Author: admin
“ಯಕ್ಷಕಲೆಯನ್ನು ಕ್ಷಯವಾಗಿಸೋದು ಬೇಡ ಅಕ್ಷಯವಾಗಿಸೋಣ” -ಪಳ್ಳಿ ಕಿಶನ್ ಹೆಗ್ಡೆ ಬಂಟರ ಸಂಘ ಸುರತ್ಕಲ್ ನಲ್ಲಿ “ಯಕ್ಷಸಿರಿ” ಉದ್ಘಾಟನೆ
ಸುರತ್ಕಲ್: ಬಂಟರ ಸಂಘ(ರಿ.) ಸುರತ್ಕಲ್ ಇದರ ಸಹಯೋಗದಲ್ಲಿ “ಯಕ್ಷಸಿರಿ” ಯಕ್ಷಗಾನ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭವು ಸುರತ್ಕಲ್ ಬಂಟರ ಭವನದದಲ್ಲಿ ಜರುಗಿತು. ಪಂಚ ಯಕ್ಷಗಾನ ಮೇಳಗಳ ಸಂಚಾಲಕ ಪಳ್ಳಿ ಕಿಶನ್ ಹೆಗ್ಡೆ ಅವರು ಉದ್ಘಾಟನೆ ನೆರವೇರಿಸಿದರು. ಬಳಿಕ ಮಾತಾಡಿದ ಅವರು, “ಯಕ್ಷಗಾನ ತರಬೇತಿ ಕೇಂದ್ರಗಳು ಅನೇಕ ಕಡೆಗಳಲ್ಲಿ ಪ್ರಾರಂಭಗೊಳ್ಳುತ್ತವೆ. ಆದರೆ ದಿನಕಳೆದಂತೆ ತರಬೇತಿ ಪಡೆಯುವವರ ಸಂಖ್ಯೆ ಕಡಿಮೆಯಾಗುತ್ತದೆ. ಆದರೆ ಸುರತ್ಕಲ್ ಬಂಟರ ಸಂಘ ಇತರರಿಗೆ ಸ್ಫೂರ್ತಿಯಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಯಕ್ಷಗಾನ ಸೇವೆ ಅನ್ನೋದು ದೇವರ ಸೇವೆಯಿದ್ದಂತೆ. ಹಿಂದೆ ಯಕ್ಷಗಾನ ಕಲಾವಿದರ ಬಗ್ಗೆ ತಾತ್ಸಾರವಿತ್ತು ಆದರೆ ಈಗ ವಿದ್ಯಾವಂತ ಯುವಜನತೆ ಯಕ್ಷಗಾನ ಕಲೆಯತ್ತ ಆಕರ್ಷಿತರಾಗುತ್ತಿದ್ದಾರೆ. ಸಮಾಜದ ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿ ಯಕ್ಷ ಸೇವೆಗೆ ಮುಂದಾಗಿರುವ ಸುರತ್ಕಲ್ ಬಂಟರ ಸಂಘದ ಶ್ರಮ ಸಾರ್ಥಕವಾಗಲಿ. ಯಕ್ಷ ಕಲೆಯನ್ನು ಕ್ಷಯವಾಗಿಸೋದು ಬೇಡ ಅಕ್ಷಯವಾಗಿಸೋಣ” ಎಂದು ಅವರು ಕರೆ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಸುಧಾಕರ ಎಸ್ ಪೂಂಜ ವಹಿಸಿದ್ದರು. ಬೆಳ್ಳಿ…
ಮೀರಾ ದಹಾಣು ಬಂಟರ ಸಂಘದ ಮಾಜಿ ಅಧ್ಯಕ್ಷ, ಹೋಟೆಲ್ ಉದ್ಯಮಿ, ವಸಾಯಿ ಕರ್ನಾಟಕ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಸಮಾಜಸೇವಕ ಪುನರೂರು ಭಾಸ್ಕರ್ ಶೆಟ್ಟಿಯವರು ನಿಧನರಾಗಿದ್ದಾರೆ.
ಮೀರಾ ದಹಾಣು ಬಂಟರ ಸಂಘದ ಮಾಜಿ ಅಧ್ಯಕ್ಷ, ಹೋಟೆಲ್ ಉದ್ಯಮಿ, ವಸಾಯಿ ಕರ್ನಾಟಕ ಸಂಘದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಸಮಾಜಸೇವಕ ಪುನರೂರು ಭಾಸ್ಕರ್ ಶೆಟ್ಟಿಯವರು ನಿಧನರಾಗಿದ್ದಾರೆ. ಜನಪರ ಕೆಲಸಗಳಲ್ಲಿ ಮುಂಚೂಣಿಯಲ್ಲಿದ್ದ ಭಾಸ್ಕರ್ ಶೆಟ್ಟಿಯವರ ನಿಧನಕ್ಕೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮೀರಾ ದಹಾಣು ಬಂಟರ ಸಂಘದ ಸ್ಥಾಪಕಾಧ್ಯಕ್ಷ ವಿರಾರ್ ಶಂಕರ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ, ಶಶಿಧರ್ ಶೆಟ್ಟಿ ವಸಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಅನ್ನ ಇಲ್ಲದೆ ಸತ್ತ ತಾಯಿಗೆ ವೈಕುಂಠ ಸಮಾರಾಧನೆ ಮಾಡುವ ಮಕ್ಕಳು ಇಲ್ಲಿ ಬಹು ಸಂಖ್ಯೆಯಲ್ಲಿದ್ದಾರೆ. ‘ಇರುವಾಗ ಸಾರಿ, ಸತ್ತ ಮೇಲೆ ಗೋರಿ’. ಇದು ಕೈಲಾಸಂ ಇಲ್ಲಿಯ ಜನರ ನಡವಳಿಕೆ ಕಂಡು ಆಡಿದ ವ್ಯಂಗ್ಯ ಮಾತು. ನಮ್ಮ ಸಂಸ್ಕೃತಿಯ ಸ್ವಚ್ಚಂದ ಮುಖ ಮತ್ತು ಸೊಗಸಾದ ಮುಖವನ್ನು ಸಾಹಿತ್ಯ ಬಿಂಬಿಸುತ್ತದೆ. ಕೈಲಾಸಂ ಸಾಹಿತ್ಯ ಮತ್ತು ಸಾಮಾಜಿಕ ಅಸಂಬದ್ಧ ಜೀವನ ವಿಧಾನವನ್ನು ಬಹಳ ಸ್ವಷ್ಟವಾಗಿ ತೆರೆದು ತೋರಿಸಿದೆ. ಒಳಗೊಂದು ಹೊರಗೊಂದು ಆಗಿರುವ ಮನುಷ್ಯನ ದ್ವಂದ ಮುಖವನ್ನು ಅವರಷ್ಟು ಸ್ವಷ್ಟವಾಗಿ ಮತ್ತು ನಿರ್ಭಿತವಾಗಿ ಎತ್ತಿ ತೋರಿಸಿದವರು ಬಹು ಅಪರೂಪ. ಸತ್ತ ಮೇಲಿನ ಗೋರಿ ಇದು ಈಗಲೂ ಪ್ರಸ್ತುತ. ನಾವು ಕಣ್ಮುಂದೆ ಕಾಣುವ ಸತ್ಯ. ಉಳ್ಳವರು ಆಡಂಬರಕ್ಕಾಗಿ ಉಳಿಸಿಕೊಂಡ ಆದರ್ಶಗಳೂ ಹೌದು. “ಕಲ್ಲ ನಾಗರ ಕಂಡು ಹಾಲೆರೆವರಯ್ಯ ದಿಟದ ನಾಗರ ಕಂಡು ಹೊಡೆ ಎಂಬರು”. ತಮ್ಮ ಮನೆ ಮಂದಿ ಸಂಕಟಕ್ಕೆ ತಮ್ಮ ಬದುಕಿನ ಬೇರಿಗೆ ನೀರಾಗಬೇಕಾದ ಬಂಧು ಅದೇ ಬಳಗದ ಅನಿವಾರ್ಯಕ್ಕೆ ಬಿಡಿಕಾಸು ನೆರವಾಗದವರು ದೇವರಿಗೆ ಕಿರೀಟ ತೊಡಿಸಿ…
ಬಂಟರ ಸಂಘ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ “ಯಕ್ಷಸಿರಿ” ಯಕ್ಷಗಾನ ತರಬೇತಿ ಕೇಂದ್ರದ ಪ್ರಥಮ ವಾರ್ಷಿಕೋತ್ಸವ ನವಂಬರ್ 11 ಶನಿವಾರ ಸಂಜೆ 5 ಗಂಟೆಗೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಲಿದೆ. ಸಮಾರಂಭದ ಅಧ್ಯಕ್ಷತೆಯನ್ನು ಬಂಟರ ಸಂಘದ ಅಧ್ಯಕ್ಷ ಲೋಕಯ್ಯ ಶೆಟ್ಟಿ ಮುಂಚೂರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶ್ರೀ ಮಾತಾ ಡೆವಲಪರ್ಸ್ ಸಂಸ್ಥೆಯ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಬಿ.ಇ, ಯಕ್ಷಮಿತ್ರರು ಸಂಸ್ಥೆಯ ಅಧ್ಯಕ್ಷ ಜಗದೀಪ್ ಶೆಟ್ಟಿ, ಪೆರ್ಮುದೆ ದಿವ್ಯರೂಪ ಕನ್ ಸ್ಟ್ರಕ್ಷನ್ ನ ಆಡಳಿತ ನಿರ್ದೇಶಕ ಯಾದವ ಕೋಟ್ಯಾನ್, ಇಡ್ಯಾ ಮಹಾಲಿಂಗೇಶ್ವರ ದೇವಸ್ಥಾನದ ಶಕುಂತಳಾ ರಮಾನಂದ ಭಟ್, ಉದ್ಯಮಿ ಹರೀಶ್ ಶೆಟ್ಟಿ ಪೆರ್ಮುದೆ, ಪುಂಡಲೀಕ ಹೊಸಬೆಟ್ಟು, ಸಹನಾ ರಾಜೇಶ್ ರೈ ಮೊದಲಾದವರು ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಯಕ್ಷಗುರು ರಾಕೇಶ್ ರೈ ಅಡ್ಕ, ಸುರತ್ಕಲ್ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಧಾಕರ ಪೂಂಜ, ಮಾಜಿ ಸಾಂಸ್ಕೃತಿಕ ಕಾರ್ಯದರ್ಶಿಗಳಾದ ಬಾಳ ಜಗನ್ನಾಥ ಶೆಟ್ಟಿ, ಕೇಸರಿ ಪೂಂಜ, ಯಕ್ಷಸಿರಿ ಸಂಘಟಕಿ ಕವಿತಾ ಪುಷ್ಪರಾಜ್ ಶೆಟ್ಟಿ ಅವರನ್ನು ಗೌರವಿಸಲಾಗುವುದು.…
ದ.ಕ ಮತ್ತು ಉಡುಪಿ ಜಿಲ್ಲೆಯ ಆಯ್ದ ಐವತ್ತು ಗ್ರಾಮಗಳಲ್ಲಿ ಶೀಘ್ರದಲ್ಲೇ ಉಚಿತ ಕಟೀಲ್ ಸಂಚಾರಿ ಬೇಬಿ ಕ್ಲಿನಿಕ್ ಪ್ರಾರಂಭಿಸಲಾಗುವುದು ಎಂದು ಮಕ್ಕಳ ತಜ್ಞ ಡಾ. ಸುಧಾಕರ ಶೆಟ್ಟಿ ಪುಣೆ ಹೇಳಿದರು. ಬಂಟರ ಮಹಿಳಾ ಘಟಕ ಮೂಡುಬಿದಿರೆ ಮತ್ತು ನಡ್ಯೋಡಿ ಮಹಿಳಾ ಮಂಡಲ ಮಾರ್ಪಾಡಿ ಕಲ್ಲಬೆಟ್ಟು ವತಿಯಿಂದ ಆಳ್ವಾಸ್ ಹೆಲ್ತ್ ಸೆಂಟರ್ ಸಹಕಾರದೊಂದಿಗೆ ನಡ್ಯೋಡಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು. ನಡ್ಯೋಡಿ ಶಾಲೆಯಲ್ಲಿ ಒಟ್ಟು 28 ಮಕ್ಕಳ ತಪಾಸಣೆ ನಡೆಸಲಾಯಿತು. ನಡ್ಯೋಡಿ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಉಚಿತ ಅರೋಗ್ಯ ತಪಾಸಣಾ ಶಿಬಿರ ನಡೆಯಿತು. ಮೂಡಬಿದಿರೆ ಬಂಟರ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಎಸ್. ಶೆಟ್ಟಿ, ಕಾರ್ಯದರ್ಶಿ ಸೌಮ್ಯ ಎಸ್. ಶೆಟ್ಟಿ ಹಾಗೂ ಸದಸ್ಯರು, ನಡ್ಯೋಡಿ ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ಪಿ. ಶೆಟ್ಟಿ, ಕಾರ್ಯದರ್ಶಿ ಹೇಮಾವತಿ ಆರ್. ಪೂಜಾರಿ ಮತ್ತಿತರರು ಭಾಗವಹಿಸಿದ್ದರು.
ಆನಂದ ಫಿಲಂಸ್ ಮತ್ತು ದಿ ಮಂಗಳೂರಿಯನ್ಸ್ ಲಾಂಛನದಲ್ಲಿ ರಾಮ್ ಶೆಟ್ಟಿ ಅರ್ಪಿಸುವ, ದಯಾನಂದ ಶೆಟ್ಟಿ ನಿರ್ಮಾಣ, ಸಂತೋಷ್ ಶೆಟ್ಟಿ ನಿರ್ದೇಶನದಲ್ಲಿ ತಯಾರಾದ “ಯಾನ್ ಸೂಪರ್ ಸ್ಟಾರ್” ಸಿನಿಮಾ ನಗರದ ಬಿಗ್ ಸಿನೆಮಾಸ್ ನಲ್ಲಿ ಬಿಡುಗಡೆಗೊಂಡಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು. ಬಳಿಕ ಮಾತಾಡಿದ ಮುಂಬಯಿ ವಿ.ಕೆ. ಸಮೂಹ ಸಂಸ್ಥೆಯ ಅಧ್ಯಕ್ಷ, ಆಡಳಿತ ನಿರ್ದೇಶಕ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು ಅವರು “ಯಾನ್ ಸೂಪರ್ ಸ್ಟಾರ್ ಸಿನಿಮಾ ಇಂದಿನ ಶುಭ ಮುಹೂರ್ತದಲ್ಲಿ ಬಿಡುಗಡೆಯಾಗಿದೆ. ತುಳುವರು ಈ ಸಿನಿಮಾವನ್ನು ಇಷ್ಟಪಟ್ಟು ಗೆಲ್ಲಿಸಬೇಕು. ಈ ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣಲಿ. ಮುಂದೆಯೂ ಈ ತಂಡ ಇನ್ನಷ್ಟು ಉತ್ತಮ ಗುಣಮಟ್ಟದ ಸಿನಿಮಾ ಮಾಡಿ ಜನಮನ್ನಣೆ ಪಡೆಯಲಿ” ಎಂದರು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, “ಈ ಸಿನಿಮಾ ಮುಂಬೈ ತುಳುವರಿಂದ ಪ್ರಶಂಸೆಗೊಳಪಟ್ಟ ಸಿನಿಮಾ. ಇದರಲ್ಲಿ ತುಳುನಾಡಿನ ಅನೇಕ ದಿಗ್ಗಜ ಕಲಾವಿದರು ನಟಿಸಿದ್ದಾರೆ. ಎಲ್ಲರೂ ಚೆನ್ನಾಗಿ ನಟಿಸಿದ್ದಾರೆ. ಯಾವುದೇ…
ಸುರತ್ಕಲ್ ಗೋವಿಂದ ದಾಸ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕಿ ಎನ್ ಸಿ ಸಿ ವಿಭಾಗದ ಕ್ಯಾಪ್ಟನ್ ಸುಧಾ ಚಂದ್ರಶೇಖರ್ ಶೆಟ್ಟಿ ಇವರು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿದ “ಭಾರತದ ಪ್ರಜಾತಂತ್ರದಲ್ಲಿ ಸಮಾಜವಾದಿಗಳ ಅನುಸಂಧಾನ, ಭಾರತದ ಪ್ರಜಾತಂತ್ರದಲ್ಲಿ ಸಮಾಜವಾದಿಗಳ ವಿಶೇಷ ನಡುಪ್ರವೇಶಗಳ ಮರು ಪರಿಶೀಲನೆ” ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯ ಪಿಹೆಚ್ ಡಿ ಪದವಿಯನ್ನು ನೀಡಿ ಗೌರವಿಸಿದೆ. ಇವರು ಮಂಗಳೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕರಾದ ಪ್ರೊಫೆಸರ್ ರಾಜಾರಾಮ್ ತೋಳ್ಪಾಡಿ ಅವರ ಮಾರ್ಗದರ್ಶನದಲ್ಲಿ ಈ ಮಹಾ ಪ್ರಬಂಧವನ್ನು ರಚಿಸಿದ್ದರು. ಇವರು ಉತ್ತಮ ಕಾರ್ಯಕ್ರಮ ನಿರೂಪಕಿಯೂ ಆಗಿದ್ದಾರೆ.
ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದ ಸಂದರ್ಭ, ಎಲ್ಲ ವಿಷಯಗಳಲ್ಲಿಯೂ ಉತ್ತಮ ಅಂಕ ಪಡೆದ ವಿದ್ಯಾರ್ಥಿನಿ ಕನ್ನಡದಲ್ಲಿ ಅನುತ್ತೀರ್ಣಳಾದಳು ಎಂಬ ಕಾರಣವನ್ನಿಟ್ಟುಕೊಂಡು ಹಿಂದು- ಮುಂದು ಯೋಚಿಸದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಎಲ್ಲ ವಿಷಯಗಳಲ್ಲಿಯೂ ಉತ್ತಮ ಅಂಕ ಪಡೆದ ತನಗೆ ಕನ್ನಡದಲ್ಲಿ ಕಡಿಮೆ ಅಂಕ ಬಂದದ್ದು ಕಣ್ತಪ್ಪಿನಿಂದ ಆಗಿರಬಹುದೇ ಅಥವಾ ತಾಂತ್ರಿಕ ದೋಷಗಳಿರಬಹುದೇ ಎನ್ನುವುದನ್ನು ಯೋಚಿಸುವಷ್ಟು ವ್ಯವಧಾನವೂ ಆ ಹುಡುಗಿಯಲ್ಲಿ ಸುಳಿದಿಲ್ಲ ಎಂದಾದರೆ ಯೋಚಿಸಿ, ಮಕ್ಕಳನ್ನು ನಾವು ಪುಸ್ತಕದ ಹುಳುಗಳನ್ನಾಗಿ ಅಥವಾ ಕೇವಲ ಅಂಕ ಪಡೆಯುವುದಷ್ಟೇ ಬದುಕಿನ ಪರಮೋಚ್ಛ ಗುರಿ ಎಂಬಂತೆ ಬೆಳೆಸುತ್ತಿರುವುದು ಸರಿಯೇ ಎಂದು. ಜೀವ, ಜೀವನ ಪ್ರೀತಿಯನ್ನು ಬೆಳೆಸುವುದನ್ನು ಬಿಟ್ಟು ಕೇವಲ ಅಂಕದ ವಿಚಾರಕ್ಕೆ ಬದುಕನ್ನೇ ಮುಗಿಸಿಕೊಳ್ಳುವ ಮಕ್ಕಳ ಮನಸ್ಸಿನ ಮೇಲೆ ಹಿರಿಯರು ಹೇರುವ ಒತ್ತಡ ಎಷ್ಟರ ಮಟ್ಟಿಗೆ ದುಷ್ಪರಿಣಾಮನ್ನು ಬೀರುತ್ತಿದೆ ಎಂದು. ಶಿಕ್ಷಣ ಅಂದ ಕೂಡಲೇ ಶಾಲೆ, ಪಠ್ಯಗಳಷ್ಟೇ ನಮ್ಮ ಮುಂದೆ ಬಂದು ಹೋಗುತ್ತವೆ. ಕೇವಲ ಅದಷ್ಟೇ ನಮ್ಮ ಜೀವನವನ್ನು ಬೆಳಗಬಲ್ಲದು ಎಂದು ಯೋಚಿಸುವ ಚಿತ್ತವನ್ನು ಹೊಂದಿರುವ ಸಮಾಜದ ಮಧ್ಯೆ ನಾವಿದ್ದೇವೆ.…
ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಮುಂಬಯಿ ವತಿಯಿಂದ ರಂಗಕರ್ಮಿ ಕಮಲಾಕ್ಷ ಸರಾಫ್ ರಚಿಸಿರುವ ಕೊಂಕಣಿಯಿಂದ ಕನ್ನಡಕ್ಕೆ ಅನುವಾದಿಸಿದ,ಲಿಮ್ಮಾ ಬುಕ್ ಆಫ್ ರೆಕಾರ್ಡ್ ಖ್ಯಾತಿಯ, ಡಾ. ಚಂದ್ರಶೇಖರ ಶೆಣೈ ನಿರ್ದೇಶನದ ‘ನಂದಾದೀಪ’ ಹಾಗೂ ಯಕ್ಷಗಾನ ಕಲಾವಿದ, ಅರ್ಥದಾರಿ ದಾಮೋದರ ಶೆಟ್ಟಿ ಇರುವೈಲು ರಚಿಸಿರುವ “ಪುರಾಣ ಪಾತ್ರ ಪ್ರದೀಪಿಕೆ’ ವೆಂಬ ಎರಡು ಕೃತಿಗಳನ್ನು ಮಾಟುಂಗಾ ಪೂರ್ವದ ಮೈಸೂರು ಎಸೋಸಿಯೇಶನ್ ಸಭಾಗೃಹದಲ್ಲಿ ಕನ್ನಡಿಗ ಕಲಾವಿದರ ಪರಿಷತ್ತು ಮಹಾರಾಷ್ಟ್ರ ಮುಂಬಯಿ ಅಧ್ಯಕ್ಷ ಡಾ. ಸುರೇಂದ್ರಕುಮಾರ್ ಹೆಗ್ಡೆ ಬಿಡುಗಡೆಗೊಳಿಸಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಬಳಿಕ ಕೃತಿ ಬಿಡುಗಡೆಗೊಳಿಸಿದ ಡಾ. ಸುರೇಂದ್ರ ಕುಮಾರ್ ಹೆಗ್ಡೆ ಮಾತನಾಡುತ್ತಾ ಇಬ್ಬರು ಕೃತಿಕಾರರು ವೃತ್ತಿಯಲ್ಲಿ ಉನ್ನತ ಮಟ್ಟದಲ್ಲಿ ವ್ಯವಸಾಯಸ್ಥರು. ಕಮಲಾಕ್ಷ ಸರಫ್ ಅವರು ಕಲಾವಿದರಾಗಿ ಸಾಮಾಜಿಕ ತುಡಿತವನ್ನು ಕಂಡವರಾಗಿದ್ದು ಕೊಂಕಣಿ ನಾಟಕವನ್ನು ಕನ್ನಡಕ್ಕೆ ಬಹಳ ಸೊಗಸಾಗಿ ಅನುವಾದಿಸಿದ್ದಾರೆ. ನಾಟಕದ ಪ್ರತಿಯೊಂದು ದೃಶ್ಯವೂ ಬದುಕಿಗೆ ಪಾಠವಾಗಿದೆ. ದಾಮೋದರ್ ಶೆಟ್ಟಿ ಅವರು ತಮ್ಮ ಕೃತಿಯಲ್ಲಿ ಧಾರ್ಮಿಕ ಚಿಂತನೆಗಳನ್ನು ಬಹಳಷ್ಟು ಆಳವಾಗಿ ಇದರಲ್ಲಿ ರಚಿಸಿದ್ದಾರೆ. ಎರಡು ಕೃತಿಗಳು…
ಮಂಗಳೂರಿನ ಖ್ಯಾತ ಹೋಟೆಲ್ ಉದ್ಯಮಿ, ಶ್ರೀದೇವಿ ವಿದ್ಯಾ ಸಮೂಹ ಸಂಸ್ಥೆಗಳ ಮುಖ್ಯಸ್ಥ, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಸ್ಥಾಪಕಧ್ಯಕ್ಷ, ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಅಧ್ಯಕ್ಷ ಶ್ರೀ ಎ. ಸದಾನಂದ ಶೆಟ್ಟಿ ಅವರ ಧರ್ಮಪತ್ನಿ ಮೂಲ್ಕಿ ಕುಬೆವೂರು ದೊಡ್ಡಮನೆ ಮೈನಾ ಎಸ್ ಶೆಟ್ಟಿ (75 ವರ್ಷ) ಅವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ರಾತ್ರಿ 8 ಕ್ಕೆ ನಿಧನರಾದರು. ಮೃತರು ಶ್ರೀದೇವಿ ಎಜುಕೇಶನ್ ಟ್ರಸ್ಟ್ ನ ಕಾರ್ಯದರ್ಶಿಯಾಗಿದ್ದು ಶ್ರೀದೇವಿ ಸಮೂಹ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದವರು. ಮಂಗಳೂರಿನ ಕ್ವಾಲಿಟಿ-ಕುಡ್ಲ ಹೋಟೆಲ್ ಸಮೂಹಗಳನ್ನು ತನ್ನ ಕ್ರಿಯಾಶೀಲತೆಯಿಂದ ಬೆಳೆಸಿ, ರಾಜ್ಯದ ಪ್ರತಿಷ್ಠಿತ ಕೇಟರಿಂಗ್ ಸಂಸ್ಥೆಯಾಗಿ ರೂಪುಗೊಳ್ಳುವಲ್ಲಿ ಶ್ರಮಿಸಿದವರು. ಜಿಲ್ಲೆಯ ಹಲವಾರು ಪ್ರತಿಷ್ಠಿತ ಕೇಟರಿಂಗ್, ಹೋಟೆಲ್ ಉದ್ಯಮಿಗಳಿಗೆ ಮಾರ್ಗದರ್ಶಿಯಾಗಿದ್ದರು. ಬೆಂಗಳೂರು, ಮಂಗಳೂರಿನಲ್ಲಿ ನಡೆದಿದ್ದ ಚಾರಿತ್ರಿಕ ವಿಶ್ವ ಬಂಟರ ಸಮ್ಮೇಳನದ ಊಟೋಪಚಾರದ ಸಂಪೂರ್ಣ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದವರು. ಸರಳ ಸಜ್ಜನಿಕೆಯಿಂದ ಎಲ್ಲರ ಪ್ರೀತಿ ಗೌರವಗಳಿಗೆ ಪಾತ್ರರಾಗಿದ್ದರು. ಮೂಲ್ಕಿ ಕುಬೆವೂರು ದೊಡ್ಡಮನೆಯ…