Author: admin
ಮನುಷ್ಯ ಒಂದೇ ಕಡೆ ನಿಲ್ಲದೆ ಪ್ರವಾಸ ಮಾಡಿದುದರಿಂದಲೇ ಇತಿಹಾಸದ ಅರಿವು ಆಗಲು ಸಹಕಾರಿಯಾಯಿತು. ಪ್ರವಾಸ ಮಾಡುವುದರಿಂದ ನೈಜ ಅನುಭವವನ್ನು ಪಡೆಯಬಹುದು ಎಂದು ಜೆ.ಸಿ.ಐನ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಟಿ.ವಿ.ಎನ್ ಮೂರ್ತಿಯವರು ಹೇಳಿದರು. ಅವರು ಕಾರ್ಕಳ ಅನಂತಶಯದ ರೋಟರಿ ಬಾಲ ಭವನದಲ್ಲಿ ನಡೆದ ರೋಟರಿ ಕ್ಲಬ್ ಕಾರ್ಕಳ ಮತ್ತು ರೋಟರಿ ಕ್ಲಬ್ ಮೂಡಬಿದ್ರಿ ಇದರ ಅಂತರ್ ಜಿಲ್ಲಾ ಜಂಟಿ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ರೋ.ಗಣೇಶ್ ಸಾಲಿಯಾನ್ ಸಂಪಾದಕತ್ವದ ಕ್ಲಬ್ಬಿನ ಗೃಹಪತ್ರಿಕೆ ಸರ್ವಿಸನ್ನು ಬಿಡುಗಡೆ ಮಾಡಿ ಮಾತನಾಡುತ್ತಿದ್ದರು. ಸಮಾರಂಭದ ಅಧ್ಯಕ್ಷ ಹಾಗೂ ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷ ಕೆ. ನವೀನ್ ಚಂದ್ರ ಶೆಟ್ಟಿಯವರು ಜಂಟಿ ಸಭೆಗಳ ಮಹತ್ವದ ಬಗ್ಗೆ ಪ್ರಸ್ತಾವಿಕವಾಗಿ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ ಮೂಡಬಿದ್ರೆ ರೋಟರಿ ಕ್ಲಬ್ಬಿನ ಅಧ್ಯಕ್ಷ ನಾಗರಾಜ್ ಹೆಗ್ಡೆ ಕಾರ್ಕಳ ಕ್ಲಬ್ಬಿನ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದರು. ಮೂಡಬಿದ್ರಿ ರೋಟರಿ ಕ್ಲಬ್ಬಿನ ಸದಸ್ಯ ಹಾಗೂ ರೋಟರಿ ವಿದ್ಯಾ ಸಂಸ್ಥೆಯ ಮುಖ್ಯಸ್ಥರಾದ ನಾರಾಯಣ ಪಿಎಂ ತನ್ನ ಕ್ಲಬ್ಬಿನ ಪರಿಚಯವನ್ನು ಮಾಡಿದರು.…
ಮೆಯಿಕ್ ಪಾಡಿ ಕುಂಟುಲಾ, ಬೇಲಿಗ್ ಪಾಡಿ ಮುಲ್ಲುಲಾ ಒಂಜೇ ಪಂದ್ ಒಂಜಿ ಗಾದೆ ಉಂಡು. ಮುಲ್ಪ ಕುಂಟು ಪಂಡ ತುತ್ತೈತ, ಕನ್ನಡದ ಉಡುಪು (Dress). ಅವು ಸೀರೆ, ಮುಂಡು, ಅಂಗಿ, ಚಲ್ಲನ ಒವುಲಾ ಆದಿಪ್ಪು. ಈ ಕುಂಟುಗುಲಾ, ಬೇಲಿಗ್ ಪಾಡುನ ಮುಲ್ಲುಗುಲಾ ದಾದೆ ಸಾಜ (ಸಾಮ್ಯ) ಉಂಡು? ನಮ ಮೆಯಿಕ್ ಪಾಡರೆ ಸುರು ಮಲ್ತಿನ ಕುಂಟು, ದರಿದರಿ (gradually) ತರೆವುಂಡು, ಬೊಕ್ಕ ಪರಿವುಂಡು. ಅಂಚಾದ್ ಪರತ್ ಕುಂಟುನು ಬದಲ್ ಮಲ್ಪೊಡು. ನಮ ಬೆನ್ತಿನ ಕಂಡೊಲೆಗ್ ಕಯಿಕಂಜಿ, ಪಂಜಿ ಬರಂದಿಲೆಕ್ಕ ಸುತ್ತ ಬೇಲಿ ಪಾಡುವ. ಬೇಲಿಡ್ ಎಲ್ಯ ಮಲ್ಲ ಇಡೆ ತೂದು ಕಯಿಕಂಜಿ ಬೇಲಿ ನುರ್ತುದು ಕಡಿ ಮಲ್ಪುವ. ಆ ಕಡಿನ್ ಮುಚ್ಚರೆ ಕರ್ಂಡೆದ, ಚೂರಿ ಮುಲ್ಲುದ ಅತ್ತ್ಡ ಸೀಗೆದ ಮುಲ್ಲು ಕಡ್ತ್ದ್, ಕಬೆಕೋಲುಡು ಕಂತ್ ಪಾಡುವ. ಎಚ್ಚಾದ್ ಕಾರ್ತೆಲ್ (ಏನೆಲ್)ದ ಬೆನ್ನಿ ಮುಗ್ಗಿದಾಕಿನ, ಬೊಟ್ಟು ಕಂಡೊಲೆನ ಬೇಲಿಲೆನ ಪೂರ ಒರ ಕಡಿಕ್ಲೆನ್ ನಾಡ್ ತೂದು, ಐಕ್ ಪೊಸತಾದ್ ಮುಲ್ಲು ಪತ್ತಾವೆರ್. ಅಂಚ…
ಸುಳ್ಯ ಬಂಟರ ಸಂಘ ತನ್ನ ಸಮುದಾಯಪರ ಕಾಳಜಿಗೆ ಹೆಸರು ಪಡೆದಿದ್ದು, ಇದೀಗ ಹೆಸರಾಂತ ಕ್ರೀಡಾಪಟು, ನಿವೃತ್ತ ಕ್ರೀಡಾ ಶಿಕ್ಷಕ ಹಾಗೂ ಜನಪ್ರಿಯ ಸಂಘಟಕ ಶ್ರೀ ಬಿ ಸುಭಾಶ್ಚಂದ್ರ ರೈಯವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಸುಳ್ಯ ಪರಿಸರದ ಬಂಟ ಬಾಂಧವರಿಗೆ ಇವರಿಂದ ವಿಶೇಷ ಕಾರ್ಯ ಸಾಧನೆಗಳ ನಿರೀಕ್ಷೆ ಸಹಜವಾಗಿಯೇ ಇದೆ. ಪ್ರತಿಷ್ಠಿತ ಪರಂಪರೆಯಿಂದ ಕೂಡಿದ ಬಂಟ ಕುಟುಂಬವಾದ ಅಳೇರಿತೋಟ ದಿವಂಗತ ಜತ್ತಪ್ಪ ರೈ ಹಾಗೂ ದಿವಂಗತ ಲಕ್ಷ್ಮೀ ಜೆ ರೈ ದಂಪತಿಗೆ ಸುಪುತ್ರನಾಗಿ ಜನಿಸಿದ ಸುಭಾಶ್ಚಂದ್ರ ರೈ ಅವರು ಬಾಳಿಲದ ವಿದ್ಯಾ ಬೋಧಿನಿ ಶಿಕ್ಷಣ ಸಂಸ್ಥೆಯ ಮೂಲಕ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿದ ಬಳಿಕ ಬೆಳ್ಳಾರೆ ಪಿಯು ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪೂರೈಸಿದರು. ನಂತರದ ವರ್ಷಗಳಲ್ಲಿ ತನ್ನ ಆಸಕ್ತಿಯ ವಿಭಾಗದಲ್ಲಿ ತರಬೇತಿ ಪಡೆಯಲು ಬೆಂಗಳೂರಿಗೆ ತೆರಳಿ ಅಲ್ಲಿನ ವೈ.ಎಂ.ಸಿ.ಎ ತರಬೇತಿ ಕೇಂದ್ರದಲ್ಲಿ ದೈಹಿಕ ಶಿಕ್ಷಣ ಕುರಿತ ವಿಶೇಷ ತರಬೇತಿ ಪಡೆದು, ತನ್ನ ಆರಂಭಿಕ ವೃತ್ತಿ ಜೀವನವೆಂಬಂತೆ ಏಳು ವರ್ಷಗಳ ಪರ್ಯಂತ ನೆಟ್ಟಣಿಗೆ…
ಒಡಿಶಾದ ಭುವನೇಶ್ವರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಯೂತ್ ವಾಲಿಬಾಲ್ ಚಾಂಪಿಯನ್ ಶಿಪ್ ಪಂದ್ಯಾಟವು ಮಾರ್ಚ್ ತಿಂಗಳಿನಲ್ಲಿ ನಡೆಯಲಿದ್ದು, 26 ರ ವಿಭಾಗದ ಯೂತ್ ನ್ಯಾಷನಲ್ ಕರ್ನಾಟಕ ರಾಜ್ಯ ತಂಡದಲ್ಲಿ ಪಂಜದ ಚಿನ್ಮಯ ಎಸ್ ಆಳ್ವ ನಾಯಕನಾಗಿ ಆಯ್ಕೆಯಾಗಿರುತ್ತಾರೆ. ಈತ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ದೈಹಿಕ ಶಿಕ್ಷಣ ಶಿಕ್ಷಕ ಶಿವಪ್ರಸಾದ್ ಆಳ್ವ ಮತ್ತು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲರಾದ ಶಶಿಕಲಾ ಎಸ್ ಆಳ್ವ ದಂಪತಿಗಳ ಪುತ್ರ. ಚಿನ್ನಯ್ ರವರು ಪ್ರಸ್ತುತ ಎಸ್.ಆರ್.ಎಂ ಯೂನಿವರ್ಸಿಟಿಯಲ್ಲಿ ಪ್ರಥಮ ಬಿ.ಎಸ್ಸಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಚಿತ್ರ, ವರದಿ : ಉಮಾಪ್ರಸಾದ್ ರೈ ನಡುಬೈಲು
ಹೌದು, ಬೇಸಿಗೆ ಕಾಲ ಬಂತೆಂದರೆ ಸಾಕು ನೆತ್ತಿಯ ಮೇಲೆ ಸುಡುಬಿಸಿಲಿನ ಅನುಭವ. ಮಧ್ಯಾಹ್ನದ ಹೊತ್ತಿಗಂತೂ ಜನಸಾಮಾನ್ಯರಿಗೆ ಮನೆಯಿಂದ ಹೊರಬರಲಾರದ ಸಂಕಷ್ಟದ ಸ್ಥಿತಿ. ವರ್ಷಗಳು ಉರುಳಿದಂತೆ ಭೂಮಿಯ ಮೇಲಿನ ತಾಪ ಹೆಚ್ಚುತ್ತಿದ್ದು, ಮಳೆಯ ಪ್ರಮಾಣ ಕಡಿಮೆಯಾಗತೊಡಗುತ್ತಿರುವುದಲ್ಲದೆ ಹವಾಮಾನದಲ್ಲಿನ ಏರುಪೇರು, ಪ್ರಾಕೃತಿಕ ಅಸಮತೋಲನ ಕೂಡಾ ಇಂತಹ ಪ್ರಕ್ರಿಯೆಗಳಿಗೆ ಒಂದು ಕಾರಣವೆನ್ನಬಹುದು. ಈಗ ಮದುವೆ, ಜಾತ್ರೆ, ಹಬ್ಬ ಹರಿದಿನಗಳ ಭರಾಟೆಯೂ ತುಸು ಜೋರಾಗಿಯೇ ಇದೆ. ಹವಾಮಾನದ ವೈಪರೀತ್ಯ, ಮಳೆಯ ಕುಂಠಿತದ ಕಾರಣಕ್ಕಾಗಿ ಬಯಲು ಸೀಮೆ, ಉತ್ತರ ಕರ್ನಾಟಕ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಕುಡಿಯುವ ನೀರು, ಕೃಷಿ ಚಟುವಟಿಕೆಗಳಿಗೆ ನೀರಿಗಾಗಿ ಆಹಾಕಾರ ಉಂಟಾಗುವುದನ್ನು ಕಾಣುತ್ತೇವೆ. ಪ್ರತಿ ಬಾರಿಯಂತೆ ಇನ್ನೊಂದು ತಿಂಗಳು ಕಳೆದರೆ ರಾಜ್ಯದ ಪ್ರಮುಖ ಹಳ್ಳ, ನದಿ, ಕೆರೆ, ಡ್ಯಾಮ್, ತೊರೆಗಳು ಬತ್ತಿ ಹೋಗಲಿವೆ. ನೀರಿನ ಪ್ರಮಾಣ ಕುಂಠಿತಗೊಂಡಾಗ ಮಾನವನ ದೈನಂದಿನ ಚಟುವಟಿಕೆಗಳು, ಪ್ರಾಣಿ ಸಂಕುಲ, ವನ್ಯ ಜೀವಿಗಳ ಮೇಲೂ ಕೂಡಾ ವ್ಯತಿರಿಕ್ತ ಪರಿಣಾಮ ಬೀರತೊಡಗುತ್ತದೆ. ಪ್ರಸ್ತುತ ಯಾವುದೇ ಸಭೆ ಸಮಾರಂಭಗಳಲ್ಲಿ ಭಾಗವಹಿಸಿದರೂ ಅಥವಾ ಮನೆಯಿಂದ ಹೊರ…
ಜನವರಿಯಲ್ಲಿ ನಡೆದ ಸಿ.ಎ ಫೌಂಡೇಶನ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ಒಟ್ಟು 14 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಸಾಧನೆ ಮೆರೆದಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಈ ವಿಭಾಗದಲ್ಲಿ ಶೇಕಡಾ 19.23 ಫಲಿತಾಂಶ ದಾಖಲಾಗಿದ್ದರೆ, ಆಳ್ವಾಸ್ ಕಾಲೇಜು ಶೇಕಡಾ 31 ಫಲಿತಾಂಶ ಪಡೆದಿದೆ. ಕಾಲೇಜಿನ ಬಿ.ಕಾಂ ವಿದ್ಯಾರ್ಥಿಗಳಾದ ಶ್ರೇಯಾ ಬಂಗೇರ, ಪ್ರೀಶಾ ಎಸ್, ಜೊವಿಟಾ, ಸೀಮಾ, ಸಚನ್, ಪವಿತ್ರಾ, ಸಿಂಚನಾ ಕೆ., ಅನನ್ಯಾ, ಕುಶಲ್, ಶಿಬಾನಿ, ದೇಕಿ, ಪಲ್ಲವಿ ಮುಧೋಲೆ ಮತ್ತು ಆದಿತ್ಯ ಸಿ.ಎ. ಫೌಂಡೇಶನ್ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ. ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ ಆಳ್ವ, ಪ್ರಾಂಶುಪಾಲ ಡಾ| ಕುರಿಯನ್ ಅಭಿನಂದಿಸಿದ್ದಾರೆ.
ಮಂಗಳೂರು ನಗರದಲ್ಲಿ ಮೊದಲ ಪೆಟ್ ಡಯಾಲಿಸಿಸ್ ಸೌಲಭ್ಯ : ಕುಲಶೇಖರದ ಲಿಟಲ್ ಪಾಸ್ ವೆಟರಿನರಿ ಕ್ಲಿನಿಕ್ನಲ್ಲಿ ಆರಂಭ
ಮಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕುಪ್ರಾಣಿಗಳಿಗೆ ಅತ್ಯಾವಶ್ಯಕವಾದ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವ ಮಹತ್ವದ ಹೆಜ್ಜೆಯಾಗಿ, ಕುಲಶೇಖರದಲ್ಲಿರುವ ಲಿಟಲ್ ಪಾಸ್ ವೆಟರಿನರಿ ಕ್ಲಿನಿಕ್ ನಲ್ಲಿ ಪೆಟ್ ಡಯಾಲಿಸಿಸ್ ಯಂತ್ರವನ್ನು ಅಧಿಕೃತವಾಗಿ ಆರಂಭಿಸಲಾಯಿತು. ಮೂತ್ರಪಿಂಡ ಸಂಬಂಧಿತ ತೊಂದರೆಗಳಿಂದ ಬಳಲುವ ಸಾಕುಪ್ರಾಣಿಗಳಿಗೆ ಇದು ಜೀವ ರಕ್ಷಕ ಚಿಕಿತ್ಸೆಯಾಗಿ ಪರಿಣಮಿಸುವ ನಿರೀಕ್ಷೆಯಿದೆ. ಈ ಡಯಾಲಿಸಿಸ್ ಘಟಕವನ್ನು ವಿನ್ಸೆಂಟ್ ಜೋಸೆಫ್ ನೀಲಿಯಾರ (ಶಾಜು) ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು, ವೈದ್ಯರು ಹಾಗೂ ರೋಟರಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಈ ಉಪಕ್ರಮವನ್ನು ಭಾಜಪ ಕರ್ನಾಟಕ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಕಾರ್ಯದರ್ಶಿ ಜೆಸ್ಸೆಲ್ ಡಿಸೋಜಾ ಅವರು ಸಮನ್ವಯಗೊಳಿಸಿ, ವಿವಿಧ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಸಹಕಾರವನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಈ ಯೋಜನೆಯ ಪರಿಕಲ್ಪನೆ ಡಾ. ಶ್ರೇಯಸ್ ಸೊರಕೆ, ಓರಲ್ ಮತ್ತು ಮ್ಯಾಕ್ಸಿಲೋಫೇಶಿಯಲ್ ಸರ್ಜನ್ ಅವರದು. ಮಂಗಳೂರು ಮತ್ತು ಸುತ್ತಮುತ್ತಲಿನ ಸುಮಾರು 200 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಾಕುಪ್ರಾಣಿಗಳಿಗೆ ಡಯಾಲಿಸಿಸ್ ಸೌಲಭ್ಯ ಇಲ್ಲದಿರುವುದನ್ನು ಗಮನಿಸಿ, ಈ ಅಗತ್ಯವನ್ನು ಪೂರೈಸುವ ದೃಷ್ಟಿಯಿಂದ ಅವರು ಈ…
ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಮೂಲ ಮಹಾಸಂಸ್ಥಾನ, ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ, ಮಂತ್ರಾಲಯದ ಪರಮ ಪೂಜ್ಯ ಪೀಠಾಧಿಪತಿಗಳಾದ ಡಾ|| ಪರಮಪೂಜ್ಯ ಶ್ರೀ ಶ್ರೀ ಶ್ರೀ 108 ಶ್ರೀಮತ್ಸುಬುಧೇಂದ್ರತೀರ್ಥ ಶ್ರೀ ಪಾದಂಗಳವರ ದಿವ್ಯ ಸಾನಿಧ್ಯದಲ್ಲಿ ಹುಬ್ಬಳ್ಳಿಯ ಉದ್ಯಮಿ, ಸಮಾಜಸೇವಕ ಸಂತೋಷ್ ಆರ್ ಶೆಟ್ಟಿಯವರು ಪ್ರತಿಷ್ಠಿತ ‘ಶ್ರೀ ಮಂತ್ರಾಲಯ ಪರಿಮಳ ಪ್ರಶಸ್ತಿ 2026’ ಸ್ವೀಕರಿಸಿದರು. ಗಳಿಸಿದ ಹಣದಲ್ಲಿ ಸ್ವಲ್ಪ ಪ್ರಮಾಣವನ್ನು ಸಮಾಜ ಸೇವೆಗೆ ಮೀಸಲಿಡಬೇಕೆಂಬ ಸಿದ್ಧಾಂತವನ್ನು ಪಾಲಿಸಿಕೊಂಡು ಬಂದಿರುವ ಇವರು ಹುಬ್ಬಳ್ಳಿಯನ್ನು ಕರ್ಮ ಭೂಮಿಯಾಗಿಸಿಕೊಂಡರು. ಸಂತೋಷ ಶೆಟ್ಟಿಯವರು ಕೊಡುಗೈ ದಾನಿ, ಯುವಕರ ಆಶಾಕಿರಣವಾಗಿ ಗುರುತಿಸಿಕೊಂಡಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಧರ್ಮಸ್ಥಳದ ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೃಷಿಯಲ್ಲಿಯೂ ತೊಡಗಿಸಿಕೊಂಡಿರುವ ಇವರಿಂದ ಸಹಾಯ ಸಹಕಾರ ಪಡೆದು ಸಾವಿರಾರು ಜನರು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದಾರೆ. ಇವರಲ್ಲಿನ ಶ್ರದ್ಧೆ ಹಾಗೂ ಕಠಿಣ ಪರಿಶ್ರಮವೇ ಯಶಸ್ಸಿಗೆ ಕಾರಣವಾಗಿದ್ದು, ಇವರು ಹುಬ್ಬಳ್ಳಿಯ ಪ್ರತಿಷ್ಠಿತ ಬಡಾವಣೆ ಡಾಲರ್ಸ್ ಕಾಲೋನಿ ನಿವಾಸಿಗಳ ಸಂಘದ ಅಧ್ಯಕ್ಷರಾಗಿಯೂ ಸೇವೆ…
ಕರಾವಳಿಯ ಬಹುತೇಕ ಸಾಧಕರು ಮುಂಬಯಿ ಮಹಾನಗರಕ್ಕೆ ಹೋಗಿ ಅಲ್ಲಿ ಉದ್ಯಮಪತಿಗಳಾಗಿ ಎತ್ತರಕ್ಕೆ ಬೆಳೆದಿದ್ದಾರೆ. ಅದರೊಂದಿಗೆ ತಾಯ್ನಾಡಿನ ಕಲಾ ಪ್ರಕಾರಗಳಿಗೆ ಅವರು ನೀಡುತ್ತಿರುವ ಪ್ರೋತ್ಸಾಹ ಅನುಪಮವಾದುದು. ಈಗಲೂ ಯಕ್ಷಗಾನಕ್ಕೆ ಮುಂಬಯಿಯಲ್ಲಿ ರಾಜಾಶ್ರಯವಿದೆ. ಅಲ್ಲಿನ ಕಲಾಭಿಮಾನಿಗಳು ಯಕ್ಷಗಾನ ಕಲೆಯನ್ನು ಮತ್ತು ಕಲಾವಿದರನ್ನು ನಿರಂತರ ಪೋಷಿಸುತ್ತಿದ್ದಾರೆ ಎಂದು ಹಿರಿಯ ವಿದ್ವಾಂಸ ಮತ್ತು ಯಕ್ಷಗಾನ ಅರ್ಥಧಾರಿ ಡಾ| ಎಂ ಪ್ರಭಾಕರ ಜೋಶಿ ಹೇಳಿದರು. ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ಬೆಳ್ಳಿಹಬ್ಬದ ಪ್ರಯುಕ್ತ ಈ ಬಾರಿ ನಡೆಸುವ ‘ಮುಂಬಯಿ ಯಕ್ಷಗಾನ ಸಮ್ಮೇಳನ’ದ ಸಲುವಾಗಿ ಅಜೆಕಾರು ಶ್ರೀರಾಮ ಭಜನಾ ಮಂದಿರದಲ್ಲಿ ಮಾರ್ಚ್ 10 ರಂದು ಜರಗಿದ ಪೂರ್ವಭಾವಿ ಸಭೆಯಲ್ಲಿ ಪ್ರಧಾನ ಸಲಹೆಗಾರರಾಗಿ ಡಾ| ಜೋಶಿ ಮಾತನಾಡಿದರು. ಮುಂಬಯಿಯಲ್ಲಿ ಯಕ್ಷಗಾನ ಸಂಪ್ರದಾಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ಕಾರ್ಯ ಸ್ಮರಣೀಯ. ಯಕ್ಷಗುರು ಅಜೆಕಾರು ಬಾಲಕೃಷ್ಣ ಶೆಟ್ಟರು ಮಹಾನಗರದ ಉದ್ದಗಲಕ್ಕೂ ನೂರಾರು ಸ್ತ್ರೀ ಪುರುಷರಿಗೆ ಯಕ್ಷಗಾನ ಹೆಜ್ಜೆಗಾರಿಕೆಯನ್ನು ಕಲಿಸುವ ಮೂಲಕ ಅಸಂಖ್ಯ ಯುವ ಕಲಾವಿದರ ಉದಯಕ್ಕೆ ಕಾರಣರಾಗಿದ್ದಾರೆ. ಕಾರ್ಯಕ್ರಮ…
ಇಂಡೋನೇಷ್ಯಾದಲ್ಲಿ ನಡೆದ ಜಕಾರ್ತ ಪ್ರೀಮಿಯರ್ ಲೀಗ್ ನಲ್ಲಿ ಹೊಸ್ಮಾರು ಸುಧಾಕರ್ ಶೆಟ್ಟಿ ಮಾಲೀಕತ್ವದ ಉಡುಪಿ ಕೋಸ್ಟಲ್ ಕ್ರಿಕೆಟ್ ಕ್ಲಬ್ ತಂಡವು ಸತತ ಎರಡನೇ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇಂಡೋನೇಷ್ಯಾ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸುವ ಅಗುಸ್, ರಾಮ, ಧೋನಿ, ಮ್ಯಾಕ್ಸಿ, ಧನೇಶ್, ಸಂಪತ್, ಕಿರುಬ, ಪದ್ಮಾಕರ ಸುರ್ವೆ ಉಡುಪಿ ಕೋಸ್ಟಲ್ ಕ್ರಿಕೆಟ್ ತಂಡದಲ್ಲಿದ್ದರು. ಜಕಾರ್ತ ಪ್ರೀಮಿಯರ್ ಲೀಗ್ ಎಂಟು ತಿಂಗಳ ಕಾಲ ಸುದೀರ್ಘವಾಗಿ ನಡೆಯುತ್ತಿದ್ದು, ಈ ಬಾರಿ 13 ತಂಡಗಳಿದ್ದವು. ಸತತ ಎರಡನೇಯ ಬಾರಿಗೆ ಉಡುಪಿ ಕೋಸ್ಟಲ್ ಕ್ರಿಕೆಟ್ ಕ್ಲಬ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫೈನಲ್ ಪಂದ್ಯದಲ್ಲಿ ಉಡುಪಿ ಕೋಸ್ಟಲ್ ತಂಡ 30 ಓವರ್ ನಲ್ಲಿ 190 ರನ್ ಗಳಿಸಿತ್ತು. ಬಳಿಕ ಬ್ಯಾಟಿಂಗ್ ಮಾಡಿದ ಸ್ಡಾಮ್ ರುಸನಾ ಕ್ರಿಕೆಟ್ ಕ್ಲಬ್ 93 ರನ್ ಗಳಿಸಲಷ್ಟೇ ಶಕ್ತವಾಯಿತು.















