Author: admin
ಡಾ. ಆರ್. ಎನ್. ಶೆಟ್ಟಿ ಅವರ ಪುತ್ರ ಸುನೀಲ್ ಶೆಟ್ಟಿ ಅವರ ಕುಟುಂಬದವರು ಈ ಕಂಚಿನ ಪ್ರತಿಮೆಯನ್ನು ದೇವಸ್ಥಾನದ ಪ್ರಮುಖರು, ಊರಿನ ಪ್ರಮುಖರು ಹಾಗೂ ಸಾರ್ವಜನಿಕರ ಉಪಸ್ಥಿತಿಯಲ್ಲಿ ಅನಾವರಣಗೊಳಿಸಿದ್ದಾರೆ. ಈ ಪ್ರತಿಮೆ ಸುಮಾರು 1,560 ಕೆ. ಜಿ. ತೂಕದ ಕಂಚಿನಲ್ಲಿ ನಿರ್ಮಾಣಗೊಂಡ ಪ್ರತಿಮೆಯಾಗಿದ್ದು, 15 ಅಡಿ ಎತ್ತರವಿದೆ. ವಿಶೇಷವೆಂದರೆ, ಕಂದುಕ ಗಿರಿಯಲ್ಲಿರುವ ಮುಡೇಶ್ವರದ ಬೃಹತ್ ಶಿವನ ಮೂರ್ತಿಯನ್ನ ತಯಾರಿಸಿದ್ದ ಕಾಶೀನಾಥ ಅವರ ಪುತ್ರರಾದ ಶ್ರೀಧರ್ ಅವರೇ ಡಾ. ಆರ್. ಎನ್. ಶೆಟ್ಟಿಯವರ ಪ್ರತಿಮೆಯನ್ನ ನಿರ್ಮಾಣ ಮಾಡಿದ್ದಾರೆ. ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಪುಣ್ಯ ಕ್ಷೇತ್ರವೂ ಆಗಿರುವ ಮುರುಡೇಶ್ವರ ಅಂದಾಕ್ಷಣ ನೆನಪಿಗೆ ಬರುವುದು ಉದ್ಯಮಿ ಡಾ. ಆರ್. ಎನ್. ಶೆಟ್ಟಿ. ನವ ಮುರುಡೇಶ್ವರದ ನಿರ್ಮಾತೃ ಅಂತಲೇ ಕರೆಯಿಸಿಕೊಳ್ಳುತ್ತಿದ್ದ ಡಾ. ಆರ್. ಎನ್. ಶೆಟ್ಟಿ ಅವರು ಎಲ್ಲರನ್ನ ಅಗಲಿ ಒಂದೂವರೆ ವರ್ಷ ಕಳೆಯುತ್ತಾ ಬಂದಿದೆ. ಇದೀಗ ಅವರ ನೆನಪನ್ನ ಚಿರ ಸ್ಥಾಯಿಯಾಗಿಸಲು ಮುರುಡೇಶ್ವರದ ಬೃಹತ್ ಶಿವನ ಪ್ರತಿಮೆಯ ಎದುರು ಡಾ. ಆರ್. ಎನ್.…
ಬಜಪೆ ವಲಯ ಬಂಟರ ಸಂಘದ ಅಧ್ಯಕ್ಷರು, ಕೊಡುಗೈದಾನಿ, ಉದ್ಯಮಿಗಳು, ನಮ್ಮ ಟಿವಿ ಬಲೇ ತೆಲಿಪಾಲೆಯ ರೂವಾರಿ ವಿಜಯನಾಥ ವಿಠ್ಠಲ್ ಶೆಟ್ಟಿ
ಬಜಪೆ ವಲಯ ಬಂಟರ ಸಂಘದ ಅಧ್ಯಕ್ಷರು, ಕೊಡುಗೈದಾನಿ, ಉದ್ಯಮಿಗಳು, ಶಾಸ್ತಾವು ಶ್ರೀ ಭೂತನಾಥೆಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರು, ಭೂತನಾಥೆಶ್ವರ ಕ್ರೀಡಾ ಕೂಟದ ಮತ್ತು ನಮ್ಮ ಟಿವಿ ಬಲೇ ತೆಲಿಪಾಲೆಯ ರೂವಾರಿ ವಿಜಯನಾಥ ವಿಠ್ಠಲ್ ಶೆಟ್ಟಿಯವರಿಗೆ ಸಮಸ್ತ ಬಂಟ ಸಮಾಜದ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದೇವೆ. ಬಂಟ ಸಮಾಜದ ಎಲ್ಲಾ ನ್ಯೂಸ್ ಅಪ್ಡೇಟ್ ಗಳಿಗೆ ಈ ಕೆಳಗಿನ ಬಂಟ್ಸ್ ನೌ ಪೇಜ್ ಲಿಂಕ್ ಓಪನ್ ಮಾಡಿ ಲೈಕ್ ಮಾಡಿ. https://www.facebook.com/buntsnow/
ಸ್ವಯಂ ಅರಿವು, ಸ್ವಯಂ ನಿಯಂತ್ರಣ ಮತ್ತು ಸ್ವಯಂ ಪ್ರತಿಭೆಗಳಿಂದ ಕೂಡಿದ ನಡವಳಿಕೆಗಳು ಸಮಾನಾಂತರವಾಗಿ ಕ್ರೀಯಾಶೀಲವಾಗಿ ಮುನ್ನಡೆದರೆ ಯಾವುದೇ ಗುಂಪು, ಸಂಘ ಅಥವಾ ಸಂಘಟನೆಗಳು ಬಲಗೊಳ್ಳುತ್ತವೆ. ನಮ್ಮ ನಡವಳಿಕೆಗಳು ದನಾತ್ಮಕ ಚಿಂತನೆಯೊಂದಿಗೆ ಸಮಾಜ ಮುಖಿಯಾಗಿರಬೇಕು. ಪ್ರತಿಫಲವನ್ನು ಬಯಸದೆ ಮಾಡುವ ಕೆಲಸ ಕಾರ್ಯಗಳೇ ಸಮಾಜ ಸೇವೆ ಎಂದೆನಿಸಿಕೊಳ್ಳುತ್ತದೆ. ಪ್ರತಿಯೊಬ್ಬರಲ್ಲೂ ತಮ್ಮ ಯೋಗ್ಯತಾನುಸಾರ ಯಾವುದೇ ವಿಧದಲ್ಲಿಯಾದರೂ ಸೇವೆ ಮಾಡುವ ಮನೋಭಾವ ಹೊಂದಿದ್ದರೆ ಸಂಘಟನೆ ಮೂಲಕ ಯಾವುದೇ ಘನ ಕಾರ್ಯ ಮಾಡಬಹುದು. ಇದೇ ಧ್ಯೇಯ ಉದ್ದೇಶ ಸಂಘಟನೆಯ ಪ್ರತಿಯೊಬ್ಬರಲ್ಲೂ ಇದ್ದರೆ ಸಮಾಜಕ್ಕೆ ನಮ್ಮಿಂದ ಏನಾದರೂ ಅರ್ಪಣೆ ಮಾಡಲು ಸಾದ್ಯ. ಮಾನವ ಒಗ್ಗಟ್ಟೇ ಸಂಘಟನೆಯ ಬಲ. ಇದು ಮತ್ತಷ್ಟು ಬೆಳೆಯಬೇಕು. ನಮ್ಮ ತುಳುಕೂಟದ ಉದ್ದೇಶವೇ ಇದೇ ಆಗಿದೆ. ಜನ ಬಲವರ್ಧನೆ ಮಾಡುವ ಮೂಲಕ ಸಂಘಟನೆಯನ್ನು ಬಲಿಷ್ಠಗೊಳಿಸಬೇಕು. ಇಂದು ನಮ್ಮ ವಿಹಾರ ಕೂಟದಲ್ಲಿ ದೊಡ್ಡ ಮಟ್ಟದಲ್ಲಿ ಸೇರಿದ ತಮ್ಮೆಲ್ಲರ ಸಹಕಾರ ಪ್ರೋತ್ಸಾಹ ಇದೇ ರೀತಿ ಮುಂದುವರಿಯಲಿ. ಈ ವಿಹಾರ ಕೂಟ ಇಷ್ಟು ದೊಡ್ಡ ಮಟ್ಟದ ತುಳುವರ ಕೂಡುವಿಕೆಯಲ್ಲಿ ಅತ್ಯಂತ ಯಶಸ್ವಿಯಾಗಲು…
ಬ್ರಹ್ಮಾವರ ನ. 09: ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ಹಾಗೂ ಸಾಫ್ಟ್ ಸ್ಕಿಲ್ ವಿಷಯಗಳ ಕುರಿತು ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ಹಳೆ ವಿದ್ಯಾರ್ಥಿಗಳಾದ ತಾನ್ಯ ಶೆಟ್ಟಿ ಮತ್ತು ಹರ್ಷ ಪೂಜಾರಿ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು. ಅವರು ಹೈಸ್ಕೂಲ್ ಶಿಕ್ಷಣದ ನಂತರ ಮುಂದೇನು? ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆ? ವಿವಿಧ ವೃತ್ತಿಗಳು, ಇವೆಲ್ಲವನ್ನು ಸಮರ್ಥವಾಗಿ ನಿಭಾಯಿಸಲು ಬೇಕಾಗುವ ಸಾಫ್ಟ್ ಸ್ಕಿಲ್ ಮುಂತಾದ ವಿಷಯಗಳ ಕುರಿತು ಮಾಹಿತಿ ನೀಡಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಮಾತನಾಡಿ ಸಾಧನೆಗೆ ಕೌಶಲಗಳು ತುಂಬಾ ಮುಖ್ಯ. ಜಿ ಎಮ್ ಕಲಿಕೆಯ ಜೊತೆಗೆ ಕೌಶಲಾಭಿವೃದ್ಧಿಗೆ ಪ್ರಾಮುಖ್ಯತೆಯನ್ನು ಕೊಟ್ಟಿದೆ. ನೀವೆಲ್ಲರೂ ಜೀವನದಲ್ಲಿ ಸಾಧನೆಯನ್ನು ಮಾಡುತ್ತೀರಿ. ಇದಕ್ಕೆ ಇಂದಿನಸಂಪನ್ಮೂಲ ವ್ಯಕ್ತಿಗಳೇ ಸಾಕ್ಷಿ ಎಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ, ಇಂದು ಜಿ ಎಮ್ ನಲ್ಲಿ ಕಲಿತ ಮಕ್ಕಳೆಲ್ಲರೂ ಬೇರೆ-ಬೇರೆ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದ್ದಾರೆ. ಅವರೆಲ್ಲರೂ ಸಂಸ್ಥೆಯ ಮೇಲಿನ…
ಸೋತರೂ ಸಲಹುವ ಮಹಿಳೆ: ಡಾ.ಪದ್ಮಜಾ ಶೆಟ್ಟಿ ವಿದ್ಯಾಗಿರಿ: ಮಹಿಳೆ ಸೋತರೂ ಸಲಹುತ್ತಾಳೆ. ಶಕ್ತಿಯಾಗಿ ನಿಲ್ಲುತ್ತಾಳೆ ಎಂದು ಧವಲಾ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ. ಪದ್ಮಜಾ ಶೆಟ್ಟಿ ಹೇಳಿದರು. ಆಳ್ವಾಸ್ ಕಾಲೇಜಿನ ಪದವಿ ಇಂಗ್ಲಿಷ್ ವಿಭಾಗವು ಶುಕ್ರವಾರ ಹಮ್ಮಿಕೊಂಡ ‘ಎ ಡಾಲ್ಸ್ ಹೌಸ್’ ಪುಸ್ತಕ ಅವಲೋಕನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಹೆನ್ರಿಕ್ ಹಿಪ್ಸನ್ ಬರೆದ ‘ಎ ಡಾಲ್ಸ್ ಹೌಸ್’ ಎಂಬ ಪುಸ್ತಕವು ಮಹಿಳೆಯ ಶಕ್ತಿ ಮತ್ತು ಸಾಮಥ್ರ್ಯವನ್ನು ತಿಳಿಸುತ್ತದೆ. ಮಹಿಳೆಯರು ಬದುಕಿನುದ್ದಕ್ಕೂ ಹೋರಾಡುತ್ತಾರೆ. ಯಾರಿಲ್ಲದಿದ್ದರೂ ಮತ್ತು ಎಲ್ಲರೂ ಇದ್ದರೂ ಧೈರ್ಯದಿಂದ ಮುನ್ನುಗ್ಗಬೇಕು ಎಂಬ ಆಶಯವನ್ನು ಕತೆ ಬಿಂಬಿಸುತ್ತದೆ ಎಂದರು. ಮಹಿಳೆಯರಿಗೆ ಜೀವನದ ಹಾದಿಯಲ್ಲಿ ಆತ್ಮವಿಶ್ವಾಸ ಮುಖ್ಯ. ಅದುವೇ ಅವರನ್ನು ಗೆಲ್ಲಿಸುತ್ತದೆ ಎಂದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ‘ಬೇರೆ ಬೇರೆ ವಿಷಯಗಳನ್ನು ಕಲಿಯುವ ಮನಸ್ಸಿರಬೇಕು. ಅಂತಹ ಆಲೋಚನೆ ಪ್ರತಿಯೊಬ್ಬರಲ್ಲೂ ಬರಬೇಕು. ಸಾಹಿತ್ಯವು ವಿಶ್ಲೇಷಣೆ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನ ನೀಡುತ್ತದೆ. ಏಕದೃಷ್ಟಿಯ ಅಭಿವೃದ್ಧಿಯಿಂದ ಮಾತ್ರ ಬೆಳವಣಿಗೆ ಸಾಧ್ಯವಿಲ್ಲ. ವೈವಿಧ್ಯಮಯ ದೃಷ್ಟಿಕೋನ…
ಬಿ ಸಿ ರೋಡು ವಲಯ ಬಂಟರ ಸಂಘದ ಆಯೋಜನೆಯಲ್ಲಿ “ಕೆಸರ್ದ ಕಂಡೊಡು ಬಂಟರೆ ಕೂಟ” ಕಾರ್ಯಕ್ರಮ ಸ್ಪರ್ಶ ಕಲಾ ಮಂದಿರದ ಹಿಂದಿನ ಗದ್ದೆಯಲ್ಲಿ ತಾ 1-10-2023 ರಂದು ನಡೆಯಿತು. ಬಂಟ್ವಾಳ ತಾಲೂಕು ಮಟ್ಟದ ಬಂಟರ ಹಗ್ಗಜಗ್ಗಾಟ ಮತ್ತು ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತು. ಹಿರಿಯ ಕೃಷಿಕ ಮಾಡ್ಯಾರುಗುತ್ತು ವಿಶ್ವನಾಥ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಸಕರಾದ ರಾಜೇಶ್ ನಾಯ್ಕ್, ಮಾಜಿ ಸಚಿವ ರಮಾನಾಥ ರೈ, ಬಂಟ್ವಾಳ ತಾಲೂಕು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ತಾ. ಬಂಟರ ಸಂಘದ ಕಾರ್ಯದರ್ಶಿ ಜಗನ್ನಾಥ ಚೌಟ, ತಾ. ಬಂಟರ ಸಂಘದ ಕೋಶಾಧಿಕಾರಿ ಲೋಕೇಶ್ ಶೆಟ್ಟಿ, ತಾ. ಬಂಟರ ಮಹಿಳಾ ವಿಭಾಗ ಅಧ್ಯಕ್ಷೆ ರಮಾ ಭಂಡಾರಿ, ತಾಲೂಕು ಯುವ ವಿಭಾಗ ಅಧ್ಯಕ್ಷ ನಿಶಾನ್ ಆಳ್ವ, ಖ್ಯಾತ ವಕೀಲ ಅಶ್ವನಿ ಕುಮಾರ್ ರೈ, ಮಾಜಿ ಬಂಟ್ವಾಳ ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ, ಪ್ರತಿಷ್ಠಿತ ಉದ್ಯಮಿಗಳಾದ ಐತಪ್ಪ ಆಳ್ವ, ಹರೀಶ್ ಶೆಟ್ಟಿ ತುಂಬೆ ಮತ್ತು ಜಯಂತ್ ಶೆಟ್ಟಿ ಸಭೆಯಲ್ಲಿ…
ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಹಾಗೂ ತಾಲೂಕು ಬಂಟರ ಸಂಘ ಪುತ್ತೂರು ಇವರ ಮಾರ್ಗದರ್ಶನದಲ್ಲಿ ಬಂಟರ ಸಂಘ ನೆಲ್ಯಾಡಿ ವಲಯ ಇದರ ಆಶ್ರಯದಲ್ಲಿ ಸೋಣದ ಪೊರ್ಲು-2023, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ನೂತನ ಸಮಿತಿಯ ಪದ ಪ್ರಧಾನ ಸಮಾರಂಭ ನೆಲ್ಯಾಡಿ ವಲಯ ಬಂಟರ ಸಂಘದ ಅಧ್ಯಕ್ಷ ನಿತ್ಯಾನಂದ ಶೆಟ್ಟಿ ಮನವಳಿಕೆ ಅವರ ಅಧ್ಯಕ್ಷತೆಯಲ್ಲಿ ಸೆ.9ರಂದು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೆಲ್ಯಾಡಿ ಪ್ರಧಾನ ಕಚೇರಿಯ ಕಲ್ಪವೃಕ್ಷ ಸೌಹಾರ್ದ ಸಹಕಾರಿ ಸೌಧದ ಕಾಮಧೇನು ಸಭಾಂಗಣದಲ್ಲಿ ನಡೆಯಿತು. ಸಾಧಕರನ್ನು ಸನ್ಮಾನಿಸಿದ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ, ತಾಲೂಕು ಬಂಟರ ಸಂಘದ ಮಾದರಿಯಲ್ಲಿಯೇ ನೆಲ್ಯಾಡಿ ವಲಯ ಬಂಟರ ಸಂಘವೂ ಕಾರ್ಯಕ್ರಮ ಆಯೋಜನೆ ಮಾಡಿದೆ. ತಾಲೂಕು ಬಂಟರ ಸಂಘದಿಂದ ನೆಲ್ಯಾಡಿ ವಲಯಕ್ಕೆ ಮನೆ ನಿರ್ಮಾಣ ಸೇರಿದಂತೆ ಇತರೇ ಹಲವು ರೀತಿಯ ನೆರವು ನೀಡಲಾಗಿದೆ. ಇನ್ನಷ್ಟೂ ಉತ್ತಮ ಕಾರ್ಯಗಳ ಮೂಲಕ ನೆಲ್ಯಾಡಿ ವಲಯ ಬಂಟರ…
ಇತ್ತೀಚೆಗೆ ಮಾರುಕಟ್ಟೆಗಳಲ್ಲಿ ಜಂಕ್ ಫುಡ್ ಅತಿದೊಡ್ಡ ಸಂಖ್ಯೆಯಲ್ಲಿ ಇದ್ದು ಈಗಿನ ಯುವಕ ಯುವತಿಯರು ಈ ಆಹಾರಕ್ಕೆ ಮಾರು ಹೋಗಿ ಅತೀ ಸಣ್ಣ ಪ್ರಾಯದಲ್ಲೇ ಮಾರಕ ರೋಗಕ್ಕೆ ಬಲಿಯಾಗುತ್ತಿದ್ದಾರೆ. ಮನೆ ಮದ್ದು, ಮನೆ ಅಡಿಗೆ ಈಗಿನ ಯುವ ಜನಾಂಗಕ್ಕೆ ಒಗ್ಗುವುದಿಲ್ಲ ಎಂದು ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಮಂಗಳೂರು ಪ್ರಾಧ್ಯಾಪಕಿ ಮತ್ತು ಬಜ್ಪೆ ಮಹಿಳಾ ಬಂಟ್ಸ್ ಸಂಘದ ಅಧ್ಯಕ್ಷೆ ಪ್ರೊ. ಅಕ್ಷಯ ಆರ್. ಶೆಟ್ಟಿ ಹೇಳಿದರು. ಇವರು ಬಂಟರ ಸಂಘ (ರಿ ) ಪಡುಬಿದ್ರಿ, ಬಂಟ್ಸ್ ವೆಲ್ಫೇರ್ ಟ್ರಸ್ಟ್, ಬಂಟರ ಮಹಿಳಾ ವಿಭಾಗ ಪಡುಬಿದ್ರಿ ಇದರ ಆಶ್ರಯದಲ್ಲಿ ಆಟಿದ ಕೂಟ ಎಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಡುಬಿದ್ರಿ ಬಂಟರ ಭವನದಲ್ಲಿ ನಡೆದ ಸಭೆಯಲ್ಲಿ ಇವರು ತಮ್ಮ ಆಟಿ ತಿಂಗಳ ಬಗ್ಗೆ ಮಾತನಾಡಿ ಈ ತಿಂಗಳಲ್ಲಿ ಹೆಚ್ಚು ರೋಗ ಹರಡಿ ಹೆಚ್ಚಿನ ಜನರು ರೋಗಗ್ರಸ್ತರಾಗುವ ದಿನ. ಅದಕ್ಕಾಗಿ ನಮ್ಮ ಹಿರಿಯರು ಈ ತಿಂಗಳಲ್ಲಿ ಆಟಿ ಅಮಾವಾಸ್ಯೆ ದಿನ ಕಷಾಯ, ಮೆತ್ತೆ ಗಂಜಿ ಅಲ್ಲದೆ ನಮ್ಮ ಪರಿಸರದಲ್ಲಿ…
ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಸಮಾಜ ಸೇವಕ ಸೀತಾನದಿ ವಿಠ್ಠಲ ಶೆಟ್ಟಿಯವರು ಹೆಬ್ರಿ ತಾಲೂಕು ಮೇಲ್ ಜಡ್ಡು ಮನೆ ಸೀತಾನದಿಯಲ್ಲಿ ಹುಟ್ಟಿದರು. ಕೆಂಜೂರು ಬಡಾ ಮನೆ ದಿ.ಮಂಜಯ್ಯ ಶೆಟ್ಟಿ ಮತ್ತು ಶಿರಿಯಾರ ಮೇಲ್ಮನೆ ದಿ. ಗಿರಿಜ ಶೆಟ್ಟಿ ದಂಪತಿಗಳ ಪುತ್ರನಾಗಿ ಜನಿಸಿದ ಇವರು ಸೀತಾನದಿ ಮತ್ತು ಹೆಬ್ರಿಯಲ್ಲಿ ತಮ್ಮ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಶಿಕ್ಷಣವನ್ನು ಪೂರೈಸಿದರು. ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪದವಿ ಶಿಕ್ಷಣವನ್ನು ಮುಗಿಸಿ ಬೆಂಗಳೂರಿನ ವೈ. ಎಂ ಸಿ. ಎ ಕಾಲೇಜಿನಲ್ಲಿ ಸಿ. ಪಿ.ಎಡ್ ಪದವಿಯನ್ನು ಬೆಂಗಳೂರಿನ ವಿಶ್ವವಿದ್ಯಾನಿಲಯದಲ್ಲಿ ಬಿ. ಪಿ.ಎಡ್ ಮತ್ತು ಯಂ.ಪಿ.ಎಡ್ ಪದವಿಯನ್ನು ಪಡೆದರು. ನಂತರ 20 ವರ್ಷಗಳ ಕಾಲ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಶಿಕ್ಷಣ ಸಂಸ್ಥೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿ ನೂರಾರು ಕ್ರೀಡಾಪಟುಗಳನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಪ್ರಶಸ್ತಿಗಳನ್ನು ಪಡೆಯುವಲ್ಲಿ ತರಬೇತಿ ನೀಡಿದರು. ತನ್ನ ವೃತ್ತಿಯಲ್ಲಿ ಹಂತ ಹಂತವಾಗಿ ಭಡ್ತಿ ಹೊಂದಿ 17 ವರ್ಷ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ತಾಲೂಕು ದೈಹಿಕ…
ಕುಂದಾಪುರ ಕ್ಷೇತ್ರ ಎಂದರೆ ಹಾಲಾಡಿ ಶ್ರೀನಿವಾಸ ಶೆಟ್ಟಿ ಎನ್ನುವಷ್ಟರ ಮಟ್ಟಿಗೆ ರಾಜಕೀಯವಾಗಿ ಹೆಗ್ಗುರುತು ಮೂಡಿಸಿದೆ. ಇದಕ್ಕೆ ಕಾರಣ ಹಾಲಾಡಿ ಅವರು ಚುನಾವಣೆಗೆ ನಿಂತ ಎಲ್ಲ ಸಂದರ್ಭಗಳಲ್ಲಿಯೂ ಜಯ ಸಾಧಿಸಿರುವುದು. ಹಾಲಾಡಿ ಅವರು ಪಕ್ಷದ ಚಿಹ್ನೆ ಅಡಿ ಮತ್ತು ಪಕ್ಷೇತರರಾಗಿಯೂ ಸ್ಪರ್ಧಿಸಿ ಜಯ ಸಾಧಿಸಿರುವುದು ವಿಶೇಷ. ಸಚಿವರಾಗಲಿಲ್ಲ : 5 ಬಾರಿ ಗೆದ್ದಿರುವ ಹಾಲಾಡಿ ಶ್ರೀನಿವಾಸ ಶೆಟ್ಟರನ್ನು ಯಾವುದೇ ಸರಕಾರ ಸಚಿವರ ನ್ನಾಗಿಸಲಿಲ್ಲ. ಕುಂದಾಪುರ ಕ್ಷೇತ್ರಕ್ಕೆ ಈವರೆಗೆ ಸಚಿವ ಪದವಿ ದೊರೆಯಲಿಲ್ಲ. ಹಾಲಾಡಿ ಯವರು ಸಚಿವರಾಗುತ್ತಾರೆ ಎಂದೇ ಜನ ನಂಬಿದ್ದರು. ಅದಕ್ಕಾಗಿ ಅವರನ್ನು ಬೆಂಗಳೂರಿಗೂ ಕರೆಸಲಾಗಿತ್ತು. ಆದರೆ ಸಚಿವ ಪದ ದೊರೆಯಲಿಲ್ಲ. ಅವರು ಪಕ್ಷದಲ್ಲಿ ಮುಂದುವರಿಯಲಿಲ್ಲ. ಪಕ್ಷೇತರನಾಗಿ ಸ್ಪರ್ಧಿಸಿ ಮತದಾರರ ಒಲವನ್ನು ತೋರಿಸಿಕೊಟ್ಟರು. ಮರಳಿ ಬಿಜೆಪಿ ಸೇರಿ ಗೆದ್ದರು. ಸ್ಪರ್ಧೆ : 1999ರಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್ನ ಪ್ರತಾಪಚಂದ್ರ ಶೆಟ್ಟಿ ಅವರಿಗೆ, 2004ರಲ್ಲಿ ಕಾಂಗ್ರೆಸ್ನ ಅಶೋಕ್ ಕುಮಾರ್ ಹೆಗ್ಡೆ, 2008ರಲ್ಲಿ ಕಾಂಗ್ರೆಸ್ನ ಕೆ. ಜಯಪ್ರಕಾಶ್ ಹೆಗ್ಡೆ, 2013ರಲ್ಲಿ ಪಕ್ಷೇತರರಾಗಿ…