Author: admin

ಬಂಟರ ಯಾನೆ ನಾಡವರ ಸಂಘ (ರಿ.) ಬೈಂದೂರಿನ ಅಧಿಕೃತ ವೆಬ್‌ಸೈಟ್ bansbyndoor.com ಹಾಗೂ ನೂತನ ಗ್ರಂಥಾಲಯದ ಲೋಕಾರ್ಪಣೆ ಸಮಾರಂಭವು ಜೂನ್ 29 ರಂದು ಬೈಂದೂರಿನ ಬಂಟರ ಭವನದಲ್ಲಿ ವಿಜೃಂಭಣೆಯಿಂದ ಜರಗಿತು. ಈ ಸಮಾರಂಭವನ್ನು ಮಾನ್ಯ ಬೈಂದೂರು ಶಾಸಕರಾದ ಶ್ರೀ ಗುರುರಾಜ್ ಶೆಟ್ಟಿ ಗಂಟಿಹೊಳೆ ಉದ್ಘಾಟಿಸಿದರು. ಅವರು ಲ್ಯಾಪ್‌ಟಾಪ್‌ನಲ್ಲಿ ಬಟನ್ ಒತ್ತುವ ಮೂಲಕ ವೆಬ್‌ಸೈಟ್‌ನ್ನು ಲೋಕಾರ್ಪಣೆಗೊಳಿಸಿ, ನಂತರ ಜ್ಯೋತಿ ಬೆಳಗಿಸುವ ಮೂಲಕ ಗ್ರಂಥಾಲಯದ ಪ್ರಾರಂಭಕ್ಕೆ ಸಾಂಕೇತಿಕ ಚಾಲನೆ ನೀಡಿದರು. ಅದಷ್ಟೇ ಅಲ್ಲದೆ, ಗ್ರಂಥಾಲಯದ ಆರಂಭಿಕ ಪುಸ್ತಕ ಸಂಗ್ರಹವನ್ನೂ ಅವರು ಬಿಡುಗಡೆ ಮಾಡಿದರು. bansbyndoor.com ವೆಬ್‌ಸೈಟ್‌ ಮುಖಾಂತರ ವಿದ್ಯಾರ್ಥಿವೇತನ, ಸಾಧಕರ ಸನ್ಮಾನ ಹಾಗೂ ಸಂಘದ ವಿವಿಧ ಸಮಾಜಮುಖಿ ಯೋಜನೆಗಳ ಮಾಹಿತಿ ತಂತ್ರಜ್ಞಾನ ಪ್ರಯುಕ್ತ ಸಮಾಜದ ಸದಸ್ಯರಿಗೆ ಸುಲಭವಾಗಿ ಲಭ್ಯವಾಗಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದರು. ಈ ವೇದಿಕೆಯಿಂದ ಸಂಘದ ಕಾರ್ಯವೈಭವ ಹೆಚ್ಚಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀ ಸಾಲ್ಗದ್ದೆ ಶಶಿಧರ್ ಶೆಟ್ಟಿ ವಹಿಸಿದ್ದರು. ಉಪಾಧ್ಯಕ್ಷರಾದ ಜಗದೀಶ್ ಶೆಟ್ಟಿ ಕುದ್ರುಕೊಡು,…

Read More

ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ (ಹಳೆ) ಆವರಣದಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ರೆಡ್‌ಕ್ರಾಸ್ ಶತಮಾನೋತ್ಸವ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ರೆಡ್‌ಕ್ರಾಸ್ ದ.ಕ ಜಿಲ್ಲಾ ಘಟಕದ ಛೇರ್ಮನ್ ಸಿಎ ಶಾಂತಾರಾಮ ಶೆಟ್ಟಿ ಅವರು ರಾಜ್ಯಪಾಲ ಹಾಗೂ ರೆಡ್‌ಕ್ರಾಸ್ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿಯಾಗಿ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಲು ಆಗಮಿಸುವಂತೆ ಆಹ್ವಾನಿಸಿದರು. ರೆಡ್‌ಕ್ರಾಸ್ ದ.ಕ ಜಿಲ್ಲಾ ಘಟಕದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದ ರಾಜ್ಯಪಾಲರು ಉದ್ಘಾಟನೆಗೆ ಆಗಮಿಸುವುದಾಗಿ ತಿಳಿಸಿದರು. ರೆಡ್‌ಕ್ರಾಸ್ ರಾಜ್ಯ ಘಟಕದ ಚೇರ್ಮನ್ ಬಸ್ರೂರು ರಾಜೀವ್ ಶೆಟ್ಟಿ ಈ ಸಂಧರ್ಭ ಉಪಸ್ಥಿತರಿದ್ದರು.

Read More

ಆಳ್ವಾಸ್ ಕಾಲೇಜಿನ (ಸ್ವಾಯತ್ತ) ನಿರ್ವಹಣಾ ಶಾಸ್ತ್ರ ವಿಭಾಗದ ಆಶ್ರಯದಲ್ಲಿ ಬುಧವಾರ ವಿದ್ಯಾಗಿರಿ ಆವರಣದಲ್ಲಿ ‘ಸ್ಪೆಕ್ಟಾಕಲ್’ ವೇದಿಕೆಯ ಚಟುವಟಿಕೆಗಳ ಉದ್ಘಾಟನಾ ಕಾರ‍್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರಿನ ಗಣೇಶ್ ಶಿಪ್ಪಿಂಗ್ ಏಜೆನ್ಸಿಯ ಸಿಇಒ ಕಾರ್ತಿಕ್ ಶೆಟ್ಟಿ, “ಲಾಜಿಸ್ಟಿಕ್ಸ್ ಮತ್ತು ಶಿಪ್ಪಿಂಗ್ ವಲಯವು ಆರ್ಥಿಕ ಅಭಿವೃದ್ಧಿಗೆ ಪ್ರಮುಖ ಆಕರವಾಗಿ ಕಾರ‍್ಯ ನಿರ್ವಹಿಸುತ್ತಿದ್ದು, ಆದರೆ ಈ ಕ್ಷೇತದಲ್ಲಿರುವ ಅವಕಾಶಗಳನ್ನು ಅನ್ವೇಷಿಸಲು ನಾವು ಸೋತಿದ್ದೇವೆ ಎಂದರು. ನವಮಂಗಳೂರು ಬಂದರಿನ ಜೆಎಸ್‌ಡಬ್ಲ್ಯೂ ಕಂಟೇನರ್ ಟರ್ಮಿನಲ್‌ನೊಂದಿಗೆ ಅವರ ಅನುಭವವನ್ನು ಹಂಚಿಕೊಂಡ ಅವರು “ಸ್ಥಳೀಯ ಕೌಶಲ್ಯವಂತ ಪ್ರತಿಭೆಗಳ ಕೊರತೆಯಿಂದ ಅನಿವಾರ‍್ಯವಾಗಿ ಗುಜರಾತ್ ಮತ್ತು ತಮಿಳುನಾಡಿನ ಸಿಬ್ಬಂದಿಯನ್ನು ನೇಮಿಸಬೇಕಾಯಿತು. ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳನ್ನು ನವೀನ ಉದ್ಯಮಗಳಿಗೆ ಅನುಗುಣವಾಗಿ ರೂಪಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಮುಖ್ಯವಾಗಿ ಈ ಉದ್ಯಮದಲ್ಲಿ ಕುತೂಹಲ, ಹೊಂದಿಕೊಳ್ಳುವಿಕೆ, ಸಮಸ್ಯೆ ಪರಿಹಾರ ಸಾಮರ್ಥ್ಯ, ಸ್ಪಷ್ಟ ಸಂವಹನ ಹಾಗೂ ತಂಡದ ಕಾರ್ಯತಂತ್ರ ಈ ಎಲ್ಲಾ ಕೌಶಲ್ಯಗಳು ನಿರ್ಣಾಯಕವಾಗಿರುತ್ತವೆ. ವಿದ್ಯಾರ್ಥಿಗಳು ಸಾಂಪ್ರದಾಯಿಕ ವೃತ್ತಿ ಮಾರ್ಗಗಳನ್ನು ಮೀರಿ ಲಾಜಿಸ್ಟಿಕ್ಸ್ ನಂತಹ ಉದಯೋನ್ಮುಖ ವಲಯಗಳನ್ನು ಅನ್ವೇಷಿಸಬೇಕು. ವಿಶೇಷವಾಗಿ…

Read More

ಅವಕಾಶ ವಂಚಿತ ವಿದ್ಯಾರ್ಥಿಗಳಲ್ಲಿ ಯಕ್ಷಗಾನದ ಕಲಾ ನೈಪುಣ್ಯತೆಯನ್ನು ಬೆಳಗಿಸಿ ಸಂಸ್ಕಾರ ಬದ್ಧ ಬುನಾದಿಯನ್ನು ಹಾಕಿಕೊಡುವ ವಿಶಿಷ್ಟ ಯೋಜನೆ ಯಕ್ಷಧ್ರುವ ಯಕ್ಷ ಶಿಕ್ಷಣವು ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ಇದರ ಕನಸಾಗಿದೆ. ಮೂರನೇ ಶೈಕ್ಷಣಿಕ ಸಾಲಿಗೆ ಪಾದಾರ್ಪಣೆ ಮಾಡುತ್ತಿರುವ ಯಕ್ಷ ಶಿಕ್ಷಣ ಯೋಜನೆಯ ಉದ್ಘಾಟನಾ ಕಾರ್ಯಕ್ರಮವನ್ನು ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಜುಲೈ 1 ರಂದು ಹಮ್ಮಿಕೊಳ್ಳಲಾಗಿತ್ತು. ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗುವುದರ ಮೂಲಕ ಯಕ್ಷಧ್ರುವ ಯಕ್ಷ ಶಿಕ್ಷಣಕ್ಕೆ ಚಾಲನೆ ನೀಡಿದ ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ವಿಟ್ಲ ಘಟಕದ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ ಮಾತನಾಡಿ, ಯಾವುದೇ ಕಲೆಗಳನ್ನು ಒಲಿಸಿಕೊಳ್ಳಲು ಅದಕ್ಕೆ ಋಣಾನುಬಂಧ ಬೇಕು. ಕಷ್ಟದ ದಿನಗಳಲ್ಲೂ ಕೂಡ ಯಕ್ಷಗಾನದ ಒಲವಿಗೆ ಶರಣಾಗಿ ಮೇಲೆದ್ದ ಅನೇಕ ಕಲಾವಿದರ ಪಾಲಿಗೆ ಕೊರತೆಯಾಗದಂತೆ ಈ ಕಾಲಘಟ್ಟವು ವಿನೂತನ ಪ್ರಯೋಗದ ಮೂಲಕ ಯಕ್ಷಗಾನದ ಪ್ರತಿಭೆಗಳನ್ನು ಬೆಳೆಸುತ್ತಿದೆ. ಪಟ್ಲ ಫೌಂಡೇಶನ್ ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿದೆ ಎಂದರು. ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ) ವಿಟ್ಲ ಘಟಕದ…

Read More

ಅಷ್ಟ ವಿನಾಯಕ ಎಂದರೆ ಎಂಟು ಗಣೇಶ ದೇವಾಲಯಗಳ ಗುಂಪು. ಇವು ಮಹಾರಾಷ್ಟ್ರದಲ್ಲಿದ್ದು, ಪ್ರತಿಯೊಂದು ದೇವಾಲಯವು ತನ್ನದೇ ಆದ ವಿಶಿಷ್ಟ ಇತಿಹಾಸ ಮತ್ತು ಪ್ರಾಮುಖ್ಯತೆಯನ್ನು ಹೊಂದಿದೆ. ಅಷ್ಟ ವಿನಾಯಕ ದರ್ಶನ ಮಾಡಲು ಒಂದು ವಿಧಿವತ್ತಾಗಿ ಹೋಗಬೇಕೆಂದು ಪುರಾಣದಲ್ಲಿ ನಿರೂಪಿಸಲಾಗಿದೆ. ಶ್ಲೋಕದಲ್ಲಿ ಹೇಳಿರುವಂತೆ ಮೊದಲಿಗೆ ಮೋರ್ ಗಾಂವ್, ತೇವೂರ್, ಸಿದ್ಧಟೇಕ್, ರಾಜನ್ಗಾಂವ್, ಲೆನ್ಯಾದ್ರಿ, ಓಜಾರ್, ಪಾಲಿ ಮತ್ತು ಮಹಾಡ್ ಹೀಗೆ ಎಂಟು ಗಣಪತಿ ದೇವಸ್ಥಾನಗಳ ದರ್ಶನವೇ ಅಷ್ಟ ವಿನಾಯಕ ದರ್ಶನ. ಬಾಂಬೆ ಅಸೋಸಿಯೇಷನ್ ನ ಮಹಿಳಾ ವಿಭಾಗ ಕಾರ್ಯಾಧ್ಯಕ್ಷೆ ಶ್ರೀಮತಿ ಶಾಂತಾ ಎನ್ ಶೆಟ್ಟಿಯವರ ಮುಂದಾಳತ್ವ ಹಾಗೂ ಸಮಿತಿ ಸದಸ್ಯೆಯರ ಸಹಕಾರದೊಂದಿಗೆ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಡಿ.ಕೆ ಶೆಟ್ಟಿ ಮತ್ತು ಆಡಳಿತ ಸಮಿತಿಯ ಸಂಪೂರ್ಣ ಬೆಂಬಲದಲ್ಲಿ ಜೂನ್ 27 ರಿಂದ 29 ತಾರೀಖಿನವರೆಗೆ ಮೂರು ದಿನಗಳ ಪ್ರವಾಸದಲ್ಲಿ 2 ಬಸ್ಸುಗಳ ವ್ಯವಸ್ಥೆಯೊಂದಿಗೆ 61 ಮಹಿಳೆಯರು ಭಾಗವಹಿಸಿದ್ದರು. ಎಲ್ಲಾ ಮಹಿಳೆಯರು ತುಂಬಾ ಉತ್ಸುಕತೆ, ಉಲ್ಲಾಸದಿಂದ ಪ್ರಯಾಣದ ಬಸ್ಸಿನಲ್ಲಿ ಭಜನೆ, ಕೀರ್ತನೆ ಹಾಡುಗಳನ್ನು ಹಾಡುತ್ತಾ ಆನಂದ ನೀಡುತ್ತಾ…

Read More

ಸ್ವತಂತ್ರವಾಗಿ ಬೆಳೆದೆ ನೇತ್ರಾವತಿ ನದಿ ದಂಡೆ ಮೇಲೆ ಬಾಲ್ಯದ ನೆನಪುಗಳು ಇವೆ ಇನ್ನೂ ಹಸಿರಾಗಿಯೇ ಪ್ರತಿಧ್ವನಿಸುವ ನದಿಯ ದನಿಯು ರೋಮಾಂಚನಗೊಳಿಸುತ್ತೆ ಇನ್ನೂ ಆಪ್ತ ಗೆಳತಿಯ ಸುಮಧುರ ಹಾಡಿನಂತೆ ಆ ಸೌಮ್ಯವಾದ ಹರಿವು ಹಿತವಾದ ತಂಗಾಳಿ ಮೊಣಕಾಲುಗಳನ್ನು ಅದ್ದಿ ಆಡಿದ ತಂಪಾದ ಸಿಹಿ ನೀರು ಸೂರ್ಯಾಸ್ತದ ಸಮಯದಿ ಮೋಡದ ನಡುವೆ ಬಣ್ಣದ ಜಾದು ಮಳೆಗಾಲದಲ್ಲಿ ಕೋಪದಿಂದ ಉಬ್ಬುವಳು ಬಲು ಹೆಮ್ಮೆಯಿಂದ ಹೊರಗೆ ತುಂಬಾ ಉಗ್ರ ಆದರೆ ಒಳಗೆ ಬಹು ಶಾಂತ ಕಲ್ಲನ್ನು ಕೊರೆಯುತ್ತಾ ಮರಳನ್ನು ನುಣುಪಾಗಿಸುತ್ತಾ ನಾನು ದೂರವಾದರೂ ನೆನಪು ಮಾತ್ರ ಬಲು ನಿಕಟ ಬಂದಿದೆ ಈಗ ಅಕ್ರಮ ಮರಳಿನ ದಂಧೆ ಮಾಡುತ್ತಾ ಇದ್ದಾರೆ ನದಿಯ ಆಂತರಿಕ ಅಂಗದ ವಧೆ ಕಳೆದು ಹೋಗಿದೆ ಸೌಮ್ಯ ಹರಿವು ಹೆಚ್ಚಾಗಿದೆ ಹರಿವಿನ ವೇಗ ಸವೆದಿದೆ ನದಿಯ ದಡ ಆಳವಾಗಿದೆ ನದಿಯ ಮುಖ ತಟ್ಟಲಿದೆ ನೇತ್ರಾವತಿಯ ಶಾಪ ಕಾದಿದೆ ಮನುಷ್ಯನಿಗೆ ವಿನಾಶ ! ಲೇಖಕಿ : ಅಶ್ವಿತಾ ಶೆಟ್ಟಿ ಇನೋಳಿ (ಮುಂಬೈ)

Read More

ತುಳುವರ ಹೆಮ್ಮೆಯ ಅಂತಾರಾಷ್ಟ್ರೀಯ ಸಂಸ್ಥೆ ಅಮೆರಿಕಾದಲ್ಲಿರುವ ಆಲ್ ಅಮೆರಿಕಾ ತುಳು ಅಸೋಸಿಯೇಷನ್ ತನ್ನ ನಾಲ್ಕನೇ ಹುಟ್ಟುಹಬ್ಬವನ್ನು ತುಳುಸಿರಿ ಪರ್ಬ ಹೆಸರಲ್ಲಿ ಜುಲೈ 4,5,6 ರಂದು ಮೂರು ದಿನಗಳ ಸಂಭ್ರಮಾಚರಣೆಯಲ್ಲಿ ನಡೆಸಲಿದೆ. ಮೊದಲ ದಿನ ಜುಲೈ 4 ರಂದು ವಿಶ್ವದ ಎಲ್ಲಾ ತುಳುವರ ಸೇರುವಿಕೆಯೊಂದಿಗೆ ನಾರ್ಥ್ ಕೆರೋಲಿನದ ದಿ ಲೋಟಸ್ ಪಾರ್ಟಿ ಹಾಲ್ ಇಲ್ಲಿ ಔತಣಕ್ಕಾಗಿ ಸೇರುವುದರೊಂದಿಗೆ ಕಾರ್ಯಕ್ರಮ ವಿದ್ಯುಕ್ತವಾಗಿ ಆರಂಭವಾಗಲಿದೆ. ಜುಲೈ 5 ರಂದು ಆಟ ಸಿರಿಮುಡಿ, ಆಟ ಸನ್ಮಾನ, ಮತ್ತು ಆಟ ಸಿರಿನುಡಿ ಪ್ರಶಸ್ತಿ ಪ್ರದಾನದೊಂದಿಗೆ ಅಲ್ಸ್ಟನ್ ರಿಡ್ಜ್ ಮಿಡ್ಲ್ ಸ್ಕೂಲ್ ಕ್ಯಾರಿ ಕೆರೋಲಿನಾ ಇಲ್ಲಿ ಆಯೋಜನೆಗೊಳ್ಳಲಿದ್ದು, ಇದರಲ್ಲಿ ಕರ್ನಾಟಕದ ವಿಧಾನಸಭಾ ಸಭಾಪತಿ ಯು.ಟಿ ಖಾದರ್, ನಿಟ್ಟೆ ವಿಶ್ವ ವಿದ್ಯಾಲಯದ ತುಳು ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಸಾಯಿಗೀತ ಹೆಗ್ಡೆ, ಕತಾರ್ ಕನ್ನಡ ಸಂಘದ ಅಧ್ಯಕ್ಷ ಎ.ಟಿ.ಎಸ್ ಸಂಸ್ಥೆಯ ಮುಖ್ಯಸ್ಥ ಡಾ| ರವಿ ಶೆಟ್ಟಿ ಮೂಡಂಬೈಲ್ ಮತ್ತು ಎಮ್ ರಿಸಲ್ಟ್ ಸಂಸ್ಥೆಯ ಸಂಸ್ಥಾಪಕ ಮುಖ್ಯಾಧಿಕಾರಿ ಶೇಖರ್ ನಾಯ್ಕ್ ಮುಖ್ಯ ಅತಿಥಿಗಳಾಗಿ…

Read More

ತುಳುನಾಡಿನ ಧ್ವಜವಾಹಕತ್ವ ವಹಿಸಿಕೊಂಡಿರುವ ತುಳುವ ಮಹಾಸಭೆ ತನ್ನ ಚಟುವಟಿಕೆಗಳನ್ನು ವಿಸ್ತಾರಗೊಳಿಸುತ್ತಿರುವ ಈ ಸಂದರ್ಭದಲ್ಲಿ ಆಯುರ್ವೇದ, ಯೋಗ, ಸಮತೋಲಿತ ಆಹಾರ ಹಾಗೂ ಮನಃಶಾಂತಿಯ ಏಕ ಸಂಯೋಜನೆಯ ಸೇವೆ ನೀಡುತ್ತಿರುವ ಮನುಜ ಮನಸ್ಸಿನ ತಜ್ಞ ಡಾ| ನಿರಂಜನ್ ಎಸ್ ಶೆಟ್ಟಿ ಅವರನ್ನು ಕಾಪು ತಾಲೂಕು ತುಳುವ ಮಹಾಸಭೆಯ ಸಂಚಾಲಕರಾಗಿ ನೇಮಕಗೊಳಿಸಲಾಗಿದೆ. ಮನೋವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದಿರುವ ಡಾ| ಶೆಟ್ಟಿ ಅವರು ಪ್ರಸಿದ್ಧ ಸುನಂದ ವೆಲ್ನೆಸ್ ಸೆಂಟರ್ ನ ಸ್ಥಾಪಕರಾಗಿದ್ದು, ಔಷಧವಿಲ್ಲದ ಚಿಕಿತ್ಸಾ ವಿಧಾನಗಳ ಮೂಲಕ ನೂರಾರು ಜನರ ಜೀವನದಲ್ಲಿ ಹೊಸ ಬೆಳಕು ತಂದಿದ್ದಾರೆ. ಅವರು ಸುಮಾರು 80ಕ್ಕೂ ಹೆಚ್ಚು ದೈಹಿಕ ಮಾನಸಿಕ ತೊಂದರೆಗಳಿಗೆ ಸುಸೂಕ್ತ ಪರಿಹಾರಗಳನ್ನು ನೀಡುತ್ತಾ, ದೇಶದ ವಿವಿಧ ಕಡೆ ಆರೋಗ್ಯ ಮತ್ತು ಆತ್ಮಶಾಂತಿಯ ಮಾರ್ಗದರ್ಶನದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ರಾಷ್ಟ್ರೀಯ ಮಾನವ ಹಕ್ಕು ಸಮಿತಿ ಹಾಗೂ ಮಹಿಳಾ, ಮಕ್ಕಳ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾಗಿ, ಸಾಮಾಜಿಕ ನ್ಯಾಯಕ್ಕಾಗಿ ಬದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಅಮೆರಿಕದ ಲಿಂರಾ ವಿಂಡ್ಸರ್ ವತಿಯಿಂದ ಸುವರ್ಣ ಪದಕ, ಸಿಂಗಾಪುರದ ಚಾಂಪಿಯನ್…

Read More

ಮಂಗಳೂರು ಕದ್ರಿ ಚಿನ್ಮಯ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಭತ್ತದ ಕೃಷಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಪಾಲಡ್ಕ ಗ್ರಾಪಂ ವ್ಯಾಪ್ತಿಯ ಪುತ್ತಿಗೆಗುತ್ತು ಕಡಂದಲೆ ಪರಾಡಿಯಲ್ಲಿ ಜೂನ್ 27 ರಂದು ನಡೆಯಿತು. ಗುತ್ತಿನ ಯಜಮಾನ ಕೆ.ಪಿ ಸಂತೋಷ್ ಕುಮಾರ್ ಎಂ. ಶೆಟ್ಟಿ ಪ್ರಾರ್ಥನೆ ನೆರವೇರಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಮ್ಮ ಗುತ್ತಿಗೆ ಸೇರಿದ ಸುಮಾರು 60 ಎಕರೆ ಜಾಗದಲ್ಲಿ ಕೃಷಿ ಚಟುವಟಿಕೆ ನಿರಂತರವಾಗಿ ನಡೆಯುತ್ತಿದೆ. ಪ್ರತಿ ವರ್ಷವು ಭತ್ತದ ಕೃಷಿಗೆ ಹೆಚ್ಚಿನ ಆಧ್ಯತೆ ನೀಡಿದ್ದೇವೆ. ವರ್ಷಕ್ಕೆ ಮೂರು ಬಾರಿ ಭತ್ತದ ಬೆಳೆ ಬೆಳೆಯುತ್ತೇವೆ. ನೂರಕ್ಕೂ ಅಧಿಕ ಕೃಷಿ ಕಾರ್ಮಿಕರಿಗೆ ದುಡಿಮೆಯ ಅವಕಾಶವನ್ನೂ ನೀಡಿದ್ದೇವೆ. ನಗರದಲ್ಲಿ ಬೆಳೆಯುತ್ತಿರುವ ವಿದ್ಯಾರ್ಥಿಗಳಿಗೆ ಭತ್ತದ ಕೃಷಿಯ ಬಗ್ಗೆ ಮಾಹಿತಿ ನೀಡುವ ಅವಕಾಶ ದೊರೆತ್ತಿರುವುದು ಸಂತಸದ ವಿಷಯ ಎಂದರು. ಕೆಎಂಎಫ್ ನಿರ್ದೇಶಕ ಕೆ.ಪಿ ಸುಚರಿತ ಶೆಟ್ಟಿ ಮಾತನಾಡಿ, ಪುತ್ತಿಗೆಗುತ್ತು ಕಡಂದಲೆ ಪರಾಡಿ ಕೂಡು ಕುಟುಂಬ ದೈವ ಹಾಗೂ ಕೃಷಿಗೆ ಹೆಚ್ಚಿನ ಮಹತ್ವ ನೀಡಿ ಬೆಳೆಯುತ್ತಿರುವ ಪ್ರತಿಷ್ಠಿತ ಮನೆತನ ಎಂದರು. ಶಾಲೆಯ ವತಿಯಿಂದ ಕೆ.ಪಿ…

Read More

ಬಂಟ ಸಮಾಜದವರು ಮುಂದುವರಿದಿದ್ದಾರೆ ಎನ್ನುವುದು ತಪ್ಪು. ಬಂಟರಲ್ಲಿ ಅರ್ಧಾಂಶದಷ್ಟು ಬಡವರಿದ್ದಾರೆ. ಎಲ್ಲಾ ಬಂಟರ ಸಂಘಗಳು ಶ್ರೀಮಂತವಾಗಿದ್ದು ಬಡವರಿಗೆ, ಆರ್ಥಿಕ ಶೈಕ್ಷಣಿಕವಾಗಿ ನೆರವಾಗಲು ಸರ್ವೆ ನಡೆಸಬೇಕು. ಸಂಘಗಳು ನೀಡುವ ಸಹಾಯ ದುರುಪಯೋಗವಾಗದಂತೆ ಎಚ್ಚರಿಕೆಯೂ ಅಗತ್ಯ ಎಂದು ಬೆಂಗಳೂರಿನ ಡಿವೈಎಸ್ಪಿ ದಿನಕರ ಶೆಟ್ಟಿ ಪಡ್ರೆ ಅಭಿಪ್ರಾಯಪಟ್ಟರು. ಸುರತ್ಕಲ್ ಬಂಟರ ಭವನದಲ್ಲಿ ನಡೆದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸುರತ್ಕಲ್ ಬಂಟರ ಸಂಘದ 25ನೇ ವಾರ್ಷಿಕ ಮಹಾಸಭೆ, ಅಭಿನಂದನೆ, ಸಹಾಯಹಸ್ತ ವಿತರಣೆ, ವಿದ್ಯಾರ್ಥಿವೇತನ ವಿತರಣೆ ಸಮಾರಂಭದಲ್ಲಿ ಮಾತನಾಡಿದರು. ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ಅಧ್ಯಕ್ಷತೆ ವಹಿಸಿದ್ದರು. ಮುಂಬಯಿ ಹೇರಂಭ ಇಂಡಸ್ಟ್ರೀಸ್ ಸಂಸ್ಥೆಯ ಸಿಎಂಡಿ ಡಾ| ಕನ್ಯಾನ ಸದಾಶಿವ ಶೆಟ್ಟಿ, ಪೂಣೆ ಬಂಟರ ಸಂಘದ ಗೌರವಾಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ, ಹುಬ್ಬಳ್ಳಿ ಧಾರವಾಡ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಗ್ಗಿ ಸುಧಾಕರ ಶೆಟ್ಟಿ ಮಾತನಾಡಿದರು. ಡಾ| ಕನ್ಯಾನ ಸದಾಶಿವ ಶೆಟ್ಟಿ, ದಿನಕರ ಶೆಟ್ಟಿ ಪಡ್ರೆ, ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ…

Read More