Author: admin

ಪೆರ್ಡೂರಿನಲ್ಲಿ 1991 ರಲ್ಲಿ ಅಸ್ತಿತ್ವಕ್ಕೆ ಬಂದ ಬಂಟರ ಸಂಘ ಪೆರ್ಡೂರು ಮಂಡಲದ ನೇತೃತ್ವದಲ್ಲಿ ಸಮಾಜಮುಖಿ ಚಿಂತಕ ಕೆ. ಶಾಂತಾರಾಮ ಸೂಡ ಅವರ ಮುಂದಾಳತ್ವದಲ್ಲಿ ಸಮಾಜ ಬಾಂಧವರು ಹಾಗೂ ದಾನಿಗಳ ನೆರವಿನೊಂದಿಗೆ ಪೆರ್ಡೂರಿನಲ್ಲಿ ಅತ್ಯಾಧುನಿಕ ಸೌಲಭ್ಯದ ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಸಮುದಾಯ ಭವನ ಜ. 14 ರಂದು ಲೋಕಾರ್ಪಣೆಗೊಳ್ಳಲಿದೆ. ಉಡುಪಿ – ಆಗುಂಬೆ ರಾ. ಹೆ. 169(ಎ) ಕ್ಕೆ ತಾಗಿಕೊಂಡು ಪೆರ್ಡೂರು ಸಮೀಪ ಜೋಗಿಬೆಟ್ಟಿನ 3.5 ಎಕರೆ ಪ್ರದೇಶದಲ್ಲಿ ಭವನ ನಿರ್ಮಾಣಗೊಂಡಿದೆ. ಉಡುಪಿ, ದ.ಕ. ಜಿಲ್ಲೆ ಮಾತ್ರವಲ್ಲದೇ ರಾಜ್ಯ ಹಾಗೂ ಹೊರ ರಾಜ್ಯದ ಜನರನ್ನು ಆಕರ್ಷಿಸುವಂತೆ ಸಮುದಾಯ ಭವನ ಸಿದ್ಧಗೊಂಡಿದ್ದು ಸಹಸ್ರ ಸಂಖ್ಯೆಯಲ್ಲಿ ಜನ ಸೇರುವ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಯೋಗ್ಯವಾಗಿದೆ. ಅತ್ಯಾಕರ್ಷಕ ಒಳಾಂಗಣ ವಿನ್ಯಾಸ, 900 ಕ್ಕೂ ಅಧಿಕ ಜನ ಕುಳಿತುಕೊಳ್ಳುವ ಹವಾನಿಯಂತ್ರಿತ ಸಭಾಂಗಣ, 600 ಕ್ಕೂ ಹೆಚ್ಚು ಜನ ಕುಳಿತುಕೊಳ್ಳಬಹುದಾದ ಊಟದ ಹವಾನಿಯಂತ್ರಿತ ಹಾಲ್, ವಿಶಾಲ ವೇದಿಕೆ, ಗ್ರೀನ್ ರೂಮ್, ಸಸ್ಯಾಹಾರ ಹಾಗೂ ಮಾಂಸಹಾರಕ್ಕೆ ಪ್ರತ್ಯೇಕ…

Read More

ಆವಿಷ್ಕಾರದ ಫಲಸಮುದಾಯಕ್ಕೆ ತಲುಪಲಿ: ಎಮಿಲಿ ಮೂಡುಬಿದಿರೆ:‘ಆವಿಷ್ಕಾರದ ಫಲ ಸಮುದಾಯಕ್ಕೆ ತಲುಪಿದಾಗ ಸಾರ್ಥಕ’ಎಂದು ಅಮೆರಿಕ ಫ್ಲಾರಿಡಾದ ಹೂಡಿಕೆ ಬ್ಯಾಂಕರ್ ಎಮಿಲಿ ಆಳ್ವ ಹೇಳಿದರು. ಭಾರತೀಯ ವಿಜ್ಞಾನ ಸಮಾಜ (ಇಂಡಿಯನ್ ಸೈನ್ಸ್ ಸೊಸೈಟಿ) ಸಹಯೋಗದಲ್ಲಿ ಆಳ್ವಾಸ್ ಕೇಂದ್ರೀಯ ಶಾಲೆ (ಸಿಬಿಎಸ್‍ಸಿ)ಯಲ್ಲಿ ಶನಿವಾರ ನಡೆದ ‘ಭಾರತೀಯ ವಿಜ್ಞಾನ ಮತ್ತು ಎಂಜಿನಿಯರಿಂಗ್ ಮೇಳ (ಇನ್‍ಸೆಫ್)’ದ ಪ್ರಾದೇಶಿಕ ಮೇಳ ಮತ್ತು ವಿಜ್ಞಾನ ವಿಸ್ತರಣಾ ಕಾರ್ಯಕ್ರಮ’ದಲ್ಲಿ ಪ್ರಶಸ್ತಿಗಳನ್ನು ವಿತರಿಸಿ ಅವರು ಮಾತನಾಡಿದರು. ‘ಕುತೂಹಲ ಹಾಗೂ ಸೃಜನಶೀಲತೆಯು ವಿಜ್ಞಾನದ ಮಡಕೆಯಲ್ಲಿ ಇರುತ್ತವೆ. ಸಮುದಾಯದಲ್ಲಿ ಅವಶ್ಯಕತೆ ಇರುವ ಜನರಿಗೆ ಅದನ್ನು ಉಣಬಡಿಸಿದಾಗ ಸಾರ್ಥಕವಾಗುತ್ತದೆ’ ಎಂದರು. ‘ಸಂಶೋಧನೆಗಳು ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಬೇಕು. ವಿಜ್ಞಾನವು ಬದುಕಿನಲ್ಲಿ ಬದಲಾವಣೆತರಬೇಕು. ಪರಿವರ್ತನೆಗೆ ಕಾರಣವಾಗಬೇಕು. ನಿಮ್ಮೆಲ್ಲರಲ್ಲಿ ಅಂತಹ ಆತ್ಮವಿಶ್ವಾಸ ಇದೆ. ಅದು ಫಲಪ್ರದಗೊಳ್ಳಲಿ’ ಎಂದು ಹಾರೈಸಿದರು. ಆಳ್ವಾಸ್ ಶಿಕ್ಷಣ ಪ್ರತಿμÁ್ಠನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ‘ಸ್ಪರ್ಧೆಯಲ್ಲಿ ಎಲ್ಲರೂ ಗೆದ್ದವರು. ಪ್ರಶಸ್ತಿ ಬಾರದೇ ಇದ್ದರೂ, ನಿಮ್ಮ ಸದುದ್ದೇಶ, ಪ್ರಯತ್ನ ಒಳಿತು ಮಾಡುತ್ತದೆ. ಸೋಲು ಜೀವನ ಕಲಿಸುತ್ತದೆ. ಬದುಕಿಗೆ ಬಲ…

Read More

ದಿನಾಂಕ 02-10-2023 ಗಾಂಧಿ ಜಯಂತಿ ಪ್ರಯುಕ್ತ ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದ ಶೇರ್-ಇ-ಕಾಶ್ಮೀರ್‌ ಇಂಟರ್‌ನ್ಯಾಷನಲ್‌ ಕಾನ್ಫರೆನ್ಸ್‌ ಸೆಂಟರ್‌ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಷನ್‌ ದೆಹಲಿ ಘಟಕ, ಸುಳ್ಯದ ಬೆಳ್ಳಾರೆಯ ನಿನಾದ ಸಾಂಸ್ಕೃತಿಕ ಕೇಂದ್ರ ಮತ್ತು ಜಮ್ಮು-ಕಾಶ್ಮೀರ ಸರ್ಕಾರದ ಕಲೆ, ಸಂಸ್ಕೃತಿ ಮತ್ತು ಭಾಷಾ ಇಲಾಖೆ ಆಯೋಜಿಸಿದ್ದ ಹಿಂದಿ ಯಕ್ಷಗಾನ ಮತ್ತು ಪಜ್ಜೆ-ಗೆಜ್ಜೆ ತುಳು-ಕನ್ನಡ ಶಾಸ್ತ್ರೀಯ, ಜಾನಪದ ನೃತ್ಯ ಪ್ರಕಾರ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರು ಮಾತನಾಡಿ “ಮಹಾಭಾರತ ಯುದ್ಧಕ್ಕೆ ಮುನ್ನ ಯಕ್ಷನು ಯುಧಿಷ್ಠಿರನ ಬಳಿ ಜಗತ್ತಿನಲ್ಲಿ ನಿನಗೆ ಅತ್ಯಂತ ಅಚ್ಚರಿಯ ವಿಷಯ ಯಾವುದು ಎಂಬ ಪ್ರಶ್ನೆ ಕೇಳುತ್ತಾನೆ. ಅದಕ್ಕೆ ಯುಧಿಷ್ಠಿರ, ಜಗತ್ತಿನಲ್ಲಿ ಇಷ್ಟೊಂದು ಸಾವು-ನೋವುಗಳಾಗುತ್ತಿದ್ದರೂ ಬದುಕಿನ ಬಗ್ಗೆ ಜನರಿಗೆ ಏಕಿಷ್ಟು ಆಸಕ್ತಿ ಎನ್ನುವುದೇ ಅಚ್ಚರಿ ಎಂದು ಉತ್ತರಿಸಿದ್ದ. ಯಕ್ಷನು ಈಗ ಜಮ್ಮು-ಕಾಶ್ಮೀರಕ್ಕೆ ಬಂದು ನನ್ನಲ್ಲಿ, ನಿನಗೆ ಮಹದಚ್ಚರಿಯ ವಿಷಯ ಯಾವುದು ಎಂದು ಕೇಳಿದರೆ, ಇಷ್ಟು ಮಂದಿ ಕರ್ನಾಟಕದಿಂದ ಬಂದು ಶ್ರೀನಗರದಲ್ಲಿ ವೈಭವಯುತವಾಗಿ…

Read More

ಗುರುಪುರ ಬಂಟರ ಮಾತೃ ಸಂಘದ ಯುವ ವಿಭಾಗದ ವತಿಯಿಂದ ಜರಗಿದ ಗಂಜಿಮಠದ ರಾಜ್‍ಅಕಾಡೆಮಿ ಶಾಲಾ ಮೈದಾನದಲ್ಲಿ ನಡೆದ ಬಂಟ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಕ್ರೀಡಾ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ ಡಾ| ಎ. ಸದಾನಂದ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.ಸನ್ಮಾನ ಸ್ವೀಕರಿಸಿ, ಮಾತನಾಡಿದ ಅವರು ಗುರುಪುರ ಬಂಟರ ಮಾತೃ ಸಂಘದ ಸಂಘಟನೆ ಕಾರ್ಯಗಳು ನಿಜವಾಗಿಯೂ ಮೆಚ್ಚುವಂಥದ್ದು. ಕ್ರೀಡೆಯಲ್ಲಿ ವಿಜಯಿಯಾದವರು ಸೋತವರನ್ನು ಅಭಿನಂದಿಸಿದರೆ ಅವರ ಹೃದಯ ವೈಶಾಲ್ಯತೆಯನ್ನು ತೋರಿಸುತ್ತದೆ. ನಾನು ಒಬ್ಬ ಕ್ರೀಡಾಪಟುವಾಗಿರುವುದರಿಂದ ಈ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ಸಂತೋಷವಾಗಿದೆ. ಬಂಟರು ಒಟ್ಟಾಗಿ ಸಮಾಜದ ಏಳಿಗೆಗೆ ದುಡಿಯೋಣ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಾಕ್ಟರೇಟ್ ಪದವಿ ಪಡೆದ ರಿತೇಶ್ ಪಕ್ಕಳ ಪೆರ್ಮಂಕಿಗುತ್ತು, ಕಲಾಕ್ಷೇತ್ರದಲ್ಲಿ ಸಾಧನೆಗೈದ ಶ್ರೀದರ್ ಶೆಟ್ಟಿ ತೆಕ್ಕಿಬೆಟ್ಟು, ಕ್ರೀಡಾಕ್ಷೇತ್ರದಲ್ಲಿ ಅನುಷ್ ನಾಯ್ಕ್, ಶಿಕ್ಷಣ ಕ್ಷೇತ್ರದಲ್ಲಿ ನಿಷ್ಕರ್ಷ್ ಚೌಟ ಅವರನ್ನು ಸನ್ಮಾನಿಸಲಾಯಿತು. ಅನಾರೋಗ್ಯದಿಂದ ಬಳಲುತ್ತಿರುವ ಬಡಕುಟುಂಬದ ಕವಿರಾಜ್ ಶೆಟ್ಟಿಯವರಿಗೆ ಸಂಘದ ವತಿಯಿಂದ ಸಹಾಯಧನ ನೀಡಲಾಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬೆಳಿಗ್ಗೆ ನಡೆದ…

Read More

‘ಹೆಣ್ಣು-ಗಂಡು ಜೈವಿಕ ಸತ್ಯ: ಮೇಲು-ಕೀಳಲ್ಲ’ ವಿದ್ಯಾಗಿರಿ: ‘ಹೆಣ್ಣು ಮತ್ತು ಗಂಡು ಎಂಬುದು ಜೈವಿಕ ಸತ್ಯವೇ ಹೊರತು ಮೇಲು-ಕೀಳಲ್ಲ. ಗಂಡಿನೊಳಗೊಂದು ಹೆಣ್ಣು ಹಾಗೂ ಹೆಣ್ಣಿನೊಳಗೊಂದು ಗಂಡು ಮನಸ್ಸು ಇದ್ದಾಗ ಮಾತ್ರ ಸಮಗ್ರ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ’ಎಂದು ಶಿವಮೊಗ್ಗದ ಸಹ್ಯಾದ್ರಿ ಪದವಿ ಪೂರ್ವಕಾಲೇಜು ಪ್ರಾಧ್ಯಾಪಕಿ ಡಾ. ಶುಭಾ ಮರವಂತೆ ಹೇಳಿದರು. ಆಳ್ವಾಸ್ ಪದವಿ ಪೂರ್ವಕಾಲೇಜಿನ ಆಂತರಿಕ ಸಮಿತಿ ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮಹಿಳಾ ದೌರ್ಜನ್ಯ ತಡೆ ಅರಿವು ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು. ನಾವೆಲ್ಲ ಪರಸ್ಪರ ಅರಿತಾಗ ಸಮಸ್ಯೆ ಇತ್ಯರ್ಥವಾಗುತ್ತದೆ. ಗಂಡು ಹೆಣ್ಣನ್ನು ಹಾಗೂ ಹೆಣ್ಣು ಗಂಡನ್ನು ಅರಿತಿರಬೇಕು. ವಿದ್ಯಾರ್ಥಿಗಳು ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು. ಅಕ್ರಮ, ದೌರ್ಜನ್ಯವನ್ನು ನಿರ್ದಾಕ್ಷಿಣ್ಯವಾಗಿ ಖಂಡಿಸಬೇಕು ಎಂದರು. ‘ಹಣ್ಣು ಹಣ್ಣು ಮುದುಕಿ ಬಾಲ್ಯದಲ್ಲೇ ಸತ್ತು ಹೋದಳು’ ಎನ್ನುವ ಕತೆಯಂತೆ ಹೆಣ್ಣಿನ ಬದುಕಾಗಿದೆ. ಆಕೆಯ ಬಾಲ್ಯ, ಯೌವ್ವನವನ್ನು ಸಮಾಜ ಕಿತ್ತುಕೊಳ್ಳುತ್ತಿದೆ. ಅದನ್ನು ಮೀರಿ ಮುನ್ನಡೆಯಬೇಕು. ಸಾಧನೆ ಮಾಡಬೇಕು. ಮಡಿವಂತಿಕೆ ಬೇಡ’ ಎಂದು ಹೆಣ್ಣು ಮಕ್ಕಳನ್ನು ಅವರು ಹುರಿದುಂಬಿಸಿದರು. ‘ಗಂಡು ಆಕಾಶ ತತ್ವ…

Read More

ಗುರುಪುರ : ಸೇವಾ ಬ್ರಿಗೇಡ್(ರಿ) ಗುರುಪುರ ಇದರ ವತಿಯಿಂದ ಭಾನುವಾರ(ಆ. 14) ಗುರುಪುರ ಶ್ರೀ ವೈದ್ಯನಾಥ ದೈವಸ್ಥಾನದ ಎದುರಿನ ಬಂಡಿ ಗದ್ದೆಯಲ್ಲಿ ಆಯೋಜಿಸಲಾದ `ಆಟಿದ್ ಕೆಸರ್‍ಡೊಂಜಿ ದಿನ’ ಕಾರ್ಯಕ್ರಮವನ್ನು ಶ್ರೀ ವೈದ್ಯನಾಥ ಪಾತ್ರಿ ಚಂದ್ರಹಾಸ ಪೂಜಾರಿ ಕೌಡೂರು ಅವರು ತುಳುನಾಡಿನ ಸಂಪ್ರದಾಯದಂತೆ ಕಳಸೆಯ ಮೇಲಿಟ್ಟ ತೆಂಗಿನ ಗೊನೆ ಅರಳಿಸಿ, ದೀಪ ಬೆಳಗಿಸುವ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿದರು. ಚಂದ್ರಹಾಸ ಕೌಡೂರು ಮಾತನಾಡಿ, ಊರಿನ ದೈವಸ್ಥಾನದ ಗದ್ದೆಯಲ್ಲಿ ಆಟಿಡ್ ಕೆಸರ್‍ಡೊಂಜಿ ದಿನ ಕಾರ್ಯಕ್ರಮ ನಡೆಯುತ್ತಿರುವುದು ಎಲ್ಲರಿಗೂ ಖುಷಿಯ ವಿಷಯ. ಸ್ಪರ್ಧೆಯಲ್ಲಿ ಸೋಲು-ಗೆಲುವು ಸಾಮಾನ್ಯವಾಗಿದ್ದರೂ, ಸ್ಪರ್ಧಾಳುಗಳು ಅದನ್ನು ಸಮಾನವಾಗಿ ಅನುಭವಿಸುತ್ತ ತುಳುನಾಡಿನ ಹಿರಿತನ ಮೆರೆಯಬೇಕು ಎಂದರು. ದೈವಸ್ಥಾನದ ಧೂಮಾವತಿ ಪಾತ್ರಿ ತನಿಯಪ್ಪ ಪೂಜಾರಿ, ವಿಲಾಸ್ ಶೆಟ್ಟಿ ಮರಂಕರಿಯ, ರವೀಂದ್ರ ಶೆಟ್ಟಿ ಬೆಳ್ಳೂರುಗುತ್ತು, ಚಂದ್ರಹಾಸ ಕಾವ, ಉಮೇಶ್ ಶೆಟ್ಟಿ, ಕೃಷ್ಣ ಸಾಲ್ಯಾನ್, ಸತೀಶ್ ಕಾವ, ವಿನಯ್ ಸುವರ್ಣ, ಜಗದೀಶ್ ಶೆಟ್ಟಿ ಕಾರಮೊಗರು, ಬ್ರಿಗೇಡ್‍ನ ಗೌರವಾಧ್ಯಕ್ಷರಾದ ಪುರಂದರ ಮಲ್ಲಿ ಹಾಗೂ ರಮಾನಂದ ಶೆಟ್ಟಿ, ಅಧ್ಯಕ್ಷ ಶ್ಯಾಮ ಆಚಾರ್ಯ, ಕಾರ್ಯದರ್ಶಿ…

Read More

ಮೂಡುಬಿದಿರೆ: ಬ್ರಹ್ಮಾವರದ ಎಸ್.ಎಂ.ಎಸ್ ಕಾಲೇಜು ಹಾಗೂ ಮಂಗಳೂರು ವಿಶ್ವ ವಿದ್ಯಾಲಯದ ಜಂಟಿ ಆಶ್ರಯದಲ್ಲಿ ಜರುಗಿದ ಮಂಗಳೂರು ವಿ.ವಿ ಅಂತರ್ ಕಾಲೇಜು ಬಾಡಿ ಬಿಲ್ಡಿಂಗ್ ಚಾಂಪಿಯನ್ ಶಿಪ್‍ನಲ್ಲಿ ಆಳ್ವಾಸ್ ಕಾಲೇಜು ಸಮಗ್ರ ತಂಡ ಪ್ರಶಸ್ತಿಯನ್ನು ಪಡೆಯಿತು. ಆಳ್ವಾಸ್ ಕಾಲೇಜಿನ ಕಿಶಾನ್ ಶೆಟ್ಟಿ ಮಿಸ್ಟರ್. ಯೂನಿವರ್ಸಿಟಿ ಪಟ್ಟವನ್ನು ಪಡೆದುಕೊಂಡರು. ಎಂಟು ವಿವಿಧ ದೇಹತೂಕ ವಿಭಾಗಗಳಲ್ಲಿ ಜರುಗಿದ ಈ ಸ್ಪರ್ಧಾ ಕೂಟದಲ್ಲಿ, ಆಳ್ವಾಸ್ ಕಾಲೇಜು ಒಟ್ಟು 3 ಚಿನ್ನ 3 ಬೆಳ್ಳಿ ಮತ್ತು ಒಂದು ಕಂಚಿನ ಪದಕವನ್ನು ಪಡೆದುಕೊಂಡಿದೆ. 10 ಕೆ.ಜಿ ದೇಹತೂಕ ವಿಭಾಗದಲ್ಲಿ ಧನಂಜಯ, 90 ಕೆ.ಜಿಯಲ್ಲಿ ಕಿಶನ್ ಶೆಟ್ಟಿ, 90+ ಕೆ.ಜಿಯಲ್ಲಿ ಕಿಶೋರ್ ಕುಮಾರ್ ಚಿನ್ನದ ಪದಕ ಪಡೆದುಕೊಂಡರೆ, 75 ಕೆ.ಜಿಯಲ್ಲಿ ಅರುಣ್.ಟಿ, 85 ಕೆ.ಜಿಯಲ್ಲಿ ಸುಲೈಮಾನ್, 90 ಕೆ.ಜಿಯಲ್ಲಿ ದರ್ಶನ್ ಬೆಳ್ಳಿಯ ಪದಕ ಪಡೆದರೆ, 65 ಕೆ.ಜಿ ವಿಭಾಗದಲ್ಲಿ ಗುಡ್ಡಪ್ಪ ಕಂಚಿನ ಪದಕವನ್ನು ಪಡೆದುಕೊಂಡರು. ಕಳೆದ 12 ವರ್ಷಗಳಿಂದ ಸಮಗ್ರ ಪ್ರಶಸ್ತಿಯನ್ನು ಪಡೆಯುತ್ತಾ ಬಂದಿರುವ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ…

Read More

ಕರ್ನಾಟಕ ಸಂಘ ಶಾರ್ಜಾದ ಆಶ್ರಯದಲ್ಲಿ 2023 ನವೆಂಬರ್ 18 ರಂದು ಶಾರ್ಜಾ ಈವಾನ್ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವ, 21ನೇ ವಾರ್ಷಿಕೋತ್ಸವ ಮತ್ತು ಮಯೂರ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ನಡೆಯಿತು. ಕಾರಯಕಾರಿ ಸಮಿತಿಯ ಸರ್ವ ಸದಸ್ಯರು ಕನ್ನಡ ಧ್ವಜಾರೋಹಣ, ಜ್ಯೋತಿ ಬೆಳಗಿಸಿ, ಸ್ವಾಗತದೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಯು.ಎ.ಇ.ಯ ವಿವಿಧ ತಂಡಗಳಾದ ಸಿಂಫೋನಿ ಮ್ಯೂಸಿಕ್ ಸ್ಕೂಲ್, ಬಿಲ್ಲವಾಸ್ ಫ್ಯಾಮಿಲಿ, ರಸ್ ಅಲ್ ಕೈಮಾ ಕರ್ನಾಟಕ ಸಂಘ, ನೃತ್ಯ ಕಣ್ಮಣಿಗಳು, ರಮಣ ಲಾಸ್ಯ, ಪದ್ಮಶಾಲಿ ಸಮುದಾಯ, ಸ್ಮೈಲ್ ಕ್ರಿಯೇಶನ್ಸ್, ಗೋಲ್ಡಲ್ ಸ್ಟಾರ್ ಮ್ಯೂಸಿಕ್ ಶಾರ್ಜಾ, ಇವರುಗಳಿಂದ ಆಕರ್ಷಕ ಜಾನಪದ ನೃತ್ಯ, ಮಂಗಳೂರಿನಿಂದ ಆಗಮಿಸಿದ ಗಾಯಕ ಶ್ರೀ ಮಹ್ಮದ್ ಇಕ್ಬಾಲ್ ಮತ್ತು ಶ್ರೀ ಹರೀಶ್ ಶೇರಿಗಾರ್ ಮತ್ತು ಸನ್ನಿಧಿ ವಿಶ್ವನಾಥ್ ರ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಶಾರ್ಜಾ ಕರ್ನಾಟಕ ಸಂಘದ ದ್ವೀದಶಮಾನೋತವದ ಸವಿ ನೆನೆಪಿಗಾಗಿ ಗಣೇಶ್ ರೈ ಪ್ರಧಾನ ಸಂಪಾದಕತ್ವದಲ್ಲಿ, ಸ್ಮರ ಸಂಚಿಕೆ ಸಮಿತಿಯ ಆಶ್ರಯದಲ್ಲಿ ಮುದ್ರಣವಾಗಿದ್ದ…

Read More

ಬಂಟ್ಸ್ ಫೋರಮ್ ಮೀರಾ ಭಾಯಂದರ್ ವತಿಯಿಂದ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಇತ್ತೀಚಿಗೆ ಬಹು ವಿಜೃಂಭಣೆಯಿಂದ ನಡೆದಿವೆ. ಇದರ ಯಶಸ್ಸಿಗೆ ಶ್ರಮಿಸಿದ ಸರ್ವ ಸದಸ್ಯರು ಹಾಗೂ ಮುಂದಾಳತ್ವ ವಹಿಸಿದ್ದ ಅಧ್ಯಕ್ಷರಾದ ಇನ್ನಾ ಚಂದ್ರಹಾಸ ಕೆ. ಶೆಟ್ಟಿ ಮತ್ತು ಪದಾಧಿಕಾರಿಗಳಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಸಂಸ್ಥೆಯ ಪ್ರಗತಿಗೆ ಸದಸ್ಯರ ಒಮ್ಮತದ ಸಹಕಾರ ಅಗತ್ಯ. ಸಂಸ್ಥೆಯ ಉನ್ನತಿಗೆ ಸಹಕಾರವನ್ನು ನೀಡಿದ ಅಧ್ಯಕ್ಷರನ್ನು ಇಂದು ಸದಸ್ಯರ ಸಮ್ಮುಖದಲ್ಲಿ ಸನ್ಮಾನಿಸುವ ಕಾರ್ಯಕ್ರಮವೊಂದನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಂಟ್ಸ್ ಫೋರಮಿನ ಗೌರವಾಧ್ಯಕ್ಷ ಸಂತೋಷ್ ರೈ ಬೆಳ್ಳಿಪಾಡಿ ಹೇಳಿದರು. ಅವರು ಜು.1 ರಂದು ಸಂಸ್ಥೆಯು ಮೀರಾರೋಡ್ ರೈಲ್ವೆ ಸ್ಟೇಶನ್ ಬದಿಯಲ್ಲಿರುವ ಸುರಭಿ ಹೋಟೇಲಿನ ಸಭಾಗೃಹದಲ್ಲಿ ಆಯೋಜಿಸಿದ್ದ ಕೌಟಂಬಿಕ ಸ್ನೇಹಕೂಟ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿದರು. ಸನ್ಮಾನ ಸ್ವೀಕರಿಸಿದ ಅಧ್ಯಕ್ಷ ಚಂದ್ರಹಾಸ ಶೆಟ್ಟಿಯವರು ಮಾತನಾಡುತ್ತಾ ಅಧ್ಯಕ್ಷನಾಗಿ ನನ್ನ ಕರ್ತವ್ಯವನ್ನು ಸರ್ವರ ಸಹಕಾರದಿಂದ ನಿಭಾಯಿಸಿದ್ದೇನೆಂಬ ಸಂತೃಪ್ತಿ ಇದೆ. ಎಲ್ಲಾದರೂ ಅಪ್ಪಿತಪ್ಪಿ ತಿಳಿಯದೆ ತಪ್ಪಾಗಿದ್ದರೆ ಕ್ಷಮಿಸಿ ಮುಂದಿಗೂ ತಮ್ಮ ಸಹಕಾರವಿರಲಿ ಎಂದು ಹೇಳಿದರು. ಆರಂಭದಲ್ಲಿ ಮಹಿಳಾ ವಿಭಾಗದ…

Read More

ಪ್ರಸಂಗ ಮುಹೂರ್ತ ಪೂಜೆ, ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಕನ್ನಡ ಸಂಘ ಬಹರೈನ್ ಸಭಾಂಗಣದಲ್ಲಿ ನೆರವೇರಿತು. ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮ ‌ಕೆ.ಭಂಡಾರಿ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭಕೋರಿದರು. ಅರ್ಚಕರಾದ ಶ್ರೀಕೃಷ್ಣ ಅಡಿಗ ಕದ್ರಿ, ಶ್ರೀ ಸತ್ಯ ಶಂಕರ ಬರೆ ಆಶೀರ್ವಚನ ನೀಡಿದರು. ಪಟ್ಲ ಸಂಭ್ರಮ 2023 ಮುಂಬರುವ ಅಕ್ಟೋಬರ್ 20 ಕ್ಕೆ ಅದ್ದೂರಿಯಾಗಿ ಸ್ಥಳೀಯ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಜರುಗಲಿದೆ. ಈ ವರ್ಷದ ಯಕ್ಷಗಾನ ಅಭ್ಯಾಸಕ್ಕೆ ಪ್ರಸಂಗ ಮುಹೂರ್ತವು ನೆರವೇರಿತು‌. ಬಹರೈನ್ ಸೌದಿಯ ಯಕ್ಷಗಾನ ಕಲಾವಿದರು, ಅತಿಥಿಕಲಾವಿದರನ್ನೊಳಗೊಂಡು ಅಭಿನವ ವಾಲ್ಮೀಕಿ ಶ್ರೀ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ವಿರಚಿತ ಮಾನಿಷಾದ ಯಕ್ಷಗಾನ ನಾಟ್ಯಗುರು ಶ್ರೀ ದೀಪಕ್ ರಾವ್ ಪೇಜಾವರ ನಿರ್ದೇಶನದಲ್ಲಿ ಪ್ರದರ್ಶನ ಕಾಣಲಿದೆ. ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿಯವರ ಸಿರಿಕಂಠದ ಭಾಗವತಿಕೆಯೊಂದಿಗೆ ತಾಯ್ನಾಡ ತೆಂಕುಬಡಗಿನ ಸುಪ್ರಸಿದ್ಧ ಕಲಾವಿದ ಶಶಿಕಾಂತ ಶೆಟ್ಟಿ ಕಾರ್ಕಳ , ಖ್ಯಾತ ಹಿರಿಯ ಕಲಾವಿದ ಶೇಖರ್ ಡಿ‌.ಶೆಟ್ಟಿಗಾರ್ ದುಬೈ, ಹಿಮ್ಮೇಳವಾದಕ ರೋಹಿತ್ ಉಚ್ಚಿಲ ಅತಿಥಿ ಕಲಾವಿದರಾಗಿ…

Read More