Author: admin
ಬಂಟರು ಆರ್ಥಿಕವಾಗಿ ಬಲಿಷ್ಟರಾಗುತ್ತಿದ್ದಂತೆ ತಮ್ಮ ಪದ್ದತಿ, ಸಂಪ್ರದಾಯಕ್ಕೆ ನಿಧಾನವಾಗಿ ಎಳ್ಳುನೀರು ಬಿಡುತ್ತಿದ್ದಾರೆ. ಯಾಕೋ ನಾಗಾರಾಧನೆಯಲ್ಲಾಗಲೀ, ಭೂತಾರಾಧನೆಯಲ್ಲಾಗಲೀ, ವಿವಾಹ ಅಪರಕ್ರಿಯೆಯಂತಹ ಕಾರ್ಯಕ್ರಮಗಳಲ್ಲಿಯೂ ನಮಗೆ ತೌಳವ ಸಂಪ್ರದಾಯವೆಂದರೆ ಒಂದು ರೀತಿ ಅಸಡ್ಡೆ. ವೈದಿಕ ಸಂಪ್ರದಾಯವೇ ಶ್ರೇಷ್ಟ ಎಂಬ ಭಾವನೆ. ಇದಕ್ಕೆ ಸರಿಯಾಗಿ ತೌಳವ ಸಂಪ್ರದಾಯದ ಬಗ್ಗೆ ಮಾರ್ಗದರ್ಶನ ಮಾಡಬಲ್ಲ ಹಿರಿಯರ ಕೊರತೆಯೂ ನಮ್ಮಲ್ಲಿದೆ. ನಮ್ಮ ಭೂತಗಳಿಗೆ ಬ್ರಹ್ಮಕಲಶ ಮಾಡಿಸುವ, ನಾಗನ ಪ್ರಾಕೃತಿಕ ಆವಾಸ ಸ್ಥಾನವನ್ನು ಕಡಿದು ಕಾಂಕ್ರೀಟ್ ಗುಡಿಯಲ್ಲಿ ಕುಳ್ಳಿರಿಸಲು ಪ್ರಯತ್ನಿಸುವ ನಮಗೆ ವಿವಾಹವೇನು ಮಹಾ? ವೈದಿಕ ಸಂಪ್ರದಾಯದಂತೆ ಹೋಮ, ಸಪ್ತಪದಿ, ಕನ್ಯಾದಾನ ಮಾಂಗಲ್ಯಧಾರಣೆ ಇದ್ದರೇನೆ ಅದು ಮದುವೆ. ಸದ್ಯಕ್ಕೆ ವರಪೂಜೆ, ಕಾಶೀಯಾತ್ರೆ, ಉರುಟಣೆ ಇತ್ಯಾದಿಗಳು ಪ್ರಾಂಭವಾಗಿಲ್ಲ. ಕ್ರಮೇಣ ಪ್ರಾರಂಭವಾಗಲೂಬಹುದು. ಬಂಟರು ಮೂಲತಃ ಕ್ಷತ್ರಿಯರು ಹಾಗೂ ಕೃಷಿಯನ್ನು ನಂಬಿ ಬದುಕಿದವರು. ನಮ್ಮಲ್ಲಿ ಭೂಮಿ ಸಾಕ್ಷಿಯಾಗಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗುವುದೇ ಸಂಪ್ರದಾಯ. ಹಿಂದೆ ಅಂದರೆ ಸುಮಾರು ಅರುವತ್ತು ಎಪ್ಪತ್ತು ವರ್ಷಗಳ ಹಿಂದೆ ಮಾಂಗಲ್ಯ ಧಾರಣೆಯೂ ನಮ್ಮಲ್ಲಿ ಇರಲಿಲ್ಲವಂತೆ. ವಧುವನ್ನು ಅಲಂಕರಿಸುವಾಗ ಮುತ್ತೈದೆಯರೇ ಅವಳ ಕೊರಳಿಗೆ ಕರಿಮಣಿ…
ದೇಹದಲ್ಲಿನ ಬೌದ್ಧಿಕ ಉಷ್ಣಾಂಶವನ್ನು ತೀವ್ರ ಸ್ವರೂಪದಲ್ಲಿ ಕಡಿಮೆಗೊಳಿಸುವ ಎಳ್ಳೆಣ್ಣೆ …..! ಆಯುರ್ವೇದದ ಮುಖ್ಯವಾಹಿನಿಯಲ್ಲಿ ಸಂಗ್ರಹಿಸಲ್ಪಟ್ಟ ಪರಿಪೂರ್ಣವಾದ ನಾರಿನಂಶದ ಪದಾರ್ಥ….! ಪ್ರತಿ ನಿತ್ಯ ಜೀವನದಲ್ಲಿ ಉಪಯೋಗಿಸಿ ಆರೋಗ್ಯಕರ ಎಳ್ಳು…..! ದೇಹದಲ್ಲಿನ ನರಮಂಡಲಗಳನ್ನು ಆರೋಗ್ಯ ಯುಕ್ತವಾಗಿ ಗ್ರಹಿಸುವ ಶಕ್ತಿ ಹೊಂದಿರುವ ಎಳ್ಳಣ್ಣೆ….! ✍ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ ಕುಂದಾಪುರ. (ಪತ್ರಕರ್ತರು &ಅಂಕಣಕಾರರು)ಮೊ:9632581508 ಎಳ್ಳು ಎಣ್ಣೆಯನ್ನು ಅದನ್ನು ಉಪಯೋಗಿಸುವ ರೀತಿ ನೀತಿಗಳನ್ನು ತಿಳಿದುಕೊಂಡರೆ ಜೀವನದಲ್ಲಿ ಕಾಯಿಲೆ ನಿಮ್ಮ ಹತ್ತಿರ ಸುಳಿಯುವುದಿಲ್ಲ .ಆರೋಗ್ಯಕರ ಮತ್ತು ಆರೋಗ್ಯಕ್ಕೆ ಪರಿಪೂರ್ಣವಾಗಿರುವ ತೇವಾಂಶ ಮತ್ತು ದೇಹದಲ್ಲಿನ ಉಷ್ಣಾಂಶ ಕಡಿಮೆ ಮಾಡಲು ಎಳ್ಳು ಎಣ್ಣೆಯನ್ನು ಹೆಚ್ಚಾಗಿ ಉಪಯೋಗ ಮಾಡುತ್ತಾರೆ. ಈ ಎಳ್ಳು ಎಣ್ಣೆ ಆಯುರ್ವೇದದ ಪ್ರಕಾರ ಆಯುರ್ವೇದದ ಪ್ರಕಾರ ಎಳ್ಳಿನ ಎಣ್ಣೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ದೇಹದಲ್ಲಿನ ಸುಸ್ತು ,ಆಯಾಸ ಮತ್ತು ಉಷ್ಣಾಂಶದ ತೀವ್ರತೆಯನ್ನು ಕಡಿಮೆಗೊಳಿಸುವಲ್ಲಿ ಮತ್ತು ಜಡತ್ವ ಮತ್ತು ನಿದ್ರಾಹೀನತೆ ಸಹಕಾರಿಯಾಗಿ ಎಳ್ಳು ಎಣ್ಣೆ ಕಾರ್ಯನಿರ್ವಹಿಸುತ್ತದೆ .ಇದು ನಿಮ್ಮ ದೇಹದ ಆರೋಗ್ಯವನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ಎಳ್ಳನ್ನು ನೂರಾರು ವರ್ಷಗಳಿಂದ ಆಯುರ್ವೇದ…
ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ವ್ಯಾಪ್ತಿ ಹೊಂದಿರುವ ಪ್ರತಿಷ್ಠಿತ ಬಂಟರ ಯಾನೆ ನಾಡವರ ಮಾತೃ ಸಂಘಕ್ಕೆ ಪುತ್ತೂರಿನಿಂದ 8 ಮಂದಿ ನಿರ್ದೇಶಕರುಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಕಾವು ಹೇಮನಾಥ ಶೆಟ್ಟಿ, ದಯಾನಂದ ರೈ ಮನವಳಿಕೆಗುತ್ತು, ಜಯಪ್ರಕಾಶ್ ರೈ ನೂಜಿಬೈಲು, ಕುಂಬ್ರ ದುರ್ಗಾಪ್ರಸಾದ್ ರೈ, ಸಾಜ ರಾಧಕೃಷ್ಣ ಆಳ್ವ, ಜೈರಾಜ್ ಭಂಡಾರಿ ನೋಣಾಲು, ಪುರಂದರ ರೈ ಮಿತ್ರಂಪಾಡಿ ಹಾಗೂ ವಾಣಿ ಎಸ್ ಶೆಟ್ಟಿ ನೆಲ್ಯಾಡಿರವರುಗಳನ್ನು ಆಯ್ಕೆ ಮಾಡಲಾಗಿದೆ.
ಶಿವನ ಮನೆಯಲ್ಲಿ ಕಡು ಬಡತನ ಇಲ್ಲದಿದ್ದರೂ,ಶ್ರೀಮಂತಿಕೆ ಮಾತ್ರ ಯಾವತ್ತೂ ಅವನ ಮನೆಯ ಹೊಸ್ತಿಲು ದಾಟಿ ಒಳಗೆ ಹೆಜ್ಜೆ ಇಟ್ಟಿಲ್ಲ. ನಿತ್ಯ ಕೂಲಿಗೆ ಹೋಗಿ ಸಂಸಾರ ನೌಕೆಯನ್ನು ದಡ ಸೇರಿಸುವುದಲ್ಲದೆ ಬೇರೊಂದು ದಾರಿ ಶಿವನಿಗಿಲ್ಲ. ಕಳೆದ ಏಳೆಂಟು ದಿನಗಳಿಂದ ಒಂದೂ ದಿನ ರಜೆ ಮಾಡದೆ ಕೊಡವೂರಿನಲ್ಲಿ ಬಾವಿ ಕೆಲಸಕ್ಕೆ ಹೋಗುತ್ತಿದ್ದ ಶಿವನಿಗೆ ಮುಂಜಾನೆ ಚಾಪೆಯಿಂದ ಏಳಲಾಗದೆ ಬೆನ್ನು ನೋವಿನಿಂದ ಚಡಪಡಿಸುತ್ತಿದ್ದ.ಮಲಗಿದ್ದಲ್ಲಿಯೇ ಹೆಂಡತಿಗೆ ಹೇಳಿ ಒಂದಷ್ಟು ನೋವಿನೆಣ್ಣೆಯ ಮಸಾಜು ಮಾಡಿಸಿಕೊಂಡ. ‘ಸ್ವಲ್ಪ ಹೊತ್ತು ಮಲಗುವೆ, ಬಚ್ಚಲು ಮನೆಯಲ್ಲಿ ಸ್ವಲ್ಪ ನೀರು ಕಾದಿರಲಿ,ಬೆನ್ನಿಗೆ ಶಾಖ ಕೊಡುವೆ ಎಂದು ಹೆಂಡತಿಗೆ ಹೇಳಿದ. ಅರ್ಧ ತಾಸು ಮಲಗಿ ನೋವು ಕಡಿಮೆಯಾದ ತಕ್ಷಣ ಎದ್ದು ಎರಡು ಹೆಜ್ಜೆ ಮುಂದೆ ಇಟ್ಟಿದ್ದ ಅಷ್ಟೇ, ಧೊಪ್ಪ ಅಂತ ಸಿಲಿಂಗ್ ಫ಼್ಯಾನು ಕೆಳಗೆ ಬಿತ್ತು.ಶಿವನ ಎದೆ ಧಸಕ್ಕೆಂದಿತು. ಬಿದ್ದ ಶಬ್ದಕ್ಕೆ ಎಲ್ಲರೂ ಓಡೋಡಿ ಬಂದರು.ನಾಲ್ಕು ಸೆಕುಂಡು ಅತ್ತಿತ್ತಾಗಿದ್ದರೆ ಶಿವ ಮಾತ್ರ ಆ ಶಿವನಿಗೆ ಪ್ರಿಯ ಆಗ್ತಾ ಇದ್ದ. ‘ರೀ’ ಅಂತ ಹೆಂಡತಿ ಗರಬಡಿದವಳಂತೆ ನಿಂತಿದ್ರೆ…
ಜಾನಪದವೆಂದರೆ ಜನ ಸಮುದಾಯಗಳ ಗ್ರಂಥಸ್ಥವಲ್ಲದ ಸಂಪ್ರದಾಯಗಳ ಮೊತ್ತ ಮತ್ತು ಅದನ್ನು ಕುರಿತ ವಿಜ್ಞಾನ. ಇದು ಪರಂಪರೆಯಿಂದ ಬಂದಿರುವಂತಹದ್ದು, ಅದು ನಿಂತ ನೀರಲ್ಲ, ಬದಲಾವಣೆಯನ್ನು ಹೊಂದುತ್ತಾ ಕಾಲದಿಂದ ಕಾಲಕ್ಕೆ ಬೆಳೆದುಕೊಂಡು ಬಂದಿರುತ್ತದೆ. ಇದನ್ನೇ ವಿದ್ವಾಂಸರಾದ ಪಾಟಕ ಅವರು Folklore is lovely fossil which refuses to die (ಜಾನಪದ ಎಂದೂ ಸಾಯುವುದಿಲ್ಲ, ಅದು ಜೀವಂತ ಪಳೆಯುಳಿಕೆ) ಎಂದು ಹೇಳಿದ್ದಾರೆ. ಈ ಮಾತು ಎಂದೆಂದಿಗೂ ಪ್ರಸ್ತುತವೇ ಆಗಿದೆ. ಆಧುನೀಕರಣ ಮತ್ತು ಜಾಗತೀಕರಣದ ಒತ್ತಡದ ಈ ಸಂದರ್ಭದಲ್ಲಿ ದೇಸಿ ಜ್ಞಾನ ಸಂಸ್ಕೃತಿಗಳಿಗೆ ಎಲ್ಲಿಲ್ಲದ ಮಹತ್ವ ಬರತೊಡಗಿದೆ. ಆದರೂ ಭಾರತದಂಥಹ ದೇಶಗಳಲ್ಲಿ ಸ್ಥಳೀಯವಾದ ನಮ್ಮದೇ ಆಗಿರತಕ್ಕಂತಹ ದೇಸಿ ಜ್ಞಾನ, ಕಲೆ, ಸಾಹಿತ್ಯ, ಸಂಸ್ಕೃತಿಗಳನ್ನು ಅಭಿಮಾನದಿಂದ ಗೌರವಯುತವಾಗಿ ನೋಡುವ ಮಾನಸಿಕ ಸ್ಥಿತಿ ಇನ್ನೂ ನಿರ್ಮಾಣವಾಗಬೇಕಾಗಿದೆ. ಅಂದರೆ ಪಾಶ್ಚಾತ್ಯ ಸಂಸ್ಕೃತಿಗೆ ಮರುಳಾಗಿ ನಮ್ಮದೆಯಾದ ಜಾನಪದವನ್ನು ತಿರಸ್ಕಾರ ದೃಷ್ಟಿಯಿಂದ ಕಾಣುವ ಮನಃಸ್ಥಿತಿಯಿಂದ ಹೊರ ಬರಬೇಕಾಗಿದೆ. ಇಂದು ದೇಸಿ ಜ್ಞಾನ ಸಂಸ್ಕೃತಿ ಬಗ್ಗೆ ಹೆಮ್ಮೆ, ಗೌರವಗಳು ಜನಸಮುದಾಯಗಳಲ್ಲಿ ಮೂಡಬೇಕೆಂದರೆ ಜಾನಪದವನ್ನು ವೈಜ್ಞಾನಿಕವಾಗಿ…
ಹಸಿರೇ ಉಸಿರು ಎನ್ನುವುದು ಕೇವಲ ಘೋಷ ವಾಕ್ಯವಲ್ಲ ಮನುಕುಲದ ಅಸ್ತಿತ್ವದ ಅಧಾರವಾಗಿದೆ. ಪರಿಸರ ಸಂರಕ್ಷಣೆ ಎಂದರೆ ವರ್ಷಕ್ಕೊಮ್ಮೆ ಸಸಿ ನೆಡುವ ದಿನವಲ್ಲ ವರ್ಷದ 365 ದಿನವೂ ಈ ಕಾಯಕ ನಿರಂತರವಾಗಿರಬೇಕು ಎಂದು ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್ ನುಡಿದರು. ಅವರು ಬಂಟರ ಸಂಘ ಸುರತ್ಕಲ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಧ್ಯ ಹಾಗೂ ಗ್ರಾಮ ಸೇವಾ ಸಂಘ ಮಧ್ಯ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಧ್ಯ ಶಾಲೆಯಲ್ಲಿ ನಡೆದ ಉಚಿತ ಸಸಿ ವಿತರಣಾ ಮತ್ತು ಸಾವಯವ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಮಾನವನು ಅಧುನಿಕ ಬದುಕಿನ ಗೀಳಿಗೆ ಬಿದ್ದು ಪರಿಸರವನ್ನು ನಾಶ ಮಾಡುತ್ತಿದ್ದಾನೆ. ಮನುಷ್ಯ ತನ್ನ ಅಭಿವೃದ್ದಿಗಾಗಿ ತನಗೆ ಅರಿವಿಲ್ಲದಂತೆ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಈ ಬಗ್ಗೆ ನಾವು ಜಾಗೃತರಾಗಬೇಕಿದೆ ಎಂದರಲ್ಲದೆ ಈ ನಿಟ್ಟಿನಲ್ಲಿ ಬಂಟರ ಸಂಘ ಸುರತ್ಕಲ್ ಪ್ರತಿ ವರ್ಷ ಇಂತಹ ಕಾರ್ಯಕ್ರಮ…
ಗುರಿ ಎನ್ನುವುದು ಒಂದು ಯೋಚನೆಯಲ್ಲ, ಅದು ಒಂದು ಪ್ರಯತ್ನ. ಸುಮ್ಮನೆ ಯೋಚಿಸಿಕೊಂಡು ಕೂರುವ ಬದಲು ಸತತ ಪ್ರಯತ್ನ ಪಡಬೇಕು ಆಗ ಗುರಿ ತಲುಪಲು ಸಾಧ್ಯವಾಗುತ್ತದೆ. ಶಿವ ಛತ್ರಪತಿ ಪ್ರಶಸ್ತಿ ಪುರಸ್ಕೃತ ಕ್ರೀಡಾಪಟು ಉದಯ ಶೆಟ್ಟಿ ಅವರು ಅಂತರಾಷ್ಟ್ರೀಯ ಮಟ್ಟದ ಅಪ್ರತಿಮ ಪ್ರತಿಭಾವಂತ ಕ್ರೀಡಾಪಟು. ಜುಲೈ ಒಂದರಂದು 60ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ಇವರು ಮೂಲತಃ ಉಡುಪಿ ಜಿಲ್ಲೆಯ ಕಟಪಾಡಿಯ ಸಮೀಪದ ಮಣಿಪುರ ಗ್ರಾಮದವರು. ಬೆಳಿಯೂರು ಬಂಟಕಲ್ಲು ಕೋಡಿಬೆಟ್ಟು ಸದಾಶಿವ ಶೆಟ್ಟಿ ಮತ್ತು ಗಿರಿಜಾ ಶೆಟ್ಟಿ ದಂಪತಿಗಳ ಪುತ್ರರಾದ ಇವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಣಿಪುರ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದರು. ಹೈಸ್ಕೂಲ್ ವಿದ್ಯಾಭ್ಯಾಸವನ್ನು ಅಲೆವೂರು ನೆಹರೂ ಹೈಸ್ಕೂಲಿನಲ್ಲಿ, ಪದವಿ ಪೂರ್ವ ಶಿಕ್ಷಣವನ್ನು ಬೆಂಗಳೂರಿನ ಕೆ.ಎಲ್. ಇ. ನಲ್ಲಿ ಪೂರೈಸಿದರು. ಮುಂಬೈಯ ಕೆ.ಪಿ.ಬಿ. ಹಿಂದುಜಾ ಕಾಲೇಜಿನಲ್ಲಿ 1983ರಲ್ಲಿ ತಮ್ಮ ಬಿಕಾಂ ಪದವಿಯನ್ನು ಪಡೆದರು. ಬಾಲ್ಯದಿಂದಲೂ ಕ್ರೀಡೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಶ್ರೀ ಉದಯ ಶೆಟ್ಟಿಯವರು ತಮ್ಮ ಶಾಲಾ ಶಿಕ್ಷಣದಲ್ಲಿ ಕ್ರಿಕೆಟ್, ವಾಲಿಬಾಲ್, ಅಥ್ಲೆಟಿಕ್ಸ್…
ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನಿಂದ ಜೂನ್ 15 ರಿಂದ ಯುರೋಪ್ ಯಕ್ಷಗಾನ ಅಭಿಯಾನ ನಡೆಯಲಿದೆ ಎಂದು ಯಕ್ಷ ಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಯಕ್ಷಗಾನ ಅಭಿಯಾನದಲ್ಲಿ ರಾಜ ವೇಷ, ಬಣ್ಣದ ವೇಷ, ಪಗಡಿ ವೇಷ, ಸ್ತ್ರೀ ವೇಷ, ಹಾಸ್ಯ ವೇಷಗಳು ರಾರಾಜಿಸಲಿದೆ ಎಂದರು. ಯುರೋಪ್ ದೇಶದ ವಿವಿಧ ಭಾಗಗಳಲ್ಲಿ ಕರಾವಳಿಯ ಗಂಡುಕಲೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಜೂನ್ ತಿಂಗಳಲ್ಲಿ ಲಂಡನ್, ಮಿಡ್ಲ್ಯಾಂಡ್, ದುರಾಅಮ್, ಲೀಡ್ಸ್, ಎಡಿನ್ ಬಗ್೯, ಸ್ಕಾಟ್ಲಂಡ್ ಮೊದಲಾದ ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಪ್ರವಾಸದ ನೇತೃತ್ವ ವಹಿಸಿರುವ ಪಣಂಬೂರು ವಾಸು ಐತಾಳ್ ತಿಳಿಸಿದರು. ಆಗೋಸ್ಟ್ ತಿಂಗಳಲ್ಲಿ ಫ್ರಾನ್ಸ್, ಪ್ಯಾರಿಸ್, ಫ್ರಾಂಕ್ ಫಟ್೯, ಮುನಿಚ್, ಜರ್ಮನಿ, ಬಿಲ್ಲಿಂಗಾಮ್, ದುರಾಹಮ್ ಮೊದಲಾದ ಕಡೆ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಪಣಂಬೂರು ವಾಸು ಐತಾಳ್ USA ಇವರ ನೇತೃತ್ವದಲ್ಲಿ ಪಟ್ಲ ಸತೀಶ್ ಶೆಟ್ಟಿ ಭಾಗವತರೊಂದಿಗೆ ಪ್ರೋ ಎಂ ಎಲ್ ಸಾಮಗ, ಪದ್ಮನಾಭ…
ಜಾಗತಿಕ ಬಂಟರ ಸಂಘಗಳ ಒಕ್ಕೂಟ (ರಿ.) ಮಂಗಳೂರು ಇದರ ಆಶ್ರಯದಲ್ಲಿ ಸಮಾಜ ಕಲ್ಯಾಣ ಯೋಜನೆಯ ಕಾರ್ಯಕ್ರಮ ಮೇ 29 ರಂದು ಸೋಮವಾರ ಸಂಜೆ 3.00 ಗಂಟೆಗೆ ಮುಲ್ಕಿ ಬಳಿಯ ಶ್ರೀ ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಚೇರಿ, ಶ್ರೀ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ ಶೆಟ್ಟಿಯವರು ವಹಿಸಲಿದ್ದಾರೆ. ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿಯವರು ದೀಪ ಪ್ರಜ್ವಲನೆಗೈಯಲಿದ್ದಾರೆ. ಸಮಾಜ ಕಲ್ಯಾಣ ಕಾರ್ಯಕ್ರಮದ ಉದ್ಘಾಟನೆಯನ್ನು ಎಂಆರ್ ಜಿ ಗ್ರೂಪ್ ನ ಚೇಯರ್ ಮೆನ್ ಪ್ರಕಾಶ್ ಶೆಟ್ಟಿ ನೆರವೇರಿಸಲಿದ್ದಾರೆ. ಒಕ್ಕೂಟದ ಪೋಷಕರಾದ ಆನಂದ ಶೆಟ್ಟಿ ತೋನ್ಸೆ, ಪ್ರವೀಣ್ ಭೋಜ ಶೆಟ್ಟಿ, ಶಶಿಧರ್ ಶೆಟ್ಟಿ ಬರೋಡ, ರಾಜೇಶ್ ಶೆಟ್ಟಿ ರಾಕ್ಷಿ ಬಿಲ್ಡರ್ಸ್, ರವಿನಾಥ್ ಶೆಟ್ಟಿ ಅಂಕಲೇಶ್ವರ್, ವಕ್ವಾಡಿ ಪ್ರವೀಣ್ ಶೆಟ್ಟಿ ದುಬೈ, ಎಂ ಕರುಣಾಕರ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ. ಸಮಾರಂಭದಲ್ಲಿ ಅಂಕಣಕಾರ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ, ಸತೀಶ್ ಶೆಟ್ಟಿ ಉಡುಪಿ, ಡಾ…
ಪುಣೆ ತುಳು ಕೂಟ ಯುವ ವಿಬಾಗ ಬಾಕ್ಸ್ ಕ್ರಿಕೆಟ್ ಪಂದ್ಯಾಟ ವೈಷ್ಣವಿ ಎ ತಂಡ ಚಾಂಪಿಯನ್ ಯುವಕರಿಗೆ ಪ್ರೋತ್ಸಾಹ ನೀಡುವುದು ಕ್ರೀಡಾಭಿಮಾನಿಗಳಾದ ನಮ್ಮ ಕರ್ತವ್ಯ -ಪ್ರವೀಣ್ ಶೆಟ್ಟಿ ಪುತ್ತೂರು ಪುಣೆ ; ಪುಣೆಯಲ್ಲಿ ನೆಲೆಸಿರುವ ತುಳು ಕನ್ನಡಿಗ ಯುವ ಜನತೆಯ ಒಗ್ಗಟಿಗೆ ಹೇಳಿಮಾಡಿಸಿದಂತಹ ಕೂಟ ಈ ಬಾಕ್ಸ್ ಕ್ರಿಕೆಟ್ ,ತುಳುಕೂಟ ಪುಣೆ ಪ್ರತಿ ವರ್ಷ ಇಂತಹ ಕ್ರೀಡಾ ಕಾರ್ಯಕ್ರಮಗಳನ್ನು ಮಾಡುತ್ತಾ ಬರುತಿದೆ ನಾನು ಕೂಡ ಇದನ್ನು ಕಂಡವ ,ಇಲ್ಲಿ ಜಾತಿ ಮತ ಬೇದ,ಬಡವ ಬಲ್ಲಿದ ಎಂಬ ಪ್ರಶ್ನೆಯೇ ಬರದೆ ಯುವಕ ಯುವತಿಯರು ಸೇರಿಕೊಂಡು ಕ್ರೀಡಾ ಸ್ಪೂರ್ತಿಯಿಂದ ಆಡುವ ಆಟ ನೋಡಲು ಬಹಳ ಸುಂದರವಾಗಿದೆ ,ಪರಿಚಯ ಇಲ್ಲದ ನಮ್ಮ ತುಳು ಭಾಂಧವರು ಕೂಡಾ ಸೇರುತ್ತಾರೆ ,ಅದ್ದರಿಂದ ಇಲ್ಲಿ ಪರಿಚಯ ಮಿತ್ರತ್ವ ,ಬೆಳೆದು ಅದು ಒಬ್ಬರಿಗೊಬ್ಬರು ಕಷ್ಟ ಸುಖಗಳನ್ನು ಹೇಳಿಕೊಂಡು ಸಹಾಯ ಹಸ್ತ ನೀಡುವ ವರೆಗೆ ಹೋಗುತ್ತದೆ. ಜೀವನದಲ್ಲಿ ನಾವು ಒಬ್ಬರಿಗೊಬ್ಬರು ಮಾನವೀಯ ದೃಷ್ಟಿಯಿಂದ ಸಹಾಯ ಮಾಡುವುದು ದೇವರ ಕೆಲಸವೆಂದೇ ತಿಳಿಯಬೇಕು . …