Author: admin

ಪೆರ್ಡೂರು ಬಂಟರ ಸಂಘದ ವ್ಯಾಪ್ತಿಯ ಸಮಾಜ ಬಾಂಧವರ ಸಹಕಾರ, ದಾನಿಗಳ ನೆರವಿನೊಂದಿಗೆ ಗ್ರಾಮೀಣ ಪ್ರದೇಶ ಪೆರ್ಡೂರಿನಲ್ಲಿ ನಗರ ಪ್ರದೇಶದ ಸೌಲಭ್ಯ ಹೊಂದಿರುವ ಅತ್ಯಾಕರ್ಷಕ ವಿನ್ಯಾಸದ ಅತ್ಯಾಧುನಿಕ ಸೌಲಭ್ಯದ ಬಂಟರ ಸಮುದಾಯ ಭವನ ಫೆ. 11ರಂದು ಲೋಕಾರ್ಪಣೆಗೊಳ್ಳಲಿದ್ದು ಎಲ್ಲರೂ ಪಾಲ್ಗೊಳ್ಳಿ ಎಂದು ಪೆರ್ಡೂರು ಬಂಟರ ಸಂಘದ ಅಧ್ಯಕ್ಷ ಶಾಂತಾರಾಮ ಸೂಡ ಕೆ. ಹೇಳಿದರು. ಅವರು ಪೆರ್ಡೂರು ಬಂಟರ ಸಂಘದ ಸಭಾಂಗಣದಲ್ಲಿ ಶ್ರೀಮತಿ ಸರ್ವಾಣಿ ಪಳ್ಳಿ ಶ್ರೀನಿವಾಸ ಹೆಗ್ಡೆ ಬಂಟರ ಸಮುದಾಯ ಭವನದ ಉದ್ಘಾಟನೆಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಫೆ. 11ರಂದು ಗಣ್ಯರ ಉಪಸ್ಥಿತಿಯಲ್ಲಿ ದಿನವಿಡೀ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಮುದಾಯ ಭವನ ಲೋಕಾರ್ಪಣೆಗೊಳ್ಳಲಿದೆ. ಸಭಾಂಗಣವು ಸಹಸ್ರಾರು ಸಂಖ್ಯೆಯ ಜನರನ್ನು ಸೇರಿಸಿ ಸಮಾರಂಭ ಆಚರಿಸಲು ಯೋಗ್ಯವಾಗಿದೆ. ಜತೆಗೆ ವಾಹನ ನಿಲುಗಡೆಗೆ ವಿಶಾಲ ವ್ಯವಸ್ಥೆ ಇದೆ ಎಂದರು. ಸಂಘದ ಕೋಶಾಧಿಕಾರಿ ಪ್ರಮೋದ್‌ ರೈ ಪಳಜೆ, ಉಪಾಧ್ಯಕ್ಷ ಮಹೇಶ್‌ ಶೆಟ್ಟಿ ಪೈಬೆಟ್ಟು, ಸುಧಾಕರ ಶೆಟ್ಟಿ ಸಾಯಿಷಾ, ಸುರೇಶ್‌ ಹೆಗ್ಡೆ ಪಳಜೆ ಕಟ್ಟ,…

Read More

ಹೌದು, ಬಂಟರ ಹುಡುಗಿಯರು ನಮ್ಮ ಬಂಟ ಜಾತಿ ಬಿಟ್ಟು ಬೇರೆ ಜಾತಿಯೊಟ್ಟಿಗೆ ಮದುವೆ ಆದರೇ…? ಆ ಹೆಣ್ಣು ಶಾಶ್ವತವಾಗಿ ಕೊನೆ ತನಕ ಸಂಸಾರ ಮಾಡುವ ಸುಖ ಜೀವನ ಬಹಳ ವಿರಳ…! ಕಡೆಗೆ ಅದು ವಿವಾಹ ವಿಚ್ಚೇದನದಲ್ಲಿ ಅಂತ್ಯ ಕಾಣುವುದೇ ಹೆಚ್ಚು…!! ಕಾರಣ ಯಾವತ್ತೂ ಬಂಟ ಹುಡುಗಿಯರಲ್ಲಿ ಮತ್ತೊಬ್ಬ ಸಂಸಾರ ಮಾಡಲಾರ…! ಇದು ಸಿರಿ ಶಾಪವೇ ಅಥವಾ ಬಂಟರ ರಕ್ತ ಗುಣವೇ ಎಂಬುದು ಸೋಜಿಗ…! ಬಂಟ ಹೆಣ್ಣಿನ ಮನಸ್ಸಿನ ಆಗುಹೋಗುಗಳನ್ನು ಅರ್ಥ ಮಾಡಿ, ಅವಳಿಗೆ ಬೇಕಾದಲ್ಲಿ ಗುದ್ದು ಕೊಟ್ಟು ಮತ್ತೆ ಮುದ್ದು ಮಾಡಿ ಕೊನೆಗೆ ಮೋಹದ ಮದ್ದು ಕೊಡಲು ಗೊತ್ತಿದ್ದವರೇ ಬಂಟ ಪುರುಷರು. ಮದ ತುಂಬಿದ ಸಲಗವನ್ನು ಮಾವುತ ಹೇಗೆ ಹತೋಟಿಗೆ ತರುತ್ತಾನೋ ಹಾಗೆಯೇ ಅಹಂ ಇದ್ದ ಬಂಟ ಹೆಣ್ಣನ್ನು ಪಳಗಿಸಲು ಬಂಟ ಪುರುಷರಿಗೆ ಮಾತ್ರ ಗೊತ್ತಿರುವುದು ! ಉದಾಹರಣೆಗೆ ಸಕಲ ಐಶ್ವರ್ಯ ಸುಖ ಶಾಂತಿ ಇದ್ದರೂ ಐಶ್ವರ್ಯ ರೈ ಬಚ್ಚನ್ ಕುಟುಂಬಕ್ಕೆ ಬೇಡವಾದ ಸೊಸೆಯಾದಳು… ! ಸಕಲ ಗುಣವಂತೆಯಾಗಿಯೂ ಐಶ್ವರ್ಯ ಹೀಗಾಗಲೂ…

Read More

ಮೆದುಳು ಒಂದು ಕಡೆ ಎಳೆಯುತ್ತದೆ, ಹೃದಯ ಇನ್ನೊಂದು ಕಡೆಗೆ ಸೆಳೆಯುತ್ತದೆ, ಗೊಂದಲವೋ ಗೊಂದಲ ಎಂದು ಯಾರಾದರೂ ಹೇಳುವುದನ್ನು ನೀವು ಕೇಳಿರಬಹುದು. ತಲೆಯ “ಆಲೋಚನೆ”ಗಳು ಬೇರೆ, ಹೃದಯದ “ಭಾವನೆ”ಗಳು ಬೇರೆ ಎನ್ನುವುದು ಅವರ ಮಾತಿನ ಅರ್ಥ. ನಾವೂ ಇಂತಹ ಸನ್ನಿವೇಶಗಳನ್ನು ಅನುಭವಿಸಿದವರೇ. ಆದರೆ ನಿಜ ಹಾಗಿಲ್ಲ. ಒಬ್ಬ ವ್ಯಕ್ತಿ ಸಂಪೂರ್ಣವಾಗಿ ಒಂದು, ಒಬ್ಬ. ಹೃದಯ ಮತ್ತು ಮೆದುಳು ಪ್ರತ್ಯೇಕವಲ್ಲ, ನಾವು ನೀವು ಇಡಿಯಾಗಿ ಒಂದು ಅಸ್ತಿತ್ವ. ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾದರೆ ನಾವು “ಮೆದುಳು” ಮತ್ತು “ಹೃದಯ” ಎಂದು ಕರೆಯುವುದು ಯಾವುದನ್ನು ಎಂಬುದನ್ನು ತಿಳಿದುಕೊಳ್ಳಬೇಕು. ನಾವು ಸಾಮಾನ್ಯವಾಗಿ ಆಲೋ ಚನೆಗಳನ್ನು ಮೆದುಳಿಗೆ ಲಗಾವುಗೊಳಿಸುತ್ತೇವೆ, ಭಾವನೆಗಳನ್ನು ಹೃದಯಕ್ಕೆ ಲಗತ್ತಿಸುತ್ತೇವೆ. ಆದರೆ ಸರಿಯಾಗಿ ಆಳವಾಗಿ ಗಮನಿಸಿ ನೋಡಿ, ನಾವು ಆಲೋಚಿಸಿದಂತೆ ನಮ್ಮ ಭಾವನೆಗಳು ಇರುತ್ತವೆ. ಕೆಲವೊಮ್ಮೆ ನಮ್ಮ ಭಾವನೆಗಳಿಗೆ ತಕ್ಕುದಾಗಿ ಆಲೋಚನೆಗಳೂ ಇರುತ್ತವೆ. ಹೀಗಾಗಿಯೇ ಆಲೋಚನೆ ಮತ್ತು ಭಾವನೆ ಎರಡೂ ಮನೋಮಯ ಕೋಶದ ಭಾಗ ಎಂದು ಯೋಗಶಾಸ್ತ್ರವು ಪರಿಗಣಿಸುವುದು. “ಮನಸ್ಸು” ಎಂದು ನಾವು ಹೇಳುವುದು ಆಲೋಚನೆಯ…

Read More

ಮೂಡುಬಿದಿರೆ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ, ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆ ಹಾಗೂ ಮೂಡಬಿದಿರೆ ಸ್ಥಳೀಯ ಸಂಸ್ಥೆಯ ಸಹಭಾಗಿತ್ವದಲ್ಲಿ ಮೂಡಬಿದಿರೆಯ ಸ್ಕೌಟ್ಸ್ ಮತ್ತು ಗೈಡ್ಸ್ ಕನ್ನಡ ಭವನದಲ್ಲಿ ಗುರುವಾರ 43 ನೇ ರಾಜ್ಯ ಮಟ್ಟದ ಕಬ್ಸ್ – ಬುಲ್‍ಬುಲ್ಸ್ ಉತ್ಸವ ಸಮಾರೋಪ ಸಮಾರಂಭ ನಡೆಯಿತು. ಸ್ಕೌಟ್ಸ್ ಮತ್ತು ಗೈಡ್ಸ್ ಭಾರತದ ಕರ್ನಾಟಕ ಮುಖ್ಯ ಆಯುಕ್ತ ಪಿ.ಜಿ.ಆರ್ ಸಿಂಧ್ಯಾ ಮಾತನಾಡಿ, ಡಾ.ಎಂ. ಮೋಹನ ಆಳ್ವ ಅವರು ಜಾತಿ ಮತದ ಭೇದ ಭಾವಗಳನ್ನು ದೂರವಿರಿಸಿ ತಾನು ಬೆಳೆಯುವ ಜೊತೆಗೆ ಸರ್ವರನ್ನು ಬೆಳೆಸಿದವರು. ‘ಜಾಂಬೂರಿ’ಯಂತಹ ಅಂತರ ರಾಷ್ಟ್ರೀಯ ಕಾರ್ಯಕ್ರಮವನ್ನು ಅದ್ವಿತೀಯ ಎಂಬಂತೆ ನಡೆಸಿದ್ದಾರೆ ಎಂದು ಶ್ಲಾಘಿಸಿದರು. ಮೂಡುಬಿದಿರೆಯನ್ನು ವಿದ್ಯಾಕಾಶಿ, ಸ್ಕೌಟ್ಸ್ ಗೈಡ್ಸ್ ಕಾಶಿಯನ್ನಾಗಿ ಬೆಳೆಸಿದ್ದಾರೆ. ವಿದ್ಯಾರ್ಥಿಗಳು ಈ ತರಬೇತಿಯಿಂದ ಶಿಸ್ತು ಸಂಯಮಗಳನ್ನು ಕಲಿತುಕೊಳ್ಳಬೇಕು ಎಂದರು. ಸಮಾಜದಲ್ಲಿರುವ ಅತಿದೊಡ್ಡ ಸಮಸ್ಯೆ ಧಾರ್ಮಿಕ ಒಡಕು. ಯುವಜನತೆ ಧರ್ಮಾಂದತೆ ಮುಕ್ತರಾಗಬೇಕು ಎಂದರು. ವಿದ್ಯಾರ್ಥಿಗಳು ಕೇವಲ ಪುಸ್ತಕದ ಹುಳುವಾಗಿರದೇ, ಸಂಸ್ಕøತಿ, ಕಲೆ, ನಾಯಕತ್ವದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು.…

Read More

ಶ್ರೀ ಬ್ರಹ್ಮಲಿಂಗೇಶ್ವರ ಕ್ಷೇತ್ರ ಕಣಾಂಜಾರು ದೇವಸ್ಥಾನದ  ಜೀರ್ಣೋದ್ಧಾರ ಸಮಿತಿಯ  ಸಭೆಯು ಮುಂಬಯಿಯ ತುಂಗಾ ಇಂಟರ್ ನ್ಯಾಷನಲ್ ಹೊಟೇಲಿನ ಸಭಾಂಗಣದಲ್ಲಿ ಜರುಗಿತು. ಅಧ್ಯಕ್ಷ ಸ್ಥಾನವನ್ನು ಡಾ. ವೈ. ಎಸ್. ಹೆಗ್ಡೆಯವರು ವಹಿಸಿದ್ದರು. ವೇದಿಕೆಯಲ್ಲಿ ದೇವಸ್ಥಾನದ ಮೊಕ್ತೇಸರರಾದ ಶ್ರೀ ಸುಧೀರ್ ಹೆಗ್ಡೆ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀ ವಿಕ್ರಂ ಹೆಗ್ಡೆ, ತುಂಗಾ ಇಂಟರ್ ನ್ಯಾಶನಲ್ ಹೊಟೇಲಿನ ಆಡಳಿತ ನಿರ್ದೇಶಕರಾದ ಶ್ರೀಮತಿ ರಂಜನಿ ಸುಧಾಕರ್ ಹೆಗ್ಡೆ ದಂಪತಿಯವರು, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಶ್ರೀ. ಬಿ. ಎನ್. ಪೂಜಾರಿಯವರು,  ಬಹುಭಾಷಾ ನಟಿ ಪೂಜಾ ಹೆಗ್ಡೆಯವರ ತಂದೆ ಶ್ರೀ ಮಂಜುನಾಥ ಹೆಗ್ಡೆ ಕಣಾಂಜಾರು,  ಮಹಿಷಮರ್ದಿನಿ   ದೇವಸ್ಥಾನದ ಶ್ರೀ ಪ್ರದೀಪ್ ಶೆಟ್ಟಿ, ಡಾ.ಅಂಬರೀಷ್ ಹೆಗ್ಡೆ ಇವರು ಆಸೀನರಾಗಿದ್ದರು. ಕಾರ್ಯಕ್ರಮವನ್ನು ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಶ್ರೀ ಶಿವಪ್ರಸಾದ್ ಹೆಗ್ಡೆ ಇವರು ನಡೆಸಿಕೊಟ್ಟರು. ಸಭೆಯಲ್ಲಿ   ದಾನಿಗಳಾದ ತ್ರಿವೇಣಿ ಕನ್ಸಲ್ಟೆಂಟ್ ಇದರ ಮೇನೇಜಿಂಗ್ ಡೈರೆಕ್ಟರ್ ಶ್ರೀ ಎನ್.ಬಿ.ಶೆಟ್ಟಿ, ದಯಾನಂದ ಹೆಗ್ಡೆ ಪಣಿಯೂರು, ಜಿತೇಂದ್ರ ಶೆಟ್ಟಿ ಎರ್ಮಾಳು, ಭರತ್ ಶೆಟ್ಟಿ ಶಾಂತಿ ಬೆಟ್ಟು, ಉದಯ್ ಶೆಟ್ಟಿ…

Read More

ಪುಣೆ ಬಂಟರ ಸಂಘದ ಉತ್ತರ ಪ್ರಾದೇಶಿಕ ಸಮಿತಿಯ ಪ್ರಾಯೋಜಕತ್ವದಲ್ಲಿ ಪುಣೆ ಬಂಟರ ಸಂಘದ ಓಣಿಮಜಲು ಜಗನ್ನಾಥ ಶೆಟ್ಟಿ ಸಾಂಸ್ಕೃತಿಕ ಭವನದ ಲತಾ ಸುಧೀರ್ ಶೆಟ್ಟಿ ವೇದಿಕೆಯಲ್ಲಿ ಕಾಪು ರಂಗತರಂಗ ಕಲಾವಿದರಿಂದ ಸಮಾಜರತ್ನ ಕಾಪು ಲೀಲಾಧರ ಶೆಟ್ಟಿ ಸಾರಥ್ಯದ ಪ್ರಸನ್ನ ಶೆಟ್ಟಿ ಬೈಲೂರು ರಚಿಸಿರುವ ಶರತ್ ಉಚ್ಚಿಲ ನಿರ್ದೇಶನದಲ್ಲಿ ತುಳು ಸಾಂಸಾರಿಕ ಹಾಸ್ಯಮಯ ನಾಟಕ “ಅಧ್ಯಕ್ಷೆರ್ ” ತುಂಬಿದ ಸಭಾಗೃಹದಲ್ಲಿ ಯಶಸ್ವಿ ಪ್ರದರ್ಶನಗೊಂಡಿತು. ನಾಟಕ ಪ್ರದರ್ಶನದ ಮಧ್ಯಂತರದಲ್ಲಿ ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್ ಬೆಟ್ಟು ಬಾಳಿಕೆ ಇವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆದಿದ್ದು ಹೋಟೆಲ್ ಉದ್ಯಮಿ, ಕಲಾಪೋಷಕ ಪುಣೆ ಬಂಟರ ಸಂಘದ ವಿಶ್ವಸ್ತರಾದ ಪಾದೂರು ಹೊಸಮನೆ ಮಾಧವ ಆರ್ ಶೆಟ್ಟಿ ಹಾಗೂ ಪುಷ್ಪ ಎಂ ಶೆಟ್ಟಿ ದಂಪತಿಗಳನ್ನು ಸಮಾಜಕ್ಕೆ ಸಲ್ಲಿಸುವ ವಿಶೇಷ ಸೇವೆಗಾಗಿ ಸಂಘದ ಉತ್ತರ ಪ್ರಾದೇಶಿಕ ಸಮಿತಿಯ ವತಿಯಿಂದ ಶಾಲು ಹೊದೆಸಿ ನೆನನಪಿನ ಕಾಣಿಕೆ ನೀಡಿ ಸಮ್ಮಾನಿಸಲಾಯಿತು. ರಂಗತರಂಗ ತಂಡದ ಸಾರಥಿ ಕಾಪು ಲೀಲಾಧರ ಶೆಟ್ಟಿಯವರನ್ನು…

Read More

ಬ್ರಹ್ಮಾವರ ಜ. 26: ಬ್ರಹ್ಮಾವರದ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‍ನಲ್ಲಿ 75ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಧ್ವಜಾರೋಹಣವನ್ನು ನೆರವೇರಿಸಿ, ಸಂವಿಧಾನದ ಪೂರ್ವ ಪೀಠಿಕೆಯನ್ನು ವಾಚಿಸಿ ಮಾತನಾಡಿ ಇಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವುದು ದೇಶದ ಸೈನಿಕರನ್ನು ಗೌರವಿಸುವುದು ನಮ್ಮ ಜವಾಬ್ದಾರಿಯಾಗಿದೆ. ನಾವು ನಮ್ಮ ಕರ್ತವ್ಯವನ್ನು ಅರಿತು, ಶಾಂತಿ ಯನ್ನು ಕಾಪಾಡಿಕೊಂಡು ದೇಶದ ಪ್ರಗತಿಗೆ ಶ್ರಮಿಸಬೇಕೆಂದರು. ಕಾರ್ಯಕ್ರಮದ ಮುಖ್ಯ ಅತಿಥಿ ಭಾರತೀಯ ಸೇನೆಯ ನಿವೃತ್ತ ಸೈನಿಕ ಹವಾಲ್ದಾರ್ ಸುಬ್ರಹ್ಮಣ್ಯ ಉಪಾಧ್ಯ ತಮ್ಮ ವೃತ್ತಿ ಜೀವನದ ಅನುಭವವನ್ನು ಹಂಚಿಕೊಂಡು ಮಾತನಾಡಿ ಸೈನಿಕ ವೃತ್ತಿಯು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು ಸಮಾಜದಲ್ಲಿ ಹೇಗೆ ಬದುಕಬೇಕೆನ್ನುವುದನ್ನು ತಿಳಿಸಿಕೊಡುತ್ತದೆ. ಆದರೆ ಕರಾವಳಿಯ ಜನರು ಈ ವ್ರತ್ತಿಯಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುತ್ತಿಲ್ಲ. ಇದಕ್ಕೆ ಸೈನ್ಯ ಸೇರ್ಪಡೆಗೆ ಬೇಕಾದ ಮಾಹಿತಿ ಕೊರತೆ ಎಂದರು. ಜಿ ಎಮ್ ಗ್ಲೋಬಲ್ ಸ್ಕೂಲ್ ನ ಪ್ರಾಂಶುಪಾಲರಾದ ಪ್ರಣವ್ ಶೆಟ್ಟಿ ಗಣರಾಜ್ಯೋತ್ಸವವು ಕೇವಲ ಸಂಭ್ರಮಕ್ಕೆ ಸೀಮಿತವಾಗಿರದೆ ನಮ್ಮ ಸಾಂಸ್ಕೃತಿಕ…

Read More

ಶ್ರೀಮಂತರೆಲ್ಲ ದಾನಿಗಳಾಗಿರುವುದಿಲ್ಲ. ಹಾಗಾಗಿರುತ್ತಿದ್ದರೆ ಬಂಗಾರದ ಹೂವಿಗೆ ಪರಿಮಳ ಸೇರಿದಂತಾಗುತ್ತಿತ್ತು. ಇದಕ್ಕೆ ಹೃದಯ ಶ್ರೀಮಂತಿಕೆ ಬೇಕಾಗುತ್ತದೆ. ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ ಎಂಬ ಸತ್ಯದ ಅರಿವು ಇದ್ದ ಉದ್ಯಮಿ ಶ್ರೀ ಸದಾಶಿವ ಶೆಟ್ಟಿ ಕನ್ಯಾನ ಅವರು ಹೃದಯ ಶ್ರೀಮಂತಿಕೆ ಇರುವಲ್ಲಿ ಉಳಿದ ಸಿರಿವಂತಿಕೆ ತಾನೇ ತಾನಾಗಿ ಬಂದು ಸೇರಿಕೊಳ್ಳುತ್ತದೆ ಎಂಬ ಸಿದ್ಧಾಂತದಲ್ಲಿ ಆಚಲ ನಂಬಿಕೆ ಇಟ್ಟವರು. ಆರ್ಥಿಕ ಶ್ರೀಮಂತರಾದರೂ, ದಾನ ಗುಣವೂ ರಕ್ತದಲ್ಲಿ ಸೇರಿಕೊಂಡಿರುವ ಅಪರೂಪದ ವ್ಯಕ್ತಿತ್ವ ಶೆಟ್ಟರದ್ದು. ದನಿ ಉಡುಗಿ ಹೋದ ಬಡವರ ದನಿಯಾಗಿ, ಧಣಿಯಾಗಿ, ದಾನಿಯಾಗಿ ಬಡವರ ದಮನಿಸದೆ ದನಿ ಅಡಗಿಸದೆ ದಾನದಿತಾರನಾಗಿ ಖ್ಯಾತಿವೆತ್ತ ಮಾನವತಾವಾದಿ ಶ್ರೀ ಕೂಳೂರು ಕನ್ಯಾನ ಸದಾಶಿವ ಶೆಟ್ಟರು. ಉದಾರ ದಾನಿ ಸದಾಶಿವ ಕೆ ಶೆಟ್ಟರು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಬಳಿಯ ಕನ್ಯಾನದ ಕೂಳೂರಿನವರು. ಫಕೀರ ಶೆಟ್ಟಿ ಲೀಲಾವತಿ ದಂಪತಿಯರಿಗೆ ಸುಪುತ್ರನಾಗಿ ಜನಿಸಿದ ಶೆಟ್ಟರು ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿ ಪೂರೈಸಿ ಪದವಿ ವ್ಯಾಸಂಗವನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮುಗಿಸಿದರು. ಬಳಿಕ…

Read More

80ನೇ ಬಡಗಬೆಟ್ಟು ಗ್ರಾಮ ಪಂಚಾಯತ್ ಗೆ ಸತತ ಮೂರು ಬಾರಿ “ಗಾಂಧಿ ಗ್ರಾಮ ಪುರಸ್ಕಾರ” ಲಭಿಸಿದ್ದು ಹೆಮ್ಮೆಯ ವಿಚಾರವಾಗಿದ್ದು, ಇದಕ್ಕೆ ಕಾರಣಿಕರ್ತರಾದ 80 ಬಡಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರನ್ನು 80 ಬಡಗಬೆಟ್ಟು ಮೂಡುಮನೆ ಇವರ ವತಿಯಿಂದ ಇಂದು ದಿನಾಂಕ 14-10-2023 ರಂದು ಅಭಿನಂದಿಸಲಾಯಿತು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭಾಗವಹಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮನ್ನು ಉದ್ಘಾಟಿಸಿ 80 ಬಡಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಆರ್ಬಿ ವೈಷ್ಣವಿ ದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಯರಾಜ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 80 ಬಡಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕೇಶವ ಕೋಟ್ಯಾನ್, ಉಪಾಧ್ಯಕ್ಷರಾದ ರೂಪಾ ನಾಯಕ್, 80 ಬಡಗಬೆಟ್ಟು ಶಾಲಾ ಮುಖ್ಯೋಪಾಧ್ಯಾಯರಾದ ಸುರೇಶ್, 80 ಬಡಗಬೆಟ್ಟು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರಾದ ವಿದ್ವಾನ್ ವೆಂಕಟಾಚಲ ಭಟ್, ರಾಷ್ಟ್ರೀಯ ಮಹಿಳಾ ಆಯೋಗದ…

Read More

ಮೂಡುಬಿದಿರೆ: ಕಣ್ಣು ಹಾಯಿಸಿದಷ್ಟೂ ಕೇಸರಿ, ಬಿಳಿ, ಹಸಿರು ವರ್ಣ, ಸಾಗರದ ಅಲೆಗಳಂತೆ ಹಾರಾಡಿದ ತ್ರಿವರ್ಣ ಧ್ವಜ, ಬಾನೆತ್ತರಕ್ಕೆ ಚಿಮ್ಮಿದ ತ್ರಿವರ್ಣ ರಂಗಿನ ಚಿತ್ತಾರ, ಉಕ್ಕಿ ಬಂದ ದೇಶಪ್ರೇಮದ ಭಕ್ತಿ, ಮಕ್ಕಳಲ್ಲಿ ಮನೆ ಮಾಡಿದ ಸಂಭ್ರಮ, ಮಾಜಿ ಸೈನಿಕರಿಂದ ಧ್ವಜಕ್ಕೆ ವಂದನೆ, ತ್ರಿವರ್ಣದಲ್ಲಿ ಬರೆದ ‘ಆಳ್ವಾಸ್’. ಅಮೃತ ಕಾಲದದಲ್ಲಿ ಕಂಗೊಳಿಸಿದ ‘ಮಿನಿ ಭಾರತ’. ಗಣರಾಜ್ಯೋತ್ಸವ ಅಮೃತ ಕಾಲದ ಈ ಅಮೃತ ಘಳಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ವಿದ್ಯಾಗಿರಿ ಆವರಣದ ಶ್ರೀಮತಿ ವನಜಾಕ್ಷಿ ಶ್ರೀಪತಿ ಭಟ್ ವೇದಿಕೆಯಲ್ಲಿ ಹಮ್ಮಿಕೊಂಡ 75ನೇ ಗಣರಾಜ್ಯೋತ್ಸವ ಆಚರಣೆಯಲ್ಲಿ ಕಂಡುಬಂತು. ವಂದೇ ಮಾತರಂ ಗಾಯನದ ಬಳಿಕ ಕಾರ್ಯಕ್ರಮದ ಮುಕುಟಕ್ಕೆ ಕಿರೀಟ ಇಟ್ಟಂತೆ ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಆರೋಹಣ ಮಾಡಿದ ತ್ರಿವರ್ಣ ಧ್ವಜದ ಎತ್ತರದಲ್ಲಿ ಹಾರಾಡಿತು. ರಾಷ್ಟ್ರಗೀತೆ ‘ಜನ ಗಣ ಮನ’ ಮೊಳಗಿತು. ‘ಕೋಟಿ ಕಂಠೋಂಸೇ ನಿಖ್‍ಲೇ…’ ಗಾನಕ್ಕೆ ಸೇರಿದ್ದ 30 ಸಾವಿರಕ್ಕೂ ಅಧಿಕ ಮಂದಿ ಪುಟಾಣಿ ಧ್ವಜಗಳನ್ನು ಬೀಸುತ್ತಾ ದನಿಗೂಡಿಸಿದರು. ಅಕ್ಷರಶಃ ಅಮೃತ ಕಾಲವೇ ಅನುರಣಿಸಿತು. ‘ಪ್ರಜಾಪ್ರಭುತ್ವವೇ ದೇಶದ ಸೌಂದರ್ಯ.…

Read More