Author: admin

ತುಳುನಾಡ್ ಡ್ ಪರ್ಬ ಪಂಡ ದೀಪಾವಳಿ ಪಂದ್ ಅರ್ಥ. ಬೆನ್ನಿದೊಂಬುಗೆದ ಬದ್ಕ್‌ಡ್ ನೆಕ್ಕ್ ಎಡ್ಡೆ ಪುಗರ್ತೆ ಉಂಡು. ಹಿರಿಯಕ್ಲೆ ಆಚರಿಪು, ನಂಬೊಲಿಗೆದ ಪಿರವು ಎಡ್ಡೆಪುದ ಕಾರಣ ಇತ್ತ್‌ದ್, ಆಚರಣೆಡ್ ಪ್ರದೇಶವಾರು ಪರಾಕ್ ಇತ್ತ್ಂಡಲಾ ಆಶಯ ಒಂಜೆ ಆದಿತ್ತ್ಂಡ್ ಪಂದ್ ಸುರತ್ಕಲ್ ಗೋವಿಂದದಾಸ ಕಾಲೇಜ್ ಉಪನ್ಯಾಸಕಿ ಅಕ್ಷತಾ ವಿ ಕೆನರಾ ಕಾಲೇಜ್ ಸಭಾಂಗಣಡ್ ನಡತಿ ತುಲುವೆರೆ ಕಲ ಟ್ರಸ್ಟ್ (ರಿ)ದ ಪದಗ್ರಹಣ ಬೊಕ್ಕ ತುಡರ್ ಪರ್ಬ ಲೇಸ್‌ಡ್ ಪಾತೆರೊಂದು ಪಂಡೆರ್. ತುಲುವೆರೆ ಕಲ ಟ್ರಸ್ಟ್ ಗುರ್ಕಾರ್ದಿ ಗೀತಾ ಲಕ್ಷ್ಮೀಶ್ ಗುರ್ಕಾರ್ಮೆದ ಲೇಸ್‌ನ್ ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಗುರ್ಕಾರ್ರ್ ರಾಜೇಶ್ ಬಿ ಉದಿಪನ ಮಲ್ತೆರ್. ತುಲುವೆರೆ ಕಲತ್ತ ಗೌರವಾಧ್ಯಕ್ಷೆರಾಯಿನ ಮುದ್ದು ಮೂಡುಬೆಳ್ಳೆ, ಮಾರ್ಗದರ್ಶಕೆ ಸದಾನಂದ ನಾರಾವಿ ದುಂಬಾಯಿನಕ್ಲ್ ಲೇಸ್‌ದ ಮಿತ್ತರ್ಮೆಡಿತ್ತೆರ್. ಪ್ರಶಾಂತ್ ಆಚಾರ್ಯ ಎಡಪದವು ದೇವೆರೆನ್ ಸುಗಿತ್, ರೇಣುಕಾ ಕಣಿಯೂರು ಲೇಸ್ ಸುಧಾರಿಕೆ ಮಲ್ತೆರ್. ಸಾಹಿತಿ, ಉಪನ್ಯಾಸಕೆ ರಘು ಇಡ್ಕಿದು ಗುರ್ಕಾರ್ಮೆದ ತುಡರ್ ಕಬಿಕೂಟೊಡು ವಿಶ್ವನಾಥ ಕುಲಾಲ್ ಮಿತ್ತೂರು, ಡಾ. ಸುರೇಶ್ ನೆಗಳಗುಳಿ,…

Read More

ದ.ಕ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಹಾಗೂ ಜೈನ್ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಸ್ವರಾಜ್ಯ ಮೈದಾನದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜು ಒಟ್ಟು ೨೮ ಚಿನ್ನ, ೨೦ ಬೆಳ್ಳಿ ಮತ್ತು ೦೪ ಕಂಚಿನ ಪದಕಗಳೊಂದಿಗೆ ೫೨ ಪದಕಗಳನ್ನು ಪಡೆದು ಬಾಲಕರ ವಿಭಾಗದಲ್ಲಿ ೧೦೦ ಅಂಕ ಮತ್ತು ಬಾಲಕಿಯರ ವಿಭಾಗದಲ್ಲಿ ೧೦೪ ಅಂಕ ಒಟ್ಟು ೨೦೪ ಅಂಕದೊಂದಿಗೆ ಸಮಗ್ರ ಪ್ರಶಸ್ತಿಯನ್ನು ಪಡೆಯಿತು. ಬಾಲಕರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಎಕ್ಸಲೆಂಟ್ ಪದವಿ ಪೂರ್ವ ಕಾಲೇಜು ೧೬ ಅಂಕಗಳೊಂದಿಗೆ ಪ್ರಶಸ್ತಿಯನ್ನು ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಜೈನ್ ಪದವಿಪೂರ್ವ ಕಾಲೇಜು ೧೯ ಅಂಕ ಪಡೆದು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಬಾಲಕರ ವೈಯಕ್ತಿಕ ಪ್ರಶಸ್ತಿಯನ್ನು ಆಳ್ವಾಸಿನ ಸಮರ್ಥ ಪಡೆದುಕೊಂಡರೆ, ಬಾಲಕಿಯರ ವೈಯಕ್ತಿಕ ವಿಭಾಗದಲ್ಲಿ ಆಳ್ವಾಸಿನ ನಾಗಿಣಿ ಪಡೆದುಕೊಂಡರು. ವಿಜೇತ ಕ್ರೀಡಾಪಟುಗಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವರು ಅಭಿನಂದನೆ ಸಲ್ಲಿಸಿದರು.

Read More

ಬಂಟ ಸಮಾಜದವರನ್ನು ಒಟ್ಟಿಗೆ ಸೇರಿಸಿಕೊಂಡು ಸಮುದಾಯದ ಏಳಿಗೆಗಾಗಿ ಸರಕಾರದ ಮೇಲೆ ಒತ್ತಡ ಹಾಕಿ ಬಂಟ ಅಭಿವೃದ್ದಿ ನಿಗಮ ಸ್ಥಾಪನೆಗೆ ಪ್ರಯತ್ನಿಸಲಾಗುವುದು ಎಂದು ಶ್ರೀ ಬಾರ್ಕೂರು ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ವಿದ್ಯಾವಾಚಾಸ್ಪತಿ ಡಾ. ವಿಶ್ವ ಸಂತೋಷ ಭಾರತೀ ಸ್ವಾಮೀಜಿ ತಿಳಿಸಿದರು. ಅಡ್ಯಾರ್ ಗಾರ್ಡನ್ ನಲ್ಲಿ ನಡೆದ ಶ್ರೀ ಬಾರ್ಕೂರು ಮಹಾ ಸಂಸ್ಥಾನದ ದಶಮ ಸಂಭ್ರಮ ಸಂಕಲ್ಪ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ವಿದ್ಯಾವಾಚಾಸ್ಪತಿ ಡಾl ವಿಶ್ವ ಸಂತೋಷ ಭಾರತೀ ಸ್ವಾಮೀಜಿಯವರು ಬಂಟ ಸಂಸ್ಕೃತಿ ಪರಂಪರೆ ತುಳುನಾಡಿನ ದೈವ ದೇವರುಗಳ ಆಚರಣೆಯ ಕುರಿತು ಮಾತನಾಡಿದರು. ನನಗೆ ಬಹಳ ದೊಡ್ಡ ಕನಸು ಇದೆ ನಮ್ಮವರನ್ನೆಲ್ಲಾ ಒಂದು ಸೂರಿನಡಿ ಸೇರಿಸಿ ಮಾತನಾಡಬೇಕು, ಜೊತೆಗೆ ಈ ಸಮಾಜದ ಬಹು ದೊಡ್ಡ ಸಂಘಟನೆಯ ನಿರೀಕ್ಷೆಯೂ ಇದೆ. ಈ ಸಂಸ್ಥಾನ ಸ್ಥಾಪಿಸಲು ಹೋಗಿ ನಾನು ಬಹಳಷ್ಟು ನೋವುಗಳನ್ನು ಅನುಭವಿಸಿದೆ. ಆದರೂ ನನ್ನ ಪೂರ್ವ ಆಶ್ರಮದ ಈ ಬಂಟ ಜಾತಿಯವರಿಗೆ ಏನಾದರೂ ಮಾಡಲೇ ಬೇಕು ಎಂದು ನಿರ್ಧರಿಸಿ…

Read More

ಪ್ರತಿಯೊಬ್ಬ ವ್ಯಕ್ತಿಯು ತನಗೆ ತಾನೇ ವಿಕಾಸಗೊಂಡು ತನ್ನ ಮಟ್ಟವನ್ನು ತಲುಪಿದಾಗ ಸಂತೃಪ್ತಿಯನ್ನು ಹೊಂದುತ್ತಾನೆ. ಇದು ತನ್ನ ಸ್ವಸಾಮರ್ಥ್ಯದಿಂದ ಪಡೆದದ್ದು ಆಗಿರುತ್ತದೆ. ಅದೇ ರೀತಿ ಒಡಲಲ್ಲಿ ತುಂಬಿರುವ ಸಮಾಜ ಸೇವೆ ಎಂಬ ತುಡಿತ ಎಲ್ಲರಲ್ಲೂ ಬರಲು ಸಾದ್ಯವಿಲ್ಲ. ಅಂತಹ ತುಡಿತ ಇದ್ದವನು ಸಮಾಜ ಸೇವೆಗೆ ಇಳಿಯದೆ ಸುಮ್ಮನಿರಲಾರ. ಇದೇ ನಾವು ಇಂದು ಸಮಾಜದಲ್ಲಿ ಕಾಣುತ್ತಾ ಇದ್ದೇವೆ. ಸಂಘಟನೆ ಮಾಡುವುದು ಸುಲಭ. ಆದರೆ ಅದರ ಗುರಿ ಮುಟ್ಟಲು ಚಿಂತನಾಶೀಲ, ಸಂಘಟನಾತ್ಮಕ ಮತ್ತು ದೃಡ ಸಂಕಲ್ಪ ಬೇಕು. ಹೃದಯದಲ್ಲಿ ಕರುಣೆ, ಸಮಾನತೆ, ಮಾನವೀಯ ಮೌಲ್ಯಗಳು ಮತ್ತು ಸಹಭಾಗಿತ್ವ ಎಂಬ ಆಶಾ ಭಾವ ನಮ್ಮಲ್ಲಿ ಇದ್ದರೆ ಯಾವ ರೀತಿಯಿಂದಲಾದರೂ ಸೇವೆ ಮಾಡಿ ತೋರಿಸಬಹುದು. ತುಳುಕೂಟ ಪುಣೆ ಸ್ಥಾಪನೆ ಆಗಿ 27 ವರ್ಷಗಳ ಪರ್ಯಂತ ತುಳುವರಿಗಾಗಿ ಶ್ರಮಿಸುತ್ತಾ ಬಂದಿದೆ. ಹಿಂದಿನ ಎಲ್ಲಾ ಅಧ್ಯಕ್ಷರುಗಳು ಹಲವಾರು ಕೆಲಸ ಕಾರ್ಯಗಳನ್ನು ಮಾಡಿದ್ದಾರೆ. ಆದರೆ ನಮ್ಮ ಉದ್ದೇಶ ಏನಿತ್ತೋ ಸಂಘಕ್ಕಾಗಿ ತುಳುವರಿಗಾಗಿ ಸ್ವಂತ ಮಿನಿ ಭವನ ಮಾಡಿ ಅ ಮೂಲಕ ತುಳುವರಿಗೆ ಉಪಯೋಗಕಾರಿ…

Read More

ಮಹಾರಾಷ್ಟ್ರದ ಪ್ರಖ್ಯಾತ ದಿನಪತ್ರಿಕೆಯಾದ ಪುಡಾರಿಯು ಕೊಡ ಮಾಡುವ ಪಿಂಪ್ರಿ ಚಿಂಚ್‌ವಾಡ್ ಭೂಷಣ ಗೌರವ ಪುರಸ್ಕಾರ ಕಾರ್ಯಕ್ರಮವು ರಾಗ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿತ್ತು. ಈ ಬಾರಿಯ ಪಿಂಪ್ರಿ ಚಿಂಚ್ವಾಡ್ ಭೂಷಣ್ ಪುರಸ್ಕಾರವು ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷರಾದ ರಾಕೇಶ್ ಶೆಟ್ಟಿ ಬೆಳ್ಳಾರೆಯವರಿಗೆ ನೀಡಿ ಗೌರವಿಸಿದೆ. ಅಲ್ಲದೇ ಬಂಟರ ಸಂಘ ಪಿಂಪ್ರಿ ಚಿಂಚ್ವಾಡ್ ಉಪಾಧ್ಯಕ್ಷರಾದ ಪ್ರಸಾದ್ ಶೆಟ್ಟಿ ಅವರಿಗೆ ಕೂಡಾ ಪಿಂಪ್ರಿ ಚಿಂಚ್ವಾಡ್ ಭೂಷಣ್ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಪ್ರಶಸ್ತಿಯನ್ನು ಸರಕಾರದ ಆರೋಗ್ಯ ಸಚಿವರಾದ ಪ್ರಕಾಶ್ ಅಬಿತ್ಕರ್ ಮತ್ತು ಸಂಸದರಾದ ಶ್ರೀರಂಗ (ಅಪ್ಪ) ಬಾರ್ನೆ ಮತ್ತು ಎಂ ಎಲ್ ಸಿ ಅಮಿತ್ ಗೋರ್ಕೆ ಎಂಎಲ್ಸಿ ಮತ್ತು ಶತ್ರುಘ್ನ ಕಾಟೆಯವರು ಒಡಗೂಡಿ ಪ್ರದಾನ ಮಾಡಿದರು. ವರದಿ : ಹರೀಶ್ ಮೂಡಬಿದ್ರಿ, ಪುಣೆ

Read More

ಪರಿಸರ ಸ್ವಚ್ಛವಾಗಿದ್ದರೆ ಊರಿನ ಸುಂದರತೆ ಜತೆಗೆ ಸಾಂಕ್ರಾಮಿಕ‌ ರೋಗಗಳು ದೂರವಾಗಿ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ. ಹಾಗಾಗಿ ಸ್ವಚ್ಛತೆ ಕಾಪಾಡಲು ಸಹಕರಿಸುವುದು ನಾಗರೀಕರ ಜವಾಬ್ದಾರಿಯಾಗಿದೆ ಎಂದು ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್, ರೋಶನಿ ನಿಲಯ ಕಾಲೇಜಿನ ಎನ್.ಎಸ್.ಎಸ್ ಘಟಕ ಮತ್ತು ಗ್ಲೋಬಲ್ ಇಕೋ ಗ್ರೀನ್ ಫೌಂಡೇಶನ್ ಸಹಭಾಗಿತ್ವದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ ರೈ ಕಟ್ಟ, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ ಹರೀಶ್ ರೈ, ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್, ರೋಟರಿ ಪದಾಧಿಕಾರಿ ಜಾಕ್ಸನ್ ಅತಿಥಿಗಳಾಗಿ ಭಾಗವಹಿಸಿದ್ದರು. ನಗರದ ತಾಲೂಕು ಪಂಚಾಯತ್ ಕಚೇರಿಯಿಂದ ರೈಲು ನಿಲ್ದಾಣದವರೆಗಿನ ರಸ್ತೆ ಬದಿಯನ್ನು ರೋಶನಿ ನಿಲಯ ಕಾಲೇಜಿನ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳು ಸ್ವಚ್ಛಗೊಳಿಸಿದರು.

Read More

ರಕ್ತದಾನ, ಆರೋಗ್ಯ ಕಾಳಜಿ, ವಿಪತ್ತು ಪರಿಹಾರ ಸಹಿತ ಹಲವು ಸೇವಾ ಕಾರ್ಯಗಳ ಮೂಲಕ ರೆಡ್‌ಕ್ರಾಸ್ ಸಮಾಜಕ್ಕೆ ನೆರವಾಗುತ್ತಿದೆ. ವಿಶ್ವದಾದ್ಯಂತ ರೆಡ್‌ಕ್ರಾಸ್ ಪಸರಿಸಿದ್ದು ಮಾನವೀಯ ಸೇವೆಯೇ ಸಂಸ್ಥೆಯ ಗುರಿಯಾಗಿದೆ ಎಂದು ದ.ಕ ಜಿಲ್ಲಾಧಿಕಾರಿ, ರೆಡ್‌ಕ್ರಾಸ್ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ದರ್ಶನ್ ಎಚ್.ವಿ ಹೇಳಿದರು. ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡದ ಪ್ರೇರಣಾ ಸಭಾಂಗಣದಲ್ಲಿ ನಡೆದ ದ.ಕ. ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿಯ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ‘ಭವ್ಯ ಶತಮಾನೋತ್ಸವ ಕಟ್ಟಡದ ನಿರ್ಮಾಣ ಸಹಿತ ರೆಡ್‌ಕ್ರಾಸ್ ದ.ಕ. ಜಿಲ್ಲಾ ಘಟಕದ ಕಾರ್ಯ ಚಟುವಟಿಕೆ ರಾಜ್ಯಕ್ಕೆ ಮಾದರಿಯಾಗಿದೆ’ ಎಂದರು. ರೆಡ್‌ಕ್ರಾಸ್ ಜಿಲ್ಲಾ ಘಟಕದ ಛೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಮಾತನಾಡಿ, ದ.ಕ. ಜಿಲ್ಲಾಡಳಿತ, ದಾನಿಗಳು ಹಾಗೂ ರೆಡ್‌ಕ್ರಾಸ್ ಸದಸ್ಯರ ನೆರವಿನಿಂದ ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡದ ನಿರ್ಮಾಣವಾಗಿರುವುದು ಹೆಮ್ಮೆ ತಂದಿದೆ. ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆರಿಗೆ ಹಾಗೂ ಇತರ ಆರೋಗ್ಯ ಸಮಸ್ಯೆ ಸಂಬಂಧಿಸಿ ದಾಖಲಾದವರಿಗೆ ಅವಶ್ಯ ಇದ್ದರೆ ರೆಡ್‌ಕ್ರಾಸ್ ಬ್ಲಡ್‌ ಬ್ಯಾಂಕ್‌ನಿಂದ ಉಚಿತವಾಗಿ ರಕ್ತ ಪೂರೈಸಲಾಗುತ್ತಿದೆ. ವೆನ್ಲಾಕ್…

Read More

ಕಾರ್ಕಳ ಕುಕ್ಕುಂದೂರು ವಿಜೇತ ವಿಶೇಷ ಶಾಲೆಗೆ ಕಾರ್ಕಳ ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ರೊ. ಜನಾರ್ಧನ್ ಇಡ್ಯಾರವರಿಂದ ದೇಣಿಗೆ ಹಸ್ತಾಂತರ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷ ರೊ. ನವೀನ್ ಚಂದ್ರ ಶೆಟ್ಟಿ ಅವರು ರೋಟರಿಯ ಮುಖ್ಯ ಧ್ಯೇಯದಂತೆ ಸಮುದಾಯ ಸೇವೆಯಲ್ಲಿ ತೊಡಗಿಸಿಕೊಂಡ ಜನಾರ್ಧನ್ ಇಡ್ಯಾ ದಂಪತಿಗಳು ವಿಜೇತ ವಿಶೇಷ ಶಾಲೆಗೆ ನೀಡುತ್ತಿರುವ ಕೊಡುಗೆಯು ಇತರರಿಗೆ ಪ್ರೇರಣೆಯಾಗಲಿ ಎಂದರು. ರೂ. 50,000/-ದ ಚೆಕ್ಕನ್ನು ಸಂಸ್ಥೆಗೆ ಹಸ್ತಾಂತರಿಸಿ ಮಾತನಾಡಿದ ಜನಾರ್ಧನ್ ಇಡ್ಯಾರವರು ಈ ಸಂಸ್ಥೆಯ ಮಾನವೀಯ ಸೇವೆ, ಶಿಕ್ಷಕಿಯರ ತ್ಯಾಗ, ತಾಳ್ಮೆ ಮತ್ತು ಸೇವಾ ಮನೋಭಾವನೆ ಪ್ರಶಂಸನೀಯ ಇಂತಹ ಸಂಸ್ಥೆಗೆ ಎಲ್ಲರ ಸಹಕಾರ ದೊರೆಯಲಿ ಎಂದರು. ದೇವರ ಮಕ್ಕಳಿಗೆ ರೋಟರಿ ವತಿಯಿಂದ ಸಿಹಿ ತಿಂಡಿ ಹಂಚಲಾಯಿತು. ರೋಟರಿ ಕ್ಲಬ್ ಕಾರ್ಕಳ ಇದರ ಕಾರ್ಯದರ್ಶಿ ಚೇತನ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದ ರು. ಕ್ಲಬ್ಬಿನ ಸದಸ್ಯರಾದ ಜಗದೀಶ್ ಟಿ ಎ., ಸುರೇಶ್ ನಾಯಕ್, ವಸಂತ್…

Read More

ಸಾಕೇತ್ ಶೆಟ್ಟಿ ಅವರು ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಮಂಡಿಸಿದ ಮಹಾಪ್ರಬಂಧವಾದ “ಸಸ್ಟೇನಬಲ್ ಮ್ಯಾನೇಜ್‌ಮೆಂಟ್ ಸ್ಟ್ರಾಟಜಿ ಫಾರ್ ರಿಜುವೆನೇಶನ್ ಆಫ್ ಕೋಸ್ಟಲ್ ದಕ್ಷಿಣ ಕನ್ನಡ” ಕುರಿತು ಆಳವಾದ ಸಂಶೋಧನೆ ನಡೆಸಿ, ಸುರತ್ಕಲ್ ಪ್ರತಿಷ್ಠಿತ ಎನ್.ಐ.ಟಿ.ಕೆ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇವರು ಕೊಲ್ಲಾಡಿ ರಾಮಯ್ಯ ಶೆಟ್ಟಿ ಹಾಗೂ ಬೆಳಿಯೂರು ಗುತ್ತು ಮೋಹಿನಿ ಶೆಟ್ಟಿ ಅವರ ಪುತ್ರರಾಗಿದ್ದು, ಡಾ| ಸಾಕೇತ್ ಶೆಟ್ಟಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಭವಿಷ್ಯದ ಯಶಸ್ಸಿಗೆ ಹಾರ್ದಿಕ ಶುಭಾಶಯಗಳು.

Read More

ಬಂಟರ ಸಂಘ (ರಿ) ಸುರತ್ಕಲ್ ಇದರ ವತಿಯಿಂದ ನಡೆಸಲ್ಪಡುವ “ಯಕ್ಷ ಸಿರಿ” ಯಕ್ಷಗಾನ ತರಬೇತಿ ಕೇಂದ್ರದ ತೃತೀಯ ವಾರ್ಷಿಕೋತ್ಸವ ಸಮಾರಂಭ ಸುರತ್ಕಲ್ ಬಂಟರ ಸಂಘದ ವಠಾರದಲ್ಲಿ ಜರುಗಿತು. ಗೋವಿಂದದಾಸ ಕಾಲೇಜು ಸುರತ್ಕಲ್ ಇದರ ಆಡಳಿತಾತ್ಮಕ ನಿರ್ದೇಶಕ ರಮೇಶ್ ಭಟ್ ಎಸ್.ಜಿ. ಇವರು ದೀಪ ಬೆಳಗಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತಾಡಿದ ಅವರು, ನಾನು ಸುರತ್ಕಲ್ ಬಂಟರ ಸಂಘವನ್ನು ಹತ್ತಿರದಿಂದ ಗಮನಿಸುತ್ತಾ ಬಂದವನು. ಪ್ರತೀ ಸ್ಪರ್ಧೆಯಲ್ಲೂ ಸುರತ್ಕಲ್ ಬಂಟರ ಸಂಘ ಪ್ರಶಸ್ತಿ ಪಡೆದುಕೊಂಡೇ ಬಂದಿದೆ. ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಸಂಘ ಸದಾ ಮುಂದಿದೆ. ಬಹುಷಃ ಇದೇ ಕಾರಣಕ್ಕೆ ರಾಜ್ಯೋತ್ಸವ ಪ್ರಶಸ್ತಿಗೂ ಸಂಘ ಭಾಜನವಾಗಿದೆ. ಯಕ್ಷಗಾನ ಅನ್ನುವುದು ಶ್ರೇಷ್ಠವಾದ ಕಲೆ. ಯಕ್ಷಗಾನ ಕಲಾವಿದನಿಗೆ ಭಾಷಾ ಶುದ್ಧಿ ಮತ್ತು ಸಂವಹನಾ ಸಾಮರ್ಥ್ಯವಿದೆ. ಪುರಾಣದ ಜ್ಞಾನ ಸಂಪಾದನೆಗೆ ಯಕ್ಷಗಾನ ಕಲೆ ಪೂರಕ. ಪುರಾಣ ಪುರುಷರ ಆದರ್ಶ ಚರಿತ್ರೆ ಮಕ್ಕಳಿಗೆ ತಿಳಿಯುತ್ತದೆ. ಹೀಗಾಗಿ ಇಂದಿನ ಮಕ್ಕಳಿಗೆ ಇದರ ತರಬೇತಿ ಅವಶ್ಯ. ಮಕ್ಕಳ ವ್ಯಕ್ತಿತ್ವದ ಸಕಾರಾತ್ಮಕ…

Read More