Author: admin
ಪ್ರತಿಷ್ಠಿತ ಶಿರ್ವ ಬಂಟರ ಸಂಘದ ಅಧ್ಯಕ್ಷರಾಗಿ ಉದ್ಯಮಿ, ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ, ಸಮಾಜಸೇವಕ ಕುತ್ಯಾರು ಕೇಂಜ ಅಬ್ಬೆಟ್ಟು ಗುತ್ತು ಸಾಯಿನಾಥ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶ್ರೀಯುತರು ಪ್ರಗತಿಪರ ಕೃಷಿಕರಾಗಿ, ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘದ ಉಡುಪಿ ಜಿಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಹಸಿರು ಉಳಿಸಿದಾಗ ಉಸಿರಿಗೆ ಬಲ ಬರುತ್ತದೆ. ಅರಿವಿನ ಮೂಲಕ ಪರಿಸರ ಸಂರಕ್ಷಣೆ ಕೆಲಸವಾಗಬೇಕು. ಪರಿಸರ ದಿನದ ಆಚರಣೆ ಪ್ರತಿನಿತ್ಯ ನಡೆಯುವ ಜೊತೆಗೆ ಗಿಡವನ್ನು ನೆಟ್ಟ ಬಳಿಕ ಪೋಷಿಸುವ ಅನಿವಾರ್ಯತೆ ಇದೆ ಎಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದ ಶ್ರೀ ಗುರು ದೇವಾನಂದ ಸ್ವಾಮೀಜಿ ಹೇಳಿದರು. ಕನ್ಯಾನದಲ್ಲಿರುವ ಒಡಿಯೂರು ಶ್ರೀ ಗುರುದೇವ ಐಟಿಐ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಭಾಗದಿಂದ ಮಂಗಳೂರು ವಿಭಾಗ ಮಟ್ಟದ ಗಿಡ ನೆಡುವ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ವ್ಯಕ್ತಿಯ ಜತೆಗೆ ಬದುಕನ್ನು ರೂಪಿಸುವ ಶಿಕ್ಷಣದ ಅಗತ್ಯವಿದೆ. ಸಂಸ್ಕಾರವನ್ನು ಮೈಗೂಡಿಸಿಕೊಂಡಾಗ ಪ್ರಕೃತಿ ಚೆನ್ನಾಗಿರುತ್ತದೆ. ವಿಜಯ ಎಂಬುದು ಅಂತರಂಗದಲ್ಲಿ ಮೊದಲು ಆಗಬೇಕಾಗಿದ್ದು, ಅಂತರಂಗದ ಉಗ್ರಗಾಮಿಗಳನ್ನು ಧಮನಿಸುವ ಕಾರ್ಯವಾಗಬೇಕು. ಶಿಕ್ಷಣ ಪ್ರಜ್ಞಾವಂತ ಪ್ರಜೆಗಳನ್ನು ನಿರ್ಮಾಣ ಮಾಡುತ್ತದೆಯಾದರೂ, ವಿದ್ಯಾವಂತರಿಂದಲೇ ಸಮಾಜಕ್ಕೆ ಸಮಸ್ಯೆಯಾಗುತ್ತಿರುವುದು ಆಘಾತಕಾರಿಯಾಗಿದೆ. ಆಧ್ಯಾತ್ಮಿಕ ಬದುಕಿನಲ್ಲಿ ದ್ವೇಷಕ್ಕೆ ಅವಕಾಶವಿಲ್ಲ. ಧರ್ಮವನ್ನು ಸೀಮಿತಗೊಳಿಸುವುದು ಸರಿಯಲ್ಲ. ದೇಶ ಉಳಿದರೆ ಧರ್ಮಾನುಷ್ಟಾನ ಸಾಧ್ಯ ಎಂದರು.ಕೆ.ಆರ್.ಎಂ.ಎಸ್.ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ ಡಾ. ಮಾಧವ ಎಂ.ಕೆ.…
ಮಹಿಳೆ ಎಲ್ಲ ಕ್ಷೇತ್ರದಲ್ಲಿಯೂ ಸಾಧನೆ ಮಾಡುತ್ತಿದ್ದಾಳೆ. ಈ ಮೂಲಕ ಹೆಣ್ಣು ಅಂದರೆ ಅಬಲೆ ಅಲ್ಲ ಸಬಲೆ ಎಂಬುದನ್ನು ತೋರಿಸಿ ಕೊಟ್ಟಿದ್ದಾಳೆ. ಸಮಾಜಕ್ಕೆ ಏನಾದರೂ ಕೊಡುಗೆ ಕೊಡಲೇಬೇಕೆಂಬುದು ಎಲ್ಲರ ಆಶಯವಾಗಬೇಕೆಂದು ಗ್ರೂಪ್ ಆಫ್ ಪ್ರಕಲ್ಪ ನಿರ್ದೇಶಕಿ ಕಲ್ಪನಾ ಪ್ರಕಾಶ ನಾಯಕ ಅಭಿಪ್ರಾಯಪಟ್ಟರು. ರೋಟರಿ ಕ್ಲಬ್ ಆಫ್ ಮಿಡ್ ಟೌನ್ ಹುಬ್ಬಳ್ಳಿ ವತಿಯಿಂದ ಆಯೋಜಿಸಿದ್ದ ‘ರೋಟರಿ ಸಂಭ್ರಮ’ ನಾಗರೀಕರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಪ್ರತೀ ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ ಎನ್ನಲಾಗುತ್ತದೆ. ಆದರೆ, ನನ್ನ ಬೆಳವಣಿಗೆ, ಸಾಧನೆಗೆ ಪತಿಯೇ ಕಾರಣ. ಏನಾದರೂ ಮಾಡು ಎಂದು ಸದಾ ಪ್ರೇರಣೆ ನೀಡುತ್ತಿದ್ದು, ಸಮಾಜಕ್ಕೆ ಕೊಡುಗೆ ನೀಡಬೇಕು ಎಂಬ ಆಶಯದೊಂದಿಗೆ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು. ಉದ್ಯಮಿ ನಂದಕುಮಾರ್ ಎಚ್.ಎನ್ ಮಾತನಾಡಿ, ಸಮಾಜ ನಮ್ಮನ್ನು ಗುರುತಿಸುತ್ತದೆ ಎಂದರೆ ನಮಗೆ ಜವಾಬ್ದಾರಿ ಹೆಚ್ಚಿಸುತ್ತದೆ. ಸಮಾಜದಿಂದ ಪಡೆದದನ್ನು ಸಮಾಜಕ್ಕೆ ವಾಪಸ್ ಕೊಡಬೇಕು. ಸಮಾಜದಿಂದಲೇ ವ್ಯಕ್ತಿ ರೂಪುಗೊಳ್ಳುತ್ತಾನೆ. ಸಮಾಜ ನಮಗೆ ಸಾಕಷ್ಟು ಕೊಡುತ್ತದೆ. ಸಮಾಜಕ್ಕಾಗಿ ನಾವು…
ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಾಹಿತ್ಯದ ಕೀರ್ತಿ ಪತಾಕೆ ಹಾರಿಸಿದ, ಪ್ರತಿಷ್ಠಿತ ಬೂಕರ್ ಪ್ರಶಸ್ತಿ ವಿಜೇತ ಸಾಹಿತಿ ಕೊಡಗಿನ ದೀಪಾ ಭಾಸ್ತಿ ಅವರಿಗೆ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಬೃಹತ್ ಗೌರವ ಸನ್ಮಾನ ‘ಅಭಿವಂದನಾ ದೀಪಾ’ ಕಾರ್ಯಕ್ರಮ ಜೂನ್ 29 ರಂದು ಮಡಿಕೇರಿಯಲ್ಲಿ ನಡೆಯಿತು. ಸತ್ಕಾರ್ ಸಭಾಂಗಣದಲ್ಲಿ ನಡೆದ ಈ ಅಪರೂಪದ ಕಾರ್ಯಕ್ರಮದಲ್ಲಿ ಜಿಲ್ಲೆಯ 50 ಸಂಘ ಸಂಸ್ಥೆಗಳು ದೀಪಾ ಅವರನ್ನು ಸನ್ಮಾನಿಸಿ ಗೌರವಿಸಿದವು. ಕೊಡಗು ಜಿಲ್ಲಾ ಬಂಟರ ಸಂಘದ ವತಿಯಿಂದಲೂ ಪೇಟ, ಹಾರ ತೊಡಿಸಿ ಯಕ್ಷಗಾನ ಕಿರೀಟದ ಪ್ರತಿರೂಪವನ್ನು ನೀಡಿ ಗೌರವಿಸಲಾಯಿತು. ಅಧ್ಯಕ್ಷ ಜಗದೀಶ್ ರೈ ನೇತೃತ್ವದಲ್ಲಿ ನಡೆದ ಗೌರವ ಸಮರ್ಪಣೆ ಸಂಧರ್ಭ ಜಿಲ್ಲಾ ಸಂಘ, ತಾಲೂಕು ಘಟಕ, ನಗರದ ಮಹಿಳಾ ಘಟಕ, ತಾಲೂಕು ಮಹಿಳಾ ಘಟಕ, ಯುವ ಬಂಟ್ಸ್ ಅಸೋಸಿಯೇಷನ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಪುಣೆಯ ಕಂಟಾನ್ಮೆಂಟ್ ಪುಸ್ತಕ್ ಪೇಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪುಣೆಯ ಖ್ಯಾತ ಮಕ್ಕಳ ತಜ್ಞ, ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೂಡುಬಿದಿರೆ ಮೂಲದ ಡಾ. ಸುಧಾಕರ ಶೆಟ್ಟಿಯವರಿಗೆ ‘ಸಮಾಜ ಭೂಷಣ್’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪುಣೆಯ ಮುನ್ಸಿಪಲ್ ಕಾರ್ಪೊರೇಶನ್ ನ ಮಹಾತ್ಮ ಪುಲೆ ಆಡಿಟೋರಿಯಂನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಸರಕಾರದ ಮಾಜಿ ಸಚಿವ ಬಾಲಾಸಾಹೇಬ್ ಶಿವಾರ್ಕರ್, ಹೈಕೋರ್ಟ್ ಹಿರಿಯ ನ್ಯಾಯವಾದಿ ಗಿರೀಶ್ ಡಾಂಗೆ, ಕಂಟಾನ್ಮೆಂಟ್ ನ ಮಾಜಿ ಉಪಾಧ್ಯಕ್ಷರಾದ ಅರ್ಜುನ್ ಕುರ್ಪೆ, ಬಾಪು ಗಾನ್ಲ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ. ನಿವೃತ್ತ ಸಹಾಯಕ ಮಹಾಪ್ರಬಂಧಕ ಶ್ರೀ ಮೋಹನ್ದಾಸ್ ಶೆಟ್ಟಿಯವರಿಗೆ ಆತ್ಮೀಯ ಬೀಳ್ಕೊಡುಗೆ
ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳು, ಸಂಸ್ಥೆಯಲ್ಲಿ 29 ವರ್ಷಗಳ ಅಮೂಲ್ಯ ಸೇವೆಯನ್ನು ಸಲ್ಲಿಸಿ 30.06.2025 ರಂದು ನಿವೃತ್ತರಾದ ಸಹಾಯಕ ಮಹಾಪ್ರಬಂಧಕ ಶ್ರೀ ಮೋಹನ್ದಾಸ್ ಶೆಟ್ಟಿಯವರನ್ನ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಟ್ಟರು. ಸಂಘದ ಅಧ್ಯಕ್ಷರಾದ ಶ್ರೀ ಕೆ. ಜೈರಾಜ್ ಬಿ. ರೈಯವರು, ನಿವೃತ್ತರು ಸಂಘಕ್ಕೆ ನೀಡಿರುವ ಸೇವೆಯನ್ನು ಅಭಿಮಾನಪೂರ್ವಕವಾಗಿ ಸ್ಮರಿಸಿ ನಿವೃತ್ತ ಜೀವನವು ಶುಭಕರವಾಗಲೆಂದು ಹಾರೈಸಿದರು.ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಡಾ. ಸುಭಾಶ್ಚಂದ್ರ ಶೆಟ್ಟಿ, ಸಿ.ಎ. ಎಚ್. ಆರ್. ಶೆಟ್ಟಿ, ಶ್ರೀ ಯಂ. ರಾಮಯ ಶೆಟ್ಟಿ, ಶ್ರೀ ಪಿ. ಬಿ. ದಿವಾಕರ ರೈ, ಶ್ರೀ ರವೀಂದ್ರನಾಥ ಜಿ. ಹೆಗ್ಡೆ, ಶ್ರೀ ಕುಂಬ್ರ ದಯಾಕರ್ ಆಳ್ವ, ಶ್ರೀ ಅರಿಯಡ್ಕ ಚಿಕ್ಕಪ್ಪ ನಾೈಕ್, ಡಾ. ಬಿ. ಸಂಜೀವ ರೈ, ಮಹಾಪ್ರಬಂಧಕರಾದ ಶ್ರೀ ಗಣೇಶ್ ಜಿ. ಕೆ. ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಳೆದ ವರ್ಷ ಬಿಡುಗಡೆಯಾಗಿ ಸಂಚಲನ ಮೂಡಿಸಿದ್ದ ‘ಧರ್ಮ ದೈವ’ ಚಿತ್ರದ ಸಂಪುಲ್ಲ ಜಾಗೆಡ್ ಹಾಡು ಹೊಸ ದಾಖಲೆಯನ್ನೇ ಬರೆದಿತ್ತು. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಹಾಡಿದ ಈ ಹಾಡಿಗೆ ಕೆ.ಕೆ ಪೇಜಾವರ ಸಾಹಿತ್ಯ ಬರೆದಿದ್ದು, ನಿಶಾನ್ ರೈ ಸಂಗೀತ ನೀಡಿದ್ದರು. ಈ ಹಾಡು ಅದೆಷ್ಟು ಜನಪ್ರಿಯತೆ ಪಡೆದಿತ್ತು ಎಂದರೆ ಕೋಸ್ಟಲ್ ಫಿಲಂ ಅವಾರ್ಡ್ ನಲ್ಲಿ ಉತ್ತಮ ಗಾಯಕ, ಸಂಗೀತ ಮತ್ತು ಸಾಹಿತ್ಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನದ ಧರ್ಮ ದೈವ ಚಿತ್ರದ ಸಂಪುಲ್ಲ ಜಾಗೆಡ್ ಹಾಡು ಇತಿಹಾಸವಾದರೆ ಇದೀಗ ಅವರದೇ ನಿರ್ದೇಶನದ ಎರಡನೇ ತುಳು ಚಿತ್ರ ‘ಧರ್ಮ ಚಾವಡಿ’ಗೆ ಪಟ್ಲ ಸತೀಶ್ ಶೆಟ್ಟಿ ಹಾಡಿರುವ ಹಾಡಿನ ಬಿಡುಗಡೆಗೆ ತುಳುನಾಡೇ ಕಾತುರತೆಯಿಂದ ಕಾಯುತ್ತಿದೆ. ಈ ಹಾಡಿಗೆ ಪ್ರಸಾದ್ ಕೆ ಶೆಟ್ಟಿ ಸಂಗೀತ ನೀಡಿದ್ದು, ಸಾಹಿತ್ಯ ಕೆ.ಕೆ ಪೇಜಾವರ ಬರೆದಿದ್ದಾರೆ. ಈ ಹಾಡು ಜುಲೈ 1ರಂದು ಸಂಜೆ 6ಗಂಟೆಗೆ ಎಂ.ಆರ್.ಟಿ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ‘ಧರ್ಮ ಚಾವಡಿ’ ಚಿತ್ರದ…
ಜೂನ್ 27 ರಂದು ಶುಕ್ರವಾರ ಸಂಜೆ ಕುಂದಾಪುರ ಫ್ರೆಂಡ್ಸ್ ವತಿಯಿಂದ ಉಡುಪಿ ಜಿಲ್ಲಾ ಉಪ ನಿರ್ದೇಶಕರಾದ ಲೋಕೇಶ ಸಿ ಇವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಟೀಚರ್ಸ್ ಕೋ ಓಪರೇಟಿವ್ ಬ್ಯಾಂಕಿನ ನಿಕಟಪೂರ್ವ ಅಧ್ಯಕ್ಷರಾದ ವಿ ಸಂತೋಷ್ ಕುಮಾರ್ ಶೆಟ್ಟಿ, ಎ.ಪಿ.ಟಿ ಪೆರ್ಡೂರು ಶಾಲೆಯ ಮುಖ್ಯ ಶಿಕ್ಷಕರಾದ ಸತೀಶ್ ಶೆಟ್ಟಿ, ಕುಂದಾಪುರ ವಲಯದ ಅನುದಾನಿತ ಪ್ರಾಥಮಿಕ ಶಾಲಾ ಸಂಘದ ವಲಯ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಭಂಡಾರಿ, ವೀರೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕೆಂಜೂರು ಇಲ್ಲಿನ ಮುಖ್ಯ ಶಿಕ್ಷಕರಾದ ನವೀನ್ ಚಂದ್ರ ಶೆಟ್ಟಿ, ಪಿ.ಎಂ.ಶ್ರೀ ಕುವೆಂಪು ಶಾಲೆಯ ಶಿಕ್ಷಕರಾದ ಸದಾನಂದ ಶೆಟ್ಟಿ ಮತ್ತು ವಂಡ್ಸೆ ಸಮೂಹ ಸಂಪನ್ಮೂಲ ವ್ಯಕ್ತಿ ಎಂ ನಾಗರಾಜ್ ಶೆಟ್ಟಿಯವರು ಉಪಸ್ಥಿತರಿದ್ದರು.
ಮಾನವನ ವ್ಯಕ್ತಿತ್ವ ಹಲವಾರು ವಿಚಾರಗಳ ಮಿಶ್ರಣ : ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಂಗಳ ಮೌಲಿಕ ಕಾರ್ಯಕ್ರಮ ‘ಮೌಲ್ಯಸುಧಾ’ದಲ್ಲಿ ಅಭಿಮತ ಗಣಿತನಗರ: ಜೀವನದಲ್ಲಿ ಯಶಸ್ಸಿಗಿಂತ ಮೌಲ್ಯಗಳಿಗೆ ಬೆಲೆಕೊಡಬೇಕು ಹಾಗೂ ಗೌರವಿಸ ಬೇಕು, ನಾವು ಬುದ್ದಿವಂತರಾದರೆ ಸಾಲದು, ಪ್ರಜ್ಞಾವಂತರಾಗಬೇಕು ಎಂದು ವೀರೇಶಾನಂದ ಸರಸ್ವತಿ ಸ್ವಾಮೀಜಿಯವರು ನುಡಿದರು. ಅವರು ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ಹಾಗೂ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಸಹಯೋಗದಲ್ಲಿ ತಿಂಗಳ ಸರಣಿಯ ಮೌಲಿಕ ಕಾರ್ಯಕ್ರಮ “ಮೌಲ್ಯಸುಧಾ”-37ರ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ತುಮಕೂರಿನ ರಾಮಕೃಷ್ಣ ನಗರದ ರಾಮಕೃಷ್ಣ – ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪೂಜ್ಯ ವೀರೇಶಾನಂದ ಸರಸ್ವತಿ ಸ್ವಾಮಿಜಿಯವರು ‘ಸ್ವನಿಯಂತ್ರಣ : ಬಂಧನವೋ? ಸ್ವಾತಂತ್ರ್ಯವೋ?’ ಎಂಬ ವಿಷಯದ ಕುರಿತು ಉಪನ್ಯಾಸದಲ್ಲಿ ಮಾತನಾಡಿದರು. ಬುದ್ಧಿವಂತಿಕೆ ವೃದ್ಧಿಯಾಗದೆ ಜ್ಞಾನವು ವೃದ್ಧಿಯಾದರೆ ದುಃಖವು ಹೆಚ್ಚಾಗುತ್ತದೆ. ಮಾನವನ ವ್ಯಕ್ತಿತ್ವ ಹಲವಾರು ವಿಚಾರಗಳ ಮಿಶ್ರಣ. ನಕಾರಾತ್ಮಕ ಚಿಂತನೆಯನ್ನು ನಿಯಂತ್ರಿಸಬೇಕು. ಸ್ವನಿಯಂತ್ರಣ ಮಾನವನ ಕರ್ತವ್ಯವಾಗಬೇಕು. ಆತ್ಮಹತ್ಯೆ ಎಂಬುದು ತಾತ್ಕಾ ಲಿಕ ಸಮಸ್ಯೆಗೆ ಶಾಶ್ವತ ಪರಿಹಾರವೆಂದು ಇಂದಿನ…
ಬಂಟರ ಸಂಘ ಪುಣೆ : ಕಲ್ಪವೃಕ್ಷ ಸಮಾಜ ಕಲ್ಯಾಣ ಸಮಿತಿಯಿಂದ ವಿದ್ಯಾರ್ಥಿಗಳಿಗೆ ಅರ್ಥಿಕ ಸಹಾಯ ವಿತರಣೆ, ದತ್ತು ಸ್ವೀಕಾರ
ಪುಣೆ ಬಂಟರ ಸಂಘದ ಶಕುಂತಲಾ ಜಗನ್ನಾಥ್ ಶೆಟ್ಟಿ ಕಲ್ಪವೃಕ್ಷ ಸಮಾಜ ಕಲ್ಯಾಣ ಯೋಜನೆ ವತಿಯಿಂದ ವಿದ್ಯಾರ್ಥಿಗಳಿಗೆ ಅರ್ಥಿಕ ಸಹಾಯ ವಿತರಣಾ ಸಮಾರಂಭ, ಪ್ರತಿಭಾನ್ವಿತ ವಿಧ್ಯಾರ್ಥಿಗಳ ಸತ್ಕಾರ ಮತ್ತು ಆಟೀಡ್ ಒಂಜಿ ದಿನ ಆಚರಣೆಯು ಅಗಸ್ಟ್ 3 ರಂದು ನಡೆಯಲಿದೆ. ಸಂಘದ ಮಹತ್ವದ ಯೋಜನೆಯಾದ ಕಲ್ಪವೃಕ್ಷ ಸಮಾಜ ಕಲ್ಯಾಣ ಯೋಜನೆಯಡಿಯಲ್ಲಿ ಅರ್ಥಿಕ ಸಹಾಯ ನಡೆಯಲಿದೆ. ಎಂ.ಅರ್.ಜಿ ಗ್ರೂಪ್ ಸಿ.ಎಂ.ಡಿ ಡಾ| ಕೆ ಪ್ರಕಾಶ್ ಶೆಟ್ಟಿ ಪ್ರಾಯೋಜಿತ ವಿದ್ಯಾದಾತ ಯೋಜನೆಯಡಿಯಲ್ಲಿ ಬಂಟರ ಸಂಘದ ವತಿಯಿಂದ ಪ್ರತಿವರ್ಷ ವಿಧ್ಯಾರ್ಥಿಗಳಿಗೆ ಸುಮಾರು 20 ಲಕ್ಷಗಳಿಗಿಂತ ಮೇಲ್ಪಟ್ಟು ನೆರವನ್ನು ನೀಡುತ್ತಾ ಬರುತ್ತಿದೆ. ಈ ಬಾರಿ ಆಗಸ್ಟ್ 3ರಂದು ನಡೆಯಲಿರುವ ಈ ಮಹತ್ವಾಕಾಂಕ್ಷೆಯ ಸಮಾಜಮುಖಿ ಕಾರ್ಯಕ್ರಮವು ಸಂಘದ ಗೌರವಾಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆಯವರ ಗೌರವ ಉಪಸ್ಥಿತಿಯಲ್ಲಿ, ಅಧ್ಯಕ್ಷರಾದ ಅಜಿತ್ ಹೆಗ್ಡೆ ಕೆಂಜಾರು ಗುತ್ತುರವರ ಅಧ್ಯಕ್ಷತೆಯಲ್ಲಿ, ಕಲ್ಪವೃಕ್ಷ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಪುತ್ತೂರುರವರ ಆಯೋಜನೆಯಲ್ಲಿ ಅತಿಥಿ ಆಭ್ಯಾಗತರ ಗಣ ಉಪಸ್ಥಿತಿಯೊಂದಿಗೆ ನಡೆಯಲಿದೆ. ಸಂಘದ…