Author: admin

ವೆಂಕೀಸ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಸಿಲ್ವಾಸ ಇದರ ಆಡಳಿತ ನಿರ್ದೇಶಕ ಅಮಿತ್ ಶೆಟ್ಟಿ ರೆಂಜಾಳ ಹಾಗೂ ಮಾತಾಶ್ರೀ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಅಂಕ್ಲೇಶ್ವರ ಇದರ ಆಡಳಿತ ನಿರ್ದೇಶಕ ಅಜಿತ್ ಶೆಟ್ಟಿ ಇವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರ ವಿಶೇಷ ಮನವಿಗೆ ಸ್ಪಂದಿಸಿ ಮತ್ತು ಒಕ್ಕೂಟದಲ್ಲಿ ನಡೆಯುವ ಜನಪರ ಕಾಳಜಿಯ ಸಾಮಾಜಿಕ ಕಾರ್ಯಗಳಿಗೆ ಒತ್ತು ನೀಡುವ ಸಲುವಾಗಿ ಒಕ್ಕೂಟಕ್ಕೆ ಪೋಷಕ ಸದಸ್ಯರಾಗಿ ಸೇರ್ಪಡೆಗೊಂಡಿದ್ದಾರೆ. ಇವರನ್ನು ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಹೂಗುಚ್ಚ ನೀಡಿ ಅಭಿನಂದಿಸಿದರು. ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ್ ಶೆಟ್ಟಿ ಮತ್ತು ಕೋಶಾಧಿಕಾರಿ ಮೋಹನದಾಸ್ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಗಿರೀಶ್ ಶೆಟ್ಟಿ ಜೊತೆಗಿದ್ದರು.

Read More

ಕೊರೊನಾ ಸಂಕಷ್ಟದಲ್ಲಿ ದೇಶವನ್ನು ಉಳಿಸಿದ ನಾಯಕ ನರೇಂದ್ರ ಮೋದಿ ಎಂಬ ಖುಷಿ ನಮಗಿದೆ. ಅಂತಹ ಮಹಾನ್‌ ವ್ಯಕ್ತಿ ಪ್ರಧಾನಿಯಾಗಿರುವ ಸಂದರ್ಭದಲ್ಲಿ ಶಾಸಕನಾಗಿ ಕ್ಷೇತ್ರದ ಜನತೆಯ ಸೇವೆ ಮಾಡುವ ಭಾಗ್ಯ ಸಿಕ್ಕಿರುವುದು ನನ್ನ ಭಾಗ್ಯ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರು ಹೇಳಿದರು. ಅವರು ಅರಳ ಬಿಜೆಪಿ ಮಹಾಶಕ್ತಿ ಕೇಂದ್ರದಲ್ಲಿ ನಡೆದ ಬಿಜೆಪಿ ಪ್ರಮುಖ ಕಾರ್ಯಕರ್ತರ ಚುನಾವಣ ಸಭೆಯಲ್ಲಿ ಮಾತನಾಡಿದರು. ಮೋದಿ ನೇತೃತ್ವದಲ್ಲಿ ಜಗತ್ತಿನ ಅತ್ಯಂತ ಕಡಿಮೆ ಹಣದುಬ್ಬರ ಇರುವ ದೇಶ ಭಾರತವಾಗಿದ್ದು, ಕೊರೊನಾ ಬಳಿಕದ ದಿನಗಳಲ್ಲಿ ಅರ್ಥಿಕ ವ್ಯವಸ್ಥೆಯಲ್ಲಿ ಸುಧಾರಣೆ ತಂದಿರುವ ಕೀರ್ತಿ ಬಿಜೆಪಿ ಡಬ್ಬಲ್‌ ಇಂಜಿನ್‌ ಸರಕಾರಕ್ಕೆ ಸಲ್ಲುತ್ತದೆ ಎಂದು ಅವರು ಹೇಳಿದರು. ಕಿಯೋನಿಕ್ಸ್‌ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್‌, ಬುಡಾ ಅಧ್ಯಕ್ಷ ದೇವದಾಸ್‌ ಶೆಟ್ಟಿ, ಕ್ಷೇತ್ರ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ, ಕ್ಷೇತ್ರದ ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ದಿನೇಶ್‌ ಶೆಟ್ಟಿ ದಂಬೆದಾರ್‌, ಗ್ರಾಮ ಪಂಚಾಯತ್‌ ಅಧ್ಯಕ್ಷ…

Read More

ಬೈಲೂರು ಶ್ರೀ ಮಹಿಷಮರ್ದಿನಿ ದೇಗುಲಕ್ಕೆ ಸಂಬಂಧಪಟ್ಟ ಶ್ರೀ ಧೂಮಾವತಿ ದೈವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಆಲಯ ಪರಿಗ್ರಹ, ಶಿಲ್ಪಿ ಮಾರ್ಯದೆ, ಸಾಮೂಹಿಕ ಪ್ರಾರ್ಥನೆ, ತೋರಣ ಮುಹೂರ್ತ, ಸಪ್ತ ಶುದ್ಧಿ, ವಾಸ್ತು ಪೂಜೆ ನಡೆಯಿತು. ಬೆಳ್ಳಿಯಿಂದ ತಯಾರಿಸಲಾದ ಮೂಲ ಮಹಿಷಂತಾಯ, ಧೂಮಾವತಿ, ಬಂಟ, ಪಂಜುರ್ಲಿ ದೈವಗಳ ಮೂರ್ತಿ ಮತ್ತು ಆಯುಧಗಳನ್ನು ಮೆರವಣಿಗೆಯಲ್ಲಿ ತಂದು ದೈವಸ್ಥಾನಕ್ಕೆ ಸಮರ್ಪಿಸಲಾಯಿತು. ತಂತ್ರಿಗಳಾದ ವೇ| ಮೂ| ವಿ| ಕೆ.ಎ. ರಮಣ ತಂತ್ರಿ ಕೊರಂಗ್ರಪಾಡಿ, ವೇ| ಮೂ| ವಿ| ಕೆ.ಎಸ್‌. ಕೃಷ್ಣಮೂರ್ತಿ ತಂತ್ರಿ ಕೊರಂಗ್ರಪಾಡಿ ಅವರ ನೇತೃತ್ವದಲ್ಲಿ ಮಾ. 17ರಂದು ನೂತನ ಶಿಲಾಮಯ ಆಲಯದಲ್ಲಿ ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವ ನಡೆಯಿತು. ಅನಂತರ ಅನ್ನಸಂತರ್ಪಣೆ, ನೇಮ ಜರಗಿತು. ಮೆರವಣಿಗೆಯಲ್ಲಿ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ, ತಂತ್ರಿಗಳಾದ ರಮಣ ತಂತ್ರಿ, ಪ್ರಧಾನ ಅರ್ಚಕ ವಾಸುದೇವ ಭಟ್, ರಮೇಶ ಶೆಟ್ಟಿ, ನವೀನ ಭಂಡಾರಿ, ಬೈಲೂರು ದೇವಳದ ಮೊಕ್ತೇಶ್ವರ ಮೋಹನ್ ಮುದ್ದಣ ಶೆಟ್ಟಿ, ಕಿರಣ ಕುಮಾರ್ ಬೈಲೂರು, ಅರುಣ ಶೆಟ್ಟಿಗಾರ್, ಸುದರ್ಶನ ಶೇರಿಗಾರ್, ಜಯಕರ ಶೆಟ್ಟಿ…

Read More

ಕರ್ನಾಟಕ ಕುಸ್ತಿ ಸಂಘದ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀ ಪ್ರಸಾದ್ ಶೆಟ್ಟಿಯವರನ್ನು ಮಾಜಿ ಮುಖ್ಯಮಂತ್ರಿಗಳು ಹಾಗೂ ಹಾಲಿ ಶಾಸಕರಾದಂತಹ ಸನ್ಮಾನ್ಯ ಶ್ರೀ ಜಗದೀಶ್ ಶೆಟ್ಟರ್ ಮತ್ತು ಅವರ ಶ್ರೀಮತಿಯಾದ ಶಿಲ್ಪ ಜಗದೀಶ್ ಶೆಟ್ಟರ್ ರವರು ಸನ್ಮಾನಿಸಿದರು. ಪ್ರಸಾದ್ ಶೆಟ್ಟಿಯವರು ಯುವ ಉದ್ಯಮಿಯಾಗಿ ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ನೆಟ್ಟಾಳ ಮುತ್ತಪ್ಪ ರೈ ಅವರ ಆಪ್ತರಲ್ಲಿ ಒಬ್ಬರಾಗಿದ್ದ ಶೆಟ್ಟರು ಪ್ರಸ್ತುತ ಗುಣರಂಜನ್ ಶೆಟ್ಟಿಯವರ ಜಯಕರ್ನಾಟಕ ಸಂಘಟನೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ತನ್ನ ಬಳಿ ಕಷ್ಟ ಹೇಳಿಕೊಂಡು ಸಹಾಯ ಕೇಳಲು ಬಂದವರಿಗೆ ಯಾವುದೇ ಪ್ರಚಾರ ಬಯಸದೆ ಸಮಾಜಸೇವೆ ಮಾಡುತ್ತಾ ಬರುತ್ತಿದ್ದಾರೆ.

Read More

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಕೈಲ್ ಕೆರೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ಉಡುಪಿ ಜಿಲ್ಲಾಧಿಕಾರಿ ಕುಮಾರ್ ರಾವ್ ಎಂ .ಭೇಟಿ ನೀಡಿದರು. ಇತ್ತೀಚಿಗೆ ಜಿಲ್ಲಾಧಿಕಾರಿಯವರು ಜಿಲ್ಲಾಧಿಕಾರಿಗಳ ನಡೆಯ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಕುಂದಾಪುರ ತಾಲೂಕಿನ ಹಾರ್ದಳ್ಳಿ -ಮಂಡಳಿ ಗ್ರಾಮ ವಾಸ್ತವ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಕೈಲ್ ಕೆರೆ- ಮಾವಿನಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಶ್ರೀಮತಿ ಚೈತ್ರ ವಿ. ಅಡಪ ಅವರ ಕ್ಷೇತ್ರಗಳಿಗೆ ಭೇಟಿ ನೀಡಿ ಹೈನು ಉದ್ಯಮ ಮತ್ತು ತೋಟಗಾರಿಕೆ ಹಾಗೂ ಕೃಷಿ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ ಸಾಧನೆಯನ್ನು ಪರಿಚಯಿಸಿಕೊಂಡರು. ಶ್ರೀಮತಿ ಚೈತ್ರ ವಿ.ಅಡಪ ಹೈನು ಉದ್ಯಮದ ಬಗ್ಗೆ ಹಾಗೂ ಹೈನು ಉದ್ಯಮದಲ್ಲಿ ಮಹಿಳೆಯಾಗಿ ಸಮಾಜ ಸೇವೆಯನ್ನ ಗುರುತಿಸಿಕೊಂಡು ತನ್ನದೇ ಆದಂತಹ ಕಾರ್ಯ ವ್ಯಾಪ್ತಿ ಗುರುತಿಸಿಕೊಂಡು, ಗ್ರಾಮದ ಮಹಿಳೆಯರಿಗೆ ಮಾದರಿಯಾದ ಬಗ್ಗೆ ಹಾಗೂ ಮಹಿಳೆಯಾಗಿ ಸಮಾಜದಲ್ಲಿ ವಿಶೇಷ ಸಾಧನೆ ಮಾಡಿ ಇತರರಿಗೂ ಮಾದರಿಯಾಗಿದ್ದ ಬಗ್ಗೆ, ಜಿಲ್ಲಾಧಿಕಾರಿ ಕುಮಾರ್ ರಾವ್.ಎಂ ಅಭಿನಂದಿಸಿದರು. ತೋಟಗಾರಿಕೆ…

Read More

ಬಂಟರ ಸಂಘ ಮುಂಬಯಿ ಸಂಚಾಲಿತ ಎಸ್.ಎಮ್. ಶೆಟ್ಟಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಗೌರವ್ ಜಗನ್ನಾಥ ಶೆಟ್ಟಿ ಐ.ಪಿ.ಎಸ್ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ. ಇವರು ಉನ್ನತ ವಿದ್ಯಾಭ್ಯಾಸವನ್ನು ನೆರೂಲ್ ನ ಡಿ.ವೈ.ಪಾಟೀಲ್ ವಿದ್ಯಾ ಸಂಕುಲದಲ್ಲಿ ಪೂರೈಸಿದ್ದರು. ಈತ ಮೂಲತಃ ಪೆರ್ನ ದೊಡ್ಡಮನೆ ಸುಬ್ಬಯ್ಯ ಶೆಟ್ಟಿಯವರ ಮೊಮ್ಮಗ, ಎರ್ಮಾಳು ಲೋಕನಾಡು ಮನೆ ಸುರೇಶ ಚೌಟ ಅವರ ಅಳಿಯ, ಬಾಂಡುಪ್ ನ ಹನುಮಾನ್ ಹೊಟೇಲಿನ ಮಾಲೀಕ ಸಿದ್ಧಕಟ್ಟೆ ಕೊನರೆ ಗುತ್ತು ಜಗನ್ನಾಥ ಸೀತಾರಾಮ ಶೆಟ್ಟಿ ಹಾಗೂ ಎರ್ಮಾಳು ಲೋಕನಾಡು ಮನೆ ಆಶಾ ಜಗನ್ನಾಥ ಶೆಟ್ಟಿ ದಂಪತಿಯ ಪುತ್ರ ಹಾಗೂ ಸ್ವಾತಿ ಜೆ ಶೆಟ್ಟಿಯ ಸಹೋದರ. ಬಂಟ ಸಮುದಾಯದ ಕೀರ್ತಿ ಕಲಶಕ್ಕೆ ಗರಿಯ ತೊಡಿಸುವಂತಹ ಯಶಸ್ವೀ ವೃತ್ತಿ ಬದುಕು ತಮ್ಮದಾಗಲಿ ಎಂದು ಸಮಸ್ತ ಬಂಟ ಸಮಾಜದ ಪರವಾಗಿ ಶುಭ ಹಾರೈಸುತ್ತಿದ್ದೇವೆ.

Read More

ದುಬೈ : ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಅಬುಧಾಬಿ ಕರ್ನಾಟಕ ಸಂಘದ 41 ನೇ ವರ್ಷದ ಕರ್ನಾಟಕ ರಾಜ್ಯೋತ್ಸವವು ಅಬುಧಾಬಿ ನಗರದ ಇಂಡಿಯನ್ ಸೋಷಿಯಲ್ ಅಂಡ್ ಕಲ್ಚರಲ್ ಸೆಂಟರ್ ಅಬುಧಾಬಿಯ ಸಭಾಂಗಣದಲ್ಲಿ ಅದ್ದೂರಿಯಾಗಿ ಜರುಗಿತ್ತು. ಕರ್ನಾಟಕ ಸಂಘದ ಸದಸ್ಯೆಯರು ಕರ್ನಾಟಕದ ನಾಡಗೀತೆ ಹಾಡುವುದರ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನೃತ್ಯ, ಗಾಯನ, ಕಿರು ನಾಟಕ ಜರುಗಿದುವು. ಭಾರತೀಯ ರಾಯಭಾರಿಯವರಿಂದ ಉದ್ಘಾಟನೆಯ ವಿಶೇಷತೆ ಯು.ಎ.ಇ.ಯ ಭಾರತೀಯ ದೂತವಾಸದ ರಾಯಭಾರಿಗಳಾದ ಗೌರವಾನ್ವಿತ ಸಂಜಯ್ ಸುಧೀರ್ ರವರು ದೀಪವನ್ನು ಬೆಳಗಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು. ಇಂಡಿಯನ್ ಸೋಷಿಯಲ್ ಅಂಡ್ ಕಲ್ಚರಲ್ ಸೆಂಟರ್ (ISC) ಅಬುಧಾಬಿಯ ಅಧ್ಯಕ್ಷರಾದ ಶ್ರೀಯುತರಾದ ಡಾ. ನಟರಾಜನ್,ಇಂಡಿಯನ್ ಎಂಬೆಸಿ ಕಮ್ಯೂನಿಟಿ ಅಫೇರ್ಸ್ ಮುಖ್ಯಸ್ಥೆ ಶ್ರೀಮತಿ ರೀಶಾ ಒಬೆರಾಯ್ , ಹಾಸ್ಯ ಕಲಾವಿದೆ ಶ್ರೀಮತಿ ಸುಧ ಬರಗೂರು, ಕನ್ನಡಿಗರು ದುಬೈಯ ಸಾದನ್ ದಾಸ್,ಅಲ್ ಐನ್ ಕನ್ನಡ ಸಂಘದ ವಿಮಲ್ ಕುಮಾರ್,ಪದ್ಮನಾಭ ಆಚಾರ್ಯ, ಉದ್ಯಮಿ ಸುಂದರ ಶೆಟ್ಟಿ,ಸಂಘದ ಅಧ್ಯಕ್ಷರಾದ ಸರ್ವೋತ್ತಮ…

Read More

ಯಶಸ್ವಿ ಉದ್ಯಮಿ ಗಳಾಗಿರುವ ಪುಣೆ ಬಂಟರ ಸಂಘದ ಮಾಜಿ ಅಧ್ಯಕ್ಷ ಮೊಳಹಳ್ಳಿ ಬಾಲಕೃಷ್ಣ ಹೆಗ್ಡೆ ಮತ್ತು ಶಶಿ ಹೆಗ್ಡೆ ದಂಪತಿ ಹಾಗೂ ಲೈಫ್‌ಲೈನ್ ಫೀಡ್ಸ್ ಇಂಡಿಯಾ ಪೈ. ಲಿ.ಯ ಅಧ್ಯಕ್ಷರು. ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೈಲ್ಕೆರೆ ಕಿಶೋರ್ ಕುಮಾರ್ ಹೆಗ್ಡೆ ಮತ್ತು ಸುರೇಖಾ ಹೆಗ್ಡೆ ದಂಪತಿಗಳಿಗೆ ಹುಟ್ಟೂರ ಸಮಾನವು ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಪತಿ ಡಾ. ಎಂ. ಶಾಂತಾರಾಮ ಶೆಟ್ಟಿ ಅಧ್ಯಕ್ಷತೆಯಲ್ಲಿ ರವಿವಾರ ಮೊಳಹಳ್ಳಿಯ ಮಲ್ನಾಡ್ ಟೈಲ್ಸ್ ಆವರಣದಲ್ಲಿ ನಡೆಯಿತು. ಮೂಡಬಿದಿರೆಯ ಎಜುಕೇಶನ್ ಆಳ್ವಾಸ್ ಫೌಂಡೇಶನ್‌ನ ಪ್ರವರ್ತಕ ಡಾ. ಎಂ. ಮೋಹನ ಆಳ್ವ ಸನ್ಮಾನಿತರನ್ನು ಗೌರವಿಸಿದರು. ಅವರು ಮಾತನಾಡಿ ಸಾಧನೆ ಮಾಡಿದ ಸಾಧಕರಲ್ಲಿ ಎರಡು ಬಗೆಯ ಸಾಧಕರು ಇದ್ದಾರೆ. ಅವರಲ್ಲಿ ಮೊದಲನೇ ವರ್ಗ ಇತಿಹಾಸ ಫಲದಿಂದ ಸಾಧನೆ ಮಾಡಿಕೊಂಡು ಬಂದವರು. ಎರಡನೇ ವರ್ಗದವರು ಶೂನ್ಯದಿಂದ ಹೊರಟು ಸಾಧನೆಯ ಗೌರಿಶಂಕರ ಶಿಖರವನ್ನು ಏರಿದವರು. ಇಂದು ನಾವು ಮಾಡಿದ ಸನ್ಮಾನಿತರು ಈ ಎರಡನೇ ವರ್ಗಕ್ಕೆ ಸೇರಿದವರು ಎಂದರು. ಪ್ರಪಂಚದಲ್ಲಿ ಇಂದು ಇಂತಹ ಸಾಧಕರೇ ಜಾಸ್ತಿ ಇರುವುದನ್ನು…

Read More

ಸಣ್ಣ ಪ್ರಾಯದಲ್ಲೇ ಸಾಯಿ ಪ್ರೊಡಕ್ಷನ್ ಎಂಬ ಈವೆಂಟ್ ಸಂಸ್ಥೆಯನ್ನು ಹುಟ್ಟುಹಾಕಿ ಯಶಸ್ವಿಯಾಗಿ, ತನ್ನ ಸ್ವರ ಮಾಧುರ್ಯದಿಂದ ಕಾರ್ಯಕ್ರಮ ನಿರೂಪಕನಾಗಿ ದೇಶ ವಿದೇಶದಲ್ಲಿ ಪ್ರಸಿದ್ದಿ ಪಡೆದು, ಕನ್ನಡ ಚಲನಚಿತ್ರದಲ್ಲಿ ನಾಯಕನಾಗಿ ನಟಿಸಿದ ಸಾಹಿಲ್ ರೈ ಅವರಿಗೆ ಸಮಸ್ತ ಬಂಟ ಸಮಾಜದ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದೇವೆ.

Read More

ಮನುಷ್ಯನಾದವನು ತನ್ನ ಭವಿಷ್ಯ, ಜೀವನ ಸುಖ, ಸಂತಸ, ಸಮೃದ್ಧಿಯಿಂದ ತುಂಬಿರಬೇಕು. ಸಮಾಜದಲ್ಲಿ ಉತ್ತಮ ಸ್ಥಾನಮಾನಗಳು ಲಭಿಸಬೇಕು. ಸಮಾಜಕ್ಕೆ ತನ್ನಿಂದ ಉಪಕಾರವಾಗಬೇಕು ಎಂಬ ಕನಸು ಕಾಣುವುದು ತಪ್ಪಲ್ಲ. ಆದರೆ ಕನಸ್ಸನ್ನು ನನಸಾಗಿಸುವ ಛಲ, ಪ್ರಾಮಾಣಿಕ ಪ್ರಯತ್ನ, ಅದರ ಬೆನ್ನು ಹಿಡಿದು ತನ್ನದಾಗಿಸುವ ಇಚ್ಛಾಶಕ್ತಿ, ಸಂಕಲ್ಪ ಶಕ್ತಿ ಹಾಗೂ ಕ್ರಿಯಾಶಕ್ತಿಗಳು ಇರಬೇಕಾಗುತ್ತದೆ. ಈ ಎಲ್ಲಾ ಗುಣಗಳು ಮೈದಾಳಿ ತನ್ನ ಜೀವನ ಲಕ್ಷ್ಯವನ್ನು ಸಾಧಿಸಿದ ಇಂದು ಓರ್ವ ಪ್ರಖ್ಯಾತ ಕಟ್ಟಡ ನಿರ್ಮಾಣ ಅಭಿವೃದ್ಧಿ ಕ್ಷೇತ್ರದಲ್ಲಿ ಅಪೂರ್ವ ಯಶಸ್ಸು ಗಳಿಸಿದವರು ಬ್ರಹ್ಮಾವರ ಮೂಲದ ಉದ್ಯಮಿ ಚೇತನ್ ಕುಮಾರ್ ಶೆಟ್ಟಿ. ಶ್ರೀಯುತರು ಇಂದು ಉಡುಪಿ ಜಿಲ್ಲೆಯಲ್ಲಷ್ಟೇ ಅಲ್ಲದೇ ರಾಜ್ಯ ಮಟ್ಟದಲ್ಲಿ ತನ್ನ ಅತ್ಯುತ್ತಮ ಗುಣಮಟ್ಟದ ನಿರ್ಮಾಣ ಕಾರ್ಯ, ಪಾರದರ್ಶಕತೆ, ಪ್ರಾಮಾಣಿಕತೆಗಳಿಂದ ಪ್ರಸಿದ್ಧರಾಗಿದ್ದಾರೆ. ಚೇತನ್ ಕುಮಾರ್ ಶೆಟ್ಟಿ ಅವರು ಪ್ರತಿಷ್ಠಿತ ಹಾಗೂ ಸುಶಿಕ್ಷಿತ ಕುಟುಂಬದ ಹಿನ್ನೆಲೆ ಉಳ್ಳವರು. ಎಚ್ ದಯಾನಂದ ಶೆಟ್ಟಿ ಹಾಗೂ ಶ್ರೀಮತಿ ನಾಗರತ್ನ ಶೆಟ್ಟಿ ದಂಪತಿಯರಿಗೆ ಪುತ್ರರಾಗಿ ಜನಿಸಿದ ಚೇತನ್ ಕುಮಾರ್ ಶೆಟ್ಟಿ ಅವರು ತನ್ನ ಶಾಲಾ…

Read More