Author: admin

ಕೆಲಸದ “ಬಾಂಡ್”ಗಳಿಗಿಂತ ಮನಸ್ಸು ಮನಸ್ಸುಗಳ ಭಾಂಧವ್ಯ ಮುಖ್ಯ. ತಂದೆ ತಾಯಿ ಕಷ್ಟದಿಂದ ಮುತ್ತಿಕ್ಕಿ ತುತ್ತಿಕ್ಕಿ ಸಾಕಿ, ಸಲಹಿ ವಿದ್ಯೆ ಕಲಿಸಿದರೂ ಯಾವುದೇ ಕಾನೂನಿನ ಕರಾರು ಮಾಡಿಸುವುದಿಲ್ಲ. ಆದರೆ ಅವರು ಲಕ್ಷಗಟ್ಟಲೆ ಹಣ ಸುರಿದು ಕಲಿಸಿದ ಅವರ ಮಕ್ಕಳ ಶ್ರಮದ ವಿದ್ಯಾ ಸರ್ಟಿಫಿಕೇಟ್ ಗಳನ್ನು ಯಾವುದೇ ಕಂಪನಿ ತೆಗೆದಿರಿಸುವ ಹಕ್ಕು ಯಾರು ಕೊಟ್ಟರು? ಪ್ರಸ್ತುತ ಎಲ್ಲಾ ಮನೆಯ ಮಕ್ಕಳೂ ಇಂಜಿನಿಯರ್, ಡಾಕ್ಟರ್ ಲಾಯರ್, ಪೈಲೆಟ್, ಐ.ಎ.ಎಸ್ ಇತ್ಯಾದಿ ಡಿಗ್ರಿ ಪಡೆದವರೇ. ಆದರೆ ಅವರ ಕಲಿತಾದ ಮೇಲೆ ಸರಿಯಾದ ಕೆಲಸಗಳಿಲ್ಲ. ಬೆಟ್ಟದಷ್ಟು ಆಸೆ ತುಂಬಿದ ಮುಖ ಮನಸ್ಸುಗಳ ಆಸೆಗಳನ್ನು ವರ್ಷಗಟ್ಟಲೆ ಕಸಿಯುವ ಕೆಲ ಸ್ವಾರ್ಥಿ ಖದೀಮರಿದ್ದಾರೆ ಎಚ್ಚರ!. ಸಾಕಷ್ಟು ಸಂಪಾದನೆ ಇದ್ದು ಸ್ಥಿತಿವಂತರಾದವರು ಏನೂ ಸಮಸ್ಯೆ ಇಲ್ಲದೆ ಕಲಿಯುತ್ತಾರೆ‌. ಕಲಿಸುತ್ತಾರೆ. ಈಗಿನ ಹೆಚ್ಚಿನ ಮಕ್ಕಳು ಹಿಂದಿನಂತೆ ಕಿಮೀ ಗಟ್ಟಲೆ ಕಾಲ್ನಡಿಗೆಯಲ್ಲಿ ಕ್ರಮಿಸಿ ಕಷ್ಟದಿಂದ ಶಾಲೆ ಕಾಲೇಜು ಕಲಿತವರಲ್ಲ. ಅದರಲ್ಲೂ ಮಧ್ಯಮ ವರ್ಗದ ಮತ್ತು ಕೆಳ ಮಧ್ಯಮ ವರ್ಗದ ಮನೆಯ ಹೊಸ ತಲೆಮಾರಿನ ಮಕ್ಕಳದ್ದು ಹೊಸತನದ…

Read More

ಮಂಗಳೂರು ವಿ.ವಿ.ಯಕ್ಷಗಾನ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ನವೆಂಬರ್ 23 ರಿಂದ ನಗರದ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ನಡೆಸುವ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮ ‘ಯಕ್ಷಗಾನ ತಾಳಮದ್ದಳೆ – 2025’ ಹದಿಮೂರನೇ ವರ್ಷದ ನುಡಿಹಬ್ಬ ಕಾರ್ಯಕ್ರಮದ ವರ್ಣರಂಜಿತ ಪೋಸ್ಟರನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು. ಯಕ್ಷಾಂಗಣದ ಗೌರವಾಧ್ಯಕ್ಷ ಹಾಗೂ ಕದ್ರಿ ಶ್ರೀ ಮಂಜುನಾಥ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ|ಎ.ಜೆ ಶೆಟ್ಟಿ ಅವರು ಪೋಸ್ಟರ್ ಬಿಡುಗಡೆಗೊಳಿಸಿದರು. ಕಳೆದ ಹನ್ನೆರಡು ವರ್ಷಗಳಿಂದ ವಿಶೇಷವಾಗಿ ನವೆಂಬರ್ ತಿಂಗಳಲ್ಲಿ ನುಡಿ ಹಬ್ಬ ರೂಪದಲ್ಲಿ ನಡೆಸುವ ಯಕ್ಷಾಂಗಣದ ಸಪ್ತಾಹ ಯಶಸ್ವಿಯಾಗುವಲ್ಲಿ ಕಾರ್ಯಕರ್ತರ ಪಾತ್ರ ಬಹಳ ದೊಡ್ಡದು ಎಂದವರು ಸಮಿತಿಯ ಪದಾಧಿಕಾರಿಗಳನ್ನು ಅಭಿನಂದಿಸಿದರು. ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಕಾರ್ಯಕ್ರಮದ ರೂಪು ರೇಷೆಗಳ ವಿವರ ನೀಡಿದರು. ಉಪಾಧ್ಯಕ್ಷ ಎಂ ಸುಂದರ ಶೆಟ್ಟಿ ಬೆಟ್ಟಂಪಾಡಿ, ಸಂಚಾಲಕಿ ನಿವೇದಿತಾ ಎನ್ ಶೆಟ್ಟಿ ಹಾಗೂ ಕಾರ್ಯದರ್ಶಿಗಳಾದ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ…

Read More

ಸಮುದಾಯದ ಜನರು ಗುಂಪಿನಲ್ಲಿ ವಾಸಿಸುವಾಗ ಏಕತೆ, ಒಗ್ಗಟ್ಟಿನ ಬಂಧವನ್ನು ಪಡೆದುಕೊಳ್ಳುತ್ತಾರೆ.‌ ಪ್ರತೀ ಸಮುದಾಯಕ್ಕೆ ಸ್ವಂತ ಅಸ್ತಿತ್ವ ಮತ್ತು ಗುರುತು ಇರುತ್ತದೆ. ಸಮುದಾಯದಲ್ಲಿ ಸಾಮಾಜಿಕ ರಚನೆ ಮತ್ತು ನಿಯಂತ್ರಣ ಕೂಡ ಬಹಳ ಮುಖ್ಯವಾಗಿರುತ್ತದೆ.‌ ಮೊಗವೀರರು ಊರ ಒಳಗಿನ ಸಮಸ್ಯೆಗಳನ್ನು ಗ್ರಾಮ ಪಂಚಾಯತ್ ಪದ್ಧತಿಯ ಮೂಲಕ ಪರಿಹರಿಸಿಕೊಳ್ಳುತ್ತಿದ್ದರು. ಇದರಿಂದಾಗಿ ಮೊಗವೀರರಿಗೆ ಕೋರ್ಟು ಕಚೇರಿ ಹತ್ತುವ ಪ್ರಸಂಗ ಬರುತ್ತಿರಲಿಲ್ಲ. ವ್ಯಾಜ್ಯಗಳನ್ನು ಸಮುದಾಯದ ಒಳಗೆ ತೀರ್ಮಾನಿಸಿಕೊಳ್ಳುತ್ತಿದ್ದರು ಎಂದು ಮುಂಬೈಯ ಕವಿ ಲೇಖಕಿ ಡಾ. ಜಿ.ಪಿ. ಕುಸುಮಾ ಅವರು ಅಭಿಪ್ರಾಯ ಪಟ್ಟರು. ಅವರು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟ ನವೆಂಬರ್ 1ರಂದು ಕಲೀನಾ ಕ್ಯಾಂಪಸ್ ನ ರಾನಡೆ ಭವನದ ಇಂಗ್ಲಿಷ್ ವಿಭಾಗದ ಸೆಮಿನಾರ್ ಹಾಲ್ ನಲ್ಲಿ ಆಯೋಜಿಸಿದ್ದ ‘ಮುಂಬೈ ಕನ್ನಡಿಗರ ಅಸ್ಮಿತೆ ಚಿಂತನ ಮಂಥನ’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಸಮುದಾಯ ಅಧ್ಯಯನದ ಅಗತ್ಯ ಮತ್ತು ಮಹತ್ವ (ಮೊಗವೀರ ಸಮುದಾಯದ ಹಿನ್ನೆಲೆಯಲ್ಲಿ) ಎಂಬ ವಿಷಯದ ಕುರಿತು ಉಪನ್ಯಾಸಕರಾಗಿ ಮಾತನಾಡುತ್ತಿದ್ದರು. ಅವರು ಸಮುದಾಯದ ಅಧ್ಯಯನದ…

Read More

ಮಹಾರಾಷ್ಟ್ರ ಸರಕಾರದ ಆದೇಶದಂತೆ ಮುಂಬೈ ವಿಶ್ವವಿದ್ಯಾಲಯದ ಸೂಚನೆಯಂತೆ ವಿವಿಯ ಕನ್ನಡ ವಿಭಾಗದಲ್ಲಿ  ನವೆಂಬರ್ 7ರಂದು ವಂದೇ ಮಾತರಂ ಸಮೂಹ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಗಾಯನದ ತರುವಾಯ ಗೀತೆಯ ಕುರಿತಾಗಿ ಸಂವಾದ ಕಾರ್ಯಕ್ರಮ ಸಹ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನ್ನಡ ವಿಭಾಗದ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರಾದ ಪ್ರೊ. ಜಿ. ಎನ್. ಉಪಾಧ್ಯ ಅವರು  ಮಾತನಾಡುತ್ತಾ, ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗವು ಕಳೆದ 46 ವರ್ಷಗಳಿಂದ ನಮ್ಮ ದೇಶ ಭಾಷೆ ಸಾಹಿತ್ಯ ಸಂಸ್ಕೃತಿಯ ಬಲವರ್ಧನೆಗೆ ಸಂಬಂಧಪಟ್ಟ ಎಲ್ಲ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ವಂದೇ ಭಾರತ ಗೀತೆಯು ಭಾರತೀಯರ ಭಾವ ಕೋಶದಲ್ಲಿ ಸೇರಿದ ಭಾವಗೀತೆಯಾಗಿದೆ.   ಭಾರತದ ಜನಮನವನ್ನು ಬೆಸೆಯುವಲ್ಲಿ, ಸ್ವದೇಶಿ ಚಳುವಳಿ ಮತ್ತು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಈ ಗೀತೆಯು ಪ್ರಧಾನಪಾತ್ರವನ್ನು ವಹಿಸಿದೆ. ಬಂಕಿಮ್ ಚಂದ್ರ ಚಟರ್ಜಿ ವಿರಚಿತ 1875ರ ಗೀತೆಗೆ ಇಂದು 150ರ ಸಂಭ್ರಮ.  ಇದನ್ನು ಸಾಮೂಹಿಕವಾಗಿ ಗಾಯನ ಮಾಡಿ ಚಿಂತನ ಮಂಥನ ಮಾಡುವ ಅವಕಾಶ ಲಭಿಸಿದ್ದು ಸಂತಸದ ವಿಷಯವಾಗಿದೆ…

Read More

ಗೆಳೆಯರ ಬಳಗ (ರಿ) ಬಲ್ಲಂಗುಡೆಲು ಇದರ ವಾರ್ಷಿಕ ಮಹಾಸಭೆ ಬಲ್ಲಂಗುಡೆಲು ಶ್ರೀ ಕ್ಷೇತ್ರದ ಪರಿಸರದ ಸಂಘದ ಕಟ್ಟಡದಲ್ಲಿ ಸಂಘದ ಅಧ್ಯಕ್ಷರಾದ ಮಾದವ ಉಳಿಯರವರ ಅಧ್ಯಕ್ಷತೆಯಲ್ಲಿ ಜರಗಿತು. ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರ ಮಂಡನೆ ಮತ್ತು ನೂತನ ಸಮಿತಿಯ ರೂಪೀಕರಣ ನಡೆಯಿತು. ಸಮಿತಿಯ ನೂತನ ಗೌರವ ಅಧ್ಯಕ್ಷರಾಗಿ ರಾಮ್ ಪ್ರಕಾಶ್ ಆಳ್ವ ಪಟ್ಟತ್ತಮೊಗರು, ಅಧ್ಯಕ್ಷರಾಗಿ ಕಾರ್ತಿಕ್ ಶೆಟ್ಟಿ ಮಜಿಬೈಲು, ಉಪಾಧ್ಯಕ್ಷರಾಗಿ ಪ್ರವೀಣ್ ಕುಮಾರ್ ಶೆಟ್ಟಿ ಕರಿಬೈಲು, ಮೋಹನದಾಸ್ ಚಿಗುರುಪಾದೆ, ಪ್ರದಾನ ಕಾರ್ಯದರ್ಶಿಯಾಗಿ ಪ್ರದೀಪ್ ಶೆಟ್ಟಿ ಬಲ್ಲಂಗುಡೆಲು, ಜತೆ ಕಾರ್ಯದರ್ಶಿಯಾಗಿ ಜಗದೀಶ್ ಅಜ್ಜಿಹಿತ್ತಿಲು, ಕೇಶವ ಮಜಿಬೈಲು, ಕೋಶಾಧಿಕಾರಿಯಾಗಿ ಬಶೀರ್ ಮೂಡಂಬೈಲು, ಗೌರವ ಸಲಹೆಗಾರರಾಗಿ ಮೂಸ ಅಜ್ಜಿಹಿತ್ತಿಲು, ಮಾದವ ಉಳಿಯ, ರಾಜೇಶ್ ಬಲ್ಲಂಗುಡೆಲು, ಆನಂದ ಮಜಿಬೈಲು ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ಪ್ರದೀಪ್ ಶೆಟ್ಟಿ ಸ್ವಾಗತಿಸಿ ಕೋಶಾಧಿಕಾರಿ ಬಶೀರ್ ಮೂಡಂಬೈಲು ಧನ್ಯವಾದವಿತ್ತರು.

Read More

ಮಂಡ್ಯ ಜಿಲ್ಲೆಯ ಶ್ರಿ ಆದಿಚುಂಚನಗಿರಿ ವಿದ್ಯಾಸಂಸ್ಥೆಯಲ್ಲಿ ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯ ಸಾಂಪ್ರದಾಯಿಕ ವಿಭಾಗದಲ್ಲಿ ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಲಾಸ್ಯ ಮಧ್ಯಸ್ಥ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ. ವಿಜೇತ ವಿದ್ಯಾರ್ಥಿನಿಯು ಶ್ರೀಯುತ ಅರುಣ ಮಧ್ಯಸ್ಥ ಮತ್ತು ಶ್ರೀಮತಿ ಲತಾ ಮಧ್ಯಸ್ಥರವರ ಪುತ್ರಿ. ಸ್ಕೂಲ್ ಗೇಮ್ಸ್ ಆಫ್ ಇಂಡಿಯಾ (SGFI) ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಆದಿಚುಂಚನಗಿರಿಯಲ್ಲಿ ಇತ್ತೀಚೆಗೆ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರಾದ ಡಾ| ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ, ಸಂಸ್ಥೆಯ ಮುಖ್ಯೋಪಾಧ್ಯಾಯರಾದ ಪ್ರದೀಪ್ ಕೆ ವಿಜೇತ ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ. ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಸತೀಶ್ ಕುಮಾರ್ ವಿದ್ಯಾರ್ಥಿನಿಗೆ ಮಾರ್ಗದರ್ಶನ ನೀಡಿದ್ದರು. ಸುಜ್ಞಾನ ಪದವಿ ಪೂರ್ವ ಕಾಲೇಜು ಮತ್ತು ವಿದ್ಯಾರಣ್ಯ ಆಂಗ್ಲ ಮಾಧ್ಯಮ ಶಾಲೆಯ ಬೋಧಕ ಬೋಧಕೇತರ ವರ್ಗದವರು ಸಂತಸ ವ್ಯಕ್ತಪಡಿಸಿದ್ದಾರೆ.

Read More

ಬಾಂಬೆ ಬಂಟ್ಸ್ ಅಸೋಸಿಯೇಷನ್ ಇದರ ಕಾರ್ಯಾಧ್ಯಕ್ಷೆ ಶ್ರೀಮತಿ ಶಾಂತ ನಾರಾಯಣ ಶೆಟ್ಟಿ ಮತ್ತು ಅವರ ಕಾರ್ಯಕಾರಿ ಸಮಿತಿ, ಅಧ್ಯಕ್ಷ ಅಡ್ವೋಕೇಟ್ ಡಿ.ಕೆ ಶೆಟ್ಟಿಯವರ ನಿರ್ದೇಶನದಲ್ಲಿ ನವೆಂಬರ್ 04 ರಂದು ಬಂಟ್ಸ್‌ ಸೆಂಟರ್ ನಲ್ಲಿ ತುಳಸಿ ಪೂಜೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಿದರು. ಅಧ್ಯಕ್ಷ ಅಡ್ವೋಕೇಟ್ ಡಿ.ಕೆ ಶೆಟ್ಟಿಯವರು ಕಾರ್ಯಕ್ರಮಕ್ಕೆ ದೀಪ ಪ್ರಜ್ವಲಿಸಿ ಚಾಲನೆ ಕೊಟ್ಟರು. ತುಳಸಿ ಹಬ್ಬವನ್ನು ಹಿಂದೂ ಪಂಚಾಂಗದ ಪ್ರಕಾರ, ಕಾರ್ತಿಕ ಮಾಸದ ಶುಕ್ಲಪಕ್ಷದ ಏಕಾದಶಿಯಂದು ವಿಷ್ಣು ತನ್ನ ಯೋಗ ನಿದ್ದೆಯಿಂದ ಎಚ್ಚೆತ್ತು ದ್ವಾದಶಿಯಂದು ತುಳಸಿ ಮಾತೆಯನ್ನು (ಲಕ್ಮೀ ದೇವಿ) ವಿವಾಹವಾಗಿದ್ದರಿಂದ, ತುಳಸಿ ಹಬ್ಬ ಅಥವಾ ತುಳಸಿ ಪೂಜೆ ಎಂದು ಆಚರಿಸಲಾಗುತ್ತದೆ. ಆದ್ದರಿಂದ ತುಳಸಿ ಪೂಜೆಯನ್ನು ಆಚರಿಸಿ, ತುಳಸಿಯನ್ನು ಪೂಜಿಸುವುದರಿಂದ ಮನೆಗೆ ಸುಖ, ಶಾಂತಿ, ನೆಮ್ಮದಿ ಲಭಿಸುವುದರ ಜೊತೆಗೆ ಮನಸ್ಸಿನ ಇಷ್ಚಾರ್ಥವು ಸಿದ್ದಿಯಾಗುತ್ತದೆ ಎಂಬ ಬಲವಾದ ನಂಬಿಕೆ ಅನಾದಿ ಕಾಲದಿಂದಲೂ ನಡೆದು ಬಂದಿದೆ. ಅದಲ್ಲದೆ ಆ ದಿನ ಮನೆಮಂದಿಯೆಲ್ಲಾ ಶುಚಿರ್ಭೂತರಾಗಿ ತುಳಸಿಕಟ್ಚೆಯನ್ನು ಸ್ವಚ್ಚಗೊಳಿಸಿ ತುಳಸಿಗಿಡದ ಜತೆ ನೆಲ್ಲಿಕಾಯಿಯ ಗಿಡವನ್ನು ನೆಟ್ಚು ತುಳಸಿಕಟ್ಟೆಯ…

Read More

ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಶನ್ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ನಡೆದ ರಂಗಚಾವಡಿ ರಜತ ಸಂಭ್ರಮ ಮತ್ತು ರಂಗುರಂಗಿನ ರಂಗೋತ್ಸವ ಕಾರ್ಯಕ್ರಮ ಸುರತ್ಕಲ್ ಬಂಟರ ಭವನದಲ್ಲಿ ಜರಗಿತು. ಕಾರ್ಯಕ್ರಮವನ್ನು ಮಂಬೈ ವಿ.ಕೆ ಸಮೂಹ ಸಂಸ್ಥೆಯ ಛೇರ್ಮನ್ ಮಧ್ಯಗುತ್ತು ಕರುಣಾಕರ ಎಂ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ ಅಜಿತ್ ಕುಮಾರ್ ರೈ ಮಾಲಾಡಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಉದ್ಘಾಟಿಸಿದರು. ಅಜಿತ್ ಕುಮಾರ್ ರೈ ಮಾಲಾಡಿ ಮಾತನಾಡಿ, ರಂಗಚಾವಡಿ ಸಂಸ್ಥೆ ಕಲಾವಿದರನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಸಂಸ್ಥೆ. ಅನೇಕ ಕಲಾವಿದರನ್ನು ಗುರುತಿಸಿ ನಾಡಿಗೆ ಪರಿಚಯಿಸಿದ ಕೀರ್ತಿ ರಂಗಚಾವಡಿ ಸಂಸ್ಥೆಗೆ ಸಲ್ಲುತ್ತದೆ. ಮುಂದಿನ ದಿನಗಳಲ್ಲಿ ರಂಗಚಾವಡಿ ಅಕಾಡೆಮಿಯನ್ನಾಗಿ ರಚಿಸಿ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಶುಭ ಹಾರೈಸಿದರು. ಮಧ್ಯಗುತ್ತು ಕರುಣಾಕರ ಎಂ ಶೆಟ್ಟಿ ಮಾತನಾಡಿ, ರಂಗಚಾವಡಿ ಸಂಸ್ಥೆ ರಜತ ಸಂಭ್ರಮವನ್ನು ಆಚರಿಸುತ್ತಿದೆ. ಇದರ ಕಾರ್ಯಚಟುವಟಿಕೆ…

Read More

ಆಕೆ ಮನೆಯ ಯಜಮಾನಿ. 60ರ ಹರೆಯ. ಬಂದಾಕೆ ತೋರಿಸಿದ್ದು ತನ್ನ ಕೈಯ ಬೆರಳುಗಳನ್ನು. ಬಲದ ಕೈಯ ಮೂರು ಉಗುರುಗಳು ಕಪ್ಪಾಗಿದ್ದವು. ಅದರ ಸುತ್ತ ಬಾತುಕೊಂಡಿತ್ತು. ಒಂದರಲ್ಲಿ ಸ್ವಲ್ಪ ಕೀವು. ತುಂಬಾ ನೋವು ಯಾಕೆ ಹೀಗೆ? ಎಂದು ಕೇಳಿದಳು. ಇದೊಂದು ಸಾಮಾನ್ಯ ತೊಂದರೆ ಮತ್ತು ಸಾಮಾನ್ಯ ಪ್ರಶ್ನೆ. ಪಾತ್ರೆ ತೊಳೆಯುವ ಸಾಬೂನು ಬದಲಾಯಿಸಿದೆ. ವ್ಯತ್ಯಾಸವಿಲ್ಲ. ಈ ಸಂಭಾಷಣೆಯ ಮುಂದುವರಿದ ಭಾಗ ಹೀಗೆಯೇ ಇರುತ್ತದೆ. ಉಗುರು ಸುತ್ತು ಎನ್ನುವ ಹೆಸರಿನಲ್ಲಿ ಹಲವು ಅಂಶಗಳು ಅಡಗಿವೆ. ಉಗುರಿನ ಸುತ್ತ ಬರುವ ಸೋಂಕು ಇದು. ಉಗುರಿನ ಸುತ್ತಲಿನ ಚರ್ಮ ಮತ್ತು ಅಂಗಾಂಶ ದಪ್ಪವಾಗಿ ಕೆಂಪಾಗುತ್ತದೆ. ಕೀವು ತುಂಬಿಕೊಂಡು ಬಹಳ ವೇದನೆ ಇರಬಹುದು. ಉಗುರಿನ ಬಣ್ಣ ಕ್ರಮೇಣ ಬದಲಾಗಿ ಹಳದಿ ಅಥವಾ ಬದಿಗಳಲ್ಲಿ ಆಕಾರವೇ ಬದಲಾಗಿ ಸೊಟ್ಟಗಾಗಿ ಬಿಡಬಹುದು. ಹೆಚ್ಚಾಗಿ ಇದು ಕಂಡುಬರುವುದು ಮಹಿಳೆಯರಲ್ಲಿ ಮತ್ತು ಹೋಟೆಲಿನ ಮಾಣಿಗಳಲ್ಲಿ. ಕಾರಣ? : ಉಗುರು ಸುತ್ತಿನ ಮುಖ್ಯ ಕಾರಣವೇ ಬೆರಳುಗಳಲ್ಲಿ ಸದಾ ನೀರಿನ ಪಸೆ ಇರುವುದು. ಮನೆಯಲ್ಲಿ ಮಹಿಳೆಯರ ಅತ್ಯಂತ…

Read More

ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವಾರ್ತಾಭಾರತಿ ದಿನಪತ್ರಿಕೆಯ ಮಂಗಳೂರು ಬ್ಯೂರೋ ಚೀಫ್, ಸಜ್ಜನ ಸಹೃದಯಿ ಪುಷ್ಪರಾಜ್ ಶೆಟ್ಟಿ ಬಿ.ಎನ್‌ ಆಯ್ಕೆಯಾಗಿದ್ದಾರೆ. ದ.ಕ ಜಿಲ್ಲಾ ವಾರ್ತಾ ಇಲಾಖೆಯ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ 2025-28ನೆ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾದರು. ಪುಷ್ಪರಾಜ್ 187 ಮತಗಳನ್ನು ಗಳಿಸಿದರೆ ಅವರ ಪ್ರತಿಸ್ಪರ್ಧಿ ವಿಜಯವಾಣಿ ಪತ್ರಿಕೆಯ ವರದಿಗಾರ ಯುವ ಫೈಯರ್ ಬ್ರಾಂಡ್ ಹೆಸರಾದ ಶ್ರವಣ್ ಕುಮಾರ್ ನಾಳ ಕೊನೆಯ ದಿನ ನಾಮಪತ್ರ ಸಲ್ಲಿಸಿದರೂ ತೀವ್ರ ಸ್ಪರ್ಧೆ ನೀಡಿ 144 ಮತಗಳನ್ನು ಪಡೆದರು. ಉಪಾಧ್ಯಕ್ಷರಾಗಿ ಅತ್ಯಧಿಕ ಮತಗಳನ್ನು ಪಡೆದ ವಿಜಯ ಕರ್ನಾಟಕದ ಮುಹಮ್ಮದ್ ಆರೀಫ್, ವಿಲೈಡ್ ಡಿ ಸೋಜ ಮತ್ತು ರಾಜೇಶ್ ಶೆಟ್ಟಿ, ಕಾರ್ಯದರ್ಶಿಗಳಾಗಿ ಅತೀ ಹೆಚ್ಚಿನ ಮತಗಳನ್ನು ಪಡೆದ ಉದಯವಾಣಿಯ ಸತೀಶ್ ಇರಾ, ಹೊಸ ದಿಗಂತದ ಸುರೇಶ್ ಪಳ್ಳಿ, ಪುತ್ತೂರಿನ ಸಿದ್ದೀಕ್ ನೀರಾಜೆ ಗೆಲುವು ಸಾಧಿಸಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅತಿ ಹೆಚ್ಚಿನ ಮತಗಳನ್ನು ಪಡೆದ ಕನ್ನಡಪ್ರಭ ದ ಸಂದೀಪ ವಾಗ್ಲೇ, ದಿವಾಕರ ಪದ್ಮುಂಜ, ಸಂದೇಶ್…

Read More