Author: admin
ಕೆದಂಬಾಡಿ ರಾಮಯ್ಯ ಗೌಡರ ನಾಯಕತ್ವದ ತುಳುನಾಡಿನ ವೀರ ರೈತಾಪಿ ಸೇನೆಯು ಬಾವುಟ ಗುಡ್ಡೆಯಲ್ಲಿ ಬ್ರಿಟಿಷ್ ಧ್ವಜ ಕಿತ್ತೆಸೆದು ತುಳುನಾಡಿನಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಪ್ರಥಮ ವಿಜಯ ಪತಾಕೆ ಹಾರಿಸಿದ ಸ್ಮರಣಾರ್ಥ “ಅಮರ ಸುಳ್ಯ ಸ್ವಾತಂತ್ರ್ಯ ಸಂಗ್ರಾಮ- ಸಂಸ್ಮರಣ ದಿನ’ ಕಾರ್ಯಕ್ರಮವನ್ನು ಎ. 5ರಂದು ಬೆಳಗ್ಗೆ 10.30ಕ್ಕೆ ನಗರದ ಅಲೋಶಿಯಸ್ ಕಾಲೇಜಿನ ಲೊಯೊಲ್ಲಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ಉಸ್ತುವಾರಿ ಸಮಿತಿ ವತಿಯಿಂದ ನಡೆಯುವ ಸಮಾರಂಭದಲ್ಲಿ ಕೆದಂಬಾಡಿ ರಾಮಯ್ಯ ಗೌಡ ರಾಜ್ಯ ಶೌರ್ಯ ಪ್ರಶಸ್ತಿಗಾಗಿ ಭಾರತೀಯ ಭೂ ಸೇನೆಯ ನಿವೃತ್ತ ಯೋಧ, 2016ರಲ್ಲಿ ನಿಗೂಢವಾಗಿ ಕಣ್ಮರೆಯಾಗಿ ಇನ್ನೂ ಪತ್ತೆಯಾಗದ ವಿಮಾನದಲ್ಲಿದ್ದ ಸುಬೇದಾರ್ ಏಕನಾಥ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿ ಅಧ್ಯಕ್ಷ ಎಂ.ಬಿ. ಕಿರಣ್ ಬುಡ್ಲೆಗುತ್ತು ಅವರು ಸೋಮವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ| ನಿರ್ಮಲಾ ನಂದನಾಥ ಮಹಾಸ್ವಾಮೀಜಿ ಅನುಗ್ರಹ ಸಂದೇಶ ನೀಡುವರು. ಮಂಗಳೂರು ಶಾಖಾ ಮಠದ…
ಒಂದು ತರಹದ ಕಿರುನಗು ಹಾಗೂ ಆಶ್ಚರ್ಯ ಮೂಡಿದರು ಹೆದ್ದಾರಿ ತಡೆಗೋಡೆಗೆ ಬಿದಿರು ಉಪಯೋಗ ಅನ್ನುವುದನ್ನು ಕೇಳಿದಾಗ. ಆದರೂ ಇದು ಸತ್ಯ. ವಿಶ್ವದಲ್ಲೆ ಮೊದಲ ಪ್ರಯತ್ನವಿದು. ರಾಷ್ಟ್ರೀಯ ಹೆದ್ದಾರಿ ಅಕ್ಕ ಪಕ್ಕ ಪ್ರಾಣಿಗಳು ರಸ್ತೆ ಗಿಳಿಯದಂತೆ ತಡೆಯಲು ಮತ್ತು ವಾಹನಗಳು ಡಿಕ್ಕಿ ಹೊಡೆದಾಗ ದೊಡ್ಡ ಪ್ರಮಾಣದ ಅನಾಹುತ ತಪ್ಪಿಸಲು ಉಕ್ಕಿನ ತಡೆಗೋಡೆ ಹಾಕುವುದು. ಮಣ್ಣಿನ, ಇಟ್ಟಿಗೆಯ ಕಬ್ಬಿಣದ ಕಂಬ, ಕಲ್ಲುಕಂಬದ ಬಳಕೆ ಸಾಮಾನ್ಯ. ಕೇಂದ್ರ ಸರಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಇದೇ ಮೊದಲ ಬಾರಿಗೆ ಗುಣಮಟ್ಟದ ಅಂದರೆ ಉಕ್ಕಿನ ಗೋಡೆ ಹೆಚ್ಚಿನ ಶಕ್ತಿ ಎಂಬುದು ಎಲ್ಲರ ಭಾವನೆ ಆದರೆ ಬಿದಿರು ತಡೆಗೋಡೆಯನ್ನು ಅದಕ್ಕಿಂತ ಶಕ್ತಿ ಶಾಲಿ ಮಾಡಲು ಬಂಬೂಸಾ ಬಲ್ಕೋವಾ ಎಂಬ ಜಾತಿಗೆ ಸೇರಿದ ಬಿದಿರನ್ನು ಬಳಸಲಾಗುತ್ತದೆ . ಈ ತಡೆ ಗೋಡೆಯನ್ನು ಇಂದೋರ್ನ ಪ್ರೀತಂ ಪುರದಲ್ಲಿರುವ ರಾಷ್ಟ್ರೀಯ ವಾಹನ ಪರೀಕ್ಷಾ ಕೇಂದ್ರದಲ್ಲಿ ಕಠಿಣ ಪರೀಕ್ಷೆಗೆ ಒಳಪಟ್ಟಿದೆ. ಮಹಾರಾಷ್ಟ್ರ ಚಂದ್ರಪುರ ಮತ್ತು ಯವತ್ಮಾಳ ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಯಲ್ಲಿ ಬರುವ ವಾಣಿ…
ಗೋಲ್ಕೊಂಡ ಕೋಟೆ ಅಥವಾ ಗೊಲ್ಲಕೊಂಡ ಕೋಟೆ ಹೈದರಾಬಾದ್ ನಗರದಿಂದ 15 ಕಿಮೀ ದೂರದಲ್ಲಿದೆ. ಇದನ್ನು ಮಂಗಳಗಿರಿ ಎಂದು ಕರೆಯುತ್ತಾರೆ . ಕುರಿಗಾಹಿಗಳ ದಿಟ್ಟ ಎಂಬ ಅರ್ಥವೂ ವಿದೆ. ಇಲ್ಲಿಗೆ ಗುಂಪಿನಲ್ಲಿ ಹೋಗಿ ನೋಡಿ ಬರಬಹುದು. ಏಕಾಂಗಿಯಾಗಿ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಲೂಟಿಕೊರರು, ವಂಚಕರ ತಾಣವಿದು, ಇಲ್ಲಿ ಕಾವಲುಗಾರರಿದ್ದಾರೆ ಆದರೆ ಅವರು ಬರೆ ಲೆಕ್ಕಕ್ಕೆ ಅಷ್ಟೇ. ಯಾದವ ರಾಜವಂಶದ ಅವಧಿಯಲ್ಲಿ ನಿರ್ಮಾಣವಾಗಿದ್ದ ಈ ಕೋಟೆ ಒಬ್ಬ ದನ ಕಾಯುವವನಿಗೆ ಇಲ್ಲಿ ಒಂದು ದೇವತಾ ಮೂರ್ತಿ ದೊರೆತ ಕಾರಣ ಆಗಿನ ರಾಜರು ಈ ಸ್ಥಳದಲ್ಲಿ ಮಣ್ಣಿನ ಕೋಟೆಯನ್ನು ನಿರ್ಮಾಣ ಮಾಡಿದ್ದರು. ದನ ಕಾಯುವ ಗೊಲ್ಲನಿಗೆ ಮೂರ್ತಿ ಸಿಕ್ಕಿ ಅರಮನೆ ಕಟ್ಟಲು ಕಾರಣವಾದುದಕ್ಕೆ ಈ ಕೋಟೆಗೆ ಗೊಲ್ಲಕೊಂಡ ಅಂತಲೂ ನಂತರ ಗೋಲ್ಕೊಂಡ ಕೋಟೆ ಎಂದು ಕರೆಯಲಾಯಿತು. ಈ ಅರಮನೆ 5 ಕಿ.ಮಿಗೂ ಹೆಚ್ಚಿನ ವಿಸ್ತಾರ ಹೊಂದಿದೆ. 400 ಅಡಿ ಎತ್ತರದ ಒಂದು ಗ್ರಾನೈಟ್ ಪರ್ವತದ ಮೇಲೆ 4 ಪ್ರತ್ಯೇಕವಾದ ಕೋಟೆ ಮತ್ತು ಕೋಟೆಯ ಸುತ್ತಲೂ…
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿದ್ದ ಕಟಪಾಡಿ ಅಚ್ಚಡದ ಪೊಸೊಕ್ಕೆಲ್ ವಾಸು ವಿ. ಶೆಟ್ಟಿ (108) ಅವರು ಜ. 23ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.ಮೃತರು ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಮೂಲತಃ ಪಡುಬಿದ್ರಿಯವರಾದ ವಾಸು ಶೆಟ್ಟಿ ತನ್ನ 9ನೇ ವಯಸ್ಸಿನಲ್ಲಿ ಮುಂಬಯಿಗೆ ತೆರಳಿದ್ದು, ಹೊಟೇಲು ವ್ಯಾಪಾರ ನಡೆಸುತ್ತಿದ್ದರು. 9 ವರ್ಷ ಟಾಟಾ ಕಂಪೆನಿಯಲ್ಲಿ ಬಳಿಕ ದಾದರ್ ಬಿಇಎಸ್ಟಿ ಡಿಪೋದಲ್ಲಿ ಮೆಕ್ಯಾನಿಕ್ ಆಗಿ ದುಡಿಯುತ್ತಿದ್ದರು. ತನ್ನ 30ರ ಹರೆಯದಲ್ಲಿ ಮುಂಬಯಿಯಲ್ಲಿ ಸರ್ದಾರ್ ವಲ್ಲಭಾಭಾಯಿ ಪಟೇಲ್, ಗಾಂಧೀಜಿ, ಸುಭಾಸ್ಚಂದ್ರ ಬೋಸ್ ಸಹಿತ ಅನೇಕ ನಾಯಕರ ಮೋರ್ಚಾಗಳಲ್ಲಿ ಜನ ಸೇರಿಸಿಕೊಂಡು ಸ್ವಾತಂತ್ರ್ಯಕ್ಕಾಗಿ ಉಗ್ರ ಸ್ವರೂಪದ ಹೋರಾಟ ನಡೆಸಿದ್ದರು. ಸ್ವಾತಂತ್ರ್ಯ ಒಂದೇ ಗುರಿ ಎಂಬ ಧ್ಯೇಯದಡಿ ಹೋರಾಟದಲ್ಲಿ ಪಾಲ್ಗೊಂಡಿದ್ದು, ಕೆಲವೆಡೆ ಬಾಂಬು ದಾಳಿ ನಡೆದಾಗ ಅಪಾಯದಲ್ಲಿ ಸಿಲುಕಿದವರನ್ನು ಆಸ್ಪತ್ರೆಗೆ ಸಾಗಿಸುವ, ಮರಣ ಹೊಂದಿದವರ ಮೃತದೇಹಗಳನ್ನು ಸುಡುವ ಕೆಲಸದಲ್ಲೂ ತೊಡಗಿಸಿಕೊಂಡಿದ್ದರು. ಶಿಸ್ತನ್ನು ಮೈಗೂಡಿಸಿಕೊಂಡಿದ್ದ ಅವರು ನಿವೃತ್ತಿಯ ಬಳಿಕ ಊರಿಗೆ ಹಿಂದಿರುಗಿದ್ದು, ಗೇಣಿಗೆ ಪಡೆದು ಕೃಷಿ ಕಾಯಕ ನಡೆಸುತ್ತಿದ್ದರು. ಸ್ಥಳೀಯವಾಗಿ ಸಂಘ ಸಂಸ್ಥೆಗಳು ಅವರನ್ನು…
ಅಕ್ರಮ ಸಕ್ರಮ ದ ಪ್ಲಾಟಿಂಗ್ ಹೆಸರಲ್ಲಿ ಬಡವರಿಗೆ ಕಾಟ…! ಪುತ್ತೂರಿನಲ್ಲಿ ಎಲ್ಲಿ ನೋಡಿದರೂ ಭ್ರಷ್ಟರು ಆಡಿದ್ದೇ ಆಟ…!
ಒಂದು ತಾಲೂಕಿನಲ್ಲಿ ಆಡಳಿತ ಅನ್ನುವುದು ಜನಸ್ನೇಹಿಯಾಗುವುದು ಹೇಗೆ..? ಆಡಳಿತ ಅನ್ನುವುದು ಭ್ರಷ್ಟಾಚಾರ ಮುಕ್ತವಾಗೋದು ಹೇಗೆ..? ಜನಸಾಮಾನ್ಯರಿಗೆ ಸರಕಾರಿ ಇಲಾಖೆಗಳಲ್ಲಿ ನ್ಯಾಯಯುತವಾಗಿ ಯಾವುದೇ ಲಂಚ ರುಷುವತ್ತುಗಳ ಹಂಗಿಲ್ಲದೆ ಸೇವೆಗಳು ದೊರಕುವುದು ಯಾವಾಗ..? ಯಾವಾಗೆಂದರೆ ಅಲ್ಲಿನ ಜನಪ್ರತಿನಿಧಿಗಳೆನ್ನಿಸಿಕೊಂಡವರು ಸ್ವಲ್ಪವಾದರೂ ಜನರಿಗೆ ಸ್ಪಂದಿಸುವ ಕೆಲಸ ಮಾಡಬೇಕು… ಜನರ ಕೈಗೆ ಸಿಗುವಂಥಾ ರೀತಿಯಲ್ಲಿರಬೇಕು… ಅವರ ಅಹವಾಲುಗಳನ್ನು ಕೇಳುವ ಮತ್ತು ಅದಕ್ಕೆ ಸೂಕ್ತ ಪರಿಹಾರವೊದಗಿಸುವ ಮನಸ್ಸು ಜನಪ್ರತಿನಿಧಿಗಳಿಗಿರಬೇಕು…. ಆದರೆ ಪುತ್ತೂರಿನ ಪರಿಸ್ಥಿತಿ ಹೇಗಾಗಿಯೆಂದರೆ ತಲೆಗೆ ಬಡಿದ ರೋಗ ಕಾಲಿಗೂ ಹರಡಿದ ಹಾಗಾಗಿದೆ… ತಾಲೂಕೊಂದರಲ್ಲಿ ಪಂಚಾಯತ್ ನಿಂದ ಹಿಡಿದು, ಜಿಲ್ಲಾಪಂಚಾಯತ್ ವರೆಗೆ ಅನೇಕ ಮಂದಿ ಚುನಾಯಿತ ಪ್ರತಿನಿಧಿಗಳಿದ್ದರೂ .. ಆದರೆ ಇವರು ಯಾವಾಗ ಎಲ್ಲಿರುತ್ತಾರೆ…ಏನು ಮಾಡುತ್ತಾರೆ… ಯಾಕೆ ಮಾಡುತ್ತಾರೆ… ಅಥವಾ ಏನೂ ಮಾಡದೆಯೇ ಯಾಕೆ ಸುಮ್ಮನಿರುತ್ತಾರೆ… ನಿನ್ನೆ ಏನೂ ಮಾಡಿಲ್ಲ… ಇವತ್ತೂ ಕೂಡಾ ಏನೂ ಮಾಡಿಲ್ಲ.. ನಾಳೆಯಾದರೂ ಏನಾದರೂ ಮಾಡಬೇಕು ಅನ್ನೋ ಮನಸ್ಸಿದೆಯೋ ಇಲ್ಲವೋ … ಅದೂ ಗೊತ್ತಿಲ್ಲ… ! ಪುತ್ತೂರಿನಲ್ಲಿ ಬಹುಶಃ ಹೀಗೆ ಜನಪ್ರತಿನಿಧಿಗಳು ನಿಷ್ಕ್ರಿಯರಾದರೆ… ಆಗ ಆಟ…
ಸಮಸ್ತ ಭಕ್ತರನ್ನ ಸಲಹುವ ಶಕ್ತಿ ದೇವತೆ, ಜಗನ್ಮಾತೆ ಸಿರಸಿ ಮಾರಿಕಾಂಬ ದೇವಿ….!” ಹಸಿರು ಹೊತ್ತ ಮಲೆನಾಡಿನ ಮಧ್ಯೆ ನೆಲೆ ನಿಂತ ಜಗನ್ಮಾತೆ ಸಿರಸಿ -“ಮಾರಿಕಾಂಬ ದೇವಿಯ ದೇಗುಲ….! – ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ.(ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು) santhoshmolahalli@gmail.com ಭಾರತ ದೇಶ ಸಾಂಸ್ಕೃತಿಕ ಕಲೆ ಆಚಾರ ವಿಚಾರಗಳ ಪರಂಪರೆಯ ದೇಶ ಇಲ್ಲಿ ಎಲ್ಲ ರಾಜ್ಯಗಳು ತಮ್ಮದೆ ಆದ ಸಂಸ್ಕೃತಿ ಹೊಂದಿವೆ ಅದರಲ್ಲೂ ಕರ್ನಾಟಕ ಸಾಂಸ್ಕೃತಿಕ ರಾಯಬಾರಿ ಎಂದರೆ ತಪ್ಪಾಗಲಾರದು ಕರ್ನಾಟಕವನ್ನು ಒಂದು ರಾಜ್ಯ ಹಲವು ಜಗತ್ತು ಅಂತ ಹೇಳುತ್ತಾರೆ ಕಾರಣ ಈ ನಾಡಿನ ಪ್ರತಿಯೊಂದು ಜಿಲ್ಲೆಯು ತನ್ನದೆ ಆದ ಪರಂಪರೆಯ ಸಂಸ್ಕೃತಿ ಹೊಂದಿದೆ ವಿಶಾಲ ಕರ್ನಾಟಕದಲ್ಲಿ ಸಿರ್ಸಿ ಕೂಡಾ ಒಂದು ಶ್ರೀಮಂತ ಸಂಸ್ಕೃತಿಯ ಊರು. ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದ ಘಟ್ಟದ ಮೆಲಿನ ಒಂದು ಸುಂದರ ನಗರ. ಇದು ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಇರುವುದರಿಂದ ಇದು ತನ್ನ ಸುತ್ತಲೂ ಅದೆಷ್ಟೋ ಜಲಪಾತಗಳಿಂದ ಸುತ್ತಲ್ಪಟ್ಟಿದೆ. ನಗರದ ಮದ್ಯದಲ್ಲಿ…
ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಮಂಗಳೂರು ಇದರ ಆಶ್ರಯದಲ್ಲಿ ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮ ಮತ್ತು ಬಂಟ ಸಮಾಜದ ದೈವದ ಮುಕ್ಕಾಲ್ದಿಗಳಿಗೆ ಗೌರವ ಸನ್ಮಾನ ಕಾರ್ಯಕ್ರಮ ಮೇ 3 ರಂದು ಮಂಗಳವಾರ ಮಧ್ಯಾಹ್ನ 11 ಗಂಟೆಗೆ ಬಂಟ್ಸ್ ಹಾಸ್ಟೇಲ್ ಬಳಿಯ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರಗಲಿದೆ. ಸಭೆಯ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ ಶೆಟ್ಟಿ ವಹಿಸಲಿದ್ದಾರೆ. ಸಮಾರಂಭದಲ್ಲಿ ಸಮಾಜ ಕಲ್ಯಾಣ ಯೋಜನೆಯಡಿಯಲ್ಲಿ ಶಿಕ್ಷಣ, ಮದುವೆ, ಮನೆ ನಿರ್ಮಾಣ, ಕ್ರೀಡೆ, ವೈದ್ಯಕೀಯ ಮೊದಲಾದ ಫಲಾನುಭವಿಗಳಿಗೆ ಚೆಕ್ ಗಳನ್ನು ವಿತರಿಸಲಾಗುವುದು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಸಹಕಾರಿ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಮುಂಬಯಿ ಹೇರಂಬ ಇಂಡಸ್ಟ್ರೀಸ್ ನ ಅಧ್ಯಕ್ಷ, ಒಕ್ಕೂಟದ ನಿರ್ದೇಶಕ ಸದಾಶಿವ ಶೆಟ್ಟಿ ಕುಳೂರು-ಕನ್ಯಾನ, ಮಾಜೀ ಸಚಿವ ಬಿ ನಾಗರಾಜ ಶೆಟ್ಟಿ,…
ಕಾಲೇಜು ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ನಾಯಕತ್ವದ ಗುಣ ಮೈಗೂಡಿಸಿಕೊಂಡು, ಜಯಕರ್ನಾಟಕ ಸಂಘಟನೆಯಲ್ಲಿ ದಿವಂಗತ ಮುತ್ತಪ್ಪ ರೈ ಅವರ ಗರಡಿಯಲ್ಲಿ ಪಳಗಿ, ಯುವ ಉದ್ಯಮಿಯಾಗಿ ಸಮಾಜಸೇವೆ ಮಾಡುತ್ತಿರುವ ಸಹಕಾರಿ ಧುರೀಣ ಜಯರಾಮ ರೈ ಅವರ ಪುತ್ರ, ಬಿಜೆಪಿ ಮುಖಂಡ, ಕ್ರೀಡಾ ಪೋಷಕ ಸಹಜ್ ರೈ ಅವರಿಗೆ ಇನ್ನಷ್ಟು ಸಮಾಜಸೇವೆ ಮಾಡುವ ಯೋಗ ಕೂಡಿಬರಲೆಂದು ಸಮಸ್ತ ಬಂಟ ಸಮಾಜದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.
ಮೂಡುಬಿದಿರೆ: ಸುಬ್ರಹ್ಮಣ್ಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಕಾಲೇಜಿನಲ್ಲಿ ನವೆಂಬರ್ 4 ಮತ್ತು 5ರಂದು ನಡೆದ ಮಂಗಳೂರು ವಿಶ್ವವಿದ್ಯಾಲಯ ಅಂತರ ಕಾಲೇಜು ಕ್ರಾಸ್ ಕಂಟ್ರಿ ಚಾಂಪಿಯನ್ಶಿಫ್ನ ಪುರುಷ ಹಾಗೂ ಮಹಿಳಾ ವಿಭಾಗಗಳೆರಡರಲ್ಲೂ ಚಾಂಪಿಯನ್ ಆಗಿರುವ ಆಳ್ವಾಸ್ ಕಾಲೇಜು ಸತತ 20ನೇ ವರ್ಷ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಪುರುಷರ ವಿಭಾಗದಲ್ಲಿ ಮೊದಲ ಆರು ಸ್ಥಾನಗಳನ್ನು ಆಳ್ವಾಸ್ ಕಾಲೇಜು ಓಟಗಾರರು ಪಡೆದುಕೊಂಡಿದ್ದಾರೆ. ಆಳ್ವಾಸ್ ಕಾಲೇಜಿನ ಚಂದನ್ ಯಾದವ್ (ಪ್ರಥಮ), ಅಂಕಿತ್ ದೇಶ್ವಾಲ್ (ದ್ವಿತೀಯ), ಆಸಿಫ್ ಖಾನ್ (ತೃತೀಯ), ಸುನಿಲ್ ಕುಮಾರ್ (4ನೇ ಸ್ಥಾನ), ಅಕ್ಷಯ್ ಕುಮಾರ್ (5ನೇ ಸ್ಥಾನ), ಅರವಿಂದ್ ಯಾದವ್ (6ನೇ ಸ್ಥಾನ) ಪಡೆದಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಸೋನುನೆ ಪೂನಂ ದಿನಕರ್ (ಪ್ರಥಮ), ಬಸಂತಿ ಕುಮಾರಿ (ದ್ವಿತೀಯ), ಕೆ.ಎಂ.ಸೋನಿಯಾ (ತೃತೀಯ), ಚೈತ್ರಾ ದೇವಾಡಿಗ (4ನೇ ಸ್ಥಾನ), ದಿಶಾ ಬೋರ್ಶೆ (6ನೇ ಸ್ಥಾನ), ಕೆ.ಎಂ. ಅಂಜಲಿ (7ನೇ ಸ್ಥಾನ) ಪಡೆದಿದ್ದಾರೆ. ವಿದ್ಯಾರ್ಥಿಗಳ ಸಾಧನೆಯನ್ನು ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಶ್ಲಾಘಿಸಿದ್ದಾರೆ.
ಪುಣೆ ತುಳುಕೂಟದ ವತಿಯಿಂದ ವಾರ್ಷಿಕ ದಸರಾ ಪ್ರಯುಕ್ತ ದುರ್ಗಾ ಪೂಜೆ ತೆನೆ ಹಬ್ಬ ಹಾಗೂ ದಾಂಡಿಯಾ ರಾಸ್ ಧಾರ್ಮಿಕ ಕಾರ್ಯಕ್ರಮವು ಅ 19 ರಂದು, ಪುಣೆಯ ಕರ್ವೆ ನಗರದ ಹೋಟೆಲ್ ರತ್ನಾ ಅರ್ಚಿಡ್ ಬ್ಯಾಂಕ್ವೆಟ್ ಹಾಲ್ ನಲ್ಲಿ ವಿವಿದ ಧಾರ್ಮಿಕ ಪೂಜಾ ಕಾರ್ಯಕ್ರಮಗಳೊಂದಿಗೆ ಜರಗಿತು. ಪುಣೆ ತುಳುಕೂಟದ ಅಧ್ಯಕ್ಷ ಮೋಹನ ಶೆಟ್ಟಿ ಎಣ್ಣೆಹೊಳೆ ಯವರ ಅಧ್ಯಕ್ಷತೆಯಲ್ಲಿ, ಮಹಿಳಾ ವಿಭಾಗದ ಅಧ್ಯಕ್ಷೆ ಸುಜಾತಾ ಡಿ.ಶೆಟ್ಟಿ ಮತ್ತು ತುಳುಕೂಟದ ಪದಾದಿಕಾರಿಗಳು ಮತ್ತು ಪುಣೆಯ ವಿವಿದ ಸಂಘ ಸಂಸ್ಥೆಗಳ ಗಣ್ಯರ ಉಪಸ್ಥಿತಿಯಲ್ಲಿ ಜರಗಿದ ಈ ನವರಾತ್ರಿಯ ಉತ್ಸವದ ಧಾರ್ಮಿಕ ಕಾರ್ಯಕ್ರಮದ ಪೂಜಾ ಕಾರ್ಯವು ಕಾತ್ರಜ್ ಶ್ರೀ ಅಯ್ಯಪ್ಪ ಸ್ವಾಮೀ ದೇವಸ್ಥಾನದ ಪ್ರಧಾನ ಅರ್ಚಕರಾದ ಹರೀಶ್ ಭಟ್ ರವರ ಪೌರೋಹಿತ್ಯದಲ್ಲಿ ದುರ್ಗಾ ಪೂಜೆ ನೆರವೇರಿತು, ಪೂಜಾ ವಿದಿ ವಿಧಾನಗಳನ್ನು ಮದಂಗಲ್ ಆನಂದ್ ಭಟ್ ದಂಪತಿಗಳು ನೆರವೇರಿಸಿದರು . ಪುಣೆಯ ಶ್ರೀ ಗುರುದೇವ ಚಿಣ್ಣರ ಬಳಗದ ಮಕ್ಕಳಿಂದ, ಪುಟಾಣಿಗಳಿಂದ ಭಜನೆ ಮತ್ತು, ತುಳುಕೂಟ ಪುಣೆಯ ಎಲ್ಲಾ ಸದಸ್ಯ, ಸದಸ್ಯೆಯರಿಂದ…