Author: admin

ಸಾಗರ ಬಂಟರ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ಉದ್ಯಮಿ, ದಾನಿ ಹಾಗೂ ಸಮಾಜ ಸೇವಕ ಎಂ.ಆರ್. ಜಿ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಶ್ರೀಯುತ “ಬಂಜಾರ ಗೋಲ್ಡ್ ಪಿಂಚ್ ಕೊರಂಗ್ರಪಾಡಿ ಪ್ರಕಾಶ್ ಕೆ ಶೆಟ್ಟಿ” ಅವರು 25 ಲಕ್ಷ ರೂಪಾಯಿ ದೇಣಿಗೆ ನೀಡಿದರು. ಮಾರ್ಗದರ್ಶಿಗಳಾದ ಶ್ರೀಯುತ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಹಾಗೂ ಸಮುದಾಯದ ಒಳಿತಿಗಾಗಿ ಶ್ರಮಿಸುತ್ತಿರುವ ಶ್ರೀಯುತ ಉಪೇಂದ್ರ ಶೆಟ್ಟಿ ಮತ್ತು ಭಾರತಿ ಶೆಟ್ಟಿ ಅವರ ಮುಖಾಂತರ ಶ್ರೀಯುತ ಪ್ರಕಾಶ್ ಶೆಟ್ಟಿ ಅವರನ್ನು ಅವರ ಕಚೇರಿಯಲ್ಲಿ ಸಾಗರ ಬಂಟರ ಸಂಘದ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಸಂಘದ ಎಲ್ಲಾ ಪದಾಧಿಕಾರಿಗಳೊಂದಿಗೆ ಭೇಟಿ ಮಾಡಿದರು. ಸಂಘದ ಎಲ್ಲಾ ಪದಾಧಿಕಾರಿಗಳೊಂದಿಗೆ ಆತ್ಮೀಯವಾಗಿ ಮಾತನಾಡಿದ ಪ್ರಕಾಶ್ ಶೆಟ್ಟಿ ಅವರಿಗೆ ಕಟ್ಟಡದ ಬಗ್ಗೆ ಮಾಹಿತಿಯನ್ನು ಅಧ್ಯಕ್ಷರು ನೀಡಿದರು. ನಂತರ ಪ್ರಕಾಶ್ ಶೆಟ್ಟಿ ಅವರು ಮಾತನಾಡುತ್ತಾ ನಮ್ಮ ದೇಶ ವಿದೇಶದಲ್ಲಿರುವ ಸಮಸ್ತ ಬಂಟರ ಕುಂದು ಕೊರತೆಗಳ ಬಗ್ಗೆ ಚರ್ಚಿಸುತ್ತಾ ಹಾಗೂ ಬಂಟರ ಸಮುದಾಯದ…

Read More

“ಇರೋದು ಒಂದೇ ಬದುಕು, ನಮ್‌ ಇಷ್ಟದಂಗೆ ನಾವ್‌ ಬಾಳ್ಬೇಕು, ಎಲ್ಲದ್ರಲ್ಲೂ ಎಲ್ಲದಕ್ಕೂ ಹೊಂದಾಣಿಕೆ ಮಾಡ್ಕೊಂಡ್‌ ಬಾಳಕಾಗಲ್ಲ. ಎಷ್ಟು ದಿನ ಇರ್ತಿವೋ ಗೊತ್ತಿಲ್ಲ! ಎಲ್ಲದಕ್ಕೂ ಅನುಸರಿಸಿಕೊಂಡು ಹೋಗು ಅನ್ನೋ ಮಾತನ್ನೇ ಓಬಿರಾಯನ ಕಾಲದಿಂದಲೂ ಕೇಳಿ-ಕೇಳಿ ಸಾಕಾಗಿದೆ. ನನಗೆ ಸ್ವತಂತ್ರ ಬೇಕು, ನನ್ನ ಬದುಕು ನನ್ನ ನಿರ್ಧಾರ ಅಷ್ಟೇ!’. ಇತ್ತೀಚಿನ ದಿನಗಳಲ್ಲಿ ತನ್ನದೇ ಬದುಕು ಕಟ್ಟಿಕೊಳ್ಳಲು ಹಂಬಲಿಸುವ ಮಕ್ಕಳು ಹೇಳುವ ಮಾತುಗಳಿವು. ಸ್ವ-ಇಚ್ಛೆಯ ಬದುಕಿನ ಹಂಬಲ ಅವರದು. ಆದರೆ ಹಿರಿಯರು ಹೇಳುವ ಕಿವಿಮಾತು, “ನೋಡಿ ಮಕ್ಕಳೇ ನೀವು ಬೆಳೆಯುತ್ತಿದ್ದೀರಿ, ಸ್ವಲ್ಪ ತಗ್ಗಿ ಬಗ್ಗಿ ನಡೆಯಬೇಕು, ಯಾರನ್ನೂ ಎದುರು ಹಾಕಿಕೊಳ್ಳಬಾರದು. ನೀವಂತೂ ನಿಮ್ಮದೇ ರೂಲ್ಸ್ ರೆಗ್ಯುಲೇಷನ್ಸ್ ಅಂತ ಫಾಲೋ ಮಾಡಿ, ಸುಮ್ನೆ ಇಲ್ಲ ಸಲ್ಲದ್ದರ ಬಗ್ಗೆ ದಾವಂತ ಪಡುತ್ತೀರಿ’ ಎನ್ನುವುದು ಸರ್ವೇಸಾಮಾನ್ಯ ವಿಷಯವಾಗಿ ಹೋಗಿದೆ. ಅದರಲ್ಲೂ ಮದುವೆಯಾಗಿ ಹೋಗುವ ಹೆಣ್ಣು ಮಕ್ಕಳ ಪಾಲಿಗೆ ಹೊಂದಾಣಿಕೆಯ ಮಹಾಮಂತ್ರವನ್ನು ಪಠಿಸಿಯೇ ಕಳಿಸುವುದು. ನಮಗೆಲ್ಲಾ ಗೊತ್ತಿರುವಂತೆ ಮನುಷ್ಯ ಸಂಘ ಜೀವಿ. ಎಲ್ಲರೊಂದಿಗೆ ಬೆರೆತು ಬಾಳಬೇಕಾದುದು ಬದುಕಿನ ನಿಯಮ. ಆದರೆ ಹೊಂದಿಕೊಂಡು…

Read More

ತಾಯಿ ವಾತ್ಸಲ್ಯದ , ತ್ಯಾಗದ  ವಿಶಿಷ್ಟ ಸಾಹಿತ್ಯವಿರುವ   ಹಾಡು  ”ಮತ್ತೇನಿಲ್ಲಾ”  ಇದೆ ತಿಂಗಳ  17 ರಂದು ಸಂಜೆ 7.30 ಕ್ಕೆ  ಐಲೇಸಾ  ಡಿಜಿಟಲ್  ವೇದಿಕೆಯಲ್ಲಿ  ಬಿಡುಗಡೆಯಾಗಲಿದೆ . ಮುಂಬೈ ರಂಗ  ಮತ್ತು ಧ್ವನಿ ಕಲಾವಿದ  ಸುರೇಂದ್ರ ಮಾರ್ನಾಡ್ ಅವರ ಸಾಹಿತ್ಯದ  ಈ ಹಾಡನ್ನು  ಪ್ರಸಿದ್ಧ ಗಾಯಕ  ರಾಮಚಂದ್ರ ಹಡಪದ ಸಂಗೀತ  ಸಂಯೋಜಿಸಿ  ತಾನೇ ಹಾಡಿದ್ದಾರೆ . ಬೆಂಗಳೂರಿನ  ಉದ್ಯಮಿ ಕಾರ್ಕಳ ರೆಂಜಾಳದ ವಲೆರಿಯನ್ ರಾಡ್ರಿಗಸ್  ಹಾಡನ್ನು ಪ್ರಾಯೋಜಿಸಿದ್ದು  ಐಲೇಸಾ  ದಿ  ವಾಯ್ಸ್ ಆಫ್  ಓಷನ್ (ರಿ) ಸಂಸ್ಥೆಯ  ಮೂಲಕ  ಸಂಗೀತ ಪ್ರಿಯರಿಗೆ  ಸಮರ್ಪಿಸಿದ್ದಾರೆ.   ಸಚ್ಚು ಮಾರ್ನಾಡ್  ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದು , ಛಾಯಾಗ್ರಹಣದಲ್ಲಿ ಸಂದೀಪ ಮೂಡಬಿದ್ರೆ ಅವರು ತಮ್ಮ ಕೈ ಚಳಕ ತೋರಿಸಿದ್ದಾರೆ  ಗೋಪಾಲ್ ಪಟ್ಟೆ  ಜಯಂತ್ ಐತಾಳ್ , ವಿನಾಯಕ್ ಮಲ್ಯ  ಸಂಕಲನದಲ್ಲಿ ಹಾಡು ಅದ್ಭುತವಾಗಿ ಮೂಡಿ ಬಂದಿದೆ. ಸಾಂಸಾರಿಕ ಜೀವನದಲ್ಲಿ ಹೆಣ್ತನದ ,ತಾಯ್ತನದ  ತ್ಯಾಗವನ್ನು ವಿಸ್ತರಿಸುತ್ತಾ ಹೋಗುವ ಈ ಹಾಡು  ತಾಯಿ ತನಗಾಗಿ  ಏನನ್ನೂ ಬಯಸದೆ  ಎಲ್ಲವನ್ನೂ ಮಕ್ಕಳ…

Read More

ಬಂಟರ ಯಾನೆ ನಾಡವರ ಮಾತೃ ಸಂಘ ಮತ್ತು ಸಿದ್ದಿ ವಿನಾಯಕ ಪ್ರತಿಷ್ಠಾನದ ಆಶ್ರಯದಲ್ಲಿ 17 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವು ಸೆಪ್ಟೆಂಬರ್ 19 ರಿಂದ 21 ರವರೆಗೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಸರ್ವ ಬಂಟ ಸಮಾಜದ ಸಹಕಾರದಲ್ಲಿ ಬಂಟ್ಸ್ ಹಾಸ್ಟೇಲ್ ನಲ್ಲಿ ಶ್ರದ್ದಾ ಭಕ್ತಿಯಿಂದ ನಡೆಯಲಿದೆ. ಗಣೇಶೋತ್ಸವ ಪ್ರಯುಕ್ತ ಪ್ರತಿಭಾನ್ವೇಷಣೆಯಲ್ಲಿ ವೈವಿಧ್ಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಇದರ ಪೂರ್ವಭಾವಿ ಸಭೆ ಬಂಟ್ಸ್ ಹಾಸ್ಟೇಲ್ ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ. ಶೆಟ್ಟಿ ವಹಿಸಿದ್ದರು. ಕೊರೋನದಿಂದ ಕಳೆದ ಮೂರು ವರ್ಷಗಳಿಂದ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲು ಸಾಧ್ಯವಾಗಿಲ್ಲ. ಈ ವರ್ಷ ನಾವು 17 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವವನ್ನು ಎಲ್ಲರನ್ನೂ ಸೇರಿಸಿ ಆಚರಿಸುತ್ತೀದ್ದೇವೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು. ಸಮುದಾಯದ ಎಲ್ಲರನ್ನೂ ಒಂದೇ ಸೂರಿನಡಿಯಲ್ಲಿ ಸೇರಿಸಲು ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಇದಕ್ಕೆ ಸಮಿತಿ, ಉಪ ಸಮಿತಿಗಳನ್ನು ರಚಿಸಿದ್ದೇವೆ.…

Read More

ಈ ಜಗತ್ತಿನ ಭರವಸೆಯು ಯುವಜನರ ಮೇಲಿದೆ. ದೇಶವೊಂದರ ಯುವಶಕ್ತಿ ಸರಿಯಾದ ಮಾರ್ಗದಲ್ಲಿ ಸಾಗಿದರೆ ಮಾತ್ರ ಆ ದೇಶ ಪ್ರಗತಿಯತ್ತ ಸಾಗಲು ಸಾಧ್ಯಎಂದು ನಂಬಿದ್ದ ವಿವೇಕಾನಂದರ ಮಾತು ನೆನಪಿಗೆ ಬರುತ್ತದೆ. ಈ ನಿಟ್ಟಿನಲ್ಲಿ ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ. ಎಂದು ಯುವ ಜನತೆಯನ್ನು ಬಡಿದೆಬ್ಬಿಸಿದ ಮಹಾನ್‌ ಚೇತನ ವಿಶ್ವಸಂತ ವಿವೇಕಾನಂದರು. ಆದರೆ ಪ್ರಸ್ತುತ ಈ ಮಾತು ಏಳಿ, ಎದ್ದೇಳಿ ಮೊಬೈಲ್‌ ಗೀಳಿನಲ್ಲಿ ಮುಳುಗಿದ ಯುವಜನತೆಯೇ ವ್ಯಸನಗಳ ತೊಟ್ಟಿಲಲ್ಲಿ ಮಲಗಿರುವ ಯುವ ಜನತೆಯೇ ಏಳಿ, ಎದ್ದೇಳಿ ಎಂದು ಸಾರುವಂತಾಗಿದೆ. ಯುವ ಜನತೆ ಸಾಮಾಜಿಕ ಜಾಲತಾಣದಲ್ಲಿ ತಮಗೆ ಎಷ್ಟು ಲೈಕ್‌ ಬಂದಿದೆ ಎಂದು ನೋಡುತ್ತಾ ಮೈಮರೆಯುತ್ತಿದೆ ತನ್ನ ಸಾಧನೆ ಏನು ಎಷ್ಟು ಎಂದು ಗಮನಿಸುತ್ತಿಲ್ಲ. ಜನ ಹೊರ ಜಗತ್ತಿನಲ್ಲಿ ನಿಜವಾಗಿಯೂ ತನ್ನನ್ನು ಎಷ್ಟು ಲೈಕ್‌ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸುತ್ತಿಲ್ಲ. ತಮ್ಮ ಫೇಸ್‌ಬುಕ್‌ನಲ್ಲಿ ಎಷ್ಟು ಜನ ಸ್ನೇಹಿತರಿದ್ದಾರೆ ಇ ನ್ಸ್ಟಾಗ್ರಾಮ್‌ನಲ್ಲಿ ಎಷ್ಟು ಜನ ಫಾಲೋವರ್ಸ್‌ ಇದ್ದಾರೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದೆ ಹೊರತು ನಿಜ ಜೀವನದಲ್ಲಿ…

Read More

ಬಹು ರತ್ನಾನೀ ವಸುಂಧರಾ ಎಂಬ ಆರ್ಯೊಕ್ತಿ ಒಂದಿದೆ. ಅರ್ಥಾತ್ ನಮ್ಮ ಪುಣ್ಯ ಭೂಮಿಯ ಪುಣ್ಯ ಗರ್ಭದಲ್ಲಿ ಅದೆಷ್ಟೋ ಅನರ್ಘ್ಯ ರತ್ನಗಳು ಅಡಕವಾಗಿದ್ದು ಕಾಲ ಕಾಲಕ್ಕೆ ಅವಕಾಶ ಸಾಧಿಸಿ ಪ್ರಕಟವಾಗುತ್ತವೆಯಂತೆ. ನಮ್ಮ ತುಳುನಾಡಿಗಂತೂ ಈ ಮಾತು ಹೆಚ್ಚು ಅನ್ವಯವಾಗುತ್ತದೆ. ಇದೀಗ ಬಂಟರ ಸಂಘ ಮುಂಬಯಿಯ ಅಂಧೇರಿ ಬಾಂದ್ರಾ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾದ ಸೂರಜ್ ಶೆಟ್ಟಿ ಅವರು ಬಾಲ್ಯದ ದಿನಗಳಿಂದಲೇ ಧಾರ್ಮಿಕ ಪ್ರವೃತ್ತಿಯವರು. ಕ್ರೀಡೆ ಮತ್ತು ಸಮಾಜ ಸೇವೆಯ ಕ್ಷೇತ್ರದಲ್ಲಿ ವಿಶೇಷ ಅಭಿರುಚಿ ಹೊಂದಿದ್ದರು. ಬೆಳೆಯುತ್ತಲೇ ಅವರ ಒಂದೊಂದೇ ಗುಣ ವಿಶೇಷಗಳು ಪ್ರಕಟವಾಗತೊಡಗಿದವು. ಬಾಲ್ಯದ ದಿನಗಳಿಂದಲೂ ಕ್ರಿಯಾಶೀಲ ವ್ಯಕ್ತಿತ್ವ ಹೊಂದಿ ಪ್ರತಿಭಾವಂತರಾಗಿದ್ದ ಸೂರಜ್ ಅವರು ಹಲವು ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸುತ್ತಲೇ ಹೇಗಾದರೂ ವಿದ್ಯಾವಂತನಾಗಬೇಕೆಂಬ ಹಂಬಲದಿಂದ ರಾತ್ರಿ ಹಗಲು ಅಭ್ಯಸಿಸಿ ತನ್ನ ಹೈಸ್ಕೂಲು ಶಿಕ್ಷಣ ಮುಗಿಸಿ ಮುಂದೆ ಏನಾದರೂ ಉದ್ಯೋಗ ಮಾಡುತ್ತಾ ಆರ್ಥಿಕ ಸ್ವಾವಲಂಬಿಯಾಗಬೇಕೆನ್ನುವ ಛಲದಿಂದ ರಾಷ್ಟ್ರದ ವಾಣಿಜ್ಯ ನಗರಿ ಮುಂಬಯಿ ಸೇರಿಕೊಂಡು ಪದವಿ ಪೂರ್ವ ಶಿಕ್ಷಣ ಪೂರೈಸಿದರು. ಮುಂದೆ ತನ್ನ ಉದ್ಯಮಕ್ಕೆ ಅನುಕೂಲವಾಗುವ…

Read More

ಲಯನ್ ಪ್ರಥಮ ಉಪ ಜಿಲ್ಲಾ ಗವರ್ನರ್‌ ಗೌರವಾನ್ವಿತ ಲಯನ್ ನೇರಿ ಕರ್ನೇಲಿಯೋ MJF  ಇವರು ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆ ಗೆ ಅಧೀಕೃತ ಭೇಟಿ ನೀಡಿದರು. ಬನ್ನಾಡಿ ಸುಬ್ಬಣ್ಣ ಹೆಗ್ಡೆ ಸಭಾ ಭವನ ದಲ್ಲಿ ಜರುಗಿದ ಕಾರ್ಯಕ್ರಮಕ್ಕೆ, ಲಯನ್ಸ್ ಕ್ಲಬ್ ಬನ್ನಾಡಿ ವಡ್ಡರ್ಸೆಯ ಅಧ್ಯಕ್ಷರಾದ ಲಯನ್ ರಾಜಾರಾಮ್ ಶೆಟ್ಟಿ ಕಲ್ಕಟ್ಟೆ, ಕಾರ್ಯದರ್ಶಿ ಲಯನ್ ಅಜಿತ್ ಕುಮಾರ್ ಶೆಟ್ಟಿ ಕೊತ್ತಾಡಿ, ಕೋಶಾಧಿಕಾರಿ ಲಯನ್ ವಡ್ಡರ್ಸೆ ಬಾಲಕೃಷ್ಣ ಶೆಟ್ಟಿ & ಪದಾಧಿಕಾರಿಗಳು ಹಾಗೂ ಸದಸ್ಯರು ಅವರನ್ನು ಆತ್ಮೀಯವಾಗಿ ಸ್ವಾಗತಿಸಿಕೊಂಡರು. ಲಯನ್ ಬನ್ನಾಡಿ ಪ್ರಭಾಕರ ಶೆಟ್ಟಿ ಯವರ ಪ್ರಾರ್ಥನೆ ಮೂಲಕ ಸಭಾ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಕ್ಲಬ್ ನ ಕಾರ್ಯದರ್ಶಿ ಲಯನ್ ಅಜಿತ್ ಶೆಟ್ಟಿ ಕೊತ್ತಾಡಿ ಇವರು ಕ್ಲಬ್ ನ ಸೇವಾ ಚಟುವಟಿಕೆಗಳ ವರದಿ ಯನ್ನು ವಾಚಿಸಿದರು. ಲಯನ್ ಬನ್ನಾಡಿ ಸುಭಾಶ್ಚಂದ್ರ ಶೆಟ್ಟಿ ಕೆ ಇವರು ಲಯನ್ ಫ್ಲಾಗ್ ಸೆಲ್ಯುಟೇಷನ್ ಹಾಗೂ ಲಯನ್ ಸುಭಾಸ್ ಶೆಟ್ಟಿ ಮಧುವನ ಇವರು ಲಯನ್ ಕೋಡ್ ಆಫ್ ಕಂಡಕ್ಟ್ ವಾಚಿಸಿದರು. ಸಭಾ…

Read More

ಯುವ ಯಕ್ಷಗಾನ ಕಲಾವಿದ, ಸಂಘಟಕ, ಯಕ್ಷಗಾನ ಆಸಕ್ತರಿಗೆ ಯಕ್ಷ ಗುರುವಾಗಿ ನಗರದಲ್ಲಿ ಗುರುತಿಸಿಕೊಂಡಿರುವ ನಾಗೇಶ್ ಪೊಳಲಿ ಸ್ಥಾಪಿಸಿರುವ ಯಕ್ಷ ಪ್ರಿಯ ಬಳಗ ಮೀರಾ ಭಾಯಂದರ್ ಇದರ ವತಿಯಿಂದ ಅಯೋಧ್ಯ ರಾಮ ಮಂದಿರ ಉದ್ಘಾಟನಾ ಪ್ರಯುಕ್ತ ಯಕ್ಷ ಪ್ರಿಯ ಬಳಗ ತಂಡದ ಕಲಾವಿದರಿಂದ ‘ಶ್ರೀ ರಾಮ’ ಎನ್ನುವ ಯಕ್ಷಗಾನ ಕಥಾ ಭಾಗವನ್ನು ಜನವರಿ 22 ರಂದು ಬಾಲಾಜಿ ಇಂಟರ್ನ್ಯಾಷನಲ್ ಹಾಲ್ ಭಾರತಿ ಪಾರ್ಕ್, ಮೀರಾ ರೋಡ್ ಇಲ್ಲಿ ನಡೆಯಿತು. ಯಕ್ಷಗಾನದ ಮಧ್ಯಾಂತರದಲ್ಲಿ ಬಿಜೆಪಿ ಪಕ್ಷದ ಮೀರಾ-ಭಾಯಂದರ್ ನ ದಕ್ಷಿಣ ಭಾರತೀಯ ಘಟಕದ ಅಧ್ಯಕ್ಷ, ಮುಂಬಯಿ ಬಂಟರ ಸಂಘದ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಬಳ್ಕುಂಜೆ ಗುತ್ತು ಗುತ್ತಿನಾರ್ ರವೀಂದ್ರ ದೇಜು ಶೆಟ್ಟಿ ಕೊಟ್ರಪಾಡಿ ಗುತ್ತು ಮತ್ತು ಬಂಟರ ಸಂಘದ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಆಯ್ಕೆಯಾದ ವಸಂತಿ ಶಿವ ಶೆಟ್ಟಿ ಇವರನ್ನು ಯಕ್ಷ ಪ್ರಿಯ ಬಳಗದ ವತಿಯಿಂದ ಯಕ್ಷ ರತ್ನ ಪ್ರಶಸ್ತಿಯನ್ನು ಕೊಟ್ಟು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಯಕ್ಷಗಾನದ…

Read More

ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆ ಬಂಟರ ಸಂಘ ಮುಂಬಯಿ ಇದರ 2023-26 ರ ಸಾಲಿನ ಮಹಿಳಾ ವಿಭಾಗದ ಪದಾಧಿಕಾರಿಗಳ ಆಯ್ಕೆಯು ಕುರ್ಲಾ ಬಂಟರ ಭವನದಲ್ಲಿ ಡಿ.11 ರಂದು ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ನೇತೃತ್ವದಲ್ಲಿ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು. ಸಂಘದ ಮಹಿಳಾ ವಿಭಾಗದ ನೂತನ ಕಾರ್ಯಾಧ್ಯಕ್ಷೆಯಾಗಿ ಚಿತ್ರಾ ರವಿರಾಜ್ ಶೆಟ್ಟಿ, ಉಪ ಕಾರ್ಯಧ್ಯಕ್ಷೆಯಾಗಿ ಕವಿತಾ ಐ. ಆರ್. ಶೆಟ್ಟಿ, ಕಾರ್ಯದರ್ಶಿಯಾಗಿ ಆಶಾ ಸುಧೀರ್ ಶೆಟ್ಟಿ, ಕೋಶಾಧಿಕಾರಿಯಾಗಿ ಸುಚಿತಾ ಕುಸುಮಾಕರ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ವನಿತಾ ಯೋಗೇಶ್ ನೋಂಡ, ಜೊತೆ ಕೋಶಾಧಿಕಾರಿಯಾಗಿ ಸರೋಜ ಬಾಲಕೃಷ್ಣ ಶೆಟ್ಟಿ ಮುಂಡ್ಕೂರು ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಅವರಲ್ಲದೆ ಉಪಾಧ್ಯಕ್ಷ ಮಹೇಶ್ ಎಸ್. ಶೆಟ್ಟಿ, ಗೌ. ಪ್ರ. ಕಾರ್ಯದರ್ಶಿ ಡಾ. ಆರ್. ಕೆ. ಶೆಟ್ಟಿ, ಕೋಶಾಧಿಕಾರಿ ಸಿಎ ರಮೇಶ್ ಬಿ. ಶೆಟ್ಟಿ ಇನ್ನ, ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್, ಜೊತೆ ಕೋಶಾಧಿಕಾರಿ ಶಶಿಧರ ಶೆಟ್ಟಿ ಇನ್ನಂಜೆ…

Read More

ಯಕ್ಷಗಾನವು ಒಂದು ಜನಪದ ಕಲೆಯಾಗಿದೆ. ಇದರಲ್ಲಿ ಹಿಮ್ಮೇಳ ಮುಮ್ಮೇಳ ಕಲಾವಿದರೆಂಬ ೨ ವಿಧಗಳಿವೆ. ಹಿಮ್ಮೇಳದಲ್ಲಿ ಭಾಗವತರು, ಮದ್ದಳೆಗಾರ, ಚೆಂಡೆವಾದಕ, ಚಕ್ರತಾಳ ಮತ್ತು ಶೃತಿ ನುಡಿಸುವವ (ಹಾರ್ಮೋನಿಯಂ) ಕಲಾವಿದರಿದ್ದರೆ, ಮುಮ್ಮೇಳದಲ್ಲಿ ಪಕಡಿ ವೇಷ, ಬಣ್ಣದ ವೇಷ, ಸ್ತ್ರೀ ವೇಷಗಳ ಪಾತ್ರಧಾರಿಗಳಿದ್ದಾರೆ. ಹೀಗೆ ಸಾಹಿತ್ಯ, ಸಂಗೀತ, ನೃತ್ಯ, ವಾದ್ಯ, ಅಭಿನಯ ಚಿತ್ರ ಮತ್ತಿತರ ಹಲವು ಬಗೆಯ ಉಪಾಂಗಗಳಿಂದ ಕೂಡಿದ ಯಕ್ಷಗಾನ ಒಂದು ಸಂಕೀರ್ಣ ಕಲೆ. ಈ ಶ್ರೀಮಂತ ಕಲೆಯಲ್ಲಿ ತಮ್ಮ ಗಾನ ಸುಧೆಯನ್ನು ಹರಿಸುತ್ತಿರುವ ಭಾಗವತರಾದ ದೇವಿಪ್ರಸಾದ್ ಆಳ್ವ ತಲಪಾಡಿಯವರು 20.07.1982 ರಂದು ಶ್ರೀಮತಿ ದೇವಕಿ ಆಳ್ವ ಹಾಗೂ ಆನಂದ ಆಳ್ವ ದಂಪತಿಯರ ಮಗನಾಗಿ ಜನನರಾದರು. ಎಸ್.ಎಸ್.ಎಲ್.ಸಿ ವರೆಗೆ ವಿದ್ಯಾಭ್ಯಾಸ. ಮನೆಯಲ್ಲಿ ಯಕ್ಷಗಾನದ ಬಗ್ಗೆ ಇದ್ದ ಒಲುಮೆ ಆಳ್ವರು ಯಕ್ಷಗಾನಕ್ಕೆ ಬರಲು ಪ್ರೇರಣೆಯಾಯಿತು. ಯಕ್ಷಗಾನದ ಗುರುಗಳು:- ಮಾಂಬಾಡಿ ಸುಬ್ರಹ್ಮಣ್ಯ ಭಟ್, ಅಭಿನವ ವಾಲ್ಮೀಕಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ. ನಾಟ್ಯ ಗುರುಗಳು:- ದಯಾನಂದ ಗಟ್ಟಿ ಪಿಲಿಕೂರು, ಹರಿಶ್ಚಂದ್ರ ನಾಯ್ಗ ಮಾಡೂರು. ನೆಚ್ಚಿನ ಭಾಗವತರು:- ಪುರುಷೋತ್ತಮ ಪೂಂಜ,…

Read More