Author: admin

“ಬಂಟರಲ್ಲಿ ನಾಯಕತ್ವದ ಗುಣಗಳಿವೆ. ವೈದ್ಯಕೀಯ ಕ್ಷೇತ್ರ, ಕ್ರೀಡಾ ಕ್ಷೇತ್ರ, ಸಾಂಸ್ಕೃತಿಕ ಕ್ಷೇತ್ರ, ಹೋಟೆಲ್ ಉದ್ಯಮ ಹೀಗೇ ಎಲ್ಲಾ ಕ್ಷೇತ್ರಗಳಲ್ಲೂ ರಾಜ್ಯ ರಾಷ್ಟ್ರಮಟ್ಟದಲ್ಲಿ ಇಂದು ಬಂಟರು ಗುರುತಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ ಬಂಟರ ಕೊಡುಗೆ ದೊಡ್ಡದಿದೆ. ಅಂತಹ ನಾಯಕತ್ವ ನಮಗೆ ಅತೀ ಅಗತ್ಯವಾಗಿದೆ. ಬಂಟ ಸಮಾಜದ ಮಹಿಳೆಯರು ಕೂಡ ಸಾಕಷ್ಟು ಪ್ರಬಲರಾಗಿದ್ದಾರೆ. ಇತರರಿಗೆ ಮಾದರಿಯಾಗಿ ಬೆಳೆದಿದ್ದಾರೆ. ಬಂಟರು ಇನ್ನು ಮುಂದೆಯೂ ಸಾಮಾಜಿಕವಾಗಿ ಹೆಚ್ಚೆಚ್ಚು ಪ್ರಬಲರಾಗಿ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಸಮಾಜದಲ್ಲಿ ಒಗ್ಗಟ್ಟನ್ನು ಉಳಿಸಿ ಅಭಿವೃದ್ಧಿಗೆ ಕೊಡುಗೆ ಕೊಡಿ. ವಿಘ್ನ ನಿವಾರಕ ಗಣೇಶನ ಆಶೀರ್ವಾದ ನಮ್ಮ ನಿಮ್ಮೆಲ್ಲರ ಮೇಲಿರಲಿ” ಎಂದು ಅರೋಗ್ಯ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಅವರು ಬಂಟರ ಯಾನೆ ನಾಡವರ ಮಾತೃ ಸಂಘ, ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಅಂಗವಾಗಿ ಬಂಟ್ಸ್ ಹಾಸ್ಟೇಲ್ ನ ಓಂಕಾರ‌ ನಗರದಲ್ಲಿ ಎರಡನೇ ದಿನದ ಧಾರ್ಮಿಕ ಸಭೆಯಲ್ಲಿ…

Read More

ಇತ್ತೀಚೆಗೆ ಬಹರೈನ್ ದೇಶಕ್ಕೆ ಆಗಮಿಸಿ ಅಧಿಕಾರ ವಹಿಸಿಕೊಂಡ ಭಾರತದ ನೂತನ ನಿಯೋಜಿತ ರಾಯಭಾರಿ ಘನತೆವೆತ್ತ ಶ್ರೀ ವಿನೋದ್ ಕೆ. ಜೇಕಬ್ ಅವರನ್ನು ಕನ್ನಡ ಸಂಘದ ಅಧ್ಯಕ್ಷರಾದ ಶ್ರೀ ಅಮರನಾಥ್ ರೈ ಹಾಗೂ ಪದಾಧಿಕಾರಿಗಳು ಭೇಟಿಯಾಗಿ ಅಭಿನಂದಿಸಿದರು. ಅಧ್ಯಕ್ಷ ಶ್ರೀ ಅಮರನಾಥ್ ರೈಯವರು ರಾಯಭಾರಿಯವರಿಗೆ ಹೂಗುಚ್ಛ, ಸ್ಮರಣಸಂಚಿಕೆ ಮತ್ತು ಸ್ಮರಣಿಕೆ ನೀಡಿ ಗೌರವಿಸಿದರು. ಬಳಿಕ ಶ್ರೀ ರೈಯವರು ಕನ್ನಡ ಸಂಘವು ನಡೆದು ಬಂದ ಹಾದಿ, ಕನ್ನಡ ಭವನ ನಿರ್ಮಾಣದ ಕುರಿತು ವಿಸ್ತೃತವಾಗಿ ವಿವರಿಸಿದರು. ಜೊತೆಗೆ ಇದೇ ಸೆಪ್ಟೆಂಬರ್ ನಲ್ಲಿ ನಡೆಯುವ ಪದಗ್ರಹಣ ಸಮಾರಂಭಕ್ಕೆ ಅತಿಥಿಗಳಾಗಿ ಬರುವಂತೆ ಆಹ್ವಾನಿಸಿದರು. ಘನತೆವೆತ್ತ ಶ್ರೀ ವಿನೋದ್ ಕೆ. ಜೇಕಬ್ ರವರು ಕನ್ನಡ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿದು ಸಂಘಟನೆಯನ್ನು ಶ್ಲಾಘಿಸಿದರು. ತಾವು ಕನ್ನಡ ಭವನವನ್ನು ಸಂದರ್ಶಿಸುವದರೊಂದಿಗೆ ಮುಂದಿನ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಭರವಸೆ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ‌ಭಾರತೀಯ ದೂತಾವಾಸದ ಶ್ರೀ ಇಜ಼ಾಸ್ ಅಸ್ಲಂ, ದ್ವಿತೀಯ ಕಾರ್ಯದರ್ಶಿ (ರಾಜಕೀಯ, ಪತ್ರಿಕಾ, ಮಾಹಿತಿ ಮತ್ತು ಸಂಸ್ಕೃತಿ) ಉಪಸ್ಥಿತರಿದ್ದರು.

Read More

ಮುಂಬಯಿಯ ಪ್ರಸಿದ್ಧ ಸಮಾಜ ಸೇವಕ, ಶಿಕ್ಷಣ ತಜ್ಞ, ಬಂಟರ ಸಂಘ ಮೀರಾ- ಭಯಂದರ್ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಧ್ಯಕ್ಷ ಬಿಳಿಯೂರುಗುತ್ತು ಡಾ. ಅರುಣೋದಯ ರೈ ಅವರು ಸ್ಥಾಪಿಸಿರುವ ರೈ ಸುಮತಿ ಎಜುಕೇಶನ್ ಟ್ರಸ್ಟಿನ ಆಡಳಿತದಲ್ಲಿರುವ ಸೈಂಟ್ ಆಗ್ನೆಸ್ ಇಂಗ್ಲಿಷ್ ಹೈಸ್ಕೂಲ್ ನಲ್ಲಿ ಗುರು ಪೂರ್ಣಿಮದ ದಿನದಂದು ವಿದ್ಯಾರ್ಥಿಗಳಿಗೆ ಗುರುವಿನ ಬಗ್ಗೆ ಮತ್ತು ಮಾತಾಪಿತರ ಬಗ್ಗೆ ಜ್ಞಾನ ವೃದ್ಧಿಸುವ ವಿಶೇಷ ಕಾರ್ಯಕ್ರಮ ನಡೆಯಿತು. ಶಾಲೆಯಲ್ಲಿ ಸುಮಾರು 3000 ವಿದ್ಯಾರ್ಥಿಗಳಿದ್ದು ಗುರು ಪೂರ್ಣಿಮೆಯಂದು ಜೂನಿಯರ್ ಸೀನಿಯರ್ ಹಾಗೂ ಒಂದನೇ ತರಗತಿ ಮತ್ತು ಎರಡನೇ ತರಗತಿಯ ಸುಮಾರು 1180 ವಿದ್ಯಾರ್ಥಿಗಳಿಗೆ ಗುರುವಿನ ಮತ್ತು ಮಾತಾಪಿತರ ಮಹತ್ವದ ಅರಿವನ್ನು ಮೂಡಿಸುವುದಕ್ಕಾಗಿ ತಾಯಿಯ ಪಾದ ಪೂಜೆಯನ್ನು ಮಾಡಿಸಿ ವಿದ್ಯಾರ್ಥಿಗಳಿಗೆ ತಾಯಿಯ ಮಹತ್ವವನ್ನು ತಿಳಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅರುಣೋದಯ ರೈ ಸಾವಿರಾರು ಮಕ್ಕಳು ಹಾಗೂ ಅವರೊಂದಿಗೆ ಅಷ್ಟೇ ತಾಯಂದಿರು ಇಂದಿನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಕ್ಕಳಿಗೆ ತಮ್ಮ ಸಂಸ್ಕೃತಿಯನ್ನು ಜೀವಂತವಾಗಿರಿಸಲು ಈ ಕಾರ್ಯಕ್ರಮವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗಿದೆ. ಇದೇ…

Read More

ವಿದ್ಯಾರ್ಥಿಗಳ ಆಶೋತ್ತರಗಳನ್ನು ಈಡೇರಿಸಲು ಬಂಟರ ಸಂಘಗಳು ಪ್ರಯತ್ನಿಸಬೇಕು. ಜಿಲ್ಲೆಯಲ್ಲಿ ಬಂಟರ ಮೆಡಿಕಲ್ ಕಾಲೇಜುಗಳು ಇವೆ. ಬಂಟರ ಸಂಘಗಳು ಕನಿಷ್ಠ ಐದು ಪರ್ಸಂಟ್ ಸೀಟುಗಳನ್ನು ಬಂಟ ವಿದ್ಯಾರ್ಥಿಗಳಿಗೆ ನೀಡುವಂತೆ ಬಂಟರ ಮಾತೃ ಸಂಘ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮೂಲಕ ಒತ್ತಡ ಹೇರಬೇಕು ಎಂದು ಕಟ್ಲ ಬಾಳಿಕೆ ಅಗೊಳಿ ಮಂಜಣ್ಣ ಜಾಗದ ಧರ್ಮ ದೈವಗಳ ದೈವಸ್ಥಾನದ ಆಡಳಿತ ಮೊಕ್ತೇಸರ ವಿಶ್ವನಾಥ ಶೆಟ್ಟಿ ಕಟ್ಲ ಬಾಳಿಕೆ ತಿಳಿಸಿದರು. ಸುರತ್ಕಲ್ ಬಂಟರ ಭವನದಲ್ಲಿ ನಡೆದ ಇಡ್ಯಾ ಗ್ರಾಮದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಕನಸು ಹೊತ್ತು ವಿದ್ಯೆ ಕಲಿಯುತ್ತಾರೆ. ಅತ್ಯಧಿಕ ಅಂಕವನ್ನೂ ಗಳಿಸುತ್ತಾರೆ. ಆದರೆ ಅವರ ಇಚ್ಚೆಗೆ ತಕ್ಕಂತೆ ಮೆಡಿಕಲ್, ಇಂಜಿನಿಯರಿಂಗ್ ಸೀಟು ಸಿಗುವುದಿಲ್ಲ. ಹಣ ಕೊಟ್ಟು ಸೀಟು ಪಡೆಯಲು ಅಸಮರ್ಥರಾದಾಗ ಬೇರೆ ಪಠ್ಯದತ್ತ ಆಸಕ್ತಿ ವಹಿಸುತ್ತಾರೆ. ಇದಕ್ಕೆ ಜಿಲ್ಲೆಯಲ್ಲಿರುವ ಬಂಟರ ಸಂಘಗಳು ಬಂಟರ ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಕೊಡಿಸುವ ಪ್ರಯತ್ನ ಮಾಡಿದರೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲ ಆಗುತ್ತದೆ…

Read More

ನಾಗಬನ ಅಂದ್ರೆ ಒಂದಷ್ಟು ದಟ್ಟ ಮರಗಿಡಗಳ, ಬಳ್ಳಿಗಳ ಮಧ್ಯೆ ಇರುವಂತದ್ದು. ಅಲ್ಲಿ ಮರಗಳ ದಟ್ಟತೆ ನೆಲಕ್ಕೆ ಸೂರ್ಯನ ಬೆಳಕು ಬೀಳದಷ್ಟು ಇರುತ್ತದೆ. ಅದು ಎಷ್ಟೇ ಬಿಸಿಲಿದ್ದರೂ ತಂಪಾಗಿರುತ್ತದೆ. ಇಂತಹ ಬನದ ಮರಗಳನ್ನು ಯಾವುದೇ ಕಾರಣಕ್ಕೂ ಕಡಿಯುವುದು ನಿಷಿದ್ಧ! ಅದೆಲ್ಲೋ ಗದ್ದೆಗೆ ಬಾಗಿಕೊಂಡಿರುವ ಉಳುಮೆಗೆ ತೊಂದರೆ ಕೊಡುವ ಬನದ ಮರದ ಗೆಲ್ಲುಗಳನ್ನು ಕಡಿಯುತ್ತಾರೆ ಬಿಟ್ರೆ ಬುಡದಿಂದ ಮರಗಳನ್ನು ಕಡಿಯುವುದಾಗಲಿ, ಹಾರೆ ಪಿಕ್ಕಾಸು ಹಿಡಿದು ಬನದಲ್ಲಿ ಮಣ್ಣು ಅಗೆಯುವ ಕೆಲಸ ಮಾಡುವುದಾಗಲಿ ಮಾಡುವುದಿಲ್ಲ. ಹೆಚ್ಚಾಗಿ ಎಲ್ಲಾ ಸಾಂಪ್ರದಾಯಿಕವಾದ ನಾಗ ಬನದಲ್ಲಿ ನೆಲದ ಮೇಲೆಯೇ ಕಲ್ಲುಗಳು ಇರುತ್ತದೆ. ಅದು ನೋಡಲೂ ಚಂದ ಅಲ್ಲಿರುವ ನಾಗಗಳಿಗೂ ಅದರಿಂದ ಒಳ್ಳೆಯದು. ಆದರೆ ಇತ್ತೀಚಿಗೆ ಜನರು ನಾಗ ಬನದಲ್ಲಿರುವ ಮರಗಳನ್ನು ಎಲ್ಲಾ ಕಡಿದು ನೆಲದ ಮೇಲಿದ್ದ ನಾಗನ ಕಲ್ಲುಗಳನ್ನು ಸಿಮೆಂಟಿನ ಕಟ್ಟೆ ಮಾಡಿ, ಅದರ ಮೇಲೆ ಪ್ರತಿಷ್ಠಾಪನೆ ಮಾಡುತ್ತಾ ಇದ್ದಾರೆ. ಇದು ತಿಳುವಳಿಕೆ ಇದ್ದೋ ಅಥವಾ ತಿಳುವಳಿಕೆ ಇಲ್ಲದೆಯೋ ಗೊತ್ತಿಲ್ಲ. ಸಿಮೆಂಟಿನ ಕಟ್ಟೆಯ ಮೇಲೆ ನಾಗ ಬರುತ್ತದೆಯೇ ಎಂದು ಕೇಳಿದರೆ…

Read More

ದುರಂತವನ್ನಪ್ಪಿದ ಅವಳಿ ಸಹೋದರಿಯರು ಉರ್ಕಿದೊಟ್ಟು ಸಾನದ ಸೊನ್ನೆ ಮತ್ತು ಗುರು ಮಾರ್ಲ ರ ಮಕ್ಕಳು ಅಬ್ಬಗ-ದಾರಗರು. ಬ್ರಹ್ಮರಿಗೆ ಹರಸಿಕೊಂಡು ಹುಟ್ಟಿದ ಅವಳಿಮಕ್ಕಳು ಇವರು. ಹೇಳಿಕೊಂಡ ಹರಕೆಯನ್ನು ಸಲ್ಲಿಸಲು ಮರೆಯುತ್ತಾರೆ ಸೊನ್ನೆ-ಗುರುಮಾರ್ಲ ದಂಪತಿಗಳು. ಅಬ್ಬಗೆ-ದಾರಗೆಯರಿಗೆ ಗಂಡು ನಿಶ್ಚಯಿಸಿ ಬರಲು ಹೋಗುವಾಗ ಬೆರ್ಮೆರ್ ಬಡ ಬ್ರಾಹ್ಮಣನ ವೇಷ ಧರಿಸಿ ಬಂದು ‘ಬೆರ್ಮೆರಿಗೆ ಹೇಳಿದ ಹರಿಕೆಯನ್ನು ನೆನಪಿಸುತ್ತಾರೆ. ಆಗ ಸೊನ್ನೆ ಉದ್ಧಟತನದಿಂದ ವರ್ತಿಸುತ್ತಾಳೆ. ಇದರಿಂದ ಕೋಪಗೊಂಡ ಬೆರ್ಮೆರು ಅದೇ ಬಡ ಬ್ರಾಹ್ಮಣನ ರೂಪದಲ್ಲಿ ಬೀಡಿಗೆ ಬಂದು ಅಬ್ಬಗೆ-ದಾರಗೆಯರನ್ನು ಚೆನ್ನೆಯಾಡಲು ಪ್ರೇರೇಪಿಸಿ ಅವರೊಳಗೆ ಜಗಳ ತಂದು ಹಾಕಿ ಅವರಿಬ್ಬರೂ ಸಾವನ್ನಪ್ಪುವಂತೆ ಮಾಡುತ್ತಾರೆ. ಅಬ್ಬಗ ದಾರಗರು ಒಳಗಿನ ಕೋಣೆಗೆ ಹೋದರು ಕಲ್ಲು ಪೆಟ್ಟಿಗೆಯ ಬೀಗ ತೆರೆದು ಬರುತ್ತದೆ. ಬೆಳ್ಳಿಯ ಚೆನ್ನಮಣೆ ಬಂಗಾರದ ಮುತ್ತು ಹರಳು ತೆಗೆದುಕೊಂಡರು ಬಾಜಿರ ಹಲಗೆಯಲ್ಲಿ ಕುಳಿತರು ಚೆನ್ನೆಯಾಡಿದರು ಒಂದಾಟ ಆಡಿದಳು ತಂಗಿಗೆ ಗೆಲುವು ತೋರಿ ಬಂತು ಎರಡಾಟವಾಗಿ ಅಕ್ಕನಿಗೆ ಪೊರಿ ಆಯಿತು ಮೂರನೆ ಆಟದಲ್ಲಿಯೂ ಅಕ್ಕನಿಗೆ ತಂಗಿಯನ್ನು ಗೆಲ್ಲಲಾಗಲಿಲ್ಲ ಆಗೆಂದಳು ತಂಗಿ ಓ ಅಕ್ಕನವರೆ…

Read More

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ವಿವಿಧ ಕ್ಷೇತದಲ್ಲಿ ಸಾಧನೆ ಮಾಡಿದ ಕಾರ್ಕಳ, ಹೆಬ್ರಿ ತಾಲೂಕಿನ ಸಾಧಕ ಮಹಿಳೆಯರನ್ನು ಕಾರ್ಕಳದ ಸಾವಿತ್ರಿ ಸತ್ಯವಾನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನಿಸುವ ಕಾರ್ಯಕ್ರಮವು ಹೆಬ್ರಿ ಚೈತನ್ಯ ಯುವ ವೃಂದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಮೋದಿ ಬ್ರಿಗೇಡ್ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ವೇದಾವತಿ ಹೆಗ್ಡೆ ಉದ್ಘಾಟಿಸಿ ಮಾತನಾಡಿ ಜೀವನದ ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಗಳನ್ನು ಗೌರವಿಸಿ, ಮಹಿಳೆಯರ ಕಷ್ಟಗಳನ್ನು ತಡೆಯುವ ಸಲುವಾಗಿ ಮಹಿಳಾ ದಿನಾಚರಣೆಯನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಮಹಿಳೆಯರ ಆರ್ಥಿಕ, ಸಾಮಾಜಿಕ, ಮತ್ತು ಸಾಧನೆಗಳನ್ನು ಮಹಿಳಾ ದಿನಾಚರಣೆಯಂದು ನೆನೆಯಲಾಗುತ್ತಿದೆ. ಮಹಿಳೆಯರು ಮಾಡುವ ಪ್ರತಿ ಕಾರ್ಯಗಳನ್ನು ಸಮಾಜ ಗೌರವಿಸುತ್ತದೆ. ಮಹಿಳೆಯರು ಯಾವ ಪುರುಷರಿಗಿಂತ ನಾವೇನು ಕಮ್ಮಿ ಇಲ್ಲವೆಂದು ನಿರೂಪಿಸಿದ್ದಾರೆ. ಸಂಸ್ಥೆಯು ಸಾಧಕ ಮಹಿಳೆಯರನ್ನು ಗೌರವಿಸಿ ಪ್ರಶಸ್ತಿ ಪ್ರಧಾನ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಮಹರ್ಷಿ ಅರವಿಂದ ಘೋಷ್ ರವರ ನೆನಪಿಗಾಗಿ ಸಾವಿತ್ರಿ ಸತ್ಯವಾನ್ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯನ್ನು ಆರಂಭಿಸಿದೆವು. ಸಾಧನೆಗೆ ಸ್ಫೂರ್ತಿ, ಬದುಕಿಗೆ ದಾರಿ, ಕುಟುಂಬಕ್ಕೆ…

Read More

” ಸದೃಢ ಜೀವಸತ್ವಗಳ ಪೂರೈಕೆ, ಬಿಳಿ ರಕ್ತ ಕಣಗಳ ಉತ್ಪಾದನೆಗೆ ಸೊಪ್ಪು ಸೇವನೆ ಅತ್ಯಗತ್ಯ…!” ಪ್ರೋಟಿನ್ ಗಳ ಪೌಷ್ಟಿಕಾಂಶವನ್ನು ವೃದ್ಧಿಸುವ ಸೊಪ್ಪು , ದೈನಂದಿನ ರಕ್ತ ಪರಿಚಲನೆಯ ರತ್ನಕೋಶ…..!” – ಕೆ.ಸಂತೋಷ ಶೆಟ್ಟಿ, ಮೊಳಹಳ್ಳಿ,ಕುಂದಾಪುರ .ಉಡುಪಿ ಜಿಲ್ಲೆ .(ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು) e-mail:-santhoshmolahalli@gmail.com ” ಪ್ರತಿದಿನ ದೇಹಕ್ಕೆ ಸೊಪ್ಪು ಸೇವನೆ ಬಲು ತಂಪು ಹರಿವೇ ಮತ್ತು ಬಸಳೆ ಹಾಗೂ ಇನ್ನಿತರ ಸೊಪ್ಪುಗಳನ್ನ ಎಚ್ಚೆತವಾಗಿ ತಿನ್ನುವುದರಿಂದ ಜೀವ ಸತ್ವ ಕೊರತೆಗಳ ನೀಗಿಸುವುದರೊಂದಿಗೆ ದೇಹದಲ್ಲಿನ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ ಮತ್ತು ದಯಕ ಬೇಕಾಗಿರುವಂತಹ ಪ್ರೋಟೀನ್ ಮುಕ್ತ ಪದಾರ್ಥಗಳನ್ನು ನೇರವಾಗಿ ನಮ್ಮ ದೇಹಕ್ಕೆ ರವಾನೆ ಮಾಡುತ್ತದೆ ಅದಲ್ಲದೆ ಸೊಪ್ಪು ತರಕಾರಿಗಳನ್ನು ಎಚ್ಚೆತ್ತುವಾಗಿ ತಿನ್ನುವುದರಿಂದ ಜೀವ ಸತ್ವಗಳ ರಕ್ಷಣೆ ಮತ್ತು ಉತ್ಪಾದನೆಗೆ ಇದು ಸಹಕಾರಿಯಾಗುತ್ತದೆ”. ಸೊಪ್ಪು ಪಧಾರ್ಥಗಳನ್ನು ಸೇವಿಸುವುದರಿಂದ ದೇಯಕಾಗುವ ವಿಶೇಷ ರೀತಿಯ ಪ್ರಯೋಜನಗಳನ್ನ ನಾವು ತಿಳಿದುಕೊಳ್ಳಬೇಕಾದ ಅಂಶಗಳು ಇವತ್ತಿನ ಬರಹದಲ್ಲಿ ಅಡಗಿದೆ. ಏಕೆಂದರೆ ಸೊಪ್ಪು ದೇಹದ ಜೀರ್ಣಶಕ್ತಿ ಹಾಗೂ ಜಠರ, ದೊಡ್ಡ ಕರುಳು, ಸಣ್ಣ…

Read More

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಆಶ್ರಯದಲ್ಲಿ ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಗೌರವ ಸನ್ಮಾನ ಕಾರ್ಯಕ್ರಮವು ಪಟ್ಲ ಫೌಂಡೇಶನ್ ಟ್ರಸ್ಟ್ ನ ಸಹಯೋಗದೊಂದಿಗೆ ಡಿಸೆಂಬರ್ 4 ರಂದು ಭಾನುವಾರ ಸಂಜೆ 4 ಗಂಟೆಗೆ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿಯ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಚಲನ ಚಿತ್ರ ನಿರ್ದೇಶಕ, ನಟ ರಿಷಬ್ ಶೆಟ್ಟಿ ಮತ್ತು ಕಾಂತಾರ ಚಿತ್ರ ತಂಡ ಭಾಗವಹಿಸಲಿದೆ. ಸಮಾರಂಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮವನ್ನು ಕನ್ಯಾನ ಸದಾಶಿವ ಶೆಟ್ಟಿ ಉದ್ಘಾಟಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ ಶೆಟ್ಟಿ ವಹಿಸಲಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಲಕ್ಷ್ಮೀ ನಾರಾಯಣ ಅಸ್ರಣ್ಣ ಆಶೀರ್ವಚನ ನೀಡಲಿದ್ದಾರೆ. ಸಮಾರಂಭದಲ್ಲಿ ಸಮಾಜ ಕಲ್ಯಾಣ ಯೋಜನೆಯಡಿಯಲ್ಲಿ ಶಿಕ್ಷಣ, ಮದುವೆ, ಮನೆ‌ ನಿರ್ಮಾಣ, ಕ್ರೀಡೆ, ವೈದ್ಯಕೀಯ…

Read More

ತುಳುನಾಡ್ ನಾಗೆ, ಬಿರ್ಮೆರ್, ದೈವೊ, ದೇಬೆರ್, ಸಿರಿ ಕುಮಾರೆರ್, ಬೀರ ಪುರ್ಸೆರೆ ಕಾರ್ನಿಕೊದ ಬೂಡು. ಮುಲ್ಪ ಕಾಪುನ ದೇವೆರೆನೊಟ್ಟುಗು ಬಗಳೆ ಕಲೆದ್, ಅಪ್ಪೆಯಾದ್ ಆದರಿಪುನ, ತಮ್ಮಲೆಯಾದ್ ಬಾಮ್ಯುನ ಆದೆರ್ಪುದ ದೆಯ್ಯೊಲು ತುಳುವ ಸೀಮೆನ್ ಕಲೆ ಕಾರ್ನಿಕೊಡು ಮೆರೆಪಾವೊಂದುಪ್ಪುನ ಕಣ್ಣ್ ದಾಂತಿನಾಯಗ್ಲಾ ನೆಗತ್ ತೋಜುನ ಸತ್ಯೊ. ನಾಗನಡೆ, ನಾಗನಿಧಿ, ನಾಗಬೀದಿ ಪಂದ್ ನೀರ್ ಪರಿಪುದ ಒಸರ್‌ನ್ ಲೆತ್ತ್ ಬಾಮಿಂಡಲಾ, ಕೂಲಿಡ್ ಇಸೊ ದಿಂಜಾದ್, ಪರಿಪು ಮರಿಕ್ಕ್ ದೇಬೆರೆ ತಾನೊ ಕೊರ್‌ದ್ ನಾಗದೇವೆರ್ ಪಂದ್ ಬಾಮಿದ್, ತನು ತಂಬಿಲೊ ಸೇವೆ ಸಂದಾದ್ ಅಮುರ್ತೊದ ಸಬಿ ಆಸ್ರಾದೊ ಪಡೆಪುನಕ್ಲ್ ತುಳುವೆರ್. ಮಣೆ, ಮಂಚಾವು, ಕಾಟ್ ಕಲ್ಲ್, ಕಲ್ಲ್, ಬನೊ, ಸಾನೊ, ಮಾಡೊ, ಗುಂಡೊ, ಆಲಡೆ ಪಂದ್ ದೈವೊಗೊಂಜಿ ದೈವನಿಲೆ ಮಲ್ತ್ ಅಯಿಕ್ಕೊಂಜೊಂಜಿ ರೀತಿ, ನೀತಿ ಉಂಡು ಮಲ್ತ್, ಅವೆನ್ನವೇ ನಿಯಮೊ ಬಾಮಿದ್ ಅಯಿನ್ನ ಪಿರ್ಕಾರೊ ನಡಪಾವೊಂದು ಬತ್ತ್ ಕಾಡ ಬರಿಡ್ದ್, ಕಡಲ ಕರೆಮುಟ್ಟ ನ್ಯಾಯ ನೀತಿ, ಸತ್ಯ ನಂಬುಗೆಡ್ ಬದ್ಕ್ ಕರಿತೊಂದುಲ್ಲೆರ್. ಅಪಗ ಉಂದು ಮಾತ…

Read More