Author: admin

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೊಳಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆ ಸಲ್ಲಿಸಿ ಗ್ರಾಮಸ್ಥರ ಹಾಗೂ ವಿದ್ಯಾಭಿಮಾನಿಗಳ ಮನದಲ್ಲಿ ತನ್ನ ಹೆಸರನ್ನು ಪ್ರತಿಷ್ಠಾಪಿಸಿಕೊಂಡು ಕಳೆದ ವರ್ಷ ನಮ್ಮನ್ನೆಲ್ಲಾ ಬಿಟ್ಟು ಹೋದರು. ಆದರೆ ಅವರ ನೆನಪು ಈ ಶಾಲೆಯಲ್ಲಿ ಅಜರಾಮರ. ಅವರು ಶಿಕ್ಷಕರಾಗಿರದೆ ನಮ್ಮೊಳಗಿನ ಅದ್ಭುತ ಶಕ್ತಿಯಾಗಿ ಹೊರಹೊಮ್ಮಿದ ಹಿರಿಯ ಚೇತನ. ಯಕ್ಷರಂಗ, ಕ್ರೀಡಾರಂಗ, ನಿರೂಪಣೆಯ ಶಕ್ತಿಯಾಗಿ ವಿವಿಧ ಮಜಲುಗಳಲ್ಲಿ ತನ್ನನ್ನು ರೂಪಿಸಿಕೊಂಡು ಶಿಕ್ಷಕ ವೃತ್ತಿಯನ್ನು ತೊಡಗಿಸಿಕೊಂಡಂತಹ ಅದ್ಭುತ ಮೇದಾವಿ. ಕ್ರೀಡಾ ಜಗತ್ತಿನ ಭೀಷ್ಮನಾಗಿ, ಅದ್ಭುತ ಶಕ್ತಿಯ ನೇತಾರರಾಗಿದ್ದುಕೊಂಡಂತಹ ಆತ್ಮೀಯ ಶಿಕ್ಷಕರಿಗೆ ನುಡಿ ನಮನ. ಮೊಳಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶೈಕ್ಷಣಿಕ ಸೇವೆಯನ್ನ ನಿರ್ವಹಿಸಿ, ಕಳೆದ ವರ್ಷ 12/09/2022 ರಂದು ದಿವಂಗತರಾಗಿರುತ್ತಾರೆ. ಅವರ ಒಂದು ವರ್ಷದ ಪುಣ್ಯ ಸ್ಮರಣೆಯ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮೊಳಹಳ್ಳಿಯಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ದಿ ಪ್ರಕಾಶ್ ಶೆಟ್ಟಿ ಬೆಳಗೋಡು ದೈಹಿಕ ಶಿಕ್ಷಣ ಶಿಕ್ಷಕರು. ಇವರ ಪ್ರಥಮ ಪುಣ್ಯಸ್ಮರಣೆಯ…

Read More

ಬೆಂಗಳೂರಿನ ಕೇಂಬ್ರಿಡ್ಜ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಪ್ರಾಧ್ಯಾಪಕರಾದ ಸಂದೀಪ್ ಕುಮಾರ್ ರೈರವರು ಸಲ್ಲಿಸಿದ ಮಹಾಪ್ರಬಂಧಕ್ಕೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಆ. 1 ರಂದು ನಡೆದ 23ನೇ ಘಟಿಕೋತ್ಸವದಲ್ಲಿ ಪಿ.ಹೆಚ್.ಡಿ ಪದವಿ ನೀಡಿದೆ. ಸಂದೀಪ್‌ಕುಮಾರ್‌ ರೈರವರು ಆರ್.ಎನ್.ಎಸ್. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇನ್‌ಫರ್ಮೇಷನ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಡಾ. ಸುರೇಶ್. ಎಲ್‌ರವರ ಮಾರ್ಗದರ್ಶನದಲ್ಲಿ ‘ಸ್ಯಾಟಲೈಟ್‌ ಇಮೇಜ್ ಕ್ಲಾಸಿಫ಼ಿಕೇಷನ್ ಯೂಸಿಂಗ್ ಎನ್‌ಹ್ಯಾನ್ಸ್‌ಡ್ ಮೆಶಿನ್ ಲರ್ನಿಂಗ್‌ ಟೆಕ್ನಿಕ್ಸ್’ ಎಂಬ ಮಹಾ ಪ್ರಬಂಧವನ್ನು ಮಂಡಿಸಿದ್ದರು. ಇವರು ಕಡಬ ತಾಲ್ಲೂಕಿನ ಪುಣ್ಚಪ್ಪಾಡಿ ಗ್ರಾಮದ ನಡುಮನೆಯ ದಿ.ಸುಬ್ಬಣ್ಣರೈ ಮತ್ತು ಜಲಜಾಕ್ಷಿ ರೈರವರ ಪುತ್ರ.

Read More

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಇದರ ಆಶ್ರಯದಲ್ಲಿ ಮೇ 27 ಶನಿವಾರ ಹೈಸ್ಕೂಲ್ ಮತ್ತು ಕಾಲೇಜು ವಿದ್ಯಾರ್ಥಿಗಳ ಯಕ್ಷಗಾನ ಸ್ಪರ್ಧೆ, ಮೇ 28 ಭಾನುವಾರ ಯಕ್ಷಧ್ರುವ ಪಟ್ಲ ಸಂಭ್ರಮ 2023 ಅಡ್ಯಾರ್ ನ ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿದೆ ಎಂದು ಪಟ್ಲ ಫೌಂಡೇಶನ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು. ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕನ್ಯಾನ ಸದಾಶಿವ ಶೆಟ್ಟಿಯವರ ಸಂಭ್ರಮಾಧ್ಯಕ್ಷತೆಯಲ್ಲಿ ಯಕ್ಷಧ್ರುವ ಪಟ್ಲ ಸಂಭ್ರಮ ನಡೆಯಲಿದೆ. ಬಲಿಪ ನಾರಾಯಣ ಭಾಗವತ ವೇದಿಕೆಯಲ್ಲಿ ಬೆಳಿಗ್ಗೆ 8 ರಿಂದ ಚೌಕಿ ಪೂಜೆ, ಬಳಿಕ ಅಡ್ಯಾರ್ ಕಟ್ಟೆಯಿಂದ ಸಂಭ್ರಮಾಧ್ಯಕ್ಷರೊಂದಿಗೆ ಮೆರವಣಿಗೆ ನಡೆಯಲಿದೆ. 9.30 ಕ್ಕೆ ಪಟ್ಲ ಸಂಭ್ರಮ ಉದ್ಘಾಟನೆ ನೆರವೇರಲಿದೆ ಎಂದರು. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಎಡನೀರು ಮಠದ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಶ್ರೀ ಕ್ಷೇತ್ರ ಮಾಣಿಲದ ಮೋಹನದಾಸ ಸ್ವಾಮೀಜಿ, ಬಾರ್ಕೂರು ಸಂಸ್ಥಾನಂ ನ ಶ್ರೀ ವಿಶ್ವಸಂತೋಷ ಭಾರತಿ…

Read More

ತಾಲೂಕಿನಲ್ಲಿ ಅತಿವೃಷ್ಟಿಯಿಂದ ನೆರೆ ಬಂದಾಗ, ಕೊರೊನಾ ಸಂದರ್ಭದಲ್ಲಿ ನೊಂದವರಿಗೆ ಹೃದಯಪೂರ್ವಕವಾಗಿ ನೆರವಾಗಿದ್ದನ್ನು ಇಂದಿಗೂ ಅವರು ಸ್ಮರಿಸುತ್ತಿರುವುದು ನನಗೆ ಸಾರ್ಥಕತೆ ತಂದಿದೆ. ರಸ್ತೆ, ಕಿಂಡಿ ಅಣೆಕಟ್ಟು, ಶಾಲಾ ಕಾಲೇಜು ಕಟ್ಟಡ, ಗ್ರಂಥಾಲಯ ನಿರ್ಮಾಣ, ಧಾರ್ಮಿಕ ಶ್ರದ್ಧಾ ಕೇಂದ್ರಗಳ ನಿರ್ಮಾಣ ಸೇರಿದಂತೆ ದಾಖಲೆಯಾಗಿ 3500 ಕೋಟಿ ರೂ. ಅನುದಾನ ತಂದಿದ್ದು ಮುಂದೆ ಎರಡನೇ ಬಾರಿ 50 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲ್ಲಿಸಿದರೆ ತಾಲೂಕನ್ನು ದೇಶಕ್ಕೆ ಮಾದರಿ ತಾಲೂಕಾಗಿ ಅಭಿವೃದ್ಧಿ ಪಡಿಸುತ್ತೇನೆ ಎಂದು ಶಾಸಕ ಹರೀಶ್‌ ಪೂಂಜ ಹೇಳಿದರು. ಮಡಂತ್ಯಾರ್‌, ನಡ, ಕಲ್ಲೇರಿಯಲ್ಲಿ ಗುರುವಾರ ಚುನಾವಣ ಬಹಿರಂಗ ಪ್ರಚಾರ ಸಭೆ ನಡೆಸಿ ತಾಲೂಕಿನಲ್ಲಿ ತನ್ನ ಅವಧಿಯಲ್ಲಿ ಆದ ಅಭಿವೃದ್ಧಿ ವಿಚಾರ ಮುಂದಿಟ್ಟು ಜನರಲ್ಲಿ ಮತ ಯಾಚಿಸಿದರು. ಮುಂದಿನ ಎರಡು ವರ್ಷದಲ್ಲಿ ತಾಲೂಕಿನಲ್ಲಿ ಯಾವುದೇ ಮಣ್ಣಿನ ರಸ್ತೆ ಇಲ್ಲದ ರೀತಿಯಲ್ಲಿ ರಸ್ತೆಗಳ ಅಭಿವೃದ್ಧಿ ಮಾಡುವೆ. ತಾಲೂಕಿನ ವಿದ್ಯಾವಂತ ಯುವಕರು ದೂರದ ಊರಿಗೆ ಉದ್ಯೋಗಕ್ಕೆ ವಲಸೆ ಹೋಗದೆ ಸ್ಥಳೀಯವಾಗಿ ಉದ್ಯೋಗ ಸಿಗುವ ನಿಟ್ಟಿನಲ್ಲಿ ಉಜಿರೆಯಲ್ಲಿ 108 ಎಕರೆ…

Read More

ಈ ಬಾರಿ ಕಾಪು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣದಲ್ಲಿರುವ ಸುರೇಶ್ ಶೆಟ್ಟಿ ಗುರ್ಮೆ ಅವರು ಓರ್ವ ಮಾದರಿ ರಾಜಕಾರಣಿ ಹಾಗೂ ನಿಜಾರ್ಥದ ಸಮಾಜ ಸೇವಕರಾಗಿದ್ದು, ಅವರು ಈ ಹಿಂದೆ ಮಾಡಿರುವ ಜನಸೇವೆಯು ಅವರ ಗೆಲುವನ್ನು ಈಗಾಗಲೇ ಖಚಿತಪಡಿಸಿದೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿದೆ. ಸುರೇಶ್ ಶೆಟ್ಟಿ ಗುರ್ಮೆ ಅವರು ಓರ್ವ ಅಪರೂಪದ ರಾಜಕಾರಣಿ. ಅವರು ರಾಜಕೀಯ ಹೊರತುಪಡಿಸಿ ಚಿಂತಿಸುವ, ಮಾತನಾಡುವ ಪ್ರಬುದ್ಧತೆ ಹೊಂದಿರುವ ಉತ್ತಮ ವಾಗ್ಮಿ. ಬಿ.ಕಾಂ. ಪದವೀಧರರಾಗಿ ಬಳಿಕ ಬಳ್ಳಾರಿಗೆ ಹೋಗಿ ಔದ್ಯೋಗಿಕ ಹಾಗೂ ಉದ್ಯಮ ರಂಗದಲ್ಲಿ ತೊಡಗಿಸಿಕೊಂಡಿದ್ದರೂ ಹುಟ್ಟೂರಿನ ಜನರೊಂದಿಗೆ ನಿರಂತರ ಸಂಪರ್ಕ ಇರಿಸಿಕೊಂಡು, ಅಶಕ್ತರಿಗೆ ತನ್ನ ಕೈಲಾದ ಸಹಾಯವನ್ನು ಮಾಡುತ್ತಾ ಬಂದವರು. ಆ ಕಾರಣದಿಂದಲೇ ಅವರ ಊರಿನ ಮುಸ್ಲಿಂ, ಕ್ರಿಶ್ಚಿಯನ್ನರು ಕೂಡ ಇವರನ್ನು ಬೆಂಬಲಿಸುತ್ತಾರೆ. ಅಲ್ಪಸಂಖ್ಯಾತ ವರ್ಗದ ದೊಡ್ಡ ಪ್ರಮಾಣದ ಮತಗಳು ಈ ಬಾರಿ ಗುರ್ಮೆ ಸುರೇಶ್ ಶೆಟ್ಟಿ ಕಾರಣದಿಂದ ಕಾಪು ಕ್ಷೇತ್ರದಲ್ಲಿ ಬಿಜೆಪಿಗೆ ಬೀಳುವುದು ಖಚಿತ. ಸುರೇಶ್ ಶೆಟ್ಟಿ ಅವರು ವಿದ್ವತ್‌ಪೂರ್ಣ ಭಾಷಣದ…

Read More

ಅಡಿಕೆ ಬೆಳೆಗಾರರ ಸಂಕಟಕ್ಕೆ ಬೆಂಬಲ ನೀಡದ ತೋಟಗಾರಿಕಾ ಇಲಾಖೆ;  ಎಲೆಚುಕ್ಕಿ  ರೋಗದಿಂದ ಬಂಡವಾಳ ನೆಲಸಮ…! ತೋಟದಲ್ಲೇ ಕಮರಿ ಹೋದ ಅಡಿಕೆ ಬೆಳೆಗಾರರ ಕನಸು…..! – ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ ಉಡುಪಿ ಜಿಲ್ಲೆ. (ಪತ್ರಕರ್ತರು & ಮಾಧ್ಯಮ ವಿಶ್ಲೇಷಕರು) ದಕ್ಷಿಣ ಕನ್ನಡ ,ಉಡುಪಿ, ಕುಂದಾಪುರ, ಬೈಂದೂರು ಹಾಗೂ ಮಲೆನಾಡು ಪ್ರದೇಶಗಳಲ್ಲಿ ಹೆಚ್ಚು ಕಾಡುತ್ತಿರುವ ಎಲೆ ಚುಕ್ಕಿ ರೋಗದಿಂದ ರೈತ ಕಂಗಾಲಾಗಿದ್ದಾನೆ. ಅದಲ್ಲದೆ ಅಡಿಕೆ ಬೆಳೆಗಾರರು ಎಲೆ ಚುಕ್ಕಿ ರೋಗದಿಂದಾಗಿ ಹಾಕಿದ ಬಂಡವಾಳ ನೆಲಸಮವಾಗುತ್ತಿದೆ .ಇದರ ಬಗ್ಗೆ ತೋಟಗಾರಿಕೆ ಇಲಾಖೆ ಮೌನಕ್ಕೆ ಶರಣಾಗಿದ್ದು ,ವಿಪರ್ಯಾಸ ಕರ್ನಾಟಕ ರಾಜ್ಯದಾದ್ಯಂತ ತೋಟಗಾರಿಕೆ ಇಲಾಖೆಯು ಎಲೆಚುಕ್ಕಿ ರೋಗವನ್ನು ಸಮೀಕ್ಷೆ ಮಾಡುತ್ತೇವೆ ಎಂದು ಮಾಧ್ಯಮಗಳಿಗೆ ಹೇಳಿಕೆಯನ್ನು ನೀಡಿದ್ದು ನೆಪ ಮಾತ್ರಕ್ಕೆ,  ದಕ್ಷಿಣ ಕನ್ನಡಗೂ ಬಾಹು ಚಾಚಿದ ಎಲೆಚುಕ್ಕಿ ರೋಗ – ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ, ಮುಂಡಾಜೆಯ ಕೆಲವು ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ ರೋಗ  ಜಿಲ್ಲೆಗೆ ವ್ಯಾಪಿಸುವ ಆತಂಕ.ಬೆಳ್ತಂಗಡಿ  ಸಂಸೆಯಿಂದ ಸುತ್ತುವರಿದು ಎಳನೀರು ಭಾಗಕ್ಕೆ ಹಬ್ಬಿದ್ದ ಎಲೆಚುಕ್ಕಿರೋಗ ಇದೀಗ…

Read More

ಗುರುಪುರ ಬಂಟರ ಮಾತೃ ಸಂಘದ ನೇತೃತ್ವದಲ್ಲಿ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮೂಡಂಬೈಲ್ ಡಾ.ರವಿ ಶೆಟ್ಟಿ ದೋಣಿಂಜೆಗುತ್ತು ಅವರಿಗೆ ಹುಟ್ಟೂರ ಅಭಿನಂದನಾ ಕಾರ್ಯಕ್ರಮ ಗುರುಪುರ ಕುಕ್ಕುದಕಟ್ಟೆ ಶ್ರೀ ವೈದ್ಯನಾಥ ಕಲ್ಯಾಣ ಸಮುದಾಯ ಭವನದಲ್ಲಿ ನಡೆಯಿತು. ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಸಮಾರಂಭವನ್ನು ಉದ್ಘಾಟಿಸಿದರು. ಆಶೀರ್ವಚನ ನೀಡಿದ ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಡಾ. ರವಿ ಶೆಟ್ಟಿ ನಮ್ಮೂರ ದೊಡ್ಡ ಆಸ್ತಿ, ಮೇರು ಸಾಧಕರು ಹಾಗೂ ಅರ್ಹರಿಗೆ ಈ ಬಾರಿ ಪ್ರಶಸ್ತಿ ಬಂದಿದೆ, ಇದರಿಂದ ಪ್ರಶಸ್ತಿಯ ಘನತೆ ಹೆಚ್ಚಿದೆ ಎಂದರು. ಶಾಸಕ ಡಾ. ಭರತ್ ವೈ ಶೆಟ್ಟಿ ಮಾತನಾಡಿ, ದೂರದ ಕತಾರ್‍ನಲ್ಲಿದ್ದರೂ ಡಾ. ರವಿ ಶೆಟ್ಟಿ ಕೊರೋನಾ ಸಂದರ್ಭ ರಾಜ್ಯ ಮತ್ತು ನಾಡಿನ ಮಂದಿಗೆ ನೆರವಾಗಿರುವ ವ್ಯಕ್ತಿಯಾಗಿದ್ದಾರೆ ಸಮಾಜದ ಅಗತ್ಯಗಳಿಗೆ ತಕ್ಕಂತೆ ಸ್ಪಂದಿಸುವ ದೊಡ್ಡ ಗುಣ ಅವರಲ್ಲಿದೆ ಎಂದರು. ಮಾಜಿ ಸಚಿವ ರಮಾನಾಥ ರೈ,…

Read More

ಡಾ.ಜಗದೀಶ್ ಶೆಟ್ಟಿಯವರು ಕುಂದಾಪುರ ತಾಲ್ಲೂಕಿನ ಕೋಟೇಶ್ವರದಲ್ಲಿ 12.03.1974 ರಲ್ಲಿ ಜನಿಸಿದರು.ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣವನ್ನು ಕೋಟೇಶ್ವರದಲ್ಲಿ ಪೂರೈಸಿದ ಇವರು ವೈದ್ಯಕೀಯ ಶಿಕ್ಷಣವನ್ನು ಆಯ್ದುಕೊಳ್ಳುತ್ತಾರೆ. ವೈದ್ಯಕೀಯ ಶಿಕ್ಷಣವನ್ನು ಪೂರೈಸಿದ ನಂತರ ಕುಂದಾಪುರದ ವಿಜಯಶ್ರೀ ಆಸ್ಪತ್ರೆಯಲ್ಲಿ ಒಂದು ವರ್ಷ ಕಾಲ ಸೇವೆಯನ್ನು ಸಲ್ಲಿಸಿದ್ದರು . ಗ್ರಾಮೀಣ ಜನರ ಬದುಕಿನ ಬವಣೆಯನ್ನು ಮನಗಂಡು ಅವರ ಸೇವೆ ಮಾಡುವ ಉದ್ದೇಶದಿಂದ ಸುಮಾರು ಎರಡು ದಶಕಗಳ ಹಿಂದೆ ಕುಂದಾಪುರ ತಾಲ್ಲೂಕಿನ ಸಿದ್ದಾಪುರದಲ್ಲಿ ‘ವಾಸುಕಿ ಕ್ಲಿನಿಕ್’ ಎನ್ನುವ ತನ್ನ ಸ್ವಂತ ಕ್ಲಿನಿಕ್ ಅನ್ನು ಆರಂಭಿಸಿ ಈ ಭಾಗದ ಜನರ ನೋವು ನಲಿವು ಗಳೊಂದಿಗೆ ಬೆರೆತು ಜನಾನುರಾಗಿ ವೈದ್ಯರಾಗಿ ಹೆಸರು ಗಳಿಸಿಕೊಂಡವರು. ವೈದ್ಯಕೀಯ ವೃತ್ತಿಯ ಜೊತೆಜೊತೆಗೇ ಕ್ರೀಡಾ ಮತ್ತು ಸಾಂಸ್ಕೃತಿಕ ಲೋಕದಲ್ಲೂ ಇವರು ತಮ್ಮ ಗಮನಾರ್ಹ ಸೇವೆಯನ್ನು ಸಲ್ಲಿಸಿರುತ್ತಾರೆ.ಟೆನಿಸ್ ಬಾಲ್ ಕ್ರಿಕೆಟ್ ನಲ್ಲಿ ಮತ್ತು ಕೇರಂನಲ್ಲಿ ಇವರು ರಾಜ್ಯ ಮಟ್ಟದ ಪ್ರತಿಭೆ.ತನ್ನ ಆಕರ್ಷಕ ವಾಕ್ಪಟುತ್ವದ ಮೂಲಕ ಇಂಗ್ಲಿಷ್ ಮತ್ತು ಕನ್ನಡ ಭಾಷೆಯಲ್ಲಿ ಕ್ರಿಕೆಟಿನ ವೀಕ್ಷಕ ವಿವರಣಕಾರರಾಗಿ ಜಿಲ್ಲೆಯಲ್ಲಿ ಹೆಸರು ಮಾಡಿದವರು.…

Read More

ವಿದ್ಯಾಗಿರಿ: ‘ಆಧುನಿಕ ವಿಜ್ಞಾನವು ಸಂಶೋಧನೆಯಲ್ಲಿ ಮುಂದುವರಿದಿದ್ದು, ರೋಗದ ಮೂಲ ಪತ್ತೆಗೆ ಕ್ಷ ಕಿರಣದ ಕೊಡುಗೆ ಅಪಾರ’ ಎಂದು ಕೇರಳದ ಕೊತ್ತಮಂಗಲಂ ಕಲಾರಿಕ್ಕಲ್ ಆಯುರ್ವೇದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಶಿಬು ವರ್ಗೀಸ್ ಹೇಳಿದರು. ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಸ್ನಾತಕೋತ್ತರ ರೋಗನಿದಾನ, ಕಾಯಾಚಿಕಿತ್ಸೆ ಮತ್ತು ಮನಸರೋಗ ವಿಭಾಗವು ಕಾಲೇಜಿನ ಧನ್ವಂತರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡ ‘ಕ್ಷ- ಕಿರಣದ ಮೂಲಲಕ್ಷಣ ಹಾಗೂ ವ್ಯಾಖ್ಯಾನ ಕುರಿತ ರಾಷ್ಟ್ರ ಮಟ್ಟದ ಕಾರ್ಯಾಗಾರ ‘ಜ್ಞಾನಚಾಕ್ಷು- 2023’ನ್ನು ಉದ್ಘಾಟಿಸಿ ಮಾತನಾಡಿದರು. ‘ಆಯುರ್ವೇದದಲ್ಲೂ ಸಾಮಾನ್ಯವಾಗಿ ಮೂಳೆಚಿಕಿತ್ಸೆ, ಉಸಿರಾಟದ ಪ್ರಕರಣಗಳ ಪತ್ತೆ ಮಾಡಲು ಮೂಲವು ಕ್ಷ -ಕಿರಣವೇ ಆಗಿದೆ. ಆದರೆ ಸಾಮಾನ್ಯವಾಗಿ ಜನರು ಆಯುರ್ವೇದದ ಚಿಕಿತ್ಸಾ ಪದ್ದತಿಯನ್ನು ದ್ವಿತೀಯ ಶ್ರೇಣಿಯ ಚಿಕಿತ್ಸಾ ಕ್ರಮವೆಂದು ಭಾವಿಸುವುದನ್ನು ತಪ್ಪಿಸಬೇಕು. ಅವರಲ್ಲಿ ಭರವಸೆಯನ್ನು ಮೂಡಿಸುವ ಕೆಲಸವನ್ನು ಮಾಡಬೇಕು. ಈ ಕಾರ್ಯಾಗಾರದ ಮೂಲಕ ಕ್ಷ- ಕಿರಣ ಕ್ಷೇತ್ರದ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು ಎಂದರು. ರೋಗಿಗೆ ಚಿಕಿತ್ಸೆ ನೀಡುವ ಮೊದಲು ರೋಗ ಪತ್ತೆ ಹಚ್ಚುವಿಕೆಯು ಬಹುಮುಖ್ಯ, ಆಯುರ್ವೇದ…

Read More

ಇದಕ್ಕೆ ಎರಡೇ ಪದಗಳಲ್ಲಿ ಉತ್ತರ ಬೇಕೇ? 100 ಪದಗಳಲ್ಲಿ ಹೇಳಬೇಕೇ? ಅಥವಾ ಎರಡು ಪುಟಗಳಲ್ಲಿ ವಿವರವಾಗಿ ಉತ್ತರ ನೀಡಬೇಕೇ? ಎಂದು ಮರು ಪ್ರಶ್ನೆ ಹಾಕಬಹುದು. ಯಾಕೆಂದರೆ ಮೂರು ಮಾದರಿಯಲ್ಲಿ ಉತ್ತರ ಕೊಡಬಹುದಾದ ಪ್ರಶ್ನೆ. ಎರಡೇ ಪದಗಳೆಂದುಕೊಳ್ಳಿ. ಬದುಕು ನಾಶ. ನೂರು ಪದಗಳಲ್ಲಿ ಎಂದುಕೊಳ್ಳಿ. ಆಗ ನದಿ ಕಾಣೆಯಾಗುವುದರಿಂದ ಉದ್ಭವಿಸುವ ಪರಿಣಾಮಗಳನ್ನು ಸ್ಥೂಲವಾಗಿ ವಿವರಿಸಬಹುದು. ಅದೇ ಎರಡು ಪುಟಗಳಲ್ಲಿ ಎಂದರೆ ಸುಮಾರು 1,500 ಪದಗಳಲ್ಲಿ ನದಿ ಹುಟ್ಟುವ ಮೊದಲು ಅಥವಾ ಆ ನಿರ್ದಿಷ್ಟ ಪ್ರದೇಶದಲ್ಲಿ ಹರಿದು ಬರುವ ಮೊದಲು ಹೇಗಿತ್ತು, ಹರಿಯತೊಡಗಿದ ಮೇಲೆ ಏನೆಲ್ಲ ಬದಲಾವಣೆಯಾಯಿತು? ನಾಳೆ ಒಂದು ವೇಳೆ ಹರಿಯುವುದು ನಿಲ್ಲಿಸಿದರೆ, ಕಾಣೆಯಾದರೆ ಅಥವಾ ಬರಡಾದರೆ ಏನೆಲ್ಲಾ ಆಗಬಹುದು ಎಂಬುದನ್ನು ಭೂತ ಮತ್ತು ವರ್ತಮಾನದ ಸಂಕಲನ ಮತ್ತು ವ್ಯವಕಲನ ಮಾಡಿ, ಭವಿಷ್ಯವನ್ನು ಗುಣಾಕಾರ ಮಾಡಿ, ಭಾಗಾಕಾರವನ್ನೂ ಅನ್ವಯಿಸಿ, ಉಳಿದ ಶೇಷವನ್ನು ಗಮನಿಸಿ ವಿವರಿಸಬಹುದು. ಒಟ್ಟು ಒಂದು ಪ್ರಶ್ನೆಗೆ ಬಿಟ್ಟ ಸ್ಥಳ ತುಂಬಲಿಕ್ಕೂ ಅವಕಾಶವಿದೆ, ದೀರ್ಘ‌ವಾದ ಪ್ರಬಂಧ ಸ್ವರೂಪಿ ಉತ್ತರ ಬರೆಯಲು ಅವಕಾಶವಿದೆ.…

Read More