Author: admin
ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಉಪಪ್ರಾಂಶುಪಾಲ ಹಾಗೂ ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಯಾಗಿರುವ ಚೇತನ್ ಶೆಟ್ಟಿ ಕೋವಾಡಿ ಅವರಿಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ನೀಡಿದೆ. ಮಂಗಳೂರಿನ ಥಿಯೋಲಾಜಿಕಲ್ ಸಂಶೋಧನಾ ಕೇಂದ್ರದ ಮೂಲಕ ಪ್ರಸಿದ್ಧ ಅಂಕಣ ಬರಹಗಾರ, ಲೇಖಕ, ಪುತ್ತೂರಿನ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕರಾದ ಡಾ ನರೇಂದ್ರ ರೈ ದೇರ್ಲ ಅವರ ಮಾರ್ಗದರ್ಶನದಲ್ಲಿ “ಕರ್ನಾಟಕ ಕರಾವಳಿಯ ಪ್ರಾದೇಶಿಕ ಅಧ್ಯಯನದ ವಿಭಿನ್ನ ಪ್ರವೃತ್ತಿಗಳು” ಎಂಬ ವಿಷಯದ ಕುರಿತು ಸಿದ್ಧಪಡಿಸಿದ ಸಂಶೋಧನಾ ಮಹಾಪ್ರಬಂಧಕ್ಕೆ ಪದವಿ ನೀಡಲಾಗಿದೆ. ಇವರು 2014ರಲ್ಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ “ಗ್ರಾಮ ಚರಿತ್ರೆ ಕೋಶ” ಯೋಜನೆಗೆ ಹಿರಿಯ ಜಾನಪದ ವಿದ್ವಾಂಸ ಪ್ರೊ. ಎ.ವಿ. ನಾವಡ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ತಾಲೂಕಿನ ಕ್ಷೇತ್ರ ತಜ್ಞರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಂಶೋಧನಾ ಚಟುವಟಿಕೆಗಳಲ್ಲಿ ನಿರತರಾಗಿರುವ ಇವರಿಗೆ ನೇಶನ್ ಬಿಲ್ಡರ್, ಯುವರತ್ನ ಪ್ರಶಸ್ತಿಗಳು ಲಭಿಸಿವೆ. ಇವರು ಕ್ರೋಢ ಬೈಲೂರು ಕೆಳಮನೆ…
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ ಆಳ್ವಾಸ್ಗೆ ಸಮಗ್ರ ಪ್ರಶಸ್ತಿ, ಆಳ್ವಾಸ್ನ ರಾಕೇಶ್, ದುರ್ಗಾ ವೈಯಕ್ತಿಕ ಚಾಂಪಿಯನ್
ಮೂಡುಬಿದಿರೆ:ಎಲ್ಲ 10 ಕೂಟ ದಾಖಲೆಗಳನ್ನು ಬರೆದ ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜು ಇಲ್ಲಿನ ಸ್ವರಾಜ್ ಮೈದಾನದಲ್ಲಿ ಗುರುವಾರ ಮುಕ್ತಾಯಗೊಂಡ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ‘21ನೇ ಅಂತರ ಕಾಲೇಜು ವಾರ್ಷಿಕ ಅಥ್ಲೆಟಿಕ್ ಚಾಂಪಿಯನ್ಶಿಪ್ 2023-24’ರ ಪುರುಷ ಮತ್ತು ಮಹಿಳಾ ಚಾಂಪಿಯನ್ಗಳ ಸಹಿತ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಆಳ್ವಾಸ್ ಆಯುರ್ವೇದ ವೈದ್ಯಕೀಯಕಾಲೇಜಿನ ಆತಿಥ್ಯದಲ್ಲಿ ಮೂರು ದಿನ ನಡೆದ ಕ್ರೀಡಾಕೂಟದಲ್ಲಿ ಆಳ್ವಾಸ್ ಅಲೈಡ್ ಹೆಲ್ತ್ಸೈನ್ಸಸ್ನ ರಾಕೇಶ್ ಹಾಗೂ ದುರ್ಗಾ ಕ್ರಮವಾಗಿ ಪುರುಷರ ಮತ್ತು ಮಹಿಳಾ ವಿಭಾಗದ ವೈಯಕ್ತಿಕ ಚಾಂಪಿಯನ್ ಆಗಿ ಮೂಡಿಬಂದರು. 20 ಚಿನ್ನ, 9 ಬೆಳ್ಳಿ ಹಾಗೂ 5 ಕಂಚಿನ ಪದಕಗಳನ್ನು ಜಯಿಸಿ, ಒಟ್ಟು 144 ಅಂಕ ಪಡೆದ ಆಳ್ವಾಸ್ ಅಲೈಡ್ ಹೆಲ್ತ್ಸೈನ್ಸಸ್ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಪುರುಷರ ವಿಭಾಗದಲ್ಲಿ 11 ಚಿನ್ನ, 7 ಬೆಳ್ಳಿ ಹಾಗೂ 4 ಕಂಚಿನ ಪದಕಗಳ ಮೂಲಕ 91 ಅಂಕಗಳನ್ನು ಪಡೆದ ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ಸ್ ಕಾಲೇಜು ಪ್ರಶಸ್ತಿ ಎತ್ತಿ…
“ಕೊಡುವುದನ್ನು ಮುಕ್ತ ಹೃದಯದಿಂದ ಕೊಡುತ್ತಿರೋಣ, ಬರುವುದು ತಾನಾಗಿಯೇ ಬರುತ್ತದೆ. ಅದು ಪ್ರೀತಿಯಾಗಲಿ, ಸಂಪತ್ತಾಗಲಿ, ಗೌರವವಾಗಲಿ” ಕೆ.ಎಂ. ಶೆಟ್ಟಿ ಎಂದೇ ಖ್ಯಾತರಾಗಿರುವ ಶ್ರೀಯುತ ಕರುಣಾಕರ ಎಂ. ಶೆಟ್ಟಿ ಉದ್ಯಮ ರಂಗದಲ್ಲಿ ದೇಶದಲ್ಲೇ ಚಿರಪರಿಚಿತರಾದವರು. 1975 ರಲ್ಲಿ ‘ವಿ.ಕೆ. ಇಂಜಿನಿಯರ್’ ಎಂಬ ಹೆಸರಿನಿಂದ ಉದ್ಯಮರಂಗಕ್ಕೆ ಪಾದರ್ಪಣೆ ಮಾಡಿದ ಕೆ.ಎಂ. ಶೆಟ್ಟಿಯವರು ಟೂಲ್ ರೂಂ ವರ್ಕ್ ಶಾಪ್ ಯಂತ್ರೋಪಕರಣಗಳ ಮೂಲಕ ತಮ್ಮ ಕಾರ್ಯಗಾರವನ್ನು ಪ್ರಾರಂಭಿಸಿದರು. ಉದ್ಯಮ ರಂಗದಲ್ಲಿ ಉತ್ತಮ ಗುಣಮಟ್ಟದ ಇಂಜೆಕ್ಷನ್ ಮೌಲ್ಡಿಂಗ್ ಉಪಕರಣಗಳನ್ನು ಉತ್ಪಾದಿಸುವ ಮೂಲಕ ಗ್ರಾಹಕರ ವಿಶ್ವಾಸವನ್ನು ಗಳಿಸಿಕೊಂಡರು. ಉದ್ಯಮ ರಂಗದ ಈ ಯಶಸ್ಸು ಅವರು ವಿ.ಕೆ. ಗ್ರೂಪ್ ಆಫ್ ಕಂಪೆನೀಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಇದನ್ನು ದೇಶ ವಿದೇಶಗಳಲ್ಲಿ ಈ ಕಾರ್ಯಗಾರಗಳ ಶಾಖೆ ಸ್ಥಾಪನೆ ಮಾಡಿ ವಿಸ್ತರಿಸಲು ಸಾಧ್ಯವಾಯಿತು. ಕೆ.ಎಂ. ಶೆಟ್ಟಿಯವರು ಈ ಸಂಸ್ಥೆಗಳ ಕಾರ್ಯಾಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿ ಈ ಸಂಸ್ಥೆಗಳನ್ನು ಪ್ರಗತಿಯತ್ತ ಮುನ್ನಡೆಸಿದರು. ಈಗ ಈ ಕಂಪೆನಿಯಲ್ಲಿ ಗೃಹೋಪಯೋಗಿ ಇಲೆಕ್ಟ್ರಿಕಲ್ ವಸ್ತುಗಳಾದ ಮಿಕ್ಸರ್ಸ್, ಗ್ರೈಂಡರ್ಸ್, ಆಹಾರ ಸಂಸ್ಕರಣ ಉಪಕರಣ,…
ಮುತ್ತು ಗೋಪಾಲ್ ಫಿಲಂಸ್ ಲಾಂಛನದಲ್ಲಿ ಸತೀಶ್ ಪೂಜಾರಿ ನಿರ್ಮಾಣದಲ್ಲಿ ತಯಾರಾದ ಗಬ್ಬರ್ ಸಿಂಗ್ ತುಳು ಸಿನಿಮಾದ ಪೋಸ್ಟರ್ ಬಿಡುಗಡೆ ಅಡ್ಯಾರ್ ನಲ್ಲಿ ನಡೆದ ಶಿವದೂತೆ ಗುಳಿಗೆ ನಾಟಕದ 555 ನೇ ಪ್ರದರ್ಶನ ಸಮಾರಂಭದಲ್ಲಿ ಜರಗಿತು. ಸಿನಿಮಾ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು, ಸಂಗೀತ ನಿರ್ದೇಶಕ ಗುರುಕಿರಣ್ ಶೆಟ್ಟಿ ಪೋಸ್ಟರ್ ಬಿಡುಗಡೆಗೊಳಿಸಿದರು. ಎಸ್ ಸಿಡಿಸಿಸಿ ಬ್ಯಾಂಕ್ ನ ಅಧ್ಯಕ್ಷ ಎಂಎನ್ ರಾಜೇಂದ್ರ ಕುಮಾರ್, ಕನ್ಯಾನ ಸದಾಶಿವ ಶೆಟ್ಟಿ, ವಿಜಯಕುಮಾರ್ ಕೊಡಿಯಾಲ್ ಬೈಲ್, ನಿರೂಪಕಿ ಅನುಶ್ರೀ, ಗಣ್ಯರಾದ ಶಶಿಧರ ಶೆಟ್ಟಿ ಬರೋಡ, ಪದ್ಮರಾಜ್ ಆರ್. ಬಿ. ನಾಗರಾಜ ಶೆಟ್ಟಿ, ಕುಮಾರ ಎನ್. ಬಂಗೇರ, ಹರೀಶ್ ಬಂಗೇರ, ಪ್ರಕಾಶ್ ಪಾಂಡೇಶ್ವರ, ಆರ್.ಕೆ. ನಾಯರ್, ಮನೋಹರ ಪ್ರಸಾದ್, ಕಾಸರಗೋಡು ಚಿನ್ನಾ, ಮತ್ತಿತರರು ಉಪಸ್ಥಿತರಿದ್ದರು. ಗಬ್ಬರ್ ಸಿಂಗ್ ಸಿನಿಮಾದಲ್ಲಿ ಅಭಿನಯಿಸಿರುವ ಶರಣ್ ಶೆಟ್ಟಿ, ಭೋಜರಾಜ ವಾಂಮಜೂರು, ಗಿರೀಶ್ ಎಂ ಶೆಟ್ಟಿ ಕಟೀಲು, ಉದಯ ಆಳ್ವ, ಸಂಭಾಷಣೆಕಾರ ಮಧು ಶೆಟ್ಟಿ ಸುರತ್ಕಲ್, ಶಿಲ್ಪಾ ಆರ್ ಶೆಟ್ಟಿ ಮೊದಲಾದವರು…
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ 2ನೇ ದಿನವೂ ಆಳ್ವಾಸ್ ಪಾರಮ್ಯ ಮೂಡುಬಿದಿರೆ
ಇಲ್ಲಿನ ಸ್ವರಾಜ್ ಮೈದಾನದಲ್ಲಿ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ಆತಿಥ್ಯದಲ್ಲಿ ನಡೆಯುತ್ತಿರುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ‘21ನೇ ಅಂತರ ಕಾಲೇಜುವಾರ್ಷಿಕ ಅಥ್ಲೆಟಿಕ್ ಚಾಂಪಿಯನ್ಶಿಪ್ 2023-24’ನ ಎರಡನೇ ದಿನವಾದ ಬುಧವಾರವೂ ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ಸ್ನ ಕ್ರೀಡಾಪಟುಗಳು ಪಾರಮ್ಯ ಮೆರೆದಿದ್ದಾರೆ. ಎರಡನೇ ದಿನದ ಅಂತ್ಯಕ್ಕೆ ಪುರುಷರ ವಿಭಾಗದಲ್ಲಿ ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ಸ್ 70 ಅಂಕಗಳೊಂದಿಗೆ ಪ್ರಥಮ ಸ್ಥಾನ ಪಡೆದರೆ, ಮೂಲ್ಕಿಯ ಸೈಂಟ್ ಅನ್ಸ್ ಕಾಲೇಜು 13 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆಯಿತು. ಮಹಿಳಾ ವಿಭಾಗದಲ್ಲಿ ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ಸ್ 38 ಅಂಕಗಳೊಂದಿಗೆ ಪ್ರಥಮ ಸ್ಥಾನ ಮುಂದುವರೆಸಿದರೆ, ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ ಆ್ಯಂಡ್ ಯೋಗಿಕ್ ಸೈನ್ಸ್ಸ್ 19 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆಯಿತು. ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ಸ್ ಕಾಲೇಜು ಪುರುಷರ ವಿಭಾಗದಲ್ಲಿ 9 ಚಿನ್ನ, 4 ಬೆಳ್ಳಿ ಹಾಗೂ 3 ಕಂಚಿನ ಪದಕಗಳನ್ನು ಪಡೆದರೆ, ಮಹಿಳಾ ವಿಭಾಗದಲ್ಲಿ ಆಳ್ವಾಸ್ ಆಲೈಡ್ ಹೆಲ್ತ್ ಸೈನ್ಸ್ಸ್ ಕಾಲೇಜು 5…
ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ನಲ್ಲಿ ಸಿಬಿಎಸ್ಸಿ ಬೋರ್ಡ್ ಪ್ರಾಯೋಜಕತ್ವದಲ್ಲಿ ಅ.10 ರಂದು ಶಿಕ್ಷಕರಿಗೆ ಸೈಬರ್ ಸುರಕ್ಷತೆ ಮತ್ತು ಭದ್ರತೆಯ ಕುರಿತು ‘ಸಾಮರ್ಥ್ಯ ಅಭಿವೃದ್ಧಿ’ ತರಬೇತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಮಂಗಳೂರಿನ ಪೆÇೀದಾರ್ ಇಂಟರ್ನ್ಯಾಷನಲ್ ಸ್ಕೂಲ್ನ ಪ್ರಾಂಶುಪಾಲರಾದ ಗಿರೀಶ್ ಕುಮಾರ್ ಹಾಗೂ ಗಂಜಿಮಠದ ರಾಜ್ ಅಕಾಡೆಮಿ ಹೈಸ್ಕೂಲಿನ ಪ್ರಾಂಶುಪಾಲೆ ಶ್ರೀಮತಿ ಪ್ರವೀಣಾ ಶೆಟ್ಟಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಅವರು ಸೈಬರ್ ಭದ್ರತೆ , ಬ್ಯಾಂಕ್ ವಂಚನೆ, ಸೈಬರ್ ಕ್ರೈಮ್, ಕಂಪ್ಯೂಟರ್ಫೋರೆನಿಕ್ಸ್, ಸೈಬರ್ ಜಾಗೃತಿ, ಸೈಬರ್ ಕಾನೂನು ಮತ್ತು ಕಾಯ್ದೆ ಮುಂತಾದ ವಿಷಯಗಳ ಕುರಿತು ಪರಿಪೂರ್ಣ ಮಾಹಿತಿ ನೀಡಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ನಾವೆಲ್ಲರೂ ಇಂದು ಕೇವಲ ಒಂದು ದೇಶದ ಪ್ರಜೆಗಳಲ್ಲ, ಜೊತೆಗೆ ಸೈಬರ್ ಪ್ರಪಂಚದ ಸದಸ್ಯರಾಗಿದ್ದೇವೆ ಹಾಗಾಗಿ ಅದರ ಅನುಕೂಲ ಹಾಗೂ ಅನಾನುಕೂಲಗಳ ಅರಿವು ಇರಬೇಕು ಎಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಅಂತರ್ಜಾಲದ ಯುಗದಲ್ಲಿ ಬದುಕುತ್ತಿರುವ ನಮಗೆ ಸಾಮಾಜಿಕ ಮಾಧ್ಯಮಗಳ…
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ: ಸಂಶೋಧನೆ, ಪೇಟೆಂಟ್, ಉತ್ಪಾದನೆಯಲ್ಲಿ ವಿನೂತನ ಹೆಜ್ಜೆ ಆಳ್ವಾಸ್ ಸಂಶೋಧನಾ ನೀತಿ ಕರಡು ಬಿಡುಗಡೆ
ಮೂಡುಬಿದಿರೆ: ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡೆಯಲ್ಲಿ ಅನನ್ಯ ಛಾಪು ಮೂಡಿಸಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಹಲವಾರು ಆವಿಷ್ಕಾರಿಕ ಕೊಡುಗೆಗಳನ್ನು ನೀಡುತ್ತಿದ್ದು, ಗುರುವಾರ ‘ಆಳ್ವಾಸ್ ಸಂಶೋಧನಾ ನೀತಿ’ ಕರಡನ್ನು ಬಿಡುಗಡೆ ಮಾಡಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನ ಎಂಬಿಎ ವಿಚಾರಸಂಕಿರಣ ಸಭಾಂಗಣದಲ್ಲಿ ‘ಶೈಕ್ಷಣಿಕ ಸಂಸ್ಥೆಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯ ಪ್ರಸ್ತುತತೆ ಕುರಿತು ಶನಿವಾರ ಹಮ್ಮಿಕೊಂಡ ಸಿಬ್ಬಂದಿ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಣಿಪಾಲ ಸ್ಕೂಲ್ ಆಫ್ ಲೈಫ್ಸೈನ್ಸ್ ನಿರ್ದೇಶಕ ಡಾ.ಬಿ.ಎಸ್. ಸತೀಶ್ ರಾವ್ ಕರಡು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ‘ಸಂಶೋಧನೆ ಇಲ್ಲದೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಉಳಿವಿಲ್ಲ. ಅಧ್ಯಯನಕ್ಕೆ ಭವಿಷ್ಯವಿಲ್ಲ’ ಎಂದರು. ‘ಜ್ಞಾನ- ವಿಜ್ಞಾನಗಳ ಸೌಂದರ್ಯವು ಸಂಶೋಧನೆಯಲ್ಲಿ ಇದೆ. ದೃಷ್ಟಿಕೋನ, ಕಾರ್ಯಕ್ರಮ, ಮೌಲ್ಯಗಳ ಮೂಲಕ ಈಗಾಗಲೇ ಜಗತ್ತಿನ ಜನರ ಹೃದಯಕ್ಕೆ ಪರಿಚಿತವಾಗಿರುವ ಆಳ್ವಾಸ್, ಸಂಶೋಧನಾ ಕ್ಷೇತ್ರದಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ’ ಎಂದರು. ‘ಸಂಶೋಧನೆಯು ವೃತ್ತಿಯಲ್ಲ. ಅದು ಮನೋತ್ಸಾಹ. ಜೀವನ ಪ್ರೀತಿ. ವೃತ್ತಿಯ ರೀತಿ-ನೀತಿ. ಆದರೆ, ಪರಿಣಾಮಕಾರಿ ಜಾರಿಗೆ…
ಮುಂಬಯಿ (ಆರ್ಬಿಐ), ನ.29: ಮಂಗಳೂರು ಅಡ್ಯಾರ್ ಇಲ್ಲಿನ ಸಹ್ಯಾದ್ರಿ ಇಂಜಿನೀಯರಿಂಗ್ ಕಾಲೇಜ್ನ ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ್ರಯಗಿ ಕಾರ್ಯ ನಿರ್ವಹಿಸುತ್ತಿರುವ ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಇವರು ಬೆಳ್ಳಿಪಯಡಿ ಡಾ| ಶಮಂತ್ ರೈ ಅವರ ಮಾರ್ಗದರ್ಶನದಲ್ಲಿ ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯದಲ್ಲಿ ಮಂಡಿಸಿದ “ಎ ಫಾರ್ಮಲ್ ಸ್ಟಾಟಿಸ್ಟಿಕಲ್ ಡೇಟಾ ಮಾಡೆಲಿಂಗ್ ಆಂಡ್ ಪೆÇ್ರೀಗ್ಲೋಸ್ಟಿಕ್ ರೀಸನಿಂಗ್ಯೂ ಸಿಂಗ್ ಡೇಟಾ ಅನಲಿಟಿಕ್ಸ್” ಎಂಬ ಸಂಶೋಧನಾ ಪ್ರಬಂಧಕ್ಕೆ ದೇಶದ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ಪ್ರಾಪ್ತಿಸಿದೆ. ರಿತೇಶ್ ಪಕ್ಕಳ ಇವರು ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಷಯದಲ್ಲಿ ತನ್ನ ಇಂಜಿನಿಯರಿಂಗ್, ಸ್ನಾತಕೋತ್ತರ ಹಾಗೂ ಪಿಹೆಚ್.ಡಿ ಪದವಿಯನ್ನು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜ್ನಿಂದ ಪಡೆದ ಪ್ರಪ್ರಥಮ ವಿದ್ಯಾರ್ಥಿ ಆಗಿದ್ದಾರೆ. ರಿತೇಶ್ ಇವರು ಪೆರ್ಮಂಕಿ ಗುತ್ತು ಮೋಹನ್ ಪಕ್ಕಳ ದಂಪತಿ ಸುಪುತ್ರರಾಗಿದ್ದಾರೆ.
ಪುಣೆಯ ಪ್ರತಿಷ್ಠಿತ ರೋಯಲ್ ಕಾನೊಟ್ ಬೋಟ್ ಕ್ಲಬ್ “ನ ಅಧ್ಯಕ್ಷ , ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ, ಯಶಸ್ವಿ ಉದ್ಯಮಿ, ಸಮಾಜ ಸೇವಕ ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆಯವರು ನಿಧನರಾಗಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯ ಕುಕ್ಕೆಹಳ್ಳಿ ದೊಡ್ಡಬೀಡು ಗಣಪಯ್ಯ ಹೆಗ್ಡೆ ಹಾಗೂ ಮೊಳಹಳ್ಳಿ ಶ್ರೀಮತಿ ಮುತ್ತಕ್ಕ ಹೆಗ್ಡೆ ದಂಪತಿಗಳ ಸುಪುತ್ರನಾಗಿ ಜನಿಸಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಶಿಕ್ಷಣವನ್ನು ಪಡೆದು ನಂತರ ಮಹಾರಾಷ್ಟ್ರದ ಪುಣೆಗೆ ಆಗಮಿಸಿ ಪುಣೆಯ ಐ ಎಲ್ ಎಸ್ ಲಾ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಪಡೆದಿದ್ದರು. ಜೀವನದಲ್ಲಿ ಮಹತ್ವಾಕಾಂಕ್ಷೆ ಹೊಂದಿದ್ದ ಇವರ ದೂರದರ್ಶಿತ್ವದ ಗುಣದಿಂದ ಕೆಮಿಕಲ್ ಉದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡು ಕಾರ್ಯಪ್ರವೃತ್ತರಾಗಿ ಸತತ ಪರಿಶ್ರಮ ಹಾಗೂ ಸಕಾರಾತ್ಮಕ ಚಿಂತನೆಯೊಂದಿಗೆ ಮುನ್ನಡೆದು ಬಿ ಕೆ ಬೆಂಝಿಲ್ ಪ್ರೈವೆಟ್ ಲಿಮಿಟೆಡ್ ಹಾಗೂ ಅಕ್ಷಯ್ ಆರ್ಗಾನಿಕ್ ಪ್ರ . ಲಿ ಎನ್ನುವ ಕಂಪೆನಿಗಳ ಮೂಲಕ ಉದ್ಯಮ ಕ್ಷೇತ್ರದಲ್ಲಿ ಯಶಸ್ಸಿನ್ನು ಪಡೆದುಕೊಂಡು ಪ್ರಸಿದ್ಧಿಯನ್ನು ಗಳಿಸಿದ್ದರು. ಉದ್ಯಮದ ಪ್ರಗತಿಯೊಂದಿಗೆ ಸಾಮಾಜಿಕ ಕಾರ್ಯಗಳಲ್ಲಿಯೂ ಆಸಕ್ತಿ ಬೆಳೆಸಿಕೊಂಡು ಯಾವುದೇ ಪ್ರಸಿದ್ಧಿಯನ್ನು…
ಮೂಡುಬಿದಿರೆ: ವಿಜ್ಞಾನವನ್ನು ಕೇವಲ ಪುಸ್ತಕದ ಮೂಲಕ ಅರಿತರೆ ಸಾಲದು ನಮ್ಮ ಸುತ್ತಮುತ್ತಲಿನ ಪರಿಸರದಿಂದಲೂ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು ಎಂದು ಆತ್ಮಾ ಸಂಶೋಧನ ಕೇಂದ್ರದ ಮುಖ್ಯ ವೈಜ್ಞಾನಿಕ ಅಧಿಕಾರಿ ಹಾಗೂ ಆಳ್ವಾಸ್ ದ್ರವ್ಯಗುಣ ವಿಭಾಗದ ಪ್ರಾಧ್ಯಪಕ ಡಾ. ಫರ್ಹಾನ್ ಜಮೀರ್ ಹೇಳಿದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಇಕೋ ಕ್ಲಬ್ವತಿಯಿಂದ ಡಾ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಹಮ್ಮಿಕೊಂಡ ‘’ಶೈಕ್ಷಣಿಕ ಪರಿಧಿಯಾಚೆಗಿನ ಬದುಕಿನ ಅನ್ವೇಷಣೆ’’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು . ಶಿಕ್ಷಣದ ಮೂಲ ಉದ್ದೇಶ ಅಂಕಗಳಿಸುದಷ್ಟೆ ಅಲ್ಲ. ತನ್ನಲ್ಲಿ ಹುದುಗಿರುವ ಕೌಶಲಗಳ ವೃದ್ಧಿ ಮುಖ್ಯವಾಗಿರುತ್ತದೆ. ಯಾವುದೇ ವಿಷಯವನ್ನು ಗ್ರಹಿಸಿ ಅರ್ಥಮಾಡಿಕೊಳ್ಳಬೇಕೆ ವಿನಃ ಕಂಠಪಾಠ ಮಾಡುವುದು ಒಳಿತಲ್ಲ. ವಿಜ್ಞಾನದ ವಿಷಯಗಳನ್ನು ನಿಜ ಜೀವನದಲ್ಲಿ ಸಹಸಂಬಂಧಿಸಿ ಗ್ರಹಿಸುವುದು ಮುಖ್ಯ. ಹೆಣ್ಣು ಮಕ್ಕಳು ವಿಷಯವನ್ನು ಇದ್ದ ಹಾಗೆ ಬರೆದರೆ ಗಂಡು ಮಕ್ಕಳು ಅದೇ ವಿಷಯನ್ನು ವಿಭಿನ್ನ ರೀತಿಯಲ್ಲಿ ಬರೆಯುತ್ತಾರೆ. ಇದಕ್ಕೆ ಕಾರಣ ಹುಡುಗರ ಮೆದುಳು ತಾರ್ಕಿಕ ಸ್ಮರಣೆಗೆ ಹೆಚ್ಚಿನ ಒತ್ತು ನೀಡಿದರೆ (ಲಾಜಿಕಲ್ ಮೆಮೊರಿ) ಹಾಗೂ ಹುಡುಗಿಯರ ಮೆದುಳು…














