Author: admin

ಸಮಾಜ ಸೇವಕ, ಪುಣೆಯ ಖ್ಯಾತ ಹೋಟೆಲ್ ಉದ್ಯಮಿ, ಬಂಟ್ಸ್ ಅಸೋಸಿಯೇಷನ್ ಪುಣೆಯ ಮಾಜಿ ಅಧ್ಯಕ್ಷ ಆನಂದ ಶೆಟ್ಟಿ ಮಿಯ್ಯಾರು ಇವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ವಿಶೇಷ ಮನವಿಗೆ ಸ್ಪಂದಿಸಿ ಮತ್ತು ಒಕ್ಕೂಟದಲ್ಲಿ ನಡೆಯುವ ಜನಪರ ಕಾಳಜಿಯ ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡುವ ಸಲುವಾಗಿ ಪೋಷಕ ಸದಸ್ಯರಾಗಿ ಸೇರ್ಪಡೆಗೊಂಡಿದ್ದಾರೆ. ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ನೂತನ ಪೋಷಕ ಸದಸ್ಯರಾದ ಆನಂದ ಶೆಟ್ಟಿ ಮಿಯ್ಯಾರು ಇವರನ್ನು ಹೂಗುಚ್ಚ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ನಿರ್ದೇಶಕರಾದ ಶಶಿಧರ್ ಶೆಟ್ಟಿ ಇನ್ನಂಜೆ, ಪೋಷಕ ಸದಸ್ಯರಾದ ಗಿರೀಶ್ ಶೆಟ್ಟಿ ತೆಳ್ಳಾರ್, ಪ್ರಕಾಶ್ ಶೆಟ್ಟಿ ಪುಣೆ ಮತ್ತು ರವೀಂದ್ರ ಶೆಟ್ಟಿ ಕೊಟ್ರಪಾಡಿ ಇವರುಗಳು ಉಪಸ್ಥಿತರಿದ್ದರು.

Read More

ಆಳ್ವಾಸ್ ಕಾನೂನು ಕಾಲೇಜಿನ ವತಿಯಿಂದ ‘ಸೈಬರ್ ಕ್ರೈಮ್, ಡ್ರಗ್ ಟ್ರಾಫಿಕಿಂಗ್ ಹಾಗೂ ಸೋಶಿಯಲ್ ಆ್ಯಂಡ್ ಲೀಗಲ್ ಇಂಪ್ಲಿಕೇಶನ್ಸ್’ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಸೋಮವಾರದಂದು ವಿದ್ಯಾಗಿರಿ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿತ್ತು. ಉಡುಪಿಯ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ ಐಪಿಎಸ್ ಮಾತನಾಡಿ, “ಸೈಬರ್ ಅಪರಾಧಗಳು ಇಂದು ಅತ್ಯಂತ ಸಂಕೀರ್ಣ ಹಾಗೂ ಕಾನೂನು ಜಾರಿಗೆ ಅತಿ ದೊಡ್ಡ ಸವಾಲಾಗಿ ಪರಿಣಮಿಸಿವೆ. ವಂಚಕರು ಈಗ ಅಸಲಿಯಂತೆ ಕಾಣುವ, ನಕಲಿ ಹೂಡಿಕೆ ವೆಬ್‌ಸೈಟ್ ಲಿಂಕ್‌ಗಳನ್ನು ಸೃಷ್ಟಿಸುತ್ತಿದ್ದಾರೆ. ಜನರು ಅವುಗಳ ಮೇಲೆ ಕ್ಲಿಕ್ ಮಾಡಿದಾಗ ನಕಲಿ ಅಪ್ಲಿಕೇಶನ್ ಡೌನ್‌ಲೋಡ್ ಆಗಿ, ಜನರು ಅದನ್ನು ನಿಜವೆಂದು ನಂಬಿ ನಿರಂತರವಾಗಿ ಹಣ ಹೂಡುತ್ತಾರೆ. ಈ ಹಣ ವಂಚಕರ ‘ಮ್ಯೂಲ್ ಅಕೌಂಟ್’ (ಬೇರೊಬ್ಬರ ಹೆಸರಿನಲ್ಲಿ ತೆರೆಯಲಾದ ಆದರೆ ಸೈಬರ್ ವಂಚಕರಿಂದ ನಿಯಂತ್ರಿಸಲ್ಪಡುವ ಬ್ಯಾಂಕ್ ಖಾತೆ) ಗಳಿಗೆ ವರ್ಗಾಯಿಸಲಾಗುತ್ತದೆ. ಈ ಖಾತೆಗಳು ಹಲವು ರಾಜ್ಯಗಳಲ್ಲಿ ಹರಡಿರುವುದರಿಂದ ಹಣದ ವರ್ಗಾವಣೆಯನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತದೆ. ನಂತರ ಈ ಹಣವನ್ನು ನಗದಾಗಿ ಬದಲಾಯಿಸಿ ಬಿಟ್‌ಕಾಯಿನ್‌ಗೆ ಪರಿವರ್ತಿಸಿ ವಿದೇಶಗಳಿಗೆ ಕಳುಹಿಸುತ್ತಾರೆ…

Read More

ಈಗಾಗಲೇ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕ ಸದಸ್ಯರಾಗಿರುವ ಹೊಟೇಲ್ ಶೀತಲ್ ಪುಣೆ ಇದರ ಸಿ.ಎಂ.ಡಿ ವಿಶ್ವನಾಥ ಶೆಟ್ಟಿಯವರ ಧರ್ಮಪತ್ನಿ ಬಂಟರ ಸಂಘ ಪುಣೆಯ ಮಹಿಳಾ ವಿಭಾಗದ ಮಾಜಿ ಕಾರ್ಯಧ್ಯಕ್ಷೆ ಶ್ರೀಮತಿ ಸಂಧ್ಯಾ ವಿಶ್ವನಾಥ ಶೆಟ್ಟಿಯವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ವಿಶೇಷ ಮನವಿಗೆ ಸ್ಪಂದಿಸಿ ಮತ್ತು ಒಕ್ಕೂಟದಲ್ಲಿ ನಡೆಯುವ ಜನಪರ ಕಾಳಜಿಯ ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡುವ ಸಲುವಾಗಿ ಪೋಷಕ ಸದಸ್ಯರಾಗಿ ಸೇರ್ಪಡೆಗೊಂಡಿದ್ದಾರೆ. ಇನ್ನು ಮುಂದೆ ದಂಪತಿಗಳು ಇಬ್ಬರೂ ಸಹ ಒಕ್ಕೂಟದ ಪೋಷಕ ಸದಸ್ಯರಾಗಿರುತ್ತಾರೆ.

Read More

ಮೀರಾ ಭಯಂದರ್ ನ ಹೆಸರಾಂತ ವೀರ ಕೇಸರಿ ಸಂಸ್ಥೆಯು ನಾಸ್ತಿಕ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಸದಾ ಕಾಪಾಡಿಕೊಳ್ಳುವಲ್ಲಿ ನಿರಂತರ ಶ್ರಮಿಸುತ್ತಿರುವ ಸಂಸ್ಥೆ. ಈ ಸಂಸ್ಥೆಯ ವತಿಯಿಂದ ಕಳೆದ ವರ್ಷ ಸಂಪೂರ್ಣ ರಾಮಾಯಣ ಸ್ಪರ್ಧೆಯನ್ನು ಯಶಸ್ವಿಯಾಗಿ ಆಯೋಜಿಸಿ ಇದೀಗ ಭಗವದ್ಗೀತೆಯ ಪರೀಕ್ಷೆಯನ್ನು ಕನ್ನಡ ಇಂಗ್ಲೀಷ್ ಹಾಗೂ ಹಿಂದಿ ಭಾಷೆಯಲ್ಲಿ ಕಳೆದ ಜುಲೈ 20 ರಂದು ವಿಧ್ವಾನ್ ಶ್ರೀ ರಾಧಾಕೃಷ್ಣ ಭಟ್ ರವರ ಮಾರ್ಗದರ್ಶನದೊಂದಿಗೆ ಮತ್ತು ಶ್ರೀ ಸಾಣೂರು ಸಾಂತಿಂಜ ಜನಾರ್ದನ್ ಭಟ್ ಆಶೀರ್ವಾದದಿಂದ ಹಾಗೂ ವೀರ ಕೇಸರಿ ಮೀರಾ ಭಯಂದರ್ ನ ಅಧ್ಯಕ್ಷರಾದ ಹರೀಶ್ ರೈಯವರ ನೇತೃತ್ವದಲ್ಲಿ ಭಯಂದರ್ ಸೈಂಟ್ ಆಗ್ನೇಸ್ ಇಂಗ್ಲಿಷ್ ಹೈಸ್ಕೂಲ್ ಇಲ್ಲಿ ಆಯೋಜಿಸಲಾಗಿತ್ತು. ಈ ಪರೀಕ್ಷೆಯ ಫಲಿತಾಂಶದ ಅಂಗವಾಗಿ ಸಂಸ್ಥೆಯ ಸಾಂಸ್ಕೃತಿಕ ಮತ್ತು ಸಭಾ ಕಾರ್ಯಕ್ರಮವು ನವೆಂಬರ್ 15 ರಂದು ಜಿ 9, ಸ್ಪೋರ್ಟ್ಸ್ ಟರ್ಫ್ ಹಾಗೂ ಲ್ಹಾನ್ ಇಂದ್ರಲೋಕ ಕಲಾವತಿ ಮಂದಿರದ ಬಳಿ, ಭಯಂದರ್ ಇಂದ್ರಲೋಕ ನಾಕಾ ಇಲ್ಲಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತುಳು, ಕನ್ನಡ…

Read More

ಮಂಗಳ ಗಂಗೋತ್ರಿಯ ವಿಶ್ವವಿದ್ಯಾನಿಲಯ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಮಂಗಳೂರು ವಿವಿ ಅಂತರ ಕಾಲೇಜು ಬ್ಯಾಡ್ಮಿಂಟನ್ ಚಾಂಪಿಯನ್‌ ಶಿಪ್‌ನಲ್ಲಿ ಆಳ್ವಾಸ್ ಕಾಲೇಜಿನ ಪುರುಷರ ತಂಡ 19ನೇ ಬಾರಿ ಚಾಂಪಿಯನ್ಸ್ ಪಟ್ಟವನ್ನು ಅಲಂಕರಿಸಿತು. ಸೆಮಿಫೈನಲ್ ಹಂತದಲ್ಲಿ ಆಳ್ವಾಸ್ ಕಾಲೇಜು, ಉಜಿರೆಯ ಎಸ್‌ಡಿಎಮ್ ಕಾಲೇಜನ್ನು 3-0 ನೇರ ಸೆಟ್‌ಗಳಲ್ಲಿ ಸೋಲಿಸಿ ಫೈನಲ್‌ಗೆ ಅರ್ಹತೆ ಗಳಿಸಿತು. ಫೈನಲ್ ಪಂದ್ಯದಲ್ಲಿ ಆಳ್ವಾಸ್ ಕಾಲೇಜು, ಮಂಗಳೂರಿನ ಎಸ್‌ಡಿಎಂ ಬಿಬಿಎಂ ಕಾಲೇಜನ್ನು 3-0 ನೇರ ಸೆಟ್‌ಗಳಲ್ಲಿ ಸೋಲಿಸಿ, 15ನೇ ಬಾರಿ, ಶ್ರೀ ಕೆಮ್ಮಾರ ಬಾಲಕೃಷ್ಣ ಗೌಡ ಸ್ಮಾರಕ ರೋಲಿಂಗ್ ಟ್ರೋಫಿಯನ್ನು ಪುರುಷರ ವಿಭಾಗದಲ್ಲಿ ಪಡೆದುಕೊಂಡಿತು. ಅಂತೆಯೇ ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ತಂಡ ಮೂರನೇ ಸ್ಥಾನ ಪಡೆದುಕೊಂಡಿತು. ಪ್ರಶಸ್ತಿ ವಿತರಣಾ ಸಂಧರ್ಭ ಡಾ| ರೋಶನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ವಿಜೇತ ತಂಡಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಅಭಿನಂದಿಸಿದ್ದಾರೆ.

Read More

ಮೈಸೂರು ಯುನಿಟಿ ಮೂವೀಸ್ ನಿರ್ಮಾಣದ, ಶರತ್ ಬಿಳಿನೆಲೆ ನಿರ್ದೇಶನದ ಫೈಜೂ ಮತ್ತು ಹುಂಜಾ ಪನ್ಪಿ ಜೋಕುಲೆನ ಕನ್ನಡ ಸಿನೆಮಾ ವಿಶ್ವವಿಖ್ಯಾತ ಮೈಸೂರು ದಸರಾ ಚಲನಚಿತ್ರೋತ್ಸವಡ್ ತೀರ್ಪುಗಾರೆರೆ ಪುಗರ್ತೆ ಪಡೆದ್ ದಸರಾ ಸಿನೆಮಾ ಪರ್ಬಗ್ ಆಯ್ಕೆ ಆದ್, ಮೈಸೂರು ಝೂ ಕೈತಲ್ದ ಮಾಲ್ ಆಫ್ ಮೈಸೂರುದ ಐನಾಕ್ಸ್ ಚಿತ್ರಮಂದಿರಡ್ ತೂಪರಿಕೆ ಆಪುನ ಒರುಟು ಊರ ಪರವೂರ ಜನಮಂದೆಲೆ ಮನಸ್ ಗೆಂದ್ಂಡ್. ಆತೇ ಅತ್ತಂದೆ ಮಂಡ್ಯ ಜಿಲ್ಲೆದ ಶ್ರೀರಂಗಪಟ್ಟಣದ ಜೋಕುಲೆ ದಸರಾದ ಚಲನಚಿತ್ರೋತ್ಸವಗ್ ಫೈಜೂ ಮತ್ತು ಹುಂಜಾ ಸಿನೆಮಾ ಆಯ್ಕೆ ಆದ್, ಶ್ರೀರಂಗಪಟ್ಟಣ ಗಂಜಾಂ ರೋಡ್‌ದ ಶ್ರೀದೇವಿ ಚಿತ್ರಮಂದಿರಡ್ ಬೊಕ್ಕ ಅರಕೆರೆ ಮಂಜುನಾಥ ಚಿತ್ರಮಂದಿರಡ್ ರಡ್ಡ್ ದಿನ ಪ್ರದರ್ಶನ ಆದ್ 7 ಶಾಲೆಲೆನ ಜೋಕುಲು, ಕಲ್ಪಾದಿಲ್ ಸೇರಿನಂಚ ಮಸ್ತ್ ಜೋಕುಲು, ಮಲ್ಲಕ್ಲ್ ತೂದು ಮೆಚ್ಚಿಯೆರ್. ಅವೆನ್ನ ಒಟ್ಟುಡು ಪ್ರಸ್ತುತ ಫೈಜೂ ಮತ್ತು ಹುಂಜಾ ಸಿನೆಮಾ ತೆಲುಗು ಬೊಕ್ಕ ಹಿಂದಿ ಬಾಸೆಲೆಗ್ ಡಬ್ಬಿಂಗ್ ಆವೊಂದುಪ್ಪುನವು ಪೆರ್ಮೆದ ವಿಚಾರ. ಫೈಜೂ ಮತ್ತು ಹುಂಜಾ ಸಿನೆಮಾ ನಿರ್ದೇಶಕೆರ್ ಆದುಪ್ಪುನ…

Read More

ಟೀಮ್ ಯುವ ಬ್ರಿಗೇಡ್ ಮೀರಾ ಭಯಂದರ್ ಎನ್ನುವ ಈ ಸಂಸ್ಥೆಯು ಸಾಮಾಜಿಕ, ಧಾರ್ಮಿಕ, ಸಾಂಸ್ಕ್ರತಿಕ ಹಾಗೂ ಶೈಕ್ಷಣಿಕ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿರುವ ಒಂದು ಬಲಿಷ್ಠ ಸಂಘಟನೆ ಎಂದು ಅಭಿಮಾನದೊಂದಿಗೆ ಹೇಳುವಂತಿದೆ.‌ ಇದಕ್ಕೆ ಇವರ ಕಾರ್ಯವೈಖರಿ ನಿದರ್ಶನ. ಅದರಲ್ಲೂ ಕಲೆಗೆ ನೀಡುವ ಪ್ರೋತ್ಸಾಹದ ಜೊತೆಗೆ ಇಂದು ಮುಂಬಯಿಯಲ್ಲಿ ಅದ್ದೂರಿಯ ಯಕ್ಷಗಾನ ಪ್ರದರ್ಶನ ನಡೆಯುವುದಿದ್ದರೆ ಅದರ ಸಂಪೂರ್ಣ ಶ್ರೇಯಸ್ಸು ಟೀಮ್ ಯುವ ಬ್ರಿಗೇಡ್ ಮೀರಾ ಭಯಂದರ್ ಬಳಗಕ್ಕೆ ಸಲ್ಲುವಂತಿದೆ ಎಂದು ಬಂಟರ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಮಹೇಶ್ ಎಸ್ ಶೆಟ್ಟಿಯವರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಅವರು ಅಕ್ಟೋಬರ್ 11ರ ಶನಿವಾರ ರಾತ್ರಿ ಮೀರಾ ಭಯಂದರ್ ರೋಡ್ ನ ಮೇವರ್ ವಾಟಿಕಾ ಸಭಾಗೃಹದಲ್ಲಿ ಮಹಾರಾಷ್ಟ್ರ ರಾಜ್ಯದ ಯಕ್ಷಗಾನ ಬಯಲಾಟದ ಇತಿಹಾಸದಲ್ಲೇ ಯಕ್ಷಗಾನ ಪ್ರದರ್ಶನಕ್ಕೆ ಜನಸಾಗರದ ಮೂಲಕ ದಾಖಲೆ ಬರೆದ ಟೀಮ್ ಯುವ ಬ್ರಿಗೇಡ್ ಮೀರಾ ಭಯಂದರ್ ವತಿಯಿಂದ ಪ್ರಖರ ಹಿಂದುತ್ವವಾದಿ ಮಹೇಶ್ ಶೆಟ್ಟಿ ತೆಳ್ಳಾರು ಕುಡುಪುಲಾಜೆಯರವರ ಮಾರ್ಗದರ್ಶನದಲ್ಲಿ ಬಿಜೆಪಿ ನಾಯಕ ಸಚ್ಚಿದಾನಂದ ಶೆಟ್ಟಿಯವರ…

Read More

ನನ್ನ ಇಂದಿನ ಎಲ್ಲಾ ಸಾಧನೆಗಳಿಗೆ ಆಳ್ವಾಸ್ ಕಾರಣ. ವಿದ್ಯಾರ್ಥಿ ಜೀವನದಲ್ಲಿ ಕ್ರೀಡೆಯ ಮೂಲಕ ಆಳ್ವಾಸ್ ನೀಡಿದ ಅವಕಾಶಗಳು ಮತ್ತು ಮಾರ್ಗದರ್ಶನದಿಂದ ನನ್ನ ಜೀವನದಲ್ಲಿ ಬದಲಾವಣೆ ಸಾಧ್ಯವಾಯಿತು ಎಂದು ಉಡುಪಿ ವಲಯದ ಫಾರೆಸ್ಟ್ ಬೀಟ್ ಆಫೀಸರ್ ಹಾಗೂ ಹಿರಿಯ ವಿದ್ಯಾರ್ಥಿ ಶರತ್ ಶೆಟ್ಟಿ ನುಡಿದರು. ಅವರು ಆಳ್ವಾಸ್ ಕಾಲೇಜ್ ಆಫ್ ಫಿಸಿಯೋತೆರೆಪಿ ಆಯೋಜಿಸಿದ್ದ ರಾಜೀವ್ ಗಾಂಧಿ ವಿಜ್ಞಾನ ವಿವಿಗಳ ಮಂಗಳೂರು ವಲಯ ಮಟ್ಟದ ಹುಡುಗರ ಮತ್ತು ಹುಡುಗಿಯರ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಆಳ್ವಾಸ್‌ನ ಶಿಸ್ತು, ಕಠಿಣ ಪರಿಶ್ರಮ ಮತ್ತು ಎಲ್ಲರಿಗೂ ಸಮಾನ ಅವಕಾಶ ನೀಡುವ ವ್ಯವಸ್ಥೆ ನನ್ನಂತಹ ಅನೇಕ ವಿದ್ಯಾರ್ಥಿಗಳನ್ನು ಯಶಸ್ಸಿನ ಹಾದಿಗೆ ಕೊಂಡೊಯ್ದಿದೆ. ಇಂದು ನಾನು ಸರಕಾರಿ ಉದ್ಯೋಗಿಯಾಗಿರುವುದು ಆಳ್ವಾಸ್‌ನಲ್ಲಿ ಕಲಿತ ನೈತಿಕತೆ, ಶ್ರಮ ಮತ್ತು ನಿಷ್ಠೆಯ ಫಲ. ಈ ಹಂತದಲ್ಲಿ ಸಿಗುವ ಅವಕಾಶಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಆಳ್ವಾಸ್‌ನಲ್ಲಿ ನಿಜವಾದ ಕಲಿಕೆ ಸಂಜೆ…

Read More

ಆತ ಹೆಚ್ಚಿನವರ ಕೆಂಗಣ್ಣಿಗೆ ಗುರಿಯಾಗುವುದು ಸಹಜ. ಇದು ಲೋಕಾರೂಢಿ ಸಹ. ಮೌನವಾಗಿದ್ದುಕೊಂಡು ಬೆನ್ನಿಗೆ ಇರಿಯುವವರ ಕರಾಮತ್ತು ಬೇಗ ಬೆಳಕಿಗೆ ಬಾರದು. ಇರಿಸಿಕೊಂಡವಗೆ, ಹೃದಯಕ್ಕೆ ಗಾಯವಾದವಗೆ ಮಾತ್ರ ಗೊತ್ತು ಆ ನೋವಿನ ಬಗ್ಗೆ. ಸಮಾಜದ, ಮನೆಯ ಸದಸ್ಯರ ಸಾರ್ವಜನಿಕವಾಗಿ ಒಳ್ಳೆಯ ಕೆಲಸ ಕಾರ್ಯ ಮಾಡುವವನಿಗೆ ನಲಿವಿಗಿಂತ ಹೆಚ್ಚು ನೋವೇ. ಆತನ ನೋವನ್ನು ನೋಡಿ ಹಿಂದಿನಿಂದ ಅಪಹಾಸ್ಯ ಮಾಡುವವರಿಗೇನೂ ಕೊರತೆಯಿಲ್ಲ. ಯಾಕೆ ಬೇಕಿವನಿಗೆ, ಸುಮ್ಮನೆ ನೋಡಿಯೂ ನೋಡದ ಹಾಗೆ ಇರಬಾರದೇ? ಎನ್ನುವವರಿದ್ದಾರೆ. ಆದರೆ ಎಲ್ಲವನ್ನೂ ದಾಟಿ ಮುಂದೆ ಸಾಗುವುದೇ ಬದುಕೆಂದು ಸಮಾಜಮುಖಿ ವ್ಯಕ್ತಿ ನಂಬಿರುತ್ತಾನೆ. ಎಲ್ಲರೂ ಒಂದೇ ರೀತಿಯಿದ್ದರೆ ವ್ಯವಹಾರವೆಂತು? ಸಾಗುವ ದಾರಿಯಲ್ಲಿ ನಯ -ನಾಜೂಕು, ಕಲ್ಲು-ಮುಳ್ಳು, ಎತ್ತರ-ತಗ್ಗು, ಹಳ್ಳ-ಕೊಳ್ಳಗಳು ಇರಲೇಬೇಕಲ್ಲ?ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸ್ಥಿತಪ್ರಜ್ಞರು ಭಗವಂತನ ಮೇಲೆ, ಕೈಗೊಂಡ ಕೆಲಸದ ಮೇಲೆ ಮಾತ್ರ ನಂಬಿಕೆಯಿಡುತ್ತಾರೆ. ಯಾರು ಹೇಳಿದ್ದಕ್ಕೂ ಕಿವಿಯಾನಿಸರು. ‘ಕೇಳದೆ, ಹೇಳಿಸಿಕೊಳ್ಳದೆ ತಮ್ಮ ಕರ್ತವ್ಯ ಮಾಡುವವರು ರೂಢಿಯೊಳು ಉತ್ತಮರಂತೆ’. ಹೇಳಿದರೂ ಕೇಳದಂತೆ ನಟಿಸುವ ಜಾಣಕಿವುಡರು ನಮ್ಮ ನಡುವೆಯೇ ಇದ್ದಾರೆ. ಹೇಳಿಸಿಕೊಳ್ಳದೆ ತಾವು ಮಾಡುವ ಕೆಲಸ…

Read More

ಶ್ರೀ ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ದೇವಂದಬೆಟ್ಟು ಕಳ್ಳಿಗೆ ಇಲ್ಲಿ ಬರುವ 14-01-2026 ರಂದು ಮಕರ ಸಂಕ್ರಮಣ ದಿನ ಧ್ವಜಾರೋಹಣಗೊಂಡು 5 ದಿನ ನಡೆಯುವ ವರ್ಷಾವಧಿ ಜಾತ್ರಾ ಮಹೋತ್ಸವ ವ್ಯವಸ್ಥಿತವಾಗಿ ನಡೆಸಲು ಊರ ಭಗವದ್ಭಕ್ತರ ಸಭೆಯನ್ನು ಕರೆದು ಉತ್ಸವ ಸಮಿತಿಯನ್ನು ರಚಿಸಲಾಯಿತು. ಗೌರವ ಅಧ್ಯಕ್ಷರಾಗಿ ಮಾಜಿ ಸಚಿವ ರಮಾನಾಥ ರೈ ಕಳ್ಳಿಗೆ ಗುತ್ತು, ಅಧ್ಯಕ್ಷರಾಗಿ ಭವಿಷ್ ಶೆಟ್ಟಿ ಕೋಡಿಬೆಟ್ಟು ಇವರನ್ನು ಆಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯದರ್ಶಿಯಾಗಿ ಚೇತನ್ ದೇವಂದಬೆಟ್ಟು, ಕೋಶಾಧಿಕಾರಿಯಾಗಿ ನಾಗೇಶ್ ದರಿಬಾಗಿಲು ಉಳಿದಂತೆ ಗೌರವ ಸಲಹೆಗಾರರು, ಉಪಾಧ್ಯಕ್ಷರು, ಜತೆ ಕಾರ್ಯದರ್ಶಿಗಳು ಹಾಗೂ ಇತರ ಸಮಿತಿಯನ್ನು ರಚಿಸಲಾಯಿತು.

Read More