Author: admin
ಗಣಿತನಗರ : ದೇಶದ ರಕ್ಷಣಾ ಕ್ಷೇತ್ರದಲ್ಲಿ ಜಲಸೇನೆಯ ಕೊಡುಗೆ ಗಣನೀಯವಾದದ್ದು. ಸೇನೆಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಶಿಸ್ತು, ಸಂಯಮವನ್ನು ಬೆಳೆಸಿ ನಾಯಕತ್ವದ ಗುಣವನ್ನು ಉದ್ದೀಪನಗೊಳಿಸುವ ಎನ್.ಸಿ.ಸಿಯ ಕಾರ್ಯ ಮಹತ್ತರವಾದದ್ದು ಎಂದು ಉಡುಪಿಯ ಎನ್.ಸಿ.ಸಿ ನೇವಲ್ ವಿಭಾಗದ ಕಮಾಂಡರ್ ಅಶ್ವಿನ್ ಎಂ ರಾವ್ ಹೇಳಿದರು. ಕಾರ್ಕಳ ಜ್ಞಾನಸುಧಾ ಪದವಿ ಪೂರ್ವಕಾಲೇಜಿನಲ್ಲಿ ನೂತನವಾಗಿ ಪ್ರಾರಂಭಗೊಂಡ ಎನ್.ಸಿ.ಸಿ ನೇವಲ್ ಘಟಕವನ್ನು ಸಂಸ್ಥೆಯ ಪ್ರಾಂಶುಪಾಲ ಹಾಗೂ ಎನ್.ಸಿ.ಸಿ ಕ್ಷೇಮಪಾಲನಾಧಿಕಾರಿಗೆ ಎನ್.ಸಿ.ಸಿ. ಧ್ವಜವನ್ನು ಹಸ್ತಾಂತರಿಸಿ ಮಾತನಾಡಿದರು. ಇದೇ ಸಂದರ್ಭ ಎನ್.ಸಿ.ಸಿಯ ಧ್ವಜದ ಮಹತ್ವವನ್ನು, ಧ್ಯೇಯೋದ್ದೇಶಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಮಾತನಾಡಿ ಸಂಸ್ಥೆಯಲ್ಲಿ ಓದಿದ ಎನ್.ಸಿ.ಸಿ. ಘಟಕದ ವಿದ್ಯಾರ್ಥಿಯು ಎನ್.ಸಿ.ಸಿ. ಕೋಟದಡಿಯಲ್ಲಿ ತನ್ನ ಮೊದಲ ಪ್ರಯತ್ನದಲ್ಲಿಯೇ ಎಂ.ಬಿ.ಬಿ.ಎಸ್ ಪ್ರವೇಶಾತಿ ಪಡೆದಲ್ಲಿ ಸಂಸ್ಥೆಯ ವತಿಯಿಂದ ಭಾರತೀಯ ಸೇನೆಗೆ ರೂ.10ಸಾವಿರವನ್ನು ಕೊಡುಗೆಯಾಗಿ ನೀಡಲಾಗುವುದು ಎಂದು ಘೋಷಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಪ್ರಾಂಶುಪಾಲರಾದ ಶ್ರೀ ದಿನೇಶ್ ಎಂ ಕೊಡವೂರ್…
ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಯುನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ನ ವಿದ್ಯಾರ್ಥಿಗಳು ಅತ್ಯುತ್ತಮ ರ್ಯಾಂಕ್ ಮತ್ತು ನಗದು ಬಹುಮಾನಗಳನ್ನು ಪಡೆದರು. ಬಿಎ ವಿಭಾಗದಲ್ಲಿ ಕೆ ಎಸ್ ವಿಷ್ಣುಕುಮಾರ್ ಜಾನ್ ಎಫ್ ಕೆನಡಿ ಸ್ಮಾರಕ ಚಿನ್ನದ ಪದಕ, ಎನ್ ಅನಂತಾಚಾರ್ ಸ್ಮಾರಕ ಚಿನ್ನದ ಪದಕ, ಎಂಇಎಸ್ ಕಾಲೇಜು ರಜತ ಮಹೋತ್ಸವ ಬಹುಮಾನ ಪಡೆದರು. ಪಲ್ನಾಟಿ ಕಾವ್ಯ ಅವರು ಎಂ ಶ್ರೀನಿವಾಸ ಅಯ್ಯಂಗಾರ್ ಮತ್ತು ದೊರೆಸಾಲಮ್ಮ ಸ್ಮಾರಕ ಚಿನ್ನದ ಪದಕ, ಕೆನರಾ ಬ್ಯಾಂಕ್ ವಜ್ರ ಮಹೋತ್ಸವ ಸ್ಮಾರಕ ಬಹುಮಾನ, ಟಿ ಶಿವಣ್ಣ ಅಭಿನಂದನಾ ಸಮಿತಿ ಚಿನ್ನದ ಪದಕ ಪಡೆದರು. ಧನ್ಯರೆಡ್ಡಿ ಎಸ್ ಅವರು ಮಿಸಸ್ ಮೇರಿ ಕೋದಂಡ ರಾವ್ ಬಹುಮಾನ ಸ್ವೀಕರಿಸಿದರೆ, ಸಾರ್ವೀನ ಪಿ ಅವರು ಕೆನರಾ ಬ್ಯಾಂಕ್ ವಜ್ರ ಮಹೋತ್ಸವ ಬಹುಮಾನ ಗಳಿಸಿದರು ಎಂದು ಯುನಿವರ್ಸಲ್ ಸ್ಕೂಲ್ ಆಫ್ ಅಡ್ಮಿನಿಸ್ಟ್ರೇಷನ್ ಕಾಲೇಜಿನ ಚೇರ್ಮನ್ ಆರ್ ಉಪೇಂದ್ರ ಶೆಟ್ಟಿ ತಿಳಿಸಿದರು.
2025-26ನೇ ಸಾಲಿನ ಕರ್ನಾಟಕ ರಣಜಿ ತಂಡದ ಪ್ರಕಟಣೆಯೊಂದಿಗೆ ಕುಂದಾಪುರವು ಇತಿಹಾಸವನ್ನು ನಿರ್ಮಿಸಿದೆ. ಅಭಿಲಾಶ್ ಶೆಟ್ಟಿಯವರ ಜೊತೆಗೆ ಕುಂದಾಪುರದ ಪ್ರತಿಭಾವಂತ ಕ್ರಿಕೆಟಿಗ ಶಿಖರ್ ಶೆಟ್ಟಿ ಈ ಬಾರಿಯ ರಣಜಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಮೊದಲ ಬಾರಿಗೆ ರಣಜಿ ತಂಡಕ್ಕೆ ಆಯ್ಕೆಯಾಗಿರುವ ಶಿಖರ್ ಶೆಟ್ಟಿ, ರಾಜ್ಯ ಕ್ರಿಕೆಟ್ ವಲಯದಲ್ಲಿ ತನ್ನ ನಿರಂತರ ಸಾಧನೆಯಿಂದಲೇ ಆಯ್ಕೆದಾರರ ಗಮನ ಸೆಳೆದಿದ್ದಾರೆ. ಕಳೆದ ಕೆಲವು ಸೀಸನ್ಗಳಲ್ಲಿ ಅವರ ಪ್ರದರ್ಶನ ವಿಶಿಷ್ಟವಾಗಿತ್ತು. ಶಿಖರ್ ಶೆಟ್ಟಿ ಅವರು ಕುಂದಾಪುರದ ರಾಜೇಶ್ ಶೆಟ್ಟಿ ಹಾಗೂ ವಚನಾ ಶೆಟ್ಟಿ ಅವರ ಪುತ್ರರು. ಅವರ ತಂದೆ ರಾಜೇಶ್ ಶೆಟ್ಟಿ ಜನ್ನಾಡಿ ಕರಾವಳಿ ಕುಂದಾಪುರ ತಂಡದ ಪರವಾಗಿ ಅತ್ಯುತ್ತಮ ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದರು. ಬೆಂಗಳೂರಿನಲ್ಲಿ “HOY ಕ್ರಿಕೆಟರ್ಸ್” ತಂಡವನ್ನು ಸ್ಥಾಪಿಸಿ ಅನೇಕ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸಿದ್ದರು. ಶಿಖರ್ ಶೆಟ್ಟಿ ಪ್ರಸ್ತುತ ಬೆಂಗಳೂರು ಆಧಾರಿತ ಕ್ರಿಕೆಟ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದು, ರಾಜ್ಯದ ವಿವಿಧ ವಯೋಮಾನದ ಪಂದ್ಯಗಳಲ್ಲಿ ತಮ್ಮ ಎಡಗೈ ಸ್ಪಿನ್ ಬೌಲಿಂಗ್ ಕೌಶಲ್ಯದಿಂದ ಹೆಸರು ಮಾಡುತ್ತಿದ್ದಾರೆ. ನಿಖರ ಲೈನ್…
ಓಲೆಡ್ ಇತ್ತಿನ ಇಸಯೊನು ಇಂದ್ರೆ ಕೇಂದ್ ಪಿಂದೊಂಡೆ. ಅರ್ಜುನೆ ಓಲೆಡ್ ಬರೆತಿನ ನಮೂನಿ (ರೀತಿ)ನ್ ಕೇಂದ್, ಇಂದ್ರಗ್ ಕಾಲರುದ್ರಡ್ದ್ ಲಾ ಎಚ್ಚಿನ ಗರ್ವ ಬತ್ತ್ಂಡ್. ಆಯೆ “ಅರ್ಜುನೆ ಮಿತ್ತ್ ಗ್ ದಾದ ಆವು ಪಂದ್ ತೆರಿಯೊನಂದೆ, ಬಜಿ ಪೊಕ್ಕಡೆ ಅಂಮ್ಸನಿ ಕೊಚ್ಚೊಂದೆ, ದಂಡ್ ಸಾದನೆಡ್ ದೇವತೆಲೆಗ್ ನರಮಾನಿಲು ಸರಿ ಸಮನಾ?” ಪಂಡೆ. ಓಲೆಡ್ ಇತ್ತಿನ ಗಡ್ಸ್ ದ ಬೇಡಿಕೆನ್ ಕೇಂದ್, ಒರ ಇಂದ್ರೆ “ದಾದ ಉಂದು, ಕಾಲದ ಮಯಿಮೆನ, ಇಸರಂಡ ದೇವೆರೆ ಇಚ್ಛೆನ, ದೇವತೆಲೆಗ್ ಸೋಲ್ ಆಪಿನ ಸೂಚನೆನಾ ದಾದ ಪಂದ್ ತೆರಿವುಜಿ, ನರಮಾನಿಲು ದೇವಲೋಕೊಗು ಓಲೆ ಬರೆದ್, ಸೊರ್ಗಲೋಕದ ಅಪ್ಸರೆಯರ್ ಬೊಕ್ಕ ಬಾಕಿದ ವಸ್ತ್ ಲೆನ್ ಕಡಪುಡ್ದು ಕೊರು ಪಂದ್ ಕೇನುನು, ಉಂದೆನ್ ಇಸರಂಡ ದೇವೆರೆ ಪಿಂಬೆರ್” ಪಂದ್ ದೇವೇಂದ್ರೆ ಪಂಡೆ. ಪಾರ್ತೆ ಕಡಪುಡ್ದಿನ ಓಲೆ ಓದುದು ಗರ್ವ ಬತ್ತಿನ ಇಂದ್ರೆ, ಜೋರುಡೆ ಗುರೆತೆ, “ಲೆಪ್ಪುಲೆ ಬರ್ಸ ಒಡ್ಡಾವುನ ದಾರಗೆಲೆನ್, ಅಗುಲು ಅರ್ಜುನ ಪಟ್ನ ಹಸ್ತಿನಾಪುರೊಟು ಜೋರಾದ್ ಏಲ್ ರಾತ್ರೆ,…
ತುಳು ರಂಗಭೂಮಿ ಬದಲಾಗುತ್ತಿದೆ. ಸಾಮಾಜಿಕ ಮತ್ತು ಹಾಸ್ಯ ನಾಟಕಗಳಿಗೆ ಸೀಮಿತವಾಗಿದ್ದ ರಂಗಭೂಮಿ ಹೊಸ ಪ್ರಯೋಗಗಳನ್ನು ಪ್ರಾರಂಭಿಸುತ್ತಿದೆ. ತುಳು ರಂಗಭೂಮಿ ಭಕ್ತಿ ಪೌರಾಣಿಕದಿಂದ ಐತಿಹಾಸಿಕ, ಐತಿಹಾಸಿಕ ಮತ್ತು ನೈತಿಕ ನಾಟಕಕ್ಕೆ ಬದಲಾಗಿದೆ. ಕೃಷ್ಣ ಜಿ ಮಂಜೇಶ್ವರ ಇವರ ಶಾರದಾ ಕಲಾ ಕೂಟದ ಐಸಿರಿ ಕಲಾವಿದರು ಆಂಜನೇಯನ ಕಥೆಯೊಂದಿಗೆ ಧರ್ಮ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದ ಯುವಕರ ತ್ಯಾಗವನ್ನು ತೋರಿಸಿದ್ದಾರೆ. “ಸು ಫ್ರಮ್ ಸೋ” ಚಿತ್ರದ ಬಾವ ಬಂದರೂ ಖ್ಯಾತಿಯ ಪ್ರಬುದ್ಧ ರಂಗಭೂಮಿ ಕಲಾವಿದ ಪುಷ್ಪರಾಜ್ ಬೊಳ್ಳಾರ್, ಚಂದ್ರಶೇಖರ್ ಸಾಯ ಬೇಡ್ರಗುಡ್ಡೆ, “ತುಳುನಾಡ್ ರಂಗ ಬೊಳ್ಳಿ” ರವಿ ರಾಮಕುಂಜ, “ಗಡಿನಾಡ ಅಭಿನಯ ರತ್ನ” ಅನಿಲ್ ರಾಜ್ ಉಪ್ಪಳ, ಅಶೋಕ್ ಬೇಕೂರ್ ಹಾಗೂ ಪ್ರಬುದ್ಧ ಕಲಾವಿದರುಗಳು ಅಭಿನಯಿಸಿರುವ ಈ ನಾಟಕವನ್ನು ವಿಕ್ರಮ್ ದೇವಾಡಿಗ ಚಿತ್ರಾಪುರ ನಿರ್ದೇಶಿಸಿದ್ದಾರೆ. ಈ ನಾಟಕದ ಸುಂದರ ಸಾಹಿತ್ಯವನ್ನು ರಾಜೇಶ್ ಮುಗುಳಿ ಬರೆದಿದ್ದಾರೆ. ಹಿನ್ನೆಲೆ ಸಂಗೀತ ಪ್ರವೀಣ್ ಕಾಣಿಯೂರು, ಧ್ವನಿ ಮತ್ತು ಬೆಳಕು ಅಕ್ಷತ್ ಕೊಂಡಾಣ, ಸಂಪತ್ ಸುವರ್ಣ ಬೆಳ್ತಂಗಡಿ ಅವರ ಸಹಕಾರದೊಂದಿಗೆ,…
05 ಅಕ್ಟೋಬರ್ 2025 ರಂದು ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳು ಹಾಗೂ ಸ್ವಯಂಸೇವಕರು ಪರಿಸರ ಸಂರಕ್ಷಣೆ ಮತ್ತು ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯ ಸಂದೇಶವನ್ನು ಸಾರುವ ಉದ್ದೇಶದಿಂದ ಕಾರ್ಕಳದ ಆಸುಪಾಸಿನಲ್ಲಿರುವ ಅನೇಕ ಪ್ರೇಕ್ಷಣೀಯ ಸ್ಥಳಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಿದರು. ಪ್ಲಾಸ್ಟಿಕ್ ಕಸದ ಸಂಗ್ರಹ, ಕಸ ವಿಂಗಡಣೆ ಹಾಗೂ ಪರಿಸರ ಶುದ್ಧೀಕರಣದ ಜೊತೆಗೆ ಸ್ಥಳೀಯ ಜನರಿಗೆ ಸ್ವಚ್ಛತೆಯ ಮಹತ್ವವನ್ನು ಬೋಧಿಸುವ ಜಾಗೃತಿ ಅಭಿಯಾನವೂ ನಡೆಯಿತು. ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಸ್ವಚ್ಛ ಕಾರ್ಕಳ ನಗರದ ಸ್ವಚ್ಛತಾ ರಾಯಭಾರಿಯಾಗಿರುವ ಫೆಲಿಕ್ಸ್ ಜೋಸೆಫ್ ವಾಜ್ ರವರು ಶುಭ ಹಾರೈಸಿದರು. ಕಾರ್ಕಳ ಪುರಸಭಾ ಅಧ್ಯಕ್ಷರಾದ ಯೋಗೀಶ್ ದೇವಾಡಿಗ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ' ಸ್ವಚ್ಛತೆ ಎನ್ನುವುದು ಕೇವಲ ದೈಹಿಕ ಶುದ್ಧತೆಗೆ ಸೀಮಿತವಲ್ಲ.
ಎನ್.ಎಸ್.ಎಸ್ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸುವ ವೇದಿಕೆ – ಕ್ರಿಯೇಟಿವ್ ಕಾಲೇಜಿನ ಎನ್.ಎಸ್.ಎಸ್ ವಾರ್ಷಿಕ ಶಿಬಿರದ ಸಮಾರೋಪದಲ್ಲಿ ಅತಿಥಿಗಳ ಸಂದೇಶ
ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ರಾಷ್ಟ್ರೀಯ ಸೇವಾ ಯೋಜನೆ ಪ್ರಯುಕ್ತ ಕಾರ್ಕಳದ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ವತಿಯಿಂದ ನಡೆದ 'ನಶಾ ಮುಕ್ತ ಭಾರತ ಅಭಿಯಾನ' ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭವು ಸರಕಾರಿ ಪದವಿಪೂರ್ವ ಕಾಲೇಜು, ಕಾರ್ಕಳದಲ್ಲಿ 07 ಅಕ್ಟೋಬರ್ 2025 ರಂದು ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಮಾರುತಿ, ಜಿಲ್ಲಾ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಉಡುಪಿ ಜಿಲ್ಲೆ ಇವರು ಮಾತನಾಡಿ 'ವಿದ್ಯಾರ್ಥಿ ಜೀವನದಲ್ಲಿ ಇಂತಹ ಶಿಬಿರಗಳು ನೈಜ ಜೀವನದ ಪಾಠ ಕಲಿಸುವ ಪಾಠಶಾಲೆಯಂತಿವೆ. ಸಮಾಜ ಸೇವೆ ಎಂದರೆ ಕೇವಲ ಒಂದು ದಿನದ ಕಾರ್ಯಕ್ರಮವಲ್ಲ. ಅದು ಜೀವನಪೂರ್ತಿ ಅಳವಡಿಸಿಕೊಳ್ಳಬೇಕಾದ ಮನೋಭಾವ' ಎಂದು ಕರೆ ನೀಡಿದರು. ಸಂಸ್ಥೆಯ ಸಹ ಸಂಸ್ಥಾಪಕರಾದ ಅಶ್ವತ್ ಎಸ್.ಎಲ್ ರವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ 'ಸಮಾಜಕ್ಕೆ ಕೊಡುಗೆ ನೀಡುವ ಮನೋಭಾವ ಬೆಳೆಸಿದರೆ, ಶಿಕ್ಷಣದ ಗುರಿ ಸಾರ್ಥಕವಾಗುತ್ತದೆ' ಎಂದು ಹೇಳಿದರು. ಮುಖ್ಯ ಅತಿಥಿ ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್…
ಮುಂಬೈ ವಿಶ್ವವಿದ್ಯಾಲಯದ ಕುಸುಮಾಗ್ರಜ ಸಭಾಂಗಣದಲ್ಲಿ ಕುಸುಮೋದರ ಶೆಟ್ಟಿಯವರಿಗೆ ಗೌರವ ಗ್ರಂಥ ಅರ್ಪಣೆಯ ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಎಲ್ಲರ ಬಗ್ಗೆ ಗ್ರಂಥ ರಚನೆ ಆಗುವುದಿಲ್ಲ. ಸಮಾಜದಲ್ಲಿನ ಅರ್ಹ ವ್ಯಕ್ತಿಗಳಿಗೆ ಮಾತ್ರ ಇಂತಹ ಗ್ರಂಥ ರಚನೆಯಾಗಿ ಅರ್ಪಣೆಯಾಗುತ್ತದೆ. ಬಡತನದಿಂದ ಮೇಲೆದ್ದು ಕಠಿಣ ಪರಿಶ್ರಮದಿಂದ ತಮ್ಮ ಉದ್ಯಮದಲ್ಲಿ ಸಾಧನೆಯೊಂದಿಗೆ ಸಮಾಜಮುಖಿಯಾಗಿ ಬದುಕು ಕಟ್ಟಿಕೊಂಡಿರುವ ಶ್ರೇಷ್ಠ ವ್ಯಕ್ತಿತ್ವದ ಕುಸುಮೋದರ ಶೆಟ್ಟಿ ಅವರಿಗೆ ಗೌರವ ಗ್ರಂಥ ಅರ್ಪಣೆಯಾಗಿರುವುದು ತುಂಬಾ ಸಂತೋಷವಾಗಿದೆ. ಕುಸುಮೋದರ ಶೆಟ್ಟಿಯವರ ತಾಯಿ ಭವಾನಿ ಶೆಟ್ಟಿ ಅವರು ತಮ್ಮ ಸಂಸಾರಕ್ಕೆ ಒಳ್ಳೆಯ ಸಂಸ್ಕೃತಿ, ಸಂಸ್ಕಾರವನ್ನು ನೀಡಿದ್ದಾರೆ. ಅದನ್ನು ಕುಸುಮೋದರ ಶೆಟ್ಟಿಯವರು ತನ್ನ ಜೀವನದಲ್ಲಿ ಮೈಗೂಡಿಸಿಕೊಂಡು ಬೆಳೆದಿದ್ದರಿಂದ ಅವರು ಇಂದು ಈ ಗೌರವ ಗ್ರಂಥ ಸ್ವೀಕರಿಸುವ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಮಹಾರಾಷ್ಟ್ರದ ನೆಲದಲ್ಲಿ ತನ್ನ ತಾಯಿಯ ಹೆಸರಿನಲ್ಲಿ ಫೌಂಡೇಶನ್ ಸ್ಥಾಪಿಸಿ ಆ ಮೂಲಕ ಬಡವರ ಕಣ್ಣೀರು ಒರೆಸುವ ಕಾಯಕವನ್ನು ಕುಸುಮೋದರ ಶೆಟ್ಟಿ ಹಾಗೂ ಅವರ ಪರಿವಾರದವರು ಮಾಡುತ್ತಾ ಬಂದಿರುವುದು ಅಭಿನಂದನೀಯ. ದೇವರು ಕುಸುಮೋದರ ಶೆಟ್ಟಿ ಅವರಿಗೆ ದುಡ್ಡು ಸಂಪತ್ತಿನ…
ಪ್ರಾಚೀನ ತುಳುನಾಡಿನ ತುಳುವೇಶ್ವರ ದೇವಸ್ಥಾನ ಬಸ್ರೂರಿನಲ್ಲಿ ಅಕ್ಟೋಬರ್ 6 ರಿಂದ ಆರಂಭಗೊಂಡ ಅಷ್ಟಮಂಗಳ ಪ್ರಶ್ನೆ ಚಿಂತನೆ ವೇಳೆ ಅತ್ಯಂತ ಅದ್ಭುತ ಮತ್ತು ಮಹತ್ವದ ಆಧ್ಯಾತ್ಮಿಕ ಕುರುಹು ಪತ್ತೆ ಸಂಭವಿಸಿದೆ. ಪ್ರಶ್ನೆಯ ಸಂದರ್ಭದಲ್ಲಿ ದೇವತಾಪ್ರೇರಿತ ಸಂದೇಶದ ಮೂಲಕ ಮುಳಲದೇವಿ ತುಳುವೇಶ್ವರಿ ದೇವಾಲಯದ ಅಸ್ತಿತ್ವ ಮತ್ತು ಅದರ ತಾತ್ತ್ವಿಕ ಮಹತ್ವ ಬೆಳಕಿಗೆ ಬಂದಿದೆ. ಪುರಾಣೋಕ್ತ ಪ್ರಕಾರ, ಆದಿ ವಂದಿತ ಜಗದೀಶ್ವರಿ ಎಂಬ ಹೆಸರಿನಿಂದ ಪ್ರಸಿದ್ಧಳಾದ ಈ ದೇವಿ, ತುಳುವೇಶ್ವರನ ಪ್ರಾಣಸಖಿ ಎಂದೂ ಗುರುತಿಸಲ್ಪಟ್ಟಿದ್ದಾಳೆ. ತುಳುವೇಶ್ವರ ದೇವಾಲಯದ ಪೂರ್ವ ದಿಕ್ಕಿನಲ್ಲಿ ಈ ದೇವಾಲಯದ ಕುರುಹುಗಳು ಪತ್ತೆಯಾಗಿದ್ದು, ಆಕೆ ಪೂಜಿತಳಾದ ದೇವಾಲಯದಲ್ಲಿ ಅತ್ಯಂತ ರಹಸ್ಯಮಯ ತಾಂತ್ರಿಕ ಶಕ್ತಿಯ ಮೇರು ಶ್ರೀಚಕ್ರ ಸ್ಥಾಪಿತವಾಗಿದ್ದುದಾಗಿ ತಿಳಿದುಬಂದಿದೆ. ಈ ಶ್ರೀ ಚಕ್ರವು ಕಾಲಕ್ರಮೇಣ ನೇಪಾಳ ದೇಶಕ್ಕೆ ಹಸ್ತಾಂತರಗೊಂಡಿದೆ ಎಂಬ ಮಾಹಿತಿಯೂ ಪ್ರಶ್ನೆಯ ವೇಳೆ ಸ್ಪಷ್ಟವಾಯಿತು. ಈ ಸ್ಥಿಸ್ತ್ಯಂತಾರದಿಂದಾಗಿ ಈ ದೇವಾಲಯಗಳು ಸಂಪೂರ್ಣವಾಗಿ ಕ್ಷಯ ಸಂಭವಿಸಿದೆ ಎಂದು ತಿಳಿದುಬಂದಿದೆ. ಪ್ರಶ್ನೆಯ ಸಂದೇಶದ ಪ್ರಕಾರ, ಈ ದೇವಿಯ ಶ್ರೀ ಚಕ್ರವನ್ನು ಮರು ಹುಡುಕಿ, ಅದರ…
ಇಂದಿನ ಪೋಷಕರ ಕನಸುಗಳು ಎಲ್ಲವೂ ಒಂದೇ ಗುರಿಯತ್ತ ಕೇಂದ್ರೀಕರಿಸಿರುವಂತೆ ಕಾಣುತ್ತಿವೆ. ನಮ್ಮ ಮಗು ಇಂಗ್ಲಿಷ್ನಲ್ಲಿ ಓದಬೇಕು. ಈ ಭಾವನೆ ಎಷ್ಟೇ ಪ್ರೀತಿಯಿಂದ ಹುಟ್ಟಿದರೂ, ಅದರ ಪರಿಣಾಮಗಳು ಎಷ್ಟೋ ಬಾರಿ ನೋವಿನ ಕಥೆಯಾಗುತ್ತವೆ. ಮಗುವಿನ ಭವಿಷ್ಯ ಹೊಳೆಯಬೇಕೆಂಬ ಆಶೆಯ ಹಿಂದೆ, ಅನೇಕ ಪೋಷಕರು ಸಾಲದ ಬಲೆಗೆ ಸಿಲುಕಿದ್ದಾರೆ. ಖಾಸಗಿ ಶಾಲೆಗಳ ಬಾಗಿಲು ತೆರೆಯುತ್ತಿದ್ದಂತೆ ಶುರುವಾಗುತ್ತದೆ ಹಣದ ಪಟ್ಟಿ ಪ್ರವೇಶ ಶುಲ್ಕ, ತಿಂಗಳ ಫೀ, ಬಸ್ ಶುಲ್ಕ, ಪುಸ್ತಕ, ಯೂನಿಫಾರ್ಮ್ ಮತ್ತು ಅನೇಕ ಅತಿರೇಕದ ‘ಅಕಾಡೆಮಿ’ ಖರ್ಚುಗಳು. ಪ್ರತಿ ತಿಂಗಳು ಪೋಷಕರು ಕೈಯಲ್ಲಿ ಬರುವ ವೇತನದ ಅರ್ಧಕ್ಕಿಂತ ಹೆಚ್ಚು ಭಾಗವನ್ನು ಈ ಖರ್ಚಿಗೆ ಕಳೆದುಕೊಳ್ಳುತ್ತಾರೆ. ಕೆಲವರು ಸಾಲ ಮಾಡುತ್ತಾರೆ. ಕೆಲವರು ಚಿನ್ನದ ಉಂಗುರ, ಭೂಮಿ ಅಥವಾ ಬಾಡಿಗೆಯ ಮನೆಯ ಹಣವನ್ನೇ ಶಿಕ್ಷಣದ ಹೆಸರಲ್ಲಿ ತ್ಯಜಿಸುತ್ತಾರೆ. ಆದರೆ ಈ ಸಾಲದ ಹೊರೆ ಪೋಷಕರಿಗೆ ಮಾತ್ರವಲ್ಲ, ಮಕ್ಕಳಿಗೂ ಕಾಡುತ್ತದೆ. ಪೋಷಕರು ದಿನಪೂರ್ತಿ ಚಿಂತೆಯಿಂದ ತುಂಬಿರುವಾಗ, ಮಗುವು ಮನೆಯಲ್ಲಿ ನೆಮ್ಮದಿಯಿಂದ ಕಲಿಯುವುದು ಹೇಗೆ ಸಾಧ್ಯ? ನಾವು ನಿನ್ನ ಶಿಕ್ಷಣಕ್ಕೆ…















