Author: admin
ಸಮಯಕ್ಕೆ ಅದೆಷ್ಟು ವೇಗ. ಹಿಂದೆ ಹತ್ತಾರು ವರ್ಷಗಳಲ್ಲಿ ಆಗುತ್ತಿದ್ದ ಬದಲಾವಣೆ ಮೂರ್ನಾಲ್ಕು ವರ್ಷಕ್ಕೆ ಇಳಿದದ್ದು ಇಂದಿಗೆ ಇತಿಹಾಸ. ಇವತ್ತು ಐದಾರು ತಿಂಗಳಲ್ಲಿ ಹತ್ತಾರು ವರ್ಷಗಳಲ್ಲಿ ಆಗುತ್ತಿದ್ದ ಬದಲಾವಣೆ ಆಗುತ್ತಿದೆ. ನಗರೀಕರಣ, ಡೆವಲಪ್ಮೆಂಟ್, ಉದ್ಯೋಗ, ಅವಕಾಶಗಳ ಹೆಸರಿನಲ್ಲಿ ನಾವು ಇಂದಿನ ಪರಿಸ್ಥಿತಿಯಲ್ಲಿ ಬಂದು ನಿಂತಿದ್ದೇವೆ. ಇದನ್ನು ನಾನು ಪಾಯಿಂಟ್ ಆಫ್ ನೋ ರಿಟರ್ನ್ ಎಂದುಕೊಂಡಿದ್ದೆ. ಆದರೆ ಯಾವುದನ್ನೂ ಕೂಡಾ ನಾವು ಇಂದಿಗೆ ಇಷ್ಟೇ ಎಂದು ಹೇಳಲು ಆಗುವುದಿಲ್ಲ ಎನ್ನುವುದಕ್ಕೆ ಉದಾಹರಣೆ ಸಿಕ್ಕಿದೆ. ಆಂಥ್ರೋಪಿಕ್ ಕ್ಲೌಡ್ ಎಐ ನಮ್ಮ ಬದುಕನ್ನು ಆ ಮಟ್ಟಿಗೆ ಬದಲಿಸಬಲ್ಲದು. ಈ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಬಗ್ಗೆ ಇನ್ನಷ್ಟು ಹೇಳುವ ಮುಂಚೆ ಒಂದೆರೆಡು ಉದಾಹರಣೆಗಳನ್ನು ಹೇಳುವೆ. ನಮ್ಮಲ್ಲಿದ್ದ ಕ್ಷಮತೆಯನ್ನು ನಾವೇ ಹೇಗೆ ಕೈಯಾರೆ ಅಭಿವೃದ್ಧಿಯ ಬೆನ್ನು ಹತ್ತಿ ಹಾಳು ಮಾಡಿಕೊಂಡೆವು ಎನ್ನುವುದನ್ನು ಹೇಳಿದಾಗ ಮಾತ್ರ ಆಂಥ್ರೋಪಿಕ್ ಎಐ ಅಥವಾ ಸಾಮಾನ್ಯವಾಗಿ ಮುಂದಿನ ದಿನಗಳಲ್ಲಿ ಒಟ್ಟಾರೆ ಎಐ ತರಬಹುದಾದ ಬದಲಾವಣೆಗಳಿಗೆ ನಾವೆಷ್ಟು ಸಿದ್ದ ಎನ್ನುವುದರ ಅರಿವು ಹೆಚ್ಚಾಗುತ್ತದೆ. ಮೊನ್ನೆ ಸೋಶಿಯಲ್ ಮೀಡಿಯಾದಲ್ಲಿ ಒಂದು…
ಮಕ್ಕಳ ಮನಸ್ಸು ಖಾಲಿ ಕಾಗದದಂತಿರುತ್ತದೆ. ಅದರಲ್ಲಿ ಮೊದಲ ಅಕ್ಷರಗಳನ್ನು ಬರೆಯುವವರು ಮನೆ, ಅಮ್ಮ, ಅಪ್ಪ ಮತ್ತು ಕುಟುಂಬ ವಾತಾವರಣ. ಮಕ್ಕಳಿಗೆ ಆಹಾರ, ಶಿಕ್ಷಣ ಮಾತ್ರ ಸಾಕಾಗುವುದಿಲ್ಲ. ಅವರಿಗೆ ಮುಖ್ಯವಾಗಿ ಬೇಕಾಗಿರುವುದು ಗಮನ, ಭದ್ರತೆ ಮತ್ತು ಸೇರಿದ ಭಾವನೆ. ಕೂಡು ಕುಟುಂಬದಲ್ಲಿ ಅಜ್ಜಿ, ತಾತ, ಅತ್ತೆ, ಮಾಮ, ಅಣ್ಣ, ತಂಗಿ, ಬಂಧುಗಳ ನಡುವೆ ಬೆಳೆಯುವ ಮಕ್ಕಳಿಗೆ ‘ನಾನು ಒಂಟಿಯಲ್ಲ’ ಎಂಬ ಮನೋಭಾವ ಸ್ವಾಭಾವಿಕವಾಗಿ ಮೂಡುತ್ತದೆ. ತಪ್ಪು ಮಾಡಿದರೂ ಯಾರಾದರೂ ತಿದ್ದುವರು, ದುಃಖವಾದರೆ ಯಾರಾದರೂ ಸಮಾಧಾನ ಹೇಳುವರು, ಸಾಧನೆ ಮಾಡಿದರೆ ಯಾರಾದರೂ ಹೆಮ್ಮೆ ಪಡುವರು. ಇದು ಆತ್ಮವಿಶ್ವಾಸದ ಬೇರು. ಆದರೆ ಪ್ರೀತಿ, ಮಾತು, ಗಮನ ಇಲ್ಲದ ವಾತಾವರಣದಲ್ಲಿ ವಿಶೇಷವಾಗಿ ಭಾವನಾತ್ಮಕವಾಗಿ ಸ್ಪಂದನೆ ಪಡೆಯದ ಹೆಣ್ಣು ಮಕ್ಕಳು ತಮ್ಮ ಮನಸ್ಸನ್ನು ಅರ್ಥ ಮಾಡಿಕೊಳ್ಳುವ ಸ್ಥಳವನ್ನು ಹೊರಗೆ ಹುಡುಕಲು ಪ್ರಾರಂಭಿಸುತ್ತಾರೆ. ಅವರಿಗೆ ಯಾರು ಕೇಳುತ್ತಾರೆ, ಯಾರು ಗೌರವ ಕೊಡುತ್ತಾರೆ, ಯಾರು ಒಪ್ಪಿಕೊಳ್ಳುತ್ತಾರೆ ಎಂಬುದೇ ಮುಖ್ಯವಾಗುತ್ತದೆ. ಅಲ್ಲಿ ವ್ಯಕ್ತಿ, ಗುಂಪು, ತತ್ವ ಅಥವಾ ಹೊಸ ಆಲೋಚನೆಗಳ ಆಕರ್ಷಣೆ ಹೆಚ್ಚಾಗುತ್ತದೆ.…
ಕಾರ್ಕಳ : ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆ ಗಣಿತನಗರದಲ್ಲಿ ಇಂಟಾರಾಕ್ಟ್ ಕ್ಲಬ್ ವತಿಯಿಂದ ದಂತ ಆರೋಗ್ಯ ಮತ್ತು ಆರೈಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮವು ದಿನಾಂಕ ೧೩-೦೨-೨೦೨೬ ರಂದು ನಡೆಯಿತು. ಆರೋಗ್ಯಕರ ಜೀವನಕ್ಕೆ ಹಲ್ಲುಗಳ ಆರೋಗ್ಯವೂ ಮುಖ್ಯ. ಆದುದರಿಂದ ಮೌಖಿಕ ನೈರ್ಮಲ್ಯ, ಹಲ್ಲು ಉಜ್ಜುವ ವಿಧಾನ, ಹಲ್ಲುಗಳು ಮತ್ತು ವಸಡುಗಳ ಆರೋಗ್ಯ ತಪಾಸಣೆಯ ಬಗ್ಗೆ ಓರಲ್ ಆಂಡ್ ಮ್ಯಾಕ್ಸಿಲೋಫೆಶಿಯಲ್ ರೇಡಿಯೋಲಾಜಿಸ್ಟ್ ಹಾಗೂ ಜೋಡುರಸ್ತೆಯ ಶಾನ್ ಡೆಂಟಲ್ ಕ್ಲಿನಿಕ್ನ ದಂತ ವೈದ್ಯೆ ಡಾ. ಶಾಂತಲಾ ಇವರು ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು. ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ಶ್ರೀಮತಿ ವಾಣಿ ಕೆ., ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಧಿಕಾರಿಯಾಗಿರುವ ಶ್ರೀಮತಿ ಜ್ಯೋತಿ ಪದ್ಮನಾಭ ಭಂಡಿ, ಇಂಟರಾಕ್ಟ್ ಕ್ಲಬ್ ನ ಸಂಯೋಜಕಿ ಶ್ರೀಮತಿ ದಿವ್ಯಾ ಉಪಸ್ಥಿತರಿದ್ದರು ಸಹ ಶಿಕ್ಷಕಿ ಸುಪ್ರಿಯಾ ಕಾರ್ಯಕ್ರಮ ನಿರೂಪಿಸಿದರು.
ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ ಅಜಿತ್ ಕುಮಾರ್ ರೈ ಮಾಲಾಡಿಯವರ ಧರ್ಮಪತ್ನಿ, ಆಸರೆ ಚಾರಿಟೇಬಲ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷೆ ಡಾ. ಆಶಾಜ್ಯೋತಿ ರೈ ಅವರು ವೀರ ರಾಣಿ ಅಬ್ಬಕ್ಕ ಗೌರವ ಪುರಸ್ಕಾರಕ್ಕೆ ಆಯ್ಕೆ ಆಗಿದ್ದಾರೆ. ABRSM- KRMSS, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ (ಮಂಗಳೂರು ವಿಭಾಗ) ಆಯೋಜಿರುವ ಅಬ್ಬಕ್ಕ 500 ಪ್ರೇರಣಾದಾಯಿ 100 ಉಪನ್ಯಾಸಗಳ ಸರಣಿ ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳಾ ಸಾಧಕರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ. ಇವರ ಧಾರ್ಮಿಕ ರಂಗ, ವೈದ್ಯಕೀಯ ರಂಗ ಹಾಗೂ ಸಮಾಜ ಸೇವೆಗೆ ವೀರರಾಣಿ ಅಬ್ಬಕ್ಕ ಪ್ರಶಸ್ತಿಯ ಗೌರವವು ಇನ್ನಷ್ಟು ಉತ್ತುಂಗಕ್ಕೆ ಏರಲು ಅನುವು ಮಾಡಿಕೊಟ್ಟಂತಾಗಿದೆ. ಪ್ರಶಸ್ತಿ ಪ್ರಧಾನ ಸಮಾರಂಭವು ಫೆಬ್ರವರಿ 16 ರಂದು ಪುತ್ತೂರು ನೆಹರೂ ನಗರದ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ.
ಒಂದು ಸತ್ಯನಾರಾಯಣ ಪೂಜೆಗೆ ತಗಲುವ ಖರ್ಚೆಷ್ಟು? ಒಂದು ಸಾವಿರ? ಐದು ಸಾವಿರ? ಇಪ್ಪತ್ತು ಸಾವಿರ? ಐವತ್ತು ಸಾವಿರ? ಇದು ಖರ್ಚು ಮಾಡುವವರ ಸಾಮರ್ಥ್ಯವನ್ನು ಹೊಂದಿಕೊಂಡಿದೆ. (ಕದ್ರಿ ದೇವಸ್ಥಾನದಲ್ಲಿ 125 ರೂಪಾಯಿಯಲ್ಲಿಯೂ ಸತ್ಯನಾರಾಯಣ ಪೂಜಾ ಆಗುತ್ತದೆ). ಇಪ್ಪತ್ತೈದು, ಐವತ್ತು ಸಾವಿರ ಖರ್ಚಿನ ಸತ್ಯನಾರಾಯಣ ಪೂಜೆಗಳು ಮುಂಬಾಯಿಯಲ್ಲಿ ಸಾಮಾನ್ಯ. ಬಡಾಯಿ ಕೊಚ್ಚಿಕೊಳ್ಳುವ ಬಂಟರಿಗೆ ತಾವು ಸತ್ಯನಾರಾಯಣ ಪೂಜೆಗೆ ಇಷ್ಟು ಸಾವಿರ ಖರ್ಚು ಮಾಡಿದ್ದೇವೆ ಅಂತ ಹೇಳಿಕೊಳ್ಳುವುದು ಪ್ರತಿಷ್ಠೆಯ ವಿಷಯವಾಗಿದೆ. ಹೋಟೆಲ್ ಉದ್ಘಾಟನೆಗೆ ಸಾವಿರಾರು ರೂಪಾಯಿಯ ಸತ್ಯನಾರಾಯಣ ಪೂಜೆ ಮಾಡಿಸಿದ ಸೇಟುಗಳು ಉದ್ಧಾರವಾಗಿದ್ದಾರೋ ಇಲ್ಲವೋ ಗೊತ್ತಿಲ್ಲ, ಪುರೋಹಿತರು ಉದ್ಧಾರವಾದದ್ದಂತೂ ಸತ್ಯ. ಅದೇ ಮರಾಠಿ ಭಟ್ಟರನ್ನು ಕರೆದು ಪೂಜೆ ಮಾಡಿಸಿದರೆ ಬರೇ ಎರಡು ಸಾವಿರದಲ್ಲೂ ಪೂಜೆ ಮುಗಿಸುತ್ತಾರೆ. ಆದರೆ ಅವರನ್ನು ಕರೆಯಲು ನಮಗೆ ಹಮ್ಮು ಬಿಡುವುದಿಲ್ಲ. ಇಂದು ಮುಂಬಯಿಯ ಪುರೋಹಿತರಿಗೆ ಸತ್ಯನಾರಾಯಣ ಪೂಜೆ ಹಣ ಗಳಿಸುವ ಸುಲಭ ಮಾರ್ಗವಾಗಿದೆ. ಪೂಜೆ ಮುಗಿದ ನಂತರ ಹರಿವಾಣಕ್ಕೆ ದುಡ್ಡು ಹಾಕುವುದರಲ್ಲಿಯೂ ಪೈಪೋಟಿ ಇದೆ. ಇಂದು ಪೌರೋಹಿತ್ಯವೇ ಒಂದು ಬೃಹತ್ ಉದ್ಯಮವಾಗಿದೆ.…
ಪೊದು ಪಂಡ ಕನ್ನಡದ ವಧು (bride)ಕು ಸಂವಾದಿ ಅತ್ತ್, ವೈವಾಹಿಕ ಸಂಬಂಧ ಪಂದ್ ಅರ್ತ. ನಮ ಕನತಿನ (ಮದಿಮೆ ಮಲ್ತ್ದ್) ಪೊನ್ನನ ಇಲ್ಲದಗುಲು, ಅಗಲೆನ ಸಂತಾನದಗುಲು ನಮ್ಮ ಪೊದ್ದೆರ್. ಅಂಚೆನೇ ನಮ, ನಮನ ಸಂತಾನದಗುಲು ಅಗಲೆಗ್, ಅಗಲೆನ ಸಂತಾನದಗಲೆಗ್ ಪೊದ್ದೆರ್. ಆಂಡ ಬುಡೆದಿನ ಇಲ್ಲ್ ಮಾತ್ರ ಕಂಡ್ಯಾನಗ್ ಪೊದ್ದೆರೆ ಇಲ್ಲ್. ಇಲ್ಲಡ್ ಕೋಲ ಆಂಡ, ಸುರುತ ಮರ್ಯಾದಿ ಪರವೂರು (ಪರಮಾಗನೆ)ದಗಲೆಗ್, ಬೊಕ್ಕ ಪೊದ್ದೆರೆಗ್. ಒಂಜಿ ಐವ ಅಜಿಪ ವರ್ಸ ದುಂಬುಡು ಪೊನ್ನು ತೂವರೆ ಪೋಪಿನಗುಲು ಇರ್ವೆರ್ ಅತ್ತ್ಡ ನಾಲ್ವೆರ್ ಅಂಜೋವು ಪೊನ್ನ ಇಲ್ಲಗ್ ಪೋವೊಂದು ಇತ್ತೆರ್. ನಾಯಿಲು ಗುರೆಪುನ ಕೇಂದ್ ನಾಯಿಲೆನ್ ದಡ್ಯೊಂದು, ಏರ್ ದಾದ ಪಂದ್ ಕೇನೊಂದು ಇಲ್ಲದಗುಲು ಜಾಲ್ಗ್ ಜತ್ತೆರ್ಡ, ಪೊನ್ನು ತೂವರೆ ಬಯಿದಿನಗುಲು ಸೀದಾ ಕಿದೆತ ಕಿದನೆಗ್ ಪೊಗ್ಗುವೆರ್. “ನಿಗಲೆ ಇಲ್ಲಡ್ ಎರು ಕೊರ್ಪಿನ (ಮಾರುನ) ಉಂಡು ಪಂದ್ ಸುದ್ದಿ ತಿಕ್ಂಡ್. ಅಂಚ ತೂದು ಪೋಕ ಪಂದ್ ಬತ್ತಿನಿ” ಇಂಚ ಪನುವೆರ್. ಅಪಗ ಆ ಇಲ್ಲದ ಗುರ್ಕಾರಗಾ,…
ಫೆಬ್ರವರಿ 11 ರಂದು ಜನತಾದಳ (ಜಾತ್ಯಾತೀತ) ಪಕ್ಷದ ರಾಷ್ಟ್ರೀಯ ವಕ್ತಾರರಾಗಿ ನೇಮಕಗೊಂಡಿರುವ ಸುಧಾಕರ್ ಎಸ್ ಶೆಟ್ಟಿಯವರಿಗೆ ಮೈಸೂರು ಚೇಂಬರ್ ಆಫ್ ಕಾಮರ್ಸ್ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ವ್ಯಾಪಾರ, ಉದ್ಯಮ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಸುಧಾಕರ್ ಶೆಟ್ಟಿ ಅವರು ಸಲ್ಲಿಸಿರುವ ಅನನ್ಯ ಸೇವೆಯನ್ನು ಗುರುತಿಸಿ ಈ ಗೌರವ ನೀಡಲಾಯಿತು. ಮೈಸೂರು ಚೇಂಬರ್ ಆಫ್ ಕಾಮರ್ಸ್ನ ಹಿರಿಮೆ ಹಾಗೂ ಗರಿಮೆಯನ್ನು ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯುವಲ್ಲಿ ಸುಧಾಕರ್ ಶೆಟ್ಟಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಅವರು 2003 ಮತ್ತು 2008 ರಲ್ಲಿ ಉಪಾಧ್ಯಕ್ಷರಾಗಿ, ನಂತರ 2012 ರಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಚೇಂಬರ್ ಆಫ್ ಕಾಮರ್ಸ್ನ ಘನತೆಯನ್ನು ರಾಜ್ಯವ್ಯಾಪಿಯಾಗಿ ಹರಡಿದರು. ಅಲ್ಲದೇ 2018 ರಲ್ಲಿ ಎಫ್ಕೆಸಿಸಿಐ (FKCCI) ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ಉದ್ಯಮ ವಲಯದಲ್ಲಿ ತಮ್ಮ ಶಕ್ತಿಶಾಲಿ ನಾಯಕತ್ವವನ್ನು ಸಾಬೀತುಪಡಿಸಿದ್ದಾರೆ. ಇಂತಹ ಸಮೃದ್ಧ ಅನುಭವ ಹೊಂದಿದವರು ಇಂದು ಜೆಡಿಎಸ್ ಪಕ್ಷದ ರಾಷ್ಟ್ರಮಟ್ಟದ ನಾಯಕನಾಗಿ ಗುರುತಿಸಿಕೊಂಡಿರುವುದು ಎಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಸುಧಾಕರ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಅನೇಕ…
ರಿಲಯನ್ಸ್ ಇನ್ಸೂರೆನ್ಸ್ ಕಂಪನಿಯವರ 2024 -25 ರ ಸಾಲಿನಲ್ಲಿ ಅತೀ ಹೆಚ್ಚು ವ್ಯವಹಾರವನ್ನು ಪೂರೈಸಿರುವ ಉದ್ಯಮಿ ಸತೀಶ್ ರೈ ಕಟ್ಟಾವು ಅವರನ್ನು ವಿಯೇಟ್ನಮ್ ನಲ್ಲಿ ನಡೆದ ಅಂತಾರಾಷ್ಟ್ರೀಯ ನಮ್ಮೇಳನ ದಲ್ಲಿ ಟಾಪ್ ಸ್ಟಾರ್ ಅವಾರ್ಡ್ ನೀಡಿ ಗೌರವಿಸಲಾಯಿತು. ಇವರು ಉದ್ಯಮಿಯಾಗಿದ್ದು ಸಮಾಜಸೇವೆ, ಧಾರ್ಮಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದು, ‘ಕಟ್ಟಾವು ವಾಹನ ಇನ್ಸೂರೆನ್ಸ್ ಸೆಂಟರ್’ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಚಿತ್ರ, ವರದಿ : ಉಮಾಪ್ರಸಾದ್ ರೈ ನಡುಬೈಲು
ಗಣಿತನಗರ : ಕಾರ್ಕಳ ಜ್ಞಾನಸುಧಾ ಆಂಗ್ಲಮಾಧ್ಯಮ ಶಾಲೆ ಹಾಗ್ತೂ ಪ್ರೌಢಶಾಲೆಯಲ್ಲಿ ೭ನೇ ತರಗತಿಯ ಮಕ್ಕಳಿಂದ ‘ಎಕೋಸ್ ಆಫ್ ಇಂಗ್ಲಿಷ್’- ಮಾದರಿ ಪ್ರದರ್ಶನ ನಡೆಯಿತು. ಉಪಪ್ರಾಂಶುಪಾಲೆ ಶ್ರೀಮತಿ ವಾಣಿ ಕೆ ಇವರ ನಿರ್ದೇಶನದಲ್ಲಿ, ವಿದ್ಯಾರ್ಥಿಗಳು, ತರಗತಿ ಆಂಗ್ಲಭಾಷಾ ಶಿಕ್ಷಕಿ ಕು.ದರ್ಶಿನಿಯವರ ಮಾರ್ಗದರ್ಶನದಲ್ಲಿ ವಿವಿಧ ಆಂಗ್ಲಭಾಷಾ ಲೇಖಕರ ಪರಿಚಯ, ಪುಸ್ತಕ ಪರಿಚಯ, ವ್ಯಾಕರಣದ ಮಾದರಿಗಳ ಪ್ರದರ್ಶನ, ವಿದ್ಯಾರ್ಥಿಗಳೇ ತಯಾರಿಸಿದ ವಿವಿಧ ಬುಕ್ ಮಾರ್ಕ್ಸ್, ವ್ಯಾಕರಣ ಕ್ರಾಫ್ಟ್ಗಳ ಪ್ರದರ್ಶನದ ಜೊತೆಗೆ ಭಾಷಾಕಲಿಕೆಯನ್ನು ಮನೋರಂಜನಾ ಆಟಗಳ ಮುಖಾಂತರ ಪ್ರಸ್ತುತಪಡಿಸಿದರು. ಈ ಸಂದರ್ಭದಲ್ಲಿ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಮುಖ್ಯ ನಿರ್ವಹಣಾಧಿಕಾರಿ ಶ್ರೀ ದಿನೇಶ್ ಎಂ ಕೊಡವೂರ್ ಹಾಗೂ ಸಂಸ್ಥೆಯ ಬೋಧಕರು-ಬೋಧಕೇತರ ಸಿಬ್ಬಂಧಿ ವರ್ಗದವರು ವಿದ್ಯಾರ್ಥಿಗಳ ಕಾರ್ಯವನ್ನು ಪ್ರಶಂಸಿಸಿದರು.
ಹಳೆ ತಲೆಮಾರಿನ ಅರ್ಥಧಾರಿ, ಶಿಕ್ಷಕ ಮತ್ತು ಶಂಭೂರು ಗ್ರಾಮದ ಪಟೇಲ ದಿವಂಗತ ಬೊಂಡಾಲ ಜನಾರ್ಧನ ಶೆಟ್ಟಿ ಮತ್ತು ಅವರ ಪುತ್ರ ಹವ್ಯಾಸಿ ಯಕ್ಷಗಾನ ಕಲಾವಿದ, ನಿವೃತ್ತ ಭೂಮಾಪನ ಅಧಿಕಾರಿ ದಿವಂಗತ ಬೊಂಡಾಲ ರಾಮಣ್ಣ ಶೆಟ್ಟರ ಹೆಸರಿನಲ್ಲಿ ನೀಡಲಾಗುವ ಬೊಂಡಾಲ ಪ್ರಶಸ್ತಿಗೆ ಕಟೀಲು ಮೇಳದ ಹಿರಿಯ ವೇಷಧಾರಿ ಲಕ್ಷ್ಮಣ ಶೆಟ್ಟಿ ತಾರೆಮಾರ್ ಆಯ್ಕೆಯಾಗಿದ್ದಾರೆ. ಬೊಂಡಾಲ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸಿದ ಕಲಾವಿದರಿಗಾಗಿಯೇ ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಅವರು ನೀಡುತ್ತಿರುವ ವಾರ್ಷಿಕ ಪ್ರಶಸ್ತಿಗೆ ಕರ್ನಾಟಕ ಜಾನಪದ, ಯಕ್ಷಗಾನ ಮತ್ತು ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸಂಚಾಲಕರಾಗಿರುವ ಆಯ್ಕೆ ಸಮಿತಿ 2025-26 ನೇ ಸಾಲಿಗೆ ಲಕ್ಷ್ಮಣ ಶೆಟ್ಟರ ಹೆಸರನ್ನು ಶಿಫಾರಸು ಮಾಡಿದೆ. ಪ್ರಶಸ್ತಿಯು ರೂ.10,000/- ನಗದು, ಶಾಲು, ಸ್ಮರಣಿಕೆ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ತೆಂಕುತಿಟ್ಟು ಯಕ್ಷಗಾನ ರಂಗದ ಪ್ರತಿಭಾನ್ವಿತ ಕಲಾವಿದರಾದ ಲಕ್ಷ್ಮಣ ಶೆಟ್ಟಿ ಅವರು ಬೆಳ್ತಂಗಡಿ ತಾಲೂಕಿನ ತಾರೆಮಾರಿನಲ್ಲಿ ಕೋಚಪ್ಪ ಶೆಟ್ಟಿ…















