Author: admin
ಕಡಲು ಅಲೆಗಳ ಅಬ್ಬರದ ಹಿಮ್ಮೆಳದ ತೆಂಗಿನ ಮರಗಳ ಸಾಲು ಸಾಲು, ಭತ್ತದ ಪೈರಿನಿಂದ ನಳ ನಳಿಸುವ ಗದ್ದೆ , ಪಶ್ಚಿಮ ಘಟ್ಟದ ಗುಡ್ಡ ಕಾಡುಗಳಿಂದ ಆವೃತವಾದ ಹಸಿರು ಸಿರಿಯ ಕಡಲು ನದಿಗಳ ಸುಂದರ ಸಂಗಮದ ಕುಂದಾಪುರದ ಆಸುಪಾಸಿನ ಊರುಗಳ ಮನೆಯಲ್ಲಿ ಶ್ರಾವಣ ತಿಂಗಳಲ್ಲಿ ಹೊಸ್ತಿಲು ಪೂಜಿಸುವ ವಿಶೇಷ ಸಂಪ್ರದಾಯದೊಂದಿಗೆ ಹೊಸ್ಲಜ್ಜಿ ಓಡಿಸುವ ಜನಪದ ಹಿನ್ನಲೆಯ ವಿಶಿಷ್ಟ ಆಚರಣೆಯೊಂದು ತನ್ನ ಅಸ್ತಿತ್ವ ಕಳೆದುಕೊಳ್ಳದೆ ಇಂದಿಗೂ ಸರಳ ಶೈಲಿಯಲ್ಲಿ ಆಚರಣೆಯಲ್ಲಿದೆ. ಶ್ರಾವಣ ಸಂಕ್ರಮಣದಿಂದ ತಿಂಗಳಿಡಿ ಮನೆಯಲ್ಲಿ ಹೊಸ್ತಿಲು ಪೂಜೆ ಮಾಡಿ ಅಜ್ಜಿಯನ್ನು ಆಹ್ವಾನಿಸಲಾಗುತ್ತದೆ. ಹೊಸ್ತಿಲಿಗೆ ಸೇಡಿ ಬರೆದು ಅಂದರೆ ರಂಗೋಲಿ ಹಾಕಿ ಸೋಣೆ ಹೂ ಹಾಗೂ ಅಜ್ಜಿ ಹೂ ಒಳ ಮುಖವಾಗಿರಿಸಿ, ಹಲಸಿನ ಎಲೆಯಲ್ಲಿ ಅರಶಿನ, ಶ್ರೀ ಗಂಧ ತೇಯ್ದುದನ್ನು ಹೊಸ್ತಿಲಿಗೆ ಇಟ್ಟು, ಹೊಸ್ತಿಲಿಗೆ ನಮಿಸಿ ದೀಪ ದೂಪ ಹಾಕಿ ಅಜ್ಜಿಯನ್ನು ಮನೆ ಒಳಗೆ ಬರ ಮಾಡಿಕೊಳ್ಳವುದು ವಾಡಿಕೆ. ಅಜ್ಜಿಯೇ ಚಿನ್ನದ ಬಟ್ಟಲನ್ನು ಬೆಳ್ಳಿಯ ಕೋಲಿನಲ್ಲಿ ಬಾರಿಸುತ್ತಾ ಗಂಟೆ ನಿನಾದದೊಂದಿಗೆ ಬಾ.. ಎಂದು ಅಜ್ಜಿಯನ್ನು…
‘ಅನುಭವ ಪಾಠಕ್ಕೆ ಜಾಂಬೂರಿ ಅತ್ಯುತ್ತಮ ಅವಕಾಶ’ ಮಂಗಳೂರು: ‘ವಿದ್ಯಾರ್ಥಿಗಳು ಅನುಭವದ ಮೂಲಕ ಜೀವನದ ಉತ್ತಮ ಪಾಠ ಕಲಿಯಬೇಕಿದ್ದು, ಜಾಂಬೂರಿ ಅತ್ಯುನ್ನತ ಅವಕಾಶ’ ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತರಾದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು. ದಕ್ಷಿಣ ಕೊರಿಯಾದಲ್ಲಿ ಆಗಸ್ಟ್ 1ರಿಂದ 12ರ ವರೆಗೆ ನಡೆಯಲಿರುವ ವಿಶ್ವ ಜಾಂಬೂರಿಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಮಂಗಳೂರಿನ ಜಿಲ್ಲಾ ಸ್ಕೌಟ್ಸ್ ವiತ್ತು ಗೈಡ್ಸ್ ಭವನದಲ್ಲಿ ಸೋಮವಾರ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ಕ ಕರ್ನಾಟಕ ಸಂಸ್ಥೆ ಹಾಗೂ ಜಿಲ್ಲಾ ಸಂಸ್ಥೆ ಹಮ್ಮಿಕೊಂಡ ‘ಬೀಳ್ಕೊಡುಗೆ ಸಮಾರಂಭ’ದಲ್ಲಿ ಅವರು ಸೋಮವಾರ ಮಾತನಾಡಿದರು. ಜಾಂಬೂರಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರವನ್ನು ಪ್ರತಿನಿಧಿಸುತ್ತಿದ್ದು ತಮ್ಮ ಅನುಭವದಿಂದ ಉತ್ತಮ ಪಾಠ ಕಲಿಯಬೇಕಿದೆ ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಶಿಸ್ತು, ಸೇವಾ ಮನೋಭಾವ ಹಾಗೂ ಸ್ನೇಹ ಸೌಹಾರ್ದತೆ ಮೈಗೂಡಿಸಿಕೊಳ್ಳಬೇಕು. ಕಠಿಣ ಪರಿಸ್ಥಿತಿಯನ್ನು ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಅವರು ಹಿತವಚನ…
ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಸಿರಿಧಾನ್ಯಗಳು ಬಳಕೆಯಲ್ಲಿದ್ದವು. ವೇದಗಳಲ್ಲಿ ಕೆಲವು ಸಿರಿಧಾನ್ಯಗಳ ಬಗ್ಗೆ ಉಲ್ಲೇಖಗಳು ಕಾಣಸಿಗುತ್ತವೆ. ವಿವಿಧ ನಾಗರಿಕತೆಗಳಲ್ಲಿ, ಭಾರತಕ್ಕೆ ಪ್ರವಾಸ ಬಂದ ಹೊರ ದೇಶಗಳ ಯಾತ್ರಿಗಳ ಕಥನಗಳಲ್ಲಿ ನಮ್ಮಲ್ಲಿ ಸಿರಿಧಾನ್ಯಗಳನ್ನು ಬಳಸುತ್ತಿದ್ದ ಬಗ್ಗೆ ಉಲ್ಲೇಖಗಳು ಇವೆ. ಸಮೃದ್ಧ ಪೋಷಕಾಂಶಗಳನ್ನು ಹೊಂದಿರುವ ಸಿರಿಧಾನ್ಯಗಳ ಸೇವನೆ ಆರೋಗ್ಯಕರವಾಗಿದ್ದು ವಿವಿಧ ರೋಗಗಳಿಂದ ನಮಗೆ ರಕ್ಷಣೆ ದೊರಕಿಸಿಕೊಡುವುದರ ಜತೆಯಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತವೆ. ಇತರ ಬೆಳೆಗಳಿಗೆ ಹೋಲಿಸಿದಲ್ಲಿ ಸಿರಿಧಾನ್ಯಗಳ ಬೆಳೆಗಳಿಗೆ ಕಡಿಮೆ ಪ್ರಮಾಣದ ನೀರು ಸಾಕು. ಕೀಟ ಬಾಧೆ ಮತ್ತು ಹವಾಮಾನ ವೈಪರೀತ್ಯದ ಸವಾಲನ್ನೂ ಎದುರಿಸುವ ಸಾಮರ್ಥ್ಯವನ್ನು ಸಿರಿಧಾನ್ಯಗಳ ಸಸಿಗಳು ಹೊಂದಿವೆ. ಸಿರಿಧಾನ್ಯಗಳನ್ನು ಬೆಳೆಯುವುದು ಇತರೆಲ್ಲ ಧಾನ್ಯಗಳ ಬೆಳೆಗಳಿಗಿಂತ ಹೆಚ್ಚು ಪರಿಸರಸ್ನೇಹಿಯಾಗಿದೆ. ಸರಕಾರದ ಪ್ರೇರಣೆಯಿಂದ ಸಿರಿಧಾನ್ಯಗಳಿಗೆ ಈಗ ಕೇವಲ ದೇಶ ಮಾತ್ರವಲ್ಲ ವಿಶ್ವಾದ್ಯಂತ ಬೇಡಿಕೆ ಲಭಿಸತೊಡಗಿದ್ದು ಕೃಷಿಕರು ಮತ್ತೆ ಇವುಗಳನ್ನು ಬೆಳೆಯಲು ಮನಸ್ಸು ಮಾಡಬೇಕಿದೆ. ದೇಶದ ಜನತೆ ಈ ಸಿರಿಧಾನ್ಯಗಳನ್ನು ಸೇವಿಸುವ ಪರಿಪಾಠವನ್ನು ಆರಂಭಿಸುವ ಮೂಲಕ ಸಿರಿಧಾನ್ಯಗಳನ್ನು ಮುಂದಿನ ಪೀಳಿಗೆಗೆ ಕಾಪಿಡುವ ಕಾರ್ಯ ಮಾಡಬೇಕಿದೆ.…
ಗ್ಯಾಸ್ ಸಿಲಿಂಡರ್ ತಂದುಕೊಡುವ ವ್ಯಕ್ತಿಗೆ ಎಕ್ಸ್ಟ್ರಾ ಭಕ್ಷೀಸು ಕೊಡಲೇಬೇಕು. ಇಲ್ಲದಿದ್ದರೆ ಅವರು ನೀವೇ ಬಂದು ಹೊತ್ಕೊಂಡು ಹೋಗಿ ಅನ್ನುತ್ತಾರೆ ಅನ್ನುವ ಮಾತುಗಳು “ಸಾಮಾನ್ಯ’ವಾಗಿರುವ ದಿನಗಳಿವು. ಹೀಗಿರುವಾಗ ಮೊನ್ನೆ ಸಿಲಿಂಡರ್ ತಂದುಕೊಟ್ಟ ವ್ಯಕ್ತಿ, ಭಕ್ಷೀಸಿನ ಹಣವನ್ನು ವಾಪಸ್ ಕೊಟ್ಟದ್ದು ಮಾತ್ರವಲ್ಲ, ನಮ್ಮ ಏಜೆನ್ಸಿಯಲ್ಲಿ ಎಕ್ಸ್ಟ್ರಾ ದುಡ್ಡು ತಗೋಳಲ್ಲ ಅಂದುಬಿಟ್ಟರು. ಕುತೂಹಲದಿಂದ ವಿಚಾರಿಸಿದರೆ, ಅದು ನಮ್ಮ ಮಾಲಕರ ಆದೇಶ ಎಂದರು! ಜನ ಹೀಗೂ ಇರ್ತಾರಾ ಎಂಬ ಅಚ್ಚರಿಯೊಂದಿಗೇ ಆ ಏಜೆನ್ಸಿಯ ಮಾಲಕರ ಪರಿಚಯ ಮಾಡಿಕೊಂಡು, ಗೆಳೆತನ ಬೆಳೆಸಿಕೊಂಡು, ಸಲುಗೆ ಹೆಚ್ಚಿದಾಗ-ಸರ್ ನಿಮ್ಮ ಹಿನ್ನೆಲೆ ಹೇಳ್ತೀರಾ ಅಂದರೆ- “ಹೀಗೂ ಉಂಟೇ?’ ಎಂದು ಉದ್ಗರಿಸುವಂಥ ಕಥೆಯನ್ನೇ ಅವರು ಹೇಳಿಬಿಟ್ಟರು. ಅದು ಹೀಗೆ: 80ರ ದಶಕದಲ್ಲಿದ್ದ ರೌಡಿಸಂ ಅಂತ ಓದಿರ್ತೀರಲ್ಲ, ಆ ಜಮಾನಾ ನಮು. ಒಂದೇ ವ್ಯತ್ಯಾಸ ಅಂದ್ರೆ, ಆ ಕಾಲದ ರೌಡಿ ಗಳು ದೊಡ್ಡ ಹೆಸರು ಮಾಡಿದ್ರು. ಕೆಲವ್ರು ಚೆನ್ನಾಗಿ ಆಸ್ತಿ ಮಾಡಿ ದ್ರು. ಐದತ್ತು ವರ್ಷ ಡಾನ್ಗಳಾಗಿ ಮೆರೆದ್ರು. ನಾನು, ನನ್ನಂಥ ಅದೆಷ್ಟೋ ಜನ, ಅಂಥಾ…
ಮೈಸೂರ್ ಪಾಕ್ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಸಿಹಿಯಾದ ತಿಂಡಿ. ಇದರ ಹಿಂದಿನ ಕಥೆ ರೋಚಕವಾಗಿದ್ದು. ಮೈಸೂರು ಅರಮನೆಯ ಪಾಕ ಶಾಲೆಯಲ್ಲಿ ಜನ್ಮ ತಳೆದ ತಿಂಡಿ ಇದು. ಮಹರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯಚಾಮರಾಜ ಒಡೆಯರ್ ಆಡಳಿತಾವದಿಯಲ್ಲಿ ಅರಮನೆಯಲ್ಲಿದ್ದ ಕುಟುಂಬಕ್ಕೆ ಬೇಕಾದ ಸಿಹಿ ಖಾರದ ತಿನಿಸು ತಯಾರಿಸುವುದರಲ್ಲಿ ಜಾಣ್ಮೆ ಹೊಂದಿದ್ದ ಅರಮನೆಯ ಪಾಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಕಾಕಾಸುರ ಮಾದಪ್ಫನವರಲ್ಲಿ ಒಮ್ಮೆ ಮಹಾರಾಜರು ಯಾವುದಾದರೊಂದು ತಿಂಡಿ ತಯಾರಿಸುವಂತೆ ಹೇಳಿದಾಗ ಕಡಲೆ ಹಿಟ್ಟು ಸಕ್ಕರೆ, ತುಪ್ಪ, ಎಣ್ಣೆ ಸೇರಿಸಿ ತಿಂಡಿಯೊಂದನ್ನು ಮಾಡಿ ಅದನ್ನು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರಿಗೆ ತಿನ್ನಲು ಕೊಟ್ಟರು. ಇದರ ರುಚಿ ನೋಡಿದ ಮಾಹಾರಾಜರಿಗೆ ತುಂಬಾ ಖುಷಿಯಾಗಿ ಮಾದಪ್ಫನವರಿಗೆ ಪ್ರೋತ್ಸಾಹ ನೀಡಿ ಪ್ರಶಂಸಿಸುತ್ತಾ, ಇದು ಯಾವ ತಿಂಡಿ? ಚೆನ್ನಾಗಿದೆ, ತಿಂಡಿಯ ಹೆಸರೇನು? ಎಂದು ಕೇಳಿದ ಮಹಾರಾಜರಿಗೆ ತಬ್ಬಿಬ್ಬಾದ ಮಾದಪ್ಪನವರು ಗಡಿ ಬಿಡಿಯಲ್ಲಿ ಮೈಸೂರು ಪಾಕ್ ಎಂದರಂತೆ. ಇದು ಮೈಸೂರು ಅರಮನೆಯಲ್ಲಿ ಮೊದಲ ಬಾರಿಗೆ ತಯಾರಾಗಿದ್ದರಿಂದ ಇದಕ್ಕೆ ಮೈಸೂರು ಪಾಕ್ ಎಂದು…
ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕರಾವಳಿಯಲ್ಲಿ ಕೋವಿಡ್ ಕೂಡ ಏರಿಕೆ ಕಾಣುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಒಂದೆಡೆ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಅಧಿಕಾರಿಗಳ ತಂಡ ನಿಗಾ ವಹಿಸಿದರೆ ಇನ್ನೊಂದೆಡೆ ಚುನಾವಣೆ ಸಮಯ ಕೊರೊನಾ ಏರಿಕೆಯಾಗದಂತೆ ಆರೋಗ್ಯ ಇಲಾಖೆ ನಿಗಾ ವಹಿಸಿದೆ. ಒಮಿಕ್ರಾನ್ ರೂಪಾಂತರಿ ಎಕ್ಸ್ಬಿಬಿ 1.16 ತಳಿಯ ಪರಿಣಾಮ ಜಿಲ್ಲೆಯಲ್ಲಿ ಸೌಮ್ಯ ಕೋವಿಡ್ ಪ್ರಕರಣ (ಎ ಸಿಂಪ್ಟಮ್ಯಾಟಿಕ್) ಹೆಚ್ಚಾಗಿ ದೃಢಪಡುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 14 ದಿನಗಳಲ್ಲಿ 38 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ. ಅದಕ್ಕೆ ತಕ್ಕಂತೆ ಜಿಲ್ಲೆಯಲ್ಲಿ ಕೋವಿಡ್ ತಪಾಸಣೆ ಕೂಡ ಹೆಚ್ಚಳ ಮಾಡಲಾಗಿದೆ. ಸದ್ಯ ದಿನಂಪ್ರತಿ ಸುಮಾರು 400ಕ್ಕೂ ಹೆಚ್ಚಿನ ಮಂದಿಯನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಹೆಚ್ಚಾಗಿ ಹಿರಿಯ ನಾಗರಿಕರಲ್ಲಿ ಕೋವಿಡ್ ದೃಢಪಡುತ್ತಿದ್ದು, ಮುಖ್ಯವಾಗಿ ಜ್ವರ, ಭೇದಿ ಸಹಿತ ಹಾಸಿಗೆ ಹಿಡಿದವರು, ದೀರ್ಘಕಾಲದ ರೋಗಿಗಳನ್ನು, ಹಿರಿಯರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ದೇಶಾದ್ಯಂತ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಪರಿಶೀಲನ ಸಭೆ ಕೆಲ ವಾರದ ಹಿಂದೆಯಷ್ಟೇ ನಡೆದಿದೆ. ರಾಜ್ಯಗಳು ಜಾಗರೂಕರಾಗಿ, ನಿರ್ವಹಣೆಗೆ…
ಪರೋಪಕಾರ ಬಂಟ ಸಮುದಾಯದ ದೊಡ್ಡ ಗುಣ, ಗುರುಪೀಠವಿಲ್ಲದೇ ಬಂಟ ಸಮುದಾಯವು ಎಲ್ಲಾ ಕ್ಷೇತ್ರಗಳಲ್ಲೂ ಇಂದು ಪ್ರಗತಿ ಸಾಧಿಸಿದೆ, ಸಮುದಾಯದ ಹಿರಿಯರು ಗುರುಪೀಠಕ್ಕೆ ಹೋರಾಡದೆ ಬಂಟರ ಸಂಘ, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿರುವುದರಿಂದಲೇ ಇಂದು ಸಮುದಾಯದ ಅಭಿವೃದ್ಧಿ ಸಾಧ್ಯವಾಗಿರುವುದು, ಹಾಗಾಗಿ ಈ ಸಮುದಾಯವು ಗುರುಪೀಠದ ಗೋಜಿಗೆ ಹೋಗದೆ ಹಿರಿಯರು ತೋರಿದ ಹಾದಿಯಲ್ಲೇ ಮುಂದೆ ಸಾಗಬೇಕು, ದೇವರನ್ನೇ ಗುರುವನ್ನಾಗಿ ಕಾಣಬೇಕು, ಈ ನಿಟ್ಟಿನಲ್ಲಿ ಸಮಾಜಕ್ಕೆ ಅರಿವು ಮೂಡಿಸುವ ಕೆಲಸಗಳಾಗಬೇಕೆಂದು ಕೇಮಾರು ಸಾಂದೀಪನೀ ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿಯವರು ಹೇಳಿದರು. ಮೂಡುಬಿದಿರೆ ಯುವ ಬಂಟರ ಸಂಘದ ವತಿಯಿಂದ ನಡೆದ ಬಂಟರ ಸಮ್ಮಿಲನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿಯವರು ಸಂಸ್ಕøತಿ, ಶಿಕ್ಷಣ, ಉದ್ಯಮ, ಧಾರ್ಮಿಕ, ಸಾಮಾಜಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಬಂಟ ಸಮುದಾಯದ ಕೊಡುಗೆ ದೊಡ್ಡದು, ಇದು ಬಂಟ ಸಮುದಾಯದ ಹೆಮ್ಮೆ ಎಂದರು. ಆಧ್ಯಾತ್ಮವೆಂದರೆ ಕೇವಲ ಗುಡಿ ಗೋಪುರಗಳನ್ನು ಕಟ್ಟುವುದಲ್ಲ, ಯಾರು ಹಸಿದವರಿರುತ್ತಾರೋ, ಯಾರು ಕಷ್ಟದಲ್ಲಿರುತ್ತಾರೋ ಅಂತವರಿಗೆ ನೆರವಾಗುವುದೇ ಶ್ರೇಷ್ಠವಾದ ಆಧ್ಯಾತ್ಮವೆಂದು ಹೇಳಿದ…
ಕರ್ನಾಟಕದ ಬಾಗಲು ಕೋಟೆ ಜಿಲ್ಲೆಯ ಇಳಕಲ್ ಎಂಬ ಸಣ್ಣ ಊರಿನ ಚಟ್ಟಕ್..ಪಟ್ಟಕ್.. ಶಬ್ದ ಕೇಳುತ್ತಿರುವ ಗಲ್ಲಿಯೊಳಗೆ ತಯಾರಾಗುವ ಇಳಕಲ್ ಸೀರೆ ಸಂಸತ್ತಿನಲ್ಲಿ ಕಾಣಸಿಕ್ಕಿದ್ದು ಪರೋಕ್ಷವಾಗಿ ನೇಕಾರಿಗೆ ಸಲ್ಲಿಸಿದ ಗೌರವ, ಪ್ರೇರಣೆ ಹಾಗೂ ವ್ಯವಹಾರದ ಏರಿಕೆಗೂ ಇಳಕಲ್ ಸೀರೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯುಲು ಕಾರಣವಾಯಿತು. 2023 ರ ಕೇಂದ್ರ ಬಜೆಟ್ ಮಂಡಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಚಿವೆಯಾಗಿ ಸತತ 5 ನೇ ಬಾರಿಗೆ ಮತ್ತು ಮುಂದಿನ ವರ್ಷದ ಮಹಾಚುನಾವಣೆಗೆ ಮುಂಚಿತವಾಗಿ ಸಂಸತ್ತಿನಲ್ಲಿ ಬಜೆಟ್ ಮಂಡಿಸಲು ಬಂದಾಗ ಉಟ್ಟ ಇಳಕಲ್ ಸೀರೆ ಇಳಕಲ್ ಸೀರೆಗಳ ಮೆರಗನ್ನು ಹೆಚ್ಚಿಸಿತು. ಅನೇಕರು ಸಾಮಾಜಿಕ ಜಾಲತಾಣದಲ್ಲಿ ಈ ಸೀರೆಯ ಕುರಿತು ಮಾಹಿತಿ ಕಲೆಹಾಕಿದ್ದಾರೆ. ಇಳಕಲ್ ಸೀರೆಗಳ ಮಾಹಿತಿ ಕೇಂದ್ರ ವೆಬ್ ಸೈಟ್ ಗಳನ್ನು ಜಾಲಾಡಿದವರ ಸಂಖ್ಯೆಯು ಅಪರಿಮಿತ. ಅಷ್ಟೇ ಅಲ್ಲದೆ ಸೀರೆ ಅಂಗಡಿಗೆ ಹೋಗಿ ಇಳಕಲ್ ಸೀರೆ ಕಂಡು, ಕೊಂಡು ಬಂದವರ ಸಂಖ್ಯೆ ಎಷ್ಟು ಎಂದರೆ ಇಡೀ ಒಂದು ವರ್ಷದಲ್ಲಿ ಮಾರಾಟವಾಗುವ ಸಂಖ್ಯೆಯ ಅರ್ಧದಷ್ಟು…
ಉಡುಪಿ ಭಾಗದಲ್ಲಿ ನಡೆಯುವ ದೇವರ ಮತ್ತು ಜನ್ನ ಕಂಬಳದಲ್ಲಿ ಅನೇಕ ನಂಬಿಕೆ ಆಚರಣೆ ಇದೆ. ಬ್ರಹ್ಮಾವರ ಬಳಿ ಚೇರ್ಕಾಡಿಯಲ್ಲಿ ಮಾತ್ರ ಇರುವ ಜನ್ನ ಕಂಬಳದಲ್ಲಿ ಒಂದು ವಿಶೇಷತೆ. ಗದ್ದೆಯಲ್ಲಿ ಕಂಬಳದ ಕೋಣಗಳ ಓಟ ನಡೆಯುತ್ತಿದ್ದರೆ ಕಂಬಳ ಮನೆತನದ ಪಟ್ಟದ ಅರಸರು ರಾಜ ಪೋಷಾಕಿನಲ್ಲಿ ಕಂಬಳ ಗದ್ದೆಯ ಒಂದು ವಿಶೇಷ ಕಟ್ಟೆಯಲ್ಲಿ ಕುಳಿತು ಕಂಬಳವನ್ನು ವೀಕ್ಷಿಸುತ್ತಾರೆ. ಆಗಮಿಸಿದ ಕೋಣಗಳ ಓಟ ಮುಗಿಸಿ ಕೊನೆಯದಾಗಿ ಕಂಬಳ ಮನೆಯ ಕೋಣಗಳು ಗದ್ದೆಯಲ್ಲಿ ಓಟ ಮುಗಿಸಿದ ಬಳಿಕ ಮುಕ್ತಾಯದ ಒಂದು ಸನ್ನಿವೇಶ ಅತೀ ಕೂತೂಲಕಾರಿ. ತುಳುನಾಡಿನ ಮೂಲ ನಿವಾಸಿಗಳಾದ ಕೊರಗ ಜನಾಂಗದ ವ್ಯಕ್ತಿ, ಅವರು ಸಾಂಪ್ರದಾಯಿಕ ಉಡುಗೆಯಲ್ಲಿ ಡೋಲು ವದನದೊಂದಿಗೆ ಕೈಯಲ್ಲಿ ಒಂದು ದಂಡವನ್ನು ಹಿಡಿದು ಕಂಬಳ ಗದ್ದೆಗೆ ಬರುತ್ತಾರೆ. ತಲತಲಾಂತರದಿಂದ ಬಂದಂತೆ ಮನೆತನದ ಹಿರಿಯ ವ್ಯಕ್ತಿ ಕಂಬಳ ಗದ್ದೆಗೆ ಮೊದಲು 5 ಅಡಕೆಯನ್ನು ಎಸೆಯುತ್ತಾರೆ. ಕೊನೆಯದಾಗಿ ತೆಂಗಿನ ಕಾಯಿಯನ್ನು ಎಸೆಯುತ್ತಾರೆ. ಗದ್ದೆಯಲ್ಲಿ ಇರುವ ವ್ಯಕ್ತಿ ಆ ತೆಂಗಿನ ಕಾಯಿಯನ್ನು ತನ್ನ ದಂಡದಿಂದ ಹೊಡೆಯಬೇಕು. ಕಾಯಿ ಹೊಡೆಯುದು…
ಪುಣೆ ಬಂಟ್ಸ್ ಅಸೋಸಿಯೇಶನ್ ವತಿಯಿಂದ ಸಮಾಜ ಬಾಂಧವರಿಗಾಗಿ ಮಲ್ಟಿ ಸ್ಪೆಷಾಲಿಟಿ ಉಚಿತ ಆರೋಗ್ಯ ತಪಾಸಣ ಶಿಬಿರವು ಆ. 27 ರಂದು ಬೆಳಗ್ಗೆ 9 ರಿಂದ ಅಪರಾಹ್ನ 1 ರವರೆಗೆ ಪುಣೆ ಕ್ಯಾಂಪ್ ನ ಗುರುನಾನಕ್ ಮೆಡಿಕಲ್ ಫೌಂಡೇಶನ್ ನ ಗುರುನಾನಕ್ ದರ್ಬಾರ್ ಹಾಲ್ (ಹಾಲಿವುಡ್ ಗುರುದ್ವಾರ) ನಲ್ಲಿ ನಡೆಯಲಿದೆ. ಪುಣೆ ಬಂಟ್ಸ್ ಅಸೋಸಿಯೇಶನ್ ಆಯೋಜನೆಯಲ್ಲಿ ಗುರುನಾನಕ್ ಮೆಡಿಕಲ್ ಫೌಂಡೇಶನ್ ಸಹಯೋಗದೊಂದಿಗೆ ನಡೆಯಲಿರುವ ಈ ಉಚಿತ ಆರೋಗ್ಯ ತಪಾಸಣ ಶಿಬಿರದಲ್ಲಿ ಸ್ತ್ರೀರೋಗ ಶಾಸ್ತ್ರ ಮತ್ತು ಬಂಜೆತನ, ಮಕ್ಕಳ ರೋಗ ತಪಾಸಣೆ, ನೇತ್ರ, ದಂತ ತಪಾಸಣೆ, ಔಷಧ ಮತ್ತು ರೋಗ ಶಾಸ್ತ್ರದ ಬಗ್ಗೆ ಮಾಹಿತಿ, ತುರ್ತು ರೋಗಿಗಳಿಗೆ ಉಚಿತ ಇಸಿಜಿ, ರೋಗ ಲಕ್ಷಣ ಹೊಂದಿರುವ ರೋಗಿಗಳಿಗೆ ಉಚಿತ ಗರ್ಭಕಂಠದ ಕ್ಯಾನ್ಸರ್ ಸ್ಕ್ರೀನಿಂಗ್ ಇನ್ನಿತರ ವೈದ್ಯಕೀಯ ತಪಾಸಣೆಯನ್ನು ಮಾಡಲಾಗುವುದು. ಆರೋಗ್ಯ ತಪಾಸಣ ಶಿಬಿರದಲ್ಲಿ ಪುಣೆಯ ಖ್ಯಾತ ವೈದ್ಯರಾದ ಡಾ.ಚಿತ್ತರಂಜನ್ ಶೆಟ್ಟಿ, ಡಾ. ಸಂಜಯ್ ಬಿ. ಕುಲಕರ್ಣಿ, ಡಾ. ಸುಧಾಕರ್ ಶೆಟ್ಟಿ, ಡಾ. ಗೋಪಾಲಕೃಷ್ಣ ಗಾವಡೆ, ಡಾ.…