Author: admin
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಯೋಜನೆಯಲ್ಲಿ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ನೇತೃತ್ವ ಹಾಗೂ ಮಾರ್ಗದರ್ಶನದೊಂದಿಗೆ ಅಕ್ಟೋಬರ್ ತಿಂಗಳಿನಲ್ಲಿ ದಿನಾಂಕ 28 ಮತ್ತು 29ರಂದು ಉಡುಪಿ ಅಜ್ಜರಕಾಡು ಮೈದಾನದಲ್ಲಿ ದಿನಪೂರ್ತಿ ನಡೆಯಲಿರುವ “ವಿಶ್ವ ಬಂಟರ ಕ್ರೀಡಾಕೂಟ” “ವಿಶ್ವ ಬಂಟರ ಸಮ್ಮಿಲನ” ವಿಶ್ವ ಬಂಟರ ಸಾಂಸ್ಕೃತಿಕ ವೈಭವ ನಡೆಯಲಿದ್ದು ಇದರ ಪ್ರಯುಕ್ತ ಪೂರ್ವಭಾವಿ ಸಭೆಯು ಆ.26 ರ ಶನಿವಾರ ಬಂಟರ ಸಂಘ ಮುಂಬಯಿಯ ರಂಜನಿ ಸುಧಾಕರ ಹೆಗ್ಡೆ ಸಮಾಜ ಕಲ್ಯಾಣ ಎನೆಕ್ಸ್ ಸಭಾಂಗಣದಲ್ಲಿ ನಡೆಯಿತು. ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಮಾತನಾಡುತ್ತಾ ಪ್ರತಿಯೊಂದು ಕಾರ್ಯಕ್ರಮ ಮಾಡುವ ಮುನ್ನ ಕಟೀಲಿನ ದುರ್ಗಾಪರಮೇಶ್ವರಿಯನ್ನು ಮುಂದಿಟ್ಟು ಎಲ್ಲಾ ಕಾರ್ಯಗಳನ್ನು ಮಾಡುತ್ತಿದ್ದೇವೆ. ನಾವು ಸಮಾಜದ ಸೇವಕರಾಗಿ ಸೇವೆ ಮಾಡುತ್ತಿದ್ದೇವೆ. ಮಾಡಿಸುವವರೆಲ್ಲಾ ಆ ಜಗನ್ಮಾತೆ. ಈ ಸಭೆಯಲ್ಲಿ ನಮ್ಮ ಬಾಂಧವರು ಬಂಟ ಸಮಾಜದ ಮೇಲಿನ ಸ್ವಾಭಿಮಾನದಿಂದ ಪಾಲ್ಗೊಂಡಿದ್ದಾರೆ. ಒಕ್ಕೂಟದ ಈ ಹಿಂದೆ ನಡೆದ ಸಮ್ಮಿಲನ ಎಲ್ಲವೂ ಇತಿಹಾಸವಾಗಿದೆ. ಅದರಲ್ಲಿ ಸಿನಿಮಾ ನಟ ನಟಿಯರು, ಕ್ರೀಡಾಪಟುಗಳು, ಹಿರಿಯ ಉದ್ಯಮಿಗಳನ್ನು ಸಮಾಜ…
ಗುರು ಎಂದರೆ ಸಂಸ್ಕೃತದಲ್ಲಿ ಕತ್ತಲೆಯನ್ನು ದೂರ ಮಾಡುವವನು ಎಂದು ಅರ್ಥ. ನಮ್ಮೊಳಗಿರುವ ಜ್ಞಾನವನ್ನು, ತಿಳುವಳಿಕೆಯನ್ನು ಕೂಡ ಗುರು ಎನ್ನುತ್ತೇವೆ. ಈ ಅರಿವೇ ಗುರು ಎಂಬ ಅರಿವು ಬರಲು ಗುರುವಿನ ಆವಶ್ಯಕತೆ ಇದೆ. ವಿಶಾಲ ವ್ಯಾಪ್ತಿಯಲ್ಲಿ ನೋಡುವುದಾದರೆ ಗುರು ಎಂದರೆ ಆಧ್ಯಾತ್ಮಿಕ ಸಾಧನೆಗೆ ದಾರಿ ತೋರುವವ ಎಂಬ ಅರ್ಥ ಬರುತ್ತದೆ. ಈ ಅರ್ಥದ ವ್ಯಾಪ್ತಿಯನ್ನು ಕಿರಿದುಗೊಳಿಸಿದರೆ ಶಾಲಾ ಕಾಲೇಜುಗಳಲ್ಲಿ ಪಾಠ ಮಾಡುವವರು ಗುರುಗಳೇ ತಾನೆ? ಒಂದಕ್ಷರ ಕಲಿಸಿದರೂ ಆತ ಗುರು ಎನ್ನುವ ಸಂಸ್ಕೃತಿ ನಮ್ಮದು. ಆಧ್ಯಾತ್ಮಿಕ ಗುರುವಿನ ಹುಡುಕಾಟ ಬದುಕಿನಲ್ಲಿ ಒಂದು ಹಂತ ತಲುಪಿದ ಮೇಲೆ. ಆದರೆ ಮಕ್ಕಳ ಭವಿಷ್ಯ ಮತ್ತು ಅವರ ಮೂಲಕ ದೇಶದ ಭವಿಷ್ಯ ರೂಪಿಸಲು ನಮ್ಮ ಶಾಲಾ ಕಾಲೇಜುಗಳಲ್ಲಿನ ಗುರುಗಳು ತಮಗೆ ತಿಳಿಯದೆಯೇ ಮಹತ್ತರ ಪಾತ್ರ ವಹಿಸುತ್ತಾರೆ. ಅಧ್ಯಾಪನ ವೃತ್ತಿಯನ್ನು ಕೆಲವರು ಇಷ್ಟಪಟ್ಟು ಮತ್ತೆ ಕೆಲವರು ಆಸಕ್ತಿ ಇಲ್ಲದಿದ್ದರೂ ಅದನ್ನು ಕೇವಲ ಒಂದು ಉದ್ಯೋಗವೆಂದು ಪರಿ ಗಣಿಸಿಯೂ ಆಯ್ಕೆ ಮಾಡುತ್ತಾರೆ. ಇಚ್ಛೆ ಇಲ್ಲದೆ ಬಂದ ಕೆಲವರು ಕ್ರಮೇಣ ಆಸಕ್ತಿಯನ್ನು…
ಪತ್ರಿಕಾ ವರದಿ ಮತ್ತು ಅಂಕಣ ಬರಹಗಳಿಂದ ಹಲವಾರು ಸಾಹಿತ್ಯ ಆಸಕ್ತರನ್ನು ಬರಹದ ಮೂಲಕ ತನ್ನೆಡೆಗೆ ಸೆಳೆದುಕೊಳ್ಳುವ ಪ್ರಯತ್ನದೊಂದಿಗೆ ಹಿತಾಸಕ್ತಿಯಿಂದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಖ್ಯಾತ ಪತ್ರಿಕೆ ಸುದ್ದಿ ಮನೆ ವಾರಪತ್ರಿಕೆಯ ನಿರಂತರವಾಗಿ ಪ್ರಕಟಗೊಳ್ಳುತ್ತಿರುವ ಭಾವ ದೀಪ್ತಿ .. ಅಂಕಣ ಬರಹಕ್ಕೆ ನಾಡೋಜ ಕೆಂಚನೂರು, ಶಂಕರ್ ಅವರು ಹಾರ್ದಿಕ ಅಭಿನಂದನೆಗಳ ಮೂಲಕ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ. ಕೆ. ಸಂತೋಷ ಶೆಟ್ಟಿ ಮೊಳಹಳ್ಳಿ ಮತ್ತು ಪತ್ನಿ ಶ್ರೀಮತಿ ಪೂಜಾ ಎಸ್. ಶೆಟ್ಟಿ ಇವರನ್ನು ಹಾರ್ದಿಕವಾಗಿ ಅಭಿನಂದಿಸಲಾಯಿತು. ಇವರು ಉತ್ತರ ಕರ್ನಾಟಕದ ಪ್ರಸಿದ್ಧ ಪತ್ರಿಕೆಗಳಲ್ಲಿ ಹಾಗೂ ವೆಬ್ ಸುದ್ದಿ ವಾಹಿನಿ ಮತ್ತು ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಬೆಂಗಳೂರು ಇದರ ಮುಖ್ಯಸ್ಥರಾಗಿ, ಪಬ್ಲಿಕ್ ಫೈಲ್ ಕನ್ನಡ ಪಾಕ್ಷಿಕ ಪತ್ರಿಕೆಯ ರಾಜ್ಯ ವಿಶೇಷ ವರದಿಗಾರರಾಗಿ ,ಸುದ್ದಿ ಮನೆ ವಾರಪತ್ರಿಕೆ ಇದರ ನಿರಂತರವಾಗಿ ಪ್ರಕಟಗೊಳ್ಳುತ್ತಿರುವ “ಭಾವ ದೀಪ್ತಿ” ಅಂಕಣವನ್ನು ಸುಮಾರು ಸಾವಿರಕ್ಕೂ ಹೆಚ್ಚು ಕಂತುಗಳನ್ನ ಪ್ರಸ್ತುತ ವಿದ್ಯಮಾನದ ಬಗ್ಗೆ ಎಳೆ ಎಳೆಯಾಗಿ ವಿವರಿಸುತ್ತಿದ್ದಾರೆ. ಬೆಂಗಳೂರಿನ…
ಜನಪದ, ಸಾಹಿತ್ಯ, ಸಂಘಟನೆ ಹೀಗೆ ಸರ್ವ ಕ್ಷೇತ್ರದಲ್ಲೂ ತೊಡಗಿಕೊಂಡ ಸಾಹಿತಿ ಏರ್ಯ ಅವರು ಮಾನವತವಾದದ ಇಡೀ ರೂಪವಾಗಿದ್ದು, ಸಾಹಿತ್ಯ ಕೃಷಿಯನ್ನು ತನ್ನ ಬದುಕಿನ ಜೀವಧಾತುವಾಗಿ ಬಳಸಿಕೊಂಡಿದ್ದರು. ಮುಂದಿನ ಮೂರು ವರ್ಷಗಳಲ್ಲಿ ಅವರ ಜನ್ಮ ಶತಮಾನೋತ್ಸವ ಆಚರಿಸುವ ಸುಸಂ ದರ್ಭವಿದ್ದು, ಆ ವೇಳೆ ಏರ್ಯರ ಸಮಗ್ರ ಸಾಹಿತ್ಯ ಸಂಪುಟವನ್ನು ಹೊರತರುವ ಕೆಲಸವಾಗಬೇಕು ಎಂದು ಹಂಪಿ ಕನ್ನಡ ವಿವಿಯ ನಿವೃತ್ತ ಕುಲಪತಿ ಡಾ| ಬಿ.ಎ.ವಿವೇಕ ರೈ ಹೇಳಿದರು. ಅವರ ಬಿ.ಸಿ.ರೋಡು ಬಳಿಯ ಏರ್ಯ ಬೀಡಿನಲ್ಲಿ ಏರ್ಯ ಆಳ್ವ ಫೌಂಡೇಶನ್ ಆಶ್ರಯದಲ್ಲಿ ಡಾ| ಏರ್ಯ ಲಕ್ಷ್ಮೀನಾರಾಯಣ ಆಳ್ವ ಅವರ ಕೃತಿಗಳಲ್ಲಿ ಮುಖ್ಯವಾದವುಗಳನ್ನು ಮಥಿಸುವ ಮತ್ತು ಏರ್ಯರ ಕವನಗಳನ್ನು ಹಾಡುವ ಏರ್ಯ ಸಾಹಿತ್ಯ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಏರ್ಯರ ಪತ್ನಿ ಆನಂದಿ ಆಳ್ವ ಅವರು ಡಾ| ವಿವೇಕ ರೈ ಅವರನ್ನು ಗೌರವಿಸಿದರು. ಬಳಿಕ ಹಿರಿಯ ಸಾಹಿತಿಗಳಾದ ಡಾ| ತಾಳ್ತಜೆ ವಸಂತಕುಮಾರ್, ಡಾ| ನಾ.ದಾಮೋದರ ಶೆಟ್ಟಿ, ಪ್ರೊ| ಪಿ.ಕೃಷ್ಣಮೂರ್ತಿ, ಡಾ| ಯು. ಮಹೇಶ್ವರಿ, ಡಾ| ತುಕಾರಾಮ್ ಪೂಜಾರಿ, ಡಾ|…
ರಾಷ್ಟ್ರೀಯ ಹೆದ್ದಾರಿ ಮೇಲ್ಪದರವನ್ನು ಅಗೆದು ಮರು ಡಾಮರೀಕರಣಗೊಳಿಸುವ ಕಾಮಗಾರಿ ಹಲವು ತಿಂಗಳುಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದು, ಹಲವು ಅಪಘಾತಗಳು ಸಂಭವಿಸಿದರೂ ಇಲಾಖೆಯಾಗಲಿ, ಗುತ್ತಿಗೆದಾರರಾಗಲಿ ಎಚ್ಚೆತ್ತುಕೊಂಡಿಲ್ಲ. ಮೂಲ್ಕಿ ಸೇತುವೆ ಬಳಿ ಎರಡು ಜೀವ ಹೋದ ಬಳಿಕವೂ ಯಾರೂ ಎಚ್ಚೆತ್ತುಕೊಂಡಿಲ್ಲ. ನಿಮ್ಮ ಜೀವಕ್ಕೆ ನೀವೇ ಜವಾಬ್ದಾರರು ಎಂಬಂತೆ ಎಲ್ಲರೂ ನುಣುಚಿಕೊಳ್ಳುತ್ತಿದ್ದಾರೆ. ಹೆಜಮಾಡಿ ಸಮೀಪದಿಂದ ಮೂಲ್ಕಿಯವರೆಗೆ ರಾ.ಹೆ.ಯನ್ನು ದೊರಗುಗೊಳಿಸಿ ಹಾಗೆಯೇ ಬಿಡಲಾಗಿದೆ. ಇದರ ಮೇಲೆಯೇ ವಾಹನ ಸಂಚರಿಸ ಬೇಕಾಗಿದೆ. ಚತುಃಶ್ಚಕ್ರ ವಾಹನಗಳಿಗೆ ಇದರಿಂದ ಹೆಚ್ಚಿನ ಅಪಾಯವಾಗದಿದ್ದರೂ ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿಡಿದುಕೊಂಡು ಸಾಗಬೇಕಾಗಿದೆ. ರಸ್ತೆ ಅಭಿವೃದ್ಧಿ ಆಗಬೇಕಿದ್ದರೂ ಈ ಸಂದರ್ಭ ತೆಗೆದುಕೊಳ್ಳಬೇಕಾಗಿರುವ ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಇಲ್ಲಿ ತೆಗೆದುಕೊಂಡಿಲ್ಲ. ರಸ್ತೆ ದೊರಗುಗೊಳಿಸಿರುವಲ್ಲಿ ನಿಧಾನವಾಗಿ ಸಾಗಬೇಕು. ಆದರೆ ಇಲ್ಲಿ ಎಲ್ಲಿಯೂ ಎಚ್ಚರಿಕೆಯ ಸೂಚನ ಫಲಕ ಹಾಕಿಲ್ಲ. ಆದುದರಿಂದ ಸವಾರರಿಗೆ ತಾವೊಂದು ಇಂತಹ ಅಪಾಯಕ್ಕೆ ಎದುರಾಗುತ್ತಿದ್ದೇವೆ ಎಂಬ ಯಾವ ಸುಳಿವೂ ಇಲ್ಲದೇ ನೇರಾನೇರ ಬೆಂಕಿಗೆ ಬಿದ್ದಂತೆ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ದೊರಗು ಮಾಡಿರುವ ರಸ್ತೆಯಲ್ಲಿ ತೊಳಲಾಡುವ ವಾಹನವನ್ನು ನಿಯಂತ್ರಿಸಿಕೊಳ್ಳಲು…
ಅವಧೂತ ಪರಂಪರೆಯ ಪ್ರಮುಖ ಕೇಂದ್ರ ನಿತ್ಯಾನಂದ ಮಂದಿರ ಮಠ ಜೀರ್ಣೋದ್ಧಾರ ಮತ್ತು ನೂತನ ಬಿಂಬ ಪ್ರತಿಷ್ಠೆ ಕಾರ್ಯಕ್ರಮ ಜ. 15 ಮತ್ತು 16ರಂದು ನಡೆಯಲಿದೆ ಎಂದು ಮಂದಿರದ ಅಧ್ಯಕ್ಷ ಕೆ. ದಿವಾಕರ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 61 ವರ್ಷಗಳ ಹಿಂದೆ ಮಂದಿರವು ಸಾಧ್ವಿ ಸೀತಾ ಶೆಟ್ಟಿ ಅವರ ಮುಂದಾಳತ್ವದಲ್ಲಿ ನಿರ್ಮಾಣವಾಗಿತ್ತು. ನಿರಂತರ ಭಜನೆ, ಸತ್ಸಂಗ, ನಿತ್ಯ ಪೂಜೆ, ಬಾಲ ಭೋಜನ, ಸಾಧುಸಂತರಿಗೆ ಆಶ್ರಯ, ದಾನಗಳಿಂದಾಗಿ ನಗರದಲ್ಲಿ ಆಧ್ಯಾತ್ಮಿಕ ವಾತಾವರಣವನ್ನು ಸೃಷ್ಟಿ ಸಿದ್ದ ಈ ಮಂದಿರ ಸಾಕಷ್ಟು ಶಿಥಿಲಾವಸ್ಥೆಯಲ್ಲಿದ್ದಾಗ ಮುಂಬಯಿ ಮೂಲದ ಉದ್ಯಮಿ ಕೆ.ಕೆ. ಆವರ್ಸೆಕರ್ ಸಹಕಾರದಲ್ಲಿ 4 ಕೋ.ರೂ. ವೆಚ್ಚ ದಲ್ಲಿ ಮರು ನಿರ್ಮಾಣಗೊಂಡಿದೆ. ಮಂದಿರದ ವಾಸ್ತು ಶೈಲಿ ಗಣೇಶ ಪುರಿಯಲ್ಲಿರುವ ನಿತ್ಯಾನಂದ ಮಂದಿರದ ಮಾದರಿಯಲ್ಲಿದೆ ಎಂದರು. ವಿಗ್ರಹ ಮೆರವಣಿಗೆ ಜ. 15ರಂದು ಗಣೇಶ ಪುರಿಯಿಂದ ಆಗಮಿಸಿರುವ ನಿತ್ಯಾನಂದ ಸ್ವಾಮಿ ವಿಗ್ರಹವನ್ನು ಕೊಡವೂರು ಶಿರಡಿ ಸಾಯಿಬಾಬಾ ಮಂದಿರದಿಂದ ಜೋಡುಕಟ್ಟೆವರೆಗೆ ವಾಹನ ಜಾಥಾದಲ್ಲಿ ತರಲಾಗುವುದು. ಜಾಥಾಕ್ಕೆ ಮಣಿಪಾಲ ಗ್ರೂಪ್ ಮುಖ್ಯಸ್ಥ ಡಾ| ರಂಜನ್…
ರಾಜಕೀಯದಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಸೇವೆ ಸಲ್ಲಿಸಿ, ಕಾನೂನು ರಂಗದಲ್ಲೂ ಗಮನ ಸೆಳೆಯುವ ಹಿರಿಯ ನಾಯಕ ಕೆ. ಮೋನಪ್ಪ ಭಂಡಾರಿ. ಇವರ ಬಗ್ಗೆ ಒಂದು ಕಿರು ಪರಿಚಯ ಇಲ್ಲಿದೆ. ಕೆಲ್ಲೆಕಾರುಗುತ್ತು ಮೋನಪ್ಪ ಭಂಡಾರಿ ಅವರು ಕೆ. ದೂಮಣ್ಣ ಶೆಟ್ಟಿ ಹಾಗೂ ಶ್ರೀಮತಿ ಲಕ್ಷ್ಮೀ ಅವರ ಪುತ್ರರಾಗಿ 1952 ರ ಜನವರಿ 3ರಂದು ಕಾಸರಗೋಡು ಜಿಲ್ಲೆಯ ಉಪ್ಪಳ ಸಮೀಪದ ಕೋಡಿಬೈಲಿನ ಕರವೂರು ಎಂಬಲ್ಲಿ ಜನಿಸಿದವರು. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರು ಕೋಡಿಬೈಲು ಐಡೆಡ್ ಲೋವರ್ ಫ್ರೈಮರಿ ಶಾಲೆಯಲ್ಲಿ ಮುಗಿಸಿ, ಬಳಿಕ ಮಂಗಲ್ಪಾಡಿ ಸರಕಾರಿ ಹೈಸ್ಕೂಲಿನಲ್ಲಿ, ಕನ್ಯಾನದ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಿ ಮಂಗಳೂರಿನ ಸೈಂಟ್ ಅಲೋಶಿಯಸ್ ಸಂಧ್ಯಾ ಕಾಲೇಜಿನಲ್ಲಿ ಕಲಿತು ಬಿ.ಎ. ಪದವಿ ಪಡೆದರು. ಆ ಬಳಿಕ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದು ಮಂಗಳೂರಿನ ಎಸ್ ಡಿ ಎಂ ಕಾಲೇಜಿನಲ್ಲಿ ಎಲ್ ಎಲ್ ಬಿ ಪದವಿ ಪಡೆದು ನ್ಯಾಯವಾದಿಯಾದರು. ಪ್ರಸ್ತುತ ಇವರು ನ್ಯಾಯವಾದಿಯಾಗಿ ಸೇವೆ ಸಲ್ಲಿಸುತ್ತಿದ್ದು, ಜತೆಗೆ ನೋಟರಿಯೂ ಆಗಿದ್ದಾರೆ.…
ಅವಿಭಾಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಪ್ರತಿಷ್ಠಿತ ಕ್ಲಬ್ ಗಳಲ್ಲಿ ಒಂದಾದ ಕುಂದಾಪುರ ತಾಲೂಕು ಎಡ್ವರ್ಡ್ ಮೆಮೊರಿಯಲ್ ಕ್ಲಬ್ ನ ವಾರ್ಷಿಕ ಮಹಾ ಸಭೆಯಲ್ಲಿ ತೀರಾ ಅನಾರೋಗ್ಯ ಪೀಡಿತರಿಗೆ“ಆರೋಗ್ಯ ನಿಧಿ” ಯೋಜನೆಗೆ ಕ್ಲಬ್ ನ ಅಧ್ಯಕ್ಷರಾದ ಉದ್ಯಮಿ ಚಿತ್ತರಂಜನ್ ಹೆಗ್ಡೆ ಹರ್ಕೂರು ಅವರು ಚಾಲನೆ ನೀಡಿದರು. ತೀರಾ ಅನಾರೋಗ್ಯ ಪೀಡಿತ ಜನರಿಗೆ ತಲಾ 10000 ರೂ ಚೆಕ್ ನ್ನು ವಿತರಿಸಲಾಯಿತು ಹಾಗೆಯೇ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಆ ಮಹಾಸಭೆಯಲ್ಲಿ ಕ್ಲಬ್ ನ ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿಗಳಾದ ಕಾಳಾವರ ಉದಯ್ ಶೆಟ್ಟಿ ಲೆಕ್ಕ ಪತ್ರ ಮಂಡನೆ ಮಾಡಿ ಧನ್ಯವಾದ ಸಮರ್ಪಣೆ ಮಾಡಿದರು. ನಿವೃತ ಮುಖ್ಯ ಉಪಾಧ್ಯಾಯರಾದ ವೀರಣ್ಣ ಶೆಟ್ಟಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.
ಅಟಲ್ ಬಿಹಾರಿ ವಾಜಪೇಯಿ ಭಾರತದ ಪ್ರಧಾನಿಯಾಗಿದ್ದಾಗ ಇಸ್ರೋದ ಚಂದ್ರಯಾನದ ಕನಸುಗಳು ಆರಂಭವಾದವು. ವಾಜಪೇಯಿಯೇ ಚಂದ್ರಯಾನವನ್ನು ಘೋಷಿಸಿದ್ದರು. ಆದರೆ ಚಂದ್ರಯಾನ-1 ಸಾಕಾರಗೊಂಡಿದ್ದು ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ. 2008ರಲ್ಲಿ ಹೊರಟ ಈ ನೌಕೆ, 2009ರಲ್ಲಿ ಚಂದ್ರನಲ್ಲಿ ನೀರಿದೆ ಎಂಬ ಅದ್ಭುತ ಸುಳಿವು ನೀಡಿ ಸಂಪರ್ಕ ಕಳೆದುಕೊಂಡಿತು. ಇದೂ ಕೂಡ ಅದ್ಭುತ ಯಶಸ್ಸು. ಇದರ ಬೆನ್ನಲ್ಲೇ ಇಸ್ರೋ ತನ್ನ ಪ್ರಯತ್ನ ನಿಲ್ಲಿಸಲಿಲ್ಲ. 2019ರಲ್ಲಿ ಮತ್ತೆ ಚಂದ್ರ ಯಾನ-2ನೇ ಭಾಗ ಆರಂಭವಾಯಿತು. ಜು.22ಕ್ಕೆ ಹೊರಟ ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್ ಸೆ.6ಕ್ಕೆ ಚಂದ್ರನ ಮೇಲೆ ಇಳಿಯುವ ಹಂತದಲ್ಲಿ ಸಂಪರ್ಕ ಕಳೆದುಕೊಂಡಿತು. ಆಗ ಇಸ್ರೋ ಅಧ್ಯಕ್ಷರಾಗಿದ್ದವರು ಕೆ.ಶಿವನ್. ಈಗ ಪ್ರಧಾನಿ ನರೇಂದ್ರ ಮೋದಿಯವರ ಆಶಯ ಮತ್ತು ಎಸ್.ಸೋಮನಾಥ್ ನೇತೃತ್ವದಲ್ಲಿ ಇನ್ನೊಮ್ಮೆ ಚಂದ್ರಯಾನ ಆರಂಭವಾಗಿದೆ. ಹಿಂದೆ ಆದ ಯಾವುದೇ ತಪ್ಪಾಗದಂತೆ ನಿರಂತರ ಪರಿಶ್ರಮ ವಹಿಸಲಾಗಿದೆ. ಎಲ್ವಿಎಂ3-ಎಂ4 (ಹಿಂದಿನ ಜಿಎಸ್ಎಲ್ವಿ) ರಾಕೆಟ್ ಮೂಲಕ ಶುಕ್ರವಾರ ಚಂದ್ರನಲ್ಲಿಗೆ ನೌಕೆ ಹೊರಟಿದೆ. ಅಲ್ಲಿಗೆ ಉಡಾವಣೆ ಯಶಸ್ವಿಯಾಗಿದೆ. ಇಸ್ರೋ ವಿಜ್ಞಾನಿಗಳಿಗೆ ಭಾರೀ ಯಶಸ್ಸು ಲಭಿಸಿದೆ. ನಿಜವಾದ…
ರೋಟರಿ ಮಂಗಳೂರು ಪೂರ್ವ ಇದರ 2023-24 ರ ಸಾಲಿನ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇತ್ತೀಚೆಗೆ ನಗರದ ಮೋತಿಮಹಲ್ ಹೋಟೆಲಿನ ಸಭಾ ಭವನದಲ್ಲಿ ಜರುಗಿತು. ಮುಖ್ಯ ಅತಿಥಿ ಯಾಗಿ ಭಾಗವಹಿಸಿದ್ದ ರೋಟರಿ ಜಿಲ್ಲೆ 3181 ರ 2025-26ರ ಸಾಲಿನ ನಿಯೋಜಿತ ಜಿಲ್ಲಾ ಗವರ್ನರ್ ರಾಮಕೃಷ್ಣರವರು ಪದಗ್ರಹಣ ನೆರವೇರಿಸಿ ಮಾತನಾಡುತ್ತಾ ರೋಟರಿ ಅತ್ಯಂತ ಶ್ರೇಷ್ಠ ಸೇವಾ ಸಂಸ್ಥೆ. ಈ ಸಂಸ್ಥೆಯ ಮುಖಾಂತರ ಸಮುದಾಯದ ಅಸಹಾಯಕರ ಕಣ್ಣೀರೊರೆಸುವ ಕೆಲಸ ಮಾಡಬೇಕೆಂದು ಸದಸ್ಯರಿಗೆ ಕರೆ ನೀಡಿದರು. ಮುಂಡಾಡಿಗುತ್ತು ಜಯರಾಮ ಶೆಟ್ಟಿ ಅಧ್ಯಕ್ಷರಾಗಿಯೂ, ಮಾಜಿ ಸಹಾಯ ಗವರ್ನರ್ ಸದಾಶಿವ ಶೆಟ್ಟಿಯವರು ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದರು. ನಿರ್ಗಮನ ಅಧ್ಯಕ್ಷ ಸಿ.ಎ ಹರೀಶ್ ಶೆಟ್ಟಿಯವರು ಸ್ವಾಗತಿಸಿ ಕಳೆದ ವರ್ಷ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ನಿರ್ಗಮನ ಕಾರ್ಯದರ್ಶಿ ಜೋಯಲ್ ಸಲ್ದಾನ ಗತ ವರ್ಷದ ವರದಿ ಮಂಡಿಸಿದರು. ಜಿಲ್ಲಾ ಸಹ ತರಬೇತುದಾರ ಶೇಖರ ಶೆಟ್ಟಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಡಾ. ವಸಂತ ಶೆಟ್ಟಿ ನೂತನ ಸದಸ್ಯರನ್ನು ಪರಿಚಯಿಸಿದರು. ಕ್ಲಬ್ ವತಿಯಿಂದ…