಕ್ಷೇತ್ರ ), ಸಾಯಿನಾಥ ಶೆಟ್ಟಿ ಮುಂಡ್ಕೂರು ( ಶಿಕ್ಷಣ ಕ್ಷೇತ್ರ ), ಡಾ. ಹರಿಪ್ರಸಾದ್…

Read More

ಬಂಟರ ಸಂಘದ ಮುಂಬಯಿಯ ಕಾರ್ಯಕ್ರಮಗಳಲ್ಲಿ ಅತೀ ಮಹತ್ವದ ಹಾಗು ಪ್ರೀತಿಯ ಮನಸ್ಸಿಗೆ ಮುದ ನೀಡುವ ಕಾರ್ಯಕ್ರಮವೆಂದರೆ, ಸಮಾಜ ಕಲ್ಯಾಣ ಕಾರ್ಯಕ್ರಮ. ಸಮಾಜ ಬಾಂಧವರು ವಿದ್ಯೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಸುಮಾರು 2.5 ಕೋಟಿಗೂ ಮಿಕ್ಕಿ ಶೈಕ್ಷಣಿಕ ಸಹಾಯ ನೀಡುವ ಸಂಸ್ಥೆ ಬಂಟರ ಸಂಘ ಮುಂಬಯಿ ಎಂದು ಹೆಮ್ಮೆಯಿಂದ ಹೇಳಬಹುದು. ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಸಮಾಜ ಬಾಂಧವರ ಕಷ್ಟಗಳಿಗೆ ಸ್ಪಂದಿಸುವ ಪ್ರಾಮಾಣಿಕ ಕಾರ್ಯವನ್ನು ಮಾಡುತ್ತಿದ್ದಾರೆ. ಅವರು ನಾಲಾಸೋಪಾರ ಪೂರ್ವದ ರಿಜೆನ್ಸಿ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಬಂಟರ ಸಂಘ ಮುಂಬಯಿ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಆರ್ಥಿಕ ನೆರವು ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಸಂಘದ ಶಿಕ್ಷಣ ಮತ್ತುಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಶಾಂತಾರಾಮ ಶೆಟ್ಟಿಯವರು ಮಾತನಾಡುತ್ತಾ ಇಂದು ನಾವು ಇತರರಿಗೆ ಸಹಾಯ ಮಾಡಿದರೆ ದೇವರು ಇನ್ನೊಂದು ವಿಧದಲ್ಲಿ ನಮಗೆ ಸಹಾಯ ಮಾಡುತ್ತಾರೆ. ಸಮಾಜ ಬಾಂಧವರಿಗೆ ಸಂಘದ ಶಿಕ್ಷಣ…

Read More

ನಿಶ್ಚಯದ ವೇದಿಕೆಗೆ ಗಂಡು ಮತ್ತು ಹೆಣ್ಣನ್ನು ಕರೆತರುವುದು ಅವರವರ ಹಿರಿಯ ಮುತ್ತೈದೆ ಹೆಂಗಳೆಯರು. ಗಂಡಿನ ಬಲಭಾಗದಲ್ಲಿ ಹೆಣ್ಣನ್ನು ಕೂರಿಸುವುದು. ನಿಶ್ಚಿತಾರ್ಥಕ್ಕೆ ನಿಲ್ಲುವ ದಿಕ್ಕುಗಳು : ಬಂಟ ಗುರಿಕ್ಕಾರ – ಉತ್ತರಾಭಿಮುಖವಾಗಿ ವಧುವಿನ ಹಿರಿಯರು – ಪೂರ್ವಾಭಿಮುಖವಾಗಿ ವರನ ಹಿರಿಯರು – ಪಶ್ಚಿಮಾಭಿಮುಖವಾಗಿ ಎಲ್ಲಾ ಹಿರಿಯರನ್ನು ವೇದಿಕೆಗೆ ಆಹ್ವಾನಿಸುವುದು. ಮಾತಾ ಪಿತೃಗಳಿಂದ ದೀಪ ಬೆಳಗಿಸುವುದು. ದೀಪ ಬೆಳಗಿಸುವಾಗ ಪೂರ್ವದಿಂದ ಆರಂಭಿಸಿ ಪ್ರದಕ್ಷಿಣಾಕಾರವಾಗಿ ಉರಿಸಬೇಕು. ಗಣಪತಿ ಸ್ತುತಿ : ಸುತ್ಯೆ ಇಡುವುದು ಪ್ರಾರ್ಥನೆ : ಗುರುಪೀಠಕ್ಕೆ, ಕುಲದೇವರಿಗೆ, ಕುಲದೈವಕ್ಕೆ ಗುರು ಕಾರ್ನವರಿಗೆ : ಸೀಮೆ ದೇವರಿಗೆ, ಗ್ರಾಮ ದೇವರಿಗೆ. ಗಂಡು ಹೆಣ್ಣಿನ ತಂದೆ ತಾಯಂದಿರ ಕುಟುಂಬದ ನಾಗಶಕ್ತಿಗಳು, ದೈವ ದೈವತಾ ಶಕ್ತಿಗಳು, ದೇವ ದೇವತಾ ಶಕ್ತಿಗಳು ಹಾಗೂ ಸ್ಥಳ ಸಾನಿಧ್ಯಕ್ಕೆ ಕ್ಷಮಾಪಣೆ ಪ್ರಾರ್ಥನೆ ಸಲ್ಲಿಸಿ ಕಾರ್ಯಕ್ರಮ ಆರಂಭಿಸಬೇಕು. ಗಂಡು ಹೆಣ್ಣಿನ ಪರಿಚಯವನ್ನು ಸಭೆಯ ಮುಂದಿಡುವುದು. ಎರಡು ಹರಿವಾಣಗಳಲ್ಲಿ 5+5 ವೀಳ್ಯದೆಲೆ, 1+1 ಅಡಿಕೆ, 1+1ಕುಂಕುಮದ ಕರಡಿಗೆ, 1+1 ಮಲ್ಲಿಗೆ ಚೆಂಡು ಇವುಗಳನ್ನು ಇಟ್ಟು ಟಿಪಾಯಿ…

Read More

ಸಾವಿರ ವರ್ಷಗಳ ಪ್ರಾಚೀನ ಇತಿಹಾಸ ಪ್ರಸಿದ್ಧ ಪೆಲತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಮತ್ತು ಶ್ರೀ ಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಭದ್ರಕಾಳಿ ದೇವರ ಅಷ್ಠಬಂಧ ಸಹಿತ ಸಹಸ್ರ ಬ್ರಹ್ಮಕಲಶಾಭಿಷೇಕವು ವೇದಮೂರ್ತಿ ಷಡಂಗ ಶ್ರೀ ಬಿ. ಗುರುರಾಜ ತಂತ್ರಿಯವರ ನೇತೃತ್ವದಲ್ಲಿ ಮೇ 20 ರಿಂದ 25 ರವರೆಗೆ ಜರುಗಲಿದೆ. ಮೇ 20 ಶನಿವಾರ ಬೆಳಿಗ್ಗೆ ಗಂಟೆ 8:00 ರಿಂದ ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಸ್ವಸ್ತಿ ಪುಣ್ಯಾಹಾವಾಚನ ದೇವ ನಾಂದಿ, 12 ಕಾಯಿ ಗಣಹೋಮ, ನವಗ್ರಹ ಹೋಮ, ಅನ್ನಸಂತರ್ಪಣೆ, ಸಂಜೆ 5:00 ರಿಂದ ಧಾರ್ಮಿಕ ಸಭಾಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ವಸಂತ ಮಂಟಪ ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿ ಹಾಗೂ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮಿಜಿ ಆಶೀರ್ವಚನ ನೀಡಲಿರುವರು. ಧಾರ್ಮಿಕ ಸಭಾ ಕಾರ್ಯಕ್ರಮ ಸಭಾಧ್ಯಕ್ಷತೆಯನ್ನು ಡಾ| ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಇದರ ಪ್ರವರ್ತಕರಾದ ಡಾ| ನಾಡೋಜ…

Read More