Author: admin

ಮೂಡುಬಿದಿರೆ: ಏಪ್ರಿಲ್‍ನಲ್ಲಿ ನಡೆದ ಜೆಇಇ ಎರಡನೇ ಚರಣದ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮೆರೆದಿದ್ದಾರೆ. ಕಾಲೇಜಿನ ಹೆಚ್ ಆರ್ ರಜತ್ 99.6655363 ಪರ್ಸಂಟೈಲ್ ಪಡೆದರೆ, ಪ್ರಶಾಂತ 99.1289068 ಪರ್ಸಂಟೈಲ್, ಹಾಗೂ ಪ್ರಜ್ವಲ್ ಚೌಧರಿ ನಂದೇಲಾ 99.0154909 ಪರ್ಸಂಟೈಲ್  ಪಡೆದಿರುತ್ತಾರೆ. ಕೆಟಗರಿ ವಿಭಾಗದಲ್ಲಿ ಆಕಾಶ್ ಬಸವರಾಜ್ ಬುಲ್ಲಮ್ಮನ್ನವರ್ ರಾಷ್ಟ್ರ ಮಟ್ಟದಲ್ಲಿ 290ನೇ ರ್ಯಾಂಕ್ ಪಡೆದರೆ, ಪ್ರಥಮ್ ಎಸ್ 425ನೇ ರ್ಯಾಂಕ್, ಆರ್ ರಕ್ಷಿತಾ 865ನೇ ರ್ಯಾಂಕ್ ಗಳಿಸಿರುತ್ತಾರೆ. 98 ಪರ್ಸಂಟೈಲ್‍ಗಿಂತ ಅಧಿಕ 14 ವಿದ್ಯಾರ್ಥಿಗಳು, 97 ಪರ್ಸಂಟೈಲ್‍ಗಿಂತ ಅಧಿಕ 34 ವಿದ್ಯಾರ್ಥಿಗಳು, 96 ಪರ್ಸಂಟೈಲ್‍ಗಿಂತ ಅಧಿಕ 68, 95 ಪರ್ಸಂಟೈಲ್‍ಗಿಂತ 120, ಹಾಗೂ 234 ವಿದ್ಯಾರ್ಥಿಗಳು 90 ಪರ್ಸಂಟೈಲ್‍ಗಿಂತ ಅಧಿಕ ಅಂಕ ಪಡೆದ ಶ್ರೇಯಕ್ಕೆ ಪಾತ್ರರಾಗಿದ್ದಾರೆ. ಭೌತಶಾಸ್ತ್ರ ವಿಷಯದಲ್ಲಿ 2 ವಿದ್ಯಾರ್ಥಿಗಳು 100 ಪರ್ಸಂಟೈಲ್ ಪಡೆದರೆ, 24 ವಿದ್ಯಾರ್ಥಿಗಳು 99 ಪರ್ಸಂಟೈಲ್‍ಗಿಂತ ಅಧಿಕ ಅಂಕ ಪಡೆದು ಸಾಧನೆ ಮೆರೆದಿದ್ದಾರೆ. ರಸಾಯನಶಾಸ್ತ್ರ ವಿಷಯದಲ್ಲಿ 99 ಪರ್ಸಂಟೈಲ್‍ಗಿಂತ ಅಧಿಕ 48…

Read More

ನಮ್ಮ ಕರಾವಳಿಗಳಲ್ಲಿ ಎಲ್ಲಿಯೂ ಎಳ್ಳು ಬೆಳೆಯುವುದನ್ನು ಕಾಣುವುದಿಲ್ಲ. ಅದರ ಎಣ್ಣೆ ತೆಗೆಯುವ ಮಿಲ್ಲುಗಳೂ ಇಲ್ಲ. ಕೇವಲ ನಮ್ಮ ದೇಶದಲ್ಲಿ ನಿತ್ಯ ದೀಪಗಳಿಗೆ ಬಳಸಬೇಕಾದ ಎಳ್ಳನ್ನು ಶೇಕಡ ಹತ್ತರಷ್ಟು ಬೆಳೆಯುವುದಿಲ್ಲ. ಬೆಳೆದ ಎಳ್ಳಿನ ಹೆಚ್ಚಿನ ಅಂಶ ತಿಂಡಿ ತಿನಿಸುಗಳಿಗೆ ಉಪಯೋಗವಾಗುತ್ತದೆ. ಆದರೆ ವಿವಿಧ ಆಕರ್ಷಕ ಪ್ಯಾಕೆಟ್ಟು ಬಾಟಲಿಗಳಲ್ಲಿ ಸಿಗುವ ಎಳ್ಳೆಣ್ಣೆಯ ಮೂಲ ಎಲ್ಲಿ? ಕೇವಲ ಒಂದು ಲೀಟರ್ ನ ಎಳ್ಳೆಣ್ಣೆ ಇದ್ದರೆ 10 ಲೀಟರ್ ಶುದ್ಧ ಎಳ್ಳೆಣ್ಣೆ ನಿರ್ಮಾಣ ಸಾಧ್ಯವೆಂದು ಕಂಡು ಹಿಡಿದಿದ್ದಾರೆ. ಅಂದರೆ ಪೆಟ್ರೋಲಿಯಂ ಶುದ್ದೀಕರಣ ಘಟಕಗಳಲ್ಲಿ ಶುದ್ದೀಕರಿಸಿ ಅಂತಿಮವಾಗಿ ಉಳಿಯುವ ಒಂದು ಬಿಳಿ ದ್ರವವನ್ನು ವಿವಿಧ ಖಾದ್ಯ ತೈಲ ಮಿಲ್ಲಿನವರು ಪಡೆದು ಅದಕ್ಕೆ ಬೇಕಾದ ಕೇವಲ ಶೇಕಡಾ 10 ರಷ್ಟು ಎಣ್ಣೆ ಬೆರೆಸಿದರೆ ನಮಗೆ ಬೇಕಾದ ಶುದ್ಧ ಎಳ್ಳೆಣ್ಣೆ ಕೊಬ್ಬರಿ ಎಣ್ಣೆ ಇತರ ವಿವಿಧ ಎಣ್ಣೆಗಳನ್ನು ಪಡೆಯಬಹುದಾಗಿದೆ. ಹೆಚ್ಚೇಕೆ ಇದೇ ರೀತಿಯಲ್ಲಿ ದನದ ತುಪ್ಪವನ್ನು ಪಡೆಯಬಹುದಾಗಿದೆ. ಮೇಲೆ ಸೂಚಿಸಿದ ಪೆಟ್ರೋಲಿಯಂ ನಿರುಪಯುಕ್ತ ದ್ರವವನ್ನು ಹಿಂದೆ ಸಮುದ್ರದ ಆಳಕ್ಕೆ ಡಂಪು ಮಾಡುತ್ತಿದ್ದರು.…

Read More

ಬಂಟರ ಸಂಘ ಮುಂಬಯಿ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಮೀರಾರೋಡ್ ಪೂರ್ವದ ಕಾಶಿ ಗಾಂವ್ ನಲ್ಲಿರುವ ಶ್ರೀ ರಾಧಾಕೃಷ್ಣ ಚಾರಿಟೇಬಲ್ ಫೌಂಡೇಶನ್ ಸಂಚಾಲಕತ್ವದ ಶ್ರೀ ರಾಧಾಕೃಷ್ಣ ವೃದ್ಧಾಶ್ರಮಕ್ಕೆ ಭೇಟಿ ನೀಡಿ ದಿನೋಪಯೋಗಿ ವಸ್ತುಗಳು ಸಹಿತ ಆಹಾರ ಸಾಮಾಗ್ರಿಗಳನ್ನು ನೀಡಿ ಸಹಕರಿಸಲಾಯಿತು. ಬಂಟರ ಸಂಘ ಮೀರಾ ಭಾಯಂದರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಗುತ್ತಿನಾರ್ ರವೀಂದ್ರ ಶೆಟ್ಟಿ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ವಸಂತಿ ಎಸ್. ಶೆಟ್ಟಿಯವರ ಮುಂದಾಳತ್ವದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸುಗುಣಾ ಶೆಟ್ಟಿ, ಅಮಿತಾ ಕೆ. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಸುಜಾತಾ ಶೆಟ್ಟಿ, ಜತೆ ಕೋಶಾಧಿಕಾರಿ ಶಿಲ್ಪಾ ಶೆಟ್ಟಿ, ರಂಜನಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Read More

ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಅನಾರೋಗ್ಯ ಪೀಡಿತರಿಗೆ ಸಹಾಯಧನ ವಿತರಣಾ ಕಾರ್ಯಕ್ರಮವು ಸಂಘದ ಆಡಳಿತ ಕಚೇರಿಯಲ್ಲಿ ಏಪ್ರಿಲ್ 10 ರಂದು ನಡೆಯಿತು. ಫಲಾನುಭವಿಗಳಿಗೆ ಸಹಾಯಧನವನ್ನು ವಿತರಿಸಿ ಮಾತನಾಡಿದ ಸಂಘದ ಮಹಾಪೋಷಕರಾದ ಆನಗಳ್ಳಿ ಕರುಣಾಕರ ಹೆಗ್ಡೆ, ಸಂಘದ ವತಿಯಿಂದ ನೀಡುವ ಸಹಾಯಧನವನ್ನು ಸಮರ್ಪಕವಾಗಿ, ಸರಿಯಾದ ರೀತಿಯಲ್ಲಿ ತಾವು ಬಳಸಿಕೊಳ್ಳಬೇಕು ಎಂದು ಹೇಳಿದರು. ಕುಂದಾಪುರ ಯುವ ಬಂಟರ ಸಂಘದ ಅಧ್ಯಕ್ಷರಾದ ಡಾ. ಅಂಪಾರು ನಿತ್ಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ನಿತೀಶ್ ಶೆಟ್ಟಿ ಬಸ್ರೂರು, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಉದಯ್ ಕುಮಾರ್ ಶೆಟ್ಟಿ ಮಚ್ಚಟ್ಟು, ಹಿರಿಯ ಉಪಾಧ್ಯಕ್ಷರಾದ ರವಿಶಂಕರ್ ಹೆಗ್ಡೆ ದಬ್ಬಾಡಿ, ಕ್ರೀಡಾ ಸಂಚಾಲಕ ಅರುಣ್ ಕುಮಾರ್ ಶೆಟ್ಟಿ ಕುಂದಾಪುರ, ಉದಯ್ ಶೆಟ್ಟಿ ಹೊಸಂಗಡಿ ಮತ್ತು ಬೇರೆ ಬೇರೆ ಊರುಗಳಿಂದ ಬಂದ ಫಲಾನುಭವಿಗಳು ಉಪಸ್ಥಿತರಿದ್ದರು.

Read More

ಪಿರಾಕ್ ದ ಕಾಲೋಡು ಪ್ರಾಯ ದಂಗ್ ದ್ ಸೈಪಿನ ಜನಕುಲೆ ಜಾಸ್ತಿ. ಅಂಚತ್ತಂದೆ ಸೀಕ್ ಸಂಕಡೊಡುಲ ಇಲ್ಲಡೆ ಜೀವ ಬುಡೊಂದಿತ್ತೆರ್. ನರಮಾನಿನ ಉಸುಲ್ ಪೋಯಿ ಗಳಿಗೆಗ್ ಜೀವ ಕಡಿಂಡ್ ಪನ್ಪಿನ ಹಿರಿಯೆರ್ನ ಪಾತೆರೊನು ಅರ್ಥ ಮಲ್ತೊಂದು, ಸುರುಕ್ಕು ಪುಣೊನು ಮಣ್ಣ್ ಡ್ ಪಾಡುನ ಕ್ರಮ ಮಲ್ಪುವೆರ್. ಅಂಚೆನೆ ಸೈತಿನ ಸುದ್ದಿ ಊರ್ದ ಜನಕ್ಲೆಗ್ ತೆರಿಯೆರೆ ಆದಿವಾಸಿ ಜನಾಂಗದಕುಲು ಬತ್ತ್ ದುಃಖದ ತಾಳೊಡು ಡೋಲು ಬೊಟ್ಟುವೆರ್. ಮಣ್ಣ್ ಡ್ ಪಾಡುನ ಪಂಡ, ಪಜೆಟ್ಟಿತ್ತಿನ ಪುನೊನು ತೆನ್ಕಾಯಿ ತರೆ ಮಲ್ತ್ ಬಡಕಾಯಿ ಕಾರ್ ಪಾರ್ದ್ ಜೆಪುಡಾರ್ವೆ. ಅಲ್ತ್ ಬೊಕ್ಕ ತರೆಮಿತ್ತ್ ಅರಿ ಪಾರ್ದ್, ಕಾರ ತಿರ್ತ್ ಬಾರ್ ಪಾರ್ದ್, ಇಲ್ಲದ ತಡ್ಯಗೊಂಜಿ ಇಡಿ ತಾರಾಯಿ ದರ್ತ್ ರಡ್ಡ್ ಗಡಿ ಮಲ್ತ್, ಒಂಜಿ ಗಡಿ ತರೆತ್ತ ಮಿತ್ತ್, ಒಂಜಿ ಗಡಿ ಕಾರ ತಿರ್ತ್ ದೀದ್ ಐಟ್ ತುಡರ್ ಪೊತ್ತಾವೆರ್. ಅಲ್ತ್ ಬೊಕ್ಕ ಕುಟುಂಬ ಸಂಸಾರದಕುಲು ಊರ್ದಕುಲು ಸೇರ್ದ್ ಕಾಟಗೂರ್ರೆ ತಯಾರಾಪೆರ್. ಕುಕ್ಕುದ ಮರಕ್ಕ್ ಮಗೆ ಗಡಿ…

Read More

ಆರ್ಥಿಕವಾಗಿ ಹಿಂದುಳಿದ ಬಂಟ ಯುವತಿಯ ವಿವಾಹಕ್ಕಾಗಿ ಬೆಂಗಳೂರು ಬಂಟರ ಸಂಘದಿಂದ ನೀಡುವ ಕರಿಮಣಿ ಕಾರ್ಯಕ್ರಮ ಅಡಿಯಲ್ಲಿ ಹೊಸೂರು ಗ್ರಾಮಕ್ಕೆ ತೆರಳಿ ಸಾಗರ ಬಂಟರ ಸಂಘದ ಮುಖಾಂತರ ಸುಮಾರು 50000 ಮೌಲ್ಯದ ಕರಿಮಣಿಯನ್ನು ವಿತರಿಸಲಾಯಿತು. ಸಾಗರ ಬಂಟರ ಸಂಘದ ಪದಾಧಿಕಾರಿಗಳು ಮನೆಯ ಆರ್ಥಿಕ ಪರಿಸ್ಥಿತಿಯನ್ನು ಗಮನಿಸಿ ಕೇವಲ ಒಂದು ಗಂಟೆಯಲ್ಲಿ 16000 ರೂಪಾಯಿಗಳ ಸಹಾಯ ಧನವನ್ನು ಯುವತಿಯ ಮದುವೆಗಾಗಿ ಸಹಾಯ ಮಾಡಿದರು. ಈ ಸಂಧರ್ಭದಲ್ಲಿ ದಾನಿಗಳಾದ ಸಾಗರ ಬಂಟರ ಸಂಘದ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಸದಾನಂದ ಶೆಟ್ಟಿ, ಶ್ರೀನಿವಾಸ್ ಶೆಟ್ಟಿ, ಸುರೇಶ್ ಶೆಟ್ಟಿ ನಿಸ್ರಾಣಿ, ಪ್ರಭಾಕರ್ ಶೆಟ್ಟಿ ಕಾಂಟ್ರಾಕ್ಟರ್, ಸತೀಶ್ ಶೆಟ್ಟಿ, ರಮೇಶ್ ಹೆಗ್ಡೆ, ಅಣ್ಣಪ್ಪ ಶೆಟ್ಟಿ, ಶ್ರೀಧರ್ ಶೆಟ್ಟಿ, ರಘುಪತಿ ಶೆಟ್ಟಿ, ಪ್ರಕಾಶ್ ಶೆಟ್ಟಿ, ನಾಗರಾಜ್ ಶೆಟ್ಟಿ, ಪ್ರತಾಪ್ ಶೆಟ್ಟಿ ಎಲ್ಲರೂ ತಮ್ಮ ಸ್ವಂತ ದುಡಿಮೆಯ ಪಾಲನ್ನು ಮದುವೆಗಾಗಿ ನೀಡಿ ಮಾನವೀಯತೆ ಮೆರೆದರು.

Read More

ಇದೇನು ಐತಿಹಾಸಿಕ ಸಂಗತಿಯೋ ಜನಪದ ಕಥನವೊ ಹೇಳುವುದಕ್ಕೆ ಹೊರಟಿಲ್ಲ ನಾನು. ಗುತ್ತಿನ ಮನೆಗಳಲ್ಲಿ ವಾರ್ಷಿಕ ನೇಮ, ತಂಬಿಲಗಳು ನಡೆಯುವಾಗ ಆಚರಣೆಯ ಕೌತುಕ ಒಂದು ಕಡೆಯಾದರೆ, ಇನ್ನೊಂದು ಕಡೆ ಕೆಲವು ತಮಾಷೆಯ ಮತ್ತು ಯೋಚಿಸುವ ಸಂಗತಿಗಳು ನಮ್ಮ ಗಮನಕ್ಕೆ ಬರುತ್ತವೆ. ಬಂಟ ಮನೆತನದ ವಾರ್ಷಿಕ ಆಚರಣೆಯ ಸಂದರ್ಭದಲ್ಲಿ ಇತ್ತೀಚೆಗೆ ಒಂದು ವಿಚಾರವನ್ನು ಸೂಕ್ಷ್ಮವಾಗಿ ನಾನು ಗಮನಿಸಿದ್ದೇನೆ. ಯುವ ತಲೆಮಾರಿನಲ್ಲಿ ಗಂಡನ ತರವಾಡಿನ ಕಾರ್ಯಕ್ರಮಕ್ಕೆ ಹೆಂಡತಿ ಮಕ್ಕಳು ಬರುವಷ್ಟು ಹೆಂಡತಿಯ ತರವಾಡಿನ ಮನೆಯ ಕಾರ್ಯಕ್ರಮಕ್ಕೆ ಗಂಡನ ಪೂರ್ಣ ಹಾಜರಾತಿ ಇರುವುದಿಲ್ಲ. ಹೊತ್ತಿಗೆ ಬಂದು ಹಿಂದಿರುಗುವ ಅವರಲ್ಲಿ ಸಣ್ಣ ಪರಕೀಯ ಭಾವ. ಗಂಡನ ಜೊತೆ ಹೆಂಡತಿಯೂ ವಾಪಸ್. ಮನೆ ಅಳಿಯಂದಿರಿಗೆ ಇದು ಅನ್ವಯ ಆಗದು. ವಯಸ್ಸಾದ ಹಾಗೆ ಹೆಂಗಳೆಯರ ಆಸಕ್ತಿ ಬದಲಾಗುತ್ತದೆ. ಅವರು ಖಡ್ಡಾಯವಾಗಿ ತಮ್ಮ ತರವಾಡಿನ ಕಾರ್ಯಕ್ರಮದಲ್ಲಿ ಸಕ್ರೀಯರು. ಮಕ್ಕಳನ್ನು ನಾಲ್ಕು ದಿನ ಮೊದಲೇ ಹೊರಡಿಸಲು ಶುರು ಮಾಡುತ್ತಾರೆ. ಅದುವರೆಗೆ ಅಮ್ಮ ಹೋಗ್ತಾರೆ ಅಜ್ಜಿ ಹೋಗುತ್ತಾರೆ, ನಾವು ಹೋದ ಹಾಗೆ ಅಲ್ವಾ ಎನ್ನುವ ನೆಪ.…

Read More

ಸಾಗರ ತಾಲೂಕಿನ ದಾಸರಕೊಪ್ಪ ಗ್ರಾಮದ ಚಂದನ ಶೆಟ್ಟಿ ಎಂಬ ಮಹಿಳೆಗೆ ಸಾಗರ ಬಂಟರ ಸಂಘದ ವತಿಯಿಂದ ಟೈಲರಿಂಗ್ ಯಂತ್ರವನ್ನು ಎಪ್ರಿಲ್ 24 ರಂದು ವಿತರಿಸಲಾಯಿತು. ಅಂಗವಿಕಲ ಮಹಿಳೆಯ ಸ್ವಾವಲಂಬಿ ಜೀವನ ನಿರ್ವಹಣೆಗಾಗಿ ಕಷ್ಟ ಪಡುತ್ತಿರುವ ಸುದ್ದಿ ಸಾಗರ ಬಂಟರ ಸಂಘದ ಪದಾಧಿಕಾರಿಗಳ ಗಮನಕ್ಕೆ ಬಂದಿತ್ತು. ಪದಾಧಿಕಾರಿಗಳು ದಾನಿಗಳ ಗಮನಕ್ಕೆ ಈ ವಿಷಯ ತಂದಿದ್ದರು. ಈ ಸಂಧರ್ಭದಲ್ಲಿ ಬೆಂಗಳೂರು ಬಂಟರ ಸಂಘದ ಕೋಶಾಧಿಕಾರಿ ಹಾಗೂ ಸ್ಮಾರ್ಟ್ ಲೈನರ್ಸ್ ಕಂಪನಿ ಮುಖ್ಯಸ್ಥರಾದ ಅಮರನಾಥ್ ಶೆಟ್ಟಿ ಅವರಿಗೆ ವಿಷಯ ತಿಳಿಸಿದಾಗ ತಕ್ಷಣ ಸ್ಪಂದಿಸಿ ಸಾಗರ ಬಂಟರ ಸಂಘದ ಸಮಾಜಮುಖಿ ಕಾರ್ಯಕ್ಕೆ ನಾನು ಯಾವತ್ತೂ ನಿಮ್ಮೊಂದಿಗೆ ಇದ್ದೇನೆ ಎಂದು ಹೇಳಿ ಸಹಾಯ ಮಾಡಿದ್ದರು. ಸಾಗರ ಬಂಟರ ಸಂಘ ಹೊಲಿಗೆ ಯಂತ್ರವನ್ನು ಅಮರನಾಥ್ ಶೆಟ್ಟಿ ಅವರ ಪರವಾಗಿ ವಿತರಿಸಿತು. ಈ ಸಂಧರ್ಭದಲ್ಲಿ ಸಾಗರ ಬಂಟರ ಸಂಘದ ಅಧ್ಯಕ್ಷರಾದ ಸುಧೀರ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷರಾದ ರಘುಪತಿ ಶೆಟ್ಟಿ, ಖಜಾಂಚಿ ಅಣ್ಣಪ್ಪ ಶೆಟ್ಟಿ, ಸಹ ಕಾರ್ಯದರ್ಶಿ ಪ್ರಕಾಶ ಶೆಟ್ಟಿ, ನಿರ್ದೇಶಕರಾದ ಶ್ರೀಧರ್…

Read More

ರಕ್ತದಾನ ಎನ್ನುವುದು ಅತ್ಯಂತ ಪವಿತ್ರವಾದ ದಾನ. ಒಬ್ಬ ವ್ಯಕ್ತಿ ರಕ್ತದಾನ ಮಾಡುವುದರಿಂದ ಮತ್ತೊಬ್ಬ ವ್ಯಕ್ತಿಯ ಜೀವ ಉಳಿಸಿದಂತಾಗುತ್ತದೆ. ಆ ಕಾರಣದಿಂದಲೇ ರಕ್ತದಾನ ಎಂದರೆ ಜೀವದಾನ ಹಾಗೂ ಅದು ಒಂದು ಕೋಟಿ ದೇಣಿಗೆ ನೀಡುವ ದಾನಕ್ಕಿಂತ ಶ್ರೇಷ್ಠ ಎನ್ನುತ್ತೇವೆ ಎಂದು ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರು ಹೇಳಿದರು. ಮೀರಾ- ಭಾಯಂದರ್ ಪ್ರಾದೇಶಿಕ ಸಮಿತಿಯ ವತಿಯಿಂದ ಕಾರ್ಯಾಧ್ಯಕ್ಷರಾದ ಗುತ್ತಿನಾರ್ ರವೀಂದ್ರ ಶೆಟ್ಟಿ ಇವರ ನೇತೃತ್ವದಲ್ಲಿ ಮೀರಾರೋಡ್ ಪೂರ್ವದ ಕನಕಿಯ ರಸ್ತೆ, ಸಿನೆಮ್ಯಾಕ್ಸ್ ಬಳಿ ಇರುವ ಶಹನಾಯಿ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸಂಘದ ಆರೋಗ್ಯ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಸ್ವರೂಪ್ ಹೆಗ್ಡೆ ಇವರ ಮಾರ್ಗದರ್ಶನದಲ್ಲಿ ಹಾಗೂ ಪ್ರಾದೇಶಿಕ ಸಮಿತಿಯ ಅರೋಗ್ಯ ಸಮಿತಿ ಕಾರ್ಯಾಧ್ಯಕ್ಷೆ ಡಾ. ರಿಯಾ ಶೆಟ್ಟಿಯವರ ಉಸ್ತುವಾರಿಯಲ್ಲಿ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸರಕಾರೇತರ ಸಂಸ್ಥೆಯಾದ ಥಿಂಕ್ ಫೌಂಡೇಶನ್ ಇದರ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ದೀಪ ಬೆಳಗಿಸಿ ಉದ್ಘಾಟಿಸಿದ ಪ್ರವೀಣ್ ಭೋಜ…

Read More

ಮಾನವ ಬೇಸಾಯ ಮಾಡಲು ಆರಂಭಿಸಿದ. ಮಣ್ಣಿನಿಂದ ಮಡಕೆ ತಯಾರಿಸಿದ. ಅದರಲ್ಲಿ ತಾನು ಬೆಳೆದ ಧಾನ್ಯ ತರಕಾರಿಗಳನ್ನು ಬೇಯಿಸಿ ತಿನ್ನಲು ಆರಂಭಿಸಿದ ಕಾಲವನ್ನು ನಾಗರಿಕತೆಯ ಉಗಮ ಎನ್ನಬಹುದು. ಪ್ರಪ್ರಥಮವಾಗಿ ಮಣ್ಣಿನಿಂದ ನಿರ್ಮಿಸಿದ ವಸ್ತುವೇ ಮಡಕೆ. ಬಯಲಿನ ನಯವಾದ ಮಣ್ಣಿನಿಂದ ಮಡಕೆ ತಯಾರಿಸಿ ಅದನ್ನು ಬೆಂಕಿಯಲ್ಲಿ ಸುಟ್ಟಾಗ ಗಟ್ಟಿಯಾದ ಮಡಕೆ ನಿರ್ಮಾಣವಾಯಿತು. ಅದನ್ನು ನೀರು ತುಂಬಿಡಲು, ಅಡುಗೆ ಮಾಡಿ ಉಣ್ಣಲು ಬಳಸಬಹುದು ಎಂದು ತಿಳಿದಾಗ ಅವನ ಸಂತೋಷಕ್ಕೆ ಪಾರವಿದೆಯೇ? ಉತ್ತರ ಬಾರಕೂರಿನಿಂದ ದಕ್ಷಿಣದ ನಿಲೇಶ್ವರದವರೆಗಿನ ಕರಾವಳಿ ಭೂಮಿಯೇ ಆಗಿನ ತೌಳವ ದೇಶ. ಇಲ್ಲಿ ವಾಸಿಸುತ್ತಿದ್ದ ತುಳುವರು ಆ ಕಾಲದ ಅತಿ ಪುರಾತನ ಪ್ರಕೃತಿ ಆರಾಧನೆಯೇ ಮೂರ್ತಿ ನಲ್ಕೆ. ತುಳುವಿನಲ್ಲಿ ಮೂರಿ ಎಂದರೆ ಮಣ್ಣಿನ ಮಡಕೆ. ಭೂಮಾತೆ ನೀಡಿದ ಅನ್ನದ ಅಕ್ಷಯ ಪಾತ್ರೆಯಾದರೆ ನೀರು ಪ್ರಕೃತಿ ಕೊಟ್ಟ ಜೀವ ಜಲ ಎಂಬ ನಂಬಿಕೆಯ ಪ್ರತೀಕವಾಗಿ ಗುಡಿ ನಿರ್ಮಿಸಿ ಮೂರಿಯಲ್ಲಿ ನೀರು ತುಂಬಿಸಿಡುವ ಸ್ಥಳವೇ ಮೂರ್ಲೆ ಬದಿ ಅಥವಾ ಮೂರ್ಲೆ ಮಂಟಪ ಎನ್ನುವರು. ಈಗಲೂ ಗತಕಾಲದ ಪ್ರಸಿದ್ಧ…

Read More