Author: admin

‘ಒಂದು ಮೊಟ್ಟೆಯ ಕಥೆ’ ಮೂಲಕ ಸೈಲೆಂಟ್‌ ಆಗಿ ಬಂದ ರಾಜ್‌ ಬಿ ಶೆಟ್ಟಿ ಈಗ ಸಖತ್‌ ವೈಲೆಂಟ್‌ ಆಗಿದ್ದಾರೆ. ಈಗಾಗಲೇ ‘ಗರುಡ ಗಮನ ವೃಷಭ ವಾಹನ’ ಮೂಲಕ ಕೈಗೆ ರಕ್ತಮೆತ್ತಿಕೊಂಡಿದ್ದ ರಾಜ್‌ ಶೆಟ್ಟಿ ಈ ಬಾರಿ ಇಡೀ ಪೂರ್ತಿ ದೇಹಕ್ಕೆ ರಕ್ತಾಭಿಷೇಕ ಮಾಡಿಕೊಂಡಂತಿದೆ. ಅವರ ಈ ರಕ್ತತರ್ಪಣಕ್ಕೆ ಕಾರಣವಾಗಿರೋದು ‘ಟೋಬಿ’. ನಿಮಗೆ ಗೊತ್ತಿರುವಂತೆ ರಾಜ್‌ ಬಿ ಶೆಟ್ಟಿ ‘ಟೋಬಿ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಆಗಸ್ಟ್‌ 25ರಂದು ತೆರೆಕಾಣುತ್ತಿದೆ. ಈಗಾಗಲೇ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿದ್ದು, ಸಿನಿಮಾದೊಳಗಿನ ಮಾಸ್‌ ಎಲಿಮೆಂಟ್ಸ್‌ ಅನ್ನು ಎತ್ತಿಹಿಡಿದಿದೆ. ರೆಡ್‌ ಥೀಮ್‌ನೊಂದಿಗೆ ಮೂಡಿಬಂದಿರುವ ಈ ಫ‌ಸ್ಟ್‌ಲುಕ್‌ನಲ್ಲಿ ರಾಜ್‌ ಬಿ ಶೆಟ್ಟಿ ರಗಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಮುಖದ ತುಂಬಾ ಕುರುಚಲು ಗಡ್ಡ, ಮೂಗಿನಲ್ಲೊಂದು ದೊಡ್ಡ ಮೂಗುತಿ, ತಲೆ, ಮೂಗಿನ ಮೇಲೆ ರಕ್ತಸೋರುತ್ತಿರುವ ಗಾಯ… ಹೀಗೆ ಔಟ್‌ ಅಂಡ್‌ ಔಟ್‌ ಮಾಸ್‌ ಫೀಲ್‌ ಕೊಡುವ ‘ಟೋಬಿ’ ಚಿತ್ರದ ಫ‌ಸ್ಟ್‌ಲುಕ್‌ ವೈರಲ್‌ ಆಗಿದೆ. ಈಗ ಚಿತ್ರದ…

Read More

ಒಂದು ಕಾಲದಲ್ಲಿ ಆರ್ಥಿಕವಾಗಿ ಬಡತನದ ಬೇಗೆಯಲ್ಲಿ ಬಳಲುತ್ತಿದ್ದ ಯಕ್ಷಗಾನ‌ ಕಲಾವಿದರಿಗೆ ಆಸರೆಯ ದ್ಯೋತಕವಾಗಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಮೂಲಭೂತ ಸಹಕಾರಗಳನ್ನು ನೀಡುತ್ತಾ ಜನ ಮಾನಸದಲ್ಲಿ ನೆಲೆಗೊಳ್ಳುತ್ತಿರುವ ನಡುವೆ ಈ ಪ್ರೋತ್ಸಾಹಕ ಸಂಘಟನೆಗೆ ಪೋಷಕವಾಗಿ ಹಲವಾರು ದಾನಿಗಳು ತಮ್ಮ ಕೈಲಾದ ಕೊಡುಗೆ ನೀಡುತ್ತಾ ಯಕ್ಷ ಕಲೆಯನ್ನು ಶ್ರೀಮಂತಗೊಳಿಸುತ್ತಿರುವುದು ವರ್ತಮಾನದಲ್ಲಿ ಕಾಣಬಹುದಾಗಿದೆ. ಇದಕ್ಕೊಂದು ಸ್ಪಷ್ಟ ನಿದರ್ಶನ ಎಂಬಂತೆ ಪ್ರಪ್ರಥಮ ಬಾರಿಗೆ ಗಲ್ಫ್ ರಾಷ್ಟ್ರದಲ್ಲಿ ನಡೆದ ವಿಶ್ವ ಪಟ್ಲ ಸಂಭ್ರಮವು ಸಾವಿರಾರು ಯಕ್ಷಾಭಿಮಾನಿಗಳ ಸಮ್ಮುಖದಲ್ಲಿ ಯಶಸ್ವಿಯಾಗಿ ಜರುಗಿರುವುದಲ್ಲದೆ ವಿವಿದೆಡೆಯ ಗಣ್ಯರನ್ನು ವಿಶ್ವ ಮಟ್ಟದಲ್ಲಿ ಗುರುತಿಸಿ ಸಂಭ್ರಮಿಸಿರುವುದು ಈ ಬಾರಿ ದುಬೈಯಲ್ಲಿ ನಡೆದ ವಿಶ್ವ ಪಟ್ಲ ಸಂಭ್ರಮದ ಸವಿಶೇಷತೆಯಾಗಿದೆ. ಯಕ್ಷಗಾನ ಅಭ್ಯಾಸ ಕೇಂದ್ರ ಯುಎಇ ಮತ್ತು ಪಟ್ಲ ಘಟಕ ದುಬೈಯ ಸಹಯೋಗದೊಂದಿಗೆ ಜೂನ್ 11ರಂದು ದುಬೈಯ ಇಂಡಿಯನ್ ಹೈಸ್ಕೂಲ್ ನ ಶೇಖ್ ರಷೀದ್ ಸಭಾಂಗಣದಲ್ಲಿ ಜರಗಿದ ದುಬೈ ಯಕ್ಷೋತ್ಸವ 2023 ಮತ್ತು ವಿಶ್ವ ಪಟ್ಲ ಸಂಭ್ರಮಕ್ಕೆ ಸಾವಿರಾರು ಮಂದಿ ಸಾಕ್ಷಿಯಾಗಿರುವುದಲ್ಲದೆ ವಿವಿಧ ಕೊಡುಗೆ ನೀಡುವ ಜತೆಗೆ ಅವಿಸ್ಮೆಣೀಯವಾಗಿ…

Read More

ಗೋವಿನ ಪ್ರತಿಯೊಂದು ಉತ್ಪನ್ನವೂ ಪವಿತ್ರವಾದುದು. ಕೃಷಿ, ಗೋವು ಮತ್ತು ಮನುಷ್ಯನ ನಡುವೆ ಅವಿನಾಭಾವ ಸಂಬಂಧವಿದೆ ಎಂದು ಉಡುಪಿ ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು. ಅವರು ಹಾರಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಕಾಮಧೇನು, ಕಲ್ಪತರು ಸೇವಾ ಸಮಿತಿ ಅಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಜರಗಿದ ಗೋ ಸಮಾವೇಶ ಮತ್ತು ಕೃಷಿ ಮೇಳ ಉದ್ಘಾಟಿಸಿದರು. ಕೃಷಿಗೆ ಗೋವು ಪೂರಕ. ಯುವ ಪೀಳಿಗೆ ಕೃಷಿ, ಗೋವಿನ ಮಹತ್ವ ಅರಿಯುವಂತಾಗಲಿ. ಸಮ್ಮೇಳನವು ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ಪ್ರೇರಣೆಯಾಗಲಿ ಎಂದರು. ಗೋವಿನಲ್ಲಿ 33 ಕೋಟಿ ದೇವತೆಗಳ ಆಶ್ರಯವಿದೆ. ದೇವಸ್ಥಾನಕ್ಕೆ ತೆರಳಿ ಪೂಜಿಸುವುದಕ್ಕಿಂತ ಮನೆಯಲ್ಲೇ ಗೋವಿನ ಸಾಕಾಣಿಕೆ, ಆರಾಧನೆ ಅಧಿಕ ಪುಣ್ಯದಾಯಕ ಎಂದರು. 5 ರೂ. ಹೆಚ್ಚಳ : ಕೃಷಿಕ ಹಾಗೂ ಹೈನುಗಾರರ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತಿಲ್ಲ. ಪ್ರತಿಕೂಲ ವಾತಾವರಣವಿದೆ. ಹಾಲಿನ ಉತ್ಪಾದನೆ ಕುಸಿತಗೊಂಡಿದೆ. ಆದ್ದರಿಂದ ಹಾಲಿಗೆ ಕನಿಷ್ಠ 5 ರೂ. ಹೆಚ್ಚುವರಿಯಾಗಿ ದೊರೆಯಬೇಕು ಎಂದು ರವಿರಾಜ ಹೆಗ್ಡೆ ಕೊಡವೂರು…

Read More

– ಕೆ .ಸಂತೋಷ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ .ಉಡುಪಿ ಜಿಲ್ಲೆ. ಪರಿಸರದಲ್ಲಿ ಸಿಗುವ ಸಸ್ಯಜನ್ಯ ಸಂಪತ್ತುಗಳಲ್ಲಿ ಪುದಿನ ಎಂಬ ಎಲೆ ದೇಹಕ್ಕೆ ಪರಿಣಾಮಕಾರಿ ಸಂಪತ್ತನ್ನು ನೀಡುತ್ತದೆ. ಅದಲ್ಲದೆ ಪ್ರಾಕೃತಿಕವಾಗಿ ನೀಡುವಂತಹ ಪುದಿನ ದೈನಂದಿನ ಆಹಾರ ಪದಾರ್ಥಗಳಲ್ಲಿ ಮತ್ತು ಅಡುಗೆ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ ಅದಲ್ಲದೆ, ಪುದಿನ ಸೊಪ್ಪಿನಿಂದ ಬೇಕಾಗುವಂತಹ ಸಸ್ಯಜನ್ಯ ಸಂಪತ್ತುಗಳಿಂದ ವಿಶಿಷ್ಟ ರೀತಿಯಲ್ಲಿ ನಾವು ವಿವಿಧ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಮತ್ತು ಆಹಾರದ ವಿಶಿಷ್ಟ ಗುಣಲಕ್ಷಣಗಳನ್ನು ಹೊಂದಿರುವಂತಹ ಪ್ರಕೃತಿಗೆ ಸೀಮಿತವಾಗಿರುವಂತಹ ಆಹಾರ ಪದಾರ್ಥಗಳನ್ನು ಸಿದ್ಧಪಡಿಸುವಾಗ ಅಥವಾ ದೇಹಕ್ಕೆ ಬೇಕಾಗುವಂತಹ ಪ್ರೋಟೀನ್ ಮತ್ತು ಪೌಷ್ಟಿಕಾಂಶಗಳನ್ನು ಅಗಾಧ ಪ್ರಮಾಣದಲ್ಲಿ ಪುದಿನ ಸೊಪ್ಪು ನೀಡುತ್ತದೆ ಸೊಪ್ಪಿನ ಬಹುಮುಖ್ಯ ಗುಣಗಳಾದ ವಿಟಮಿನ್ ಸಿ ಹಾಗೂ ಕ್ಯಾಲೋರಿ ಅಂತಹ ಅಂಶಗಳನ್ನು ಎಚ್ಚೆತವಾಗಿ ನೀಡುವುದಲ್ಲದೆ ರಕ್ತ ಪರಿಚಲನೆಗೆ ಇದು ಸಹಕಾರಿಯಾಗುತ್ತದೆ ಪುದಿನ ಸೊಪ್ಪಿನಲ್ಲಿ ಇರುವಂತಹ ಕೈ ಅಂಶವು ದೇಹದಲ್ಲಿನ ಸಕ್ಕರೆ ಕಾಯಿಲೆ ಮಧುಮೇಹ ಮಲಬದ್ಧತೆಯನ್ನು ನಿವಾರಣೆಗೆ ಇದು ಫಲಪ್ರದವಾಗುತ್ತದೆ.  ಪುದೀನಾ ಅನ್ನು ಇಂದಲೂ ಬಳಕೆ ಮಾಡಲಾಗುತ್ತಿದೆ. ಪುದೀನಾ ಹಸಿರು…

Read More

ಪುಣೆ ಬಂಟರ ಸಂಘದ ವಿಶ್ವಸ್ಥರಾಗಿ ಮುಂಬಯಿಯ ಖ್ಯಾತ ಉದ್ಯಮಿ ಹಾಗೂ ಸಮಾಜಸೇವಕರಾದ ಕನ್ಯಾನ ಸದಾಶಿವ ಶೆಟ್ಟಿ ಹಾಗೂ ಪ್ರವೀಣ್ ಭೋಜ ಶೆಟ್ಟಿಯವರು ಗೌರವಾದರಗಳಿಂದ ನೇಮಕಗೊಂಡಿದ್ದಾರೆ . ಪುಣೆ ಬಂಟರ ಸಂಘದ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಇತ್ತೀಚಿಗೆ ಸಂಘದ ಪದಾಧಿಕಾರಿಗಳೊಂದಿಗೆ ಮುಂಬಯಿಯ ಅವರ ನಿವಾಸಗಳಿಗೆ ತೆರಳಿ ಸಂಘದ ವತಿಯಿಂದ ಅವರನ್ನು ಗೌರವಿಸಿದರು . ಈ ಸಂದರ್ಭ ಪುಣೆ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಅಜಿತ್ ಕೆ ಹೆಗ್ಡೆ , ಜತೆ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ನಿಟ್ಟೆ,ದಕ್ಷಿಣ ಪ್ರಾದೇಶಿಕ ಸಮಿತಿಯ ಪದಾಧಿಕಾರಿಗಳಾದ ಸುಧಾಕರ ಸಿ ಶೆಟ್ಟಿ ,ದಾಮೋಧರ ಶೆಟ್ಟಿ ,ವಸಂತ್ ಶೆಟ್ಟಿ ಹಾಗೂ ದಿನೇಶ್ ಶೆಟ್ಟಿಯವರು ಉಪಸ್ಥಿತರಿದ್ದರು. ಉದ್ಯಮ ಕ್ಷೇತ್ರದ ಮೇರು ಸಾಧಕ ಕನ್ಯಾನ ಸದಾಶಿವ ಶೆಟ್ಟಿ ಮೂಲತಃ ಮಂಜೇಶ್ವರ ಕನ್ಯಾನ ಕುಳೂರಿನ ಫಕೀರ ಶೆಟ್ಟಿ ಹಾಗೂ ಶೀಲಾವತಿ ದಂಪತಿಗಳ ಸುಪುತ್ರರಾದ ಸದಾಶಿವ ಶೆಟ್ಟಿಯವರು ಪ್ರಾಥಮಿಕ ಹಾಗೂ ಹೈಸ್ಕೂಲ್ ಶಿಕ್ಷಣವನ್ನು ಹುಟ್ಟೂರಿನಲ್ಲೇ ಮುಗಿಸಿ ಕಾಲೇಜು ಶಿಕ್ಷಣವನ್ನು ಮಂಗಳೂರಿನ ಸಂತ…

Read More

ಬಂಟರ ಯಾನೆ ನಾಡವರ ಮಾತೃ ಸಂಘ (ರಿ), ದ.ಕ. ಮಂಗಳೂರು ಇದರ ಕುಂದಾಪುರ ತಾಲೂಕು ಸಮಿತಿ ವತಿಯಿಂದ 2022-23ನೇ ಸಾಲಿನ ಕುಂದಾಪುರ ಪ್ರತಿಷ್ಟಿತ ಆಡ್ವರ್ಡ್ ಮೆಮೋರಿಯಲ್ ಕ್ಲಬ್ ಅಧ್ಯಕ್ಷರಾಗಿ ಆಯ್ಕೆಯಾದ ಚಿತ್ತರಂಜನ್ ಹೆಗ್ಡೆ ಹರ್ಕೂರು ಅವರನ್ನು ಸನ್ಮಾನಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸಂಚಾಲಕರಾದ ಆವರ್ಸೆ ಸುಧಾಕರ ಶೆಟ್ಟಿ ವಹಿಸಿದ್ದರು. ಚಿತ್ತರಂಜನ್ ಹೆಗ್ಡೆ ಅವರು ಬಂಟರ ಯಾನೆ ನಾಡವರ ಮಾತೃ ಸಂಘ ಕುಂದಾಪುರ ತಾಲೂಕು ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಕುಂದಾಪುರ ಭೂ ನ್ಯಾಯ ಮಂಡಳಿ ಸದಸ್ಯರು ಹಾಗೂ ಹಲವಾರು ಸಂಘ ಸಂಸ್ಥೆಗಳ ಸದಸ್ಯರಾಗಿದ್ದಾರೆ. ಇವರನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಜೊತೆ ಕಾರ್ಯದರ್ಶಿಯಾದ ಸಂಪಿಗೇಡಿ ಸಂಜೀವ ಶೆಟ್ಟಿ ಸನ್ಮಾನಿಸಿದರು. ತಾಲೂಕು ಸಮಿತಿಯ ಸದಸ್ಯರಾದ ಕಾವ್ರಾಡಿ ಸಂಪತ್ ಕುಮಾರ್ ಶೆಟ್ಟಿಯವರು ಪುರಸ್ಕೃತರನ್ನು ಪರಿಚಯಿಸಿದರು. ತಾಲೂಕು ಸಮಿತಿ ಸದಸ್ಯರಾದ ಕೆಂಚನೂರು ಸೋಮಶೇಖರ ಶೆಟ್ಟಿ, ರೋಹಿತ್ ಕುಮಾರ್ ಶೆಟ್ಟಿ, ಸುಪ್ರೀತಾ ದೀಪಕ್ ಶೆಟ್ಟಿ, ಭೂ ಅಭಿವೃದ್ಧಿ ಬ್ಯಾಂಕಿನ ಮಲ್ಯಾಡಿ ಶಿವರಾಮ ಶೆಟ್ಟಿ ಕೆ, ರಮೇಶ…

Read More

ಈ ಬಾರಿ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿಯು ಅಭ್ಯರ್ಥಿಗಳನ್ನು ಬದಲಿಸಲಿದ್ದು, ಆ ಪೈಕಿ ಕಾಪು ಕ್ಷೇತ್ರ ಕೂಡ ಒಂದು ಎಂದು ತಿಳಿದು ಬಂದಿದೆ. ಕಾಪು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಹಲವಾರು ಪ್ರಮುಖ ಮುಖಂಡರು ಪ್ರಯತ್ನಿಸುತ್ತಿದ್ದು, ಆ ಪೈಕಿ ಹಿರಿಯ ನಾಯಕ ಸುರೇಶ್ ಶೆಟ್ಟಿ ಗುರ್ಮೆ ಹೆಸರು ಗಟ್ಟಿಯಾಗಿ ಕೇಳಿ ಬರುತ್ತಿದೆ. ಇವರ ಹೆಸರು ಕಳೆದ ಬಾರಿಯೇ ಕೇಳಿ ಬಂದಿದ್ದು, ಕೊನೆ ಕ್ಷಣಕ್ಕೆ ಬದಲಾದ ಬೆಳವಣಿಗೆಯಲ್ಲಿ ಹಿಂದಿನ ಶಾಸಕ ಲಾಲಾಜಿ ಆರ್. ಮೆಂಡನ್ ಅವರಿಗೇ ಟಿಕೆಟ್ ನೀಡಲಾಗಿತ್ತು. ಸುರೇಶ್ ಶೆಟ್ಟಿ ಬಿಜೆಪಿಯಲ್ಲಿ ತಳ ಮಟ್ಟದಿಂದ ಪಕ್ಷ ಸಂಘಟನೆ ಮಾಡಿದ್ದು, ಜಿಲ್ಲಾ ಉಪಾಧ್ಯಕ್ಷರಾಗಿ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ದುಡಿದವರು. ಕಳೆದ ಬಾರಿ ಟಿಕೆಟ್ ಸಿಗದಿದ್ದರೂ ಬಿಜೆಪಿಯ ಅಭ್ಯರ್ಥಿಯ ಗೆಲುವಿಗೆ ವಿಶೇಷವಾಗಿ ಶ್ರಮಿಸಿದ್ದರು. ಆ ಬಳಿಕವೂ ಪಕ್ಷ ಸಂಘಟನೆ ಮಾಡುತ್ತಾ ಪಕ್ಷ ನಿಷ್ಠೆ ತೋರಿದವರು. ಬೆಂಗಳೂರಿನಲ್ಲಿ ಹಿರಿಯ ನಾಯಕರ ಜತೆಗೂ ಉತ್ತಮ ಸಂಬಂಧ, ಸಂಪರ್ಕ ಬೆಳೆಸಿಕೊಂಡಿರುವ ಅವರು ಯಾವುದೇ ಕೆಲಸವನ್ನೂ ಛಲ ತೊಟ್ಟು ಮಾಡುವವರು, ಮಾಡಿಸುವವರು.…

Read More

ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಮಡುಂಬು ಹೊಸಮನೆ ಸದಾನಂದ ಬಿ. ಶೆಟ್ಟಿ ಮತ್ತು ಬೆಳ್ಳಂಪಳ್ಳಿ ಪುಂಚೂರು ಮಾಧವ ನಿಲಯ ಹೇಮಾ ಎಸ್. ಶೆಟ್ಟಿ ದಂಪತಿ ಪುತ್ರಿ ಸಿನಿ ಶೆಟ್ಟಿ ಹುಟ್ಟಿದ್ದು ಮತ್ತು ಬೆಳೆದಿದ್ದೆಲ್ಲಾ ಮುಂಬಯಿಯಲ್ಲಿಯಾದರೂ ತಮ್ಮ ಮೂಲ ಊರಿನ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದಾರೆ. ಇದು ನನ್ನ ಜೀವನದ ಅದ್ಭುತ ಕ್ಷಣ. ಬಹಳಷ್ಟು ನಿರೀಕ್ಷೆಯೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ. ಮಿಸ್‌ ಇಂಡಿಯಾ ಆಗಿ ಮೂಡಿ ಬಂದದ್ದಕ್ಕೆ ಖುಷಿಯಾಗಿದೆ. ಹೆತ್ತವರ ಪ್ರೋತ್ಸಾಹ, ದೈವ ದೇವರ ಆಶೀರ್ವಾದದೊಂದಿಗೆ ಮುಂದಿನ ಮಿಸ್‌ ವರ್ಲ್ಡ್ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿರುವೆ ಎಂದು ಹೇಳಿದ್ದಾರೆ ಸಿನಿ ಶೆಟ್ಟಿ. ಕರ್ನಾಟಕವನ್ನು ಪ್ರತಿನಿಧಿಸಿದ್ದ ಸಿನಿ ಶೆಟ್ಟಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಪ್ರತಿನಿಧಿಯಾಗಿ ಸ್ಪರ್ಧೆಗೆ ಕಾಲಿರಿಸಿದ್ದ ಅವರು ಟಾಪ್‌ 10ರಲ್ಲಿ ಆಯ್ಕೆಯಾಗಿದ್ದರು. ಎ. 28ರಂದು ನಡೆದ ಸ್ಪರ್ಧೆಯಲ್ಲಿ ಮಿಸ್‌ ಕರ್ನಾಟಕ ಆಗಿ ಆಯ್ಕೆಯಾದ ಬಳಿಕ ಮಹಾರಾಷ್ಟ್ರ ಪ್ರಾತಿನಿಧ್ಯದಿಂದ ಹಿಂದೆ ಸರಿದು ಮಿಸ್‌ ಇಂಡಿಯಾ ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದರು. ಅಂತಿಮ ಸುತ್ತಿನ ಸ್ಪರ್ಧೆಗೆ ಆಯ್ಕೆಯಾದ…

Read More

ಡಾ.ಕರುಣಾಕರ ಶೆಟ್ಟಿ ಪಣಿಯೂರು, ಪಾಂಗಳ ವಿಶ್ವನಾಥ ಶೆಟ್ಟಿ ಮತ್ತು ಶೃತಿ ಅಭಿಷೇಕ್ ಶೆಟ್ಟಿಯವರು ಬರೆದಿರುವ ಒಟ್ಟು 14 ಕೃತಿಗಳು ಡಿಸೆಂಬರ್ 30ರಂದು ಥಾಣೆ ಪೂರ್ವ, ಎಲ್.ಬಿ.ಎಸ್ ಮಾರ್ಗ, ರಹೇಜಾ ಗಾರ್ಡನ್ ಎದುರಿಗಿರುವ ವುಡ್ ಲ್ಯಾಂಡ್ ರಿಟ್ರೇಟ್ ಹೋಟೆಲ್ ಲ್ಲಿ ಸಂಜೆ 4 ಗಂಟೆಗೆ ಸರಿಯಾಗಿ ಲೋಕಾರ್ಪಣೆಗೊಳ್ಳಲಿದೆ. ಬಾಳೊಂದು ಉಯ್ಯಾಲೆ ಮತ್ತು ದೂರದ ಬೆಟ್ಟ (ಕಥಾ ಸಂಕಲನ), ವಿಚಾರ ವಿಮರ್ಶೆ -4 ಅನಾವರಣ (ಕೃತಿ ಸಮೀಕ್ಷೆ), ಕಾರಂತ ಪ್ರೇಮಚಂದ್ರ ಅನುಸಂಧಾನ, ಪ್ರದೀಪ ಅನಾವರಣ, ಓದಿದ್ದು ಹೊಳೆದದ್ದು, ಪಾಂಗಳದ ಪಿಂಗಾರ (ಅಭಿನಂದನಾ ಗ್ರಂಥ) ಹೀಗೆ ಡಾ. ಕರುಣಾಕರ ಶೆಟ್ಟಿ ಪಣಿಯೂರು ಅವರ ಲೇಖನಿಯಿಂದ ರೂಪುಗೊಂಡಿರುವ ಹತ್ತು ಕೃತಿ ರತ್ನಗಳು ಬಿಡುಗಡೆಗೊಳ್ಳಲಿದೆ. ಪುಣೆಯ ಕವಿ ಪಾಂಗಾಳ ವಿಶ್ವನಾಥ ಶೆಟ್ಟಿಯವರ ಸಾವಿರ ನೆನಪಿನ ಗೂಡು, (ಬಾಲ್ಯದ ನೆನಪುಗಳು), ಮಾತು ಮುತ್ತಾದಾಗ (ಕವನ ಸಂಕಲನ), ಧರೆಗಿಳಿದ ಸೂರ್ಯ (ಕಥಾ ಸಂಕಲನ) ಕೃತಿ ಲೋಕಾರ್ಪಣೆಯಾಗಲಿದೆ. ತಂದೆಯವರ ಸಾಹಿತ್ಯದಿಂದ ಪ್ರೇರಿತರಾಗಿ ಇಂಗ್ಲಿಷ್ ನಲ್ಲಿ ‘ಅಬ್ ಸ್ಟ್ರಾಕ್ಟ್ -ಪೀಸ್ ಆಫ್ ಮೈ ಮೈಂಡ್’…

Read More

ತುಳು ಸಿನಿಮಡ್ ನಮ ನಾಟಕ ತೂವೊಂದಿತ್ತ. ಆಂಡ ಇತ್ತೆ ನಾಟಕೊಡೇ ಎಡ್ಡೆ ಸಿನಿಮಾ ತೂವೊಂದುಲ್ಲ. ಇದು ಅಕ್ಷರಬ್ರಹ್ಮ, ಕಲಾಮಾಣಿಕ್ಯ ವಿಜಯಕುಮಾರ್ ಕೋಡಿಯಾಲ್‌ಬೈಲ್‌ರವರ ‘ಮೈತಿದಿ’ ಸಾಮಾಜಿಕ ನಾಟಕ ನೋಡಿದ ಬಳಿಕ ಪ್ರೇಕ್ಷಕ ವರ್ಗದಿಂದ ಕೇಳಿಬರುವ ಪ್ರಶಂಸನೀಯ ಮಾತುಗಳು. ಚಾರಿತ್ರಿಕ ದಾಖಲೆಯೊಂದಿಗೆ ಮುನ್ನುಗ್ಗುತ್ತಿರುವ ‘ಶಿವಧೂತೆ ಗುಳಿಗೆ’ ಎಂಬ ಪೌರಾಣಿಕ ಕಥಾ ಹಂದರದಿಂದ ಹೊರ ಬಂದು ಸಾಮಾಜಿಕ ನೆಲೆಗಟ್ಟಿನ ಕಥೆಯಿಂದ ಹೆಣೆದ ನಾಟಕದ ಪ್ರತಿಯೊಂದು ದೃಶ್ಯವೂ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ಸಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಸದಾ ಹೊಸತನ ಮೂಲಕವೇ ಹೆಸರು ಮಾಡಿರುವ ಕೋಡಿಯಾಲ್‌ಬೈಲ್ ಅವರ ‘ಮೈತಿದಿ’ ನಾಟಕ ನವರಸಗಳ ಮಿಳಿತದೊಂದಿಗೆ ರಂಗಭೂಮಿಗೆ ಹೊಸ ಆಯಾಮ ನೀಡಿದೆ. ಇದು ಬರೀ ನಾಟಕವಲ್ಲ ನಮ್ಮ ನಿಮ್ಮೊಳಗಿನ ಜೀವನದ ಕಥೆ. ಸಮಾಜದಲ್ಲಿ ಈಗ ನಡೆಯುತ್ತಿರುವ ಪಿಡುಗುಗಳನ್ನು ನವರಸಗಳ ಪಾಕದೊಂದಿಗೆ ಮನಮುಟ್ಟುವಂತೆ ಕಟ್ಟಿಕೊಟ್ಟಿದ್ದಾರೆ ಕೋಡಿಯಾಲಬೈಲ್. ನಾಟಕದ ತುಂಬಾ ಬಡತನದ ನೋವಿದೆ. ಖುಷಿ ಇದೆ. ದೇಶಪ್ರೇಮ ಇದೆ. ಸಾಮರಸ್ಯ ಇದೆ. ನೈಜತೆ ಇದೆ. ಅಕ್ಕರೆಯೂ ಇದೆ. ಕೆಲವೊಂದು ದೃಶ್ಯದಲ್ಲಿ ಪ್ರೇಕ್ಷಕರ ಕಣ್ಣಂಚನ್ನು ತೇವಗೊಳಿಸುವ…

Read More