Author: admin
ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ, ಹಿರಿಯ ಸಹಕಾರಿ ಧುರೀಣ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇರ್ದೆ ಗ್ರಾಮದ ಬಾಲ್ಯೊಟ್ಟು ನಿವಾಸಿಯಾಗಿರುವ ಶಶಿಕುಮಾರ್ ರೈರವರು ಪುತ್ತೂರು ಅಭಿವೃದ್ಧಿ ಬ್ಯಾಂಕಿನ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ, ಎಂಟು ವರ್ಷ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜನ ಜಾಗೃತಿ ವೇದಿಕೆಯ ಪುತ್ತೂರು ತಾಲೂಕು ಸಮಿತಿ ಅಧ್ಯಕ್ಷರಾಗಿ, ಇರ್ದೆ ಹಾಗೂ ಬೆಟ್ಟಂಪಾಡಿ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಬೆಂದ್ರತೀರ್ಥ ಅಭಿವೃದ್ಧಿ ಸಮಿತಿಯ ಸಂಚಾಲಕರಾಗಿ, ಪೇರ್ಲತ್ತಡ್ಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ, ಇರ್ದೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರರಾಗಿ, ನಿಡ್ಪಳ್ಳಿ ಶ್ರೀ ಶಾಂತಾದುರ್ಗಾ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕರಾಗಿ, ಸಾರ್ವಜನಿಕ ಶಾರದೋತ್ಸವ ಸಮಿತಿಯಲ್ಲಿ 23 ವರ್ಷ ಅಧ್ಯಕ್ಷರಾಗಿ, ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾಗಿ, ಉಪ್ಪಿನಂಗಡಿ ವಿಜಯ -ವಿಕ್ರಮ ಜೋಡು ಕರೆ ಕಂಬಳ ಸಮಿತಿಯ ಸಂಚಾಲಕರಾಗಿ, ಪುತ್ತೂರು ತಾಲೂಕು ಯುವ ಬಂಟರ…
ಶಕ್ತಿನಗರ ಕಾನಡ್ಕದ ಪದವು ಫ್ರೆಂಡ್ಸ್ ಕ್ಲಬ್ ನ 49ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವು ನಾಲ್ಯಪದವು ಶಾಲಾ ರಂಗಮಂದಿರದಲ್ಲಿ ಇತ್ತೀಚೆಗೆ ಜರಗಿತು. ಈ ಸಂದರ್ಭದಲ್ಲಿ ಸಂಸ್ಥೆ 50ನೇ ವರ್ಷಕ್ಕೆ ಕಾಲಿಟ್ಟ ಸಲುವಾಗಿ ಸುವರ್ಣ ಸಂಭ್ರಮಾಚರಣೆಗೆ ಚಾಲನೆ ನೀಡಲಾಯಿತು. ಯಕ್ಷಿಣಿಗಾರ ರಾಜೇಶ್ ಮಳಿ ಹಾಗೂ ಅವರ ಪುತ್ರಿಯರಾದ ಅಂಜನಾ ಮತ್ತು ಅಪೂರ್ವ ಮಳಿ ವಿಶಿಷ್ಟ ರೀತಿಯಲ್ಲಿ ಜಾದೂ ದಂಡ ಪ್ರಯೋಗಿಸಿ ಸುವರ್ಣ ಮಹೋತ್ಸವದ ಲಾಂಛನವನ್ನು ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಕವಿ, ಜಾನಪದ ವಿದ್ವಾಂಸ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ಬರೆದ ‘ಬಂಗಾರ್ ಪರ್ಬಯೇ..’ ತುಳು ಶೀರ್ಷಿಕೆ ಗೀತೆಯನ್ನು ಪದವು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಕುಶಾಲ್ ಕುಮಾರ್ ಗುಂಡಿ ಅದುಮಿ ಬಿಡುಗಡೆಗೊಳಿಸಿದರು. ಬಳಿಕ ಧ್ವನಿವರ್ಧಕದಲ್ಲಿ ಅದನ್ನು ಸಾರ್ವಜನಿಕವಾಗಿ ಕೇಳಿಸಲಾಯಿತು.ಹಿರಿಯ ರಂಗಕರ್ಮಿ ಜಿ.ಎಸ್ ಆಚಾರ್ ಅವರಿಗೆ ಕ್ಲಬ್ಬಿನ ಹಿರಿಯ ಸದಸ್ಯ, ಹಾಸ್ಯ ಚಕ್ರವರ್ತಿ ದಿ| ಮಾಧವ ಕೆ. ಶಕ್ತಿನಗರ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಶಾಲಾ ನಾಯಕತ್ವ ಸಮಾವೇಶಕ್ಕೆ ಆಯ್ಕೆಯಾದ ಕರ್ನಾಟಕದ…
ಪುಣೆ ಬಂಟರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸುರತ್ಕಲ್ ಬಂಟರ ಸಂಘದ ಸದಸ್ಯರಿಂದ ನಡೆದ ಬಂಟ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು. ಬಂಟರ ಸಂಘದ ಮಾಜಿ ಅಧ್ಯಕ್ಷ ಉಲ್ಲಾಸ್ ಶೆಟ್ಟಿ ಪೆರ್ಮುದೆ, ಸುಧಾಕರ ಪೂಂಜ ಹೊಸಬೆಟ್ಟು, ಗಿರೀಶ್ ಎಂ ಶೆಟ್ಟಿ ಕಟೀಲು, ಕಾರ್ಯದರ್ಶಿ ಲೀಲಾಧರ ಶೆಟ್ಟಿ ಕಟ್ಲ ಸಂಯೋಜನೆಯಲ್ಲಿ ಹಾಗೂ ರಾಜೇಶ್ವರಿ ಡಿ.ಶೆಟ್ಟಿಯವರ ಸಮರ್ಥ ನಿರ್ದೇಶನದಲ್ಲಿ ಪ್ರಸ್ತುತಪಡಿಸಲ್ಪಟ್ಟ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರನ್ನು ನಿಬ್ಬೆರಗಾಗುವಂತೆ ಮಾಡಿತ್ತು. ತುಳುನಾಡಿನ ಗುತ್ತಿನ ಮನೆ, ಆಚಾರ ವಿಚಾರ, ನಂಬಿಕೆ ನಡವಳಿಕೆಗಳನ್ನು ಇಂದಿನ ಪೀಳಿಗೆಗೆ ಪರಿಚಯ ಮಾಡಿಕೊಡುವ ಕಾರ್ಯಕ್ರಮವನ್ನು ವೇದಿಕೆಯಲ್ಲಿ ಒಟ್ಟು 2 ಗಂಟೆಗಳ ಕಾಲ ಸುರತ್ಕಲ್ ಬಂಟರ ಸಂಘದ 130 ಮಂದಿ ಕಲಾವಿದರ ತಂಡ ಸಾದರ ಪಡಿಸುವ ಮೂಲಕ ಪುಣೆ ಬಂಟರ ಸಂಘದಲ್ಲಿ ಹೊಸ ಮುನ್ನುಡಿಯನ್ನು ಬರೆಯಿತು. ಭೂತಾಳ ಪಾಂಡ್ಯ, ಕೊಜಂಬು ಕ್ರಮ, ಕರಪತ್ತಾವುನು, ತುಳುನಾಡಿನ ಬಂಟ ಸಮುದಾಯದ ಜೀವನಾಡಿಯಾದ ಕೃಷಿ ಚಟುವಟಿಕೆ, ತುಡರ್ ಪೂಜೆ- ಗೋ ಪೂಜೆ, ಜಾನಪದ ನೃತ್ಯ, ಉತ್ತರಕ್ರಿಯೆ ಸಂಪ್ರದಾಯ,…
ಬ್ಯಾಂಕ್ ಉದ್ಯೋಗಿಯೊಬ್ಬರು ಹೋಟೆಲ್ ಉದ್ಯಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಯಶಸ್ಸನ್ನು ಕಂಡಿರುವುದು ಸಾಮಾನ್ಯ ಮಾತಲ್ಲ. ಮುಲುಂಡ್ ಪಶ್ಚಿಮದಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿರುವ ಹೋಟೆಲ್ ಸೌಂದರ್ಯದ ಮಾಲಕರಾದ ಹರ್ಷವರ್ಧನ್ ಶೆಟ್ಟಿಯವರು ಬ್ಯಾಂಕ್ ಉದ್ಯೋಗದೊಂದಿಗೆ ಹೋಟೆಲ್ ಉದ್ಯಮವನ್ನು ಆರಂಭಿಸಿರುವ ಸಾಹಸಗಾಥೆ ಮಾದರಿಯಾಗಿದೆ. ಸರಳ ವ್ಯಕ್ತಿತ್ವದ, ಸದಾ ಹಸನ್ಮುಖಿ, ಎಲ್ಲರನ್ನು ಆತ್ಮೀಯರಂತೆ ಕಾಣುವ ಗುಣವನ್ನು ಹೊಂದಿರುವ ಇವರು ನಡೆದು ಬಂದ ಬಗೆ ಆಶ್ಚರ್ಯ ಪಡುವಂತದ್ದು. 17 ವರ್ಷಗಳ ಕಾಲ ಬ್ಯಾಂಕ್ ಉದ್ಯೋಗಿಯಾಗಿದ್ದ ಅವರು ಹೋಟೆಲ್ ಮಾಲೀಕರಾಗಿ ಅನೇಕರಿಗೆ ಮಾರ್ಗದರ್ಶಕರಾಗಿದ್ದಾರೆ ಎಂದರೆ ತಪ್ಪಾಗಲಾರದು. ಹೋಟೆಲ್ ಉದ್ಯಮದ ಮೂಲಕ ನೂರಾರು ಮಂದಿಗೆ ನೌಕರಿಯನ್ನು ನೀಡಿ ಅನೇಕ ಕುಟುಂಬಗಳಿಗೆ ಬೆಳಕಾಗಿದ್ದಾರೆ. ಎಳವೆಯಿಂದಲೇ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಶಿಸ್ತುಬದ್ಧ ಬದುಕು ಅವರದ್ದಾಗಿದೆ.ಉಡುಪಿ ಜಿಲ್ಲೆಯ ಮುದ್ರಾಡಿ ಕೃಷ್ಣಯ್ಯ ಶೆಟ್ಟಿ ಹಾಗೂ ಆತ್ರಾಡಿಯ ರುದ್ರು ಹೆಗ್ಡೆ ದಂಪತಿಯ 7 ಮಕ್ಕಳಲ್ಲಿ ಕೊನೆಯ ಪುತ್ರರಾಗಿ 1955ರ ಮಾರ್ಚ್ 16ರಂದು ಜನಿಸಿದ ಹರ್ಷವರ್ಧನ್ ಅವರು, 1976ರಲ್ಲಿ ಎಂಜಿಎಂ ಕಾಲೇಜಿನಿಂದ ವಿಜ್ಞಾನ ಪದವಿ ಪಡೆದರು. ತಂದೆ ಶಿಕ್ಷಕರಾಗಿದ್ದುದರಿಂದ ಮನೆಯ ಶಿಸ್ತು…
ಪಾಪಯ್ಯ ಬಟ್ಟೆಗಳ ವ್ಯಾಪಾರಿ, ಪರಮಲೋಭಿ, ಹಣ ಸಂಪಾದಿಸಲು ನಿದ್ರಾಹಾರಗಳನ್ನು ಬಿಟ್ಟಾದರೂ ಹಣ ಸಂಪಾದಿಸುತ್ತಾನೆ. ಭಿಕ್ಷುಕನಿಗೆ ಮಾತ್ರವಲ್ಲ ಬೆಕ್ಕಿಗೂ ನಾಲ್ಕು ಅಗಳು ಅನ್ನ ಹಾಕಲು ಆತನ ಮನಸ್ಸು ಸುತರಾಂ ಒಪ್ಪುವುದೇ ಇಲ್ಲ. ಹಣ ಖರ್ಚು ಮಾಡಬೇಕಾಗಿ ಬಂದರೆ ಸಿಡಿಮಿಡಿಗೊಳ್ಳುತ್ತಾನೆ. ಮುಖ್ಯವಾಗಿ ಯಾರ ಮನೆಗಾದರೂ ಶುಭ ಕಾರ್ಯಕ್ಕೆ ಕರೆದರೆ ಅವರು ಎಷ್ಟೇ ಸಮೀಪದವರಾಗಿರಲಿ ಅವರಿಗೆ ಕಾಣಿಕೆ ಕೊಡಬೇಕಾಗಿ ಬರುವುದೆಂದು ಯಾವುದೋ ಒಂದು ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳುತ್ತಿದ್ದನು. ಒಂದು ದಿನ ಆ ಊರಿನ ಜಮೀಂದಾರ್ ಮಗನ ಮದುವೆ ನಿಶ್ಚಯವಾಯಿತು. ಜಮೀಂದಾರ್ ಆಗಿರುವುದರಿಂದ ಎಲ್ಲರೂ ಭಾರಿ ಕಾಣಿಕೆಗಳನ್ನು ಕೊಡಬೇಕೆಂದು ನಿಶ್ಚಯಿಸಿಕೊಂಡರು. ಎಲ್ಲರಿಗೂ ಬಂದ ಹಾಗೆ ಪಾಪಯ್ಯನಿಗೂ ಆಹ್ವಾನ ಪತ್ರಿಕೆ ಬಂತು. ಅದನ್ನು ನೋಡುತ್ತಲೇ ಪಾಪಯ್ಯ ದಿಗಿಲಿನಿಂದ ಕುಗ್ಗಿ ಹೋದನು. ತಾನು ಕಾಣಿಕೆ ಕೊಡದೆ ಮದುವೆಗೆ ಹೋಗಬೇಕೆಂದು ಆಲೋಚಿಸಲು ಆರಂಭಿಸಿದನು. ಕಡೆಗೆ ಒಂದು ಗುಂಡಿಗೆ ಶತಾಬ್ಬಿ ಎಕ್ಸ್ಪ್ರೆಸ್ನಂತೆ ಜೋರಾಗಿ ಹೊಡೆದುಕೊಂಡಿತು. ಎಲ್ಲರೂ ಮದುವೆಗೆ ಹೋಗುತ್ತಾರೆ. ತಾನು ಹೋಗದಿದ್ದರೆ ಜಮಿಂದಾರರ ದೃಷ್ಟಿಯಲ್ಲಿ ತಾನು ಕೀಳಾಗಿ ಬಿಡುತ್ತೇನೆ. ತನ್ನ ಮೇಲಿನ…
ಸಾಮಾಜಿಕ ಕಾಳಜಿ ಹಾಗೂ ವೃತ್ತಿ ಬದ್ಧತೆಯ ಪತ್ರಕರ್ತರಾಗಿದ್ದ ದಿ. ಗುರುವಪ್ಪ ಬಾಳೆಪುಣಿ ಅವರು ತಮ್ಮ ಬರಹಗಳ ಮೂಲಕ ಸಾಮಾನ್ಯ ಸಾಧಕರು ಬದುಕು ಕಟ್ಟಿಕೊಂಡ ಬಗೆಯನ್ನು ಅನಾವರಣಗೊಳಿಸಿದ್ದಾರೆ ಎಂದು ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಡಾ| ಬಿ.ಎ. ವಿವೇಕ ರೈ ಹೇಳಿದರು. ಮಂಗಳೂರು ಪ್ರೆಸ್ಕ್ಲಬ್ನಲ್ಲಿ ಹಿರಿಯ ಪತ್ರಕರ್ತ ದಿ. ಗುರುವಪ್ಪ ಬಾಳೆಪುಣಿ ಅವರ ‘ದೊಡ್ಡವರು ಇವರು ಸನ್ಮಾನ್ಯರು’ ಕೃತಿ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ‘ವೈಯಕ್ತಿಕ ಬದುಕಿನಲ್ಲಿ ನೈತಿಕತೆ ಕಾಪಾಡಿಕೊಂಡಿದ್ದ ಬಾಳೆಪುಣಿ ತಾವು ಪತ್ರಿಕೆಯ ಮೂಲಕ ಪರಿಚಯಿಸಿದ ಸಾಮಾನ್ಯರಲ್ಲಿ ಸಾಮಾನ್ಯ ಸಾಧಕರ ಬಗ್ಗೆ ಪುಸ್ತಕವಾಗಿ ಪ್ರಕಟಿಸುವ ಪ್ರಯತ್ನ ನಡೆಸಿದ್ದರು. ಈಗ ಅವರ ಅಗಲಿಕೆಯ ಬಳಿಕ ಈ ಪುಸ್ತಕ ಬಿಡುಗಡೆಯಾಗುತ್ತಿರುವುದು ನೋವಿನ ಸಂಗತಿ’ ಎಂದರು. ಕೃತಿಯ ಕುರಿತು ಮಾತನಾಡಿದ ಹೊಸದಿಗಂತ ಪತ್ರಿಕೆಯ ಸಿಇಒ ಪಿ.ಎಸ್. ಪ್ರಕಾಶ್ ‘ಹತ್ತು ಮಂದಿ ಸಾಧಕರ ಬಗ್ಗೆ ಬರೆದಿರುವ ಬಾಳೆಪುಣಿ ಅವರ ಸಾಧನೆಯ ಜತೆಗೆ ಜೀವನದ ಮಜಲುಗಳನ್ನು ತೆರೆದಿಟ್ಟಿದ್ದಾರೆ. ಇಂದಿಗೂ ನಮ್ಮ ಸುತ್ತಮುತ್ತಲಿನ ಸಮಾಜದ ಪರಿಸ್ಥಿತಿ…
ಮೂಡುಬಿದಿರೆ: ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್ ಕಾಲೇಜಿನ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ ವಿಭಾಗದ ವತಿಯಿಂದ `ಇನ್ಸ್ಪೀರಿಯಾ – 2025′ ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು. ವಿದ್ಯಾಗಿರಿಯ ಕುವೆಂಪು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಪಾನ್ ಮೂಲದ ಸಕ್ರಾ ವರ್ಲ್ಡ್ ಹಾಸ್ಪಿಟಲ್ನ ವ್ಯವಸ್ಥಾಪಕ ನಿರ್ದೇಶಕ ಡಾ. ಯುಚಿ ನಗಾನೊ ಮುಖ್ಯ ಅತಿಥಿಯಾಗಿ ಮಾತನಾಡಿ, ಕೃತಕ ಬುದ್ಧಿಮತ್ತೆ ಹಾಗೂ ಇನ್ನಿತರ ತಂತ್ರಜ್ಞಾನಗಳ ಪ್ರಗತಿಯೊಂದಿಗೆ ಆರೋಗ್ಯ ನಿರ್ವಹಣಾ ಕ್ಷೇತ್ರವು ಬಹಳಷ್ಟು ಮುಂದುವರಿದಿದೆ. ವೈದ್ಯಕೀಯ ಕ್ಷೇತ್ರವು ಸೋಂಕುಗಳನ್ನು ತಡೆಗಟ್ಟಿ ರೋಗಿಯ ಚೇತರಿಕೆಗೆ ಗಮನ ನೀಡುವುದರೊಂದಿಗೆ ಆಸ್ಪತ್ರೆಗಳು ಮನೆಯ ವಾತಾವರಣವನ್ನು ಕಲ್ಪಿಸಿಕೊಡುವಂತಿರಬೇಕು. ಆಸ್ಪತ್ರೆ ನಿರ್ವಹಣೆಯ ಕುರಿತು ಸೂಕ್ಷ್ಮದೃಷ್ಟಿ ಬೆಳೆಸಿಕೊಳ್ಳಲು ನಮ್ಮಲ್ಲಿರುವ ಜ್ಞಾನ, ಕನಸುಗಳು ಹಾಗೂ ಆಶಯಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕು ಎಂದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಹೆಚ್ಚಿನ ಆಸ್ಪತ್ರೆಗಳನ್ನು ಕಾರ್ಪೋರೇಟ್ ಸಂಸ್ಥೆಗಳು ನಿರ್ವಹಿಸುವುದರಿಂದ ಜನಸಾಮಾನ್ಯರಿಗೆ ವ್ಯವಸ್ಥೆಗಳು ಬಳಸಿಕೊಳ್ಳಲು ಅನುಕೂಲಕರವಾಗಿಲ್ಲ.ಆಸ್ಪತ್ರೆಯ ನಿರ್ವಾಹಕರು ರೋಗಿಗಳ ಮೇಲೆ ಸಹಾನುಭೂತಿಯ ಮನೋಭಾವ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಹಸಿವು ಹೆಚ್ಚಾಗಬೇಕು…
ಬೆರ್ಮೆರೆ ಬಳಿ ಅಥವಾ ಬೆರ್ಮತಿ ಬನ್ನಾಯ ಬಳಿಯ ಬಂಟ ಮನೆತನದ ಪ್ರಸಿದ್ಧ ಮನೆ ಯೆಣ್ಮಕಜೆ. ಕಾಸರಗೋಡಿನಲ್ಲಿ ಬೆರಳೆಣಿಕೆಯಷ್ಟು ಗುತ್ತು ಮನೆತನಗಳ ಹೆಸರುಗಳು ಇಂದು ಪಂಚಾಯತುಗಳಾಗಿ ಗುರುತಿಸಲ್ಪಟ್ಟಿವೆ. ಉದಾಹರಣೆಗೆ ಹೇಳುವುದಾದರೆ ಇಚ್ಲಂಪಾಡಿ, ಕುಂಬ್ಡಾಜೆ, ಪುತ್ತಿಗೆ, ಬಂದಡ್ಕ, ಯೆಣ್ಮಕಜೆ ಮುಂತಾದವುಗಳು. ಈ ಎಲ್ಲಾ ಮನೆತನಗಳಿಗೆ ಪುರಾತನ ಇತಿಹಾಸ ಮತ್ತು ವಿಶಿಷ್ಟವಾದ ಗುರುತಿಸುವಿಕೆ ಇತ್ತು ಎನ್ನುವುದಕ್ಕೆ ಚರಿತ್ರೆಯ ಪುಟಗಳಲ್ಲಿ ಹಲವಾರು ಪುರಾವೆಗಳು ಲಭ್ಯವಿದೆ. ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಕಾಸರಗೋಡು ಲೋಕಸಭಾ ವ್ಯಾಪ್ತಿಯಲ್ಲಿ ಯೆಣ್ಮಕಜೆ ಗ್ರಾಮ ಬರುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಊರಿನ ಪಟೇಲರ ಮನೆಯೂ ಆಗಿದ್ದ ಈ ಯೆಣ್ಮಕಜೆ ಊರಿನ ನ್ಯಾಯ ತೀರ್ಮಾನದ ಚಾವಡಿಯಾಗಿತ್ತು.ಚೌಗ್ರಾಮದೊಡೆಯ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಾಲಯದ ಆಡಳಿತದಲ್ಲಿ ಸುಮಾರು 15 ವರ್ಷ ನಿರಂತರವಾಗಿ ಯೆಣ್ಮಕಜೆ ಬೀರಣ್ಣ ಬಂಟರು ಮೊಕ್ತೇಸರರಾಗಿ ನಿಭಾಯಿಸಿದ್ದ ದಾಖಲೆಗಳು ಇವೆ. ಅಲ್ಲಿಯೂ ನ್ಯಾಯ ತೀರ್ಮಾನದ ಹೊಣೆಗಾರಿಕೆ ಅವರದ್ದಾಗಿತ್ತು. ಕುಂಬಳೆ ಸೀಮೆಯ ಪಟ್ಟದ ಪಡ್ಪಿರೆ ಇಚ್ಲಂಪಾಡಿಯ ಬೀಗರ ಮನೆಯಾದ ಯೆಣ್ಮಕಜೆ ತರವಾಡು ಸೀಮೆಗಳ ಮೇರೆ ಮೀರಿ ಗುರುತಿಸಿಕೊಂಡಿದ್ದ ಪ್ರತಿಷ್ಠಿತ ಬಂಟ ಮನೆತನವಾಗಿತ್ತು.…
ಬಂಟರ ಸಂಘ ಬೆಂಗಳೂರಿನ ವೈದ್ಯಕೀಯ ವಿಭಾಗದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ದಾನಿಗಳಾದ ಶ್ರೀ ಎನ್. ಎನ್. ಶೆಟ್ಟಿಯವರು ನೀಡಿದ ಮೊತ್ತ ಸೇರಿ ಒಟ್ಟು ಐವತ್ತೈದು ಸಾವಿರ ರೂ.ಗಳನ್ನು ಮೈಕ್ರೋ ಪ್ಲಾಸ್ಮಾದಂತಹ ಅತಿ ವಿರಳ ಕಾಯಿಲೆಯಿಂದ ಬಳಲುತ್ತಿದ್ದು, ಮಾರತಹಳ್ಳಿಯ ರೇನ್ಬೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರಕಾಶ್ ಶೆಟ್ಟಿ ಅವರ ಮಗಳಾದ ಪ್ರತೀಕ್ಷಾಳ ನೆರವಿಗೆ ಚೆಕ್ ಮೂಲಕ ಕಾರ್ಯಕಾರಿ ಸಮಿತಿ ಸದಸ್ಯರುಗಳು ಹಸ್ತಾಂತರ ಮಾಡಿ ಆಸ್ಪತ್ರೆಯ ಪ್ರಮುಖ ವೈದ್ಯರಾದ ಡಾ. ರಕ್ಷಯ್ ಶೆಟ್ಟಿ ಅವರನ್ನು ಸಂಪರ್ಕಿಸಿ ಸುಮಾರು ಹತ್ತು ಲಕ್ಷದಷ್ಟು ರಿಯಾಯಿತಿ ಪಡೆಯಲು ಪ್ರಯತ್ನಿಸಿದರು.ಕುಂದಾಪುರ ತಾಲೂಕಿನ ಉಲ್ಲೂರು ೭೪ ಗ್ರಾಮದ ಶ್ರೀಮತಿ ರಾಜೀವಿ ಶೆಟ್ಟಿ ಅವರು ದೀರ್ಘಕಾಲದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಪತಿಯನ್ನು ಕಳೆದುಕೊಂಡಿದ್ದಾರೆ. ತೀರಾ ಆರ್ಥಿಕ ತೊಂದರೆಯಲ್ಲಿದ್ದ ಅವರಿಗೆ ಬೆಂಗಳೂರು ಬಂಟರ ಸಂಘದ ವೈದ್ಯಕೀಯ ವಿಭಾಗ ಮತ್ತು ದಾನಿಗಳಿಂದ ಸಹಾಯ ಪಡೆದ ಸುಮಾರು ಮೂವತ್ತೆರಡು ಸಾವಿರ ರೂಪಾಯಿಗಳನ್ನು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಒಪ್ಪಿಗೆ ಮೇರೆಗೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ ಸುರೇಂದ್ರ…
ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ನೂತನ ಅಧ್ಯಕ್ಷರಾಗಿ ಎ.ಕೆ ಜಯರಾಂ ರೈ ಅವರು ನಿಯುಕ್ತಿಗೊಂಡಿದ್ದಾರೆ. ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಪೋಷಕರಾಗಿರುವ ಎ.ಕೆ ಜಯರಾಂ ರೈ ಅವರು ಪ್ರಗತಿಪರ ಕೃಷಿಕರಾಗಿದ್ದು, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ರಂಗದಲ್ಲಿದ್ದುಕೊಂಡು ಸಮಾಜಸೇವಕರಾಗಿ ಗುರುತಿಸಿಕೊಂಡಿದ್ದಾರೆ.